POLICE BHAVAN KALABURAGI

POLICE BHAVAN KALABURAGI

12 March 2019

KALABURAGI DISTRICT REPORTED CRIMES

ಅಪಘಾತ ಪ್ರಕರಣಗಳು :
ಅಫಜಲಪೂರ ಠಾಣೆ : ಶ್ರೀ ಕಾಶೀನಾಥ ತಂದೆ ಜೆಟ್ಟಿಪ್ಪ ಪೂಜಾರಿ  ಸಾ: ಕೊಳ್ಳುರ ರವರು ದಿನಾಂಕ:09-03-2019 ರಂದು ರಾತ್ರಿ 8.15 ಗಂಟೆಯ ಸುಮಾರಿಗೆ ನಾನು & ಭಾಗಪ್ಪ ಹೊಸಮನಿ ಇಬ್ಬರೂ ನಮ್ಮ ವೈಯಕ್ತಿಕ ಕೆಲಸದ ಸಲುವಾಗ ಘತ್ತರ್ಗಾ ಗ್ರಾಮಕ್ಕೆ ಹೋಗಲು ಭಾಗಪ್ಪನ ಮೋಟಾರ ಸೈಕಲ ನಂ ಕೆಎ-32 ಇಡಿ- 5674 ನೇದ್ದರ ಮೇಲೆ ಹೊರಟಿದೆವು ಆಗ ಭಾಘಪ್ಪನ ಮೋಟಾರ ಸೈಕಲ ನಡೆಸುತ್ತಿದ್ದು ನಾನು ಆತನ ಹಿಂದೆ ಕುಳಿತ್ತಿದ್ದೆನು ರಾತ್ರಿ 8.30 ಗಂಟೆಯ ಸುಮಾರಿಗೆ ನಮ್ಮ ಮೋಟಾರ ಸೈಕಲ ಅಫಜಲಪೂರ ಘತ್ತರಗಾ ರೋಡಿಗೆ ಶ್ರೀ ರೇಣುಕಾ ಸಕ್ಕರೆ ಕಾರ್ಖಾನೆ ದಾಟಿ ಸ್ವಲ್ಪ ಮುಂದೆ ಹೋದಾಗ ನಮ್ಮ ಹಿಂದಿನಿಂದ ಕ್ರೂಜರ ವಾಹನ ನಂ  ಕೆಎ-32 ಎಮ್- 7681 ನೇದ್ದರ ಚಾಲಕನು ತನ್ನ ವಾಹನವನ್ನು ಅತೀವೇಗವಾಗಿ & ನಿರ್ಲಕ್ಷತನದಿಂದ ನಮ್ಮ ಹಿಂದುಗಡೆಯಿಂದ ನಡೆಸಿಕೊಂಡು ಬಂದು ನಮ್ಮ ಮೊಟಾರ್ ಸೈಕಲ್ಗೆ ಡಿಕ್ಕಿ ಹೊಡಿಸಿ ಅಫಘಾತ ಪಡಿಸಿ ತನ್ನ ವಾಹನ ಸ್ವಲ್ಪ ನಿಲ್ಲಿಸಿದಂತೆ ಮಾಡಿ ಓಡಿಸಿಕೊಂಡು ಹೋದನು ಆಗ ನಾನು ಭಾಗಪ್ಪ ಇಬ್ಬರೂ ಮೋಟಾರ್ ಸೈಕಲ್ ಸಮೇತ ರೋಡಿನ ಮೇಲೆ ಬಿದ್ದಿರುತ್ತೇವೆ ನಾನು ನಮ್ಮ ಮೋಟಾರ್ ಸೈಕಲ ಹೇಡ್ ಲೈಟ್ ಬೆಳಕಿನಲ್ಲಿ ಕ್ರೂಜರ ನಂಬರ ನೋಡಿರುತ್ತೇನೆ. ಘಟನೆಯಲ್ಲಿ ನನ್ನ ಬಲ ಮೋಣಕಾಳಿಗೆ ಮತ್ತು ಅದರ ಕೆಳ ಭಾಗದಲ್ಲಿ ಭಾರಿ ರಕ್ತಗಾಯಗಳಾಗಿ ಎಡ ಬುಜಕ್ಕೆ ಮೊಣ ಕೈಗಳಿಗೆ ತೆರೆಚಿದ ಗಾಯಗಳಾಗಿರುತ್ತವೆ ಭಾಗಪ್ಪನಿಗೆ ಹೊಟ್ಟಯ ಎಡಭಾಗಕ್ಕೆ ಬಲಕಾಲಿನ ತೊಡೆಗೆ ಭಾರಿ ರಕ್ತಗಾಯಗಳು & ಒಳ ಪೆಟ್ಟುಗಳಾಗಿ ಮೈ ಕೈ ಕಾಲುಗಳಿಗೆ ಅಲ್ಲಲ್ಲಿ ತೆರೆಸಿದ ಗಾಯಗಳಾಗಿರುತ್ತವೆ ಆಗ ನಾನು ಅಫಘಾತ ಸಂಬವಿಸಿದ ವಿಷಯವನ್ನು ಭಾಗಪ್ಪನ ಅಣ್ಣ ಪರಶುರಾಮನಿಗೆ ಪೋನ ಮಾಡಿ ತಿಳಿಸಿದ್ದೆ ಸ್ವಲ್ಪ ಸಮಯದ ನಂತರ ಪರಶುರಾಮ ನಿಂಗಪ್ಪಾ ಹೊಸಮನಿ ಮತ್ತಿತರರು ಒಂದು ಖಾಸಗಿ ವಾಹನದಲ್ಲಿ ಬಂದು ನಮಗೆ ಅದರಲ್ಲಿ ಹಾಕಿಕೊಂಡು ಬಂದು ಇಲ್ಲಿ ಬಸವೇಶ್ವರ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ಸೇರಿಕೆ ಮಾಡಿರುತ್ತಾರೆ ನಾನು ಇನ್ನೂ ಚಿಕಿತ್ಸೆ ಪಡೆಯುತ್ತಿದ್ದು ಭಾಗಪ್ಪನ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ದಿನಾಂಕ: 10-03-2019 ರಂದು ರಾತ್ರಿ 11.50 ಗಂಟೆಯ ಸುಮಾರಿಗೆ ಮೃತಪಟ್ಟಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯಡ್ರಾಮಿ ಠಾಣೆ : ಶ್ರೀ ಮಹಾಂತಪ್ಪ ತಂದೆ ಹಣಮಂತ ನಾಟೀಕಾರ ಸಾ|| ಆಲೂರ ಗ್ರಾಮ ತಾ|| ಜೇವರ್ಗಿ ರವರ ತಂಗಿ ಜಯಶ್ರೀ ಮಗ ಬಸವರಾಜ ಇವನು ವಿದ್ಯಾಭ್ಯಾಸ ಕುರಿತು ಸುಮಾರು 10 ವರ್ಷಗಳಿಂದ ನಮ್ಮ ಮನೆಯಲ್ಲೇ ಇದ್ದು ಈ ವರ್ಷ ನಮ್ಮೂರ ಸರಕಾರಿ ಪ್ರೌಡ ಶಾಲೆಯಲ್ಲಿ 10 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದನು, ದಿನಾಂಕ 11-03-2019 ರಂದು ಬೆಳಿಗ್ಗೆ 09;00 ಗಂಟೆಗೆ ನಮ್ಮ ತಂಗಿಯ ಮಗ ಬಸವರಾಜ ಇವನು ಶಾಲೆಗೆ ಹೋಗಿದ್ದನು, ಮದ್ಯಾಹ್ನ 12;45 ಗಂಟೆ ಸುಮಾರಿಗೆ ನಮ್ಮೂರ ಸಂತೋಷ ತಂದೆ ಗುರಣ್ಣ ಮಾಲಿಬಿರಾದಾರ ಇವನಿಗೆ ನಮ್ಮ ಹತ್ತಿರ ಇದ್ದ ನಮ್ಮ ಸಂಬಂಧಿಕನಾದ ಮಲ್ಲಪ್ಪ ಇವರ ಮೋಟರ ಸೈಕಲ್ ನಂ ಕೆ.-27/.ಜೆ-7644 ನೇದ್ದನ್ನು ಕೊಟ್ಟು ಶಾಲೆಯಲ್ಲಿರುವ ನಮ್ಮ ಅಳಿಯ ಬಸವರಾಜನಿಗೆ ಕರೆದುಕೋಂಡು ಬರುವಂತೆ ಹೇಳಿ ಕಳುಹಿಸಿ, ನಾನು ನಮ್ಮೂರ ಬಸ್ಸ್ ನಿಲ್ದಾಣದ ಕಡೆಗೆ ಹೋಗಿದ್ದೇನು, ಮದ್ಯಾಹ್ನ 1;00 ಗಂಟೆ ಸುಮಾರಿಗೆ ನಾನು ಬಸ್ಸ ಸ್ಟ್ಯಾಂಡ ಹತ್ತಿರ ಇದ್ದಾಗ ನಮ್ಮೂರ ಬಸವರಾಜ ನಾಟೀಕಾರ ಇವರ ಹೊಲದ ಹತ್ತಿರ ರೋಡಿನ ಮೇಲೆ ಮೋಟರ ಸೈಕಲ್ ಅಪಘಾತವಾಗಿ ನಮ್ಮ ಅಳಿಯ ಬಸವರಾಜನು ಭಾರಿ ಗಾಯಹೊಂದಿರುತ್ತಾನೆ ಅಂತಾ ಜನರು ಆ ಕಡೆ ಓಡಿ ಹೋಗುತ್ತಿದ್ದಾಗ ನಾನು ಮತ್ತು ನಮ್ಮ ಅಣ್ಣತಮ್ಮಕಿಯ ಬಸವರಾಜ ತಂದೆ ಗುರಪ್ಪ ನಾಟೀಕಾರ, ಈರಣ್ಣ ತಂದೆ ಶಿವಶರಣಪ್ಪ ಹೆಡಗಿಜೋಳ ಕೂಡಿ ಸ್ಥಳಕ್ಕೆ ಹೋಗಿ ನೋಡಿದಾಗ ನಮ್ಮ ಅಳಿಯ ಬಸವರಾಜನು ರೋಡಿನ ಎಡಗಡೆ ತೆಗ್ಗಿನಲ್ಲಿ ಬಿದ್ದಿದ್ದನು, ಅವನ ಮುಗಿನಿಂದ ಮತ್ತು ಬಾಯಿಯಿಂದ ರಕ್ತ ಬರುತ್ತಿತ್ತು, ಬಲ ಕುತ್ತಿಗೆಯ ಹಿಂದೆ ಭಾರಿ ಒಳಪೆಟ್ಟಾಗಿ ಕಂದು ಗಟ್ಟಿದಗಾಯವಾಗಿದ್ದು ಅವನು ಮಾತನಾಡುತ್ತಿರಲಿಲ್ಲಾ, ಸ್ಥಳದಲ್ಲಿ ಮೋಟರ ಸೈಕಲ್ ಬಿದ್ದಿತ್ತು, ಸಂತೋಷನಿಗೆ ಅಲ್ಲಲ್ಲಿ ಸಣ್ಣ ಪುಟ್ಟ ಗಾಯಗಳಾಗಿದ್ದವು, ನಂತರ ನಾವು ನಮ್ಮ ಅಳಿಯನಿಗೆ 108 ಅಂಬೂಲೆನ್ಸನಲ್ಲಿ ಹಾಕಿಕೊಂಡು ಯಡ್ರಾಮಿ ಸರಕಾರಿ ದವಾಖಾನೆಗೆ ತರುತ್ತಿದ್ದಾಗ 1;30 ಪಿ.ಎಂ ಸುಮಾರಿಗೆ ಮಾರ್ಗ ಮದ್ಯ ಸೈದಾಪೂರ ಕ್ರಾಸ್ ಹತ್ತಿರ ದಾರಿಯಲ್ಲಿಯೇ ಮೃತಪಟ್ಟಿರುತ್ತಾನೆ, ಈ ಅಪಘಾತವು ಇಂದು ದಿನಾಂಕ 11-03-2019 ರಂದು ಮದ್ಯಾಹ್ನ 1;00 ಗಂಟೆ ಸುಮಾರಿಗೆ ನಮ್ಮೂರ ಸಂತೋಷ ಈತನು ಮೋಟರ ಸೈಕಲ್ ನಂ ಕೆ.-27/.ಜೆ-7644 ನೇದ್ದರ ಮೇಲೆ ಹಿಂದುಗಡೆ ನಮ್ಮ ಅಳಿಯ ಬಸವರಾಜ ತಂದೆ ಭೀಮರಾಯ ಹೋತಪೇಟ ಇವನಿಗೆ ಕುಡಿಸಿಕೊಂಡು ಊರಕಡೆಗೆ ಅತಿವೇಗವಾಗಿ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬರುತ್ತಿದ್ದಾಗ ನಮ್ಮೂರ ಬಸವರಾಜ ನಾಟೀಕಾರ  ಇವರ ಹೊಲದ ಹತ್ತಿರ ತಿರುವು ರೋಡಿನಲ್ಲಿ ಮೋಟರ ಸೈಕಲ್ ಕಟ್ ಹೊಡೆದು, ನಿಯಂತ್ರಣ ತಪ್ಪಿ ರೋಡಿನ ಎಡಗಡೆ ತೆಗ್ಗಿನಲ್ಲಿರುವ ಗಿಡಕ್ಕೆ ಡಿಕ್ಕಿ ಹೊಡೆದಿದ್ದರಿಂದ ಸಂಭವಿಸಿರುತ್ತದೆ, ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅಪಹರಣ ಮಾಡಿ ಅತ್ಯಾಚಾರ ಮಾಡಿದ ಪ್ರಕರಣ :
ಫರತಾಬಾದ ಠಾಣೆ : ಮೊದಲು ಫರತಾಬಾದ ಠಾಣೆಯಲ್ಲಿ ಅಪಹರಣ ಪ್ರಕರಣ ದಾಖಲಾಗಿದ್ದು ಅಪಹರಣಕ್ಕೆ ಒಳಗಾದ ಬಾಲಕಿ ಬಸವಕಲ್ಯಾಣದಲ್ಲಿ ಇರುವ ಬಗ್ಗೆ ಮಾಹಿತಿ ಮೇರೆಗೆ  ದಿನಾಂಕ 10-03-2019 ರಂದು ಸಾಯಂಕಾಲ 7 ಗಂಟೆಗೆ ನಮ್ಮ ಠಾಣೆಯ ಮಪಿಸಿ-540 ಶ್ರೀಮತಿ ಮಹೇಶ್ವರಿ ಇವರು ಅಪಹರಣಕ್ಕೊಳಗಾದ ಬಾಲಕಿಯನ್ನು ಠಾಣೆಗೆ ಕರೆದುಕೊಂಡು ಬಂದು ನನ್ನ ಮುಂದೆ ಹಾಜರಪಡಿಸಿದ್ದಾಗ ನಾನು ಸದರಿಯವಳಿಗೆ ವಿಚಾರಣೆ ಮಾಡಿ ಠಾಣಾ ಗಣಕಯಂತ್ರದಲ್ಲಿ ಅವಳ ಹೇಳಿಕೆಯನ್ನು ಪಡೆದುಕೊಂಡಿದ್ದು ಅವಳು ನೀಡಿದ್ದ ಹೇಳಿಕೆ ಸಾರಾಂಶವೆನೆಂದರೆ. ನಾನು 7 ನೇ ತರಗತಿಯ ವರೆಗೆ ವೀದ್ಯಾಬ್ಯಾಸ ಮಾಡಿದ್ದು. ಸದ್ಯ ನಾನು ನನ್ನ ತಂದೆ ತಾಯಿಯೊಂದಿಗೆ ವಾಸವಾಗಿದ್ದೇನೆ. ಹೀಗಿದ್ದು ಈಗ್ಗೆ ಸೂಮಾರು 1 ವರ್ಷದ ಹಿಂದೆ ನಾನು ನನ್ನ ತಂದೆ ತಾಯಿಯೊಂದಿಗೆ ದೇವಲ ಗಾಣಾಗಾಪೂರಕ್ಕೆ ನನ್ನ ಚಿಕ್ಕಮ್ಮಳ ಮಗಳ ಮದುವೆಗೆ ಹೋಗಿದ್ದು. ವೇಳೆಯಲ್ಲಿ ದೇವಲ ಗಾಣಾಗಾಪೂರನಲ್ಲಿ ವಾಸವಾಗಿರುವ ಶ್ರೀಕಾಂತ ತಂದೆ ಗುರಪ್ಪ ಈತನು ಕೂಡಾ ಮದುವೆಗೆ ಬಂದಿದ್ದು. ಆಗ ನನಗೆ ಅವನ ಪರಿಚಯವಾಗಿದ್ದು. ಮದುವೆ ಮುಗಿಯುವವರೆಗೂ ಶ್ರೀಕಾಂತ ಇವನು ನನ್ನ ಹಿಂದೆ ಮುಂದೆ ಓಡಾಡುತ್ತ ಬಂದಿದ್ದು. ಅಲ್ಲದೆ ಮದುವೆಯ ದಿನಂದಂದು  ಶ್ರೀಕಾಂತ ಇವನಿಗೆ ನಾನು ಒಂಟಿಯಾಗಿ ಸಿಕ್ಕಾಗ ನಾನು ನಿನಗೆ ಪ್ರಿತಿ ಮಾಡುತ್ತೇನೆ ಅಂತಾ ಹೇಳಿ ನನಗೆ ಅವನ ಮೋಬಾಯಿಲ ನಂಬರ- 7353338152 ನೇದ್ದನ್ನು ನನಗೆ ಕೋಟ್ಟು ದಿನಾಲು ನನಗೆ ಫೊನ ಮಾಡುವಂತೆ ಹೇಳಿದ್ದು. ನಂತರ ನಾನು ಮದುವೆ ಮುಗಿಸಿಕೊಂಡು ನಮ್ಮೂರಿಗೆ ವಾಪಸ್ಸ ಬಂದಾಗ ನಾನು ಪ್ರತಿ ದಿನ ಸಾಯಂಕಾಲ ಒಂದು ಬಾರಿ ನಾನು ನನ್ನ ತಂದೆಯ ಮೋಬಾಯಿಲ್ ನಂ.8861278320 ನಿಂದ ಶ್ರೀಕಾಂತನ ಮೋಬಾಯಿಲಗೆ ಫೊನ ಮಾಡುತ್ತಿದ್ದು. ಕೆಲವೊಂದು ಸಾರಿ ನಾನು ಅವನ ನಂಬರಗೆ ಮಿಸ್ ಕಾಲ ಕೋಡುತ್ತಿದ್ದು. ನಂತರ ಅವನು ನನಗೆ ಫೊನ ಮಾಡಿ ಮಾತನಾಡುತ್ತಿದ್ದು. ನಾನು ಮಾತನಾಡುವ ಕಾಲಕ್ಕೆ ಶ್ರೀಕಾಂತ ಇವನು ನಾನು ನಿನಗೆ ತುಂಬಾ ಪ್ರೀತಿ ಮಾಡುತ್ತೇನೆ ನಾನು ನಿನಗೆ ಮದುವೆ ಆಗುತ್ತೇನೆ ಅಂತಾ ಹೇಳುತ್ತ ಬಂದಿದ್ದು. ಅಲ್ಲದೆ ಪ್ರತಿ ತಿಂಗಳಿಗೆ ಒಂದು ಅಥವಾ 2 ಬಾರಿ ನನಗೆ ಬೇಟಿಯಾಗಲು ನಮ್ಮುರಿಗೆ ಯಾರಿಗು ಕಾಣದಂತೆ ಕದ್ದುಮುಚ್ಚಿ ಬರುತ್ತಿದ್ದು. ನಾನು ಕೂಡಾ ಮನೆಯಲ್ಲಿ ಯಾರಿಗೂ ಹೇಳದೆ ಊರ ಹೋರಗಡೆ ಹೋಗಿ ಶ್ರೀಕಾಂತನಿಗೆ ಭೇಟಿಯಾಗುತ್ತಿದ್ದು. ನಾನು ಶ್ರೀಕಾಂತನಿಗೆ ಭೇಟಿ ಆದಾಗಲೆಲ್ಲ ಶ್ರೀಕಾಂತನು ನನಗೆ ಮೈಮುಟ್ಟುವುದು ಹಾಗೂ ನನಗೆ ಮುತ್ತು ಕೋಡುವುದು ಮಾಡುತ್ತಿದ್ದನು. ಅಲ್ಲದೆ ಈಗ್ಗೆ ಸೂಮಾರು 2-3 ತಿಂಗಳ ಹಿಂದೆ ಶ್ರೀಕಾಂತನು ನನಗೆ ಭೇಟಿಯಾಗಲು ನಮ್ಮೂರಿಗೆ ಬಂದಾಗ ನಮ್ಮೂರ ಸೀಮೇಯಲ್ಲಿ ಇರುವ ಒತ್ತು (ಹಳ್ಳ) ಬರುವ ಜಾಗದಲ್ಲಿ ಶ್ರೀಕಾಂತನು ನನಗೆ ಪುಸಲಾಯಿಸಿ ಮದುವೆ ಆಗುವುದಾಗಿ ನಂಬಿಸಿ ಅಂದು ನನ್ನೊಂದಿಗೆ 2-3 ಸಾರಿ ದೈಹಿಕವಾಗಿ ಹಠ ಸಂಭೋಗ ಮಾಡಿರುತ್ತಾನೆ. ನಂತರ ದಿನಾಂಕ:05.03.2019 ರಂದು ರಾತ್ರಿ ವೇಳೆಯಲ್ಲಿ ಎಂದಿನಂತೆ ನಾನು ಶ್ರೀಕಾಂತನಿಗೆ ನನ್ನ ತಂದೆಯ ಮೋಬಾಯಿಲನಿಂದ ಫೊನ ಮಾಡಿದಾಗ ಶ್ರೀಕಾಂತನು ನಾನು ನಾಳೆ ಭೇಟಿಯಾಗಲು ಬರುತ್ತೇನೆ ನಿನು ಜೋಗೂರ ಕ್ರಾಸ ಹತ್ತೀರ ಬಾ ಅಂತಾ ಹೇಳಿ ಫೊನ ಕಟ್ಟ ಮಾಡಿದನು. ಅದರಂತೆ ನಾನು ದಿನಾಂಕ:06.03.2019 ರಂದು ನನ್ನ ತಂದೆತಾಯಿ ಇಬ್ಬರೂ ವಾಡಿಯಲ್ಲಿ ನನ್ನ ದೋಡ್ಡಪ್ಪ ಸರಿ ಹೋಗಿದ್ದರಿಂದ ನನಗೆ ಮನೆಯಲ್ಲಿ ಬಿಟ್ಟ ಮಣ್ಣು ಹಾಕಿಬರಲು ಹೋಗಿದ್ದರು. ಆಗ ನಾನು ಮದ್ಯಾಹ್ನ 01.00 ಗಂಟೆಯ ಸೂಮಾರಿಗೆ ನಾನು ನನ್ನ ಮನೆಯಿಂದ ಜೋಗೂರ ಕ್ರಾಸಗೆ ನಡೆದುಕೊಂಡು ಹೋಗಿದ್ದು. ಅಲ್ಲಿ ನನಗಿಂತ ಮುಂಚೆ ಶ್ರೀಕಾಂತನು ಒಂದು ಮೋ.ಸೈಕಲ ಮೇಲೆ ಬಂದು ನಿಂತಿದ್ದು. ನಾನು ಅವನಿಗೆ ಭೇಟಿಯಾದಾಗ ಶ್ರೀಕಾಂತನು ನಾನು ನಿನಗೆ ಮದುವೆ ಆಗುತ್ತೇನೆ. ನಿನು ನನ್ನ ಜೋತೆಗೆ ಬಾ ಅಂತಾ ಹೇಳಿದ್ದು ನಾನು ಬೇಡಾ ಅಂತಾ ಹೇಳಿದರು ಕೂಡಾ ನನಗೆ ಪುಸಲಾಯಿಸಿ ಜಬರದಸ್ತಿಯಿಂದ ನನಗೆ ಮೋ.ಸೈಕಲ ಮೇಲೆ ಕೂಡಿಸಿಕೊಂಡು ಜೋಗುರ ಕ್ರಾಸನಿಂದ ಕಲಬುರಗಿಗೆ ಕರೆದುಕೊಂಡು ಬಂದು ರಾತ್ರಿ ಬಸ್ಟ್ಯಾಂಡನಲ್ಲಿ ಉಳಿದುಕೊಂಡು ನಂತರ ದಿನಾಂಕ:07.03.2019 ರಂದು ಅದೇ ಮೋ.ಸೈಕಲ ಮೇಲೆ ನನಗೆ ಬಸವಕಲ್ಯಾಣಕ್ಕೆ ಕರೆದುಕೊಂಡು ಹೋಗುವುದಾಗಿ ತಿಳಿಸಿ ಬಸವಕಲ್ಯಾಣ ಇನ್ನೂ ಸ್ವಲ್ಪ ದೂರ ಇರುವಾಗ ನನ್ನೊಂದಿಗೆ ಜಬರಿಯಾಗಿ ಸಂಭೋಗ ಮಾಡಿದ್ದು. ನಂತರ ಬಸವಕಲ್ಯಾಣಕ್ಕೆ ಕರೆದುಕೊಂಡು ಹೋಗಿ ಅಲ್ಲಿ ಮಹಾದೇಶ್ವರ ದೇವಸ್ಥಾನದಲ್ಲಿ ನನ್ನೊಂದಿಗೆ ಇದ್ದು. ಮರುದಿನ ಬೆಳಿಗ್ಗೆ ಶ್ರಿಕಾಂತನು ನಾನು ನಮ್ಮೂರಿಗೆ ಹೋಗುತ್ತೇನೆ ನೀನು ನಿಮ್ಮೂರಿಗೆ ಹೋಗು ಅಂತಾ ಹೇಳಿ ನನಗೆ ಅಲ್ಲೆ ಬಿಟ್ಟು ಹೋದನು. ಆಗ ನಾನು ಗಾಬರಿಗೊಂಡು ಏನು ತೋಚದಂತಾಗಿ ಬಸವಕಲ್ಯಾಣದಲ್ಲಿರುವ ಬಸವರಾಜ ಎಂಬುವವರ ಮನೆಗೆ ಹೋಗಿ ನಾನು ಮನೆಬಿಟ್ಟು ಬಂದಿದ್ದೇನೆ ಅಂತಾ ಅವರಿಗೆ ಹೇಳಿದಾಗ ಅವರು ತನ್ನ ಮನೆಯವರೊಂದಿಗೆ ಮನೆಯಲ್ಲಿ ಇಟ್ಟುಕೊಂಡಿದ್ದು. ಇಂದು ಮುಂಜಾನೆ ಬಸವರಾಜ ಹಾಗೂ ಅವರ ಮನೆಯವರು ನನಗೆ ಸೂಕ್ಷ್ಮವಾಗಿ ವಿಚಾರ ಮಾಡಿ ಕೇಳಿದಾಗ ನನಗೆ ಪ್ರೀತಿ ಮಾಡುತ್ತಿದ್ದ ಶ್ರೀಕಾಂತ ಇವನು ನನಗೆ ಮದುವೆ ಆಗುವುದಾಗಿ ತಿಳಿಸಿ ನನಗೆ ಪುಸಲಾಯಿಸಿ ಕರೆದುಕೊಂಡು ಬಂದು ನನ್ನೊಂದಿಗೆ ಸಂಭೋಗ ಮಾಡಿ ಬಿಟ್ಟು ಹೋಗಿರುವ ವಿಷಯ ತಿಳಿಸಿ ನನ್ನ ತಂದೆಯ ಮೋಬಾಯಿಲ ನಂಬರ ಅವರಿಗೆ ಹೇಳಿದಾಗ ಬಸವರಾಜ ಇವರು ನನ್ನ ತಂದೆಗೆ ಫೊನ ಮಾಡಿ ನಾನು ಇರುವ ವಿಷಯ ತಿಳಿಸಿದ್ದು. ನನ್ನ ತಂದೆಯವರು ಫರಹತಾಬಾದ ಪೋಲಿಸ್ ಠಾಣೆಯ ಮಹಿಳಾ ಪೊಲಿಸರೊಂದಿಗೆ ಬಸವಕಲ್ಯಾಣಕ್ಕೆ ನಾನು ಇದ್ದಲ್ಲಿಗೆ ಬಂದು ನನಗೆ ಕರೆದುಕೊಂಡು ಬಂದಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಹಲ್ಲೆ ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀ ಜೀಶ್ಯಾನ ತಂದೆ ಅಬ್ದುಲ್ ಸಮದ ಪಟೇಲ ಸಾ: ಇಕ್ಬಾಲ ಕಾಲೋನಿ ಜೀಲಾನಬಾದ ಕಲಬುರಗಿ ರವರ ತಾಯಿಯವರಾದ ಅಖೀಲಾಬೇಗಂ ರವರು ಆಳಂದ ತಾಲೂಕಿನ ಖಾನಾಪೂರ ಗ್ರಾಮದ ಮೌಲಾಸಾಬ ತಂದೆ ದಸ್ತಗಿರಸಾಬ ಕೋರಳ್ಳಿ ರವರ ಮಗಳಾಗಿದ್ದು ಮೌಲಾಸಾಬ ರವರು ನಿಧನರಾಗಿದ್ದು, ನಿಧನಕ್ಕಿಂತ ಮುಂಚೆ ಅವರ ಆಸ್ತಿಯಲ್ಲಿ ನಮ್ಮ ಮುಸ್ಲಿಂ ಧರ್ಮದ ಪ್ರಕಾರ (ತಕರರು) (ಪಾಲುದಾರಿಕೆ ಹಕ್ಕು) ಕೊಡಬೇಕಾಗಿ ಎಂದು ಹೇಳಿದ್ದು ಇರುತ್ತದೆ. ಅವರ ಮರಣದ ನಂತರ ಮೌಲಾಸಾಬ ಮಕ್ಕಳಾದ 4 ಜನ ಅಣ್ಣ ತಮ್ಮಂದಿರು ಸೇರಿ ನನ್ನ ಅಜ್ಜ ಮೌಲಾಸಾಬ ತಂದೆ ದಸ್ತಗೀರಸಾಬ ರವರ ಆಸ್ತಿಯನ್ನು ನನ್ನ ತಾಯಿಗೆ ಕೊಡದೇ ಹಂಚಿಕೆ ಮಾಡಿಕೊಂಡಿರುತ್ತಾರೆ. ವಿಷಯದಲ್ಲಿ ಈಗಾಗಲೇ ಹಿರಿಯ ಸಮಕ್ಷಮ ಪಂಚಾಯತಿ ಆಗಿರುತ್ತದೆ. ನನ್ನ ಮುಸ್ಲಿಂ ಶರಿಯತ್ ಪ್ರಕಾರ ಪಾಲ ಕೊಡುವುದಾಗಿ ಒಪ್ಪಿಕೊಂಡಿದ್ದು ಪ್ರಕಾರ ನಾನು ಮತ್ತು ನನ್ನ ತಾಯಿ ಮತ್ತು ತಮ್ಮಂದಿರು ಕೂಡಿ ನಮ್ಮ ಮಾಮಾ ಮನೆಗೆ ಹೋಗಿ ಆಸ್ತಿ ಕೊಡುವ ಬಗ್ಗೆ ಕೇಳಿದ್ದು ಹೀಗಿರುವಾಗ ನಿಮ್ಮ ಆಸ್ತಿ ಏನು ಕೊಡಬೇಕೆಂದು ನನಗೆ ಗೊತ್ತಿದೆ. ನೀವು ನಮ್ಮ ಮನೆಗೆ ಬರಬಾರದು ಎಂದು ನಿಮ್ಮ ಮನೆಗೆ ಬಂದು ಏನು ಕೊಡಬೇಕು ಅದನ್ನು ಕೊಡುತೇವೆ ಅಂತ ಹೇಳಿದರು ನಾವು ನಮ್ ಮನೆಗೆ ಬಂದಿದ್ದೇವೆ.ದಿನಾಂಕ 10.03.2019 ರಂದು ಮಧ್ಯಾನ 3:00 ಗಂಟೆಗೆ ನಾನು ನನ್ನ ತಾಯಿ ಮತ್ತು ನನ್ನ ತಮ್ಮಂದಿಯರಾದ 1) ಮಹ್ಮದ ಅಹ್ಮದ 2) ಖಾಜಾ ಸಕ್ಲೇನ ರವರು ನಮ್ಮ ಮನೆಯಲ್ಲಿದ್ದಾಗ ಕೆಳಗಿನ 1) ರಿಯಾಜ ತಂದೆ ನಜಮೋದ್ದಿನ್ ಸಾ: ಕಲಬುರಗಿ 2) ನಜಮೋದ್ದಿನ್ ತಂದೆ ಮೌಲಾಸಾಬ ಸಾ: ಮಹ್ಮದ ರಫೀಕ ಚೌಕ ಕಲಬುರಗಿ 3) ಅಜೀಮ ತಂದೆ ನಜಮೋದ್ದಿನ್ ಸಾ: ಮಹ್ಮದ ರಪೀಕ ಚೌಕ ಕಲಬುರಗಿ 4) ಗನಿ ತಂದೆ ಮೌಲಾಸಾಭ ಸಾ: ಮಹೆಬೂಬ ನಗರ ಕಲಬುರಗಿ 5) ಮುಸ್ತಫಾ ತಂದೆ ಗನಿಸಾಬ ಸಾ: ಮಹೇಬೂಬ ನಗರ ಕಲಬುರಗಿ 6) ಅಲೀಮ ತಂದೆ ಫಕ್ರೊದ್ದಿನ್ ಪಟೇಲ ಸಾ: ಕಲಬುರಗಿ 7) ಮೀರಾಚಾಂದ ತಂದೆ ಮೌಲಾಸಾಬ ಸಾ:ಖಾನಾಪೂರ 8) ರಸೂಲ ತಂದೆ ಮೌಲಾಸಾಬ ಸಾ: ಖಾನಾಪೂರ ತಾ: ಆಳಂದ 9) ಶಫೀಕ ತಂದೆ ರಸೂಲ ಸಾ: ಖಾನಾಪೂರ ತಾ: ಆಳಂದ ಇತರರು 4 ಜನ ಇವರೆಲ್ಲರೂ ಸೇರಿ ನಮ್ಮ ಮನೆಗೆ ಬಂದು ಹಮ್ಲಾ ಮಾಡಿದ್ದು ಮತ್ತು ಅವಾಚ್ಯ ಶಬ್ದಗಳನ್ನು ಬೈದು ಭೋಸಡಿ ಬಾಹೇರ ತುಮಾರಾ ಮಾಕಾ ಹಿಸ್ಸಾ ದೇನಿ ಆಹೇ ಹೈ ಅಂತ ಹೇಳಿ ಬೈಯುತ್ತಿರುವಾಗ ನಾನು ಮತ್ತು ನನ್ನ ತಮ್ಮಂದಿಯರು ಮನೆ ಹೊರಗೆ ಬಂದ ತಕ್ಷಣ ರಿಯಾಜ ಇತನು ಪಕಡೋ ಇನಕೋ ಖಲಾಸ್ ಕರೆಂಗೆ ಅಂತ ಹೇಳಿ ಚಾಕು ಮತ್ತು ಜೆಂಬೆ ಮತ್ತು ಕಬ್ಬಿಣ ರಾಡದಿಂದ ನನ್ನ ತೆಲೆಯ ಮೇಲೆ ಬಲಭಾಗಕ್ಕೆ ಹಣೆ ಮೇಲೆ ಜೆಂಬೆದಿಂದ ಮರಣಾಂತಿಕ ಹಲ್ಲೆ ಮಾಡಿ ಹೊಡೆದು ನನಗೆ ಗಂಭೀರವಾದ ಗಾಯಗೊಳಿಸಿರುತ್ತಾರೆ. ನನಗೆ ರಕ್ತಸ್ರಾವದಿಂದ ನಾನು ಮೂರ್ಚೆ ಹೋಗಿರುತ್ತೇನೆ ನಂತರ ರಿಯಾಜ ಅವರ ಅಳಿಯನಾದ ಶ್ರೀ ಅಲೀಮ ತಂದೆ ಫಕ್ರೋದಿನ್ ಪಟೇಲ ಸಾ: ಕಲಬುರಗಿರವರು ರಾಡಿನಿಂದ ಖಾಜಾ ಸಕ್ಲೈನ ಮತ್ತು ಅಹ್ಮದ ಇವರಿಗೆ ಜೆಂಬೆಯ ಮತ್ತು ಚಾಕುವಿನಿಂದ ಮರಣಾಂತಿಕ ಹಲ್ಲೆ ಮಾಡಿರುತ್ತಾನೆ. ನಂತರ ಮೇಲ್ಕಂಡ ಎಲ್ಲಾ ಅಪರಾಧಿಗಳು ಸೇರಿ ನನ್ನ ಮತ್ತು ನನ್ನ ತಮ್ಮಂದಿರಿಗೆ ಕಬ್ಬಿಣ ರಾಡಿನಿಂದ ಬಡಿಗೆಗಳಿಂದ ಹೊಡೆದಿರುತ್ತಾರೆ. ನಂತರ ಅವರು ತಂದ ಕ್ರೊಜರ ಜೀಪನಲ್ಲಿ ಕುಳಿತು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣಗಳು :
ರಾಘವೇಂದ್ರ ನಗರ ಠಾಣೆ : ಶ್ರೀಮತಿ ಉರ್ಮಿಳಾ ಗಂಡ ವಸಂತರಾವ ಕುಲಕರ್ಣಿ ಸಾ:ಮನೆ.ನಂ.11-366/124-ಎ ಖಣಿ ಏರಿಯಾ ನ್ಯೂ ರಾಘವೇಂದ್ರ ಕಾಲೋನಿ ಬ್ರಹ್ಮಪೂರ ಕಲಬುರಗಿ ರವರು ದಿನಾಂಕ:11/03/2019 ರಂದು 9.30 ಎ.ಎಂಕ್ಕೆ ನಾನು ದಿನನಿತ್ಯದಂತೆ ಶಾಲೆಗೆ ಹೋಗಿದ್ದು ನಮ್ಮ ತಾಯಿಯವರಾದ ಶ್ರೀಮತಿ ಕಲಾವತಿ ವೆಂಕಟರಾವ ಕುಲಕರ್ಣಿ ಇವರು 11.30 ಎ.ಎಂಕ್ಕೆ ನಮ್ಮ ಬಾಗಿಲ ಕೀಲಿ ಹಾಕಿಕೊಂಡು ನಮ್ಮ ಪರಿಚಯದವರು ತೀರಿಕೊಂಡ ಸಲುವಾಗಿ ಅಂತಿಮ ದರ್ಶನಕ್ಕೆ ಹೋಗಿದ್ದು ಇರುತ್ತದೆ. ನಾನು ಶಾಲೆ ಮುಗಿಸಿಕೊಂಡು 4.45 ಪಿ.ಎಂಕ್ಕೆ ಮರಳಿ ಮನೆಗೆ ಬಂದು ನೋಡಲಾಗಿ ಮನೆಯ ಬಾಗಿಲ ಕೊಂಡಿ ಮುರಿದಿದ್ದನ್ನು ನೋಡಿ ಗಾಬರಿಗೊಂಡು ಮನೆಯಲ್ಲಿ ಹೋಗಿ ನೋಡಲಾಗಿ ಮನೆಯ ಅಲಮಾರಿಯಲ್ಲಿದ್ದ ಬಂಗಾರದ ಆಭರಣ ನಗದು ಹಣ ಹೀಗೆ ಒಟ್ಟು 4,27,500/-ರೂ ಬೆಲೆ ಬಾಳುವ ಬಂಗಾರ ಮತ್ತು ನಗದು ಹಣ ಯಾರೋ ಕಳ್ಳರು ಮನೆಯ ಬಾಗಿಲ ಕೊಂಡಿ ಮುರಿದು ಮನೆಯಲ್ಲಿಯ ಅಲಮಾರದಿಂದ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರೇವೂರ ಠಾಣೆ : ಶ್ರೀ ಮಲ್ಲಿಕಾರ್ಜುನ ತಂದೆ ಗುರುಲಿಂಗಪ್ಪ ಗೊಳಸಾರ ಸಾ||ಅತನೂರ ರವರು ಕೆಲವು ವರ್ಷಗಳಿಂದ ಅತನೂರ ಗ್ರಾಮದ ಪ್ರವೀಣ ತಂದೆ ಶಿವಯ್ಯ ಗುತ್ತೇದಾರ ರವರಿಗೆ ಸಂಬಂದಿಸಿದ ಹಿಟಾಚಿ, ಲಾರಿ ಹಾಗು ಭಾರತ ಬೆಂಚ  ವಾಹನಗಳ ಮೇಲೆ ಉಸ್ತುವಾರಿ ಕೆಲಸ ಮಾಡಿಕೊಂಡಿರುತ್ತೇನೆ ಅತನೂರ ಸಿಮಾಂತರದ ಕಲಬುಲಗಿ-ಅಫಜಲಪೂರ ಮುಖ್ಯ ರಸ್ತೆಗೆ ಹೊಂದಿಕೊಂಡು ಪ್ರವೀಣ ಗುತ್ತೇದಾರ ರವರ ಮಡ್ಡಿ ತೋಟದ ಹೊಲ ಇರುತ್ತದೆ.  ಹೊಲ ರೋಡಿಗೆ ಹೊಂದಿಕೊಂಡಿರುವುದರಿಂದ ದಿನಾಲು ಕೆಲಸ ಮುಗಿದ ನಂತರ ನಮ್ಮ ವಾಹನಗಳನ್ನು ತೋಟದ ಹೊಲದಲ್ಲಿ ನಿಲ್ಲಿಸುತ್ತೇವೆ.  ದಿನಾಂಕ 09/03/2019 ರಂದು ನಮ್ಮ ವಾಹನಗಳಾದ 1) ಭಾರತ ಬೆಂಚ  ಕೆಎ-32, ಸಿ-4715 2) ಭಾರತ ಬೆಂಚ  ಕೆಎ-32, ಸಿ-5899 3)ಲಾರಿ ನಂ ಕೆಎ-26, 4207 4) ಹಿಟಾಚಿ  ನೇದ್ದವುಗಳನ್ನು ಕೆಲಸ ಮುಗಿದ ನಂತರ ವಾಹನಗಳ ಚಾಲಕರು ವಾಹನಗಳನ್ನು ತೋಟದ ಹೊಲದಲ್ಲಿ ನಿಲ್ಲಿಸಿ 6.30 ಪಿಎಮ್ ಸುಮಾರಿಗೆ ತಮ್ಮ ಮನೆಗಳಿಗೆ ಹೋಗಿರುತ್ತಾರೆ. ನಂತರ ನಾನು ನಿನ್ನೆ ದಿನಾಂಕ 10/03/2019 ರಂದು ಬೆಳಿಗ್ಗೆ 9.00 ಗಂಟೆ ಸುಮರಿಗೆ ನಾನು ಹಾಗು ನಮ್ಮ ಟ್ರ್ಯಾಕ್ಟರ ಚಾಲಕ ಶೆಟ್ಟೆಪ್ಪ  ಬಜಂತ್ರಿ ಇಬ್ಬರು ಕೂಡಿ ಮಡ್ಡಿ ತೋಟಕ್ಕೆ ಹೊದಾಗ ತೋಟದಲ್ಲಿ ನಿಲ್ಲಿಸಿದ 1) ಭಾರತ ಬೆಂಚ  ಕೆಎ-32, ಸಿ-4715 ನೇದ್ದರ ಮುಂದಿನ ಎರಡು ಡಿಸ್ಕ ಸಮೇತ ಟಾಯರ ಹಾಗು ಸ್ಟೆಪ್ನಿ ಟಾಯರ .ಕಿ 75.000/-ರೂ 2) ಭಾರತ ಬೆಂಚ  ಕೆಎ-32, ಸಿ-5899 ನೇದ್ದರ ಡಿಸ್ಕ ಸಮೇತ ಸ್ಟೆಪ್ನಿ ಟಾಯರ .ಕಿ 25,000/-ರೂ 3) ಲಾರಿ ನಂ ಕೆಎ-26, 4207 ನೇದ್ದರ ಮುಂದಿನ ಎರಡು ಟಾಯರ ಡಿಸ್ಕ ಸಮೇತ .ಕಿ 40,000/-ರೂಪಾಯಿ ನೇದ್ದವುಗಳು ಇರಲಿಲ್ಲ ನಾನು ನಮ್ಮ ವಾಹನಗಳ ಚಾಲಕರಿಗೆ ವಿಚಾರಿಸಲಾಗಿ ನಮಗೆ ಏನು ಗೊತ್ತಿರುವುದಿಲ್ಲ ಅಂತ ತಿಳಿಸಿದರು ನಂತರ ವಿಷಯ ನಾನು ಮೋಬೈಲ ಮೂಲಕ ಪ್ರವೀಣ ಗುತ್ತೇದಾರ ರವರಿಗೆ ತಿಳಿಸಿ ನಂತರ ವಾಹನದ ಚಾಲಕರಾದ ನಬಿಸಾಬ ಮುಲ್ಲಾ, ಸಂತೋಷ ಗುತ್ತೇದಾರ, ಕುತುಬುದ್ದೀನ್ ನಧಾಪ್ ಹಾಗು ಹಿಟಾಚಿ ಆಪರೇಟರಾದ ಮಹಾಂತೇಶ ಪರೀಟ ರವರು ಸ್ಥಳಕ್ಕೆ ಬಂದ ನಂತರ ನಾನು ಹಾಗು ಶೆಟ್ಟೆಪ್ಪ ಭಜಂತ್ರಿ ಎಲ್ಲರು ಕೂಡಿ ಇಂಡಿ, ಕಲಬುರಗಿ, ಅಫಜಲಪೂರ ದಲ್ಲಿ ತಿರುಗಾಡಿ ನೋಡಿರುತ್ತೇವೆ ಕಳ್ಳತನವಾದ ಡಿಸ್ಕ ಟಾಯರ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿರುವುದಿಲ್ಲಾ  ಪ್ರವೀಣ ಗುತ್ತೇದಾರ ರವರ ಮಡ್ಡಿ ತೋಟದ ಹೊಲದಲ್ಲಿ ನಿಲ್ಲಿಸಿದ ವಾಹನಗಳ  ಡಿಸ್ಕ ಸಮೇತ ಟಾಯರಗಳನ್ನು (.ಕಿ 1,40,000/-ರೂಪಾಯಿ) ದಿನಾಂಕ 09/03/2019 ರಂದು 7.00 ಪಿಎಮ್ ದಿಂದ ದಿನಾಂಕ 10/03/2019 ರಂದು ಬೆಳಿಗ್ಗೆ 06.00 ಗಂಟೆಯ ಮದ್ಯದ ಅವದಿಯಲ್ಲಿ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರೇವೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

11 March 2019

KALABURAGI DISTRICT REPORTED CRIMES

ಕೊಲೆ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀಮತಿ ಗೌಸಿಯಾಬೇಗಂ ಗಂಡ ಅಹೇಮದ ಲಾಲಕೋಟೆ ಸಾ : ಗುಲಾಬ  ನಬಿ ಕಾಲೂನಿ ಮಿಜನಾ ನಗರ ಕಲಬುರಗಿ ರವರ ಮನೆಯ ಎದರುಗಡೆ  ರಾಜುಕುಮಾರ ತಂದೆ ಗಂಗಣ್ಣಾ ಬಾಸಗಿ ಇವರ ಮನೆ ಇರುತ್ತದೆ. ನಮ್ಮ ಮತ್ತು ಅವರ ಮನೆ ಮದ್ಯದಲ್ಲಿ 20 ಫೀಟನ ರಸ್ತೆ ಇರುತ್ತದೆ. ಈ ರಸ್ತೆ ಹೊಡ್ಡಾ ತಗ್ಗು ಇರುತ್ತದೆ. , ಸದರಿ ರಾಜಕುಮಾರ ಬಾಸಗಿ ಇವರು ತಮ್ಮ ಮನೆಯ ಎದರುಗಡೆ ಆಗಾಗ ಕಟಕನ್ನು ಹಾಕುತಿದ್ದರಿಂದ ನಮ್ಮ ಮನೆಯ ಎದರುಗಡೆ ಇಳಿಜಾರು ಆಗಿದ್ದು ಮಳೆ ಬಂದಾಗ ನೀರು ನಮ್ಮ ಮನೆಯ ಅಂಗಳದಲ್ಲಿ ಬರುತ್ತಿದ್ದರಿಂದ ನಮಗೆ ತುಂಬಾ ತೊಂದರೆಯಾಗುತಿದ್ದಾಗ  ನನ್ನ ಮೈದುನಾ ಆಶೀಫ್ ಮತ್ತು ನನ್ನ ಗಂಡ  ಅಹೇಮದ ಇವರೊಂದಿಗೆ ರಾಜಕುಮಾರ ಭಾಸಗಿ ಇವರೊಂದಿಗೆ ಜಗಳವಾಗಿರುತ್ತದೆ. ದಿನಾಂಕ. 10-3-2019 ರಂದು  ಸಂಜೆ. 6-00 ಗಂಟೆಯ ಸುಮಾರಿಗೆ ನಾನು ಮತ್ತು ನಾದನಿ  ಶಬನಾ , ಅವಳ ಗಂಡ ಮಹಿಬೂಬ ತಂದೆ ಮದರಸಾಬ  ಹಾಗೂ ನನ್ನ ಗಂಡ ಅಹೇಮದ ಮನೆಯಲ್ಲಿದ್ದಾಗ  ಸದರಿ ನಮ್ಮ ಮನೆಯ ಎದರುಗಡೆ ಇರುವ ರಾಜಕುಮಾರ ಭಾಸಗಿ ಇವರು ಕಟಕನ್ನು ಹಾಕುತಿದ್ದು  ನಮ ಮನೆಯ ಎದರುಗಡೆ ಇಳಿಜಾರು ಮಾಡಿ ಸದರಿ ರಾಜುಕುಮಾರ ಮತ್ತು ಇತನ ತಮ್ಮಂದಿರಾದ  ಬಾಲಾಜಿ , ಅಂಬರೀಷ ಇವರೆಲ್ಲರೂ ಕಟ್ಟಕ್ಕನ್ನು ಎಳೆದು ಸರಿ ಮಾಡುತಿದ್ದಾಗ  ಸಂಜೆ. 7-00 ಗಂಟೆಯ ಸುಮಾರಿಗೆ ನನ್ನ ಮೈದುನ ಆಶೀಪ ಇತನು ಕೆಲಸ ಮುಗಿಸಿಕೊಂಡು ಮನೆಗೆ ಬಂದಿದ್ದು ಆಗ ನನ್ನ ಮೈದುನ  ಮತ್ತು ನನ್ನ ಗಂಡ ಅಹೇಮದ ಕೂಡಿಕೊಂಡು ಅವರಿಗೆ  ನಮ್ಮ ಮನೆಯ ಎದರುಗಡೆ ಇಷ್ಟು ಎತ್ತರ  ಮತ್ತು ಇಳಿಜಾರಿ ಏಕೆ ಮಾಡಿದ್ದಿರಿ ಇದರಿಂದ ನಮ್ಮ ಮನೆಯ ಅಂಗಳ ಒಳಗೆ ರಸ್ತೆ ನೀರು ಬರುತ್ತವೆ ಅಂತಾ ಕೇಳಲು ಹೋದಾಗ  ನನ್ನ ಗಂಡನೊಂದಿಗೆ ಅವರ ತಂದೆ ಗಂಗಣ್ಣ ಭಾಸಗಿ ತಕರಾರು ಮಾಡುತಿದ್ದರು, ಅದೇ ವೇಳೆಗೆ ನನ್ನ ಮೈದುನಾ ರಾಜಕುಮಾರನಿಗೆ ಕೇಳಲು ಹೋದಾಗ  ಅಷರಲ್ಲಿ ಆತನ ತಮ್ಮಂದಿರಾದ ಬಾಲಾಜಿ ಬಾಸಗಿ, ಅಂಬರೀಷ @ ದಶರಥ ಬಾಸಗಿ ಇವರು ಮೂರು ಜನರು  ಬಂದು ನನ್ನ ಮೈದುನಾ ಆಶೀಪನಿಗೆ ಸೂಳೆ ಮಕ್ಕಳೆ ಪದೆ ಪದೆ ರಸ್ತೆ ಬಗ್ಗೆ ನಮ್ಮೊಂದಿಗೆ ತಕರಾರು ಮಾಡುತಿದ್ದಿರಿ ನಿಮಗೆ ಇವತ್ತು ಒಂದು ಗತಿಕಾಣಿಸುತ್ತೇವೆ ಅಂತಾ ಮೂರು ಜನರು ಕೂಡಿಕೊಂಡು,  ಆಶೀಪನಿಗೆ ರಾಜಕುಮಾರನು ಒತ್ತಿ ಹಿಡಿದಿದ್ದು , ಬಾಲಾಜಿ , ಅಂಬರೀಷ@ದಶರಥ ಕೈಯಿಂದ ಮುಷ್ಟಿ ಮಾಡಿ ಹೊಟ್ಟೆಯಲ್ಲಿ , ಎದೆಗೆ ಜೋರಾಗಿ ಹೊಡೆದಿರುವದರಿಂದ ಅವನು ಕೆಳಗೆ ಬಿದ್ದಾಗ ಮೂರುಜನರು ಆಗನಿಗೆ ಕಾಲಿನಿಂದ ಎದೆಗೆ ಹೊಟ್ಟೆಯಲ್ಲಿ ಒದೆಯುತ್ತಿದ್ದಾಗ  ಅವರ ತಂದೆ ಗಂಗಣ್ಣಾ ಭಾಸಗಿ ಇತನು ಆಶೀಪನಿಗೆ ಬಿಡಬ್ಭೆಡಿರಿ ಖಲಾಸ ಮಾಡ್ರೀ ಅಂತಾ ಬೈಯುತಿದ್ದನು , ಆಗ ನಾನು ಆಶೀಫನಿಗೆ ಹೊಡೆಯುವದನ್ನು ನೋಡಿ  ಚೀರಾಡುವಾಗ ನನ್ನ ಜೊತೆಯಲ್ಲಿದ್ದ ನನ್ನ ನಾದನಿ ಶಬನಾ ಅವಳ ಗಂಡ  ಮಹಿಬೂಬ , ಹಾಗೂ ನನ್ನ ಗಂಡ ಅಹೇಮದ ಎಲ್ಲರೂ ಕೂಡಿಕೊಂಡು  ಆಶೀಫನಿಗೆ  ಬಿಡಿಸಿಕೊಳ್ಳುವಾಗೆ ಓಣಿಯಲ್ಲಿನ ಆಶೀಪ ತಂದೆ ಅಬ್ದುಲ ಕರೀಮ , ಜಾಂಗೀರ ತಂದೆ ಸೈಯದ ಲಾಲ ಹಾಗೂ ಇತರರು ಸಹಾ ಬಂದು ಜಗಳ ಬಿಡಿಸಿಕೊಂಡೇವು ನಂತರ ನನ್ನ ಮೈದುನ ಆಶೀಫನಿಗೆ ನೋಡಲು ಭೇ ಹೋಶಾಗಿ ಬಿದ್ದಿದನು ಅಷರಲ್ಲಿ ಮಹಿಬೂಬ , ಆಶೀಪ ತಂದೆ ಅಬ್ದುಲ ಕರೀಮ , ಜಾಂಗೀರ ತಂದೆ ಸೈಯದ ಲಾಲ ಇವರು ಒಂದು  ಆಟೋದಲ್ಲಿ  ಕೂಡಿಸಿಕೊಂಡು ಮೊದಲು ಕ್ಯೂ.ಪಿ. ಆಸ್ಪತ್ರೆಗೆ ಕರೆದುಕೊಂಡು ಬಂದು 9-00 ಪಿ.ಎಂ.ಕ್ಕೆ. ತೋರಿಸಿದಾಗ ಅಲ್ಲಿನ ವ್ಶೆದ್ಯರು  ಮೃತ ಪಟ್ಟಿರುವದಾಗಿ ತಿಳಿಸಿದ್ದು ನಂತರ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು ಇರುತ್ತದೆ. ಮನೆಯ ಎದರುಗಡೆಯ ರಸ್ತೆ ಮೇಲೆ ಕಟಕ ಹಾಕುವ ವಿಷಯದಲ್ಲಿ ಆಗಾಗ ಜಗಳವಾಗಿದ್ದು ಅದೇ ವೈಮನಸಿನಿಂದ 1) ರಾಜಕುಮಾರ ತಂದೆ ಗಂಗಣ್ಣಾ ಭಾಸಗಿ 2) ಬಾಲಾಜಿ ತಂದೆ ಗಂಗಣ್ಣಾ ಭಾಸಗಿ 3) ಅಂಬರೀಷ @ ದಶರಥ ತಂದೆ ಗಂಗಣ್ಣಾ ಭಾಸಗಿ 4) ಗಂಗಣ್ಣಾ  ತಂದೆ ಭೀಮಶ್ಯಾ ಭಾಸಗಿ ಸಾ; ಎಲ್ಲರು ಗುಲಾಬನಬಿ ಕಾಲೂನಿ ಮಿಜಬಾನಗರ ಕಲಬುರಗಿ. ಇವರು  ನಾಲ್ಕು ಜನರು  ಕೂಡಿಕೊಂಡು ನನ್ನ ಮೈದುನ ಆಶೀಫ್ ವಯ;24 ವರ್ಷ ಇತನಿಗೆ ಕೈಯಿಂದ ಹೊಟ್ಟೆಯಲ್ಲಿ ಎದೆಯ ಮೇಲಿ ಗುದ್ದಿದ್ದು ಮತ್ತು ಕೇಳಗೆ ಹಾಕಿ ಕಾಲಿನಿಂದ ಹೊಟ್ಟೆಯಲ್ಲಿ ,ಎದೆಯಲ್ಲಿ ಒದ್ದು ಕೊಲೆ ಮಾಡಿರುತ್ತಾರೆ.  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಯಡ್ರಾಮಿ ಠಾಣೆ : ಶ್ರೀ ಸಿದ್ದಣ್ಣ ತಂದೆ ಮಲ್ಲಪ್ಪ ಪೂಜಾರಿ ಸಾ|| ಸಾಸಾಬಾಳ ತಾ|| ಸಿಂದಗಿ ರವರು ಈ ವರ್ಷ ತಮ್ಮ ಹೊಲದಲ್ಲಿ ಬೆಳೆದ ಕಬ್ಬನ್ನು ಮಳ್ಳಿ ಶೂಗರ ಫ್ಯಾಕ್ಟ್ರಿಗೆ ಮಾರಾಟ ಮಾಡಿದ್ದು, ನಮ್ಮ ಕಬ್ಬಿನ ಚೆಕ್ ಬಂದಿರುತ್ತದೆ ಅಂತಾ ತಿಳಿದು ಕೇಳಲು ದಿನಾಂಕ 10-03-2019 ರಂದು ಬೆಳಿಗ್ಗೆ ಸಾಸಾಬಾಳದಿಂದ ಮಳ್ಳಿ ಶೂಗರ ಫ್ಯಾಕ್ಟ್ರಿಗೆ ಹೋಗಿರುತ್ತೇನೆ, ನನ್ನ ಕೆಲಸ ಮುಗಿಸಿಕೊಂಡು ನಂತರ 2;00 ಪಿ.ಎಂ ಸುಮಾರಿಗೆ ನಾಗರಳ್ಳಿಯಿಂದ ಸಾಸಾಬಾಳಿಗೆ ಹೋಗಲು ನಮ್ಮೂರಿನ  ಸುರೇಶ ತಂದೆ ಗೊಲ್ಲಾಳಪ್ಪ ಕಾರಗೊಂಡ ಇವರ ಮ್ಯಾಕ್ಸಿಕ್ಯಾಬ ವಾಹನ ನಂ ಕೆ.-24/2124 ನೇದ್ದರಲ್ಲಿ ಕುಳಿತು ಪ್ರಯಾಣ ಮಾಡಿಕೊಂಡು ಹುಗುತ್ತಿದ್ದೇ, ಸದರಿ ವಾಹನವನ್ನು ವಡಗೇರಾ ಗ್ರಾಮದ ಮಲ್ಲಪ್ಪ ತಂದೆ ಮರೆಪ್ಪ ಚಲವಾದಿ ಎಂಬುವನು ಚಲಾಯಿಸುತ್ತಿದ್ದನು, ನನ್ನೊಂದಿಗೆ ಸದರಿ ವಾಹನದಲ್ಲಿ ಅದರ ಮಾಲಿಕ ಸುರೇಶ ಹಾಗು ಬೇರೆ ಬೇರೆ ಊರಿನ ಇತರೆ ಪ್ರಯಾಣಿಕರು ಸೇರಿದಂತೆ 4-5 ಜನ ಹೆಣ್ಣು ಮಕ್ಕಳಿದ್ದರು, ಮ್ಯಾಕ್ಸಿಕ್ಯಾಬ ವಾಹನ ಚಾಲಕನಾದ ಮಲ್ಲಪ್ಪ ಈತನು ವಾಹನವನ್ನು ಅತೀವೇಗವಾಗಿ ಮತ್ತು ಅಡ್ಡಾದಿಡ್ಡಿಯಾಗಿ ನಡೆಸುತ್ತಿದ್ದನು, ಚಾಲಕ ನನಗೆ ಪರಿಚಯದವನಾಗಿದ್ದರಿಂದ ಅವನಿಗೆ ವಾಹನವನ್ನು ನೋಡಿಕೊಂಡು ನಿಧಾನವಾಗಿ ಚಲಾಯಿಸು ಅಂತಾ ಹೇಳುತ್ತಿದ್ದೇ, ಆದರೂ ವಾಹನವನ್ನು ಜೋರಾಗಿ ಮತ್ತು ಅಡ್ಡಾದಿಡ್ಡಿಯಾಗಿ ಚಲಾಯಿಸುತ್ತಿದ್ದನು, ವಾಹನವು ಹೊನ್ನಳ್ಳಿ ಕ್ರಾಸ್ ದಾಟಿ ಸುಮಾರು 2 ಕೀ.ಮಿ ದೂರದಲ್ಲಿ ಹೋಗುತ್ತಿದ್ದಾಗ ಸುಮಾರು 2;30 ಪಿ.ಎಂ ಗಂಟೆಗೆ ಸಿಂದಗಿ ಕಡೆಯಿಂದ ಒಂದು ಕಾರು ಅತಿವೇಗವಾಗಿ ರಸ್ತೆಯ ಮೇಲೆ ಅಡ್ಡಾದಿಡ್ಡಿಯಾಗಿ ಬರುತ್ತಿತ್ತು, ಮ್ಯಾಕ್ಸಿಕ್ಯಾಬ ವಾಹನದ ಚಾಲಕನು ಸಹ ಅತಿವೇಗವಾಗಿ ಮತ್ತು ನಿಷ್ಕಾಳಜಿತನದಿಂದ ಚಲಾಯಿಸುತ್ತಾ ಹೊಗುತ್ತಿರುವಾಗ ಒಮ್ಮಿಂದ ಒಮ್ಮೇಲೆ ಎರಡು ವಾಹನಗಳು ಮುಖಾ ಮುಖಿ ಡಿಕ್ಕಿ ಹೊಡೆದವು, ಆಗ ನಮ್ಮ ವಾಹನ ಎರಡು ಪಲ್ಟಿಯಾಗಿ ಬಿದ್ದಿತು, ನಾನು ಗಾಬರಿಗೊಂಡು ನೋಡಲಾಗಿ ನಮ್ಮ ವಾಹನದಲ್ಲಿ ಕುಳಿತ ಹೆಣ್ಣುಮಕ್ಕಳಿಗೆ ಸಾದಾ ಮತ್ತು ಭಾರಿ ಗಾಯಗಳಾಗಿದ್ದವು, ನಮ್ಮ ವಾಹನದ ಚಾಲಕನಿಗೆ ತಲೆಗೆ ರಕ್ತಗಾಯವಾಗಿ ಅಲ್ಲಲ್ಲಿ ಒಳಪೆಟ್ಟಾಗಿದ್ದವು, ಅದರಂತೆ ಸುರೇಶನ ಎದೆಗೆ ಒಳಪೆಟ್ಟಾಗಿ ಅಲ್ಲಲ್ಲಿ ರಕ್ತಗಾಯಗಳಾಗಿದ್ದವು, ನನಗೆ ಸಣ್ಣ ಪುಟ್ಟ ತರಚಿದ ಗಾಯಗಳಾಗಿದ್ದು, ಬೆನ್ನಿಗೆ ಒಳಪೆಟ್ಟಾಗಿತ್ತು, ಮ್ಯಾಕ್ಸಿಕ್ಯಾಬು ಡಿಕ್ಕಿ ಹೊಡೆದ ಪರಿಣಾಮವಾಗಿ ಮುಂದಿನ ಎರಡು ಗಾಲಿಗಳು ಕಿತ್ತಿ ಹೊರಗೆ ಬಿದ್ದಿದ್ದು, ಜಖಂಗೊಂಡಿರುತ್ತದೆ, ನಂತರ ಅಲ್ಲಿಯೇ ರಸ್ತೆ ಪಕ್ಕದಲ್ಲಿ ಬಿದ್ದಿದ್ದ ಮಾರುತಿ ಸುಜಕಿ ಅಲ್ಟ್ ಕಾರನ್ನು ನೋಡಲಾಗಿ ಸಂಪೂರ್ಣ ಜಖಂಗೊಂಡಿದ್ದು ಅದರ ನಂ ಎಪಿ-22/ಎಮ್-4677 ನೇದ್ದು ಇತ್ತು, ಅದರಲ್ಲಿ ಚಾಲಕ ಸಮೇತ 5 ಜನರಿದ್ದರು, ಚಾಲಕನಿಗೆ ಬಲ ಹಣೆಗೆ ಮತ್ತು ಬಲ ಮೂಗಿನ ಹತ್ತಿರ ಭಾರಿ ರಕ್ತಗಾಯವಾಗಿ ಪ್ರಜ್ಞೆ ತಪ್ಪಿ ಬಿದ್ದಿದ್ದನು, ಅಲ್ಲಲ್ಲಿ ತರಚಿದಗಾಯಗಳಾಗಿದ್ದವು, ಅಲ್ಲದೇ ಇನ್ನುಳಿದ ಕಾರಿನಲ್ಲಿದ್ದ ಪ್ರಯಾಣಿಕರಿಗೆ ಸಹ ಕೈಗೆ ಕಾಲುಗಳಿಗೆ ಸಾದಾ ಮತ್ತು ಭಾರಿಗಾಯಗಳಾಗಿದ್ದವು, ನಂತರ ಕಾರನಲ್ಲಿದ್ದವರು ತೀವರ ಗಾಯಗೊಂಡಿದ್ದ ಕಾರ ಚಾಲಕನನ್ನು 108 ಅಂಬುಲೆನ್ಸನಲ್ಲಿ ಹಾಕಿಕೊಂಡು ಯಡ್ರಾಮಿ ಸರಕಾರಿ ಆಸ್ಪತ್ರೆಗೆ ತೆಗೆದುಕೊಂಡು ಹೋದರು,  ಸ್ಥಳದಲ್ಲಿ ಸೇರಿದ್ದ ಜನರು ಕೂಡಿಕೊಂಡು ನಮ್ಮ ವಾಹದಲ್ಲಿದ್ದವರಿಗೆ ಬೇರೆ ಇನ್ನೊಂದು ಅಂಬೂಲೆನ್ಸನಲ್ಲಿ ಹಾಕಿ ಚಿಕಿತ್ಸೆ ಕುರಿತು ಸಿಂದಗಿ ಆಸ್ಪತ್ರೆಗೆ ಕಳುಹಿಸಿಕೊಟ್ಟರು, ನನ್ನ ಬೆನ್ನಿಗೆ ಸ್ವಲ್ಪ ಪೆಟ್ಟಾಗಿದ್ದು ನಾನು ದವಾಖಾನೆಗೆ ಹೋಗಿರುವುದಿಲ್ಲಾ, ನಂತರ ನಾನು ಠಾಣೆಗೆ ದೂರು ಸಲ್ಲಿಸಲು ಬರುವುದರೊಳಗಾಗಿಯೇ ಮಾರುತಿ ಸುಜಕಿ ಅಲ್ಟ್ ಕಾರಿನ ಚಾಲಕನು ಚಿಕಿತ್ಸೆ ಫಲಕಾರಿಯಾಗದೆ ಸುಮಾರು 3;30 ಪಿ.ಎಂ ಗಂಟೆಗೆ ಯಡ್ರಾಮಿ ಸರಕಾರಿ ಆಸ್ಪತ್ರೆಯಲ್ಲಿ ಮೃತ ಪಟ್ಟಿರುತ್ತಾನೆ ಅಂತಾ ವಿಷಯ ತಿಳಿದಿರುತ್ತದೆ, ಮೇಲ್ಕಂಡ  ಮ್ಯಾಕ್ಸಿಕ್ಯಾಬ ಚಾಲಕ ಮಲ್ಲಪ್ಪ ತಂದೆ ಮರೆಪ್ಪ ಚಲವಾದಿ ಮತ್ತು ಮಾರುತಿ ಸುಜಕಿ ಅಲ್ಟ್ ಕಾರಿನ ಚಾಲಕ ಇಬ್ಬರು ತಮ್ಮ ವಾಹನಗಳನ್ನು ಅತಿವೇಗವಾಗಿ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿ ಮುಖಾ ಮುಖಿಯಾಗಿ ಡಿಕ್ಕಿ ಹೊಡೆದು ಅಪಘಾತ ಪಡಿಸಿದ್ದು ಇರುತ್ತದೆ, ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀಮತಿ ಕೌಸರ್ ಸುಲ್ತಾನಾ ಗಂಡ ಬಶೀರ ಖಾನ :48 :ಮುಖ್ಯಗುರುಗಳು ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ರವರ ಶಾಲೆ ಮದಿನಾ ಕಾಲೋನಿಯ ಮುಖ್ಯ ರಸ್ತೆಯ ಮೇಲಿದ್ದು ಪ್ರತಿದಿನದಂತೆ ದಿನಾಂಕ; 26/02/2019 ರಂದು ಸಾಯಂಕಾಲ 5;30 ಪಿ.ಎಂ ಸುಮಾರಿಗೆ ಶಾಲೆಯ ಎಲ್ಲಾ ಕೊಣೆಯ ಬಾಗಿಲುಗಳಿಗೆ ಕೀಲಿ ಹಾಕಿದ್ದು ಹಾಗು ನಾನು ಕೂಡುವ ಹೆಚ್ಎಮ್ ಆಫಿಸ್ ರೂಂ ಕ್ಕೆ ಸಹ ಕೀಲಿ ಹಾಕಿ ಮನೆಗೆ ಹೊಗಿರುತ್ತೇನೆ. ಹಾಗು ನನ್ನ ಜೊತೆಗೆ ಶಾಲೆಯ ಎಲ್ಲಾ ಸಹ ಶಿಕ್ಷಕಿಯರು ಸಹ ಸಾಯಂಕಾಲ ಮನೆಗೆ ಹೊಗಿರುತ್ತಾರೆ. ದಿನಾಂಕ; 27/02/2019 ರಂದು ಬೆಳಿಗ್ಗೆ 9;00 ಗಂಟೆಗೆ ನಾನು ಶಾಲೆಗೆ ಬಂದು ನೋಡಲಾಗಿ ಯಾರೋ ಕಳ್ಳರು ದಿನಾಂಕ; 26/02/2019 ಹಾಗು 27/02/2019 ರಾತ್ರಿ ನನ್ನ ಕಾರ್ಯಾಲಯದ ಬಾಗಿಲು ಕೀಲಿ ಮುರಿದು ಒಳಗೆ ಪ್ರವೇಶಮಾಡಿ ನನ್ನ ಡ್ರಾದಲ್ಲಿ ಇದ್ದ ಕೀಲಿಕೈಗಳು ತೆಗೆದುಕೊಂಡು ಆಲಮಾರಿ ತೆಗೆದು ಶಾಲೆಯ 10 ವರ್ಷಗಳ ದಾಖಲಾತಿಗಳು, ರಜಿಸ್ಟರ್ಗಳು ಹಾಗು ಪುಸ್ತಕಗಳು ಕಳುವು ಮಡಿಕೊಂಡು ಹೊಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದ್ವೀಚಕ್ರ ವಾನ ಕಳವು ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀ ಮಲ್ಲಿಕಾರ್ಜುನ ತಂದೆ ಚಿದಾನಂದ ಅಲ್ಲನ್ ಸಾ|| ಮನೆ ನಂ; 11-582 ಬೋರಾಬಾಯಿ ನಗರ ಬ್ರಹ್ಮಪೂರ ಕಲಬುರಗಿ ರವರು ದಿನಾಂಕ; 25/01/2019 ರಂದು ಶ್ರೀ ಶರಣಬಸವೇಶ್ವರ ದೇವಸ್ಥಾನ ಆವರದಲ್ಲಿ ನನ್ನ ಹೊಂಡಾ ಡಿಯೋ ದ್ವಿಚಕ್ರ ವಾಹನ ನಂ; ಕೆಎ 32 ಇಪಿ 5673 ಚೆಸ್ಸಿ ನಂ; ಎಮ್ಇ4ಜೆ39ಡಿಡಿಹೆಚ್7006360 ಇಂಜಿನ ನಂ; ಜೆಎಫ್3972008184||ಕಿ|| 35,000/- ರೂ ನೇದ್ದು ನಿಲುಗಡೆಮಾಡಿ ದೇವರ ದರ್ಶನಪಡೆದುಕೊಂಡು ಮರಳಿ ಬಂದು ನೋಡಲಾಗಿ ಸದರಿ ನನ್ನ ದ್ವಿಚಕ್ರವಾಹನ ಇರಲಿಲ್ಲ ಯಾರೋ ಕಳ್ಳರು ಕಳ್ಳತನಮಾಡಿಕೊಂಡು ಹೊಗಿರುತ್ತಾರೆ. ನಾನು ಇಲ್ಲಿಯವರೆ ಕಲಬುರಗಿ ನಗರದಲ್ಲಿ ಹುಡುಕಾಡಿದರೂ ನನ್ನ ದ್ವಿಚಕ್ರ ವಾಹನ ಸಿಕ್ಕಿರುವದಿಲ್ಲ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ  ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ,
ಗೈಹಿಣಿಗೆ ಕಿರುಕಳ ನೀಡಿ ಹಲ್ಲೆ ಮಾಡಿದ ಪ್ರಕರಣ :
ನರೋಣಾ ಠಾಣೆ : ಶ್ರೀಮತಿಸಂಗೀತಾ ಗಂಡ ರಾಜಶೇಖರ ವಾಗ್ಮೋರೆ, ಸಾ:ಬಸವಣ್ಣಾ ನಗರ ಕಲಬುರಗಿ ರವರಿಗೆ ಸುಮಾರು 12 ವರ್ಷಗಳ ಹಿಂದೆ ಮದುವೆ ಆಗಿದ್ದು ನನ್ನ ತವರು ಮನೆ ಗೋಳಾ(ಬಿ) ಗ್ರಾಮ ಇರುತ್ತದೆ. ನನ್ನ ಗಂಡನಾದ ರಾಜಶೇಖರ ತಂದೆ ರಾಮಚಂದ್ರ ವಾಗ್ಮೋರೆ ಇವನು ಸಾರಾಯಿ ಕುಡಿಯುವ ಚಟ ಉಳ್ಳವನಿದ್ದು ಮದುವೆಯಾದ ಸುಮಾರು 2-3 ವರ್ಷಗಳ ವರೆಗೆ ನನ್ನೊಂದಿಗೆ ಚನ್ನಾಗಿ ಇದ್ದನು. ಆನಂತರ ದಿನಾಲು ಸರಾಯಿ ಕುಡಿದು ಮನೆಗೆ ಬಂದು ನನಗೆ ಅವಾಚ್ಯವಾಗಿ ಬೈಯುತ್ತಾ ಕ್ಷುಲಕ್ಕ ಕಾರಣಗಳಿಗಾಗಿ ಜಗಳ ಮಾಡುತ್ತಾ ಹೊಡೆಬಡೆ ಮಾಡುತ್ತಾ ದೈಹಿಕ ಮತ್ತು ಮಾನಸಿಕ ಕಿರಕುಳ ಕೊಡುತ್ತಾ ಬಂದಿರುತ್ತಾನೆ. ನಮ್ಮ ಅತ್ತೆಯಾದ ಲಲಿತಾಬಾಯಿ ಮಾವನಾದ ರಾಮಚಂದ್ರ ತಂದೆ ಲಕ್ಷ್ಮಣರಾವ ವಾಗ್ಮೋರೆ, ನಾದನಿಯಾದ ಸಂತೋಷಿ ಗಂಡ ಮಾರುತಿ ಸಾ:ಗೌರ, ಮೈದುನನಾದ ರಾಘವೇಂದ್ರ ಇವರು ಕೂಡ ನನ್ನ ಗಂಡನಿಗೆ ನನ್ನ ಬಗ್ಗೆ ಇಲ್ಲಸಲ್ಲದ ಸುಳ್ಳು ಹೇಳಿ ತಲೆತುಂಬಿ ಕಿರಕುಳ  ನೀಡುವಂತೆ ಪ್ರೇರೆಪಿಸುತ್ತಾ ಬಂದಿರುತ್ತಾರೆ, ಇಷ್ಟಾದರು ಸಹ ನಾನು ಇಲ್ಲಿಯ ತನಕ ಸಹನೆ ಮಾಡಿಕೊಳ್ಳತ್ತಾ ಬಂದಿರುತ್ತೇನೆ. ನನಗೆ ಮೂರುಜನ ಗಂಡು ಮಕ್ಕಳಿದ್ದು ಸುಮಾರು ಒಂದುವಾರದ ಹಿಂದೆ ಈ ಮೇಲೆ ನಮೂದಿಸಿದ ಜನರು ನನ್ನ ಸಂಗಡ ಮನೆಯಲ್ಲಿ ಜಗಳ ಮಾಡಿ ನನಗೆ ಮನೆಯಿಂದ ಹೊರೆಗೆ ಹಾಕಿರುತ್ತಾರೆ. ಆಗ ನಾನು ನನ್ನ ಮಕ್ಕಳನ್ನು ಬಿಟ್ಟು ನನ್ನ ತವರು ಮನೆಯಾದ ಗೋಳಾ(ಬಿ) ಗ್ರಾಮಕ್ಕೆ ಬಂದು ನನ್ನ ತಾಯಿ ಮತ್ತು ಅಣ್ಣನೊಂದಿಗೆ ಮನೆಯಲ್ಲಿ ವಾಸಿಸುತ್ತಿದ್ದಾಗ ದಿನಾಂಕ:07/03/2019 ರಂದು ರಾತ್ರಿ 11-00 ಗಂಟೆಗೆ ನನ್ನ ಗಂಡನಾದ ರಾಜಶೇಖರನು ತನ್ನ ಸಂಗಡ ರಾಘವೇಂದ್ರ ತಂದೆ ರಾಮಚಂದ್ರ ವಾಗ್ಮೋರೆ, ರಾಜು ತಂದೆ ಮರೆಪ್ಪಾ ಪೂಜಾರಿ, ವಿಜಯಕುಮಾರ ತಂದೆ ನಾಗಪ್ಪಾ ಭಜಂತ್ರಿ, ಆಕಾಶ ತಂದೆ ಅನೀಲ ಕಲಶೆಟ್ಟಿ, ಅಕ್ಷಯ ತಂದೆ ಪಾಂಡುರಂಗ ವಾಗ್ಮೋರೆ, ಅವಿನಾಶ ತಂದೆ ಪಾಂಡುರಂಗ ವಾಗ್ಮೋರೆ, ಅನೀಕೆತ ತಂದೆ ಪಾಂಡುರಂಗ ವಾಗ್ಮೋರೆ ಇನ್ನ ಕೆಲವು ಜನರನ್ನು ತಮ್ಮ ಸಂಗಡ ಕರೆದುಕೊಂಡು ನಮ್ಮೂರಿಗೆ ಬಂದು ನಮ್ಮ ಮನೆಯ ಮುಂದೆ ನಿಂತು ನಮ್ಮ ಮನೆಯ ಗೇಟಿಗೆ ಒದ್ದು ಏ ರಂಡಿಮಕ್ಕಳ್ಯಾ ಹೊರೆಗೆ ಬನ್ನರಿ ನಿಮಗೆ ಒಂದು ಕೈ ನೋಡಿಕೊಳ್ಳುತ್ತೇವೆ ಅಂತಾ ಬೈಯುತ್ತಿದ್ದಾಗ ಸಪ್ಪಳ ಕೇಳಿ ನಾನು ನನ್ನ ತಾಯಿಯಾದ ಮಂಡೋಧರಿ, ಅಣ್ಣನಾದ ರೇವಣಸಿದ್ದ ನಮ್ಮ ಕಾಕಾನ ಮಗನಾದ ಶಂಕರ ತಂದೆ ವಸಂತ ಪವಾರ, ಅಕ್ಕಳಾದ ಅನೀತಾ ಎಲ್ಲರೂ ಮನೆಯಿಂದ ಹೊರಗೆ ಬಂದು ನೋಡಿದಾಗ ಎಲ್ಲರೂ ನಮಗೆ ಜಗಳ ಮಾಡುವ ಉದ್ದೇಶದಿಂದ ಬಂದು ನನಗೆ ನನ್ನ ಗಂಡನು ರಂಡಿ ನಾ ಬೇರೆ ಮದುವೆ ಮಾಡಿಕೊಳ್ಳುತ್ತೇನೆ ನೀನು ನನಗೆ ಬಿಡು ಅಂತಾ ಬೈದು ನನ್ನ ತಲೆಯ ಮೇಲಿನ ಕೂದಲು ಹಿಡಿದು ಎಳೆದಾಡಿ ಒಂದು ಬಡಿಗೆಯಿಂದ ಬೆನ್ನಮೇಲೆ  ಹೊಡೆದು ಕೈಯಿಂದ ಎಡಕೀವಿಗೆ ಗುದ್ದಿ ನೂಕಿಸಿಕೊಟ್ಟನು ಬಿಡಿಸಲು ಬಂದ ನನ್ನ ತಮ್ಮನಾದ ಶಂಕರನಿಗೆ ರಾಜಶೇಖರ, ರಾಘವೇಂದ್ರ ಇಬ್ಬರು ಎದೆಯ ಮೇಲಿನ ಅಂಗಿಹಿಡಿದು ಎಳೆದಾಡಿ ಕೈಯಿಂದ ಮುಖ ಮತ್ತು ಹೊಟ್ಟೆಗೆ ಗುದ್ದಿ ನೆಲಕ್ಕೆ ಹಾಕಿದಾಗ ರಾಘವೇಂದ್ರನು ತನ್ನ ಕೈಯಲ್ಲಿದ್ದ ಕಬ್ಬಿಣದ ರಾಡಿನಿಂದ ತಲೆಯ ಮೇಲೆ ಹೊಡೆದು ಭಾರಿರಕ್ತಗಾಯ ಪಡಿಸಿರುತ್ತಾನೆ. ಅನೀತಾಳಿಗೆ ರಾಜು ತಂದೆ ಮರೇಪ್ಪಾ, ವಿಜಯಕುಮಾರ ತಂದೆ ನಾಗಪ್ಪಾ ಭಜಂತ್ರಿ ಇವರು ಕೈಹಿಡಿದು ಎಳೆದಾಡಿ ಕೈಯಿಂದ ಕಪಾಳ ಮೇಲೆ ಹೊಡೆದಿರುತ್ತಾರೆ. ಆಕಾಶ ಮತ್ತು ಅಕ್ಷಯ ಇಬ್ಬರು ನನಗೆ ಹೊಟ್ಟೆಯ ಮೇಲೆ ಒದ್ದಿರುತ್ತಾರೆ. ಅವಿನಾಶ ಮತ್ತು ಅನೀಕೆತ ಇಬ್ಬರು ರೇವಣಸಿದ್ದನಿಗೆ ಕೈಹಿಡಿದು ಎಳೆದಾಡಿ ನೆಲಕ್ಕೆಹಾಕಿ ಕಾಲಿನಿಂದ ಹೊಟ್ಟೆಗೆ ಬೆನ್ನಿಗೆ ಒದ್ದಿರುತ್ತಾರೆ. ಉಳಿದವರು ಎಲ್ಲರೂ ಈ ರಂಡಿ ಮಕ್ಕಳಿಗೆ ಬಿಡಬ್ಯಾಡರಿ ಅಂತಾ ಜೀವ ಭಯಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.