POLICE BHAVAN KALABURAGI

POLICE BHAVAN KALABURAGI

15 February 2020

KALABURAGI DISTRICT REPORTED CRIMES

ಮಟಕಾ ಜೂಜಾಟದಲ್ಲಿ ನಿರತವನ ಬಂಧನ :
ವಾಡಿ ಠಾಣೆ : ದಿನಾಂಕ:14/02/2020 ರಂದು ಮದ್ಯಾಹ್ನ ವಾಡಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಬರುವ ಇಂಗಳಗಿ ಗ್ರಾಮದ ಬಸವೇಶ್ವರ ಚೌಕ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ರೊಡಿಗೆ ಒಬ್ಬ ವ್ಯಕ್ತಿ ನಿಂತುಕೊಂಡು ಜನರಿಂದ ಹಣ ಪಡೆದು ಒಂದು ರೂಪಾಯಿಗೆ 80/- ರೂಪಾಯಿ ಗೆಲ್ಲಿರಿ ಅಂತಾ ಕೂಗಾಡುತ್ತಾ ಮಟಕಾ ಅಂಕಿ ಸಂಖ್ಯೆ ಬರೆದು ಚೀಟಿ ಕೊಡುತ್ತಾ ಮಟಕಾ ಜೂಜಾಟದಲ್ಲಿ ತೊಡಿಗಿರುತ್ತಾನೆ ಅಂತಾ ಬಂದ ಬಾತ್ಮಿ ಮೇರೆಗೆ ಪಿ.ಎಸ್.ಐ. ವಾಡಿ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಮಾನ್ಯ ಡಿ.ಎಸ.ಪಿ ಸಾಹೇಬರು ಶಹಾಬಾದ ಮತ್ತು ಸಿ.ಪಿ.ಐ ಸಾಹೇಬರು ಚಿತ್ತಾಪೂರ ವೃತ್ತ ರವರ ಮಾರ್ಗದರ್ಶನದಲ್ಲಿ ಇಂಗಳಗಿ ಗ್ರಾಮಕ್ಕೆ ಹೋಗಿ  ಮರೆಯಲ್ಲಿ ನಿಂತು ನಿರೀಕ್ಷಣೆ ಮಾಡಿ ನೋಡಿ ಮಟಕಾ ಅಂಕಿ ಸಂಖ್ಯೆ ಬರೆದುಕೊಳ್ಳುತ್ತಿದ್ದನ್ನು ಖಚಿತ ಪಡಿಸಿಕೊಂಡು ಸದರಿಯವನ ಮೇಲೆ ದಾಳಿ ಮಾಡುವಷ್ಟರಲ್ಲಿ ಪೊಲೀಸ ಸಮವಸ್ತ್ರ ನೋಡಿ ಮಟಕಾ ಅಂಕಿ ಸಂಖ್ಯೆ ಬರೆಸುತ್ತಿದ್ದವರು ಓಡಿ ಹೋಗಿದ್ದು ಮಟಕಾ ಅಂಕಿ ಸಂಖ್ಯೆ ಬರೆದುಕೊಳ್ಳುತ್ತಿದ್ದ ವ್ಯಕ್ತಿಯನ್ನು ಸಿಬ್ಬಂದಿ ಸಹಾಯದಿಂದ ಹಿಡಿದು ಆತನಿಗೆ ವಿಚಾರಿಸಲು ತನ್ನ ಹೆಸರು ಸುರೇಶ ತಂದೆ ಈರಣ್ಣಾ ಹೊಳಕುಂದಿ ಸಾ:ಇಂಗಳಗಿ ಅಂತಾ ತಿಳಿಸಿದನು. ಸದರಿಯವನ ಅಂಗ ಶೋಧನೆ ಮಾಡಲಾಗಿ ಆತನ ವಶದಿಂದ 1140 /- ರೂ ನಗದು ಹಣ ಮತ್ತು 02 ಮಟಕಾ ಅಂಕಿ ಸಂಖ್ಯೆ ಬರೆದ ಚೀಟಿ ಹಾಗೂ ಒಂದು ಬಾಲ ಪೆನ್ನು ದೊರೆತಿದ್ದು ಮಟಕಾ ನಂಬರ ಬರೆದ ಚೀಟಿಗಳನ್ನು ಯಾರಿಗೆ ಕೊಡುತ್ತಿಯಾ ಅಂತಾ ವಿಚಾರಿಸಲಾಗಿ ತಾನೇ ಇಟ್ಟುಕೊಳ್ಳುತ್ತೆನೆ ಅಂತಾ ತಿಳಿಸಿದನು. ಅವುಗಳನ್ನು ಜಪ್ತಿ ಪಡಿಸಿಕೊಂಡು ಸದರಿಯವನೊಂದಿಗೆ ವಾಡಿ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಪಘಾತ ಪ್ರಕರಣ :
ವಾಡಿ ಠಾಣೆ : ಶ್ರೀಮತಿ  ಚಂದ್ರಕಲಾ ಗಂಡ ಭೀಮರಾಯ ಬೇಳಗೆರಿ ಮು:ತುನ್ನೂರ ಗ್ರಾಮ ರವರ ಗಂಡ ಭೀಮರಾಯ ತಂದೆ ಬಂಡಪ್ಪ ಬೇಳಗೆರಿ ಇವರು ದಿನಾಂಕ 08/02/2020 ರಂದು ಮದ್ಯಾಹ್ನ 02-00 ಗಂಟೆ ಸುಮಾರು ನನ್ನ ಗಂಡ ಭೀಮರಾಯ ಇವರು ಹೊಲಕ್ಕೆ ಹೋಗಿ ಬರುತ್ತೆನೆ ಅಂತಾ ಹೇಳಿ ಹೊರಟು ಹೋದರು. ನಂತರ ಮದ್ಯಾಹ್ನ 03-15 ಗಂಟೆ ಸುಮಾರು ನಮ್ಮ ಗ್ರಾಮದ ಚಂದರಡ್ಡಿ ಮೂಲಿಮನಿ ಎನ್ನುವರು ನಮಗೆ ಫೋನ ಮಾಡಿ ನಿನ್ನ ಗಂಡ ಮೊಟರ ಸೈಕಲ ಮೇಲೆ ತುನ್ನೂರ ಗ್ರಾಮದಿಂದ ಹೊಲದ ಕಡೆಗೆ ಹೊರಟಾಗ ಸಾಹೇಬಗೌಡ ರವರ ಹೊಲದ ಹತ್ತಿರ ಮೊಟರ ಸೈಕಲ ಮೇಲಿಂದ ಬಿದ್ದಿರುತ್ತಾನೆ. ಅಂತಾ ವಿಷಯ ತಿಳಿಸಿದಾಗ ನಾನು ಮತ್ತು ನಮ್ಮ ಭಾವ ಸಿದ್ದಣ್ಣಾ ಕೂಡಿಕೊಂಡು ಸ್ಥಳಕ್ಕೆ ಹೋಗಿ ನೋಡಲಾಗಿ ಚಂದರಡ್ಡಿ ರವರು ಸ್ಥಳದಲ್ಲಿ ಇರಲಿಲ್ಲ. ನೋಡಲಾಗಿ ನನ್ನ ಗಂಡನ ತಲೆಯ ಹಿಂದೆ ಭಾರಿ ರಕ್ತಗಾಯವಾಗಿದ್ದು ಆತನು ಮಾತನಾಡುವ ಸ್ಥಿತಿಯಲ್ಲಿ  ಇರಲಿಲ್ಲ. ನಂತರ ನನ್ನ ಗಂಡನಿಗೆ ಖಾಸಗಿ ವಾಹನದಲ್ಲಿ ಹಾಕಿಕೊಂಡು ಕಲಬುರಗಿಯ ವಾತ್ಸಲ್ಯ ಆಸ್ಪತ್ರೆಗೆ ತಂದು ಸೇರಿಕೆ ಮಾಡಿದ್ದು ಇರುತ್ತದೆ. ನಂತರ ವಾಡಿ ಪೊಲೀಸರು ಸಹ ಬಂದಾಗ ನನ್ನ ಗಂಡ ಹೇಗೆ ಬಿದ್ದ ಎನ್ನುವ ಬಗ್ಗೆ ಹೆಚ್ಚು ವಿಷಯ ಗೊತ್ತಿರುವದಿಲ್ಲ ಅಂತಾ ತಿಳಿಸಿರುತ್ತೆನೆ. ಆದರೆ ದಿನಾಂಕ 12/02/2020 ರಂದು ಚಂದರಡ್ಡಿ ಇತನು ಆಸ್ಪತ್ರೆಗೆ ಬಂದಾಗ ಅವರಿಗೆ ಘಟನೆಯ ಬಗ್ಗೆ ವಿಚಾರಿಸಲಾಗಿ ನಿನ್ನ ಗಂಡ ವಾಡಿ ಪಟ್ಟಣದ ಮಹ್ಮದ ಹುಸೇನ ಎನ್ನುವರ ಮೊಟರ ಸೈಕಲ ನಂಬರ ಕೆಎ-32 ಇಎಸ್-7216 ನೇದ್ದರ ಮೇಲೆ ಕುಳಿತುಕೊಂಡು ತುನ್ನೂರದಿಂದ ಬರುವ ಕಾಲಕ್ಕೆ ಮೊಟರ ಸೈಕಲ ಅತಿವೇಗ ಹಾಗೂ ಅಲಕ್ಷತನದಿಂದ ಚಲಾಯಿಸಿಕೊಂಡು ಹೊರಟಿದ್ದು ಆಗ ರೊಡಿನ ಜಂಪದಲ್ಲಿ ಒಮ್ಮೇಲೆ ಹಿಂದೆ ಕುಳಿತ ನಿನ್ನ ಗಂಡ ಭೀಮರಾಯ ಇತನು ಕೆಳಗಡೆ ಬಿದ್ದನು. ಆಗ ನಾನು  ನನ್ನ ಮೊಟರ ಸೈಕಲ ನಿಲ್ಲಿಸಿ ಆತನ ಹತ್ತಿರ ಹೋಗಿ ನೋಡಲಾಗಿ ನಿನ್ನ ಗಂಡ ಭೀಮರಾಯ ಇತನು ಇದ್ದ ಬಗ್ಗೆ ನೋಡಿ ಗುರ್ತಿಸಿ ನಿಮಗೆ ಫೋನ ಮಾಡಿ ವಿಷಯ ತಿಳಿಸಿದೆನು. ಮಹ್ಮದ ಹುಸೇನ ಇತನು ತನ್ನ ಮೊಟರ ಸೈಕಲ ತೆಗೆದುಕೊಂಡು ನಾಲವಾರ ಕಡೆಗೆ ಹೊರಟು ಹೋದನು. ನಂತರ ನಮ್ಮೂರಿನ ಒಬ್ಬಿಬ್ಬೊರು ಅಲ್ಲಿ ಬಂದಿದ್ದರಿಂದ ನಾನು ಅಲ್ಲಿಂದ ಹೊರಟು ಹೋಗಿರುತ್ತೆನೆ.ಅಂತಾ ತಿಳಿಸಿರುತ್ತರೆ ನನ್ನ ಗಂಡನಿಗೆ ತಲೆಗೆ ಗಾಯವಾಗಿದ್ದು ಮಾತನಾಡುವ ಸ್ಥಿತಿಯಲ್ಲಿ ಇರದೇ ಇರುವದರಿಂದ ನಾನು ಈ ಬಗ್ಗೆ ಕೇಸು ವಗೈರೆ ಮಾಡಿಸಿರುವದಿಲ್ಲ. ಈ ಬಗ್ಗೆ ಕೇಸು ಆಗುತ್ತದೆ ಅಂತಾ ಹಿರಿಯರಿಂದ ಗೊತ್ತಾಗಿ ಮತ್ತೆ ವೈದ್ಯರಿಗೆ ನಾನು ನನ್ನ ಹೇಳಿಕೆಯನ್ನು ಕೊಟ್ಟು MLC ಕೇಸು ಮಾಡಿಸಿರುತ್ತೆನೆ. ನನ್ನ ಗಂಡನಿಗೆ ಮಹ್ಮದ ಹುಸೇನ ಎನ್ನುವರು ಮೊಟರ ಸೈಕಲ ನಂಬರ ಕೆಎ-32 ಇಎಸ್-7216 ನೇದ್ದರ ಮೇಲೆ ಕೂಡಿಸಿಕೊಂಡು ಅತಿವೇಗ ಹಾಗೂ ಅಲಕ್ಷತನದಿಂದ ಚಲಾಯಿಸಿಕೊಂಡು ಹೊರಟಾಗ ರೊಡ ಜಂಪದಲ್ಲಿ ಹಿಂದೆ ಕುಳಿತ ನನ್ನ ಗಂಡ ಮೊಟರ ಸೈಕಲ ಮೇಲಿಂದ  ರೊಡ ಮೇಲೆ ಬಿದ್ದ ಪರಿಣಾಮ ಈ ಘಟನೆ ಸಂಭವಿಸಿದ್ದು ಈ ಬಗ್ಗೆ ಮೊಟರ ಸೈಕಲ ಚಾಲಕನಿಗೆ ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮನುಷ್ಯ ಕಾಣೆಯಾದ ಪ್ರಕರಣ :
ಅಫಜಲಪೂರ ಠಾಣೆ : ದಿನಾಂಕ 10-02-2020 ರಂದು ಮದ್ಯಾಹ್ನ ನನ್ನ ಮಗನಾದ ಮಂತ್ರೇಶನು ಅಫಜಲಪೂರಕ್ಕೆ ಹೋಗಿ ಸಂತೆ ಮಾಡಿಕೊಂಡು ಬರುತ್ತೇನೆ ಎಂದು ಹೇಳಿ ನಮ್ಮ ಹೊಲದಲ್ಲಿನ ಮನೆಯಿಂದ ಅಫಜಲಪೂರಕ್ಕೆ ಹೋಗಿರುತ್ತಾನೆ. ನನ್ನ ಮಗ ಮಂತ್ರೇಶನು ಸಂಜೆ ಎಷ್ಟೋತ್ತಾದರೂ ಮನೆಗೆ ಬರದೆ ಇದ್ದುದರಿಂದ ನನ್ನ ಮಗನನ್ನು ಅಂದಿನಿಂದ ಇಂದಿನ ವರೆಗೆ ನಾನು ಮತ್ತು ನನ್ನ ಮಗನಾದ ರಮೇಶ ಹಾಗೂ ನಮ್ಮ ಅಣ್ಣ ತಮ್ಮಕಿಯ ಮಾಳಪ್ಪ ಜಗಲಗೊಂಡ ಮೂರು ಜನರು ಕೂಡಿ ಅಫಜಲಪೂರ, ಕಲಬುರಗಿ, ಜೇವರ್ಗಿ, ಸಿಂದಗಿ, ಆಲಮೇಲ್ ಪಟ್ಟಣಗಳಿಗೆ ಹೋಗಿ ಹುಡುಕಾಡಿದ್ದು ನನ್ನ ಮಗ ಎಲ್ಲಿಯೂ ಸಿಕ್ಕಿರುವುದಿಲ್ಲ. ನನ್ನ ಮಗನಾದ ಮಂತ್ರೇಶ ವಯ|| 27 ವರ್ಷ ಈತನು ದಿನಾಂಕ 10-02-2020 ರಂದು ಮದ್ಯಾಹ್ನ 12:15 ಗಂಟೆಗೆ ಅಫಜಲಪೂರಕ್ಕೆ ಹೋಗಿ ಸಂತೆ ಮಾಡಿಕೊಂಡು ಬರುತ್ತೇನೆ ಎಂದು ಹೇಳಿ ಹವಳಗಾ ಸೀಮೆಯ ನನ್ನ ಹೊಲ ಸರ್ವೆ ನಂ 78 ನೇದ್ದರಲ್ಲಿನ ಹೊಲದಲ್ಲಿನ ಮನೆಯಿಂದ ಹೋಗಿ ಕಾಣೆಯಾಗಿರುತ್ತಾನೆ. ನನ್ನ ಮಗನು ಎಷ್ಟು ಹುಡುಕಾಡಿದರೂ ಸಿಕ್ಕಿರುವುದಿಲ್ಲಾ ಕಾಣೆಯಾದ ವ್ಯೆಕ್ತಿಯ  ಚಹರಾಪಟ್ಟಿ ಹೆಸರು ಮತ್ತು ವಿಳಾಸ ಮಂತ್ರೇಶ ತಂದೆ ಸಾಯಬಣ್ದಣ ಜಗಲಗೊಂಡ ವಯ|| 27 ವರ್ಷ ಸಾ|| ಹವಳಗಾ ಗ್ರಾಮ ತಾ|| ಅಫಜಲಪೂರ ಜಿ|| ಕಲಬುರಗಿ  ಎತ್ತರ    ಅಂದಾಜು 5.8 ಪೀಟ್ ಮುಖ  ಚಹರೆ ಕೋಲು ಮುಖ, ಗೋದಿ ಬಣ್ಣ, ಸಾದಾರಣ ಮೈಕಟ್ಟು ಇರುತ್ತದೆ ಕಾಣೆಯಾದ ದಿನದಂದು ದರಸಿದ ಉಡುಪುಗಳು ಹಳದಿ ಬಣ್ಣದ ಶರ್ಟ, ಚಾಕಲೇಟ ಬಣ್ಣದ ಪ್ಯಾಂಟ್ ಮಾತನಾಡುವ ಬಾಷೆಗಳು  ಕನ್ನಡ ಅಂತಾ ಶ್ರೀ ಸಾಯಬಣ್ಣ ತಂದೆ ಸಿದ್ದಪ್ಪ ಜಗಲಗೊಂಡ ಸಾ|| ಹವಳಗಾ ಗ್ರಾಮ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

08 February 2020

KALABURAGI DISTRICT REPORTED CRIMES.

ªÁr ಪೊಲೀಸ್ oÁuÉ    : ದಿನಾಂಕ 06/02/2020 ರಂದು ರಾತ್ರಿ 08.00 ಗಂಟೆಗೆ ಜಿಲ್ಲಾ ಸರಕಾರಿ ಆಸ್ಪತ್ರೆ ಕಲಬುರಗಿಯಲ್ಲಿ ಗಾಯಾಳು ಮಲ್ಲಪ್ಪ ಇತನ ಎಮ್.ಎಲ್.ಸಿ ಪಡೆದುಕೊಂಡು ನಂತರ ಗಾಯಾಳು ಮಲಪ್ಪ ಇತನಿಗೆ ಮಾತನಾಡಿಸಲು ಆತನಿಗೆ ಸರಿಯಾಗಿ ಮಾತನಾಡಲು ಬರದೇ ಇರುವದರಿಂದ ಇಂದು ದಿನಾಂಕ 07/02/2020 ರಂದು ಬೆಳಗ್ಗೆ 08.30 ಗಂಟೆಗೆ ಮಲ್ಲಪ್ಪ ತಂದೆ ಶ್ಯಾಮರಾಯ ಹೊನಗುಂಟಿ ವಯ-50 ವರ್ಷ ಉದ್ಯೋಗ-ಒಕ್ಕಲುತನ ಜಾತಿ-ಕುರುಬ ಸಾ.ಇಂಗಳಗಿ ರವರ ಹೇಳಿಕೆಯನ್ನು ಪಡೆದುಕೊಂಡು ಮರಳಿ ಬೆಳಗ್ಗೆ 11.00 ಗಂಟೆಗೆ ಠಾಣೆಗೆ ಬಂದಿದ್ದು ಸದರಿ ಹೇಳಿಕೆಯ ಸಂಕ್ಷಿಪ್ತ ಸಾರಾಂಶವೇನಂದೆ, ನಾನು ಮೇಲಿನ ವಿಳಾಸದವನಿದ್ದು ಒಕ್ಕಲುತನ ಕೆಲಸ ಮಾಡಿಕೊಂಡು ಉಪ ಜೀವಿಸುತ್ತೇನೆ. ಈಗ ಒಂದು ವರ್ಷದ ಹಿಂದೆ ನನ್ನ ಸೋಸೆ ಮಂಜುಳಾ ಇವಳು ಹೋಲಕ್ಕೆ ಹೋದಾಗ ನಮ್ಮ ಅಣ್ಣ ತಮ್ಮಕೀಯ ಅರ್ಜುನ ತಂದೆ ಮರೇಪ್ಪ ಇತನು ಅವಳಿಗೆ ಚುಡಾಯಿಸಿದ್ದರಿಂದ  ಈ ಬಗ್ಗೆ ನಾನು ಆತನ ತಂದೆಗೆ ವಿಚಾರಿಸಿದದ್ದಕ್ಕೆ ನನ್ನೊಂದಿಗೆ ಅರ್ಜುನ ಇತನು ಜಗಳ ಮಾಡಿ ನಿನಗೆ ಒಂದು ಕೈ ನೋಡಿಯೇ ಬಿಡುತ್ತೇನೆಅಂತಾ ಬೈದಾಡಿದ್ದು ಇರುತ್ತದೆ. ನಂತರ ದಿನಾಂಕ-05/02/2020 ರಂದು ರಾತ್ರಿ 08.00 ಗಂಟೆ ಸುಮಾರು ನಾನು ಮನೆಯ ಹೊರಗೆ ಬಂದಾಗ ಮರೇಪ್ಪ ಇತನು ನಮ್ಮ ಮನೆಯ ಮುಂದುಗಡೆ ಕುಳಿತು ಏಕೀ ಮಾಡುತ್ತಿದ್ದನ್ನು ಕಂಡು ನಾನು ನಮ್ಮ ಮನೆಯ ಮುಂದೆ ಏಕೆ ಕುಳಿತ್ತಿದ್ದಿ ಪಕ್ಕದ ಗಲ್ಲಿಯಲ್ಲಿ ಹೋಗಿ ಏಕೀ ಮಾಡು ಅಂತಾ ಹೇಳಿದ್ದಕ್ಕೆ ಆತನು ರಂಡಿ ಮಗನೇ ನಿನ್ನ ಸೊಕ್ಕು ಹೇಚ್ಚಾಗಿದೆಅಂತಾ ಬೈದು ತಮ್ಮ ಮನೆಗೆ ಹೋಗಿ ಅರ್ಜುನ ತಂದೆ ಮರೇಪ್ಪ ,ಸಾಬಣ್ಣ ತಂದೆ ಮರೇಪ್ಪ ,ಯಲ್ಲಪ್ಪ ತಂದೆ ಮರೇಪ್ಪ,ಶರಣಪ್ಪ ತಂದೆ ಮರೇಪ್ಪ ಮತ್ತು ಶರಣಪ್ಪ ತಂದೆ ಸಾಬಣ್ಣ ರವರನ್ನು ಕರೆದುಕೊಂಡು ಬಂದು ನನಗೆ ಮರೇಪ್ಪ ಸಾಬಣ್ಣ ಗಟ್ಟೀಯಾಗಿ ಹಿಡಿದುಕೊಂಡರು ಅರ್ಜುನ ಇತನು ತನ್ನ ಕೈಯಲ್ಲಿದ್ದ ಬಡಿಗೆಯಿಂದ ನನ್ನ ಎಡ ಹುಬ್ಬಿನ ಹತ್ತಿರ ತಲೆಗೆ ಹೊಡೆದು ರಕ್ತಗಾಯ ಪಡಿಸಿದನು ಆಗ ಜಗಳ ಬಿಡಿಸಲು ಬಂದ ನನ್ನ ಮಗನಿಗೆ ದಬ್ಬಿಕೊಟ್ಟು ಯಲ್ಲಪ್ಪ ತಂದೆ ಮರೇಪ್ಪ,ಶರಣಪ್ಪ ನನಗೆ ನೇಲಕ್ಕೆ ಕೆಡವಿ ಕೈಯಿಂದ ಹೊಡೆದು ಕಾಲಿನಿಂದ ಒದ್ದಿರುತ್ತಾರೆ. ಶರಣಪ್ಪ ತಂದೆ ಸಾಬಣ್ಣ ಇತನು ರಂಡಿ ಮಕ್ಕಳಿಗೆ ಸೊಕ್ಕು ಬಂದಿದೆ ಅಂತಾ ಕೈಯಿಂದ ಮೈಮೇಲೆ ಹೊಡೆ ಬಡೆ ಮಾಡುತ್ತಿದ್ದಾಗ ಮಗ ಈಸಪ್ಪ ,ಗುಂಡಪ್ಪ ,ಶಾಂತಯ್ಯ ರವರು ಕೂಡಿ ಜಗಳ ಬಿಡಿಸಿರುತ್ತಾರೆ. ಆಗ ಅರ್ಜುನ ಇತನು ರಂಡಿ ಮಗನೇ ಮಲ್ಯ ನಮ್ಮ ತಂಟೆಗೆ ಬಂದರೆ ನಿನಗೆ ಖಲಾಸ ಮಾಡುತ್ತೇನೆ ಅಂತಾ ಜೀವ ಬೇದರಿಕೆ ಹಾಕುತ್ತೇನೆ ಅಂತಾ ಹೊರಡು ಹೋದನು ಆಗ ಸಮಯ ರಾತ್ರಿ 08.30 ಪಿ.ಎಮ್ ಆಗಿತ್ತು. ನಂತರ ನನ್ನ ಮಗ ನನಗೆ ಉಪಚಾರ ಕುರಿತು  ವಾಡಿ ಆಸ್ಪತ್ರೆಗೆ ತಂದು ಉಪಚರಿಸಿಕೊಂಡು  ಹೆಚ್ಚಿನ ಪಚಾರ ಕುರಿತು ಇಲ್ಲಗೆ  ತಂದು ಸೇರಿಕೆ ಮಾಡಿದ್ದು ನನಗೆ  ಎದೆ ನೊವು ಆಗಿದ್ದರಿಂದ  ಸರಿಯಾರಿ ಮಾತನಾಡಲು ಬರದೇ ಇರುವದರಿಂದ ಇಂದು ನನ್ನ ಹೇಳಿಕೆಯನ್ನು ನೀಡಿರುತ್ತೇನೆ. ಮೇಲೆ ನಮೂದು ಮಾಡಿದರವರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಅಂತಾ ವಗೈರಿ ಹೇಳಿಕೆಯ ಸಾರಾಂಶದ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನೀಖೆ ಕೈಗೊಂಡಿದ್ದು ಬಗ್ಗೆ ವರದಿ.
C¥sÀd®¥ÀÆgÀ ¥Éưøï oÁuÉ : ಇಂದು ದಿನಾಂಕ:07-02-2020 ರಂದು 2-00 ಪಿ,ಎಮ್.ಕ್ಕೆ ಪಿರ್ಯಾದಿದಾರಳಾದ ಶ್ರೀಮತಿ ರೇವಮ್ಮ ಗಂಡ ರವಿಂದ್ರ ಸ್ವಾಮಿ ವ||30 ಜಾ||ಜಂಗಮ ಉ||ಮನೆ ಕೆಲಸ ಸಾ|| ನಿಲಗಾರ ಕರಜಗಿ ತಾ|| ಅಕ್ಕಲಕೋಟ ಜಿ|| ಸೋಲ್ಲಾಪೂರ ಹಾಲಿ ವಸ್ತಿ ಕಬ್ಬೇರ ಕರಜಗಿ ತಾ|| ಅಫಜಲಪೂರ ಜಿ|| ಕಲಬುರಗಿ ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಗಣಕಿಕರಿಸಿದ ದೂರು ಅರ್ಜಿ ಸಲ್ಲಿಸಿದ್ದು ಸದರಿ ದೂರಿನ ಸಾರಾಂಶವೆನಂದರೆ ರವಿಂದ್ರಸ್ವಾಮಿ ಇವರ ಜೋತೆ ನನ್ನ ಮದುವೆಯಾಗಿ ಸುಮಾರು 12-13 ವರ್ಷಗಳು ಆಗಿರುತ್ತವೆ. ಸದರಿ ನಮಗೆ 2 ಗಂಡು ಮಕ್ಕಳು ಜನಿಸಿರುತ್ತವೆ. ಇವರಲ್ಲಿ ಮೊದಲನೆ ಗಂಡು ಮಗ ನನ್ನ ಹತ್ತಿರ ಇರುತ್ತಾನೆ. ಸದರಿಯವನಿಗೆ ಗದಗಿನಲ್ಲಿ ವಿದ್ಯಾಬ್ಯಾಸಕ್ಕಾಗಿ ಕಳುಹಿಸಿದ್ದು, ಅವನ ಶಾಲೆಯ ಎಲ್ಲಾ ಖರ್ಚು ನನ್ನ ಅಣ್ಣನಾದ ಈರಯ್ಯ ಹಿರೇಮಠ ಮತ್ತು ನಾನು ನೋಡಿಕೊಂಡು ಹೋಗುತ್ತಿದ್ದೇವೆ. ಅದರಂತೆ ನನ್ನ ಗಂಡ ನಮ್ಮ ಮದುವೆಯಾದ ಪ್ರಾರಂಭದಿಂದಲೂ ನನ್ನ ಜೋತೆ ಯಾವುದಾದರೊಂದು ನೇಪ್ ಮಾಡಿಕೊಂಡು ಜಗಳ ತಗೆಯುತ್ತಾನೆ. ಅದರಂತೆ ನನ್ನ ಗಂಡ ತನ್ನ ದುಶ್ಚಟಗಳಿಗಾಗಿ ನನ್ನ ಕೊರಳಲ್ಲಿ ತಾಳಿ ಮತ್ತು ಬಂಗಾರದ ಬೋರಮಳ, ಕಿವಿ ಓಲೆ ಇವುಗಳನ್ನು ತಗೆದುಕೊಂಡು ಹೋಗಿ ಮಾರಾಟ ಮಾಡಿರುತ್ತಾನೆ. ಅದರಂತೆ ನನ್ನ ತವರು ಮನೆಯಿಂದ ಹಣ ಮತ್ತು ಬಂಗಾರ ತರುವಂತೆ ನನಗೆ ಮಾನಸಿಕ ಹಾಗೂ ದೈಹಿಕ ಕಿರುಕುಳ ಕೊಟ್ಟಿದ್ದು ಇರುತ್ತದೆ. ಇಷ್ಟಾದರೂ ಕೂಡಾ ನಾನು ಇಂದಲ್ಲಾ ನಾಳೆ ಸುದಾರಿಸಬಹುದು ಎಂದು ತಾಳ್ಮೆಯಿಂದ ಬಂದಿರುತ್ತೇನೆ. ಆದರೂ ನನ್ನ ಗಂಡನು ಒಬ್ಬನೆ ಜಗಳ ಮಾಡಿದ್ದರೆ ನಾನು ಸಹಿಸಿಕೊಂಡಿದ್ದೆ. ಆದರೆ ಅವನ ಜೋತೆಗೆ ನನ್ನ ಅತ್ತೆಯಾದ ಗಂಗಾಬಾಯಿ ಗಂಡ ಹೋಳಯ್ಯಸ್ವಾಮಿ ಮತ್ತು ನನ್ನ ಭಾವನಾದ ವಿಜಯಕುಮಾರ ಮತ್ತು ಮೈದುನರಾದ ಶಿವಾನಂದ, ಸಂತೋಷ, ನಿರಂಜನ್, ಸುರೇಶ, ನಾಗೇಶ ಇವರುಗಳಲ್ಲದೆ ಇವರ ಹೆಂಡತಿಯರಾದ ಪೂಜಾ ಗಂಡ ವಿಯಜಕುಮಾರ, ರೇಣೂಕಾ ಗಂಡ ಶಿವಾನಂದ ಇವರು ಕೂಡಾ ನನ್ನ ಜೋತೆಗೆ ವಿನಾಕಾರಣ ಕಿರಿ ಕಿರಿ ಮಾಡುತ್ತಾರೆ. ಇವರೆಲ್ಲರ ಮಾತು ಕೇಳಿ ವಿನಾಕಾರಣ ನನಗೆ ಪ್ರತಿ ದಿನ ಹೊಡೆಯುವುದು ಬಡೆಯುವುದು ಮಾಡುತ್ತಾನೆ. ಆದ್ದರಿಂದ ಇವರೆಲ್ಲರ ಕಿರುಕುಳ ತಾಳಲಾರದೆ ನಾನು ನನ್ನ ತವರು ಮನೆಯಾದ ಕಬ್ಬೇರ ಕರಜಗಿ ಗ್ರಾಮದಲ್ಲಿ ನಮ್ಮ ಅಣ್ಣನ ಮನೆ ಹತ್ತಿರ ಬಾಡಿಗೆ ಮನೆಯಲ್ಲಿ ನನ್ನ ಮೋದಲನೆ ಮಗನ ಜೋತೆ 2 ವರ್ಷಗಳಿಂದ ವಾಸ ಮಾಡುತ್ತಿರುತ್ತೇನೆ. ಅದರಂತೆ ಈಗ ಸ್ವಲ್ಪ ದಿನಗಳ ಹಿಂದೆ ಅಂದರೆ ದಿನಾಂಕ 16-01-2020 ರಂದು 12-00 ಪಿ,ಎಮ್.ಸುಮಾರಿಗೆ ನನ್ನ ಗಂಡನು ಬಂದು ನನಗೆ ಅವಾಷ್ಯ ಶಬ್ದಗಳಿಂದ ಬೈಯುತ್ತಾ ಎ ರಂಡಿ ನನಗೆ (ದುಡ್ಡು) ಹಣ ಕೊಡು ಇಲ್ಲದಿದ್ದರೆ ನಿನಗೆ ಖಲಾಸ ಮಾಡುತ್ತೇನೆ ಎಂದು ಬಡಿಗೆಯಿಂದ ಹೊಡೆಯುತ್ತಿದ್ದಾಗ ನಾನು ಮನೆಯಿಂದ ಹೊರಗೆ ಬಂದು ಚಿರಾಡುತ್ತಿದ್ದಾಗ ನಮ್ಮ ಮನೆಯ ಎದುರಿನ ಜನರು ಬಂದು ಜಗಳ ಬಿಡಿಸಿರುತ್ತಾರೆ. ಇಲ್ಲದಿದ್ದರೆ ನನ್ನ ಪ್ರಾಣ ಹೋಗುವ ಸಂಭವ ಇತ್ತು. ಆದರೂ ಕೂಡಾ ನಾನು ಸುಮ್ಮನಿದ್ದೆ, ಆದರೆ ತಾನೆ ಈ ರೀತಿ ಜಗಳ ಮಾಡಿ ನಮ್ಮ ಮೇಲೆ ದೂರು (ಪಿರ್ಯಾದಿ) ಕೊಟ್ಟಿರುತ್ತಾನೆ. ಅಂತ ಗೊತ್ತಾಗಿ ಸದರಿ ಘಟನೆ ಬಗ್ಗೆ ನನ್ನ ಅಣ್ಣಂದಿರರೊಂದಿಗೆ ಚರ್ಚಿಸಿ ಇಂದು ತಡವಾಗಿ ಠಾಣೆಗೆ ಬಂದು ದೂರು ಅರ್ಜಿ ಸಲ್ಲಿಸುತ್ತಿದ್ದೆನೆ.ಕಾರಣ ಮಾನ್ಯರಾದ ತಾವುಗಳು ನನ್ನ ಸದರಿ ಈ ನನ್ನ ಅರ್ಜಿಯನ್ನು ಪರಿಗಣಿಸಿ ಸೂಕ್ತ ವಿಚಾರಣೆ ಮಾಡಿ, ನನ್ನ ಗಂಡ ಹಾಗೂ ಅವರ ಕುಟುಂಬದ ಸದಸ್ಯರ ಮೇಲೆ ಕಾನೂನಿನ ಸೂಕ್ತ ಕ್ರಮ ಜರೂಗಿಸಿ ನನಗೆ ನ್ಯಾಯ ದೊರಕಿಸಿ ಕೊಡಬೆಕೆಂದು ತಮ್ಮಲ್ಲಿ ಈ ಅರ್ಜಿಯ ಮೂಲಕ ಪಾರ್ಥಿಸಿ ಕೊಳ್ಳುತ್ತೇನೆ. ಅಂತ ಕೊಟ್ಟ ದೂರು ಅರ್ಜಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:19/2020 ಕಲಂ:498(ಎ),324,504,506 ಸಂ:149 ಐ.ಪಿ.ಸಿ ಮತ್ತು 3 & 4 ಡಿ.ಪಿ.ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ ಬಗ್ಗೆ ವರದಿ.                                                                                                           
ನೆಲೋಗಿ ಪೊಲೀಸ್ ಠಾಣೆ : ದಿನಾಂಕ: 06-02-2020 ರಂದು ಎಮ್.ಎಲ್.ಸಿ ವಿಚಾರಣೆ ಕುರಿತು ಕಳುಹಿಸಿ ಕೊಟ್ಟಿದ್ದ ಹೆಚ್.ಸಿ-235 ರವರು ಜಿಲ್ಲಾ ಸರಕಾರಿ ಆಸ್ಪತ್ರೆ ಕಲಬುರ್ಗಿಗೆ ಬೆಟ್ಟಿನೀಡಿ ಗಾಯಾಳು ಶ್ರೀಮತಿ ಸಿದ್ದಮ್ಮ ತಳವಾರ ಸಾ: ಕುರನಳ್ಳಿ ಇವರಿಗೆ ವಿಚಾರಣೆ ಮಾಡಿ ಅವರು ಹಾಜರ ಪಡಿಸಿದ ಗಣಕಿಕರಿಸಿದ ಅರ್ಜಿ ಪಡೆದುಕೊಂಡಿದ್ದರ ಸಾರಾಂಶವೇನೆಂದರೆ,ನಾವು ನಮ್ಮೂರ ಬಸ್ಸ ನಿಲ್ದಾಣದಿಂದ ನಮ್ಮ ಮನೆಗೆ ಹೋಗಬೇಕಾದರೆ ನಮ್ಮ ಊರಿನ ಶರಣಪ್ಪ ತಂದೆ ಬಸಪ್ಪ ಕಟ್ಟಿಮನಿ ಇವರ ಮನೆಯ ಮುಂದಿನರಸ್ತೆಯ ಮೇಲೆ ಹಾದು ಹೋಗಲು ರಸ್ತೆ ಇರುತ್ತದೆ. ಇ ಮುಂಚೆ ಬಸ್ಸ ನಿಲ್ದಾಣದಿಂದ ಬರುವ ಸಾರ್ವಜನಿಕ ರಸ್ತೆಯಲ್ಲಿ ಹಾದು ಹೋಗದಂತೆ ಶರಣಪ್ಪ ತಂದೆ ಬಸಪ್ಪ ಕಟ್ಟಿಮನಿ, ಮರಗಪ್ಪ ತಂದೆ ಬಸಪ್ಪ ಕಟ್ಟಿಮನಿ, ಬಸಪ್ಪ ತಂದೆ ಶರಣಪ್ಪ ಕಟ್ಟಿಮನಿ, ಶಾಂತಪ್ಪ ತಂದೆ ಬೀಮಶ್ಯಾ ನಾಗಾವಿ, ಮಲ್ಲಪ್ಪ ತಂದೆ ಶಾಂತಪ್ಪ ನಾಗಾವಿ ಹಾಗೂ ಇನ್ನೂ ಇತರರು ನಮ್ಮೊಂದಿಗೆ ಜಗಳ ಮಾಡುತ್ತಾ ಬಂದಿರುತ್ತಾರೆ.          ಅಲ್ಲದೆ ಇದೆ ದಾರಿಯ ವಿಷಯದಲ್ಲಿಈ ಮುಂಚೆ ನಮ್ಮೋಂದಿಗೆ ಜಗಳ ತಗೆದು ಕೇಸ ಮಾಡಿರುತ್ತಾರೆ. ಹೀಗಿದ್ದು ದಿನಾಂಕ: 03-02-2020 ರಂದು 7-30 ಪಿ.ಎಮ್ ಸುಮಾರಿಗೆ ನಮ್ಮ ಮೈದುನ ಶ್ರೀಮಂತ ಜಕಮಾದಾರ ಹಾಗೂ ಅಳಿಯ ಶ್ರೀಶೈಲ ಜಮಾದಾರ ಇಬ್ಬರೂ ಕೂಡಿಕೊಂಡು ಬಸ್ಸ ನಿಲ್ದಾಣದಿಂದ ನಮ್ಮ ಓಣಿಯ ಕಡೆಗೆ ನಡೆದುಕೊಮಡು ಬರುತ್ತಿರುವಾಗ ಶರಣಪ್ಪ ತಂದೆ ಬಸಪ್ಪ ಕಟ್ಟಿಮನಿ, ಮರಗಪ್ಪ ತಂದೆ ಬಸಪ್ಪ ಕಟ್ಟಿಮನಿ, ಬಸಪ್ಪ ತಂದೆ ಶರಣಪ್ಪ ಕಟ್ಟಿಮನಿ, ಶಾಂತಪ್ಪ ತಂದೆ ಬೀಮಶ್ಯಾ ನಾಗಾವಿ, ಮಲ್ಲಪ್ಪ ತಂದೆ ಶಾಂತಪ್ಪ ನಾಗಾವಿ ಹಾಗೂ ಇನ್ನೂ ಇತರರೂ ಕೂಡಿಕೋಂಡು ಅವಾಚ್ಯವಾಗಿ ಬೈದು ನಮ್ಮ ಮನೆಯ ಮುಂದೆ ಹಾಯ್ದು ಹೋಗ ಬೇಡ ಅಂದರು ಇಲ್ಲೆ ಯಾಕೆ ಹಾಯ್ದು ಹೋಗತ್ತಿರಿ ನಿಮ್ಮ ಸೊಕ್ಕು ಬಹಳ ಆಗಿದೆ, ನಿಮ್ಮನ್ನು ಇವತ್ತು ಕೊಲೆ ಮಾಡುತ್ತೇವೆ ಅಂತಾ ಬೈದಿದ್ದು, ಅಲ್ಲಿಯೇ ಇದ್ದ ನಾನು ಹಾಗು ಮಲ್ಕಪ್ಪ ಜಮಾದಾರ ಇಬ್ಬರೂ ಕೂಡಿಕೊಂಡು ನಮ್ಮ ಮೈದುನ ಶ್ರೀಮಂತ ಜಮಾದಾರ ಮತ್ತು ನಮ್ಮ ಅಳಿಯ ಶ್ರೀಮಂತ ಜಮಾದಾರ ರವರಿಗೆ ನಮ್ಮ ಮನೆಗೆ ಕರೆದುಕೋಂಡು ಬಂದೆವು. ನಂತರ 7-45 ಪಿ.ಎಮ್ ಸುಮಾರಿಗೆ ಶರಣಪ್ಪ ತಂದೆ ಬಸಪ್ಪ ಕಟ್ಟಿಮನಿ, ಮರಗಪ್ಪ ತಂದೆ ಬಸಪ್ಪ ಕಟ್ಟಿಮನಿ, ಬಸಪ್ಪ ತಂದೆ ಶರಣಪ್ಪ ಕಟ್ಟಿಮನಿ, ಶಾಂತಪ್ಪ ತಂದೆ ಭೀಮಶ್ಯಾ ನಾಗಾವಿ, ಮಲ್ಲಪ್ಪ ತಂದೆ ಶಾಂತಪ್ಪ ನಾಗಾವಿ ಹಾಗೂ ಇನ್ನೂ ಇತರರೂ ಗುಂಪುಕಟ್ಟಿಕೊಂಡು ಕೈಯಲ್ಲಿ ಕೊಡಲಿ, ಬಡಿಗೆ ಕಲ್ಲುಗಳೂ ಹಿಡಿದು ನಮ್ಮ ಮನೆಗೆ ಬಂದು ಏ ಸೂಳೆ ಮಗ ಶ್ರೀಮಂತ್ಯಾ ನಮ್ಮ ಮನೆಯ ಮುಂದಿನ ರಸ್ತೆಯಲ್ಲಿ ಹಾದು ಹೋಗಬೇಡ್ರಿ ಅಂದರು ನಮ್ಮ ಮನೆಯ ಮುಂದೆ ಹಾಯುತ್ತಿರಾ ಸೂಳೆ ಮಕ್ಕಳ್ಯಾ ನಿಮ್ಮನ್ನು ಕೊಲೆ ಮಾಡಲು ರಡಿಯಾಗಿ ಬಂದಿದ್ದೆವೆ ಅಂತಾ ಶರಣಪ್ಪ ಕಟ್ಟಿಮನಿ ಇತನು ಬೈದನು, ಆಗ ನಮ್ಮ ಮೈದುನ ಶ್ರೀಮಂತ ಇತನು ನಾವು ನಿಮ್ಮ ರಸ್ತೆಯಲ್ಲಿ ಹಾಯುತ್ತಿಲ್ಲಾ ಸರಕಾರಿ ಸಾರ್ವಜನಿಕ ರಸ್ತೆಯಲ್ಲಿ ಇದೆ ಅಲ್ಲಿ ನಮಗೆ ಹಾಯ್ದು ಹೋಗಲು ಬೇಡವೆಂದರೆ, ನಾವು ಎಲ್ಲಿಂದ ಹಾಯ್ದು ಹೋಗಬೇಕು ಅಂತಾ ಅಂದಾಗ ಮರಗಪ್ಪ ಕಟ್ಟಿಮನಿ ಇತನು ಏ ರಂಡಿ ಮಗನ ಮತ್ತ ಎದರ ಮಾತಾಡ್ತಿಯಾ ಸೂಳೆ ಮಗನಾ ನೀವು ಬದುಕಿದ್ದರೆ ತಾನೆ ರಸ್ತೆಯಲ್ಲಿ ಹಾಯುವದು, ನಿನ್ನನ್ನು ಸದ್ಯ ಕೊಂದು ಬಿಡುತ್ತೇವೆ, ಅಂತಾ ಅಂದವನೆ ತನ್ನ ಕೈಯಲ್ಲಿದ ಕೊಡಲಿಯಿಂದ ಜೋರಾಗಿ ನನ್ನ ಮೈದುನ ಶ್ರೀಮಂತನ ಕುತ್ತಿಗೆ ಮೇಲೆ ಬಿಸಿದನು, ಆಗ ನಮ್ಮ ಮೈದುನ ಹಿಂದಕ್ಕೆ ಸರಿದು ತಪ್ಪಿಸಿಕೊಂಡನು, ಆಗ ಶರಣಪ್ಪ ಕಟ್ಟಿಮನಿ  ಹಾಗೂ ಬಸಪ್ಪ ಕಟ್ಟಿಮನಿ ಇಬ್ಬರೂ ಕೂಡಿಕೊಂಡು ಬಡಿಗೆಯಿಂದ ಶ್ರೀಮಂತನ ಮೈಕೈಗೆ ಹೊಡೆ ಹತ್ತಿದರು, ಆಗ ಬಿಡಿಸಿಕೊಳ್ಳು ಹೋದ ನನಗೆ ಶಾಂತಪ್ಪ ನಾಗಾವಿ ಇತನು ಏ ರಂಡಿ ನಿನ್ನ ತಿಂಡಿ ಬಹಳ ಆದ ಇಲ್ಲೆ ನೆಲಕ್ಕೆ ಕೆಡವಿ ಹಡುತ್ತೇನೆ ರಂಡಿ ಅಂತಾ ಅಂದವನೆ ನನ್ನ ಎದೆಯ ಮೇಲೆ ಸಿರಿ ಹಿಡಿದು ಎಳೆದು ಜಂಪರಕ್ಕೆ ಕೈ ಹಾಕಿ ಜಗ್ಗ ಹತ್ತಿದನು, ಆಗ ನಾನು ನನ್ನ ಜಂಪರ ಹಿಡಿಯ ಬೇಡಪ್ಪ ಹರಿಯುತ್ತದೆ ಅಂದರು ಅಂದರು ಕೇಳದೆ ಬಚಲೆ ಮಾಡಿ ಹಡುತ್ತೇನೆ ಅಂತಾ ಅಂದವನೆ ಜಂಪರ ಹಿಡಿದು ಜಗ್ಗಿ ಜಂಪರ ಹರಿದು ಹಾಕಿದನು, ಆಗ ನನ್ನ ಮಗಳು ನಾಗಮ್ಮ ಬಿಡಿಸಲು ಬಂದರೆ, ಮಲ್ಲಪ್ಪ ಇತನು ನಮ್ಮ ಮಗಳು ನಾಗಮ್ಮ ಇವಳ ಕೈಗೆ ಬಡಿಗೆಯಿಂದ ಹೊಡೆದು ರಕ್ತಗಾಯ ಪಡಿಸಿದನು. ಆಗ ನನ್ನ ಮಗಳು ನಾಗಮ್ಮಳೀಗೆ ಬಿಡಿಸಿಕೊಳ್ಳಲು ಹೋದ ಶ್ರೀಮಂತನಿಗೆ ಶರಣಪ್ಪ ಕಟ್ಟಿಮನಿ ಈತನು ನೆಲಕ್ಕೆ ಕೆಡವಿ ಭುಜಕ್ಕೆ ಮತ್ತು ಮಗ್ಗಲಿಗೆ ಹಲ್ಲಿನಿಂದ ಕಡಿದು ರಕ್ತಗಾಯ ಗೊಳಿಸಿದನು, ಆಗ ನಮ್ಮ ಅಳಿಯ ಶ್ರೀಶೈಲ ಬೀಡಿಸಲು ಹೋದರೆ ಶರಣಪ್ಪ ಕಟ್ಟಿಮನಿ ಹಾಗೂ ಇತರರೂ ಕೂಡಿಕೊಂಡು ಮೈಕೈಗೆ ಕಟ್ಟಿನಿಂದ ಹೊಡೆಯ ಹತ್ತಿದರು, ಆಗ ಅಲ್ಲಿಯೇ ಇದ್ದ ಬೀಮರಾಯ ತಂದೆ ದೌಲಪ್ಪ ಮಾಂಗ, ಮತ್ತು ಮುತ್ತಪ್ಪ ಜಮಾದಾರ ಇಬ್ಬರೂ ಕೂಡಿಕೊಂಡು ನಮಗೆ ಹೊಡೆ ಬಡೆ ಮಾಡುತ್ತಿರುವುದನ್ನು ನೋಡಿ ಬಿಡಿಸಿಕೊಂಡರು, ಇಲ್ಲದಿದ್ದರೆ ನಮಗೆಲ್ಲರಿಗೂ ಇನ್ನೂ ಹೊಡೆ ಬಡೆ ಮಾಡಿ ಕೊಲೆ ಮಾಡಿ ಬಿಡುತಿದ್ದರು, ನಂತರ ಅವರುಗಳು ಹೋಗುವಾಗ ಸೂಳೆ ಮಕ್ಕಳಾ ನಿಮ್ಮನ್ನು ಕೊಲೆ ಮಾಡಿ ಬಿಡುತಿದ್ದೆವು ಸದ್ಯ ಉಳಿದಿರಿ ಇನ್ನೊಮ್ಮೆ ಕೊಲೆ ಮಾಡುವ ವರೆಗೆ ಬಿಡುವುದಿಲ್ಲಾ ಅಂತಾ ಬೈದು, ಮೊದಲು ನಿಮ್ಮ ಮೇಲೆ ಕೇಸ ಮಾಡಿದರು ಬುದ್ದಿ ಬಂದಿಲ್ಲಾ ನಿಮಗೆ ನಾವು ಮತ್ತೆ ಕೇಸ ಮಾಡುತ್ತೇವೆ ಅಂತಾ ಬೈಯುತ್ತಾ ಹೋದರು. ನಂತರ ನನ್ನ ಗಂಡನಾದ ಮೈಲಾರಿ ಇತನು ಮನೆಗೆ ಬಂದ ನಂತರ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಬಂದು ಸೇರಿಕೆ ಆಗಿ ಉಪಚಾರ ಪಡೆಯುತಿದ್ದು ನನ್ನ ಗಂಡ ಟೈಪ ಮಾಡಿಸಿಕೊಂಡು ಬಂದು ಅರ್ಜಿಯ ಮೇಲೆ ಸಹಿ ಮಾಡಿ ದೂರು ಸಲ್ಲಿಸುತಿದ್ದೆನೆ. ಕಾರಣ ಸರಕಾರಿ ಸಾರ್ವಜನಿಕ ರಸ್ತೆಯಲ್ಲಿ ನಮಗೆ ತಿರುಗಾಡದಂತೆ ಜಗಳ ತಗೆದು ಅವಾಚ್ಯವಾಗಿ ಬೈದು ಕೊಡಲಿ. ಬಡಿಗೆ ಮತ್ತು ಕಲ್ಲುಗಳಿಂದ ಹೊಡೆದು ರಕ್ತಗಾಯ ಮತ್ತು ಗುಪ್ತಗಾಯ ಪಡಿಸಿ ಕೊಲೆ ಮಾಡಲು ಪ್ರಯತ್ನಿಸಿ ನನಗೆ ಮಾನ ಭಂಗ ಮಾಡಲು ಬಂದವರ ಮೇಲೆ ಕಾನೂನು ಕ್ರಮ ಕೈಕೊಳ್ಳಬೆಕೆಂದು ಇತ್ಯಾದ ಅರ್ಜಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 21/2020 ಕಲಂ: 143,147,148,341,323,324,354, 307, 504,506,ಸಂಗಡ 149 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲ ಮಾಡಿಕೊಂಡು ಬಗ್ಗೆ ವರದಿ.                     

07 February 2020

KALABURAGI DISTRICT REPORTED CRIMES.


C¥sÀd®¥ÀÆgÀ oÁuÉ : ದಿನಾಂಕ: 06-02-2020 ರಂದು 2:00 ಪಿಎಮ್ ಕ್ಕೆ ಶ್ರೀಮತಿ ಬಸಮ್ಮಾ ಗಂಡ ಶೆಂಕ್ರೆಪ್ಪಾ ಬಡಿಗೇರ ಸಾ||ರಾಯನಪಾಳ್ಯ ತಾ|| ಹುಣಸಗಿ ಇವರು ಠಾಣೇಗೆ ಹಾಜರಾಗಿ ಲಿಖಿತ ಪಿರ್ಯಾಧಿ ಸಲ್ಲಿಸಿದ್ದು ಸದರಿ ಪಿರ್ಯಾಧಿಸಾರಾಂಶವೆನೇಂದರೆ ಬಸಮ್ಮ ಗಂಡ ಶಂಕ್ರೆಪ್ಪ ಬಡಿಗೇರ ವಯ|| 40 ವರ್ಷ ಜಾ|| ಪಂಚಾಳ ಉ|| ಕೂಲಿ ಸಾ|| ರಾಯನಪಾಳ್ಯ ತಾ|| ಹುಣಸಗಿ ಜಿ|| ಯಾದಗಿರಿ ಆದ ನಾನು ಅರ್ಜಿ ಕೊಡುವುದೆನೆಂದರೆ, ನನ್ನ ಗಂಡನು ಅಫಜಲಪೂರ ತಾಲೂಕಿನ ಘತ್ತರಗಾದಲ್ಲಿ ನಡೆದ ಬ್ರೀಜ ಕಮ್ ಬ್ಯಾರೇಜ ಕಾಮಗಾರಿಯಲ್ಲಿ ಮೇಸ್ತ್ರಿ ಕೆಲಸ ಮಾಡಿಕೊಂಡಿರುತ್ತಾರೆ. ನನ್ನ ಗಂಡನ ಜೋತೆಗೆ ನಮ್ಮೂರಿನ ಬಸವರಾಜ ತಂದೆ ಸೈಬಣ್ಣ ಡೆಣ್ಣಿಗೇರಿ ಇವರು ಸಹ ಕೆಲಸ ಮಾಡುತ್ತಾರೆ.  ಇಂದು ದಿನಾಂಕ 06-02-2020 ರಂದು ಬೆಳಿಗ್ಗೆ 08:00 ಗಂಟೆ ಸುಮಾರಿಗೆ ನನ್ನ ಗಂಡನ ಜೋತೆಗೆ ಕೆಲಸ ಮಾಡುವ ಬಸವರಾಜ ಈತನು ನನಗೆ ಪೋನ್ ಮಾಡಿ ನಿಮ್ಮ ಗಂಡನು ಭೀಮಾ ನದಿಗೆ ಇರುವ ಘತ್ತರಗಾ ಬಗಲೂರ ಬ್ರೀಜ್ ಮೇಲಿಂದ ಕೆಳಗೆ ಬಿದ್ದು ಮೃತಪಟ್ಟಿರುತ್ತಾನೆ ಎಂದು ತಿಳಿಸಿದ ಮೇರೆಗೆ ನಾನು ಮತ್ತು ನನ್ನ ಗಂಡನ ಅಣ್ಣನಾದ ಗುಂಡಪ್ಪ ಹಾಗೂ ನಮ್ಮೂರಿನ ದೇವಪ್ಪ ಗೋಪಾಳಿ, ವೆಂಕಟೇಶ ಮಾಲಿಪಾಟೀಲ ಇನ್ನು ಕೆಲವು ಜನರು ಕೂಡಿ ಘತ್ತರಗಾಕ್ಕೆ ಬಂದು ನೋಡಲಾಗಿ ನನ್ನ ಗಂಡನ ಶವವು ಬ್ರೀಜ್ ಕೆಳಗೆ 36 ನಂಬರ ಪಿಲ್ಲರ ಹತ್ತಿರ ಬೋರಲಾಗಿ ಬಿದ್ದಿತ್ತು. ನಂತರ ಅಲ್ಲಿದ್ದ ನನ್ನ ಗಂಡನ ಜೋತೆಗೆ ಕೆಲಸ ಮಾಡುವ ಸಂಜೀವಪ್ಪ ಕೂಡಗಿ, ಬಸವರಾಜ ಡೊಣ್ಣಿಗೇರಿ ಹಾಗೂ ಮ್ಯಾನೇಜರ ಆದ ವಿಠ್ಠಲ ದಶವಂತ ರವರಿಗೆ ವಿಚಾರಿಸಲು ಸದರಿಯವರು ತಿಳಿಸಿದ್ದೆನೆಂದರೆ, ನಿಮ್ಮ ಗಂಡನು ಮೈಯಲ್ಲಿ ಆರಾಮ ಇಲ್ಲದರಿಂದ ನಿನ್ನೆ ಕೆಲಸಕ್ಕೆ ಬಂದಿರುವುದಿಲ್ಲ. ನಿನ್ನೆ ಸಂಜೆ ಸರಾಯಿ ಕುಡಿದು ರಾತ್ರಿ 10:00 ಗಂಟೆ ವರೆಗೆ ಬ್ರೀಜ್ ಮೇಲೆ ತಿರುಗಾಡುತ್ತಿದ್ದನು. ಇಂದು ಬೆಳಿಗ್ಗೆ ನಾವು ಕೆಲಸ ಮಾಡಲು ಹೋದಾಗ ನಿಮ್ಮ ಗಂಡನು ಕೆಳಗೆ ಬಿದ್ದು ಮೃತ ಪಟ್ಟಿರುವುದನ್ನು ನೋಡಿರುತ್ತೇವೆ ಎಂದು ತಿಳಿಸಿದರು. ನನ್ನ ಗಂಡನು ಸರಾಯಿ ಕುಡಿದ ನಸೆಯಲ್ಲಿ ನಿನ್ನೆ ದಿನಾಂಕ 05-02-2020 ರಂದು ರಾತ್ರಿ  10:00 ಗಂಟೆಯಿಂದ ಇಂದು ದಿನಾಂಕ 06-02-2020 ರಂದು ಬೆಳಿಗ್ಗೆ 06:00 ಗಂಟೆಯ ಮದ್ಯದ ಅವದಿಯಲ್ಲಿ ಬ್ರೀಜ ಮೇಲೆ ತಿರುಗಾಡುತ್ತಿದ್ದಾಗ ಆಯ ತಪ್ಪಿ ಕೆಳಗೆ ಬಿದ್ದು ಮೃತಪಟ್ಟಿರುತ್ತಾನೆ. ನನ್ನ ಗಂಡನ ಸಾವಿನಲ್ಲಿ ನಮಗೆ ಯಾರ ಮೇಲೆ ಯಾವುದೆ ತರಹದ ಸಂಶಯ ಇರುವುದಿಲ್ಲ. ಕಾರಣ ನನ್ನ ಗಂಡನು ಮೃತಪಟ್ಟ ಬಗ್ಗೆ ಕಾನೂನು ಕ್ರಮ ಜರೂಗಿಸಬೇಕು ಎಂದು ಮಾನ್ಯ ರವರಲ್ಲಿ ವಿನಂತಿ ಇದೆ ಅಂತಾ ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣಾ ಯುಡಿಆರ್ ಕಲಂ 174 CRPC ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ಬಗ್ಗೆ ವರದಿ.