POLICE BHAVAN KALABURAGI

POLICE BHAVAN KALABURAGI

16 December 2018

KALABURAGI DISTRICT REPORTED CRIMES

ಮಟಕಾ ಜೂಜಾಟದಲ್ಲಿ ನಿರತವನ ಬಂಧನ :
ರಾಘವೇಂದ್ರ ನಗರ ಠಾಣೆ : ದಿನಾಂಕ 15.12.2018 ರಂದು ಮಧ್ಯಾನ ರಾಘವೇಂದ್ರ ನಗರ ಠಾಣಾ ವ್ಯಾಪ್ತಿಯ ಗಂಗಾನಗರ ಹನುಮಾನ ಗುಡಿ ಹತ್ತಿರ ರಸ್ತೆಯ ಪಕ್ಕದಲ್ಲಿ ಒಬ್ಬ ವ್ಯಕ್ತಿ ಕುಳಿತು ಕೊಂಡು ರಸ್ತೆಯ ಮೇಲೆ ಹೋಗಿ ಬರುವವರಿಗೆ ಇದು ಬಾಂಬೆ ಮಟಕಾ ಇದೆ 1 ರೂಪಾಯಿಗೆ 80 ರುಪಾಯಿ ಬರುತ್ತದೆ ಅಂತ ಹೇಳುತ್ತಾ ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ಚೀಟಿ ಬರೆದುಕೂಡುತ್ತಿದ್ದಾನೆ ಅಂತ ಖಚಿತ ಬಾತ್ಮಿ ಬಂದ ಮೇರೆಗೆ ಶ್ರೀ ಶಿವಯೋಗಿ .ಎಸ್‌‌.  ರಾಘವೇಂದ್ರ ನಗರ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಗಂಗಾನಗರ ಹನುಮಾನ ದೇವರ ಗುಡಿಯ ಹತ್ತಿರ ಹೋಗಿ ಸ್ವಲ್ಪ ದೂರದಲ್ಲಿ ಜೀಪ ನಿಲ್ಲಿಸಿ ಮರೆಯಲ್ಲಿ ನಿಂತು ಹನುಮಾನ ದೇವರ ಗುಡಿ ಮುಂದಿನ ರಸ್ತೆಯ ಪಕ್ಕದಲ್ಲಿ ಒಬ್ಬ ವ್ಯಕ್ತಿ ಕುಳಿತುಕೊಂಡು ರಸ್ತೆಯ ಮೇಲೆ ಹೋಗಿ ಬರುವವರಿಗೆ ಇದು ಬಾಂಬೆ ಮಟಕಾ ಇದೆ 1 ರೂಪಾಯಿಗೆ 80 ರುಪಾಯಿ ಬರುತ್ತದೆ ಅಂತ ಹೇಳುತ್ತಾ ಸಾರ್ವಜನಿಕರಿಂದ ಹಣ ಪಡೆದುಕೊಂಡು ಮೊಸ ಮಾಡಿ ಮಟಕಾ ಚೀಟಿ ಬರೆದುಕೊಡುತ್ತಿರುವ ಬಗ್ಗೆ ಖಚಿತ ಪಡಿಸಿಕೊಂಡು ದಾಳಿ ಮಾಡಲು ಮಟಕಾ ಬರೆಯಿಸಲು ಬಂದವರು ಓಡಿ ಹೋಗಿದ್ದು ಮಟಕಾ ಚೀಟಿಯನ್ನು ಬರೆದುಕೊಳ್ಳುತ್ತಿದ್ದವನನ್ನು ಹಿಡಿದುಕೊಂಡು ಅವನ ಹೆಸರು ವಿಳಾಸ ವಿಚಾರಿಸಲು ಬಸವರಾಜ ತಂದೆ ರಾಮಚಂದ್ರಪ್ಪ ಕೂಡಿ ಸಾ: ಗಂಗಾ ನಗರ ಕಲಬುರಗಿ ಅಂತ ತಿಳಿಸಿದ್ದು ಸದರಿಯವನ ಅಂಗಶೋದನೆ ಮಾಡಲು ಅವನ ಹತ್ತಿರ ನಗದು ಹಣ 765/-ರೂ 1 ಮಟಕಾ ಚೀಟಿ ಮತ್ತು ಒಂದು ಬಾಲ ಪೇನ್ ದೊರೆತಿದ್ದು. ಸದರಿಯವುಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು  ಸದರಿಯವನೊಂದಿಗೆ ರಾಘವೇಂದ್ರ ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಪಘಾತ ಪ್ರಕರಣ :
ಕಮಲಾಪೂರ ಠಾಣೆ : ದಿನಾಂಕ 15-12-2018 ರಂದು ಬೆಳಗ್ಗೆ  ನಮ್ಮ ತಂದೆಯವರು ನಮ್ಮ ಅಕ್ಕಳ ಗಂಡನಾದ  ಸೈಯದ ರೀಯಾಜ್ ತಂದೆ ಬಾಬು ಪಟೇಲ್ ಇವರಿಗೆ ಕಲಬುರಗಿ ನಗರದಲ್ಲಿ ಪ್ಲಾಟ ಖರೀದಿ ಮಾಡಬೇಕಾಗಿರುವದರಿಂದ ನಮ್ಮ ತಂದೆ ಹಾಗೂ ಅಕ್ಕನ ಗಂಡ ಸೈಯದ ರಿಯಾಜ್ ಹಾಗೂ ಪರಿಚಯದ ಇಬ್ರಾಹಿಂಸಾಬ ತಂದೆ ನಬಿಸಾಬ ಮುಲ್ಲಾ (ವಕೀಲ) ಇವರೊಂದಿಗೆ ಮಾಮನವರ ಎಕ್ಟೀವ್ ಮೋ.ಸೈಕಲ ನಂ ಟಿ.ಎಸ್-12-ಇಹೆಚ್-6235 ಮತ್ತು ಇಬ್ರಾಹಿಂಸಾಬ ಇವರಿಗೆ ಸಂಭಂದಪಟ್ಟ ಹಿರೋ ಹೊಂಡಾ ಸ್ಪೇಂಡರ್ ಮೋ.ಸೈಕಲ್ ನಂ ಕೆಎ-32-ಇಸಿ-7601 ನೇದ್ದನ್ನು ತೆಗೆದುಕೊಂಡು ಎಕ್ಟೀವ್ ಗಾಡಿಯ ಮೇಲೆ ನಮ್ಮ ತಂದೆ ಹಾಗೂ ಇಬ್ರಾಹಿಂಸಾಬ ಮೋ. ಸೈಕಲ್ ಮೇಲೆ ಮಾಮ ಸೈಯದ ರಿಯಾಜ್ ಇವರು ಬಸವಕಲ್ಯಾಣದಿಂದ ಕಲಬುರಗಿಗೆ ಹೋಗುತ್ತೇನೆ ಅಂತಾ ಮುಂಜಾನೆ 9 ಗಂಟೆಗೆ ಹೋದರು. ಮರಳಿ ಸಾಯಂಕಾಲ 6 ಗಂಟೆ ಸುಮಾರಿಗೆ ನಮ್ಮ ತಂದೆಯವರು ನನಗೆ ಪೋನ ಮಾಡಿ ಕಲಬುರಗಿಗೆ ಬಂದಿರುವ ಕೆಲಸ ಆಗಿರುತ್ತದೆ. ಈಗ ಮರಳಿ ಬರುತ್ತೇವೆ ಅಂತಾ ಹೇಳಿದ್ದು. ನಾವು ಅವರ ಹಾದಿಯನ್ನು ಕಾಯುತ್ತಿರುವಾಗ ರಾತ್ರಿ 8 ಗಂಟೆಯ ನಂತರ ಯಾರೋ ನಮ್ಮಗೆ ಪೋನ ಮಾಡಿ ತಿಳಿಸಿದೆನೆಂದರೆ ಕಮಲಾಪೂರದ ಮುಂದೆ ಹುಮನಾಬಾದ ರೋಡಿನ ಕಡೆಗೆ ರೇಲ್ವೆ ಓವರ್ ಬ್ರೀಡ್ಜ್ದ ಚಾರ ಕಮಾನದ ಬ್ರೀಡ್ಜಿನ ಮೇಲೆ ರಸ್ತೆ ಅಪಘಾತದಲ್ಲಿ ನಿಮ್ಮ ನಂಬರ ಡೈರಿ ಇಟ್ಟಿಕೊಂಡವರು ಭಾರಿ ಗಾಯದಿಂದ ಇವರು ಮತ್ತು ಇನ್ನೊಬ್ಬರು ಸ್ಥಳದಲ್ಲೆ ಮೃತಪಟ್ಟಿರುತ್ತಾರೆ ಅಂತಾ ತಿಳಿಸಿದಕ್ಕೆ ಗಾಬರಿಗೊಂಡು  ನಾನು ನನ್ನ ಗೆಳೆಯರಾದ ಮಹಮ್ಮದ ಫಿರೋಜ ಬೇನಕುನೆ,   ಗಫರ ತಂದೆ ಫಾರುಖಮಿಯಾ , ಇಬ್ರಾಹಿಂಸಾಬ ಇವರ ಮಗನಾದ ಖಾಲೀದ ಮುಲ್ಲಾ ಕೂಡಿಕೊಂಡು ರಾತ್ರಿ 9 ಗಂಟೆಯ ನಂತರ ಘಟನ ಸ್ಥಳವಾದ ಚಾರ ಕಮನಾದ ಬ್ರೀಡ್ಜಿನ ಮೇಲೆ ಬಂದು ನೋಡಲಾಗಿ ನಮ್ಮ ತಂದೆ ಶೇಖ ನಿಜಾಮೋದ್ದಿನ ರೋಡಿನ ಮೇಲೆ ಅಂಗಾತವಾಗಿ ಬಿದ್ದಿದ್ದು, ಇವರ ತೆಲೆಗೆ , ಮುಖಕ್ಕೆ ರಕ್ತಗಾಯ , ಮುಗೂ , ಬಾಯಿ, ಕಿವಿಯಿಂದ ರಕ್ತ ಬಂದಿದ್ದು, ಬಲಗೈ ಮುಂಗೈಯಿಂದ ಮೋಣಕೈ ವರೆಗೆ ಭಾರಿ ಪ್ರಮಾಣದ ಗಾಯವಾಗಿ ಸ್ಥಳದಲ್ಲೆ ಮೃತಪಟ್ಟಿದ್ದರು. ಅಲ್ಲೆ ಬದಿಯಲ್ಲಿರುವ ಇಬ್ರಾಹಿಂಸಾಬ ತಂದೆ ನಬಿಸಾಬ ಮುಲ್ಲಾ (ವಕೀಲ) ಇವರು ಕೂಡಾ ಅಂಗಾತವಾಗಿ ಬಿದ್ದಿದ್ದು, ಇವರ ಬಾಯಿಂದ ರಕ್ತ ಬಂದು, ಬಲಗೈ ಕೈ ಮುರಿದ್ದು , ಬಲ ತೋಡೆಯಿಂದ ಕಪಗಡಿನವರೆಗೆ ಭಾರಿ ಪ್ರಮಾಣ ಗಾಯ ಹೊಂದಿ, ಮೌಂಸ ಖಂಡ ಹೋರ ಬಂದು ಸ್ಥಳದಲ್ಲೆ ಮೃತಪಟ್ಟಿದ್ದರು, ನಮ್ಮ ಮಾಮ ಸೈಯದ ರಿಯಾಜ್ ಈತನ ಬಗ್ಗೆ ವಿಚಾರಿಸಲಾಗಿ ಈತನು ಕಾಣಲಿಲ್ಲಾ 108 ಅಂಬುಲೆನ್ಸ್ ದಲ್ಲಿ ಕಲಬುರಗಿ ದವಾಖಾನೆ ಕಡೆಗೆ ಹೋಗಿರುವ ಬಗ್ಗೆ ಗೋತ್ತಾಯಿತು. ಅಲ್ಲೆ ಸ್ವಲ್ಪ ಅಂತರದಲ್ಲಿ ಬಿದ್ದಿರುವ ಎಕ್ಟೀವ್ ಗಾಡಿ ನಂ ಟಿ.ಎಸ್-12-ಇಹೆಚ್-6235 ಮತ್ತು ಹಿರೋ ಹೊಂಡಾ ಸ್ಪೇಂಡರ್ ಕೆಎ-32-ಇಸಿ-7601 ನೇದ್ದವುಗಳು ಪೂರ್ತಿಯಾಗಿ ಜಖಂಗೊಂಡು ಬಿದ್ದಿದ್ದು, ಬದಿಯಲ್ಲಿ ಕಬ್ಬಿನ ಲೋಡ ಇರುವ ಲಾರಿ ನಂ ಎಪಿ-13-ಡ್ಬ್ಲೂ-6781 ಮಗ್ಗಲಾಗಿ ಬಿದಿದ್ದು, ಅದರ ಬದಿಯಲ್ಲಿ ಒಂದು ಕ್ರೋಜರ ಜೀಪ್ ನಂ ಕೆಎ-27--598 ನೇದ್ದು ಜಖಂಗೊಂಡು ನಿಂತಿದ್ದು, ಸ್ವಲ್ಪ ಅಂತರದಲ್ಲಿ ಇನ್ನೊಂದು ಕಬ್ಬು ಲೋಡ ತುಂಬಿದ ಲಾರಿ ನಂ ಎಮ್.ಹೆಚ್-25-ಬಿ-9302 ನೇದ್ದು ಮುಂದಿನ ಭಾಗ ಜಖಂಗೊಂಡು ನಿಂತಿದ್ದು, ಅಲ್ಲೆ ಬದಿಯಲ್ಲಿ ಪೀಕಪ್ ಗಾಡಿ ನಂ ಕೆಎ-22-ಸಿ-4151 ನೇದ್ದು ಕೂಡ ಜಖಂವಾಗಿ ನಿಂತಿದ್ದು, ಈ ಬಗ್ಗೆ ವಿಚಾರಿಸಲಾಗಿ ಅಲ್ಲೆ ಇರುವ ಕ್ರೋಜರ ಜೀಪ ಚಾಲಕ ಸೂರ್ಯಕಾಂತ ತಂದೆ ಸುಧಾಕರ ಚವ್ಹಾಣ , ರೇವಣಯ್ಯ ತಂದೆ ಗುರಯ್ಯ ನಾವದಗಿ ಹಾಗೂ ಪೀಕಪ್ ವಾಹನದ ಚಾಲಕ ಸರತಾಜಬಾಬ ತಂದೆ ಫತೃ ಪಟೇಲ್ ಮುಡ್ಡಿ ವಿಚಾರಣೆಯಲ್ಲಿ ಹೆಸರು ತಿಳಿದುಕೊಂಡಿದ್ದು. ಇವರೆಲ್ಲರೂ ತಿಳಿಸಿದೆನೆಂದರೆ ಈಗ ರಾತ್ರಿ 7-45 ಗಂಟೆ ಸುಮಾರಿಗೆ ಈ ಸ್ಥಳದಲ್ಲಿ ಎಕ್ಟೀವ್ ಮೋಟಾರ ಸೈಕಲ್ ಮೇಲೆ ಇಬ್ಬರು ಮತ್ತು ಸ್ಪೇಂಡರ ಮೋಟಾರ ಸೈಕಲ್ ಮೇಲೆ ಒಬ್ಬರು ಕಲಬುರಗಿ ರೋಡಿನ ಕಡೆಯಿಂದ ಹುಮನಾಬಾದ ರೋಡಿನ ಕಡೆಗೆ ಹೋಗುವಾಗ ಎದುರಗಡೆ ರೋಡಿನ ಕಡೆಯಿಂದ ಲಾರಿ ನಂ ಎಪಿ-13-ಡ್ಬ್ಲೂ-6781 ನೇದ್ದರ ಚಾಲಕನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಎರಡು ಮೋಟಾರ ಸೈಕಲ್ ಸವಾರರಿಗೆ ಡಿಕ್ಕಿ ಹೊಡೆದು ಲಾರಿ ಪಲ್ಟಿ ಮಾಡಿಕೊಂಡಿದ್ದು, ಅಲ್ಲೆ ಕ್ರೋಜರ ಜೀಪ್  ಹುಮನಾಬಾದ ರೋಡಿನ ಕಡೆಗೆ ಹೋಗುವಾಗ ಇದರ ಎದುರಿನ ರೋಡಿನ ಕಡೆಯಿಂದ ಇನ್ನೊಂದು ಕಬ್ಬು ತುಂಬಿದ ಲಾರಿ ನಂ ಎಮ್.ಹೆಚ್-25-ಬಿ-9302 ನೇದ್ದರ ಚಾಲಕನು ಕೂಡ ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದವನೆ ಆ ಮೋಟಾರ ಸೈಕಲಗಳಿಗೆ ಮತ್ತು ಆ ಜನರಿಗೆ ಹಾಯಿಸಿಕೊಂಡು ,ಕ್ರೋಜರ ಜೀಪಿಗೆ ಡಿಕ್ಕಿ ಹೊಡೆದು, ಹಾಗೆ ಹಿಂದೆ ಬರುತ್ತಿರುವ ಪೀಕಪ್ ಗಾಡಿ ನಂ ಕೆಎ-22-ಸಿ-4151 ನೇದ್ದಕ್ಕೆ ಡಿಕ್ಕಿ ಹೊಡೆದುಕೊಂಡಿದ್ದು ಇದ್ದರಿಂದ ಇವರಿಬ್ಬರು ಸ್ಥಳದಲ್ಲೆ ಮೃತಪಟ್ಟಿದ್ದು ಮತ್ತು ಇನ್ನೋಬ ಗಾಯಾಳುವಿನ ತೆಲೆಗೆ ಮತ್ತು ಬಲಕಾಲಿಗೆ ಭಾರಿ ಗಾಯವಾಗಿದ್ದರಿಂದ ಉಪಚಾರ ಕುರಿತು 108 ಅಂಬುಲೆನ್ಸ್ ದಲ್ಲಿ ತೆಗೆದುಕೊಂಡು ಹೋಗಿರುತ್ತಾರೆ ಇನ್ನೂ ಈ ಘಟನೆಯಲ್ಲಿ ಯಾರಿಗಾದರು ಗಾಯಗಳು ಆಗಿರಬಹುದು ಮತ್ತು ಅಪಘಾತ ಪಡಿಸಿದ ಲಾರಿ ಚಾಲಕರನ್ನು ನೋಡಿದ್ದು ಅವರು ಇಲ್ಲಿಂದ ಓಡಿ ಹೋಗಿರುತ್ತಾರೆ ಅಂತಾ ಶ್ರೀ. ಶೇಖ ಖಾಜಾ ತಂದೆ ಶೇಖ ನಿಜಾಮೋದ್ದಿನ ಶೇಖ ಸಾ: ಅರಫತ ಕಾಲೋನಿ ಬಸವಕಲ್ಯಾಣ ಜಿ. ಬೀದರ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಟಾಣೆಯಲ್ಲಿ ಪ್ರಕರಣ ದಾಖಲಾಗಿದೆ.

15 December 2018

KALABURAGI DISTRICT REPORTED CRIMES

ಅಕ್ರಮವಾಗಿ ನಾಡ ಪಿಸ್ತೂಲ ಇಟ್ಟುಕೊಂಡವನ ಬಂಧನ :
ಅಫಜಲಪೂರ ಠಾಣೆ : ದಿನಾಂಕ 14-12-2018 ರಂದು ಆಳಂದ ಕಡೆಯಿಂದ ದುಧನಿ ಮಾರ್ಗವಾಗಿ ಒಬ್ಬ ವ್ಯೆಕ್ತಿ ಪಿಸ್ತೂಲು ಇಟ್ಟುಕೊಂಡು ಮೋಟರ ಸೈಕಲ ಮೇಲೆ ಅಫಜಲಪೂರ ಕಡೆಗೆ ಬರುತ್ತಿದ್ದಾರೆ ಅಂತ ಮಾಹಿತಿ ಬಂದ ಮೇರೆಗೆ ಶ್ರೀ ಮಂಜುನಾಥ ಹೂಗಾರ ಪಿ.ಎಸ್. ಅಫಜಲಪೂರ ಪೊಲೀಸ್ ಠಾಣೆ  ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಮೇಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಅಫಜಲಪೂರದುಧನಿ ರಸ್ತೆಗೆ ಇರುವ ಹಳ್ಯಾಳ ಕ್ರಾಸ ನಿಂತುಕೊಂಡು ದುಧನಿ ಕಡೆಯಿಂದ ಬರುವಂತಹ ಮೋಟರ ಸೈಕಲಗಳ ಮೇಲೆ ನಿಗಾ ಇಟ್ಟು, ಮೋಟರ ಸೈಕಲಗಳನ್ನು ಚೆಕ್ ಮಾಡುತ್ತಿದ್ದೇವು, ದುಧನಿ ಕಡೆಯಿಂದ ಒಂದು ಮೋಟರ ಸೈಕಲ ಮೇಲೆ ಬರುತ್ತಿದ್ದ ಒಬ್ಬ ವ್ಯೆಕ್ತಿ ನಮ್ಮನ್ನು ನೋಡಿ ಮೋಟರ ಸೈಕಲನ್ನು ದುಧನಿ ಕಡೆಗೆ ತಿರುಗಿಸಿ ಮೋಟರ ಸೈಕಲನ್ನು ಅತಿವೇಗವಾಗಿ ಓಡಿಸಿಕೊಂಡು ಹೊರಟನು. ಆಗ ನಮಗೆ ಸದರಿಯವನ ಮೇಲೆ ಬಲವಾದ ಸಂಶಯ ಬಂದು ನಮ್ಮ ಇಲಾಖಾ ವಾಹನದಲ್ಲಿ ಪಂಚರೊಂದಿಗೆ ಬೆನ್ನಟ್ಟಿಕೊಂಡು ಹೋಗಿ ಮುಂದೆ ದುಧನಿ ರೋಡಿಗೆ ಇರುವ ಪ್ರಗತಿ ಡಾಬಾದ ಹತ್ತಿರ ಮೋಟರ ಸೈಕಲಕ್ಕೆ ನಮ್ಮ ಇಲಾಖಾ ವಾಹನವನ್ನು ಅಡ್ಡಲಾಗಿ ನಿಲ್ಲಿಸಿ ಸದರಿಯವನನ್ನು ಸುತ್ತುವರೆದು ಸದರಿ ವ್ಯೆಕ್ತಿಯನ್ನು ಹಿಡಿದು ಹೆಸರು ವಿಳಾಸ ವಿಚಾರಿಸಲಾಗಿ ಶ್ರೀಮಂತ ತಂದೆ ಸದಾಶಿವ ದಣ್ಣೂರೆ ಸಾ|| ನಿರಗುಡಿ ತಾ|| ಆಳಂದ ಅಂತ ತಿಳಿಸಿದನು. ನಂತರ ಸದರಿಯವನನ್ನು ಪಂಚರ ಸಮಕ್ಷಮ ಚೆಕ್ ಮಾಡಲಾಗಿ ಸದರಿಯವನ ಹತ್ತಿರ ಪ್ಯಾಂಟಿನ ಜೇಬಿನಲ್ಲಿ ಒಂದು ನಾಡ ಪಿಸ್ತೂಲು ದೊರೆಯಿತು. ಸದರಿಯವನಿಗೆ ಪಿಸ್ತೂಲ ಬಗ್ಗೆ ವಿಚಾರಿಸಲು, ಸದರಿ ಪಿಸ್ತೂಲನ್ನು ಮಾದನ ಹಿಪ್ಪರಗಾದ ಅಶೋಕ ಎಂಬುವವನ ಹತ್ತಿರ 20,000/- ರೂ ಖರಿದಿ ಮಾಡಿರುತ್ತೇನೆ. ಸದರಿ ಅಶೋಕನು ಈಗಾಗಲೆ ಮೃತಪಟ್ಟಿರುತ್ತಾನೆ. ನಾನು ಪಿಸ್ತೂಲನ್ನು ಕಡಿಮೆ ರೇಟಿಗೆ ಖರೀದಿ ಮಾಡಿ, ಹೆಚ್ಚಿನ ರೇಟಿಗೆ ಮಾರಾಟ ಮಾಡಲು ತಗೆದುಕೊಂಡಿರುತ್ತೇನೆ. ಇಂದು ಅಫಜಲಪೂರದಲ್ಲಿ ಯಾರಿಗಾದರೂ ಮಾರಾಟ ಮಾಡಬೇಕು ಎಂದು ಮೋಟರ ಸೈಕಲ ಮೇಲೆ ತಗೆದುಕೊಂಡು ಹೋಗುತ್ತಿದ್ದೇನೆ. ಸದರಿ ಪಿಸ್ತೂಲು ನಾಡ ಪಿಸ್ತೂಲು ಇದ್ದು, ಇದಕ್ಕೆ ಯಾವುದೆ ಪರನಾನಿಗೆ ಇರುವುದಿಲ್ಲ ಅಂತಾ ತಿಳಿಸಿದನು. ಸದರಿ ಮೋಟರ ಸೈಕಲ ಪರಿಶೀಲಿಸಿ ನೋಡಲಾಗಿ ಹಿರೋ ಹೆಚ್.ಎಫ್ ಡಿಲೆಕ್ಸ ಕಂಪನಿಯ ಕೆಂಪು ಬಣ್ಣದ್ದು ಇದ್ದು ನಂ ಕೆಎ-32 ಇಕೆ-6280 ಇರುತ್ತದೆ. ಸದರಿ ಆರೋಪಿತನು ಅಕ್ರಮವಾಗಿ ಇಟ್ಟುಕೊಂಡ ಒಂದು ನಾಡ ಪಿಸ್ತೂಲು ||ಕಿ|| 30,000/- ರೂ ನ್ನು ಹಾಗೂ ಪಿಸ್ತೂಲು ಮಾರಾಟ ಮಾಡಲು ಬಳಸಿದ ಹಿರೋ ಹೆಚ್.ಎಫ್ ಡಿಲೆಕ್ಸ ಕಂಪನಿಯ ಕೆಂಪು ಬಣ್ಣದ್ದು ಇದ್ದು ನಂ ಕೆಎ-32 ಇಕೆ-6280 ಅಕಿ-25,000/- ರೂ ನೇದ್ದನ್ನು ಪಂಚರ ಸಮಕ್ಷಮ ಜಪ್ತಿ ಪಂಚನಾಮೆ ಮೂಲಕ ಪಂಚರ ಸಮಕ್ಷಮ ಜಪ್ತ ಮಾಡಿಕೊಂಡು ಸದರಿಯವನೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಪಘಾತ ಪ್ರಕರಣ :
ಯಡ್ರಾಮಿ ಠಾಣೆ : ದಿನಾಂಕ: 14-12-2018 ರಂದು ಅಯ್ಯಣ ಮುತ್ಯಾನ ಜಾತ್ರೆಗೆ ಶ್ರೀ ದೇವರಾಜ ತಂದೆ ಬಸವರಾಜ ಪೂಜಾರಿ ಸಾ|| ಮದ್ದರಕಿ ತಾ|| ಶಹಾಪುರ ರವರು ನಮ್ಮ ತಮ್ಮ ಶಿವರಾಜ ಹಾಗು ನಮ್ಮೂರ ರಾಜೇಂದ್ರ ತಂದೆ ಸಿದ್ರಾಮಪ್ಪ ಬಿಳವಾರ, ಮಹೇಶ ತಂದೆ ಶರಣಯ್ಯಾ ಸ್ಥಾವರಮಠ, ರಮೇಶ ತಂದೆ ಮಲ್ಲಪ್ಪ ನೈಕೋಡಿ ಹಿಗೆಲ್ಲರೂ ಕೂಡಿ ಖಾಸಗಿ ವಾಹನದಲ್ಲಿ ಜಮಖಂಡಿಗೆ ಬಂದಿರುತ್ತೇವೆ, ನಂತರ ಮದ್ಯಾಹ್ನ 3-00 ಗಂಟೆಯ ಸುಮಾರಿಗೆ ಮೂತ್ರ ವಿಸರ್ಜನೆ ಮಾಡಲು ನಾನು ನಮ್ಮ ತಮ್ಮ ಶಿವರಾಜ ಹಾಗೂ ನಮ್ಮೊಂದಿಗೆ ಇದ್ದ ರಾಜೇಂದ್ರ, ಮಹೇಶ, ರಮೇಶ ಎಲ್ಲರೂ ಕೂಡಿ ಜಮಖಂಡಿಯಿಂದ ನಡೆದುಕೊಂಡು ಕೊಣ್ಣೂರ ಕ್ರಾಸ ಕಡೆ ರಸ್ತೆಯ ಎಡಬದಿಯಿಂದ ಹೋಗುತ್ತಿದ್ದೆವು ನಮ್ಮ ತಮ್ಮ ಶಿವರಾಜ ಇವನು ನಮ್ಮಿಂದ ಸ್ವಲ್ಪ ಮುಂದೆ ಹೋಗುತ್ತಿದ್ದನು, ಆಗ ಎದುರುಗಡೆಯಿಂದ ಇಳಿಜಾರಿಗೆ ಮೂರು ಚಾಕಿನ ಟಂಟಂ ಗೂಡ್ಸ್ ವಾಹನದ ಚಾಲಕ ತನ್ನ ವಾಹನವನ್ನು ಅತಿವೇಗವಾಗಿ ಚಲಾಸಿಕೊಂಡು ಬಂದು ನಮ್ಮ ತಮ್ಮ ಶಿವರಾಜನಿಗೆ ಎದುರುಗಡೆಯಿಂದ ಡಿಕ್ಕಿ ಪಡೆಸಿದಾಗ ನಮ್ಮ ತಮ್ಮನ ಎಡಗಲ್ಲಿಗೆ, ಎಡಮೆಲಕಿಗೆ ಮತ್ತು ತಲೆಗೆ ಭಾರಿ ಓಳಪೆಟ್ಟಾಗಿ ಅಲ್ಲಲ್ಲಿ ರಕ್ತ ಬಂದಿರುತ್ತದೆ, ಅದರಂತೆ ಎರಡು ಕಿವಿಗಳಿಂದ ಸಹ ರಕ್ತ ಸೋರುತ್ತಿತ್ತು, ನಂತರ ಅಪಘಾತ ಪಡಿಸಿದ ಟಂಟಂ ಗೂಡ್ಸ್ ವಾಹನದ ಚಾಲಕ ತನ್ನ ವಾಹನವನ್ನು ಸ್ಥಳದಲ್ಲೆ ಬಿಟ್ಟು ಓಡಿಹೋಗಿರುತ್ತಾನೆ, ವಾಹನದ ನಂಬರ ನೋಡಿದ್ದು ಅದರ ನಂ ಕೆ.-32/ಡಿ-2583 ನೇದ್ದು ಇರುತ್ತದೆ. ನಂತರ ನಮ್ಮ ತಮ್ಮನಿಗೆ ಉಪಚಾರ ಕುರಿತು ನಾವು ತಂದ ಖಾಸಗಿ ವಾಹನದಲ್ಲಿ ಹಾಕಿಕೊಂಡು ಯಡ್ರಾಮಿ ಸರಕಾರಿ ಆಸ್ಪತ್ರೆಗೆ ಬರುವಾಗ ಯಡ್ರಾಮಿ ಕೆನಾಲ ಹತ್ತಿರ 4;00 ಪಿ.ಎಂ ಕ್ಕೆ ನಮ್ಮ ತಮ್ಮ ಮೃತ ಪಟ್ಟಿರುತ್ತಾರೆ, ನಂತರ ಅವನ ಶವವನ್ನು ಯಡ್ರಾಮಿ ಸರಕಾರಿ ಆಸ್ಪತ್ರೆಯಲ್ಲಿ ತಂದು ಹಾಕಿರುತ್ತೇವೆ.  ಮೇಲ್ಕಂಡ ಟಂಟಂ ಗೂಡ್ಸ್ ವಾಹನ ಕೆ.-32/ಡಿ-2583 ನೇದ್ದರ ಚಾಲಕನು ತನ್ನ ವಾಹನವನ್ನು ಅತಿವೇಗವಾಗಿ ಮತ್ತು ನಿಸ್ಕಾಳಜಿತನಿದಿಂದ ಚಲಾಯಿಸಿಕೊಂಡು ಬಂದು ನಮ್ಮ ತಮ್ಮ ಶಿವರಾಜನಿಗೆ ಎದುರುಗಡೆಯಿಂದ ಡಿಕ್ಕಿ ಹೊಡೆದು ಅಪಘಾತ ಪಡಿಸಿ ಓಡಿಹೋಗಿರುತ್ತಾನೆ, ಅಪಘಾತದಲ್ಲಿ ನಮ್ಮ ತಮ್ಮನಿಗೆ ಭಾರಿಗಾಯಗಳಾಗಿ ಮೃತ ಪಟ್ಟಿರುತ್ತಾನೆ.  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

14 December 2018

KALABURAGI DISTRICT REPORTED CRIMES

ಅಪಘಾತ ಪ್ರಕರಣ :
ಹೆಚ್ಚುವರಿ ಸಂಚಾರಿ ಠಾಣೆ : ದಿನಾಂಕ 23-11-2018 ಸಾಯಂಕಾಲ 6-40 ಗಂಟೆ ಸುಮಾರಿಗೆ ನನ್ನ ತಾಯಿ ಪಾರ್ವತಿ @ ಮಹಾದೇವಿ ಇವರು ಅವರು ಕೆಲಸ ಮಾಡುವ ಉದನೂರ ರೋಡ ಹತ್ತೀರ ಇರುವ ಹಾಸ್ಟೆಲನಿಂದ ಎನ್.ಈ ಕೆ.ಆರ.ಟಿ.ಸಿ ಬಸ್ಸ ನಂಬರ ಕೆಎ-32/ಎಫ್-2183 ನೇದ್ದರಲ್ಲಿ ಕುಳಿತು  ಬರುವಾಗ ಆರ.ಪಿ ಸರ್ಕಲ ಹತ್ತೀರ ಬರುವ ಅಯ್ಯಾಂಗಾರ ಬೇಕರಿ ಎದುರು ರೋಡ ಮೇಲೆ ಬಸ್ಸ ಚಾಲಕನು ಪ್ರಯಾಣಿಕರು ಇಳಿಯುವ ಸಂಬಂದ ಬಸ್ಸ ನಿಲ್ಲಿಸಿದಾಗ ನನ್ನ ತಾಯಿ ಬಸ್ಸಿನಿಂದ ಇಳಿಯುತ್ತಿದ್ದಾಗ ಬಸ್ಸ ಚಾಲಕ ವೀರಭದ್ರಯ್ಯಾ ಇತನು ನನ್ನ ತಾಯಿ ಬಸ್ಸಿನಿಂದ ಇಳಿಯುತ್ತೀರುವದನ್ನು ನೋಡದೆ ಮತ್ತು ಬಸ್ಸ ಕಂಡೆಕ್ಟರ್ ಸಿಟಿ ಹೊಡೆಯದೆ ಇದ್ದರು ಕೂಡಾ ಬಸ್ಸನ್ನು ಒಮ್ಮಲೆ ಅತಿವೇಗವಾಗಿ ಮತ್ತು ನಿಷ್ಕಾಳಿಜಿತನದಿಂದ ಚಲಾಯಿಸಿ ನನ್ನ ತಾಯಿಯವರಗೆ ಬಸ್ಸಿನ ಬಾಗಿಲಿನಿಂದ ಬಿಳಿಸಿ ಅಪಘಾತ ಪಡಿಸಿದ್ದು ದಿನಾಂಕ 24-12-2018 ರಂದು ನನ್ನ ತಾಯಿಗೆ ಹೆಚ್ಚಿನ ಉಪಚಾರ ಕುರಿತು ಸೊಲಾಪೂರ ಸಿ.ಎನ್.ಎಸ್ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿ ಉಪಚಾರ ಮಾಡಿಸಿದ್ದು ಖಾಸಗಿ ಆಸ್ಪತ್ರೆಯ ಖರ್ಚು ವೆಚ್ಚ ಹೆಚ್ಚಿಗೆ ಬರುತ್ತಿದ್ದರಿಂದ ದಿನಾಂಕ 12-12-2018 ರಂದು ನನ್ನ ತಾಯಿಗೆ ಕಲಬುರಗಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಉಪಚಾರ ಕುರಿತು ಕರೆದುಕೊಂಡು ಬಂದು ಸೇರಿಕೆ ಮಾಡಿದ್ದು ನನ್ನ ತಾಯಿ ಪಾರ್ವತಿ @ ಮಹಾದೇವಿ ಇವಳು ರಸ್ತೆ ಅಪಘಾತದಲ್ಲಿ ಆದ ಭಾರಿ ಗಾಯದ ಉಪಚಾರ ಪಡೆಯುತ್ತಾ ಸರ್ಕಾರಿ ಆಸ್ಪತ್ರೆಯಲ್ಲಿ ದಿನಾಂಕ 13.12.2018 ರಂದು ಸಾಯಂಕಾಲ 6-25 ಗಂಟೆ ಸುಮಾರಿಗೆ ಅಪಘಾತದಲ್ಲಿ ಆದ ಗಾಯದ ಉಪಚಾರ ಫಲಕಾರಿಯಾಗದೆ ಮೃತಪಟ್ಟಿರುತ್ತಾಳೆ. ಅಂತಾ ಶ್ರೀ ಕೃಷ್ಣಾ ತಂದೆ ಸಿದ್ರಾಮಪ್ಪಾ ಹೊಸ್ಮನಿ ಸಾ: ಮಾಹಾದೇವ ನಗರ ಶಾಹಾಬಜಾರ ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಕ್ರಮವಾಗಿ ಮರಳು ಸಾಗಿಸುತ್ತಿದ್ದ ಟ್ರ್ಯಾಕ್ಟರ ಜಪ್ತಿ :
ಅಫಜಲಪೂರ ಠಾಣೆ : ದಿನಾಂಕ 13-12-2018 ರಂದು  ಸೋನ್ನ  ಗ್ರಾಮದ ಭೀಮಾ ನದಿಯಿಂದ ಟ್ರಾಕ್ಟರದಲ್ಲಿ ಅಕ್ರಮವಾಗಿ ಮರಳು ತುಂಬಿ ಕೊಂಡು ಮರಳು ಸಾಗಾಣಿಕೆ ಮಾಡುತ್ತಿದ್ದಾರೆ ಅಂತಾ ಬಾತ್ಮಿ ಬಂದ ಮೇರೆಗೆ ಪಿ/ಎಸ್/ಐ/ ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸೊನ್ನ ಕ್ರಾಸ ಹತ್ತಿರ ಇದ್ದಾಗ  ನಮ್ಮ ಎದುರಿನಿಂದ ಒಂದು ಟ್ಯಾಕ್ಟರ ಬರುತ್ತಿತ್ತು, ಸದರಿ ಟ್ರಾಕ್ಟರ ಚಾಲಕನು ನಮ್ಮ ಪೊಲೀಸ್  ಜೀಪ ನೋಡಿ ತನ್ನ ಟ್ರಾಕ್ಟರ  ಸ್ಥಳದಲ್ಲಿಯೇ ನಿಲ್ಲಿಸಿ ಓಡಿ ಹೋದನು. ನಂತರ ನಾವು ಪಂಚರ ಸಮಕ್ಷಮ ಸದರಿ ಟ್ಯಾಕ್ಟರ ಹತ್ತಿರ ಹೋಗಿ ಚೆಕ್ ಮಾಡಿ ನೋಡಲು ಸ್ವರಾಜ ಕಂಪನಿಯ ಟ್ಯಾಕ್ಟರ ಇದ್ದು ಅದರ ಟ್ರೈಲಿಯಲ್ಲಿ ಮರಳು ತುಂಬಿದ್ದು ಇತ್ತು ಟ್ರ್ಯಾಕ್ಟರ ನಂಬರ ನೋಡಲಾಗಿ ನೊಂದಣಿ ಸಂಖ್ಯೆ ಸ್ಪಷ್ಟವಾಗಿ ಇರಲಿಲ್ಲ, ಅದರ ಇಂಜಿನ ನಂ 39.1308/99A0619 ಚೆಸ್ಸಿ ನಂ 99A036700609 ಅಂತ ಇರುತ್ತದೆ. ಟ್ರ್ಯಾಕ್ಟರ ಅಂದಾಜು ಕಿಮ್ಮತ್ತು 500000/- ರೂ ಮತ್ತು ಸದರಿ ಟ್ರ್ಯಾಕ್ಟರ ಟ್ರೈಲಿಯಲಿದ್ದ ಮರಳಿನ ಒಟ್ಟು ಅಂದಾಜು ಕಿಮ್ಮತ್ತು 3000/- ರೂ ಆಗಬಹುದು. ಮರಳು ತುಂಬಿದ ಟ್ರ್ಯಾಕ್ಟರನ್ನು ಜಪ್ತಿಮಾಡಿಕೊಂಡು ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಹಲ್ಲೆ ಪ್ರಕರಣ :
ಅಫಜಲಪೂರ ಠಾಣೆ : ಶ್ರೀ  ನೀಲಕಂಠ ತಂದೆ ಶಾಂತಪ್ಪ ದೋಡಮನಿ ಸಾ: ಗೌರ (ಬಿ) ರವರು ಊರಲ್ಲಿ ಶ್ರೀ ಹುಚ್ಚಲಿಂಗೇಶ್ವರ ದೇವಸ್ಥಾನ ಇರುತ್ತದೆ. ಊರಿನ ಗುರು ಹಿರಿಯರು ಕೂಡಿಕೊಂಡು ಸದರಿ ದೇವಸ್ಥಾನದಲ್ಲಿ ದಿನಾಂಕ 03-03-2019 ರಂದು ಕಳಸಾರೋಹಣ ಹಾಗೂ ಮೂರ್ತಿ ಪ್ರತಿಷ್ಟಾಪನೆ ಮತ್ತು ಸಾಮೋಹಿಕ ವಿವಾಹ ಕಾರ್ಯಕ್ರಮ ಹಮ್ಮಿಕೊಂಡಿದ್ದು ಇರುತ್ತದೆ. ಸದರಿ ಕಾರ್ಯಕ್ರಮಕ್ಕೆ ಸಂಭಂದಿಸಿದ ಪೋಸ್ಟರಗಳನ್ನು ಗ್ರಾಮದಲ್ಲಿ ಹಚ್ಚಿಲಾಗಿದ್ದು ಸುಮಾರು 3-4 ದಿನಗಳಿಂದ ನಮ್ಮೂರಿನ ಪ್ರಕಾಶ ತಂದೆ ಮಹಾದೇವಪ್ಪ ದೋಡ್ಡಮನಿ ಎಂಬಾತನು ಸದರಿ ಪೋಷ್ಟರಗಳನ್ನು ಹರಿದು ಹಾಕುವುದು ಹಾಗೂ ಪೋಸ್ಟರದಲ್ಲಿನ ದೇವರ ಚಿತ್ರಕ್ಕೆ ಮತ್ತು ಗಣ್ಯ ವ್ಯಕ್ತಿಗಳ ಭಾವ ಚಿತ್ರಕ್ಕೆ ಚಪ್ಪಲಿಯಿಂದ ಹೊಡೆದು ಅವಮಾನ ಮಾಡುತ್ತಿರುತ್ತಾನೆ. ನಿನ್ನೆ ದಿನಾಂಕ 12-12-2018 ರಂದು ರಾತ್ರಿ 8:00 ಗಂಟೆ ಸುಮಾರಿಗೆ ನಾನು ಮತ್ತು ನಮ್ಮೂರಿನವರಾದ 1) ಹುಚ್ಚಪ್ಪ ತಂದೆ ಶಂಕರ ಸಿಂಗೆ 2) ಮಡೇಪ್ಪ ತಂದೆ ದವಲಪ್ಪ ಅಂಗಡಿ 3) ಶಿವರಾಯ ತಂದೆ ಮಲಕಪ್ಪ ವಠಾರ ಇನ್ನಿತರರೂ ಕೂಡಿಕೊಂಡು ಶ್ರೀ ಹುಚ್ಚಲಿಂಗೇಶ್ವರ ದೇವಸ್ಥಾನಕ್ಕೆ ಹೋದಾಗ ದೇವಸ್ಥಾನದಲ್ಲಿ ಪ್ರಕಾಶ ದೋಡ್ಡಮನಿ ಈತನು ಗುಡಿಯಲ್ಲಿ ಹೋಗಿ ಸರಾಯಿ ಕುಡಿಯುತ್ತಾ ಕುಳಿತಿದ್ದಾದ್ದನು, ಆಗ ನಾವು ಸದರಿ ಪ್ರಕಾಶನಿಗೆ ನಾವು ಪೂಜೆ ಮಾಡುವ ಗುಡಿ ಇದು, ನೀನು ಈ ರೀತಿ ಗುಡಿಯಲ್ಲಿ ಸರಾಯಿ ಕುಡಿಯುತ್ತಾ ಕುಳಿತರೆ ಹೇಗೆ ಎಂದು ಕೇಳಿದಾಗ ಬೋಸಡಿ ಮಕ್ಕಳ್ಯಾ ದೇವರ ಗುಡಿ ಇದ್ರ ನಿಮಗ ಇದ್ದರಬೇಕು ನನಗಲ್ಲ ಎಂದು ನಮಗೆ ಕೆಟ್ಟ ಕೆಟ್ಟ ಶಬ್ದಗಳಿಂದ ಬೈದು ಏನ ಮಾಡ್ಕೋತಿರಿ ಮಾಡ್ಕೊರಿ ಎಂದು ಅಲ್ಲೆ ಎದುರುಗಡೆ ಮೂತ್ರ ವಿಸರ್ಜನೆ ಮಾಡಿ ನನಗೆ ಮಗನೆ ನಿಂದೆ ಜಾಸ್ತಿ ನಡದಾದ ನನ್ನ ವಿಷಯಕ್ಕೆ ಬಂದರೆ ನಿನಗ ಜೀವ ಸಹಿತ ಬಿಡುವುದಿಲ್ಲ. ನಿನ್ನಷ್ಟಕ್ಕೆ ನೀನಿರಬೇಕು ಎಂದು ಬೆದರಿಕೆ ಹಾಕಿ ಹೋಗಿರುತ್ತಾನೆ.   ಸದರಿ ಪ್ರಕಾಶ ತಂದೆ ಮಹಾದೇವಪ್ಪ ದೋಡ್ಡಮನಿ ಸಾ|| ಗೌರ (ಬಿ) ಈತನು ನಮ್ಮ ಮತಕ್ಕೆ ಅಪಮಾನ ಮಾಡುವ ಉದ್ದೇಶದಿಂದ ನಮ್ಮ ಪವಿತ್ರ ಸ್ಥಾನವಾದ ಪೂಜಾ ಸ್ಥಳವೆಂದು ಬಾವಿಸಿ ಪೂಜೆ ಪುನಸ್ಕಾರಗಳನ್ನು ಮಾಡುವ ಶ್ರೀ ಹುಚ್ಚಲಿಂಗೇಶ್ವರ ಗುಡಿಯಲ್ಲಿ ಸರಾಯಿ ಕುಡಿದು, ಮೂತ್ರ  ವಿಸರ್ಜನೆ ಮಾಡಿ ನಮ್ಮ ಮತಕ್ಕೆ ಅಪಮಾನ ಮಾಡಿರುತ್ತಾನೆ ಹಾಗೂ ಕೇಳಲು ಹೋದ ನನಗೆ ಮತ್ತು ನನ್ನ ಜೋತೆಗೆ ಇದ್ದ1) ಹುಚ್ಚಪ್ಪ ತಂದೆ ಶಂಕರ ಸಿಂಗೆ 2) ಮಡೇಪ್ಪ ತಂದೆ ದವಲಪ್ಪ ಅಂಗಡಿ 3) ಶಿವರಾಯ ತಂದೆ ಮಲಕಪ್ಪ ವಠಾರ ಎಲ್ಲರಿಗೂ ಅವಾಚ್ಯ ಶಬ್ದಗಳಿಂದ ಬೈದು ನನಗೆ ಜಿವ ಬೆದರಿಕೆ ಹಾಕಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.