POLICE BHAVAN KALABURAGI

POLICE BHAVAN KALABURAGI

21 August 2018

KALABURAGI DISTRICT REPORTED CRIMES

ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಟ್ರ್ಯಾಕ್ಟರಗಳ ಜಪ್ತಿ :
ಅಫಜಲಪೂರ ಠಾಣೆ : ದಿನಾಂಕ 20-08-2018 ರಂದು  ಶಿವೂರ ಗ್ರಾಮದ ಹತ್ತಿರ ಇರುವ ಭೀಮಾನದಿಯಿಂದ ಟ್ರ್ಯಾಕ್ಟರಗಳಲ್ಲಿ ಮರಳು ತುಂಬಿಕೊಂಡು ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿದ್ದಾರೆ ಅಂತಾ ಬಾತ್ಮಿ ಬಂದ ಮೇರೆಗೆ, ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸಿ ಪಿ ಐ ಸಾಹೇಬರು ಅಫಜಲಪೂರ ರವರ ಮಾರ್ಗದರ್ಶನದಲ್ಲಿ ಶಿವೂರ ಗ್ರಾಮದ ಭೀಮಾನದಿಯ ಹತ್ತಿರ ಹೋಗಿ ಸ್ವಲ್ಪ ದೂರು ಜೀಪ ನಿಲ್ಲಿಸಿ, ಮರೆಯಾಗಿ ನಿಂತು ನೊಡಲು, ಭೀಮಾನದಿಯಿಂದ ಮೂರು ಟ್ರ್ಯಾಕ್ಟರಗಳು ಮರಳು ತುಂಬಿಕೊಂಡು ಬರುತ್ತಿದ್ದವು. ಸದರಿ ಟ್ರ್ಯಾಕ್ಟರ ಚಾಲಕರು ಟ್ರ್ಟಾಕ್ಟರ ತಗೆದುಕೊಂಡು ನದಿಯ ದಡದ ಹತ್ತಿರ ಬರುತ್ತಿದ್ದಂತೆ ನಮ್ಮ ಇಲಾಖಾ ಜೀಪನ್ನು ನೋಡಿ ಟ್ರ್ಯಾಕ್ಟರಗಳನ್ನು ಸ್ಥಳದಲ್ಲೆ ಬಿಟ್ಟು ಓಡಿ ಹೊದರು. ಆಗ ನಾವು ಪಂಚರ ಸಮಕ್ಷಮ ಸದರಿ ಟ್ರ್ಯಾಕ್ಟರಗಳನ್ನು ಚೆಕ್ ಮಾಡಲಾಗಿ ಟ್ರ್ಯಾಕ್ಟರಗಳಲ್ಲಿ ಮರಳು ತುಂಬಿದ್ದು ಇದ್ದು ಅವುಗಳ ನಂಬರ 1) SWARAJ 744FE NO KA-32 TB-2558 ಅಕಿ 5,00,000/-ರೂ . ಸದರಿ ಟ್ರ್ಯಾಕ್ಟರ ಟ್ರೈಲಿಯಲಿದ್ದ ಮರಳಿನ ಅಂದಾಜು ಕಿಮ್ಮತ್ತು 3,000/- ರೂ ಆಗಬಹುದು. 2) SONALIKA ENGINE NO 3105ELU83C71472F20 ಅಕಿ 5,00,000/-ರೂ . ಸದರಿ ಟ್ರ್ಯಾಕ್ಟರ ಟ್ರೈಲಿಯಲಿದ್ದ ಮರಳಿನ ಅಂದಾಜು ಕಿಮ್ಮತ್ತು 3,000/- ರೂ ಆಗಬಹುದು  3) ARJUN MAHINDRA NO KA 32 TA 4606 ಅಕಿ 5,00,000/-ರೂ . ಸದರಿ ಟ್ರ್ಯಾಕ್ಟರ ಟ್ರೈಲಿಯಲಿದ್ದ ಮರಳಿನ ಅಂದಾಜು ಕಿಮ್ಮತ್ತು 3,000/- ರೂ  ಆಗಬಹುದು  ನಂತರ ಸದರಿ ಅಕ್ರಮವಾಗಿ ಮರಳು ತುಂಬಿದ ಟ್ರ್ಯಾಕ್ಟರಗಳನ್ನು ಪಂಚರ ಸಮಕ್ಷಮ ಜಪ್ತಿ ಪಂಚನಾಮೆ ಮೂಲಕ ವಶಕ್ಕೆ ತೆಗೆದುಕೊಂಡು ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಸ್ವಾಭಾವಿಕ ಸಾವು ಪ್ರಕರಣ :
ಅಫಜಲಪೂರ ಠಾಣೆ : ಶ್ರೀಮತಿ ರಾಜೇಶ್ವಿರ ಗಂಡ ಜಟ್ಟೆಪ್ಪ ಖ್ಯಾಡಗಿ ಸಾ|| ಬಡದಾಳ ಇವರು ರವರ ಗಂಡನನಾದ ಜಟ್ಟೆಪ್ಪ ಇತನು ನಮ್ಮ ಮನೆಯ ಸಂಸಾರದ ಅಡಚಣೆಗಾಗಿ ಮತ್ತು ಒಕ್ಕಲುತನ ಕೆಲಸಕ್ಕಾಗಿ ಖಾಸಗಿಯಾಗಿ 3 ಲಕ್ಷ ರೂಪಾಯಿ ಹಾಗೂ ನನ್ನ ಗಂಡನ ಹೆಸರಿನಲ್ಲಿದ್ದ 5 ಎಕರೆ 32 ಗುಂಟೆಯ ಹೊಲದ ಮೇಲೆ  ಎಸ್ಬಿಐ  ಬ್ಯಾಂಕದಲ್ಲಿ 2,50,000/- ರೂಪಾಯಿ ಸಾಲ ಮಾಡಿದ್ದು, ಈ ಸಾಲ ಹೇಗೆ ತೀರಸ ಬೇಕು ಈ ವರ್ಷ ಮಳೆ ಸರಿಯಾಗಿ ಬಂದಿರುವುದಿಲ್ಲಾ ಏನು ಮಾಡುವುದು ಅಂತಾ ನನ್ನ ಗಂಡ ನನಗೆ ಆಗಾಗ ಹೇಳುತ್ತಾ ಬಂದಿರುತ್ತಾನೆ ನಾನು ನನ್ನ ಗಂಡನಿಗೆ ಏನು ಮಾಡುವುದು ಮಳೆ ಮುಂದೆ ಸರಿಯಾಗಿ ಬಂದು ಸರಿಯಾಗೆ ಬೆಳೆ ಬೆಳೆದು ನಮ್ಮ ಸಾಲ ಮುಟ್ಟುತ್ತದೆ ನೀನು ಚಿಂತೆ ಮಾಡಬೇಡಾ ಅಂತಾ ಹೇಳುತ್ತಾ ಬಂದಿರುತ್ತೇನೆ.  ದಿನಾಂಕ 20-08-2018 ರಂದು ರಾತ್ರಿ 10.30 ಗಂಟೆಯ ಸುಮಾರಿಗೆ ನನ್ನ ಗಂಡ ಊಟ ಮಾಡುವಾಗ ನನ್ನೊಂದಿಗೆ ಸಾಲದ ವಿಚಾರವಾಗಿ ಮಾತನಾಡಿ ಊಟ ಮಾಡಿ ನಾನು ಹೊರಗಡೆ ಹೋಗಿ ಬರುತ್ತೇನೆ ಅಂತಾ ಹೇಳಿ ಹೋಗಿರುತ್ತಾನೆ, ನನ್ನ ಗಂಡ ರಾತ್ರಿ ಮನೆಗೆ ಬರದೆಯಿದ್ದರಿಂದ ಇಂದು ದಿನಾಂಕ:21-08-2018 ರಂದು ಬೆಳಿಗ್ಗೆ ಬಡದಾಳ ಗ್ರಾಮದಲ್ಲಿ ಎಲ್ಲಾ ಕಡೆ ಹುಡುಕಾಡಿದರು ನನ್ನ ಗಂಡ ಸಿಗಲಿಲ್ಲ ನಂತರ ನನ್ನ ಸಂಬಧಿಕರಾದ 1) ಚನ್ನಮಲ್ಲಪ್ಪ ತಂದೆ ಶರಣಪ್ಪ ಮಳಗೆ 2) ಶಿವಾನಂದ ತಂದೆ ಕಾಮಣ್ಣಾ ಪುಕಾಲೆ 3) ಮಂಜುನಾಥ ತಂದೆ ವಿಠಲ ಆನೂರ  ಎಲ್ಲರೂ ಕೂಡಿಕೊಂಡು ಹುಡುಕಾಡುತ್ತಾ ಬಡದಾಳ ಸೀಮಾಂತರದ ನಮ್ಮ ಹೊಲಕ್ಕೆ ಹೋದಾಗ ನನ್ನ ಗಂಡನು ನಮ್ಮ ಹೊಲದ ಬಂದಾರಿಗೆ ಇರುವ ಬೇವಿನ ಮರಕ್ಕೆ ನೇಣು ಹಾಕಿಕೊಂಡ ಸ್ಥತಿಯಲ್ಲಿದ್ದು ನಾವು ಗಾಭರಿಯಾಗಿ ಹತ್ತಿರ ಹೋಗಿ ನೋಡಲು ನನ್ನ ಗಂಡನು ಸದರಿ ಬೇವಿನ ಮರಕ್ಕೆ ಟವಾಲದಿಂದ ನೇಣು ಹಾಕಿಕೊಂಡು ಮೃತಪಟ್ಟಿದ್ದು ಇರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ಶಾಮರಾಯ ತಂದೆ ಬಸಣ್ಣ ಹಿಂದಿನಮನಿ ಸಾ||ಅಳ್ಳಗಿ(ಬಿ) ತಾ||ಅಫಜಲಪೂರ ರವರ ತಮ್ಮನಾದ ಕಾಶಿನಾಥ ಈತನು ದಿನಾಂಕ 19/08/2018 ರಂದು ಬೆಳಿಗ್ಗೆ ನಮಗೆ ತಿಳಿಸಿದ್ದೆನೆಂದರೆ ನಾನು ನಮ್ಮ ಮೋಟಾರ್ ಸೈಕಲ್ ನಂ ಕೆಎ-32 ಇಬಿ-6237 ನೇದ್ದರ ಮೇಲೆ ಇಂಡಿ ತಾಲೂಕಿನ ತಂಗಿ ಮನೆಯಾಗ ಬತಗುಣಗಿ ಗ್ರಾಮಕ್ಕೆ  ಹೋಗಿ ನಾಗರ ಪಂಚಮಿ ಕೋಬರಿ ಕುಬಸ ಕೊಟ್ಟು ಬರುತ್ತೇನೆ ಅಂತ ಹೇಳಿ ಮನೆಯಿಂದ ಹೋಗಿರುತ್ತಾನೆ  ದಿನಾಂಕ 19-08-2018 ರಂದು ಸಾಯಂಕಾಲ ನಾನು ನಮ್ಮ ಮನೆಯಲಿದ್ದಾಗ ನಮ್ಮ ಗ್ರಾಮದ ಶಿವಶರಣಪ್ಪ ತಂದೆ ಮಹಾಂತಪ್ಪ ಕುಮಸಗಿ ರವರು ನನ್ನ ಮೋಬೈಲಗೆ ಪೊನ್ ಮಾಡಿ ತಿಳಿಸಿದ್ದೆನೆಂದರೆ  ಈಗ ಸ್ವಲ್ಪ ಸಮಯದ ಹಿಂದೆ ಅಂದರೆ ಸಾಯಂಕಾಲ 5.30 ಗಂಟೆ ಸುಮಾರಿಗೆ ಭೋಸಗಾ ಕ್ರಾಸಗೆ ನಾನು ಹಾಗು ಮಲ್ಲಿಕಾರ್ಜುನ ತಂದೆ ಚಂದ್ರಶ್ಯಾ ಬುಜರಿ ಇಬ್ಬರು ನಮ್ಮ ಗ್ರಾಮಕ್ಕೆ ಬರುವ ಸಲುವಾಗಿ ನಿಂತಾಗ ಭೋಸಗಾ ಕ್ರಾಸ ಹತ್ತಿರ ಕರಜಗಿ ಕಡೆಯಿಂದ ನಿಮ್ಮ ತಮ್ಮನಾದ ಕಾಶಿನಾಥ ಈತನು ತನ್ನ ಮೋಟಾರ್ ಸೈಕಲ್ ಅತಿವೇಗ ಹಾಗು ನಿಸ್ಕಾಳಜಿತನದಿಂದ ನಡೆಸಿಕೊಂಡು ಬಂದು ಕ್ರಾಸ ದಾಟಿ ಅಫಜಲಪೂರ ಕಡೆ ಹೋಗುವ ರೋಡಿನ ಬಲಭಾಗದಲ್ಲಿ ಇರುವ ಸಂಚಾರ ಸುವ್ಯವಸ್ಥೆ ಸಲುವಾಗಿ ಹಾಕಿದ ಸಿಮೆಂಟಿನ ಕಲ್ಲಿಗೆ ಡಿಕ್ಕಿ ಹೊಡೆದು ಕಾಶಿನಾಥನು ರೋಡಿನ ಮೇಲೆ ಬಿದ್ದಿದ್ದು ಮೋಟಾರ್ ಸೈಕಲ ರೋಡಿನ ಪಕ್ಕ ಇರುವ ತಗ್ಗಿನಲ್ಲಿ ಬಿದ್ದಿರುತ್ತದೆ ಕಾಶಿನಾಥನ ತಲೆಗೆ ಭಾರಿ ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ  ನೀವು ಬನ್ನಿ ಅಂತ ತಿಳಿಸಿದ ಬಳಿಕ ನಾನು ಹಾಗು ನಮ್ಮ ಗ್ರಾಮದ ಸಿದ್ದು ತಂದೆ ಆನಂದರಾಯ ಜವಳಿ, ಶರಣಗೌಡ ತಂದೆ ಹಣಮಂತರಾಯ ಜವಳಿ, ಕಲ್ಯಾಣಿ ತಂದೆ ಗುರಪ್ಪ ತಾವರಖೇಡ ಮತ್ತಿತರರು ಘಟನೆಯ ಸ್ಥಳಕ್ಕೆ ಬಂದು ನೋಡಿದ್ದು ನಮ್ಮ ತಮ್ಮನಾದ ಕಾಶೀನಾಥನಿಗೆ ತಲೆಗೆ ಭಾರಿ ರಕ್ತಗಾಯವಾಗಿ ಸ್ಥಳದಲ್ಲಿಯೆ ಮೃತಪಟ್ಟಿದ್ದು ಇರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಮಾಡಿ ಬೆಳೆ ನಾಶಮಾಡಿದ ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ಗುರುಶಾಂತಯ್ಯಾ ತಂದೆ ಗುರುಲಿಂಗಯ್ಯಾ ಹೀರೇಮಠ ಸಾ|| ಅಕ್ಕಮಹಾದೇವಿ ನಗರ ಅಫಜಲಪೂರ ತಾ||ಅಫಜಲಪೂರ ರವರದು ಗೌರ (ಬಿ) ಸಿಮಾಂತರದ ಹೊಲ ಸರ್ವೆ ನಂ. 13 ನೇದ್ದರ 14 ಎಕರೆ 20 ಗುಂಟೆ ಹೊಲವಿದ್ದು ಅದರಲ್ಲಿ ನನ್ನ ಹೆಸರಿನಲ್ಲಿ 7 ಎಕರೆ 13 ಗುಂಟೆ ನನ್ನ ತಾಯಿಯಾದ ಧಾನಮ್ಮ ಗಂಡ ಗುರುಲಿಂಗಯ್ಯಾ ಹೀರೇಮಠ ಇವರ ಹೆಸರಿನಲ್ಲಿ 2 ಎಕರೆ 25 ಗುಂಟೆ   ನನ್ನ ಹೆಂಡತಿಯಾದ ಸುಮಂಗಲಾ ಇವರ ಹೆಸರಿನಲ್ಲಿ 4 ಎಕರೆ 20 ಗುಂಟೆ ಹೊಲವಿರುತ್ತದೆ. ಸದರ ಹೊಲಕ್ಕೆ ಹೊಂದಿಕೊಂಡ ಅದೆ ಸರ್ವೆ ನಂಬರಿನ 1 ಎಕರೆ 33 ಗುಂಟೆ ಗೌರ ಗ್ರಾಮದ ಬಸವರಾಜ ತಂದೆ ಭೀಮಣ್ಣಾ ಬಿರಾದಾರ ರವರ ಹೊಲವನ್ನು ನಾನು 2011 ನೇ ಸಾಲಿನಲ್ಲಿ ಖರೀದಿ ಮಾಡಿರುತ್ತೇನೆ. ಸದ್ಯ ಸದರಿ ಹೊಲಕ್ಕೆ ಸಂಬಂಧಿಸಿದ ದಾಖಲಾತಿಗಳು ನನ್ನ ಹೆಸರಿನಲ್ಲಿರುತ್ತೇವೆ. ಈಗ 2 ವರ್ಷದಿಂದ ಬಸವರಾಜ ಇತನು ನಾನು ಖರಿದಿ ಮಾಡಿದ 1 ಎಕರೆ 33 ಗುಂಟೆ ಹೊಲವನ್ನು ಬಿಟ್ಟುಕೊಡು ಅಂತಾ ನನ್ನೊಂದಿಗೆ ತಕರಾರು ಮಾಡುತ್ತಾ ಬಂದಿರುತ್ತಾನೆ. ಈ ವಿಷಯದ ಸಂಬಂಧ ಗೌರ (ಬಿ) ಗ್ರಾಮದ ಪ್ರಮುಖರು ನ್ಯಾಯ ಪಂಚಾಯತಿ ಮಾಡಿರುತ್ತಾರೆ. ಬಸವರಾಜ ಇತನು ಕೇಳದೆ ಹಾಗೆ ತಕರಾರು ಮಾಡುತ್ತಾ ಬಂದಿರುತ್ತಾನೆ. ನಮ್ಮ ಹೊಲವನ್ನು ನಾನು ಹಾಗೂ ನಮ್ಮ ಹೊಲ ಸಮ ಪಾಲಿನಿಂದ ಮಾಡಿದ ಭೀಮಶಾ ತಂದೆ ಮಲ್ಲಪ್ಪ ಡಾಂಗೆ ಸಾ|| ಅಫಜಲಪೂರ ಇಬ್ಬರೂ  ಬಿತ್ತನೆ ಮಾಡುವ ಸಮಯದಲ್ಲಿ ಬಸವರಾಜ ತಂದೆ ಭೀಮಣ್ಣಾ ಬಿರದಾರ ಹಾಗೂ ಕೃಷ್ಣಪ್ಪ ತಂದೆ ಷಣ್ಮುಕಪ್ಪ ನಿಂಬರ್ಗಿ ಸಾ|| ಇಬ್ಬರೂ ಗೌರ (ಬಿ) ನಮ್ಮೊಂದಿಗೆ ತಕರಾರು ಮಾಡಿ ನೀವು ಹೇಗೆ ಬಿತ್ತನೆ ಮಾಡುತ್ತಿರಿ ಮಾಡಿರಿ ಮುಂದೆ ಬೆಳೆ ನಾಶ ಹೇಗೆ ಮಾಡಬೇಕೆಂದು ನಮಗೆ ಗೊತ್ತಿರುತ್ತದೆ ಅಂತಾ ಹೇಳಿ ಹೋಗಿರುತ್ತಾರೆ. ಸದ್ಯ ಹೊಲದಲ್ಲಿ ತೊಗರಿ ಬೆಳೆಯು ಸುಮಾರು ಒಂದು ಪೀಟ್ಎತ್ತರಕ್ಕೆ ಬೆಳೆದಿರುತ್ತದೆ. ದಿನಾಂಕ: 18-08-2018 ರಂದು ಬೆಳಿಗ್ಗೆ 6.00 ಗಂಟೆಯ ಸುಮಾರಿಗೆ ನಮ್ಮ ಹೊಲ ಪಾಲಿನಿಂದ ಮಾಡಿದ ಭೀಮಶ್ಯಾ ಡಾಂಗೆ ಮತ್ತು ನಾನು ಇಬ್ಬರೂ ಕೂಡಿಕೊಂಡು ನನ್ನ ಮೋಟಾರ ಸೈಕಲ ಮೇಲೆ ನಮ್ಮ ಹೊಲಕ್ಕೆ ಹೋದಾಗ ನಮ್ಮ ಹೊಲದಲ್ಲಿ 1) ಬಸವರಾಜ ತಂದೆ ಭೀಮಣ್ಣಾ ಬಿರದಾರ 2) ಕೃಷ್ಣಪ್ಪ ತಂದೆ ಷಣ್ಮುಕಪ್ಪ ನಿಂಬರ್ಗಿ 3) ಯಲ್ಲಪ್ಪ ತಂದೆ ಕೃಷ್ಣಪ್ಪ ನಿಂಬರ್ಗಿ ಸಾ|| ಎಲ್ಲರೂ ಗೌರ (ಬಿ) ಹಾಗೂ ಬಸವರಾಜನ ಸಂಬಂಧಿಕನಾದ 4) ಮಲ್ಲಪ್ಪ ತಂದೆ ರಾಮಚಂದ್ರ ಸಾ|| ಜಳಕಿ ಇವರು ಕೂಡಿಕೊಂಡು ಅತೀಕ್ರಮ ಪ್ರವೇಶ ಮಾಡಿ ಹೊಲದಲ್ಲಿನ ತೊಗರಿ ಬೆಳೆಗೆ ಪೆಟ್ರೋಲ ಪಂಪನಿಂದ ಔಷಧಿ ಸಿಂಪರಣೆ ಮಾಡುತ್ತಿದ್ದರು, ನಾನು ಬಸವರಾಜ ಹಾಗೂ ಕೃಷ್ಣಪ್ಪ ರವರಿಗೆ ನೀವು ಏನು ಮಾಡುತ್ತಿದ್ದಿರಿ ಅಂತಾ ಕೇಳಿದಾಗ ನನಗೆ ಬಸವರಾಜ ಇತನು ಬೋಸಡಿ ಮಗನೆ ನನ್ನ ಹೊಲ ನನಗೆ ಕೋಡು ಅಂತಾ ಹೇಳಿದರು ಬಿಟ್ಟು ಕೊಡಲ್ಲಾ ನೀನು ಹೇಗೆ ಬೆಳೆ ಬೆಳಿತಿ ನಾವು ಬೆಳೆ ನಾಶ ಮಾಡುವ ಔಷಧಿ ಸಿಂಪರಣೆ ಮಾಡಿರುತ್ತೇವೆ ಅಂತಾ ಅನ್ನುತ್ತಿದ್ದಾಗ ಕೃಷ್ಣಪ್ಪಾ ಹಾಗೂ ಅವನ ಮಗನಾದ ಯಲ್ಲಪ್ಪ ಇಬ್ಬರೂ ನನಗೆ ರಂಡಿ ಮಗನೆ ನಿನಗೆ ಇಷ್ಟಕ್ಕೆ ಬಿಡಲ್ಲಾ ನಿನಗೆ ಖಲ್ಲಾಸ ಮಾಡುತ್ತೇವೆ ಅಂತಾ ಅಂದು ಅಲ್ಲಿಂದ ಹೋಗಿರುತ್ತಾರೆ. ದಿನಾಂಕ: 20-08-2018 ರಂದು ಬೆಳಿಗ್ಗೆ 8.00 ಗಂಟೆಗೆ ನಮ್ಮ ಹೊಲಕ್ಕೆ ಹೋಗಿ ಹೊಲದಲ್ಲಿನ ಬೆಳೆ ನೋಡಲಾಗಿ ಸದರಿಯವರು ಸಿಂಪರಣೆ ಮಾಡಿದ ಔಷದಿಯಿಂದ ಸುಮಾರು 8 ಎಕರೆದಷ್ಟು ತೊಗರಿ ಬೆಳೆ ಸಂಪೂರ್ಣವಾಗಿ ಒಣಗಿರುತ್ತದೆ ಹಾಗೂ ಉಳಿದ 8  ಎಕರೆ 13 ಗುಂಟೆ ಜಮೀನನಲ್ಲಿನ ಬೆಳೆ ಅಲ್ಲಲ್ಲಿ ಒಣಗಿ ನಾಶವಾಗಿರುತ್ತದೆ.  1) ಬಸವರಾಜ ತಂದೆ ಭೀಮಣ್ಣಾ ಬಿರದಾರ 2) ಕೃಷ್ಣಪ್ಪ ತಂದೆ ಷಣ್ಮುಕಪ್ಪ ನಿಂಬರ್ಗಿ 3) ಯಲ್ಲಪ್ಪ ತಂದೆ ಕೃಷ್ಣಪ್ಪ ನಿಂಬರ್ಗಿ ಸಾ|| ಎಲ್ಲರೂ ಗೌರ (ಬಿ) ಹಾಗೂ ಬಸವರಾಜನ ಸಂಬಂಧಿಕನಾದ 4) ಮಲ್ಲಪ್ಪ ತಂದೆ ರಾಮಚಂದ್ರ ಸಾ|| ಜಳಕಿ ಇವರು ಕೂಡಿಕೊಂಡು ಅತೀಕ್ರಮ ಪ್ರವೇಶ ಮಾಡಿ ಹೊಲದಲ್ಲಿನ ತೊಗರಿ ಬೆಳೆಗೆ ಪೆಟ್ರೋಲ ಪಂಪನಿಂದ ಔಷಧಿ ಸಿಂಪರಣೆ ಮಾಡಿ ಅಂದಾಜು ನಾಲ್ಕರಿಂದ ಐದು ಲಕ್ಷ ಬೆಲೆಯುಳ್ಳ  ತೊಗರಿ ಬೆಳೆ ನಾಶ ಮಾಡಿ ನನಗೆ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿದವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

16 August 2018

KALABURAGI DISTRICT PRESS NOTE

ಸಂ. ಸಿಬ್ಬಂದಿ-1/ನೇಮಕಾತಿ ಪ್ರಕ್ರಿಯೆ/2018                    ಪೊಲೀಸ್ ಅಧೀಕ್ಷಕರವರ ಕಛೇರಿ
                                                                   ಕಲಬುರಗಿ. ದಿನಾಂಕ16-08-2018.
:: ಪತ್ರಿಕಾ ಪ್ರಕಟಣೆ ::

                ವಿಷಯ :- ನಾಗರೀಕ ಪೊಲೀಸ್ ಕಾನ್ಸಟೇಬಲ್ (ಪುರುಷ ಮತ್ತು ಮಹಿಳಾ) ಹುದ್ದೆಗಳ
                            ಲಿಖಿತ ಪರೀಕ್ಷೆ ಮುಂದೂಡಿದ ಬಗ್ಗೆ.

                ಉಲ್ಲೇಖ :- ಮಾನ್ಯ ಎಡಿಜಿಪಿ (ಆರ್ & ಟಿ)  ಬೆಂಗಳೂರು ರವರ ಪತ್ರಿಕಾ ಪ್ರಕಟಣೆ
                              ದಿನಾಂಕ:16-08-2018.
***=***
      ನಾಗರೀಕ ಪೊಲೀಸ್ ಕಾನ್ಸಟೇಬಲ್ (ಪುರುಷ ಮತ್ತು ಮಹಿಳಾ)  ಹುದ್ದೆಗಳನ್ನು ಭರ್ತಿ ಮಾಡುವ ಸಲುವಾಗಿ ಅಧಿಸೂಚನೆ ಸಂ: 05/ನೇಮಕಾತಿ-4/2018-19. ದಿನಾಂಕ:21-06-2018 ಕರ್ನಾಟಕ ರಾಜ್ಯ ಪತ್ರದಲ್ಲಿ ಪ್ರಕಟಿಸಿ ನೇಮಕಾತಿ ಪ್ರಕ್ರಿಯೆ ಕೈಗೊಳ್ಳಲಾಗಿತ್ತು, ಅರ್ಜಿ ಸಲ್ಲಿಸಿರುವ ಅರ್ಹ ಅಭ್ಯರ್ಥಿಗಳ  ನಿಯಮಾನುಸಾರ ದಿನಾಂಕ:19-08-2018 ರಂದು ಕಲಬುರಗಿ ನಗರದ ವಿವಿಧ ಶಾಲಾ ಕಾಲೇಜುಗಳಲ್ಲಿ  ಲಿಖಿತ ಪರೀಕ್ಷೆಯನ್ನು ನಡೆಸಲು ತಿರ್ಮಾನಿಸಲಾಗಿತ್ತು, ಆದರೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ  ತುಂಬಾ ಮಳೆಯ ಕಾರಣ ಪ್ರವಾಹ ಉಂಟಾಗಿದ್ದು, ಅಭ್ಯರ್ಥಿಗಳು ಲಿಖಿತ ಪರೀಕ್ಷೆಯ ಕೇಂದ್ರಗಳಿಗೆ ಹಾಜರಾಗಲು ಅನಾನುಕೂಲವಾಗುವ ಸಾಧ್ಯತೆಯಿರುವದರಿಂದ ದಿನಾಂಕ:19-08-2018 ರಂದು ನಡೆಸಲು ತಿರ್ಮಾನಿಸಿದ್ದ ಲಿಖಿತ ಪರೀಕ್ಷೆಯನ್ನು ಉಲ್ಲೇಖ ಆದೇಶದ ಪ್ರಕಾರ ಮುಂದೂಡಲಾಗಿರುತ್ತದೆ. ಮುಂದಿನ ಲಿಖಿತ ಪರೀಕ್ಷೆಯ ದಿನಾಂಕವನ್ನು ತಿಳಿಯಪಡಿಸಲಾಗುವುದು.                                                                                                                                              ಸಹಿ/-
ಪೊಲೀಸ್ ಅಧೀಕ್ಷಕರು,
                                                                        ಕಲಬುರಗಿ.


KALABURAGI DISTRICT REPORTED CRIMES


ಇಸ್ಪೀಟ  ಜೂಜಾಟದಲ್ಲಿ ನಿರತವರ ಬಂಧನ :
ರಾಘವೇಂದ್ರ ನಗರ ಠಾಣೆ : ದಿನಾಂಕ 15.08.2018 ರಂದು ಸಾಯಂಕಾಲ 4;30 ಗಂಟೆಗೆ ಶ್ರೀ ಕಪೀಲದೇವ ಪಿ.ಐ. ಡಿಸಿಬಿ ಘಟಕ ಕಲಬುರಗಿ ರವರು ಪೋನ ಮಾಡಿ ನಮ್ಮ ಠಾಣಾ ವ್ಯಾಪ್ತಿಯ ಇದಗಾ ಮೈದಾನದ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಗುಂಪಾಗಿ ಕುಳಿತು ಪಣಕ್ಕೆ ಹಣ ಹಚ್ಚಿ ಅಂದರ ಬಾಹರ ಜೂಜಾಟ ಆಡುತ್ತಿದ್ದಾರೆ ಅಂತ ಖಚಿತ ಬಾತ್ಮಿ ಬಂದಿದ್ದು ತಾನು ಮತ್ತು ತಮ್ಮ ಸಿಬ್ಬಂದಿಯವರನ್ನು ಕರೆದುಕೊಂಡು ಇದಗಾ ಮೈದಾನ ಹತ್ತಿರ ಬರುತ್ತಿದ್ದೆನೆ ನೀವು ಕೂಡಾ ಬರಲು ತಿಳಿಸಿದ ಮೇರೆಗೆ ನಾನು ಮತ್ತು ನಮ್ಮ ಠಾಣೆಯ ಸಿಬ್ಬಂದಿ ಮತ್ತು ಪಂಚರೊಂದಿಗೆ  ಇದಗಾ ಮೈದಾನ ಹತ್ತಿರ ರಸ್ತೆಯ ಮೇಲೆ ಹೋಗಿದ್ದು ಅದೆ ವೇಳೆಗೆ ಶ್ರೀ ಕಪೀಲದೇವ ಪಿ.ಐ. ಡಿಸಿಬಿ ಘಟಕ ಕಲಬುರಗಿ ಮತ್ತು ಸಿಬ್ಬಂದಿ ಸ್ಥಳಕ್ಕೆ ಬಂದು  ಬಾತ್ಮಿಯಂತೆ ನಾವು ನಿಂತ ಸ್ಥಳದಿಂದ ನಿಧಾನವಾಗಿ ನಡೆದುಕೊಂಡು ಇದಗಾ ಮೈದಾನದ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ಹೋಗುತ್ತಿದ್ದಂತೆ. ಇದಗಾ ಮೈದಾನ ಮುಂದಿನ ಸಾರ್ವಜನಿಕ ಸ್ಥಳಲ್ಲಿ 9 ಜನರು ಗುಂಪಾಗಿ ಕುಳಿತು ಪಣಕ್ಕೆ ಹಣ ಹಚ್ಚಿ ಅಂದರ ಬಾಹರ ಜೂಜಾಟ ಆಡುತ್ತಿದ್ದು ಖಚಿತಪಡಿಸಿಕೊಂಡು ದಾಳಿ ಮಾಡಿ ಜೂಜಾಟ ನಿರತರನ್ನು ವಶಕ್ಕೆ ಪಡೆದುಕೊಂಡು ನಂತರ ಸದರಿಯವರ ಹೆಸರು ವಿಳಾಸ ವಿಚಾರಿಸಲು, ಸದರಿಯವರು ತಮ್ಮ ಹೆಸರು 1. ಗುರಲಿಂಗಪ್ಪ ತಂದೆ ವಿಜಯಕುಮಾರ ಮುಕರಂಬಿ ಸಾ: ಮಹಾಗಾವ ಹಾ:ವ: ಆದರ್ಶ ನಗರ ಸೇಡಂ ರೋಡ ಕಲಬುರಗಿ 2. ಶಿವಪುತ್ರಯ್ಯ ತಂದೆ ಬಸಯ್ಯ ಮಠಪತಿ ಸಾ: ಕೊಂಡೆದಗಲ್ಲಿ ಕಮಾನ ಹತ್ತಿರ ಬ್ರಹ್ಮಪೂರ ಕಲಬುರಗಿ 3. ನಾಗರಾಜ ತಂದೆ ಚನ್ನಬಸಪ್ಪ ಕಲಶೇಟ್ಟ ಸಾ: ಸುಭಾಷ ಚೌಕ ಬ್ರಹ್ಮಪೂರ ಕಲಬುರಗಿ 4. ಅಂಬಣ್ಣ ತಂದೆ ಚಂದಪ್ಪ ಪಾಟೀಲ ಸಾ: ನಿಂಬಾಳ ತಾ: ಆಳಂದ 5. ಶರಣು ತಂಧೆ ಶ್ಯಾಮರಾವ ಕಮಲಾಪೂರಕರ ಸಾ: ಕೂಸನೂರ ತಾ:ಜಿ: ಕಲಬುರಗಿ 6. ಬಸವರಾಜ ತಂದೆ ಮಲ್ಲಣ್ಣ ಪಾಟೀಲ ಸಾ: ನಾಲವಾರ ಹಾ:ವ: ವಿಠಲ ನಗರ ಕಲಬುರಗಿ. 7. ಬಾಪುಗೌಡ ತಂದೆ ಪ್ರಭಣ್ಣ ಪಾಟೀಲ ಸಾ: ಸಾಯಿಮಂದಿರ ಡಾ: ನವಣಿ ಲೆಔಟ ಕಲಬುರಗಿ 8. ಗುರುಲಿಂಗಪ್ಪ ತಂದೆ ಸಿದ್ದಣ್ಣ ಸನಗುಂದಿ ಸಾ: ಉದನೂರ ರಿಂಗ್ ರೋಡ ಕಲಬುರಗಿ 9. ಮಂಜುನಾಥ ತಂದೆ ಪ್ರಕಾಶ ಕೊಳ್ಳೆ ಸಾ: ಲಾಲಹನುಮಾನ ದೇವರಗುಡಿ ಹತ್ತಿರ ಶಹಾಬಜಾರ ಕಲಬುರಗಿ. ಅಂತಾ ತಿಳಿಸಿದ್ದು ಸದರಿಯವರಿಂದ ಜೂಜಾಟಕ್ಕೆ ಬಳಸಿದ  ನಗದು ಹಣ 31,960/- ರೂಪಾಯಿ ಮತ್ತು 52 ಇಸ್ಪೇಟ ಎಲೆಗಳನ್ನು ವಶಕ್ಕೆ ತೆಗೆದುಕೊಂಡು ಸದರಿಯವರೊಂದಿಗೆ ರಾಘವೇಂದ್ರ ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.  
ಹಲ್ಲೆ ಪ್ರಕರಣಗಳು :
ರಾಘವೇಂದ್ರ ನಗರ ಠಾಣೆ : ಶ್ರೀ ಶರಣಬಸಪ್ಪ ತಂದೆ ಭೀಮಶ್ಯಾ ಪೂಜಾರಿ ಸಾ: ಧಂಗಾಪೂರ ತಾ: ಆಳಂದ ಜಿ: ಕಲಬುರಗಿ ಹಾ:ವ: ಸಮತಾ ಕಾಲೋನಿ ಕಲಬುರಗಿ ಇವರದು ಆಳಂದ ತಾಲೂಕಿ ದಂಗಾಪೂರ ಗ್ರಾಮ ಇದ್ದು ಈಗ ಸುಮಾರು 4 ವರ್ಷಗಳ ಹಿಂದೆ ನಾವು ಸಮತಾ ಕಾಲೋನಿಯಲ್ಲಿ ಸ್ವಂತ ಮನೆ ಮಾಡಿಕೊಂಡು ಕುಟುಂಬದೊಂದಿಗೆ ಉಪಜೀವನ ಸಾಗಿಸುತ್ತೆನೆ. ನಮ್ಮ ಮನೆಯಲ್ಲಿ ನಾನು, ನನ್ನ ಹೆಂಡತಿ ಶೋಭಾ ಮತ್ತು ಅತ್ತೆ ಮಲ್ಲಮ್ಮ ಮಾವ ಶ್ರೀಮಂತ ಪೂಜಾರಿ ಕೊಡಿಕೊಂಡು ಇರುತ್ತೆವೆ. ಈಗ ಕೆಲವು ದಿವಸಗಳಿಂದ ನಮ್ಮ ಬಡಾವಣೆಯಲ್ಲಿ ವಾಸವಾಗಿರುವ ಸೊಮಶೇಖರ @ ಸೊಮು ತಂದೆ ಕೆಂಚಪ್ಪ ಹದಗಲ (ಪೂಜಾರಿ) ಇತನು ತನ್ನ ಸಂಗಡ ತಿರುಗಾಡಲು ಮತ್ತು ತನ್ನ ಸಂಗಡ ಇರುವಂತೆ ಒತ್ತಾಯ ಮಾಡುತ್ತಾ ಬಂದಿದ್ದು ಸದರಿಯವನು ಜನರ ಸಂಗಡ ಜಗಳ ಮಾಡಿ ಹೊಡುವದು ಮಾಡುತ್ತಿದ್ದರಿಂದ ನಾನು ಸದರಿಯವನ ಸಂಗಡ ಹೋಗಲು ನಿರಾಕರಿಸುತ್ತಾ ಬಂದಿದ್ದು ಇರುತ್ತದೆ. ನಿನ್ನೆ ದಿನಾಂಕ 14.08.2018 ರಂದು ಸಾಯಂಕಾಲ 5:30 ಗಂಟೆಯ ಸುಮಾರಿಗೆ ನಾನು ನಮ್ಮ ಮನೆಯ ಪಕ್ಕದಲ್ಲಿ ಇರುವ ಹನುಮಾನ ದೇವರ ಗುಡಿಗೆ ಹೋಗಿ ಗುಡಿಯಲ್ಲಿ ಕುಳಿತ್ತಿದ್ದು ನನ್ನಂತೆ ನಮ್ಮ ಬಡಾವಣೆಯ ನಾಗಪ್ಪ ಕಟ್ಟಿಮನಿ ಮತ್ತು ಅರ್ಜುನ ಬಬಲಾದ ಇವರು ಕೂಡಾ ಗುಡಿಯಲ್ಲಿ ಕುಳಿತ್ತಿದ್ದು ಸಾಯಂಕಾಲ 6:00 ಗಂಟೆಯ ಸುಮಾರಿಗೆ ಸೊಮಶೇಖರ @ ಸೊಮು ತಂದೆ ಕೆಂಚಪ್ಪ ಹದಗಲ (ಪೂಜಾರಿ) ಇತನು ಕಾರ ತೆಗೆದುಕೊಂಡು 2-3 ಜನ ಹುಡುಗರನ್ನು ಕರೆದುಕೊಂಡು ನಾನು ಕುಳಿತ್ತಿದ್ದ ಹನುಮಾನ ದೇವರ ಗುಡಿಯ ಮುಂದಿನ ರಸ್ತೆಯ ಮೇಲೆ ಬಂದು, ಸದರಿ ಸೊಮಶೇಖರ ಇತನು ಏ ಶರಣ್ಯಾ ಇಲ್ಲಿ ಬಾ ಅಂತ ನನಗೆ ಕರೆದಿದ್ದು ಆಗ ನಾನು ಅವನ ಹತ್ತಿರ ಹೋಗಿ ಯಾಕೆ ನನಗೆ ಕರೆಯುತ್ತಿದ್ದಿ ಅಂತ ಕೇಳಿದ್ದು ಆಗ ಸದರಿಯವನು ನನಗೆ ಹಿಡಿದುಕೊಂಡು ರಂಡಿ ಮಗನೆ ನಾನು ಕರೆದರೆ ಬರುವದಿಲ್ಲ ಭೋಸಡಿ ಮಗನೆ ನನ್ನ ಕಾರಿನಲ್ಲಿ ಕೂಡು ಹೋಗೊಣ ನಡೆ ಅಂತ ಹೇಳಿದ್ದು ಆಗ ನಾನು ಸದರಿಯವನಿಗೆ ನಿನ್ನ ಸಂಗಡ ನಾನು ಬರುವದಿಲ್ಲ ನನಗೆ ಕೆಲಸವಿದೆ ಅಂತ ಹೇಳಿದ್ದು  ಆಗ ಸದರಿ ಸೊಮಶೇಖರ ಇತನು ರಂಡಿ ಮಗನೆ ನೀನು ನನ್ನ ಮಾತು ಕೇಳುವದಿಲ್ಲ ಸೂಳಿ ಮಗನೆ ನಿನಗೆ ಸೊಕ್ಕು ಬಂದಿದೆ ಅಂತ ಬೈಯುತ್ತಾ ಅಲ್ಲೆ ಬಿದ್ದಿದ್ದ ಬಡಿಗೆಯನ್ನು ತೆಗೆದುಕೊಂಡು ನನ್ನ ಬಲಗೈ ಮುಂಗೈ ಹತ್ತಿರ, ಬಲ ಭಾಗದ ಹೊಟ್ಟೆಗೆ ಹೊಡೆದು ಗುಪ್ತಗಾಯ ಪಡಿಸಿದ್ದು ನನಗೆ ಬಹಳ ತ್ರಾಸ ಆಗುತ್ತಿದ್ದು ಸದರಿಯವನ ಹತ್ತಿರ ಇದ್ದರೆ ಅವನು ನನಗೆ ಇನ್ನೂ ಹೊಡೆಯುತ್ತಾನೆ ಅಂತ ಗೊತ್ತಾಗಿ ನಾನು ಚಿರಾಡುತ್ತಾ ಅಲ್ಲಿಂದ ಓಡಿ ಹೋಗುತ್ತಿದ್ದು ಆಗ ಸೊಮಶೇಖರ ಇತನು ಅಲ್ಲೆ ಕಲ್ಲು ತೆಗೆದುಕೊಂಡು ಬಿಸಿ ಹೊಡೆದಿದ್ದರಿಂದ ನನ್ನ ಬೆನ್ನಿಗೆ ಗುಪ್ತಗಾಯವಾಗಿದ್ದು ಇರುತ್ತದೆ. ಸದರಿ ಸೊಮಶೇಖರನ ಸಂಗಡ ಇದ್ದ ಹುಡುಗರು ನನಗೆ ಹಿಡಿದುಕೊಳ್ಳಲು ನನ್ನ ಬೆನ್ನು ಹತ್ತಿ ಓಡಿ ಬರುತ್ತಿದ್ದು ನಾನು ಚಿರಾಡುತ್ತಾ ಅವರಿಂದ ತಪ್ಪಿಸಿಕೊಂಡು ಓಡಿ ನಮ್ಮ ಮನೆ ಕಡೆಗೆ ಹೋಗುತ್ತಿದ್ದಾಗ, ನಾನು ಚಿರಾಡುವದನ್ನು ಕೇಳಿ ಪಕ್ಕದಲ್ಲೆ ನಮ್ಮ ಮನೆ ಇದ್ದರಿಂದ ನಮ್ಮ ಮನೆಯಲ್ಲಿದ್ದ ನನ್ನ ಹೆಂಡತಿ ಶೋಬಾ ಅತ್ತೆ ಮಲ್ಲಮ್ಮ ಇವರು ಹೋರಗೆ ಬಂದಿದ್ದು ನನ್ನ ಹೆಂಡತಿ ಮತ್ತು ಅತ್ತೆಯನ್ನು ಮನೆಯಿಂದ ಹೊರಗೆ ಬಂದಿರುವದನ್ನು ನೋಡಿ ಸೊಮಶೇಖರ ಮತ್ತು ಅವನ ಸಂಗಡ ಇದ್ದವರು ನನಗೆ ಬೆನ್ನು ಹತ್ತಿರ ಬರುವದನ್ನು ಬಿಟ್ಟು ರಂಡಿ ಮಗನೆ ಇಂದು ಉಳಿದಿದ್ದಿ ಮುಂದೆ ನೋಡಿಕೊಳ್ಳುತ್ತೆವೆ ಅಂತ ಬೇದರಿಕೆ ಹಾಕಿ ಹೋಗಿದ್ದು ಇರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಯಡ್ರಾಮಿ ಠಾಣೆ : ದಿನಾಂಕ: 15-08-18 ರಂದು ಬುಧುವಾರ ಬೆಳಗ್ಗೆ 6-10 ನಿಮಿಷ ಸುಮಾರಿಗೆ ನಾನು ಮತ್ತು ನಿಂಗನಗೌಢ ಚನ್ನಾಗೋಳ ಹಾಗೂ ಶರಣಪ್ಪ ಕುಂಬಾರ ಮೂರು ಜನರು ಸೇರಿಕೊಂಡು ಗ್ರಾಮ ಪಂಚಾಯತಿಗೆ ದ್ವಜಾರೋಹಣ ಮಾಡಲು ಹೋಗುವಾಗ ವಿ.ಎಸ್.ಎಸ್.ಎಸ್.ಎನ್ ಹತ್ತಿರ 1] ದಯಾನಂದ ಗುಜಗೊಂಡ 2] ಮಲ್ಲಪ್ಪಗೌಡ ತಂ ಶಿವಪ್ಪಗೌಡ ಬಿರಾದಾರ 3] ಶಿವಪ್ಪಗೌಡ ತಂ ಮಲ್ಲಪ್ಪಗೌಡ ಬಿರಾದಾರ 4] ಜಗನ್ನಾಥ ತಂ ಮಲ್ಲಪ್ಪಗೌಡ ಬಿರಾದಾರ ಈ ನಾಲ್ಕು ಜನರು ಬಂದವರೆ ಮಗನೆ ನಮ್ಮ ಮೇಲೆ ಕೇಸು ಮಾಡುತಿಯಾ ಅಂತಾ ಅವಾಚ್ಯವಾಗಿ ಬೈಯುತ್ತಾ ಎಲ್ಲರೂ ಕೈಯಿಂದ ಹೊಡೆ ಬಡೆ ಮಾಡುತ್ತಿರುವಾಗ ಅವರಲ್ಲಿಯ ದಯಾನಂದ ಗುಜಗೊಂಡ ಇತನು ತನ್ನ ಟೊಂಕದಲ್ಲಿದ್ದ ಚಾಕು ತೆಗೆದುಕೊಂಡು ಹೊಟ್ಟೆಗೆ ಚುಚ್ಚಲು ಬಂದು ಕೊಲೆ ಮಾಡಲು ಪ್ರಯತ್ನಿಸುತ್ತಿದ್ದಾಗ ನಾನು ಅವರಿಂದ ಕಸಿದುಕೊಂಡು ಓಡಿ ಹೋಗಿದ್ದು ಇರುತ್ತದೆ. ದಯಾನಂದ ಗುಜಗೊಂಡ ಸಂಗಡ ಇತರೆ 4 ಜನರು ನನಗೆ ಹಳೆ ವೈಷಮ್ಯದ ಕಾರಣ ಅವಾಚ್ಯವಾಗಿ ಬೈದು ಕೈಯಿಂದ ಹೊಡೆ ಬಡೆ ಮಾಡಿ ಚಾಕುವಿನಿಂದ ಹೊಡೆಯಲು ಕೊಲೆ ಮಾಡಲು ಪ್ರಯತ್ನಿಸಿದ 4 ಜನರ ವಿರುದ್ದ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಶ್ರೀ ಸಂಗನಗೌಡ ತಂ ಸಿದ್ದನಗೌಡ ಬಿರಾದಾರ ಸಾ: ಮಾಗಣಗೇರಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ