POLICE BHAVAN KALABURAGI

POLICE BHAVAN KALABURAGI

04 June 2019

KALABURAGI DISTRICT REPORTED CRIMES

ಅಪಘಾತ ಪ್ರಕರಣಗಳು :
ಸಂಚಾರಿ ಠಾಣೆ 02 : ದಿನಾಂಕ-02/06/2019 ರಂದು ಸಾಯಂಕಾಲ 7-00 ಗಂಟೆ ಸುಮಾರಿಗೆ ಮಹ್ಮದ ಯುನುಸ್ ಈತನು ತನ್ನ ಹೊಸ ಮೋಟಾರ ಸೈಕಲ ಚಸ್ಸಿ  MBLHAW091K5C02257 ನೇದ್ದರ ಮೇಲೆ ಹಿಂದುಗಡೆ ಶ್ರೀಮತಿ ಸಮೀನಾ ಗಂಡ ಸಮದ ಅಹ್ಮದ ಸಾ : ಮುಗುಟಾ ತಾ ಚಿತ್ತಾಪೂರ ಹಾ.ವ. ಉಮರ ಕಾಲೂನಿ ಆಜಾದ ಪೂರ ರೋಡ ಕಲಬುರಗಿ ರವರ  ಗಂಡ ಸಮದ ಅಹ್ಮದ  ಈತನಿಗೆ ಕೂಡಿಸಿಕೊಂಡು ಪಟ್ಟಣ ಕ್ರಾಸ್ ದಿಂದ ಕಲಬುರಗಿ ಕಡೆಗೆ ಹೋಗುವ ಕುರಿತು ತನ್ನ ಮೋಟಾರ ಸೈಕಲನ್ನು  ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಪಟ್ಟಣ ಕ್ರಾಸ್ ಸಮೀಪ ರೋಡ ಮೇಲೆ ಒಮ್ಮೆಲೆ ಮೋಟಾರ ಸೈಕಲ ಬ್ರೇಕ್ ಹಿಡಿದು ಸಮದ ಅಹ್ಮದ ಈತನಿಗೆ ಮೋಟಾರ ಸೈಕಲ ಸಮೇತ ಕೆಳಗೆ ಬಿಳಿಸಿ ಸಮದ ಅಹ್ಮದ ಈತನಿಗೆ ಬಾರಿಗಾಯಗೊಳಿಸಿದರಿಂದ ಆತನಿಗೆ ಉಪಚಾರ ಕುರಿತು ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿದ್ದು ಸದರಿಯವನು ಉಪಚಾರ ಹೊಂದುತ್ತಾ ಉಪಚಾರ ಫಲಕಾರಿಯಾಗದೆ ದಿನಾಂಕ-03/06/2019 ರಂದು ಬೆಳಿಗ್ಗೆ ಆಸ್ಪತ್ರೆಯಲ್ಲಿ ಮೃತ ಪಟ್ಟಿರುತ್ತಾನೆ.  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆ 02 ರಲ್ಲಿ ಗುನ್ನೆ ನಂ 86/2019 ಕಲಂ 279, 337, 304 (ಎ) ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಅಫಜಲಪೂರ ಠಾಣೆ : ಶ್ರೀ ಶರಣಬಸಪ್ಪ ತಂದೆ ಬಾಬು ಕಟಬರ ಸಾ:ಕೊರಳ್ಳಿ ತಾ:ಆಳಂದ ರವರು ಒಂದು ವರ್ಷದಿಂದ ಭೂಸನೂರ ಗ್ರಾಮದ ಬಸವರಾಜ ತಂದೆ ಕಲ್ಯಾಣರಾವ ಪಾಟೀಲ ರವರ ಬುಲೆರೊ ವಾಹನ ನಂಬರ MH-13 AZ-8294 ನೇದ್ದರ ಮೇಲೆ ಚಾಲಕ ಅಂತ ಕೆಲಸ ಮಾಡಿಕೊಂಡಿರುತ್ತೇನೆ ದಿನಾಂಕ: 02/06/2019 ರಂದು ಬೆಳಿಗ್ಗೆ ನನ್ನ ಮಾಲಕರಾದ ಬಸವರಾಜ ಪಾಟೀಲ ರವರು ನನಗೆ ತಿಳಿಸಿದ್ದೆನಂದರೆ ಸಾಲೋಟಗಿ ಗ್ರಾಮದಲ್ಲಿ ನಮ್ಮ ಸಂಭಂದಿಕರ ನಿಚ್ಚಿತಾರ್ಥ ಕಾರ್ಯಕ್ರವವಿದೆ ಹೋಗಿ ಬರೋಣ ಅಂತ ಹೇಳಿ ತಮ್ಮ ಸಂಗಂಡ ಭೂಸನೂರ ಗ್ರಾಮದವರಾದ 1)ಚಂದಪ್ಪ ತಂದೆ ಮಲ್ಲಪ್ಪ ಯಂಕಂಚಿ 2)ಹಣಮಂತ ತಂದೆ ಶರಣಪ್ಪ ಪ್ಯಾಟಿ 3)ಶಂಕರಾವ ತಂದೆ ಸಿದ್ದಣ್ಣ ಪಾಟೀಲ ರವರೂಗಳಿಗೆ ಕರೆದು 9-30 .ಎಮ್.ಸುಮಾರಿಗೆ ಭುಸನೂರ ಗ್ರಾಮದಿಂದ ಬುಲೆರೊ ವಾಹನ ನಂಬರ MH-13 AZ-8294 ನೇದ್ದರಲ್ಲಿ ಹೋಗಿರುತ್ತೇವೆ ಅಲ್ಲಿ ಕಾರ್ಯಕ್ರಮ ಮುಗಿಸಿ ಮರಳಿ ಆಲಮೇಲ ಅಫಜಲಪೂರ ಮಾರ್ಗವಾಗಿ ಭೂಸನೂರ ಗ್ರಾಮಕ್ಕೆ ಹೋಗುತ್ತೀರುವಾಗ 4-00 ಪಿ,ಎಮ್.ಸುಮಾರಿಗೆ ಮಾರ್ಗ ಮಧ್ಯದಲ್ಲಿ ಮಾತೋಳಿ ಗ್ರಾಮ ಸಮೀಪ ಹೋಗುತ್ತಿರುವಾಗ ನಾನು ಚಲಾಯಿಸುತ್ತಿದ್ದ ಬುಲೆರೊ ವಾಹನಕ್ಕೆ ಬಲಗಡೆ ಹೊಲದ ದಾರಿಯಿಂದ ಮುಖ್ಯ ರಸ್ತೆ ಮೇಲೆ ಅಡ್ಡಲಾಗಿ ಟ್ರ್ಯಾಕ್ಟರ ಚಾಲಕ ಅತೀ ವೇಗವಾಗಿ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ನಮ್ಮ ಬುಲೆರೊ ವಾಹನಕ್ಕೆ ಡಿಕ್ಕಿ ಪಡಿಸಿ ನಮಗೆ ನೋಡಿ ತನ್ನ ಟ್ರ್ಯಾಕ್ಟರನ್ನು ಸ್ಥಳದಲ್ಲಿ ಬಿಟ್ಟು ಓಡಿ ಹೋಗಿರುತ್ತಾನೆ ನಂತರ ಟ್ರ್ಯಾಕ್ಟರ ನಂಬರ ನೋಡಲಾಗಿ KA-32 TB-3516 ನೇದ್ದು ಇದ್ದು ಅದು ಮಹಿಂದ್ರಾ ಕಂಪನಿಯದು ಇರುತ್ತದೆ. ಸದರಿ ಅಪಘಾತದಲ್ಲಿ ನನಗೆ ತಲೆಗೆ ರಕ್ತಗಾಯ ಮತ್ತು ಎದಗೆ ಒಳಪೆಟ್ಟು ಆಗಿರುತ್ತದೆ ನನ್ನಂತೆ ಬುಲೆರೊ ವಾಹನದಲ್ಲಿ ಕುಳಿತಿದ್ದ ಬಸವರಾಜ ಪಾಟೀಲ ರವರಿಗೆ ತಲೆಯ ಬಲ ಭಾಗಕ್ಕೆ ರಕ್ತಗಾಯವಾಗಿರುತ್ತದೆ ಚಂದಪ್ಪ ರವರಿಗೆ ಎಡಗೈ ಮುರಿದಿರುತ್ತದೆ ಹಣಮಂತರವರಿಗೆ ಎಡಗೈ ಮುರಿದು ತಲೆಯ ಬಲ ಭಾಗಕ್ಕೆ ಭಾರಿ ರಕ್ತಗಾಯವಾಗಿರುತ್ತದೆ ಶಂಕರರಾವ ರವರಿಗೆ ತಲೆಗೆ ರಕ್ತಗಾಯವಾಗಿರುತ್ತದೆ.ಮತ್ತು ಬುಲೆರೊ ವಾಹನದ ಮುಂದಿನ ಭಾಗ ಜಖಂಗೊಂಡಿರುತ್ತದೆ ನಂತರ 108 ವಾಹನಕ್ಕೆ ಕರೆಯಿಸಿಕೊಂಡು ನಾವೆಲ್ಲರು ಅದರಲ್ಲಿ ಉಪಚಾರ ಕುರಿತು ಕಲಬುರರ್ಗಿಯ ಪಿ.ಜಿ.ಶಹಾ ಆಸ್ಪತ್ರೇಯಲ್ಲಿ ಸಾಯಂಕಾಲ 6 ಗಂಟೆ ಸುಮಾರಿಗೆ ಸೇರಿಕೆಯಾಗಿರುತ್ತೇವೆ. ಅಂತಾ ಸಲ್ಲಿಸಿದ  ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಗುನ್ನೆ ನಂ 76/2019 ಕಲಂ 279, 337, 338 ಐಪಿಸಿ ಮತ್ತು 187 .ಎಮ್.ವಿ ಆಕ್ಟ ನೇದ್ದರಲ್ಲಿ ಪ್ರಕರಣ ದಾಖಲಿಸಲಾಗಿದೆ.

03 June 2019

KALABURAGI DISTRICT REPORTED CRIMES

ಇಸ್ಪೀಟ ಜೂಜಾಟದಲ್ಲಿ ನಿರತವರ ಬಂಧನ :
ರಾಘವೇಂದ್ರ ನಗರ ಠಾಣೆ : ದಿನಾಂಕ 02.06.2019 ರಂದು ಮದ್ಯಾಹ್ನ ರಾಘವೇಂದ್ರ ನಗರ ಠಾಣಾ ವ್ಯಾಪ್ತಿಯ ಕೆಹೆಚ್ಬಿ ಕಾಲೋನಿ ಹತ್ತಿರ ಎಕ್ಸ್ ಬಿಲ್ಡಿಂಗ್ ಹತ್ತಿರ ಇರುವ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಗುಂಪಾಗಿ ಕುಳಿತು ಪಣಕ್ಕೆ ಹಣ ಹಚ್ಚಿ ಅಂದರ ಬಾಹರ ಜೂಜಾಟ ಆಡುತ್ತಿದ್ದ ಬಗ್ಗೆ ಖಚಿತ ಬಾತ್ಮಿ ಬಂದ ಮೇರೆಗೆ  ಪಿ.ಐ. ರಾಘವೇಂದ್ರ ನಗರ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಬಾತ್ಮಿಯಂತೆ ಕೆಹೆಚ್ಬಿ ಕಾಲೋನಿ ಹತ್ತಿರ ಎಕ್ಸ್ ಬಿಲ್ಡಿಂಗ್ ಹತ್ತಿರ ಸ್ವಲ್ಪ ದೂರದಲ್ಲಿ ಜೀಪ ನಿಲ್ಲಿಸಿ ನಾವು ಎಲ್ಲರು ಜೀಪಿನಿಂದ ಕೆಳೆಗೆ ಇಳಿದು ನಡೆದುಕೊಂಡು ಹೋಗಿ ಕಂಪೌಂಡ ಮರೆಯಲ್ಲಿ ನಿಂತು ನೋಡಲು ಕೆಹೆಚ್ಬಿ ಕಾಲೋನಿ ಹತ್ತಿರ ಎಕ್ಸ್ ಬಿಲ್ಡಿಂಗ್ ಹತ್ತಿರ ಇರುವ ಖುಲ್ಲಾ ಜಾಗೆಯಲ್ಲಿ  ಸಾರ್ವಜನಿಕ ಸ್ಥಳಲ್ಲಿ 9-10 ಜನರು ಗುಂಪಾಗಿ ಕುಳಿತು ಹಣ ಪಣಕ್ಕೆ ಹಚ್ಚಿ ಅಂದರ ಬಾಹರ ಜೂಜಾಟ ಆಡುತ್ತಿದ್ದು ಅವರಲ್ಲಿ ಒಬ್ಬನು ಎಲೆಗಳನ್ನು ಹಾಕಿದ್ದು, ಒಬ್ಬನು ಅಂದರಕ್ಕೆ 100 ರೂಪಾಯಿ ಮತ್ತು ಇನ್ನೂಬ್ಬನು ಬಾಹರಕ್ಕೆ 150 ರೂಪಾಯಿ ಅಂತ ಕೂಗುತ್ತಾ ಕಣದಲ್ಲಿ ಹಣ ಹಾಕುತ್ತಿದ್ದು ಸದರಿಯವರು ಅಂದರ ಬಾಹರ ಜೂಜಾಟ ಆಡುತ್ತಿರುವದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಜೂಜಾಟ ನಿರತರನ್ನು ವಶಕ್ಕೆ ಪಡೆದುಕೊಂಡು ನಂತರ ಸದರಿಯವರ ಹೆಸರು ವಿಳಾಸ ವಿಚಾರಿಸಲು 1) ಶಿವಾನಂದ ತಂದೆ ವರಶಂಕರ ಪಾಟೀಲ ಸಾಃ ಸಂತೋಷ ಕಾಲೋನಿ ಕಲಬುರಗಿ  2) ವೈಜನಾಥ ತಂದೆ ಸೋಮನಾಥ @ ಸೋಮಶೇಖರ ಪಾಟೀಲ ಸಾಃ ಪ್ರಭುದೇವ ನಗರ ಸಂತೋಷ ಕಾಲೋನಿ ಕಲಬುರಗಿ 3) ಬಸವರಾಜ ತಂದೆ ಚನ್ನಬಸಪ್ಪ ಕೋರಳ್ಳಿ ಸಾಃ ಪ್ರಭುದೇವ ನಗರ ಡಬರಬಾದ ರೋಡ ಕಲಬುರಗಿ 4) ಅರುಣಕುಮಾರ ತಂದೆ ಶಾಂತಪ್ಪ ದೋಣಿ ಸಾಃ ಶಹಾಬಜಾರ ನಾಕ ಆಳಂದ ರೋಡ ಕಲಬುರಗಿ 5) ಶಮಸಾ ಆಲಮ್ ತಂದೆ ಖಾಜಾ ಮೈನೋದ್ದಿನ ಸಾಃ ಖಾದ್ರಿ ಚೌಕ ಹತ್ತಿರ ಕಲಬುರಗಿ 6)  ಹುಸೇನಿ ತಂದೆ ಗೌಸೋದ್ದಿನ ಪಟೇಲ ಸಾಃ ಎಮ್ಎಸ್.ಕೆ ಮೀಲ್ ಹತ್ತಿರ ಕಲಬುರಗಿ 7) ಜಗದೀಶ ತಂದೆ ಭೀಮಶ್ಯಾ ವಾಡಿ ಸಾಃ ಶಹಾಬಜಾರ ನಾಕ ಹತ್ತಿರ ಕಲಬುರಗಿ 8) ನಾಗೇಶ ತಂದೆ ಕಲ್ಯಾಣಪ್ಪ ಆಳಂಗೆ ಸಾಃ ಸಂತೋಷ ಕಾಲೋನಿ ಕಲಬುರಗಿ 9) ಪ್ರಭಾಕರ ತಂದೆ ಗುರಪ್ಪಾ ಬಾಳಿ ಸಾಃ ರಾಣೆಜ ಪೀರ ದರ್ಗಾ ರೋಡ ಕಲಬುರಗಿ  ಅಂತಾ ತಿಳಿಸಿದ್ದು ಸದರಿಯವರಿಂದ ಜೂಜಾಟಕ್ಕೆ ಬಳಸಿದ ನಗದು ಹಣ  ಒಟ್ಟು 2850/- ರೂ ಮತ್ತು 52 ಇಸ್ಪೇಟ ಎಲೆಗಳನ್ನು ವಶಕ್ಕೆ ಪಡೆದು ಸದರಿಯವರೊಂದಿಗೆ ರಾಘವೇಂದ್ರ ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.  
ಅಪಘಾತ ಪ್ರಕರಣ :
ಸಂಚಾರಿ ಠಾಣೆ 01 : ದಿನಾಂಕ 02.06.2019 ರಂದು ಸಾಯಂಕಾಲ 7-30 ಗಂಟೆ ಸುಮಾರಿಗೆ ಮೃತ ಸಂತೋಷ ಇತನು ಸರಡಗಿ (ಬಿ) ಗ್ರಾಮದಲ್ಲಿದ ತನ್ನ ಹೆಂಡತಿಯನ್ನು ಕರೆದುಕೊಂಡು ಬರುವ ಸಲುವಾಗಿ ಪಾಳಾ ಗ್ರಾಮದಿಂದ ಕಲಬುರಗಿ ಮುಖಾಂತರವಾಗಿ ಸರಡಗಿ (ಬಿ) ಗ್ರಾಮಕ್ಕೆ ಮೋಟಾರ ಸೈಕಲ ನಂಬರ ಕೆಎ-32/ಇಕೆ-9105 ನೇದ್ದನ್ನು ಚಲಾಯಿಸಿಕೊಂಡು ಹೋಗುವಾಗ ಕಲಬುರಗಿ ಜೇವರಗಿ  ಮುಖ್ಯ ರಸ್ತೆಯಲ್ಲಿ ಬರುವ ಜೈಲ ಹತ್ತೀರ ಬರುವ ಸಿತನೂರ ಗ್ರಾಮದ ಕ್ರಾಸ ಹತ್ತೀರ ರೋಡ ಮೇಲೆ ಎದುರಿನಿಂದ ಟಿಪ್ಪರ ನಂಬರ ಕೆಎ-32/ಡಿ-2512 ನೇದ್ದರ ಚಾಲಕನು ತನ್ನ ವಾಹನವನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಸಂತೋಷ ಇತನ ಮೋಟಾರ ಸೈಕಲಕ್ಕೆ ಡಿಕ್ಕಿಪಡಿಸಿ ಅಪಘಾತ ಮಾಡಿ ಸಂತೋಷ ಇತನಿಗೆ ಭಾರಿಗಾಯಗೊಳಿಸಿ ತನ್ನ ವಾಹನ ಅಲ್ಲೇ ಬಿಟ್ಟು ಓಡಿ ಹೋಗಿದ್ದು ಸಂತೋಷ ಇತನು ಕಲಬುರಗಿ ಸರ್ಕಾರಿ ಆಪತ್ರೆಯಲ್ಲಿ ಉಪಚಾರ ಕುರಿತು ಸೇರಿಕೆಯಾಗಿ ಉಪಚಾರ ಫಲಕಾರಿಯಾಗದೆ ದಿನಾಂಕ 02-06-2019 ರಂದು ರಾತ್ರಿ 11-15 ಗಂಟೆಗೆ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾರೆ ಅಂತಾ ಶ್ರೀ ಭದ್ರಪ್ಪಾ ತಂದೆ ಹಣಮಂತಪ್ಪಾ ಕಾಳನೂರ ಸಾ: ಪಾಳಾ  ಗ್ರಾಮ ತಾ:ಜಿ: ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆ 01 ರಲ್ಲಿ ಪ್ರಕರಣ ದಾಖಲಾಗಿದೆ.

02 June 2019

KALABURAGI DISTRICT REPORTED CRIMES

ಅಪಘಾತ ಪ್ರಕರಣ :
ಸಂಚಾರಿ ಠಾಣೆ 01 : ದಿನಾಂಕ 02.06.2019 ರಂದು ಮೃತ ಮಹ್ಮದ ಖಲೀಲ ಇತನು ತಾನು ಚಲಾಯಿಸುತ್ತೀರುವ ಮೋಟಾರ ಸೈಕಲ ನಂ ಕೆಎ-14/ಇಎಮ್-8942 ನೇದ್ದರ ಹಿಂದುಗಡೆ ಫಿರೋಜ್ ಇತನನ್ನು ಕೂಡಿಸಿಕೊಂಡು ರೈಮಾನೀಯಾ ಮಜೀದನಿಂದ ರೈಲ್ವೆ ಸ್ಟೇಷನಲ್ಲಿ ಚಹಾ ಕುಡಿಯುವ ಸಲುವಾಗಿ ಜಿ.ಜಿ.ಹೆಚ್ ಸರ್ಕಲ ಮುಖಾಂತರವಾಗಿ ಮೋಟಾರ ಸೈಕಲ ಚಲಾಯಿಸಿಕೊಂಡು ರೈಲ್ವೆ ಸ್ಠೆಷನಕ್ಕೆ ಹೋಗುವಾಗ ದಾರಿ ಮದ್ಯ ಟೌನಹಾಲ ಕ್ರಾಸ ಹತ್ತೀರ ರೋಡ ಮೇಲೆ ಟಾಟಾ ಎಸ ಗೂಡ್ಸ ನಂ ಕೆಎ-32/ಬಿ-3325 ನೇದ್ದರ ಚಾಲಕ ದೇವಿಂದ್ರ ಇತನು ಎಸ.ವಿ.ಪಿ ಸರ್ಕಲ ಕಡೆಯಿಂದ ಜಿ.ಜಿ.ಹೆಚ್ ಸರ್ಕಲ ಕಡೆಗೆ ಹೋಗುವ ಕುರಿತು ತನ್ನ ವಾಹನವನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಎಡ ರೋಡಿಗೆ ಹೋಗದೆ ಬಲ ರೋಡಿಗೆ ಒಮ್ಮಲೇ ತಿರುಗಿಸಿ ಎದುರಿನಿಂದ ಚಲಾಯಿಸಿಕೊಂಡು ಹೋಗಿ ಮಹ್ಮದ ಖಲೀಲ ಇತನು ಚಲಾಯಿಸುತ್ತೀರುವ ಮೋಟಾರ ಸೈಕಲಕ್ಕೆ ಡಿಕ್ಕಿಪಡಿಸಿ ಅಪಘಾತ ಮಾಡಿ ಮಹ್ಮದ ಖಲೀಲ ಇತನಿಗೆ ಭಾರಿಗಾಯಗೊಳಿಸಿದ್ದರಿಂದ ಮಹ್ಮದ ಖಲೀಲ ಇತನು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ  ಅಂತಾ ಶ್ರೀ ಫಿರೋಜ್ ತಂದೆ ಹಾಜಿಮಿಯಾ ಸಾ: ಬಿ.ಶ್ಯಾಮಸುಂದರ ನಗರ ಕಲಬುರಗಿ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆ 01 ರಲ್ಲಿ ಪ್ರಕರಣ ದಾಖಲಾಗಿದೆ.
ಲಾರಿ ಕಳವು ಪ್ರಕರಣ :
ಚೌಕ ಠಾಣೆ : ಶ್ರೀ ಭುಮಣ್ಣ ತಂದೆ ಸೊಮಣ್ಣ ಸಲಗರೆ ಸಾ: ಜಿರೋಳ್ಳಿ ಹಾಲಿವಾಸ: ಶಿವಾಜಿ ನಗರ ಕಲಬುರಗಿ  ರವರ  ಹತ್ತಿರ 2 ಲಾರಿಗಳು ಇರುತ್ತವೆ ಅವುಗಳ ನಂ 1. KA 39 5094 ಇದನ್ನು  ನಾನು ಸುಮಾರು 05 ವರ್ಷಗಳ ಹಿಂದೆ ಖರಿಧಿ ಮಾಡಿದ್ದು ಇದನ್ನು ನಮ್ಮ (ಸಡಕ) ತಮ್ಮನಾದ ಪ್ರಕಾಶ ತಂದೆ ರಾಜಪ್ಪ ಸಾ: ಮುಗನೂರ ಇವರು ನಡೆಸಿಕೊಂಡು ಬರುತ್ತಿದ್ದರು ಇನ್ನೊಂದು ಲಾರಿನಂ KA 56  0131 ಇದನ್ನು ಒಂದುವರೆ ವರ್ಷದ ಹಿಂದೆ ಖರೀಧಿಸಿದ್ದು ಇದನ್ನು  ನಾನೇ ಸ್ವತಃ ಡ್ರೈವಿಂಗ ಮಾಡಿಕೊಂಡು ಬಾಡಿಗೆ ಹೊಡೆಯುತ್ತಾ ಉಪಜೀವಿಸುತ್ತೇನೆ. ಯಾವಾಗಲು ನನ್ನ ಲಾರಿಗಳನ್ನು ಬಾಡಿಗೆಯಿಂದ ಮರಳಿ ಬಂದಾಗ ನಮ್ಮ ಮನೆಯ ಹತ್ತಿರ ಪಾರ್ಕಿಂಗಗಾಗಿ ಸ್ಥಳ ಇಲ್ಲದೆ ಇದ್ದುದ್ದರಿಂದ ಕಲಬುರಗಿಯ ಆಟೋನಗರದ ಲಾರಿ ತಂಗುದಾಣದಲ್ಲಿ ನಮ್ಮ ಲಾರಿಗಳನ್ನು  ನಿಲ್ಲಿಸುತ್ತಾ ಬಂದಿರುತ್ತೇನೆ. ಈಗ ಸುಮಾರು ಎರಡೂವರೆ ತಿಗಂಳ ಹಿಂದೆ ನನ್ನ ಇನ್ನೊಂದು ಲಾರಿಯನ್ನು ನಡೆಯಿಸಿಕೊಂಡು ಬರುತ್ತಿದ್ದ ನಮ್ಮ ಸಡಕನ ತಮ್ಮನು ಲಾರಿ ನಡೆಯಿಸಿಕೊಂಡು ಬರುವುದು ಆಗುವುದಿಲ್ಲ ಅಂತಾ ಹೇಳಿದ್ದರಿಂದ ಅದಕ್ಕೆ ಯಾರೂ ಚಾಲಕರು ಇರದೇ ಇದ್ದುದ್ದರಿಂದ ಅದನ್ನು ಸುಮಾರು ಎರಡೂವರೆ ತಿಂಗಳಿಂದ ಕಲಬುರಗಿಯ ಆಟೋನಗರದ ಲಾರಿ ತಂಗುದಾಣದಲ್ಲಿಯೇ ನಿಲ್ಲಿಸಿದ್ದು ಇತ್ತು ಅದನ್ನು ನಾನು ಆಗಾಗ ಲಾರಿ ತಂಗುದಾಣಕ್ಕೆ ಹೋಗಿ ಸುಸ್ಥಿಯಲ್ಲಿ ಇರುವಂತೆ ನೋಡಿಕೊಳ್ಳುತ್ತಾ ಬಂದಿದ್ದು ಇರುತ್ತದೆ. ಅದರಂತೆ ನಾನು ದಿನಾಂಕ 06.05.2019 ರಂದು ಮುಂಜಾನೆ 10.00 ಗಂಟೆಯ ಸುಮಾರಿಗೆ ನನ್ನ ಇನ್ನೊಂದು ಲಾರಿಯನ್ನು ಬಾಡಿಗೆಗೆ ತೆಗೆದುಕೊಂಡು ಹೋಗುವ ಮುಂಚೆ ನನ್ನ ಲಾರಿ ನಂ. KA 39 5094 ನೆದ್ದನ್ನು ಕಲಬುರಗಿಯ ಆಟೋನಗರ ಲಾರಿ ತಂಗುದಾಣದಲ್ಲಿ ಇರುವುದನ್ನು ನೋಡಿ ನನ್ನ ಇನ್ನೊಂದು ಲಾರಿ ವಾಹನದ ಮೇಲೆ ಬಾಡಿಗೆ ತಗೆದುಕೊಂಡು ನಾನು ಮೈಸೂರಿಗೆ ಹೋಗಿದ್ದು ಇರುತ್ತದೆ. ಮೈಸೂರದಿಂದ ಮರಳಿ ದಿನಾಂಕ.11.05.2019 ರಂದು ನಾನು ಬಾಡಿಗೆಗೆ ತೆಗೆದುಕೊಂಡು ಹೋಗಿದ್ದ ಇನ್ನೊಂದು ಲಾರಿಯನ್ನು ವಾಡಿಯಲ್ಲಿ ಅನಲೋಡ ಮಾಡಲು ಬಿಟ್ಟು ರಾತ್ರಿ 11.00 ಗಂಟೆ ಸುಮಾರಿಗೆ ಕಲಬುರಗಿಗೆ ಬಂದಿದ್ದು ರಾತ್ರಿ ಮನೆಯಲ್ಲಿದ್ದು ಮರುದಿನ ದಿನಾಂಕ.12.05.2019 ರಂದು ಬೆಳಿಗ್ಗೆ 8.00 ಗಂಟೆ ಸುಮಾರಿಗೆ ಆಟೋನಗರ ಲಾರಿ ತಂಗುದಾಣಕ್ಕೆ ಹೋಗಿ ಅಲ್ಲಿ ನಿಲ್ಲಿಸಿದ ನನ್ನ ಲಾರಿ ನಂ. KA 39 5094 ನೆದ್ದು ನೋಡಲಾಗಿ ಅದು ನಿಲ್ಲಿಸಿದ ಸ್ಥಳದಲ್ಲಿ ಇರಲಿಲ್ಲ. ನಾನು ಅಲ್ಲಿರುವ ಲಾರಿ ಗ್ಯಾರೇಜಿನವರಿಗೆ ಹಾಗೂ ಲಾರಿ ಆಫೀಸನವರಿಗೆ, ಹಾಗೂ ನನ್ನ ಲಾರಿಯನ್ನು ಈ ಮೊದಲು ನಡೆಸಿಕೊಂಡು ಬರುತ್ತಿದ್ದ ನಮ್ಮ (ಸಡಕ) ತಮ್ಮನಿಗೆ ವಿಚಾರಿಸಲಾಗಿ ಅವರು ನಮಗೆನು ಗೊತ್ತಿಲ್ಲ ಅಂತಾ ತಿಳಿಸಿರುತ್ತಾರೆ. ನಾನು ಇಂದಿನವರೆಗೆ ಎಲ್ಲಾ ಕಡೆಗೆ ಹುಡುಕಾಡಲಾಗಿ ನನ್ನ ಲಾರಿ ಎಲ್ಲಿಯೂ ಪತ್ತೆಯಾಗಲಿಲ್ಲ. ನನ್ನ ಲಾರಿಯನ್ನು ಯಾರೋ ಕಳ್ಳರು ದಿನಾಂಕ-06.05.2019ರ ಬೆಳಗಿನ 10.00 ಗಂಟೆಯಿಂದ ದಿನಾಂಕ-12.05.2019 ರ ಬೆಳಿಗ್ಗೆ 8.00 ಗಂಟೆಯ ಮದ್ಯದ ಅವಧಿಯಲ್ಲಿ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ.  ಸದರಿ ಕಳುವಾದ ನನ್ನ ಅಶೋಕ ಲೈಲಾಂಡ ಲಾರಿ ವಾಹನದ ವಿವರ ಈ ಕೆಳಗಿನಂತಿದೆ. ಲಾರಿ ವಿವರ  ASHOK LAYLAND , ಲಾರಿ ನಂ  KA 39 5094, ಲಾರಿ ಚೆಸ್ಸಿ ನಂ VFR234228, ಲಾರಿ ಇಂಜನ ನಂ VFH399784, ಲಾರಿ ಮಾದರಿ :2006, ಅಂದಾಜ ಕಿಮ್ಮತ್ತು  - 3,50,000/- ರೂಪಾಯಿ ಆಗಬಹುದು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚೌಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.