POLICE BHAVAN KALABURAGI

POLICE BHAVAN KALABURAGI

29 March 2019

KALABURAGI DISTRICT REPORTED CRIMES

ಆಕ್ರಮವಾಗಿ ಮರಳು ಸಾಗಿಸುತ್ತಿದ್ದ ಟ್ರ್ಯಾಕ್ಟರ ಜಪ್ತಿ :
ಅಫಜಲಪೂರ ಠಾಣೆ : ದಿನಾಂಕ 28-03-2019 ರಂದು ಸೋನ್ನ ಗ್ರಾಮದ ಭೀಮಾನದಿಯಿಂದ ಟ್ರ್ಯಾಕ್ಟರನಲ್ಲಿ ಮರಳು ತುಂಬಿಕೊಂಡು ಬಳೂಂಡಗಿ  ಮಾರ್ಗವಾಗಿ ಕ್ಯಾನಾಲ ರೋಡಿಗೆ ಹಾದುಕೊಂಡು ಬಳೂರ್ಗಿ ರೋಡಿಗೆ ಹೊಗುತ್ತದೆ ಅಂತಾ ಮಾಹಿತಿ ಬಂದ ಮೇರೆಗೆ, ಸಿ.ಪಿ. ಅಫಜಲಪೂರ ವೃತ್ತ  ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಅಫಜಲಪೂರ - ಬಳೂರ್ಗಿ ರೋಡಿಗೆ ಹಳ್ಯಾಳ ಕ್ರಾಸ ಹತ್ತಿರ ಹೋಗುತ್ತಿದ್ದಾಗ ನಮ್ಮ ಮುಂದಿನಿಂದ ಒಂದು ಮರಳು ತುಂಬಿದ ಟ್ರ್ಯಾಕ್ಟರ ಹೋಗುತಿತ್ತು , ಆಗ ನಾವು ಟ್ಯಾಕ್ಟರ ಹಿಂದೆ ಹಾಕಿ ಸದರಿ ಟ್ರ್ಯಾಕ್ಟರನ್ನು ನಿಲ್ಲಿಸುವಂತೆ ಟ್ರ್ಯಾಕ್ಟರ ಚಾಲಕನಿಗೆ ಕೈ ಸೂಚನೆ ಕೊಟ್ಟಾಗ, ಟ್ರ್ಯಾಕ್ಟರ ಚಾಲಕ ನಮ್ಮ ಪೊಲೀಸ್ ಜೀಪನ್ನು ನೋಡಿ ಟ್ರ್ಯಾಕ್ಟರನ್ನು ಸ್ಥಳದಲ್ಲೆ ಬಿಟ್ಟು ಓಡಿ ಹೋದನು. ಆಗ ನಾವು ಪಂಚರ ಸಮಕ್ಷಮ ಸದರಿ ಟ್ರ್ಯಾಕ್ಟರನ್ನು ಚೆಕ್ಕ ಮಾಡಲು Mahindra Arjun ಕಂಪನಿಯ ಟ್ರ್ಯಾಕ್ಟರ ಇದ್ದು  ಅದರಲ್ಲಿ ಮರಳು ತುಂಬಿದ್ದು ಇತ್ತು ಮತ್ತು ಅದರ  ನಂ ಕೆಎ-32 ಟಿಎ-8397 , ಇಂಜೆನ ನಂ NSCA01085 ಅಂತಾ ಇದ್ದು. ಸದರಿ ಟ್ಯಾಕ್ಟರ ಟ್ರೈಲಿ ನಂ ಕೆಎ-32 ಟಿ-7865 ಇದ್ದು, ಸದರಿ ಟ್ರೈಲಿಯಲ್ಲಿ ಮರಳು ತುಂಬಿದ್ದು ಇತ್ತು. ಸದರಿ ಟ್ರ್ಯಾಕ್ಟರ .ಕಿ 5,00,000/-ರೂ  ಇರಬಹುದು. ಸದರಿ ಟ್ರ್ಯಾಕ್ಟರ ಟ್ರೈಲಿಯಲಿದ್ದ  ಮರಳಿನ .ಕಿ 3000/- ರೂ ಇರಬಹುದು. ನಂತರ ಸದರಿ ಅಕ್ರಮವಾಗಿ ಮರಳು ತುಂಬಿದ ಟ್ರ್ಯಾಕ್ಟರನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.  
ಹಲ್ಲೆ ಪ್ರಕರಣ :
ನರೋಣಾ ಠಾಣೆ : ಶ್ರೀ.ಶ್ರೀಪಾದ ತಂದೆ ಅಂಬಾರಾವ ಕುಲಕರ್ಣಿ ರವರು  ಕೆಲವು ದಿವಸಗಳ ಹಿಂದೆ ನಮ್ಮೂರಿನ ಪುತಳಬಾಯಿ ಗಂಡ ವಿಠಲ್ ಮಾದಗೊಂಡ ಇವರ ಖುಲ್ಲಾ ಪ್ಲಾಟನ್ನು 5,11,000/- ರೂಪಾಯಿಗಳಿಗೆ ಖರಿದಿಸಿ ಹಣ ಕೊಟ್ಟಿರುತ್ತೇನೆ. ಇದಕ್ಕೆ ಸಂಬಂಧಿಸಿದ ಶೇಲ್ಡೀಡ್ ಹಾಗೂ ರಜಿಸ್ಟ್ಟೇಷನ ಪತ್ರಗಳನ್ನು ನಮ್ಮೂರಿನ ಗ್ರಾಮ ಪಂಚಾಯಿತಿ ಕಾರ್ಯಲಯಕ್ಕೆ ಮೊಟೆಷನ ಸಲುವಾಗಿ ಸುಮಾರು ಒಂದುವರಿ ತಿಂಗಳ ಹಿಂದೆ ಸಲ್ಲಿಸಿರುತ್ತೇನೆ. ಸದರಿ ಪುತಳಬಾಯಿ ಇವರಿಂದ ನಾನು ಖರಿದಿಸದ ಪ್ಲಾಟಿನ ಪಕ್ಕದಲ್ಲಿ ಪುತಳಬಾಯಿ ಇವರ ಸಂಬಂಧಿಕರಾದ ಶಾಂತಪ್ಪಾ ತಂದೆ ಶ್ರೀಮಂತ ಇವರು ಪ್ಲಾಟ್ ಇರುತ್ತದೆ. ದಿನಾಂಕ:31/03/2019 ರಂದು ನನ್ನ ಅಣ್ಣನಾದ ಹಣಮಂತರಾವ ಇವರ ಮಗನ ಮದುವೆ ಇದ್ದ ಪ್ರಯುಕ್ತ ನಾನು ಖದಿರಿದಿಸಿದ ಪ್ಲಾಟಿನಲ್ಲಿ ರಿಶಫಶನ ಕಾರ್ಯಕ್ರಮ ಇಟ್ಟಿಕೊಳ್ಳುವ ಸಂಬಂಧ ನಾನು ಸದರಿ ಪ್ಲಾಟಿನಲ್ಲಿ ಕಟ್ಟಿಗೆ ಕುಳ್ಳ ಹಾಕಿರುವ ಶಾಂತಪ್ಪಾ ಇವರಿಗೆ ದಿನಾಂಕ:27/03/2019 ರಂದು ಸಾಯಂಕಾಲ 4-45 ಅವರ ಮನೆಗೆ ಹೋಗಿ ತಗೆದುಕೊಳ್ಳಲು ಹೇಳಿದ್ದಕ್ಕೆ ಶಾಂತಪ್ಪಾ ಇವನು ನಿಮ್ಮೌನ್ ಬೋಳಮಗನೆ ನೀಯಾರು ನಮಗ ಹೇಳವ ಅಂತಾ ಬೈದು ನನಗೆ ಎದೆಯ ಮೇಲಿನ ಅಂಗಿಹಿಡಿದು ಎಳೆದಾಡಿ ಕೈಯಿಂದ ಹೊಟ್ಟೆ ಮುಖಕ್ಕೆ ಹೊಡೆದು ನಂತರ ಒಂದು ಕಟ್ಟಿಗೆಯಿಂದ ನನ್ನ ನಡುತೆಲೆಗೆ ಹೊಡೆದನು ಕರಬಸಪ್ಪಾ ಈತನು ಒಂದು ಕಲ್ಲಿನಿಂದ ಜೋರಾಗಿ ನನ್ನ ತಲೆಗೆ ಹೊಡೆದನು ಘಟನೆಯನ್ನು ನೋಡಿ ಬಿಡಿಸಲು ಬಂದ ನನ್ನ ಅಣ್ಣ ಹಣಮಂತರಾವ ಈತನಿಗೆ ಕರಬಸಪ್ಪಾ ಈತನು ತನ್ನ ಮನೆಯಿಂದ ಒಂದು ಕಬ್ಬಿಣದ ರಾಡತಂದು ನಿನಗೆ ಜೀವ ಸಹೀತ ಬಿಡಂಗಿಲ್ಲಾ ಅಂತಾ ಹೇಳಿ ಕೊಲೆಮಾಡುವ ಉದ್ದೇಶದಿಂದ ತಲೆಗೆ ಹೊಡೆದು ರಕ್ತಗಾಯ ಪಡಿಸಿದನು ಆಗ ನಾನು ಬಿಡಿಸಲು ಹೋದಾಗ ಜೋತಿ ಗಂಡ ಕರಬಸಪ್ಪಾ ಮಹಾನಂದ ಗಂಡ ಶಾಂತಪ್ಪಾ ಇವರು ನನಗೆ ಮುಂದೆ ಹೊಗದಂತೆ ತಡೆದು ಘಟ್ಟಿಯಾಗಿ ಹಿಡಿದರು ಇವರಿಗೆ ಬಿಡಬೇಡಿ ಖಲಾಸ ಮಾಡ್ರೀ ಅಂತಾ ಹೇಳುತ್ತಾ ಬಿಡಿಸಲು ಬಂದ ನನ್ನ ಅಣ್ಣನ ಹೆಂಡತಿ ಚಂದಮ್ಮಾ ಇವಳಿಗೆ ಶಾಂತಪ್ಪನು ಕಟ್ಟಿಗೆಯಿಂದ ಕುತ್ತಿಗೆ ಮೇಲೆ ಹೊಡೆದನು. ಮಾರಣಾಂತಿಕ ಹಲ್ಲೆ ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ,

24 March 2019

KALABURAGI DISTRICT REPORTED CRIMES

ಹಲ್ಲೆ ಮಾಡಿ ಜಾತಿ ನಿಂದನೆ ಮಾಡಿದ ಪ್ರಕರಣಗಳು :
ನರೋಣಾ ಠಾಣೆ : ಶ್ರೀ.ಪ್ರೇಮಸಿಂಗ ತಂದೆ ಭೀಮಶ್ಯಾ ಜಾದವ್, ಸಾ:ದಣ್ಣೂರತಾಂಡಾ ರವರು ದಿನಾಂಕ: 21/03/2019 ರಂದು ಮಧ್ಯಾಹ್ನ ಇಬ್ಬರು ಜನರು ನಾನು ಇಲ್ಲದ ಸಮಯದಲ್ಲಿ ದಾವಲ ಮಲ್ಲಿಕ ದರ್ಗಾದ ಹೊಟೆಲನಲ್ಲಿ ಬಂದು ಕುಳಿತು ಆ ಭೋಸಡಿ ಮಗ ಕಳ್ಳ ಲಮಾಣ್ಯಾಗ ಕಡಿಯುತ್ತೇವೆ ಮತ್ತು ಹೊಡೆಯುತ್ತೇವೆ ಹಾಗೂ ನಮ್ಮ ನೆಲ್ಲೂರದ ರಸ್ತೆ ಬಂದ ಮಾಡುತ್ತೇವೆಂದು ಅವಾಚ್ಯ ಶಬ್ದಗಳಿಂದ ನಮ್ಮ ತಂದೆ ಮತ್ತು ನನ್ನ ಕಾಕಾನಾದ ತುಕಾರಾಮ್, ಲುಂಬು, ಮತ್ತು ಇನ್ನೀತರ ಜನರ ಎದುರಗಡೆ ದಮಕಿಕೊಟ್ಟು ಹೊಗಿದ್ದಾರೆ. ಆದರೆ ದಿನಾಂಕ:22/03/2019 ರಂದು ಸಾಯಂಕಾಲ ನನ್ನ ಮನೆಗೆ ಬಂದು ನಡಿ ಭೋಸಡಿ ಮಗನಾ ನಿನಗ ಹಣಮಂತರಾವ ಎಸ್ ಖ್ಯಾಮದಿ ಸಾ:ನೆಲ್ಲೂರ ಗ್ರಾಮದವರು ನಮಗೆ ನಿನಗೆ ಕರೆದುಕೊಂಡು ಬಾ ಎಂದು ಕೈಹಿಡಿದು ಗಾಡಿಯ ಮೇಲೆ ಕೂಡು ಮಗನಾ ಅಂತಾ ಕೈಹಿಡಿದು ಎಳೆದು ಬಾಯಿಗೆ ಬಂದಂತೆ ಬೈದರು ನಮ್ಮ ತಾಂಡಾದ ಜನರು ಬಿಡಿಸಿ ಕಳಿಸಿದರು, ಆರೋಪಿತ ಗುಂಡಾಗಳಾದ 1)ಸುನೀಲ ಎಸ್ ಅಂಬಲಗಿ, 2)ಮಲ್ಲು ಬಿರಾದಾರ ಸಾ:ನೆಲ್ಲುರ, ಇವರಿಬ್ಬರಿಗೆ ಕಾರಣಬೂತನಾಗಿದ ಶ್ರೀ.ಹಣಮಂತರಾವ ಎಸ್ ಪಾಟೀಲ್ ಸಾ:ನೆಲ್ಲೂರ ಸದರಿಯವರ ಮೇಲೆ ಕಾನೂನು ಕ್ರಮ ಕೊಳ್ಳಬೇಕೆಂದು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನರೋಣಾ ಠಾಣೆ : ಶ್ರೀ.ಲಕ್ಕಪ್ಪಾ ತಂದೆ ಕಲ್ಲಪ್ಪಾ ಕಾಂಬಳೆ, ಸಾ:ದಣ್ಣೂರ ರವರ  ಅಣನಾದ್ಣ ದಶರಥನಿಗೆ ವಯಸ್ಸಿಗೆ ಬಂದ ಹೆಣ್ಣು ಹುಡಗಿಯರು ಇದ್ದು ಸುದೀರ ತಂದೆ ಬಾಬು ಜಮದಾರ ಈತನು ನಮ್ಮ ಮನೆಯ ಮುಂದೆ ದಿನಾಲು ತಿರುಗಾಡುತ್ತಿದ್ದುದ್ದರಿಂದ ನಾನು ಸುಮಾರು 3-4 ದಿವಸಗಳ ಹಿಂದ ಸುದೀರನಿಗೆ ಹೀಗೆ ತಿರುಗಾಡಬೇಡಾ ಇದು ಸರಿಯಲ್ಲಾ ಅಂತಾ ತಾಕೀತು ಮಾಡಿರುತ್ತೇನೆ. ಅಂದಿನಿಂದ ಸುದೀರನು ನನಗೆ ಗುರಾಯಿಸುತ್ತಾ ಬಂದಿರುತ್ತಾನೆ. ದಿನಾಂಕ:22/03/2019 ರಂದು ಸಾಯಂಕಾಲ ನಾನು ನಮ್ಮ ಮನೆಯ ಮುಂದೆ ನಿಂತಾಗ 1)ಸುದೀರ ತಂದೆ ಬಾಬು ಜಮಾದಾರ, 2)ಬಾಬು ತಂದೆ ರಾಯಪ್ಪಾ ಜಮಾದಾರ ಇಬ್ಬರು ಅಲ್ಲಿಗೆ ಬಂದು ನನ್ನ ಸಂಗಡ ಜಗಳ ಮಾಡಿ ಅದರಲ್ಲಿ ಸುದೀರನು ನನಗೆ ಏ ರಂಡಿಮಗನೆ ಮಾದಿಗ ಸೂಳೆಮಗನೆ ನನಗೆ ನೀ ಏನು ತಾಕಿತ್ತು ಮಾಡತಿ ನಿನಗೆ ಒಂದು ಕೈ ನೋಡೆ ಬಿಡುತ್ತೇವು. ಇವತ್ತು ಅಂತಾ ಬೈದು ನನಗೆ ಜಗ್ಗಾಡಿ ಕೈಯಿಂದ ಹೊಟ್ಟೆಗೆ ಗುದ್ದಿದನು ಬಾಬು ತಂದೆ ರಾಯಪ್ಪಾ ಜಮಾದಾರ ಇವನು ಒಂದು ಕಲ್ಲಿನಿಂದ ನನ್ನ  ತಲೆಗೆ ಹೊಡೆದು ರಕ್ತಗಾಯ ಪಡಿಸಿದನು, ಆಗ ನನ್ನ ಹೆಂಡತಿ ಶಶಿಕಲಾ ಇವಳು ಜಗಳ ನೋಡಿ ಬಿಡಿಸಲು ಬಂದಾಗ ಅವಳಿಗೆ ಸುದೀರನು ಸೀರೆ ಸೆರಗು ಹಿಡಿದು ಜಗ್ಗಾಡಿ ಕೈಯಿಂದ ಕಪಾಳ ಮೇಲೆ ಹೊಡೆದನು ಇಬ್ಬರು ಕೂಡಿ ಮಾದಿಗ ಸೂಳೆ ಮಗನೆ ನಿನಗೆ ಜೀವ ಸಹಿತ ಬಿಡುವುದಿಲ್ಲ ಅಂತಾ ಚಿರಾಡುತ್ತಿದ್ದಾಗ ಕ್ಷೇಮಲಿಂಗ ತಂದೆ ಶಿವಪ್ಪಾ ಧನ್ನಿ ಶರಣಬಸು ತಂದೆ ಕ್ಷೇಮಲಿಂಗ ಧನ್ನಿ ಇವರು ನೋಡಿ ಬಿಡಿಸಿ ಕಳಿಸಿರುತ್ತಾರೆ. ನಾನು ನಮ್ಮೂರಿನಿಂದ ನರೋಣಾ ಗ್ರಾಮಕ್ಕೆ ಬಂದು ನನಗೆ ಜಗಳದಲ್ಲಿ ತಲೆಗೆ ರಕ್ತಗಾಯ ಆಗಿದ್ದರಿಂದ ಸರಕಾರಿ ಆಸ್ಪತ್ರೆಗೆ ಹೋಗಿ ಉಪಚಾರ ಪಡೆದುಕೊಂಡು ಬಂದಿರುತ್ತೇನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅಪಘಾತ ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ಗಜಾನಂದ ತಂದೆ ಲಕ್ಷ್ಮಣ ನಿಂಬಾಳ ಸಾ: ಚಿಂಚೋಳಿ ತಾ: ಅಫಜಲಪೂರ ರವರು ಮಲ್ಲಾಬಾದ ಗ್ರಾಮದಲ್ಲಿ ನಮ್ಮ ಸಂಬಂಧಿಕರೊಬ್ಬರಿಗೆ ಆರಾಮ ಇಲ್ಲದ ಕಾರಣ ನಮ್ಮ ತಂದೆಯವರಾದ ಲಕ್ಷ್ಮಣ ಹಾಗೂ ನಮ್ಮ ಜಾತಿಯವರಾದ ಕಾಂತಾಬಾಯಿ ಗಂಡ ಸೈದಪ್ಪ ಸಾಮನೂರ ಇವರಿಗೆ ಮಲ್ಲಾಬಾದ ಗ್ರಾಮಕ್ಕೆ ಕಳಿಸಿಕೊಡುವ ಕುರಿತು ನಾನು ದಿನಾಂಕ 21-03-19 ರಂದು ಮಧ್ಯಾಹ್ನ ಚಿಂಚೋಳಿ ಗ್ರಾಮದಿಂದ ಅಫಜಲಪೂರಕ್ಕೆ ನಮ್ಮ ತಂದೆಗೆ ಮತ್ತು ಕಾಂತಾಬಾಯಿ ರವರಿಗೆ ಕರೆದುಕೊಂಡು ಬಂದು ಅಫಜಲಪೂರದಿಂದ ಮಲ್ಲಾಬಾದ ಕಡೆ ಹೋಗುತ್ತಿದ್ದ ಟಂಟಂ ನಂ ಕೆಎ-32-ಸಿ-3214 ನೇದ್ದರಲ್ಲಿ ಇಬ್ಬರಿಗೆ ಕೂಡಿಸಿ ಕಳುಹಿಕೊಟ್ಟೆನು ನಂತರ 4:15 ಪಿ.ಎಮ್ ಸುಮಾರಿಗೆ ನಮ್ಮ ಹೋಮ್ ಗಾರ್ಡ ಯುನಿಟದಲ್ಲಿ ಕೆಲಸ ಮಾಡುತ್ತಿರುವ ಭವಂತ ಆರೇಕರ ಇತನು ನನಗೆ ಫೋನ್ ಮಾಡಿ ಮಲ್ಲಾಬಾದ ಮತ್ತು ನಿರಾವರಿ ಆಫೀಸ್ ಮಧ್ಯದಲ್ಲಿ ಟಂಟಂ ನಂ ಕೆಎ-32-ಸಿ-3214 ನೇದ್ದು ಪಲ್ಟಿಯಾಗಿದ್ದು ಸದರಿ ಟಂಟಂ ದಲ್ಲಿದ್ದ ನಿಮ್ಮ ತಂದೆಗೆ ಮತ್ತು ಕಾಂತಾಬಾಯಿ ಹಾಗೂ ಅಫಜಲಪೂರದ ಜಗದೇವಿ ಎಂಬ ಹೆಣ್ಣು ಮಗಳು ಇವರೆಲ್ಲರೂ ಭಾರಿ ರಕ್ತಗಾಯ ಮತ್ತು ಒಳ ಪೆಟ್ಟು ಆಗಿರುತ್ತದೆ ಅಂತಾ ತಿಳಿಸಿದನು ಕೂಡಲೇ ನಾನು ಮತ್ತು ಕಾಂತಾಬಾಯಿಯ ಮಗನಾದ ಸಂಜುಕುಮಾರ @ ಚಂದಪ್ಪ ಇಬ್ಬರು ಘಟನೆ ಜರುಗಿದ ಸ್ತಳಕ್ಕೆ ಬಂದಿರುತ್ತೇವೆ ಅಷ್ಟರಲ್ಲೇ ಸ್ಥಳಕ್ಕೆ 108 ವಾಹನ ಬಂದಿದ್ದು ನಾವು ಸದರಿಯವರಿಗೆ ಆಗಿರುವ ಗಾಯಗಳನ್ನು ನೋಡಿ 108 ವಾಹನದಲ್ಲಿ ಚಿಕಿತ್ಸೆಗಾಗಿ ಕಲಬುರಗಿಗೆ ಕರೆದುಕೊಂಡು ಬರುತ್ತಿದ್ದಾಗ ಸಾಯಂಕಾಲ 5:30 ಪಿ.ಎಮ್ ಕ್ಕೆ ಕಾಂತಾಬಾಯಿ ಶರಣಶಿರಸಗಿ ಹತ್ತಿರ ಮಾರ್ಗ ಮಧ್ಯದಲ್ಲಿ ಮೃತಪಟ್ಟಿರುತ್ತಾಳೆ ನಂತರ ನನ್ನ ತಂದೆಗೆ ಕಲಬುರಗಿಯ ಜಿ.ಜಿ.ಹೆಚ್ ಯಲ್ಲಿ ಸೇರಿಕೆ ಮಾಡಿ ಕಾಂತಾಬಾಯಿಯ ಶವವವು ಶವಗಾರದಲ್ಲಿ ಹಾಕಿಸಿರುತ್ತೇವೆ. ಜಗದೇವಿ ಸಂಬಂಧಿಕರು ಬಂದು ಅವಳಿಗೆ ಉಪಚಾರ ಕುರಿತು ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿರುತ್ತಾರೆ. ದಿನಾಂಕ 21-03-19 ರಂದು ಸಾಯಂಕಾಲ 4:00 ಗಂಟೆ ಸುಮಾರಿಗೆ ಅಫಜಲಪೂರ ಮಲ್ಲಾಬಾದ ರೋಡಿಗೆ ಮಲ್ಲಾಬಾದ ಗ್ರಾಮ ಇನ್ನು ಅಂದಾಜು 02 ಕಿ.ಮೀ ಅಂತರದಲ್ಲಿರುವಾಗ ಟಂಟಂ ನಂ ಕೆಎ-32-ಸಿ-3214  ನೆದ್ದರ ಚಾಲಕನಾದ ತಿಪ್ಪಣ್ಣ ತಂದೆ ಭೀರಣ್ಣ ಕೊಕಟನೂರ ಸಾ: ದೇಸಾಯಿ ಕಲ್ಲೂರ ಎಂಬಾತನು ಟಂಟಂ ಪಲ್ಟಿ ಮಾಡಿ ಅಫಘಾತ ಪಡೆಸಿರುತ್ತಾನೆ ಅಂತಾ ಗೊತ್ತಾಗಿರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಹಲ್ಲೆ ಪ್ರಕರಣಗಳು :
ನರೋಣಾ ಠಾಣೆ : ಶ್ರೀ. ಉದಯ ತಂದೆ ಕಲ್ಯಾಣರಾವ ಖ್ಯಾಮದಿ ಮು:ನೆಲ್ಲೂರ ಗ್ರಾಮ ರವರು ದಿನಾಂಕ:22/03/2019 ರಂದು ದೇವರ ದರ್ಶನ ಕುರಿತು ನಾನು ಮತ್ತು ನಮ್ಮ ಚಿಕ್ಕಪ್ಪನ ಮಗನಾದ ಹಣಮಂತರಾಯ ತಂದೆ ಶ್ರೀಮಂತರಾಯ ಖ್ಯಾಮದಿ, ಮಲ್ಲಿಕಾರ್ಜುನ ತಂದೆ ಗೌಡಪ್ಪಾ ಬಿರಾದಾರ, ಸುನೀಲ ತಂದೆ ಶಿವಶಂಕರ ಅಂಬಲಗಿ ಹಾಗೂ ಅವನ ತಾಯಿಯಾದ ಶ್ರೀಮತಿ.ಉಮಾದೇವಿ ಗಂಡ ಶಿವಶಂಕರ ಅಂಬಲಗಿ ಎಲ್ಲರೂ ಕೂಡಿ ನಾವು ದಣ್ಣೂರ ತಾಂಡಾದ ದಾವಲಮಲಿಕ ದರ್ಗಾಕ್ಕೆ ಹೋಗಿ ದೇವರ ದರ್ಶನಮಾಡಿಕೊಂಡು ವಾಪಸ್ಸು ಬರಬೇಕೆಂದು ದೇವಸ್ಥಾನದ ಮುಂದೆ ನಿಂತಾಗ ದಣ್ಣೂರ ತಾಂಡಾದ 1)ಪ್ರೇಮಸಿಂಗ ತಂದೆ ಭೀಮಶ್ಯಾ ಜಾದವ್, 2)ಪ್ರಭು ಜಾದವ್, 3)ಕಾಂತು ಜಾದವ್, 4)ತುಕಾರಾಮ ಜಾದವ್ ಎಲ್ಲರೂ ಅಲಿಗೆ ಬಂದು ಇರಲ್ಲಿ ಪ್ರಭು ಜಾದವ ಈತನು ಹಣಮಂತರಾಯ ಇವರಿಗೆ ಏ ರಂಡಿಮಗನೆ ನಮ್ಮ ತಾಂಡಾದಾಗ ಸಿಸಿ ರೋಡ ಮಾಡಿಸುವ ಸಲುವಾಗಿ ಜಿ.ಓ ಟ್ಯಾಗ್ ಫೊಟೋ ತಗೆಯಲು ನೀನು ಬಂದಿದ್ದ ನಿನಗ ಸೊಕ್ಕ ಬಹಳ ಬಂದಿದೆ ರಂಡಿಮಗನೆ ಅಂತಾ ಅವಾಚ್ಯವಾಗಿ ಬೈದು ಎದೆಯ ಮೇಲಿನ ಅಂಗಿಹಿಡಿದು ಜಗ್ಗಾಡುತ್ತಿದ್ದಾಗ ಶ್ರೀಮತಿ.ಉಮಾದೇವಿ ಇವರು ಮದ್ಯ ಪ್ರವೇಶಿಸಿ ಜಗಳ ಬಿಡಿಸಲು ಹೋದಾಗ ಅವರಿಗೆ ಕೈಹಿಡಿದು ಜಗ್ಗಾಡಿ ನೂಕಿಕೊಟ್ಟಿರುತ್ತಾನೆ. ಆಗ ಉಳಿದ ನಾವೆಲ್ಲರೂ ಕೇಳಲು ಹೋದಾಗ ನನಗೆ ಪ್ರೇಮಸಿಂಗನು ಕೈಯಿಂದ ಕಪಾಳ ಮೇಲೆ ಬೆನ್ನ ಮೇಲೆ ಹೊಡೆದಿರುತ್ತಾನೆ. ಸುನೀಲನಿಗೆ ಪ್ರಭು ಈತನು ನೆಲಕ್ಕೆ ಹಾಕಿ ಕಾಲಿನಿಂದ ಹೊಟ್ಟೆಗೆ ಒದ್ದಿರುತ್ತಾನೆ, ಕಾಂತು ಮತ್ತು ತುಕಾರಾಮ್ ಇವರು ಈ ರಂಡಿಮಕ್ಕಳಿಗೆ ಬಿಡಬ್ಯಾಡರಿ ಅಂತಾ ಜೀವ ಬೆದರಿಕೆ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನರೋಣಾ ಠಾಣೆ : ಶ್ರೀ. ಮನ್ನು ತಂದೆ ಗೇಮು ರಾಠೋಡ್ ರವರು  ದಿನಾಂಕ:22/03/2019 ರಂದು ಭೂಸನೂರ ಫ್ಯಾಕ್ಟರಿಯಲ್ಲಿ ನಮ್ಮ ಕೆಲಸ ನಿಮಿತ್ಯ ನಾನು ಮತ್ತು ನನ್ನ ಅಳಿಯನಾದ ಅನೀಲ ತಂದೆ ರಾಜು ಪವಾರ ಇಬ್ಬರು ನಮ್ಮ ಸ್ವಂತ ಮೊಟಾರ್ ಸೈಕಲ್ ಮೇಲೆ ಹೋಗಿದ್ದು ಕೆಲಸ ಮುಗಿದ ನಂತರ ಅದೇ ಮೊಟಾರ್ ಸೈಕಲ್ ಮೇಲೆ ಮರಳಿ ಊರಿಗೆ ಬರುವಾಗ ಚಿಂಚೋಳಿ ಕ್ರಾಸ್ ಹತ್ತಿರ ಮೊಟಾರ್ ಸೈಕಲ್ ನಿಲ್ಲಿಸಿ ಒಂದು ಹೊಟೇಲ್ ಮುಂದೆ ನಾವು ಕುಳಿತಾಗ ಒಬ್ಬ ವ್ಯಕ್ತಿ ಧುತ್ತರಗಾಂವ ಕಡೆಯಿಂದ ಮೊಟಾರ್ ಸೈಕಲ್ ಮೇಲೆ ಅಲ್ಲಿಗೆ ಬಂದು ನಾವು ಭೂಸನೂರ ಫ್ಯಾಕ್ಟರಿ ಹತ್ತಿರ ಇರುವ ವೈನ್ಸಶಾಫ್ ನಲ್ಲಿ ತಂದ ಸರಾಯಿ ನೋಡಿ ತನಗೆ ಕುಡಿಯಲು ಸಾರಾಯಿ ಕೊಡಿ ಅಂತ ಬೇಡಿದನು. ಆಗ ನಮಗೂ ಮತ್ತು ಅವನಿಗೆ ಸ್ವಲ್ಪ ತಕರಾರು ಆಯಿತು ಆಗ ಆತ ಅಲ್ಲಿಂದ ಹೋಗಿ ಸ್ವಲ್ಪ ಹೊತ್ತಿನಲ್ಲಿಯೇ ತನ್ನ ಸಂಗಡ ಸುಮಾರು 8-10 ಜನರನ್ನು ಕರೆದುಕೊಂಡು ಅಲ್ಲಿಗೆ ಬಂದು ತಮ್ಮ ಸಂಗಡ ಜಗಳ ಮಾಡಿ ನನಗೆ ರಂಡಿಮಗನೆ ಕುಡಿಯಲು ದಾರು ಬೇಡಿದರೆ ಇಲ್ಲಾ ಅಂತಾ ಬೈದು ಕೈಯಲ್ಲಿದ್ದ ಕಟ್ಟಿಗೆಯಿಂದ ಬಲಗೈ ಮೇಲೆ ಹೊಡೆದಾಗ ಬಲಗೈ ಕಿರು ಬೆಳಿಗೆ ಭಾರಿ ಒಳಪೆಟ್ಟು ಆಗಿರುತ್ತದೆ. ಇನ್ನೊಬ್ಬ ಅಲ್ಲೇ ನಿಂತಿದ್ದ ಹಾಲಿನ ಗಾಡಿಯಲ್ಲಿದ ಖಾಲಿ ಕ್ಯಾರೇಟ್ ಬಾಕ್ಸ್ ತಗೆದುಕೊಂಡು ಅದರಿಂದ ನನ್ನ ತಲೆಯ ಮೇಲೆ ಜೋರಾಗಿ ಹೊಡೆದು ಗುಪ್ತಗಾಯ ಪಡಿಸಿದನು. ಇನ್ನೊಬ್ಬ ತನ್ನ ಟೆಕ್ಕೆಯಲ್ಲಿ ನನಗೆ ತಗೆದುಕೊಂಡು ರೋಡಿನ ಮೇಲೆ ಎತ್ತಿ ನೆಲಕ್ಕೆ ಹಾಕಿ ಕಾಲಿ ಹಿಡಿದು ಎಳೆದಾಡಿದನು. ನನ್ನ ಬಲ ಮಗ್ಗಲಿಗೆ ತರಚಿದ ರಕ್ತಗಾಯಗಳು ಆದವು. ಮತ್ತೊಬ್ಬ ಅನೀಲನಿಗೆ ತನ್ನ ಕೈಯಿಂದ ಬಲಕಪಾಳಕ್ಕೆ ಎಡ ಮಗ್ಗಲಿಗೆ ಗುದ್ದಿ ಗುಪ್ತಗಾಯ ಪಡಿಸಿದನು. ಅಸ್ಟರಲ್ಲಿ ಇನ್ನೊಬ್ಬ ಅಳಿಯನಾದ ದೇವಿದಾಸ ತಂದೆ ಹರಿಶ್ಚಂದ್ರ ಜಾದವ್ ಈತನು ಅಲ್ಲಿಗೆ ಬಂದು ಜಗಳ ಬಿಡಿಸುವಾಗ ಅವನಿಗೂ ಕೂಡ ನನಗೆ ಕಟ್ಟಿಗೆಯಿಂದ ಹೊಡೆದ ವ್ಯಕ್ತಿಯೇ ಅದೇ ಕಟ್ಟಿಗೆಯಿಂದ ಎಡ ಮುಂಡಿಗೆ ಹೊಡೆದು ಭಾರಿಗುಪ್ತಗಾಯ ಪಡಿಸಿದನು. ಮತ್ತು ಕೈಯಿಂದ ಎಡಕಪಾಳ ಮೇಲೆ ಹೊಡೆದನು. ಉಳಿದವರು ಎಲ್ಲರೂ ರಂಡಿಮಕ್ಕಳ್ಯಾ ನಿಮಗೆ ಬಹಳ ಸೊಕ್ಕು ಬಂದಾದ ನಿಮಗೆ ಬಿಡಂಗಿಲ್ಲ ಅಂತಾ ಬೈದು ಜೀವಭಯ ಪಡಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ  ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನರೋಣಾ ಠಾಣೆ : ಶ್ರೀ ಬಾಬು ತಂದೆ ರಾಯಪ್ಪಾ ಜಮಾದಾರ ಸಾ:ದಣ್ಣೂರ ರವರು ದಿನಾಂಕ:22/03/2019 ರಂದು ಸಾಯಂಕಾಲ ತನ್ನ ಮಗನಾದ ಜಗು ಈತನು ಬಣ್ಣ ಆಡಿ ಮೈತೊಳೆದುಕೊಳ್ಳುವ ಸಲುವಾಗಿ ನಮ್ಮ ಅಣ್ಣನಾದ ಧರ್ಮಣ್ಣಾ ಇವರ ಮನೆಯ ಕಡೆಗೆ ಹೋದಾಗ ಧರ್ಮಣ್ಣನ ಮನೆಯ ಹತ್ತಿರ ಇರುವ ಲಕ್ಕಪ್ಪಾ ತಂದೆ ಕಲ್ಲಪ್ಪಾ ಕಾಂಬಳೆ ಈತನು ನನ್ನ ಮಗನಿಗೆ ಹೊಲಸು ಬೈದು ನಮ್ಮ ಮನೆಯ ಕಡೆಗೆ ಯಾಕೆ ಹೆಚ್ಚು ಓಡಾಡುತ್ತಿ ಅಂತಾ ಬೆದರಿಸಿರುತ್ತಾನೆ. ಈ ವಿಷಯ ನನ್ನ ಮಗ ನನ್ನ ಮುಂದೆ ತಿಳಿಸಿದ್ದು ನಾನು ಸಾಯಂಕಾಲ ಲಕ್ಕಪ್ಪನ ಮನೆಯ ಕಡೆಗೆ ಹೋಗಿ ಲಕ್ಕಪ್ಪನಿಗೆ ವಿಚಾರಿಸಿದಾಗ ಲಕ್ಕಪ್ಪನು ನನಗೂ ದಬಾಯಿಸಿ ಕಳುಹಿಸಿರುತ್ತಾನೆ.  ಸಾಯಂಕಾಲ ನಾನು ನಮ್ಮೂರಿನ ಪೂಜಾರಿ ಲಕ್ಷ್ಮೀಕಾಂತ ಇವರ ಹೊಟೆಲ್ ಮುಂದೆ ನಿಂತಾಗ ಲಕ್ಕಪ್ಪಾ ತಂದೆ ಕಲ್ಲಪ್ಪಾ ಕಾಂಬಳೆ, ಶಶಿಕಲಾ ಗಂಡ ಲಕ್ಕಪ್ಪಾ ಕಾಂಬಳೆ, ಇಬ್ಬರು ಅಲ್ಲಿಗೆ ಬಂದು ನನ್ನ ಸಂಗಡ ಜಗಳ ಮಾಡಿ ಲಕ್ಕಪ್ಪನು ನನಗೆ ಏ ರಂಡಿಮಗನೆ ನಿನಗೆ ಇವತ್ತು ಜೀವ ಸಹಿತ ಬಿಡಂಗಿಲ್ಲಾ ನೀನು ನನ್ನ ಮಗನ ಮೇಲಕಟ್ಟಿ ಬಂದು ನಮಗೆ ಕೇಳತಿ ಅಂತಾ ಬೈದು ನನಗೆ ತನ್ನ ಕೈಯಲ್ಲಿದ್ದ ಹಿಡಿಗಾತ್ರದ ಕಲ್ಲಿನಿಂದ ಜೋರಾಗಿ ಹೊಟ್ಟೆಗೆ ಹೊಡೆದನು ನಾನು ಹೊಟ್ಟೆಗೆ ಗುಪ್ತಗಾಯವಾಗಿ ನೆಲಕ್ಕೆ ಬಿದ್ದು ಒದ್ದಾಡುತ್ತಿದ್ದಾಗ ಲಕ್ಕಪ್ಪನು ನನಗೆ ಕೊಲೆ ಮಾಡುವ ಉದ್ದೇಶದಿಂದ ಒಂದು ಬಂಡೆಕಲ್ಲು ನನ್ನ ತಲೆಯ ಮೇಲೆ ಎತ್ತಿ ಒಗೆದನು ಆಗ ನನ್ನ ತಲೆಗೆ ಗಂಬೀರ ರಕ್ತಗಾಯವಾಗಿ ನಾನು ಒದ್ದಾಡುತ್ತಿದ್ದಾಗ ನಮ್ಮೂರಿನ ರವಿ @ ರವೀಂದ್ರ ತಂದೆ ತಿಪ್ಪಣ್ಣಾ ಹಾಗರಗಿ ಈತನು ಬಿಡಸಲು ಬಂದಾಗ ಲಕ್ಕಪ್ಪ ಆತನ ಹೆಂಡತಿ ಶಶಿಕಲಾ ಇಬ್ಬರು ಆತನಿಗೆ ಎದೆಯ ಮೇಲಿನ ಅಂಗಿಹಿಡಿದು ಎಳೆದಾಡಿ ಲಕ್ಕಪ್ಪನು ರವಿಗೆ ರಂಡಿಮಗನೆ ನಮ್ಮಿಬ್ಬರ ಜಗಳದಾ ನಿನಗೇನು ಕೆಲಸ ಅವರ ಮೇಲುಕಟ್ಟಿ ಬರತಿರಾ ಅಂತಾ ಬೈದು ಹಿಡಿಗಲ್ಲಿನಿಂದ ಹಣೆಯ ಎಡಭಾಗಕ್ಕೆ ಹೊಡೆದು ಭಾರಿರಕ್ತಗಾಯ ಪಡಿಸಿದನು. ನಾನು ಒದ್ದಾಡುತ್ತಿದ್ದಾಗ ಶಶಿಕಲಾ ಇವಳು ಇನ್ನೊಂದು ಕಲ್ಲು ಎತ್ತಿ ನನ್ನ ತಲೆಯ ಮೇಲೆ ಹಾಕುತ್ತಿದ್ದಾಗ ನಾನು ತಪ್ಪಿಸಿಕೊಳ್ಳಲು ಪ್ರಯತ್ನಿಸಿದಾಗ ಕಲ್ಲು ನನ್ನ ಹೆಡಕಿನ ಮೇಲೆ ಬಿದ್ದು ಭಾರಿಗುಪ್ತಪೆಟ್ಟು ಆಗಿರುತ್ತದೆ. ಆಗ ನಾನು ಒದ್ದಾಡುತ್ತಿದ್ದಾಗ ಇಬ್ಬರು ಸೇರಿ ನನ್ನ ಎರಡು ಕೈ ಮುಷ್ಠಿಗೆ ಕಲ್ಲಿನಿಂದ ಜಜ್ಜಿ ರಕ್ತಗಾಯ ಪಡಿಸಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ರಾಘವೇಂದ್ರ ನಗರ ಠಾಣೆ : ಶ್ರೀಮತಿ ಮಹಾದೇವಿ ಗಂಡ ರಾಮಚಂದ್ರ ಅಪಚಂದ ಇವರ ಮಗಳಾಸ ಶ್ರೀಮತಿ ವಿಜಯಲಕ್ಷ್ಮಿ ಗಂಡ ತುಳಸಿರಾಮ ಬಂಡೆ ಸಾ|| ಸಂಗಮೇಶ್ವರ ಕಾಲೋನಿ ಕಲಬುರಗಿ ರವರು. ದಿನಾಂಕ; 20/03/2019 ರಂದು ರಾತ್ರಿ 9;30 ಪಿ.ಎಮ್ ಸುಮಾರಿಗೆ ಪ್ರತಿ ವರ್ಷದಂತೆ ಈ ವರ್ಷವು ಸಹ ನಮ್ಮ ಓಣಿಯಲ್ಲಿ ಸಾರ್ವಜನಿಕವಾಗಿ ಹೋಳಿ ಹುಣ್ಣಿಮೆಯ ಹಬ್ಬದ ನಿಮಿತ್ಯ ಕಾಮದಹನ ಇದ್ದು ನಮ್ಮ ತಾಯಿಯವರಾದ ಶ್ರೀಮತಿ ಮಹಾದೇವಿ ಗಂಡ ರಾಮಚಂದ್ರ ಅಪಚಂದ ಇವಳು ಕಾಮದಹನ ಕಟ್ಟಿಗೆಗಳಿಗೆ ಪೂಜೆ ಮಾಢಲು ದೀಪ ಹಚ್ಚಿ ಪೂಜೆ ಮಾಡುತ್ತಿದ್ದಾಗ ಕಾಮದಹನಕ್ಕಾಗಿ ರೆಡಿಯಾಗಿದ್ದ ಕಟ್ಟಿಗೆಗಳ ಮೇಲೆ ನಮ್ಮ ಓಣಿಯ ಗಣೇಶ ತಂದೆ ಸಂಜುಕುಮಾರ ಗಾಯಕವಡ ಇತನು ಕೈಯಲ್ಲಿ ಪೆಟ್ರೋಲ ತುಂಬಿದ ಬಾಟಲಿ ಹಿಡಿದುಕೊಂಡು ನಿಂತಿದ್ದನು ನಾನು ಹಾಗೂ ನಮ್ಮ ತಾಯಿ ಮಹಾದೇವಿ ಇಬ್ಬರೂ ಗಣೇಶನಿಗೆ ದೀಪ ಹಚ್ಚಿದ್ದೇವೆ ಇನ್ನೂ ಪೂಜೆ ಮಾಡುವದಿದೆ ಹಾಗೂ ಜನ ಬರುತ್ತಾರೆ ನೀನು ಪೆಟ್ರೋಲ ಹಾಕಬೇಡ ಅಂತಾ ಅಂದಾಗ ಸದರಿಯವನು ನಮ್ಮ ಮಾತು ಕೇಳದೆ ಹಾಗೆಯೇ ತನ್ನ ಕೈಯಲ್ಲಿದ್ದ ಪೆಟ್ರೋಲನ್ನು ಕಾಮ ದಹನದ ಕಟ್ಟಿಗೆಯ ಮೇಲೆ ಉಗ್ಗಿದನು (ಚಲ್ಲಿದನು) ಆಗ ಬುಗ್ಗನೆ ಬೆಂಕಿ ಎದ್ದಿತು ಮತ್ತೋಮೆ ಪೆಟ್ರೋಲ ಉಗ್ಗಿದ್ದು ಆಗ ಒಮ್ಮೇಲೆಗೆ ಬೆಂಕಿ ಎದ್ದು ಪೂಜೆ ಮಾಡುತ್ತಿದ್ದ ನಮ್ಮ ತಾಯಿಯ ಬಟ್ಟೆಗೆ ಹತ್ತಿ ಮೈಯಲ್ಲಾ ಬೆಂಕಿ ಹತ್ತಿತ್ತು ಅಲ್ಲೇ ಇದ್ದ ನಾನು ಹಾಗೂ ನನ್ನ ತಂಗಿ ಅಶ್ವಿನಿ, ತಮ್ಮ ರಾಹುಲ ಹಾಗೂ ಇತರರು ಕೂಡಿ ನಮ್ಮ ತಾಯಿಗೆ ಹತ್ತಿದ್ದ ಬೆಂಕಿಯನ್ನು ಆರಿಸಿದೆವು ನಮ್ಮ ತಾಯಿಯ ಎರಡು ಕಾಲುಗಳಿಗೂ, ತೊಡೆಗಳಿಗೆ, ಹೊಟ್ಟೆ, ಬೆನ್ನು, ಎದೆ ಹಾಗೂ ಎರಡು ಕೈಗಳಿಗೆ ಸುಟ್ಟಗಾಯ ಹಾಗೂ ಭಾರಿ ಸುಟ್ಟಗಾಯಗಳಾಗಿದ್ದು ನಾವು ಕೂಡಲೆ ಖಾಸಗಿ ವಾಹನದಲ್ಲಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿದ್ದು ವೈದ್ಯರ ಸಲಹೆಯಂತೆ ಹೆಚ್ಚಿನ ಉಪಚಾರ ಕುರಿತು ಬಸವೇಶ್ವರ ಆಸ್ಪತ್ರೆಗೆ ದಿ:21/03/2019 ರಂದು ರಾತ್ರಿ ಸೇರಿಕೆ ಮಾಡಿದ್ದೇವೆ. ಕಾರಣ ನಮ್ಮ ತಾಯಿ ಕಾಮ ದಹನದ ಸಲುವಾಗಿ ಪೂಜೆ ಮಾಡುತ್ತಿರುವಾಗ ಗಣೇಶ ಇತನಿಗೆ ಪೆಟ್ರೋಲ ಕಟ್ಟಿಗೆಯ ಮೇಲೆ ಹಾಕಬೇಡ ಅಂದರೂ ಸಹ ಆತನು ಕೇಳದೆ ಅಲಕ್ಷ್ಯ ಮಾಡಿ ಕಟ್ಟಿಗೆಯ ಮೇಲೆ ಪೆಟ್ರೋಲ ಉಗ್ಗಿದ್ದು ಅದರಿಂದ ದೀಪಕ್ಕೆ ಹಚ್ಚಿದ ಬೆಂಕಿ ಬುಗ್ಗನೆ ಉರಿದು ನಮ್ಮ ತಾಯಿಯ ಮೈ ಕೈಗೆ ಹತ್ತಿ ಸುಟ್ಟಗಾಯ ಹಾಗು ಭಾರಿ ಸುಟ್ಟಗಾಯಗಳಾಗಿದ್ದು ಸದರಿ ಗಣೇಶನ ಮೇಲೆ ಕಾನೂನು ಕ್ರಮ ಕೈಕೊಳ್ಳಬೆಕೆಂದು  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ  ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

22 March 2019

KALABURAGI DISTRICT REPORTED CRIMES

ಅಪಘಾತ ಪ್ರಕರಣ :
ಫರತಾಬಾದ ಠಾಣೆ : ದಿನಾಂಕ 17/03/2019 ರಂದು ರಾಷ್ಟ್ರೀಯ ಹೇದ್ದಾರಿ 218ರ ಸೀತನೂರ ಕ್ರಾಸ ಹತ್ತಿರ ರೋಡಿನ ಮೇಲೆ ಮೋಟಾರ ಸೈಕಲ ನಂ ಕೆಎ-32 ಇಸಿ-9817 ನೇದ್ದರ ಚಾಲಕನು ತನ್ನಮೋಟಾರ ಸೈಕಲನ್ನು ಅತೀ ವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿದಾರರ ತಂದೆಯಾದ ವಜೀರ ಪಟೇಲ ಇತನು ಚಲಾಯಿಸುತ್ತಿದ್ದ ಮೋಟಾರ ಸೈಕಲ ನಂ ಕೆಎ-32 ಡಬ್ಲ್ಯೂ-9346 ನೇದ್ದಕ್ಕೆ ಡಿಕ್ಕಿಪಡಿಸಿದ್ದರಿಂದ ಸದರಿ ವಜೀರ ಪಟೇಲ ಇತನಿಗೆ ತಲೆಗೆ  ಭಾರಿ ರಕ್ತಗಾಯ, ಎದೆಗೆ ಭಾರಿ ಗುಪ್ತಗಾಯ, ಎಡಗಾಲಿನ ತೊಡೆಗೆ ಭಾರಿ ಗುಪ್ತಗಾಯಗಳಾಗಿದ್ದು, ಅಪಘಾತಪಡಿಸಿದ ಮೋಟಾರ ಸೈಕಲ ಮೇಲಿದ್ದ ಧರ್ಮರಾಜ ಇತನಿಗೆ ತಲೆಗೆ ಭಾರಿ ಗುಪ್ತಗಾಯ, ಬಲಗಣ್ಣಿಗೆ ಭಾರಿ ರಕ್ತಗಾಯ ಕಿವಿಯಿಂದ & ಮೂಗಿನಿಂದ ರಕ್ತಸೋರುತ್ತಿದ್ದು, ಇನ್ನೂಳಿದವರಿಗೂ ಗಾಯಗಳಾಗಿರುತ್ತವೆ. ಕಾರಣ ಸದರಿ ಮೋಟಾರ ಸೈಕಲ ನಂ ಕೆಎ-32 ಇಸಿ-9817 ನೇದ್ದರ ಚಾಲಕನ ವಿರುದ್ದ ಸೂಕ್ತ ಕಾನೂನು ರೀತಿ ಕ್ರಮ ಜರೂಗಿಸಬೇಕೆಂದು ಶ್ರೀ ಸಲೀಮ ಪಟೇಲ ತಂದೆ ವಜೀರ ಪಟೇಲ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ರಸ್ತೆ ಅಪಘಾತದಲ್ಲಿ ದುಃಖಪತಗೊಂಡು ಉಪಚಾರ ಕುರಿತು ಸೇರಿಯಾದ ವಜೀರ ಪಟೇಲ ತಂದೆ ನಬಿ ಪಟೇಲ  ರವರು ರಾಷ್ಟ್ರೀಯ ಹೇದ್ದಾರಿ 218ರ ಸೀತನೂರ ಕ್ರಾಸ ಹತ್ತಿರ ಸಂಭವಿಸಿದ ರಸ್ತೆ ಅಪಘಾತದಲ್ಲಿ ನನ್ನ ತಂದೆ ವಜೀರ ಪಟೇಲ ಇವರಿಗೆ ಭಾರಿ ರಕ್ತಗಾಯ & ಭಾರಿ ಗುಪ್ತಗಾಯಗಳಾಗಿದ್ದು, ಉಪಚಾರ ಕುರಿತು ಸನ್ ರೈಜ್ ಆಸ್ಪತ್ರೆಗೆ ಸೇರಿಯಾಗಿದ್ದು, ಉಪಚಾರ ಪಡೆಯುತ್ತಿದ್ದಾಗ ಚಿಕಿತ್ಸೆ ಫಲಕಾರಿಯಾಗದೆ ಇಂದು ದಿನಾಂಕ 20/03/2019 ರಂದು 2.17 ಪಿ.ಎಮಕ್ಕೆ ಮೃತಪಟ್ಟಿರುತ್ತಾರೆ. ಅಂತಾ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀ ಅಬ್ದುಲ ಯಾಸಿನ್ ತಂಧೆ ಹಾಷಮ್ ಪೀರ ಸಾ: ಆಲ್ ಅಮೀನ್ ಶಾಲೆ ಹತ್ತಿರ ಗಾಲಿಬ ಕಾಲೋನಿ ಎಮ್.ಎಸ್.ಕೆ.ಮೀಲ್ ಕಲಬುರಗಿ ರವರು  ದಿನಾಂಕ 21.03.2019 ರಂದು ಮಧ್ಯಾನ 12:30 ಗಂಟೆಯ ಸುಮಾರಿಗೆ ನಾನು ನನ್ನ ತಂಗಿಯಾದ ಉಮ್ಮೇಫೈಜಾ ಇವಳಿಗೆ ಶಾಲೆಯಿಂದ ಕರೆದುಕೊಂಡು ಬರಲು ಶಟ್ಟಿ ಚಿತ್ರ ಮಂದಿರ ಹತ್ತಿರ ಇದ್ದಾಗ ನನ್ನ ಗೆಳೆಯ ಆರೀಫ್ ಇತನು ನನಗೆ ಪೋನ ಮಾಡಿ  ನಾನು ಗಾಲಿಬ ಕಾಲೋನಿಯಲ್ಲಿರುವಾಗ ನಮ್ಮ ಬಡಾವಣೆಯ ಹುಡಗರಾದ ನಾಗು @ ನಾಗ್ಯಾ, ವಿಶಾಲ ಮೂಕ ಬಾಬು ಮತ್ತು ವಿಜಯ ಇವರು ನಮ್ಮ ಜನಾಂಗದ ಹುಗುಡನಿಗೆ ಬಣ್ಣ ಹಾಕತ್ತಿದ್ದರು ಆಗ ನಾನು ಅವರ ಹತ್ತಿರ ಹೋಗಿ ಅವರು ಬಣ್ಣ ಆಡುವದಿಲ್ಲ ಅವನಿಗೆ ಬಣ್ಣ ಹೊಡೆಯುವದು ಬೇಡ ಅಂತ ಹೇಳಿದಾಗ ಅವರು ನನಗೆ ಅವಾಚ್ಯ ಶಬ್ದಗಳಿಂದ ಬೈದು ಹೊಡೆದಿರುತ್ತಾರೆ. ಕೂಡಲೆ ಇಲ್ಲಿಗೆ ಬಾ ಅಂತ ನನಗೆ ಪೋನ ಮಾಡಿ ಕರೆದಿದ್ದು ಕೂಡಲೆ ನಾನು ನನ್ನ ತಂಗಿಯನ್ನು ನಮ್ಮ ಮನೆಗೆ ಬಿಟ್ಟು ಆಲ್ ಅಮೀನ ಚೌಕ ಹತ್ತಿರ ಹೋಗಿದ್ದು ಅಲ್ಲಿ ಆರೀಫ್, ಅಕ್ಬರ, ಶೋಯೇಬ, ಮಕಸೂದ, ತಬರೇಜ ಜೋದಿನ್, ಮತ್ತು ಜೀಲಾನ ಕೂಡಿಕೊಂಡು ಆಲ್ ಅಮೀನ ಚೌಕದ ಹತ್ತಿರ ಕುಳಿತು ಕೊಂಡಿದ್ದರು ನಾನು ಅಲ್ಲಿಗೆ ಹೋಗಿದ್ದು ಜಗಳ ಬಗ್ಗೆ ನಾನು ಆರೀಫ್ನಿಗೆ ವಿಚಾರಿಸುತ್ತಿರುವಾಗ ಸುಮಾರು ಮಧ್ಯಾನ 1 ಗಂಟೆಯ ಸುಮಾರಿಗೆ 1. ವಿಜಯ, 2. ನಾಗು @ ನಾಗ್ಯಾ, 3. ರವಿ, 4. ವಿಶ್ಯಾಲ 5. ಮೂಕ ಬಾಬು ಹಾಗೂ ಇನ್ನೂ 6-7 ಜನರು ಕೂಡಿಕೊಂಡು ತಮ್ಮ ಕೈಯಲ್ಲಿ ಬಡಿಗೆ ಮತ್ತು ಕಲ್ಲು ಹಿಡಿದುಕೊಂಡು ಬಂದು ಅವಾಚ್ಯವಾಗಿ ಬೈಯುತ್ತಾ ಆರೀಫ್ ಸೂಳೆ ಮಗನದು ಬಹಾಳ ಆಯಿತು ಇವನಿಗೆ ಹೊಡೆದು ಸಾಯಿಸಿ ಬೀಡುರಿ ಅಂತ ಅವರು ಕೂಗಾಡುತ್ತಾ ಆರೀಫ್ನಿಗೆ ಕೊಲೆ ಮಾಡುವ ಉದ್ದೇಶದಿಂದ ತಮ್ಮ ಕೈಯಲ್ಲಿದ್ದ ಕಟ್ಟಿಗೆ ಮತ್ತು ಕಲ್ಲುಗಳಿಂದ ಆರೀಫ್ನಿಗೆ ತಲೆಯ ಮೇಲೆ ಹೊಡೆದು ರಕ್ತಗಾಯ ಪಡಿಸಿದ್ದು ಎದೆಗೆ, ಮತ್ತು ಕಾಲಿನ ಮೇಲೆ ಹೊಡೆದು ಗುಪ್ತಗಾಯ ಪಡಿಸಿದ್ದು ಅಲ್ಲದೆ ನನಗೆ ಅಕ್ಬರನಿಗೆ ಮತ್ತು ಜೀಲಾ ಇತನಿಗೆ ಕಟ್ಟಿಗೆಯಿಂದ ಹೊಡೆದು ಗುಪ್ತಗಾಯ ಪಡಿಸಿದ್ದು ಇರುತ್ತದೆ. ಆರೀಫ್ನಿಗೆ ಭಾರಿ ರಕ್ತಗಾಯವಾಗಿದನ್ನು ನೋಡಿ ಅವರು ಅಲ್ಲಿಂದ ಓಡಿ ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ಆಳಂದ ಠಾಣೆ : ಶ್ರೀ ಅಬ್ದುಲ್ ಖಾಲೀದ ತಂದೆ ಅಬ್ದುಲ್ ಸಮಿ ಸಿದ್ದಿಕಿ ಸಾ|| ರೇವಣಸಿದ್ದೇಶ್ವರ್ ಕಾಲೋನಿ ಆಳಂದ ರವರ ಪತ್ನಿ ನಾಜಿಯಾ ಬೇಗಂ ಇವಳಿಗೆ ಆರಾಮವಿಲ್ಲದೆ ಇದ್ದ ಕಾರಣ ನಾವು ಅವಳಿಗೆ ದಿನಾಂಕ 16/03/2019 ರಂದು ಕಲಬುರಗಿಯ ಬಾಬಾ ಹೌಸ್ ಖಾಸಗಿ ಆಸ್ಪತ್ರೆ ಸೇರಿಕೆಯನ್ನು ಮಾಡಿರುತ್ತೆವೆ, ನನ್ನ ಮಕ್ಕಳಿಗೆ ನಮ್ಮ ತಂದೆ ತಾಯಿಯವರು ವಾಸವಾಗಿರುವ ರಜವಿ ರೋಡಿನ ಹತ್ತಿರ ಇರುವ ಮನೆಯಲ್ಲಿ ಬಿಟ್ಟು ಕಲಬುರಗಿಗೆ ಹೋಗಿ ದಿನಾಂಕ 19/03/2019 ರಂದು ಸಾಯಂಕಾಲ 06-00 ಗಂಟೆಗೆ ಮರಳಿ ಬಂದು ನಮ್ಮ ಮನೆಯಲ್ಲಿರುವ ಬಟ್ಟೆ ಬರೆಗಳನ್ನು ತೆಗೆದುಕೊಂಡು ಮನೆಯ ಹಿಂದಿನ & ಮುಂದಿನ ಬಾಗಿಲುಗಳಿಗೆ ಬೀಗ ಹಾಕಿ ನಮ್ಮ ತಂದೆ ತಾಯಿಯವರ ಹತ್ತಿರ ಹೋಗಿರುತ್ತೆವೆದಿನಾಂಕಃ 20/03/2019 ರಂದು ಬೆಳಿಗ್ಗೆ 07-00 ಗಂಟೆಗೆ ನಮ್ಮ ಮನೆಯ ಬಾಗಿಲು ತೆಗೆದು ಒಳಗಡೆ ಹೋಗಿ ನೋಡಲು ಅಡುಗೆ ಕೋಣೆಯ ಬಾಗಿಲು ತೆರೆದಿದ್ದು ಮನೆಯಲ್ಲಿದ ಅಲಮಾರಿಯಲ್ಲಿನ ಬಟ್ಟೆಗಳು ಹಾಗೂ ಇತರೇ ಸಾಮಾನುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು ಆಗ ಗಾಬರಿಯಾಗಿ ಅಲಮಾರಿಯಲ್ಲಿ ಲಾಕರ ತೆರೆದಿದ್ದು ಲಾಕರಿನಲ್ಲಿ ಇಟ್ಟಿದ್ದ ಬಂಗಾರದ ಆಭರಣಗಳು  ಒಟ್ಟು 24,000/-ರೂಪಾಯಿಯ ಬೆಲೆಬಾಳುವ ಬಂಗಾರದ ಆಭರಣಗಳನ್ನು ನಿನ್ನೆ ದಿನಾಂಕ:19/03/2019 ರಂದು ರಾತ್ರಿ 10:30 ಪಿ.ಎಮ್.ದಿಂದ ಇಂದಿನ ಬೇಳಗಿನ ಜಾವ 06:00 ಗಂಟೆಯ ಮಧ್ಯದ ಅವಧಿಯಲ್ಲಿ ಯಾರೋ ಕಳ್ಳರು ನಮ್ಮ ಮನೆಯ ಹಿಂದಿನ ಕಂಪೌಂಡ ಗೋಡೆಯ ಮೇಲಿನಿಂದ ಮನೆಯ ಒಳಗೆ ನುಗ್ಗಿ ಅಡುಗೆ ಮನೆಯ ಬಾಗಿಲಿಗೆ ಜೋರಾಗಿ ಒತ್ತಿದರಿಂದ  ಒಳಕೊಂಡಿ ಮುರಿದು ಬಾಗಿಲು ತೆರೆದಿದ್ದು ಆಗ ಮನೆಯೊಳಗೆ ಇಟ್ಟಿದ ಅಲಮಾರಿಯನ್ನು ಮುರಿದು ಅದರಲ್ಲಿ ಇಟ್ಟಿದ ಈ ಎಲ್ಲಾ ಮೇಲ್ಕಂಡ ಬಂಗಾರದ ಆಭರಣಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದ್ವೀಚಕ್ರ ವಾಹನ ಕಳವು ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀ ಮಹ್ಮದ ಇರ್ಫಾನ ಅಹ್ಮದ ತಂದೆ ವಾಹೇದ ಅಲಿ ಸಾ|| ಪ್ಲ್ಯಾಟ್ ನಂ; 4 ಸುಕೂನ್ ಅಪಾರ್ಟಮೆಂಟ ಅಭಾವ್ ಫೂಟಜೋನ ಎಮ್ ಜಿ ರೋಡ ಕಲಬುರಗಿ ರವರು ದಿನಾಂಕ; 18/03/2019 ರಂದು ಸಂಗಮೇಶ್ವರ ಕಾಲೋನಿಯ ಎಸ್‌‌.ಬಿ.ಐ  ಬ್ಯಾಂಕ ಹತ್ತಿರದ ನ್ಯೂ ಇಂಡಿಯಾ ಇನ್ಸುರೆನ್ಸ ಆಫೀಸ್ ಕೇಳಗಡೆ ನನ್ನ ಹಿರೋ ಪ್ಯಾಷನ್ ಎಕ್ಸ್ ಫ್ರೂ ಮೊಟಾರ ಸೈಕಲ್ ನಂ; KA32 EC9957 CHASSIS.NO.MBLJA12ACDGA05232 ENGINE NO.JA12ABDGA06356 ||ಕಿ|| 25,000/-ರೂ ನೇದ್ದನ್ನು ನಿಲುಗಡೆಮಾಡಿ ರಾಹುಲ್ ಗಾಂದಿ ಕಾರ್ಯಕ್ರಮ ಮುಗಿಸಿಕೊಂಡು ಮರಳಿ 3;30 ಪಿ.ಎಂಕ್ಕೆ  ಮರಳಿ ಬಂದು ನೋಡಲಾಗಿ ಸದರಿ ನನ್ನ ಮೊಟಾರ ಸೈಕಲ್ ಇರಲಿಲ್ಲ ಯಾರೋ ಕಳ್ಳರು ನನ್ನ ಮೊಟಾರ ಸೈಕಲ್ ಕಳ್ಳತನಮಾಡಿಕೊಂಡು ಹೊಗಿರುತ್ತಾರೆ. ನಾನು ಇಲ್ಲಿಯವರೆಗೆ ಹುಡುಕಾಡಿದರೂ ನನ್ನ ಮೊಟಾರ ಸೈಕಲ್ ಸಿಕ್ಕಿರುವದಿಲ್ಲ  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.