POLICE BHAVAN KALABURAGI

POLICE BHAVAN KALABURAGI

17 May 2011

GULBARGA DISTRICT REPORTED CRIME

ದರೋಡೆ ಪ್ರಕರಣ :

ಎಂ ಬಿ ನಗರ ಠಾಣೆ : ಶ್ರೀಮತಿ. ಸುಮಾ ಗಂಡ ಅಮೀತಕುಮಾರ ಜೀವಣಗಿ ಸಾ|| ಪ್ಲಾಟ ನಂ.112 ಪ್ರಗತಿ ಕಾಲೂನಿ ಗುಲಬರ್ಗಾ ರವರು ದಿನಾಂಕ. 16-05-2011 ರಂದು ರಾತ್ರಿ ಬಡೆಪೂರದಲ್ಲಿರುವ ನಮ್ಮ ತಾಯಿ ಮನೆಗೆ ಹೋಗಿ ಮರಳಿ ಮನೆಗೆ ಬರುವಾಗ ಪ್ರಗತಿ ಕಾಲೂನಿ ಗಾರ್ಡನ ಹತ್ತಿರ 8-00 ಪಿ.ಎಂ.ಕ್ಕೆ ಒಬ್ಬ ಹೀರೊಹಾಂಡಾ ಮೋಟರ ಸೈಕಲ ಸವಾರನು ಮೈಮೇಲೆ ಬಂದಂತೆ ಮಾಡಿ ನನ್ನ ಕೊರಳಿಗೆ ಕೈ ಹಾಕಿ 4 ತೊಲೆ ಬಂಗಾರ ಮಂಗಳ ಸೂತ್ರ ಅಕಿ. 85,800/- ರೂ ಬೆಲೆಬಾಳುವದು ಕಿತ್ತುಕೊಂಡು ಹೊಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದರೋಡೆ ಮತ್ತು ಹಲ್ಲೆ ಪ್ರಕರಣ

ಬ್ರಹ್ಮಪೂರ ಠಾಣೆ : ರಾಹುಲ್ ತಂದೆ ಅಶೋಕ ಹೇರೂರ ಸಾ|| ಸತ್ಯ ಕಾಮ್ ಪ್ರೇಸ್ ಮೇನ ರೋಡ ಗುಲಬರ್ಗಾ ರವರು ನನಗೆ ದಿನಾಂಕ 16-05-2011 ರಂದು ವಿನೋದ ತಂದೆ ಆನಂದ ಸಗರ ಈತನು ಮಚ್ಚಿನಿಂದ ಹೊಡೆದು ಗಾಯ ಪಡಿಸಿ ನನ್ನ ಹತ್ತಿರ ಇದ್ದ ಬಂಗಾರದ ಲಾಕೇಟ ಅಕಿ|| 20,000-00 ಮತ್ತು ನಗದು ಹಣ 3,000-00 ಹೀಗೆ ಒಟ್ಟು 23,000-00 ಮ್ಔಲಯದ್ದು ಜಬರದಸ್ತಿಯಿಂದ ಕಸಿದುಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಲ್ಲೆ ಪ್ರಕರಣ :

ಮಾದನ ಹಿಪ್ಪರಗಾ ಠಾಣೆ : ಶ್ರೀ ಅಲ್ತಪ್ ತಂದೆ ಯೂಸುಪ್ ಖಾನ ಸಾ|| ಪಡಸಾವಳಗಿ ರವರು ಸರಸಂಭಾ ಗ್ರಾಮದ ಪಾಟಿ ಹತ್ತಿರ ಇದ್ದಾಗ ಚಾಂದಬಿ ಗಂಡ ಅಲ್ತಪ್ ಖಾನ ಮತ್ತು ಮಹಮದ ಹನಿಪ್ ಇಬ್ಬರು ಬಂದು ಬಾಯಿಯಲ್ಲಿ ದಸ್ತಿ ತುರಕಿ ಜೀಪಿನಲ್ಲಿ ಹಾಕಿಕೊಂಡು ಹೋಗಿ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿ ಕಲ್ಲಿನಿಂದ ಹೊಡೆದು ಜೀವದ ಭಯ ಹಾಕಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

16 May 2011

GULBARGA DIST REPORTED CRIMES

ಅಪಘಾತ ಪ್ರಕರಣ :-
ಸಂಚಾರಿ ಠಾಣೆ :
ಶ್ರೀ ಮಹ್ಮದ ಗೌಸ್ ತಂದೆ ಮಹ್ಮದ ಜಿಲಾನಿ ಪಟೇಲ್ ಸಾ|| ಮೊಹಲ್ಲಾ ಮೋಮಿನ್ ಪುರ ಗುಲಬರ್ಗಾ ರವರು, ನಾನು ಮತ್ತು ಚಾಂದಪಾಶಾ ಇಬ್ಬರೂ ಕೂಡಿಕೊಂಡು ಆಟೋರಿಕ್ಷಾ ಕೆ.ಎ 32 9065 ನೇದ್ದರಲ್ಲಿ ಕುಳಿತು ತಾಜ್ ಫಂಕ್ಷನ್ ಹಾಲ್ ಗೆ ಹೋಗುತ್ತಿರುವಾಗ, ಕೆ.ಎಫ್.ಎಮ್ ಮಿಲ್ಕ್ ಡೈರಿ ಮುಂದಿನ ರೋಡಿನಲ್ಲಿ ಆಟೋದ ಚಾಲಕನು ತನ್ನ ವಾಹನವನ್ನು ಅತಿ ವೇಗ ಮತ್ತು ನಿರ್ಲಕ್ಷತನದಿಂದ ನಡೆಸಿ ಒಮ್ಮೇಲೆ ಕಟ್ ಹೊಡೆದ ಪರಿಣಾಮ ಆಟೋ ಪಲ್ಟಿಯಾಗಿದ್ದು, ಒಳಗೆ ಕುಳಿತ ಚಾಂದಪಾಶಾ ಇತನಿಗೆ ಗಾಯಗಳಾಗಿದ್ದು, ಅಪಘಾತ ಪಡಿಸಿದ ನಂತರ ಆಟೋ ಚಾಲಕನು ತನ್ನ ವಾಹನ ಸಮೇತ ಓಡಿ ಹೋಗಿರುತ್ತಾನೆ. ಕಾರಣ ಸದರಿ ಆಟೋ ಚಾಲಕನನ್ನು ಪತ್ತೆ ಹಚ್ಚಿ ಅವನ ವಿರುದ್ಧ ಕಾನೂನು ಸೂಕ್ತ ಕ್ರಮ ಕೈಕೊಳ್ಳಬೇಕು. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

15 May 2011

GULBARGA DISTRICT REPORTED CRIMES

ಅಪಹರಣ ಪ್ರಕರಣ :

ಮಹಿಳಾ ಠಾಣೆ : ಶ್ರೀ ಚನ್ನಬಸಪ್ಪಾ ತಂದೆ ಕೆಂಚಪ್ಪಾ ಸಾ|| ವಿದ್ಯಾ ನಗರ ಗುಲಬರ್ಗಾ ರವರು ನನ್ನ ತಂಗಿಯಾದ ವಿಜೇತಾ 8 ನೇ ತರಗತಿ ವಿಧ್ಯಾರ್ಥಿನಿ ವಯ|| 14 ವರ್ಷ ಇವಳು ದಿನಾಂಕ: 07/05/2011 ರಂದು ಬೆಳಿಗ್ಗೆ 07-00 ಗಂಟೆಗೆ ಕಿರಾಣಿ ಅಂಗಡಿಗೆ ಹೋಗಿ ಬರುವದಾಗಿ ಹೇಳಿ ಹೊದವಳು ಇಲ್ಲಿಯವರೆಗೆ ಬಂದಿರುವದಿಲ್ಲ ಎಲ್ಲಾ ಕಡೆ ಹುಡಕಾಡಿದರೂ ಸಹ ಪತ್ತೆಯಾಗಿರವದಿಲ್ಲ , ವಿಜೇತಾ ಇವಳನ್ನು ಯಾರೋ ಅಪರಿಚಿತ ವ್ಯಕ್ತಿ ಅಪಹರಿಸಿಕೊಂಡ ಹೋಗಿರುವ ಬಗ್ಗೆ ಅನುಮಾನ ಬಂದಿದ್ದು ಕಾರಣ ಅಪಹರಣವಾದ ವಿಜೇತಾಳನ್ನು ಪತ್ತೆ ಹಚ್ಚಿ ಕೊಡಬೇಕಾಗಿ ದೂರು ಸಲ್ಲಿಸಿದ ಸಾರಾಂಶ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಹರಣ ಪ್ರಕರಣ :

ಔಕ ಠಾಣೆ : ಶ್ರೀ ಮಲ್ಲೇಶಪ್ಪಾ ತಂದೆ ದೇವಪ್ಪಾ ಪೂಜಾರಿ ಸಾ|| ಸ್ಟೇಶನ ಮರತೂರ ತಾ|| ಚಿತ್ತಾಪೂರ ಗುಲಬರ್ಗಾ ರವರು ನನ್ನ ಮಗನಾದ ಮಹಾದೇವಪ್ಪಾ ಇತನು ದಿನಾಲು ನಮ್ಮ ಗ್ರಾಮದಿಂದ ಗುಲಬರ್ಗಾದ ಅಡತಿಗೆ ವ್ಯಾಪಾರ ಕುರಿತು ಬಂದು ಹೋಗುತ್ತಿದ್ದು ದಿನಾಂಕ: 13-05-2011 ರಂದು ಮುಂಜಾಣೆ ಮನೆಯಿಂದ ಗುಲಬರ್ಗಾ ಹೋಗುತ್ತೆನೆಂದು ಹೇಳೀ ಹೋದನು. ರಾತ್ರಿ 10 ರಿಂದ 11 ಗಂಟೆಯವರೆಗೆ ಮರಳಿ ಮನೆಗೆ ಬಂದಿರುವದಿಲ್ಲ. ನಾನು ಗಾಬರಿಯಾಗಿ ಅವನ ಮೊಭಾಯಿಲ್ ನಂ: 994511579 ನೇದ್ದಕ್ಕೆ ಪೋನ ಮಾಡಿದಾಗ ಪೋನ ಬಂದ ಸ್ವಿಚ್ಚ ಆಪ್ ಆಗಿತ್ತು .ದಿನಾಂಕ: 14-05-20111 ರಂದು ಬೆಳಿಗ್ಗೆ 04-54 ಗಂಎಗೆ ನನ್ನ ಮಗನ ಮೊಭಾಯಿಲ್ ನಂಬರದಿಂದ ಮಹಾದೇವಪ್ಪಾ ಇತನು ಮಾತನಾಡಿ ನನಗೆ ಯಾರೋ 4-5 ಜನರು ನನಗೆ ಗೊತ್ತಿಲ್ಲದ ಸ್ಥಳಕ್ಕೆ ಅಪಹರಣ ಮಾಡಿ 4-5 ಲಕ್ಷ ರೂಪಾಯಿ ಕೊಡು ಅಂತಾ ಕೇಳುತ್ತಿರುತ್ತಾರೆ ಅಂತ ಒಮ್ಮೆಲೆ ಪೋನ ಕಟ್ ಮಾಡಿರುತ್ತಾರೆ ಅಂತಾ ಇತ್ಯಾದಿ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಳ್ಳತನ ಪ್ರಕರಣ:

ಶಹಾಬಾದ ನಗರ ಠಾಣೆ : ಶ್ರೀ ಅಶೋಕ ತಂದೆ ಜ್ಯೊತಿ ಲಕ್ಷ್ಮಣ ಕಾಂಬಳೆ ವ:37 ವರ್ಷ ಜಾ:ಹಿಂದೂ ಸಾ|| ರೈಲ್ವೆ ಕಾಲೋನಿ ಪಂಪ ಹೌಸ ರೋಡ ಶಹಾಬಾದ. ತಾ: ಚಿತ್ತಾಪೂರ.
ರವರು ನಿನ್ನೆ ದಿನಾಂಕ:13/05/2011 ರಂದು11.40 ಪಿಎಮ್ ನಮ್ಮ ಮನೆಯ ಬಾಗಿಲ ಕೀಲಿ ಹಾಕಿ ಮನೆಯ ಮಾಳಗಿ ಮೇಲೆ ಹೆಂಡತಿ ಮಕ್ಕಳೊಂದಿಗೆ ಮಲಗಿಕೊಂಡಿದ್ದು ದಿನಾಂಕ:14/05/2011 ರಂದು ಬೆಳ್ಳಿಗೆ 6 ಗಂಟೆಗೆ ಎದ್ದು ಮನೆಯ ಕೀಲಿ ನೋಡಲಾಗಿ ಬಾಗಿಲಿಗೆ ಹಾಕಿದ ಕೀಲಿ ಮುರಿದಿದ್ದು ಕಂಡು ಗಾಬರಿಯಾಗಿ ಪಕ್ಕದ ಮನೆಯವರಾದ ಸದಾಶಿವ ಮತ್ತು ಸತೀಶ ಎಲ್ಲರೂ ಕೂಡಿ ಮನೆಯೊಳಗೆ ಹೋಗಿ ನೋಡಲಾಗಿ ಮನೆಯಲ್ಲಿದ್ದ ಅಲಮಾರಿಯ ಬೀಗ ಮುರಿದು ಒಳಗಿದ್ದ ಬಂಗಾರದ ಸಾಮಾನುಗಳಾದ 4 ತೊಲೆಯ ಬಂಗಾರದ ಆಬರಣಗಳು ಮತ್ತು ಬೆಳ್ಳಿಯ ಆಬರಣ ಒಂದು ಮೊಬಾಐಇಲ್ ನಗದು ಹಣ 92,000/- ಹೀಗೆ ಒಟ್ಟು 2,85,800/- ರೂಪಾಯಿ ಬೆಲೆ ಬಾಳುವ ಸಾಮಾನುಗಳು ಯಾರೋ ಅಪರಿಚಿತ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಮದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಳ್ಳತನ ಪ್ರಕರಣ:

ಸ್ಟೇಶನ ಬಜಾರ ಠಾಣೆ :
ಶ್ರೀ ಮಹ್ಮದ ಇರ್ಫಾನ ತಂದೆ ಮಹಿಬೂಬ ಪಾಶಾ ವ|| 28 ವರ್ಷ, ಉ|| ವಿಧ್ಯಾರ್ಥಿ ಸಾ|| ಮನೆ ನಂ 1-106/3 ಖಾಲಿದಿ ಕಂಪೌಂಡ ಸ್ಠೆಷನ ಬಜಾರ ಗುಲಬರ್ಗಾ, ಇವರು ಠಾಣೆಗೆ ಹಾಜರಾಗಿ ಲಿಖಿತ ಫಿರ್ಯಾದು ಸಲ್ಲಿಸಿದ್ದರ ಸಾರಾಂಶವೆನೆಂದರೆ, ಫಿರ್ಯಾದಿದಾರರು ದಿನಾಂಕ 13.05.2011 ರಂದು ತಮ್ಮ ವಾಹನವಾದ ಬಿಳಿ ಬಣ್ಣದ ಟಾಟಾ ಸುಮೋ ವಾಹನ ನಂ ಕೆಎ-20 ಎಮ್- 4678, ಅ.ಕಿ. 1,50,000/- ರೂ ಅದರ ಚೇಸ್ಸಿ ನಂ 921412 ಇಂಜಿನ್ ನಂ 757253 ನೇದ್ದು ರಾತ್ರಿ 11.00 ಗಂಟೆಗೆ ತಮ್ಮ ಮನೆಯ ಮುಂದೆ ನಿಲ್ಲಿಸಿ ಮಲಗಿಕೊಂಡಿದ್ದು ಬೆಳಿಗ್ಗೆ ದಿನಾಂಕ 14.05.2011 ರಂದು 7.00 ಗಂಟೆಗೆ ಎದ್ದು ನೋಡಲಾಗಿ ನಿಲ್ಲಿಸಿದ ಟಾಟಾ ಸುಮೋ ಇರಲಿಲ್ಲಾ ರಾತ್ರಿ ವೇಳೆಯಲ್ಲಿ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತ ಕೊಟ್ಟ ಫಿರ್ಯಾದಿಯ ಸಾರಾಂಶದ ಮೇಲಿಂದ ಠಾಣೆ