POLICE BHAVAN KALABURAGI

POLICE BHAVAN KALABURAGI

05 March 2012

GULBARGA DIST REPORTED CRIMES

ಹಲ್ಲೆ ಮಾಡಿ, ಕೊಲೆಗೆ ಪ್ರಯತ್ನ :

ಶಹಾಬಾದ ನಗರ ಠಾಣೆ : ಶ್ರೀ ದುರ್ಗಪ್ಪಾ ತಂದೆ ಸಾಯಿಬಣ್ಣಾ ಕಂದಳ್ಳಿ ಸಾ: ಸುಣ್ಣಾಭಟ್ಟಿ ಶಹಾಬಾದ ರವರು, ದಿನಾಂಕ 04/03/2012 ರಂದು ನಾನು ಮತ್ತು ನನ್ನ ಹೆಂಡತಿ ಲಕ್ಷ್ಮಿ ಮತ್ತು ನಮ್ಮ ಅಣ್ಣನ ಹೆಂಡತಿ ಅನ್ನಪೂರ್ಣ ಹಾಗೂ ಅಕ್ಕನ ಮಗನಾದ ದುರ್ಗಾ ಗುಲಬರ್ಗಾ ಕೂಡಿ ಮಡ್ಡಿ ನಂ 2 ರಲ್ಲಿ ಸಮುದಾಯ ಭವನ ಕಂಪೌಂಡ ಕೆಲಸಕ್ಕಾಗಿ ನಮ್ಮ ಮನೆಯ ಮುಂದೆ ಪಟ್ರಿ ಹತ್ತಿರ ಹೊಗುವಾಗ ಎದುರಗಡೆಯಿಂದ ವಿಕ್ಕಿ ಸಾ: ಹನುಮಾನ ನಗರ ತಾಂಡ ಇತನು ಬಂದವನೇ ನನ್ನ ಹೆಂಡತಿಗೆ ಡಿಕ್ಕಿ ಹೊಡೆದಿದ್ದಕ್ಕೆ ನಾನು ಕೇಳಲಾಗಿ ಸದರಿಯವನು ಜಗಳ ತೆಗೆದು ಹೋಗಿರುತ್ತಾನೆ. ನಂತರ ನಾವು ಕೆಲಸಕ್ಕೆ ಹೊಗದೆ ಮನಗೆ ಬಂದೆವು. ಆಗ ವಿಕ್ಕಿ ಮತ್ತು ಅವನ ಸಂಗಡ ನಾಗಪ್ಪಾ , ರವಿ ಇವರು ಕೈಯಲ್ಲಿ ಹಾಕಿ ಸ್ಟಿಕ , ಕ್ರಿಕೇಟ ಬ್ಯಾಟ, ಕಲ್ಲು ಹಿಡಿದುಕೊಂಡು ಬಂದು ಅವಾಚ್ಯವಾಗಿ ಬೈದು ಕೊಲೆ ಮಾಡುವ ಉದ್ದೇಶದಿಂದ ವಿಕ್ಕಿ ಸಂಗಡ ನಾಗಪ್ಪಾ ಮತ್ತು ರವಿ ನನಗೆ ಮತ್ತು ಭೀಮರಾಯ ಹೊಡೆಬಡೆ ಮಾಡಿ ರಕ್ತಗಾಯ ಮಾಡಿರುತ್ತಾರೆ. ಹಾಗೂ ಅವಾಚ್ಯವಾಗಿ ಬೈದು ಜೀವದ ಬೇದರಿಕೆ ಹಾಕಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಹಾಬಾದ ನಗರ ಠಾಣೆ ಯಲ್ಲಿ ಗುನ್ನೆ ಸಂಖ್ಯೆ 24/2012 ಕಲಂ: 324, 504, 506, 307 ಸಂ 34 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಮಹಿಳೆ ಕಾಣೆಯಾದ ಪ್ರಕರಣ :

ನರೋಣಾ ಠಾಣೆ :ಶ್ರೀ ಶಿವಪುತ್ರ ತಂದೆ ಚಂದ್ರಶಾ ಕ್ಯಾರ ಸಾ: ಕಡಗಂಚಿ ರವರು, ದಿನಾಂಕ:29/02/2012 ರಂದು ನನ್ನ ಹೆಂಡತಿ ಮಲ್ಲಮ್ಮ ಇವಳು ನಮ್ಮ ಹೊಲದ ಕೊಠಡಿಯ ಕಸಗುಡಿಸಲು ಹೋಗುತ್ತೇನೆ ಅಂತ ಮನೆಯಿಂದ ಹೇಳಿ ಹೋದವಳು ತಿರುಗಿ ಮನೆಗೆ ಬಂದಿರುವುದಿಲ್ಲ. ನಾನು ನಮ್ಮ ಸಂಬಧಿಕರ ಮನೆಯವರಲ್ಲಿ ಹೋಗಿ ವಿಚಾರಿಸಲು ಬಂದಿರುವದಿಲ್ಲ ವೆಂದು ತಿಳಿದು ಅಲ್ಲಿಂದ ಇಲ್ಲಿಯವರೆಗೆ ಹುಡುಕಾಡಿದರು ಸಿಕ್ಕಿರುವುದಿಲ್ಲ.

04 March 2012

GULBARGA DIST REPORTED CRIMES

ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ :
ಶ್ರೀ ಮತಿ ಅಂಬುಬಾಯಿ ಗಂಡ ಸೋಮಲು ರಾಠೋಡ ಸಾ: ಕೊರಂಟಿ ಹನುಮಾನ ತಾಂಡಾ ಗುಲಬರ್ಗಾ ರವರು ದಿನಾಂಕ: 03-03-2012 ರಂದು ಸಾಯಂಕಾಲ ಸುಮಾರಿಗೆ ಸಿ.ಟಿ.ಬಸ್ ನಿಲ್ದಾಣದಲ್ಲಿ ಬಸ್ಸಿಗೆ ಕಾಯುತ್ತಾ ನಿಂತಿರುವ ಕೆ.ಎಸ್.ಆರ್.ಟಿ.ಸಿ.ಬಸ್ ನಂ:ಕೆಎ-33 ಎಫ್-07 ನೇದ್ದರ ಚಾಲಕ ಸಲೀಮ ಪಾಶಾ ಈತನು ತನ್ನ ಬಸ್ಸನ್ನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಎಡಗಾಲಿನ ಮೇಲೆ ಬಸ್ ಹಾಯಿಸಿಕೊಂಡು ಹೋಗಿ ಭಾರಿಗಾಯ ಗೊಳಿಸಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 29/2012 ಕಲಂ: 279,338 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಗುಲಬರ್ಗಾ ಗ್ರಾಮೀಣ ಠಾಣೆ :
ಶ್ರೀ ಹುಚ್ಚಪ್ಪ ತಂದೆ ಕಾಲಪ್ಪ ಸಾಲೋಟಗಿ ಸಾ ಆನಂದೇಶ್ವರ ನಗರ ರಾಮಮಂದಿರ ಗುಲಬರ್ಗಾ ರವರು ನನ್ನ ಮಗ ಮೃತ ಅಜೇಯ ಹಾಗೂ ಅವನ ಗೆಳೆಯರಾದ ಮಲ್ಲಿಕಾರ್ಜುನ ಸಣ್ಣುರ ಹಾಗೂ ಇನ್ನೊಬ್ಬ ದಿನಾಂಕ 03/03/2012 ರಂದು ಸಾಯಂಕಾಲ ಮೋಟಾರ ಸೈಕಲ ನಂಬರ ಕೆಎ-32 ಇಎ-354 ನೇದ್ದರ ಮೇಲೆ ಸುಲ್ತಾನಪೂರ ಕ್ರಾಸ ರಿಂಗ ರೋಡ ಮೇಲೆ ಹೋರಟಾಗ ಪಿಲ್ಟರ ಬೆಡ ಕಡೆಗೆ ಒಂದು ಆಟೋ ನಂ ಕೆಎ-32 7028 ನೇದ್ದರ ಚಾಲಕ ಯಾವುದೇ ಮೂನ್ಸೂಚನೆಯನ್ನು ನೀಡದೆ ಅತೀವೇಗ ಹಾಗೂ ಅಲಕ್ಷತನ ದಿಂದ ನಡೆಯಿಸಿಕೊಂಡು ಬಂದು ಮೋಟಾರ ಸೈಕಲಗೆ ಒಮ್ಮೇಲೆ ಡಿಕ್ಕಿ ಹೊಡೆದಿದ್ದರಿಂದ ಮೋಟಾರ ಸೈಕಲ ಸವಾರರು ಕೆಳೆಗೆ ಬಿದ್ದು ಗಾಯ ಹಾಗೂ ಭಾರಿಗಾಯವಾಗಿದ್ದು ಉಪಚಾರ ಕುರಿತು ಆಸ್ಪತ್ರೆಗೆ ತೆಗೆದುಕೊಂಡು ಹೋಗುವಾಗ ಮಾರ್ಗ ಮದ್ಯದಲ್ಲಿ ಅಜೇಯನು ಮೃತ್ತಪಟ್ಟಿದ್ದು, ಮಲ್ಲಿಕಾರ್ಜುನ ಇತನ ಗಾಯಗೊಂಡು ಪ್ರಜ್ಷೆಹೀನಾ ಸ್ಥಿತಿಯಲ್ಲಿದ್ದು ಇನ್ನು ಒಬ್ಬನು ಯಾರು ಅಂತ ತಿಳಿದು ಬಂದಿರುವುದಿಲ್ಲ. ಸದರಿ ಆಟೋ ಚಾಲಕನು ತನ್ನ ಆಟೋವನ್ನು ಅಲ್ಲೇ ಬಿಟ್ಟು ಓಡಿ ಹೋಗಿರುತ್ತಾನೆ. ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 67/2012 ಕಲಂ 279 337 338 304(ಎ) ಐಪಿಸಿ ಸಂ/187ಐಎಂವಿ ಆಕ್ಟ್ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಆಕಸ್ಮಿಕ ಬೆಂಕಿ ಅಪಘಾತ:
ಗುಲಬರ್ಗಾ ಗ್ರಾಮೀಣ ಠಾಣೆ:
ಶ್ರೀಮತಿ ಶರಣಮ್ಮ ಗಂಡ ಪ್ರಕಾಶ ಜಮಾದಾರ ಸಾ ನಿಲೂರ ಸಾ ಅಪಜಲಪೂರ ಹಾವ ಸಾವಳಗಿ ತಾ ಜಿ ಗುಲಬರ್ಗಾ ರವರು ನನ್ನ ಗಂಡನಾದ ಪ್ರಕಾಶ ತಂದೆ ಪೀರಪ್ಪ ಜಮಾದಾರ ಈತನು ಮನೆಯಲ್ಲಿ ಮಲಗಿದಾಗ ಮನೆಯ ಬಾಟಿಯ ಮೇಲೆ ದೀಪ ಹಚ್ಚಿ ಇಟ್ಟಿದ್ದು ಇಲಿ ದೀಪ ಊರುಳಿಸಿದ್ದರಿಂದ ಮೃತನ ಮೈಮೇಲೆ ದೀಪ ಬಿದ್ದು ಅವನ ಮುಖ, ಎದೆ, ಎರಡು ಕೈಗಳು, ಎರಡು ಭುಜ, ರಟ್ಟೆಗಳು ಬೆನ್ನ ಸುಟ್ಟಿದ್ದು ಸುಟ್ಟ ಗಾಯಗಳಿಂದ ಉಪಚಾರ ಹೊಂದುತ್ತಾ ದಿನಾಂಕ 03-03-2012 ರಂದು ಮಧ್ಯಾಹ್ನ ಸರಕಾರಿ ಆಸ್ಪತ್ರೆ ಗುಲಬರ್ಗಾದಲ್ಲಿ ಮೃಪಟ್ಟಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 9/2012 ಕಲಂ 174 ಸಿ.ಆರ್‌.ಪಿ.ಸಿ. ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

03 March 2012

GULBARGA DIST REPORTED CRIMES

ಹಲ್ಲೆ ಮತ್ತು ಕೊಲೆಗೆ ಯತ್ನ :

ನಿಂಬರ್ಗಾ ಪೊಲೀಸ ಠಾಣೆ:ಶ್ರೀಮತಿ ಪಾರ್ವತಿ ಗಂಡ ಭೀಮರಾಯ ಪಾಂಡ್ರೆ, ಸಾ|| ಮಾಡಿಯಾಳರವರು ನನ್ನ ಮಗಳ ಗಂಡನಾದ ಪ್ರಭಾಕರ ತಂದೆ ರಾಮಚಂದ್ರ ಸಲಗರ ಸಾ|| ಮಾಡಿಯಾಳ ಇವನು ಸುಮಾರು 3-4 ವರ್ಷಗಳಿಂದ ಸ್ವ ಗ್ರಾಮದ ಕಮಲಾಬಾಯಿ ಇವಳೊಂದಿಗೆ ಅನೈತಿಕ ಸಂಭಂಧ ಇಟ್ಟುಕೊಂಡಿದ್ದು,ಇದಕ್ಕೆ ನಾನು ಹಾಗು ನನ್ನ ಮಕ್ಕಳು ವಿರೋಧ ವ್ಯಕ್ತಪಡಿಸಿದ್ದರಿಂದ ಪ್ರಭಾಕರ ಇತನು ಅವಾಚ್ಯವಗಿ ಬೈದು ಜಗಳ ತೆಗೆದು ನನಗೆ ಹಾಗೂ ನನ್ನ ಮಗಳಾದ ಸಾವಿತ್ರಾ ಮತ್ತು ಮಗನಾದ ಸಂತೋಷ ಇವರಿಗೆ ಕೊಡಲಿಯಿಂದ ಹೊಡೆ ಬಡೆ ಮಾಡಿ ರಕ್ತಗಾಯಪಡಿಸಿ ಮರಣಾಂತಿಕ ಹಲ್ಲೆಗೈದು ಕೊಲೆಗೆ ಯತ್ನಿಸಿರುತ್ತಾನೆ ಅಂತ ದೂರಿನ ಅನ್ವಯ ಠಾಣೆ ಗುನ್ನೆ ನಂ:17/2012 ಕಲಂ 324, 504, 307 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿರುತ್ತಾರೆ.

ಮುಂಜಾಗ್ರತೆ ಕ್ರಮ:

ಬ್ರಹ್ಮಪೂರ ಠಾಣೆ: ಶ್ರೀ.ರಾಜಕುಮಾರ ಸಿ.ಪಿ.ಸಿ ಮತ್ತು ಸುಧಾಕರ ಸಿಪಿಸಿ ಬ್ರಹ್ಮಪೂರ ಠಾಣೆರವರು ದಿನಾಂಕ:03/03/12 ರಂದು ಮಧ್ಯಾಹ್ನ ಠಾಣಾ ಹದ್ದಿಯಲ್ಲಿ ಪೆಟ್ರೋಲಿಂಗ ಮತ್ತು ಹಳೆ ಗುನ್ನೆಗಳ ಪತ್ತೆ ಕುರಿತು ಹೋದಾಗ ನಗರದ ವೀರಶೈವ ಕಲ್ಯಾಣ ಮಂಟಪದ ಹತ್ತಿರ ಸಾಯಂಕಾಲ ಒಬ್ಬ ವ್ಯಕ್ತಿ ಅನುಮಾನಾಸ್ಪದವಾಗಿ ಓಡಾಡುವುದನ್ನು ಕಂಡು ಸಂಶಯ ಬಂದು ಸದರಿಯವನನ್ನು ಹಿಡಿದು ಹೆಸರು ಮತ್ತು ವಿಳಾಸ ವಿಚಾರಿಸಲು ಇಸ್ಮಾಯಿಲ ತಂದೆ ಮಹ್ಮದ ಖಾಸಿಂ ಶೇಖ, ಸಾ|| ತಾಜ ನಗರ ಮುಸ್ಲಿಂ ಸಂಘ ಗುಲಬರ್ಗಾ ಅಂತಾ ತಿಳಿಸಿದ್ದು, ಆ ಸ್ಥಳದಲ್ಲಿ ಇರುವಿಕೆಯ ಬಗ್ಗೆ ವಿಚಾರಿಸಲು ಯಾವುದೇ ಸಮಂಜಸ ಉತ್ತರ ಕೊಡಲಿಲ್ಲಾ. ಸದರಿಯವನನ್ನು ಸ್ಥಳದಲ್ಲಿ ಹಾಗೆಯೆ ಬಿಟ್ಟಲ್ಲಿ ಯಾವುದಾದರೊಂದು ಸ್ವತ್ತಿನ ಅಪರಾಧ ಮಾಡಬಹುದೆಂದು ತಿಳಿದು ವಶಕ್ಕೆ ತೆಗೆದುಕೊಂಡು ಠಾಣೆಗೆ ಬಂದು ಸೂಕ್ತ ಕ್ರಮಕ್ಕಾಗಿ ವರದಿ ಸಲ್ಲಿಸಿದ್ದರಿಂದ ಠಾಣಾ ಗುನ್ನೆ ನಂ: 32/12 ಕಲಂ: 109 ಸಿ.ಆರ್.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೇನು.

ಬೆಂಕಿ ಅಪಘಾತ ಪ್ರಕರಣ:

ಸ್ಟೆಶನ ಬಜಾರ ಠಾಣೆ: ದಿನಾಂಕ: 2/03/2012 ರಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ನಿರ್ದೇಶಕರ ಕೋಣೆಯಲ್ಲಿ ಸಾಯಂಕಾಲ 7.00 ಗಂಟೆಯ ಸುಮಾರಿಗೆ ಕೋಣೆಯಲ್ಲಿರುವ ಹವಾ ನಿಯಂತ್ರಣ (ಎಸ್.ಸಿ) ದಲ್ಲಿ ಆಕಸ್ಮಿಕವಾಗಿ ವಿದ್ಯುತ ಶಾರ್ಟ ಸರ್ಕ್ಯೂಟ ದಿಂದ ಹವಾ ನಿಂಯತ್ರಣ (ಎಸ್.ಸಿ) ಗೆ ಬೆಂಕಿ ತಗುಲಿ ಸುಮಾರು 40,000=00 ರೂಪಾಯಿಗಳ ಕಿಮ್ಮತ್ತಿನ ವಸ್ತುಗಳು ಸುಟ್ಟ ಭಸ್ಮವಾಗಿರುತ್ತವೆ ಅಂತಾ ಶ್ರೀ ಸೈಯದ ಖಲಿಂಧರ್ ನಿರ್ದೇಶಕರು ಸಾರ್ವಜನಿಕ ಶಕ್ಷಣ ಇಲಾಖೆಯ ಗುಲಬರ್ಗಾ ರವರು ದೂರು ಸಲ್ಲಿಸಿದ್ದರಿಂದ ಠಾಣೆ ಗುನ್ನೆ ನಂ: 02/2012 ಬೆಂಕಿ ಅಪಘಾತ ಪ್ರಕರಣದ ಅಡಿಯಲ್ಲಿ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.