POLICE BHAVAN KALABURAGI

POLICE BHAVAN KALABURAGI

16 August 2018

KALABURAGI DISTRICT REPORTED CRIMES


ಇಸ್ಪೀಟ  ಜೂಜಾಟದಲ್ಲಿ ನಿರತವರ ಬಂಧನ :
ರಾಘವೇಂದ್ರ ನಗರ ಠಾಣೆ : ದಿನಾಂಕ 15.08.2018 ರಂದು ಸಾಯಂಕಾಲ 4;30 ಗಂಟೆಗೆ ಶ್ರೀ ಕಪೀಲದೇವ ಪಿ.ಐ. ಡಿಸಿಬಿ ಘಟಕ ಕಲಬುರಗಿ ರವರು ಪೋನ ಮಾಡಿ ನಮ್ಮ ಠಾಣಾ ವ್ಯಾಪ್ತಿಯ ಇದಗಾ ಮೈದಾನದ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಗುಂಪಾಗಿ ಕುಳಿತು ಪಣಕ್ಕೆ ಹಣ ಹಚ್ಚಿ ಅಂದರ ಬಾಹರ ಜೂಜಾಟ ಆಡುತ್ತಿದ್ದಾರೆ ಅಂತ ಖಚಿತ ಬಾತ್ಮಿ ಬಂದಿದ್ದು ತಾನು ಮತ್ತು ತಮ್ಮ ಸಿಬ್ಬಂದಿಯವರನ್ನು ಕರೆದುಕೊಂಡು ಇದಗಾ ಮೈದಾನ ಹತ್ತಿರ ಬರುತ್ತಿದ್ದೆನೆ ನೀವು ಕೂಡಾ ಬರಲು ತಿಳಿಸಿದ ಮೇರೆಗೆ ನಾನು ಮತ್ತು ನಮ್ಮ ಠಾಣೆಯ ಸಿಬ್ಬಂದಿ ಮತ್ತು ಪಂಚರೊಂದಿಗೆ  ಇದಗಾ ಮೈದಾನ ಹತ್ತಿರ ರಸ್ತೆಯ ಮೇಲೆ ಹೋಗಿದ್ದು ಅದೆ ವೇಳೆಗೆ ಶ್ರೀ ಕಪೀಲದೇವ ಪಿ.ಐ. ಡಿಸಿಬಿ ಘಟಕ ಕಲಬುರಗಿ ಮತ್ತು ಸಿಬ್ಬಂದಿ ಸ್ಥಳಕ್ಕೆ ಬಂದು  ಬಾತ್ಮಿಯಂತೆ ನಾವು ನಿಂತ ಸ್ಥಳದಿಂದ ನಿಧಾನವಾಗಿ ನಡೆದುಕೊಂಡು ಇದಗಾ ಮೈದಾನದ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ಹೋಗುತ್ತಿದ್ದಂತೆ. ಇದಗಾ ಮೈದಾನ ಮುಂದಿನ ಸಾರ್ವಜನಿಕ ಸ್ಥಳಲ್ಲಿ 9 ಜನರು ಗುಂಪಾಗಿ ಕುಳಿತು ಪಣಕ್ಕೆ ಹಣ ಹಚ್ಚಿ ಅಂದರ ಬಾಹರ ಜೂಜಾಟ ಆಡುತ್ತಿದ್ದು ಖಚಿತಪಡಿಸಿಕೊಂಡು ದಾಳಿ ಮಾಡಿ ಜೂಜಾಟ ನಿರತರನ್ನು ವಶಕ್ಕೆ ಪಡೆದುಕೊಂಡು ನಂತರ ಸದರಿಯವರ ಹೆಸರು ವಿಳಾಸ ವಿಚಾರಿಸಲು, ಸದರಿಯವರು ತಮ್ಮ ಹೆಸರು 1. ಗುರಲಿಂಗಪ್ಪ ತಂದೆ ವಿಜಯಕುಮಾರ ಮುಕರಂಬಿ ಸಾ: ಮಹಾಗಾವ ಹಾ:ವ: ಆದರ್ಶ ನಗರ ಸೇಡಂ ರೋಡ ಕಲಬುರಗಿ 2. ಶಿವಪುತ್ರಯ್ಯ ತಂದೆ ಬಸಯ್ಯ ಮಠಪತಿ ಸಾ: ಕೊಂಡೆದಗಲ್ಲಿ ಕಮಾನ ಹತ್ತಿರ ಬ್ರಹ್ಮಪೂರ ಕಲಬುರಗಿ 3. ನಾಗರಾಜ ತಂದೆ ಚನ್ನಬಸಪ್ಪ ಕಲಶೇಟ್ಟ ಸಾ: ಸುಭಾಷ ಚೌಕ ಬ್ರಹ್ಮಪೂರ ಕಲಬುರಗಿ 4. ಅಂಬಣ್ಣ ತಂದೆ ಚಂದಪ್ಪ ಪಾಟೀಲ ಸಾ: ನಿಂಬಾಳ ತಾ: ಆಳಂದ 5. ಶರಣು ತಂಧೆ ಶ್ಯಾಮರಾವ ಕಮಲಾಪೂರಕರ ಸಾ: ಕೂಸನೂರ ತಾ:ಜಿ: ಕಲಬುರಗಿ 6. ಬಸವರಾಜ ತಂದೆ ಮಲ್ಲಣ್ಣ ಪಾಟೀಲ ಸಾ: ನಾಲವಾರ ಹಾ:ವ: ವಿಠಲ ನಗರ ಕಲಬುರಗಿ. 7. ಬಾಪುಗೌಡ ತಂದೆ ಪ್ರಭಣ್ಣ ಪಾಟೀಲ ಸಾ: ಸಾಯಿಮಂದಿರ ಡಾ: ನವಣಿ ಲೆಔಟ ಕಲಬುರಗಿ 8. ಗುರುಲಿಂಗಪ್ಪ ತಂದೆ ಸಿದ್ದಣ್ಣ ಸನಗುಂದಿ ಸಾ: ಉದನೂರ ರಿಂಗ್ ರೋಡ ಕಲಬುರಗಿ 9. ಮಂಜುನಾಥ ತಂದೆ ಪ್ರಕಾಶ ಕೊಳ್ಳೆ ಸಾ: ಲಾಲಹನುಮಾನ ದೇವರಗುಡಿ ಹತ್ತಿರ ಶಹಾಬಜಾರ ಕಲಬುರಗಿ. ಅಂತಾ ತಿಳಿಸಿದ್ದು ಸದರಿಯವರಿಂದ ಜೂಜಾಟಕ್ಕೆ ಬಳಸಿದ  ನಗದು ಹಣ 31,960/- ರೂಪಾಯಿ ಮತ್ತು 52 ಇಸ್ಪೇಟ ಎಲೆಗಳನ್ನು ವಶಕ್ಕೆ ತೆಗೆದುಕೊಂಡು ಸದರಿಯವರೊಂದಿಗೆ ರಾಘವೇಂದ್ರ ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.  
ಹಲ್ಲೆ ಪ್ರಕರಣಗಳು :
ರಾಘವೇಂದ್ರ ನಗರ ಠಾಣೆ : ಶ್ರೀ ಶರಣಬಸಪ್ಪ ತಂದೆ ಭೀಮಶ್ಯಾ ಪೂಜಾರಿ ಸಾ: ಧಂಗಾಪೂರ ತಾ: ಆಳಂದ ಜಿ: ಕಲಬುರಗಿ ಹಾ:ವ: ಸಮತಾ ಕಾಲೋನಿ ಕಲಬುರಗಿ ಇವರದು ಆಳಂದ ತಾಲೂಕಿ ದಂಗಾಪೂರ ಗ್ರಾಮ ಇದ್ದು ಈಗ ಸುಮಾರು 4 ವರ್ಷಗಳ ಹಿಂದೆ ನಾವು ಸಮತಾ ಕಾಲೋನಿಯಲ್ಲಿ ಸ್ವಂತ ಮನೆ ಮಾಡಿಕೊಂಡು ಕುಟುಂಬದೊಂದಿಗೆ ಉಪಜೀವನ ಸಾಗಿಸುತ್ತೆನೆ. ನಮ್ಮ ಮನೆಯಲ್ಲಿ ನಾನು, ನನ್ನ ಹೆಂಡತಿ ಶೋಭಾ ಮತ್ತು ಅತ್ತೆ ಮಲ್ಲಮ್ಮ ಮಾವ ಶ್ರೀಮಂತ ಪೂಜಾರಿ ಕೊಡಿಕೊಂಡು ಇರುತ್ತೆವೆ. ಈಗ ಕೆಲವು ದಿವಸಗಳಿಂದ ನಮ್ಮ ಬಡಾವಣೆಯಲ್ಲಿ ವಾಸವಾಗಿರುವ ಸೊಮಶೇಖರ @ ಸೊಮು ತಂದೆ ಕೆಂಚಪ್ಪ ಹದಗಲ (ಪೂಜಾರಿ) ಇತನು ತನ್ನ ಸಂಗಡ ತಿರುಗಾಡಲು ಮತ್ತು ತನ್ನ ಸಂಗಡ ಇರುವಂತೆ ಒತ್ತಾಯ ಮಾಡುತ್ತಾ ಬಂದಿದ್ದು ಸದರಿಯವನು ಜನರ ಸಂಗಡ ಜಗಳ ಮಾಡಿ ಹೊಡುವದು ಮಾಡುತ್ತಿದ್ದರಿಂದ ನಾನು ಸದರಿಯವನ ಸಂಗಡ ಹೋಗಲು ನಿರಾಕರಿಸುತ್ತಾ ಬಂದಿದ್ದು ಇರುತ್ತದೆ. ನಿನ್ನೆ ದಿನಾಂಕ 14.08.2018 ರಂದು ಸಾಯಂಕಾಲ 5:30 ಗಂಟೆಯ ಸುಮಾರಿಗೆ ನಾನು ನಮ್ಮ ಮನೆಯ ಪಕ್ಕದಲ್ಲಿ ಇರುವ ಹನುಮಾನ ದೇವರ ಗುಡಿಗೆ ಹೋಗಿ ಗುಡಿಯಲ್ಲಿ ಕುಳಿತ್ತಿದ್ದು ನನ್ನಂತೆ ನಮ್ಮ ಬಡಾವಣೆಯ ನಾಗಪ್ಪ ಕಟ್ಟಿಮನಿ ಮತ್ತು ಅರ್ಜುನ ಬಬಲಾದ ಇವರು ಕೂಡಾ ಗುಡಿಯಲ್ಲಿ ಕುಳಿತ್ತಿದ್ದು ಸಾಯಂಕಾಲ 6:00 ಗಂಟೆಯ ಸುಮಾರಿಗೆ ಸೊಮಶೇಖರ @ ಸೊಮು ತಂದೆ ಕೆಂಚಪ್ಪ ಹದಗಲ (ಪೂಜಾರಿ) ಇತನು ಕಾರ ತೆಗೆದುಕೊಂಡು 2-3 ಜನ ಹುಡುಗರನ್ನು ಕರೆದುಕೊಂಡು ನಾನು ಕುಳಿತ್ತಿದ್ದ ಹನುಮಾನ ದೇವರ ಗುಡಿಯ ಮುಂದಿನ ರಸ್ತೆಯ ಮೇಲೆ ಬಂದು, ಸದರಿ ಸೊಮಶೇಖರ ಇತನು ಏ ಶರಣ್ಯಾ ಇಲ್ಲಿ ಬಾ ಅಂತ ನನಗೆ ಕರೆದಿದ್ದು ಆಗ ನಾನು ಅವನ ಹತ್ತಿರ ಹೋಗಿ ಯಾಕೆ ನನಗೆ ಕರೆಯುತ್ತಿದ್ದಿ ಅಂತ ಕೇಳಿದ್ದು ಆಗ ಸದರಿಯವನು ನನಗೆ ಹಿಡಿದುಕೊಂಡು ರಂಡಿ ಮಗನೆ ನಾನು ಕರೆದರೆ ಬರುವದಿಲ್ಲ ಭೋಸಡಿ ಮಗನೆ ನನ್ನ ಕಾರಿನಲ್ಲಿ ಕೂಡು ಹೋಗೊಣ ನಡೆ ಅಂತ ಹೇಳಿದ್ದು ಆಗ ನಾನು ಸದರಿಯವನಿಗೆ ನಿನ್ನ ಸಂಗಡ ನಾನು ಬರುವದಿಲ್ಲ ನನಗೆ ಕೆಲಸವಿದೆ ಅಂತ ಹೇಳಿದ್ದು  ಆಗ ಸದರಿ ಸೊಮಶೇಖರ ಇತನು ರಂಡಿ ಮಗನೆ ನೀನು ನನ್ನ ಮಾತು ಕೇಳುವದಿಲ್ಲ ಸೂಳಿ ಮಗನೆ ನಿನಗೆ ಸೊಕ್ಕು ಬಂದಿದೆ ಅಂತ ಬೈಯುತ್ತಾ ಅಲ್ಲೆ ಬಿದ್ದಿದ್ದ ಬಡಿಗೆಯನ್ನು ತೆಗೆದುಕೊಂಡು ನನ್ನ ಬಲಗೈ ಮುಂಗೈ ಹತ್ತಿರ, ಬಲ ಭಾಗದ ಹೊಟ್ಟೆಗೆ ಹೊಡೆದು ಗುಪ್ತಗಾಯ ಪಡಿಸಿದ್ದು ನನಗೆ ಬಹಳ ತ್ರಾಸ ಆಗುತ್ತಿದ್ದು ಸದರಿಯವನ ಹತ್ತಿರ ಇದ್ದರೆ ಅವನು ನನಗೆ ಇನ್ನೂ ಹೊಡೆಯುತ್ತಾನೆ ಅಂತ ಗೊತ್ತಾಗಿ ನಾನು ಚಿರಾಡುತ್ತಾ ಅಲ್ಲಿಂದ ಓಡಿ ಹೋಗುತ್ತಿದ್ದು ಆಗ ಸೊಮಶೇಖರ ಇತನು ಅಲ್ಲೆ ಕಲ್ಲು ತೆಗೆದುಕೊಂಡು ಬಿಸಿ ಹೊಡೆದಿದ್ದರಿಂದ ನನ್ನ ಬೆನ್ನಿಗೆ ಗುಪ್ತಗಾಯವಾಗಿದ್ದು ಇರುತ್ತದೆ. ಸದರಿ ಸೊಮಶೇಖರನ ಸಂಗಡ ಇದ್ದ ಹುಡುಗರು ನನಗೆ ಹಿಡಿದುಕೊಳ್ಳಲು ನನ್ನ ಬೆನ್ನು ಹತ್ತಿ ಓಡಿ ಬರುತ್ತಿದ್ದು ನಾನು ಚಿರಾಡುತ್ತಾ ಅವರಿಂದ ತಪ್ಪಿಸಿಕೊಂಡು ಓಡಿ ನಮ್ಮ ಮನೆ ಕಡೆಗೆ ಹೋಗುತ್ತಿದ್ದಾಗ, ನಾನು ಚಿರಾಡುವದನ್ನು ಕೇಳಿ ಪಕ್ಕದಲ್ಲೆ ನಮ್ಮ ಮನೆ ಇದ್ದರಿಂದ ನಮ್ಮ ಮನೆಯಲ್ಲಿದ್ದ ನನ್ನ ಹೆಂಡತಿ ಶೋಬಾ ಅತ್ತೆ ಮಲ್ಲಮ್ಮ ಇವರು ಹೋರಗೆ ಬಂದಿದ್ದು ನನ್ನ ಹೆಂಡತಿ ಮತ್ತು ಅತ್ತೆಯನ್ನು ಮನೆಯಿಂದ ಹೊರಗೆ ಬಂದಿರುವದನ್ನು ನೋಡಿ ಸೊಮಶೇಖರ ಮತ್ತು ಅವನ ಸಂಗಡ ಇದ್ದವರು ನನಗೆ ಬೆನ್ನು ಹತ್ತಿರ ಬರುವದನ್ನು ಬಿಟ್ಟು ರಂಡಿ ಮಗನೆ ಇಂದು ಉಳಿದಿದ್ದಿ ಮುಂದೆ ನೋಡಿಕೊಳ್ಳುತ್ತೆವೆ ಅಂತ ಬೇದರಿಕೆ ಹಾಕಿ ಹೋಗಿದ್ದು ಇರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಯಡ್ರಾಮಿ ಠಾಣೆ : ದಿನಾಂಕ: 15-08-18 ರಂದು ಬುಧುವಾರ ಬೆಳಗ್ಗೆ 6-10 ನಿಮಿಷ ಸುಮಾರಿಗೆ ನಾನು ಮತ್ತು ನಿಂಗನಗೌಢ ಚನ್ನಾಗೋಳ ಹಾಗೂ ಶರಣಪ್ಪ ಕುಂಬಾರ ಮೂರು ಜನರು ಸೇರಿಕೊಂಡು ಗ್ರಾಮ ಪಂಚಾಯತಿಗೆ ದ್ವಜಾರೋಹಣ ಮಾಡಲು ಹೋಗುವಾಗ ವಿ.ಎಸ್.ಎಸ್.ಎಸ್.ಎನ್ ಹತ್ತಿರ 1] ದಯಾನಂದ ಗುಜಗೊಂಡ 2] ಮಲ್ಲಪ್ಪಗೌಡ ತಂ ಶಿವಪ್ಪಗೌಡ ಬಿರಾದಾರ 3] ಶಿವಪ್ಪಗೌಡ ತಂ ಮಲ್ಲಪ್ಪಗೌಡ ಬಿರಾದಾರ 4] ಜಗನ್ನಾಥ ತಂ ಮಲ್ಲಪ್ಪಗೌಡ ಬಿರಾದಾರ ಈ ನಾಲ್ಕು ಜನರು ಬಂದವರೆ ಮಗನೆ ನಮ್ಮ ಮೇಲೆ ಕೇಸು ಮಾಡುತಿಯಾ ಅಂತಾ ಅವಾಚ್ಯವಾಗಿ ಬೈಯುತ್ತಾ ಎಲ್ಲರೂ ಕೈಯಿಂದ ಹೊಡೆ ಬಡೆ ಮಾಡುತ್ತಿರುವಾಗ ಅವರಲ್ಲಿಯ ದಯಾನಂದ ಗುಜಗೊಂಡ ಇತನು ತನ್ನ ಟೊಂಕದಲ್ಲಿದ್ದ ಚಾಕು ತೆಗೆದುಕೊಂಡು ಹೊಟ್ಟೆಗೆ ಚುಚ್ಚಲು ಬಂದು ಕೊಲೆ ಮಾಡಲು ಪ್ರಯತ್ನಿಸುತ್ತಿದ್ದಾಗ ನಾನು ಅವರಿಂದ ಕಸಿದುಕೊಂಡು ಓಡಿ ಹೋಗಿದ್ದು ಇರುತ್ತದೆ. ದಯಾನಂದ ಗುಜಗೊಂಡ ಸಂಗಡ ಇತರೆ 4 ಜನರು ನನಗೆ ಹಳೆ ವೈಷಮ್ಯದ ಕಾರಣ ಅವಾಚ್ಯವಾಗಿ ಬೈದು ಕೈಯಿಂದ ಹೊಡೆ ಬಡೆ ಮಾಡಿ ಚಾಕುವಿನಿಂದ ಹೊಡೆಯಲು ಕೊಲೆ ಮಾಡಲು ಪ್ರಯತ್ನಿಸಿದ 4 ಜನರ ವಿರುದ್ದ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಶ್ರೀ ಸಂಗನಗೌಡ ತಂ ಸಿದ್ದನಗೌಡ ಬಿರಾದಾರ ಸಾ: ಮಾಗಣಗೇರಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

13 August 2018

KALABURAGI DISTRICT REPORTED CRIMES

ಅಪಘಾತ ಪ್ರಕರಣ :
ಯಡ್ರಾಮಿ ಠಾಣೆ : ದಿನಾಂಕ 11-08-2018 ರಂದು ಬೆಳಿಗ್ಗೆ ನನ್ನ ಮಗಳು ಮಹಾನಂದಾ ಇವಳು ಬೈಹಿರದೇಸೆಗೆ ಹೋಗುತ್ತೇನೆ ಅಂತಾ ಹೇಳಿ ಮನೆಯಿಂದ ಹೋದಳು ಸ್ವಲ್ಪ ಹೊತ್ತಾದನಂತರ ನನ್ನ ಮಗಳಿಗೆ ಅಪಘಾತವಾಗಿರುತ್ತದೆ ಅಂತಾ ವಿಷಯ ಗೊತ್ತಾಗಿ ನಾನು ನನ್ನ ಗಂಡ ಕೂಡಿ ಸ್ಥಳಕ್ಕೆ ಹೋಗಿ ನೋಡಿದಾಗ ನನ್ನ ಮಗಳ ಬೆನ್ನಿನ ಮೇಲೆ, ಎಡಭುಜಕ್ಕೆ, ಎಡಹಣೆಗೆ, ತರಚಿದ ಗಾಯವಾಗಿದ್ದು, ಟೊಂಕಿಗೆ ಭಾರಿ ಒಳಪೆಟ್ಟಾಗಿ, ಎಡ ಹಿಂಬಡಿ ಹತ್ತಿರ ಮತ್ತು ಎಡಗಾಲ ಕಿರುಬೆಳಿಗೆ ರಕ್ತಗಾಯವಾಗಿರುತ್ತದೆ, ನಂತರ ಮೋಟರ ಸೈಕಲ್ ಸವಾರನಿಗೆ ನೋಡಲಾಗಿ, ಅವನು ನಮ್ಮೂರ ಪರುತರೆಡ್ಡಿ ರವರ ಅಕ್ಕನ ಮಗನಾದ ಬಸನಗೌಡ ತಂದೆ ಈರಣಗೌಡ ಪಾಟೀಲ ಸಾ|| ಚಿಂಚೋಳಿ ತಾ|| ಸುರಪೂರ ಎಂಬುವನಿರುತ್ತಾನೆ, ಅವನ ಮೋಟರ ಸೈಕಲ್ ನೋಡಲಾಗಿ ಹೋಂಡಾ ಶೈನ ನಂ ಕೆ.ಎ-33/ಎಸ್-0452 ನೇದ್ದು ಇರುತ್ತದೆ, ಅವನಿಗೆ ಒಳಪೆಟ್ಟಾಗಿದ್ದು, ಸ್ಥಳದಲ್ಲೆ ಬಿದ್ದಿದ್ದನು, ನಂತರ ಸ್ಥಳದಲ್ಲಿ ಇದ್ದ ನಮ್ಮೂರ ಜೀಲಾನಿ ತಂದೆ ಮಹಿಬೂಬ ಮುಲ್ಲಾ ರವರು ನಮಗೆ ಹೇಳಿದ್ದೇನೆಂದರೆ, ನಾನು ಮತ್ತು ಬೈಲಪ್ಪ ತಂದೆ ರುದ್ರಪ್ಪ ಮೈನಾಳ ರವರು ಕೂಡಿ ನಮ್ಮೂರ ಅಗಸಿ ಹತ್ತಿ ರೋಡಿನ ಮೇಲೆ ಮಾತಾಡುತ್ತಾ ನಿಂತಾದ ನಮ್ಮ ಹತ್ತಿರ ದಿಂದ ಬಸನಗೌಡ ತಂದೆ ಈರಣಗೌಡ ಪಾಟೀಲ ಈತನು ತನ್ನ ಮೋಟರ ಸೈಕಲ ಮೇಲೆ ಜೋರಾಗಿ ಮತ್ತು ಅಲಕ್ಷತನದಿಂದ ಹೋದನು, ಅಲ್ಲೆ ಸ್ವಲ್ಪ ದುರದಲ್ಲಿ  ರೋಡಿನ ಎಡಗಡೆ ಬೈಹಿರದೇಸೆಗೆ ಕುಳಿತ ನಿಮ್ಮ ಮಗಳಿಗೆ ಒಮ್ಮೇಲೆ ಡಿಕ್ಕಿ ಹೊಡೆದು ಮುಂದೆ ಮೋಟರ ಸೈಕಲ್ ಸಮೇತ ಹೋಗಿ ತಾನು ರೋಡಿನ ಎಡಗಡೆ ಹೊಲದಲ್ಲಿ ಬಿದ್ದನು, ಬಸನಗೌಡ ಈತನು ಎದ್ದು ನಿಂತು 4 ಹೆಜ್ಜಿ ಮುಂದೆ ಬಂದು ಒಮ್ಮೇಲೆ ಕೆಳಗೆ ಬಿದ್ದನು, ನಂತರ ನಾವು ಹೋಗಿ ಅವನನ್ನು ಎಬ್ಬಿಸುವಷ್ಟರಲ್ಲಿ ಸ್ಥಳದಲ್ಲೆ ಮೃತ ಪಟ್ಟಿದ್ದನು, ಅಂತಾ ತಿಳಿಸಿದರು. ನಂತರ ನನ್ನ ಮಗಳಿಗೆ ಉಪಚಾರ ಕುರಿತು ಒಂದು ಟಂಟಂನಲ್ಲಿ ಹಾಕಿಕೊಂಡು ಇಲ್ಲಿಗೆ ತಂದು ಸೇರಿಕೆ ಮಾಡಿರುತ್ತೇವೆ, ಬಸನಗೌಡ ತಂದೆ ಈರಣಗೌಡ ಪಾಟೀಲ ಈತನು ತನ್ನ ಮೋಟರ ಸೈಕಲ್ ನಂ ಕೆ.ಎ-33/ಎಸ್-0452 ನೇದ್ದನ್ನು ಅತಿವೇಗವಾಗಿ ಮತ್ತು ನಿಸ್ಕಾಳಜಿತನದಿಂದ ಚಲಾಯಿಸಿ ನಮ್ಮೂರ ಜಗದೀಶ ಇನಾಮದಾರ ರವರ ಹೊಲದ ಹತ್ತಿರ ರೋಡಿನ ದಂಡೆಯಲ್ಲಿ ಕುಳಿತ ನಮ್ಮ ಮಗಳಿಗೆ ಡಿಕ್ಕಿ ಹೊಡೆದು ನಂತರ ತಾನು ನಿಯಂತ್ರಣ ತಪ್ಪಿ ತನ್ನ ಮೋಟರ ಸೈಕಲ್ ಸಮೇತ ರೋಡಿನ ಎಡಗಡೆ ಹೊಲದಲ್ಲಿ ಬಿದ್ದು ಮೃತ ಪಟ್ಟಿರುತ್ತಾನೆ, ಅಂತಾ ಶ್ರೀಮತಿ ತಾಯಮ್ಮ ಗಂಡ ಮಲ್ಲಪ್ಪ ಮಾದರ ಸಾ|| ದುಮ್ಮದ್ರಿ ತಾ|| ಜೇವರ್ಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಸ್ವಾಭಾವಿಕ ಸಾವು ಪ್ರಕರಣ :
ನರೋಣಾ ಠಾಣೆ : ದಿನಾಂಕ:09/08/2018 ರಂದು 07-00 ಎ.ಎಂಕ್ಕೆ ನನ್ನ ಮೈಧುನನಾದ ಪ್ರಕಾಶನ ಗಂಡುಮಕ್ಕಳಾದ ಯಶ್ ಹಾಗೂ ಆಯುಷ್ ಇವರ ಜವಳ ತಗೆಯುವ ಕಾರ್ಯಕ್ರಮದ ಪ್ರಯುಕ್ತ ಆಳಂದ ತಾಲ್ಲೂಕಿನ ದಣ್ಣೂರ ಗ್ರಾಮದ ಹರಜತ್ ದೌವಲ್ ಮಲಿಕ್ ದರ್ಗಾಕ್ಕೆ ಬಂದಿದೇವು. ಅಲ್ಲಿ ಅಡುಗೆ ಕಾರ್ಯಕ್ರಮ ಮುಗಿದ ನಂತರ ನನ್ನ ಗಂಡನು ಅಶಕ್ತನಾಗಿ ಕುಸಿದು ಬಿದ್ದದ್ದರಿಂದ ನಾನು ಹಾಗೂ ನನ್ನ ಮೈಧುನನಾದ ಪ್ರಕಾಶ ತಂದೆ ಭೋಗಪ್ಪ ತಳವಾರ ಹಾಗೂ ನನ್ನ ಮಾವನಾದ ಭೋಗಪ್ಪಾ ಸೇರಿಕೊಂಡು ಒಂದು ಖಾಸಗಿ ವಾಹನದಲ್ಲಿ ಬಸವೇಶ್ವರ ಆಸ್ಪತ್ರೆ ಕಲಬುರಿಗೆ ತಂದು ಸೇರಿಕೆ ಮಾಡಿ ನಂತರ ದಿನಾಂಕ:11/08/2018 ರಂದು ಸರಕಾರಿ ಆಸ್ಪತ್ರೆ ಕಲಬುರಗಿಗೆ ತಂದು ಸೇರಿಕೆ ಮಾಡಿರುತ್ತೇವೆ. ದಿನಾಂಕ:12/08/2018 ರಂದು ಬೆಳಿಗ್ಗೆ 09-30 ಗಂಟೆ ಸುಮಾರಿಗೆ ನನ್ನ ಗಂಡನಾದ ಸಂಗಪ್ಪನು ಉಪಚಾರ ಫಲಕಾರಿಯಾಗದೆ ಆಕಸ್ಮಿಕವಾಗಿ ಮೃತಪಟ್ಟಿರುತ್ತಾನೆ. ನನ್ನ ಗಂಡನ ಸಾವಿನಲ್ಲಿ ಯಾರ ಮೇಲೆ ಸಂಶಯ ವಗೈರೆ ಇರುವುದಿಲ್ಲ ಅಂತಾ ಅಂಬಿಕಾ ಗಂಡ ಸಂಗಪ್ಪಾ ತಳವಾರ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

11 August 2018

KALABURAGI DISTRICT REPORTED CRIMES

ಅಪಘಾತ ಪ್ರಕರಣಗಳು :
ಗ್ರಾಮೀಣ ಠಾಣೆ : ದಿನಾಂಕ:- 10/08/2018 ರಂದು ಮಧ್ಯಾಹ್ನ ಶ್ರೀಮತಿ ಶೋಭಾ ಗಂಡ ನಾಗಣ್ಣಾ ಗುಳೆದಗುಡ್ಡ  ಸಾ|| ಲಕ್ಷ್ಮಣರಾವ ಕುಲಕರ್ಣಿ ಆಳಂದ ಕಾಲೋನಿ ಕಲಬುರಗಿ. ರವರ ಗಂಡನಾದ  ನಾಗಣ್ಣ ತಂದೆ ಬಸವಣಪ್ಪಾ ಗುಳೆದಗುಡ್ಡ ರವರು ತನ್ನ .ಮೋಟಾರ ಸೈಕಲ KA-32-W-554 ನೇದ್ದರ ಮೇಲೆ ಒಬ್ಬರೇ ಕುಳಿತುಕೊಂಡು ಕಂಕರ ಮಶೀನ ಕಡೆಯಿಂದ ಕೆರಿಬೋಸಗಾ ಸೀಮಾಂತರದಲ್ ಶ್ರೀಮಂತರಾವ ಪೊಲೀಸ ಪಾಟೀಲ ಎಂಬುವವರ ಮನೆ ಎದುರಿನ ಕಲಬುರಗಿ-ಆಳಂದ ಮುಖ್ಯ ರಸ್ತೆಯ ರೋಡ ಎಡಬದಿಯಿಂದ ತಮ್ಮ ಸೈಡಹಿಡಿದುಕೊಂಡು ಹೊರಟಾಗ ಅದೇ ಸಮಯಕ್ಕೆ ಕಲಬುರಗಿ ಕಡೆಯಿಂದ ಒಬ್ಬ ಟಿಪ್ಪರ ಚಾಲಕ ಅದರ ಹಿಂದುಗಡೆಯಿಂದ ಒಬ್ಬ ಕೆ.ಎಸ.ಆರ.ಟಿ.ಸಿ ಬಸ್ಸ ಚಾಲಕ ಅತೀವೇಗ & ನಿಷ್ಕಾಳಜಿತನದಿಂದ ಹಾಗೂ ಅಡ್ಡಾ-ತಿಡ್ಡಿಯಾಗಿ ನಡೆಸುತ್ತಾ ಮುಂದೆ ಹೊರಟ ಟಿಪ್ಪರಕ್ಕೆ ಓವರಟೇಕ್ ಮಾಡಿ ಅತೀವೇಗದಿಂದ ನಡೆಯಸುತ್ತಾ ಬಂದವನೇ ಮೋಟಾರ ಸೈಕಲ ಬರುತ್ತಿದ್ದ ನಿನ್ನ ಗಂಡನಿಗೆ ಡಿಕ್ಕಿ ಹೊಡೆದು ಅಪಘಾತಡಿಸಿದಾಗ ಬಸ್ಸಿನ ಮುಂದಿನ ಗಾಲಿಯಲ್ಲಿ ಮೋಟಾರ ಸೈಕಲ ಸಿಕ್ಕಿ ಬಿದ್ದಿದರಿಂದ ಎಳೆದುಕೊಂಡು ಹೋಗಿದ್ದರಿಂದ ಅವರ ತಲೆಯ ಮೇಲಿಂದ ಹೊಟ್ಟೆ, ಬಲಸೊಂಟ್ ಮರ್ಮಾಂಗದ ಮೇಲೆ ಟಾಯಾರ ಹಾದೂ ಹೋಗಿದ್ದರಿಂದ ಪೂರ್ತಿ ತಲೆಒಡೆದು ಮಾಂಸಖಂಡ ಒಡೆದು ಹೊರಬಂದಿದ್ದು, ಬಲಸೊಂಟ್ ಮತ್ತು ಬಲಗಾಲ ಪಾದದಿಂದ ಹರಿದು ಮಾಂಸಖಂಡ ಹೊರಬಂದಿರುತ್ತದೆ. ಬಸ್ಸು ರೋಡಿನ ಬಲಬಾಗದಲ್ಲಿ ಇರುವ ಒಂದು ಗಿಡಕ್ಕೆ ಡಿಕ್ಕಿ ಹೊಡೆದು ನಿಂತಿರುತ್ತದೆ. ನಿಮ್ಮ ಗಂಡ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ. ಅವರಿಗೆ ಡಿಕ್ಕಿ ಹೊಡೆದ KSRTC ಬಸ್ಸು  ನಂ- KA-32-F 2355  ಇರುತ್ತದೆ. ಅದರ ಚಾಲಕ ಕಿರಣಕುಮಾರ ಆಳಂದ ಡಿಪೋ ಬಸ್ಸು ನಿಲ್ಲಿಸಿದ ನಂತರ ಅಲ್ಲಿಂದ ಓಡಿ ಹೋಗಿರುತ್ತಾನೆ. ಸದರ ಅಪಘಾತವು ಈ ಮೇಲೆ KSRTC ಬಸ್ಸು  ನಂ- KA-32-F 2355  ಚಾಲಕ ಕಿರಣಕುಮಾರ ಆಳಂದ ಡಿಪೊ ಇತನ ಇತನ ತಪ್ಪಿನಿಂದ ಸಂಭವಿಸಿದ್ದರಿಂದ ಅವನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನರೋಣಾ ಠಾಣೆ : ದಿನಾಂಕ: 08/10/2018 ಮುಂಜಾನೆ ನಾನು ಮತ್ತು ನನ್ನ ಹೆಂಡತಿಯಾದ ಶಶಿಕಲಾ ಮನೆಯಲ್ಲಿದ್ದಾಗ ಕಿರಿಯ ಮಗನಾದ ಕೃಷ್ಣಾ ಈತನು ತನ್ನ ವೈಯಕ್ತಿಕ ಕೆಲಸಕ್ಕಾಗಿ ವ್ಹಿ.ಕೆ.ಸಗಲಗರ ಗ್ರಾಮಕ್ಕೆ ಹೋಗಿ ಬರುತ್ತೇನೆಂದು ಹೇಳಿ ನಮ್ಮ ಸಂಬಂದಿಕರಾದ ಖತಲಪ್ಪ ಭಜಂತ್ರಿ ಇವರ ಹೊಸ ಸ್ಪ್ಲೈಂಡರ್ ಪ್ಲಸ್ ಮೊಟಾರ್ ಸೈಕಲನ್ನು ತಗೆದುಕೊಂಡು ಅದರ ಮೇಲೆ ನನ್ನ ತಂಗಿಯ ಮಗನಾದ ಆಕಾಶ ತಂದೆ ಅರ್ಜುನ ಹೆಳವರು ಸಾ:ಮದರಾ ಬಿ ಈತನಿಗೆ ಕೂಡಿಸಿಕೊಂಡು ಮನೆಯಿಂದ ಹೋಗಿರುತ್ತಾನೆ. ಮುಂಜಾನೆ 09-00 ಗಂಟೆ ಸುಮಾರಿಗೆ ನಮ್ಮ ಊರಿನ ನಮ್ಮ ಮನೆಯ ಪಕ್ಕದಲ್ಲಿರುವ ಶಿವರಾಯ ತಂದೆ ಮಹಾದೇವ ನಾಟೀಕಾರ ಇವರು ಬಂದು ನನ್ನ ಮಗನಾದ ಕೃಷ್ಣಾ ಈತನು ಮೊಟಾರ್ ಸೈಕಲ್ ಮೇಲೆ ಸಲಗರ ಕಡೆಗಡ ಹೋಗುವಾಗ ಮಾಧುರಾಯ ಸಾಹುಕಾರ ಇವರ ಹೊಲದ ಹತ್ತಿರ ಹೋಗುತ್ತಿರುವಾ ಎದುರುಗಡೆಯಿಂದ ಲಾಡಮುಗಳಿ ಆರ್.ಎಂ.ಪಿ ಡಾಕ್ಟರಾದ ಸಂತೋಷ @ ರಿಚರ್ಡ ಎಂಬುವರು ಅವರ ಮೊಟಾರ್ ಸೈಕಲ್ ನಂ: ಕೆಎ32-ಇಬಿ4038 ನೇದ್ದನ್ನು ಅತೀವೇಗ ಮತ್ತು ನಿರ್ಲಕ್ಷತನಿಂದ ಚಲಾಯಿಸಿಕೊಂಡು ಬಂದು ಕೃಷ್ಣಾ ಈತ ಚಲಾಯಿಸಿಕೊಂಡು ಹೋಗುತ್ತಿದ್ದ ಮೊಟಾರ್ ಸೈಕಲಗೆ ಡಿಕ್ಕಿಪಡಿಸಿದ್ದರಿಂದ ಕೃಷ್ಣನಿಗೆ ಹಾಗೂ ಹಿಂದೆ ಕುಳಿತಿದ್ದ ಹುಡಗನಿಗೆ ಮತ್ತು ಡಾಕ್ಟರಗೆ ಕೂಡ ಗಾಯಗಳಾಗಿರುತ್ತವೆ. ಎಂದು ಸಂತೋಷ ಜೋಗಿ ಇವರು ಫೋನ್ ಮಾಡಿ ಅವರಿಗೆ ತಿಳಿಸಿರುವುದನ್ನು ನಮಗೆ ತಿಳಿಸಿದ ಮೇರೆಗೆ ನಾನು ನನ್ನ ತಮ್ಮನಾದ ಮಹಾದೇವ ಹಾಗೂ ಚಿಕ್ಕಪ್ಪನ ಮಗನಾದ ರವಿರವರುಗಳು ಕೂಡಿ ಸ್ಥಳಕ್ಕೆ ಹೋಗಿ ನೋಡಿ ನನ್ನ ಮಗ ಆಕಾಶ ಹಾಗೂ ಸಂತೋಷ ಡಾಕ್ಟರ್ ರವರು ಗಾಯಹೊಂದಿದ್ದು ನನ್ನ ಮಗನಾದ ಕೃಷ್ಣಾ ಈತನಿಗೆ ತಲೆಗೆ ಹಾಗೂ ದೇಹಕ್ಕೆ ಒಳಪೆಟ್ಟಾಗಿ ಮೂಗಿನಿಂದ ರಕ್ತ ಬರುತ್ತಿದ್ದು ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲಾ ಆಕಾಶನಿಗೆ ತಲಗೆಗೆ ಎದೆಗೆ ಮುಂಗೈಗೆ ಮೂಗಿಗೆ ತರಚಿದ ಗಾಯಗಳಾಗಿದ್ದು ಸಂತೋಷ ಡಾಕ್ಟರಿಗೂ ಕೂಡ ತರಚಿದ ಗಾಯಗಳಾಗಿವೆ ಅಸ್ಟರಲ್ಲಿ ನನ್ನ ತಮ್ಮನಾದ ಮಹಾದೇವನು ಅಂಬ್ರೆಷ ಕಾಂಬಳೆ ಇವರ ಕ್ರೂಜರ್ ಜೀಪ್ ತರಸಿದ್ದು ಅದರಲ್ಲಿ ಮೂರು ಜನರಿಗೆ ಹಾಕಿಕೊಂಡು ಉಪಚಾರ ಕುರಿತು ಜಿಲ್ಲಾ ಸರಕಾರಿ ಆಸ್ಪತ್ರೆ ಕಲಬುರಗಿಗೆ ತಂದು ಸೇರಿಕೆ ಮಾಡುವಸ್ಟರಲ್ಲಿ ಮುಂಜಾನೆ 11-00 ಗಂಟೆಯ ಸುಮಾರಿಗೆ ನನ್ನ ಮಗ ಕೃಷ್ಣಾ ಈತನು ಮೃತಪಟ್ಟಿರುತ್ತಾನೆ  ಆಕಾಶ ಹಾಗೂ ಡಾಕ್ಟರವರಿಗೆ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿರುತ್ತೇವೆ. ಈ ಘಟನೆಗೆ ಕಾರಣರಾದ ಸಂತೋಷ @ ರಿಚರ್ಡ ತಂದೆ ವಿಶ್ವಾಸ ಸಾ:ಲಾಡಮುಗಳಿ ಇವರ ಮೇಲೆ ಹಾಗೂ ಅವರ ಮೊಟಾರ್ ಸೈಕಲ್ ನಂ:ಕೆಎ32-ಇಬಿ4038 ನೇದ್ದರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತಾ ಸ್ರೀ ವಿಜಯಕುಮಾರ ತಂದೆ ಬಾಬು ಬಾಚಿಂದರೆ ಸಾ ಮುದ್ದಡಗಾ ತಾ : ಆಳಂದ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ  ಪ್ರಕರಣ ದಾಖಲಾಗಿದೆ
ಹಲ್ಲೆ ಪ್ರಕರಣ :
ಸ್ಟೇಷನ ಬಜಾರ ಠಾಣೆ :  ಶ್ರೀ ರಾಜು ತಂದೆ ಮೇಘು ಆಡೆ ಸಾಃ ಕೆ.ಇ.ಬಿ ಕ್ವಾಟರ್ಸ್  ಹಳೇ ಜೇವರ್ಗಿ ರಸ್ತೆ ಕಲಬುರಗಿ ರವರು ದಿನಾಂಕಃ 10/08/2018 ರಂದು ಮದ್ಯಾಹ್ನ 15-00 ಗಂಟೆಯಿಂದ 15-15 ಗಂಟೆಯ ಸಮಯದಲ್ಲಿ  ನಾನು ಮನೆಯಲ್ಲಿ ಇರುವಾಗಲೇ ನಮ್ಮ ಮನೆಯ ಹತ್ತಿರ ವಾಸವಾಗಿರುವ ಸಚೀನ ತಂದೆ ನಿಜಪ್ಪ ಎಂಬುವನು ನನಗೆ ಮನೆಯಿಂದ ಕರೆದುಕೊಂಡು ಹಳೆ ಜೇವರ್ಗಿ ರಸ್ತೆಯ ಹನುಮಾನ ನಗರ ರೈಲ್ವೆ ಅಂಡರ ಬ್ರೀಡ್ಜ್ ಹತ್ತಿರ ಹೋದಾಗ ಸಚೀನ ಮತ್ತು ಆತನ 3 ಜನ ಸ್ನೇಹಿತರು ಸೇರಿಕೊಂಡು ನನಗೆ ಕಬ್ಬಿಣದ ರಾಡಿನಿಂದ ನನ್ನ ತಲೆಗೆ ಹೊಡೆದು ಗಾಯ ಪಡಿಸಿ ಹೊರಟು ಹೋಗಿರುತ್ತಾರೆ. ನಂತರ ಯಾರೋ ನನಗೆ ಕರೆದುಕೊಂಡು ಹೋಗಿ ನಮ್ಮ ಮನೆಯ ಹತ್ತಿರ ಬಿಟ್ಟಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸ್ಟೇಷನ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.