POLICE BHAVAN KALABURAGI

POLICE BHAVAN KALABURAGI

15 January 2019

KALABURAGI DISTRICT REPORTED CRIMES

ಅಪಹರಣ ಮಾಡಿ ಅತ್ಯಾಚಾರ ಮಾಡಿದ ಪ್ರಕರಣ :
ರೇವೂರ ಠಾಣೆ : ದಿನಾಂಕ:20-12-2018 ರಂದು ಮಲ್ಲಿಕಾರ್ಜುನ  @ ಮಲ್ಲಪ್ಪ ತಂದೆ ಸಿದ್ದಮಾಳಪ್ಪ ನಿಂಬರ್ಗಾ ಎಂಬಾತನು ತಾನು ನಡೆಸುವ ಟಂಟಂ ತಗೆದುಕೊಂಡು ಬಂದು ನಿಮ್ಮ ಮನೆಯ ಹತ್ತಿರ ನಿಲ್ಲಿಸಿ ನನ್ನ ಮಗಳನ್ನು ಹೆದರಿಸಿ ಅಪಹರಿಕೊಂಡು ಹೋಗಿದ್ದು ದಿನಾಂಕ:14-01-2019 ರಂದು ಬೆಳಿಗ್ಗೆ 11-00 ಗಂಟೆ ಸುಮಾರಿಗೆ ಕಲಬುರಗಿಗೆ ಹೋದಾಗ ನಮ್ಮ ಪೊಲೀಸ್ ಬಾತ್ಮಿದಾರನು ಬಸ್ಟ್ಯಾಂಡನಲ್ಲಿ ಕುಳಿತಿದ್ದ ಕುಮಾರಿ ಇವಳಿಗೆ ತೋರಿಸಿದ್ದು, ಆಗ ಅವರು ಸದರಿಯವಳಿಗೆ ವಿಚಾರಿಸಿದಾಗ ಅವಳು ನನಗೆ ದಿನಾಂಕ:20-12-2018 ರಂದು ಮದ್ಯಾಹ್ನ 2-00 ಗಂಟೆ ಸುಮಾರಿಗೆ ನಾನು ನಮ್ಮ ಮನೆಯಲ್ಲಿದ್ದಾಗ ನಮ್ಮೂರಿನ ಮಲ್ಲಿಕಾರ್ಜುನ @ ಮಲ್ಲಪ್ಪ ತಂ/ಸಿದ್ದಮಾಳಪ್ಪ ನಿಂಬರಗಿ ಎಂಬಾತನು ನಮ್ಮ ಮನೆಯ ಮುಂದೆ ಟಂಟಂ ತಂದು ನಿಲ್ಲಿಸಿ ಹಾರ್ನ ಹೊಡೆದಿದ್ದರಿಂದ ನಾನು ಯಾರು ಬಂದಿದ್ದಾರೆ ಅಂತ ಹೊರಗೆ ಬಂದಾಗ ಅವನು ನನಗೆ ನಾನು ನಿನ್ನನ್ನು ಪ್ರೀತಿಸುತ್ತಿದ್ದೇನೆ, ನಿನ್ನೊಂದಿಗೆ ಮದುವೆ ಮಾಡಿಕೊಳ್ಳುತ್ತೇನೆ ನನ್ನೊಂದಿಗೆ ನಡೆ ಅಂತ ಹೇಳಿದನು. ಆಗ ನಾನು ಬರುವುದಿಲ್ಲ ಅಂತ ಹೇಳಿದಾಗ ನನಗೆ ಹೆದರಿಸಿ ಒತ್ತಾಯಪೂರ್ವಕವಾಗಿ ಟಂಟಂ ದಲ್ಲಿ ಅಪಹರಿಸಿಕೊಂಡು ಗೊಬ್ಬೂರ ಕಡೆಗೆ ಹೋಗುವ ರೋಡಿಗೆ ಕರೆದುಕೊಂಡು ಹೋಗಿ ರೋಡಿನ ಪಕ್ಕದಲ್ಲಿರುವ ಹಳ್ಳದಲ್ಲಿ ನನಗೆ ಒತ್ತಾಯಪೂರ್ವಕವಾಗಿ ಸಂಭೋಗ ಮಾಡಿ ಲೈಂಗಿಕ ದೌರ್ಜನ್ಯ ಎಸಗಿರುತ್ತಾನೆ. ನಂತರ ಟಂಟಂ ದಲ್ಲಿಯೆ ಕಲಬುರಗಿಗೆ ಕರೆದುಕೊಂಡು ಬಂದು ಅಲ್ಲಿಂದ ಬೆಂಗಳೂರಿಗೆ ಕರೆದುಕೊಂಡು ಹೋಗಿ ದೇವಸ್ಥಾನಗಳಿಗೆ ಮತ್ತು ಪಾರ್ಕಗಳಿಗೆ ಸುತ್ತಾಡಿ ಅವನಲ್ಲಿದ್ದ ಹಣ ಖರ್ಚಾದ ನಂತರ ಮರಳಿ ಊರಿಗೆ ಹೋಗಿ ನಾನು ಹಣ ತೆಗೆದುಕೊಂಡು ಬರುತ್ತೇನೆ ಅಂತ ಹೇಳಿ ಕರೆದುಕೊಂಡು ಬಂದು ನನಗೆ ಇಲ್ಲಿ ಬಸ್ಟ್ಯಾಂಡನಲ್ಲಿ ಕೂಡಿಸಿ ಹೋದವನು ಮರಳಿ ಬಂದಿರುವುದಿಲ್ಲ ಅಂತ ತಿಳಿಸಿದಳು. ಅಪ್ರಾಪ್ತ ವಯಸ್ಕಳಾದ ನನ್ನನ್ನು ಪುಸಲಾಯಿಸಿ ಟಂಟಂ ದಲ್ಲಿ ಅಪಹರಿಸಿಕೊಂಡು ಹೋಗಿ ನನಗೆ ಒತ್ತಾಯಪೂರ್ವಕವಾಗಿ ಸಂಭೋಗ ಮಾಡಿ ಲೈಂಗಿಕ ದೌರ್ಜನ್ಯವೆಸಗಿರುತ್ತಾನೆ ಅಂತ ತಿಳಿಸಿರುತ್ತಾಳೆ ಅಂತ  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರೇವೂರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಹಲ್ಲೆ ಪ್ರಕರಣ :
ಕಮಲಾಪೂರ ಠಾಣೆ : ಶ್ರೀಮತಿ ಜಗದೇವಿ ಗಂಡ ಶ್ಯಾಮರಾವ ಶೇಟ್ಟಿ ಸಾ :: ಓಕಳಿ, ತಾ: ಕಮಲಾಪೂರ ರವರ ಮಗನಾದ ವಿಜಯಕುಮಾರ ಇವನ ಹತ್ತಿರ 70,000/- ರೂಪಾಯಿಗಳನ್ನು  ನಮ್ಮ ಗ್ರಾಮದ, ನಮ್ಮ ಓಣಿಯವನೆಯಾದ ರಾಜಕುಮಾರ ತಂದೆ ಹಣಮಂತ ನಿಡಗುಂದಿ ಇವರು ತೆಗೆದುಕೊಂಡಿದ್ದು, ಇಲ್ಲಿಯವರೆಗು ಹಣ ವಾಪಸ್ಸು ನೀಡಿರುವುದಿಲ್ಲ. ಹೀಗಿದ್ದು, ದಿನಾಂಕ 12/01/2019 ರಂದು ಬೆಳಿಗ್ಗೆ ನಾನು, ರಾಜಕುಮಾರ ನಿಡಗುಂದಿ ಇವರಿಗೆ ನನ್ನ ಮಗನ ಹಣ ಕೇಳಲು ಮನೆಗೆ ಹೋದಾಗ, ರಾಜಕುಮಾರನು ಮನೆಯಲ್ಲಿ ಇರಲಿಲ್ಲ. ಆಗ ನಾನು ರಾಜಕುಮಾರನ ಹೆಂಡತಿಯಾದ ಸಂಗೀತಾ ಇವಳಿಗೆ, ವಿಷಯವನ್ನು ತಿಳಿಸಿ, ನನ್ನ ಮಗನ ಹಣವನ್ನು ವಾಪಸ್ಸು ನೀಡುವಂತೆ ನಿನ್ನ ಗಂಡನಿಗೆ ಹೇಳು ಅಂತ ಹೇಳಿ, ನನ್ನ ಮನೆಗೆ ವಾಪಸ್ಸಾಗಿರುತ್ತೇನೆ. ಮುಂದೆ ಮಧ್ಯಾಹ್ನ 12:30 ಗಂಟೆ ಸುಮಾರಿಗೆ ನಾನು ನಮ್ಮ ಮನೆಯ ಕಂಪೌಂಡಿನಲ್ಲಿ ಬಟ್ಟೆ ತೊಳೆಯುತ್ತಿದ್ದೆನು. ನನ್ನ ಮಗನಾದ ಉದಯಕುಮಾರ ಈತನು ನಮ್ಮ ಕಿರಾಣಿ ಅಂಗಡಿಯ ಮುಂದೆ ಮಲಗಿಕೊಂಡಿದ್ದು, ಅಲ್ಲಿಗೆ ರಾಜಕುಮಾರ ಈತನು ಚೀರಾಡುತ್ತಾ, ನನ್ನ ಮನೆಗೆ ಬಂದು, ನನಗೆ  ಏ ರಂಡಿ, ನಿನ್ನ ಮಗನಿಗೆ ನಾನು ಯಾವುದು ರೊಕ್ಕ ಕೊಡುವುದಿದೆ, ರೊಕ್ಕ ಕೊಡು ಅಂತ ಹೇಳಿ ನಮ್ಮ ಮನೆಗೆ ಬಂದಿದ್ದಿ ಅಂತ ಅವಾಚ್ಯ ಶಬ್ದಗಳಿಂದ ಬೈಯುತ್ತಾ, ಕೈಯಿಂದ ಬಲಗೈ ರಟ್ಟೆಯ ಮೇಲೆ ಮತ್ತು ಬೆನ್ನ ಮೇಲೆ ಜೋರಾಗಿ ಹೊಡೆದು, ಕಾಲಿನಿಂದ ನನ್ನ ಎಡಗಾಲ ಮೇಲೆ ಒದ್ದನು. ನಾನು ಚೀರಾಡುವುದನ್ನು ಕೇಳಿ ಅಲ್ಲಿಯೆ ಮಲಗಿರುವ ನನ್ನ  ಮಗ ಉದಯಕುಮಾರ ಈತನು ಎಚ್ಚರಗೊಂಡು, ಯಾಕೆ ನಮ್ಮ ತಾಯಿಗೆ ಹೊಡೆಯುತ್ತಿದ್ದಿ ಅಂತ ಕೇಳಿದಕ್ಕೆ, ರಂಡಿ ಮಗನೆ, ನಿನೇನು ಕೇಳುತ್ತಿ, ನಿನಗೂ, ನಿನ್ನ ಅವ್ವನಿಗು ಮತ್ತು ನಿನ್ನ ಎಲ್ಲಾ ಅಣ್ಣ ತಮ್ಮಂದಿರಿಗು ಹೊಡೆಯುತ್ತೇನೆ ಬೋಸಡಿ ಮಗನೆ ಅಂತ ಬೈಯುತ್ತಾ ಕೈಯಿಂದ, ನನ್ನ ಮಗನ ಕಪಾಳೆ ಹೊಡೆದಾಗ, ನನ್ನ ಮಗನು ನೆಲಕ್ಕೆ ಬಿದ್ದನು. ಆಗ ರಾಜಕುಮಾರನು ಹಾಗೆ ನನ್ನ ಮಗನಿಗೆ ತನ್ನ ಕಾಲಿನಿಂದ, ಅವನ ಕಾಲುಗಳ ಮೇಲೆ, ಪಕ್ಕೆಲುಬಿಗೆ ಒದ್ದನು. ಇದರಿಂದ ನನ್ನ ಮಗನ ಮುಖದ ಮೇಲೆ ತರಚಿದ ಗಾಯಗಳು ಆದವು. ಹಾಗೆ ಎಡಗಾಲಿನ ಪಾದದ ಮೇಲೆ ಗುಪ್ತಾಗಾಯ ಮತ್ತು ಎಡಗೈ ಮೇಲೆ ತರಚಿದ ಗಾಯ, ಎಡ ಪಕ್ಕೆಲುಬಿನ ಮೇಲೆ ಗುಪ್ತಗಾಯಗಳಾಗಿ ನರಳಾಡುತ್ತಾ ಬಿದ್ದನು. ಅಷ್ಟರಲ್ಲಿ ರಾಜಕುಮಾರನ ಹೆಂಡತಿ ಸಂಗೀತಾ ಇವಳು ಕೂಡಾ ಬಂದು, ಇವರದು ಬಹಳ ಅಗ್ಯಾದ, ಸುಮ್ಮನೆ ನಮ್ಮ ಮನೆಗೆ ಬಂದು ರೊಕ್ಕ ಕೊಡು ಅಂತ ಕೇಳುತ್ತಿ ಬೋಸಡಿ ಅಂತ ಅನ್ನುತ್ತಾ ನನ್ನ ಕೂದಲು ಹಿಡಿದು ಎಳೆದಾಡಿದಳು. ಆಗ ರಾಜಕುಮಾರನು ತನ್ನ ಮನೆಯ ಕಡೆಗೆ ಓಡಿ ಹೋಗಿ, ಮನೆಯಲ್ಲಿದ್ದ ಒಂದು ಚೂರಿಯನ್ನು ತೆಗೆದುಕೊಂಡು ಬಂದವನೆ,  ಇವತ್ತು, ಈ ರಂಡಿ ಮಗ ಉದ್ಯಾನಿಗೆ ಖಲ್ಲಾಸ್ ಮಾಡಿ ಬಿಡುತ್ತೇನೆ ಅಂತ ಅನ್ನುತ್ತಾ ಚೂರಿಯಿಂದ ನನ್ನ ಮಗನಿಗೆ ಹೊಡೆಯಲು ಬಂದಾಗ, ನನ್ನ ಮಗ ತಪ್ಪಿಸಿಕೊಂಡನು. ಮತ್ತೆ ಹೊಡೆಯಲು ಬಂದಾಗ, ದಾರಿಯಲ್ಲಿ ಮೋಟರ ಸೈಕಲ್ಲಿನ ಮೇಲೆ ಹೋಗುತ್ತಿದ್ದ ಯಾರೋ ಅವರ ಹೆಸರು, ವಿಳಾಸ ಗೊತ್ತಿರುವುದಿಲ್ಲ, ಅವರು ಬಂದು ರಾಜಕುಮಾರನಿಗೆ ತಡೆದು ನಿಲ್ಲಿಸಿದರು. ಇಲ್ಲದಿದ್ದರೆ ರಾಜಕುಮಾರನು ನನ್ನ ಮಗನಿಗೆ ಖಲ್ಲಾಸ್ ಮಾಡಿವೆ ಬಿಡುತ್ತಿದ್ದನು. ನಾವು ಜಗಳವಾಡುವುದನ್ನು ನೋಡಿ ನಮ್ಮ ಓಣಿಯ ದೇವಪ್ಪ ತಂದೆ ಶರಣಪ್ಪ ಧನ್ನಿ ಮತ್ತು ಸುಭಾಸ ತಂದೆ ಶಿವಶರಣಪ್ಪ ಜ್ಯೋತಿ ಇವರು ಬಂದು ಜಗಳವನ್ನು ಬಿಡಿಸಿದರು. ಆಗ ರಾಜಕುಮಾರ ಮತ್ತು ಆತನ ಹೆಂಡತಿ ಸಂಗೀತಾ ಇವರು ಇವತ್ತು ಉಳಿದಿರಿ ಮಕ್ಕಳ್ಯಾ, ಇನ್ನೊಮ್ಮೆ ನಮ್ಮ ತಂಟೆಗೆ ಬಂದರೆ ನಿಮಗೆ ಮತ್ತು ನಿಮ್ಮ ಮನೆಯವರಿಗೆ ಯಾರಿಗು ಬಿಡುವುದಿಲ್ಲ ಬೋಸಡಿ ಮಕ್ಕಳೆ ಅಂತ ಅನ್ನುತ್ತಾ ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

13 January 2019

KALABURAGI DISTRICT REPORTED CRIMES

ಅಧಿಕಾರ ದುರುಪಯೊಗಪಡಿಸಿಕೊಂಡು ಸರಕಾರಕ್ಕೆ ಮೊಸ ಮಾಡಿದ ಪ್ರಕರಣ :
ಯಡ್ರಾಮಿ ಠಾಣೆ : ಶ್ರೀ ನಾಗೇಂದ್ರಪ್ಪ ತಂದೆ ಬಸಣ್ಣ ಕೂಡಿ ಉ; ಕಾರ್ಯದರ್ಶಿ ಗ್ರೇಡ 1, ಪ್ರಭಾರ ಪಿ.ಡಿ.ಓ ಕರಕಿಹಳ್ಳಿ ಗ್ರಾಮ ಪಂಚಾಯತ ರವರು ದಿನಾಂಕ 01-10-2018 ರಿಂದ ಕರಕಿಹಳ್ಳಿ ಗ್ರಾಮ ಪಂಚಾಯತಿಯಲ್ಲಿ ಪ್ರಭಾರಿ ಪಿ.ಡಿ.ಓ ಅಂತಾ ಕರ್ತವ್ಯನಿರ್ವಹಿಸುತ್ತಿರುತ್ತೇನೆ, ಈ ಪಂಚಾಯತಿಯಲ್ಲಿ ವೈಜನಾಥ ತಂದೆ ದುಂಡಪ್ಪ ಮೊರಟಗಿ ಸಾ|| ಹರನಾಳ(ಬಿ) ಎಂಬುವರು ಕಂಪ್ಯೂಟರ ಆಪರೇಟರ್ ಅಂತಾ ಕರ್ತವ್ಯ ನಿರ್ವಹಿಸುತ್ತಿರುತ್ತಾರೆ, ಈ ಮೊದಲು ಇದ್ದ ಪಿ.ಡಿ.ಓ ರವರು ತಮ್ಮ ಹೆಚ್ಚಿನ ಕರ್ತವ್ಯದ ಒತ್ತಡದಿಂದ ಪ್ರಧಾನ ಮಂತ್ರಿ ಅವಾಸ ಯೋಜನೆ, ಬಸವ ವಸತಿ ಯೋಜನೆ, ಡಾ|| ಬಿ.ಆರ್ ಅಂಬೇಡ್ಕರ್ ಯೋಜನೆ ಅಡಿಯಲ್ಲಿ ಮನೆಗಳ ಜಿ.ಪಿ.ಎಸ್ ಮಾಡಲು ಕಂಪ್ಯೂಟರ ಆಪರೇಟರಾದ ವೈಜನಾಥ ರವರಿಗೆ ಆದೇಶಿಸಿದ್ದು ಇರುತ್ತದೆ. ಅದರಂತೆ ವೈಜನಾಥ ರವರು 2016-17 ನೇ ಸಾಲಿನಲ್ಲಿ ಪ್ರಧಾನ ಮಂತ್ರಿ ಅವಾಸ ಯೋಜನೆ ಅಡಿಯಲ್ಲಿ ಯಾವುದೇ ಗ್ರಾಮ ಸಭೆ ಮಾಡದೆ ಮತ್ತು ಯಾವುದೇ ದಾಖಲಾತಿಗಳನ್ನು ತಯ್ಯಾರಿಸದೇ ಈ ಕೆಳಕಂಡ ಫಲಾನುಭವಗಳ ಹೆಸರಿಗೆ ಮನೆಗಳು ಮಂಜುರು ಮಾಡಿದಂತೆ ಮಾಡಿ ಅವರ ಹೆಸರಿನಿಂದ ಹಣ ತನ್ನ ಸ್ವಂತಕ್ಕೆ ದುರುಪಯೋಗಿ ಪಡಿಸಿಕೊಂಡಿರುತ್ತಾನೆ, ಹೀಗೆ ಒಟು 09 ಮನೆಗಳನ್ನು ಯಾರ ಗಮನಕ್ಕು ತರದೇ ಯಾವುದೋ ಖೋಟ್ಟಿ ಜಿಪಿಎಸ್ ಮಾಡಿ ಒಟ್ಟು 7,48,800/- ರೂ ಗಳನ್ನು ತನ್ನ ಸ್ವಂತಕ್ಕೆ ದುರುಪಯೋಗಿ ಪಡಿಸಿಕೊಂಡಿರುತ್ತಾನೆ, ಅದರಂತೆ 2016-17 ನೇ ಸಾಲಿನಲ್ಲಿ ಪ್ರಧಾನ ಮಂತ್ರಿ ಅವಾಸ ಯೋಜನೆ ಅಡಿಯಲ್ಲಿ ಇನ್ನು ಕೆಲವು ಮಂಜುರಾದ ಮನೆಗಳ ಪೈಕಿ 03 ಮನೆಗಳು ಒಂದೆ ಕುಟುಂಬದವರಿಗೆ ಮಂಜುರು ಮಾಡಿರುತ್ತಾರೆ, ಮತ್ತು ಒಂದು ಮನೆಯನ್ನು ತಮ್ಮ ತಾಯಿ ರಾಯಮ್ಮ ಗಂಡ ದುಂಡಪ್ಪ ಮೋರಟಗಿ ರವರ ಹೆಸರಿಗೆ ಮತ್ತು ಇನ್ನೊಂದು ಮನೆಯನ್ನು ತನ್ನ ತಂಗಿ ಮಹಾಲಕ್ಷ್ಮೀ ತಂದೆ ದುಂಡಪ್ಪ ಮೋರಟಗಿ ಇವರ ಹೆಸರಿಗೆ ಹಾಕಿದ್ದು ಇರುತ್ತದೆ, ಈ ಮೊದಲು ಮಹಾಲಕ್ಷ್ಮೀ ರವರಿಗೆ ಸಿಂದಗಿ ತಾಲೂಕಿನ ಬಳಗಾನೂರ ಗ್ರಾಮದ ಅಮೋಘ ಎಂಬುವರೊಂದಿಗೆ ಮದುವೆ ಮಾಡಿಕೊಟ್ಟಿದ್ದು, ಅವರ ಗಂಡ ಕೆ.ಎಸ್.ಅರ್.ಟಿ.ಸಿ ಯಲ್ಲಿ ನಿರ್ವಾಹಕನಾಗಿರುತ್ತಾರೆ, ಕಮಲಾಕ್ಷಿ ಗಂಡ ಭೀಮರಾಯ ಇವರು ಗಾಣಿಗ ಸಮಾಜಕ್ಕೆ ಸೇರಿದವರಿದ್ದು, ಅವರಿಗೆ ಪರಿಶೀಷ್ಟ್ ಜಾತಿ ಅಂತಾ ನಮೂದಿಸಿ ಅವರಿಗೆ ಒಂದು ಮನೆ ಮಂಜುರು ಮಾಡಿರುತ್ತಾರೆ ಅದರಂತೆ ಮೇಲ್ಕಂಡವರ ಹೆಸರಗಳು ಈ ಕೆಳಗಿನಂತರ ಇರುತ್ತವೆ. 06 ಜನರಿಗೆ ಮಂಜುರಾದ ಮನೆಗಳನ್ನು ಕಟ್ಟಡ ಮಾಡದೇ ವೈಜನಾಥ ಈತನು ಸುಳ್ಳು ಜಿಪಿಎಸ್ ಮಾಡಿ ಸುಮಾರು 11,54,997/- ಹಣವನ್ನು ತನ್ನ ಸ್ವಂತಕ್ಕೆ ದುರೂಪಯೋಗ ಪಡಿಸಿಕೊಂಡಿರುತ್ತಾನೆ, ವೈಜನಾಥ ಈತನು ನಮ್ಮ ಗ್ರಾಮ ಪಂಚಾಯತಿಯಲ್ಲಿ ಕಂಪ್ಯೂಟರ ಆಪರೇಟರ ಇದ್ದು, ದಿನಾಂಕ 19-05-2016 ರಿಂದ 25-05-2016 ರವರೆಗೆ ಗ್ರಾಮ ಪಂಚಾಯತ ಹಾಜರಿ ಪುಸ್ತಕದಲ್ಲಿ ಸಹಿ ಮಾಡಿ ಕಂಪ್ಯೂಟರ ಕೆಲಸ ಮಾಡಿರುತ್ತಾರೆ, ಆದರೆ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ದಿನಾಂಕ 19-05-2016 ರಿಂದ 25-05-2016 ರವರೆಗೆ ಒಟ್ಟು 6 ದಿನ ತಾನು ಕೂಲಿ ಕಾರ್ಮಿಕನಾಗಿ ಕೆಲಸ ಮಾಡಿರುವುದಾಗಿ ನಮೂದಿಸಿಕೊಂಡು ಒಟ್ಟು 1,344/- ರೂ ಹಣವನ್ನು ತನ್ನ ಸ್ವಂತಕ್ಕೆ ದುರೂಪಯೋಗ ಪಡಿಸಿಕೋಂಡಿರುತ್ತಾನೆ, ಈ ರೀತಿಯಾಗಿ ವೈಜನಾಥ ರವರು ಕಂಪ್ಯೂಟರನಲ್ಲಿ ಖೊಟ್ಟಿ ದಾಖಲಾತಿಗಳನ್ನು ಸೃಷ್ಠಿಸಿ ಸರಕಾರಕ್ಕೆ ನಂಬಿಕೆ ದ್ರೋಹ ಮಾಡಿ ಒಟ್ಟು 19,05,141/- ರೂ ಗಳನ್ನು ತನ್ನ ಸ್ವಂತಕ್ಕೆ ದುರೂಪಯೋಗ ಪಡಿಸಿಕೊಂಡು ವಂಚನೆ ಮಾಡಿರುತ್ತಾರೆ, ಈ ಬಗ್ಗೆ ನಮ್ಮ ಮೇಲಾಧಿಕಾರಿಗಳ ಆದೇಶದಂತೆ, ಮತ್ತು ಅವರ ಸೂಚನೆಯ ಮೇರೆಗೆ ದೂರು ಸಲ್ಲಿಸಲು ತಡವಾಗಿರುತ್ತದೆ, ಆದ್ದರಿಂದ ವೈಜನಾಥನ ವಿರುದ್ದ ಕಾನೂನ ರೀತಿ ಕ್ರಮ ಕೈಗೊಳ್ಳಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಹಲ್ಲೆ ಮಾಡಿ ಜಾತಿ ನಿಂದನೆ ಮಾಡಿದ ಪ್ರಕರಣ :
ಯಡ್ರಾಮಿ ಠಾಣೆ : ಶ್ರೀ ಶರಣಪ್ಪ ತಂದೆ ಮಲ್ಲಪ್ಪ ಹರಿಜನ ಸಾ|| ಹಂಗರಗಾ(ಬಿ) ತಾ|| ಜೇವರ್ಗಿ ಜಿಲ್ಲಾ|| ಕಲಬುರಗಿ ರವರು ತಮ್ಮದೊಂದು ಹೊರಿ ಕರವನ್ನು ತಮ್ಮ ಸಂಸಾರದ ಅಡಚಣೆ ಸಲುವಾಗಿ ಯಾಳಗಿ ಗ್ರಾಮದ ಮಹಿಬೂಬ ತಂದೆ ಖಾಸಿಮಸಾಬ ಚೌಧರಿ ಎಂಬುವರಿಗೆ ಮಾರಾಟ ಮಾಡಿದ್ದು ಇರುತ್ತದೆ, ಅದರಂತೆ ನಮ್ಮ  ಅಣ್ಣತಮ್ಮಕಿಯ ಚಂದ್ರಶಾ ತಂದೆ ಯಲ್ಲಪ್ಪ ಹರಿಜನ ರವರದೊಂದು ಹೊರಿ ಇದ್ದು, ಅದನ್ನು ಸಹ ತನ್ನ ಸಂಸಾರದ ಅಡಚಣೆ ಸಲುವಾಗಿ ಮೇಲ್ಕಂಡ ಚೌಧರಿಗೆ ಮಾರಾಟ ಮಾಡಿರುತ್ತಾರೆ, ಅದರಂತೆ ನಮ್ಮೂರಿನ ಕೆಲವುರು ಸಹ ತಮ್ಮ ದನಗಳನ್ನು ಮಾರಾಟ ಮಾಡಿರುತ್ತಾರೆ, ದಿನಾಂಕ 12-01-2019 ರಂದು ಯಾಳಗಿ ಗ್ರಾಮದ 1] ಮಹಿಬೂಬ ತಂದೆ ಖಾಸಿಮಸಾಬ ಚೌಧರಿ, ಮತ್ತು ಅವರ ಅಣ್ಣ 2] ಚಾಮದಸಾಬ ತಂದೆ ಖಾಸಿಮಸಾಬ ಚೌಧರಿ ರವರಿಬ್ಬರೂ ಕೂಡಿಕೊಂಡು ಒಂದು ಗೂಡ್ಸ್ ವಾಹನ ತೆಗೆದುಕೊಂಡು ನಮ್ಮೂರಿಗೆ ಬಂದು ನಮ್ಮ ಮತ್ತು ಇತರರ ಒಟ್ಟು 05 ಹೋರಿ ಕರಗಳನ್ನು ತನ್ನ ವಾಹನದಲ್ಲಿ ತುಂಬಿಕೊಂಡು ಹೋಗಿರುತ್ತಾನೆ, ನಂತರ ಬೆಳಿಗ್ಗೆ 10;00 ಗಂಟೆ ಸುಮಾರಿಗೆ ಮಹಿಬೂಬ ಚೌಧರಿ ಈತನು ನಮಗೆ ಫೋನ ಮಾಡಿ ನಿಮ್ಮೂರಿನ ಕೆಲವರು ಬಂದು ನಮ್ಮ ವಾಹನವನ್ನು ನಿಲ್ಲಿಸಿದ್ದಾರೆ ಅಂತಾ ಹೇಳಿದ್ದರಿಂದ ನಾನು ಮತ್ತು ನಮ್ಮ ತಮ್ಮನ ಮಗ ಸುಧೀರ ತಂದೆ ಚಂದ್ರಶಾ ಹರಿಜನ, ಪರಶುರಾಮ ತಂದೆ ಭಾಗಪ್ಪ ಹರಿಜನ, ಶ್ರೀಮಂತ ತಂದೆ ಸಿದ್ದಪ್ಪ ಹರಿಜನ ರವರ ಕೂಡಿಕೊಂಡು ಟಂಟಂ ತೆಗೆದುಕೊಂಡು ಯಲಗೋಡ ಸೀಮೆಯ ಜೆ.ಬಿ.ಸಿ 32 ನಂ ಕೇನಾಲ ಬ್ರಿಡ್ಜ್ ಹತ್ತಿರ ಹೋಗಿ ನೋಡಿದಾಗ ಅಲ್ಲಿ ನಮ್ಮೂರ 1] ಸಿದ್ರಾಮಪ್ಪ ತಂದೆ ಮಲ್ಲಪ್ಪ ನಾಯ್ಕೋಡಿ, 2] ಬಸಪ್ಪಗೌಡ ತಂದೆ ಸಿದ್ರಾಮಪ್ಪಗೌಡ ಜವಳಗಿ ರವರು ಕೂಡಿ ದನಗಳ ವಾಹನವನ್ನು ನಿಲ್ಲಿಸಿದ್ದರು, ನಂತರ ನಾವು ಅವರ ಹತ್ತಿರ ಹೋಗಿ ಯಾಕ ವಾಹನ ನಿಲ್ಲಿಸಿದ್ದಿರಿ, ನಾವು ನಮ್ಮ ಸಂಸಾರದ ಅಡಚಣೆ ಸಲುವಾಗಿ ಮಾರಾಟ ಮಾಡಿರುತ್ತೇವೆ, ಬೇಕಾದರೇ, ನೀವೆ ದನಗಳನ್ನು ತೆಗೆದುಕೊಂಡು ನಮಗೆ ಹಣ ಕೊಡರಿ ಅಂತಾ ಹೇಳಿದೇನು, ಆಗ ಸಿದ್ರಾಮಪ್ಪ ಈತನು ನಮಗೆ ಏ ಹೊಲೆ ಸುಳಿಮಕ್ಕಳ್ಯಾ ನೀವು ಇಲ್ಲಿಗಿ ಯಾಕ ಬಂದಿರಿ,  ನಿಮ್ಮಿಂದೆ ಇದು ಬೆಂಕಿ ಹತ್ತಿದ್ದು ಅಂತಾ ಕಾಲಿನಿಂದ ನನ್ನ  ಹೊಟ್ಟೆಗೆ ಒದ್ದನು, ಆಗ ನಾನು ನೆಲದ ಮೇಲೆ ಬಿದ್ದಾಗ ಬಸಪ್ಪಗೌಡ ಇವನು ಕಾಲಿನಿಂದ ನನ್ನ ಬೆನ್ನಿನ ಮೇಲೆ ಒದ್ದನು, ಅಷ್ಟರಲ್ಲಿ ನಮ್ಮೊಂದಿಗೆ ಇದ್ದವರು ಬಿಡಿಸಿಕೊಂಡಿರುತ್ತಾರೆ, ಇನ್ನೊಮ್ಮೆ ನಿವು, ಚೌದ್ರಿಗಳಿಗೆ ದನ ಮಾರಿದರೆ ನಿಮಗ ಜೀವ ಸಹಿತ ಬಿಡುವುದಿಲ್ಲಾ ಅಂತಾ ಅಂದು ಅಲ್ಲಿಂದ ಹೋಗಿರುತ್ತಾರೆ,  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಯಡ್ರಾಮಿ ಠಾಣೆ : ಶ್ರೀ ಪಾರ್ವತಿ ಗಂಡ ಶ್ರೀಕಾಂತ ಚವ್ಹಾಣ ಸಾ|| ಯಡ್ರಾಮಿ ತಾಂಡಾ ರವರಿಗೆ ಸಿಂದಗಿ ತಾಲೂಕಿನ ಮೋಸಳಗಿ ತಾಂಡಾದ ಶ್ರೀಕಾಂತ ತಂದೆ ಸಾಜು ಚವ್ಹಾಣ ರವರೊಂದಿಗೆ ಮದುವೆ ಮಾಡಿಕೊಟ್ಟಿದ್ದು ಇರುತ್ತದೆ, ಸದ್ಯ ನನಗೆ ಇಬ್ಬರು ಗಂಡು ಮಕ್ಕಳಿರುತ್ತಾರೆ, ನನ್ನ ಗಂಡ ಈಗ 1 ವರ್ಷದ ಹಿಂದೆ ಬೇರೆ ಮದುವೆ ಮಾಡಿಕೊಂಡಿದ್ದರಿಂದ ನಾನು ಯಡ್ರಾಮಿ ತಾಂಡಾದಲ್ಲಿ ನಮ್ಮ ತಂದೆ ತಾಯಿಯೊಂದಿಗೆ ನನ್ನ ಮಕ್ಕಳ ಸಮೇತ ವಾಸವವಾಗಿರುತ್ತೇನೆ, ಈ ಮೊದಲು ನಮ್ಮೂರಿನ  ಹಿರಿಯರಾದ, ಚಂದ್ರಶೇಖರ ಪುರಾಣಿಕ, ರಜಾಕ ಮನಿಯಾರ ರವರ ಸಮಕ್ಷಮದಲ್ಲಿ ನನ್ನ ಉಪಜೀವನ ಸಲುವಾಗಿ ನನ್ನ ಗಂಡನಿಂದ 3 ಲಕ್ಷ ರೂಪಾಯಿ ಕೊಡಿಸುವುದಾಗಿ ಮಾತನಾಡಿದ್ದು ಇರುತ್ತದೆ, ಆದರೆ ನನ್ನ ಗಂಡನಿಗೆ ಆ ಹಣವನ್ನು ಕೇಳಿದರೇ ನನಗೆ ಇಲ್ಲಿಯವರೆಗೆ ಕೊಟ್ಟಿರುವುದಿಲ್ಲಾ, ದಿನಾಂಕ 10-01-2019 ರಂದು 7;30 ಪಿ.ಎಂ ಸುಮಾರಿಗೆ ನಮ್ಮ ಮನೆಯ ಮುಂದೆ ನಾನು ಮತ್ತು ನಮ್ಮ ತಂದೆ ಮೋತು, ನಮ್ಮ ತಾಯಿ ಬನಕಿಬಾಯಿ ರವರು ಕೂಡಿಕೊಂಡು ಲೈಟಿನ ಬೆಳಕಿನಲ್ಲಿ ಮಾತಾಡುತ್ತಾ ಕುಳಿತಾಗ ನನ್ನ ಗಂಡ ಮೋಟರ ಸೈಕಲ ಮೇಲೆ ನಮ್ಮ ಹತ್ತಿರ ಬಂದು ನನಗೆ ಏ ರಂಡಿ ಈ ಮೊದಲು ನನ್ನ ಮೇಲೆ ಕೇಸು ಮಾಡಿಸಿದ್ದಲ್ಲದೆ ಈಗ ನನಗೆ ಹಣ ಕೇಳತಿಯಾ, ನಾನು ಹಣ ಕೊಡುವುದಿಲ್ಲಾ, ಇವತ್ತ ನಿನಗ ಖಲಾಸೇ ಮಾಡುತ್ತೇನೆ ಅಂತಾ ಅಂದು ನನಗೆ ಕೈ ಹಿಡಿದು ಎಳೆದಾಡಿ ಕೈಯಿಂದ ನನ್ನ ಬೆನ್ನಿನ ಮೇಲೆ ಹೊಡೆ ಬಡೆ ಮಾಡುತ್ತಿದ್ದಾಗ ನಮ್ಮ ತಂದೆಯವರು ಬಿಡಿಸಲು ಬಂದರು, ಆಗ ನನ್ನ ಗಂಡ, ನಮ್ಮ ತಂದೆಗೆ ಇದಕ್ಕೆಲ್ಲಾ ನೀನೆ ಕಾರಣ ಇದಿ ರಂಡಿ ಮಗನೆ, ಇವತ್ತ ನಿನಗ ಸಾಯಿಸೆಬಿಡತಿನಿ ಅಂತಾ ಅಂದು ನಮ್ಮ ತಂದೆಗೆ ನೆಲಕ್ಕೆ ಕೆಡವಿ ಕುತ್ತಿಗೆ ಹಿಡಿದು ಕೊಲೆ ಮಾಡುವ ಉದ್ದೇಶದಿಂದ ಅವರ ತೊರಡುಹಿಸುಕಲು ಮುಂದಾದಾಗ ನಮ್ಮ ಅಣ್ಣ ವಿಲ್ಲಾಸ, ಹಾಗು ನಮ್ಮ ತಾಂಡಾದ ವಿನೋದ ತಂದೆ ವಿಠ್ಠಲ ರಾಠೋಡ, ಆನಂದ ತಂದೆ ತಿಪ್ಪು ಪವಾರ, ದಿಲೀಪ ತಂದೆ ಶಂಕ್ರು ಪವಾರ ರವರು ಬಂದು ಬಿಡಿಸಿಕೋಂಡಿರುತ್ತಾರೆ, ಇಲ್ಲದಿದ್ದರೆ ನಮ್ಮ ತಂದೆಗೆ ಸಾಯಿಸಿ ಬಿಡುತ್ತಿದ್ದ, ಆಗ ಅಲ್ಲಿ ಹೆಚ್ಚಿನ ಜನರು ಸೇರುತ್ತಿದ್ದರಿಂದ ನನ್ನ ಗಂಡ ಅಂಜಿ ತನ್ನ ಮೋಟರ ಸೈಕಲ ನಂ ಕೆ.-28/.ಕ್ಯೂ-1377 ನೇದ್ದನ್ನು ಸ್ಥಳದಲ್ಲೆ ಬಿಟ್ಟು ಓಡಿ ಹೋಗಿರುತ್ತಾನೆ, ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

11 January 2019

KALABURAGI DISTRICT REPORTED CRIMES

ಮಟಕಾ ಜೂಜಾಟದಲ್ಲಿ ನಿರತವನ ಬಂಧನ :
ಫರತಾಬಾದ ಠಾಣೆ : ದಿನಾಂಕ 10/01/19 ರಂದು ಜೋಗುರ ಗ್ರಾಮದ ಶ್ರೀ ಬೀರಲಿಂಗೇಶ್ವರ ದೇವಸ್ಥಾನದ  ಸಾರ್ವ ಜನಿಕ ಸ್ಥಳದಲ್ಲಿ ಮಟಕಾ ಜೂಜಾಟ ಆಡುತ್ತಿದ್ದ ಬಗ್ಗೆ ಬಾತ್ಮ ಬಂದ ಮೇರೆಗೆ ಪಿ.ಎಸ್.ಐ. ಫರತಾಬಾದ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಜೋಗುರು ಗ್ರಾಮಕ್ಕೆ ಹೋಗಿ ಬಾತ್ಮ ಸ್ತಳದ ಮರೆಯಲ್ಲಿ ನಿಂತು ನೋಡಲು ಒಬ್ಬ ವ್ಯಕ್ತಿ ಒಂದು ರೂಪಾಯಿಗೆ 80/- ರೂಪಾಯಿ ಕೊಡುವ ಕರಾರಿನಲ್ಲಿ ಮಟಕಾ ಜೂಜಾಟ ಆಡುತ್ತಿದ್ದುದನ್ನು ಖಚಿತಪಡಿಸಿಕೊಂಡು ದಾಳಿ ಮಾಡಿ ಹಿಡಿದು ಅವನ ಹೆಸರಿ ವಿಳಾಸ ವಿಚಾರಿಸಲು ಶಿವಶರಣಪ್ಪ ತಂದೆ ಕರಿವೀರಪ್ಪಾ ಮಾಲಿಪಾಟೀಲ ಸಾ; ಜೋಗುರ  ಅಂತಾ ತಿಳಿಸಿದ್ದು ಸದರಿಯವನಿಂದ ಮಟಕಾ ಜೂಜಾಕ್ಕೆ ಬಳಸಿದ ನಗದು ಹಣ 520/-ರೂ,  ಒಂದು ಬಾಲ ಪೇನ್ನ್ ಅ.ಕಿಃ 00=0, ಎರಡು ಮಟಕಾ ಚೀಟಿಗಳು ಅ.ಕಿ 00=00 ಜಪ್ತಿ ಪಡಿಸಿ ಕೊಂಡು ಸದರಿಯವನೊಂದಿಗೆ ಫರತಾಬಾದ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.  
ಹಲ್ಲೆ ಪ್ರಕರಣ :
ಕಮಲಾಪೂರ ಠಾಣೆ : ಶ್ರೀ  ಅತ್ತರ ಪಾಶಾ ತಂದೆ ಸೈಯ್ಯದ ಗುಲಾಮ ಹುಸೇನ್ ಸಾ|| ಕಲಬುರಗಿ ರವರದು  ಕಮಲಾಪೂರದಲ್ಲಿನ ಸರ್ವೆ ನಂ: 393, 394 ಆಗಿದ್ದು ಇದರಲ್ಲಿ ನಮ್ಮ ಮನೆಗಳಿದ್ದು ಮತ್ತು ಸದರಿ ಹೊಲಗಳು ಸುಮಾರು 50 ವರ್ಷಗಳ ಮೇಲ್ಪಟ್ಟು ಕಬ್ಜೆದಾರರಿದ್ದು ಅದರ ಪಟ್ಟೆದಾರರು ನಮ್ಮ ತಂದೆಯವರಿದ್ದು , ಅವರ ನಿಧನದ ನಂತರ ನಾವೂ 06 ಜನ ಅಣ್ಣ-ತಮ್ಮಂದಿರ ಹೆಸರಿಗೆ ಪಟ್ಟಾ ಆಗಿರುತ್ತದೆ.  ದಿನಾಂಕ: 09/01/2019 ರಂದು ಸಾಯಂಕಾಲ 06:00 ಗಂಟೆಯ ಸುಮಾರಿಗೆ ಕಮಲಾಪೂರದಲ್ಲಿ ದಿನದಂತೆ ನಮ್ಮ ಹೊಲಕ್ಕೆ ನಮ್ಮ ಕಾರ್ ನಂ: ಎಮ್ ಹೆಚ್ 02 ಎ ವಾಯ್ 6359 ಇದರಲ್ಲಿ ಹೋಗಿ ನಮ್ಮ ಹೊಲದಲ್ಲಿ ನಿಲ್ಲಿಸಿ ನಾನು ನಮ್ಮ ತಮ್ಮಂದಿರಾದ 1) ತಾಹೇರ್ ಪಾಷಾ , 2) ಅಮೀರ ಖೂಸ್ರೂ 3) ಅಮೀರ ಪಾಷಾ ಮತ್ತು ನನ್ನ ಮಗ ತಾಲಿಬ ಖತೀಬ ತಂದೆ ಅಥರಪಾಶಾ ಎಲ್ಲರೂ ಹೊಲದಲ್ಲಿ ಹೋಗಿ ಒಂದು ಬೋರ್ಡ ನೋಡುತ್ತಾ ನಿಂತಾಗ ಒಮ್ಮೇಲೆ 15 ರಿಂದ 20 ಜನರು ತಮ್ಮ ಕೈಗಳಲ್ಲಿ , ರಾಡು ತಲ್ವಾರುಗಳು & ಬಡಿಗೆಗಳನ್ನು ಹಿಡಿದುಕೊಂಡು ನಮಗೆ ಬೈಯುತ್ತಾ ಅದರಲ್ಲಿದ್ದ 1) ಮೈನೋದ್ದಿನ್ ಗೂಳಿ ಎಂಬುವವನು ರಾಡಿನಿಂದ ನಮ್ಮ ತಮ್ಮ ಅಮೀರ ಖೂಸ್ರೂನ ತಲೆಯ ಹಿಂಭಾಗಕ್ಕೆ ಜೋರಾಗಿ ಹೊಡೆದನು, 2) ಸತ್ತಾರ ಇವನು ತಲ್ವಾರದಿಂದ ಅಮೀರ ಖೂಸ್ರೂ ಇವನ ಕುತ್ತಿಗೆಗೆ ಖಲ್ಲಾಸ್ ಮಾಡುವ ಉದ್ದೇಶದಿಂದ ಹೊಡೆಯುವಾಗ ತಪ್ಪಿಸಿಕೊಂಡಿರುವುದರಿಂದ ಅವನ ಬೆನ್ನಿಗೆ ತಲ್ವಾರ ಹಿಂದಿನ ಭಾಗದಿಂದ ಗಾಯಗೊಂಡಿರುತ್ತಾನೆ. 3) ಲತೀಫ್ ಎಂಬುವವನು ಅಮೀರ ಖೂಸ್ರೋಗೆ , ನನಗೆ & ತಾಹೇರ ಪಾಷಾನಿಗೆ ಕೈಯಿಂದ ಮುಷ್ಠಿ ಮಾಡಿ ಮತ್ತು ಕಾಲಿನಿಂದ ಹೊಡೆದಿರುತ್ತಾನೆ, 4) ರಶೀದ ಎಂಬುವವನು ತಾಹೇರ ಪಾಷಾನಿಗೆ ರಾಡಿನಿಂದ & ಬಡಿಗೆಯಿಂದ ಮತ್ತು 5) ಸಲೀಮ & 6) ಖಾಜಿ ಎಂಬುವ ಇವರೀಬ್ಬರೂ  ತಾಹೇರ್ ಪಾಷಾನಿಗೆ ತಲೆಗೆ, ಎದೆಗೆ, ಕಾಲಿಗೆ & ಹೊಟ್ಟೆಗೆ ಹೊಡೆದಿರುತ್ತಾರೆ. 7) ಇಬ್ರಾಹೀಮ್ 8) ಮುನ್ನಾ ಸೌದಾಗರ್ 9) ಮಸ್ತಾನ ಟೀಚರ್ 10) ಮುಕ್ರಂ ಧಾಬಾ & ಇನ್ನು 8-10 ಜನರು ಸದರಿಯವರ ಜೊತೆಗೆ ಇದ್ದು ಇವರನ್ನು ಇವತ್ತು ಖಲ್ಲಾಸ್ ಮಾಡಿರಿ ಎಂದು ಮೇಲಿನವರಿಗೆ ಚೀರುತ್ತಾ ಹೇಳಿ ಅವರು ಕೂಡ ನಾವೂ ಕೆಳಗೆ ಬಿದ್ದಾಗ ಕಾಲಿನಿಂದ ಮತ್ತು ರಾಡಿನಿಂದ ಹೊಡೆದಿರುತ್ತಾರೆ. ಮತ್ತು 11) ಖದೀರ ಚೊಂಗೆ ಇವರು , ಇವರಿಗೆ ಖಲ್ಲಾಸ್ ಮಾಡಿರಿ ನಾನು ನೋಡಿಕೊಳ್ಳುತ್ತೇನೆ ಎಂದು ಹೇಳಿದ್ದಾನೆ ಎಂದು ಚಿರಾಡುತ್ತಿದ್ದರು , ಸದರಿ ಇದರಲ್ಲಿ ನನ್ನ ತಮ್ಮ ತಾಹೇರ್ ಪಾಶಾ ಇವರ ಮೊ.ನಂ: 9739748728 & ಕಿಶೆಯಲ್ಲಿನ 50,000/- ರೂ ಜಗಳದಲ್ಲಿ ಬಿದ್ದು ಕಳೆದು ಹೋಗಿರುತ್ತವೆ, ಅಷ್ಟರಲ್ಲಿಯೆ ಕಮಲಾಪೂರ ಗ್ರಾಮದವರಾದ 1) ಈರಣ್ಣ 2) ಡಾ|| ಫಾರುಖ ಬೇಗ ಮತ್ತು ಇತರರು ಜಗಳ ಬಿಡಿಸಲು ಬಂದಾಗ ನಾನು ನನ್ನ ಮಕ್ಕಳು ಅಲ್ಲಿಂದ ತಪ್ಪಿಸಿಕೊಂಡು ಕಾರಿನಲ್ಲಿ ಪೊಲೀಸ್ ಠಾಣೆಗೆ ಹೋಗುವಷ್ಟರಲ್ಲಿ ಆ ಗುಂಪಿನ 5-6 ಜನರು ನಮ್ಮ ಕಾರ್ ತಡೆದು ನನಗೆ ಕುತ್ತಿಗೆಗೆ ಹಿಡಿದು ಎಳೆದಾಡಿ  ಕಾರು ಕಸಿದುಕೊಂಡಿರುತ್ತಾರೆ.  ನಾವು ಪೊಲೀಸ್ ಠಾಣೆಗೆ ಹೋದರು ಇವರೇಲ್ಲರೂ ಠಾಣೆಯಲ್ಲಿ ಬಂದು ನಮಗೆ ಖಲ್ಲಾಸ್ ಮಾಡುತ್ತೇವೆ , ಮತ್ತು ನೀವು ಇಲ್ಲಿಂದ ಹೇಗೆ ಹೋಗುತ್ತಿರಿ ಮಕ್ಕಳೆ ಎಂದು ಹೇಳಿ ಠಾಣೆಯಲ್ಲಿ ನಮಗೆ ಬೆದರಿಕೆ ಹಾಕಿ ಮುಂದೆ ಕೇಸ್ ಮಾಡಬಾರದೆಂದು ಅಂಜಿಸಿ ಬಿಳಿ ಹಾಳೆಯ ಮೇಲೆ ಸಹಿಯನ್ನು ಒತ್ತಾಯ ಪೂರ್ವಕವಾಗಿ ಪಡೆದಿರುತ್ತಾರೆ. ಆದುದರಿಂದ ದಯಾಳುಗಳಾದ ತಾವೂ ನಮ್ಮ ಪ್ರಾಣಗಳಿಗೆ ರಕ್ಷಣೆ ನೀಡಿ ಸದರಿಯವರ ವಿರುದ್ಧ ಕಾನೂನು ರೀತಿಯ ಕ್ರಮ ಕೈಕೊಳ್ಳಲು ವಿನಂತಿ ಅಂತ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.