POLICE BHAVAN KALABURAGI

POLICE BHAVAN KALABURAGI

08 June 2019

KALABURAGI DISTRICT REPORTED CRIMES

ಆಕ್ರಮವಾಗಿ ಮರಳು ಸಾಗಿಸುತ್ತಿದ್ದ ಟಿಪ್ಪರ ಜಪ್ತಿ :
ಅಫಜಲಪೂರ ಠಾಣೆ : ದಿನಾಂಕ 07-06-2019 ರಂದು ಮಣ್ಣೂರ ಗ್ರಾಮದ ಭೀಮಾ ನದಿಯಲ್ಲಿ ಟಿಪ್ಪರದಲ್ಲಿ ಕಳ್ಳತನದಿಂದ ಮರಳು ತುಂಬತ್ತಿದ್ದಾರೆ ಅಂತಾ ಖಚಿತ ಮಾಹಿತಿ ಬಂದ ಮೇರೆಗೆ, ಸಿ.ಪಿ. ಅಫಜಲಪೂರ ವೃತ್ತ  ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಮಣ್ಣೂರ ಗ್ರಾಮದಿಂದ ಶೇ಼ಷಗಿರಿ ಗ್ರಾಮಕ್ಕೆ ಹೋಗುವ ಶೇ಼ಷಗಿರಿ ಕ್ರಾಸ್ ಹತ್ತಿರ ಹೋಗುತ್ತಿದ್ದಂತೆ, ಒಂದು ಮರಳು ತುಂಬಿದ ಟಿಪ್ಪರ ನಮ್ಮ ಎದುರುಗಡೆ ಬರುತ್ತಿದ್ದು ಟಿಪ್ಪರನ್ನು ನಿಲ್ಲಿಸಿ  ಆಗ ನಾವು ಪಂಚರ ಸಮಕ್ಷಮ ಸದರಿ ಟಿಪ್ಪರನ್ನು ಚೆಕ್ಕ ಮಾಡಲು 1) ಭಾರತ ಬೆಂಜ್ ಕಂಪನಿಯ ಟಿಪ್ಪರ ಇದ್ದು ಅದರಲ್ಲಿ ಮರಳು ತುಂಬಿದ್ದು ಇತ್ತು ಮತ್ತು ಅದರ ನಂ ಕೆಎ-32 ಡಿ-3193, ಸದರಿ ಟಿಪ್ಪರ .ಕಿ 10,00,000/-ರೂ  ಇರಬಹುದು. ಸದರಿ ಟಿಪ್ಪರದಲ್ಲಿದ್ದ ಮರಳಿನ .ಕಿ 10.000/- ರೂ ಇರಬಹುದು. ಸದರಿ ಟಿಪ್ಪರ ಚಾಲಕನಿಗೆ ಹಿಡಿದಿದ್ದು ಹೆಸರು ವಿಳಾಸ ವಿಚಾರಿಸಲಾಗಿ ತನ್ನ ಹೆಸರು  ರಾಜಶೇಖರ ತಂದೆ ಕಲ್ಲಪ್ಪ ಭಾಸಗಿ ಸಾ|| ಮಣ್ಣೂರ ತಾ|| ಅಫಜಲಪೂರ ಅಂತ ತಿಳಿಸಿದ್ದು, ನಂತರ ಸದರಿ ಅಕ್ರಮವಾಗಿ ಮರಳು ತುಂಬಿದ ಟಿಪ್ಪರನ್ನು ಪಂಚರ ಸಮಕ್ಷಮ 08:10 ಎಎಮ್ ದಿಂದ 09:10 ಎಮ್ ವರೆಗೆ ಜಪ್ತಿ ಪಂಚನಾಮೆ ಮೂಲಕ ವಶಕ್ಕೆ ತಗೆದುಕೊಂಡು ಅಫಜಲಪೂರ ಠಾಣೆಗೆ ಬಂದು ಠಾಣೆ ಗುನ್ನೆ ನಂ 81/2019 ಕಲಂ 379 ಐಪಿಸಿ ಮತ್ತು ಕಲಂ 21(1) ಎಮ್ ಎಮ್ ಡಿ ಆರ್ ಆಕ್ಟ ಪ್ರಕಾರ ಪ್ರಕರಣ ದಾಖಲಿಸಲಾಗಿದೆ
ಮಟಜಾ ಜೂಜಾಟದಲ್ಲಿ ನಿರತವರ ಬಂಧನ :
ರಾಘವೇಂದ್ರ ನಗರ ಠಾಣೆ : ದಿನಾಂಕ 07.06.2019 ರಂದು ಸಾಯಂಕಾಲ ರಾಘವೇಂದ್ರ ನಗರ  ಠಾಣಾ ವ್ಯಾಪ್ತಿಯ ಕೊಂಡೇದಗಲ್ಲಿಯಲ್ಲಿ ರಸ್ತೆಯ ಪಕ್ಕದಲ್ಲಿ ಇಬ್ಬರು ವ್ಯಕ್ತಿಗಳು ಕೂಳಿತುಕೊಂಡು ರಸ್ತೆಯ ಮೇಲೆ ಹೋಗಿ ಬರುವವರಿಗೆ ಇದು ಬಾಂಬೆ ಮಟಕಾ ಇದೆ 1 ರೂಪಾಯಿಗೆ 80 ರುಪಾಯಿ ಬರುತ್ತದೆ ಅಂತ ಹೇಳುತ್ತಾ ಸಾರ್ವಜನಿಕರಿಂದ ಹಣ ಪಟೆದುಕೊಂಡು ಮಟಕಾ ಚೀಟಿ ಬರೆದುಕೂಡುತ್ತಿದ್ದಾರೆ ಅಂತ ಖಚಿತ ಬಾತ್ಮಿ ಬಂದ ಮೇರೆಗೆ ಪಿ.ಐ. ರಾಘವೇಂದ್ರ ನಗರ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಕೊಂಡೇದ ಗಲ್ಲಿಯಲ್ಲಿ ಹೋಗಿ ಮರೆಯಲ್ಲಿ ನಿಂತುಕೊಂಡು ನೋಡಲಾಗಿ ಕೊಂಡೇದಗಲ್ಲಿಯ ರಸ್ತೆಯ ಪಕ್ಕದಲ್ಲಿ ಇಬ್ಬರು  ವ್ಯಕ್ತಿಗಳು ಕುಳಿತುಕೊಂಡು ರಸ್ತೆಯ ಮೇಲೆ ಹೋಗಿ ಬರುವವರಿಗೆ ಇದು ಬಾಂಬೆ ಮಟಕಾ ಇದೆ 1 ರೂಪಾಯಿಗೆ 80 ರುಪಾಯಿ ಬರುತ್ತದೆ ಅಂತ ಹೇಳುತ್ತಾ ಸಾರ್ವಜನಿಕರಿಂದ ಹಣ ಪಟೆದುಕೊಂಡು ಮಟಕಾ ಚೀಟಿ ಬರೆದುಕೂಡುತ್ತಿರುವ ಬಗ್ಗೆ ಖಚಿತ ಪಡಿಸಿಕೊಂಡು ದಾಳಿ ಮಾಡಲು, ಮಟಕಾ ಬರೆಯಿಸಲು ಬಂದವರು ಓಡಿ ಹೋಗಿದ್ದು ಮಟಕಾ ಚೀಟಿಯನ್ನು ಬರೆದುಕೊಳ್ಳುತ್ತಿದ್ದವರನ್ನು ಹಿಡಿದುಕೊಂಡು ಅವರ ಹೆಸರು ವಿಳಾಸ ವಿಚಾರಿಸಲು ಸದರಿಯವರು ತಮ್ಮ ಹೆಸರು 1) ಪ್ರಭುಲಿಂಗ ತಂದೆ ಶಿವಪ್ಪ ಕಣ್ಣಿ ಸಾ|| ದೇವಿನಗರ ಕಲಬುರಗಿ ಸದರಿಯವನ ಹತ್ತಿರ 1) ನಗದು ಹಣ 700/-ರೂ 2) 1 ಮಟಕಾ ಬರೇದ ಚೀಟಿ ಅ:ಕಿ: 00 ಮತ್ತು 3) ಒಂದು ಬಾಲ ಪೇನ್ ಅ:ಕಿ: 00 ದೊರೆತಿದ್ದು ಇನ್ನೂಬ್ಬನಿಗೆ ವಿಚಾರಿಸಲಾಗಿ ತನ್ನ ಹೇಸರು 2) ಶರಣು ತಂದೆ ಮಾಳಪ್ಪ ಪೂಜಾರಿ ಸಾ|| ಬೀಮಳ್ಳಿ ತಾ|| ಜಿ|| ಕಲಬುರಗಿ ಅಂತ ತಿಳಿಸಿದ್ದು ನಂತರ ಸದರಿಯವನ ಅಂಗಶೋದನೆ ಮಾಡಲು ಸದರಿಯವನ ಹತ್ತಿರ 1) ನಗದು ಹಣ 610/-ರೂ 2) 1 ಮಟಕಾ ಬರೇದ ಚೀಟಿ ಅ:ಕಿ: 00 ಮತ್ತು 3) ಒಂದು ಬಾಲ ಪೇನ್ ಅ:ಕಿ: 00 ದೊರೆತಿದ್ದು ಸದರಿಯವುಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು ಪಂಚರು ಸಹಿ ಮಾಡಿದ ಚೀಟಿಯನ್ನು ಅಂಟಿಸಿಕೊಂಡು ಮುಂದಿನ ಪುರಾವೇಗಾಗಿ ನನ್ನ ತಾಬಾಕ್ಕೆ ತೆಗೆದುಕೊಂಡು ಆರೋಪಿತರೋಂದಿಗೆ ರಾಘವೇಂದ್ರ ನಗರ ಠಾಣೆಗೆ ಬಂದು ಠಾಣೆ  ಗುನ್ನೆ ನಂ.61/2019 ಕಲಂ:78(3) ಕೆ.ಪಿ ಆಕ್ಟ್‌ ಪ್ರಕಾರ ಪ್ರಕರಣ ದಾಖಲಿಸಲಾಗಿದೆ.
ಅಪಘಾತ ಪ್ರಕರಣ :
ಸಂಚಾರಿ ಠಾಣೆ 01 : ದಿನಾಂಕ 07.06.2019 ರಂದು ರಾತ್ರಿ ಮೃತ ಶರಣಪ್ಪ ಮತ್ತು ದತ್ತು ಇಬ್ಬರೂ ಶರಣಪ್ಪ ಇತನು ಚಲಾಯಿಸುತ್ತಿರುವ ಶ್ರೀಗುರು ಕಾಲೇಜಗೆ ಸಂಬಂದಿಸಿದ ಟ್ರ್ಯಾಕ್ಟರ ನಂ ಕೆಎ-32/ಬಿ-0634 ನೇದ್ದರಲ್ಲಿ ಶ್ರೀಗುರು ಕಾಲೇಜನಲ್ಲಿ ಕೆಲಸ ಮಾಡುವ ಖಣದಾಳ ಗ್ರಾಮದ ಜನರನ್ನು ಕೂಡಿಸಿಕೊಂಡು ಕಾಲೇಜನಿಂದ ಖಣದಾಳ ಗ್ರಾಮಕ್ಕೆ ಹೋಗಿ ಅವರನ್ನು ಬಿಟ್ಟು ವಾಪಸ್ಸ ಕಾಲೇಜ ಕಡೆಗೆ ಹೋಗುವ ಕುರಿತು ಟ್ರ್ಯಾಕ್ಟರ ಚಾಲಕ ಮೃತ ಶರಣಪ್ಪ ಇತನು ಟ್ರ್ಯಾಕ್ಟರನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ಖಣದಾಳ ಗ್ರಾಮದ ಹತ್ತೀರ ಬರುವ ಮಲ್ಲಿನಾಥ ಹುಗಾರ ಇವರ ಜಮೀನಿನ ಹತ್ತೀರ ರೋಡ ಮೇಲೆ ರೋಡ ತೆಗ್ಗಿನಲ್ಲಿ ಟ್ರ್ಯಾಕ್ಟರ ಚಲಾಯಿಸಿ ಟ್ರ್ಯಾಕ್ಟರ ಪಲ್ಟಿ ಮಾಡಿ ಅಪಘಾತ ಮಾಡಿ ದತ್ತು ಇತನಿಗೆ ಭಾರಿಗಾಯಗೊಳಿಸಿದ್ದರಿಂದ ಆತನು ಸ್ಥಳದಲ್ಲಿಯೇ ಮೃತಪಟಿದ್ದು ಮತ್ತು ಟ್ರ್ಯಾಕ್ಟರ ಚಾಲಕ ಶರಣಪ್ಪ ಇತನು ಕೂಡಾ ಭಾರಿಗಾಯ ಹೊಂದಿ ಸ್ಥಳದಲ್ಲಿಯೇ ಮೃತಪಟಿದ್ದು ಇರುತ್ತದೆ. ಅಂತಾ ಶ್ರೀ ಶಿವಶರಣ ತಂದೆ ಹಣಮಂತರಾಯ ಹೂಗಾರ ಸಾ: ಕೋಳಕೂರ ಗ್ರಾಮ ತಾ: ಜೇವಗರಗಿ ಜಿ: ಕಲಬುರಗಿ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆ 01 ರಲ್ಲಿ ಗುನ್ನೆ ನಂ 67/2019 ಕಲಂ 279, 304 (ಎ) ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಲಾಗಿದೆ.
ಹಲ್ಲೆ ಪ್ರಕರಣ :
ಚೌಕ ಠಾಣೆ : ಶ್ರೀಮತಿ ರೇಣುಕಾ ಗಂಡ ಮಲ್ಲಿಕಾರ್ಜುನ ಮುಸ್ತಾರಿ @ ಸ್ವಂತ ಸಾ:ಸ್ಮಶಾನ ಹತ್ತಿರ ಸಂಜೀವ ನಗರ ಕಲಬುರಗಿ  ರವರ ಗಂಡ ಮಲ್ಲಿಕಾರ್ಜುನ ಇವರೂ ತೀರಿಕೊಂಡಿರುತ್ತಾರೆ. ನನಗೆ ಒಟ್ಟು 2 ಜನ ಗಂಡು ಮಕ್ಕಳು ಒಬ್ಬಳೆ ಹೆಣ್ಣು ಮಗಳು ಇದ್ದು, ಹೆಣ್ಣು ಮಗಳಿಗೆ ಮದುವೆ ಮಾಡಿಕೊಟ್ಟಿರುತ್ತೇನೆ. ಅವಳು ತನ್ನ ಗಂಡನ ಮನೆ ಕಮಲಾಪೂರದಲ್ಲಿ ಇರುತ್ತಾಳೆ. 2 ಗಂಡು ಮಕ್ಕಳು ಅದರಲ್ಲಿ ಹಿರಿಯ ಮಗ ಗೌತಮ 2ನೇ ಮಗ ರಾಹುಲ ಇವನು ಪಿಯುಸಿ ದ್ವಿತೀಯ ವರ್ಷದಲ್ಲಿ ಫೇಲಾಗಿದ್ದು ಅವನು ಸಹ ಆಟೋ ನಡೆಸಿಕೊಂಡಿರುತ್ತಾನೆ. ನನ್ನ ಹಿರಿಯ ಮಗ ಗೌತಮ ಇತನು ಕಳೆದ 8-10 ತಿಂಗಳ ಹಿಂದೆ ನಮ್ಮ ಓಣಿಯಲ್ಲಿಯೇ ಇರುವ ಶಿವಶರಣಪ್ಪಾ ಮುಡಬಿ ಇವರ ಮಗಳಾದ ಶೃತಿ ಇವಳೊಂದಿಗೆ ಓಡಿ ಹೋಗಿ ರಜಿಸ್ಟರ ಮದುವೆ ಮಾಡಿಕೊಂಡಿದ್ದು ನಂತರ ನಾನು ಸಮಾಜದ ಮುಖಂಡರಿಗೆ ವಿನಂತಿಸಿಕೊಂಡು ನನ್ನ ಮಗ ಗೌತಮ ಇತನಿಗೆ ಸೊಸೆ ಶೃತಿಗೆ ಮನೆಗೆ ಕರೆಯಿಸಿಕೊಂಡು ಸಮಾಜದಲ್ಲಿ ಮತ್ತೊಮ್ಮೆ ಮದುವೆ ಮಾಡಿಕೊಂಡಿದ್ದು ಇರುತ್ತದೆ. ಸದ್ಯ ನನ್ನ ಮಗ ಗೌತಮ ಮತ್ತು ಸೊಸೆ ಶೃತಿ ಇವರೊಂದಿಗೆ ಇಬ್ಬರೂ ಮಕ್ಕಳೊಂದಿಗೆ ನಮ್ಮ ಮನೆಯಲ್ಲಿಯೇ ಇರುತ್ತೇನೆ. ನನ್ನ ಸೊಸೆಯ ಅಣ್ಣ ಈಶ್ವರ ತಂದೆ ಶಿವಶರಣಪ್ಪಾ ಮುಡಬಿ ಇತನು ಅನಾವಶ್ಯಕವಾಗಿ ತನ್ನ ತಂಗಿಯೊಂದಿಗೆ ನನ್ನ ಮಗ ಗೌತಮ ಇತನೂ ಏನಾದರೂ ಅವಳಿಗೆ ಹೇಳಿದರೆ ಅವಳು ತನ್ನ ಅಣ್ಣ ಈಶ್ವರ ಇತನಿಗೆ ಕರೆಯಿಸಿ ಜಗಳ ಮಾಡುವುದು ಅವನಿಗೆ ಕರೆಯಿಸಿ ಅವನು ನನಗೆ ಹಾಗೂ ನನ್ನ 2 ಮಕ್ಕಳಿಗೆ ಈಶ್ವರ ಇತನು ಧಮ್ಮಕಿ ಹಾಕುತ್ತಾ ಬಂದಿದ್ದು, ಅಲ್ಲದೇ ನನಗೆ ಮತ್ತು ನನ್ನ ಮಗನಿಗೆ ತೊಂದರೆ ಕೊಟ್ಟರೂ ಸಹ ನಾನು ಇಲ್ಲಿಯವರೆಗೆ ಸಹನೆ ಮಾಡಿಕೊಂಡು ಬಂದಿರುತ್ತೇನೆ. ದಿಃ 06.06.2019 ರಂದು ಸಾಯಂಕಾಲ ನಾನು ನನ್ನ ಮನೆಯಲ್ಲಿ  ಇದ್ದಾಗ ನನ್ನ ಮಗ ಗೌತಮ ಹಾಗೂ ಸೊಸೆ ಶೃತಿ ಇಬ್ಬರೂ ಕೂಡಿಕೊಂಡು ಮನೆಯಲ್ಲಿಯೇ ತನ್ನ ಗಂಡನೊಂದಿಗೆ ತಕರಾರು ಮಾಡುತ್ತಿದ್ದಾಗ ನಾನು ನನ್ನ ಸೊಸೆ ಶೃತಿಗೆ ನೀನು ಯ್ಯಾಕೆ ಗಂಡನೊಂದಿಗೆ ಅನಾವಶಕವಾಗಿ ಜಗಳ ತೆಗೆಯುತ್ತಿದ್ದೀ ನಿನಗೆ ತಿಳಿಯುವುದಿಲ್ಲ ಏನು ಅಂತ ಹೇಳಿದಕ್ಕೆ ನನ್ನ ಸೊಸೆ ಶೃತಿ ಇವಳು ನನ್ನೊಂದಿಗೆ ಮತ್ತು ನನ್ನ ಮಗನೊಂದಿಗೆ ತಕರಾರು ಮಾಡಿ ನಿಮ್ಮಿಬ್ಬರದು ಬಹಳ ಆಗಿದೆ ನನ್ನ ಅಣ್ಣನಿಗೆ ಕರೆಯಿಸಿ ನಿನಗೆ ಮತ್ತು ನನ್ನ ಗಂಡನಿಗೆ ಸರಿಯಾಗಿ ಮಾಡಿಸ್ತಿನಿ ಅಂತ ಹೇಳಿ ಕೂಡಲೇ ತನ್ನ ಅಣ್ಣ ಈಶ್ವರ ಇತನಿಗೆ ಫೋನ ಮಾಡಲು ಅವನು ಅಷ್ಟರಲ್ಲಿಯೇ ಈಶ್ವರ ತಂದೆ ಶಿವಶರಣಪ್ಪಾ ಮುಡಬಿ ಇತನು ನನ್ನ ಮನೆಯಲ್ಲಿ ಬಂದವನೇ  ಏನೇ ರಂಡಿ ನಿನ್ನವನ್ ತುಲ್ಲು ನಿಮ್ಮದು ಬಹಳಾ ಆಗಿದೇ ಅಂತ ಅವಾಚ್ಯವಾಗಿ ಬೈಯ್ಯುತಾ ನನ್ನ ತಲೆಯ ಕೂದಲು ಹಿಡಿದು ಎಳೆದಾಡಿ ಕೈಯಿಂದ ಮುಷ್ಠಿ ಮಾಡಿ ಮುಖದ ಮೇಲೆ, ತುಟಿಯ ಮೇಲೆ ಹೊಡೆದು ರಕ್ತಗಾಯ ಮಾಡಿದನು. ಮತ್ತು ಕೂದಲು ಹಿಡಿದು ತಲೆಗೆ ಗೋಡೆಗೆ ಹೊಡೆದಿದ್ದು ಗುಪ್ತಗಾಯ ಪಡಿಸಿದ್ದು, ಕೆಳಗಡೆ ಬಿದ್ದಾಗಲು ಹೊಟ್ಟೆಯಲ್ಲಿ ಕಾಲಿನಿಂದ ಒದ್ದು ಗುಪ್ತಗಾಯ ಪಡಿಸಿದನು. ಮತ್ತು ತನ್ನ ಹತ್ತಿರ ಇದ್ದ ಚಾಕು ತೆಗೆದು ನನಗೆ ಹೊಟ್ಟೆಗೆ ಹೊಡೆಯಲು ಬಂದಾಗ ತಪ್ಪಿಸಿಕೊಂಡಿದ್ದು ಆ ಚಾಕುದ ಎಟು ಎಡಗೈ ಮೇಲೆ ಹತ್ತಿ ತೆರಚಿದ ರಕ್ತಗಾಯವಾಯಿತು. ಇದನ್ನು ಕಂಡು ಅಲ್ಲೆ ಪಕ್ಕದ ಮನೆಯಲ್ಲಯೇ ಇದ್ದ ನನ್ನ ನೆಗೇಣಿ ಕಸ್ತೂರಿಬಾಯಿ ಗಂಡ ಕಲ್ಯಾಣಿ ಹಾಗೂ ಮಗ ಗೌತಮ ಇವರೂ ಬಂದು ಜಗಳ ಬಿಡಿಸಿದ್ದು ನಾನು ಅವರಿಂದ ತಪ್ಪಿಸಿಕೊಂಡು ಓಡಿ ಹೋಗಿ ನನಗೆ ಆದ ಗಾಯದಿಂದ ಉಪಚಾರಕ್ಕಾಗಿ ಆಸ್ಪತ್ರೆಗೆ ದಾಖಲಾಗಿರುತ್ತೇನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚೌಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

07 June 2019

KALABURAGI DISTRICT REPORTED CRIMES

ಆಕ್ರಮವಾಗಿ ಮರಳು ಸಾಗಿಸುತ್ತಿದ್ದ ಟ್ರ್ಯಾಕ್ಟರಗಳ ಜಪ್ತಿ  :
ಅಫಜಲಪೂರ ಠಾಣೆ : ದಿನಾಂಕ 06-06-2019 ರಂದು ಬೆಳಗಿನ ಜಾವ ಹಿಂಚಗೇರಾ ಗ್ರಾಮದ ಭೀಮಾ ನದಿಯಿಂದ ಟ್ಯಾಕ್ಟರದಲ್ಲಿ ಕಳ್ಳತನದಿಂದ ಮರಳು ಸಾಗಾಣಿಕೆ ಮಾಡುತ್ತಿದ್ದಾರೆ ಎಂದು ಖಚಿತ ಮಾಹಿತಿ ಬಂದ ಮೇರೆಗೆ ಸಿಪಿಐ ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಹಿಂಚಗೇರಾ ಗ್ರಾಮದ ಭೀಮಾನದಿಯ ಹತ್ತಿರ ಹೋಗಿ ಟಾರ್ಚ ಬೆಳಕಿನಲ್ಲಿ ನೊಡಲಾಗಿ ನದಿಯಲ್ಲಿ ಟ್ಯಾಕ್ಟರದಲ್ಲಿ ಮರಳು ತುಂಬುತ್ತಿದ್ದರು. ಆಗ ನಾವು ಟ್ಯಾಕ್ಟರ ಹತ್ತಿರ ಹೋಗುತ್ತಿದ್ದಂತೆ ಟ್ಯಾಕ್ಟರ ಚಾಲಕ ನಮ್ಮನ್ನು ನೋಡಿ ಟ್ಯಾಕ್ಟರ ಟ್ರೈಲಿಯ ಡಂಪ ಎತ್ತಿ ಓಡಿಹೊದನು. ನಾವು ಟ್ಯಾಕ್ಟರ ಹತ್ತಿರ ಹೋಗುವಷ್ಟರಲ್ಲಿ ಟ್ಯಾಕ್ಟರದಲ್ಲಿದ್ದ ಮರಳು ನದಿಯಲ್ಲಿ ಕೆಳಗೆ ಬಿದ್ದಿತು. ನಂತರ ನಾವು ಪಂಚರ ಸಮಕ್ಷಮ ಸದರಿ ಟ್ರ್ಯಾಕ್ಟರನ್ನು ಚೆಕ್ಕ ಮಾಡಲು ಜಾನಡಿಯರ ಕಂಪನಿಯ ಟ್ಯಾಕ್ಟರ ಇದ್ದು ಪಾಸಿಂಗ್ ನಂಬರ ಕೆಎ-35 ಎಮ್-7684 ಸದರಿ ಟ್ಯಾಕ್ಟರ CH NO :- PY5310S037904 ENG NO:- PY3029D195662 ಅಂತಾ ಇರುತ್ತದೆ. ಸದರಿ ಟ್ಯಾಕ್ಟರ ಟ್ರೈಲಿಗೆ ಎಲ್ಲಿಯು ನಂಬರ ಇದ್ದಿರುವುದಿಲ್ಲ. ಸದರಿ ಟ್ರ್ಯಾಕ್ಟರ .ಕಿ 5,00,000/-ರೂ  ಇರಬಹುದು. ನಂತರ ಸದರಿ ಟ್ರ್ಯಾಕ್ಟರನ್ನು ಜಪ್ತಿ ಪಂಚನಾಮೆ ಮೂಲಕ ವಶಕ್ಕೆ ತಗೆದುಕೊಂಡು ಅಫಜಲಪೂರ ಠಾಣೆಗೆ ಬಂದು ಠಾಣಾ ಗುನ್ನೆ ನಂ 79/2019 ಕಲಂ 379 ಐಪಿಸಿ ಮತ್ತು 21(1) ಎಮ್ ಎಮ್ ಡಿ ಆರ್ ಆಕ್ಟ ಪ್ರಕಾರ ಪ್ರಕರಣ ದಾಖಲಿಸಲಾಗಿದೆ.
ಅಫಜಲಪೂರ ಠಾಣೆ : ದಿನಾಂಕ 06-06-2019 ರಂದು ಆಳಂದ  ಉಪ ವಿಭಾಗ ವ್ಯಾಪ್ತಿಯಲ್ಲಿ ಬರುವ ಅಫಜಲಪೂರ ಪೊಲೀಸ್ ಠಾಣೆಗೆ ಬೇಟಿ ನೀಡುವ ಕುರಿತು ಹೋಗುತ್ತಿದ್ದಾಗ ಹಿಂಚಗೇರಾ ಗ್ರಾಮದ ಭೀಮಾ ನದಿಯಲ್ಲಿ ಅನದಿಕೃತವಾಗಿ ಟ್ರ್ಯಾಕ್ಟರದಲ್ಲಿ ಮರಳು ತುಂಬುತ್ತಿದ್ದಾರೆ ಎಂದು ಖಚಿತ ಮಾಹಿತಿ ಬಂದ ಮೇರೆಗೆ ಡಿ.ವಾಯ್.ಎಸ್.ಪಿ  ಆಳಮದ ರವರು ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಹಿಂಚಗೇರಾ ಗ್ರಾಮದ ಭೀಮಾ ನದಿಯ ಹತ್ತಿರ ಹೋಗುತ್ತಿದ್ದಾಗ ಭೀಮಾ ನದಿಯಲ್ಲಿ  ಒಂದು ಟ್ರ್ಯಾಕ್ಟರದಲ್ಲಿ ಮರಳು ತುಂಬುತ್ತಿದ್ದರು, ನಾವು ಟ್ಯಾಕ್ಟರ ಹತ್ತಿರ ಹೋಗುವಷ್ಟರಲ್ಲಿ ಟ್ಯಾಕ್ಟರ ಚಾಲಕನು ನಮ್ಮ ಪೊಲೀಸ್ ಜೀಪನ್ನು ನೋಡಿ ತನ್ನ ಟ್ರಾಕ್ಟರ ಟ್ರೈಲಿಯ ಡಂಪ ಎತ್ತಿ ಓಡಿ ಹೋದನು. ನಾವು ನದಿಯಲ್ಲಿ ನಡೆದುಕೊಂಡು ಟ್ಯಾಕ್ಟರ ಹತ್ತಿರ ಹೋಗುವಷ್ಟರಲ್ಲಿ ಟ್ಯಾಕ್ಟರದಲ್ಲಿದ್ದ ಮರಳು ಡಂಪ ಆಗಿ ಕೆಳಗೆ ನದಿಯಲ್ಲಿ ಬಿದ್ದಿತು. ನಂತರ ನಾವು ಪಂಚರ ಸಮಕ್ಷಮ ಸದರಿ ಟ್ಯಾಕ್ಟರ ಚೆಕ್ ಮಾಡಿ ನೋಡಲು ಜಾನಡಿಯರ ಕಂಪನಿಯ ಟ್ಯಾಕ್ಟರ ಇದ್ದು ಅದರ ಪಾಸಿಂಗ್ ನಬರ ಇರಲಿಲ್ಲ. ಅದರ ಚೆಸ್ಸಿ ನಂ PY5310S073977 ಇಂಜೆನ್ ನಂ PY3029D285287 ಅಂತ ಇರುತ್ತದೆ. ಟ್ಯಾಕ್ಟರ ಟ್ರೈಲಿಗೆ ನಂಬರ ಹಾಕಿರುವುದಿಲ್ಲ. ಟ್ರ್ಯಾಕ್ಟರ ಅಂದಾಜು ಕಿಮ್ಮತ್ತು 500000/- ರೂ ಆಗಬಹುದು. ನಂತರ ಸದರಿ ಟ್ರ್ಯಾಕ್ಟರನ್ನು ಜಪ್ತಿ ಮಾಡಿಕೊಂಡು ಅಫಜಲಪೂರ ಠಾಣೆಗೆ ಬಂದು ಠಾಣಾ  ಗುನ್ನೆ ನಂ 80/2019 ಕಲಂ 379 ಐಪಿಸಿ ಮತ್ತು 21(1) ಎಮ್.ಎಮ್.ಡಿ.ಆರ್ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಆಕ್ರಮವಾಗಿ ಮಧ್ಯ ಮಾರಾಟ ಮಾಡುತ್ತಿದ್ದವನ ಬಂಧನ :
ರಾಘವೇಂದ್ರ ನಗರ ಠಾಣೆ : ದಿನಾಂಕ 06.06.2019 ರಂದು ಬೆಳ್ಳಿಗ್ಗೆ ರಾಘವೇಂದ್ರ ನಗರ  ಠಾಣಾ ವ್ಯಾಪ್ತಿಯ ಕುಂಬಾರ ಗಲ್ಲಿಯ ನಾಗರ ಕಟ್ಟಿ ಹತ್ತಿರ ಒಬ್ಬ ವ್ಯಕ್ತಿ ಸರಕಾರದ ಯಾವುದೆ ಪರವಾನಿಗೆ ಇಲ್ಲದೆ ಅನಧೀಕೃತವಾಗಿ ಮಧ್ಯ ಮಾರಾಟ ಮಾಡುತ್ತಿದ್ದಾರೆ ಅಂತ ಖಚಿತ ಬಾತ್ಮಿ ಮೇರೆಗೆ ಪಿ.ಐ. ರಾಘವೇಂದ್ರ ನಗರ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ  ಬಾತ್ಮಿಯಂತೆ ಸ್ಥಳಕ್ಕೆ ಹೋಗಿ ನೋಡಲು ಕುಂಬಾರ ಗಲ್ಲಿಯ ನಾಗರ ಕಟ್ಟಿ ಹತ್ತಿರ ಪಾನ ಶಾಪನಲ್ಲಿ ಉತ್ತರ ಮುಖ ಮಾಡಿಕೊಂಡಿರುವ ಒಂದು ಪಾನ ಶಾಪನಲ್ಲಿ ಒಬ್ಬ ವ್ಯಕ್ತಿ ಪ್ಲಾಸ್ಟಿಕ ಚೀಲದಲ್ಲಿ ಮಧ್ಯದ ಟೇಟ್ರಾ ಪಾಕೇಟಗಳನ್ನು ಇಟ್ಟುಕೊಂಡು ಮಧ್ಯ ಮಾರಾಟ ಮಾಡುತ್ತಿರುವದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಮಧ್ಯ ಮಾರಾಟ ಮಾಡುತ್ತಿದ್ದವರನ್ನು ವಶಕ್ಕೆ ಪಡೆದುಕೊಂಡು ಅವನ ಹೆಸರು ವಿಳಾಸ ವಿಚಾರಿಸಲು ಸದರಿಯವನು ತನ್ನ ಹೆಸರು ಆನಂದ ತಂದೆ ಸುಭಾಷ ಗುತ್ತೇದಾರ ಸಾಃ ಕುಂಬಾರ ಗಲ್ಲಿಯ ನಾಗರ ಕಟ್ಟಿ ಬ್ರಹ್ಮಪೂರ ಕಲಬುರಗಿ ಅಂತ ತಿಳಿಸಿದ್ದು, ಸದರಿಯವನ ಅಂಗಶೋಧನೆ ಮಾಡಲು ಸದರಿಯವನ ಹತ್ತಿರ ನಗದು ಹಣ 200/- ರೂ ದೊರೆತಿದ್ದು ಸ್ಥಳದಲ್ಲಿ ಪರಿಶೀಲಿಸಿ ನೋಡಲು ಮಾರಾಟ ಕುರಿತು ಇಟ್ಟಿದ್ದ  90 ಎಮ್.ಎಲ್.ದ ಓರಿಜಿನಲ್ ಚ್ವಾಯಿಸ್ ವಿಸ್ಕಿ 125 ಟೇಟ್ರಾ ಪಾಕೇಟಗಳು ಸಿಕ್ಕಿದ್ದು  ಒಂದು ಟೇಟ್ರಾ ಪಾಕೇಟ ಬೇಲೆ 30.ರೂ 32 ಪೈಸೆ. ಇದ್ದು ನಂತರ ಸದರಿಯವನಿಗೆ ಮಧ್ಯ ಮಾರಾಟ ಮಾಡುತ್ತಿರುವ ಬಗ್ಗೆ ಲೈಸನ್ಸ ಹಾಗೂ ಎಲ್ಲಿಂದ ಯಾವಾಗ ತಂದು ಮಾರಾಟ ಮಾಡುತ್ತಿರುವೆ ಅಂತ ವಿಚಾರಿಸಿದಾಗ ಸದರಿಯವನು ತಿಳಿಸಿದೆನೆಂದರೆ ನನ್ನ ಹತ್ತಿರ ಯಾವುದೇ ಲೈಸನ್ಸ ಪತ್ರ ಇರುವದಿಲ್ಲ. ನಾನು ಕಲಬುರಗಿ ನಗರದಲ್ಲಿರುವ ಬೇರೆ ಬೇರೆ ವೈನ್ಸ್ ಶಾಫಗಳಿಂದ ಕುಡಿಯುವದಕ್ಕೆಂದು ತೆಗೆದುಕೊಂಡು ಬಂದು ಸಂಗ್ರಹ ಮಾಡಿ ಇಟ್ಟಿದ್ದು ಇಂದು ಬೆಳಿಗ್ಗೆ 6.30 ಗಂಟೆಯಿಂದ ಮಾರಾಟ ಮಾಡುವದಕ್ಕೆ ಪ್ರಾರಂಬಿಸಿರುತ್ತೇನೆ. ಅದರಲ್ಲಿ  ಕೆಲವು ಪಾಕೀಟಗಳು ಮಾರಾಟ ಮಾಡಿದ್ದು ಆ ಮಾರಾಟ ಮಾಡಿದರಿಂದ 200 ನಗದು ಹಣ ಬಂದಿರುತ್ತವೆ ಅಂತಾ ತಿಳಿಸಿದ್ದು ಉಳಿದ 124 ಮಧ್ಯ ಟೇಟ್ರಾ ಪಾಕೇಟಗಳನ್ನು ಅ:ಕಿ: 3,759. ರೂ 60 ಪೈಸಾ ನೇದ್ದು ಒಂದು ರಟ್ಟಿನ ಡಬ್ಬಿಯಲ್ಲಿ ಹಾಕಿ ಜಪ್ತಿ ಮಾಡಿಕೊಂಡು ಸದರಿಯವನೊಂದಿಗೆ ರಾಘವೇಂದ್ರ ನಗರ ಠಾಣೆಗೆ ಬಂದು  ಠಾಣೆ ಗುನ್ನೆ ನಂ 60/2019 ಕಲಂ 32,34 ಕೆ.ಇ ಆಕ್ಟ ಪ್ರಕಾರ ಪ್ರಕರಣ ದಾಖಲಿಸಲಾಗಿದೆ.
ಅಪಘಾತ ಪ್ರಕರಣ :
ಸಂಚಾರಿ ಠಾಣೆ 01 : ದಿನಾಂಕ 06.06.2019 ರಂದು ಮದ್ಯಾಹ್ನ ಮೃತ ನಯೀಮ ಇತನು ತನ್ನ ಮೋಟಾರ ಸೈಕಲ ನಂ ಟಿ.ಎಸ್-34/ಎ-0263 ನೇದ್ದರ ಹಿಂದುಗಡೆ ಮಹ್ಮದ ಜಾಕೀರ ಮತ್ತು ಉಮರ ಇವರನ್ನು ಕೂಡಿಸಿಕೊಂಡು ಜೇವರಗಿಯಿಂದ ಶಹಾಬಾದನಲ್ಲಿರುವ ಸ್ವಿಮ್ಮಿಂಗ ಪೂಲಗೆ ಹೋಗಿ ಈಜಾಡಿ ವಾಪಸ್ಸ ಜೇವರಗಿ ಕಡೆಗೆ ಹೋಗುವಾಗ ಕಲಬುರಗಿ ಜೇವರಗಿ ಮುಖ್ಯ ರಸ್ತೆಯ ಮೇಲೆ ಬರುವ ಸೋಮನಾಥ ಹಳ್ಳಿ ಕ್ರಾಸ ಸಮೀಪ ರೋಡ ಮೇಲೆ ಖಾಜಾ ಹುಸೆನ ಇತನು ತನ್ನ ಮೋಟಾರ ಸೈಕಲ ನಂ ಕೆಎ-28/ಇಬಿ-8368 ನೇದ್ದರ ಹಿಂದುಗಡೆ ಮುಜೀಬ, ಮುಜಾಮೀಲ್,ಹಾಗು ಸೊಹೇಲ ರವರನ್ನು ಕೂಡಿಸಿಕೊಂಡು ಜೇವರಗಿ ಕಡೆಯಿಂದ ಕಲಬುರಗಿ ಕಡೆಗೆ ಹೋಗುವ ಕುರಿತು ತನ್ನ ಮೋಟರ ಸೈಕಲನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಎದುರಿನಿಂದ ನಯಿಮ ಇತನ ಮೋಟಾರ ಸೈಕಲಕ್ಕೆ ಡಿಕ್ಕಿಪಡಿಸಿ ಅಪಘಾತ ಮಾಡಿ ಉಮರ, ಮಹ್ಮದ ಜಾಕೀರ್ ಇವರಿಗೆ ಸಾದಾಗಾಯ ಹಾಗೂ ಮುಜೀಬ, ಮುಜಾಮೀಲ್, ಸೊಹೇಲ ಹಾಗೂ ನಯೀಮ ಇವರಿಗೆ ಭಾರಿಗಾಯಗೊಳಿಸಿದ್ದರಿಂದ ನಯೀಮ ಇತನು ಅಪಘಾತ ಸ್ಥಳದಲ್ಲಿ ಮೃತಪಟ್ಟಿದ್ದು ಆರೋಪಿ ಖಾಜಾ ಹುಸೇನ ಇತನು ಕೂಡಾ ಭಾರಿಗಾಯ ಹೊಂದಿ ಸ್ಥಳದಲ್ಲಿ ಮೃತಪಟ್ಟಿದ್ದು ಇರುತ್ತದೆ.  ಅಂತಾ ಶ್ರೀ ಉಮರ ತಂದೆ ಇಸ್ಮಾಯಿಲ್ ಶೇಖ ಸಾ: ಖಾಜಾ ಕಾಲೋನಿ ಜೇವರಗಿ ಜಿ: ಕಲಬುರಗಿ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆ 01 ರಲ್ಲಿ ಗುನ್ನೆ ನಂ 66/2019  ಕಲಂ  279, 337, 338, 304 (ಎ) ಐ.ಪಿ.ಸಿ ಬೇದ್ದರ ಪ್ರಕಾರ ಪ್ರಕರಣ ದಾಖಲಿಸಲಾಗಿದೆ.

06 June 2019

KALABURAGI DISTRICT REPORTED CRIMES

ಕೊಲೆ ಪ್ರಕರಣ :
ಫರತಾಬಾದ ಠಾಣೆ : ಶ್ರೀಮತಿ  ನಾಗಮ್ಮ ಗಂಡ ಶಂಕ್ರೆಪ್ಪಾ ಮ್ಯಾಕೇರಿ ವಯ ಸಾ: ಬೇಳಗುಂಪಾ(ಕೆ) ತಾ.ಜಿ ಕಲಬುರಗಿ ರವರ ಗಂಡನಾದ ಶಂಕ್ರೆಪ್ಪಾ ಈತನು ನಮ್ಮೂರಿನ ಅಡೆಮ್ಮಾ ಗಂಡ ಭೀಮಪ್ಪಾ ಮಾದರ ಇವಳೊಂದಿಗೆ ಈಗ ಸುಮಾರು 2 ವರ್ಷದಿಂದ ಅನೈತಿಕ ಸಂಭಂದ ಹೊಂದಿದ್ದು, ಈ ಬಗ್ಗೆ ನಾವುಗಳು ನನ್ನ ಗಂಡನಿಗೆ ಮತ್ತು ಸದರಿ ಅಡೆಮ್ಮಾ ಇವಳಿಗೆ ಹಲವಾರು ಭಾರಿ ಈ ರೀತಿ ಮಾಡುವದು ಸರಿಯಲ್ಲಾ ಅಂತಾ ತಿಳಿಸಿ ಹೇಳಿದರು ಸಹ ಕೇಳದೆ ತಮ್ಮ ಸಂಭಂದವನ್ನು ಹಾಗೆ ಮುಂದುವರಿಸಿದರು. ಇದ್ದರಿಂದ ಆಕೆಯ ಸಂಭಂದಿಕರಲ್ಲಿ ದ್ವೇಷದ ಬಾವನೆ ಉಂಟಾಗಿತ್ತು. ದಿನಾಂಕ 04-06-2019 ರಂದು ಬೆಳಗ್ಗೆ 8.00 ಗಂಟಯ ಸುಮಾರಿಗೆ ನನ್ನ ಗಂಡನಾದ ಶಂಕ್ರೆಪ್ಪಾ ಈವನು ಎಂದಿನಂತೆ ಕೆಲಸಕ್ಕೆ ಹೋಗಿ ಕೆಲಸ ಮುಗಿಸಿಕೊಂಡು ಮಧ್ಯಾಹ್ನ 2.00 ಗಂಟೆಯ ಸುಮಾರಿಗೆ ಮನೆಗೆ ಬಂದು ಊಟ ಮಾಡಿ ನಂತರ ಹೋರಗೆ ಹೋಗುತ್ತೇನೆ ಅಂತಾ ಹೇಳಿ ಮನೆಯಿಂದ ಹೋದನು. ಸಾಯಂಕಾಲ 5-00 ಗಂಟೆ ಸುಮಾರಿಗೆ ನಮ್ಮೂರಿನ ಶರಣು ತಂದೆ ಭೀಮಾಶಂಕರ ದೋಡ್ಡಮನಿ ಈತನು ಬಂದು ತಿಳಿಸಿದೆನೆಂದರೆ ನಿನ್ನ ಗಂಡ ಶಂಕ್ರೆಪ್ಪಾ ಮತ್ತು ಅಡೆಮ್ಮ ಇವರುಗಳಿಗೆ ಅಡೆಮ್ಮನ ಚಿಕ್ಕಪ್ಪನ ಮಗನಾದ (ತಮ್ಮ) ಹಣಮಂತ ತಂದೆ ಸೈದಪ್ಪ ಮಾದರ ಈತನು ಅಡೆಮ್ಮ ಇವಳ ಮನೆಯಲ್ಲಿ ಕೊಡಲಿಯಿಂದ ಹೊಡೆದು ಕೊಲೆ ಮಾಡಿರುತ್ತಾನೆ ಅಂತಾ ತಿಳಿಸಿದ್ದು ಅಲ್ಲದೆ ಜನರು ಸಹ ನನ್ನ ಗಂಡನು ಕೊಲೆಯಾದ ಬಗ್ಗೆ ಮಾತನಾಡುವದನ್ನು ಕೇಳಿ ನಾವು ಗಾಬರಿಗೊಂಡು ನಾನು ಮತ್ತು ನನ್ನ ಮೈದುನಾದ ದೊಡ್ಡಪ್ಪ ಮ್ಯಾಕೇರಿ, ಬಾವನದ ಹುಲ್ಲೆಪ್ಪಾ ಮ್ಯಾಕೇರಿ ಹಾಗೂ ಇತರರು ಕೂಡಿಕೊಂಡು ಹೋಗಿ ನೋಡಲಾಗಿ ನನ್ನ ಗಂಡ ಶಂಕ್ರೆಪ್ಪಾ ಈತನು ಅಡೆಮ್ಮ ಇವಳ ಮನೆಯ ಬಾಗಿಲ ಮುಂದೆ ರಕ್ತದ ಮಡುವಿನಲ್ಲಿ ಬಿದಿದ್ದು, ನೋಡಲಾಗಿ ಕುತ್ತಿಗೆಗೆ & ಎಡಗೈ ಮೋಳಕೈ ಹತ್ತಿರ ಭಾರಿ ರಕ್ತಗಾಯಗಳಾಗಿ ಮೃತಪಟ್ಟಿದ್ದನು. ಮನೆಯ ಒಳಗಡೆ ನೋಡಲಾಗಿ ಒಳ ಮನೆಯ ಬಾಗಿಲ ಹತ್ತಿರ ಅಡೆಮ್ಮ ಇವಳು ರಕ್ತದ ಮಡುವಿನಲ್ಲಿ ಬಿದಿದ್ದು, ನೋಡಲಾಗಿ ಆಕೆಯ ಕುತ್ತಿಗೆಯ ಹಿಂಭಾಗಕ್ಕೆ, ತಲೆಯ ಹಿಂಭಾಗಕ್ಕೆ ಭಾರಿ ರಕ್ತಗಾಯಗಳಾಗಿ ಮೃತಪಟ್ಟಿದ್ದಳು. ದಿನಾಂಕ 04-06-2019 ರಂದು 4-30 ಪಿ.ಎಮ್ದ ಸುಮಾರಿಗೆ ನಮ್ಮೂರಿನ ಅಡೆಮ್ಮ ಮಾದರ ಇವರ ಮನೆಯಲ್ಲಿ ನನ್ನ ಗಂಡ ಶಂಕ್ರೆಪ್ಪಾ ಮತ್ತು ಅಡೆಮ್ಮ ಇವರುಗಳು ಹೊಂದಿದ್ದ ಅನೈತಿಕ ಸಂಬಂಧ ದ್ವೇಷದ ಹಿನ್ನಲೆಯಲ್ಲಿ ಅಡೆಮ್ಮನ ಸಹೋದರ ಸಂಬಂಧಿಯಾದ (ತಮ್ಮ) ಹಣಮಂತ ತಂದೆ ಸೈದಪ್ಪ ಮಾದರ ಈತನು ಕೊಡಲಿಯಿಂದ ಇಬ್ಬರಿಗೂ ಹೊಡೆದು ಭಾರಿ ರಕ್ತಗಾಯ ಪಡಿಸಿ ಕೊಲೆ ಮಾಡಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆ ಗುನ್ನೆ ನಂ 80/2019 ಕಲಂ. 302 ಐಪಿಸಿ ನೇದ್ದರ ಪ್ರಕಾರ ಪ್ರಕಾರ ಪದರಕರಣ ದಾಖಲಿಸಲಾಗಿದೆ.
ವರದಕ್ಷಣೆ ಕಿರುಕಳ ನೀಡಿ ಕೊಲೆ ಮಾಡಿದ ಪ್ರಕರಣ :
ಫರತಾಬಾದ ಠಾಣೆ : ಶ್ರೀಮತಿ ಮಾಹಾದೇವಿ ಗಂಡ ಕುಪೇಂದ್ರ ಮಾಲಿಪಾಟೀಲ ಸಾ : ಮೇಳಕುಂದಾ  ರವರ ಮಗಳಾದ ಪ್ರೀತಿ @ ರೂಪಾ ಇವಳಿಗೆ ಈಗ್ಗೆ ಸೂಮಾರು 1 ವರ್ಷ 3 ತಿಂಗಳ ಹಿಂದೆ ಕಡಣಿ ಗ್ರಾಮದ ಶಾಂತಮಲ್ಲಪ್ಪ ಇವರ ಹಿರಿಯ ಮಗನಾದ ಬಸವರಾಜ ಕಡತಾನೋರ ಇತನೊಂದಿಗೆ ಸಂಪ್ರದಾಯಿಕವಾಗಿ ಮದುವೆ ಮಾಡಿಕೋಟ್ಟಿದ್ದು ಮದವೆ ಕಾಲಕ್ಕೆ ಮಾತುಕತೆ ಆಡಿದಂತೆ 51 ಸಾವಿರ ರೂಪಾಯಿ ಹುಂಡಾ ಹಾಗೂ 2 ತೋಲೆ ಬಂಗಾರ ಮತ್ತು ಮದುವೆಗೆ ಬೇಕಾಗುವ ಪಲ್ಲಂಗ ಅಲಮಾರಿ ಹಾಗೂ ಇತರೆ ಮನೆಗೆ ಉಪಯೋಗವಾಗುವ 70-80 ಸಾವಿರ ರೂಪಾಯಿ ಕಿಮ್ಮತ್ತಿನ ಹಾಂಡೆ ಬಾಂಡೆ ಕೋಟ್ಟು ನಮ್ಮೂರ ಭೋಗಲಿಂಗೇಶ್ವರ ದೇವಸ್ಥಾನದಲ್ಲಿ ಮದುವೆ ಮಾಡಿಕೋಟ್ಟಿರುತ್ತೇವೆ.          ಮದುವೆಯಾದ ಬಳಿಕ 2 ತಿಂಗಳ ವರೆಗೆ ನನ್ನ ಅಳಿಯ ಹಾಗೂ ಅವಳ ಅತ್ತೆ ಅಂಬುಬಾಯಿ ಹಾಗೂ ಮಾವ ಶಾಂತಮಲ್ಲಪ್ಪ ಮೈದುನ ರಾಣೋಜಿ ಇವರು ನನ್ನ ಮಗಳಿಗೆ ಸರಿಯಾಗಿ ನೋಡಿಕೊಂಡಿದ್ದು. ನಂತರ ನನ್ನ ಅಳಿಯ ನನ್ನ ಮಗಳಿಗೆ ನೀನು ನೋಡಲು ಸರಿಯಿಲ್ಲ ನನಗೆ ಜೋಡಿ ಆಗುವುದಿಲ್ಲ ನಾನು ಮೋದಲು ಬೆರೆಯವಳಿಗೆ ಮದುವೆ ಆಗಬೇಕಂತ ಅಂದುಕೊಂಡಿದ್ದೆ ಅಂತಾ ಮಾನಸಿಕವಾಗಿ ದೈಹಿಕವಾಗಿ ಕಿರುಕುಳ ನಿಡುತ್ತಿದ್ದು. ದುಅಲ್ಲದೆ ತವರು ಮನೆಯಿಂದ ಮದುವೆಯಲ್ಲಿ ಫೋಟೋ ತೆಗೆ5 ಸಾವಿರ ರೂಪಾಯಿ ಹಣ ಹಾಗೂ ಅರ್ಧ ತೋಲೆ ಬಂಗಾರ ತರುವಂತೆ ಕಿರುಕುಳ ನಿಡುತ್ತ ಬಂದಿದ್ದು. ಸದರಿ ವಿಷಯವನ್ನು ನನ್ನ ಮಗಳು ಸಾಕಷ್ಟು ಬಾರಿ ಫೋನ ಮೂಲಕ  ಹಾಗೂ ತವರು ಮನೆಗೆ ಬಂದಾಗ ನನಗೆ ಹಾಗೂ ನನ್ನ ಮನೆಯವರಿಗೆ ಹೇಳುತ್ತ ಬಂದಿದ್ದು. ಅದಕ್ಕೆ ನಾವು ನನ್ನ ಮಗಳಿಗೆ ಮುಂದೆ ಹೋದಂತೆ ಸರಿಹೋಗುತ್ತದೆ ಹಾಗೆ ಎಲ್ಲರ ಜೋತೆಗೆ ಸರಿಯಾಗಿ ಇರು ಅಂತಾ ಬುದ್ದಿ ಮಾತು ಹೇಳುತ್ತ ಬಂದಿರುತ್ತೇವೆ. ನಂತರ ಈಗ್ಗೆ ಸೂಮಾರು 3 ತಿಂಗಳ ಹಿಂದೆ ನಾನು ನನ್ನ ಗಂಡ ಹಾಗೂ ಮನೆಯವರು ಕೂಡಿ ನನ್ನ ಅಳಿಯನ ಮನೆಗೆ ಹೋಗಿ ಅರ್ಧ ತೋಲೆ ಬಂಗಾರ ಕೋಟ್ಟು ಬಟ್ಟೆ ಬರೆ ಹೋಲೆಸಿಕೋಳ್ಳಲು 2 ಸಾವಿರ ರೂಪಾಯಿ ಹಣ ಕೋಟ್ಟು ನನ್ನ ಮಗಳಿಗೆ ಸರಿಯಾಗಿ ನೋಡಿಕೋಳ್ಳುವಂತೆ ನನ್ನ ಅಳಿಯ ಹಾಗೂ ಅವರ ಮನೆಯವರಿಗೆ ಬುದ್ದಿಮಾತು ಹೇಳಿ ಬಂದಿದ್ದು ನಂತರ ಸ್ವಲ್ಪ ದಿನಗಳ ವರೆಗೆ ನನ್ನ ಅಳಿಯ ನನ್ನ ಮಗಳೊಂದಿಗೆ ಸರಿಯಾಗಿ ಇದ್ದು ತದನಂತರ ಮತ್ತೆ ಈಗ್ಗೆ 6 ತಿಂಗಳಿಂದ ನನ್ನ ಅಳಿಯ ತನ್ನ ತಂದೆ ತಾಯಿಯ ಹಾಗೂ ತಮ್ಮನ ಮಾತು ಕೇಳಿ ನನ್ನ ಮಗಳಿಗೆ ತವರು ಮನೆಗೆ ಕಳಿಸುತ್ತಿರಲಿಲ್ಲ ಮತ್ತು ನನ್ನ ಮಗಳು ನಮಗೆ ಫೋನ ಮಾಡಬೇಕಾದರೆ ಸ್ಪೀಕರ ಚಾಲು ಮಾಡಿ ನಮ್ಮೊಂದಿಗೆ ಮಾತುಗಳನ್ನು ಆಡಿಸುತ್ತಿದ್ದಾರೆ ಅಂತಾ ನನ್ನ ಮಗಳು ಯುಗಾದಿ ಹಬ್ಬಕ್ಕೆ ಊರಿಗೆ ಬಂದಾಗ ಹೇಳಿದ್ದು. ಆವಾಗಲು ಕೂಡಾ ನಾವು ನನ್ನ ಮಗಳಿಗೆ ಚಿಂತೆ ಮಾಡಬೇಡ ಮುಂದೆ ಸರಿಹೋಗುತ್ತೆ ಅನುಸರಿಸಿಕೊಂಡು ಹೋಗು ಅಂತಾ ಬುದ್ದಿ ಮಾತು ಹೇಳಿ ಕಳಿಸಿದ್ದೇವು.     ದಿನಾಂಕ:04.06.2019 ರಂದು ಮದ್ಯಾಹ್ನದ ವೇಳೆಯಲ್ಲಿ ನನ್ನ ಮಗ ಮಲ್ಲಿಕಾರ್ಜುನ ಇವನು ಗಾಬರಿಯಲ್ಲಿ ಅಳುತ್ತ ಮನೆಯಕಡೆಗೆ ಬಂದು ನನ್ನ ಮಗಳಾದ ಪ್ರೀತಿ @ ರೂಪಾ ಇವಳು ತನ್ನ ಗಂಡನ ಮನೆಯಲ್ಲಿ ನೇಣುಹಾಕಿಕೊಂಡು ಸತ್ತಿರುತ್ತಾಳೆ ಅಂತಾ ಯಾರೋ ಕಡಣಿ ಗ್ರಾಮದವರು ತನಗೆ ಫೋನ ಮಾಡಿರುತ್ತಾರೆ ಅಂತಾ ವಿಷಯ ತಿಳಿಸಿದ್ದು. ನಂತರ ನಾನು ಗಾಬರಿಗೊಂಡು ಸಂಗಡ ನನ್ನ ಗಂಡ  ಕುಪೇಂದ್ರ, ನಮ್ಮ ಅಣ್ಣತಮ್ಮಕಿಯ ಸಿದ್ದಣ್ಣ ಮಾಲಿಪಾಟಿಲ, ಸಿದ್ದಾರೋಢ ಮಾಲಿಪಾಟಿಲ, ಗಂಗಮ್ಮ ಸರಡಗಿ ಹಾಗೂ ಕಾವೇರಿ ಜೇವರಗಿ ಇವರೆಲ್ಲರೂ ಕೂಡಿ ನನ್ನ ಮಗ ಮಲ್ಲಿಕಾರ್ಜುನ ಸಂಗಡ ಇಂದು ಮದ್ಯಾಹ್ನ 03.30 ಗಂಟೆಯ ಸೂಮಾರಿಗೆ ಕಡಣಿ ಗ್ರಾಮದ ನನ್ನ ಮಗಳ ಗಂಡನ ಮನೆಗೆ ಹೋಗಿ ನೋಡಲು ನನ್ನ ಮಗಳಾದ ಪ್ರೀತಿ @ ರೂಪಾ ಇವಳು ತಾನು ಮಲಗುವ ಕೋಣೆಯ ಛತ್ತಿಗೆ ಇರುವ ಸಿಲಿಂಗ ಫ್ಯಾನಗೆ ಸಿರೆಯಿಂದ ಕುತ್ತಿಗೆಗೆ ನೇಣು ಹಾಕಿಕೊಂಡು ಮೃತ ಪಟ್ಟಿದ್ದಳು ನಂತರ ಅಲ್ಲೆ ಇದ್ದ ನನ್ನ ಅಳಿಯ ಬಸವರಾಜನಿಗೆ ವಿಚಾರಿಸಲು ನನ್ನ ಮಗಳಾದ ಪ್ರೀತಿ @ ರೂಪಾ ಇವಳಿಗೆ ತವರು ಮನೆಯಿಂದ ಹಣ ತರುವಂತೆ ಹಾಗೂ ನೋಡಲು ಸರಿಯಿಲ್ಲ ಅಂತಾ ನನ್ನ ಅಳಿಯ ತನ್ನ ತಂದೆ ತಾಯಿ ಹಾಗೂ ತಮ್ಮನ ಮಾತುಗಳನ್ನು ಕೇಳಿ ನನ್ನ ಮಗಳಿಗೆ ಇಂದು ಮದ್ಯಾಹ್ನ 01.00 ಗಂಟೆಯ ಸೂಮಾರಿಗೆ ಹೋಡೆದು ನೇಣುಹಾಕಿ ಕೋಲೆ ಮಾಡಿದ್ದು ಇರುತ್ತದೆ ಅಂತಾ ಸಲ್ಲಿಸಿದ ದೂರುಇ ಸಾರಾಂಶದ ಮೇಲಿಂದ ಫರತಾಬಾದ ಠಾಣೆ ಗುನ್ನೆ ನಂ 79/2019 ಕಲಂ 498 (ಎ) 302, 304(ಬಿ) ಸಂಗಡ 34 ಐಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲಿಸಲಾಗಿದೆ.    
ಅಪಘಾತ ಪ್ರಕರಣ :
ಸಂಚಾರಿ ಠಾಣೆ 02 : ದಿನಾಂಕ-05/06/2019 ರಂದು ಮಧ್ಯಾಹ್ನ ಈರಣ್ಣ ಈತನು ಟಿವಿಎಸ್ ಎಕ್ಸಲ್ ಮೋಟಾರ ಸೈಕಲ್ ನಂ KA-32 EK-5044 ನೇದ್ದರ ಮೇಲೆ ವೇದಮೂರ್ತಿ ಈತನಿಗೆ ಕೂಡಿಸಿಕೊಂಡು ಪಟ್ಟಣ ಕಡೆಯಿಂದ ನಿಧಾನವಾಗಿ ಮೋಟಾರ ಸೈಕಲ ಚಲಾಯಿಸಿಕೊಂಡು ಹೋಗುತ್ತಿದ್ದಾಗ ಭೀಮಳ್ಳಿ ಕ್ರಾಸ್ ಹತ್ತಿರದ ರೋಡಿನ ಮೇಲೆ ಒಂದು ಟಾಟಾ ಸುಮೋ ನಂ MH -13 N-2542 ನೇದ್ದರ ಚಾಲಕ ಕಲಬುರಗಿ ಆಳಂದ ಚೆಕ್ ಪೋಸ್ಟ ಕಡೆಯಿಂದ ತನ್ನ ಟಾಟಾ ಸುಮೋ ವಾಹನವನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾಧಿ ಗಂಡ ಕುಳಿತು ಹೋಗುತ್ತಿದ್ದ ಮೋಟಾರ ಸೈಕಲಕ್ಕೆ  ಡಿಕ್ಕಿ ಪಡಿಸಿ ಅಪಘಾತ ಮಾಡಿ ಮೋಟಾರ ಸೈಕಲ್ ಸವಾರ ಈರಣ್ಣ ಇತನಿಗೆ ಭಾರಿಗಾಯಗೊಳಿಸಿದ್ದು ಶ್ರೀಮತಿ ಸವಿತಾ ಗಂಡ ವೇದಮೂರ್ತಿ ಸ್ವಾಮಿ ಸಾ:ಸಿದ್ದಲಿಂಗೇಸ್ವರ ಗುಡಿಯ ಹತ್ತಿರ ಭವಾನಿ ನಗರ ಕಲಬುರಗಿ ಗಂಡನಿಗೆ ಭಾರಿಗಾಯಗೊಳಿಸಿದ್ದರಿಂದ ಆತನು ಸ್ಥಳದಲ್ಲಿಯೆ ಮೃತಪಟ್ಟಿದ್ದು, ಟಾಟಾ ಸುಮೋ ವಾಹವನ್ನು ಸ್ಥಳದಲ್ಲಿಯೆ ಬಿಟ್ಟು ಚಾಲಕ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆ ಗುನ್ನೆ ನಂ 89/2019 ಕಲಂ 279, 338, 304(ಎ) ಸಂಗಡ 187 ಐಎಂವಿ ಎಕ್ಟ ಪ್ರಕರ ಪ್ರಕರಣ ದಾಖಲಿಸಲಾಗಿದೆ.  
ಆಕ್ರಮವಾಗಿ ಮರಳು ಸಾಗಿಸುತ್ತಿದ್ದ ಟ್ರ್ಯಾಕ್ಟರ ಜಪ್ತಿ :
ಅಫಜಲಪೂರ ಠಾಣೆ : ದಿನಾಂಕ 05-06-2019 ರಂದು ಅಫಜಲಪೂರ ಠಾಣಾ ವ್ಯಾಪ್ತಿಯ ದುದ್ದಣಗಿ ಗ್ರಾಮದ ಭೀಮಾ ನದಿಯಲ್ಲಿ ಟ್ರ್ಯಾಕ್ಟರನಲ್ಲಿ ಮರಳು ತುಂಬತ್ತಿದ್ದಾರೆ ಅಂತಾ ಖಚಿತ ಮಾಹಿತಿ ಬಂದ ಮೇರೆಗೆ, ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ  ದುದ್ದಣಗಿ ಗ್ರಾಮದ ಭೀಮಾನದಿಯ ಹತ್ತಿರ ಹೋಗುತ್ತಿದ್ದಂತೆ, ಭೀಮಾನದಿಯಲ್ಲಿ ಒಂದು ಟ್ಯಾಕ್ಟರದಲ್ಲಿ ಮರಳು ತುಂಬುತ್ತಿದ್ದರು. ನಾವು ನಡೆದುಕೊಂಡು ಟ್ಯಾಕ್ಟರ ಹತ್ತಿರ ಹೋಗುತ್ತಿದ್ದಾಗ ಟ್ಯಾಕ್ಟರ ಚಾಲಕ ನಮ್ಮನ್ನು ನೋಡಿ ಟ್ಯಾಕ್ಟರ ಟ್ರೈಲಿಯ ಡಂಪ ಎತ್ತಿ ಓಡಿ ಹೊದನು. ನಾವು ಟ್ಯಾಕ್ಟರ ಹತ್ತಿರ ಹೋಗುವಷ್ಟರಲ್ಲಿ ಟ್ಯಾಕ್ಟರ ಟ್ರೈಲಿಯಲ್ಲಿದ್ದ ಮರಳು ನದಿಯಲ್ಲಿ ಕೆಳಗೆ ಬಿದ್ದಿತು.  ನಂತರ ಪಂಚರ ಸಮಕ್ಷಮ ಸದರಿ ಟ್ರ್ಯಾಕ್ಟರನ್ನು ಚೆಕ್ ಮಾಡಲಾಗಿ ಅರ್ಜುನ ಮಹೇಂದ್ರಾ ಕಂಪನಿಯ ಟ್ಯಾಕ್ಟರ ಇದ್ದು ಅದರ ಪಾಸಿಂಗ್ ನಂಬರ ಕೆಎ-28 ಟಿಬಿ-7589. ಅಕಿ 5,00,000/-ರೂ. ಸದರಿ ಟ್ರ್ಯಾಕ್ಟರ ಟ್ರೈಲಿಗೆ ನಂಬರ ಹಾಕಿರುವುದಿಲ್ಲ. ನಂತರ ಸದರಿ ಟ್ರ್ಯಾಕ್ಟರನ್ನು ಜಪ್ತಿ ಮಾಡಿಕೊಂಡು ಅಫಜಲಪೂರ ಠಾಣೆ ಗುನ್ನೆ ನಂ  77/2019 ಕಲಂ 379 ಐಪಿಸಿ ಮತ್ತು ಕಲಂ 21(1) ಎಮ್ ಎಮ್ ಡಿ ಆರ್ ಆಕ್ಟ ಪ್ರಕಾರ ಪ್ರಕರಣ ದಾಖಲಿಸಲಾಗಿದೆ.
ಅಫಜಲಪೂರ ಠಾಣೆ : ದಿನಾಂಕ 05-06-2019 ರಂದು ಅಫಜಲಪೂರ ಠಾಣಾ ವ್ಯಾಪ್ತಿಯ  ದುದ್ದಣಗಿ ಗ್ರಾಮದ ಭೀಮಾ ನದಿಯಲ್ಲಿ ಟ್ರ್ಯಾಕ್ಟರನಲ್ಲಿ ಮರಳು ತುಂಬತ್ತಿದ್ದಾರೆ ಅಂತಾ ಖಚಿತ ಮಾಹಿತಿ ಬಂದ  ಸಿ.ಪಿ.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ದುದ್ದಣಗಿ ಗ್ರಾಮದ ಭೀಮಾನದಿಯ ಹತ್ತಿರ ಹೋಗುತ್ತಿದ್ದಂತೆ, ಭೀಮಾನದಿಯಲ್ಲಿ ಒಂದು ಟ್ಯಾಕ್ಟರದಲ್ಲಿ ಮರಳು ತುಂಬುತ್ತಿದ್ದರು. ನಾವು ನಡೆದುಕೊಂಡು ಟ್ಯಾಕ್ಟರ ಹತ್ತಿರ ಹೋಗುತ್ತಿದ್ದಾಗ ಟ್ಯಾಕ್ಟರ ಚಾಲಕ ನಮ್ಮನ್ನು ನೋಡಿ ಟ್ಯಾಕ್ಟರ ಟ್ರೈಲಿಯ ಡಂಪ ಎತ್ತಿ ಓಡಿ ಹೊದನು. ನಾವು ಟ್ಯಾಕ್ಟರ ಹತ್ತಿರ ಹೋಗುವಷ್ಟರಲ್ಲಿ ಟ್ಯಾಕ್ಟರ ಟ್ರೈಲಿಯಲ್ಲಿದ್ದ ಮರಳು ನದಿಯಲ್ಲಿ ಕೆಳಗೆ ಬಿದ್ದಿತು.  ನಂತರ ಪಂಚರ ಸಮಕ್ಷಮ ಸದರಿ ಟ್ರ್ಯಾಕ್ಟರನ್ನು ಬ್ಯಾಟರಿಯ ಬೆಳಕಿನಲ್ಲಿ ಚೆಕ್ ಮಾಡಲಾಗಿ ಜಾನ ಡಿಯರ್ ಕಂಪನಿಯ ಟ್ಯಾಕ್ಟರ ಇದ್ದು ಅದರ ಪಾಸಿಂಗ್ ನಂಬರ ಹಾಕಿರುವದಿಲ್ಲ ನಂತರ ಅದರ ಇಂಜಿನ ನಂಬರ ನೋಡಲಾಗಿ PY3029D261449 ಇದ್ದು ಚೆಸ್ಸಿ ನಂಬರ ನೋಡಲಾಗಿ PY53108063413. ಇತ್ತು ಅದರ ಅಕಿ 5,00,000/-ರೂ. ಸದರಿ ಟ್ರ್ಯಾಕ್ಟರ ಟ್ರೈಲಿಗೆ ನಂಬರ ಹಾಕಿರುವುದಿಲ್ಲ. ನಂತರ ಸದರಿ ಟ್ರ್ಯಾಕ್ಟರನ್ನು ಪಂಚರ ಸಮಕ್ಷಮ  ಜಪ್ತಿ ಮಾಡಿಕೊಂಡು ಅಫಜಲಪೂರ ಠಾಣೆ ಗುನ್ನೆ ನಂ 78/2019 ಕಲಂ 379 ಐಪಿಸಿ ಮತ್ತು ಕಲಂ 21(1) ಎಮ್ ಎಮ್ ಡಿ ಆರ್ ಆಕ್ಟ ಪ್ರಕಾರ ಪ್ರಕರಣ ದಾಖಲಿಸಲಾಗಿದೆ.
ಹಲ್ಲೆ ಮಾಡಿ ಹಣ ಕಸಿದುಕೊಂಡು ಜಾತಿ ನಿಂದನೆ ಮಾಡಿದ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀ ಗಂಗಾಧರ ತಂದೆ ಬಾಬುರಾವ ಮದನಕರ್‌ ಸಾ: ತಾಜ್‌‌ ಸುಲ್ತಾನಪೂರ ತಾ:ಜಿ: ಕಲಬುರಗಿ ರವರು ದಿನಾಂಕ 04/06/2019 ರಂದು ರಾತ್ರಿ 8:30 ಗಂಟೆ ಸುಮಾರಿಗೆ ನಾನು ಬರ್ಹಿದೆಸೆಗೆ ಹೊಗುತ್ತಿದ್ದಾಗ ಅಲ್ಲಿ 1) ಕಿರಣಸಿಂಗ್‌‌ ತಂದೆ ನರಸಿಂಗ ಠಾಕೂರ 2) ಜೀವನ ತಂದೆ ಮರೆಪ್ಪ 3) ರಾಹುಲ ತಂದೆ ಬಸವರಾಜ ಧನಪತಿ ಸಾ: ಎಲ್ಲರೂ ಸುಲ್ತಾನಪೂರ ಇವರು ನನಗೆ ಈ ಕಡೆಗೆ ಬಾ ನಿನ್ನ ಹತ್ತಿರ ಸ್ವಲ್ಪ ಮಾತನಾಡುವದಿದೆ ಎಂದು ಹೇಳಿ ನನಗೆ ವೈಷ್ಣವಿ ದೇವರ ಗುಡಿ ಹತ್ತಿರ ಕರೆದುಕೊಂಡು ಬಂದು ಏ ರಂಡಿ ಮಗನೇ ನಿನ್ನ ಹತ್ತಿರ ಇರುವ ಹಣ ಕೊಡು ಇಲ್ಲದಿದ್ದರೆ ನಿನಗೆ ಖಲಾಷ ಮಾಡುತ್ತೇವೆ ಅಂತಾ ಕಿರಣಸಿಂಗ್‌‌ನು ಚಾಕುವನ್ನು ನನ್ನ ಕುತ್ತಿಗೆಗೆ ಹಚ್ಚಿದಾಗ ನಾನು ನನ್ನ ಹತ್ತಿರ ಹಣ ಇಲ್ಲಾ ಅಂದಾಗ ಜೀವನ ಹಾಗು ರಾಹುಲ ನನಗೆ ಒತ್ತಿ ಹಿಡಿದಾಗ ಕಿರಣಸಿಂಗ್‌ ಇತನು ಜಬರದಸ್ತಿಯಿಂದ ನನ್ನ ಜೇಬಿನಲ್ಲಿ ಇದ್ದ 1500/- ರೂಪಾಯಿ ತೆಗೆದುಕೊಂಡಿರುತ್ತಾನೆ . ನಾನು ದಲಿತನೆಂದು ಗೊತ್ತಿದ್ದರೂ ಕಿರಣಸಿಂಗ್‌‌ ಇತನು ನನಗೆ ಅವಾಚ್ಯವಾಗಿ ಬೈದು ಏ ಹೋಲೆಯ ಸುಳೇ ಮಗನೇ ಅಂತಾ ಜಾತಿ ನಿಂದನೆ ಮಾಡಿ ನನಗೆ ನಂತರ ಅದೆ ರಾತ್ರಿ 11 ಗಂಟೆ ಸುಮಾರಿಗೆ ನನಗೆ ಸುಲ್ತಾನಪೂರ ರಿಂಗ್‌‌ ರೋಡಿಗೆ ತಂದು ಬಿಟ್ಟಿರುತ್ತಾರೆ. ಆ ಸಮಯದಲ್ಲಿ ನನಗೆ ರಾತ್ರಿ ತಂದು ಬಿಡುವಾಗ ವಿನೋದ ತಂದೆ ನಾಗಿಂದ್ರಪ್ಪಾ ಡಣ್ಣೂರೆ ಇತನು ನೊಡಿರುತ್ತಾನೆ. ನಂತರ ಇಂದು ದಿನಾಂಕ 05/06/2019 ರಂದು ನನ್ನ ಅಣ್ಣ ಸುನೀಲ ಇತನು ನನ್ನ ತಮ್ಮನಿಗೆ ರಾತ್ರಿ ಯ್ಯಾಕೆ ಹೊಡೆದಿದ್ದಿರಿ ಅಂತಾ ಕೇಳಲು ಹೋದಾಗ ರಾಹುಲ ಇತನು ಕಲ್ಲಿನಿಂದ ಅವನ ಬಲಗಾಲಿನ ಪಾದದ ಮೇಲ್ಬಾಗದಲ್ಲಿ ಹೊಡೆದು ಗುಪ್ತಗಾಯಗೊಳಿಸಿರುತ್ತಾನೆ. ಕಾರಣ ನನಗೆ ಜಬರದಸ್ತಿಯಿಂದ ಹೊಡೆಬಡೆ ಮಾಡಿ ನನ್ನ ಜೇಬಿನಲ್ಲಿ ಇದ್ದ 1500/-  ಕಸಿದಕೊಂಡು ಅವಾಚ್ಯವಾಗಿ ಬೈದು ಜೀವದ ಭಯ ಹಾಕಿ ಜಾತಿ ನಿಂದನೆ ಮಾಡಿದವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆ ಗುನ್ನೆ ನಂ 157/2019 ಕಲಂ 323 324 384 504 506 ಸಂ 34 ಐಪಿಸಿ & ಕಲಂ 2 (V) 3(1) (r) ಎಸ್‌ಸಿ ಎಸ್‌ಟಿ ಪಿಎ ಆಕ್ಟ್‌‌ ನೇದ್ದರ ಪ್ರಕಾರ ಪ್ರಕರಣ ದಾಖಲಿಸಲಾಗಿದೆ.
ಹಲ್ಲೆ ಪ್ರಕರಣಗಳು :
ಶಾಹಾಬಾದ ನಗರ ಠಾಣೆ : ಶ್ರೀಮತಿ ಮಂಜುಳಾ ಗಂಡ ಭೀಮಾಶಂಕರ ಕೌಲಗಿ ಸಾ: ರಾಮಾ ಮೊಹಲ್ಲಾ ಶಹಾಬಾದ ರವರ ಮೈದುನನಾದ ಈಶ್ವರಾದ್ಯ ಇತನು ಬೆಂಗಳೂರಿನಲ್ಲಿ ಕೆಲಸದ ಮೇಲಿಂದ ಶಹಾಬಾದಕ್ಕೆ ಬಂದಿದ್ದನು ನಿನ್ನೆ ದಿನಾಂಕ: 04/06/2019 ರಂದು ಬೆಳ್ಳಿಗೆ ಅತ್ತೆ ಸುಭದ್ರಮ್ಮ ಮಾವ ಮರೇಪ್ಪ ರವರು ಕೌಲಗಿಗೆ ಹೋಗುತ್ತೇವೆಂದು ಹೇಳಿ ಹೋಗಿದ್ದು ನಮ್ಮ ಮೈದುನ ಕೂಡ ಕೌಲಗಿಗೆ ಹೋಗುತ್ತೇನೆ ಎಂದು ಹೇಳಿ ಮನೆಯಿಂದ ಹೊಗಿದ್ದನು ರಾತ್ರಿಯಾದರು ಮನೆಗೆ ಬಂದಿರುವದಿಲ್ಲಾ ನಾವು ಆತನು ಕುಡಿಯುವ ಚಟ ಇದೆ ಬರುತ್ತಾನೆ ಅಂತಾ ತಿಳಿದು ನಾವು ನನ್ನ ಗಂಡ ಊಟಾ ಮಾಡಿ ಮನೆಯಲ್ಲಿ ಮಲಗಿದದೇವು ರಾತ್ರಿ 12-30 ಎ ಎಮ್ ಕ್ಕೆ ನಮಗೆ ಗೊತ್ತಾಗಿದ್ದೇನೆಂದರೆ ಈಶ್ವರಾದ್ಯನಿಗೆ ಶರಣಬಸವೆಶ್ವರ ಗುಡಿಯ ಹತ್ತಿರ ಯಾರೋ ಚಾಕುದಿಂದ ಹೊಡೆದಿದ್ದಾರೆ ಅಂತಾ ಗೊತ್ತಾಗಿ ನಾನು ನನ್ನ ಗಂಡ ಭೀಮಾಶಂಕರ ನಮ್ಮ ಸಂಬಂಧಿಕಳಾದ ಮಲ್ಲಮ್ಮ ಎಲ್ಲಾರೂ ಕೂಡಿ ಶರಣಬಶವೇಸ್ವರ ಹತ್ತಿರ ಬಂದು ನೋಡಲಾಗಿ ಈಶ್ವರಾದ್ಯ ಹೊಟ್ಟೆಯ ಬಲಭಾಗಕ್ಕೆ ಹರಿದಂತಾಗಿ ಭಾರಿಗಾಯಾವಾಗಿ ರಕ್ತಬಂದಿದ್ದು ಮಾತನಾಡುತ್ತಿರಲ್ಲಾ ನಂತರ ಉಪಚಾರ ಕುರಿತು ಶಹಾಬಾದ ಆಸ್ಪತ್ರೆಗೆ ತಂದು ಸೇರಿಕೆ ಮಾಡಿದ್ದು ಇರುತ್ತದೆ ನಂತರ ಹೆಚ್ಚಿನ ಉಪಚಾರ ಕುರಿತು ಕಲಬುರಗಿಯ ಯುನೈಟೆಡ ಆಸ್ಪತ್ರೆಗೆ ನನ್ನ ಗಂಡ ಹಾಗೂ ಇತರರು ಕರೆದುಕೊಂಡು ಹೋಗಿರುತ್ತಾರೆ ಯಾರೋ 2 ಜನರು ನನ್ನ ಮೈದುನ ಈಶ್ವರಾದ್ಯನಿಗೆ ನಿನ್ನೆ ದಿನಾಂಕ: 04/06/2019 ರಂದು ರಾತ್ರಿ 11-45 ಪಿ ಎಮ್ ಸುಮಾರಿಗೆ ಶರಣಬಸವೇಶ್ವರ ಗುಡಿಯ ಪಕ್ಕದ ಅವರಣದಲ್ಲಿ ಕೊಲೆ ಮಾಡುವ ಉದ್ದೇಶದಿಂದ ಚಾಕುದಿಂದ ಹೊಡೆದು ಗಾಯಾ ಗೊಳಿಸಿದ್ದು ಯಾರೋ ಹೊಡೆದಿದ್ದು ಗೊತ್ತಾಗಿರುವುದಿಲ್ಲಾ ಕಾರಣ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆ  ಗುನ್ನೆ ನಂಬರ 63/2019 ಕಲಂ 323 324 307 504 ಸಂಗಡ 34 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಚೌಕ ಠಾಣೆ : ಶ್ರೀ ಅತೀಕ ತಂದೆ ಅಕ್ಬರಮಿಯಾ ಕವಲಗಾ, ಸಾ: ಆಟೋ ಸ್ಟ್ಯಾಂಡ್ ಹತ್ತಿರ ತಾಜನಗರ ಮುಸ್ಲಿಂ ಸಂಘ ಕಲಬುರಗಿ ರವರು ದಿನಾಂಕ.05.06.2019 ರಂದು 4.00 ಪಿ.ಎಂ ಸುಮಾರಿಗೆ ನ್ನ ಗೆಳೆಯನಾದ, ಸಮೀರ ತಂದೆ ದಸ್ತಗೀರ ನನ್ನನ್ನು ಬೇಟಿಯಾಗಲು ರಜಾಕ್ ಸರ್ಕಲಗೆ ಬಂದಿದ್ದನು, ಅಷ್ಟರಲ್ಲಿ ಸಮೀರ ಅವನಿಗೆ ಮೆಹಬೂಬ ಹಾಗೂ ಸಾಬೀರ ಮತ್ತು ಉಮರ ಇವರು ಬಾಯಿಮಾತಿನ ತಕರಾರು ನಡೆದಿತ್ತು. ನಾನು ಅಷ್ಟರಲ್ಲಿ ಸಮೀರ ಅವನಿಗೆ ಎಕೆ? ಜಗಳ ಮಾಡುತ್ತಿದ್ದಿರಿ ಅಂತಾ ಕೇಳಿದ್ದಕ್ಕೆ ಸಾಬೀರ ನೀನು ಯಾರು ಬೋಸಡಿ ಮಗನೆ ಅಂದವನೆ ಬಲ ಮುಷ್ಠಿಯಿಂದ ಬಲ ಹಣೆಯ ಮೇಲೆ ಹೊಡೆದನು. ನಂತರ ಉಮರ ಇವನು ನಿನು ಯಾರು ಅಂದವನೆ ಬಲ ಮುಷ್ಠಿ ಮಾಡಿ ನನ್ನ ಬಲ ಎದೆಯ ಮೇಲೆ ಹೊಡೆದನು. ನಂತರ ಮೆಹಬೂಬ ಈತನು ಇವನ ಸೊಕ್ಕು ಬಹಳ ಆಗಿದೆ ಅಂತಾ ಅಲ್ಲಿಯೇ ಬಿದ್ದಿದ್ದ ಬಡಿಗೆಯಿಂದ ನನ್ನ ಬಲ ಮೊಳಕಾಲಿಗೆ ಹೊಡೆದನು.ನಂತರ ಅಲ್ಲಿಯೇ ಇದ್ದ ಬಬ್ಲು ಕೂಡಾ ಈ ಮಗಂದು ಬಹಳ ಸೊಕ್ಕು ಆಗಿದೆ ಅಂತಾ ನಡುಬೆನ್ನಿಗೆ ಬಲಗೈಯಿಂದ ಹೊಡೆಯುತ್ತಿದ್ದಾಗ ನಾನು ಚೀರಾಡ ಹತ್ತಿದಾಗ ಅಲ್ಲಿಯೇ ಇದ್ದ ನೌಶಾಧ ಹಾಗೂ ಕಲೀಂ ಇಬ್ಬರು ಬಂದು ಜಗಳ ಬಿಡಿಸಿರುತ್ತಾರೆ. ನಂತರ ನನ್ನ ತಂದೆ ಹಾಗೂ ನನ್ನ ಚಿಕ್ಕಪ್ಪ ಖಾಸಗಿ ಕಾರಿನಲ್ಲಿ ಉಪಚಾರ ಕುರಿತು ಸರ್ಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚೌಕ ಠಾಣೆ ಗುನ್ನೆ ನಂ.61/2019, ಕಲಂ. 323, 324, 504 ಸಂ. 34 ಐಪಿಸಿ ಪ್ರಕಾರ ದಾಖಲಿಸಲಾಗಿದೆ.
ಅಸ್ವಾಭಾವಿಕ ಸಾವು ಪ್ರಕರಣಗಳು :
ನರೋಣಾ ಠಾಣೆ : ಶ್ರೀಮತಿ ಸುಲೋಚನಾ ಗಂಡ ಮಲ್ಲಯ್ಯಾ ಲಿಂಗಯ್ಯಾಗೋಳ ಸಾ : ಖೇರಡ ತಾ : ಬಸವಕಲ್ಯಾಣ ಗಂಡ 8 ವರ್ಷಗಳ ಹಿಂದೆ ಖಾಲೆಯಿಂದ ಮೃತಪಟ್ಟಿದ್ದು, ನನಗೆ ಎರಡು ಗಂಡು ಮಕ್ಕಳಿರುತ್ತಾರೆ. ಮೊದಲನೆಯವ ಕರಿಬಸಯ್ಯ 2ನೇಯವ ಚನ್ನವೀರನಿದ್ದು, ಚನ್ನವೀರನಿಗೆ 18 ವರ್ಷ ವಯಸ್ಸಿದ್ದು ಸದರಿಯವನು ಹುಟ್ಟಿದಾಗಿನಿಂದಲು ಬುದ್ದಿ ಮಾಂದ್ಯ ಮೂಖನಿದ್ದು ರಾತ್ರಿವೇಳೆಯಲ್ಲಿ ಕಣ್ಣು ಕಾಣುತ್ತಿರಲಿಲ್ಲ. ಸದರಿಯವನು ಆಗಾಗ ಮೈಮೇಲೆ ಹೆಸಿಗೆ ಮಾಡಿಕೊಳ್ಳುವುದು. ಚೀರಾಡುವುದು ಮೈಮೇಲಿನ ಬಟ್ಟೆ ಕಳೆದುಕೊಳ್ಳುವುದು. ಎಲ್ಲಂದರಲ್ಲಿ ತಿರುಗಾಡುವುದು ಮಾಡುತ್ತಿದ್ದನು. ಇತ್ತಿಚಿಗೆ ಮನೆಬಿಟ್ಟು ನಮ್ಮ ಗ್ರಾಮದಿಂದ ಆಜುಬಾಜು ಹಳ್ಳಿಗೆ ಹೋಗಿ ತಿರುಗಾಡುತ್ತಿದ್ದನು. ನಮ್ಮ ಪರಿಚಯದವರು ಗುರ್ತು ಹಿಡಿದು ನಮ್ಮ ಮನೆಗೆ ತಂದು ಬಿಡುತ್ತಿದ್ದನು. ದಿನಾಂಕ:27/05/2019 ರಂದು 10-00 ಗಂಟೆಗೆ ನಮ್ಮ ಮನೆಯಿಂದ ಹೋದವನು ಮರಳಿ ಮನೆಗೆ ಬಂದಿರುವುದಿಲ್ಲ ಅಂದಿನಿಂದ ನಾನು ಲೇಂಗಟಿ, ಯಳವಂತಗಿ, ಮೈಸಲಗಿ, ವ್ಹಿ.ಕೆ ಸಲಗರ ಗ್ರಾಮಗಳಿಗೆ ಹೋಗಿ ಹುಡುಕಾಡಿರುತ್ತೇನೆ. ದಿನಾಂಕ:04/06/2019 ರಂದು 1100 ಗಂಟೆಗೆ ನಾನು ಮನೆಯೆಲ್ಲಿದ್ದಾಗ ಶ್ರೀ.ರಮೇಶ ತಂದೆ ಅಪ್ಪಾರಾವ ಬೇಡರ್, ಸಾ:ಖೇಡರ್.ಕೆ ವಾಡಿ, ಇವರು ಅಂಬಲಗಾ ಗ್ರಾಮಕ್ಕೆ ಬಂದಾಗ ಲಾಡಮುಗಳಿ ಸೀಮಾಂತರದಲ್ಲಿ ಸಿದ್ದಪ್ಪಾ ತಪಲಿ ಇವರ ಹೊಲದಲ್ಲಿನ ನೀರಿಲ್ಲದ ಬಾವಿಯಲ್ಲಿ ಒಬ್ಬ ಗಂಡು ಮನುಷ್ಯನ ಶವ ಸಿಕ್ಕಿದೆ ಅಂತಾ ಸುದ್ದಿ ತಿಳಿಸಿದ್ದು, ನನಗೆ ಸಂಶಯ ಬಂದು ನನ್ನ ಭಾವ ಬಸವರಾಜ, ಅಣವೀರಯ್ಯ, ಶಾಂತಲಿಂಗಯ್ಯ, ಬಸವಾ ಎಲ್ಲರೂ ಸ್ಥಳಕ್ಕೆ ಬಂದು ನೋಡಲಾಗಿ ನನ್ನ ಮಗ ಚನ್ನವೀರನ ಶವವು ಬಾವಿಯಲ್ಲಿ ಬೋರಲ್ ಬಿದ್ದಿದ್ದು, ಸದರಿಯವನು 5-6 ದಿವಸಗಳ ಹಿಂದೆ ತಿರುಗಾಡುತ್ತಾ ಬಂದು ರಾತ್ರಿವೇಳೆಯಲ್ಲಿ ಕಣ್ಣು ಕಾಣೆದ ಆಕಸ್ಮಿಕವಾಗಿ ಕಾಲುಜಾರಿ ಬಾವಿಯಲ್ಲಿ ಬಿದ್ದಿರಬಹುದು. ಸದರಿಯವನ ಶವವು ಭಾರಿ ಬಿಸಿಲಿನಿಂದ ಹಾಗೂ ಇತ್ತಿಚಿಗೆ ಸುರಿದ ಮಳೆಯಿಂದ ಶವ ಕೊಳತಿರುತ್ತದೆ. ಸದರಿಯವನ ಸಾವಿನ ಬಗ್ಗೆ ನನಗೆ ಯಾರ ಮೇಲೆ ಸಂಶಯ ಇರುವುದಿಲ್ಲಾ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ  ನರೋಣಾ ಠಾಣೆ. ಯು.ಡಿ.ಆರ್. ಸಂ 09/2019 ಕಲಂ 174 ಸಿ.ಆರ್.ಪಿ ಪ್ರಕಾರ ಪ್ರಕರಣ ದಾಖಲಿಸಲಾಗಿದೆ.
ಯಡ್ರಾಮಿ ಠಾಣೆ : ಶ್ರೀ ದೊಡ್ಡಪ್ಪ ತಂದೆ ಬಸಪ್ಪ ಹೊಸಮನಿ ಸಾ||ಪಡಗದಹಳ್ಳಿ ತಾ|| ಜೇವರ್ಗಿ ರವರದು ತಮ್ಮೂರ ಸಿಮಾಂತರದಲ್ಲಿ ನನ್ನ ಮಗ ಸಿದ್ದಪ್ಪನ ಹೆಸರಿನಲ್ಲಿ ಸರ್ವೆ ನಂ 58/2 ರಲ್ಲಿ 3 ಎಕರೆ ಜಮೀನು ಇರುತ್ತದೆ, ನನ್ನ ಮಗ ಹೊಲದ ಸಲುವಾಗಿ ಬಳಬಟ್ಟಿ ಕೆ.ಜಿ.ಬಿ ಬ್ಯಾಂಕನಲ್ಲಿ ಸುಮಾರು 90 ಸಾವಿರ ಸಾಲ ಮತ್ತು ಖಾಸಗಿಯಾಗಿ 3 ಲಕ್ಷ ರೂಪಾಯಿ ಸಾಲ ಮಾಡಿಕೊಂಡಿದ್ದನು, ನನ್ನ ಮಗ ಸಿದ್ದಪ್ಪ ಇತನು ಆಗಾಗ ನಮ್ಮ ಮುಂದೆ ನಮಗೆ ಸಾಲ ಬಹಳಾಗಿದೆ, ಈ ಸಲ ಮಳೆಯು ಸರಿಯಾಗಿ ಬಾರದೆ  ಹೊಲದಲ್ಲಿನ ಬೆಳೆಯು ಸಹ ಸರಿಯಾಗಿ ಬೆಳೆದಿಲ್ಲಾ, ಊರಲ್ಲಿ ನಾನು ಮುಖ ಎತ್ತಿ ತಿರುಗಾಡಲು ಆಗುತ್ತಿಲ್ಲಾ, ನಾನು ಸತ್ತರೆ ಎಲ್ಲಾ ಸರಿಹೋಗುತ್ತದೆ ಅಂತಾ ಅನ್ನುತ್ತಿದ್ದರು ಆಗ ನಾವು ಅವರಿಗೆ ಸಮಾಧಾನ ಹೇಳುತ್ತಾ ಬಂದಿರುತ್ತೇವೆ. ದಿನಾಂಕ; 02-06-2019 ರಂದು ರಾತ್ರಿ 8-00 ಗಂಟೆ ಸುಮಾರಿಗೆ ನನ್ನ ಮಗ ಬೈಹಿರದೇಸೆಗೆ ಹೋಗಿ ಬರುತ್ತೇನೆ ಅಂತಾ ಹೇಳಿ ಹೋದವನು, ಸ್ವಲ್ಪ ಹೊತ್ತಾದ ನಂತರ ನನ್ನ ಮಗ ಮನೆಗೆ ಬಂದು ನಾನು ಸಾಲದ ಸಲುವಾಗಿ ವಿಷ ಸೇವನೆ ಮಾಡಿದ್ದೇನೆ ಅಂತಾ ಅಂದು ಒಮ್ಮೇಲೆ ಒದ್ದಾಡಿ ವಾಂತಿ ಮಾಡಿಕೊಳ್ಳುತ್ತಿದ್ದನು, ಆಗ ನಾನು ಗಾಬರಿಗೊಂಡು ನನ್ನ ಮಕ್ಕಳಾದ ಗುರಪ್ಪ ಮತ್ತು ಭೀಮರಾಯ ಅವನ ಹೆಂಡತಿ ಮರೇಮ್ಮ ಎಲ್ಲರೂ ಕೂಡಿ ಉಪಚಾರ ಕುರಿತು ಖಾಸಗಿ ವಾಹನದಲ್ಲಿ ಶಹಾಪುರ ಸ್ಪಂದನಾ ಆಸ್ಪತ್ರೆಗೆ ತೋರಿಸಿ ನಂತರ ಹೆಚ್ಚಿನ ಉಪಚಾರ ಕುರಿತು ಕಲಬುರಿಗಿಯ ವಾತ್ಸಲ್ಯ ಆಸ್ಪತ್ರೆಯಲ್ಲಿ ಉಪಚಾರ ಪಡೆದಯುತ್ತಾ ಇಂದು ದಿನಾಂಕ: 04-06-2019 ರಂದು ಬೆಳಗ್ಗೆ 7-40 ಗಂಟೆಗೆ ನನ್ನ ಮಗ ಮೃತ ಪಟ್ಟಿರುತ್ತಾನೆ, ಕಾರಣ ನನ್ನ ಮಗ ಹೊಲದ ಸಲುವಾಗಿ ಸಾಲ ಮಾಡಿಕೊಂಡಿದ್ದು, ಸಾಲ ತೀರಿಸಲಾಗದೆ ಚಿಂತೆ ಮಾಡುತ್ತಾ ಜಿಗುಪ್ಸೆಗೊಂಡು  ದಿನಾಂಕ 02-06-2019 ರಂದು ರಾತ್ರಿ 8-00 ಗಂಟೆಯ ಸುಮಾರಿಗೆ  ಯಾವುದೋ ಕ್ರಿಮಿನಾಷಕ ಔಷಧಿ ಸೇವಿಸಿ, ಉಪಚಾರ ಪಡೆಯುತ್ತಾ ಇಂದು ಆಸ್ಪತ್ರೆಯಲ್ಲಿ ಮೃತ ಪಟ್ಟಿರುತ್ತಾನೆ, ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯ ಯು.ಡಿ.ಆರ್. ನಂ; 13/2019 ಕಲಂ 174 ಸಿ.ಆರ್.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಲಾಗಿದೆ.