POLICE BHAVAN KALABURAGI

POLICE BHAVAN KALABURAGI

07 November 2011

Gulbarga Dist Reported Crimes

ಕೊಲೆ ಪ್ರಕರಣ:
ಅಫಜಲಪೂರ ಪೊಲೀಸ್ ಠಾಣೆ:
ಶ್ರೀಮತಿ ಸುಸಲಾಭಾಯಿ ಗಂಡ ಬಾಗಪ್ಪ ದೊಡ್ಡಮನಿ 42 ವರ್ಷ ಸಾ|| ಇಂಗಳಗಿ (ಕೆ) ತಾ|| ಅಫಜಲಪೂರ ರವರು ಠಾಣೆಗೆ ನನ್ನ ಮಗ ಸಂತೋಷ ಈತನು ರತನು & ವಿಳಾಸ      ದವರೆಗ ವಿ ಹೆಂಡತಿ ರೇಣುಕಾ ಇವಳೊಂದಿಗೆ ಮಾತನಾಡುವದು ಮತ್ತು ನಗುವದು ಮಾಡುತ್ತಿದ್ದರಿಂದ ರವಿ ಸಂತೋಷನ ಮೇಲೆ ಸಂಶಯ ಮಾಡಿಕೊಂಡಿದದ್ದನು ದಿನಾಂಕ: 05.11.2011 ರಂದು ರಾತ್ರಿ 10 ಗಂಟೆಗೆ ಹೊಲಕ್ಕೆ ಹೋಗಿದ್ದು ದಿನಾಂಕ 06.11.11 ರಂದು ಬೆಳಿಗ್ಗೆ 8 ಗಂಟೆಯಾದರು ಮರಳಿ ಮನೆಗೆ ಬರದೆ ಇದ್ದಾಗ ಹೊಲಕ್ಕೆ ಹೋಗಿ ನೋಡಲಾಗಿ ಅವನ ಮೈಮೇಲೆ ಆದ ಗಾಯಗಳನ್ನು ಕಂಡು ಮಗ ಸಂತೋಷ ಈತನಿಗೆ ಗಾಯಗೊಳಿಸಿ ಕೊಲೆ ಮಾಡಿರುತ್ತಾರೆ. ತನ್ನ ಮಗ ಮತ್ತು ರವಿಯ ಈ ಹಿಂದೆ ಜಗಳವಾಡಿದ್ದರು ಸಂತೋಷನ ಕೊಲೆಯಲ್ಲಿ ರವಿಯ ಮೇಲೆ ಸಂಶಯವಿರುತ್ತದೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆ ಗುನ್ನೆ ನಂ. 183/11 ಕಲಂ 302 ಐ ಪಿ ಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೊಳ್ಳಲಾಗಿದೆ..

ಹಲ್ಲೆ ಪ್ರಕರಣ:

ಚೌಕ ಪೊಲೀಸ್ ಠಾಣೆ :ಶ್ರೀ ವಿಜಯಕುಮಾರ ತಂ ಶಿವಯ್ಯ ಪುರಮಕರ ಮೇಕಾನಿಕ ಜಾಃ ಭೋವಿ ಸಾಃ ಲಂಗೋಟಿ ಪೀರ ದರ್ಗಾದ ಹಿಂದುಗಡೆ ಕಾವೇರಿ ನಗರ ಗುಲಬರ್ಗಾ ರವರು ನಾನು ದಿನಾಂಕ 06.11.2011 ರಂದು ಸಾಯಂಕಾಲ ಸುಮಾರಿಗೆ ನಮ್ಮ ತಾಯಿಯ ಹತ್ತಿರ ಸುಪರ ಮಾರ್ಕೆಟ ಕಡೆಗೆ ಹೋಗಬೇಕೆಂದು ಮನೆಯಿಂದ ಹೊರಟು ಹುಮನಾಬಾದ ಬೇಸ ಹತ್ತಿರ ಇರುವ ಸುಂದರ ಹೊಟೇಲ ಮುಂದೆ ಹೊರಟಾಗ ಅಲ್ಲಿ ಅನಿಲ ಖಾಬಾ ಮತ್ತು ಮಂಜು ಅವರ ಸಂಗಡ 8-10 ಮೊಟಾರ ಸೈಕಲಗಳು ಬಂದಿದ್ದು ಅನಿಲ ಖಾಬಾ ಇತನು ನನಗೆ ಬೊಸಡಿ ಮಗನೆ ನಿನ್ನದು ಬಹಳ ಆಗಿದೆ ನಿನ್ನೆಯು ಕೂಡ ನಮ್ಮ ಸಂಗಡ ತಕರಾರು ಮಾಡಿದ್ದಿ ನಿನಗೆ ನೋಡಿಯೆ ಬಿಡುತ್ತೇವೆ ಅಂತ ಅಂದು ಕೈಯಿಂದ ಕಪಾಳ ಮೇಲೆ ಹೊಡೆದಿದ್ದು ಮಂಜು ಇತನು ಈ ಮಗನಿಗೆ ಹಾಕಿಕೊಂಡು ನಡೆಯಿರಿ ಅಂತ ಚಿರಾಡುತ್ತ ಅವರ ಸಂಗಡ ಇದ್ದವರು ನನ್ನನ್ನು ಹಿಡಿದು ಮಂಜು ಇತನ ಮೊಟಾರ ಸೈಕಲ ಮೇಲೆ ಕೂಡಿಸಿ ಕೊಲೆ ಮಾಡುವ ಉದ್ದೇಶದಿಂದ ಅಲ್ಲಿಂದ ಅಪಹರಣ ಮಾಡಿಕೊಂಡು ಆಳಂದ ರಸ್ತೆಯ ಕಡೆಗೆ ಕರೆದುಕೊಂಡು ಹೋಗಿ ರಾಣಾಜ್ಪೀರ ದರ್ಗಾಕಡೆಗೆ ಹೋಗುವ ರಸ್ತೆಯ ಪಕ್ಕದಲ್ಲಿ ಒಂದು ಕಂಪೌಂಡ ಹತ್ತಿರ ಇಳಿಸಿ ಮಂಜು ಇತನು ತನ್ನಲ್ಲಿದ್ದ ಚಾಕುವನ್ನು ತೆಗೆದು ನನ್ನ ಹೊಟ್ಟೆಗೆ, ಬೆನ್ನಿಗೆ ಹೊಡೆದು ರಕ್ತಗಾಯ ಪಡಿಸಿ ಸಂಗಡ ಇದ್ದವರಲ್ಲಿ 2-3 ಜನರು ಕಾಲಿನಿಂದ ಒದ್ದು ಕೈಯಿಂದ ಹೊಡೆಬಡೆ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 229/2011 ಕಲಂ 143,147,148,365,341,323,504,307 ಸಂಗಡ 149 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೊಳ್ಳಲಾಗಿದೆ..

ಆಸ್ತಿ ವಿವಾದ ಹಲ್ಲೆ ಪ್ರಕರಣ:
ಕಮಲಾಪೂರ ಹಲ್ಲೆ ಪ್ರಕರಣ
: ಶ್ರೀಮತಿ. ತುಕ್ಕಮ್ಮಾ ತಂದೆ ಗುಂಡಪ್ಪಾ ಉಡಬಾಳ ಸಾಃ ಕಮಲಾಪೂರ ತಾಃಜಿಃ ಗುಲಬರ್ಗಾ ರವರು ನಮ್ಮ ತಂದೆ ತಾಯಿಗೆ ಎರಡು ಹೆಣ್ಣು ಮತ್ತು 7 ಗಂಡು ಜನ ಮಕ್ಕಳಿದ್ದು. ಎಲ್ಲರ ಮದುವೆಯಾಗಿದ್ದು. ನನಗೆ ಮದುವೆ ಮಾಡಿಕೊಟ್ಟಿದು ಎರಡು ತಿಂಗಳಲ್ಲಿಯೇ ಗಂಡನಿಗೆ ಬಿಟ್ಟು ಮರಳಿ ಗ್ರಾಮಕ್ಕೆ ಬಂದು ಖಾರ ಕುಟ್ಟುವ ಅಂಗಡಿ ಹಾಕಿಕೊಂಡು ಜೀವನ ಸಾಗಿಸುತ್ತಿದ್ದೇನೆ. ಈ ನನ್ನ ವ್ಯಾಪಾರ ದಿಂದ ಬಂದಿರುವ ಹಣದಿಂದ 15 ವರ್ಷಗಳ ಹಿಂದೆ ಕಮಲಾಪೂರದಲ್ಲಿ ಹತ್ತು ಕೊಣೆಗಳಿರುವ ಮನೆ ಖರಿದಿ ಮಾಡಿರುತ್ತೇನೆ. ನನಗೆ ಆರಾಮವಿಲ್ಲದ ಕಾರಣ ಒಂದು ವರ್ಷದ ಹಿಂದೆ ಮನೆ ನನ್ನ ಕೊನೆಯ ತಮ್ಮ ರಘು ವಯ: 40 ವರ್ಷ ಈತನಿಗೆ ಮಾರಾಟ ಮಾಡಿರುತ್ತೇನೆ. ನನ್ನ ಉಳಿದ ತಮ್ಮಂದಿರಾದ. ಮಾಣಿಕಪ್ಪಾ 2. ಪುಂಡಲೀಕ ಮತ್ತು ಸುಭಾಶ ಈತನ ಮಗನಾದ ಮಂಜುನಾಥ ಇವರೆಲ್ಲರೂ ಕೂಡಿಕೊಂಡು ನನಗೆ ಮನೆ ಮಾರಾಟ ಮಾಡಿದ ವಿಷಯದಲ್ಲಿ ತಕರಾರು ಮಾಡಿಕೊಂಡು ಬರುತ್ತಿರುತ್ತಾರೆ. ದಿನಾಂಕ: 05/11/2011 ರಂದು ರಾತ್ರಿ ನಾನು ಖಾರ ಕುಟ್ಟುತ್ತಿದ್ದಾಗ ನಮ್ಮೂರಿನ ಶ್ರೀಕಾಂತ ತಂದೆ ಪುಂಡಲೀಕ ಈತನು ನಮ್ಮ ಗಿರಣಿಗೆ ಖಾರ ಕುಟ್ಟಿಸಲು ಮೆಣಸಿನ ಕಾಯಿ ತಂದಿದ್ದು. ನಮ್ಮ ಮನೆಯಲ್ಲಿ ಬಾಡಿಗೆಯಿಂದ ಇರುವ ಸಂತೋಷ ತಂದೆ ಹರಿರಾಮ ಈತನು ಬಂದು ನಮಗೆ ತಿಳಿಸಿದ್ದೇನೆಂದರೆ, ನಿನ್ನ ಅಳಿಯನಾದ ಮಂಜುನಾಥ ಈತನು ನಿಮ್ಮ ಮನೆಯಲ್ಲಿರುವ ವಿದ್ಯುತ್ತ ಮೀಟರ ಫೀಜ್ ಕಿತ್ತಿ ಅದಕ್ಕೆ ಮೀಟರ ತಿರುಗದ ಹಾಗೆ ಮಾಡಿ, ನೇರವಾಗಿ ವಿದ್ಯುತ್ ಉಪಯೋಗವಾಗುವಂತೆ ಮಾಡಿ, ಕೆಇಬಿಯವರಿಗೆ ಫೋನ ಮಾಡಿ, ಕರೆಯಿಸಿ ಅದನ್ನು ತೋರಿಸುತ್ತಿದ್ದಾನೆ ಅಂತಾ ಹೇಳಿದ್ದರಿಂದ ನಾನು, ಮತ್ತು ಖಾರ ಕುಟ್ಟಿಸಲು ಬಂದ ಶ್ರೀಕಾಂತ, ಹಾಗು ಸಂತೋಷ ಎಲ್ಲರೂ ಕೂಡಿಕೊಂಡು ಹೋಗಿ ಮಂಜುನಾಥ ಈತನಿಗೆ ಮನೆಯಿಂದ ಹೊರಗೆ ಕರೆದು ಸಾರ್ವಜನಿಕ ರಸ್ತೆ ಮೇಲೆ ನಿಂತುಕೊಂಡು ನೀನು ಹೀಗೆಕೆ ಮಾಡಿದ್ದಿ ಮೀಟರ ಕೂಡಾ ಒಡೆದು ಹಾಕಿದ್ದಿ ಅಂತಾ ಕೇಳಿದ್ದಕ್ಕೆ ಏ ರಂಡಿ ಇಷ್ಟು ದಿವಸ ನನಗೆ ನಿಮ್ಮ ಮನೆಯಲ್ಲಿಟ್ಟುಕೊಂಡು ಈಗ ನಿನ್ನ ಮನೆಯನ್ನು ನಮ್ಮ ಚಿಕ್ಕಪ್ಪನಿಗೆ ಮಾರಿದ್ದಿ, ಅಂತಾ ಅವಾಚ್ಯವಾಗಿ ಬೈಯುತ್ತಿದ್ದಾಗ ಶ್ರೀಕಾಂತ ಇತನು ಹೀಗೆ ಹಿರಿಯರಿಗೆ ಬೈಯುವುದು ಸರಿ ಅಲ್ಲಾ ಈ ಮನೆ ಅವಳು ಗಳಿಸಿದ ಮನೆ ಇದೆ. ಅವಳು ಯಾರಿಗೆ ಬೇಕಾದವರಿಗೆ ಮಾರುತ್ತಾಳೆ ಅಂತಾ ಅನ್ನುತ್ತಿದ್ದಾಗ ಮಂಜುನಾಥ ಈತನು ನಮ್ಮ ಜಗಳದಲ್ಲಿ ನೀನು ಏಕೆ ಅಡ್ಡ ಬರುತ್ತಿ ಅಂತಾ ಅಂದವನೇ ಶ್ರೀಕಾಂತ ಈತನಿಗೆ ನೆಲಕ್ಕೆ ನೂಕಿಸಿಕೊಟ್ಟು ಕಾಲು ಹಿಡಿದು ಎಳೆದಾಡುತ್ತಿದ್ದಾಗ ಈತನಿಗೆ ಬೆನ್ನಿಗೆ, ಹೊಟ್ಟೆಗೆ ಹೊಡೆದು ನೆಲಕ್ಕೆ ಹಾಕಿ ಎಳೆದಾಡಿದ್ದರಿಂದ ಆತನಿಗೆ ಬಲಗೈ ಮುಂಗೈಗೆ, ಬಲಭುಜಕ್ಕೆ ಮತ್ತು ತಲೆಯ ಹಿಂಭಾಗಕ್ಕೆ ತರಚಿದ ರಕ್ತಗಾಯಗಳಾಗಿರುತ್ತವೆ. ಶ್ರೀಕಾಂತ ಈತನು ನಾನು ಜಗಳ ಬಿಡಿಸಲು ಹೋದಾಗ ಮಾಣಿಕಪ್ಪಾ ಮತ್ತು ಪುಂಡಲೀಕ ಇವರು ಈ ಜಗಳ ನಿನ್ನಿಂದಲೇ ಬಂದಿದೆ ರಂಡಿ ಅಂತಾ ಅವಾಚ್ಯವಾಗಿ ಬೈಯುತ್ತಾ ಮಾಣಿಕಪ್ಪಾ ಈತನು ನನಗೆ ಜೋರಾಗಿ ನೆಲಕ್ಕೆ ನೂಕಿಸಿಕೊಟ್ಟಿರುತ್ತಾನೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 137/2011 ಕಲಂ. 341.323, 324, 504.506 ಸಂ. 34 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೊಳ್ಳಲಾಗಿದೆ.

ಅಪಘಾತ ಪ್ರಕರಣ:

ಗುಲಬರ್ಗಾ ಗ್ರಾಮೀಣ ಠಾಣೆ: ಶ್ರೀ ಕಲ್ಯಾಣಿ ತಂದೆ ಮೈಲಾರಿ ಪೂಜಾರಿ ವ: 45 ಜಾ: ಕುರುಬರ ಉ: ಒಕ್ಕಲುತನ ಸಾ: ಅವರಾದ(ಬಿ) ರವರು ನಾನು
ದಿನಾಂಕ 6/11/2011 ರಂದು ಸಾಯಂಕಾಲ ಸುಮಾರಿಗೆ ನಾನು ಹಾಗೂ ಅವನ ಸಂಗಡ ಇಬ್ಬರು ಆಟೋ ರೀಕ್ಷಾ ನಂಬರ ಕೆಎ 32 ಎ-4484 ನೇದ್ದರಲ್ಲಿ ಆಳಂದ ಚೆಕ್ಕ ಪೋಸ್ಟ್‌ ದಿಂದ ಹುಮನಾ ಬಾದ ರಿಂಗ ರೋಡ ಕಡೆ ಬರುವಾಗ ಕಾಕಡೇ ಚೌಕ ಹತ್ತಿರ ಆಟೋ ರೀಕ್ಷಾ ಚಾಲಕ ತನ್ನ ಆಟೋವನ್ನು ಅತೀವೇಗ ಹಾಗೂ ಅಲಕ್ಷತನದಿಂದ ನಡೆಯಿಸಿ ಕೊಂಡು ಪಲ್ಟಿ ಮಾಡಿದ್ದರಿಂದ ಅದರಲ್ಲಿ ಕುಳಿತ ನನಗೆ ಹಾಗೂ ಇತರ 2 ಜನರಿಗೆ ಗಾಯಗಳಾಗಿರುತ್ತವೆ . ಅಟೋ ಚಾಲಕನು ತನ್ನ ಆಟೋವನ್ನು ತೆಗೆದುಕೊಂಡು ಹಾಗೇ ಹೋಗಿದ್ದು ಇರುತ್ತದೆ ಅಂತಾ ದೂರು ಸಲ್ಲಿಸಿದ ಸಾರಂಆಶದ ಮೇಲಿಂದ ಠಾಣೆ ಗುನ್ನೆ ನಂ: 328/2011 ಕಲಂ 279, 337, ಐಪಿಸಿ ಸಂಗಡ 187 ಐಎಮವಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೊಳ್ಳಲಾಗಿದೆ.

ಹಲ್ಲೆ ಪ್ರಕರಣ:
ದೇವಲ ಗಾಣಗಾಪೂರ ಠಾಣೆ :
ಮಡಿವಾಳಪ್ಪ ನಡಗಟ್ಟಿ ಜಾ|| ಹರಿಜನ ಸಾ|| ಬಿದನೂರ ತಾ|| ಅಫಜಲಪೂರ ರವರು ನಾನು ಮತ್ತು ಗೆಳೆಯ ಲಕ್ಷ್ಮೀಕಾಂತ ಕೂಡಿಕೊಂಡು ಸೈಕಲ್‌ಕ್ಕೆ ಹವಾ ಹಾಕಿಕೊಂಡು ಬರಲು ಸಿದ್ದು ನಡಗಟ್ಟಿ ಅವರ ಮನಗೆ ಹೊರಟಾಗ ಸಮುದಾಯ ಭವನದ ಮುಂದೆ ಹೌಜಿನ ಹತ್ತಿರ ಚೈನ ಕಟ್ಟಾಗಿದ್ದರಿಂದ ರಿಪೇರಿ ಮಾಡುತ್ತ ಕುಳಿತುಕೊಂಡಾಗ ಕೃಷ್ಣಪ್ಪ ತಂದೆ ಕರಣಪ್ಪ ಹಳ್ಳಿ ಇತನು ಸ್ಟೀಲ ಚರಿಗೆಯನ್ನು ದೇವಪ್ಪ ಮನೆಗೆ ಕೊಟ್ಟು ಬರಲು ಬಾ ಅಂತಾ ಕರೆದಾಗ ಅದಕ್ಕೆ ನಾನು ಒಲ್ಲೆ ಅಂದಾಗ ಚರಿಗೆಯಿಂದ ಬಲಗಡೆ ತೆಲೆಗೆ ಹೊಡೆದು ಅವಾಚ್ಯ ಶಬ್ದಗಳಿಂದ ಬೈದು ನೆಲಕ್ಕೆ ಹಾಕಿ ಬಲಗಾಲು ತನ್ನ ಕೈಗಳಿಂದ ತಿರುವಿದ್ದರಿಂದ ಮೊಳಕಾಲ ಕೆಳಗೆ ಪಾದದ ಮೇಲಿನ ಮಧ್ಯದ ಭಾಗದಲ್ಲಿ ಭಾರಿ ಗುಪ್ತ ಪೆಟ್ಟು ಪಡಿಸಿ ಜೀವದ ಭಯ ಹಾಕಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ .


 


 

06 November 2011

GULBARGA DIST REPORTED CRIMES

ಮುಂಜಾಗ್ರತೆ ಕ್ರಮ :

ಸ್ಟೇಷನ ಬಜಾರ ಪೊಲೀಸ ಠಾಣೆ. : ಮೌಲಾನಾಸಾಬ ತಂದೆ ಹುಸೇನಿ ಬನಶಂಕರಿ ನಗರ ಗುಲಬರ್ಗಾ ಮತ್ತು ಸುಲ್ತಾನ ಸಾಹೇಬ ಹಾಗೂ ಮೌಲಾನಾಸಾಬ ತಂದೆ ನಬೀಸಾಬ ಸಾ: ಬನಶಂಕರಿ ನಗರ ಗುಲಬರ್ಗಾ ಇವರುಗಳು ಜಂಟಿಯಾಗಿ ದಿ : 29/10/2011 ರಂದು ಸ್ಟೇಷನ ಬಜಾರ ಪೊಲೀಸ ಠಾಣೆಗೆ ಹಾಜರಾಗಿ ಅರ್ಜಿ ಸಲ್ಲಿಸಿದ ಸಾರಾಂಶವೇನೆಂದರೆ ಜಮೀನು ಸರ್ವೇ ನಂ 21.5ಎ ಮತ್ತು 21.5ಬಿ ಇದರಲ್ಲಿ ಮೌಲಾನಾಸಾಬ ತಂದೆ ಹುಸೇನಿ ಎಂಬ ಸೆರಿನಲ್ಲಿ ಇರುತ್ತದೆ. ಮತ್ತು 21,5 ಬಿ ರಲ್ಲಿ ಮೌಲಾನಾಸಾಬ ತಂದೆ ನಬಿಸಾಬ ಹಾಗೂ ಸುಲ್ತಾಸಾಬ ನಬಿಸಾಬ ಅಂತಾ ಎಂಬವವರ ಹೆಸರಿನಲ್ಲಿ ಜ್ವಾಯಿಂಟ ಪಟ್ಟಾ ಇರುತ್ತದೆ. ಇವೆರಡು 25 ಗುಂಟೆಯಂತೆ ಒಟ್ಟು 50 ಗುಂಟೆ ಜಮೀನು ಇರುತ್ತದೆ. ಸರ್ವೇ ನಂ 21. 5ಎ ರಲ್ಲಿ ಗುರಣ್ಣ ಮತ್ತು ರುಕ್ಮುದ್ದಿನ ಎಂಬವರು ಅತಿಕ್ರಮಣ ಪ್ರವೇಶ ಮಾಡಿ ಜಮೀನಿನಲ್ಲಿ ಬಂದು ಪ್ರವೇಶ ಮಾಡಿರುತ್ತಾರೆ. ಈ ಜಮೀನು ನನ್ನದು ಅಂತಾ ಹೇಳಿದರೆ ಅವಾಚ್ಯ ಶಬ್ದಗಳಿಂದ ಬೈದು ನಿಂದಿಸಿರುತ್ತಾನೆ ಅದೇ ರೀತಿಯಾಗಿ 21.5ಬಿ ಜಮೀನಿನಲ್ಲಿ ಮಹಿಬೂಬಸಾಬ ಎಂಬುವವನು ಅತಿಕ್ರಮಣ ಪ್ರವೇಶ ಮಾಡಿದ್ದು ಜಮೀನಿನ ಕಾಗದ ಪತ್ರಗಳನ್ನು ನೋಡಿ ಪರಿಶೀಲಿಸಿ ಖಾಲಿ ಮಾಡಿಸಿ ಕೊಡಬೇಕು. ಅಂತಾ ವಿನಂತಿಸಿಕೊಂಡ ಮೇರೆಗೆ ಅರ್ಜಿಯ ವಿಚಾರಣೆಗಾಗಿ ದಿನಾಂಕ : 30/10/2011 ರಂದು ಬೆಳಿಗ್ಗೆ ಬನಶಂಕರಿ ನಗರಕ್ಕೆ ಹೋಗಿ ಜಮೀನಿನ ಸರ್ವೇ ನಂ 21.5ಎ ಮತ್ತು 21.5ಬಿ ನೇದ್ದರ ವಿಷಯದಲ್ಲಿ ಸ್ಥಳಕ್ಕೆ ಹೋದಾಗ ಉಭಯ ಪಾರ್ಟಿಗಳ ಒಂದನೇ ಪಾರ್ಟಿದವರು ಮತ್ತು ಎರಡನೆ ವಿಚಾರಣೆ ಕೈಕೊಳ್ಳುವ ಕಾಲದಲ್ಲಿ ಉಭಯ ಪಾರ್ಟಿಗಳು ಒಬ್ಬರಿಗೊಬ್ಬರು ಈ ಜಮೀನಿನ ಆಸ್ತಿ ವಿಷಯದಲ್ಲಿ ಕೂಗಾಡಿ ಶಾಂತಿಭಂಗವನ್ನುಂಟು ಮಾಡಿದ್ದಲ್ಲದೇ ಸಾರ್ವಜನಿಕ ನೆಮ್ಮದಿಯನ್ನು ಕದಡಿದ್ದು ಮತ್ತು ಮುಂಬರುವ ದಿನಗಳಲ್ಲಿ ಈ ಆಸ್ತಿಯ ವಿಷಯದಲ್ಲಿ ಉಭಯ ಪಾರ್ಟಿಗಳು ಒಬ್ಬರಿಗೊಬ್ಬರು ಪ್ರಾಣಹಾನಿ ಮತ್ತು ಆಸ್ತಿ ಹಾನಿ ಮಾಡಿಕೊಳ್ಳುವ ಸಂಬಂವ ಸ್ಟಷ್ಟವಾಗಿ ಕಂಡು ಬಂದಿದ್ದರಿಂದ ಪಿ.ಎಸ.ಐ ರವರು ಮುಂಜಾಗ್ರತ ಕ್ರಮ ಅಡಿಯಲ್ಲಿ ಠಾಣೆ ಗುನ್ನೆ ನಂ 194/2011 ಕಲಂ 107 ಸಿ.ಆರ್.ಪಿ.ಸಿ. ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡ ತನಿಖೆ ಕೈಕೊಂಡಿರುತ್ತಾರೆ .

ಮನುಷ್ಯ ಕಾಣೆಯಾದ ಪ್ರಕರಣ :
ಸ್ಟೇಷನ ಬಜಾರ ಪೊಲೀಸ ಠಾಣೆ. :
ಶ್ರೀಮತಿ ಜಬೀನಾ ಗಂಡ ಅಬ್ಬಾಸ ಅಲಿ ಸಾ: ಮನೆ ನಂ 7990/7ಎ ನಯಾ ಮೊಹಲ್ಲಾ ಮಿಜಗುರಿ ಗುಲಬರ್ಗಾರವರು ನನ್ನ ಗಂಡನಾದ ಅಬ್ಬಾಸ ಅಲಿ ಸ್ಟೇಷನ ಬಜಾರದ ಎಮ್.ಎ. ರಹೀಮ ವಕೀಲರು ಗೋದಾಮ ಬಾಡಿಗೆ ತೆಗೆದುಕೊಂಡು ಹಳೇ ಸಾಮಾನುಗಳನ್ನು ಖರಿದಿಗೆ ತೆಗೆದುಕೊಂಡು ಈ ಗೋದಾಮಿನಲ್ಲಿ ಇಡುತ್ತಿದ್ದನು. ಹೀಗಾಗಿ ದಿ : 01/11/2011 ರಂದು ಮದ್ಯಾಹ್ನ 1:00 ಪಿಎಮ್ ಸುಮಾರಿಗೆ ಮನೆಗೆ ಬಂದು ಮನೆಯಲ್ಲಿದ್ದ 10,000=00 ರೂ ನಗದು ಹಣ 10 ಗ್ರಾಂ ಬಂಗಾರದ ಲಾಕೇಟ ತೆಗೆದುಕೊಳ್ಳುವಾಗ ನಾನು ವಿಚಾರಿಸಲಾಗಿ ಮಾಲು ತೆಗೆದುಕೊಂಡ ಗಿರಾಕಿಗಳಿಗೆ ಹಣ ಕೊಡಬೇಕಾಗಿದೆ ಅಂತಾ ಗೋದಾಮಿಗೆ ಹೋಗುವುದಾಗಿ ಹೇಳಿ ಹೋದನು. ಅಲ್ಲದೇ ನನ್ನ ಗಂಡ ಹಳೆ ಸಾಮಾನು ಮಾರಿದ್ದರ 50,000=00 ರೂ ನಗದು ಹಣ ಆತನಲ್ಲಿ ಇದ್ದವು. ಮತ್ತು ದಿ :01/11/2011 ರಂದು ಮದ್ಯಾಹ್ನ 3:00 ಪಿ.ಎಮ ಸುಮಾರಿಗೆ ನನ್ನ ತಮ್ಮನಾದ ಮಹ್ಮದ ಖಾಸಿಂ ತಂದೆ ಬಾಬುಮಿಯಾ ಇವನು ಗೋದಾಮಿನಲ್ಲಿ ಕುಳಿತಾಗ ನನ್ನ ಗಂಡ ಸ್ವಲ್ಪ ಇಲ್ಲಿ ಹೋಗಿ ಬರುತ್ತೇನೆ. ಅಂತಾ ನನ್ನ ತಮ್ಮನಾದ ಮಹ್ಮದ ಖಾಸಿಂ ಇವರಿಗೆ ಹೇಳಿ ಹೋದವನು ಇಂದಿನವರೆಗೆ ಮನೆಗೆ ಬಂದಿರುವದಿಲ್ಲ ಕಾಣೆಯಾದ ನನ್ನ ಗಂಡನನ್ನು ಹುಡಕಿ ಕೊಡಬೇಕು ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 196/2011 ಕಲಂ : ಮನುಷ್ಯ ಕಾಣೆಯಾದ ಬಗ್ಗೆ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.

ಕರ್ತವ್ಯಕ್ಕೆ ಅಡೆ ತಡೆ ಮಾಡಿದ ಬಗ್ಗೆ

ಆಳಂದ ಪೊಲೀಸ ಠಾಣೆ: ಚಂದ್ರಕಾಂತ ಪಾಟೀಲ ಎಎಸ್.ಐ ಆಳಂದ ಪೊಲೀಸ ಠಾಣೆ ರವರು ದಿನಾಂಕ 02/11/2011 ರಂದು ಸಾಯಾಂಕಾಲ ಆಳಂದ ಪಟ್ಟಣದಲ್ಲಿ ಪೊಟ್ರೋಲಿಂಗ ಮಾಡುತ್ತಾ ಬಸ್ಸ ನಿಲ್ದಾಣದ ಎದುರುಗಡೆ ಸಂಚಾರ ದಟ್ಟಣವಿದ್ದ ಕಾರಣ ಸುಮಾರು 5.00 ಪಿಎಂ ಕ್ಕೆ ಬಸ್ಸ ನಿಲ್ದಾಣದ ಸಂಚಾರಿ ಕರ್ತವ್ಯದಲ್ಲಿದ ಮಹೇಶ ಕುಮಾರ ಸಿಪಿಸಿ 1431 ಇವರೊಂದಿಗೆ ನಾನು ಸಹ ಸಂಚಾರಿ ಕರ್ತವ್ಯಕ್ಕೆ ಸಹಾಯ ಮಾಡುತ್ತಿದಾಗ ದರ್ಗಾ ಬೇಸ ಕಡೆಯಿಂದ ಒಂದು ದ್ವಿಚಕ್ರ ವಾಹನ ಅದರ ಮೇಲೆ 3 ಜನರು ಕುಳಿತುಕೊಂಡು ಅತೀ ವೇಗ ಹಾಗೂ ನಿಷ್ಕಾಳಜಿತನದಿಂದ ನಡೆಸಿಕೊಂಡು ಬರುತ್ತಿರುವರನ್ನು ನಾನು ಮತ್ತು ಸಿಬ್ಬಂದಿ ಸಹಾಯದೊಂದಿಗೆ ಹಿರೋ ಹೊಂಡಾ ಸ್ಲೇಂಡರ ಕೆ ಎ 32 ಯು 8151 ನೇದ್ದು ಇದ್ದು ಸಿಲ್ವರ ಬಣ್ಣದು ಠಾಣೆಗೆ ತಗೆದುಕೊಂಡು ಬಂದು ಠಾಣೆಣೆಯಲ್ಲಿ ಇಡಲಾಗಿದೆ ಸದರಿ ವಾಹನದ ಚಾಳಕನ ವಿಳಾಸ ಪತ್ತೆ ಮಾಡಲಾಗಿ ಮುದ್ದಸರ ತಂದೆ ಮೌಲಾ ಮುಲ್ಲಾ ಸಾ: ತಡೋಳ ಹಾ||ವ|| ಮಟಕಿ ರೋಡ ಆಳಂದ ಅಂತಾ ಇಂದು ಗೊತ್ತಾಗಿದ್ದು ಮತ್ತು ಹಿಂದೆ ಕುಳಿತ ಇನ್ನು ಇಬ್ಬರ ಸವಾರರ ಹೆಸರು ಗೊತ್ತಾಗಿರುವದಿಲ್ಲ ದ್ವಿಚಕ್ರ ವಾಹನವನ್ನು ಅತೀವೇಗ ಮತ್ತು ನಿಷ್ಕಾಳಜಿಯಿಂದ ಸಾರ್ವಜನಿಕರಿಗೆ ಅಪಘಾತ ಪಡಿಸುವ ರೀತಿಯಲ್ಲಿ ನಡೆಸಿಕೊಂಡು ಬಂದು ನಮ್ಮಗೆ ಕರ್ತವ್ಯದಲ್ಲಿ ಅಡೆತಡೆ ಮಾಡಿ ಅವಾಚ್ಯವಾಗಿ ಬೈದು ಜೀವದ ಭಯ ಹಾಕಿದವರ ವಿರುದ್ದ ವರದಿ ಸಲ್ಲಿಸಿದರ ಸಾರಾಂಶದ ಮೇಲಿಂದ 257/2011 ಕಲಂ 471,472,420,468,34 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.

GULBARGA DIST REPORTED CRIMES

ಹಲ್ಲೆ ಮತ್ತು ಜಾತಿ ನಿಂದನೆ ಪ್ರಕರಣ:

ಆಳಂದ ಪೊಲೀಸ ಠಾಣೆ: ರಂಜಿತ ತಂದೆ ಆನಂದರಾವ ಬೇವಿನಕಟ್ಟಿ ಸಾ: ಸನಗುಂದಿ ಗ್ರಾಮ ರವರು ನಾನು ದಿನಾಲು ನಮ್ಮ ಗ್ರಾಮದಿಂದ ಗುತ್ತೆದಾರ ಕಾಲೇಜಿಗೆ ದಿನಾಲು ಬಸ್ಸಿನಲ್ಲಿ ನಮ್ಮ ಗೆಳೆಯರ ಸಂಗಡ ಬಂದು ಹೋಗುವದು ಮಾಡುತ್ತಿರುತ್ತೆನೆ ದಿನಾಂಕ: 03/11/2011 ರಂದು ನಾನು ಮತ್ತು ಗೆಳೆಯರಾದ ನಾಗರಾಜ ಹಾಗೂ ಮಲ್ಲಿಕಾರ್ಜುನ್ , ಮೂವರು ಕೂಡಿ ಬೆಳಿಗ್ಗೆ ಕಾಲೇಜಿಗೆ ಬಂದು ಮದ್ಯಾಹ್ನ 2.30 ರ ಬಸ್ಸಿಗೆ ಸನಗುಂದ ಗ್ರಾಮಕ್ಕೆ ಹೋಗುವಾಗ ಬಸ್ಸಿನಲ್ಲಿ ಮುನ್ನಳ್ಳಿ ಗ್ರಾಮದ ಷಣ್ಮುಖ ಸ್ವಾಮಿ, ಶೇಖರ , ಹಾಗೂ ಸಂತೋಷ ಇವರು ಬಸ್ಸಿನಲ್ಲಿ ದಕ್ಕೆ ಹಚ್ಚಿಸಿ ಕಿರಿಕಿರಿ ಮಾಡಿಕೊಂಡಿದ್ದು ನಮ್ಮಗೆ ಕೈಯಿಂದ ಸತೋಷ ಮತ್ತು ಷಣ್ಮುಖ ಸ್ವಾಮಿ, ಶೇಖರ ಹೊಡೆದಿದ್ದರು ದಿನಾಂಕ 04/11/2011 ರಂದು ಬೆಳಿಗ್ಗೆ ನಮ್ಮ ಗ್ರಾಮದಿಂದ ಬಸ್ಸಿಗೆ ನಾನು ಮತ್ತು ಗೆಳೆಯರಾದ ನಾಗರಾಜ ಬೇವಿನಕಟ್ಟಿ ಹಾಗೂ ಮಲ್ಲಿಕಾರ್ಜುನ್ ಬೇವಿನಕಟ್ಟಿ, ಶ್ರವಣ ಬೇವಿನಕಟ್ಟಿ ಕಾಲೇಜಿಗೆ ಬಂದು ಕಾಲೇಜು ಮುಗಿಸಿಕೊಂಡು ನಾವೆಲ್ಲರೂ ಕೂಡಿ ಆಳಂದದಿಂದ ವಿ.ಕೆ ಸಲಗಾರ ಹೋಗುವ ಬಸ್ಸಿನಲ್ಲಿ ಹೋಗುತ್ತಿದ್ದಾಗ ಹಳ್ಳಿ ಸಲಗಾರ ಪಾಟಿ ಸಮೀಪ ಬಸ್ಸು ನಿಲ್ಲಿಸಿ ಷಣ್ಮುಖ ಸ್ವಾಮಿ ತಂದೆ ರೇವಣಯ್ಯ ಸ್ವಾಮಿ,ಸಂತೋಷ ತಂದೆ ಮಾಹಾದೇವ ಜಾನಿ , ಶೇಖರ ತಂದೆ ಪ್ರಬು ಜಾನಿ , ಅನವೀರ ಜಾನಿ ,ವಿಕ್ರಮ ತಂದೆ ಪ್ರಬು ಬುಜುರ್ಕೆ ಎಲ್ಲರೂ ಕೂಡಿ ಬಸ್ಸ ನಿಲಿಸಿ ಹೊಡೆದು ರಕ್ತಗಾಯ ಪಡಿಸಿರುತ್ತಾರೆ ಮತ್ತು ಜಾತಿ ನಿಂದನೆ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 255/2011 ಕಲಂ143.324,323,148,149,506,504,143,147)ಐಪಿಸಿ 3(I) 3(x) ಎಸಸಿ ಮತ್ತು ಎಸಟಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಮೋಸ ವಂಚನೆ ಪ್ರಕರಣ :

ಆಳಂದ ಪೊಲೀಸ ಠಾಣೆ: ವಿಶ್ವ ಸನ್ಮತಿ ವಿದ್ಯಾಪೀಠ ಶಿಕ್ಷಣ ಸಂಸ್ಥೆ ಸವಳೇಶ್ವರ ಶಾಲೆಯಲ್ಲಿ ಬಸವಂತರಾಯ ಕರಕಳ್ಳಿ, ಮಲ್ಕಪ್ಪ ಕುದರೆ, ಬಸವರಾಜ ಪಡಶೆಟ್ಟಿ, ಸಿದ್ದಪ್ಪ ಪಾವಲೆ ರವರುಗಳು ಬಸವಂತರಾಯನು ಇದೆ ಶಾಲೆಯಲ್ಲಿ ನಿವೃತಿ ಹೊಂದಿ ರಿವೈಜಡ್ ಸಂಬಳ ಪಡೆಯುವ ಕುರಿತು ವಂಚಿಸಿ ಉದ್ದೇಶಕ್ಕಾಗಿ ಸುಳ್ಳು ದಸ್ತಾವೇಜಗಳನ್ನು ನೈಜವೆಂದು ಬಳಸಿ ಅಥವಾ ಉಪಯೋಗಿಸಿ ಖೋಟಾ ಮೊಹರು ತಯಾರಿಸಿ ಸಂಬಳ ಪಡೆದು ಸರಕಾರಕ್ಕೆ ಹಾಗು ಸಂಸ್ಥೆಗೆ ನಾಲ್ಕು ಜನರು ಮೋಸಮಾಡಿರುತ್ತಾರೆ ಅಂತ ಶರಣಪ್ಪ ತಂದೆ ಗುಂಡಪ್ಪ ಸಾ: ಸಾವಳೇಶ್ವರ ಗ್ರಾಮ ರವರು ಮಾನ್ಯ ನ್ಯಾಯಾಲಯ ಆಲಂದ ರವರಿಗೆ ವಿನಂತಿಸಿಕೊಂಡ ಮೇರೆಗೆ ಮಾನ್ಯ ನ್ಯಾಯಾಲದ ಆದೇಶದನ್ವಯ ಠಾಣೆ ಗುನ್ನೆ ನಂ: 256/2011 ಕಲಂ 420,468,471,472, ಸಂ 34 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲು ತನಿಖೆ ಕೈಕೊಂಡಿರುತ್ತಾರೆ.

ಅಪಘಾತ ಪ್ರಕರಣ :
ಶಹಾಬಾದ ನಗರ ಪೊಲೀಸ ಠಾಣೆ
: ಪ್ರಕಾಶ ತಂದೆ ಚಂದ್ರಶೇಖರ ಮಸಬೋ ಸಾ:ಜೀವಣಗಿ ರವರು ನಾನು ದಿ:05/11/2011 ರಂದು ರಾತ್ರಿ ಸಮಯದಲ್ಲಿ ನಮ್ಮ ಅಳಿಯ ಮಂಜುನಾಥ ತಂದೆ ಸಿದ್ದಣ್ಣ ಕರಕಳ್ಳಿ ಸಾ:ನಾಲ್ವಾರ ಇವನು ಶಹಾಬಾದದ ಕೋರ್ಟ ದಾಟಿ 100 ಮೀಟರ ಅಂತರದಲ್ಲಿ ರೋಡಿನ ಮೇಲೆ ಸ್ಕಿಡಾಗಿ ಬಿದ್ದಿರುತ್ತಾನೆ ಅಂತಾ ವಿಷಯ ತಿಳಿದು ಸ್ಥಳಕ್ಕೆ ಹೋಗಿ ನೋಡಲಾಗಿ ಮಂಜುನಾಥ ಇತನು ಬೋರಲಾಗಿ ಬಿದ್ದಿದ್ದು ತನ್ನ ಮೋಟಾರ ಸೈಕಲ್ ನಂ ನಂ.ಕೆಎ-33 ಜೆ-1395 ನೇದ್ದನ್ನು ಅತಿವೇಗ & ನಿಷ್ಕಾಳಜಿತನದಿಂದ ನಡೆಸಿಕೊಂಡು ಬಂದು ಸ್ಕಿಡಾಗಿ ರೋಡಿನ ಮೇಲೆ ಬಿದ್ದಿರುವದು ಕಂಡುಬರುತ್ತದೆ ಸದರಿಯವರು ಸ್ಕಿಡಾಗಿ ಬಿದ್ದಿರುವದರಿಂದ ಮುಖಕ್ಕೆ,ಎಡಗಾಲು ಪಾದಕ್ಕೆ ರಕ್ತಗಾಯವಾಗಿದ್ದು ಇರುತ್ತದೆ ;ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ 166/2011 ಕಲಂ:279 337 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಮುಂಜಾಗ್ರತೆ ಕ್ರಮ :

ಫರಹತಾಬಾದ ಠಾಣೆ : ಪಿ.ಎಸ್.ಐ ಫರಹತಾಬಾದ ಠಾಣೆ ದಿನಾಂಕ: 5-11-2011 ರಂದು ಮಧ್ಯಾಹ್ನ 3-20 ನಾನು ಮತ್ತು ಸಂಗಡ ಸಿಬ್ಬಂದಿಯವರೊಂದಿಗೆ ತಾಡ ತಗೆನೂರ ಹಾಗರಗುಂಡಗಿ ಗ್ರಾಮಕ್ಕೆ ಹಳ್ಳಿ ಭೇಟಿ ನೀಡಿ ಉಕ್ಕಡ ಠಾಣೆಗೆ ಬೇಟಿ ನೀಡಿದಾಗ ಶ್ರೀ ಮಲ್ಲಿಕಾರ್ಜುನ ಎ.ಎಸ್.ಐ ಉಕ್ಕಡ ಠಾಣೆಯ ಪ್ರಭಾರಿ ರವರು ತಿಳಿಸಿದೇನೆಂದರೆ ಹೊಲ ಸರ್ವೆ ನಂ: 15 ನೇದ್ದರ ಹೊಲದ ಸಂಬಂಧ ಮೊದಲನೇಯ ಪಾರ್ಟಿಯವರಾದ ರೇವಣಸಿದ್ದಪ್ಪಾ ತಂದೆ ಮಲ್ಲೇಶಪ್ಪಾ ಸಜ್ಜನ, ರವಿಕುಮಾರ ತಂದೆ ರೇವಣಸಿದ್ದಪ್ಪಾ ಇಬ್ಬರೂ ಸಾ: ಹಾಗರಗುಂಡಗಿ, ಸಂಜುಕುಮಾರ ತಂದೆ ಬಬ್ರುವಾಹನ ಸಾ: ಬೀದರ ಇವರುಗಳ ಮತ್ತು ಎರಡನೇಯ ಪಾರ್ಟಿಯವರಾದ ಮಲ್ಲಿಕಾರ್ಜುನ ತಂದೆ ರೇವಣಸಿದ್ದಪ್ಪಾ ಸಜ್ಜನ, ಭೀಮಶಾ ಖನ್ನಾ, ನಾಗಪ್ಪಾ ಕಂಟಿಕರ, ಶರಣಪ್ಪಾ ಕುದರಿಗಡ್ಡಿ, ಶಿವಶರಣಪ್ಪಾ ಕುದರಿಗಡ್ಡಿ, ನಾಗಪ್ಪಾ ತೆಳಗಿಮನಿ, ಶರಣಮ್ಮಾ ಗಂಡ ಶಿವಶರಣಪ್ಪಾ ಅಡಕಿ, ಬಾಬು ವೈಜಾಪೂರ, ರಾಮ ವೈಜಾಪೂರ, ಚನ್ನಪ್ಪಾ ತಂದೆ ಜಗಪ್ಪಾ ವೈಜಾಪೂರ, ರಾಣೋಜಿ ವೈಜಾಪೂರ,ರಮೇಶ ವೈಜಾಪೂರ, ಶಿವಶರಣಪ್ಪಾ ಅಡಕಿ ನಾಗಪ್ಪಾ ವೈಜಾಪೂರ ಎಲ್ಲರೂ ಸಾ: ಹಾಗರಗುಂಡಗಿ ತಾ:ಜಿ: ಗುಲಬರ್ಗಾ ದಿನಾಂಕ: 30/9/2011 ರಂದು ಇವರುಗಳ ಮಧ್ಯ ತಂಟೆ ತಕರಾರು ಆಗಿ ಮೊದಲನೇಯ ಪಾರ್ಟಿಯವರ ವಿರುದ್ಧ ಠಾಣಾ ಗುನ್ನೆ ನಂ: 188/11 ಕಲಂ: 143, 147, 148, 447, 504, 506 ಸಂ: 149 ಐಪಿಸಿ ಪ್ರಕಾರ ಮತ್ತು ಎರಡನೇಯ ಪಾರ್ಟಿಯರವರ ವಿರುದ್ಧ ಗುನ್ನೆ ನಂ: 185/11 ಕಲಂ: 143, 147, 148, 447, 504, 506 ಸಂ: 149 ಐಪಿಸಿ ಪ್ರಕಾರ ಗುನ್ನೆ ದಾಖಲಾಗಿದ್ದು ಇರುತ್ತದೆ. ಇದರಿಂದಾಗಿ ತಮ್ಮ ತಮ್ಮಲ್ಲಿ ದ್ವೇಷ ಬೆಳೆಸಿಕೊಂಡಿದ್ದು ಎರಡು ಪಾರ್ಟಿಯವರು ಹೊಲ ಸರ್ವೆ ನಂ: 15 ರ ಜಮೀನಿನ ಬಗ್ಗೆ ಮತ್ತೆ ಅವರವಲ್ಲಿ ತಂಟೆ ತಕರಾರು ಮಾಡಿಕೊಂಡು ತಮ್ಮ ತಮ್ಮಲ್ಲಿ ಒಬ್ಬರಿಗೊಬ್ಬರು ಹೊಡೆದಾಡಿ ರಕ್ತಪಾತ ಮಾಡಿಕೊಳ್ಳುವದು ಮತ್ತು ಆಸ್ತಿ ಪಾಸ್ತಿ ಹಾಗೂ ಜೀವಕ್ಕೆ ಹಾನಿ ಮಾಡಿಕೊಳ್ಳುವ ಸಂಭವ ಕಂಡು ಬಂದಿದ್ದರಿಂದ ಅಲ್ಲದೆ ಗ್ರಾಮದಲ್ಲಿ ಶಾಂತತಾ ಭಂಗವುಂಟು ಮಾಡುವ ಸಂಭವ ಕಂಡು ಬಂದಿದ್ದರಿಂದ ಎರಡು ಪಾರ್ಟಿಯ ಜನರ ವಿರುದ್ಧ ಮುಂಜಾಗ್ರತಾ ಕ್ರಮದ ಅಡಿಯಲ್ಲಿ ಠಾಣೆ ಗುನ್ನೆ ನಂ: 203/2011 ಕಲಂ 107 ಸಿಅರಪಿಸಿ ಪ್ರಕಾರ ಪ್ರಕರಣ ದಾಖಲಿಸಿ ಕೊಂಡಿರುತ್ತಾರೆ