POLICE BHAVAN KALABURAGI

POLICE BHAVAN KALABURAGI

29 December 2011

GULBARGA DIST REPORTED CRIMES

ಗಂಡನ ಕಿರುಕುಳ ತಾಳಲಾರದೇ ಹೆಂಡತಿ ಆತ್ಮಹತ್ಯೆ:
ಮಹಿಳಾ ಠಾಣೆ:
ಶ್ರೀ ಗುರುಶಾಂತ ತಂದೆ ಶರಣಪ್ಪಾ ಸಂಗೋಳಿಗಿ ಸಾ: ಕೋರಳ್ಳಿ ತಾ: ಆಳಂದ ಜಿ: ಗುಲಬರ್ಗಾ ರವರು ನನಗೆ 3 ಜನ ಹೆಣ್ಣು ಮಕ್ಕಳಿದ್ದು 2 ಗಂಡು ಮಕ್ಕಳು ಇರುತ್ತಾರೆ ಎಡನೇಯ ಮಗಳಾದ ಬಸಮ್ಮಾ @ ಮಾಯಾ ಇವಳಿಗೆ ನಮ್ಮ ದೂರದ ಸಂಭಂದಿಯಾದ ಆಳಂದ ತಾಲೂಕಿನ ಕಣಮುಸ ಗ್ರಾಮದ ವಿಜಯಕುಮಾರ ಇತನೊಂದಿಗೆ ಸಂಪ್ರದಾಯದಂತೆ 3 ವರ್ಷಗಳ ಹಿಂದೆ ಮದುವೆ ಮಾಡಿಕೊಟ್ಟಿದ್ದು ಮದುವೆಯ ಕಾಲಕ್ಕೆ ಸ್ವಖುಷಿಯಿಂದ 41.000/- ರೂ, 3 ತೊಲೆ ಬಂಗಾರ ಕೊಟ್ಟಿದ್ದು ಇರುತ್ತದೆ, ಇವರು ಗುಲಬರ್ಗಾದ ಜೆ.ಆರ್ ನಗರ ಗುಲಬರ್ಗಾದ ಲ್ಲಿ ವಾಸವಾಗಿರುತ್ತಾರೆ ಅಳಿಯ ನಿಜಯಕುಮಾರ ಇತನು ಕುಡಿಯುವದು ಮತ್ತು ಇಸ್ಪೇಟ ಆಡುವ ಚಟದವನಿದ್ದು ಅದಕ್ಕಾಗಿ ಅವನು ಸಾಲ ಮಾಡಿಕೊಂಡಿದ್ದನು ಅವನಿಗೆ ಬಹಳ ಸಾಲವಾಗಿದ್ದರಿಂದ ನನ್ನ ಮಗಳೊಂದಿಗೆ ಜಗಳ ತೆಗೆದುಕೊಂಡು ನೀನು ತವರು ಮನೆಯಿಂದ ಹಣ ತೆಗೆದುಕೊಂಡು ಬಾ ನನಗೆ ಬಹಳ ಸಾಲವಾಗಿದೆ ಅಂತಾ ಯಾವಾಗಲು ಅವಳೊಂದಿಗೆ ಕಿರಿಕಿರಿ ಮಾಡುತ್ತಾ ಮಾನಸಿಕ ಮತ್ತು ದೈಹಿಕವಾಗಿ ಹಿಂಸೆ ನೀಡುತ್ತಿದ್ದನು. ಈ ವಿಷಯವನ್ನು ನನ್ನ ಮಗಳು ಮಾಯಾ @ ಬಸಮ್ಮಾ ನಮಗೆ ತಿಳಿಸಿದಾಗ ನಾವು ಅಳಿಯ ಮಗಳುಚೆನ್ನಾಗಿ ಇರಬೇಕು ಅಂತಾ ಹೇಳಿ ನಮ್ಮ ಗ್ರಾಮದ ಬೀಮಾಶಂಕರ ಮುನೋಳಿ ಇವರ ಹತ್ತಿರ1.5 ಲಕ್ಷ ರೂ ಕೋಡಿಸಿದ್ದು ಇರುತ್ತದೆ. ಮತ್ತು ನಾನು ಕೂಡ ಸಾಲದ ರೂಪಾದಲ್ಲಿ 2 ಲಕ್ಷ ರೂ ಕೊಟಿದ್ದು ಇರುತ್ತದೆ ಈಗ 2 ದಿವಸಗಳ ಹಿಂದೆ ಅಳಿಯನ ಅಣ್ಣನಾದ ರಾಜು ಇತನು ಫೋನ ಮಾಡಿ ನಿಮ್ಮ ಅಳಿಯನಿಗೆ ಇನ್ನು 90 ಸಾವಿರ ರೂಪಾಯಿ ಸಾಲವಿದೆ ಅದರ ಸಲುವಾಗಿ ಗಂಡ ಹೆಂಡತಿ ಜಗಳ ಮಾಡುತ್ತಿದ್ದಾರೆ ಮನೆಯೇ ದಾಖಲಾತಿ ಮೇಲೆ ಇನ್ನೂ ಸಾಲ ಕೊಡಿಸು ಅಂತಾ ಪೋನ ಮಾಡಿದ ಅದಕ್ಕೆ ನಾನು ಕಬ್ಬಿನ ಬಿಲ್ಲು ಬರುವವರೆಗೂ ತಾಳು ಅಂತಾ ಹೇಳಿದ್ದೆ, ನನ್ನ ಮಗಳು ಕೂಡ ಇನ್ನು ಸ್ವಲ್ಪ ಕೊಡಿಸು ನಮ್ಮಿಬ್ಬರಲ್ಲಿ ಅದೇ ತಕರಾರರು ನಡೆಯುತ್ತದೆ ಅಂತಾ ಹೇಳುತ್ತಿದ್ದಳು. ದಿನಾಂಕ 29.12.2011 ರಂದು ಬೆಳಗ್ಗೆ 7.00 ಗಂಟೆ ಸುಮಾರಿಗೆ ನಿಮ್ಮ ಮಗಳು ಮಾಯಾ @ ಬಸಮ್ಮಾ ಇವಳು ಊರಲು ಹಾಕಿಕೊಂಡು ಸತ್ತಿರುತ್ತಾಳೆ ಅಂತಾ ತಿಳಿಸಿದ ಮೇರೆಗೆ ನಾವು ಬಂದು ನೋಡಲು ನಿಜವಿರುತ್ತದೆ. ನನ್ನ ಮಗಳ ಸಾವಿಗೆ ಆಕೆಯ ಗಮಡನ ಕಾರಣ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 127/2011 ಕಲಂ 498(ಎ),306 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಕೈಕೊಂಡಿರುತ್ತಾರೆ.

ಮೋಸ ಪ್ರಕರಣ:
ಸ್ಟೇಷನ ಬಜಾರ ಪೊಲೀಸ ಠಾಣೆ:
ನಾನು ಶ್ರೀ ಹರೀಶ ತಂದೆ ಶ್ರೀರಾಮ ಉ: ಶ್ರೀರಾಮ ಚಿಟ್ಸ ಕರ್ನಾಟಕ ಪ್ರೈವೇಟ್ ಲಿಮಿಟೆಡ ಬೆಂಗಳೂರು ನಲ್ಲಿ ಅಸಿಸ್ಟೆಂಟ ಜನರಲ್ ಮ್ಯಾನೇಜರ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದು ಕಂಪನಿಯ ಪ್ರತಿನಿಧಿಯಾಗಿರುತ್ತೆನೆ. ಗುಲಬರ್ಗಾದಲ್ಲಿ ನಮ್ಮ ಶಾಖೆ ಇದ್ದು ನಮ್ಮದೆ ಗ್ರೂಪ್ ಕಂಪನಿಯಾದ ಶ್ರೀರಾಮ ಸಿಟಿ ಯುನಿಯನ್ ಫೈನಾನ್ಸದಿಂದ ಗ್ರಾಹಕರಿಗೆ ಸಾಲ ನೀಡಲಾಗುತ್ತದೆ. ಮಂಜೂರು ಮಾಡಬೇಕಾದ ಸಾಲದ ಬಗ್ಗೆ ನಾನು ಸ್ಥಳ ಪರಿಶೀಲನೆ ಹಾಗೂ ಕಾಗದ ಪತ್ರಗಳ ಪರಶೀಲನೆ ಮಾಡುವ ಹಕ್ಕುದಾರನಾಗಿರುತ್ತೇನೆ ಹೀಗಾಗಿ ಗುಲಬರ್ಗಾದ ಅನ್ವರ ಪಾಶಾ ತಂದೆ ಅಬ್ದುಲ ಹಫೀಜ ಸಾ: ಭರತನಗರ ತಾಂಡಾ ಗುಲಬರ್ಗಾ ಎಂಬಾತನು ಫಾಲ್ಕನ್ ಪೈಪ್ಸ ಎಂಬ ಪೈಪ ತಯಾರಿಕೆಯ ಕಂಪನಿಗೊಸ್ಕರ ಇಪ್ಪತ್ತು ಲಕ್ಷ ರೂಪಾಯಿ ಸಾಲ ಮಂಜೂರು ಮಾಡುವಂತೆ ಕೋರಿ ಶ್ರೀರಾಮ ಸಿಟಿ ಯುನಿಯನ್ ಫೈನಾನ್ಸ ಗುಲಬರ್ಗಾದಲ್ಲಿ ಅರ್ಜಿ ಸಲ್ಲಿಸಿದ್ದು ಆ ಪ್ರಕಾರವಾಗಿ ಪ್ರಾಥಮಿಕ ಹಂತದ ವಿಚಾರಣೆಯನ್ನು ರಾಘವೆಂದ್ರ ಪ್ರಾಂತೀಯ ವ್ಯವಸ್ಥಾಪಕರು ಕೈಕೊಂಡು ಅನ್ವರಪಾಶಾ ಇತನು ಕೊಟ್ಟ ದಾಖಲಾತಿಗಳನ್ನು ಆಧಾರವಾಗಿಟ್ಟುಕೊಂಡು ಅಲ್ಲದೆ ಇತನಿಗೆ ಸಾಲ ಮಂಜೂರಿಕರಿಸುವದಕ್ಕಾಗಿ ಸಿರಾಜೊದ್ದಿನ್ ತಂದೆ ಮಹ್ಮದ ನಿಜಾಮೊದ್ದಿನ್ ಎಂಬುವವರ ಸ್ಥಿರಾಸ್ತಿಯ ಕಾಗದ ಪತ್ರಗಳನ್ನು ಭದ್ರತೆಯನ್ನಾಗಿಟ್ಟುಕೊಂಡು ಅಲ್ಲದೆ ವೈಯಕ್ತಿಕ ಭದ್ರತೆಯನ್ನಾಗಿ ಅಜ್ಮಲ ಅಹಮದ ತಂದೆ ಜಮೀರ ಅಹಮದ ಗೋಳಾ ಇವರ ಸ್ಯೂರಿಟಿಯನ್ನು ಪಡೆದುಕೊಂಡು ದಿನಾಂಕ 02/03/2010 ರಂದು ಇಪ್ಪತ್ತು ಲಕ್ಷ ರೂಪಾಯಿಗಳನ್ನು ಮಂಜೂರಿಸಿದ್ದು ಅದೆ. ಅನ್ವರ ಪಾಶಾ ಇತನು ಕೆಲವು ತಿಂಗಳ ಸಾಲದ ಹಣವನ್ನು ಪಾವತಿ ಮಾಡಿದ್ದು ತದನಂತರ ಪಾವತಿ ಮಾಡದೆ ಇದ್ದ ಪ್ರಯುಕ್ತ ನಾವು ಬೇಟಿ ನೀಡಿದಾಗ ಫಾಲ್ಕನ ಪೈಪ್ಸ ಎಂಬ ಸ್ಥಳದಲ್ಲಿ ಬೇರೊಬ್ಬ ವ್ಯಕ್ತಿ ಮಹ್ಮದ ಅಮೀರ ಶಕೀಬ ಎಂಬುವವರು ಇರುತ್ತಾರೆ. ನಂತರ ಅನ್ವರ ಪಾಶಾ ಇವರನ್ನು ಹುಡುಕಾಡಿ ಈ ಬಗ್ಗೆ ವಿಚಾರಿಸಲಾಗಿ ತಾನು ಫಾಲ್ಕನ ಪೈಪ್ಸನ ಮಾಲಿಕ ಅಲ್ಲಾ ಆದರೆ ಆದಿಲ ಅಹಮದ @ ಸೊಹೆಲ ತಂದೆ ಎಕ್ಬಾಲ ಅಹಮದ ಅವರು ಹೇಳಿದ ಪ್ರಕಾರ ಸಾಲಕ್ಕೆ ಅರ್ಜಿ ಹಾಕಿದ್ದು ಮಂಜೂರಾದ ಸಾಲದ ಹಣ ಪೂರ್ತಿ ಆದಿಲ ಅಹಮದ @ ಸೊಹೆಲ ತಂದೆ ಎಕ್ಬಾಲ ಅಹಮದ ಇವನೆ ತೆಗೆದುಕೊಂಡಿರುತ್ತಾನೆ ಅಂತಾ ಕಾರಣ ಅನ್ವರಪಾಶಾ, ಆದಿಲ ಅಹಮದ, ಸಿರಾಜೊದ್ದಿನ್, ಅಜಮಲ ಅಹಮದ, ಮಹ್ಮದ ಅಮೀರಶಕೀಬ ಮತ್ತು ಪ್ರಾಂತೀಯ ವ್ಯವಸ್ಥಾಪಕರಾದ ರಾಘವೆಂದ್ರ ಇವರೆಲ್ಲರೂ ಸೇರಿ ಕಂಪನಿಗೆ ಮೊಸ ಮಾಡುವ ಉದ್ದೇಶದಿಂದ ಕಂಪನಿಯಿಂದ ಸಾಲ ಮಂಜೂರು ಮಾಡಿಕೊಂಡು ಮೋಸ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೆಲಿಂದ ಠಾಣಾ ಗುನ್ನೆ ನಂ 220/11 ಕಲಂ 147, 120(ಬಿ), 420, 406 ಸಂ 149 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

28 December 2011

GULBARGA DIST REPORTED CRIMES

ಹಲ್ಲೆ ಪ್ರಕರಣ:
ಸ್ಟೇಷನ ಬಜಾರ ಪೊಲೀಸ ಠಾಣೆ:
ಶ್ರೀ ಛತ್ರಪ್ಪ ತಂದೆ ರಾಜಪ್ಪ ಬೌಧ ವಯಾ 65 ಉ ವಕೀಲರು ಸಾ ಸಿಐಬಿ ಕಾಲೋನಿ ಶಕ್ತಿ ನಗರ ಗುಲಬರ್ಗಾ ರವರು ನಾನು ದಿನಾಂಕ 27/12/2011 ರಂದು ಮಧ್ಯಾಹ್ನ 3-00 ಗಂಟೆ ಸುಮಾರಿಗೆ ವಕೀಲರ ಬಾರ ಅಸೋಸಿಯನದಿಂದ ನ್ಯಾಯಾಲಯದ ಕಡೆಗೆ ನಡೆದುಕೊಂಡು ಹೋಗುವಾಗ ಎದುರಿನಿಂದ ಸಂಜಯಕುಮಾರ ತಂದೆ ತುಕಾರಾಮ ನವಲೆ ವಯಾ 34 ಸಾ ಪ್ಲಾಟ ನಂ 70 ಸಾಯಿಬಾಬಾ ಲೇಔಟ ಶಕ್ತಿ ನಗರ ಗುಲಬರ್ಗಾ ಇತನು ಬಂದು ಕೈಯಿಂದ ಎಡಗಣ್ಣಿನ ಹುಬ್ಬಿನ ಮೆಲೆ ಹೊಡೆದು ಕಾಲಿನಿಂದ ಟೊಂಕದ ಮೇಲೆ ಜೊರಾಗಿ ಒದ್ದಾಗ ಆಯಾ ತಪ್ಪಿ ಕೆಳಗೆ ಬಿದ್ದಿರುತ್ತೆನೆ. ಕಿರಿಯ ವಕೀಲರು ನನಗೆ ಉಪಚಾರಕ್ಕಾಗಿ ಜಿಲ್ಲಾ ಆಸ್ಪತ್ರೆಗೆ ತಂದು ಸೇರಿಕೆ ಮಾಡಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ 219/11 ಕಲಂ 341, 323, 324, ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕಳ್ಳತನ ಪ್ರಕರಣ:
ಜೇವರ್ಗಿ ಪೊಲೀಸ್ ಠಾಣೆ:
ನಾನು ಶ್ರೀ ರಾಜದೀಪ ತಂದೆ ಓಂಪ್ರಕಾಶ ಜೈನ ಇವರು ಜೇವರ್ಗಿ ಪಟ್ಟಣದ ಟಾಕಿಜ ರೋಡಿನ ಹತ್ತಿರ ಪೂಜಾ ಬಂಗಾರದ ಅಂಗಡಿ ಇದ್ದು ದಿನ ನಿತ್ಯ ವ್ಯಾಪಾರ ಮಾಡಿಕೊಂಡಿರುತ್ತೆನೆ ನಾನು ನಿನ್ನೆ ದಿನಾಂಕ 27-12-2011 ರಂದು ಎಂದಿನಂತೆ ವ್ಯಾಪಾರ ಮಾಡಿಕೊಂಡು ರಾತ್ರಿ 8-00 ಗಂಟೆಗೆ ನಾನು ಮತ್ತು ನನ್ನ ಅಂಗಡಿಯಲ್ಲಿ ಕೆಲಸ ಮಾಡುವ ಮಲ್ಲಿಕಾರ್ಜುನ ತಂದೆ ವೀರಭದ್ರಪ್ಪ ಅಂಕಲಿಗಿ ಇಬ್ಬರು ಅಂಗಡಿ ಬಂದ ಮಾಡಿ ಶೇಟರಗೆ ಕೀಲಿ ಹಾಕಿ ಮನೆಗೆ ಹೋಗಿರುತ್ತೆವೆ. ಬೆಳಗಿನ ಜಾವ ನಮ್ಮ ಪಕ್ಕದ ಅಂಗಡಿಯ ಗುರು ತಂದೆ ಮರೆಪ್ಪ ತಳವಾರ ಇತನು ನನಗೆ ಪೋನ ಮಾಡಿ ಹೇಳಿದ್ದೆನೆಂದರೆ, ನಿಮ್ಮ ಅಂಗಡಿ ಕಳ್ಳತನವಾಗಿರುತ್ತದೆ. ಅಂತಾ ತಿಳಿಸಿದ ಕೂಡಲೆ ನಾನು ಮತ್ತು ಮಲ್ಲಿಕಾರ್ಜುನ ಇಬ್ಬರು ಅಂಗಡಿಗೆ ಬಂದು ನೋಡಲಾಗಿ ಅಂಗಡಿಯ ಶೇಟರ ಕೀಲಿ ಮುರಿದಿತ್ತು ನಾವಿಬ್ಬರು ಒಳಗೆ ಹೋಗಿ ನೋಡಲಾಗಿ ಬೆಳ್ಳಿಯ ಸಾಮಾನುಗಳು ಇಟ್ಟಿದ್ದ ಅಲಾಮರಿಯಲ್ಲಿದ್ದ ಬೆಳ್ಳಿಯ ಕಾಲು ಚೈನುಗಳು ಕಾಲುಂಗುರಗಳು ಒಟ್ಟು 36 ಕೆ.ಜಿ. ತೂಕದ ಸಾಮಾನುಗಳು ಬಂಗಾರದ ಉಂಗುರುಗಳು ಬೆಂಡೊಲಿಗಳು ಹೀಗೆ 380 ಗ್ರಾಂ ತೂಕದ ಬಂಗಾರದ ಅಭಾರಣಗಳು ನಗದು ಹಣ 30.000 /- ಸಾವಿರ ರೂ. ಹಿಗೆ ಒಟ್ಟು 28.43.000/- ಕಿಮ್ಮತ್ತಿನ ಬಂಗಾರ ಆಭರಣಗಳು ಬೆಳ್ಳಿ ಆಭರಣಗಳು, ಸಾಮಾನುಗಳು ಯಾರೋ ಕಳ್ಳರು ಕಬ್ಬಿಣದ ರಾಡಿನಿಂದ ಅಂಗಡಿಯ ಶೇಟರಕ್ಕೆ ಹಾಕಿದ ಕೀಲಿ ಮುರಿದು ಕಳುವು ಮಾಡಿಕೊಂಡು ಹೋಗಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 211/11 ಕಲಂ. 457.380 ಐ.ಪಿ.ಸಿ. ಅಡಿಯಲ್ಲಿ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

GULBARGA DIST REPORTED CRIME

ವೈರ್ ಕಳ್ಳತನ ಮಾಡಿದ ಬಗ್ಗೆ:
ಶಹಾಬಾದ ನಗರ ಪೊಲೀಸ ಠಾಣೆ
:ದಿನಾಂಕ:25/12/2011 ರಂದು ರಾತ್ರಿ ವೇಳೆಯಲ್ಲಿ ಭಂಕೂರ ಸೀಮೆಯಲ್ಲಿ ಜೆಸ್ಕಾಂ ಇಲಾಖೆಯವರು ಕರೆಂಟ ಸಲುವಾಗಿ ಜೋಡಿಸಿದ ಟಿ.ಸಿ.ಯನ್ನು ಬಿಚ್ಚಿ ಅದರಲ್ಲಿರುವ ಅಲ್ಯೂಮಿನಿಯಂ ವೈಡಿಂಗ ವೈರ ಅ.ಕಿ. 9000/ ರೂ ಬೆಲೆ ಬಾಳುವದನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಶ್ರೀ ವಿಜಯಕುಮಾರ ತಂದೆ ಶರಣಪ್ಪಾ ಭೀಮನಳ್ಳಿ ಶಾಖಾಧಿಕಾರಿಗಳು ಭಂಕೂರ ಸಾ:ಭಂಕೂರ ತಾ:ಚಿತ್ತಾಪುರ ರವರು ದೂರು ಸಲ್ಲಿಸಿದ ಮೇರೆಗೆ ಠಾಣೆ ಗುನ್ನೆ ನಂ: 200/2011 ಕಲಂ 379 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.