POLICE BHAVAN KALABURAGI

POLICE BHAVAN KALABURAGI

21 September 2012

GULBARGA DISTRICT REPORTED CRIME


ಅಪಘಾತ ಪ್ರಕರಣ:
ಸಂಚಾರಿ ಪೊಲೀಸ್ ಠಾಣೆ:ಶ್ರೀ ನರಸಪ್ಪಾ ತಂದೆ ಕಲ್ಲಪ್ಪಾ ದೋಟಿಕೊಳ ಸಾಃ ಶಾಂತಲಿಂಗೇಶ್ವರ ಗುಡಿಯ ಹತ್ತಿರ ಗಂಜ ಏರಿಯಾ ಜಡಿಮಠ ರೋಜಾ ಗುಲಬರ್ಗಾ ರವರು ನಾನು  ನಿನ್ನೆ ದಿನಾಂಕ:20-09-2012 ರಂದು 11-15 ಗಂಟೆಗೆ ಸೋಮೇಶ್ವರ ಟ್ರೇಡಿಂಗ ಕಂಪನಿಯ ಎದುರುಗಡೆ ಮಲಗಿಕೊಂಡಾಗ  ಇನೊವಾ ಕಾರ ನಂ. ಕೆಎ-32 ಎನ್-1399 ನೇದ್ದರ ಚಾಲಕನು ತನ್ನ ಕಾರನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದವನೆ ಮಲಗಿಕೊಂಡಿದ್ದ ನನ್ನ ತಲೆಗೆ ಡಿಕ್ಕಿ ಪಡಿಸಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 47/2012 ಕಲಂ, 279, 337 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

GULBARGA DISTRICT REPORTED CRIMES


ದರೋಡೆ ಪ್ರಕರಣ:
ಜೇವರ್ಗಿ ಪೊಲೀಸ್ ಠಾಣೆ: ಶ್ರೀ ಬಂದೆನವಾಜ ತಂದೆ ಫತ್ರುಸಾಬ ಕಟಬಾಣ ಸಾ||ಸಿಗರಥಹಳ್ಳಿ ರವರು ನಾನು ದಿನಾಂಕ: 19/09/2012 ರಂದು ಸಾಯಂಕಾಲ 6-45 ಗಂಟೆಗೆ ಯಾಳವಾರ ಗ್ರಾಮ ಕುಂಬಾರ ಇವರ ಹೊಲದ ರೋಡಿನಲ್ಲಿ ನನ್ನ ಮೋಟಾರ ಸೈಕಲ ನಂಬರ ಕೆಎ-33 ಹೆಚ್.ಸಿ-2464 ನೇದ್ದರ ಮೇಲೆ ಬರುತ್ತಿದ್ದಾಗ ಎದುರುಗಡೆಯಿಂದ ನಾಲ್ಕು ಜನ ಯಾರೋ ದುಷ್ಕರ್ಮಿಗಳು ಮೋಟಾರ ಸೈಕಲ ಮೇಲೆ ಬಂದು ನನ್ನನ್ನು ನಿಲ್ಲಿಸಿ  ನನ್ನ ಹತ್ತಿರವಿರುವ  ನಗದು 1500/- ರೂ , ಒಂದು ಕೈಗಡಿಯಾರ ಅ.ಕಿ 500-00 ರೂ ಒಂದು ಮೈಕ್ರೋಮಾಕ್ಸ ಮೋಬೈಲ ಅ.ಕಿ 1000-00 ಹೀಗೆ ಜಬರ ದಸ್ತಿಯಿಂದ ಕಸಿದುಕೊಂಡು ಚಾಕುವಿನಿಂದ ಹಲ್ಲೆ ಮಾಡಿ ಓಡಿ ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ  ಗುನ್ನೆ ನಂಬರ:142/2012 ಕಲಂ 394 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಮುದೋಳ ಪೊಲೀಸ್ ಠಾಣೆ:ದಿನಾಂಕ:20-09-2012 ರಂದು 7-00 ಪಿ.ಎಮ್.ದ ಸುಮಾರಿಗೆ ವಿಶ್ವನಾಥ ತಂದೆ ಶರಣಪ್ಪಾ ಗಾಣಿಗೇರ ವ||30 ಸಾ|| ಆಡಕಿ ಗ್ರಾಮ ಇತನು ಆಡಕಿ ಗ್ರಾಮದ ಕಡೆಗೆ ಬರುವುದಕ್ಕಾಗಿ ಮುಧೋಳ ಮೇನ ಗೇಟ್ ಹತ್ತಿರ ಇರುವ ರಾಜು ಅನ್ನುವವರ ದಾಬಾದ ಎದರುಗಡೆ ಎಡಭಾಗಕ್ಕೆ ನಿಂತಾಗ ರಿಬ್ಬನಪಲ್ಲಿಯ ಕಡೆಯಿಂದ ಟ್ಯಾಂಕರ ನಂ ಎಪಿ-28 ಟಿ.ಇ-0820 ನೇದ್ದರ ಚಾಲಕನು ತನ್ನ ಟ್ಯಾಂಕರನ್ನು ಅತೀವೇಗ ಹಾಗೂ ನಿಸ್ಕಾಳಜಿತನದಿಂದ ನಡೆಸಿಕೊಂಡು ಬಂದು ವಿಶ್ವನಾಥನಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿದಾಗ ಸದರಿಯವನಿಗೆ ಬಾರಿ ಗಾಯಗಳಾಗಿ ಸ್ಥಳದಲ್ಲಿಯೆ ಮೃತ ಪಟ್ಟಿರುತ್ತಾನೆ ಟ್ಯಾಂಕರ ಚಾಲಕನಾದ ರಾಜಪ್ಪಾ ತಂದೆ ಭೀಮಶಪ್ಪಾ ಇತನು ಓಡಿ ಹೋಗಿದ್ದು ಸದರಿಯವನ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಬೇಕೆಂದು ಅಂತಾ ಶ್ರೀ ಶಿವಾನಂದ @ ಶಿವಕುಮಾರ ತಂದೆ ಶರಣಪ್ಪಾ ಗಾಣಿಗೇರ ಸಾ|| ಆಡಕಿ ಗ್ರಾಮ ತಾ|| ಸೇಡಂ ರವರು ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:108/2012 ಕಲಂ, 279, 304  (ಎ) ಐಪಿಸಿ ಸಂಗಡ 187 ಐ.ಎಮ.ವಿ.ಆಕ್ಟ        ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

20 September 2012

GULBARGA DISTRICT REPORTED CRIMES


6 ವರ್ಷದ ಹಸುಳೆಯ ಮೇಲೆ ಅತ್ಯಾಚಾರ:
ಚಿತ್ತಾಪೂರ ಪೊಲೀಸ್ ಠಾಣೆ: ದಿನಾಂಕ:18/09/2012 ರಂದು ಮುಂಜಾನೆ 9-30 ಗಂಟೆಗೆ 6 ವರ್ಷದ ನನ್ನ ಮಗಳು ಶಾಲೆಗೆ ಹೋಗಿದ್ದಳು , ಮಧ್ಯಾಹ್ನ 1-00 ಗಂಟೆ ಸುಮಾರಿಗೆ ನನ್ನ ಮಗಳು ಅದೇ ಶಾಲೆಯ ಮಕ್ಕಳು ಮನೆಗೆ ಕರೆದುಕೊಂಡು ಬಂದು ಅಳುತ್ತಿದ್ದಾಳೆ ಅಂತಾ ಮನೆಗೆ ಬಿಟ್ಟು ಹೋದರು, ನನ್ನ ಮಗಳಿಗೆ ವಿಚಾರಿಸಿದ್ದು ಬಡಾ ಆದ್ಮಿ ಮಾರೇ ಅಂತ ಸಂಸಾರದ ಜಾಗೆಯಲ್ಲಿ ಹೊಡೆದ ಬಗ್ಗೆ ತೋರಿಸಿದಳು. ನಾನು ನೋಡಿದ್ದು ಸಂಸಾರದಿಂಧ ರಕ್ತ ಬರುತ್ತಿತ್ತು. ಈ ಬಗ್ಗೆ ಅವಳನ್ನು ಶಾಲೆಗೆ ಕರೆದುಕೊಂಡು ಹೋಗಿ ಶಾಲೆಯ ಮಕ್ಕಳಿಗೆ  ವಿಚಾರಿಸಲಾಗಿ ರಾಜ ಅಹ್ಮದ ತಂದೆ ಅಬ್ದುಲ ರಹಿಮ ನಾಗಾವಿ ವಾಲೆ ಸಾ||ಬಾಹರಪೇಟ ಚಿತ್ತಾಪುರ ಅಂತ ಗೊತ್ತಾಗಿದ್ದು ಅಪ್ರಾಪ್ತ ನನ್ನ ಮಗಳಿಗೆ ಶಾಲೆಯ ಏಕಿ ಮಾಡುವ ಕೋಣೆಯಲ್ಲಿ ಕರೆದುಕೊಂಡು ಹೋಗಿ ಬಲಾತ ಸಂಭೋಗ ಮಾಡಿದ್ದಾನೆ ಅವಳಿಗೆ ಸಂಸಾರದಿಂದ ರಕ್ತ ಬರುತ್ತಿದೆ. ಅತನ ಮೇಲೆ ಕಾನೂನು ಕ್ರಮ ಜರೂಗಿಸಬೇಕು  ಅಂತಾ ಹುಡಗಿಯ ತಾಯಿ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 84/2012 ಕಲಂ 376 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಅಪಘಾತ ಪ್ರಕರಣ :
ಗುಲಬರ್ಗಾ ಗ್ರಾಮೀಣ ಠಾಣೆ:ದಿನಾಂಕ:19-9-2012 ರಂದು ರಾತ್ರಿ 8-00 ಗಂಟೆಯಿಂದ ದಿನಾಂಕ. 20-09-2012 ರ ಬೆಳಿಗ್ಗೆ 8-00 ಗಂಟೆಯ ಮದ್ಯದ ಅವಧಿಯಲ್ಲಿ ಗುಲಬರ್ಗಾ ಆಳಂದ ರೋಡಿನ  ಪಟ್ಟಣ ಕ್ರಾಸ ಸಮೀಪ ಶಿವಲಿಂಗಪ್ಪಾ ಶಾಸ್ತ್ರೀ ಇವರ ಹೊಲದ ಎದುರಿನ ಮುಖ್ಯ  ರಸ್ತೆಯಲ್ಲಿ ಒಬ್ಬ ವ್ಯಕ್ತಿಗೆ ಯಾವುದೋ ವಾಹನದ ಚಾಲಕನು ತನ್ನ ವಾಹನವನ್ನು ಅತೀವೇಗ ಮತ್ತು ನಿಷ್ಕಾಳಿ ಜಿತನದಿಂದ ನಡೆಯಿಸಿಕೊಂಡು ಬಂದು ಸದರಿ ವ್ಯಕ್ತಿಗೆ ಡಿಕ್ಕಿ ಹೊಡೆದು ಭಾರಿ ಗಾಯಗೊಳಿಸಿದ್ದರಿಂದ, ಆ ವ್ಯಕ್ತಿ ಸ್ಥಳದಲ್ಲಿಯೇ ಮೃತ ಪಟ್ಟಿದ್ದು, ಸದರಿ ರಸ್ತೆಯು ಮುಖ್ಯ ರಸ್ತೆಯಾಗಿರುವದರಿಂದ ಇನ್ನೂ ಬೇರೆ ವಾಹನಗಳು ಆತನ ಶವದ ಮೇಲಿಂದ ಹಾಯಿದು ಹೋಗಿದ್ದರಿಂದ ಮೃತ ವ್ಯಕ್ತಿಯ ಶವವು ಎಳೆದಾಡಿ ಗುರ್ತು ಸಿಗದ ಹಾಗೆ ಆಗಿ ಮಾಂಸ ಖಂಡಗಳ ಮುದ್ದೆಯಾಗಿ ಬಿದ್ದಿರುತ್ತವೆ. ಮತ್ತು  ಬಲಗಾಲದ  ಪಾದ ,ಮತ್ತು ಬಲಗೈ ಮುಂಬಾಗ ಕಾಣಿಸುತ್ತಿದ್ದು ಶರೀರ ಪೂರ್ತಿ ಜಜ್ಜಿ ಹೋಗಿದ್ದು ಗುರ್ತು ಸಿಗುತ್ತಿಲ್ಲಾ, ಹೀಗಾಗಿ ಹೆಸರು ವಿಳಾಸ ಗೊತ್ತಾಗಿರುವದಿಲ್ಲಾ. ಅಪಘಾತ ಪಡಿಸಿದ  ವಾಹನ ಚಾಲಕ ತನ್ನ ವಾಹನವನ್ನು ಹಾಗೆ ಓಡಿಸಿಕೊಂಡು ಹೋಗಿದ್ದು ಕಂಡು ಬರುತ್ತದೆ ಅಂತಾ ಶ್ರೀ  ಮಹಮ್ಮದ ಗೌಸ ತಂದೆ ರುಕುಮಸಾಬ ನದಾಫ ಸಾ; ಪಟ್ಟಣ ತಾ||ಜಿ|| ಗುಲಬರ್ಗಾರವರು  ದೂರು ಸಲ್ಲಿಸಿದ ಸಾರಂಶದ ಮೇಲಿಂದ  ಠಾಣೆ ಗುನ್ನೆ ನಂ: 299/2012  ಕಲಂ. 279,304 (ಎ) ಐಪಿಸಿ ಸಂಗಡ 187 ಐಎಂವಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ವರದಕ್ಷಿಣೆ ಕಿರುಕುಳದಿಂದ ಗೃಹಿಣೆ ಸಾವು:
ಕಮಲಾಪೂರ ಪೊಲೀಸ್ ಠಾಣೆ: ಶ್ರೀ ಓಮನಾಥ ತಂದೆ ರೇವಣು ಪವಾರ ಸಾಃನಾಗಾ ಇದಲಾಯಿ ತಾಂಡಾ ತಾಃಚಿಂಚೋಳಿ ಜಿಃಗುಲಬರ್ಗಾ ದಿನಾಂಕ:19/09/2012 ರಂದು ರಾತ್ರಿ 9-00 ಗಂಟೆ ಸುಮಾರಿಗೆ ಮೃತ ಧನ್ನುಬಾಯಿ @ ಜ್ಯೋತಿಬಾಯಿ ಇವಳ ಗಂಡ ಓಮನಾಥ ಮತ್ತು ಮಾವ ರಾಮಚಂದ್ರ ಇಬ್ಬರು ಕೂಡಿಕೊಂಡು ನಿನ್ನ ತವರು ಮನೆಯಿಂದ ಇನ್ನೂ ಒಂದು ಲಕ್ಷ್ ರೂಪಾಯಿ ವರದಕ್ಷಿಣೆ ತೆಗೆದುಕೊಂಡು ಬಾ ಅಂತಾ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡಿ ಸೀಮೆ ಎಣ್ಣೆ ಹಾಕಿ ಸುಟ್ಟಿ ಹಾಕಿ ಕೊಲೆ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:101/2012 ಕಲಂ. 498 (ಎ), 304 (ಬಿ) ಸಂಗಡ 34 ಐಪಿಸಿ ಮತ್ತು  3 & 4 ಡಿ.ಪಿ.ಆಕ್ಟ್ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.