POLICE BHAVAN KALABURAGI

POLICE BHAVAN KALABURAGI

17 April 2019

KALABURAGI DISTRICT REPORTED CRIMES

ಅಪಘಾತ ಪ್ರಕರಣಗಳು :
ಅಫಜಲಪೂರ ಠಾಣೆ : ದಿನಾಂಕ:15/04/2019 ರಂದು ಸಾಯಂಕಾಲ 5-30 ಪಿ,ಎಮ್.ಸುಮಾರಿಗೆ ನನ್ನ ಗಂಡನು ಹೊಲಕ್ಕೆ ಹೋಗಿ ಬರುತ್ತೆನೆ ಅಂತ ತನ್ನ ಮೋಟಾರ ಸೈಕಲ ನಂಬರ ಕೆ.-02 ಈಪಿ-2188 ನೇದ್ದನ್ನು ತಗೆದುಕೊಂಡು ನಮ್ಮ ಮನಯಿಂದ ಹೋಗಿರುತ್ತಾನೆ. ನಂತರ 6-30 ಪಿ,ಎಮ್.ಸುಮಾರಿಗೆ ನಮ್ಮ ಜಾತಿಯ ಬಲವಂತ ತಂದೆ ಹಣಮಂತ ಹೋರ್ತಿ ರವರು ನಮ್ಮ ಮನೆಗೆ ಬಂದು ತಿಳಿಸಿದ್ದೆನಂದರೆ ನಾನು ನಮ್ಮ ಹೊಲದಿಂದ ಮನೆಗೆ ಬರಬೆಕೆಂದು ಅಂಬಣ್ಣ ಲೋಣಾರ ರವರ ಹೊಲದ ಹತ್ತೀರ ನಡೆದುಕೊಂಡು ಬರುತ್ತಿರುವಾಗ 6-00 ಪಿ,ಎಮ್.ಸುಮಾರಿಗೆ ಸದರಿ ಹೊಲದ ಹತ್ತೀರ ಮೋಟಾರ ಸೈಕಲ ಮೇಲೆ ಕರಜಗಿ ಕಡೆಯಿಂದ ಬರುತ್ತೀದ್ದ ನಿಮ್ಮ ಗಂಡನ ಮೋಟಾರ ಸೈಕಲಿಗೆ ಅಫಜಲಪೂರ ಕಡೆಯಿಂದ ಟ್ಯಾಂಕರ ನಂಬರ ಕೆ,-32 ಸಿ-9641 ನೆದ್ದರ ಚಾಲಕನು ಅತಿ ವೇಗವಾಗಿ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಎದುರುಗಡೆಯಿಂದ ಅಪಘಾತಪಡಿಸಿದನು ಆಗ ನಾನು ಹೋಗಿ ನೋಡಲಾಗಿ ನಿಮ್ಮ ಗಂಡನ ತಲೆಗೆ ಭಾರಿ ರಕ್ತಗಾಯ, ಬಲಗಾಲಿಗೆ ಮತ್ತು ಬಲಗೈಗೆ ಗಾಯಗಳಾಗಿ ಚರ್ಮ ಸುಲಿದಂತಾಗಿ ಮೂಗಿನಿಂದ ರಕ್ತ ಬಂದು ಸ್ಥಳದಲ್ಲಿ ಮೃತಪಟ್ಟಿರುತ್ತಾನೆ ಮತ್ತು ಸದರಿ ಟ್ಯಾಂಕರ ಚಾಲಕನು ತನ್ನ ಟ್ಯಾಂಕರನ್ನು ಸ್ಥಳದಲ್ಲಿ ನಿಲ್ಲಿಸಿ ಅಪಘಾತವಾಗಿರುವದನ್ನು ನೋಡಿ ಟ್ಯಾಂಕರ ಬಿಟ್ಟು ಓಡಿ ಹೋಗಿರುತ್ತಾನೆ ಅಂತ ತಿಳಿಸಿದ ಮೇರೆಗೆ ನಾನು ಮತ್ತು ನನ್ನ ಗಂಡನ ಸೋದರ ಅಳಿಯನಾದ ಬಸವರಾಜ ತಂದೆ ಸುಭಾಷ ಶೇಷಗಿರಿ ಇಬ್ಬರು ಸ್ಥಳಕ್ಕೆ ಬಂದು ನೋಡಲಾಗಿ ನನ್ನ ಗಂಡನು ಅಪಘಾತದಲ್ಲಿ ಆಗಿರುವ ಗಾಯಗಳಿಂದ ಸ್ಥಳದಲ್ಲಿಯೆ ಮೃತ ಪಟ್ಟಿದ್ದು ಕಂಡುಬಂದಿರುತ್ತದೆ. ಅಂತಾ ಶ್ರೀಮತಿ ಭೌರಮ್ಮ ಗಂಡ ಹಣಮಂತ ನಿಂಬಾಳ ಸಾ: ಕರಜಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಫಜಲಪೂರ ಠಾಣೆ : ಶ್ರೀ ಮಲ್ಲಿನಾಥ ತಂದೆ ಲಿಂಗಣ್ಣ ಅಂಕಲಗಿ ಸಾ: ಬೈರಾಮಡಗಿ ರವರು ದಿನಾಂಕ:24/02/2019 ರಂದು ಘತ್ತರಗಿ ಗ್ರಾಮದ ಶ್ರೀ ಭಾಗ್ಯವಂತಿ ದೆವಸ್ಥಾನದಲ್ಲಿ ನನ್ನ ತಂಗಿಯ ಮಗಳ ಜವಳ ಕಾರ್ಯಕ್ರಮವಿದ್ದ ಕಾರಣ ಸದರಿ ಕಾರ್ಯಕ್ರಮಕ್ಕೆ ಹೋಗುವ ಕುರಿತು ನಾನು ಮತ್ತು ನನ್ನ ತಾಯಿಯಾದ ಶಾರದಾಭಾಯಿ  ಇಬ್ಬರು ಕೂಡಿಕೊಂಡು ಬೆಳಿಗ್ಗೆ  9-30 ಗಂಟೆ ಸುಮಾರಿಗೆ ನನ್ನ ಮೋಟಾರ ಸೈಕಲ ನಂಬರ ಕೆ,-32 ಈಆರ್-7855 ನೇದ್ದರ ಮೇಲೆ ನಮ್ಮೂರಿನಿಂದ ಬಿಟ್ಟಿರುತ್ತೇವೆ ನಾವು 11-00 ,ಎಮ್.ಸುಮಾರಿಗೆ ನಾವು ಹಿಂಚಗೇರಿ ಗ್ರಾಮ ದಾಟಿ ಅಂದಾಜು 500 ಮೀಟರದಲ್ಲಿ ಘತ್ರರ್ಗಿ ಗ್ರಾಮದ ಕಡೆ ಹೋಗುತ್ತಿದ್ದಾಗ ಸದರಿ ಕಾರ್ಯಕ್ರಮಕ್ಕೆ ಬರುತ್ತಿದ್ದ ನಮ್ಮ ಗ್ರಾಮದ ರಾಜ ಅಹ್ಮದ ತಂದೆ ಮಹ್ಮದ ಹುಸೇನಿ ಕೋಗನೂರ ಈತನು ತನ್ನ ಮೋಟಾರ ಸೈಕಲ ನಂಬರ ಕೆ,-32 ಈಎಲ್-3296 ನೇದ್ದರ ಮೇಲೆ ಅತಿ ವೇಗವಾಗಿ ಮತ್ತು ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ನಮ್ಮ ಹಿಂದಿನಿಂದ ಬಂದು ನನ್ನ ಮೋಟಾರ ಸೈಕಲಗೆ ಡಿಕ್ಕಿಪಡಿಸಿದ್ದು ಆಗ ನನ್ನ ಮೋಟಾರ ಸೈಕಲ ಮೇಲೆ ಕುಳಿತಿದ್ದ ನನ್ನ ತಾಯಿಯು ಮೋಟರ ಸೈಕಲ ಮೇಲಿಂದ ಕೇಳಗಡೆ ಬಿದ್ದಳು ಆಗ ನಾನು ಮೋಟಾರ ಸೈಕಲ ಮೇಲಿಂದ ಕೆಳಗಡೆ ಇಳಿದು ನೋಡಲಾಗಿ ನನ್ನ ತಾಯಿಗೆ ತಲೆಗೆ ಭಾರಿ ಒಳಪೆಟ್ಟಾಗಿ ಬೆಹುಸಾಗಿ ಬಿದ್ದಿರುತ್ತಾಳೆ ಮಾತನಾಡಿಸಿದರು ಮಾತನಾಡುವ ಸ್ಥಿತಿಯಲ್ಲಿ ಇದ್ದಿರುವದಿಲ್ಲ ನಂತರ ನಾನು ನನ್ನ ತಾಯಿಗೆ ಅಫಜಲಪೂರ ಕಡೆ ಬರುತ್ತಿದ್ದ ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಬಂದು ಅಫಜಲಪೂರದ ಸರಕಾರಿ ದವಾಖಾನೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ನಂತರ ಅಲ್ಲಿಂದ ಹೆಚ್ಚಿನ ಉಪಚಾರ ಕುರಿತು ಸೋಲಾಪೂರದ ವಳಸಂಗಕರ ಆಸ್ಪತ್ರೇಗೆ ಸೇರಿಕ ಮಾಡಿರುತ್ತೇನೆ.   ಕಾರಣ ನನ್ನ ಮೋಟಾರ ಸೈಕಲಕ್ಕೆ ಅಪಘಾತಪಡಿಸಿ ನನ್ನ ತಾಯಿಗೆ ಗಾಯಗೋಳಿಸಿದ ಮೋಟಾರ ಸೈಕಲ ನಂಬರ ಕೆ,-32 ಈಎಲ್-3296 ನೇದ್ದರ ಸವಾರನಾದ ರಾಜ ಅಹ್ಮದ ತಂದೆ ಮಹ್ಮದ ಹುಸೇನಿ ಕೋಗನೂರ ಸಾ||ಭೈರಾಮಡಗಿ ಈತನ ವಿರುದ್ದ ಕಾನೂನು ಕ್ರಮ ಜರುಗಿಸಬೇಕು ಅಂತಾ ಸಲಕ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾಡಬೂಳ ಠಾಣೆ : ದಿನಾಂಕ 15/04/2019 ರಂದು ಮೃತ ಶಿವರಾಜ ಹಾಗೂ ಈಶ್ವರ ಇವರಿಬ್ಬರು ಕೂಡಿಕೊಂಡು ಸೇಡಂ ಹತ್ತಿರ ರಂಜೋಳ ಗ್ರಾಮದಲ್ಲಿ ಫಿರ್ಯಾದಿಯ ಗ್ರಾಮದವನಾದ ಕಾಶಪ್ಪ ತಂದೆ ಶಾಂತಪ್ಪ ಮಾಂಗ ಇವರು ದೇವರ ಕಾರ್ಯಕ್ರಮಕ್ಕೆ ಹೇಳಿದ ಮೇರೆಗೆ ಮೃತನು ತನ್ನ ಹತ್ತಿರ ಇದ್ದ ಇನ್ನು ಪಾಸಿಂಗ ಆಗದ ಹಿರೋ ಹೊಂಡಾ ಸ್ಪಲೆಂಡರ ಮೋಟರ ಸೈಕಲ ನೇದ್ದನ್ನು ಇಬ್ಬರು ಕೂಡಿ ರಂಜೋಳ ಗ್ರಾಮಕ್ಕ ಹೋಗಿ ದೇವರ ಕಾರ್ಯಕ್ರಮ ಮುಗಿಸಿಕೊಂಡು ಮರಳಿ ಅದೇ ಮೋಟರ ಸೈಕಲ ಮೇಲೆ ಅಲ್ಲಿಂದ ಊರಿಗೆ ಬರುತ್ತಿದ್ದಾಗ ಸಮಯ 6-15 ಪಿ.ಎಂ ಸುಮಾರಿಗೆ ಕಲಬುರಗಿಯ ಸೇಡಂ ರಾಜ್ಯ ಹೆದ್ದಾರಿಯ ಟೆಂಗಳಿ ಕ್ರಾಸ ಸಮೀಪ ರಾಯಲ ಧಾಬಾದ ರೋಡಿನ ಮೇಲೆ ಮೋಟರ ಸೈಕಲ ಮೇಲೆ ಹೋಗುತ್ತಿದ್ದಾಗ ಎದುರು ಗಡೆಯಿಂದ ಅಂದರೆ ಟೆಂಗಳಿ ಕ್ರಾಸ ಕಡೆಯಿಂದ ಲಾರಿ ನಂಬರ ಎಂ.ಎಚ್ 04 ಜಿ.ಆರ್-8080 ನೇದ್ದರ ಚಾಲಕನು ತನ್ನ ಲಾರಿಯನ್ನು ಅತೀ ವೇಗ ಹಾಗೂ ನಿಷ್ಕಜಿತನದಿಂದ ಚಲಾಯಿಸಿಕೊಂಡು ಬಂದವನೇ ಮೃತನು ಚಲಾಯಿಸಿಕೊಂಡು ಹೋರಟ ಮೋಟರ ಸೈಕಲಕ್ಕೆ ಜೋರಾಗಿ ಡಿಕ್ಕಿ ಪಡಸಿ ತನ್ನ ಲಾರಿಯನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ. ಈ ಅಪಘಾತದಲ್ಲಿ ಮೃತನ ತಲೆಯ ಹಿಂಬದಿಯಲ್ಲಿ ಭಾರಿ ರಕ್ತ ಗಾಯ, ಹಾಗೂ ಹಣೆಯ ಮುಂಭಾಗದಲ್ಲಿ ಭಾರಿ ರಕ್ತ ಗಾಯ, ಬಲಗಣ್ಣಿನ ಹುಬ್ಬಿನ ಮೇಲೆ, ಮುಗಿಗೆ, ಬಾಯಿಗೆ ರಕ್ತ ಗಾಯವಾಗಿರುತ್ತದೆ. ಮತ್ತು ಹೊಟ್ಟೆಯ ಮೇಲೆ ತರಚಿದ ಗಾಯ, ಬಲಗಾಲಿನ ಮೋಳಕಾಲ ಕೆಳಗೆ ರಕ್ತ ಗಾಯ, ಇತರ ಕಡೆಗೆ ತರಚಿದ ಗಾಯಗಳಾಗಿ ಸ್ಥಳದಲ್ಲಿಯೇ ಮೃತ ಪಟ್ಟಿರುತ್ತಾನೆ. ತಲೆಯಲ್ಲಿ ರಕ್ತ ಗಾಯ ಮತ್ತು ಕುತ್ತಿಗೆಗೆ, ಹೊಟ್ಟೆಗೆ ಒಳ ಪೆಟ್ಟಾಗಿರುತ್ತದೆ ಕಾರಣ ರಸ್ತೆ ಅಪಘಾತ ಪಡಿಸಿದ ಲಾರಿ ನಂಬರ ಎಂ.ಎಚ್ 04 ಜಿ.ಆರ್-8080 ನೇದ್ದರ ಚಾಲಕನ ಮೇಲೆ ಕಾನೂನಿ ಕ್ರಮ ಜರುಗಿಸಬೇಕೆಂದು ಶ್ರೀ ಈಶ್ವರ ತಂದೆ ಮಲ್ಕಪ್ಪ ತಳಕೇರಿ ಸಾ ಸಂಗಾವಿ ತಾ : ಚಿತ್ತಾಪೂರ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಡಬೂಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ          ಠಾಣೆ ಗುನ್ನೆ ನಂ:33/2019 ಕಲಂ:279, 338, 304(ಎ) ಐ.ಪಿ.ಸಿ ಸಂಗಡ 187 ಐ.ಎಮ್.ವ್ಹಿ ಆಕ್ಟ ನೇದ್ದರ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ. 
ಅಸ್ವಾಭಾವಿಕ ಸಾವು ಪ್ರಕರಣ :
ಆಳಂದ ಠಾಣೆ : ಶ್ರೀಮತಿ ಲಲಿತಾಬಾಯಿ ಗಂಡ ದೇವಿದಾಸ ರಾಠೋಡ ಸಾ: ಟೇಕು ನಾಯಕ ತಾಂಡಾ ತಾ: ಆಳಂದ ರವರ ಗಂಡನು ಅಂಗವಿಕಲನಿದ್ದು ನನಗೆ ಎರಡು ಜನ ಹೇಣ್ಣು ಮಕ್ಕಳು, ಮೂರು ಜನ ಗಂಡು ಮಕ್ಕಳು ಇರುತ್ತಾರೆ ಹೇಣ್ಣು ಮಕ್ಕಳಿಗೆ ಮದುವೆ ಮಾಡಿ ಕೊಟ್ಟಿದ್ದು ಗಂಡನ ಮನೆಯಲ್ಲಿ ವಾಸಿವಾಗಿರುತ್ತಾರೆ ಗಂಡು ಮಕ್ಕಳು ಇನ್ನೂ ಚಿಕ್ಕವರಿದ್ದು ನಾನು & ನನ್ನ ಗಂಡ ಒಕ್ಕಲುತನ ಕೆಲಸ ಮಾಡಿಕೊಂಡು ಬಂದಿರುತ್ತೇವೆ, ನಮ್ಮ ಹೇಣ್ಣು ಮಕ್ಕಳ ಮದುವೆ ಕಾಲಕ್ಕೆ ಮತ್ತು ನಮ್ಮ ಹೋಲದಲ್ಲಿ ಬೋರವೆಲ ಹಾಕಿದ್ದು, ಹಾಗು ಇನ್ನೀತರ ಹೊಲದ ಕೆಲಸ ಮಾಡಿಸಲು ಎಸ್.ಬಿ,ಹೆಚ್ ಬ್ಯಾಂಕ ಆಳಂದ ದಲ್ಲಿ ನಮ್ಮ ಹೋಲದ ಮೇಲೆ 1.00.000/- (ಒಂದು ಲಕ್ಷ ರೂಪಾಯಿಗಳು) ಸಾಲಾ ಮಾಡಿದ್ದು ಮತ್ತು ನಮ್ಮ ಪ್ರಾಪಂಚಿಕ ಅಡೆಚಡೆಗಾಗಿ ಅಲ್ಲಿಲ್ಲಿ ನಮ್ಮ ಪರಿಚಯಸ್ಥರಲ್ಲಿ ಕೈಗಡ ರೂಪದಲ್ಲಿ ಸುಮಾರು ಐದು ಲಕ್ಷ ರೂಪಾಯಿಗಳು ಸಾಲ ಮಾಡಿದ್ದು ನನ್ನ ಗಂಡನು ನಮ್ಮ ಮನೆಯಲ್ಲಿ ಆಗಾಗ್ಗೆ ಈ ವರ್ಷ ಮಳೆ ಸರಿಯಾಗಿ ಬಂದಿಲ್ಲ ಯಾವದೇ ಬೇಳೆ ಬೇಳೆದಿರುವದಿಲ್ಲ, ಮತ್ತು ಕಬ್ಬು ಸರಿಯಾಗಿ ಇಳುವರಿ ಕೊಟ್ಟಿರುವದಿಲ್ಲ ನಾನು ಮಾಡಿದ ಬ್ಯಾಂಕ & ಇತರರಲ್ಲಿ ಸಾಲ ಹೇಗೆ ತಿರಿಸಬೇಕು ಅಂತಾ ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡು ನನ್ನ ಮುಂದೆ ಆಗಾಗ್ಗೆ ಹೇಳಿರುತ್ತಾರೆ. ದಿನಾಂಕ 16/04/2019 ರಂದು 05;00 ಎ.ಎಂಕ್ಕೆ ನನ್ನ ಗಂಡನು ನಮ್ಮ ಮನೆಯಲ್ಲಿ ಎಂದಿನಂತೆ ಎದ್ದು ನಾನು ನಮ್ಮ ಹೋಲದಲ್ಲಿನ ಭಾಗ್ಯವಂತಿ ದೇವಿಗೆ ಪೂಜೆ ಮಾಡಿ ಬರುತ್ತೇನೆ ಅಂತಾ ಹೇಳಿ ಹೋಲಕ್ಕೆ ಹೋಗಿದ್ದು ನಂತರ 07;00 ಗಂಟೆಯಾದರು ಮನೆಗೆ ಬರದೆ ಇದ್ದುದ್ದರಿಂದ ನಮ್ಮ ಮೈದುನನಾದ ಹರಿ ತಂದೆ ತುಕಾರಾಮ ಪವಾರ ಇವರು ನಮ್ಮ ಹೋಲಕ್ಕೆ ಹೋಗಿ ನೊಡಲಾಗಿ ನನ್ನ ಗಂಡ ನಮ್ಮ ಹೋಲ ಸರ್ವೇ ನಂ, 119 ನೇದ್ದರಲ್ಲಿ ಬೇವಿನ ಗಿಡಕ್ಕೆ ನೇಣು ಹಾಕಿಕೊಂಡು ನೇತಾಡುತ್ತಿದ್ದುನ್ನು ನೋಡಿ ಗಾಬರಿಯಾಗಿ ಮನೆಗೆ ಬಂದು ವಿಷಯ ತಿಳಿಸಿದ್ದರಿಂದ ನಾನು ಮತ್ತು, ಹರಿ ಪವಾರ, ನೀಲಕಂಠ ತಂದೆ ಕೀಶನ ರಾಠೋಡ, ಶಂಕರ ತಂದೆ ಲಕ್ಷ್ಮಣ ಆಡೆ, ಮೋಹನ ತಂಧೆ ಗೋಪಿಚಂದ ಪವಾರ, ದಿನೇಶ ತಂದೆ ಖೇರು ರಾಠೋಡ ರವರೆಲ್ಲರೂ ಕೂಡಿಕೊಮಡು ಗಾಬರಿಯಾಗಿ ನಮ್ಮ ಹೋಲಕ್ಕೆ ಹೋಗಿ ನೊಡಲಾಗಿ ಬೇವಿನ ಗಿಡಕ್ಕೆ ನನ್ನ ಗಂಡನು ನೇಣು ಹಾಕಿಕೊಂಡು ನೇತಾಡುತ್ತಿದ್ದನು, ಕಾರಣ ನನ್ನ ಗಂಡನು ಈ ವರ್ಷ ಮಳೆ ಸರಿಯಾಗಿ ಬಂದಿಲ್ಲ ಯಾವದೇ ಬೇಳೆ ಬೇಳೆದಿರುವದಿಲ್ಲ, ಮತ್ತು ಕಬ್ಬು ಸರಿಯಾಗಿ ಇಳುವರಿ ಕೊಟ್ಟಿರುವದಿಲ್ಲ ಮತ್ತು ನಾನು ಮಾಡಿದ ಬ್ಯಾಂಕ & ಇತರರಲ್ಲಿ ಸಾಲ ಹೇಗೆ ತಿರಿಸಬೇಕು ಅಂತಾ ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡು ತನ್ನ ಜೀವನದಲ್ಲಿ ಜಿಗುಪ್ಸೆ ಹೊಂದಿ ಇಂದು ಬೇಳಿಗ್ಗಿನ ಜಾವ 05;45 ಎ.ಎಂ ಸುಮಾರಿಗೆ ಬೇವಿನ ಗಿಡಕ್ಕೆ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣಗಳು :
ಯಡ್ರಾಮಿ ಠಾಣೆ : ಶ್ರೀ ಸಿದ್ದನಗೌಡ ತಂದೆ ಅಯ್ಯಪ್ಪಗೌಡ ಪೊಲೀಸ ಬಿರಾದಾರ ಸಾ|| ಜಂಬೇರಹಳ್ಳ ತಾ|| ಜೇವರ್ಗಿ ರವರು  ಸುಮಾರು ತಿಂಗಳಿಂದ ನಮ್ಮ ಅಣ್ಣನ ಮಗನಾದ ಬಸವರಾಜ ತಂದೆ ಮಡಿವಾಳಪ್ಪಗೌಡ ಪೊಲೀಸ ಬಿರಾದಾರ ಈತನು ಆಸ್ತಿ ವಿಷಯದಲ್ಲಿ ಮತ್ತು ಮನೆಯಲ್ಲಿ ಪಾಲಿನ ವಿಷಯದಲ್ಲಿ ತಕಾರು ಮಾಡುತ್ತಾ ನನ್ನೊಂದಿಗೆ ಹಗೆ ಸಾಧಿಸುತ್ತಾ ಬಂದಿರುತ್ತಾನೆ. ದಿನಾಂಕ 16-04-2019 ರಂದು 5;30 ಪಿ.ಎಂ ಕ್ಕೆ ನಾನು ನನ್ನ ಮಗ ಮಡಿವಾಳಪ್ಪಗೌಡ ಮತ್ತು ನನ್ನ ಸೊಸೆ ನಿರ್ಮಲಾ ರವರು ಕೂಡಿ ನಮ್ಮ ಮನೆಯ ಮುಂದೆ ಮಾತಾಡುತ್ತಾ ಕುಳತಿದ್ದೆವು, ಅದೇ ಸಮಯಕ್ಕೆ ನಮ್ಮ ಅಣ್ಣನ ಮಗ ಬಸವರಾಜ ಇವನು ಕೈಯಲ್ಲಿ ಕೊಡಲಿ ಸಮೇತ ಮುಳ್ಳಿನ ಕಂಟಿಗಳನ್ನು ಹಿಡಿದುಕೋಂಡು ನಮ್ಮ ಮನೆಗೆ ಬಂದು ಏ ಸೂಳಿ ಮಕ್ಕಳ್ಯಾ ನಿಮ್ಮ ಮನೆಯಲ್ಲಿ ನನಗ ಇನ್ನು ಪಾಲು ಬರಬೇಕು, ನೀವು ಕೊಡುತ್ತಿಲ್ಲಾ, ಅದಕ್ಕೆ ಇವತ್ತ ನಿಮ್ಮ ಮನೆಯಲ್ಲಿ ಮುಳ್ಳು ಕಂಟಿ ಹಾಕಿ ನಿಮಗೆಲ್ಲರಿಗು ಕೊಡಲಿಯಿಂದ ಹೊಡೆದು ಖಲಾಸೆ ಮಾಡುತ್ತೇನೆ ಅಂತಾ ಅಂದು ಮುಳ್ಳಕಂಟಿಗಳು ನಮ್ಮ ಮನೆಯಲ್ಲಿ ಹಾಕಿದನು, ನಂತರ ನಾನು ಈತರಹ ಯಾಕ ಮಾಡಲಾಕತ್ತಿ ಅಂತಾ ಕೇಳಿದ್ದಕ್ಕೆ ನನಗೆ ತಡೆದು ನಿಲ್ಲಿಸಿ, ಏ ರಂಡಿ ಮಗನೆ ಈ ಮನೆಯಲ್ಲಿ ನನಗೆ ಪಾಲು ಬರುತ್ತದೆ ಅಂತಾ ಹೇಳಿದರು ನನಗೆ ಪಾಲು ಕೊಡುತ್ತಿಲ್ಲಾ, ಇವತ್ತ ನಿನಗ ಸಾಯಿಸೆ ಬಿಡುತ್ತೇನೆ ಅಂತಾ ಅಂದು ತನ್ನ ಕೈಯಲ್ಲಿದ್ದ ಕೊಡಲಿಯನ್ನು ಬೀಸಿದನು, ಆಗ ನಾನು ನೆಲಕ್ಕೆ ಕುಳಿತುಕೊಂಡೆನು, ಇಲ್ಲದಿದ್ದರೆ ನನ್ನ ತಲೆ ಕತ್ತರಿಸುತ್ತಿತ್ತು, ನಂತರ ನಾನು ಅಲ್ಲಿಂದ ಓಡಿ ಹೋಗುತ್ತಿದ್ದಾಗ, ಬಸವರಾಜ ಇವನು ಕೊಡಲಿ ತೆಗೆದುಕೋಂಡು ನನಗೆ ಸಾಯಿಸಲು ಬೆನ್ನು ಹತ್ತಿದ್ದನು, ನಂತರ ನಮ್ಮೂರ ಶಿವಪುತ್ರಪ್ಪ ತಂದೆ ಗುರಪ್ಪ ಅರಳಗುಂಡಗಿ, ರೇವಣಸಿದ್ದಪ್ಪಗೌಡ ತಂದೆ ಸಿದ್ರಾಮಪ್ಪಗೌಡ ಪೊಲೀಸ ಬಿರಾದಾರ ರವರು ಬಂದು ಬಸವರಾಜನಿಗೆ ಹಿಡಿದು ಅವನ ಕೈಯಲ್ಲಿದ್ದ ಕೊಡಲಿಯನ್ನು ಕಸಿದುಕೋಂಡು ನಮ್ಮ ಮನೆಯ ಮುಂದೆ ಬಿಸಾಕಿರುತ್ತಾರೆ, ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಫರತಾಬಾದ ಠಾಣೆ : ದಿನಾಂಕ:15.04.2019 ರಂದು ರಾತ್ರಿ 10 ಗಂಟೆಯ ಸೂಮಾರಿಗೆ ಸಿರನೂರ ಗ್ರಾಮದ ಹತ್ತೀರ ರುವ ವೆಂಕೇಶ್ವರ ಪ್ಲಾಜಾ ರೆಸ್ಟೊರೆಂಟ ಹತ್ತೀರ ರಾಜಅಹ್ಮದ ಹುಸೇನಿ ಕೋಗನೂರ ಸಾ ಬೈರಮಡಗಿ ಇವನು ಶ್ರೀ ಮಲ್ಲಿ ನಾಥ ತಂದೆ ಲಿಂಗಣ್ಣಾ ಅಂಕಲಗಿ ಸಾ : ಬೈರಮಡಗಿ  ಇವರಿಗೆ ಹಣ ಕೋಡು ಅಂತಾ ಹೇಳಿ ವಿನಾಕಾರಣ ಜಗಳ ತೆಗೆದು ಕೈಯಿಂದ ಕಲ್ಲಿನಿಂದ ಹೋಡೆಬಡೆ ಮಾಡಿ ಭಾರಿ ಗಾಯವುಂಟು ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಜಾತಿ ನಿಂದನೆ ಮಾಡಿ ಹಲ್ಲೆ ಮಾಡಿದ ಪ್ರಕರಣ :
ನಿಂಬರ್ಗಾ ಠಾಣೆ : ಶ್ರೀ ಸುನೀಲ ತಂದೆ ವಸಂತ ಕಲಕುಟಗಿ ಸಾಃ ಭೂಸನೂರ ಗ್ರಾಮ, ತಾಃ ಆಳಂದ ರವರು ಮತ್ತು ನನ್ನ ತಾಯಿಯಾದ ಮಲ್ಲಮ್ಮ ಇಬ್ಬರೂ ಕೂಡಿಕೊಂಡು ತೆಲ್ಲೂರ ಗ್ರಾಮಕ್ಕೆ ಕಾರ್ಯಕ್ರಮಕ್ಕೆ ಹೋಗಿ ಕಾರ್ಯಕ್ರಮ ಮುಗಿಸಿಕೊಂಡು ಮರಳಿ ತೆಲ್ಲೂರದಿಂದ ನಮ್ಮೂರಿಗೆ ನಾನು ಮತ್ತು ನನ್ನ ತಾಯಿ ಕೂಡಿಕೊಂಡು ದಿನಾಂಕ 16/04/2019 ರಂದು ಖಾಸಗಿ ಜೀಪನಲ್ಲಿ ಬಂದು ನಮ್ಮೂರಿನ ಬಸ ನಿಲ್ದಾಣದಲ್ಲಿ ಇಳಿದು ಬಸ ನಿಲ್ದಾಣದ ಮುಂದೆ ರೋಡಿನ ಪಕ್ಕದಲ್ಲಿ ಮಾತನಾಡುತ್ತಾ ನಿಂತಾಗ ಮಧ್ಯಾಹ್ನ 01.30 ಪಿ.ಎಮ ಸುಮಾರು ನಮ್ಮೂರಿನ ಬಾಷಾಸಾಬ ತಂದೆ ನಜೀರ ಕರ್ಜಗಿ ಮತ್ತು ರಾಜೋಳ ಗ್ರಾಮದ ಆತನ ಸಂಭಂಧಿಕ ಹೆಸರು ಗೊತ್ತಿಲ್ಲ ಇಬ್ಬರೂ ಕೂಡಿಕೊಂಡು ಒಂದು ಮೋಟಾರ ಸೈಕಲ ಮೇಲೆ ಜೋರಾಗಿ ಬಂದು ನನ್ನ ತಾಯಿಯಾದ ಮಲ್ಲಮ್ಮ ಇವಳಿಗೆ ಬೈಕ ಹತ್ತಿ ಸವರಿಕೊಂಡು ಮುಂದೆ ಹೋಗಿದ್ದು ಅದಕ್ಕೆ ನಾನು ಬಾಷಾಸಾಬನಿಗೆ ಮೊಟಾರ ಸೈಕಲ ಸಾವಕಾಸ ನಡೆಸು ನಮ್ಮ ತಾಯಿಗೆ ಸವರಿಕೊಂಡು ಯಾಕ ಹೊಗಿದ್ದಿ ಅಂತ ಅಂದಾಗ ಏ ಭೋಸಡಿ ಮಗನಾ ಸುನೀಲ್ಯಾ ವಡ್ಡರ ಸೂಳೆ ಮಗನೆ ನಿಮ್ಮದು ಊರಾಗ ಬಹಳ ಆಗದ ಅಂತ ಜಾತಿ ಎತ್ತಿ ಬೈದು ಬೈಕ ಅಲ್ಲಿಯೆ ನಿಲ್ಲಿಸಿ ಸ್ವಲ್ಪ ಮುಂದೆ ಹೋಗಿ ಒಂದು ಕಬ್ಬಿಣದ ರಾಡು ತೆಗೆದುಕೊಂಡು ಬಂದನು ಆಗ ಬಾಷಾಸಾಬನ ಸಂಗಡ ಇದ್ದವನು ನನ್ನ ಎರಡು ಕೈಗಳನ್ನು ಹಿಡಿದನು ಬಾಷಾಸಾಬನು ತನ್ನ ಕೈಯಲ್ಲಿದ್ದ ರಾಡಿನಿಂದ ನನ್ನ ಎಡ ತಲೆಯ ಮೇಲೆ ಹೋಡೆದು ಭಾರಿ ರಕ್ತಗಾಯಪಡಿಸಿದನು, ನಾನು ಕೆಳಗಡೆ ಬಿದ್ದಾಗ ಇಬ್ಬರೂ ಕೂಡಿಕೊಂಡು ಕಾಲಿನಿಂದ ಹೊಟ್ಟೆ, ಬೆನ್ನ ಮೇಲೆ ಕಾಲಿನಿಂದ ಒದ್ದರು ನನ್ನ ತಾಯಿಯು ಬಿಡಸಲು ಬಂದಾಗ ಏ ರಂಡಿ ಮಲ್ಲಿ ನೀನು ಬಂದರೆ ನಿನಗೂ ಕೂಡ ಖಲಾಸ ಮಾಡುತ್ತೇವೆ ಅಂತ ಬೈದು ಜೀವ ಭಯಪಡಿಸಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

16 April 2019

KALABURAGI DISTRICT REPORTED CRIMES

ಅಪಘಾತ ಪ್ರಕರಣ :
ಸಂಚಾರಿ ಠಾಣೆ 1 : ದಿನಾಂಕ 15.04.2019 ರಂದು ಸಾಯಂಕಾಲ 7-45 ಗಂಟೆ ಸುಮಾರಿಗೆ ಮೃತ ಮಲ್ಲಣ್ಣಾ ಇತನು ಕಲಬುರಗಿ ಜಿಲ್ಲಾ ಸರ್ಕಾರಿ  ಆಸ್ಪತ್ರೆಯಿಂದ ಆಸ್ಪತ್ರೆ ಎದುರುಗಡೆ ಬರುವ ಚಹಾ ಬಂಡಿ ಹೊಟೇಲನಲ್ಲಿ ಚಹಾ ಕುಡಿಯವ ಸಂಬಂದ ನಡೆದುಕೊಂಡು ಬಂದು ಚಹಾ ನೀರು ಕೂಡಿದು ನಡೆದುಕೊಂಡು ವಾಪಸ್ಸ ಜಿಲ್ಲಾ ಸಕರ್ಾರಿ ಆಸ್ಪತ್ರೆ ಕಡೆಗೆ ನಡೆದುಕೊಂಡು ರಸ್ತೆ ದಾಟುತ್ತೀರುವಾಗ ಕಾರ ನಂಬರ ಕೆಎ-32/ಎನ್-3994 ನೇದ್ದರ ಸವಾರಳು ಜಿ.ಜಿ.ಹೆಚ್. ಸರ್ಕಲ ಕ್ರಾಸ ಕಡೆಯಿಂದ  ಆರ.ಟಿ.ಓ ಕ್ರಾಸ ಕಡೆಗೆ ಹೋಗುವ ಕುರಿತು ತನ್ನ ಕಾರನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಮೃತ ಮಲ್ಲಣ್ಣಾ ಇವರಿಗೆ ಡಿಕ್ಕಿಪಡಿಸಿ ಅಪಘಾತ ಮಾಡಿ ಅವರಿಗೆ ಭಾರಿಗಾಯಗೊಳಿಸಿ ತನ್ನ ಕಾರ ಸಮೇತ ಓಡಿ ಹೋಗಿದ್ದು ಮಲ್ಲಣ್ಣಾ ಇವರಿಗೆ ಉಪಚಾರ ಕುರಿತು ಒಂದು ಅಂಬುಲೇನ್ಸ ವಾಹನದಲ್ಲಿ ಬಸವೇಶ್ವರ ಆಸ್ಪತ್ರೆಗೆ ಕರೆದುಕೊಂಡು ಹೋಗಿ ರಾತ್ರಿ 8-30 ಗಂಟೆಗೆ ವೈದ್ಯರಿಗೆ ತೊರಿಸಲು ವೈದ್ಯರು ಆಸ್ಪತ್ರೆಗೆ ಬರುವದಕ್ಕಿಂತ ಮುಂಚಿತವಾಗಿ ಮೃತಪಟ್ಟಿದ್ದು ಇರುತ್ತದೆ ಅಂತಾ ತಿಳಿಸಿದ್ದು ರಸ್ತೆ ಅಪಘಾತದಲ್ಲಿ ಭಾರಿಗಾಯ ಹೊಂದಿದ್ದ ಮಲ್ಲಣ್ಣಾ ಇವರು ಸಾಯಂಕಾಲ 7-45 ಗಂಟೆಯಿಂದ ರಾತ್ರಿ 8-30 ಗಂಟೆಯ ಮದ್ಯದ ಅವಧಿಯಲ್ಲಿ ಅಪಘಾತ ಸ್ಥಳದಿಂದ ಬಸವೇಶ್ವರ ಆಸ್ಪತ್ರೆಗೆ ಹೋಗುವಾಗ ದಾರಿ ಮದ್ಯ ಅಂಬುಲೇನ್ಸ ವಾಹನದಲ್ಲಿ ಮೃತಪಟ್ಟಿದ್ದು ಇರುತ್ತದೆ.  ಅಂತಾ ಶ್ರೀ ಬಾಬುರಾವ ತಂದೆ ಸಿದ್ದಣ್ಣ ಪೂಜಾರಿ  ಸಾ: ಮಂದರವಾಡ  ತಾ: ಜೇವರಗಿ ಹಾ.ವ. ಗುಮ್ಮಜ ಹತ್ತೀರ ಬಸವೇಶ್ವರ ಕಾಲನಿ ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆ 1 ರಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣಗಳು :
ಚೌಕ ಠಾಣೆ : ಶ್ರೀ ಮಹ್ಮದ ಆವೇಜ ತಂದೆ ಮಹ್ಮದ ಮಗದುಮ್ ಜುನೈದಿ ಸಾ: ಶೇಖರೋಜಾ ಕಲಬುರಗಿ ರವರು ದಿನಾಂಕ 14-04-2019 ರಂದು ರಾತ್ರಿ ನಮ್ಮ ಓಣಿಯ ಶಹಾದಾಬ ತಂದೆ ಸೈಯ್ಯದ ಜಾಫರ ಈತನಿಗೆ ಸಮಾಜದಲ್ಲಿ ಸರಿಯಾಗಿ ಇರಬೇಕು ಕೆಟ್ಟವರ ಸಂಗಡ ರಾತ್ರಿ ವೇಳೆಯಲ್ಲಿ ತಿರುಗಾಡ ಬಾರದು ಎಂದು ಬುದ್ದಿ ವಾದ ಹೇಳಿದ್ದು ಆಗ ಅವನು ಎಲ್ಲಿಯೂ ತಿರುಗಾಡುವುದಿಲ್ಲ ಮತ್ತು ಕೆಟ್ಟವರ ಸಂಗಡ ಮಾತಾಡುವುದಿಲ್ಲ ಅಂತಾ ಹೇಳಿದ್ದು ಆಗ ನಾನು ಅವನಲ್ಲಿದ್ದ ಚಿಕ್ಕದಾದ ಮೊಬೈಲ ಫೋನ ತೆಗೆದುಕೊಂಡು ಪರಿಶೀಲಿಸಿ ನೋಡಕಲಾಗಿ ಅದರಲ್ಲಿ ಕೆಲವು ದುಶ್ಚಟ ಉಳ್ಳ ಹುಡುಗನೊಂದಿಗೆ ಮಾತಾಡಿದ್ದು ಕಂಡು ಬಂದಿರುವುದರಿಂದ ನನಗೆ ಸುಳ್ಳು ಹೇಳುತ್ತಿಯಾ ಅಂತಾ ಸಿಟ್ಟು ಬಂದಿರುವುದರಿಂದ ಅವನ ಮೊಬೈಲ ಫೋನನ್ನು ಗೋಡೆಗೆ ಹೊಡೆದಿರುತ್ತೇನೆ ನಂತರ ಅವನಿಗೆ ಹೊಸ ಮೊಬೈಲ ಕೊಡಿಸುತ್ತೇನೆ ಅಂತಾ ಹೇಳಿರುತ್ತೇನೆ ಅವನು ನನ್ನ ಮೇಲೆ ಸಿಟ್ಟಿಗೆ ಬಂದು ಮಗನೇ ನಿನಗೆ ಒಂದು ದಿವಸ ನೋಡಿಯೇ ಬಿಡುತ್ತೇನೆ ಅಂತಾ ಹೇಳಿ ಸಿಟ್ಟಿನಿಂದ ಅವನ ತನ್ನ ಮನೆಗೆ ಹೋಗಿದ್ದು ನಾನು ಸಹ ನಮ್ಮ ಮನೆಗೆ ಹೋಗಿರುತ್ತೇನೆ. ದಿನಾಂಕ 15.04.2019 ರಂದು ಸಾಯಂಕಾಲ ನಾನು ಖಾದ್ರಿ ಚೌಕ ಹತ್ತಿರದಲ್ಲಿರುವ ಬಾಬಾ ಪಾನಶಾಪ ಹತ್ತಿರ ಇದ್ದಾಗ 1) ಶಹಾದಾಬ ತಂದೆ ಸೈಯ್ಯದ ಜಾಫರ 2) ಶಾರೂಖ ತಂದೆ ಸೈಯ್ಯದ ಜಾಫರ 3) ಸೋಹೇಲ ತಂದೆ ಸೈಯ್ಯದ ಜಾಫರ 4) ಸೈಯ್ಯದ ಜಾಫರ ತಂದೆ ಹಮ್ಮೀದ 5) ಹಮ್ಮೀದ ಸಾ: ಎಲ್ಲರೂ ಶೇಖ ರೋಜಾ ಕಲಬುರಗಿ ಇವರೆಲ್ಲರೂ ಕೈಯಲ್ಲಿ ಚಾಕೂಗಳನ್ನು ಹಿಡಿದುಕೊಂಡು ನನಗೆ ಕೊಲೆ ಮಾಡುವ ಉದ್ದೇಶದಿಂದ ನನ್ನ ಹತ್ತಿರದಲ್ಲಿ ಬಂದವರೆ ನನಗೆ ಏ ಬೋಸಡಿ ಮಗನೆ ಈ ಬೋಸಡಿ ಮಗನಿಗೆ ಬಹಳ ಸೊಕ್ಕು ಬಂದಿದೆ ಇವನು ವಿನಾಃ ಕಾರಣವಾಗಿ ನಮ್ಮ ಫೋನ ಒಡೆದಿರುತ್ತಾನೆ ಇವತ್ತು ಇವನಿಗೆ ಮುಗಿಸಿಯೇ ಬಿಡೋಣಾ ಅಂತಾ ಅವರಲ್ಲಿ ಶಾರೂಖ ಮತ್ತು ಸೊಹೇಲ ಇವರು ನನಗೆ ಒತ್ತಿ ಹಿಡಿದುಕೊಂಡರು ಶಹಾದಾಬ ತಂದೆ ಸೈಯ್ಯದ ಜಾಫರ ಈತನು ತನ್ನ ಕೈಯಲ್ಲಿ ಇದ್ದ ಚಾಕುವಿನಿಂದ ಒಮ್ಮೇಲೆ ನನ್ನ ಬಲ ಎದೆಗೆ ಜೋರಾಗಿ ತಿವಿದು ಭಾರಿ ರಕ್ತಗಾಯ ಪಡಿಸಿದನು ಆಗನಾನು ಸತ್ತೆನೆಪ್ಪ ಅಂತಾ ಕುಸಿದು ಕೆಳಗೆ ಬಿದ್ದಾಗ ಶಾರುಖ ಮತ್ತು ಸೋಹೆಲ ಇವರು ಕೈಯಿಂದ ಮತ್ತು ಕಾಲಿನಿಂದ ಬೆನ್ನಿಗೆ ಮತ್ತು ಹೊಟ್ಟೆಗೆ ಹೋಡೆದು ಗುಪ್ತಗಾಯಗಳು ಮಾಡಿರುತ್ತಾರೆ ಇದೇ ಸಮಯದಲ್ಲಿ ಸೈಯ್ಯದ ಜಾಫರ ಮತ್ತು ಹಮ್ಮೀದ ಇವರುಗಳು ಹೊಡೆಯಿರಿ ರಂಡಿ ಮಗನಿಗೆ ಖಲ್ಲಾಸ ಮಾಡಿರಿ ಅಂತಾ ಕುಮ್ಮಕ್ಕು ನೀಡುತ್ತಿದ್ದರು ಆಗ ಅಲ್ಲಿಯೇ ಹಾಜರಿದ್ದ ಪರಿಚಯದ ಅರ್ಶದ ತಂದೆ ಮೈನುದ್ದೀನ ಮತ್ತು ಅಕಬರ ತಂದೆ ಮೋದಿನ ಮುಲ್ಲಾ ಇವರು ನನಗೆ ಹೊಡೆಯುವುದನ್ನು ಬಿಡಿಸಿರುತ್ತಾರೆ ಇದೇ ಸಮಯದಲ್ಲಿ ನಜೀಬ ಬಾಬಾ ಅವರು ನನಗೆ ಅವರ ಮೋಟರ ಸೈಕಲ ಮೇಲೆ ಡೆಕ್ಕನ ಆಸ್ಪತ್ರೆಗೆ ತಂದು ಸೇರಿಕೆ ಮಾಡಿದ್ದು ಇರುತ್ತದೆ ಸಧ್ಯ ನಾನು ಉಪಚಾರ ಪಡೆಯುತ್ತಿದ್ದೆನೆ .ಕಾರಣ ನನಗೆ ಶಹಾದಾಬ ತಂದೆ ಸೈಯ್ಯದ ಜಾಪರ ಹಾಗೂ ಇತರರು ಕೂಡಿಕೊಂಡು ಕೊಲೆ ಮಾಡುವ ಉದ್ದೇಶದಿಂದ ಚಾಕುಗಳನ್ನು ಹಿಡಿದುಕೊಂಡು ಬಂದು ನನಗೆ ಚಾಕುವಿನಿಂದ ತಿವಿದು ಕೊಲೆಮಾಡಲು ಪ್ರಯತ್ನ ಮಾಡಿದವರ ವಿರುಧ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚೌಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯಡ್ರಾಮಿ ಠಾಣೆ : ಶ್ರೀಮತಿ ಮಾನಮ್ಮ ಗಂಡ ಸದಾಶಿವ ಚಿಗರಾಳ ಸಾ|| ಹಂಗರಗಾ(ಕೆ) ತಾ|| ಜೇವರ್ಗಿ ರವರು ರವರ ಮಗ ಭೀಮರಾಯನಿಗೆ ನಮ್ಮೂರ ಬಸವಂತ್ರಾಯ ನಡುವಿನಮನಿ ರವರ ಮಗಳಾದ ಪಾರ್ವತಿ ಇವಳೊಂದಿಗೆ ಮದುವೆಮಾಡಿರುತ್ತೇವೆ, ಸದ್ಯ ನನ್ನ ಮಗನಿಗೆ ಒಂದು ಗಂಡು ಮತ್ತು ಒಂದು ಹೆಣ್ಣು ಮಗು ಇರುತ್ತದೆ, ನಮ್ಮೂರ ಸಿಮಾಂತರದಲ್ಲಿ ನಮ್ಮ ಹಿರಿಯರ 11 ಎಕರೆ ಜಮೀನು ಇರುತ್ತದೆ, ನನ್ನ ಮಗ ಸದ್ಯ ನಮ್ಮೊಂದಿಗೆ ಬೇರೆಯಾಗಿ ನಮ್ಮೂರಲ್ಲೇ ಮನೆ ಕಟ್ಟಿಕೊಂಡು ಸಂಸಾರ ಮಾಡುತ್ತಿರುತ್ತಾನೆ, ಅವನ ಉಪಜೀವನ ಸಲುವಾಗಿ 3 ಎಕರೆ ಜಮೀನು ಕೊಟ್ಟಿರುತ್ತೇನೆ, ನನ್ನ ಸೊಸೆ ಪಾರ್ವತಿ ಇವಳು ಸುಮಾರು ಸಲ ನಮಗೆ ಇನ್ನು 3 ಎಕರೆ ಜಮೀನು ಬರುತ್ತದೆ ಅಂತಾ ನನ್ನೊಂದಿಗೆ ಜಗಳ ಮಾಡುತ್ತಾ ಬಂದಿರುತ್ತಾಳೆ, ಅದರಂತೆ ನನ್ನ ಮಗ ಭೀಮರಾಯನಿಗು ಸಹ ಆಸ್ತಿ ಸಲುವಾಗಿ ದಿನಾಲು ಕಿರುಕುಳ ಕೊಡುತ್ತಾ ಬಂದಿರುತ್ತಾಳೆ, ಈ ಬಗ್ಗೆ ನನ್ನ ಮಗ ಆಗಾಗಾ ನನ್ನ ಮುಂದೆ ಹೇಳುತ್ತಿದ್ದನು, ದಿನಾಂಕ; 12-04-2019 ರಂದು ಬೆಳಿಗ್ಗೆ 09;00 ಗಂಟೆಗೆ ನನ್ನ ಸೊಸೆ ಪಾರ್ವತಿ ಇವಳು ಮನೆಗೆ ಬಂದು ನನ್ನ ಗಂಡನಿಗೆ ಬರಬೇಕಾದ ಇನ್ನು 3 ಎಕರೆ ಜಮೀನು ನನಗೆ ಬಿಟ್ಟುಕೊಡು ಇಲ್ಲಾ ಅಂದರೆ ನಿನಗೆ ಮತ್ತು ನನ್ನ ಗಂಡನಿಗೆ ಖಲಾಸ ಮಾಡಿ ಆಸ್ತಿ ತೆಗೆದುಕೊಳ್ಳುತ್ತೇನೆ ಅಂತಾ ಹೇಳಿ ಹೋದಳು, ನಂತರ ರಾತ್ರಿ ನನ್ನ ಮಗ ಭೀಮರಾಯನಿಗೆ ಅವಳ ಹೆಂಡತಿ ಮತ್ತು ಅವರ ಮನೆಯವರು ಹೊಡೆಯುತ್ತಿದ್ದಾರೆ ಅಂತಾ ವಿಷಯ ಗೊತ್ತಾಗಿ ನಾನು ನಮ್ಮ ಮಗನ ಮನೆಗೆ ಹೋಗಿ ನೋಡಿದಾಗ ಮನೆಯ ಮುಂದೆ ನನ್ನ ಸೊಸೆ ಪಾರ್ವತಿ ಮತ್ತು ಅವರ ತಾಯಿ ಮಹಾದೇವಿ ಗಂಡ ಬಸವಂತ್ರಾಯ ಹಾಗು ಅವರ ಅಣ್ಣ ಸುಬ್ಬಣ್ಣ ತಂದೆ ಬಸವಂತ್ರಾಯ ಹಿಗೆಲ್ಲರೂ ಕೂಡಿ ನನ್ನ ಮಗನಿಗೆ ಸುತ್ತುಗಟ್ಟಿ ತಡೆದು ಏ ರಂಡಿ ಮಗನೆ ನಿಮ್ಮ ತಾಯಿ ಕಡೆಯಿಂದ ಇನ್ನು 3 ಎಕರೆ ಆಸ್ತಿ ತೆಗೆದುಕೊಂಡು ಬಾ ಅಂತಾ ಅಂದು ಸುಬ್ಬಣ್ಣ ಇವನು ಬಡಿಗೆಯಿಂದ ನನ್ನ ಮಗನ ಬಲಗಾಲಿನ ಮೇಲೆ ಹೊಡೆದನು, ಆಗ ನನ್ನ ಮಗ ಕೆಳಗೆ ಬಿದ್ದಾಗ ಮತ್ತೆ ಅದೇ ಬಡಿಗೆಯಿಂದ ಎರಡು ಮೊಳಕೈಗಳಿಗೆ ಹೊಡೆದನು, ನಂತರ  ಪಾರ್ವತಿ ಇವಳು ಇವತ್ತ ನನ್ನ ಹಾಟ್ಯಾನ ಮಗನಿಗಿ ಹೊಡೆದು ಖಲಾಸೆ ಮಾಡುತ್ತೇನೆ ಅಂತಾ ಅಂದು ಕೊಲೆ ಮಾಡುವ ಉದ್ದೇಶದಿಂದ ತನ್ನ ಕೈಯಿಲ್ಲಿದ್ದ ಕಬ್ಬಿಣದ ಊದಗೊಳದಿಂದ ನನ್ನ ಮಗನ ಎಡ ಮೆಲಕಿನ ಹತ್ತಿರ ಜೋರಾಗಿ ಹೊಡೆದು ಭಾರಿ ಗುಪ್ತ ಪೆಟ್ಟು ಪಡಿಸಿದಳು, ಮಹಾದೇವಿ ಇವಳು ಇವನಿಗೆ ಹೊಡೆದು ಖಲಾಸ ಮಾಡಿದರೆ ಎಲ್ಲಾ ಆಸ್ತಿ ನಮಗೆ ಬರುತ್ತದೆ ಅಂತಾ ಅನ್ನುತ್ತಿದ್ದಾಗ ನಾನು ಮತ್ತು ನಮ್ಮೂರ  ರೆಹಮಾನ ತಂದೆ ಮಾಬುಸಾಬ ಚೌದರಿ, ರಾಜಶೇಖರ ತಂದೆ ಹಣಮಂತ್ರಾಯ ಪೂಜಾರಿ ರವರೆಲ್ಲರೂ ಕೂಡಿ ಬಿಡಿಸಿಕೊಂಡು ನನ್ನ ಮಗನಿಗೆ ನಮ್ಮ ಮನೆಗೆ ಕರೆದುಕೊಂಡು ಹೋಗಿರುತ್ತೇವೆ, ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ಗ್ರಾಮೀಣ ಠಾಣೆ : ದಿನಾಂಕ 27/03/2019 ರಿಂದ 04/04/2019 ರ ಮದ್ಯದ ಅವಧಿಯಲ್ಲಿ ಸೈಯದ್ ಚಿಂಚೋಳ್ಳಿ ಗ್ರಾಮ ಸರ್ವೇ ನಂ 50/02 ರಲ್ಲಿ ಹಾಕಿರುವ 11 ಲೈಟಿನ ಕಂಬಗಳ ಕರೆಂಟ್ ವಾಯರ್ ಅ.ಕಿ.1,25,000/-ರೂ ನೆದ್ದು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಶ್ರೀ ರಾಹುಲದೇವ ಭಗವಾಲೆ  ಜೂನಿಯರ ಇಂಜನೀಯರ ಜಸ್ಕಾಂ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮನುಷ್ಯ ಕಾಣೆಯಾದ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀ ಶರಣಬಸವಾ ಕಾಂಟೆಪ್ಪಾಪೂಜಾರಿ ಸಾ : ಬೀಮಳ್ಳಿ ತಾ : ಕಲಬುರಗಿ  ರವರ ತಂದೆಯಾದ ಕಂಟೆಪ್ಪಾ ವಯಾ : 45 ವರ್ಷ ರವರು ದಿನಾಂಕ ಮೇ 2015 ರಂದು ನಮ್ಮ  ಮನೆಯಿಂದ ಹೋದವನು ಮರಳಿ ಮನೆಗೆ ಬಂದಿರುವುದಿಲ್ಲ ಇಷ್ಟು ದಿನ ಎಲ್ಲಾ ಹುಡುಕಾಡಿದರು ಸಿಕ್ಕಿರುವುದಿಲ್ಲಾ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

14 April 2019

KALABURAGI DISTRICT REPORTED CRIMES

ಹಲ್ಲೆ ಪ್ರಕರಣಗಳು :
ರಾಘವೇಂದ್ರ ನಗರ ಠಾಣೆ : ಶ್ರೀ ಮಹ್ಮದ ಉಸ್ಮಾನ ತಂದೆ ಹುಸೇನಸಾಬ ಮುಜಾವರ ಸಾ: ಮಹೀಬೂಬಸುಬಾನಿ ಚಿಲ್ಲಾ ಝಂಡಾಗಲ್ಲಿ ಎಮ್.ಎಸ್.ಕೆ.ಮೀಲ್ ಕಲಬುರಗಿ ರವರು  ದಿನಾಂಕ 11.04.2019 ರಂದು ಕಲಬುರಗಿ ಲೊಕಸಭಾ ಕ್ಷೇತ್ರ-5 ನೇದ್ದರ ಕಾಂಗ್ರೇಸ ಪಕ್ಷದ ಅಭ್ಯರ್ಥಿಯಾದ ಸನ್ಮಾನ್ಯ ಶ್ರೀ ಮಲ್ಲಿಕಾರ್ಜುನ ಖರ್ಗೇ ರವರ ಪರವಾಗಿ ಚುನಾವಣೆ ಪ್ರಚಾರ ಕುರಿತು ನನ್ನ ಅಟೊ ನಂ ಕೆಎ 32 ಸಿ 2486 ನೇದ್ದಕ್ಕೆ ಮೈಕ ಸಟ್ ಮುಂಖಾತ ಪ್ರಚಾರ ಮಾಡಲು ಚುನಾವಣಾಧಿಕಾರಿಗಳು ಪರವಾನಿಗೆ ನೀಡಿದ್ದು ಅದರಂತೆ ಇಂದು ದಿನಾಂಕ 13.04.2019 ರಂದು ಬೆಳ್ಳಿಗ್ಗೆ 11:00 ಗಂಟೆಯಿಂದ ಕಲಬುರಗಿ ಲೊಕಸಭಾ ಕ್ಷೇತ್ರ-5 ನೇದ್ದರ ಕಾಂಗ್ರೇಸ್ಸ ಪಕ್ಷದ ಅಭ್ಯರ್ಥಿಯಾದ ಸನ್ಮಾನ್ಯ ಶ್ರೀ ಮಲ್ಲಿಕಾರ್ಜುನ ಖರ್ಗೇ ರವರ ಪರವಾಗಿ ಚುನಾವಣೆ ಪ್ರಚಾರ ಕುರಿತು ನನ್ನ ಅಟೊ ನಂ ಕೆಎ 32 ಸಿ 2486 ನೇದಕ್ಕೆ ಮೈನ ಸಟ್ ಅಳವಡಿಸಿ ಕಾಂಗ್ರೇಸ್ ಪಕ್ಷದ ದ್ವಜವನ್ನು ಅಟೊಕ್ಕೆ ಕಟ್ಟಿ, ಕಾಂಗ್ರೇಸ್ ಪಕ್ಷದ ಬ್ಯಾನರನ್ನು ಅಟೊಕ್ಕೆ ಸುತ್ತುವರೆದು ಕಟ್ಟಿ ಬೆಳ್ಳಿಗ್ಗೆ 11:00 ಗಂಟಗೆ ಯಿಂದ ಆಡಿಯೋ ಮುಖಾಂತರ ಕಾಂಗ್ರೇಸ್ ಪಕ್ಷದ ಅಭ್ಯರ್ಥಿಗೆ ಮತ ಹಾಕಬೇಕು ಅಂತ ಪ್ರಚಾರ ಮಾಡುತ್ತಾ ಸುಪರ ಮಾರ್ಕೇಟ, ಖರ್ಗೇ ಪೆಟ್ರೋಲ ಪಂಪ, ಮಹೀಬೂಬ ನಗರ, ಹುಮನಾಬಾದ ರಿಂಗ್ ರೋಡ, ಮುಸ್ಲಿಂ ಸಂಘ, ಆಳಂದ ಚೆಕ್ಕ ಪೊಸ್ಟ ಮಾರ್ಗವಾಗಿ ಮಧ್ಯಾನ 3:00 ಗಂಟೆಯ ಸುಮಾರಿಗೆ ದೇವಿ ನಗರ ಕಮಾನ ಹತ್ತಿರ ಬಂದಾಗ ಅಲ್ಲಿ ಸಂಚಾರಿ ದಟ್ಟಣೆಯಾಗಿದ್ದು ಸಂಚಾರಿ ದಟ್ಟಣೆಯಿಂದ, ಸಂಚಾರಿ ದಟ್ಟಣೆ ಇದ್ದ ಪ್ರಯುಕ್ತ ದೇವಿ ನಗರ ಕಮಾನದಿಂದ ಖಾದ್ರಿ ಚೌಕ ಕಡೆಗೆ ಹೋಗುವ ಕುರಿತು ಜಬ್ಬಾರ ಪೇಟ್ರೋಲ ಪಂಪ ಹತ್ತಿರ ರಸ್ತೆಯ ಮೇಲೆ ಮಧ್ಯಾನ 3:15 ಗಂಟೆಯ ಸುಮಾರಿಗೆ ನನ್ನ ಅಟೊ ತೆಗೆದುಕೊಂಡು ಆಡಿಯೋ ಮುಖಾಂತರ ಕಾಂಗ್ರೇಸ್ ಪಕ್ಷದ ಅಭ್ಯರ್ಥಿಗೆ ಮತ ಹಾಕಬೇಕು ಅಂತ ಪ್ರಚಾರ ಮಾಡುತ್ತಾ ಮುಂದೆ ಹೊಗುತ್ತಿದ್ದಾಗ ಜಬ್ಬಾರ ಪೇಟ್ರೊಲ ಪಂಪ ಎದರುಗಡೆ ರಸ್ತೆಯ ಮೇಲೆ ಸುಮಾರು 15-20 ಜನರು ಮೊದಿ, ಮೊದಿ ಅಂತ ಕೂಗುತ್ತಾ ನನ್ನ ಅಟೊದ ಹತ್ತಿರ ಬಂದು ಕಾಂಗ್ರೇಸ ಪಕ್ಷದ ಪ್ರಚಾರ ಬಂದು ಮಾಡು ಅಂತ ಹೇಳಿ ನನ್ನ ಅಟೊದ ಗ್ಲಾಸ ಒಡೆದು, ಅದರಲ್ಲಿ ಕೆಲವರು ನನಗೆ ಅಟೊದಿಂದ ಹೊರಗೆ ಎಳೆದುಕೊಂಡು ತಮ್ಮ ಕೈಗಳಿಂದ ನನ್ನ ಮುಖದ ಮೇಲೆ ಮೈ ಮೇಲೆ ಹೊಡೆದು ಗುಪ್ತಗಾಯ ಪಡಿಸಿದ್ದು, ನಂತರ ಸದರಿಯವರು ನನ್ನ ಅಟೊಕ್ಕೆ ಕಟ್ಟಿದ ಕಾಂಗ್ರೇಸ್ ಪಕ್ಷದ ಬ್ಯಾನರ ಹರಿದು ಹಾಕಿದ್ದು, ಅಟೊಕ್ಕೆ ಕಟ್ಟಿದ ಕಾಂಗ್ರೇಸ್ ಪಕ್ಷದ ದ್ವಜಾ ಕಿತ್ತು ಹಾಕಿದ್ದು, ಮತ್ತು ಪ್ರಚಾರ ಕುರಿತು ಅಟೊಕ್ಕೆ ಕಟ್ಟಿದ ಬುಂಗಾ (ಸ್ಪೀಕರ) ಕಿತ್ತು ಹಾಕಿ ಬುಂಗಾ ನೇಲಕ್ಕೆ ಹೊಡೆದು ಅದರ ಯುನಿಟ ಮುರಿದು ಅಟೊದ ಗ್ಲಾಸ, ಸ್ಪೀಕರ ಬುಂಗಾ ಒಡೆದು ಅಂದಾಜ 9,000/-ರೂ ನನಗೆ ಹಾನಿ ಮಾಡಿದ್ದು ಇರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಘವೇಂದ್ರ ನಗರ ಠಾಣೆ : ಶ್ರೀ ಮಹ್ಮದ ಮೌಲಾ ತಂದೆ ಗುಡುಸಾಬ ಮುತಾವಲ್ಲಿ ಸಾ: ಮೌಲಾಲಿ ದರ್ಗಾ ಶೇಟ್ಟಿ ಕಾಂಪ್ಲೇಕ್ಸ್ ಹತ್ತಿರ ಆಳಂದ ರೋಡ ಕಲಬುರಗಿ ರವರು ದಿನಾಂಕ: 13/04/2019 ರಂದು 4-00 ಪಿ.ಎಂ ಸುಮಾರಿಗೆ ನಾನು ಶೇಟ್ಟೆ ಕಾಂಪ್ಲೇಕ್ಸ್ ಹತ್ತಿರ ನಿಂತಿರುವಾಗ ನನ್ನ ಗೆಳೆಯನಾದ ಸೈಯದ ತಂದೆ ಮಹ್ಮದ ಸಲೀಂ ಮಗರಿಬಸಾಬ ಇತನು ತನ್ನ ಮೋಟಾರ ಸೈಕಲ ನಂ. ಕೆಎ-39 ಕ್ಯೂ-7309 ನೇದ್ದನ್ನು ತೆಗೆದುಕೊಂಡು ನನ್ನ ಹತ್ತಿರ ಬಂದನು. ಆಗ ನಾನು ಸೈಯದ ಇತನಿಗೆ ನನ್ನ ಗೆಳೆಯನಾದ ವೇಂಕಟ ಇತನು ಗದಲೇಗಾಂವ ಕಲ್ಯಾಣ ಮಂಟಪದ ಹತ್ತಿರ ಇರುತ್ತಾನೆ. ಅವನ ಹತ್ತಿರ ಹೋಗಿ ಬರೋಣ ಅಂತಾ ಹೇಳಿದೆನು. ಆಗ ಸೈಯದ ಮೋಟಾರ ಸೈಕಲ ಚಾಲು ಮಾಡಿದಾಗ ಅವನ ಹಿಂದೆ ನಾನು ಕುಳಿಕೊಂಡು ಗದಲೇಗಾಂವ ಕಲ್ಯಾಣ ಮಂಟಪ ಹತ್ತಿರ ಹೋದೆವು. ಅಲ್ಲಿ ಹೋಗಿ ನೊಡಲು ವೇಂಕಟ ಇತನು ಇರಲಿಲ್ಲ. ಕಲ್ಯಾಣ ಮಂಟಪದ ಹಿಂದಿನ ಗೇಟ ಹತ್ತಿರ 4-15 ಪಿ.ಎಂ ಸುಮಾರಿಗೆ ಹೋಗಿ ನೊಡಲು ಸುಮಾರು 15-20 ಜನರು ಅಲ್ಲಿ ಕುಳಿತುಕೊಂಡಿದ್ದರು. ಆಗ ನಾವು ಅವರಲ್ಲಿ ವೇಕಂಟ ಇತನು  ಕುಳಿತುಕೊಂಡಿರಬಹುದು ಅಂತಾ ಅವರ ಹತ್ತಿರ ಹೋಗಿ ನೊಡಲು ಅಲ್ಲಿ ವೇಂಕಟ ಇರಲಿಲ್ಲ. ಆಗ ಆ ಗುಂಪಿನಲ್ಲಿದ್ದ ಒಬ್ಬನು  ಏ ಬೊಸಡಿ ಮಕ್ಕಳಾ ನಮಗೇನು ದುರುಗುಟ್ಟಿ ನೋಡುತ್ತಿದ್ದಿರಿ  ಅಂತಾ ಅಂದನು. ಆಗ ನಾನು ಯಾಕೆ ಬೈಯುದ್ದಿರಿ ನಮ್ಮ ಸ್ನೇಹಿತ ವೇಂಕಟ ಇತನು ಇದ್ದಾನೆನೋ ಅಂತಾ ನೋಡುತ್ತಿದ್ದೇವೆ ಅಂತಾ ಅಂದಾಗ ಆತನು ನಮಗೆ ಎದುರು ಮಾತನಾಡುತ್ತಿಯಾ ಬೋಸಡಿಕೆ ಅಂತಾ ಅಂದವನೇ ತನ್ನ ಕೈಯಲ್ಲಿದ್ದ ಬಿಯರ್ ಬಾಟಲಿ ತೆಗೆದುಕೊಂಡು ನನ್ನ ತಲೆಯ ಹಿಂಬಾಗಕ್ಕೆ ಹೊಡೆದು ಭಾರಿ ರಕ್ತಗಾಯಗೊಳಿಸಿದನು. ಅವರಲ್ಲಿದ್ದ ಇನ್ನೊಬ್ಬನು ಜಾಸ್ತಿ ಎದುರು ಮಾತಾಡುತ್ತಿಯಾ ಅಂತಾ ಅಂದು ಕಲ್ಲಿನಿಂದ ನನ್ನ ಬಲಗಾಲ ಮೊಳಕಾಲ ಮೇಲೆ ಹೊಡೆದು ರಕ್ತಗಾಯ ಗೊಳಿಸಿದನು. ಉಳಿದವರೆಲ್ಲ ಬೈಯುತ್ತಾ ಕೈಯಿಂದ ನನ್ನ ಮೈಕೈಗೆ ಹೊಡೆದು ಗುಪ್ತಗಾಯ ಪಡಿಸಿದರು. ನನಗೆ ಹೊಡೆಯುದನ್ನು ಬಿಡಿಸಿಕೊಳ್ಳಲು ಬಂದ ನನ್ನ ಗೆಳೆಯನಾದ ಸೈಯದ ತಂದೆ ಮಹ್ಮದ ಸಲೀಂ ಇತನಿಗೂ ಸಹ ಅವರೆಲ್ಲರೂ ಕೂಡಿ ಕೈಯಿಂದ ಹೊಡೆಬಡೆ ಮಾಡಿದರು. ಆಗ ನಾವು ಚಿರಾಡ ಹತ್ತಿದ್ದಾಗ ನಮಗೆ ಹೊಡೆಯುವುದನ್ನು ಬಿಟ್ಟು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಂಚಾವರಂ ಠಾಣೆ : ದಿನಾಂಕ 13-04-2019 ರಂದು 12.30 ಪಿ.ಎಮ್ ಗಂಟೆಗೆ ಶ್ರೀಮತಿ ಶೋಭಾರಾಣಿ ಗಂಡ ಶೇಖರ ಮಂಗಲಿ ಸಾ : ಕುಂಚಾಚರಂ ರವರು  ನೀರನ್ನು ತುಂಬಿಕೊಂಡು ಮನೆಗೆ ಬರುತ್ತಿರುವಾಗ  ರಾಮಲು ತಂದೆ ಪಪಾಯ ಸಂಗಡ ಇನ್ಒಬ್ಬ ಸಾ : ಕೊಂಚಾವರಂ ಕುಡಿಕೊಂಡು ಫಿರ್ಯಾದಿಗೆ  ತಡೆದು ನಿಲ್ಲಿಸಿ ಅವಾಚ್ಯವಾಗಿ ರಂಡಿ ಬೋಸಡಿ ಅಂತಾ ಬೈದು ಕೈಯಿಂದ ಮತ್ತು ಕಾಲಿನ ಚಪ್ಪಲಿಯಿಂದ ಕಪಾಳಕ್ಕೆ ಹೊಡೆದನು ಮತ್ತು ಸದರಿಯವಳ ಹೊಟ್ಟೆಗೆ ಹೊಡೆದು ಜೀವದ ಬೆದರಿಕೆ ಹಾಕಿ ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕೊಂಚಾವರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.