POLICE BHAVAN KALABURAGI

POLICE BHAVAN KALABURAGI

18 December 2018

KALABURAGI DISTRICT REPORTED CRIMES

ಆಕ್ರಮವಾಗಿ ಮಧ್ಯ ಮಾರಾಟ ಮಾಡುತ್ತಿದ್ದ ಮಧ್ಯ ಜಪ್ತಿ :
ಅಫಜಲಪೂರ ಠಾಣೆ : ದಿನಾಂಕ 17-12-2018 ರಂದು ಉಡಚಾಣ ಗ್ರಾಮದಲ್ಲಿ ಎರಡು ಜನರು ಅನದಿಕೃತವಾಗಿ ಮದ್ಯವನ್ನು ಮಾರಾಟ ಮಾಡುತ್ತಿದ್ದಾರೆ,  ಅಂತಾ ಮಾಹಿತಿ ಬಂದ ಮೇರೆಗೆ ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಉಡಚಾಣ ಗ್ರಾಮದಲ್ಲಿ ಶ್ರೀ ಹುಚ್ಚಲಿಂಗೇಶ್ವರ ದೇವಸ್ಥಾನಕ್ಕೆ ಹೋಗುವ ರಸ್ತೆಗೆ ನಮ್ಮ ವಾಹನವನ್ನು ನಿಲ್ಲಿಸಿ ನಡೆದುಕೊಂಡು ಸ್ವಲ್ಪ ಮುಂದೆ ಹೋಗಿ ನೊಡಲು ಒಂದು ಪಾನಶಾಪ್ ಮುಂದೆ  ಎರಡು ಜನರು ತಮ್ಮ ಹತ್ತಿರ ರಟ್ಟಿನ ಬಾಕ್ಸಗಳನ್ನು ಇಟ್ಟುಕೊಂಡು, ಜನರಿಂದ ಹಣ ಪಡೆದು ತಮ್ಮ ಹತ್ತಿರವಿದ್ದ ರಟ್ಟಿನ ಬಾಕ್ಸದಲ್ಲಿ ಕೈ ಹಾಕಿ ಜನರಿಗೆ ಮದ್ಯವನ್ನು ಮಾರಾಟ ಮಾಡಿ, ಬಂದ ಹಣವನ್ನು ರಟ್ಟಿನ ಬಾಕ್ಸನಲ್ಲಿ ಇಡುತ್ತಿದ್ದುದನ್ನು ಖಚಿತಪಡಿಸಿಕೊಂಡು ದಾಳಿ ಮಾಡಲು  ಸದರಿ ಮದ್ಯ ಮಾರಾಟ ಮಾಡುತ್ತಿದ್ದ ವ್ಯೆಕ್ತಿಗಳು ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಓಡಿ ಹೊದರು, ಆಗ ನಾವು ಸದರಿಯವರನ್ನು ಬೆನ್ನಟ್ಟಿದರೂ ಸಹ ನಮ್ಮಿಂದ ತಪ್ಪಿಸಿಕೊಂಡು ಹೋಗಿರುತ್ತಾರೆ. ಸದರಿ ಮದ್ಯ ಮಾರಾಟ ಮಾಡುತ್ತಿದ್ದ ವ್ಯೆಕ್ತಿಗಳು ಸ್ಥಳದಲ್ಲಿ ಬಿಟ್ಟು ಹೋದ ರಟ್ಟಿನ ಬಾಕ್ಸನ್ನು ಪರಿಶೀಲಿಸಿ ನೋಡಲು ಬಾಕ್ಸದಲ್ಲಿ 1)  180 ಎಮ್ ಎಲ್ ಅಳತೆಯ OLD  TAVERN  WHISKY ಕಂಪನಿಯ ಒಟ್ಟು 41 ಪೌಚಗಳು ಇದ್ದವು, ಅಂದಾಜು ಕಿಮ್ಮತ್ತು 3034/- ರೂ 2) 90 ಎಮ್ ಎಲ್ ಅಳತೆಯ Origanal Choice ಕಂಪನಿಯ ಒಟ್ಟು 39 ಪೌಚಗಳು ಇದ್ದವು, ಅಂದಾಜು ಕಿಮ್ಮತ್ತು 1170/- ರೂ 3) ಮದ್ಯ ಮಾರಾಟ ಮಾಡಿದ ನಗದು ಹಣ 340/- ರೂ ಇದ್ದವು. ಹಾಗೂ ಸದರಿ ಪಾನಶಾಪ ಮುಂದೆ ಜನರು ಸರಾಯಿ ಕುಡಿದು ಬಿಸಾಡಿ ಹೋಗುತ್ತಿದ್ದ ಖಾಲಿ ಪೌಚಗಳು ಇದ್ದವು. ನಂತರ ಬಾತ್ಮಿದಾರರಿಗೆ ಮದ್ಯ ಮಾರಾಟ ಮಾಡುತ್ತಿದ್ದವರ ಹೆಸರು ವಿಳಾಸ ವಿಚಾರಿಸಲು, 1) ಕಲ್ಯಾಣಿ ತಂದೆ ಸುಬ್ಬಣ್ಣ ನೆಲೋಗಿ ಸಾ|| ಉಡಚಾಣ 2) ಹುಚ್ಚಪ್ಪ ತಂದೆ ತುಕಾರಾಮ ಅವಟಿ ಸಾ|| ಉಡಚಾಣ ಎಂದು ಗೊತ್ತಾಗಿರುತ್ತದೆ. ಪಾನಶಾಪ್ ಬಗ್ಗೆ ವಿಚಾರಿಸಲು ಪಾನಶಾಪ್ ಮದ್ಯ ಮರಾಟ ಮಾಡುತ್ತಿದ್ದ ಕಲ್ಯಾಣಿ ನೆಲೋಗಿ ಈತನ ಪಾನ್ ಶಾಪ್ ಇರುತ್ತದೆ ಎಂದು ಗೊತ್ತಾಗಿರುತ್ತದೆ. ನಂತರ ಸದರಿ ಒಟ್ಟು 4204/- ರೂ ಕಿಮ್ಮತ್ತಿನ ಒಟ್ಟು 80 ಮದ್ಯದ ಪೌಚಗಳನ್ನು ವಶಕ್ಕೆ ತೆಗೆದುಕೊಂಡು ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಸ್ವಾಭಾವಿಕ ಸಾವು ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ಶಿವಪುತ್ರ ತಂದೆ ಲಕ್ಕಣ್ಣ ಬುರಲಿ ಸಾ||ಅಮೋಘಿಸಿದ್ದ ಗುಡಿ ಹತ್ತಿರ ಅಫಜಲಪೂರ ರವರ  ತಂದೆಯ ಹೆಸರಿನಲ್ಲಿ 9 ಏಕರೆ 25 ಗಂಟೆ ಜಮೀನು ಇರುತ್ತದೆ ನನ್ನ ಮಗನಾದ ಸುನಿಲ ಈತನು ಒಕ್ಕಲುತನ ಕೆಲಸ ಮಾಡಿಕೊಂಡಿರುತ್ತಾರೆ ನನ್ನ ಮಗ ಒಕ್ಕಲುತನ ಕೆಲಸಕ್ಕೆ ಖಾಸಗಿಯಾಗಿ 50,000/-ರೂಪಾಯಿ ಸಾಲ ಮಾಡಿದ್ದು ಇರುತ್ತದೆ ಈ ವರ್ಷ ಮಳೆ ಇಲ್ಲದ ಕಾರಣ ನನ್ನ ಮಗ ನಮ್ಮ ಮನೆಯಲ್ಲಿ ನಮ್ಮ ಮುಂದೆ ಈ ಸಲ ಮಳೆ ಇಲ್ಲ ಬರಗಾಲ ಇದೆ ನಾನು ಒಕ್ಕಲುತನ ಕೆಲಸಕ್ಕೆ ಮಾಡಿದ ಸಾಲ ಹೇಗೆ ಮುಟ್ಟಿಸುವದು ಅಂತ ಹೆಳುತಿದ್ದ ನಾನು ನನ್ನ ಹೆಂಡತಿ ನನ್ನ ಮಗನಿಗೆ ನಾವು  ಸಾಲ ಮುಟ್ಟಿಸುತ್ತೇವೆ ನಿನು ಅದೇ ವಿಚಾರ ಮಾಡಬೇಡ ಅಂತ ತಿಳಿಸಿ ಹೇಳಿರುತ್ತೇವೆ ದಿನಾಂಕ 16/12/2018 ರಂದು ಬೆಳಿಗ್ಗೆ 10.00 ಗಂಟೆ ಸುಮಾರಿಗೆ ನನ್ನ ಮಗ ಸುನಿಲ ಈತನು ನಮಗೆ ತಿಳಿಸಿದ್ದೆನೆಂದರೆ ನಾನು ನನ್ನ ಗೆಳೆಯನಾದ ಪ್ರಕಾಶ ಮಡಿವಾಳ ರವರ ಮೋಟಾರ್ ಸೈಕಲ್ ಮೇಲೆ ನಾನು ಹಾಗು ಪ್ರಕಾಶ ಇಬ್ಬರು ಹೊಲಕ್ಕೆ ಹೋಗಿ ಬರುತ್ತೇವೆ ಅಂತ ಹೇಳಿ ಮನೆಯಿಂದ ಹೋಗಿರುತ್ತಾನೆ ನಂತರ 11.30 ಎಎಮ್ ಸುಮಾರಿಗೆ ಪ್ರಕಾಶ ಈತನು ಪೋನ ಮಾಡಿ ನಮಗೆ ತಿಳಿಸಿದ್ದೆನೆಂದರೆ ನಾನು ಹಾಗು ಸುನಿಲ ಇಬ್ಬರು ಹೊಲಕ್ಕೆ ಬಂದು ನಾನು ತಿರುಗಾಡುತ್ತಾ ಸ್ವಲ್ಪ ಮುಂದೆ ಹೋದಾಗ ಸುನಿಲನು ನಿಮ್ಮ ಹೊಲದಲಿದ್ದ ಕ್ರೀಮಿನಾಶಕ ಔಷದಿ ಸೇವನೆ ಮಾಡಿರುತ್ತಾನೆ ನಾನು ಸಧ್ಯ ಸುನಿಲನಿಗೆ ಮೋಟಾರ್ ಸೈಕಲ್ ಮೇಲೆ ಕುಡಿಸಿಕೊಂಡು ಅಫಜಲಪೂರ ಸರಕಾರಿ ಆಸ್ಪತ್ರೆಗೆ ಬರುತಿದ್ದೇನೆ ನೀವು ಬನ್ನಿ ಅಂತ ತಿಳಿಸಿದ ಬಳಿಕ ನಾನು ನನ್ನ ಹೆಂಡತಿ ನನ್ನ ತಮ್ಮಂದಿರಾದ ಸಿದ್ದರಾಮ ಬುರಲಿ, ಮಡಿವಾಳ ಬುರಲಿ ಹಾಗು ನಮ್ಮ ಓಣಿಯ ಭಾಗಣ್ಣ ಜಮಾದಾರ , ವಿಠ್ಠಲ ಇಂಗಳಗಿ ಎಲ್ಲರು ಕೂಡಿ ಆಸ್ಪತ್ರೆಗೆ ಬಂದು ನನ್ನ ಮಗನಿಗೆ ನೋಡಿ ವಿಚಾರಿಸಲಾಗಿ ನನ್ನ ಮಗ ತಾನು ಒಕ್ಕಲುತನ ಕೆಲಸ ಕ್ಕೆ ಖಾಸಗಿಯಾಗಿ ಮಾಡಿದ ಸಾಲ ಹೇಗೆ ತಿರಿಸುವದು ಈ ಸಲ ಮಳೆ ಇಲ್ಲ ಅಂತ ತನ್ನ ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡು ಹೊಲದಲ್ಲಿ ಕರ್ಕಿ ಹುಲ್ಲಿಗೆ ಸಿಂಪರಣೆ ಮಾಡುವ ಔಷದಿ ಸೇವನೆ ಮಾಡಿರುವ ಬಗ್ಗೆ ತಿಳಿಸಿದ್ದು ನಾವು ವೈದ್ಯರ ಸಲಹೆಯಂತೆ ನನ್ನ ಮಗನಿಗೆ ಹೆಚ್ಚಿನ ಚಿಕಿತ್ಸೆ ಕುರಿತು ಕಲಬುರಗಿಯ ಬಾಬಾ ಹಾರ್ಟ ಫೌಂಡೆಷನ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿರುತ್ತೆವೆ ನನ್ನ ಮಗನಿಗೆ ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ 17/12/2018 ರಂದು  3.30 ಎಎಮ್ ಸುಮಾರಿಗೆ ಮೃತಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಫಘಾತ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀಮತಿ ಚಿನ್ನಮ್ಮಾ ಗಂಡ ಗುಂಡಪ್ಪಾ ಹೊನ್ನಡಿ ಸಾ: ಮನ್ನಳ್ಳಿ ತಾ:ಜಿ: ಬೀದರ ರವರ ಗಂಡ ಗುಂಡಪ್ಪಾ ಲಾರಿ ಚಾಲಕನಾಗಿದ್ದು ನಮ್ಮ ಗ್ರಾಮದ ಮುಜೊಬೊದ್ದಿನ್‌‌ ರವರ ಲಾರಿ ನಂ ಕೆಎ 39 – 6239 ನೇದ್ದರ ಮೇಲೆ ಚಾಲಕ ಅಂತಾ ಕೆಲಸ ಮಾಡುತ್ತಾ ಬಂದಿರುತ್ತಾನೆ. ದಿನಾಂಕ 16/12/2018 ರಂದು ನಮ್ಮ ಗ್ರಾಮದಿಂದ ಲಾರಿಯಲ್ಲಿ ಕಬ್ಬು ತುಂಬಿಕೊಂಡು ಆಳಂದ ತಾಲ್ಲೂಕಿನ ಭೂಸನೂರ ಕಬ್ಬಿನ ಪ್ಯಾಕ್ಟರಿಗೆ ಹೋಗಿ ಕಬ್ಬು ಹಾಕಿ ಮರಳಿ ಕಲಬುರಗಿ- ಹುಮನಾಬಾದ ಮಾರ್ಗವಾಗಿ ಬರುವಾಗ ಇಂದು ಬೆಳಗಿನ ಜಾವ ಅಂದಾಜು 01:00 ಗಂಟೆ ಸುಮಾರಿಗೆ ಕಪನೂರ ಬ್ರಿಡ್ಜದಾಟಿ ನಂದಿನಿ ರಗೋಜಿ ಪೈನ್ಸನ್ಸ ಎದುರುಗಡೆ ರೋಡಿನ ಬಲಮಗ್ಗಲಿಗೆ ಚಾರಿ ಚಾಲಕ ಅತಿವೇಗದಿಂದ ಮತ್ತು ನಿರ್ಲಕ್ಷತನದಿಂದ ಹೋಗುವಾಗ ಆತನ ನಿಯಂತ್ರ ತಪ್ಪಿ ರೋಡಿನ ಬಲ ತಗ್ಗಿಗೆ ಹೋಗಿ ಎದೆಗೆ ಬಡೆದು ಸ್ಥಳದಲ್ಲೆ ಮೃತಪಟ್ಟಿರುತ್ತಾನೆ ಅಂತಾ ರೋಡಿಗೆ ಹೋಗಿ ಬರುವರು ಯಾರೋ ಲಾರಿ ಮೇಲಿನ ನಂಬರ ನೋಡಿ ಲಾರಿ ಮಾಲಿಕನಿಗೆ ಹೇಳಿದಾಗ ಲಾರಿ ಮಾಲಿಕ ನಮಗೆ ತಿಳೀಸಿದ್ದರಿಂದ ನಾನು ಮತ್ತು ನನ್ನ ಮೈದುನ ಹಾಗು ಮಾವ ಹಾಗು ಲಾರಿ ಮಾಲಿಕ ಘಟನಾ ಸ್ಥಳಕ್ಕೆ ಬಂದು ನೋಡಲು ಘಟನೆ ನಿಜ ಇರುತ್ತದೆ. ನನ್ನ ಗಂಡನು ಲಾರಿಯನ್ನು ಅತಿವೇಗದಿಂದ ಮತ್ತು ನಿರ್ಲಕ್ಷತನದಿಂದ ಚಲಾಯಿಸಿದ್ದರಿಂದ ರೋಡಿನ ತಗ್ಗಿಗೆ ಹಾಯಿಸಿದ್ದರಿಂದ ಎದೆಗೆ ಗುಪ್ತಗಾಯವಾಗಿ ಸ್ಥಳದಲ್ಲೆ ಮೃತ ಪಟ್ಟಿದ್ದು ನಿಜ ಇರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

17 December 2018

KALABURAGI DISTRICT REPORTED CRIMES

ಅಪಘಾತ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀ ಯಮುನಯ್ಯಾ ತಂದೆ ವೆಂಕಯ್ಯಾ ಗುತ್ತೇದಾರ ಸಾ;ಸಾವಳಗಿ ಸ್ಟೇಶನ ತಾ;ಜಿ;ಕಲಬುರಗಿ ರವರು ದಿನಾಂಕ.16-12-2018 ರಂದು ಮುಂಜಾನೆ ಸ್ಟೇಶನ ಸಾವಳಗಿಯಿಂದ  ಕಲಬುರಗಿಗೆ ನನ್ನ ಮೋಟಾರ ಸೈಕಲ್ ಮೇಲೆ ಬರುತ್ತಿರುವಾಗ  ಪಟ್ಟಣ್ಣ ಕ್ರಾಸದಾಟಿ ಮುಂದೆ ರಾಜಸ್ಥಾನ ದಾಬ, ಮತ್ತು ಬಿರಾದರ ಪೆಟ್ರೋಲ್ ಪಂಪ ಸಮೀಪ ಆಳಂದ ರೋಡಿಗೆ  ಮುಂಜಾನೆ 9-00 ಗಂಟೆಯ ಸುಮಾರಿಗೆ ಒಬ್ಬ ವ್ಯಕ್ತಿಯ ಮೇಲೆ ಯಾವುದೋ ಒಂದು ಭಾರವಾದ  ವಾಹನವು ಆತನ ಮೈಮೇಲಿಂದ ಹಾಯ್ದು ಹೋಗಿರುತ್ತದೆ ಅಂತಾ ಜನರು ಸೇರಿ ನೋಡುತ್ತಿದ್ದರು ಆಗ ನಾನು ಮತ್ತು ನನ್ನಂತೆ ನನಗೆ ಪರಿಚಯದವರಾದ ಸಂಜುಕುಮಾರ ತಂದೆ ನಾಗಪ್ಪಾ ಕಮ್ಮನ ಸಾ;ಪಟ್ಟಣ ಇಬ್ಬರೂ ಕೂಡಿಕೊಂಡು ನೋಡಲು ಒಬ್ಬ ಅಪರಿಚಿತ ವ್ಯಕ್ತಿ ಇದ್ದು ಆತನ ವಯಸ್ಸು ಅಂದಾಜು 25-30 ವರ್ಷ ದವನಿದ್ದು ಕಪ್ಪು ಮೈಬಣ್ಣ ದಿದ್ದವನಾಗಿದ್ದು ಆತನ ಮೈ ಮೇಲೆ ಭಾರಿವಾಹನ ಹಾಯ್ದು ಹೋಗಿದ್ದರಿಂದ ಮುಖ ಪೂರ್ತೆ ಜಜ್ಜಿ ಹೋಗಿದ್ದು ವಿರೂಪವಾಗಿರುತ್ತದೆ ತಲೆಗೂ ಕೂಡಾ ಭಾರಿಗಾಯವಾಗಿ ಜಜ್ಜಿಹೋಗಿದ್ದು ಮುಖ ಮತ್ತು ತಲೆಯಲ್ಲಿನ ಮಾಂಸ ಖಂಡಗಳು ಹೋರಬಂದಿರುತ್ತವೆ. ಹಾಗೂ ಬೆನ್ನ,ಟೊಂಕ, ಹೊಟ್ಟೆ ಮೇಲೆ ಭಾರಿಗುಪ್ತ ಪೆಟ್ಟಾಗಿದ್ದು ಮೂಳೆಗಳು ಮುರಿದಂತೆ ಕಂಡುಬಂದಿದ್ದು ಹೊಟ್ಟೆಯ ಕೆಳಬಾಗದಲ್ಲಿ ಭಾರಿಗಾಯಗಳಾಗಿ ಮಾಂಸ ಖಂಡಗಳು ಹೊರಬಂದಿರುತ್ತವೆ. ಹಾಗೂ ಬಲತೋಡಯಿಂದ ಭಾರಿಗಾಯಗಳಾಗಿ ಮಾಂಸಖಂಡಗಳು ಹೋರಬಂದಿರುತ್ತವೆ. ಹಾಗೂ ಗುದದ್ವಾರದಿಂದ ಮಾಂಸಖಂಡ ಹೊರಬಂದಿರುತ್ತವೆ. ಮೃತನ ಮೈ ಮೇಲೆ ಒಂದು ನೀಲ ಬಣ್ಣದ ಅದರಲ್ಲಿ ಕಪ್ಪು ಮತ್ತು ಕೆಂಪು ಲೈನಿಂಗ ಇರುವ ಟಾವೆಲ ಇರುತ್ತದೆ. ಸದರಿಯವನು ಯಾರೂ ಅನ್ನುವ ಬಗ್ಗೆ ಗೊತ್ತಾಗಿರುವದಿಲ್ಲಾ  ಸದರಿ ಅಪಘಾತ ಘಟನೆಯು ದಿನಾಂಕ. 15-12-2018 ರಂದು ರಾತ್ರಿ ಅಂದರೆ 11-00 ಪಿ.ಎಂ. ದಿಂದ ದಿನಾಂಕ. 16-12-2018 ರಂದು 8-00 ಎ.ಎಂ. ಮದ್ಯದ ಅವಧಿಯಲ್ಲಿ ಜರುಗಿರುತ್ತದಂತೆ ಕಂಡು ಬಂದಿರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಕ್ಷಣೆ ಕಿರುಕಳ ನೀಡಿ ಕೊಲೆ ಮಾಡಿದ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀ.ಮಲ್ಲಿನಾಥ ತಂದೆ ಮಹಾಂತಗೌಡ ಮಾಲಿಪಾಟೀಲ್ ಮುಡಬೂಳ ತಾ;ಚಿತ್ತಾಪೂರ ಜಿಲ್ಲಾ; ಕಲಬುರಗಿ ರವರ ಮಗಳಾದ ಕಾವೇರಿಗೆ ಉದನೂರ ಗ್ರಾಮದ ಬಸವರಾಜನಿಗೆ  ದಿನಾಂಕ.28-5-2017 ರಂದು ಜನರ ಸಮಕ್ಷಮ ನಮ್ಮ ಧಾರ್ಮಿಕ ಪದ್ದತಿಯಂತೆ ಮುಡಬೂಳ ಗ್ರಾಮದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಮದುವೆ ಮಾಡಿಕೊಟ್ಟು ಜನರ ಸಮಕ್ಷಮ ಊಡುಗರೆಯಾಗಿ 4 1/2 ತೊಲೆಬಂಗಾರ ಹಾಗು 51000/-ಸಾವಿರ ರೂಪಾಯಿಗಳು ಹಾಗೂ ಗೃಹ ಬಳಕೆಯ ವಸ್ತುಗಳು ಕೊಟ್ಟಿರುತ್ತವೇ. ಹೀಗಿದ್ದು ಮದುವೆಯಾದ ನಂತರ ನನ್ನ ಮಗಳು ಮತ್ತು ಗಂಡ 6 ತಿಂಗಳವರೆಗೆ ಚನ್ನಾಗಿದ್ದು ನಂತರದ ದಿನಗಳಲ್ಲಿ ನನ್ನ ಮಗಳ ಗಂಡ ಬಸವರಾಜ ಕುಡಿಯುವ ಚಟದವನಾಗಿದ್ದು ನನ್ನ ಮಗಳಿಗೆ ತವರು ಮನೆಯಿಂದ ಬಂಗಾರ ಮತ್ತು ಹಣ ತೆಗೆದುಕೊಂಡು ಬಾ ಅಂತಾ ದೈಹಿಕ ಮತ್ತು ಮಾನಸಿಕವಾಗಿ ಕಿರಕುಳ ನೀಡುತ್ತಾ ಬಂದಿದ್ದು ಅವನಂತೆ ಅವಳ ಅತ್ತೆ ಪಾರ್ವತಿ ಭಾವ ಸಿದ್ದಾರೋಡ ಅರುಣ ಶಿವಕುಮಾರ ಹಾಗೂ ಅರುಣನ ಹೆಂಡತಿ ರೇಣುಕಾಹಾಗೂ ಶಿವುಕುಮಾರನ ಹೆಂಡತಿ ಪೂಜಾ , ಮತ್ತು ಸಿದ್ದಾರೂಡನ ಹೆಂಡತಿಯಾದ ಚಂದಮ್ಮಾ ಇವರೆಲ್ಲರೂ ಸೇರಿ ನನ್ನ ಮಗಳಿಗೆ ದಿನಾಲು ಮನೆಯಲ್ಲಿ  ವರದಕ್ಷಿಣ ತರುವಂತೆ ದೈಹಿಕವಾಗಿ ಹಾಗೂ ಮಾನಸಿಕವಾಗಿ ಕೀರಕುಳ ನೀಡುತ್ತಾ ಬಂದಿದ್ದು ಸದರಿ ವಿಷಯವನ್ನು ನನ್ನ ಮಗಳು ತವರು ಮನೆಗೆ ಬಂದಾಗ ಅವರು ಅವರು ಕಿರಕುಳ ನೀಡುವ ವಿಷಯತಿಳಿಸಿದಾಗ ನಾನು ನನ್ನ ಹೆಂಡತಿ ಆಕೆಯ ಗಂಡನ ಮನೆಗೆ ಹೋಗಿ ಸದ್ಯ ನಮಗೆ ಹಣ ಬಂಗಾರ ಕೋಡಲು ಆಗುವದಿಲ್ಲಾ ಅಂದಾಗ  ನಮ್ಮೊಂದಿಗೂ ಸಹ ಜಗಳ ತೆಗೆದು ನಿಮ್ಮ ಮಗಳಿಗೆ ಕರೆದುಕೊಂಡು ಹೋಗಿ ಎಂದು ಬೆದರಿಕೆ ಹಾಕಿರುತ್ತಾರೆ. ನಂತರ ನನ್ನ ಮಗಳು ಹೆರಿಗೆ ಗೋಸ್ಕರ ತವರು ಮನೆಗೆ ಕರೆದು ಕೊಂಡು ಹೋಗಿದ್ದು 5 ತಿಂಗಳ ಹಿಂದೆ 1 ಗಂಡು ಮಗುವಾಗಿದ್ದು ಆ ಮಗವಿನ ಹೆಸರು ಅಂಬರಾಯ ಎಂದು ನಾಮಕರಣ ಮಾಡಿದ್ದು ನನ್ನ ಮಗಳು 5 ತಿಂಗ ತವರು ಮನೆಯಲ್ಲಿ ಇದ್ದಾಗ ನನ್ನ ಮಗಳ ಗಂಡ ಅತ್ತೆ ಭಾವಂದಿಯರು ನೀನು ಗಂಡನ ಮನೆಗೆ ಬರುವದಾದರೆ ವರದಕ್ಷಣೆ ತೆಗೆದುಕೊಂಡು ಬರಬೇಕೆಂದು ಫೋನನಲ್ಲಿ ಪೀಡಿಸುತಿದ್ದರು ದಿನಾಂಕ.10-12-2018 ರಂದು ರಾತ್ರಿ.7-30ಕ್ಕೆಬಂದು ಭಾವನಾದ ಅರುಣಕುಮಾರ ಕರೆದುಕೊಂಡು ಹೋಗಿರುತ್ತಾನೆ. ಅಂದಿನಿಂದ ನಾವು ಸುಮಾರು ಬಾರಿ ಫೋನ ಮಾಡಿದರೂ ನಾನು ಹೊರಗಡೆ ಇದ್ದೇನೆ ಎಂದು ಸುಳ್ಳು ಹೇಳುತ್ತಾ ಮಗಳೊಂದಿಗೆ ಮಾತನಾಡಲು ಕೋಡುತ್ತಿರಲಿಲ್ಲಾ. ದಿನಾಂಕ.15-12-2018 ರಂದು ಸಾಯಂಕಾಲ 5-00 ಗಂಟೆ ಸುಮಾರಿಗೆ ನನ್ನ ಮಗನಿಗೆ ಫೋನ ಮಾಡಿ ಅರುಣ ಫೋನ ಮಾಡಿ ತಿಳಿಸಿದ್ದೇನೆಂದರೆ ಗಾಬರಿಯಿಂದ ನೀವು ತುರ್ತಾಗಿ ನಮ್ಮ ಮನೆಗೆ ಬರಲು ತಿಳಿಸಿದ್ದಾಗ ನಾವು ಗಾಬರಿಯಾಗಿ ನನ್ನ ಮಗಳಿಗೆ ಎನಾಧರೂ ಆತರಬಹುದೆಂದು ನಾನು ನನ್ನ  ಮಗ ಹಾಗು ನಮ್ಮ ಗ್ರಾಮದ ನೀಲಕಂಠ ಪಾಟೀಲ್, ಚನ್ನಬಸ್ಸಪ್ಪಾ ಬಟಗೇರಿ ಹಾಗೂ ಇತರರು  ಕೂಡಿ ಕೊಂಡು ನನ್ನ ಮಗಳ ಗಂಡನ ಮನೆಗೆ ಬಂದು ನೋಡಲು ಅವಳ ಮನೆಯ  ಮಹಡಿಯ ಮೇಲೆ ಇರುವ ಒಂದು ಕೋಣೆಯ ಫ್ಯಾನಿಗೆ ಸೀರೆಯಿಂದ ನೇಣು ಬೀತದ ಸ್ಥಿತಿಯಲ್ಲಿ ಇತ್ತು ಆಗ ನಾವು ಪರೀಶಿಲಿಸಿ ನೋಡಲಾಗಿ ನಮ್ಮ ಮಗಳಿಗೆ ವರದಕ್ಷಿಣೆ ಕಿರಕುಳದಿಂದಾ ಹೊಡೆಬಡಿ ಮಾಡಿಕೊಲೆ ಮಾಡಿ ಸಾಕ್ಷಿನಾಶ ಪಡಿಸಲು ಕುತ್ತಿಗೆಗೆ ಸೀರೆಯಿಂದ ಬೀತದು ಕೊಲೆ ಮಾಡಿರುತ್ತಾರೆ. ಅದರಿಂದ ನನ್ನ ಮಗಳಿಗೆ ವರದಕ್ಷಣೆ ತರುವಂತೆ  ದಿನಾಲು ಪೀಡಿಸುತ್ತಾ  ದೈಹಿಕವಾಗಿ ಹಾಗೂ ಮಾನಸಿಕವಾಗಿ ಕೀರಕುಳ ನೀಡಿ ನಿನ್ನೆ ದಿನಾಂಕ. 15-12-2018 ರಂದು ಮದ್ಯಾನ 3-00 ಗಂಟೆಯಿಂದ 4-30 ಮದ್ಯದ ಅವಧಿಯಲ್ಲಿ ನನ್ನ ಮಗಳಿಗೆ ಕೊಲೆ ಮಾಡಿ ನೇಣು ಹಾಕಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

16 December 2018

KALABURAGI DISTRICT REPORTED CRIMES

ಮಟಕಾ ಜೂಜಾಟದಲ್ಲಿ ನಿರತವನ ಬಂಧನ :
ರಾಘವೇಂದ್ರ ನಗರ ಠಾಣೆ : ದಿನಾಂಕ 15.12.2018 ರಂದು ಮಧ್ಯಾನ ರಾಘವೇಂದ್ರ ನಗರ ಠಾಣಾ ವ್ಯಾಪ್ತಿಯ ಗಂಗಾನಗರ ಹನುಮಾನ ಗುಡಿ ಹತ್ತಿರ ರಸ್ತೆಯ ಪಕ್ಕದಲ್ಲಿ ಒಬ್ಬ ವ್ಯಕ್ತಿ ಕುಳಿತು ಕೊಂಡು ರಸ್ತೆಯ ಮೇಲೆ ಹೋಗಿ ಬರುವವರಿಗೆ ಇದು ಬಾಂಬೆ ಮಟಕಾ ಇದೆ 1 ರೂಪಾಯಿಗೆ 80 ರುಪಾಯಿ ಬರುತ್ತದೆ ಅಂತ ಹೇಳುತ್ತಾ ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ಚೀಟಿ ಬರೆದುಕೂಡುತ್ತಿದ್ದಾನೆ ಅಂತ ಖಚಿತ ಬಾತ್ಮಿ ಬಂದ ಮೇರೆಗೆ ಶ್ರೀ ಶಿವಯೋಗಿ .ಎಸ್‌‌.  ರಾಘವೇಂದ್ರ ನಗರ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಗಂಗಾನಗರ ಹನುಮಾನ ದೇವರ ಗುಡಿಯ ಹತ್ತಿರ ಹೋಗಿ ಸ್ವಲ್ಪ ದೂರದಲ್ಲಿ ಜೀಪ ನಿಲ್ಲಿಸಿ ಮರೆಯಲ್ಲಿ ನಿಂತು ಹನುಮಾನ ದೇವರ ಗುಡಿ ಮುಂದಿನ ರಸ್ತೆಯ ಪಕ್ಕದಲ್ಲಿ ಒಬ್ಬ ವ್ಯಕ್ತಿ ಕುಳಿತುಕೊಂಡು ರಸ್ತೆಯ ಮೇಲೆ ಹೋಗಿ ಬರುವವರಿಗೆ ಇದು ಬಾಂಬೆ ಮಟಕಾ ಇದೆ 1 ರೂಪಾಯಿಗೆ 80 ರುಪಾಯಿ ಬರುತ್ತದೆ ಅಂತ ಹೇಳುತ್ತಾ ಸಾರ್ವಜನಿಕರಿಂದ ಹಣ ಪಡೆದುಕೊಂಡು ಮೊಸ ಮಾಡಿ ಮಟಕಾ ಚೀಟಿ ಬರೆದುಕೊಡುತ್ತಿರುವ ಬಗ್ಗೆ ಖಚಿತ ಪಡಿಸಿಕೊಂಡು ದಾಳಿ ಮಾಡಲು ಮಟಕಾ ಬರೆಯಿಸಲು ಬಂದವರು ಓಡಿ ಹೋಗಿದ್ದು ಮಟಕಾ ಚೀಟಿಯನ್ನು ಬರೆದುಕೊಳ್ಳುತ್ತಿದ್ದವನನ್ನು ಹಿಡಿದುಕೊಂಡು ಅವನ ಹೆಸರು ವಿಳಾಸ ವಿಚಾರಿಸಲು ಬಸವರಾಜ ತಂದೆ ರಾಮಚಂದ್ರಪ್ಪ ಕೂಡಿ ಸಾ: ಗಂಗಾ ನಗರ ಕಲಬುರಗಿ ಅಂತ ತಿಳಿಸಿದ್ದು ಸದರಿಯವನ ಅಂಗಶೋದನೆ ಮಾಡಲು ಅವನ ಹತ್ತಿರ ನಗದು ಹಣ 765/-ರೂ 1 ಮಟಕಾ ಚೀಟಿ ಮತ್ತು ಒಂದು ಬಾಲ ಪೇನ್ ದೊರೆತಿದ್ದು. ಸದರಿಯವುಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು  ಸದರಿಯವನೊಂದಿಗೆ ರಾಘವೇಂದ್ರ ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಪಘಾತ ಪ್ರಕರಣ :
ಕಮಲಾಪೂರ ಠಾಣೆ : ದಿನಾಂಕ 15-12-2018 ರಂದು ಬೆಳಗ್ಗೆ  ನಮ್ಮ ತಂದೆಯವರು ನಮ್ಮ ಅಕ್ಕಳ ಗಂಡನಾದ  ಸೈಯದ ರೀಯಾಜ್ ತಂದೆ ಬಾಬು ಪಟೇಲ್ ಇವರಿಗೆ ಕಲಬುರಗಿ ನಗರದಲ್ಲಿ ಪ್ಲಾಟ ಖರೀದಿ ಮಾಡಬೇಕಾಗಿರುವದರಿಂದ ನಮ್ಮ ತಂದೆ ಹಾಗೂ ಅಕ್ಕನ ಗಂಡ ಸೈಯದ ರಿಯಾಜ್ ಹಾಗೂ ಪರಿಚಯದ ಇಬ್ರಾಹಿಂಸಾಬ ತಂದೆ ನಬಿಸಾಬ ಮುಲ್ಲಾ (ವಕೀಲ) ಇವರೊಂದಿಗೆ ಮಾಮನವರ ಎಕ್ಟೀವ್ ಮೋ.ಸೈಕಲ ನಂ ಟಿ.ಎಸ್-12-ಇಹೆಚ್-6235 ಮತ್ತು ಇಬ್ರಾಹಿಂಸಾಬ ಇವರಿಗೆ ಸಂಭಂದಪಟ್ಟ ಹಿರೋ ಹೊಂಡಾ ಸ್ಪೇಂಡರ್ ಮೋ.ಸೈಕಲ್ ನಂ ಕೆಎ-32-ಇಸಿ-7601 ನೇದ್ದನ್ನು ತೆಗೆದುಕೊಂಡು ಎಕ್ಟೀವ್ ಗಾಡಿಯ ಮೇಲೆ ನಮ್ಮ ತಂದೆ ಹಾಗೂ ಇಬ್ರಾಹಿಂಸಾಬ ಮೋ. ಸೈಕಲ್ ಮೇಲೆ ಮಾಮ ಸೈಯದ ರಿಯಾಜ್ ಇವರು ಬಸವಕಲ್ಯಾಣದಿಂದ ಕಲಬುರಗಿಗೆ ಹೋಗುತ್ತೇನೆ ಅಂತಾ ಮುಂಜಾನೆ 9 ಗಂಟೆಗೆ ಹೋದರು. ಮರಳಿ ಸಾಯಂಕಾಲ 6 ಗಂಟೆ ಸುಮಾರಿಗೆ ನಮ್ಮ ತಂದೆಯವರು ನನಗೆ ಪೋನ ಮಾಡಿ ಕಲಬುರಗಿಗೆ ಬಂದಿರುವ ಕೆಲಸ ಆಗಿರುತ್ತದೆ. ಈಗ ಮರಳಿ ಬರುತ್ತೇವೆ ಅಂತಾ ಹೇಳಿದ್ದು. ನಾವು ಅವರ ಹಾದಿಯನ್ನು ಕಾಯುತ್ತಿರುವಾಗ ರಾತ್ರಿ 8 ಗಂಟೆಯ ನಂತರ ಯಾರೋ ನಮ್ಮಗೆ ಪೋನ ಮಾಡಿ ತಿಳಿಸಿದೆನೆಂದರೆ ಕಮಲಾಪೂರದ ಮುಂದೆ ಹುಮನಾಬಾದ ರೋಡಿನ ಕಡೆಗೆ ರೇಲ್ವೆ ಓವರ್ ಬ್ರೀಡ್ಜ್ದ ಚಾರ ಕಮಾನದ ಬ್ರೀಡ್ಜಿನ ಮೇಲೆ ರಸ್ತೆ ಅಪಘಾತದಲ್ಲಿ ನಿಮ್ಮ ನಂಬರ ಡೈರಿ ಇಟ್ಟಿಕೊಂಡವರು ಭಾರಿ ಗಾಯದಿಂದ ಇವರು ಮತ್ತು ಇನ್ನೊಬ್ಬರು ಸ್ಥಳದಲ್ಲೆ ಮೃತಪಟ್ಟಿರುತ್ತಾರೆ ಅಂತಾ ತಿಳಿಸಿದಕ್ಕೆ ಗಾಬರಿಗೊಂಡು  ನಾನು ನನ್ನ ಗೆಳೆಯರಾದ ಮಹಮ್ಮದ ಫಿರೋಜ ಬೇನಕುನೆ,   ಗಫರ ತಂದೆ ಫಾರುಖಮಿಯಾ , ಇಬ್ರಾಹಿಂಸಾಬ ಇವರ ಮಗನಾದ ಖಾಲೀದ ಮುಲ್ಲಾ ಕೂಡಿಕೊಂಡು ರಾತ್ರಿ 9 ಗಂಟೆಯ ನಂತರ ಘಟನ ಸ್ಥಳವಾದ ಚಾರ ಕಮನಾದ ಬ್ರೀಡ್ಜಿನ ಮೇಲೆ ಬಂದು ನೋಡಲಾಗಿ ನಮ್ಮ ತಂದೆ ಶೇಖ ನಿಜಾಮೋದ್ದಿನ ರೋಡಿನ ಮೇಲೆ ಅಂಗಾತವಾಗಿ ಬಿದ್ದಿದ್ದು, ಇವರ ತೆಲೆಗೆ , ಮುಖಕ್ಕೆ ರಕ್ತಗಾಯ , ಮುಗೂ , ಬಾಯಿ, ಕಿವಿಯಿಂದ ರಕ್ತ ಬಂದಿದ್ದು, ಬಲಗೈ ಮುಂಗೈಯಿಂದ ಮೋಣಕೈ ವರೆಗೆ ಭಾರಿ ಪ್ರಮಾಣದ ಗಾಯವಾಗಿ ಸ್ಥಳದಲ್ಲೆ ಮೃತಪಟ್ಟಿದ್ದರು. ಅಲ್ಲೆ ಬದಿಯಲ್ಲಿರುವ ಇಬ್ರಾಹಿಂಸಾಬ ತಂದೆ ನಬಿಸಾಬ ಮುಲ್ಲಾ (ವಕೀಲ) ಇವರು ಕೂಡಾ ಅಂಗಾತವಾಗಿ ಬಿದ್ದಿದ್ದು, ಇವರ ಬಾಯಿಂದ ರಕ್ತ ಬಂದು, ಬಲಗೈ ಕೈ ಮುರಿದ್ದು , ಬಲ ತೋಡೆಯಿಂದ ಕಪಗಡಿನವರೆಗೆ ಭಾರಿ ಪ್ರಮಾಣ ಗಾಯ ಹೊಂದಿ, ಮೌಂಸ ಖಂಡ ಹೋರ ಬಂದು ಸ್ಥಳದಲ್ಲೆ ಮೃತಪಟ್ಟಿದ್ದರು, ನಮ್ಮ ಮಾಮ ಸೈಯದ ರಿಯಾಜ್ ಈತನ ಬಗ್ಗೆ ವಿಚಾರಿಸಲಾಗಿ ಈತನು ಕಾಣಲಿಲ್ಲಾ 108 ಅಂಬುಲೆನ್ಸ್ ದಲ್ಲಿ ಕಲಬುರಗಿ ದವಾಖಾನೆ ಕಡೆಗೆ ಹೋಗಿರುವ ಬಗ್ಗೆ ಗೋತ್ತಾಯಿತು. ಅಲ್ಲೆ ಸ್ವಲ್ಪ ಅಂತರದಲ್ಲಿ ಬಿದ್ದಿರುವ ಎಕ್ಟೀವ್ ಗಾಡಿ ನಂ ಟಿ.ಎಸ್-12-ಇಹೆಚ್-6235 ಮತ್ತು ಹಿರೋ ಹೊಂಡಾ ಸ್ಪೇಂಡರ್ ಕೆಎ-32-ಇಸಿ-7601 ನೇದ್ದವುಗಳು ಪೂರ್ತಿಯಾಗಿ ಜಖಂಗೊಂಡು ಬಿದ್ದಿದ್ದು, ಬದಿಯಲ್ಲಿ ಕಬ್ಬಿನ ಲೋಡ ಇರುವ ಲಾರಿ ನಂ ಎಪಿ-13-ಡ್ಬ್ಲೂ-6781 ಮಗ್ಗಲಾಗಿ ಬಿದಿದ್ದು, ಅದರ ಬದಿಯಲ್ಲಿ ಒಂದು ಕ್ರೋಜರ ಜೀಪ್ ನಂ ಕೆಎ-27--598 ನೇದ್ದು ಜಖಂಗೊಂಡು ನಿಂತಿದ್ದು, ಸ್ವಲ್ಪ ಅಂತರದಲ್ಲಿ ಇನ್ನೊಂದು ಕಬ್ಬು ಲೋಡ ತುಂಬಿದ ಲಾರಿ ನಂ ಎಮ್.ಹೆಚ್-25-ಬಿ-9302 ನೇದ್ದು ಮುಂದಿನ ಭಾಗ ಜಖಂಗೊಂಡು ನಿಂತಿದ್ದು, ಅಲ್ಲೆ ಬದಿಯಲ್ಲಿ ಪೀಕಪ್ ಗಾಡಿ ನಂ ಕೆಎ-22-ಸಿ-4151 ನೇದ್ದು ಕೂಡ ಜಖಂವಾಗಿ ನಿಂತಿದ್ದು, ಈ ಬಗ್ಗೆ ವಿಚಾರಿಸಲಾಗಿ ಅಲ್ಲೆ ಇರುವ ಕ್ರೋಜರ ಜೀಪ ಚಾಲಕ ಸೂರ್ಯಕಾಂತ ತಂದೆ ಸುಧಾಕರ ಚವ್ಹಾಣ , ರೇವಣಯ್ಯ ತಂದೆ ಗುರಯ್ಯ ನಾವದಗಿ ಹಾಗೂ ಪೀಕಪ್ ವಾಹನದ ಚಾಲಕ ಸರತಾಜಬಾಬ ತಂದೆ ಫತೃ ಪಟೇಲ್ ಮುಡ್ಡಿ ವಿಚಾರಣೆಯಲ್ಲಿ ಹೆಸರು ತಿಳಿದುಕೊಂಡಿದ್ದು. ಇವರೆಲ್ಲರೂ ತಿಳಿಸಿದೆನೆಂದರೆ ಈಗ ರಾತ್ರಿ 7-45 ಗಂಟೆ ಸುಮಾರಿಗೆ ಈ ಸ್ಥಳದಲ್ಲಿ ಎಕ್ಟೀವ್ ಮೋಟಾರ ಸೈಕಲ್ ಮೇಲೆ ಇಬ್ಬರು ಮತ್ತು ಸ್ಪೇಂಡರ ಮೋಟಾರ ಸೈಕಲ್ ಮೇಲೆ ಒಬ್ಬರು ಕಲಬುರಗಿ ರೋಡಿನ ಕಡೆಯಿಂದ ಹುಮನಾಬಾದ ರೋಡಿನ ಕಡೆಗೆ ಹೋಗುವಾಗ ಎದುರಗಡೆ ರೋಡಿನ ಕಡೆಯಿಂದ ಲಾರಿ ನಂ ಎಪಿ-13-ಡ್ಬ್ಲೂ-6781 ನೇದ್ದರ ಚಾಲಕನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಎರಡು ಮೋಟಾರ ಸೈಕಲ್ ಸವಾರರಿಗೆ ಡಿಕ್ಕಿ ಹೊಡೆದು ಲಾರಿ ಪಲ್ಟಿ ಮಾಡಿಕೊಂಡಿದ್ದು, ಅಲ್ಲೆ ಕ್ರೋಜರ ಜೀಪ್  ಹುಮನಾಬಾದ ರೋಡಿನ ಕಡೆಗೆ ಹೋಗುವಾಗ ಇದರ ಎದುರಿನ ರೋಡಿನ ಕಡೆಯಿಂದ ಇನ್ನೊಂದು ಕಬ್ಬು ತುಂಬಿದ ಲಾರಿ ನಂ ಎಮ್.ಹೆಚ್-25-ಬಿ-9302 ನೇದ್ದರ ಚಾಲಕನು ಕೂಡ ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದವನೆ ಆ ಮೋಟಾರ ಸೈಕಲಗಳಿಗೆ ಮತ್ತು ಆ ಜನರಿಗೆ ಹಾಯಿಸಿಕೊಂಡು ,ಕ್ರೋಜರ ಜೀಪಿಗೆ ಡಿಕ್ಕಿ ಹೊಡೆದು, ಹಾಗೆ ಹಿಂದೆ ಬರುತ್ತಿರುವ ಪೀಕಪ್ ಗಾಡಿ ನಂ ಕೆಎ-22-ಸಿ-4151 ನೇದ್ದಕ್ಕೆ ಡಿಕ್ಕಿ ಹೊಡೆದುಕೊಂಡಿದ್ದು ಇದ್ದರಿಂದ ಇವರಿಬ್ಬರು ಸ್ಥಳದಲ್ಲೆ ಮೃತಪಟ್ಟಿದ್ದು ಮತ್ತು ಇನ್ನೋಬ ಗಾಯಾಳುವಿನ ತೆಲೆಗೆ ಮತ್ತು ಬಲಕಾಲಿಗೆ ಭಾರಿ ಗಾಯವಾಗಿದ್ದರಿಂದ ಉಪಚಾರ ಕುರಿತು 108 ಅಂಬುಲೆನ್ಸ್ ದಲ್ಲಿ ತೆಗೆದುಕೊಂಡು ಹೋಗಿರುತ್ತಾರೆ ಇನ್ನೂ ಈ ಘಟನೆಯಲ್ಲಿ ಯಾರಿಗಾದರು ಗಾಯಗಳು ಆಗಿರಬಹುದು ಮತ್ತು ಅಪಘಾತ ಪಡಿಸಿದ ಲಾರಿ ಚಾಲಕರನ್ನು ನೋಡಿದ್ದು ಅವರು ಇಲ್ಲಿಂದ ಓಡಿ ಹೋಗಿರುತ್ತಾರೆ ಅಂತಾ ಶ್ರೀ. ಶೇಖ ಖಾಜಾ ತಂದೆ ಶೇಖ ನಿಜಾಮೋದ್ದಿನ ಶೇಖ ಸಾ: ಅರಫತ ಕಾಲೋನಿ ಬಸವಕಲ್ಯಾಣ ಜಿ. ಬೀದರ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಟಾಣೆಯಲ್ಲಿ ಪ್ರಕರಣ ದಾಖಲಾಗಿದೆ.