POLICE BHAVAN KALABURAGI

POLICE BHAVAN KALABURAGI

11 October 2018

KALABURAGI DISTRICT REPORTED CRIMES

ವರದಕ್ಷಣೆ ಕಿರುಕಳ ನೀಡಿ ಕೊಲೆ ಮಾಡಿದ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀ.  ಮಹಮ್ಮದ ಅಜಗರ ಅಹೇಮದ @ ಬಸೀರ ಅಹೇಮದ  ಅದೋನಿ ಸಾ;  ಖಾರಿ ಬೌಡಿ ಮೋಮಿನಪೂರ ಕಲಬುರಗಿ  ರವರ  ಮಗಳು ಹಾಜರಾ ಇರಾಂ ಇವಳಿಗೆ  ದಿನಾಂಕ.15-12-2016ನೇ ಸಾಲೀನಲ್ಲಿ ಮಿಜಬಾನಗರ ಹೀರಾಪೂರನ  ಸೈಯದ ನಿಸಾರ ಅಹೇಮದ ಇವರ ಮಗನಾಧ ಸೈಯದ ಆಸೀಫ  ಇತನೊಂದಿಗೆ ಮದುವೆ ಮಾಡಿದ್ದು ಒಬ್ಬ ಗಂಡು ಮಗ ಸೈಯದ ಮಹಮ್ಮದ ಜೈನ ವಯ;1 ವರ್ಷದವನಿರುತ್ತಾನೆ.ಮದುವೆ ಸಮಯದಲ್ಲಿ  ಬಟ್ಟೆ ಬರೀ,ಶೂಟ ಬೂಟ  ಇವಗಳಿಗಾಗಿ 1 ಲಕ್ಷ ರೂಪಾಯಿ ನೀಡಿದ್ದು , 11 ತೊಲೆ ಬಂಗಾರ, ಒಂದು ಹೀರೋ ಹೊಂಡಾ ಫ್ಯಾಶನ ಮೋಟಾರ ಸೈಕಲ್ ಹಾಗೂ ಫರ್ನಿಚರ ಹಾಗೂ ಹಾಂಡೆ ಬಾಂಡೆ ಇತರ ಸಾಮಾನುಗಳನ್ನು ವರೋಪಚಾರದಲ್ಲಿ ಕೋಟ್ಟು ಮುಸ್ಲಿಂ ಸಂಪ್ರಾಯದಂತೆ ಮಹಾರಾಜ ಫಕ್ಸನ ನಿಯರ ಬೇಬಿರೋಜ ಕಾಲೇಜಹತ್ತಿರ ಕಲಬುರಗಿಯಲ್ಲಿ ಮದುವೆ ಮಾಡಿಕೊಟ್ಟಿದ್ದುಇರುತ್ತದೆ.ಮದುವೆಯಾಗಿ 2 ವರ್ಷಗಳಾಗಿದ್ದು. ಹಾಜರಾ ಇರಾಂ ಇವಳ ಮದುವೆಯಾದ 6 ತಿಂಗಳು  ಅವಳ ಗಂಡ ಅತ್ತೆ ಮಾವ , ಮೈದುನ  ಎಲ್ಲರೂ ಚನ್ನಾಗಿ ಇಟ್ಟುಕೊಂಡಿದ್ದು ತದನಂತರ ಮನೆಯಲ್ಲಿ ಕೆಲಸ ಸರಿಯಾಗಿ ಮಾಡುವದಿಲ್ಲಾ ಅಡುಗೆ ಮಾಡುವದಕ್ಕೆ ಬರುವದಿಲ್ಲಾ ಅಂತಾ ಸಣ್ಣ ಪುಟ್ಟ ಕಾರಣಗಳಿಂದ ಅವಳ ಗಂಡ ಸೈಯದ ಆಸೀಫ, ಅತ್ತೆ ಖಾಜಮೀ ಬೇಗಂ, ಮೈದುನ  ಸೈಯದ ಕಲೀಮ ಅಹೇಮದ  ಇವರೆಲ್ಲರೂ  ಅವಾಚ್ಯ ಶಬ್ದಗಳಿಂದ ಬೈಯುತ್ತಾ ಮಾನಸಿಕ ಹಾಗೂ ದೈಹಿಕವಾಗಿ ಕಿರಕುಳ ಕೋಡುತ್ತಾ ಬಂದಿದ್ದು ಈ ವಿಷಯ  ಆಗಾಗ ನಮ್ಮ ಮನೆಗೆ ಬಂದಾಗ  ಈ ಎಲ್ಲಾ ವಿಷಯ ಹೇಳುತಿದ್ದಳು  ಆಗ ನಾನು ಮತ್ತು ನನ್ನ ಹೆಂಡತಿ  ಶಹನಾಜ ಬೇಗಂ ಇಬ್ಬರು ಕೂಡಿಕೊಂಡು ಅವರ ಮನೆಗೆ ಹೋಗಿ ನನ್ನ ಮಗಳು ಇನ್ನೂ ಚಿಕ್ಕವಳಿದ್ದಾಳೆ ಕೆಲಸ ಮಾಡುತ್ತಾಳೆ ಸ್ವಲ್ಪ ಸಂಬಳಸಿಕೊಳ್ಳಿರಿ ಅಂತಾ  ಅವಳ ಅತ್ತೆ , ಮಾವ , ಗಂಡನಿಗೆ ನಾವು ಅವರಿಗೆ ಕೈಜೋಡಿಸಿ ತಿಳಿ ಹೇಳಿ ಬಂದಿರುತ್ತೇವೆ.
ಕಳೆದ 6 ತಿಂಗಳ ಹಿಂದೆ  ನನ್ನ ಎರಡನೆ ಮಗ  ನವೀದ  ಇತನು ನನ್ನ ಮಗಳು ಹಾಜರಾ ಇರಂ ಇವಳ  ಮನೆಗೆ ಹೋದಾಗ  ಅವಳ ಗಂಡ ಸೈಯದ ಆಸೀಪ್  ಇತನು  ಕಪಡಾಬಜಾರದಲ್ಲಿರುವ ನಮ್ಮ ಅಂಗಡಿಯನ್ನು ಬೆರೆಯವರಿಗೆ  ಏಕೆ ಬಾಡಿಗೆ ಕೊಟ್ಟಿದ್ದರಿಂದ ನಾನು ಆಜಾಗೆಯಲ್ಲಿ ಮೆಡಿಕಲ್ ಹಾಕುತ್ತೇನೆ  ನನಗೆ ಕೋಡಬೇಕು ಮತ್ತು ಹಾಗರಗಾ ಕ್ರಾಸ ಹತ್ತಿರ ಇರುವ  ಪ್ಲಾಟಗಳಲ್ಲಿ ನಾವು ಹೈನುಗಾರಿಕೆ ಮಾಡುತ್ತೇವೆ ಪ್ಲಾಟಗಳನ್ನು ವರದಕ್ಷಿಣೆ ರೂಪದಲ್ಲಿ ಕೊಡಬೇಕು ಎಂದು ತಕರಾರು ಮಾಡಿ ಹೇಳಿದ ಬಗ್ಗೆ ನನ್ನ ಮಗ ಬಂದು ಹೇಳಿದನು ನಂತರ ನಾವು ಸುಮ್ಮನಾಗಿದ್ದು ನಂತರ ಕೆಲವು ದಿವಸಗಳ ನಂತರ  ಹಾಜರಾ ಇರಂ ಇವಳಿಗೆ ಅವಳ ಗಂಡ ಸೈಯದ ಆಸೀಪ್ ಮತ್ತು ಅತ್ತೆ  ಖಾಜಬೀಬೇಗಂ, ಮೈದುನ ಸೈಯದ ಕಲೀಮ ,ಹಾಗೂ ಮಾವ ಸೈಯದ ನಿಸಾರ ಅಹೇಮದ , ನಾದನಿ ಕನಿಜ ಬೇಗಂ ಎಲ್ಲರೂ ಕೂಡಿಕೊಂಡು ರಾಂಡ ತುಮರಾ ಬಾಪ ಅಮೀರ ಹೈ ಮಾರ್ಕೆಟ ಮೇ  ದುಖಾನ ಹೈ ಮೆಡಿಕಲ್ ದಾಲನೆವಾಸ್ತೆ ಹಮಾರಕೂ ದಿಲಾದೇವ  ಔರ ಹಾಗರಗಾ ಕ್ರಾಸ ಪಾಸ ರಹೇಸೋ ಪ್ಲಾಟಮೇ  ಡೈರಿ ಚಲಾನೆಕೆ ವಾಸ್ತೆ  ಪ್ಲಾಟ ದೇನಿಕೆಲಿಯ ದುಮಾರಿ ಮಾ ಬಾಪಸೇ ದಿಲಾದೇನಾ ನಹಿತೋ ಬಚ್ಚೆಕು ಲೇ ಕೆ ತುಮಾರಿ ಮಾ ಬಾಪಕಾ ಗರಕೂ ಜಾನಾ  ಅಂತಾ ಕಿರಕುಳ ಕೊಡುವದು ಮತ್ತು ಹೊಡೆಬಡಿ ಮಾಡಿ ದೈಹಿಕ ಕಿರಕುಳ ಕೋಡುತ್ತಾ ಜೀವ ಬೆದರಿಕೆ ಹಾಕುತ್ತಿದ್ದಾರೆ ಅಂತಾ ಒಂದು ವಾರದ ಹಿಂದೆ ನನ್ನ ಮಗಳು ನಮ್ಮ ಮನಗೆ ಬಂದಾಗ ತಿಳಿಸಿರುತ್ತಾರೆ. ನಂತರ ನಾವು ನಿಮ್ಮ ಅತ್ತೆ ಮಾವ ಗಂಡನಿಗೆ ತಿಳಿ ಹೇಳುತ್ತೇವೆ ಅಂತಾ ಹೇಳಿ ಕಳುಹಿಸಿರುತ್ತೆವೆ. ಹೀಗಿದ್ದು  ದಿನಾಂಕ. 9-10-2018 ರಾತ್ರಿ 10-55 ಪಿ.ಎಂ.ಕ್ಕೆ. ನನ್ನ ಮಗ  ವಸೀಮ  ಇತನಿಗೆ ನನ್ನ ಅಳಿಯ ಮಹಮ್ಮದ ವಸೀಂ ಇತನು ಫೋನ ಮಾಡಿ ಅವನಿಗೆ ಮತ್ತು ನನ್ನ ಹಿರಿಯ ಮಗ  ಜಾವೆದ ಅಕ್ತರ ಇಬ್ಬರಿಗೆ ಮನಗೆ ಬಂದು ಹೋಗಿ ಅಂತಾ ಹೇಳಿದನು ಆಗ ಅವರು ಏನಾಗಿದೆ ಅಂತಾ ಕೇಳಿದ ಸರಿಯಾಗಿ ಹೇಳಲಿಲ್ಲಾ ನಂತರ ನಾನು ಮತ್ತು ನನ್ನ ಹೆಂಡತಿ ಶಹನಾಜ ಬೇಗಂ , ಮಕ್ಕಳಾದ ಜಾವೇದ ಅಕ್ತರ , ನವೀದ ಅಹೇಮದ ವಸೀಂ ಅಕ್ತರ,  ಮಹಮ್ಮದ ಮುದಸಿರ ನಗರ  ಹಾಗೂ  ನಮ್ಮ ಸಮ್ಮಂದಿ ಮಹಮ್ಮದ ಸಾಬೀರ ತಂದೆ ಮಹಮ್ಮದ ಇಸ್ಮಾಯಿಲ್ ,  ಅಳಿಯ  ಶಬ್ಬಿರ ಅಲಿ ಎಲ್ಲರೂ ಕೂಡಿಕೊಂಡು ಮಿಜಬಾನಗರದಲ್ಲಿರುವ ನನ್ನ ಮಗಳ ಮನೆಗೆ 11-30 ಪಿ.ಎಂ.ಕ್ಕೆ ಹೋಗಿ ನೋಡಲಾಗಿ  ಅವಳ ಬೆಡ್ಡರೂಮಿನಲ್ಲಿ ಛತ್ತಿಗೆ  ಸೀರೆಯಿಂದ ನೇಣು  ಹಾಕಿಕೊಂಡು ನೇತಾಡುತ್ತಿದ್ದು ಮೃತ ಪಟ್ಟಿದ್ದಳು. ನಂತರ ಗೊತ್ತಾಗಿದ್ದು ಏನೆಂದರೆ ನನ್ನ ಮಗಳು  ಹಾಜರ ಇರಂ ಇವಳ ಗಂಡ  ಸೈಯದ ಆಸೀಫ್ , ಅತ್ತೆ  ಖಾಜಮಿ ಬೇಗಂ, ಮಾವ  ನಿಸಾರ ಅಹೇಮದ , ಮೈದುನ ಸೈಯದ ಕಲೀಮ ಅಹೇಮದ , ನಾದನಿ ಕನಿಜಬೇಗಂ ಇವರೆಲ್ಲರೂ ಕೂಡಿಕೊಂಡು  ನಮ್ಮ ಮಗಳು ಹಾಜರಾ ಇರಂ ಇವಳಿಗೆ ವರದಕ್ಷಿಣೆ ರೂಪದಲ್ಲಿ  ಮಾರ್ಕೆಟನಲ್ಲಿರುವ ದುಕಾನ ಕೊಡಬೇಕು ಮತ್ತು ಹಾಗರಗಾ ಕ್ರಾಸ ಹತ್ತಿರ ಇರುವ ಪ್ಲಾಟಗಳನ್ನು ಅವರ ಹೆಸರಿಗೆ ಮಾಡಿಸಿಕೊಡದಿದ್ದಕ್ಕೆ ನನ್ನ ಮಗಳಿಗೆ  ಮಾನಸಿಕ ಹಾಗೂ ದೈಹಿಕವಾಗಿ ಕಿರಕುಳ ಕೊಟ್ಟು  ಹೊಡೆದು ಕೊಲೆ ಮಾಡಿ ನೇಣು ಹಾಕಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ವಿದ್ಯುತ್  ತಂತಿ ತಗುಲಿ ಅಪಘಾತ ಪ್ರಕರಣ :
ಅಫಜಲಪೂರ ಠಾಣೆ : ಶ್ರೀ  ರಾಮಣ್ಣ ತಂದೆ ಬಸಣ್ಣ ಅಂದೇವಾಡಿ ಸಾ|| ಹೋಸೂರ ತಾ|| ಅಫಜಲಪೂರ ರವರು  ದಿನಾಂಕ 25-08-2018 ರಂದು ನಾನು ಮತ್ತು ಮಲ್ಲಿನಾಥ ಕುಂಬಾರ , ನಾಗಪ್ಪ ತಂದೆ ಗಂಗಪ್ಪ, ಮಲ್ಲಪ್ಪ ತಂದೆ ಸಾತಪ್ಪ ಎಲ್ಲರೂ ಮಣೂರ ಸಬ್ ಸ್ಟೇಷನದಲ್ಲಿ ಕೆಲಸ ಮಾಡುತ್ತಿದ್ದಾಗ ಮದ್ಯಾಹ್ನ 12 ಗಂಟೆ ಸುಮಾರಿಗೆ ನಮ್ಮ ಮೇಲಾಧಿಖಾರಿಗಳಾದ ಅಮೃತರಾವ ಸಿ&ಎಮ್ ಎಇಇ ಕಲಬುರಗಿ ರವರು ನಮ್ಮ ಹತ್ತಿರ ಬಂದು ಕೆಪೆಸೀಟರ್ ಬ್ಯಾಂಕ- 1 ರಿಪೇರಿ ಮಾಡಿದ್ದಿರಾ ಎಂದು ವಿಚಾರಿಸಿದರು. ಆಗ ನಾವು ರಿಪೇರಿ ಮಾಡಿರುವುದಿಲ್ಲ ಎಂದು ತಿಳಿಸಿದಾಗ ಬೇಗ ರಿಪೇರಿ ಮಾಡಿ ಅಂತಾ ತಿಳಿಸಿದ್ದರಿಂದ ನಾವು ಕೆಪೇಸಿಟರ್ ಬ್ಯಾಂಕ-1 ರಲ್ಲಿ ರಿಪೇರಿ ಮಾಡುತ್ತಿದ್ದಾಗ 1:20 ಪಿ ಎಮ್ ಕ್ಕೆ ಕ್ಯಾಪೇಸಿಟರ್ ಬ್ಯಾಂಕ  1 ಮಗ್ಗಲಲ್ಲಿದ್ದ ಎಫ್-2 ಐಪಿ ಫೀಡರ್ ವಿದ್ಯೂತ ಬಸ್ ವಾಯರ್ ನನ್ನ ಕೈಗೆ ತಾಗಿ ಕರೆಂಟ ಶಾಟ್ ಹೊಡೆದು ಕೆಳಗೆ ಬಿದ್ದಿರುತ್ತೇನೆ. ನಂತರ ನನ್ನನ್ನು ಸೋಲ್ಲಾಪೂರದ ಯಶೋದರಾ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿರುತ್ತಾರೆ.  ಮಾನ್ಯ ಅಮೃತರಾವ ಸಿ& ಎಮ್ ಎಇಇ ರವರು ಜೆಸ್ಕಾಂ ಕಲಬುರಗಿ ರವರು  ನಮಗೆ ಕ್ಯಾಪೇಸಿಟರ್ ಬ್ಯಾಂಕ-1 ರಿಪೇರಿ ಮಾಡುವುದಕ್ಕಿಂತ ಮುಂಚೆ ಸದರ ಸುತ್ತ ಮುತ್ತಲಿದ್ದ ವಿದ್ಯೂತ್ ನ್ನು ಬಂದ ಮಾಡಿ ರಿಪೇರಿ ಕೆಲಸಕ್ಕೆ ಹಚ್ಚಿದ್ದರೆ ನನಗೆ ಕರೆಂಟ್ ಶಾಟ್ ಹೊಡೆಯುತ್ತಿರಲಿಲ್ಲ. ನನಗೆ ಕರೆಂಟ್ ಶಾಟ್ ಹೊಡೆಯಲು ಅಮೃತರಾವ ಸಿ& ಎಮ್ ಎಇಇ ಜೆಸ್ಕಾಂ ಕಲಬುರಗಿ ರವರ ನಿರ್ಲಕ್ಷತೆ ಇರುತ್ತದೆ. ಆದ್ದರಿಂದ ಸದರಿಯವರ ಮೇಲೆ ಕಾನೂನು ಕ್ರಮ ಜರೂಗಿಸಲು ವಿನಂತಿ ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

10 October 2018

KALABURAGI DISTRICT REPORTED CRIMES

ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಟಿಪ್ಪರ ಜಪ್ತಿ :
ಅಫಜಲಪೂರ ಠಾಣೆ : ದಿನಾಂಕ 09-10-2018 ರಂದು ಮಣುರ ಗ್ರಾಮದಲ್ಲಿ  ಟಿಪ್ಪರಗಳಲ್ಲಿ ಮರಳು ತುಂಬಿ ಮರಳು ಸಾಗಾಣಿಕೆ ಮಾಡುತಿದ್ದಾರೆ ಎಂದು ಖಚಿತ ಮಾಹಿತಿ ಬಂದ ಮೇರೆಗೆ, ಸಿ.ಪಿ.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ  ಮಣುರ ಗ್ರಾಮ ದಾಟಿ ಹೋಗುತಿದ್ದಾಗ ಶೇಷಗಿರಿ ಕ್ರಾಸ ಹತ್ತಿರ ಒಂದು ಮರಳು ತುಂಬಿದ ಟಿಪ್ಪರ ಹೋಗುತಿದ್ದದನ್ನು ನೋಡಿ ನಮ್ಮ ಜೀಪ ಟಿಪ್ಪರ ಮುಂದೆ ಹೋಗಿ ಟಿಪ್ಪರನ್ನು ನಿಲ್ಲಿಸಿ ಅದರ ಚಾಲಕನಿಗೆ ಹಿಡಿದು ಹೆಸರು ವಿಳಾಸ ವಿಚಾರಿಸಲಾಗಿ ತನ್ನ ಹೆಸರು ಶೇಖರ ತಂದೆ ಚಂದ್ರಕಾಂತ ಜಾಧವ ಸಾ||ಹೈದ್ರಾ ತಾ||ಅಕ್ಕಲಕೋಟ ಅಂತಾ ತಿಳಿಸಿದ್ದು, ನಂತರ ಪಂಚರ ಸಮಕ್ಷಮ ಸದರಿ ಟಿಪ್ಪರನ್ನು ಚೆಕ್ ಮಾಡಲಾಗಿ, ಟಿಪ್ಪರದಲ್ಲಿ ಮರಳು ತುಂಬಿದ್ದು ಇದ್ದು ಅದರ ಮೇಲೆ ನೊಂದಣಿ ನಂಬರ ಇರಲಿಲ್ಲಾ ಅದರ ಇಂಜಿನ ನಂ 400. 952-D-0053058  ಅಂತಾ ಇರುತ್ತದೆ. ಸದರಿ ಟಿಪ್ಪರ ಚಾಲಕನಿಗೆ ಮರಳು ಸಾಗಾಣಿಕೆ ಮಾಡಲು ಸಂಬಂಧಪಟ್ಟ ಅಧಿಕಾರಿಯವರಿಂದ ಪರವಾನಿಗೆ ಪಡೆದುಕೊಂಡ ಬಗ್ಗೆ ದಾಖಲಾತಿಗಳನ್ನು ವಿಚಾರಿಸಲು ತನ್ನ ಹತ್ತಿರ ಯಾವುದೇ ದಾಖಲಾತಿಗಳು ಇರುವುದಿಲ್ಲ ಅಂತ ತಿಳಿಸಿದನು. ಸದರಿ ಟಿಪ್ಪರ ಅಂದಾಜು 10,00,000/- ರೂ ಇದ್ದು, ಅದರಲ್ಲಿದ್ದ ಮರಳು ಅಂದಾಜು 10,000/- ರೂ ಕಿಮ್ಮತ್ತಿನದು ಇದ್ದು ಸದರಿ ಟಿಪ್ಪರ ಮತ್ತು ಚಾಲಕನೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.  
ಮಟಕಾ ಜೂಜಾಟದಲ್ಲಿ ನಿರತವನ ಬಂಧನ :
ಅಫಜಲಪೂರ ಠಾಣೆ : ದಿನಾಂಕ 09-10-2018 ರಂದು ಅಫಜಲಪೂರ ಪಟ್ಟಣದ ರೇವಣಸಿದ್ದೇಶ್ವರ ಗುಡಿಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಹೊಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲರಿ ಅಂತಾ ಅನ್ನುತ್ತಾ ಸಾರ್ವಜನಿಕರ ಮನವೂಲಿಸಿ ಅವರಿಂದ ಹಣ ಪಡೆದು, ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳನ್ನು ಕೊಟ್ಟು ಮಟಕಾ ಬರೆದುಕೊಳ್ಳುತ್ತಿದ್ದಾನೆ ಅಂತಾ ಖಚಿತ ಮಾಹಿತಿ ಬಂದ ಮೇರೆಗೆ ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಮಾನ್ಯ ಸಿಪಿಐ ಸಾಹೇಬರ ಮಾರ್ಗದರ್ಶನದಂತೆ ಅಫಜಲಪೂರ  ಪಟ್ಟಣದ ರೇವಣಸಿದ್ದೇಶ್ವರ ಗುಡಿಯಿಂದ ಸ್ವಲ್ಪ ದೂರು ನಮ್ಮ ವಾಹನವನ್ನು ನಿಲ್ಲಿಸಿ ಮರೆಯಾಗಿ ನಿಂತು ನೋಡಲು, ಗುಡಿಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಹೋಗಿ ಬರುವ ಜನಗಳಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತಾ ಕರೆದು, ಜನರಿಂದ ಹಣ ಪಡೆದು ಅವರಿಗೆ ಅಂಕಿ ಸಂಖ್ಯೆ ಬರೆದುಕೊಟ್ಟು, ಮಟಕಾ ಬರೆದುಕೊಳ್ಳುತ್ತಿದ್ದನು. ಆಗ ನಾವು  ದಾಳಿ ಮಾಡಿ ಹಿಡಿದು ಸದರಿಯವನ ಹೆಸರು ವಿಳಾಸ ವಿಚಾರಿಸಲಾಗಿ ಸಂಜೀವಕುಮಾರ ತಂದೆ ಶರಣಗೌಡ ಪಾಟೀಲ ಸಾ|| ಗೌರ (ಬಿ) ಗ್ರಾಮ ತಾ|| ಅಫಜಲಪೂರ ಅಂತಾ ತಿಳಿಸಿದ್ದು, ಸದರಿಯವನ ವಶದಿಂದ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 5800/-  ರೂಪಾಯಿ ನಗದು ಹಣ ಹಾಗೂ ಅಂಕಿ ಸಂಖ್ಯೆ ಬರೆದ ಒಂದು ಮಟಕಾ ಚೀಟಿ ಮತ್ತು ಒಂದು ಬಾಲ ಪೆನ್ನ  ದೊರೆತವು,  ಸದರಿಯವುಗಳನ್ನು ವಶಕ್ಕೆ ತೆಗೆದುಕೊಂಡು ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಸ್ವಾಭಾವಿಕ ಸಾವು ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀ ಸುರಜ ತಂದೆ ರಾಮದಾಸ ಪಾಲನಕರ ಸಾ:ಮಹಾಲಕ್ಷ್ಮೀ ಲೇಔಟ ಕಲಬುರಗಿ ರವರಿಗೆ ಸ್ನೇಹಾ :14 ವರುಷ ಮತ್ತು ಸಮರ್ಥ :12 ವರ್ಷ ಅಂತಾ ಇಬ್ಬರೂ ಮಕ್ಕಳಿದ್ದು ಇಬ್ಬರೂ ಶಾಲೆಗೆ ಹೋಗುತ್ತಾರೆ. ಮನೆಯಲ್ಲಿ ನಾನು ಮತ್ತು ನನ್ನ ಹೆಂಡತಿ ಪೂಜಾ ಮತ್ತು ನನ್ನ ಮಕ್ಕಳು ಇರುತ್ತೇವೆ ನನ್ನ ಮಗನಾದ ಸಮರ್ಥ ಇತನ ಪರೀಕ್ಷೆ ನಡೆದಿದ್ದು ಅವನಿಗೆ ಪರೀಕ್ಷೆ ಸಂಬಂಧ ಪ್ರತ್ಯೇಕ ಕೋಣೆ ಮಾಡಿ ಓದಲು ಅನುಕೂರ ಮಾಡಿಕೊಟ್ಟಿದ್ದು ಅದರಂತೆ ನನ್ನ ಮಗನಿಗೆ ಓದಲು ಹೇಳಿದರು ನಿರ್ಲಕ್ಷ ಮಾಡುತ್ತಾ ಬಂದಿದ್ದು ಇರುತ್ತದೆ. ಇಂದು ದಿ:08/10/2018 ರಂದು ಬೆಳಗ್ಗೆ 10.00 ಗಂಟೆಗೆ ನಾನು ನನ್ನ ಕೆಲಸದ ಸಂಬಂಧ ಅಂಗಡಿಗೆ ಹೋಗಿದ್ದು ಮನೆಯಲ್ಲಿ ಹೆಂಡತಿ ಮಕ್ಕಳು ಇದ್ದರು ಸಾಯಂಕಾಲ 6.30 ಗಂಟೆಗೆ ನನ್ನ ಹೆಂಡತಿ ಅಳುತ್ತಾ ನನಗೆ ಪೋನ ಮಾಡಿ ನನ್ನ ಮಗ ಸಮರ್ಥ ನೇಣು ಹಾಕಿಕೊಂಡಿದ್ದಾನೆ ಅವನಿಗೆ ಚಿರಾಯು ಆಸ್ಪತ್ರೆಗೆ ತೆಗೆದುಕೊಂಡು ಹೋಗುತ್ತೇನೆ ಎಂದಿದ್ದು ನಾನು ಗಾಬರಿಗೊಂಡು ಚಿರಾಯು ಆಸ್ಪತ್ರೆಯಲ್ಲಿ ಬಂದು ನೋಡಲು ಆಸ್ಪತ್ರೆಯ ವೈದ್ಯರು ನನ್ನ ಮಗನಿಗೆ ಪರಿಕ್ಷಿಸಿ ಮೃತ ಪಟ್ಟಿದ್ದಾನೆ ಅಂತಾ ತಿಳಿಸಿದ್ದು ಆಗ ನಾನು ನನ್ನ ಹೆಂಡತಿಯನ್ನು ವಿಚಾರಿಸಲು ಅವಳು ತಿಳಿಸಿದ್ದೆನೆಂದರೆ, ಸಮರ್ಥ ಇತನು ಓದದೇ ಹೊರಗಡೆ ತಿರುಗಾಡುತ್ತಾ ಸಾಯಂಕಾಲ 5.00 ಗಂಟೆಗೆ ಅವನಿಗೆ ಓದಲು ಹೇಳಿದ್ದು ಆಗ ಅವನು ಪಾನಿಪುರಿ ತೆಗೆದುಕೊಂಡು ಬಾ ನಾನು ಓದುತ್ತೇನೆಂದು ಹೇಳಿದ್ದು ಅದರಂತೆ ನಾನು ಪಾನಿಪುರಿ ತೆಗೆದುಕೊಂಡು ಸಾಯಂಕಾಲ 6.15 ಗಂಟೆ ಸುಮಾರಿಗೆ ಪಾನಿಪುರಿ ತೆಗೆದುಕೊಂಡು ಮನೆಗೆ ಬಂದು ನೋಡಲು ಸಮರ್ಥ ಇತನು ತನ್ನ ಕೋಣೆಯಲ್ಲಿ ಒಳಗಿನ ಕೊಂಡಿ ಹಾಕಿಕೊಂಡಿದ್ದು ನಾನು ಕರೆದರು ಪ್ರತಿಕ್ರೀಯೆ ನೀಡದೆ ಇದ್ದರಿಂದ ರೂಮಿನ ಕಿಡಕಿ ತೆಗೆದು ನೋಡಲು ಸಮರ್ಥ ಇತನು ರೂಮನಲ್ಲಿ ಫ್ಯಾನಗೆ ನೇಣು ಹಾಕಿಕೊಂಡಿದ್ದು ಆಗ ನಾನು ಗಾಬರಿಗೊಂಡು ಚಿರಾಡುತ್ತಿದ್ದಾಗ ಪಕ್ಕದ ಮನೆಯ ತಿವಾರಿ ಮತ್ತು ಅವಳ ಮಗಳು ಬಂದು ನೋಡಿ ನಂತರ ಎಲ್ಲರೂ ಕೂಡಿ ಬಾಗಿಲು ಕೊಂಡಿ ಮುರಿದು ಬಾಗಿಲು ತೆರೆದು ಸಮರ್ಥ ಇತನ ನೇಣಿನ ಕುಡುಕಿಯಿಂದ ಬಿಡಿಸಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು ಇರುತ್ತದೆ ಅಂತಾ ತಿಳಿಸಿದ್ದು ಇರುತ್ತದೆ. ನನ್ನ ಮಗನು ಓದಿನಲ್ಲಿ ಆಸಕ್ತಿ ಇರದಕ್ಕೆ ಪರೀಕ್ಷೆಯ ಭಯದಿಂದ ಮತ್ತು ಫಲಿತಾಂಶ ದಿಂದ ಭಯಗೊಂಡು ನೇಣು ಹಾಕಿಕೊಂಡು ಮೃತಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.