POLICE BHAVAN KALABURAGI

POLICE BHAVAN KALABURAGI

06 September 2018

KALABURAGI DISTRICT REPORTED CRIMES

ಕೊಲೆ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀಮತಿ ಶಂಕ್ರೆಮ್ಮ ಗಂಡ ಬಸವರಾಜ ಸಾ : ಭಾರತ ಕಾಲೂನಿ ಹುಮನಾಬಾದ ಕಲಬುರಗಿ ರವರ ಗಂಡ  ಬಸವರಾಜ ತಂದೆ ನಿಂಗಪ್ಪಾ ಹೊಡೆಲ್ ರವರು ಕಲಬುರಗಿಯ ಟಿ.ಎ.ಪಿ.ಸಿ.ಎಂ. ಗಂಜ ಕಾರ್ಯಾಲಯದಲ್ಲಿ ಮ್ಯಾನೇಜರೆಂದು ಸುಮಾರು ವರ್ಷಗಳಿಂದ ಸರಕಾರಿ ನೌಕರಿ ಮಾಡಿಕೊಂಡಿರುತ್ತಾರೆ. ನನಗೆ ಮಕ್ಕಳಾಗದ ಕಾರಣ ಸೇಡಂ ತಾಲೂಕಿನ ನನ್ನ ಗಂಡನ ಅಕ್ಕನ ಮಗಳಾದ ಗಾಯತ್ರಿ ಇವಳೊಂದಿಗೆ ಮದುವೆಯಾಗಿದ್ದು ಅವಳಿಗೂ ಕೂಡ ಮಕ್ಕಳಾಗಿರುವದಿಲ್ಲಾ. ನಾನು ಮತ್ತು ನನ್ನ ತಂಗಿ ಗಾಯತ್ರಿ ಹಾಗೂ ನನ್ನ ಗಂಡ ಬಸವರಾಜ ಹೊಡೆಲ ಹಾಗೂ ಗಾಯತ್ರಿಯ ಅಕ್ಕನ ಮಗ ಮಣಿಕಂಠ ವಯಸ್ಸು 10 ವರ್ಷದವನಿದ್ದು ಎಲ್ಲರೂ ಒಂದು ಮನೆಯಲ್ಲಿ ಭಾರತ ಕಾಲೂನಿಯಲ್ಲಿ ವಾಸವಾಗಿರುತ್ತೇವೆ. ನನ್ನ ಗಂಡ ಬಸವರಾಜ ಇವರು ಪ್ರತಿ ದಿವಸ ಅವರಾದ (ಬಿ) ಸೀಮಾಂತರದ ನಮ್ಮ ಹೊಲಕ್ಕೆ ಬಂದು ಹೋಗುತ್ತಾ  ಇದ್ದರು ಇಂದು ದಿನಾಂಕ. 5-9-2018 ರಂದು ಬೆಳಗ್ಗೆ 7-30 ಸುಮಾರಿಗೆ ನನ್ನ ಗಂಡ ಬ ಸ ವ ರಾಜ ಇವರು ಹೊಲದಲ್ಲಿ ಹುಲ್ಲಿಗೆ  ಹೊಡೆಯುವ ಕ್ರಿಮಿನಾಶಕ ಔಷಧ ಕೊಟ್ಟು ಬರಲು ಹೊಲಕ್ಕೆ ಹೋಗಿ ಆಳು ಮನುಷ್ಯ ಶಿವಕುಮಾರ ಮಠಪತಿ ಇತನಿಗೆ ತಿಳಿಸಿ ಬರುತ್ತೇನೆಂದರೆ ಮನೆಯಿಂದ ಅವರಾದ(ಬಿ) ಗ್ರಾಮಕ್ಕೆ ಕಾರಿನಲ್ಲಿ ಹೋದರು  ಬೆಳಗ್ಗೆ 10-00 ಗಂಟೆಯ ಸುಮಾರಿಗೆ ನಮ್ಮ ಅಣ್ಣತಮಕಿಯ  ತಮ್ಮನಾದ  ಶಿವರಾಜ ತಂದೆ ನಾಗೀಂದ್ರಪ್ಪಾ ಮಾಲಿಪಾಟೀಲ್   ನನಗೆ ಫೋನ ಮಾಡಿ ತಿಳಿಸಿದ್ದೆನೆಂದರೆ ನನ್ನ ಗಂಡ ಬಸವರಾಜನಿಗೆ ಯಾರೋ ದುಷ್ಕರ್ಮೀಗಳು ಯಾವುದೋ ದುರುದ್ದೇಶದಿಂದ ಮಾರಕ ಅಸ್ತ್ರದಿಂದ ಹೊಡೆದು ಕೊಲೆ ಮಾಡಿರುತ್ತಾರೆ ಶವ ಸ್ಥಳದಲ್ಲಿಯೇ ಅಂದರೆ ನಮ್ಮ ಕಬ್ಬಿನ ಹೊದ ಬಂದಾರಿಯ ಹತ್ತಿರ ಬಿದ್ದಿರುತ್ತದೆ ಅಂತಾ ತಿಳಿಸಿದರು . ಆಗ ಗಾಬರಿಗೊಂದು ನಾನು ಮತ್ತು ನನ್ನ ತಂಗಿ ಗಾಯತ್ರಿ ಹಾಗೂ ನನ್ನ ಅಕ್ಕ  ಚಂದಮ್ಮಾ ಅವಳ ಗಂಡ ಕಲಪ್ಪಾ ಓಗಿ ನಾಲ್ಕು ಜನ ಕೂಡಿಕೊಂಡು ಸ್ಥಳಕ್ಕೆ ಬಂದು ನೋಡಲಾಗಿ ನನ್ನ ಗಂಡನಿಗೆ ತಲೆಯ ಮೇಲೆ ಹಾಗೂ ಬಲಗಣ್ಣಿ ಹುಬ್ಬಿನ ಮೇಲ ಭಾಗದಲ್ಲಿ ಹರಿತವಾದ ಮಾರಕ ಅಸ್ತ್ರಗಳಿಂದ  ಹೊಡೆದು ಭಾರಿ ರಕ್ತಗಾಯ ಮತ್ತು ಬಲಗಲ್ಲಕ್ಕೆ ರಕ್ಕಗಾಯವಾಗಿ ಮೂಗಿನಿಂದ  ಮತ್ತು ಬಾಯಿಯಿಂದ ರಕ್ತ ಸ್ರಾವವಾಗುತ್ತಾ ಇತ್ತು . ಆಗ ಅಲ್ಲಿಯೇ ಹಾಜರಿದ್ದ  ಆಳು ಮನುಷ್ಯ ಶಿವಕುಮಾರ ಮಠಪತಿ ಮತ್ತು ಪಕ್ಕದ ಹೊಲದ ಆಳು ಮನುಷ್ಯ ಸುಭಾಶ ಮಾಳಪ್ಪಾ ಪೂಜಾರಿ  ಇವರಿಗೆ ವಿಚಾರಿಸಿದ್ದು ನನ್ನ ಗಂಡನ ಶವವು ಬಿದಿದ್ದನ್ನು ಮೊದಲು ನೋಡಿ ಎಲ್ಲರಿಗೂ ಮಾಹಿತಿ ತಿಳಿಸಿರುವದಾಗಿ ಹೇಳಿದರು. ದಿನಾಂಕ. 5-9-2018 ರಂದು 8-30 ಎ.ಎಂ.ದಿಂದ 9-30 ಎ.ಎಂ.ದ ಮದ್ಯದ ಅವಧಿಯಲ್ಲಿ ನಮ್ಮ ಕಬ್ಬಿನಶಿರಂಜಿ ಹೊಲದ ಬಂದಾರಿ ಹತ್ತಿರ  ನನ್ನ ಗಂಡ ಬಸವರಾಜ ಹೊಡಲ್ ಇವರಿಗೆ ಯಾರೋ ದುಷ್ಕರ್ಮೀಗಳು ಯಾವುದೋ ದುರುದ್ದೇಶದಿಂದ  ಮಾರಕ ಅಸ್ತ್ರಗಳಿಂದ ಹೊಡೆದು ಭಾರಿಗಾಯಗೊಳಿಸಿ ಕೊಲೆ ಮಾಡಿ ಹೋಗಿದ್ದು  ಸದರಿ ಕೊಲೆ ಮಾಡಿದ ಆರೋಪಿತರನ್ನು ಪತ್ತೆ ಹಚ್ಚುವ ಕಾನೂನು ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಟಕಾ ಜೂಜಾಟದಲ್ಲಿಒ ನಿರತವನ ಬಂಧನ :
ಅಫಜಲಪೂರ ಠಾಣೆ : ದಿನಾಂಕ 05-09-2018 ರಂದು ಅಫಜಲಪೂರ ಪಟ್ಟಣದ ಮಲ್ಲಿಕಾರ್ಜುನ ಚೌಕ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಹೋಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲರಿ ಅಂತಾ ಅನ್ನುತ್ತಾ ಸಾರ್ವಜನಿಕರಿಂದ ಹಣ ಪಡೆದು, ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳನ್ನು ಕೊಟ್ಟು, ಮಟಕಾ ಬರೆದುಕೊಳ್ಳುತ್ತಿದ್ದಾನೆ ಅಂತಾ ಬಾತ್ಮಿ ಬಂದ ಮೇರೆಗೆ, ಶ್ರೀ ಮಾರುತಿ ಎಎಸ್ ಐ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೋಗಿ, ಮಲ್ಲಿಕಾರ್ಜುನ ಗುಡಿ ಹತ್ತಿರ ಸ್ವಲ್ಪ ದೂರು ನಮ್ಮ ವಾಹನವನ್ನು ನಿಲ್ಲಿಸಿ ಮರೆಯಾಗಿ ನಿಂತು ನೋಡಲು, ಮಲ್ಲಿಕಾರ್ಜುನ ಚೌಕ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಹೋಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಕೊಡುತ್ತೆನೆ ಅಂತಾ ಕರೆದು, ಅವರಿಂದ ಹಣ ಪಡೆದು ಅವರಿಗೆ ಅಂಕಿ ಸಂಖ್ಯ ಬರೆದುಕೊಟ್ಟು, ಮಟಕಾ ಬರೆದುಕೊಳ್ಳುತ್ತಿದ್ದುದನ್ನು ಖಚಿತಪಡಿಸಿಕೊಂಡು ದಾಳಿ ಮಾಡಿ ಹಿಡಿದು ಸದರಿಯವರ ಹೆಸರು ವಿಳಾಸ ವಿಚಾರಿಸಲಾಗಿ ನಿಂಗಪ್ಪ ತಂದೆ ಸಿದ್ದಣ್ಣ ಬಡಿಗೇರ ಸಾ||ಮಲ್ಲಿಕಾರ್ಜುನ ಚೌಕ ಫಜಲಪೂರ  ಅಂತಾ ತಿಳಿಸಿದರು ನಂತರ ಸದರಿಯವರ ಅಂಗ ಶೋಧನೆ ಮಾಡಲಾಗಿ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 2800/- ರೂಪಾಯಿ ನಗದು ಹಣ ಹಾಗೂ ಅಂಕಿ ಸಂಖ್ಯೆ ಬರೆದ ಒಂದು ಮಟಕಾ ಚೀಟಿ ಮತ್ತು ಒಂದು ಬಾಲ ಪೆನ್ನ ದೊರೆತವು, ಸದರಿಯವುಗಳನ್ನು ಪಂಚರ ಸಮಕ್ಷಮವಶಕ್ಕೆ ತೆಗೆದುಕೊಂಡು ಸದರಿಯವನೊಂದಿಗೆ  ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.  
ಹಲ್ಲೆ ಪ್ರಕರಣಗಳು :
ಮುಧೋಳ ಠಾಣೆ : ಗುರಪ್ಪ ತಂದೆ ಭೀಮಪ್ಪ ಹೂಗಾರ ಸಾ: ಮೊತಕಪಲ್ಲಿ ಗ್ರಾಮ ನತತ್ಉ  ಶಂಕರ ತಂದೆ ಭೀಮಪ್ಪ ಹೂಗಾರ ಸಾ: ಮೊತಕಪಲ್ಲಿ ಗ್ರಾಮ ರವರು ಒಂದೇ ಮನೆಯಲ್ಲಿದ್ದು ಮನೆಯ ಪಾಲಿನ ವಿಷಯದಲ್ಲಿ ತಂಟೆ ತಕರಾರು ಮಾಡಿಕೊಂಡು ಆರೋಪಿತನು ಫಿರ್ಯಾದಿಗೆ ಅಕ್ರಮವಾಗಿ ತಡೆದು ನಿಲ್ಲಸಿ ಕೈಯಿಂದ ಹೊಡೆ ಬಡೆ ಮಾಡಿದ ಗಾಯಪಡಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮುಧೂಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮುಧೋಳ ಠಾಣೆ : ಶ್ರೀ  ಶಂಕರ ತಂದೆ ಭೀಮಪ್ಪ ಹೂಗಾರ ಸಾ: ಮೊತಕಪಲ್ಲಿ ಗ್ರಾಮ ಮತ್ತು  ಗುರಪ್ಪ ತಂದೆ ಭೀಮಪ್ಪ ಹೂಗಾರ  ಸಂ: ಇನ್ನೂ ಇಬ್ಬರು  ಸಾ: ಮೊತಕಪಲ್ಲಿ ಗ್ರಾಮ  ರವರು ಒಂದೇ ಮನೆಯಲ್ಲಿದ್ದು ಮನೆಯ ಪಾಲಿನ ವಿಷಯದಲ್ಲಿ ತಂಟೆ ತಕರಾರು ಮಾಡಿಕೊಂಡು ಆರೋಪಿತರು ಫಿರ್ಯಾದಿಗೆ ಅಕ್ರಮವಾಗಿ ತಡೆದು ನಿಲ್ಲಸಿ ಕೈಯಿಂದ ಹೊಡೆ ಬಡೆ ಮಾಡಿ ಗಾಯಪಡಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮುಧೂಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮನೆಗೆ ಬೆಂಕಿ ಹತ್ತಿ ಲುಕ್ಸಾನ ಅದ ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ಸಿದ್ರಾಮ ತಂದೆ ವಿಠ್ಠಲ ಸಿಂಗೆ ಸಾ||ಬಳೂರ್ಗಿ ತಾ||ಅಫಜಲಪೂರ ರವರು ಬಳೂರ್ಗಿ ಗ್ರಾಮದದ ಹರಿಜನ ವಾಡದಲ್ಲಿ ನಮ್ಮ ಮನೆ ಫತ್ರಾಸ ಸಡ್ಡಿನದು ಇರುತ್ತದೆ ಸದರಿ ಸಡ್ಡಿನಲ್ಲಿ ನಾನು ನನ್ನ ಹೆಂಡತಿಯಾದ ರೇವಮ್ಮಾ ಇಬ್ಬರು ವಾಸವಾಗಿರುತ್ತೇವೆ ನಮ್ಮ ಇಬ್ಬರು ಗಂಡು ಮಕ್ಕಳು ಬಾಂಬೆಯಲ್ಲಿ ಕೆಲಸ ಮಾಡಿಕೊಂಡಿರುತ್ತಾರೆ ನಮ್ಮ ಸಡ್ಡಿನಲ್ಲಿ ಎರಡು ಹಿಟ್ಟಿನ ಗಿರಣಿ, ಒಂದು ಕಾರಕುಟ್ಟುವ ಮಸೀನ್ , ಶಾವಗಿ ಮಶಿನ ಇಟ್ಟುಕೊಂಡು ಅದೇ ದೈನಂದಿನ ಕೆಲಸ ಮಾಡಿಕೊಂಡಿರುತ್ತೇವೆ ದಿನಾಂಕ 30/08/2018 ರಂದು ಬೆಳಿಗ್ಗೆ ನಾನು ನನ್ನ ಹೆಂಡತಿ ಇಬ್ಬರು ನಮ್ಮ ಫತ್ರಾಸ ಸಡ್ಡ ಮುಚ್ಚಿಕೊಂಡು ನಮ್ಮ ಬಳೂರ್ಗಿ ಗ್ರಾಮದಲ್ಲಿ ಹೋದಾಗ 12.30 ಪಿಎಮ್ ಸುಮಾರಿಗೆ ನಮ್ಮ ಓಣಿಯ ಶೈಲಶ್ರೀ ಗಂಡ ವಿಠ್ಠಲ ದೊಡ್ಮನಿ ಇವರು ನನಗೆ ಕಾಲ್ ಮಾಡಿ ತಿಳಿಸಿದ್ದೆನೆಂದರೆ   ನಿಮ್ಮ ಫತ್ರಾಸ ಸಡ್ಡಿನಲ್ಲಿ ಬೆಂಕಿ ಹತ್ತಿದೆ ಬೆಗ ಬನ್ನಿ ಅಂತ ತಿಳಿಸಿದ ಬಳಿಕ ನಾನು ನನ್ನ ಹೆಂಡತಿ ಓಡಿ ಹೋಗಿ ನೋಡಲಾಗಿ ನಾವು ವಾಸವಾಗಿರುವ ಫತ್ರಾಸ ಸಡ್ಡಿಗೆ ಆಕಸ್ಮಿಕವಾಗಿ ವಿದ್ಯೂತ್ ಶಾಟ್ ಸರ್ಕ್ಯೂಟ್ ನಿಂದ ಬೆಂಕಿ ತಗುಲಿ ಭಾರಿ ಪ್ರಮಾಣದಲ್ಲಿ ಬೆಂಕಿ ಅತ್ತಿ ಉರಿಯುತಿತ್ತು ನಾನು ನನ್ನ ಹೆಂಡತಿ ನಮ್ಮ ಗ್ರಾಮದ ಶೈಲಶ್ರೀ ಗಂಡ ವಿಠ್ಠಲ ದೊಡ್ಮನಿ, ಶ್ರೀದೇವಿ ಗಂಡ ಮಲ್ಲಪ್ಪ ಜಳಕಿ, ತುಕಾರಾಮ ತಂದೆ ಮಲ್ಲಿಕಾರ್ಜುನ ಹುಣಸಡಲಗಿ, ಸಂಜಯ ಕುಮಾರ ತಂದೆ ರಾಮಚಂದ್ರ ದೊಡ್ಮನಿ ಹಾಗು ಇನ್ನಿತರರು ಕೂಡಿ ಬೆಂಕಿ ನಂದಿಸಲು ಪ್ರಯತ್ನಿಸಿದರು ಬೆಂಕಿ ನಂದದ ಕಾರಣ ಅಗ್ನಿಶಾಮಕಕ್ಕೆ ಕರೆ ಮಾಡಿ ಅಗ್ನಿಶಾಮಕ ವಾಹನದಿಂದ ನಂದಿಸಿದ್ದು ಇರುತ್ತದೆ. ನಮ್ಮ ಫತ್ರಾಸ ಸಡ್ಡಿನ ಮನೆಯಲಿದ್ದ ಎರಡು ಹಿಟ್ಟಿನ ಗಿರಣಿ ಮಶೀನ, ಒಂದು ಕಾರ ಕುಟ್ಟುವ ಮಶಿನ್, ಶಾವಗಿ ಮಶೀನ, ಒಂದು ಎಲ್ ಇ ಡಿ ಟಿವ್ಹಿ ಮನೆಯ ದಿನ ನಿತ್ಯ ಬಳಕೆಯ ಸಾಮಾನುಗಳು, 10 ತೊಲೆ ಬಂಗಾರದ ಆಭರಣಗಳು, 200000/-ರೂಪಾಯಿ ನಗದು ಹಣ  ಆಕಸ್ಮಿಕವಾಗಿ ವಿದ್ಯೂತ್ ಶಾಟ್ ಸರ್ಕ್ಯೂಟ್ ನಿಂದ ಬೆಂಕಿಗೆ ಸುಟ್ಟಿರುತ್ತವೆ. ಹೀಗೆ ಒಟ್ಟು ಅಂದಾಜು 10,00,000/-ರೂಪಾಯಿಯಷ್ಟು ಆಕಸ್ಮಿಕ ಬೆಂಕಿಗೆ ಸುಟ್ಟು ಲುಕ್ಸಾನ ಆಗಿರುತ್ತದೆ  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

03 September 2018

KALABURAGI DISTRICT REPORTED CRIMES

ಅಪಘಾತ ಪ್ರಕರಣ :
ಗ್ರಾಮೀಣ ಠಾಣೆ : ದಿನಾಂಕ 02/09/2018 ರಂದು ರಾತ್ರಿ 11-30 ಗಂಟೆ ಸುಮಾರಿಗೆ ಮೃತ ಮಲ್ಲಿಕಾರ್ಜುನ ಇತನು ಮಾರುತಿ ಶಿಫ್ಟ ಕಾರ ಕೆಎ 30 ಎಂ 7817 ರಲ್ಲಿ ಫಿರ್ಯಾದಿ ಮತ್ತು ಆತನ ಗೆಳೆಯರಾದ ವರುಣ, ಪ್ರವೀಣ ಎಲ್ಲರೂ ಕೂಡಿಕೊಂಡು ಊಟ ಮಾಡಲು ಕಲಬುರಗಿಯಿಂದ ಕಮಲಾಪೂರ ಪೆಟ್ರೋಲಿಂಗ ಪಂಪ ಹತ್ತಿರ ಇರುವ ದಾಬಾದಲ್ಲಿ ಊಟ ಮಾಡಿಕೊಂಡು ದಿನಂಕ 03/09/18 ರಂದು ರಾತ್ರಿ  3-30 ಗಂಟೆ ಸುಮಾರಿಗೆ ಕಲಬುರಗಿ ಕಡೆ ಹೊರಟಿದ್ದು, ಮಲ್ಲಿಕಾರ್ಜುನ ಇತನು Maruti Swift Car KA 30 M 7817 ನೇದ್ದು ಅತಿವೇಗದಿಂದ ಮತ್ತು ನಿಷ್ಕಾಳಿಜಿತನದಿಂದ ನಡೆಸುತ್ತಾ ಹೊರಟಿದ್ದನ್ನು ನೋಡಿ ಅವನಿಗೆ ಸಾವಕಾಶವಾಗಿ ಕಾರು ನಡೆಸು ಅಂತಾ ಹೇಳಿದರು ಕೂಡಾ ನಮ್ಮ ಮಾತಿಗೆ ಲಕ್ಷ್ಯ ಕೊಡದೇ ಅತಿವೇಗದಿಂದ ನಡೆಸುತ್ತಾ ಬೆಳಗಿನ ಜಾವ 03-30 ಗಂಟೆ ಸುಮಾರಿಗೆ ಬೇಲೂರ (ಜೆ) ಕ್ರಾಸ ದಾಟಿದ ನಂತರ ಸಫಾರಿ ದಾಬಾ ಹತ್ತಿರ ಬಂದಾಗ ಕಾರು ರೋಡಿನ ಎಡಭಾಗದಲ್ಲಿ ಇಳಿದಾಗ ಮಲ್ಲಿಕಾರ್ಜುನ ಒಮ್ಮಿಂದ ಒಮ್ಮೇಲೆ ವೇಗದಲ್ಲಿ ಕಾರನ್ನು  ಬಲಕ್ಕೆ ತಿರುಗಿಸಿದಾಗ ರೋಡಿನ ಬಲಭಾಗದಲ್ಲಿ ಇರುವ ಒಂದು ಆಲದ ಗಿಡಕ್ಕೆ ಜೋರಾಗಿ ಡಿಕ್ಕಿ ಹೊಡೆದು ಅಪಘಾತಪಡಿಸಿದಾಗ ಮಲ್ಲಿಕಾರ್ಜುನ ಇತನಿಗೆ ಭಾರಿ ರಕ್ತಗಾಯವಾಗಿ ಸ್ಥಳದಲ್ಲಿ ಮೃತಪಟ್ಟಿದ್ದನು. ವರುಣ ಮತ್ತು ಪ್ರವೀಣ ಇವರಿಗೆ ಸಾದಾ ಮತ್ತು ಭಾರಿ ಸ್ವರೂಪದ ರಕ್ತಗಾಯ ಮತ್ತು ಗುಪ್ತಗಾಯಗಳಾಗಿರುತ್ತೇವೆ. ಪ್ರವೀಣ ಸಿರಗೊಂಡ ಇತನು ಎಲ್ಲಿ ಹೋಗಿರುತ್ತಾನೆ ಎಂಬುದು ಸಧ್ಯ ಗೊತ್ತಾಗಿರುವುದಿಲ್ಲಾ. ಸದರಿ ಅಪಘಾತವು ಈ ಮೇಲೆ ಹೇಳಿದಂತೆ Maruti Swift Car KA 30 M 7817 ಚಾಲಕ ನಮ್ಮ ಸೋದರ ಅತ್ತೆ ಮಗನಾದ ಮಲ್ಲಿಕಾರ್ಜುನ ತಂದೆ ಸಂಗಣ್ಣಾ ಸುಣ್ಣೂರು ಸಾ:ದೇವಿ ನಗರ ಕಲಬುರಗಿ ಇತನ ತಪ್ಪಿನಿಂದ ಅಪಘಾತ ಸಂಭವಿಸಿದ್ದರಿಂದ ಅವನ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಶ್ರೀ ಪ್ರವೀಣ ತಂದೆ ಲಕ್ಷ್ಮಣ ವಾಣಿ ಸಾ:ದೇವಿ ನಗರ ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಹಲ್ಲೆ ಪ್ರಕರಣಗಳು :
ಗ್ರಾಮೀಣ ಠಾಣೆ : ದಿನಾಂಕ 31/8/2018 ರಂದು ರಾತ್ರಿ ಶ್ರೀ ಆನಂದ ತಂದೆ ರವಿ ಮದನಕರ ಸಾ ಖರ್ಗೆ ಕಾಲೂನಿ ಶರಣಶಿರಸಗಿ ಕಲಬುರಗಿ  ಮತ್ತು ನನ್ನ ಗೆಳೆಯ ವಿವೇಕ ಇಬ್ಬರು ಕೂಡಿಕೊಂಡು ನನ್ನ ಮೋಟಾರ ಸೈಕಲಗೆ ಪೆಟ್ರೋಲ್  ಹಾಕಿಕೊಂಡು ಬರಲು ಶರಣಸಿರಸಗಿ ಮಡ್ಡಿಯಲ್ಲಿ  ಇರುವ ಹೋಟೆಲ್ ಹತ್ತಿರ ಶರಣಸಿರಸಗಿ ಮಡ್ಡಿಯಲ್ಲಿರುವ ಪೆಟ್ರೋಲ್ ಪಂಪಿಗೆ ಹೋಗಿದ್ದು , ಪೆಟ್ರೋಲ್ ಪಂಪ ಹತ್ತಿರ ರುವ ಹೋಟೆಲ ಹತ್ತಿರ ಶರಣಸಿರಸಗಿ ಮಡ್ಡಿಯ ಅರುಣ ಭರಣಿ ಮತ್ತು ಆತನ ಗೆಳೆಯರು ನಿಂತಿದ್ದು ನಮ್ಮನ್ನು ನೋಡಿ ಅವರೆಲ್ಲರೂ ಗುಂಪು ಕಟ್ಟಿಕೊಂಡು ಬಂದು ನನಗೆ ತಡೆದು ನಿಲ್ಲಿಸಿ “ ಏನೋ ಸೂಳೆ ಮಗನೆ ನನ್ನ  ಶರಣಸಿರಸಗಿ ಮಡ್ಡಿ ಏರಿಯಾಕ್ಕೆ ಏಕೆ ಬಂದಿರುವೆ ನನ್ನ ಪರಮಿಶನ ಲ್ಲದೆ ಯಾರು ಬರುವದಿಲ್ಲಾ ನೀ ಹೇಗೆ ಬಂದಿ ಎಂದು ಕೈಯಿಂದ ಮುಖದ ಮೇಲೆ ಹೋಡೆದರು ಆಗ ನಾನು ವಿನಾಕಾರಣ  ಏಕೆ ನಮ್ಮೊಂದಿಗೆ ಜಗಳ ಮಾಡುತ್ತಿ ಎಂದು ಕೇಳಿದಕ್ಕೆ ಆಗ ಅರುಣ ಭರಣಿ   ಇತನು ಸೂಳೆ ಮಗನೆ ನಾನು ಏರಿಯಾದ ಡಾನ್ ಇರುತ್ತೇನೆ ನನಗೆ ಎದಿರು ವಾದಿಸುತ್ತಿ ಎಂದು ಕೈಯಿಂದ ಹೊಡೆಯಲು ಪ್ರಾರಂಭಿಸಿದ ಆಗ ನಾವಿಬ್ಬರು ಅವರಿಂದ ತಪ್ಪಿಸಿಕೊಂಡು ಪೆಟ್ರೋಲ್ ಪಂಪ ಕಂಪೌಡ ಕಡೆಗೆ ಹೋಗುತ್ತಿರುವಾಗ ಪುನಾ; ಅವರು ನಮಗೆ ತಡೆದು ಸೂಳೆ ಮಕ್ಕಳೆ ಈ ಮೊದಲು ಶಾಲೆಯ  ವಾರ್ಷೀಕೋತ್ಸವ ಸಮಯದಲ್ಲಿ ನಮ್ಮ ಹುಡುಗರೊಂದಿಗೆ ನೀವು ತಕರಾರು ಮಾಡಿರುತ್ತಿರಿ ಹೀಗೆ ನಿಮ್ಮನ್ನು  ಬಿಟ್ಟರೆ ಸರಿಯಾಗಿರುವದಿಲ್ಲಾ ಇವತ್ತು ನಿನನ್ನು ಮುಗಿಸೇ ಬಿಡುತ್ತೇವೆ ಎಂದು ಕೊಲೆ ಮಾಡುವ ದ್ದೇಶದಿಂದ ತನ್ನ ಹತ್ತಿರ ಇದ್ದ ಮಾರಕಾಸ್ತ್ರವಾದ ತಲವಾರದಿಂದ ತಲೆಯ ಮೇಲೆ ಹೊಡೆದನು ಮತ್ತು ಆತನ ಸಂಗಡ ಇದ್ದ ಹೆಸರು ಕೇಳಿ ಗೊತ್ತಾದ ಗೌತಮ ಮತ್ತು ವಿಶಾಲ ಇವರು ಬಡಿಗೆಗಳಿಂದ ನನ್ನ ಎರಡು ಮೊಳಕಾಲಿಗೆ  ಹಾಗೂ ನಾಯಿ ರಾಣ್ಯ ಇತನು ಒಂದು ಕಲ್ಲು ತೆಗೆದುಕೊಂಡು ನನಗೆ ಹೊಡೆದಾಗ ಬಲಗೈ  ಮೊಳಕೈ ಮತ್ತು ಕಿರುಬೆರಳಿಗೆ ಗಾಯಗಳಾಗಿರುತ್ತವೆ . ಇದರಿಂದ ನನ್ನ ತಲೆಗೆ ಭಾರಿ ರಕ್ತಗಾಯವಾಗಿದ್ದು ರಕ್ತಸ್ರಾವವಾಗುತಿತ್ತು ನನ್ನ ಸಂಗಡ ಇದ್ದ ವಿವೇಕ ಜಾನೆ ಇತನಿಗೆ ವಿಶಾಲ ಮತ್ತು ನಾಯಿರಾಣ್ಯಾ ಹೊಡೆದು ,ಬಡಿಗೆಯಿಂದ ಹೊಡೆದು ಭುಜಕ್ಕೆ ಮತ್ತು ಎಡಗಣ್ಣು ಹತ್ತಿರ ಗಾಯವಾಗಿರುತ್ತದೆ. ಆಗ  ಈ ವಿಷಯ ಗೊತ್ತಾಗಿ  ನನ್ನ ಚಿಕ್ಕಪ್ಪನಾದ ಬಾಬುರಾವ ಮದನಕ ಮತ್ತು ಪ್ರಕಾಶ ಹಾಗೂ ಇನ್ನೊಬ್ಬ ಕಿರಣಕುಮಾರ ಎಂಬುವವರು  ಬಂದು ಜಗಳ ಬಿಡಿಸಿಕೊಳ್ಳುವಾಗ ಆಗ ಅರುಣ ಭರಣಿ , ಗೌತಮ ಬ್ಬರು ಕೂಡಿಕೊಂಡು ಸೂಳೆ ಮಗನೆ ನಿನ್ನ ಉರುಣಿಗೆ ಬಹಳ ಆಗ್ಯಾದ ಎಂದು ಬಯ್ಯೂತ್ತಾ ಬಡಿಗೆಯಿಂದ ನಮ್ಮ ಚಿಕ್ಕಪ್ಪನ ತಲೆಗೆ, ಭುಜಕ್ಕೆ ಹಾಗೂ ಬಲಗಾಲು ಮೊಳಕಾಲಿಗೆ ಹೊಡೆದಿದ್ದು ನಾಯಿರಾಣ್ಯ ಕಾಲಿನಿಂದ ಹೊಟ್ಟೆಯಲ್ಲಿ ಒದ್ದಿರುತ್ತಾನೆ. ಹಾಗೂ ಕಿರಣ ಕಮಾರನಿಗೆ ವಿಶಾಲ ಮತ್ತು ವಿನೋದ ಇತರರು ಕೂಡಿಕೊಂಡು ಆತನಿಗೆಹೊಡೆಬಡಿ ಮಾಡಿರುತ್ತಾರೆ ಅಷ್ಟರಲ್ಲಿ ಜನ ಸೇರುವಷ್ಟರಲ್ಲಿ ಅವರೆಲ್ಲರೂ  ಸೂಳೆ ಮಕ್ಕಳೆ ಇವತ್ತು ನೀವು ಉಳಿದಿರಿ ಇನ್ನೊಂದು ಬಾರಿ ನಮ್ಮ ಏರಿಯಾದಲ್ಲಿ ನಮ್ಮ ತಂಟೆಗೆ ಬಂದರೆ ಖಲಾಸ ಮಾಡುತ್ತೇವೆ ಎಂದು ಬೆದರಿಕೆ ಹಾಕಿ ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನರೋಣಾ ಠಾಣೆ : ಶ್ರೀ ವಿಜಯಕುಮಾರ ರವರ ಹೊಲ ತಮ್ಮೂರಿನ ಸೀಮೆಯಲ್ಲಿದ್ದು ನಮ್ಮ ಹೊಲದಿಂದ ದಾರಿ ಇಲ್ಲದೆ ಜಬರದಸ್ತಿಯಿಂದ ನಮ್ಮೂರಿನ ಉಸ್ಮಾನ ಮುಲ್ಲಾ ಇವರ ಸಂಗಡಿರು ಕೂಡಿ ತಮ್ಮ ಹೊಲಕ್ಕೆ ನಮ್ಮ ಹೊಲದಾಗಿನಿಂದ ಹೊಗುವಾಗ ನಮ್ಮ ಹೊಲದಿಂದ ಹೋಗಬೇಡಿ ನಮ್ಮ ಹೊಲದಲ್ಲಿ ಯಾವುದೇ ದಾರಿಯಿಲ್ಲ ಹೇಳಿದ್ದೇನು. ಅದಕ್ಕೆ ಉಸ್ಮಾನ ಮುಲ್ಲಾ ಸಂಗಡಿಗರು ಶಾಹಾಜಾಬಿ ಉಸ್ಮಾನ ಮುಲ್ಲಾ ನೂರಂಬಿ ಗಂಡ ಮೈಹೆಬೂಬಸಾಬ ಮುಲ್ಲಾ, ನಭಿಮುನ್ನಿಸಾಬಿ ಗಂಡ ಉಮರಸಾಬ ಮುಲ್ಲಾ, ಫತ್ರುಸಾಬ ತಂದೆ ಮಹಿಬೂಬ್ ಮುಲ್ಲಾ, ರಸೀಯಬಿ ಗಂಡ ಫತ್ರುಸಾಬ ಉಮರಸಾಬ ಮಹೆಬೂಬಸಾಬ ಮುಲ್ಲಾ, ಈರಣ್ಣಾ ತಂದೆ ಶರಣಪ್ಪಾ ಜಮಾದಾರ, ರಂಗಮ್ಮ ಗಂಡ ಈರಣ್ಣಾ ಜಮಾದರ, ಕಾಂತಪಾ ತಂದೆ ಈರಣ್ಣಾ ಜಮಾದಾರ, ರೇಣುಕಾ ಗಂಡ ಕಾಂತಪ್ಪಾ ಮತ್ತು ಶ್ರೀಪತಿ ಎಲ್ಲರೂ ನನ್ನೊಂದಿಗೆ ಅವಚ್ಯವಾಗಿ ಬೈದು ಜೀವದ ಭಯಹಾಕಿ ತಮ್ಮ ಹೊಲಕ್ಕೆ ಹೋದರು ನಾನು ಮತ್ತು ನನ್ನ ಮಕ್ಕಳು ಸುನ್ನೆ ಇದ್ದೇವು. ನಮ್ಮುರಿನ ಉಸ್ಮಾನ ತಂದೆ ಮಹಿಬೂಬ್ ಮುಲ್ಲಾ ಇವನು ನನ್ನ ಹಾಗೂ ನನ್ನ ತಾಯಿ ಅಕ್ಕ ಮತ್ತು ತಮ್ಮನ ಮೇಲೆ ಸುಳ್ಳು ಕೇಸು ದಾಖಲುಮಾಡಿಸಿದ್ದು ಗೊತ್ತಾಯಿತು. ಮತ್ತು ನನಗೆ ದಿನಾಂಕ:27/07/2018 ರಂದು ದಸ್ತಗಿರಿ ಮಾಡಿ ಕೊರ್ಟಗೆ ಹಾಜಪಿಸಿಸದ್ದು. ಅಲ್ಲದೇ ನಾನು ಜಾಮೀನು ಹೊಂದಿ ಮನೆಗೆ ಬಂದು ನನ್ನ ತಾಯಿ ಅಕ್ಕ ತಮ್ಮನೊಂದಿಗೆ ಜಾಮೀನು ಕುರಿತು ನ್ಯಾಯಾಲಯಕ್ಕೆ ಹಾಜರುಪಿಸಿದ್ದು, ಜಾಮೀನು ಕೊಟ್ಟಿರುತ್ತಾರೆ. ದಿನಾಂಕ:01/09/2018 ರಂದು ಬೆಳಿಗ್ಗೆ 11-00 ಗಂಟೆಗೆ ನಾನು ಮತ್ತು ನನ್ನ ತಾಯಿ, ಅಕ್ಕ ಹಾಗೂ ತಮ್ಮ ಎಲ್ಲರೂ ಕೂಡಿಕೊಂಡು ಮಾಡತಾಡುತ್ತಿರುವಾಗ ಈ ಮೇಲೆ ನಮೂದಿಸಿದ ನಮ್ಮೂರಿನ ಜನರು ಮತ್ತು ಗುಂಪುಮಾಡಿಕೊಂಡು ನಮ್ಮ ಮನೆಯಲ್ಲಿ ಅಕ್ರಮವಾಗಿ ಪ್ರವೇಶನಾಡಿ ಹಲ್ಲೆಮಾಡಿ ಹೊಡೆಯುತ್ತಾ ಈರಣ್ಣ ತಂದೆ ಶರಣಪ್ಫಾ ಜಮಾದಾರ, ಕಾಂತಪ್ಪಾ ತಂದೆ ಈರಣ್ಣಾ ಇವರು ಉಸ್ಮಾನನಿಗೆ ಈ ಭೋಸಡಿಮನಿಗೆ ಹಿಡಿದು ಅಪಹರಿಸಿಕೊಂಡು ಹೊಗಲು ಪ್ರಚೋದನೆ ಮಾಡಿದ ಎಲ್ಲರೂ ನನಗೆ ಮತ್ತು ನನ್ನ ತಾಯಿಗೆ ಕೈಯಿಂದ ಹೊಡೆದು ಗುಪ್ತಗಾಯ ಮಾಡಿರುತ್ತಾರೆ. ಉಸ್ಮಾನ ಈ ರಣ್ಣಾ ಕಾಂತಪ್ಪಾ ರವರು ನನ್ನ ಮೈಯಲ್ಲ ಕೈಯಿಂದ ಹೊಡೆದಿದ್ದು ಹಾಗೂ ನನ್ನ ತಮ್ಮನಿಗೆ ಉಸ್ಮಾನಸಾಬ, ಫತ್ರುಸಾಬ ಇವರು ಕೈಯಿಂದ ಮೈಮೇಲೆ ಹೊಡೆದಿರುತಾರೆ, ನನ್ನ ತಾಯಿಗೆ ಹಾಗೂ ಅಕ್ಕನಿಗೆ ಶಹಜಾಬಿ, ಸೂರಾನಬಿ, ನಜಮುನಿಸಾಬಿ ರಸೀದು ಬೇಗಂ, ರಂಗಮ್ಮ ಹಾಗೂ ರೇಣುಕಾ ಇವರೆಲ್ಲರೂ ಕೂದಲು ಹಿಡಿದು ಎಳೆದಾಡಿ ಕೈಯಿಂದ ಹೊಡೆದಿರುತ್ತಾರೆ. ನಮ್ಮ ತಾಯಿಗೆ ಒಳಪೆಟ್ಟಾಗಿರುತ್ತದೆ. ಅಕ್ಕಳಿಗೆ ಗಾಯವಾಗಿರುವುದಿಲ್ಲ. ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ವಿದ್ಯಾರ್ಥಿ ಅಪಹರಣ ಪ್ರಕರಣ :
ಯಡ್ರಾಮಿ ಠಾಣೆ : ಶ್ರೀ ಅಮೃತ ತಂದೆ ಶಿವಪ್ಪ ಬಾಲೂರ ಸಾ|| ಯಡ್ರಾಮಿ ರವರ ನನ್ನ ಮಗ ವೆಂಕಟೇಶ ವಯ; 16 ವರ್ಷ ಈತನಿಗೆ ದಿನಾಂಕ 27-08-2018 ರಂದು ಬೆಳಿಗ್ಗೆ 10;30 ಗಂಟೆಗೆ ಯಡ್ರಾಮಿ ಬಸ್ಸ ನಿಲ್ದಾಣದಲ್ಲಿ ಜೇವರ್ಗಿ ಬಸ್ಸಿನಲ್ಲಿ ಕೂಡಿಸಿ ದಂಡೋತಿ ಮುರಾರ್ಜಿ ದೇಸಾಯಿ ಶಾಲೆಗೆ ಕಳುಹಿಸಿದ್ದು, ಅವನಿಗೆ ಯಾರೋ ಅಪಹರಣ ಮಾಡಿಕೊಂಡು ಹೋಗಿರಬಹುದು, ನನ್ನ ಮಗನಿಗೆ ಇಲ್ಲಿಯವರೆಗೆ ಹುಡಕಾಡಿ ಸಿಕ್ಕಿರುವುದಿಲ್ಲಾ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

01 September 2018

KALABURAGI DISTRICT REPORTED CRIMES

ವರದಕ್ಷಣೆ  ಆಸೆಗಾಗಿ ಕಿರುಕಳ ನೀಡಿ ಕೊಲೆ ಮಾಡಿದ ಪ್ರಕರಣ :
ಕಮಲಾಪೂರ ಠಾಣೆ : ಶ್ರೀ ಅಶೋಕ ತಂದೆ ನರಸಪ್ಪ ಸಗರಿ ಹಾ:ವ: ಹೌಸಿಂಗ ಬೋರ್ಡ ಕಾಲೋನಿ ಹಳೆ ಜೇವರ್ಗಿ ರಸ್ತೆ ಕಲಬುರಗಿ ಇವರ ಮಗಳಾದ ಪುಷ್ಪಾ ತಂದೆ ಆಶೋಕ ಇವಳ ಮದುವೆಯು ದಿನಾಂಕ 6-7-2018 ರಂದು ಕಮಲಾಪೂರ ಗ್ರಾಮದ ಬಾಬುರಾವ (ಬಾಬು) ತಂದೆ ಗಿರಿಮಲ್ಲಪ್ಪ ಇವರ ಜೋತೆಗೆ ಗ್ರಾಮದ ಮಂಗಲ ಕಾರ್ಯಲಯದಲ್ಲಿ ಮದುವೆ ಜರುಗಿರುತ್ತದೆ. ನಾನು ಮದುವೆಯ ಸಮಯದಲ್ಲಿ ನನ್ನ ಮಗಳ ಗಂಡನ ಮನೆಯವರ ಬೇಡಿಕೆಯಂತೆ ನಗದು ಹಣ 1,11.000/- ಹಾಗೂ 9 ತೋಲೆ ಬಂಗಾರ ಹಾಗೂ ಹಂಡ್ಯಾ ಬಾಂಡ್ಯಾ ಇತರೆ ಮನೆಯ ಬೆಲೆಬಾಳುವ ಸಾಮಗ್ರಿಗಳನ್ನು ಹಾಗೂ ಬೆಲೆಯುಳ್ಳ ಬಟ್ಟೆ ಹಾಗೂ ಕೈ ಗಡಿಯಾರ ಹಾಗೂ ಈತರೆ ಎಲ್ಲಾ ಸಾಮಗ್ರಿ ಕೂಡಿ ಒಟ್ಟು ರೂ 10,0000/- ರೂಪಾಯಿ ಖರ್ಚು  ಮಾಡಿ ಮಗಳ ಗಂಡನ ಬೇಡಿಕೆಯಂತೆ ನೇರವೆರಿಸಿ ಕೋಡಲಾಯಿತ್ತು. ಲಗ್ನದ ನಂತರ ನಮ್ಮ ಮಗಳು ಗಂಡನ ಮನೆಯಲ್ಲಿ ಕೆಲವು ದಿನಗಳು ಮಾತ್ರ ನೆಮ್ಮದಿಯಿಂದ ಬಾಳೆ ಮಾಡಿದು, ತದನಂತರ ನಮ್ಮ ಮಗಳಿಂದ ತಿಳಿದು ಬಂದಿದೆನೆಂದರೆ ಗಂಡನ ಮನೆಯಲ್ಲಿ ಇವಳಿಗೆ ಮಗಳ ಗಂಡ , ಅತ್ತೆಯಾದ ಕಮಲಾಬಾಯಿ ಹಾಗೂ ಗಂಡನ ತಂಗಿ ಜಗದೇವಿ ಮತ್ತು ಜಗದೇವಿ ಗಂಡನಾದ ರಾಘವೇಂದ್ರ  ಹಾಗೂ ಮಗಳ ಗಂಡನ ತಮ್ಮನಾದ ಶರಣಬಸಪ್ಪಾ ಇವರೆಲ್ಲರೂ ಒಂದುಗೂಡಿ ರಚನಾತ್ಮಕವಾಗಿ ಒಂದಿಲ್ಲ ಒಂದು ನೆಪದಿಂದ ಮಾನಸಿಕ ಹಾಗೂ ದೈಹಿಕ ವರದಕ್ಷಿಣೆಗಾಗಿ ಕಿರುಕುಳ ಕೊಡುತ್ತಿದು.  ವರದಕ್ಷಿಣೆ ಪೊರೈಸದಿದ್ದರೆ ನಮ್ಮ ಮನೆಯಲ್ಲಿ ನಿನ್ನ ಸಂಸಾರ ಮಾಡುವದು ಕಷ್ಟವಾಗುತ್ತದೆ ಎಂದು ಕಿರುಕುಳ ಕೊಡಲು ಪ್ರಾರಂಬಿಸಿದರು. ಈ ವಿಷಯ ನಮ್ಮ ಮಗಳು ಕಲಬುರಗಿಗೆ ಬಂದಾಗ ನಮ್ಮ ಹಾಗೂ ನಮ್ಮ ಮನೆಯವರ ಮುಂದೆ  ಹೇಳುತ್ತಿದ್ದಳು, ಮಗಳಿಗೆ ಸಮಜಾಯಿಸಿ ಗಂಡನ ಮನೆಗೆ ಕಳುಹಿಸಿರುತ್ತೇವೆ ಈಷ್ಟಾದರು ಸಹ ನಮ್ಮ ಮಗಳ ಗಂಡನಾದ ಬಾಬುರಾವ ಈತನು ನಾನು ರಾಜಕೀಯವಾಗಿ ದೊಡ್ಡವನಿದ್ದು ಹಾಗೂ ನಮ್ಮ ತಮ್ಮ ಶರಣಬಸಪ್ಪ ಜಾಲಹಳ್ಳಿ ದೊಡ್ಡ ಸರಕಾರಿ ಹುದ್ದೆಯಲ್ಲಿದ್ದು  ನೀವು ಎನು ಮಾಡಿಕೊಳ್ಳುವ ಸಾಧ್ಯತೆ ಇಲ್ಲಾ ಎಂದು ಮನಸ್ಸಿಗೆ ಬಂದ ಹಾಗೆ ಅವಾಚ್ಯ ಶಭ್ದಗಳಿಂದ ಹಿಯಾಳಿಸುತ್ತಿದರು, ಹಾಗೂ ಮೇಲಿಂದ ಮೇಲೆ ಮೇಲೆ ನಮೂದಿಸಿದ  ಐದು ಜನರು ಒಟ್ಟುಗೂಡಿ ಮಾನಸಿಕ ಹಾಗೂ ದೈಹಿಕ ಕಿರುಕುಳು ಕೊಟ್ಟು ಬೇಡಿಕೆ ಈಡೆರಿಸಿದಿದರೆ ನಿನ್ನನ್ನು ನೇಣಿಗೆ ಹಾಕಿಕೊಳ್ಳುವದೊಂದೆ ಮಾರ್ಗ ಉಳಿದಿರುತ್ತದೆ ಎಂದು ಹೆದರಿಸುತ್ತಿದ್ದರು ಹಾಗೂ ಮಗಳ ಗಂಡನಾದ ಬಾಬುರಾವ ಇತನು ನನ್ನಗೆ ಐದು ಲಕ್ಷ ರೂಪಾಯಿ ಕಾರು ತೆಗೆದಕೊಳ್ಳಲು ವರದಕ್ಷಿಣೆ ಕೇಳಿದಾಗ ನಾನ್ನು ಅಷ್ಟು ರೂಪಾಯಿಯನ್ನು ಕೊಡಲು ಆಗುವದಿಲ್ಲ ಎಂದು ಹೇಳಿ ಬೆರೆಯವರಿಂದ ಕೈಗಡ ತೆಗೆದುಕೊಂಡು ಬಾಬುರಾವ ಇವನಿಗೆ ರಾಖಿ ಹಬ್ಬದಂದು ಮಗಳು ನಮ್ಮ ಮನೆಗೆ ಬಂದಾಗ ತಿಳಿಸಿ ಸಮಜಾಯಿಸಿ 2 ಲಕ್ಷ ರೂಪಾಯಿ ಕೊಟಿರುತ್ತೇನೆ. ಉಳಿದ ಹಣದ ಸಲುವಾಗಿ ಕಿರಿಕಿರಿ ಮಾಡಲು ಪ್ರಾರಂಬಿಸಿದಾಗ 2 ತಿಂಗಳ ನಂತರ ಉಳಿದ ಹಣ ಕೊಡುವದಾಗಿ ಹೇಳಿ ನನ್ನ ಹಿರಿಯ ಮಗನಾದ ಶಿವಕುಮಾರ ಇವನ ಜೋತೆಗೆ ಕಮಲಾಪೂರ ಗ್ರಾಮಕ್ಕೆ ಹೋಗಿ ಮಗಳನ್ನು ಬಿಟ್ಟು ಬಂದಿರುತ್ತಾನೆ. ಇದಲ್ಲದೆ ನನ್ನ ಮಗಳಾದ ಪುಷ್ಪಾ ಇವಳು ಬಾಬುರಾವ ಜಾಲಹಳ್ಳಿ ಇವನ ಜೊತೆ ಮದುವೆ ನಿಶ್ಚಯ ಆಗದೆ ಮುಂಚೆ ಸರಕಾರಿ ಆಸ್ಪತ್ರೆ ಲಿಂಗಸೂರ ಅಲ್ಲಿ ನೌಕರಿ ಮಾಡುತ್ತಿದು. ಮದುವೆ ನಿಶ್ಚಯ ಆದ ನಂತರ ಬಾಬುರಾವ ಹಾಗೂ ಅವರ ತಾಯಿ. ತಂಗಿ ಗಂಡ ಹಾಗೂ ಗಂಡನ ತಮ್ಮನಾದ ಶರಣಬಸಪ್ಪಾ ಇವರ ಒತ್ತಾಯದ ಮೇರೆಗೆ ನಾನು ಮಗಳಿಗೆ ಸಮಜಾಯಿಸಿ ಆಕೆಗೆ ನೌಕರಿ ಬಡಿಸಿರುತ್ತೇನೆ ಈ ಘಟನೆಯಿಂದ ನನಗೆ ಹಾಗೂ ನನ್ನ ಮನೆಯಲ್ಲಿ ಹಾಗೂ ಮಗಳಿಗೆ ಬೇಜಾರಾದರು ಮಗಳು ಭವಿಷ್ಯದ ಸಲುವಾಗಿ ತಾಳ್ಮೆಯಿಂದ ಸಹಿಸಿಕೊಂಡಿರುತ್ತೇನೆ. ಮಾನ್ಯರೆ ನನ್ನ ಮಗಳಾದ ಪುಷ್ಪಾ ಇವಳು ರಾಖಿ ಹಬ್ಬಕ್ಕೆ ನನ್ನ ಮಗಳನ್ನು ಮನೆಗೆ ಕರೆದುಕೊಂಡು ಬಂದು ಗಂಡನ ಮನೆಗೆ ಕಳುಹಿಸಿದ ನಂತರ ಗಂಡನ ಮನೆಯವರು ಕಾರಿಗಾಗಿ ಉಳಿದ 3 ಲಕ್ಷ ವರದಕ್ಷಿಣೆ ಕೊಡಬೇಕೆಂದು ದೈಹಿಕವಾಗಿ ಮತ್ತು ಮಾನಸಿಕವಾಗಿ ಕಿರುಕುಳ ಹೆಚ್ಚಿಸಿದರು. ಮಗಳ ಅತ್ತೆ ಹಾಗೂ ನಾದನಿ ಮೈದುನ ಮತ್ತು ಮೇಲೆ ನಮೂದಿಸಿದ ಎಲ್ಲರೂ ಒಟ್ಟುಗೂಡಿ ಮಗಳನ್ನು ವರದಕ್ಷಿಣೆಗಾಗಿ ಮಗಳನ್ನು ಮುಗಿಸಿ ಬಿಡುವ ಉದ್ದೇಶದಿಂದ ಕಿರುಕುಳದಲ್ಲಿ ಉಗ್ರತೆ ಹೆಚ್ಚಿಸಿರುತ್ತಾರೆ ಮತ್ತು ನಮ್ಮೊಂದಿಗೆ ಮಾತನಾಡಬಾರದೆಂದು ಮೋಬೈಲ ಕೂಡ ಮದುವೆಯಾದ 3 ದಿನದಲ್ಲಿ ಕಸಿದುಕೊಂಡಿರುತ್ತಾರೆ. ಇಂದು ದಿನಾಂಕ 31-08-2018 ರಂದು ಮುಂಜಾನೆ ಬೆಳಗ್ಗೆ 9 ಗಂಟೆಗೆ ಮನೆಯಲ್ಲಿ ಲಕ್ಷ್ಮಿ ಪೂಜೆ ಪ್ರಯುಕ್ತ  ನಾನು ಹಾಗೂ ನಮ್ಮ ಮನೆಯವರು ಮಗಳಾದ ಪುಷ್ಪಾ ಹಾಗೂ ಆಕೆಯ ಗಂಡನ ಜೋತೆ ಹಾಗೂ ಗಂಡನ ತಾಯಿ ಇವರಿಗೆ ಮೋಬೈಲ ಮೂಲಕ ಮಾತ್ತಾಡುತ್ತಿದ್ದಾಗ ನನ್ನ ಮಗಳು ಮಾನಸಿಕ ಸ್ಥಿತಿ ಹಾಗೂ ಗಂಡಾತರಕ್ಕೆ ಒಳ ಬಿಳದಂತೆ ಅನಿಸಿ ನಾನು ನಿಜ ಸಂಗತಿ ಅರಿಯಲು ಮತ್ತೆ ಮತ್ತೆ ಪ್ರಯತ್ನಿಸಿದಾಗ ಗಂಡನ ಮನೆಯವರು ಯಾವುದೇ ಮಾತು ಕೇಳದೆ ಮೋಬೈಲ ಬಂದ ಮಾಡಿ ಬಿಟ್ಟಿರುತ್ತಾರೆ.  ಇಂದು ಮಧ್ಯಾಹ್ನ 12-30 ಗಂಟೆ ಸುಮಾರಿಗೆ ನನ್ನ ಮಗಳ ಗಂಡನಾದ ಬಾಬುರಾವ ಈತನು ನನಗೆ ಮೋಬೈಲ ಮುಖಾಂತರ ಮೂಲಕ ಕರೆ ಮಾಡಿ ಪುಷ್ಪಾ ಇವಳಿಗೆ ನಾವು ಕಲಬುರಗಿ ಆಸ್ಪತ್ರೆಗೆ ಕರೆದುಕೊಂಡು ಬರುತ್ತಿದು. ಆಕೆಗೆ ಪ್ರಗ್ನೆ ತಪ್ಪಿತು ಚಿಕ್ಸತೆಗಾಗಿ ಕಲಬುರಗಿಗೆ ತರುತ್ತಿಸ್ಸೆವೆ ಎಂದು ಹೇಳಿದಾಗ ನನಗೆ ಸಂಶಯ ಬಂದು ಎನಾಗಿದೆ ಎಂದು ಮೇಲೆ ಮೇಲೆ ಕೇಳಿದಾಗ ಪುಷ್ಪಾ ಇವಳು ತಿರಿಕೊಂಡಿರುತ್ತಾರೆ ಎಂದು ಹೇಳಿದಾಗ ಈ ವಿಷಯ ತಿಳಿದು ನನ್ನ ಮನೆಯವರು ದಿಗಬ್ರಮೆಗೊಂಡು ಯುವನಿಟೇಡ್ ಆಸ್ಪತ್ರೆಗೆ ಬಂದು ಅವರನ್ನು ಕಾಯಿಯುತ್ತಿದ್ದಾಗ ಖಾಸಗಿ ವಾಹನದಲ್ಲಿ ಮೇಲೆ ನಮೂದಿಸಿದ ಒಬ್ಬನು ಬಂದು ಪುಷ್ಪಾ ಇವಳನ್ನು ಬಿಟ್ಟು ಓಡಿ ಹೋಗಿರುತ್ತಾರೆ. ನಾನು ಆಸ್ಪತ್ರೆಯ ವೈಧ್ಯಾಧಿಕಾರಿಗಳಿಗೆ ವಿಚಾರಿಸಿದಾಗ ಅವರು ನನಗೆ ತಿಳಿಸಿದೆನೆಂದರೆ ನಿಮ್ಮ ಮಗಳು ಸುಮಾರು 2 ಗಂಟೆ ಮುಂಚಿತವಾಗಿ ಸಾವನಪ್ಪಿರುತ್ತಾರೆ ಎಂದು ಹೇಳಿರುತ್ತಾರೆ ಹಾಗೂ ಮಗಳ ಶವವನ್ನು ಸರ್ಕಾರಿ ಆಸ್ಪತ್ರೆ ಕಲಬುರಗಿಗೆ ರವಾನಿಸುತ್ತಾರೆ. ಮಾನ್ಯರೆ ಮೇಲೆ ನಮೂದಿಸಿದ ನನ್ನ ಮಗಳ ಗಂಡನಾದ ಬಾಬುರಾವ , ಅತ್ತೆ ಕಮಲಾಬಾಯಿ , ನಾದನಿ ಜಗದೇವ, ಹಾಗೂ ಆಕೆಯ ಗಂಡ ರಾಘವೇಂದ್ರ  ಮತ್ತು ಮೈದುನನಾದ ಶರಣಬಸಪ್ಪ (ಉಪ-ತಹಶಿಲದಾರ) ಇವರೆಲ್ಲರೂ ಒಂದಾಗಿ ಉದ್ದೇಶ ಪೂರ್ವಕ ಪುಷ್ಪಾ ಇವಳನ್ನು ವರದಕ್ಷಿಣೆಗೋಸ್ಕರ ಮಾನಸಿಕ ಹಾಗೂ ದೈಹಿಕ ತೊಂದರೆ ಕೊಟ್ಟು ಸಾಯಿಸಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣಗಳು :
ಅಫಜಲಪೂರ ಠಾಣೆ : ದಿನಾಂಕ 31/08/2018 ರಂದು ನಾನು ನಮ್ಮ ಮನೆಯಲಿದ್ದಾಗ ನಮಗೆ ಪರಿಚಯದವರಾದ ಗೌರ(ಬಿ) ಗ್ರಾಮದ ಅರ್ಜುನ ತಂದೆ ಸಂತ್ರಾಮಸಿಂಗ್ ರಜಪುತ ರವರು ನನ್ನ ಮೋಬೈಲಗೆ ಕರೆ ಮಾಡಿ ತಿಳಿಸಿದ್ದೆನೆಂದರೆ ನಾನು ಹಾಗು ಭಗತಸಿಂಗ್ ತಂದೆ ರಾಮಸಿಂಗ್ ರಜಪುತ ಇಬ್ಬರು ನಮ್ಮ ಮೋಟಾರ್ ಸೈಕಲ್ ಮೇಲೆ ಅಫಜಲಪೂರಕ್ಕೆ ಹೋಗುತಿದ್ದಾಗ ಶಿರವಾಳ ಸಮೀಪ ಭೀರಪ್ಪಾ ಪೂಜಾರಿ ರವರ ಹೊಲದ ಹತ್ತಿರ ನಮ್ಮ ಮುಂದೆ ನಿಮ್ಮ ತಮ್ಮನಾದ ಸೀತಾರಾಮ ರವರು ನಡೆದುಕೊಂಡು ರೋಡಿನ ಎಡಬಾಜು ಬರುತಿದ್ದರು ನಿಮ್ಮ ತಮ್ಮನ ಹಿಂದಿನಿಂದ ಒಬ್ಬ ಮೋಟಾರ ಸೈಕಲ್ ಸವಾರನು ತನ್ನ ಮೋಟಾರ್ ಸೈಕಲ್ ಅತಿವೇಗ ಹಾಗು ನಿಸ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ನಮ್ಮ ಮುಂದೆ ನಡೆದುಕೊಂಡು ಬರುತಿದ್ದ ನಿಮ್ಮ ತಮ್ಮನಿಗೆ ಮೋಟಾರ ಸೈಕಲ್  ಡಿಕ್ಕಿ ಪಡಿಸಿದ್ದರಿಂದ ನಿಮ್ಮ ತಮ್ಮ ರೋಡಿನ ಬಾಜು ಬಿದ್ದು ಎಡಗಾಲಿಗೆ ಭಾರಿ ರಕ್ತಗಾಯ ತಲೆಗೆ, ಎದೆಗೆ ಭಾರಿ ಗುಪ್ತ ಗಾಯವಾಗಿರುತ್ತವೆ ಸದರಿ ಮೋಟಾರ್ ಸೈಕಲ್ ಸವಾರನು ಗಾಯ ಹೊಂದಿದ್ದು ಅವನ ಹೆಸರು ಅಭಿಷೇಕ ತಂದೆ ಮೋಹನದಾಸ ಪಾಟೀಲ ಸಾ||ಗೌರ(ಬಿ) ಅಂತ ಇದ್ದು ಸದರಿಯವನ ಮೋಟಾರ್ ಸೈಕಲ್ ನಂಬರ ನೋಡಲಾಗಿ ಹಿರೋ ಹೊಂಡಾ ಸ್ಟ್ಯಾಂಡರ ಪ್ಲಸ್ ಇದ್ದು ಅದರ ನಂ ಕೆಎ-32 ವ್ಹಿ-8380 ಅಂತ ಇರುತ್ತದೆ  ನಾವು ಸಧ್ಯ ಒಂದು ಖಾಸಗಿ ವಾಹನದಲ್ಲಿ ನಿಮ್ಮ ತಮ್ಮನಿಗೆ ಹಾಕಿಕೊಂಡು ಸರಕಾರಿ ಆಸ್ಪತ್ರೆ ಅಫಜಲಪೂರಕ್ಕೆ ಸೇರಿಕೆ ಮಾಡಿದ್ದು ಚಿಕಿತ್ಸೆ ಫಲಕಾರಿಯಾಗದೇ ನಿಮ್ಮ ತಮ್ಮ ಮೃತ ಪಟ್ಟಿರುತ್ತಾನೆ ನೀವು ಬನ್ನಿ ಅಂತ ತಿಳಿಸಿದ ಬಳಿಕ ನಾನು ಹಾಗು ನನ್ನ ಹೆಂಡತಿ ರಾಜುಬಾಯಿ ಇಬ್ಬರು ಸರಕಾರಿ ಆಸ್ಪತ್ರೆ ಅಫಜಲಪೂರಕ್ಕೆ ಬಂದು ನೋಡಲಾಗಿ ನಮ್ಮ ತಮ್ಮನ ಎಡಗಾಲಿಗೆ ಭಾರಿ ರಕ್ತಗಾಯ ಎದೆಗೆ, ತಲೆಗೆ ಗುಪ್ತಗಾಯವಾಗಿ ಚಿಕಿತ್ಸೆ ಫಲಕಾರಿಯಾಗಿದೇ ಮೃತಪಟ್ಟಿದ್ದು ಇರುತ್ತದೆ. ಅಂತಾ  ಶ್ರೀ ಶಂಕರಸಿಂಗ್ ತಂದೆ ಶಿವಲಾಲಸಿಂಗ್ ರಜಪುತ ಸಾ||ದುದನಿ ಹಾ||||ಗೊಬ್ಬುರ(ಬಿ) ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಫರತಾಬಾದ ಠಾಣೆ : ದಿನಾಂಕ 30/08/18 ರಂದು ಕಲಬುರಗಿ -ಅಫಜಲಪೂರ ರೋಡಿನ ನಾಗಾಲಿಂಗೇಶ್ವರ ಗುಡಿ ದಾಟಿ ಸ್ವಲ್ಪ ಮುಂದೆ ರೋಡಿನ ಮೇಲೆ ಮೋಟಾರ ಸೈಕಲ ನಂ ಕೆಎ-32 ಕೆ-8248 ನೇದ್ದರ ಚಾಲಕನು ತನ್ನ ಮೋಟಾರ ಸೈಕಲನ್ನು ಅತೀ ವೆಗ ಮತ್ತು ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಶ್ರೀ ಆನಂದ ತಂದೆ ಪೂಲಚಂದ ಚವ್ಹಾಣ ಸಾಃ ಗೊಬ್ಬೂರವಾಡಿ ತಾಂಡಾ ತಾಃ ಅಫಜಲಪೂರ ಜಿಃ ಕಲಬುರಗಿ ರವರು  ಚಲಾಯಿಸುತ್ತಿದ್ದ ಮೋಟಾರ ಸೈಕಲ ನಂ ಕೆಎ-2 ಎಕ್ಸ-3621 ನೇದ್ದಕ್ಕೆ ಡಿಕ್ಕಿಪಡಿಸಿದ ಹಾಗೆಯೇ ತನ್ನ ಮೋಟಾರ ಸೈಕಲನ್ನು ಚಲಾಯಿಸಿಕೊಂಡು ಹೋಗಿರುತ್ತನೆ ಅಪಘಾತದಿಂದ ನನಗೆ ರಕ್ತಗಾಯ ಗುಪ್ತಗಾಗಾಯಗಳಾಗಿರುತ್ತವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ  ಪ್ರಕರಣ ದಾಖಲಾಗಿದೆ.