POLICE BHAVAN KALABURAGI

POLICE BHAVAN KALABURAGI

07 January 2019

KALABURAGI DISTRICT REPORTED CRIMES

ಎಟಿಎಮ್ ಕಳ್ಳತನ ಮಾಡಲು ಪ್ರಯತ್ನಿಸುತ್ತಿದ್ದವರ ಬಂಧನ :
ರಾಘವೇಂದ್ರ ನಗರ ಠಾಣೆ : ದಿನಾಂಕ: 05/01/2019 ರಂದು ರಾತ್ರಿ 11:15 ಗಂಟೆ ಸುಮಾರಿಗೆ ಎ ಉಪ ವಿಭಾಗದ ರಾತ್ರಿ ಗಸ್ತು ಚೆಕಿಂಗ್ ಕುರಿತು ಪಿ.ಐ ಬ್ರಹ್ಮಪೂರ ಸಾಹೇಬರು ಮತ್ತು ನಮ್ಮ ಠಾಣೆಯ ಪಂಡಿತ ಪಿಸಿ-439, ಸುರೇಶ ಪಿಸಿ-959 ರವರೊಂದಿಗೆ ರಾತ್ರಿ ಗಸ್ತು ಚೆಕಿಂಗ್ ಹಾಗೂ ಪೆಟ್ರೊಲಿಂಗ್ ಮಾಡುತ್ತಾ ಜಗತ್ ಏರಿಯಾ, ಸಾರ್ವಜನಿಕ ಉದ್ಯಾನ ವನಲಾಲಗೇರಿ ಕ್ರಾಸ್ ಕಡೆಗೆ ತಿರುಗಾಡಿ ನಂತರ ರಾಘವೇಂದ್ರ ನಗರ ಪೊಲೀಸ ಠಾಣೆ ವ್ಯಾಪ್ತಿಯ ಗಂಗಾ ನಗರ ಹಾಗೂ ಚಿಂಚೋಳ್ಳಿ ಲೇಔಟ್ ಇತ್ಯಾಧಿಗಳ ಕಡೆ ತಿರುಗಾಡಿ  ದಿನಾಂಕ: 06/01/2019 ರಂದು ಬೆಳಗಿನ ಜಾವ 04:00 ರ ಸುಮಾರಿಗೆ ರಾಘವೇಂದ್ರ ನಗರ ಠಾಣೆಯ ರಾತ್ರಿ ಗಸ್ತು ಚೆಕಿಂಗ್ ಅಧಿಕಾರಿಗಳಾದ ಎ.ಪೌಲ್ ಎ..ಎಸ್.ಐ ಹಾಗೂ ರಾತ್ರಿ ಗಸ್ತು ಕರ್ತವ್ಯದಲ್ಲಿದ್ದ ಆನಂದ ಪಿಸಿ- 1126 ಹಾಗೂ ಚಂದ್ರಕಾಂತ ಹೋಮ ಗಾರ್ಡ ನಂ.-26 ಹಾಗೂ ಸಂಗಮನಾಥ ಹೋಮ ಗಾರ್ಡ ನಂ.-253 ಇವರೊಂದಿಗೆ ಪೆಟೊಲಿಂಗ್ ಮಾಡುತ್ತಾ ಅಂದಾಜು 04:30 ಗಂಟೆ ಸುಮಾರಿಗೆ ಶಹಬಜಾರ  ನಾಕ ರೋಡದಿಂದ ಆಳಂದ ಚೆಕ್ ಪೋಸ್ಟಕ್ಕೆ ಹೋಗುವ ರೋಡಿನಿಂದ ಪೆಟ್ರೋಲಿಂಗ್ ಮಾಡುತ್ತಾ ಆಳಂದ ಚೆಕ್ ಪೋಸ್ಟ್ ಕಡೆಗೆ ಹೋಗುವಾಗ ರೋಡಿನ ಎಡಗಡೆ ಇರುವ ಶಾಂತಪ್ಪ ಕಡಗಂಚಿ ಇವರ ಕಾಂಪ್ಲೆಕ್ಸದ ಕೆನರಾ ಬ್ಯಾಂಕ ಎ.ಟಿ.ಎಮ್.ದ ಹತ್ತಿರ ಹೋದಾಗ ಅಲ್ಲಿ ಆ ಎ.ಟಿ.ಎಮ್.ನ ಬಾಗಿಲು ತೆರೆದು ಮೂರು ಜನ ಒಳಗೆ ಪ್ರವೇಶ ಮಾಡಿ ತಮ್ಮ ಕೈಯಲ್ಲಿದ್ದ ರಾಡ್, ಗುದ್ದಲಿಯ ಕಟ್ಟಿಗೆ ಕಾವುಗಳನ್ನು ಹಿಡಿದುಕೊಂಢು ಎ.ಟಿ.ಎಮ್. ಒಡೆದು ಹಣ ಕಳ್ಳತನ ಮಾಡಲು ಪ್ರಯತ್ನಿಸುವಾಗ ಆಗ ನಾವು ಏನು ಮಾಡುತ್ತಿದ್ದಾರೆ ಅಂತ ಹೋಗಿ ನೋಡಲು ಸದರಿಯವರು ನಮ್ಮನ್ನು ನೋಡಿದವರೆ ಎ.ಟಿ.ಎಮ್.ನಿಂದ ಹೊರಗೆ ಬಂದು ಓಡಲು ಪ್ರಯತ್ನಿಸುತ್ತಿರುವಾಗ ಅವರನ್ನು ಸಿಬ್ಬಂಧಿಯವರ ಸಹಾಯದಿಂದ 3 ಜನರನ್ನು ಹಿಡಿದು ಅವರ ಹೆಸರು, ವಿಳಾಸ, ವಿಚಾರಿಸಿ ಶೋಧನೆ ಮಾಡಲಾಗಿ ಅವರು ತಮ್ಮ ಹೆಸರು ಮೊದಲು ಬೇರೆ ಬೇರೆಯಾಗಿ ಹೇಳಿ ನಂತರ ತಮ್ಮ ನಿಜವಾದ ಹೆಸರು 1) ಸಮೀರ ತಂದೆ ಇಕ್ಬಾಲ ಟಪ್ಪಾ ಸಾ: ಅಂಬೇಡ್ಕರ ಸರ್ಕಲ್ ಹತ್ತಿರ ದೇವಲ ಗಾಣಗಾಪೂರ 2) ಆಸೀಪ ತಂದೆ ಮಲಂಗ ಸಾಬ ಮಕಂದಾರ ಸಾ: ಬಸ್ ಸ್ಟ್ಯಾಂಡ್ ಹತ್ತಿರ ಮಹಾರಾಜ ಹೋಟೇಲ ಪಕ್ಕದಲ್ಲಿ ದೇವಲಗಾಣಗಾಪೂರ 3) ಹುಸೇನ ತಂದೆ ಬಾಬು ಮುಜಾವರ್ ಸಾ: ಜಾಮೀಯಾ ಮಸೀದ ಹತ್ತಿರ ಭಾರತ್ ಚೌಕ ದೇವಲ ಗಾಣಗಾಪೂರ ಅಂತ ತಿಳಿಸಿದ್ದು ಅವರ ಹತ್ತಿರ ಪರೀಶಿಲಿಸಿ ನೋಡಲಾಗಿ ಒಂದು ರಾಡು ಹಾಗೂ ಎರಡು ಗುದ್ದಲಿಯ ಕಟ್ಟಿಗೆಯ ಕಾವುಗಳು ಇದ್ದು ಇವುಗಳನ್ನು ಎಲ್ಲಿಂದ ಯಾತಕ್ಕಾಗಿ ತಂದಿರುವಿರಿ ಅಂತ ವಿಚಾರಿಸಲು ತಾವು ಕಲಬುರಗಿ ನಗರದ ಎಲ್ಲಿಯಾದರೂ ಎ.ಟಿ.ಎಮ್. ಒಡೆದು ಹಣ ಕಳ್ಳತನ ಮಾಡಿಕೊಂಡು ಹೋಗಲು ತಾವು ಒಂದು ಡಿಯೋ ಮೊಟರ ಸೈಕಲ ನಂ. ಕೆಎ-22-ಇವಿ-6831 ನೇದ್ದರ ಮೇಲೆ ಬಂದಿದ್ದು ನಾವು ಎಲ್ಲಾ ಕಡೆಗೆ ಕಲಬುರಗಿ ನಗರದಲ್ಲಿ ತಿರುಗಾಡಿದ್ದು ಜನರು ಹಾಗೂ ಎ.ಟಿ.ಎಮ್. ಹತ್ತಿರ ಗಾರ್ಡಗಳು ಇರುವದರಿಂದ ನಾವು ಎಲ್ಲಿಯು ಕಳ್ಳತನ ಮಾಡಲು ಸಾಧ್ಯವಾಗದ ಕಾರಣ ಇಲ್ಲಿ ಬಂದು ಎ.ಟಿ.ಎಮ್. ಒಡೆದು ಹಣ ಕಳ್ಳತನ ಮಾಡ ಬೇಕು ಅಂತ ಪ್ರಯತ್ನಿಸುವಾಗ ತಮ್ಮ ಕೈಯಲ್ಲಿ ಸಿಕ್ಕಿ ಬಿದ್ದಿರುತ್ತೇವೆ ಅಂತ ತಿಳಿಸಿದರು. ಕಾರಣ ಸದರಿ ಆರೋಪಿತರು ಎ.ಟಿ.ಎಮ್. ಒಡೆದು ಹಣ ಕಳ್ಳತನ ಮಾಡಿಕೊಂಡು ಹೋಗಲು ತೆಗೆದುಕೊಂಡು ಬಂದ ರಾಡ್, ಗುದ್ದಲಿಯ ಕಟ್ಟಿಗೆ ಕಾವು ಮತ್ತು ಡಿಯೋ ಮೊಟರ ಸೈಕಲ ನಂ.ಕೆಎ-22-ಇವಿ-6831 ನೇದ್ದು ಮತ್ತು ಎ.ಟಿ.ಎಮ್ ಒಡೆದು ಹಣ ಕಳ್ಳತನ ಮಾಡಲು ಪ್ರಯತ್ನಿಸಿದ ಆರೋಪಿತರೊಂದಿಗೆ ರಾಘವೇಂದ್ರ ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.  
ಅಪರಿಚಿತ ವ್ಯಕ್ತಿ ಅಸ್ವಾಭಾವಿಕ ಸಾವು ಪ್ರಕರಣ :
ಆಳಂದ ಠಾಣೆ : ದಿನಾಂಕ 05/01/2019 ರಂದು ಶ್ರೀ ಅಯುಬಖಾನ ಎ.ಎಸ್.ಐ ಆಳಂದ ಪೊಲೀಸ್ ಠಾಣೆ  ಡೇತ್ ಎಂ,ಎಲ್.ಸಿ ಕುರಿತು ಇಂದು ಜಿಲ್ಲಾ ಸರಕಾರಿ ಆಸ್ಪತ್ರೆ ಕಲಬುರಗಿಯ ಶವಗಾರ ಕೊಣೆಗೆ ಭೇಟಿ ಕೊಟ್ಟು ನೋಡಲಾಗಿ ಒಬ್ಬ ಅಪರಿಚೀತ ಗಂಡು ಮನುಷ್ಯ ಅಂದಾಜು 55 ರಿಂದ 60 ವರ್ಷ ಮನುಷ್ಯನು ಆಸ್ಪತ್ರೆಯಲ್ಲಿ ಉಪಚಾರ ಫಲಕಾರಿಯಾಗದೇ ಮೃತಪಟ್ಟಿದ್ದು ಇರುತ್ತದೆ. ಸದರಿ ಮೃತನ ವ್ಯಕ್ತಿಯ ಹೆಸರು ವಿಳಾಸ ಗೋತ್ತಾಗಿರುವದಿಲ್ಲ, ಮೃತನು ಗೋದಿ ಮೈ ಬಣ್ಣ ಹೊಂದಿದ್ದು, ತಲೆಯ ಮೇಲೆ ಅಂದಾಜು ಎರಡು ಇಂಚು ಬಿಳಿ ಕೂದಲು ಇದ್ದು, & ಮುಖದ ಮೇಲೆ ಬಿಳಿ ದಾಟಿಗಳು ಇರುತ್ತವೆ ಮತ್ತು ಮೈ ಮೇಲೆ ಕೆಂಪು ಬಣ್ಣದ ಕಪ್ಪಗೇರೆವುಳ್ಳ ಪುಲ ಶರ್ಟ & ಕಪ್ಪ ಬಣ್ಣದ ಪ್ಯಾಂಟ ಧರಿಸಿದ್ದು ಸಾಧಾರಣ ಮೈ ಕಟ್ಟು ಹೊಂದಿರುತ್ತಾನೆ. ವೈದ್ಯಾಧೀಕಾರಿಗಳಲ್ಲಿ ವಿಚಾರಿಸಲಾಗಿ ಮೃತನು ಉಪಚಾರ ಕುರಿತು ದಿನಾಂಕ 02/01/2019 ರಂದು 10;00 ಎ.ಎಂಕ್ಕೆ ಉಪಚಾರ ಕುರಿತು ಸರಕಾರಿ ಆಸ್ಪತ್ರೆ ಆಳಂದ ಕ್ಕೆ ಸೇರಿಕೆಯಾಗಿದ್ದು ನಂತರ ಅದೇ ದಿನ ಹೆಚ್ಚಿನ ಉಪಚಾರ ಕುರಿತು ಜಿಲ್ಲಾ ಸರಕಾರಿ ಆಸ್ಪತ್ರೆ ಕಲಬುರಗಿಗೆ ಬಂದು ಸೇರಿಕೆ ಯಾಗಿದ್ದು ನಂತರ ಆಸ್ಪತ್ರೆಯಲ್ಲಿ ಉಪಚಾರ ಫಲಕಾರಿಯಾಗದೇ ದಿನಾಂಕ 04/01/2018 ರಂದು 04;30 ಪಿ,ಎಂಕ್ಕೆ ಮೃತಪಟ್ಟಿರುತ್ತಾನೆ ಅಂತಾ ವೈದ್ಯರು ತಿಳಿಸಿದ್ದು ಇರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

04 January 2019

KALABURAGI DISTRICT REPORTED CRIMES

ಹರಿತವಾದ ಆಯುಧ ಹಿಡಿದುಕೊಂಡು ಜನರಲ್ಲಿ ಭಯಭೀತಿಗೊಳಿಸಿದ ಪ್ರಕರಣ :
ಕಮಲಾಪೂರ ಠಾಣೆ : ದಿನಾಂಕ:01.01.2019 ರಂದು ರಾತ್ರಿ 08.30 ಗಂಟೆಯ ಸೂಮಾರಿಗೆ ಸದರಿ ಖಾಜಿ ಮೋಹಲ್ಲಾ ಕಮಲಾಪೂರನ ನಿವಾಸಿತನಾದ ಸೈಯದ್ ಇಮ್ರಾನ ತಂದೆ ನಬಿಸಾಬ ನಾಗೂರ ಈತನು ತನ್ನ ಹುಟ್ಟು ಹಬ್ಬದ ಪಾರ್ಟಿಯನ್ನು ಸದರಿ ಏರಿಯಾದ ಮೈನೋದ್ದೀನ ಚೌದರಿ ಇವರ ಮನೆಯ ಮುಂದಗಡೆ ರೋಡಿನ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಆಚರಣೆಯನ್ನು ಮಾಡಿಕೊಂಡಿದ್ದು. ಸದರಿ ಹುಟ್ಟು ಹಬ್ಬದ ಆಚರಣೆಯ ಕಾಲಕ್ಕೆ ಸೈಯದ್ ಇಮ್ರಾನ ನಾಗೂರ ಈತನು ತನ್ನ ಕೈಯಲ್ಲಿ ಉದ್ದವಾದ ತಲವಾರ ಹಿಡಿದು ಕೇಕ ಕತ್ತಿರಿಸಿದ್ದು. ಅಲ್ಲದೆ ಆತನ ಗೆಳೆಯರಾದ ಕಲಕೋರಾ ದೇವಿ ತಾಂಡಾದ ಆಕಾಶ ತಂದೆ ಜೈಚಂದ ಜಾಧವ ಈತನು ತನ್ನ ಕೈಯಲ್ಲಿ ತಲವಾರ ಹಿಡಿದುಕೊಂಡಿದ್ದು. ಅದರಂತೆ ಕಲಬುರಗಿಯಿಂದ ಬಂದಿದ್ದ ಮಜರ್ ಅಲಿ @ ಮಜ್ಜುಭಾಯಿ ಇನಾಮದಾರ ಈತನು ತನ್ನ ಕೈಯಲ್ಲಿ ಒಂದು ಹರಿತವಾದ ಜೆಂಬ್ಯಾ ಹಿಡಿದು ಅದರಂತೆ ಇನ್ನೂ 10-15 ಜನ ಸೈಯದ್ ಇಮ್ರಾನ ನಾಗೂರ ಈತನ ಗೆಳೆಯರು ಕೂಡಿಕೊಂಡು ಹುಟ್ಟು ಹಬ್ಬದ ಆಚರಣೆ ಮಾಡಿದ್ದು. ಕೇಕ ಕತ್ತರಿಸಿದ ನಂತರ ಅಕ್ರಮವಾಗಿ ಆಯುಧಗಳನ್ನು ಹಿಡಿದುಕೊಂಡಿದ್ದವರು ಚಿರಾಡುತ್ತ ಒದರಾಡುತ್ತ ಸಾರ್ವಜನಿಕರಿಗೆ ಭಯ ಹುಟ್ಟಿಸುವ ರೀತಿಯಲ್ಲಿ ಹುಟ್ಟು ಹಬ್ಬದ ಆಚರಣೆಯನ್ನು ಮಾಡಿಕೊಂಡಿದ್ದು. ಸದ್ಯ ಮೋಹಲ್ಲಾದ ಜನರು ಏರಿಯಾದಲ್ಲಿ ಭಯದಿಂದ ತಿರುಗಾಡುತ್ತಿರುವ ಬಗ್ಗೆ ಹೇಳಿದ್ದು. ಅಲ್ಲದೆ ಹುಟ್ಟು ಹಬ್ಬದ ಆಚರಣೆ ಕಾಲಕ್ಕೆ ಗುಪ್ತವಾಗಿ ತೆಗೆದ ಕೈಯಲ್ಲಿ ತಲವಾರ ಹಾಗೂ ಜಂಬ್ಯಾ ಹಿಡಿದುಕೊಂಡಿರುವ 3 ಭಾವ ಚಿತ್ರಗಳನ್ನು ಹಾಜರ ಪಡಿಸಿದ್ದು. ಅದನ್ನು ಪಡೆದುಕೊಂಡು ಇಂದೇ 04.00 ಪಿ.ಎಮ್.ಕ್ಕೆ ಠಾಣೆಗೆ ಮರಳಿ ಬಂದು ಪೋಲಿಸ್ ಬಾತ್ಮಿದಾರನ್ನು ಕೋಟ್ಟ 3 ಭಾವ ಚಿತ್ರಗಳನ್ನು ಹಾಜರ ಪಡಿಸುತ್ತಿದ್ದು. ಕಾರಣ ಮಾನ್ಯರು ಸದರಿ ಸೈಯದ್ ಇಮ್ರಾನ ನಾಗೂರ ಹಾಗೂ ಆತನ ಗೆಳೆಯರಾದ ಆಕಾಶ ಜಾಧವ ಮತ್ತು ಮಜರ್ ಅಲಿ @ ಮಜ್ಜುಭಾಯಿ ಇನಾಮದಾರ ಇವರ ಅಕ್ರಮವಾಗಿ ಹೊಂದಿದ್ದ ಆಯುಧಗಳನ್ನು ಕೈಯಲ್ಲಿ ಹಿಡಿದು ಸಾರ್ವಜನಿಕರಿಗೆ ಭಯ ಹುಟ್ಟಿಸುವ ರೀತಿಯಲ್ಲಿ ಹುಟ್ಟು ಹಬ್ಬದ ಆಚರಣೆ ಮಾಡಿದ ಮೇಲೆ ಹೇಳಿದ ಮುರು ಜನರ ವಿರುದ್ದ ಕಾನೂನ ಕ್ರಮ ಜರುಗಿಸಬೇಕು ಅಂತಾ ಶ್ರೀ ಜಗದೀಶ ಸಿಪಿಸಿ.192 ಕಮಲಾಪೂರ ಠಾಣೆ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಫರತಾಬಾದ ಠಾಣೆ : ದಿನಾಂಕ 03/01/18ರಂದು ರಾಷ್ಟ್ರೀಯ ಹೇದ್ದಾರಿ 218ರ ಸಿರನೂರ ಕ್ರಾಸ ಹತ್ತಿರ ರೋಡಿನ ಮೇಲೆ ಕಾರ ನಂ ಕೆಎ-32 ಎನ್-6936 ನೇದ್ದರ ಚಾಲಕ ಕಾಶಪ್ಪ ತಂದೆ ಪ್ರಭಾಕರ್ ಜಾಜಿ ತನ್ನ ವಶದಲ್ಲಿದ್ದ  ಕಾರನ್ನು  ಅತೀ ವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸಿದ್ದರಿಂದ ನಿಯಂತ್ರಣ ತಪ್ಪಿ ರೋಡಿನ ಕೆಳಗೆ ತಗ್ಗಿನಲ್ಲಿ ಹೊಗಿದ್ದರಿಂದ ಶ್ರೀ ಆಸಿಸ ತಂದೆ ವಿಜಯಕುಮಾರ ಜಾಜಿ ಸಾಃ ಅಳಂದ ಕಾಲೊನಿ ಕಲಬುರಗಿ ಮತ್ತು  ಇತರರಿಗೆ ಗಾಯಗಳಾಗಿರುತ್ತವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

03 January 2019

KALABURAGI DISTRICT REPORTED CRIMES

ಅಪಘಾತ ಪ್ರಕರಣಗಳು :
ಅಫಜಲಪೂರ ಠಾಣೆ : ದಿನಾಂಕ 19-10-2018 ರಂದು ಬೆಳಿಗ್ಗೆ ಶ್ರೀ ಬಸವರಾಜ ತಂದೆ ಯಶವಂತ ಬಾಸ್ಲೆಗಾಂವಕರ್ ಸಾ|| ಬಾಸ್ಲೇಗಾಂವ ತಾ|| ಅಕ್ಕಲಕೋಟ ಜಿ|| ಸೋಲ್ಲಾಪೂರ ರವರು ಮತ್ತು ನನ್ನ ತಂದೆಯಾದ ಯಶವಂತ ತಂದೆ ಭೀಮಶಾ ಬಾಸ್ಲೇಗಾಂವಕರ್ ಹಾಗೂ ತಾಯಿಯಾದ ಅಂಬುಬಾಯಿ ಹಾಗೂ ನನ್ನ ತಂದೆಯ ಗೆಳೆಯನವರಾದ ದವಲಪ್ಪ ತಂದೆ ದತ್ತಪ್ಪ ಜಮಾದಾರ ರವರೆಲ್ಲರೂ ಕೂಡಿಕೊಂಡು ಮೋಟರ ಸೈಕಲಗಳ ಮೇಲೆ ಘತ್ತರಗಾ ಶ್ರೀ ಭಾಗ್ಯವಂತಿ ದೇವಸ್ಥಾನಕ್ಕೆ ಹೋಗಿರುತ್ತೇವೆ. ಘತ್ತರಗಾಕ್ಕೆ ಹೋಗುವಾಗ ನಾನು ಮತ್ತು ದವಲಪ್ಪ ಜಮಾದಾರ ರವರು ನಮ್ಮ ಮೋಟರ ಸೈಕಲ ಮೇಲೆ ಹಾಗೂ ನನ್ನ ತಂದೆ ಹಾಗೂ ತಾಯಿಯವರು ನಮ್ಮ ತಂದೆಯ ಗೆಳೆಯರಾದ ಗೌರಿಶಂಕರ ಕೋಳಿ ರವರ ಮೋಟರ ಸೈಕಲ ನಂ ಎಮ್.ಹೆಚ್-13 ಡಿಸಿ-1358 ನೇದ್ದರ ಮೇಲೆ ಹೋಗಿರುತ್ತೇವೆ. ದರ್ಶನ ಮಾಡಿಕೊಂಡು ಮರಳಿ ನಮ್ಮ ಗ್ರಾಮಕ್ಕೆ ಹೋಗುತ್ತಿರುವಾಗ ಸಾಯಂಕಾಲ 4:30 ಗಂಟೆಯ ಸುಮಾರಿಗೆ ಅಫಜಲಪೂರ  ಘತ್ತರಗಾ ರೋಡಿಗೆ ಇರುವ ಹಿಂಚಗೇರಾ ಗ್ರಾಮದ ತಿರುವಿನಲ್ಲಿ ಹೋಗುತ್ತಿದ್ದಾಗ ಮುಂದೆ ಹೊಗುತ್ತಿದ್ದ ನಮ್ಮ ತಂದೆ ಮೋಟರ ಸೈಕಲನ್ನು ಅತಿವೇಗವಾಗಿ ಮತ್ತು ನಿರ್ಲಕ್ಷತನದಿಂದ ನಡೆಸಿದ್ದರಿಂದ ಹಿಂದಿನ ಸೀಟಿನಲ್ಲಿ ಕುಳಿತಿದ್ದ ನನ್ನ ತಾಯಿ ರೋಡಿಗೆ ಇರುವ ಸ್ಪೀಡ್ ಬ್ರೇಕ್ಕರ್ ಮೇಲೆ  ಕೆಳಗೆ ಬಿದ್ದಿದ್ದರಿಂದ ತಲೆಗೆ ಭಾರಿ ಒಳಪೆಟ್ಟಾಗಿ ಪ್ರಜ್ಞೆ ತಪ್ಪಿರುತ್ತದೆ. ಆಗ ನಾವು 108 ಅಂಬ್ಯೂಲೆನ್ಸ ವಾಹನಕ್ಕೆ ಪೋನ್ ಮಾಡಿದ್ದು ಸ್ಥಳಕ್ಕೆ 108 ವಾಹನ ಬಂದ ನಂತರ ಅದರಲ್ಲೆ ಹಾಕಿಕೊಂಡು ಅಫಜಲಪೂರ ಸರ್ಕಾರಿ ಆಸ್ಪತ್ರೆಗೆ ತಂದು ನಂತರ ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಅಂಬ್ಯೂಲೆನ್ಸ ವಾಹನದಲ್ಲಿ ಕರೆದುಕೊಂಡು ಸೋಲ್ಲಾಪೂರದ ಶ್ರೀ ಮಾರ್ಕಂಡಯ್ಯ ಸಹಕಾರಿ ರುಗ್ಣಾಲಯ ದಲ್ಲಿ ಸೇರಿಕೆ ಮಾಡಿದ್ದು ಚಿಕಿತ್ಸೆ ಫಲಕಾರಿ ಆಗದೆ ಸಾಯಂಕಾಲ 6:20 ಗಂಟೆ ಸುಮಾರಿಗೆ ಮೃತ ಪಟ್ಟಿರುತ್ತಾಳೆ. ಸದರಿ ಘಟನೆಯು ನನ್ನ ತಂದೆಯವರು ಮೋಟರ ಸೈಕಲ ನಂ ಎಮ್.ಹೆಚ್-13 ಡಿಸಿ-1358 ನೇದ್ದನ್ನು ಅತಿವೇಗವಾಗಿ ಮತ್ತು ನಿರ್ಲಕ್ಷತನದಿಂದ ನಡೆಸಿದ್ದರಿಂದ ಹಿಂದಿನ ಸೀಟಿನಲ್ಲಿ ಕುಳಿತಿದ್ದ ನನ್ನ ತಾಯಿ ರೋಡಿಗೆ ಇರುವ ಸ್ಪೀಡ್ ಬ್ರೇಕ್ಕರ್ ಮೇಲೆ  ಕೆಳಗೆ ಬಿದ್ದಿದ್ದರಿಂದ ತಲೆಗೆ ಭಾರಿ ಒಳಪೆಟ್ಟಾಗಿ ಮೃತ ಪಟ್ಟಿರುತ್ತಾಳೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಳಂದ ಠಾಣೆ : ದಿನಾಂಕ 28/12/2018 ರಂದು ನನ್ನ ಮಗ & ವಿಶಾಲ ತಂದೆ ರಾಜಶೇಖರ ಸರಸಂಬಿ ರವರಿಬ್ಬರೂ ಮೋಟಾರ ಸೈಕಲ್ ನಂ, ಕೆಎ-32, ಇಕ್ಯೂ-8424 ನೇದ್ದರ ಮೇಲೆ ನನ್ನ ಹತ್ತೀರ ಬಂದು ನನಗೆ ಆಳಂದಕ್ಕೆ ಮದುವೆ ಸಂತೆಗೆ ಹೋಗಿ ಬರುತ್ತೇವೆ ಅಂತಾ ಹೇಳಿ ಸದರಿ ಮೋಟರ ಸೈಕಲನ್ನು ವಿಶಾಲ ಇತನು ಚಲಾಯಿಸಿಕೊಂಡು ನನ್ನ ಮಗನಿಗೆ ಹಿಂದೆ ಕುಡಿಸಿಕೊಂಡು ಆಳಂದ ಕ್ಕೆ ಹೋಗಿ ಬರುತ್ತೇವೆ ಅಂತಾ ಹೇಳಿ ಹೋಗಿದ್ದು ನಂತರ 05;40 ಪಿ.ಎಂ ಸುಮಾರಿಗೆ ನಮ್ಮೂರಿನ ಮಡಿವಾಳಯ್ಯ ತಂದೆ ಗುರುಲಿಂಗಯ್ಯ ಹಿರೇಮಠ & ಬಸವರಾಜ ತಂದೆ ರಾಮಚಂದ್ರ ನಂದಗೂರ ರವರು ಫೋನ ಮಾಡಿ ನನ್ನ ಮಗ & ವಿಶಾಲ ಸರಸಂಬಿ ರವರುಗಳು ಹಳ್ಳಿ ಸಲಗರ ತಾಂಡಕ್ಕೆ ಹೊಗು ರೋಡಿನ ಕ್ರಾಸ್ ಹತ್ತೀರ ಮೋಟಾರ ಸೈಕಲ್ ನ್ನು ಸ್ಕೀಡ್ಡಾಗಿ ಬೀದ್ದಿದ್ದು, ಚಂದ್ರಕಾಂತ ಇತನಿಗೆ ಹಣೆಯ ಮೇಲೆ ಭಾರಿ ರಕ್ತಗಾಯ, ಬಲಗಾಲಿನ ಮೋಳಕಾಲಿನ ಕೇಳಗೆ ಭಾರಿ ರಕ್ತಗಾಯ ವಾಗಿದ್ದು ಮತ್ತು ವಿಶಾಲ ಇತನಿಗೆ ತಲೆಗೆ ಭಾರಿ ರಕ್ತಗಾಯ ಕೈ ಕಾಲುಗಳಿಗೆ ಅಲ್ಲಲ್ಲಿ ಸಣಪುಟ್ಟ ತರಚೀದ ಗಾಯಗಳಾಗಿದ್ದು ಕಾರಣ ನೀವು ಬನ್ನೀರಿ ಅಂತಾ ತಿಳಿಸಿದ ಮೇರೆಗೆ ನಾನು ಗಾಬರಿಯಾಗಿ ಘಟನಾ ಸ್ಥಳಕ್ಕೆ ಹೋಗಿ ನೊಡಲಾಗಿ ನನ್ನ ಮಗನು ರಸ್ತೆಯ ಅಪಘಾತದಲ್ಲಿ ಹಣೆಗೆ, ಎರಡು ಕಾಲುಗಳಿಗೆ ಗಂಭೀರ ಸ್ವರೂಪದ ರಕ್ತಗಾಯ ಹೊಂದಿ ನರುಳಾಡುತಿದ್ದು ಮಾತನಾಡುವ ಸ್ಥೀತಿಯಲ್ಲಿ ಇದ್ದಿರುವದಿಲ್ಲ ಅಲ್ಲೇ ನಿಂತಿದ ವಿಶಾಲ ಸರಸಂಬಿ ಇವರಿಗೆ ವಿಚಾರಿಸಿದಾಗ ತನ್ನ ಮೋಟಾರ ಸೈಕಲ್ ನಂ, ಕೆಎ-32, ಇಕ್ಯೂ-8424 ನೇದ್ದರ ಮೇಲೆ ನಾನು ಚಲಾಯಿಸಿಕೊಂಡು ಹಿಂದೆ ಚಂದ್ರಕಾಂತನಿಗೆ ಕೂಡಿಸಿಕೊಂಡು ಹಳ್ಳಿ ಸಲಗರದಿಂದ ಆಳಂದ ಕಡೆಗೆ ಹೋಗುತ್ತಿದ್ದಾಗ ಒಮ್ಮೇಲೇ ಮೋಟಾರ ಸೈಕಲ್ ಸ್ಕೀಡ್ಡಾಗಿ ಬಿದ್ದಿದ್ದು ಇರುತ್ತದೆ ಅಂತಾ ತಿಳಿಸಿದ್ದರಿಂದ ನಾವೆಲ್ಲರೂ ಕೂಡಿಕೊಂಡು ಎರಡು ಜನರಿಗೆ ಉಪಚಾರ ಕುರಿತು ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಬಸವೇಶ್ವರ ಆಸ್ಪತ್ರೆ ಕಲಬುರಗಿಗೆ ತಂದು ಸೇರಿಕೆ ಮಾಡಿದ್ದು ದಿನಾಂಕ 28/12/2018 ರಿಂದ ದಿನಾಂಕ 01/01/2019 ರಂದು ಗಾಯಾಳು ಚಂದ್ರಕಾಂತ ತಂದೆ ಕಾಶಪ್ಪ ಪುಜಾರಿ ಇತನು ಬಸವೇಶ್ವರ ಆಸ್ಪತ್ರೆ ಕಲಬುರಗಿಯಲ್ಲಿ ಉಪಚಾರ ಫಲಕಾರಿಯಾಗದೇ ಮೃತಪಟ್ಟಿರುತ್ತಾನೆ ಅಂತಾ ಶ್ರೀ ಕಾಶಪ್ಪ ತಂದೆ ಶರಣಪ್ಪ ಪುಜಾರಿ ಸಾ; ಹಳ್ಳಿ ಸಲಗರ ತಾ; ಆಳಂದ ಜಿ; ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಕಳವು ಪ್ರಕರಣ :
ಅಫಜಲಪೂರ ಠಾಣೆ : ದಿನಾಂಕ 01/01/2019 ರಂದು ರಾತ್ರಿ 10.00 ಗಂಟೆ ಸುಮಾರಿಗೆ ಪ್ರತಿ ದಿವಸದಂತೆ ನಾವು ಮನೆಯವರೆಲ್ಲರು ಊಟ ಮಾಡಿ ಮಲಗಿಕೊಂಡಿರುತ್ತೇವೆ. ಇಂದು ದಿನಾಂಕ 02//01/2019 ರಂದು ಬೆಳಗ್ಗಿನ ಜಾವ 05.00 ಗಂಟೆ ಸುಮಾರಿಗೆ ಎದ್ದು ತಲಬಾಗಿಲು ತೆರೆಯಲು ಹೋದಾಗ ಅದಕ್ಕೆ ಹೊರಗಿನ ಕೊಂಡಿ ಹಾಕಿತ್ತು ಆಗ ನಾನು ಹಿಂದಿನ ಬಾಗಿಲಿನಿಂದ ತಲಬಾಗಿಲು ಕಡೆ ಹೋದಾಗ ತಲಬಾಗಿಲಗೆ ಹೊರಗಿನಿಂದ ಕೊಂಡಿ ಹಾಕಿದ್ದು ಮತ್ತು ನಮ್ಮ ಅಂಗಡಿಯ ಸೆಟರ ಕೀಲಿ ಮುರಿದು ಸೆಟರ ಬಾಗಿಲು ಅರ್ಧಕ್ಕೆ ತೆರೆದಿತ್ತು ಆಗ ನಾನು ಗಾಬರಿಯಾಗಿ ಮನೆಯವರೇಲ್ಲರಿಗೂ ಎಬ್ಬಿಸಿ ವಿಷಯ ತಿಳಿಸಿದೆನು ನಂತರ ಒಳಗಡೆ ಹೋಗಿ ನೋಡಲು ಅಂಗಡಿಯ ಒಳಗಡೆ ರೂಮಿನಲಿದ್ದ ಅಲಮಾರಿ ಕಿಲಿ ಮುರಿದು ಲಾಕರನ ಕಿಲಿ ಸಹ ಮುರಿದು ಅದರಲ್ಲಿನ ಬಟ್ಟೆಗಳೆಲ್ಲಾ ಚಲ್ಲಾಪಿಲ್ಲಿಯಾಗಿ ಬಿದ್ದಿದ್ದವು ಅಲಮಾರಿ ಲಾಕರದಲ್ಲಿ ಇಟ್ಟಿದ್ದ 1) 40 ಗ್ರಾಮ ಬಂಗಾರದ ಮಂಗಳ ಸೂತ್ರ 2) 10 ಗ್ರಾಂ ಬಂಗಾರದ ಲಾಕೇಟ್ 3) 05 ಗ್ರಾಂ ಬಂಗಾರದ ಉಂಗುರ ಇವುಗಳೆಲ್ಲವು ಇದ್ದಿರಲಿಲ್ಲ ದಿನಾಂಕ 01/01/2019 ರಾತ್ರಿ 10.00 ಗಂಟೆಯಿಂದ ದಿನಾಂಕ 02/01/2019 ಬೆಳಿಗ್ಗಿನ ಜಾವ 05.00 ಗಂಟೆಯ ಮದ್ಯದ ಅವದಿಯಲ್ಲಿ ಯಾರೋ ಕಳ್ಳರು ನಮ್ಮ ಅಂಗಡಿಯ ಸೆಟರ ಬಾಗಿಲಿಗೆ ಹಾಕಿದ ಕಿಲಿ ಮುರಿದು ಒಳಗೆ ಪ್ರಮೇಶಿಸಿ ಒಳಗಡೆ ರೂಮಿನ ಅಲಮಾರಿಯ ಮತ್ತು ಅಲಮಾರಿ ಲಾಕರಿನ ಕಿಲಿ ಮುರಿದು ಅಂದಾಜು 55 ಗಾಂ ಬಂಗಾರದ ಆಭರಣಗಳು .ಕಿ 1,65,000/-ರೂಪಾಯಿ ಕಿಮ್ಮತ್ತಿನದು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂಯಾ ಶ್ರೀ ಸದಾಶಿವ ತಂದೆ ಲೇಸಪ್ಪ ತಳವಾರ ಸಾ: ಉಡಚಾಣ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.