POLICE BHAVAN KALABURAGI

POLICE BHAVAN KALABURAGI

16 June 2019

KALABURAGI DISTRICT REPORTED CRIMES

ಮಟಕಾ ಜೂಜಾಟದಲ್ಲಿ ನಿರತವನ ಬಂಧನ :
ಅಫಜಲಪೂರ ಠಾಣೆ : ದಿನಾಂಕ 15-06-2019 ರಂದು ಅಫಜಲಪೂರ ಠಾಣಾ ಹದ್ದಿಯ ಮಾಶಾಳ ಗ್ರಾಮದ ಬಸ್ ನಿಲ್ದಾಣದ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯೆಕ್ತಿ ನಿಂತುಕೊಂಡು ಹೊಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲರಿ ಅಂತಾ ಅನ್ನುತ್ತಾ ಸಾರ್ವಜನಿಕರ ಮನವೂಲಿಸಿ ಅವರಿಂದ ಹಣ ಪಡೆದು, ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳನ್ನು ಕೊಟ್ಟು, ಮಟಕಾ ಬರೆದುಕೊಳ್ಳುತ್ತಿದ್ದಾನೆ ಹಾಗೂ ಮಟಕಾದಲ್ಲಿ ಗೆದ್ದ ಜನರಿಗೆ ಯಾವುದೆ ಹಣ ಕೊಡದೆ ಮೋಸ ಮಾಡುತ್ತಿದ್ದಾನೆ ಅಂತಾ ಮಾಹಿತಿ ಬಂದ ಮೇರೆಗೆ, ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಮಾಶಾಳ ಗ್ರಾಮಕ್ಕೆ ಹೋಗಿ ಬಸ್ ನಿಲ್ದಾಣದಿಂದ ಸ್ವಲ್ಪ ದೂರು ನಮ್ಮ ವಾಹನವನ್ನು ನಿಲ್ಲಿಸಿ ಮರೆಯಾಗಿ ನಿಂತು ನೋಡಲು, ಬಸ್ ನಿಲ್ದಾಣದ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯೆಕ್ತಿ ನಿಂತುಕೊಂಡು ಹೋಗಿ ಬರುವ ಜನಗಳಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತಾ ಕರೆದು, ಜನರಿಂದ ಹಣ ಪಡೆದು ಅವರಿಗೆ ಅಂಕಿ ಸಂಖ್ಯೆ ಬರೆದುಕೊಟ್ಟು, ಮಟಕಾ ಬರೆದುಕೊಳ್ಳುತ್ತಿದ್ದನು. ಹಾಗೂ ಮಟಕಾದಲ್ಲಿ ಹಣ ಗೆದ್ದಂತ ಜನರು ಸದರಿಯವನಿಗೆ ಹಣ ಕೇಳುತ್ತಿದ್ದರು, ಆಗ ಸದರಿಯನು ಯಾವ ಹಣ ನೀನು ಬರೆಸಿದ ನಂಬರ ಬಂದಿಲ್ಲ ಎಂದು ಜನರಿಗೆ ಗೆದ್ದಂತ ಹಣ ಕೊಡದೆ ಮೋಸ ಮಾಡುತ್ತಿದ್ದನು. ಆಗ ದಾಳಿ ಮಾಡಿ ಹಿಡಿದು ಸದರಿಯವನ ಹೆಸರು ವಿಳಾಸ ವಿಚಾರಿಸಿ ಅಂಗ ಶೋದನೆ ಮಾಡಲಾಗಿ  ದತ್ತು @ ದತ್ತಾತ್ರೇಯ ತಂದೆ ಜೋತಿಬಾ ಕ್ಷತ್ರಿ ಸಾ|| ಮಾಶಾಳ ಗ್ರಾಮ ತಾ|| ಅಫಜಲಪೂರ ಅಂತಾ ತಿಳಿಸಿದ್ದು, ಸದರಿಯವನ ವಶದಿಂದ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 490/- ರೂಪಾಯಿ ನಗದು ಹಣ ಹಾಗೂ ಅಂಕಿ ಸಂಖ್ಯೆ ಬರೆದ ಒಂದು ಮಟಕಾ ಚೀಟಿ ಹಾಗೂ ಒಂದು ಪೆನ್ನ ದೊರೆತವು, ಸದರಿಯವುಗಳನ್ನು ವಶಕ್ಕೆ ಪಡೆದು ಸದರಿವನೊಂದಿಗೆ ಅಫಜಲಪೂರ ಠಾಣೆಗೆ ಬಂದು  ಠಾಣೆ ಗುನ್ನೆ ನಂ 88/2019 ಕಲಂ 78 (3) ಕೆ.ಪಿ ಆಕ್ಟ್ ಮತ್ತು ಕಲಂ 420 ಐಪಿಸಿ ಪ್ರಕಾರ ಪ್ರಕರಣ  ದಾಖಲಿಸಲಾಗಿದೆ.
ಅಪಘಾತ ಪ್ರಕರಣ :
ಜೇವರಗಿ ಠಾಣೆ : ದಿನಾಂಕ; 14/06/2019 ರಂದು ಸಾಯಂಕಾಲ ನನ್ನ ಗಂಡ ಈರಣ್ಣ ಬದ್ರಿ ಈತನು ಎಂದಿನಂತೆ ಕರ್ತವ್ಯಕ್ಕೆ ಹೋಗುತ್ತೇನೆ ಎಂದು ಮಂದೇವಾಲದಿಂದ ಜೇವರಗಿ ಕಡೆಗೆ ಹೋಗಿರುತ್ತಾರೆ. ನಂತರ ರಾತ್ರಿ 9-00 ಘಂಟೆಯ ಸುಮಾರಿಗೆ ನಮ್ಮೂರ ತಂಡಾದ ಅನಿಲ್ ರಾಠೋಡ್ ಈತನು ಪೋನ್ ಮಾಡಿ ವಿಷಯ ತಿಳಿಸಿದ್ದೇನೆಂದರೆ; ನಿನ್ನ ಗಂಡನಾದ ಈರಣ್ಣ ಈತನಿಗೆ ಸಿಂದಗಿ - ವಿಜಯಪೂರ ರೋಡಿನ ಜೇವರಗಿ ಬೈ ಪಾಸ್ ರೋಡಿನ ಹತ್ತಿರ ರಸ್ತೆ ಅಪಘಾತವಾಗಿ ಮೃತಪಟ್ಟಿರುತ್ತಾನೆ. ಕೂಡಲೆ ಬರ್ರಿ ಎಂದು ವಿಷಯ ತಿಳಿಸಿದ್ದರಿಂದ ನಾನು ಮತ್ತು ನನ್ನ ಸವತಿ ಸಂಗೀತಾ ಮತ್ತು ನಮ್ಮ ಮಕ್ಕಳು ಹಾಗು ನಮ್ಮ ಸಂಬಂದಿ ಸಿದ್ದಣ್ಣಗೌಡ ತಂದೆ ಬಸಲಿಂಗಪ್ಪ ಬದ್ರಿ, ಹಾಗು ಸಂಗಣ್ಣಗೌಡ ತಂದೆ ಯಮುನಪ್ಪ ಬದ್ರಿ ಇವರು ಕೂಡಿ ಘಟನಾ ಸ್ಥಳಕ್ಕೆ ಬಂದು ನೋಡಲಾಗಿ ಘಟನೆ ನಿಜವಿದ್ದು, ನನ್ನ ಗಂಡನಿಗೆ ತಲೆಯ ಮೇಲೆ ಭಾರಿ ಘಾಯವಾಗಿ ಎಡ ಕಣ್ಣು ಗುಡ್ಡೆ ಹೊರ ಬಂದಿದ್ದು, ಕಿವಿಯಿಂದ ಬಾಯಿಯಿಂದ ರಕ್ತ ಸ್ರಾವವಾಗುತ್ತಿದ್ದು, ಎರಡು ಕೈಗೆ ತರಚಿದ ರಕ್ತ ಘಾಯವಾಗಿದ್ದು, ಎಡ ಕೈ ಭುಜದ ಹತ್ತಿರ ಕೈ ಮುರಿದಂತೆ ಆಗಿ ಸ್ಥಳದಲ್ಲಿಯೇ ಸತ್ತು ಬಿದ್ದಿದ್ದನು. ಮತ್ತು ಅಲ್ಲಿಯೇ ನನ್ನ ಗಂಡನು ಚಲಾಯಿಸಿಕೊಂಡು ಬಂದಿದ್ದ ಮೋಟಾರ ಸೈಕಲ್ ಬಿದ್ದಿದ್ದು ಅದರ ನಂಬರ್ ಕೆ.-28-.ಸಿ-1747 ಇತ್ತು. ನಂತರ ಸ್ಥಳದಲ್ಲಿ ಜನರು ಅಂದಾಡುವದರಿಂದ ವಿಷಯ ಗೊತ್ತಾಗಿದ್ದೇನೆಂದರೆ; ನನ್ನ ಗಂಡನು ನಮ್ಮ ಸ್ಪ್ಲೆಂಡರ್ ಪ್ಲಸ್ ಮೋಟಾರ ಸೈಕಲ್ ನಂ:ಕೆ.-28-.ಸಿ-1747 ನೇದ್ದನ್ನು ಚಲಾಯಿಸಿಕೊಂಡು ಕಟ್ಟಿಸಂಗಾವಿ ಕಡೆಗೆ ಹೋಗುತ್ತಿದ್ದಾಗ ಬೈ ಪಾಸ್ ರೋಡಿನ ಹತ್ತಿರ ರಾತ್ರಿ 8-30 ಪಿ.ಎಮ್ ವೇಳೆಗೆ ಎದುರಿನಿಂದ ಯಾವುದೋ ಒಂದು ವಾಹನ ಚಾಲಕನು ವಾಹನವನ್ನು ಅತಿ ವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನ್ನ ಗಂಡನಿಗೆ ಎದುರಿನಿಂದ ಡಿಕ್ಕಿ ಪಡಿಸಿ ಓಡಿ ಹೋಗಿದ್ದರಿಂದ ನನ್ನ ಗಂಡನು ಭಾರಿ ಘಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ. ಅಂತಾ ಶ್ರೀಮತಿ ಮಲ್ಲಮ್ಮ ಗಂಡ ಈರಣ್ಣ ಬದ್ರಿ ಸಾ; ಕೂಡಲಗಿ ಹಾ. ಮಂದೆವಾಲ ಗ್ರಾಮ ತಾ; ಜೇವರಗಿ ಜಿ; ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆ ಗುನ್ನೆ ನಂ; 122/2019 ಕಲಂ: 279 304 () ಐಪಿಸಿ ಮತ್ತು ಕಲಂ; 187 .ಎಮ್.ವಿ ಕಾಯ್ದೆ ನೇದ್ದರ ಪ್ರಕಾರ ಪ್ರಕರಣ ಧಾಖಲಿಸಲಾಗಿದೆ
ಅಸ್ವಾಭಾವಿಕ ಸಾವು ಪ್ರಕರಣ :
ಗ್ರಾಮೀಣ ಠಾಣೆ : ಶ್ರೀ ಶರಣು ತಂದೆ ಅಂಬಾರಾಯ ಬಿರೆದಾರ ಸಾ: ಕರಹರಿ ಹಾ:: ಕಮಲನಗರ ಕಲಬುರಗಿ ರವರು ದಿನಾಂಕ 15-06-2019 ರಂದು  ಬೆಳಿಗ್ಗೆ 8:00 ಗಂಟೆ ಸುಮಾರಿಗೆ ಸಾಗರ ವೈನಶಾಪ್ಹಿಂದುಗಡೆ ನಾನು ಕಾಲಮಡಿಲಿಕ್ಕೆ ಹೋದಾಗ ಖುಲ್ಲಾ ಜಾಗೆಯಲ್ಲಿ ಒಬ್ಬ ವ್ಯಕ್ತಿ ಮೃತಪಟ್ಟಂತೆ ಬಿದಿದ್ದು ನಂತರ ಸಮೀಪ ಹೋಗಿ ನೋಡಲು ವ್ಯಕ್ತಿಯು ಅಂಗಾತವಾಗಿ ಬಿದಿದ್ದು ಅಂದಾಜು ವಯಸ್ಸು 60-65 ಇದ್ದು , ತೆಳ್ಳನೇಯ ದೇಹ . ಸಾದಾಗೆಂಪು ಮೈಬಣ್ಣ ಇದ್ದು ಅಂದಾಜು 5.6 ಎತ್ತರ ಹೊಂದಿದ್ದು ತಲೆಯ ಮೇಲೆ ಎರಡೂವರೆ ಇಂಚ ಕಪ್ಪು ಮತ್ತು ಬಿಳಪು ಕುದಲು ಇದ್ದು ಮತ್ತು ಮೈಮೇಲೆ ಒಂದು ತಿಳಿ ನೀಲಿ ಬಣ್ಣದ ಪ್ಯಾಂಟ , ಒಂದು ಬಿಳಿಬಣ್ಣದ ಬನಿಯನ್‌‌ ಹಾಗು ಒಂದು ನೀಲಿಬಣ್ಣದ ಹಂಡರವಿಯರ್‌‌ ಧರಿಸಿರುತ್ತಾನೆ. ಸದರಿಯವನು ಯಾವುದೋ ಕಾರಣದಿಂದ ಸಾಗರ ವೈನಶಾಪ್‌‌ ಹಿಂದುಗಡೆ ಹೋಗಿ ನಿನ್ನೆ ದಿನಾಂಕ 14/06/2019 ರಾತ್ರಿ 9:00 ಗಂಟೆಯಿಂದ ಇಂದು ದಿನಾಂಕ 15/06/2019 ಬೆಳಗಿನ 8:00 ಗಂಟೆಯ ಮದ್ಯದಲ್ಲಿ ಮೃತಪಟ್ಟಿರುತ್ತಾನೆ. ಸದರಿ ವ್ಯಕ್ತಿಯ ಬಗ್ಗೆ ಯಾವುದೆ ಮಾಹಿತಿ ಇರುವುದಿಲ್ಲಾ. ಸದರಿಯವನು ಅಪರಿಚಿತನಾಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣಗಳು :
ರಾಘವೇಂದ್ರ ನಗರ ಠಾಣೆ : ಶ್ರೀ ಬೀರಬಲಸಿಂಗ್ ತಂದೆ ವಿಠಲ ಸಿಂಗ್ ಠಾಕೂರ ಸಾಃ ನ್ಯೂ ರಾಘವೇಂದ್ರ ಕಾಲೋನಿ ಕಲಬುರಗಿ ರವರ ಮಗನಾದ ಪ್ರೀತಮ ಎಂಬುವನೊಂದಿಗೆ ಕನಕನಗರದ ಸೋಮು ಹಾಗೂ ಚಾಕಲೇಟ್ ಶರಣು ಎಂಬುವರು ನನ್ನ ಮಗನಿಗೆ ವಿನಾ ಕಾರಣ ಜಗಳ ಮಾಡುತ್ತಾ ಬಂದಿರುತ್ತಾರೆ. ವಿಷಯ ಕುರಿತು ನಾನು ಅವರಿಗೆ ಕರೆಯಿಸಿ ಸೂಕ್ತ ತಿಳುವಳಿಕೆ ಹೇಳಿ ಕಳುಹಿಸಿದ್ದು ಆದರೂ ಅವರು ನನ್ನ ಮಗನ ಮೇಲೆ ದ್ವೇಷದಿಂದ ಆಗಾಗ ಗೂರಾಯಿಸಿ ನೋಡುವದು ಅವಾಚ್ಯ ಶಬ್ದಗಳಿಂದ ಬೈಯುವದು ಮಾಡುತ್ತಾ ಬಂದಿರುತ್ತಾರೆ. ಆದರೂ ನಾವು ಸುಮ್ಮನಾಗಿದ್ದೇವೆ. ಮೊನ್ನೆದಿನ ವಿನಾಕಾರಣ ನನ್ನ ಸಂಗಡ ಜಗಳ ತೆಗೆದಾಗ ನಾನು ಕೂಡಾ ಹೀಗೆ ಮಾಡಬಾರದು ಎಂದು ತಿಳಿಸಿ ಹೇಳಿದ್ದು ಇರುತ್ತದೆ. ಹೀಗಿರುವಾಗ ದಿ:14/06/2019 ರಂದು ನನ್ನ ಕುಟುಂಬದ ಸಮಸ್ಯೆ ಕುರಿತು ಹೊರಗಡೆ ಹೋಗಿ ನಮ್ಮ ಸಮಸ್ಯೆ ಬಗೆಹರಿಸಿಕೊಂಡು ಮರಳಿ ನಮ್ಮ ಮನೆಗೆ ಬಂದು ನಮ್ಮ ಕಾರ ನಿಲ್ಲಿಸಿ ನಮ್ಮ ಮನೆಯ ಪಕ್ಕದ ನಿವಾಸಿ ಮರೇಪ್ಪಾ ಎಂಬುವನ ಸಂಗಡ ಮಾತನಾಡುತ್ತಾ ನಮ್ಮ ಮನೆಯ ಎದುರಿನ ರೋಡಿನ ಮೇಲೆ ನಿಂತುಕೊಂಡು ಮಾತನಾಡುತ್ತಿರುವಾಗ ಸೋಮು ಹಾಗೂ ಸಂದೇಶ ಎಂಬುವರು ಬಂದು ವಿನಾಕಾರಣ ನನ್ನ ಮತ್ತು ನನ್ನ ಮಗನೊಂದಿಗೆ ಜಗಳ ತೆಗೆದು ಸೋಮು @ ಸೋಮಶೇಖರ ಇತನು ರಂಡಿ ಮಕ್ಕಳೆ ನಿಮದು ಏರಿಯಾದಲ್ಲಿ ಬಹಳ ಆಗಿದೆ ಎಂದು ನನ್ನ ಎದೆಯ ಮೇಲಿನ ಅಂಗಿ ಹಿಡಿದು ಹೊಡೆದು ಬೈಯುತ್ತಿರುವಾಗ ಸಂದೇಶ ಇತನು ಯಾರಿಗೊ ಪೋನ ಮಾಡಿ ಕರೆಯಿಸಿದಾಗ ಪಿನ್ನು, ಗಂಗಾನಗರ ಮಹೇಶ, ಮಲ್ಲು, ಅಂಬರೀಶ, ಶಿವಶರಣ ಸಂಗಡ ಇನ್ನೂ 10-12 ಜನರು ಕೂಡಿ ಬಂದವರೆ ನನಗೆ ಕೊಲೆ ಮಾಡುವ ಉದ್ದೇಶದಿಂದ ಅಲ್ಲೆ ಬಿದ್ದಿರುವ ಪರ್ಶಿಕಲ್ಲನ್ನು ತೆಗೆದುಕೊಂಡು ಸೋಮು & ಸಂದೇಶ ಇವರು ನನ್ನ ತಲೆಯ ಮೇಲೆ ಹಾಕಿ ಭಾರಿ ರಕ್ತಗಾಯ ಪಡಿಸಿರುತ್ತಾರೆ. ಇದನ್ನು ನೋಡಿ ನನ್ನ ತಮ್ಮ ಮದನಸಿಂಗ ಮತ್ತು ಮಗ ಪ್ರೀತಮಸಿಂಗ ಇವರು ಜಗಳ ಬಿಡಿಸುವದಕ್ಕೆ ಬಂದಾಗ ಅವರಿಗೂ ಹೊಡೆದು ಗುಪ್ತಗಾಯ ರಕ್ತಗಾಯ ಮಾಡಿರುತ್ತಾರೆ. ನಂತರ ನಾವು ಚಿಕಿತ್ಸೆ ಕುರಿತು ಆಸ್ಪತ್ರೆಗೆ ಬಂದು ಸೇರಿಕೆಯಾಗಿರುತ್ತೇನೆ.ಜಗಳದ ಸಮಯದಲ್ಲಿ ನನ್ನ ಹತ್ತಿರಿರುವ 2 ತೋಲೆ ಬಂಗಾರದ ಚೈನ್ ಕಳೆದು ಹೋಗಿರುತ್ತದೆ. ಅಂತಾ ಸಲ್ಲಿಸಿದ  ದೂರು  ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆ ಗುನ್ನೆ ನಂ.66/2019 ಕಲಂ: 143,147, 341,323,325,307,504,506 ಸಂ:149 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಲಾಗಿದೆ. 
ಗ್ರಾಮೀಣ ಠಾಣೆ : ಶ್ರೀ ಶರಣಗೌಡ ತಂದೆ ಹಣಮಂತರಾಯ ಪಾಟೀಲ ಸಾ: ವಿಜಯ ನಗರ ಕಾಲೋನಿ ಆಳಂದ ರೋಡ ಕಲಬುರಗಿ ರವರು ತಮ್ಮ ಕಾಲೋನಿಯಲ್ಲಿ ಇರುವ ಶರಣಬಸಪ್ಪಾ ಸ್ವಾಧಿ ಕೂಡಿಕೊಂಡು ಆರೋಗ್ಯ ಕಾಪಾಡಲು ದಿನಾಲೂ ಬೆಳಿಗ್ಗೆ 4-5 ಕೀಲೋ ಮೀಟರ ವಾಕಿಂಗ್ಮಾಡುತ್ತಾ ಬಂದಿರುತ್ತೇವೆ.  ದಿನಾಂಕ 14/06/2019 ರಂದು ಬೆಳಿಗ್ಗೆ 5:00 ಗಂಟೆಗೆ ನಾನು ಬೇಗ ಎದ್ದು ಶರಣಬಸಪ್ಪಾ ಬರುವ ಮುಂಚಿತವಾಗಿ ನಾನು ಒಬ್ಬನೆ ಆಳಂದ ಚೆಕ್ಕಪೊಸ್ಟ್‌‌ ಮೂಲಕ ಡಬರಾಬಾದ ಕ್ರಾಸ ಹತ್ತಿರದಿಂದ ಡಬರಾಬಾದಿಗೆ ಹೊಗುವ ರೋಡ ಕಡೆಗೆ ಬೆಳಗಿನ ಜಾವ 05:15 ಸುಮಾರಿಗೆ ವಾಕಿಂಗ್‌‌ ಮಾಡುತ್ತಾ ಹೊಗುವಾಗ ನನ್ನ ಮುಂದಿನಿಂದ ಅಂದರೆ ಡಬರಾಬಾದ ಕಡೆಯಿಂದ ಒಂದು ಮೋಟರ ಸೈಕಲ ಮೇಲೆ ಇಬ್ಬರು ಬಂದು ನನನ್ನು ತಡೆದು ನಿಲ್ಲಿಸಿ ಯಾವುದೋ ಉದ್ದೇಶದಿಂದ ನನಗೆ ಕೆಡವಿ ಅವಾಚ್ಯವಾಗಿ ಬೈಯುತ್ತಾ ನನಗೆ ಒತ್ತಿ ಹಿಡಿದು ಹೊಡೆಯುತ್ತಿದ್ದಾಗ ನಾನು ಸಹ ಅವರನ್ನು ಯ್ಯಾಕೆ ಹೊಡೆಯುತ್ತಿದ್ದಿರಿ ಅಂತಾ ಕೇಳಿ ನಾನು ಸಹ ಅವರನ್ನು ನೂಕಿಸಿಕೊಡುತ್ತಿದ್ದಾಗ ನಾನು ಕೆಳಗಡೆ ಬಿದ್ದಾಗ ನನ್ನ ಎಡಗಾಲ ಮೋಲಕಾಲಿನ ಕೆಳಗೆ ಮತ್ತು ಎಡಗೈ ಮೊಳಕೈ ಕೆಳಭಾಗದಲ್ಲಿ ಚಾಕುವಿನಿಂದ ಚುಚ್ಚಿ ಗಾಯಮಾಡಿ ಮಗನೇ ವಿಷಯವನ್ನು ಯಾರಿಗೆ ಆದರೂ ಹೇಳಿದರೆ ನಿನಗೆ ಖಲಾಷ ಮಾಢುತ್ತೇವೆ ಅಂತಾ ಹೇಳಿ ತಮ್ಮ ಮೋಟರ ಸೈಕಲ ಸಮೇತ ಓಡಿ ಹೋದರು ಬಹಳ ನಸುಕು ಇರುವುದರಿಂದ ಅವರ ಮೋಟರ ಸೈಕಲ ನಂಬರ ನೋಡಿರುವುದಿಲ್ಲಾ ಅವರ ಅಂದಾಜು ವಯಸ್ಸು 20-25 ಇರಬಹುದು ಅವರನ್ನು ನಾನು ಮುಂದೆ ನೋಡಿದರೆ ಗುರ್ತಿಸುತ್ತೇನೆ. ನಂತರ ನಾನು ನನ್ನ ಹಿಂದುಗಡೆ ಬರುತ್ತಿದ್ದ ಶರಣಬಸಪ್ಪಾ ಇವರನ್ನು ಪೋನ ಮಾಡಿ ವಿಷಯ ತಿಳಿಸಿದಾಗ ಅವರು ಬಂದು ನನಗೆ ಆಸ್ಪತ್ರೆಗೆ ತಂದು ಸೇರಿಕೆ ಮಾಢಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ  ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಾಡಿ ಠಾಣೆ : ಶ್ರೀಮತಿ  ಬಸಮ್ಮ ತಂದೆ ಬಸವರಾಜ ಅನ್ನಪೂರ ಮು:ಬೇಳಗೆರಾ ರವರು ಸದ್ಯ ಶಹಾಪೂರದಲ್ಲಿ ಜ್ಞಾನಜ್ಯೋತಿ ಎಂಬ ಖಾಸಗಿ ಶಾಲೆಯಲ್ಲಿ ಶಿಕ್ಷಕಿ ಅಂತಾ ಕೆಲಸ ಮಾಡಿಕೊಂಡು ವಾಸವಾಗಿರುತ್ತೆನೆ. ನಮ್ಮ ಅಣ್ಣ ಮಲ್ಲಪ್ಪ ತಂದೆ ಬಸವರಾಜ ಆತನ ಹೆಂಡತಿ ಲಕ್ಷ್ಮೀ ಗಂಡ ಮಲ್ಲಪ್ಪ ಮತ್ತು ನಮ್ಮ ತಂದೆ ಬೇಳಗೆರಾದಲ್ಲಿ ವಾಸವಾಗಿರುತ್ತಾರೆ. ನನಗೆ ನಮ್ಮ ಅಣ್ಣ ಅತ್ತೆಗೆ ಸರಿಯಾಗಿ ನೋಡಿಕೊಳ್ಳದೆ ಇರುವದರಿಂದ ನಾನು ನಮ್ಮ ತಾಯಿ ನೀಲಮ್ಮ ಇವಳೊಂದಿಗೆ ಕೊಲ್ಲೂರ ಗ್ರಾಮದಲ್ಲಿ ವಾಸವಾಗಿದ್ದು ನಮ್ಮ ತಾಯಿಯ ಮರಣದ ನಂತರ ಶಹಾಪೂರದಲ್ಲಿ ವಾಸವಾಗಿರುತ್ತೆನೆ.  ದಿನಾಂಕ 13/06/2019 ರಂದು ಮದ್ಯಾಹ್ನ 01-00 ಗಂಟೆಗೆ ನಾನು ನನ್ನ ಪುಸ್ತಕಗಳು ಹಾಗೂ ಬಟ್ಟೆ ಬರೆಗಳನ್ನು ತೆಗೆದುಕೊಂಡು ಬರಲು ಬೇಳಗೆರಾ ಗ್ರಾಮದ ನಮ್ಮ ಅಣ್ಣನ ಮನೆಗೆ ಹೋದಾಗ ನಮ್ಮ ಅಣ್ಣನ ಹೆಂಡತಿ ಲಕ್ಷ್ಮೀ ಇವಳು ‘’ ರಂಡಿ ಬೋಸಡಿ ಇಲ್ಲಿ ಯಾಕ ಬಂದಿದ್ದಿ ಅಂತಾ ಬೈದು ಅಲ್ಲೇ ಬಿದ್ದ ಕಟ್ಟಿಗೆಯನ್ನು ತೆಗೆದುಕೊಂಡು ನನ್ನ ಬಲತಲೆಗೆ ಹೊಡೆದು ರಕ್ತಗಾಯ ಪಡಿಸಿದಳು ಆಗ ನಮ್ಮ ಅಣ್ಣನು ಸಹ ನನಗೆ ಕೈ ಹಿಡಿದು ಜಗ್ಗಾಡಿ ನನಗೆ ಮಾನಭಂಗ ಮಾಡಲು ಪ್ರಯತ್ನಿಸಿರುತ್ತಾನೆ. ಆಗ ನಾನು ಜೋರಾಗಿ ಚೀರಿದಾಗ ಅಕ್ಕ ಪಕ್ಕದ ಜನರು ಬಂದು ನಮ್ಮ ಅಣ್ಣ ಹಾಗೂ ಅತ್ತಿಗೆಗೆ ಸಮಜಾಯಿಸಿದರು. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ವಾಡಿ ಠಾಣೆ ಗುನ್ನೆ ನಂ 63/2019 ಕಲಂ:504,324,354 ಸಂಗಡ 34 ಐಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲಿಸಲಾಗಿದೆ.  

15 June 2019

KALABURAGI DISTRICT PRESS NOTE

ಪತ್ರಿಕಾ ಪ್ರಕಟಣೆ
ದಿನಾಂಕ: 19-06-2019 ರಂದು ಬೆಳಗ್ಗೆ 10.30 ಗಂಟೆಗೆ ಕಲಬುರಗಿ ಜಿಲ್ಲಾ ಪೊಲೀಸ್ ಕಛೇರಿ, ಪೋಲೀಸ್ ಭವನದಲ್ಲಿ  “ದಲಿತರ ದಿನ'' ಆಚರಣೆಯನ್ನು ಆಯೋಜಿಸಲಾಗಿದ್ದು, ಕಾರಣ ಜಿಲ್ಲೆಯ ಎಲ್ಲಾ ದಲಿತ ಮುಖಂಡರು ಮತ್ತು ದಲಿತ ಸಂಘಟನೆಗಳ ಪದಾಧಿಕಾರಿಗಳು ಸದರಿ ಸಭೆಗೆ ಹಾಜರಾಗಲು ಈ ಮೂಲಕ ತಿಳಿಯಪಡಿಸಲಾಗಿದೆ.
                                                                                         ಸಹಿ/-
                                                                                      ಪೊಲೀಸ್ ಅಧೀಕ್ಷಕರು
                                                                                            ಕಲಬುರಗಿ

14 June 2019

KALABURAGI DISTRICT REPORTED CRIMES

ಮಟಕಾ ಜೂಜಾಟದಲ್ಲಿ ನಿರತವರ ಬಂಧನ :
ಗ್ರಾಮೀಣ ಠಾಣೆ : ದಿನಾಂಕ 13/06/2019 ರಂದು ಮಧ್ಯಾಹ್ನ ಗ್ರಾಮೀಣ ಪೊಲೀಸ ಠಾಣೆಯ ವ್ಯಾಪ್ತಿಯಲ್ಲಿ  ಕಲಬುರಗಿ ನಗರದ ರಿಂಗ ರೋಡಿಗೆ ಇರುವ  ಮಹ್ಮದ ರಫೀಕ ಚೌಕ ಕ್ರಾಸನಲ್ಲಿ ಮೂರು ಜನರು ನಿಂತುಕೊಂಡು ಮತ್ತು ತಿರುಗಾಡುತ್ತಾ ಹೋಗು-ಬರುವ ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ನಂಬರಿನ ಅಂಕಿ ಸಂಖ್ಯೆ ಚೀಟಿ ಬರೆದುಕೊಡುತ್ತಿದ್ದಾರೆ ಅಂತಾ ಬಾತ್ಮಿ ಬಂದ ಮೇರೆಗೆ  ಶ್ರೀಮತಿ ಗೀತಾ ಪ್ರೊ.ಡಿ.ಎಸ್.ಪಿ. ಗ್ರಾಮೀಣ ಪೊಲೀಸ ಠಾಣೆ ಕಲಬುರಗಿ  ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಬಾತ್ಮಿ ಸ್ಥಳದಿಂದ ಸ್ವಲ್ಪ ದೂರದಲ್ಲಿ ಜೀಪು ನಿಲ್ಲಿಸಿ ಎಲ್ಲರೂ ಜೀಪಿನಿಂದ ಇಳಿದು ನಡೆದುಕೊಂಡು ಕಲಬುರಗಿ ನಗರದ ರಿಂಗ ರೋಡಿಗೆ ಇರುವ ಮಹ್ಮದ ರಫೀಕ ಕ್ರಾಸನಲ್ಲಿ  ನಿಂತಿರುವ ಆಟೋರಿಕ್ಷಾಗಳ ಮರೆಯಲ್ಲಿ ನಿಂತು ನೋಡಲು  ಮೂರು ಜನರು ಕಲಬುರಗಿ ನಗರದ ರಿಂಗ ರೋಡಿಗೆ ಇರುವ ಮಹ್ಮದ ರಫೀಕ ಚೌಕ  ಕ್ರಾಸನಲ್ಲಿ ಇರುವ  ಖುಲ್ಲಾ ಜಾಗೆಯಲ್ಲಿ ನಿಂತುಕೊಂಡು ಮತ್ತು ತಿರುಗಾಡುತ್ತಾ ಹೋಗಿ-ಬರುವ ಸಾರ್ವಜನಿಕರಿಗೆ 01 ರೂ.ಗೆ 80 ರೂ.ಗೆಲ್ಲಿರಿ ಅಂತಾ ಕೂಗುತ್ತಾ ಸಾರ್ವಜನಿಕರಿಂದ ಹಣ ಪಡೆದುಕೊಂಡು ಅವರಿಗೆ  ಮಟಕಾ ಅಂಕಿ ಸಂಖ್ಯೆ ಚೀಟಿಗಳು ಬರೆದುಕೊಡುತ್ತಿದ್ದನ್ನು ಖಚಿತಪಡಿಸಿಕೊಂಡು  ದಾಳಿ ಮಾಡಿ ಹಿಡಿಯಲು ಮಟಕಾ ಅಂಕಿ ಸಂಖ್ಯೆ ಬರೆಯಿಸಲು ಬಂದ ಜನರು ಅಲ್ಲಿಂದ ಓಡಿ ಹೋದರು. ಮಟಕಾ ಅಂಕಿ ಸಂಖ್ಯೆ ಬರೆದುಕೊಳ್ಳುತ್ತಿದ್ದ ಮೂರು ಜನರಿಗೆ ನಾನು ಮತ್ತು ಸಿಬ್ಬಂದಿಯವರು ವಶಕ್ಕೆ ತೆಗೆದುಕೊಂಡು  ಅವನ ಹೆಸರು ವಿಳಾಸ ವಿಚಾರಿಸಲೂ  ಅವರಲ್ಲಿ ಒಬ್ಬನು ತನ್ನ ಹೆಸರು 1)ಅಕ್ಬರ ತಂದೆ  ಮಕಬೂಲಸಾಬ  ಮೂಲಗೆ ಸಾ: ಬಂದೇನವಾಜ ಮಜೀದ ಹತ್ತಿರ ಮಿಲ್ಲತ ನಗರ ಕಲಬುರಗಿ. ಇತನ ಅಂಗ ಶೋಧನೆ ಮಾಡಲಾಗಿ ಅವನ ಹತ್ತಿರ 1) ನಗದು ಹಣ 1240/- ರೂ. 2)ಒಂದು ಮಟಕಾ ಅಂಕಿ ಸಂಖ್ಯೆ ಬರೆದ ಚೀಟಿ ಅ:ಕಿ: 00 ರೂ.  3) ಒಂದು ಬಾಲಪೆನ್ನು ಅ:ಕಿ:00 ರೂ.. ದೊರೆತವು. 2)ರುಕ್ಕಮೋದ್ದಿನ ತಂದೆ ಮಶಾಕಸಾಬ  ಪಿಂಜಾರ ಸಾ: ಜಂಜಂ ಕಾಲನಿ ಕಲಬುರಗಿ ಅಂತಾ ತಿಳಿಸಿದನು. ಇತನ ಅಂಗ ಶೋಧನೆ ಮಾಡಲಾಗಿ ಅವನ ಹತ್ತಿರ 1) ನಗದು ಹಣ 1860/- ರೂ. 2)ಒಂದು ಮಟಕಾ ಅಂಕಿ ಸಂಖ್ಯೆ ಬರೆದ ಚೀಟಿ ಅ:ಕಿ: 00 ರೂ.  3) ಒಂದು ಬಾಲಪೆನ್ನು ಅ:ಕಿ:00 ರೂ.. ದೊರೆತವು. 3) ಮಹ್ಮದ ಸದ್ದಾಂ ತಂದೆ ಸತ್ತಾರಮಿಯ್ಯಾ  ಸಾ:  ನೂರಾನಿ ಮೊಹಲ್ಲಾ ಕಲಬುರಗಿ ಅಂತಾ ತಿಳಿಸಿದನು. ಇತನ ಅಂಗ ಶೋಧನೆ ಮಾಡಲಾಗಿ ಅವನ ಹತ್ತಿರ 1) ನಗದು ಹಣ 1780/- ರೂ. 2)ಒಂದು ಮಟಕಾ ಅಂಕಿ ಸಂಖ್ಯೆ ಬರೆದ ಚೀಟಿ ಅ:ಕಿ: 00 ರೂ.  3) ಒಂದು ಬಾಲಪೆನ್ನು ಅ:ಕಿ:00 ರೂ.. ದೊರೆತವು. ನಂತರ  ಅಕ್ಬರ, ರುಕ್ಕಮೋದ್ದಿನ, ಮಹ್ಮದ ಸದ್ದಾಂ ಮೂರು ಜನರಿಗೆ ಮಟಕಾ ಚೀಟಿಗಳು ಯಾರಿಗೆ ಒಯ್ದು ಕೊಡುತ್ತೀ  ಅಂತಾ ಕೇಳಲಾಗಿ ಮೂರು ಜನರು ಶಬ್ಬೀರ ಅಲಿ ತಂದೆ ರುಕ್ಕಮೋದ್ದಿನ  ಸಾ: ನೂರಾನಿ ಮೊಹಲ್ಲಾ ಕಲಬುರಗಿ ಇತನಿಗೆ ಒಯ್ದು ಕೊಡುವುದಾಗಿ ತಿಳಿಸಿದರು. ಈ ಮೇಲಿನ ಮುದ್ದೆ ಮಾಲನ್ನು ಜಪ್ತಿಮಾಡಿಕೊಂಡು ಸದರಿಯವರೊಂದಿಗೆ ಗ್ರಾಮೀಣ ಠಾಣೆಗೆ ಬಂದು ಠಾಣೆ ಗುನ್ನೆ ನಂ.161/2019 ಕಲಂ 78 (3) ಕೆ.ಪಿ.ಎಕ್ಟ ಪ್ರಕಾರ ಪ್ರಕರಣ ದಾಖಲಿಸಲಾಗಿದೆ
ಅಪಘಾತ ಪ್ರಕರಣ :
ಜೇವರಗಿ ಠಾಣೆ : ದಿನಾಂಕ; 11/06/2019 ರಂದು ಸಾಯಂಕಾಲ 7-30 ಪಿ.ಎಮ್ ಗಂಟೆಗೆ ಶ್ರೀ ಮಂಜುನಾಥ ತಂದೆ ಚಂದ್ರಾಮಪ್ಪ ಕೆರೂರ ಸಾ|| ಇಜೇರಿ ಗ್ರಾಮದಲ್ಲಿ ಊರ ಹೊರವಲಯದಲ್ಲಿ ಸಂಡಾಸಕ್ಕೆ ಹೋಗಿ ಮರಳಿ ಮನೆಯ ಕಡೆಗೆ ರೋಡಿನ ಪಕ್ಕದಲ್ಲಿ ಯಡ್ರಾಮಿ ಚಿಗರಳ್ಳಿ ರೋಡಿನ ಮೂಲಕ ನಡೆದುಕೊಂಡು ಇಜೇರಿ ಗ್ರಾಮದಲ್ಲಿ ಹೋಗುತ್ತಿದ್ದಾಗ ಎದುರಿನಿಂದ ಅಂದರೆ ಯಡ್ರಾಮಿ ಕಡೆಯಿಂದ ಒಂದು ಹಿರೋ ಹೊಂಡಾ ಶೈನ್ ಮೋಟಾರ ಸೈಕಲ್ ನೇದ್ದರ ಚಾಲಕನು ವಾಹನವನ್ನು ಅತಿ ವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದವನೆ ನನಗೆ ಎದುರಿಗೆ ಡಿಕ್ಕಿ ಪಡಿಸಿದನು. ಆಗ ನಾನು ಕೆಳಗಡೆ ಬಿದ್ದುದ್ದರಿಂದ ನನಗೆ ಎಡ ಕಿವಿಯ ಮೇಲೆ ತಲೆಗೆ ಹಾಗು ತಲೆಯ ಹಿಂದೆ ಭಾರಿ ಗುಪ್ತ ಪೆಟ್ಟಾಗಿರುತ್ತದೆ. ಮತ್ತು ಎಡ ಕೈ ಭುಜದ ಮೇಲೆ, ಬೆನ್ನಿಗೆ, ಬಲ ಕೈ ಮುಂಗೈಗೆ ಬಲ ಕಾಲಿನ ಮೊಳಕಾಲಿನ ಹಿಂದೆ ತರಚಿದ ರಕ್ತಘಾಯವಾಗಿರುತ್ತದೆ. ನಂತರ ಸ್ವಲ್ಪ ಮುಂದೆ ಹೋಗಿ ಅವನು ಮೋಟಾರ ಸೈಕಲ್ ಮೇಲಿಂದ ಬಿದ್ದಿರುತ್ತಾನೆ. ಆಗ ನಾನು ಮೋಟಾರ ಸೈಕಲ್ ನಂಬರ್ ನೋಡಲಾಗಿ ಕೆ.-32-.ಜೆ.-6282 ಇದ್ದು, ಚಾಲಕನ ಹೆಸರು ವಿಳಾಸ ವಿಚಾರಿಸಲು ವಿರೇಶ ತಂದೆ ಮಲ್ಲಪ್ಪ ಮದರಿ ಸಾ; ಜೈನಾಪೂರ ಎಂದು ಗೊತ್ತಾಗಿರುತ್ತದೆ. ನಂತರ ಅವನು ಮೋಟಾರ ಸೈಕಲ್ ಅಲ್ಲಿಯೇ ಬಿಟ್ಟು ಓಡಿಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ  ಠಾಣೆ ಗುನ್ನೆ ನಂ 121/2019 ಕಲಂ 279. 337 ಐಪಿಸಿ ನೇದ್ದರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಹಲ್ಲೆ ಪ್ರಕರಣಗಳು :
ಅಶೋಕ ನಗರ ಠಾಣೆ : ಶ್ರೀ ಕುಮಾರಗೌಡ ತಂದೆ ಶಿವಲಿಂಗಪ್ಪ ಪಾಟೀಲ್ ಸಾ|| ಅಫಜಲಪೂರ ರವರ ತಂದೆಯವರು ಕಳೆದ 7 ವರ್ಷಗಳ ಹಿಂದೆ ಮೃತಪಟ್ಟಿದ್ದು, ಸದ್ಯ ನಾನು ನಮ್ಮ ತಾಯಿ ಇಂದುಮತಿ ಇವರೊಂದಿಗೆ ವಾಸವಾಗಿರುತ್ತೇನೆ. ಊದನೂರ ಗ್ರಾಮದ ಸಾಗರ ತಂದೆ ಲಕ್ಷ್ಮಣ @ ಲಚ್ಚಪ್ಪ ರಾಠೋಡ ಇವನು ನನಗೆ ಸುಮಾರು 2 ವರ್ಷಗಳಿಂದ ಪರಿಚಯ ಇರುತ್ತಾನೆ. ಸಾಗರ ಇತನು  ತನ್ನ ಕೆಟ್ಟ ಚಟಗಳ ಸಲುವಾಗಿ ಬೇರೆಯವರ ಹತ್ತಿರ ಸಾಲ ಮಾಡಿಕೊಂಡಿದ್ದು, ಸಾಲಗಾರರು ಹಣ ಕೇಳುತ್ತಿರುವುದರಿಂದ ಅವನು ಒಂದು ತಿಂಗಳುಗಳಿಂದ ಊದನೂರ ಗ್ರಾಮಬಿಟ್ಟು ಬೇರೆ ಬೇರೆ ಕಡೆಗಳಲ್ಲಿ ತಿರುಗಾಡುತ್ತಿದ್ದು, ಅವನು ನನಗೆ ಅನೇಕ ಸಲ ಕೈಗಡ ರೂಪದಲ್ಲಿ ಹಣ ಕೊಡು ಅಂತ ಹೇಳಿದ್ದು ಅದಕ್ಕೆ ನಾನು ನನ್ನ ಹತ್ತಿರ ಹಣ ಇರುವುದಿಲ್ಲ ಅಂತ ಹೇಳುತ್ತಾ ಬಂದಿದ್ದು ಇರುತ್ತದೆ. ದಿನಾಂಕ:12.06.2019 ರಂದು ಬೆಳಿಗ್ಗೆ 10:00 ಗಂಟೆ ಸುಮಾರಿಗೆ ನಾನು ಕಲಬುರಗಿ ನಗರದ ಎಸ್.ಬಿ.. ಕಾಲೋನಿಯಲ್ಲಿರುವ ನಮ್ಮ ಮಾವನವರಾದ ಅಶೋಕ ಪಾಟೀಲ್ ಇವರ ಮನೆಯಲ್ಲಿ ಇದ್ದಾಗ ಸಾಗರ ಇತನು ನನಗೆ ಫೋನ್ ಮಾಡಿ ತಿಳಿಸಿದ್ದೆನೆಂದರೆ, ನಾನು ಈಗತಾನೇ ಹೈದ್ರಾಬಾದನಿಂದ ಕಲಬುರಗಿಗೆ ಬಂದಿರುತ್ತೇನೆ ನನಗೆ ಊರಿಗೆ ಹೋಗುವ ಸಲುವಾಗಿ ಹಣ ಇರುವುದಿಲ್ಲ ನೀನು ಕನಕ ತ್ರಿಶೂಲ್ ಲಾಡ್ಜ ಹತ್ತಿರ ಬಂದು ಸ್ವಲ್ಪ ಹಣ ಕೊಟ್ಟು ಹೋಗು ಅಂತ ತಿಳಿಸಿದ ಮೇರೆಗೆ ನಾನು ಬೆಳಿಗ್ಗೆ 11:00 ಗಂಟೆಗೆ ಕನಕ ತ್ರಿಶೂಲ್ ಲಾಡ್ಜಿಗೆ ಬಂದಿದ್ದು ಅಲ್ಲಿ ಸಾಗರ ಇತನು ತನ್ನ ಸಂಗಡ ಇತರೆ 4-5 ಜನರೊಂದಿಗೆ ನಿಂತಿದ್ದು, ಆಗ ಅವರು ನನಗೆ ಲಾಡ್ಜ ಒಳಗೆ ಒಂದು ರೂಮಿನಲ್ಲಿ ಕರೆದುಕೊಂಡು ಹೋಗಿ ಕೂಡಿ ಹಾಕಿ ಎಷ್ಟು ಹಣ ತಂದಿದ್ದಿಯಾ ಅಂತ ಕೇಳಿದನು. ಅದಕ್ಕೆ ನಾನು ನಿನಗೆ ಊರಿಗೆ ಹೋಗುವ ಸಲುವಾಗಿ ರೂ. 200/- ಗಳನ್ನು ತಂದಿರುತ್ತೇನೆ ಅಂತ ಅಂದಿದ್ದಕ್ಕೆ ಸಾಗರ ಇತನು ನನ್ನೊಂದಿಗೆ ಜಗಳಕ್ಕೆ ಬಿದ್ದು ಅವಾಚ್ಯ ಶಬ್ದಗಳಿಂದ ಬೈಯುತ್ತಾ ಭೋಸಡಿ ಮಗನಾ ಕೇವಲ 200/- ರೂಪಾಯಿ ಏತಕ್ಕೆ ಸಾಲುತ್ತವೆ ಅಂತ ಅನ್ನುತ್ತಾ ನನ್ನ ಎದೆಯ ಮೇಲಿನ ಅಂಗಿ ಹಿಡಿದು ಕೈಯಿಂದ ನನ್ನ ಎಡಗಡೆ ಕಿವಿಯ ಮೇಲೆ ಜೋರಾಗಿ ಹೊಡೆದಿದ್ದು ಇದರಿಂದ ಗುಪ್ತ ಪೆಟ್ಟಾಗಿದ್ದು ಇರುತ್ತದೆ. ಅವನೊಂದಿಗೆ ಇದ್ದ ಇತರೆ 4 ಜನರು ಕೂಡ ನನಗೆ ಅವಾಚ್ಯ ಶಬ್ದಗಳಿಂದ ಬೈಯುತ್ತಾ ಈ ಮಗನಿಗೆ ಸುಮ್ಮನೆ ಬಿಡಬಾರದು ಅವರು ಕೂಡ ಕೈಯಿಂದ ಹೊಡೆದಿದ್ದಲ್ಲದೆ ಕಾಲಿನಿಂದ ಒದ್ದಿರುತ್ತಾರೆ. ಅಷ್ಟರಲ್ಲಿ ಈ ವಿಷಯ ನಮ್ಮ ಮಾವ ಅಶೋಕ ಪಾಟೀಲ್ ಇವರಿಗೆ ಗೊತ್ತಾಗಿ ಅವರು ಬಂದ ನಂತರ ಸಾಗರ ಮತ್ತು ಅವನೊಂದಿಗೆ ಇದ್ದ ಇತರರು ಅಲ್ಲಿಂದ ಓಡಿ ಹೋದರು. ಎಲ್ಲರೂ ಕೂಡಿ ಓಡಿ ಹೋಗುವಾಗ ಈ ವಿಷಯದ ಬಗ್ಗೆ ಪೊಲೀಸರಿಗೆ ತಿಳಿಸಿದರೆ ನಿನಗೆ ಜೀವ ಸಹಿತ ಬಿಡುವುದಿಲ್ಲ ಅಂತ ನನಗೆ ಜೀವದ ಬೇದರಿಕೆ ಹಾಕಿ ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶೋಕ ನಗರ ಠಾಣೆ ಗುನ್ನೆ ನಂ. 46/2019 ಕಲಂ 143, 147, 342, 323, 504, 506 ಸಂಗಡ 149 .ಪಿ.ಸಿ. ಪ್ರಕಾರ ಪ್ರಕರಣ ದಾಖಲಿಸಲಾಗಿದೆ.
ಗ್ರಾಮೀಣ ಠಾಣೆ : ಶ್ರೀ ಉಮರ ತಂದೆ ಅಹ್ಮೆದ ಅಪುಲ ಸಾ:ಮಿಜಬಾ ನಗರ ಎಮ್‌ಎಸ್‌ಕೆ ಮಿಲ್‌ ಕಲಬುರಗಿ ರವರ ಮನೆಯ ಸಂಸಾರ ವಿಷಯದಲ್ಲಿ ನನ್ನ ಮತ್ತು ನನ್ನ ಹೇಂಡ್ತಿ ಮದ್ಯ ಜಗಳವಾಗಿದ್ದು ನಾನು ಅವಳನ್ನು ಬೈದು ಬೇದರಿಸಿದ್ದು ದಿನಾಂಕ 12/06/2019 ರಂದು ಮದ್ಯಾಹ್ನ ನಾನು ಮತ್ತು ನನ್ನ ಹೇಂಡ್ತಿ ಜಗಳವಾಡಿದ್ದರಿಂದ ನನ್ನ ಹೇಂಡ್ತಿ ಅವರ ತಂದೆಗೆ ಮತ್ತು ಅವರ ಅಣ್ಣಂದಿರರಿಗೆ ಪೋನ ಮಾಡಿ ನಾನು ಅವಳನ್ನು ಹೊಡೆದಿರುತ್ತೇನೆ ಅಂತಾ ಪೋನ ಮಾಡಿದ್ದರಿಂದ ಅವರು ನಾವು ಇರುವ ಮಿಜಬಾ ನಗರ ಮನೆಗೆ ಸಾಯಾಂಕಾಲ 1) ಇರ್ಮಾನ ತಂದೆ ಶಾಲಿಪೀರ 2) ಮುಶಾ ಸೇಹಿಲ್‌ ತಂದೆ ಶಾಲಿಪೀರ 3) ಆರೀಫ್‌ ತಂದೆ ಮಹ್ಮದ 4) ಅಚರಕಾರ್ದಿ ತಂದೆ ರಹೆಮಾನ ಸಾ: ಎಲ್ಲರೂ ಬೀದರ ಇವರು ಬಂದು ನನಗೆ ತಡೆದು ಏ ರಂಡಿ ಮಗನೇ ನಮ್ಮ ಅಕ್ಕನಿಗೆ ಹೊಡೆಯುತ್ತಿರಿ ಅಂತಾ ನಮ್ಮ ಮನೆಗೆ ಬಂದು ನನಗೆ ಕೈಯಿಂದ ಹೊಡೆಬಡೆ ಮಾಡಿ ನೇಲಕ್ಕೆ ಹಾಕಿ ಹೊಡೆದು ಬೆನ್ನಿಗೆ , ಎದೆಗೆ ಗುಪ್ತಗಾಯ ಮಾಡಿದ್ದು ಮತ್ತು ಚೆಪ್ಪಿಗೆ ಇಂಜೆಕ್ಷನ ಮಾಡಿದಂತೆ ಚುಚ್ಚಿ ಗಾಯಮಾಡಿದ್ದು ಮತ್ತು ಏ ರಂಡಿ ಮಗನೇ ಇನ್ನೊಮ್ಮೆ ನಮ್ಮ ಅಕ್ಕನಿಗೆ ಏನಾದರೂ ಕಿರಿ ಕಿರಿ ಮಾಡಿದರೆ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲಾ ಅಂತಾ ಜೀವದ ಬೇದರಿಕೆ ಹಾಕಿ  ನನ್ನ ಹೇಂಡ್ತಿಯನ್ನು ಅವರೊಂದಿಗೆ ಕರೆದುಕೊಂಡು ಹೋಗಿರುತ್ತಾರೆ ನನಗೆ ಅವಾಚ್ಯವಾಗಿ ಬೈದು ಹೊಡೆಬಡೆ ಮಾಡಿ ಜೀವದ ಭಯ ಹಾಕಿದವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆ  ಗುನ್ನೆ ನಂ 160/2019 ಕಲಂ 323 324 341 504 506 ಸಂ 34 ಐಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲಿಸಲಾಗಿದೆ.
ಅಸ್ವಾಭಾವಿಕ ಸಾವು ಪ್ರಕರಣ :
ಜೇವರಗಿ ಠಾಣೆ : ಶ್ರೀ ಮಹಿಬೂಬ್ ತಂದೆ ದಾವುಲ್ ಸಾಬ್ ನಾಶಿ ಸಾ; ಗುಡೂರ (ಎಸ್.) ತಾ; ಜೇವರಗಿ ಜಿ; ಕಲಬುರಗಿ ರವರು ದಿನಾಂಕ; 12/06/2019 ರಂದು ಬೆಳಿಗ್ಗೆ ನಾನು ಮತ್ತು ನನ್ನ ಹೆಂಡತಿ ಶ್ರೀಮತಿ ಅಮೀರಬೀ ಮತ್ತು ಮಗ ಶರ್ಮೋದ್ದಿನ್ ಕೂಡಿಕೊಂಡು ನಮ್ಮ ಹೊಲ ಸರ್ವೆ ನಂ: 67 ರಲ್ಲಿ ಕಸ ತೆಗೆಯುತ್ತಿದ್ದಾಗ ಸಾಯಂಕಾಲ 4-00 ಗಂಟೆಯ ಸುಮಾರಿಗೆ ಕಸದಲ್ಲಿ ಇದ್ದ ಹಾವು ಹರಿದಾಡುತ್ತ ಬಂದು ನನ್ನ ಹೆಂಡತಿ ಅಮೀರಬೀ ಇವಳ ಎಡ ಕಾಲಿನ ಹೆಬ್ಬರಳಿಗೆ ಕಚ್ಚಿದ್ದರಿಂದ ಕಾಲಿಗೆ ರಕ್ತ ಹರಿದು ಹಲ್ಲು ನಟ್ಟ ಗುರುತು ಕಂಡಿದ್ದು ಇದೆ. ನಾನು ನನ್ನ ಹೆಂಡತಿ ನೋಡಿ ನಂತರ ಊರಿಗೆ ಕರೆದುಕೊಂಡು ಬಂದು ಊರಲ್ಲಿ ಗೌಂಟಿ ಔಷಧಿ ಕೊಡಿಸಿರುತ್ತೇನೆ.ನನ್ನ ಹೆಂಡತಿ ರಾತ್ರಿ ಚನ್ನಾಗಿದ್ದಳು.ಇಂದು ದಿನಾಂಕ; 13/06/2019 ರಂದು ಬೆಳಿಗ್ಗೆ ಯಾಕೋ ಸುಸ್ತಾಗಿರುತ್ತದೆ. ಮಾತು ಸರಿಯಾಗಿ ಹೊರಡುತ್ತಿಲ್ಲ ಅಂತಾ ತಿಳಿಸಿದ್ದರಿಂದ ನಾನು ನನ್ನ ಹೆಂಡತಿ ಚಿಕಿತ್ಸೆ ಕುರಿತು ಜೇವರಗಿ ಆಸ್ಪತ್ರೆಗೆ ತೆಗೆದುಕೊಂಡು ಹೋಗುತ್ತಿದ್ದಾಗ ಮದ್ಯಾಹ್ನ 12-00 ಘಂಟೆಯ ಸುಮಾರಿಗೆ ಮಾರ್ಗ ಮದ್ಯದಲ್ಲಿ ಅಂದರೆ ವಿಜಯಪೂರ ಕ್ರಾಸ್ ಹತ್ತಿರ ಮೃತಪಟ್ಟಿರುತ್ತಾಳೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆ ಯು.ಡಿ.ಆರ್. ನಂ  10/2019 ಕಲಂ; 174 ಸಿ.ಆರ್.ಪಿ.ಸಿ ನೇದ್ದರ ಪ್ರಕಾರ ಪ್ರಕರಣ ಧಾಖಲಿಸಲಾಗಿದೆ.