POLICE BHAVAN KALABURAGI

POLICE BHAVAN KALABURAGI

12 October 2019

KALABURAGI DISTRICT REPORTED CRIMES

ಕೊಲೆ ಪ್ರಕರಣ :
ಮಾಡಬೂಳ ಠಾಣೆ : ಶ್ರೀಮತಿ ಮಲ್ಲಮ್ಮ ಗಂಡ ಅಂತಪ್ಪ ವಡ್ಡೆಕಾರ ಸಾ|| ಕೊಡಂಬಲ್ ತಾ|| ಚಿಟಗುಪ್ಪಾ ಜಿ|| ಬೀದರ ರವರ  ಹಿರಿಯ ಮಗಳಾದ ಅಂಬಿಕಾ ಇವಳಿಗೆ ಈಗ ಸುಮಾರು 7 ವರ್ಷ 6 ತಿಂಗಳ ಹಿಂದೆ ಹೊಸ ಹೆಬ್ಬಾಳ ಗ್ರಾಮದ ಯಲ್ಲಪ್ಪ ತಂದೆ ಕಾಶಿರಾಮ ಮುದಗಲ್ ಇತನೊಂದಿಗೆ ಗುರು ಹಿರಿಯರ ಸಮಕ್ಷಮದಲ್ಲಿ ನಮ್ಮ ಊರಿನಲ್ಲಿ ಮದುವೆ ಮಾಡಿಕೊಟ್ಟಿರುತ್ತೆವೆ. ಮದುವೆಯಾದ ನಂತರ ನನ್ನ ಮಗಳು ತನ್ನ ಗಂಡ ಯಲ್ಲಪ್ಪ, ಅತ್ತೆ ಕಮಲಾಬಾಯಿ, ಭಾವ ನಾಗೇಶ ಹಾಗೂ ನಾದನಿ ಪದ್ಮಾ ಇವರೊಂದಿಗೆ ಒಟ್ಟಿಗೆ ಒಂದೇ ಮನೆಯಲ್ಲಿ ವಾಸವಾಗಿದ್ದು, ನನ್ನ ಮಗಳಿಗೆ 1) ಭಾಗ್ಯ ಲಕ್ಷ್ಮಿ 2) ಆರತಿ 3) ನಂದಿನಿ ಎಂಬ 3 ಜನ ಹೆಣ್ಣು ಮಕ್ಕಳಿರುತ್ತಾರೆ.ಮದುವೆಯಾದ 2 ವರ್ಷಗಳ ನಂತರ ಮಗಳಿಗೆ ಆಕೆಯ ತನ್ನ ಗಂಡ ಯಲ್ಲಪ್ಪ, ಅತ್ತೆ ಕಮಲಾಬಾಯಿ, ಭಾವ ನಾಗೇಶ ಹಾಗೂ ನಾದನಿ ಪದ್ಮಾ ರವರೂ ಕೂಡಿ ಹೊಲ ಮನೆ ಕೆಲಸ ಸಂಬಂಧ ತ್ರಾಸ ಕೊಟ್ಟು ಹೊಡೆ ಬಡೆ ಮಾಡುತ್ತಿದ್ದರು. ಈ ವಿಷಯ ತಿಳಿದು ನಾವು ಮತ್ತು ನಮ್ಮ ಸಮಾಜದ ದೊಡ್ಡವರು ಅವರ ಊರಿಗೆ ಹೋಗಿ ಬುದ್ದಿ ಹೇಳಿ ಬಂದಿರುತ್ತೆವೆ. ನನ್ನ ಮಗಳಿಗೆ ಅವಳ ಭಾವ ನಾಗೇಶ ಮತ್ತು ನಾದಿನಿ ಪದ್ಮಾ ಇವರೂ ಹೊಡೆದಿದ್ದರಿಂದ ಈ ರೀತಿ ನೀವು ಹೊಡೆಯುವದು ಸರಿಯಲ್ಲ ಎಂದು ತಿಳುವಳಿಕೆ ಹೇಳಿ ಬಂದಿರುತ್ತೆವೆ, ಇದೇ ರೀತಿ 3-4 ಭಾರಿ ಆಗಿರುತ್ತದೆ. ನನ್ನ ಅಳಿಯ ನನ್ನ ಮಗಳಿಗೆ ಒಂದಲ್ಲ ಒಂದು ದಿನ ಕೊಲೆ ಮಾಡುತ್ತೆನೆ ಅಂತ ಹೇಳಿರುತ್ತಾನೆ. ಹೀಗಿದ್ದು ನಿನ್ನೆ ದಿನಾಂಕ 10/10/2019 ರಂದು ಬೆಳಿಗ್ಗೆ 08-30 ಘಂಟೆ ಸುಮಾರಿಗೆ ನನ್ನ ಮಗ ಸಾಯಿನಾಥ ಇತನು ಅಂಬಿಕಾಳ ಜೊತೆ ಮಾತಾಡಿ ಚೆನ್ನಾಗಿದ್ದೆನೆಂದು ತಿಳಿಸಿದಳು, ನಾನು ಹೊಲದಿಂದ ಮನೆಗೆ ಸಾಯಂಕಾಲ 05-00 ಘಂಟೆಗೆ ಮನೆಗೆ ಬಂದಾಗ ನನ್ನ ಪೋನಿಗೆ ಹೆಬ್ಬಾಳ ಗ್ರಾಮದಿಂದ ಯಲ್ಲಪ್ಪನ ಸೋದರ ಮಗನಿದ್ದಿನಿ ನಿಮ್ಮ ಮಗಳು ಫಾಸಿ ಹಾಕಿಕೊಂಡು ತೀರಿಕೊಂಡಿದ್ದಾಳೆ ಬೇಗ ಬನ್ನಿ ಎಂದು ಹೇಳಿದಾಗ ಆಗ ನಾನು ಮಗಳು ಫಾಸಿ ಹಾಕಿಕೊಂಡು ಸಾಯೋದಿಲ್ಲ ಅವಳಿಗೆ ಎಷ್ಟೆ ಕಷ್ಟ ಕೊಟ್ಟರು ಸಾಯಲ್ಲ ಅಂತ ಹೇಳಿದ್ದಾಳೆ ಈಗ ಹೇಗೆ ಸತ್ತಳು ಅಂತ ಹೇಳಿ ಪೋನ ಕಟ್ ಮಾಡಿದೆನು. ಈ ವಿಷಯ ತಿಳಿದು ನಾನು ಮತ್ತು ಮಕ್ಕಳಾದ ಸಾಯಿನಾಥ ಮತ್ತು ನನ್ನ ತಾಯಿ ಭೋರಮ್ಮ, ನನ್ನ ಗಂಡನ ತಂಗಿ ಚಂದ್ರಮ್ಮ ಹಾಗೂ ನನ್ನ ಮೈದುನ ಸುರೇಶ, ದಶರಥ ಮತ್ತು ಸಂಬಂಧಿಕರೆಲ್ಲರೂ ಕೂಡಿ ಒಂದು ಕ್ರೂಸರ ಬಾಡಿಗೆ ಮಾಡಿಕೊಂಡು ನಿನ್ನೆ ದಿನಾಂಕ 10/10/2019 ರಂದು ರಾತ್ರಿ 10-30 ಘಂಟೆ ಸುಮಾರಿಗೆ ಹೆಬ್ಬಾಳ ಗ್ರಾಮದ ನನ್ನ ಮಗಳ ಮನೆಗೆ ಹೋಗಿ ನೋಡಲು ನನ್ನ ಮಗಳು ಅಂಬಿಕಾ ಇವಳಿಗೆ ಮನೆಯ ಪಡಸಾಲೆಯಲ್ಲಿ ಅಂಗಾತವಾಗಿ ಹಾಕಿದ್ದಾರೆ ಮೈ, ಕೈ ಮುಟ್ಟಿ ನೋಡಲು ಸತ್ತಿರುತ್ತಾಳೆ. ಮನೆಯಲ್ಲಿ ಲೈಟಿನ ಬೆಳಕಿನಲ್ಲಿ ನನ್ನ ಮಗಳಿಗೆ ಚೆಕ್ ಮಾಡಿ ನೋಡಿದಾಗ ಕುತ್ತಿಗೆ ಸುತ್ತಲು ಕಂದುಗಟ್ಟಿದ ಗಾಯವಾಗಿರುತ್ತದೆ. ಈ ಎಲ್ಲ ನೋಡಿದರೇ ನನ್ನ ಮಗಳಿಗೆ ಕೈಯಿಂದ ಹೊಡೆ ಬಡೆ ಮಾಡಿ ಉಸಿರುಗಟ್ಟಿಸಿ ಸಾಯಿಸಿ ನಂತರ ಉರುಲು ಹಾಕಿದ್ದಾರೆ ಅಂತ ಅನಿಸಿದೆ. ಸಾಯಿಸಿ ಉರುಲು ಹಾಕಿಕೊಂಡಿರುತ್ತಾಳೆ ಎಂದು ಸುಳ್ಳು ನಾಟಕ ಮಾಡಿರುತ್ತಾರೆ.  ಕಾರಣ ನನ್ನ ಮಗಳು ಅಂಬಿಕಾಳಿಗೆ ಅವಳ ಗಂಡ ಯಲ್ಲಪ್ಪ, ಅತ್ತೆ ಕಮಲಾಬಾಯಿ, ಭಾವ ನಾಗೇಶ ಹಾಗೂ ನಾದಿನಿ ಪದ್ಮಾವತಿ ರವರೆಲ್ಲರೂ ಕೂಡಿ ಈಗ ಕೆಲವು ದಿನಗಳಿಂದ ಹೊಲ ಮನೆ ಕೆಲಸ ಮಾಡುವ ಸಂಬಂಧ ಮತ್ತು 3 ಜನ ಹೆಣ್ಣು ಮಕ್ಕಳು ಹಡೆದಿದ್ದಾಳೆ ಎಂಬ ವಿಚಾರದಲ್ಲಿ ತ್ರಾಸ ಕೊಟ್ಟು ಹೊಡೆ ಬಡೆ ಮಾಡಿ ನಿನ್ನೆ ದಿನಾಂಕ 10/10/2019 ರಂದು ಸಾಯಂಕಾಲ 05-00 ಘಂಟೆ ಸುಮಾರಿಗೆ ತಮ್ಮ ಮನೆಯಲ್ಲಿ ಎಲ್ಲರೂ ಕೂಡಿ ಕೈಯಿಂದ ಹೊಡೆ ಬಡೆ ಮಾಡಿ ಉಸಿರುಗಟ್ಟಿಸಿ ಸಾಯಿಸಿ ಉರುಲು ಹಾಕಿ ಕೊಂಡಿರುತ್ತಾಳೆ ಎಂದು ಸುಳ್ಳು ನಾಟಕ ಮಾಡಿ ಉರುಲು ಹಾಕಿಕೊಂಡಿರುತ್ತಾಳೆ ಅಂತ ಸುಳ್ಳು ಹೇಳಿ ಸಾಯಿಸಿರುತ್ತಾರೆ ಅವರ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕು  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಡಬೂಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ವಿಶಾಲ @ ಅಮುಲ ತಂದೆ ಬಾಪುರಾವ ಮೋರೆ ಸಾ|| ಮಣುರ ರವರಿಗೆ ದಿನಾಂಕ:11/10/2019 ರಂದು ತಾವು ನನಗೆ ಪೊಲೀಸ್ ಠಾಣೆಗೆ ಬರಲು ಹೇಳಿದ ಮೇರಗೆ ನಾನು ಇಂದು ಅಫಜಲಪೂರ ಪೊಲೀಸ್ ಠಾಣೆಗೆ ಬಂದು ಹಾಜರಾಗಿದ್ದು ತಾವು ನನಗೆ ಸದರ ಬಜಾರ ಪೊಲೀಸ್ ಠಾಣೆ ಸೋಲಾಪೂರದಿಂದ ಬಂದ ಕಾಗದ ಪತ್ರಗಳನ್ನು ತೋರಿಸಿ ಅದರ ಬಗ್ಗೆ ವಿಚಾರಿಸಿದ್ದು ಸದರಿ ವಿಷದ ಬಗ್ಗೆ ನನ್ನ ಪಿರ್ಯಾದಿ ಏನಂದರೆ  ನನ್ನ ತಮ್ಮ ಅನೀಲ ಈತನು ಕೂಲಿ ಕೆಲಸಮಾಡಿಕೊಂಡಿದ್ದು ಪ್ರತಿ ದಿನದಂತೆ ನನ್ನ ತಮ್ಮ ದಿನಾಂಕ: 28/09/2019 ರಂದು ಬೆಳಿಗ್ಗೆ ನಮ್ಮ ಮನೆಯಿಂದ ಕೂಲಿ ಕೆಲಸಕ್ಕೆಂದು ಹೋಗಿರುತ್ತಾನೆ ನಂತರ ರಾತ್ರಿ 07-45 ಪಿ,ಎಮ್,ಸುಮಾರಿಗೆ ನಾನು ನಮ್ಮ ಮನೆಯಲ್ಲಿದ್ದಾಗ ನನ್ನ ತಮ್ಮನ ಗೆಳೆಯನಾದ ಶಿವರಾಜ ತಂದೆ ಪರಮೇಶ್ವ/ ಪೂಜಾರಿ ಈತನು ನನ್ನ ಮೊಬೈಲಗೆ ಕರೆಮಾಡಿ ತಿಳಿಸಿದ್ದೆನಂದರೆ ನಾನು ಮತ್ತು ನಿಮ್ಮ ತಮ್ಮ ಅನೀಲ ಇಬ್ಬರು ಕೂಡಿ ಹೊಸುರು ಊರಿನಲ್ಲಿ ಸೆಂಟ್ರಿಂಗ ಕೆಲಸ ಮುಗಿಸಿಕೊಂಡು ಮೊ,ಸೈಕಲ ನಂ:ಕೆ,-28 ಇಎಮ್-1045 ನೇದ್ದರ ಮೇಲೆ ಬರುತ್ತಿದ್ದಾಗ ಮೊಟಾರ ಸೈಕಲ ನಾನೆ ನಡೆಸುತ್ತಿದ್ದೆನು ಮಣ್ಣೂರ ಗ್ರಾಮ ಇನ್ನು 2 ಕಿ.ಮಿ ಇದ್ದಂತೆ 7-30 ಪಿ,ಎಮ್,ಸುಮಾರಿಗೆ ಮೋಟಾರ ಸೈಕಲ ಸ್ಲೀಪ್ ಆಗಿ ಜಾರಿ ಬಿದ್ದಿರುತ್ತೇವೆ ಅಂತ ತಿಳಿಸಿದ ಮೇರೆಗೆ ನಾನು ಮತ್ತು ನನ್ನ ಸಂಭಂದಿಕರು ಮತ್ತು ನನ್ನ ಕಾಕಾನ ಮಗನಾದ ಕಾಶಿನಾಥ @ ಅನಿಕೇತ ಮನೋಹರ ಮೋರೆ ಇವರಿಗೆ ವಿಷಯ ತಿಳಿಸಿ ಒಂದು ಖಾಸಗಿ ವಾಹನ ತಗೆದುಕೊಂಡು ಸದರಿ ಅಪಘಾತವಾದ ಸ್ಥಳಕ್ಕೆ ಹೋಗಿ ನೋಡಲಾಗಿ ನನ್ನ ತಮ್ಮನಿಗೆ ತಲೆಗೆ ,ಹಣೆಗೆ ಮತ್ತು ಕೈಕಾಲುಗಳಿಗೆ ಬಲವಾದ ಪೆಟ್ಟು ಹತ್ತಿ ರಕ್ತಸ್ರಾವವಾಗಿ ಗಂಭೀರಗಾಯಗೊಂಡು ರಸ್ತೆಯ ಬದಿ ಬಿದ್ದಿದ್ದನು ಶಿವರಾಜ ಪೂಜಾರಿ ಈತನಿಗೆ ಸಣ್ಣ-ಪುಟ್ಟಗಾಯಗಳಾಗಿರುವದು ಕಂಡು ಬಂತು ನಂತರ ನನ್ನ ತಮ್ಮನಿಗೆ ನಾನು ಮತ್ತು ನನ್ನ ಸಂಗಡ ಬಂದವರು ಕೂಡಿಕೊಂಡು ಅದೆ ಖಾಸಗಿ ವಾಹನದಲ್ಲಿ ಹಾಕಿಕೊಂಡು ಸೊಲಾಪೂರದ ಸಿಟಿ ಆಸ್ಪತ್ರೇಯಲ್ಲಿ ಸೇರಿಕೆ ಮಾಡಿದೆವು ನನ್ನ ತಮ್ಮ ಚಿಕಿತ್ಸೆ ಫಲಕಾರಿ ಆಗದೆ ಅಂದೆ ದಿನಾಂಕ:28/09/2019 ರಂದು 9-30 ಪಿ,ಎಮ್,ಸುಮಾರಿಗೆ ಸಿಟಿ ಆಸ್ಪತ್ರೇ ಸೊಲಾಪೂರದಲ್ಲಿ ಮೃತಪಟ್ಟಿರುತ್ತಾನೆ. ಕಾರಣ ನಮ್ಮ ಗ್ರಾಮದ ಶಿವರಾಜ ತಂದೆ ಪರಮೇಶ್ವುರ ಪೂಜಾರಿ ಈತನು ನನ್ನ ತಮ್ಮನ ಗೆಳೆಯನ ಮೊ,ಸೈಕಲ ನಂಬರ ಕೆ,-28 ಇಎಮ-1045 ನೇದ್ದನ್ನು ಅತಿ ವೇಗವಾಗಿ ಮತ್ತು ನಿರ್ಲಕ್ಷತನದಿಂದ ಚಲಾಯಿಸಿದ್ದರಿಂದ ಮೋಟಾರ ಸೈಕಲ ಸ್ಲೀಪ್ ಆಗಿ ಬಿದ್ದು ಸದರಿ ಅಫಘಾತದಿಂದ ನನ್ನ ತಮ್ಮ ಅನೀಲ ಈತನು ಮೃತಪಟ್ಟಿರುತ್ತಾನೆ ಆದ್ದರಿಂದ ಸದರಿ ಶಿವರಾಜ ತಂದೆ ಪರಮೇಶ್ವ್ರ ಪೂಜಾರಿ ಈತನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣಗಳು :
ವಾಡಿ ಠಾಣೆ : ಶ್ರೀ ಸೀತಾರಾಮ ತಂದೆ ಜಗನ್ನಾಥ ರಾಠೋಡ ಸಾ:ಸೇವಾಲಾಲನಗರ ತಾಂಡಾ ವಾಡಿ ರವರು ಮತ್ತು ನನ್ನ ತಮ್ಮ ರಾಮು ಪರ್ಶಿ ವ್ಯಾಪಾರ ಮಾಡಿಕೊಂಡು ಉಪ ಜೀವಿಸುತ್ತೆನೆ. ನಾನು ಹುಟ್ಟಿದಾಗಿನಿಂದ ಅಂಗವಿಕಲನಾಗಿದ್ದು ನಡೆಯಲು ಬರುವದಿಲ್ಲ. ಈಗ ಸುಮಾರು 15 ದಿವಸಗಳ ಹಿಂದೆ ಕಡಬುರ ಗ್ರಾಮದ ಸಂತೋಷ ತಂದೆ ದೀಪ್ಲಾ ಚವ್ಹಾಣ ಇವರ ಖಣಿಯಿಂದ ಪರ್ಶಿಯನ್ನು ತೆಗೆದುಕೊಂಡು ಹಲಕಟ್ಟಾ ಗ್ರಾಮದ ಭೀಮಾ ಎನ್ನುವರಿಗೆ 22 ಸಾವಿರ ರೂಪಾಯಿಗೆ ಮಾರಾಟ ಮಾಡಿದ್ದು ಅದರಲ್ಲಿ 21 ಸಾವಿರ ರೂಪಾಯಿ ನಗದು ಹಣ ಸಂತೋಷಗೆ ಕೊಟ್ಟಿದ್ದು ಇನ್ನು 01 ಸಾವಿರ ರೂಪಾಯಿ ಕೊಡುವದು ಬಾಕಿ ಇರುತ್ತದೆ. ಸಂತೋಷ ಇತನು ನಾನು ಕೊಡಬೇಕಾದ 01 ಸಾವಿರ ರೂಪಾಯಿ ಹಣವನ್ನು ಕೇಳಿ ಜಗಳ ಮಾಡುತ್ತಿದ್ದನು. ನಾನು 2-3 ದಿನಗಳಲ್ಲಿ ನಿನಗೆ ಕೊಡಬೇಕಾದ 01 ಸಾವಿರ ರೂಪಾಯಿ ಕೊಡುತ್ತೆನೆ ಅಂತಾ ಹೇಳಿದೆನು. ನಂತರ ದಿನಾಂಕ 10/10/2019 ರಂದು ಬೆಳಗ್ಗೆ 11-30 ಗಂಟೆ ಸುಮಾರು ನಾನು ಮತ್ತು ಮಿಥುನ ತಂದೆ ಪಾಂಡು ಚವ್ಹಾಣ ಕೂಡಿಕೊಂಡು ಮೊಟರ ಸೈಕಲ ಮೇಲೆ ಕಡಬುರ ಗ್ರಾಮದಲ್ಲಿರುವ ಸೋಮು ಇತನ ಖಣಿಗೆ ಹೊರಟಿದ್ದೆವು. ಆಗ ಬಳವಡಗಿ ಬ್ರೀಡ್ಜ್ ದಾಟುತ್ತಿದ್ದಂತೆ ಸಂತೋಷ ತಂದೆ ದೀಪ್ಲಾ ಚವ್ಹಾಣ ಇತನು ನನ್ನ  ಮೊಟರ ಸೈಕಲ ಮುಂದುಗಡೆ ಬಂದು ತಡೆದು ನಿಲ್ಲಿಸಿದನು. ಆಗ ನಾನು ಯಾಕೇ ತಡೆದು ನಿಲ್ಲಿಸಿದಿ ಅಂತಾ ಕೇಳಿದ್ದಕ್ಕೆ ಆತನು ‘’ಬೋಸಡಿ ಮಗನೇ ನನಗೆ ಕೊಡಬೇಕಾದ 01 ಸಾವಿರ ರೂಪಾಯಿ ಕೊಡು ಅಂತಾ ಹೇಳಿದರೆ ಇಂದು ನಾಳೆ ಅಂತಾ ಸುಳ್ಳು ಹೇಳುತ್ತಿದ್ದಿ ನಿನ್ನ ಸೊಕ್ಕು ಹೆಚ್ಚಾಗಿದೆ’’ ಅಂತಾ ಅಂಗವಿಕಲ ಇದ್ದ ನನಗೆ ಎತ್ತಿ ಕೆಳಗಡೆ ಬಿಸಾಕಿ ಕೈಯಿಂದ ಮೈ ಮೇಲೆ ಹೊಡೆ ಬಡೆ ಮಾಡಿ ಕಾಲಿನಿಂದ ಒದೆಯ ಹತ್ತಿದನು. ಆಗ ನನ್ನ ಸಂಗಡ ಇದ್ದ ಮಿಥುನ ತಂದೆ ಪಾಂಡು ಹಾಗೂ ಹೊಟೇಲದಲ್ಲಿ ಕುಳಿತ ಬಾದಲ ತಂದೆ ಹೀರಾಸಿಂಗ ರವರು ಕೂಡಿ ನನಗೆ ಹೊಡೆಯುವದನ್ನು ಬಿಡಿಸಿದರು. ಆಗ ಸಂತೋಷ ಇತನು ‘’ಬೋಸಡಿ ಮಗನೇ ಇವರು ಬಂದು ಜಗಳ ಬಿಡಿಸಿದ್ದರಿಂದ ನೀನು ಉಳಿದಿ ಇಲ್ಲದಿದ್ದರೆ ನಿನಗೆ ಖಲಾಸ ಮಾಡುತ್ತಿದ್ದೆ ಅಂತಾ’’ ಜೀವದ ಬೆದರಿಕೆ ಹಾಕುತ್ತ ಹೊರಟು ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಫಜಲಪೂರ ಠಾಣೆ : ಶ್ರೀ ರಾಜಕುಮಾರ@ ಕುಮಾರ ತಂದೆ ಸಿದ್ದಪ್ಪ ತಳವಾರ ಸಾ|| ಕೆರಕನಳ್ಳಿ ತಾ||ಅಫಜಲಪೂರ ರವರು ತಮ್ಮ ಗ್ರಾಮದಲ್ಲಿ ನಮ್ಮ ಮನೆಯ ಎದುರುಗಡೆ ನಮ್ಮ ಗ್ರಾಮದ ಮಲಕಣ್ಣ ತಂದೆ ಬುದ್ದಣ್ಣ ಹೂಗಾರ ಈವರ ಮನೆ ಇರುತ್ತದೆ ಸದರಿ ಮಲಕಣ್ಣನ ಮನೆಯ ಪಕ್ಕ 4 ಫೀಟ ಸರ್ಕಾರಿ ಶಾಲೆಯ ಜಾಗ ಇರುತ್ತದೆ ಸದರಿ ಜಾಗದಲ್ಲಿ (ಸಂಧಿ) ನಾವು ಹಾದು ಹೋಗುತ್ತಿರುತ್ತೇವೆ ನಾವು ಅಲ್ಲಿಂದ ಹಾದು ಹೋಗಬಾರದೆಂದು ಮಲಕಣ್ಣನು 3 ವರ್ಷಗಳಿಂದ ನಮ್ಮ ತಂದೆಯವರೊಂದಿಗೆ ಮೋದಲು ತಕರಾರು ಮಾಡುತ್ತಾ ಬಂದಿರುತ್ತಾನೆ.ಹಿಗಿದ್ದು ಈಗ 15 ದಿನಗಳ ಹಿಂದೆ ಮಲಕಣ್ಣ ಈತನು ಕಟ್ಟಿಗೆಯನ್ನು ಕಡಿದುತಂದು ತನ್ನ ಮನೆಯ ಮುಂದಿನ ಕಟ್ಟೆಯ ಮೇಲೆಹಾಕಿದ್ದು ಸದರಿಯವನು ಕಟ್ಟಿಗೆ ಹಾಕಿದರಿಂದ ಆತನ ಮನೆಯ ಪಕ್ಕದಲ್ಲಿದ್ದ ಸರಕಾರಿ ಶಾಲೆಗೆ ಸಂಭಂಧಿಸಿದ ಸಂಧಿಯಲ್ಲಿಂದ ನಮಗೆ ಹಾದು ಹೋಗದಂತೆ ಆಗಿರುತ್ತದೆ.ಆದ್ದರಿಂದ ದಿನಾಂಕ:07/10/2019 ರಂದು 6-00 ಪಿ,ಎಮ್,ಸುಮಾರಿಗೆ ಮಲಕಣ್ಣ ಮತ್ತು ಅವನ ಮಗನಾದ ಬುದ್ದಣ್ಣ ಹಾಗೂ ಮಲಕಣ್ಣನ ಹೆಂಡತಿಯಾದ ಶಶಿಕಲಾ ಮೂರು ಜನರು ತಮ್ಮ ಮನೆಯ ಮುಂದಿನ ಸಿ,ಸಿ ರಸ್ತೆ ಮೇಲೆ ನಿಂತಾಗ ನಾನು ಮತ್ತು ನನ್ನ ತಂದೆ ಇಬ್ಬರು ಕೂಡಿಕೊಂಡು ಅವರ ಹತ್ತೀರ ಹೋದೆವು ಆಗ ನಮ್ಮ ತಂದೆಯವರು ಸದರಿ ಮಲಕಣ್ಣನಿಗೆ ನೀವು ಹಾಕಿದ ಕಟ್ಟಿಗೆಯನ್ನು ತಗೆಯಿರಿ ಇದರಿಂದ ನಮಗೆ ಹಾದು ಹೋಗಲು ತೊಂದರೆ ಆಗುತ್ತಿದೆ ಅಂತ ಅಂದಾಗ ಬುದ್ದಣ್ಣನು ಬೋಸಡಿ ಮಗನೆ ನಮ್ಮ ಜಾಗದಲ್ಲಿ ನಾವು ಕಟ್ಟಿಗೆ ಹಾಕಿದ್ದಿವಿ ಅದನ್ನು ನಿವ್ಯಾರು ತಗಿ ಅನ್ಯಾಕ ಅಂತ ಅಂದು ನನ್ನ ತಂದೆಗೆ ಎದೆಯ ಮೇಲಿನ ಅಂಗಿ ಹಿಡಿದನು ನಾನು ಬಿಡಿಸಲು ಹೊದಾಗ ಬುದ್ದಣ್ಣನು ನನಗೆ ನೂಕಿದನು ಆಗ ಮಲಕಣ್ಣನು ಇವತ್ತು ನಿನ್ನ ಜೀವ ಸಹಿತ ಬಿಡುವದಿಲ್ಲ ಅಂತ ಅಂದು  ಅಲ್ಲೆ ಇದ್ದ ಒಂದು ಬಡಿಗೆಯಿಂದ ನನ್ನ ತಂದೆಗೆ ತೆಲೆಗೆ ಜೋರಾಗಿ ಹೊಡೆದನು ಆಗ ನನ್ನ ತಂದೆ ತಲೆಯ ಮೇಲೆ ಕೈ ಇಟ್ಟುಕೊಂಡಾಗ ಶಶಿಕಲಾ ಇವಳು ನನ್ನ ತಂದೆಯ ರಟ್ಟೆಗೆ ಕಚ್ಚಿರುತ್ತಾಳೆ ಆಗ ನಾನು ಮತ್ತು ಶಿವರಾಯ ತಂದೆ ಗುರಪ್ಪ ಚಿಂಚೊಳಿ ಮತ್ತು ಭಾಗಣ್ಣ ತಂದೆ ದತ್ತಪ್ಪ ಜಮಾದಾರ ಮೂರು ಜನ ಕೂಡಿಕೊಂಡು ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಅಫಜಲಪೂರಕ್ಕೆ ತಂದು ಸರಕಾರಿ ಆಸ್ಪತ್ರೇಯಲ್ಲಿ ಉಪಚಾರ ಕೊಡಿಸಿ ನಂತರ ನಮ್ಮ ತಂದಗೆ ಕಲಬುರ್ಗಿಗೆ ಹೆಚ್ಚಿನ ಉಪಚಾರ ಕುರಿತು ಕರೆದುಕೊಂಡು ಹೋಗಿ ಜಯದೇವ ಆಸ್ಪತ್ರೇಯಲ್ಲಿ ಸೇರಿಕೆ ಮಾಡಿರುತ್ತೇವೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

11 October 2019

KALABURAGI DISTRICT REPORTED CRIMES

ಅಪಘಾತ ಪ್ರಕರಣಗಳು
ಅಫಜಲಪೂರ ಠಾಣೆ : ಶ್ರೀ ಯಲ್ಲಾಲಿಂಗ ತಂದೆ ಶಿವರಾಯ ಅಂದೋಡಗಿ ಸಾ: ದೇಸಾಯಿ ಕಲ್ಲೂರ  ರವರು ದಿನಾಂಕ 09-10-2019 ರಂದು ಸಂಜೆ 7:45 ಗಂಟೆ ಸುಮಾರಿಗೆ ನಾನು ನಮ್ಮ ಮನೆಯಲ್ಲಿದ್ದಾಗ ನಮ್ಮೂರಿನ ಸಿದ್ದಯ್ಯ ತಂದೆ ಗುರುಲಿಂಗಯ್ಯ ಆಕಾಶಮಠ ಇವರು ನನಗೆ ಪೋನ್ ಮಾಡಿ, ನಿನ್ನ ತಮ್ಮನಾದ ಮಲ್ಲಪ್ಪನು ಅಫಜಲಪೂರದಿಂದ ಮೋಟರ ಸೈಕಲ ಮೇಲೆ ಊರಿಗೆ ಬರುತ್ತಿದ್ದಾಗ ತಾಂಡಾದ ಹತ್ತಿರ ಮಹ್ಮದಅಲಿ ಮಾಸ್ತಾರ ರವರ ಹೊಲದ ಹತ್ತಿರ ರೋಡಿನ ಮೇಲೆ ಎದರುಗಡೆಯಿಂದ ಮೋಟರ ಸೈಕಲ ನಂ ಕೆಎ-32 ಇಎಸ್-6416 ನೇದ್ದರ ಚಾಲಕ ಮೋಟರ ಸೈಕಲನ್ನು ಅತಿವೇಗವಾಗಿ ಮತ್ತು ನಿಸ್ಕಾಳಜಿಯಿಂದ ಚಲಾಯಿಸಿಕೊಂಡು ನಿಮ್ಮ ತಮ್ಮನ ಮೋಟರ ಸೈಕಲಕ್ಕೆ ಡಿಕ್ಕಿ ಪಡಿಸಿದ್ದಾನೆ, ಅವನಿಗೂ ಸಹ ಗಾಯಗಳು ಆಗಿದ್ದು, ಘಟನೆ ನಂತರ ಮೋಟರ ಸೈಕಲ ತಗೆದುಕೊಂಡು ಹೋಗಿರುತ್ತಾನೆ. ಈಗ ನಿನ್ನ ತಮ್ಮನನ್ನು ನಾನು ಮತ್ತು ನನ್ನ ಜೋತೆಗೆ ಇದ್ದ ಯಲ್ಲಪ್ಪ ಉಕ್ಕಲಿ, ಪವನ ಬಾಸಗಿ ಮೂರು ಜನರು ಕೂಡಿ ರೋಡಿಗೆ ಬರುತ್ತಿದ್ದ ಟಂ ಟಂ ದಲ್ಲಿ ಹಾಕಿಕೊಂಡು ಅಫಜಲಪೂರಕ್ಕೆ ಕರೆದುಕೊಂಡು ಹೋಗುತ್ತಿದ್ದೇವೆ, ನೀವು ಬನ್ನಿ ಎಂದು ತಿಳಿಸಿದ ಮೇರೆಗೆ, ನಾನು ಮತ್ತು ನನ್ನ ತಂದೆ ತಾಯಿ ಹಾಗೂ ನನ್ನ ಅಣ್ಣನಾದ ಸಿದ್ದಪ್ಪ, ಮತ್ತು ನನ್ನ ತಮ್ಮನ ಹೆಂಡತಿಯಾದ ರೇಣುಕಾ ಎಲ್ಲರೂ ಕೂಡಿ ಅಫಜಲಪೂರಕ್ಕೆ ಬಂದು, ನನ್ನ ತಮ್ಮನನ್ನು ಟಕ್ಕಳಕಿ ಆಸ್ಪತ್ರೆಯಿಂದ ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಕಲಬುರಗಿಯ ಗಂಗಾ ಸನರೈಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿರುತ್ತೇವೆ. ದಿನಾಂಕ 10-10-2019 ರಂದು ಬೆಳಿಗ್ಗೆ 11:00 ಗಂಟೆಗೆ ನನ್ನ ತಮ್ಮನಿಗೆ ಯಾವುದೆ ಬದಲಾವಣೆ ಆಗದ ಕಾರಣ ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಬೆಕೆಂದು ಆಸ್ಪತ್ರೆಯಿಂದ ಡಿಸಚಾರ್ಜ್ ಮಾಡಿಕೊಂಡು ಅಂಬ್ಯೂಲೆನ್ಸದಲ್ಲಿ ಹಾಕಿಕೊಂಡು ಹೋಗುತ್ತಿದ್ದಾಗ, 11:30 ಎ ಎಮ್ ಕ್ಕೆ ಮೃತ ಪಟ್ಟಿರುತ್ತಾನೆ. ದಿನಾಂಕ 09-10-2019 ರಂದು 7:30 ಪಿ ಎಮ್ ಕ್ಕೆ ನನ್ನ ತಮ್ಮನಾದ ಮಲ್ಲಪ್ಪ ತಂದೆ ಶಿವರಾಯ ಅಂದೋಡಗಿ ಈತನು ಮೋಟರ ಸೈಕಲ ನಂ ಕೆಎ-32 ಇಜಿ-9171 ನೇದ್ದರ ಮೇಲೆ ಅಫಜಲಪೂರದಿಂದ ದೇಸಾಯಿ ಕಲ್ಲೂರ ಗ್ರಾಮಕ್ಕೆ ಹೋಗುತ್ತಿದ್ದಾಗ, ದೇಸಾಯಿ ಕಲ್ಲೂರ ತಾಂಡಾದ ಹತ್ತಿರ ಇರುವ ಮಹ್ಮದ ಅಲಿ ಮಾಸ್ತಾರ ರವರ ಹೊಲದ ಹತ್ತಿರ ರೋಡಿನ ಮೇಲೆ ಎದುರುಗಡೆಯಿಂದ ಮೋಟರ ಸೈಕಲ ನಂ ಕೆಎ-32 ಇಎಸ್-6416 ನೇದ್ದರ ಚಾಲಕ ಮೋಟರ ಸೈಕಲನ್ನು ಅತಿವೇಗವಾಗಿ ಮತ್ತು ನಿಸ್ಕಾಳಜಿತನದಿಂದ ಚಾಲಾಯಿಸಿಕೊಂಡು ಬಂದು ಡಿಕ್ಕಿ ಪಡಿಸಿದ್ದರಿಂದ ನನ್ನ ತಮ್ಮನ ತಲೆಗೆ ಭಾರಿ ರಕ್ತಗಾಯ ಮತ್ತು ಗುಪ್ತಗಾಯವಾಗಿ ಇಂದು ಮೃತ ಪಟ್ಟಿರುತ್ತಾನೆ. ಕಾರಣ ನನ್ನ ತಮ್ಮನ ಮೋಟರ ಸೈಕಲಗೆ ಡಿಕ್ಕಿ ಪಡಿಸಿದ ಮೋಟರ ಸೈಕಲ ನಂ ಕೆಎ-32 ಇಎಸ್-6416 ನೇದ್ದರ ಚಾಲಕನ ಮೇಲೆ ಕಾನೂನು ಕ್ರಮ ಜರೂಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  :
ಜೇವರಗಿ ಠಾಣೆ : ಶ್ರೀ ಪರಮೇಶ್ವರ ತಂದೆ ನಿವೃತ್ತಿ ರೋಡೆ ಸಾ; ಬೊರಸುರಿ ತಾ; ನಿಲಂಗಾ ಜಿ; ಲಾತೂರ ಮಹಾರಾಷ್ಟ್ರ ನಿವಾಸಿ ಇದ್ದು ನಾನು ಜೈ ಭವಾನಿ ಟ್ರಾನ್ಸ ಪೋರ್ಟ ಮಾಲಕ ಶ್ರೀ ಹರಿ ಭೋಸ್ಲೆ ಇವರ ಲಾರಿ ಟ್ರಕ್ ನಂ; MH-12-QW-9587 ನೇದ್ದರ ಮೇಲೆ ೦7 ತಿಂಗಳಿಂದ ಚಾಲಕ ಕೆಲಸ ಮಾಡಿಕೊಂಡಿರುತ್ತೇನೆ. ದಿ; 07.10.19 ರಂದು ಸಾಯಂಕಾಲ ನಾನು ಲಾರಿ ನಂ; MH-12-QW-9587 ನೇದ್ದರಲ್ಲಿ ಜಹಿರಾಬಾದ ಕಂಪನಿಯಿಂದ ಹೊಸದಾದ ಟ್ರಾಕ್ಟ್ರರಗಳನ್ನು ( ಇಂಜಿನ್ ) ಲಾರಿಯಲ್ಲಿ ತುಂಬಿಕೊಂಡು ದಾರವಾಡದಲ್ಲಿ ಇರುವ ಸ್ಟಾಕಯಾರ್ಡ್ ಡೀಪುಕ್ಕೆ ಹೋರಟಿದ್ದೇವು. ದಿನಾಂಕ; 09.10.19 ರಂದು ರಾತ್ರಿ ಕಲಬುರಗಿ ಜೇವರ್ಗಿ ಮಾರ್ಗವಾಗಿ ದಾರವಾಡಕ್ಕೆ ಹೋಗುತ್ತಿದ್ದಾಗ ಜೇವರ್ಗಿ ಸಮೀಪದ ಲಲಿತ ಗಾರ್ಡನ್ ಹತ್ತಿರ ಬಂದಾಗ ರಾತ್ರಿ 7-20 ಪಿ.ಎಮ್ ವೇಳೆಗೆ ಯಾವುದೋ ಒಂದು ಟಿಪ್ಪರ್ ವಾಹನ ಚಾಲಕನು ಜೇವರ್ಗಿ ಕಡೆಯಿಂದ ವಾಹನವನ್ನು ಅತಿ ವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದವನೆ ನಮ್ಮ ಲಾರಿಯ ಬಲಗಡೆ ಸೈಡಿಗೆ ಡಿಕ್ಕಿ ಪಡಿಸಿ ವಾಹನ ಹಾಗೆ ಚಲಾಯಿಸಿಕೊಂಡು ಕಲಬುರಗಿ ಕಡೆಗೆ ಹೋದನು. ನಾನು ನಮ್ಮ ಲಾರಿ ನಿಲ್ಲಿಸಿ ನೋಡುವಷ್ಟರಲ್ಲಿ ವಾಹನದೊಂದಿಗೆ ಓಡಿ ಹೋಗಿದ್ದನು. ಕತ್ತಲಿದ್ದರಿಂದ ಅಪಘಾತ ಮಾಡಿದ ವಾಹನ ನಂಬರ್ ಮತ್ತು ಚಾಲಕನಿಗೆ ನೋಡಿರುವದಿಲ್ಲ. ನಂತರ ನಮ್ಮ ವಾಹನ ಸೈಡಿಗೆ ನಿಲ್ಲಿಸಿ ನೋಡಲಾಗಿ ಲಾರಿಯಲ್ಲಿ ಇದ್ದ 01) ಟ್ರಾಕ್ಟರ್ ಪಾರ್ಟ ನಂ; TR415NSTPCMPSLT3AS, ಟ್ರಾಕ್ಟರ್ ಇಂಜಿನ್ ನಂ; ZKF4YBA4651, ಟ್ರಾಕ್ಟರ್ ಸೀರಿಯಲ್ ನಂ; MBNADABGDKZF01477, ನೇದ್ದಕ್ಕೆ ಹಿಂದಿನ 02 ಟಾಯರ್‌ಗಳು, ಹಿಂದಿನ ಬಿಡಿಭಾಗಗಳು, ಜಖಂಗೊಂಡಿದ್ದು ಇರುತ್ತದೆ.02) ಟ್ರಾಕ್ಟರ್ ಪಾರ್ಟ ನಂ; TR415NSTPCMPSLT3AS, ಟ್ರಾಕ್ಟರ್ ಇಂಜಿನ್ ನಂ; ZKF4YBA4665, ಟ್ರಾಕ್ಟರ್ ಸೀರಿಯಲ್ ನಂ; MBNADABGDKZF01478, ನೇದ್ದಕ್ಕೆ ಮುಂದಿನ ಭಾಗ ಜಖಂಗೊಂಡಿದ್ದು ಇರುತ್ತದೆ. 3) ಟ್ರಾಕ್ಟರ್ ಪಾರ್ಟ ನಂ; TR415NSTPCMPSLT3AS, ಟ್ರಾಕ್ಟರ್ ಇಂಜಿನ್ ನಂ; ZKF4YBA4677, ಟ್ರಾಕ್ಟರ್ ಸೀರಿಯಲ್ ನಂ; MBNADABGDKZF01479, ನೇದ್ದಕ್ಕೆ ಮುಂದಿನ ಭಾಗ ಪೂರ್ತಿ ಜಖಂಗೊಂಡಿದ್ದು ಇರುತ್ತದೆ.  ಕಾರಣ ಯಾವುದೋ ಟಿಪ್ಪರ್ ವಾಹನದ ಚಾಲಕನು ತನ್ನ ವಶದಲ್ಲಿ ಇದ್ದ ವಾಹನವನ್ನು ಅತಿ ವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಎದುರಿನಿಂದ ಡಿಕ್ಕಿ ಪಡಿಸಿ ಓಡಿ ಹೋಗಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಸ್ವಾಭಾವಿಕ ಸಾವು ಪ್ರಕರಣಗಳು :
ವಾಡಿ ಠಾಣೆ : ಶ್ರೀಮತಿ ಗಂಗಮ್ಮ ಗಂಡ ಸಿದ್ದಣ್ಣಾ ನರಬೋಳಿ ಸಾ:ಕಡಬುರ ರವರು. ಸ್ವಂತ ಕುರಿಗಳಿದ್ದು ಅವುಗಳನ್ನು ನನ್ನ ಗಂಡ ಮೇಯಿಸಿಕೊಂಡು ಬರುತ್ತಾನೆ. ಹೀಗಿದ್ದು ಇಂದು ದಿನಾಂಕ 10/10/2019 ರಂದು ಬೆಳಗ್ಗೆ 10-00 ಗಂಟೆ ಸುಮಾರು ನನ್ನ ಮಗ ರಮೇಶ ಮತ್ತು ನಮ್ಮ ಸಂಬಂಧಿ ನಾಗಪ್ಪ ನರಬೋಳಿ ರವರು ಕೂಡಿಕೊಂಡು ಕುರಿಗಳನ್ನು ಮೇಯಿಸುತ್ತ ನಮ್ಮೂರ ಸಿಮೇಯ ಮಾಳಪ್ಪ ರವರ ಹೊಲದ ಹತ್ತಿರ ಕುರಿಗಳನ್ನು ಮೇಯಿಸುವ ಕಾಲಕ್ಕೆ 01-00 ಪಿ.ಎಮ್ ಸುಮಾರಿಗೆ ಮಳೆ ಬರುತ್ತಿದ್ದರಿಂದ ಗೀಡದ ಆಸರೆಗಾಗಿ ನನ್ನ ಮಗ ರಮೇಶ ಮತ್ತು ನಾಗಪ್ಪ ರವರು ನಿಂತುಕೊಂಡಾಗ ನನ್ನ ಮಗನಿಗೆ ಒಮ್ಮೇಲೆ ಸಿಡಿಲು ಬಡಿದ ಪರಿಣಾಮ ಆತನ ಬಲಭುಜ ಹಾಗೂ ಎದೆಗೆ ಸುಟ್ಟಗಾಯವಾಗಿದ್ದು ಅಲ್ಲದೇ ನಾಗಪ್ಪ ಇತನಿಗೂ ಸಹ ಎಡಗೈ ಸಿಡಿಲು ಬಡಿದು ಗಾಯವಾಗಿದ್ದು ಈ ಬಗ್ಗೆ ನಾಗಪ್ಪ ಇತನು ಮನೆಗೆ ಬಂದು ವಿಷಯ ತಿಳಿಸಿದ್ದರಿಂದ ನಾವು ಘಟನಾ ಸ್ಥಳಕ್ಕೆ ಹೋಗಿ ನೋಡಿ ನಂತರ ನನ್ನ ಮಗನಿಗೆ ಉಪಚಾರ ಕುರಿತು 02-00 ಪಿ.ಎಮ್ ಸುಮಾರಿಗೆ ವಾಡಿ ಸರ್ಕಾರಿ ಆಸ್ಪತ್ರೆಗೆ ತಂದಾಗ ವೈದ್ಯರು ಪರೀಕ್ಷೆ ಮಾಡಿ ಮರಣ ಹೊಂದಿರುತ್ತಾನೆ ಅಂತಾ ತಿಳಿಸಿದರು. ನನ್ನ ಮಗನು ಕುರಿ ಕಾಯಲು ಹೋದಾಗ ಮಳೆ ಬರುವ ಕಾಲಕ್ಕೆ ಆಸರೆಗಾಗಿ ಗೀಡದ ಕೆಳಗಡೆ ನಿಂತುಕೊಂಡು ಅಕಸ್ಮಿಕವಾಗಿ ಸಿಡಿಲು ಬಡಿದಿದ್ದರಿಂದ ಉಪಚಾರ ಕುರಿತು ಆಸ್ಪತ್ರೆಗೆ ತರುವಾಗ ಮರಣ ಹೊಂದಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೇವರಗಿ ಠಾಣೆ : ದಿನಾಂಕ 05.10.19 ರಂದು ಖಾಸೀಂಸಾಬ್ ತಂದೆ ಖಾಜಾಸಾಬ್ ದೂದವಾಲೆ ಸಾ|| ಕೋಳಕೂರ ರವರು ಹೋಲದಲ್ಲಿ ಬೆಳೆದಿದ್ದ ಹೊಲದಲ್ಲಿನ ತೊಗರಿ ಬೇಳೆಗಳಿಗೆ ಕ್ರಿಮಿನಾಶಕ ಔಷಧಿಯನ್ನು ಹೊಡೆಯುವಾಗ ಗಾಳಿಯಿಂದ ಕ್ರಿಮಿನಾಷಕ ಔಷಧಿಯು ಮೈಮೆಲ ಬಿದ್ದು ಮೂಗಿನಿಂದ ದೇಹದ ಒಳಗಡೆ ಹೋಗಿದ್ದರಿಂದ ದಿನಾಂಕ 06.10.19 ರಂದು ಖಾಸೀಂಸಾಬ ಈತನು ಅಸ್ವಸ್ಥನಾದಾಗ ಅವರ ಮನೆಯವರು ಚಿಕಿತ್ಸೆಗಾಗಿ ಸರಕಾರಿ ಆಸ್ಪತ್ರೆ ಜೇವರಗಿಗೆ ತಂದು ಸೇರಿಕೆ ಮಾಡಿದ್ದು ಹೆಚ್ಚಿನ ಉಪಚಾರ ಕುರಿತು ಸರಕಾರಿ ಆಸ್ಪತ್ರೆ ಕಲಬುರಗಿಗೆ ಸೇರಿಕೆ ಮಾಡಿದ್ದು, ಗುಣಮುಖವಾಗದೆ ನಿನ್ನೆ ದಿನಾಂಕ 09.10.19 ರಂದು ರಾತ್ರಿ 09:45 ಕ್ಕೆ ಮೃತಪಟ್ಟಿರುತ್ತಾರೆ ಅಂತಾ ಶ್ರೀಮತಿ ಫಾತಿಮಾ ಬೇಗಂ ಗಂಡ ಖಾಸೀಂಸಾಬ್ ಮಂದೆವಾಲ ಸಾ|| ಕೋಳಕೂರ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣಗಳು :
ಜೇವರಗಿ ಠಾಣೆ : ಶ್ರೀ ಶ್ರೀನಿವಾಸ ತಂದೆ ರಾಜಾಚಾರ್ಯ ಜೋಶಿ ಸಾ; ಜೇರಟಗಿ ಗ್ರಾಮ ತಾ; ಜೇವರ್ಗಿ ಜಿ; ಕಲಬುರಗಿ ರವರು ದಿನಾಂಕ; 08.10.19 ರಂದು ನಾನು ಕಲಬುರಗಿಯಲ್ಲಿ ಇರುವ ನಮ್ಮ ಅಳಿಯನಾದ ಸದಾನಂದ ಪಾಟಿಲ್ ಇವರಿಗೆ ಭೇಟಿಯಾಗಿ ಮಾತನಾಡಿಸಿಕೊಂಡು ಬರಲು ಹೋಗಿದ್ದೇನು. ಅವರಿಗೆ ಭೇಟಿಯಾಗಿ ಅಂದು ಅಲ್ಲಿಯೇ ಇದ್ದು ಮರು ದಿನ ದಿನಾಂಕ; 09.10.19 ರಂದು ಬೆಳಿಗ್ಗೆ ಒಂದು ಕ್ರೂಜರ್ ಜೀಪದಲ್ಲಿ ಕಳಿತು ಜೇವರಗಿಗೆ ಹೊರಟಿರುತ್ತೇನೆ. ದಿನಾಂಕ; 09.10.19 ರಂದು ಮದ್ಯಾಹ್ನ 1-00 ಘಂಟೆಯ ಸುಮಾರಿಗೆ ಜೇವರ್ಗಿಗೆ ಬಂದು ಅಲ್ಲಿಂದ ಬಸ್ ಹಿಡಿದು ಜೇರಟಗಿಗೆ ಹೋಗಲು ಬಸ್ ನಿಲ್ದಾಣದಲ್ಲಿ ಬಂದು ವಿಜಯಪೂರ ಕಡೆಗೆ ಹೋಗುವ ಬಸ್ ನಿಲ್ಲುವ ಸ್ಥಳದಲ್ಲಿ ನಿಂತಿದ್ದಾಗ ಮದ್ಯಾಹ್ನ 1-15 ಘಂಟೆಯ ಸುಮಾರಿಗೆ ಒಬ್ಬ ವ್ಯಕ್ತಿ ನ್ನನ ಹತ್ತಿರ ಬಂದು ನಾನು ಪೊಲೀಸ ಇದ್ದೇನೆ ಅಲ್ಲಿ ಪಿ.ಎಸ್‌.ಐ ಸಾಹೇಬ ಬುಲಾರಹೆ ಇದರ್ ಆವೋ ಎಂದು ನನಗೆ ಕರೆದುಕೊಂಡು ಬಸ್ ನಿಲ್ಲುವ ಸ್ಥಳದಲ್ಲಿ ಸ್ವಲ್ಪ ದೂರ ಕರೆದುಕೊಂಡು ಹೋದನು. ಅಲ್ಲಿ ನಿಂತಿದ್ದ ಒಬ್ಬ ವ್ಯಕ್ತಿಯು ನನಗೆ, ಇದರ್ ಮರ್ಡರ್, ಚೋರಿ  ಹೋ ರಹಾ ಹೈ, ತುಮ್ ಅಂಗುಟಿ ಕಾ ಗೋಲ್ಡ್ ರಿಂಗ್ ನಿಕಾಲ್ ಕೆ ಬ್ಯಾಗ್ ಮೇ ರಖೋ ಎಂದು ನನ್ನ ಬ್ಯಾಗಿನಲ್ಲಿ ಹಾಕಿಸಿದರು. ಆಮೇಲೆ ನನಗೆ ಅಲ್ಲಿಂದ ಕರೆದುಕೊಂಡು ಹೋದವನು ನನ್ನ ಬ್ಯಾಗ್ ಚೆಕ್ ಮಾಡಿ ಬ್ಯಾಗದಲ್ಲಿ ಕೈಯಾಡಿಸಿ ಕಲಿಬಿಲಿ ಮಾಡಿ ಬ್ಯಾಗದಲ್ಲಿದ್ದ ಟಾವೆಲ್ ತೆಗೆದು ನನ್ನ ಮುಂದೆ ಜಾಡಿಸಿದನು. ನಂತರ ಅವರು ನನಗೆ ಆರಾಮವಾಗಿ ಹೋಗಿರಿ ಎಂದು ಹೇಳಿ ನನಗೆ ಸಿಂದಗಿ ಕಡೆಗೆ ಹೋಗುವ ಒಂದು ಬಸ್‌‌ದಲ್ಲಿ ಕೂಡಿಸಿ ಅವರು ಮೋಟಾರ ಸೈಕಲ್ ಮೇಲೆ ಕುಳಿತು ಹೋದರು. ಅವರು ನೋಡಲು 30-32 ವರ್ಷ ವಯಸ್ಸಿನವರಿದ್ದು, 5.5 ದಿಂದ 5.7 ಫೀಟ್ ಎತ್ತರ ಇದ್ದು, ಒಬ್ಬನು ಬದಾಮಿ ಕಲರ್ (ಮುಲ್ತಾನಿ) ಸಫಾರಿ ಹಾಕಿದ್ದು ನೋಡಲು ತೆಳ್ಳನೆ ಮೈಕಟ್ಟು ಹೊಂದಿದ್ದನು. ಇನ್ನೊಬ್ಬನು ಖಾಕಿ ಪ್ಯಾಂಟ್ ಮತ್ತು ಬಿಳಿ ಬಣ್ಣದ ಶರ್ಟ ಧರಿಸಿದ್ದನು. ಇವನು ಗೋದಿ ಮೈಬಣ್ಣ ಮತ್ತು ಪ್ರೆಂಚ್ ದಾಡಿ ಹೊಂದಿದ್ದನು. ಅವರ ಮೋಟಾರ ಸೈಕಲ್ ಹಿಂದೆ ನಂಬರ್ ಪ್ಲೇಟ್ ಮೇಲೆ ಎಲ್ ಐ ಸಿ ಎಂದು ಬರೆದಿದ್ದು ಸದರಿ ಮೋಟಾರ ಸೈಕಲಿನ ಮೇಲೆ ಇರುವ ಮೊದಲಿನ 64 ನಂಬರ ಮಾತ್ರ ನನಗೆ ನೆನಪಿರುತ್ತದೆ ಮುಂದಿನ ನಂಬರ್ ಗೊತ್ತಾಗಿರುವದಿಲ್ಲ. ನಂತರ ಬಸ್ ಮೂಲಕ ಜೇರಟಗಿಗೆ ಹೋಗಿ ಬಸ್ ನಿಲ್ದಾಣದಲ್ಲಿ ಇಳಿದು ನಾನು ನನ್ನ ಬ್ಯಾಗ್ ನೋಡಿಕೊಂಡಿದ್ದು ನಾನು ಜೇವರ್ಗಿ ಬಸ್ ನಿಲ್ದಾಣದಲ್ಲಿ  ನನ್ನ ಬೆರಳಿನಿಂದ ತೆಗೆದು ಬ್ಯಾಗದಲ್ಲಿ ಹಾಕಿದ್ದ ಒಂದೊಂದು ತೊಲೆಯ ಎರಡು ಬಂಗಾರದ ಉಂಗುರಗಳು (20 ಗ್ರಾಂ) ಅಕಿ: 49,000/- ರೂ ಕಿಮ್ಮತ್ತಿನ ಎರಡು ಉಂಗುರಗಳು ಇರಲಿಲ್ಲ. ನನ್ನ ಹತ್ತಿರ ಬಂದಿದ್ದ ಅಪರಿಚಿತ ಇಬ್ಬರು ಕಳ್ಳರು ನನ್ನ ಘಮನವನ್ನು ಬೇರೆ ಕಡೆಗೆ ಸೆಳೆದು ಜೇವರ್ಗಿ ಬಸ್ ನಿಲ್ದಾಣದಲ್ಲಿ ನನಗೆ ಗೊತ್ತಾಗದಂತೆ ಬ್ಯಾಗದಲ್ಲಿ ಕೈಯಾಡಿಸಿ ಒಂದೊಂದು ತೊಲೆಯ 2 ಬಂಗಾರದ ಸುತ್ತುಂಗುರಗಳು ಅಕಿ; 49000/- ರೂ ಕಿಮ್ಮತ್ತಿನ ಆಭರಣಗಳು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೇವರಗಿ ಠಾಣೆ  : ಶ್ರೀ ವಿನಾಯಕ್ ತಂದೆ ನಾರಾಯಣ ಬಡಿಗೇರ ಸಾ;ಆಂದೋಲಾ ತಾ; ಜೇವರ್ಗಿ ಜಿ; ಕಲಬುರಗಿ ರವರು ದಿನಾಂಕ; 24.09.19 ರಂದು ನಾನು ಮತ್ತು ನನ್ನ ತಮ್ಮ ವೆಂಕಟೇಶ ಬಡಿಗೇರ ಮತ್ತು ರವಿಕುಮಾರ ತಂದೆ ಶರಣಪ್ಪ ಪೂಜಾರಿ ಸಾ; ಅವರಾಧ ಇವರು ಕೂಡಿ ಅಂಗಡಿಯಲ್ಲಿ ವ್ಯಾಪಾರ ಮಾಡಿಕೊಂಡು ಅಂಗಡಿ ಬಂದ್ ಮಾಡಿ ಮನಗೆ ಹೋಗಿರುತ್ತೇವೆ. ನಂತರ ದಿ; 25.09.19 ರಂದು ಬೆಳಿಗ್ಗೆ 8-00 ಘಂಟೆಯ ವೇಳೆಗೆ ಎಂದಿನಂತೆ ನಾನು ಮತ್ತು ನಮ್ಮಲ್ಲಿ ಕೆಲಸ ಮಾಡುವ ರವಿಕುಮಾರ ತಂದೆ ಶರಣಪ್ಪ ಪೂಜಾರಿ ಇವರು ಕೂಡಿಕೊಂಡು ಅಂಗಡಿಗೆ ಬಂದು ಅಂಗಡಿ ಶಟರ್ ತೆರೆದು ನೋಡಲಾಗಿ ಅಂಗಡಿಯಲ್ಲಿ ಇಟ್ಟಿದ್ದ  ಸಾಮಾನುಗಳು ಚಲ್ಲಾಪಿಲ್ಲಿಯಾಗಿ ಬಿದ್ದಿದ್ದು ಚೆಕ್ ಮಾಡಿ ನೋಡಲಾಗಿ ಅಂಗಡಿಯಲ್ಲಿದ್ದ 01) Epson 380, ಕಂಪನಿಯ ಎರಡು ಪ್ರಿಂಟರ್‌ಗಳು ಅ.ಕಿ; 10000, 2) ಒಂದು ಹೆಚ್.ಪಿ ಲ್ಯಾಪಟ್ಯಾಪ್ ಅ.ಕಿ; 115೦೦/- ರೂ 3) ಒಂದು ಮಾನಿಟರ್ ಅಕಿ; 2೦೦೦/- ರೂ 4) ಒಂದು ಕಂಪೂಟರ್ ಕೀ ಬೋರ್ಡ ಮತ್ತು ಮೌಸ್ ಅಕಿ; 1000/- ರೂ ಹೀಗೆ ಒಟ್ಟು 24,500/- ರೂ ಕಿಮ್ಮತ್ತಿನ ಸಾಮಾನುಗಳು ಅಂಗಡಿಯಲ್ಲಿ ಇರಲಿಲ್ಲ. ಅಂಗಡಿಯ ಮಗ್ಗಲಿನ ಪತ್ರ ಕೊಯ್ದುದ್ದು ಯಾರೋ ಕಳ್ಳರು ಅಂಗಡಿಯ ಪತ್ರಾ ಮುರಿದು ಒಳಗಡೆ ಪ್ರವೇಶಿಸಿ ಅಂಗಡಿಯಲ್ಲಿ ಇದ್ದ ಈ ಮೇಲಿನ ಸಾಮಾನುಗಳು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ, ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಹಲ್ಲೆ ಪ್ರಕರಣ :
ವಾಡಿ ಠಾಣೆ : ಶ್ರೀ ಸಂತೋಷ ತಂದೆ ದೀಪ್ಲಾ ಚವ್ಹಾಣ ಸಾ:ಕಡಬೂರ ತಾ:ಚಿತ್ತಾಪೂರ ರವರು ಮತ್ತು ಚಾಮನೂರ ಗ್ರಾಮ ಭೀಮು ತಂದೆ ದ್ಯಾವಪ್ಪ ಕೂಡಿಕೊಂಡು ಬಳವಡಗಿ ಗ್ರಾಮದ ರಿಯಾಜಖಾನ ಎನ್ನುವರ ಪರ್ಶಿ ಖಣಿಯನ್ನು ಬಾಡಿಗೆಯಿಂದ ಪಡೆದು ವ್ಯಾಪಾರ ಮಾಡಿಕೊಂಡು ಉಪ ಜೀವಿಸುತ್ತೆನೆ. ಈಗ ಸುಮಾರು 15 ದಿವಸಗಳ ಹಿಂದೆ ರಾಮು ತಂದೆ ಜಗನ್ನಾಥ ರಾಠೋಡ ಇತನು ನಮ್ಮ ಖಣಿಯಿಂದ ಪರ್ಶಿಯನ್ನು ತೆಗೆದುಕೊಂಡು ಹೋಗಿ ಬೇರೆಯವರಿಗೆ ಮಾರಾಟ ಮಾಡಿದ್ದು 22 ಸಾವಿರ ರೂಪಾಯಿ ನನಗೆ ಹಣ  ಕೊಡಬೇಕಾಗಿತ್ತು ಅದರಲ್ಲಿ 20 ಸಾವಿರ ರೂಪಾಯಿ ಕೊಟ್ಟಿದ್ದು ಇನ್ನೂ 02  ಸಾವಿರ ರೂಪಾಯಿ ಹಣವನ್ನು ಕೊಡಬೇಕಾಗಿದ್ದು ನಾನು ಹಣವನ್ನು ಕೇಳಿದರೆ ಪೂರ್ತಿ ಹಣ ಕೊಟ್ಟಿರುತ್ತೆನೆ ನಿನಗೆ ಯಾವ ಹಣ ಕೊಡುವದಿಲ್ಲ ಅಂತಾ ಹೇಳುತ್ತ ಬಂದಿರುತ್ತಾನೆ. ದಿನಾಂಕ 10/10/2019 ರಂದು 11-30 ಎ.ಎಮ್ ಸುಮಾರು ನಾನು ಮತ್ತು ನಮ್ಮ ಖಣಿಯ ಮಾಲಕ ರಿಯಾಜಖಾನ ಕೂಡಿಕೊಂಡು ಮೊಟರ ಸೈಕಲ ಮೇಲೆ ನಮ್ಮ  ಖಣಿಯ ಕಡೆಗೆ ಹೊರಟಿದ್ದೆವು ಮುಂದೆ ಬಳವಡಗಿ ಬ್ರೀಡ್ಜ್ ಹತ್ತಿರ ಮೊಟರ ಸೈಕಲ ಮೇಲೆ ಸೀತಾರಾಮ ಇತನು ಹೊರಟಿದ್ದು ಆಗ ನಾನು  ಮೊಟರ ಸೈಕಲ ನಿಲ್ಲಿಸಿ ಸೀತಾರಾಮ ಇತನಿಗೆ 2 ಸಾವಿರ ರೂಪಾಯಿ ಹಣ ಕೊಡು ಅಂತಾ ಕೇಳಿದ್ದಕ್ಕೆ ‘’ಬೋಸಡಿ ಮಗನೇ ನಿನಗೆ ರೊಕ್ಕ ಕೊಡುವದಿಲ್ಲ ಏನು ಮಾಡುಕೋತಿ ಮಾಡಕೋ ಅಂತಾ ಬೈಯ ಹತ್ತಿದನು.ಆಗ ನಾನು ನನಗೆ ಏಕೆ ಬೈಯುತ್ತಿ ಅಂತಾ ಕೇಳುತ್ತಿದ್ದಂತೆ ಸೀತಾರಾಮ ಇತನು ತನ್ನ ತಮ್ಮ ರಾಮು ಇತನಿಗೆ ಫೋನ  ಮಾಡಿದಾಗ ಆತನು ಮೊಟರ ಸೈಕಲ ಮೇಲೆ ಬಂದು ನನ್ನೊಂದಿಗೆ ಜಗಳಕ್ಕೆ ಬಿದ್ದು ‘’ಬೋಸಡಿ ಮಗನೇ ನಿನ್ನ ಸೊಕ್ಕು ಹೆಚ್ಚಾಗಿದೆ ಅಂತಾ ಬೈದು ತನ್ನ ಕೈಯಲ್ಲಿದ್ದ ಬಡಿಗೆಯಿಂದ ನನ್ನ ಎಡತಲೆಗೆ ಜೋರಾಗಿ ಹೊಡೆದನು ಅದರಿಂದ ನನ್ನ ತಲೆಗೆ ರಕ್ತ ಬರುತ್ತಿದ್ದು ಆಗ ರಿಯಾಜಖಾನ ಮತ್ತು ಭೀಮು ರವರು ಜಗಳ ಬಿಡಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.