POLICE BHAVAN KALABURAGI

POLICE BHAVAN KALABURAGI

15 February 2018

KALABURAGI DISTRICT REPORTED CRIMES

ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಟ್ರ್ಯಾಕ್ಟರಗಳ ಜಪ್ತಿ  :
ಅಫಜಲಪೂರ ಠಾಣೆ : ದಿನಾಂಕ 14-02-2018 ರಂದು  ಸೋನ್ನ  ಗ್ರಾಮದ ಬೀಮಾ ನದಿಯಲ್ಲಿ ಟ್ರಾಕ್ಟರಗಳಲ್ಲಿ ಅಕ್ರಮವಾಗಿ ಮರಳು ತುಂಬಿ ಕೊಂಡು ಮರಳು ಸಾಗಾಣಿಕೆ ಮಾಡುತ್ತಿದ್ದಾರೆ ಅಂತಾ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ಅಫಜಲಪೂರ ಃಆಗು ಸಿಬ್ಬಂದಿ ಮತ್ತು ಪಂಚರೊಂದಿಗೆ  ಸೊನ್ನ ಗ್ರಾಮದ ಹೊಸ ಬಡಾವಣೆ ಹತ್ತಿರ ಇದ್ದಾಗ  ನಮ್ಮ ಎದುರಿನಿಂದ ಟ್ಯಾಕ್ಟರಗಳು ಬರುತ್ತಿದ್ದರು, ಸದರಿ ಟ್ರಾಕ್ಟರ ಚಾಲಕರು ನಮ್ಮ ಪೊಲೀಸ್ ಜೀಪ ನೋಡಿ ತಮ್ಮ ಟ್ರಾಕ್ಟರಗಳನ್ನು  ಸ್ಥಳದಲ್ಲಿಯೇ ನಿಲ್ಲಿಸಿ ಓಡಿ ಹೋದರು. ನಂತರ ನಾವು ಪಂಚರ ಸಮಕ್ಷಮ ಸದರಿ ಟ್ಯಾಕ್ಟರಗಳ ಹತ್ತಿರ ಹೋಗಿ ನೋಡಲಾಗಿ ಒಟ್ಟು ಐದು ಟ್ರಾಕ್ಟರಗಳಿದ್ದು   ಚೆಕ್ ಮಾಡಿ ನೋಡಲು ಎರಡು ಟ್ಯಾಕ್ಟರ ಟ್ರೈಲಿಗಳಲ್ಲಿ ಮರಳು ತುಂಬಿದ್ದು ಇದ್ದು ಮೂರು ಖಾಲಿ ಟ್ರ್ಯಾಕ್ಟರಗಳಿದ್ದು ಅವುಗಳ ನಂಬರ 1)ಅರ್ಜುನ ಮಹೇಂದ್ರ ಕಂಪನಿಯ ಟ್ರಾಕ್ಟರ ನಂಬರ ಕೆಎ-32 ಟಿಎ-5946 2) ಅರ್ಜುನ ಮಹೇಂದ್ರ ಕಂಪನಿಯ ಟ್ರಾಕ್ಟರ ಇಂಜಿನ ನಂ JU5429 DB 3) ಅರ್ಜುನ ಮಹೇಂದ್ರ ಕಂಪನಿಯ ಟ್ರಾಕ್ಟರ ಇಂಜಿನ ನಂ RJCU2448 ನೇದ್ದರ ಟ್ರೈಲಿಯಲ್ಲಿ ಮರಳು ತುಂಬಿದ್ದು 4) ಅರ್ಜುನ ಮಹೇಂದ್ರ ಕಂಪನಿಯ ಟ್ರಾಕ್ಟರ ಮಾಡೇಲ್ ನಂ NAPU638 D9 5) ಅರ್ಜುನ ಮಹೇಂದ್ರ ಕಂಪನಿಯ ಟ್ರಾಕ್ಟರ ಮಾಡೇಲ್ ನಂ NJCU3835 CB ನೇದ್ದರ ಟ್ರೈಲಿಯಲ್ಲಿ ಮರಳು ತುಂಬಿದ್ದು ರೀತಿ ಇರುತ್ತವೆ. ಸದರಿ ಮರಳಿನ ಒಟ್ಟು ಅಂದಾಜು ಕಿಮ್ಮತ್ತು 3,600/- ರೂ ಆಗಬಹುದು. ನಂತರ ಏರಡು ಟ್ರ್ಯಾಕ್ಟರ ಟ್ರೈಲಿಗಳಲ್ಲಿ ಕಳ್ಳತನದಿಂದ ಅಕ್ರಮವಾಗಿ ಮರಳು ತುಂಬಿದ ಹಾಗು ಮೂರು ಖಾಲಿ ಟ್ರ್ಯಾಕ್ಟರಗಳನ್ನು ವಶಕ್ಕೆ ತೆಗೆದುಕೊಂಡು ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಪಘಾತ ಪ್ರಕರಣ :
ಅಫಜಲಪೂರ ಠಾಣೆ : ದಿನಾಂಕ 12-02-2018 ರಂದು ಮದ್ಯಾಹ್ನ ನನ್ನ ಮಗ ಪ್ರಕಾಶನು ತನ್ನ ಮಗಳಾದ ಕಾವೇರಿ ಮಗಳಿಗೆ ಮೈಯಲ್ಲಿ ಹುಷಾರ ಇರದ ಕಾರಣ ಚಿಕಿತ್ಸೆಗಾಗಿ ನಮ್ಮ ಮೋಟಾರ್ ಸೈಕಲ್ ನಂಬರ ಕೆಎ-42 -781 ನೇದ್ದರ ಮೇಲೆ ಕರೆದುಕೊಂಡು ಅಫಜಲಪೂರಕ್ಕೆ ಹೋಗುತ್ತೇನೆ ಅಂತ ಹೇಳಿ ಮನೆಯಿಂದ ಹೋಗಿರುತ್ತಾನೆ ಮದ್ಯಾಹ್ನ 4.00 ಗಂಟೆ ಸುಮಾರಿಗೆ ನಮ್ಮ ಸಂಭಂದಿಕನಾದ ಅಂಬಣ್ಣ ತಂದೆ ಪುಂಡಲಿಕ ನಾವಿ ಎಂಬಾತನು ಪೋನ ಮಾಡಿ ತಿಳಿಸಿದ್ದೆನೆಂದರೆ ಅಫಜಲಪೂರ ದೇವಣಗಾಂವ ರೋಡಿನ ಮೇಲೆ  ಸೊನ್ನ ಕ್ರಾಸ ದಾಟಿ ಇಟ್ಟಂಗಿ ಬಟ್ಟಿ ಹತ್ತಿರ ಪ್ರಕಾಶನ ಮೋಟಾರ ಸೈಕಲ್ ನಂಬರ ಕೆಎ-42 -781 ನೇದ್ದಕ್ಕೆ ಮತ್ತು ಎದುರುಗಡೆಯಿಂದ ಬರುತಿದ್ದ ಮೋಟಾರ್ ಸೈಕಲ್ ನಂ ಎಮ್ ಹೆಚ್ 12 ಎಸ್-7763 ನೆದ್ದಕ್ಕೆ ಮದ್ಯಾಹ್ನ 3.30 ಗಂಟೆ ಸುಮಾರಿಗೆ ಮುಖಾಮುಖಿ ಡಿಕ್ಕಿ ಹೊಡೆದು ಅಫಘಾತ ಸಂಬವಿಸಿರುತ್ತದೆ ಸದರಿ ಘಟನೆಯಲ್ಲಿ ಪ್ರಕಾಶನಿಗೆ ತಲೆಯ ಬಲಭಾಗಕ್ಕೆ, ಮುಖಕ್ಕೆ, ಭುಜಕ್ಕೆ  ಭಾರಿ ರಕ್ತಗಾಯ ಮತ್ತು ಒಳಪೆಟ್ಟುಗಳು ಸಂಬವಿಸಿರುತ್ತವೆ ಕಾವೇರಿಗೆ ಮುಖಕ್ಕೆ ರಕ್ತಗಾಯವಾಗಿ ಮೈಕೈಗೆ ತರಚಿದ ಗಾಯಗಳು ಆಗಿರುತ್ತವೆ ಮೋಟಾರ್ ಸೈಕಲ್ ನಂ ಎಮ್ ಹೆಚ್ 12 ಎಸ್-7763 ನೆದ್ದರ ಮೇಲೆ ಒಬ್ಬ ಪುರುಷ ಮತ್ತು ಒಬ್ಬಳು ಮಹಿಳೆ ಹಾಗು ಒಂದು ಚಿಕ್ಕ ಹೆಣ್ಣು ಮಗು ಇದ್ದು ಅವರೇಲ್ಲರಿಗು ಭಾರಿ ರಕ್ತಗಾಯ ಮತ್ತು ಒಳಪೆಟ್ಟುಗಳಾಗಿದ್ದರಿಂದ ಗಾಯ ಹೊಂದಿದವರೇಲ್ಲರಿಗೂ ನಾನು ಮತ್ತು ನನ್ನ ಗೆಳೆಯ ವಿಠ್ಠಲ ತಂದೆ ಫಕೀರಪ್ಪ ತೇಗೂರ ಇಬ್ಬರು 108 ವಾಹನದಲ್ಲಿ ಚಿಕಿತ್ಸೆಗಾಗಿ ಅಫಜಲಪೂರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಿರುತ್ತೇವೆ ಅಫಜಲಪೂರ ಸರಕಾರಿ ಆಸ್ಪತ್ರೆಯ ವೈದ್ಯರು ಪ್ರಕಾಶನಿಗು ಮತ್ತು ಕಾವೇರಿಗೆ ಹೆಚ್ಚಿನ ಚಿಕಿತ್ಸೆಗಾಗಿ ಕಲಬುರಗಿಗೆ ಕರೆದುಕೊಂಡು ಹೋಗಲು ತಿಳಿಸಿದ್ದರಿಂದ 108 ವಾಹನದಲ್ಲಿ ಕಲಬುರಗಿಗೆ ಕರೆದುಕೊಂಡು ಹೋಗುತ್ತಿದ್ದೆವೆ ಅಂತ ತಿಳಿಸಿದನು. ನಂತರ ಸಾಯಂಕಾಲ 5.35 ಗಂಟೆ ಸುಮಾರಿಗೆ ಅಂಬಣ್ಣನು ಮತ್ತೆ ಪೊನ ಮಾಡಿ ತಿಳಿಸಿದ್ದೆನೆಂದರೆ ಸಾಯಂಕಾಲ 5.30 ಗಂಟೆಯ ಸುಮಾರಿಗೆ ಕಲಬುರಗಿಯ ಗಂಗಾ ಆಸ್ಪತ್ರೆಗೆ ತಲುಪುತಿದ್ದಂತೆ ಪ್ರಕಾಶನು ಮೃತಪಟ್ಟಿದ್ದು ಕಾವೇರಿಗೆ ಚಿಕಿತ್ಸೆಗಾಗಿ ಗಂಗಾ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿ ಪ್ರಕಾಶನ ಶವವನ್ನು ಅಫಜಲಪೂರದ ಸರಕಾರಿ ಆಸ್ಪತ್ರೆಗೆ ತಗೆದುಕೊಂಡು ಬರುತಿದ್ದೇವೆ ಅಂತ ತಿಳಿಸಿದನು. ನಂತರ ನಾನು ಮತ್ತು ನಮ್ಮ ಗ್ರಾಮದ ವೀರುಪಾಕ್ಷಿ ಗಂಗನಳ್ಳಿ, ಸುಭಾಷ ಭುಸನೂರ, ಅಂಬಣ್ಣ ನಾವಿ ಮತ್ತಿತರರು ಸಾಯಂಕಾಲ 7.00 ಸುಮಾರಿಗೆ ಅಫಜಲಪೂರ ಸರಕಾರಿ ಆಸ್ಪತ್ರೆಗೆ ಬಂದು ಪ್ರಕಾಶನ ಶವವನ್ನು ಮತ್ತು ಆತನಿಗೆ ಆಗಿರುವ ಗಾಯಗಳನ್ನು ನೋಡಿರುತ್ತೇವೆ. ನನ್ನ ಮಗ ಪ್ರಕಾಶನ ಮೋಟಾರ್ ಸೈಕಲಗೆ ಎದುರಿನಿಂದ ಬಂದು ಡಿಕ್ಕಿ ಹೊಡೆದ ಮೋಟಾರ ಸೈಕಲನ ಸವಾರನ ಹೆಸರು ಮತ್ತು ಆತನ ಹಿಂದಿನ ಶಿಟನಲ್ಲಿ ಕುಳಿತಿದ್ದವಳ ಹೆಸರು ಕೇಳಿ ತಿಳಿದುಕೊಂಡಿದ್ದು ಸಿದ್ದರೂಡ ಸಾ||ಪಡಸಲಗಾ ಮತ್ತು  ಹೆಣ್ಣುಮಗಳ ಹೆಸರು ಸಿದ್ದರೂಡನ ಹೆಂಡತಿ ಗೀತಾ ಅಂತ ಗೊತ್ತಾಗಿರುತ್ತದೆ. ಅಂತಾ ಶ್ರೀ ಚಂದ್ರಕಾಂತ ತಂದೆ ಶರಣಪ್ಪ ನಾವಿ ಸಾ||ದೇವಣಗಾಂವ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

12 February 2018

KALABURAGI DISTRICT REPORTED CRIMES


ಅಪಘಾತ ಪ್ರಕರಣಗಳು  :
ಆಳಂದ ಠಾಣೆ : ದಿನಾಂಕ: 11/02/2018 ರಂದು ನಾನು ನನ್ನ ಹೆಂಡತಿ ಹೊಲಕ್ಕೆ ಹೋಗಿ ಮರಳಿ ಮನೆಗೆ ಬಂದು ಮನೆಯಲ್ಲಿ ಕೆಲಸ ಮಾಡುತ್ತಿದ್ದಾಗ ನಮ್ಮ ಮಗ ಶಶಿಧರ ಇತನು ಆಟ ಆಡುತ್ತಾ ನಮ್ಮ ಮನೆ ಮುಂದಿನ ಚಾವಡಿ ಕಟ್ಟಿಯ ಹತ್ತಿರ ರೋಡಿನ ಪಕ್ಕದಲ್ಲಿ ಆಟವಾಡುತ್ತಿದ್ದಾಗ ರುದ್ರವಾಡಿ ಗ್ರಾಮದ ವಿಜಯಕುಮಾರ ತಂದೆ ಶಿವರುದ್ರಪ್ಪಾ ಹತ್ತರಕಿ ಇತನು ಗ್ರಾಮದ ಶಾಲೆಯ ಕಡೆಯಿಂದ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸುತ್ತಾ ಬಂದು ನಮ್ಮ ಮಗನಿಗೆ ಡಿಕ್ಕಿಪಡಿಸಿದರಿಂದ ನಮ್ಮ ಮಗು ಮೂರ್ಛೆ ಹೋಗಿ ಬಿದ್ದಾಗ ನಾನು ಮತ್ತು ನನ್ನ ಹೆಂಡತಿ ಗಾಬರಿ ಬಿದ್ದು ಹೋಗಿ ನೋಡಿ ನಮ್ಮ ಮಗುವನ್ನು ಅದೇ ಜೀಪಿನಲ್ಲಿ ಹಾಕಿಕೊಂಡು ಸರ್ಕಾರಿ ಆಸ್ಪತ್ರೆ ಆಳಂದಕ್ಕೆ ತಂದಾಗ ಅಲ್ಲಿನ ವೈದ್ಯಾಧಿಕಾರಿಗಳು ಮಗು ಮೃತಪಟ್ಟಿದೆ ಎಂದು ತಿಳಿಸಿರುತ್ತಾರೆ. ನನ್ನ ಮಗನಿಗೆ ಡಿಕ್ಕಿಪಡಿಸಿ ಭಾರಿ ಘಾಯ ಹೊಂದಿ ಮರಣ ಹೊಂದಲು ಕಾರಣನಾದ ಜೀಪ್ ನಂಬರ್ MH:12 CK-4470 ನೇದ್ದರ ಚಾಲಕ ವಿಜಯಕುಮಾರ ಹತ್ತರಕಿ ಇತನ ಮೇಲೆ ಕಾನೂನಿನ ಪ್ರಕಾರ ಕ್ರಮ ಜರುಗಿಸಬೇಕು ಅಂತಾ ಶ್ರೀ.ರಾಜಶೇಖರ ತಂದೆ ಮಲ್ಲೇಶಪ್ಪಾ ಜಮಾದಾರ ಸಾ|| ಜಮಗಾ(ಆರ್) ತಾ|| ಆಳಂದ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಿಂಚೋಳಿ ಠಾಣೆ : ಶ್ರೀ ರಾಜೇಂದ್ರ ತಂದೆ ಅಮೃತ ಹಸುರಗುಂಡಗಿ ಸಾ || ಚಿಮ್ಮಚೋಡ ತಾ|| ಚಿಂಚೋಳಿಜಿ|| ಕಲಬುರ್ಗಿ ರವರ  ತಂದೆಯಾದ ಅಮೃತ ತಂದೆ ಯಲ್ಲಪ್ಪಾ ಹಸರಗುಂಡಗಿ ಸಾ|| ಚಿಮ್ಮನಚೋಡ ಆಗಿದ್ದು; ನನ್ನ ತಂದೆಯವರು ಇಂದು ಮದ್ಯಾನ್ಹ ಮನೆಯಿಂದ ಹೊರಗಡೆ ಹೋಗುತ್ತಿರುವಾಗ ಅವರ ಹಿಂದೆ ಬಂದ ಟ್ರ್ಯಾಕ್ಟರ ನಂ. ಕೆ..ಎ- 32 ಟಿ.ಬಿ- 3103 ನ ಟ್ರ್ಯಾಕ್ಟರ ಹಿಂದುಗಡೆಯಿಂದ ಬಂದು ನನ್ನ ತಂದೆಯವರಿಗೆ ಗುದ್ದಿದಾಗ ನನ್ನ ತಂದೆಯವರ ಎರಡು ಕಾಲುಗಳು ಪುಡಿಯಾಗಿದ್ದವು. ಇದನ್ನೂ ಕಂಡ ನನ್ನ ಓಣಿಯ ಜನರು ನನ್ನ ತಂದೆಯವರನ್ನೂ ಆಸ್ಪತ್ರೆಗೆ ಕರೆದುಕೊಂಡು ಹೋದರು. ಕಲಬುರ್ಗಿಗೆ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಮಾರ್ಗ ಮದ್ಯದಲ್ಲಿ ನನ್ನ ತಂದೆಯವರು ಸಾವನ್ನಪ್ಪಿರುತ್ತಾರೆ. ಅಪಘಾತಮಾಡಿದ ಟ್ರ್ಯಾಕ್ಟರನ ಚಾಲಕನು ಅಪಘಾತವಾದ ತಕ್ಷಣ ಓಡಿ ಹೋಗಿರುತ್ತಾನೆ.  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚಿಂಚೋಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಕ್ಷಣೆ ಕಿರುಕಳ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀಮತಿ ಪೂರ್ಣಿಮಾ ಗಂಡ ಶಿವಾನಂದ ಸಿನ್ನೂರ ಸಾ : ಕೆ.ಎಚ್.ಬಿ ಅಕ್ಕಮಾಹಾದೇವಿ ಕಾಲನಿ ಕಲಬುರಗಿ ರವರಿಗೆ 2016 ನೇ ಸಾಲಿನಲ್ಲಿ ಕೆ.ಹೆಚ.ಬಿ. ಅಕ್ಕ ಮಾಹಾದೇವಿ ಕಾಲನಿಯಲ್ಲಿ ವಾಸವಾಗಿರುವ ಶಿವಾನಂದ ತಂದೆ ಸಿದ್ಧಣ್ಣಾ ಸಿನ್ನೂರ ಇವರೊಂದಿಗೆ ಲಗ್ನದ ವಿಷಯ ಮಾತುಕತೆ ಆಡುವ ಕಾಲಕ್ಕೆ ನಮ್ಮ ತಂದೆ ಬಸವರಾಜ. ತಾಯಿ ಮಲ್ಲಮ್ಮಾ ಹಾಗೂ ನಮ್ಮ ಹಿರಿಯರಾದ ಹಿರಗಪ್ಪ ಚಂಡರಕಿ, ರಾಣಪ್ಪ ಓಗೆ, ಶಾಂತಮಲ್ಲಪ್ಪ ಶಿವಕೇರಿ  ಅವರೆಲ್ಲರೂ ಸೇರಿಕೊಂಡು ಹುಡುಗನ ಕಡೆಯವರಾದ ರಾಮಚಂದ್ರ ಎಲ್ಲರೂ ಮಾತುಕತೆ ಆಡುವಾಗ  ಹುಡುಗ ಮತ್ತು ಅವರ ತಾಯಿ, ತಮ್ಮ ಹಾಗೂ ತಂಗಿ ಇವರೆಲ್ಲರು ಕೂಡಿ ವರದಕ್ಷಿಣೆ ರೂಪದಲ್ಲಿ ಬೇಡಿಕೆಯಂತೆ ಲಗ್ನ ಕಾಲಕ್ಕೆ ಒಟ್ಟು ಎರಡು ಲಕ್ಷ  ನಗದು ಹಣ, ಐದು ತೊಲಿ ಬಂಗಾರ, ಒಂದು ಮೋಟಾರ ಸೈಕಲ ಬದಲಾಗಿ 55000/- ರೂ. ಅಲ್ಲದೇ ಹಾಂಡೆ ಬಾಂಡೆ ಮತ್ತು ಎಲ್ಲಾ ಸಾಮಾನುಗಳನ್ನು ಕೊಡುವ ಮಾತುಕತೆ ಆಡಿ, ಇದರಲ್ಲಿ 01 ಲಕ್ಷ ರೂ.ಯನ್ನು  ಮುಂದಿನ ಒಂದು ವರ್ಷದೊಳೆಗೆ ಕೊಡುವ ಮಾತುಕತೆ ಆಡಿ ಲಗ್ನ ನಿಶ್ಚಯ ಮಾಡಿ ದಿನಾಂಕ 05/12/2016 ರಂದು ಎಂ.ಎಸ್.ಕೆ.ಮಿಲ್ಲ ಹತ್ತಿರ ಇರುವ ಮೂನಸ್ಟಾರ ಫಂಕ್ಷನ ಹಾಲದಲ್ಲಿ  ಮಾತನಾಡಿದ ಈ ಮೇಲಿನ ಎಲ್ಲಾ ವಸ್ತುಗಳನ್ನು ವರದಕ್ಷಿಣೆ ರೂಪದಲ್ಲಿ ಕೊಟ್ಟು  ನಮ್ಮ ಹಿಂದು ಸಂಪ್ರದಾಯದಂತೆ ಲಗ್ನವನ್ನು ಸುಮಾರು 06 ಲಕ್ಷ ರೂ. ಖರ್ಚು ಮಾಡಿ ನಮ್ಮ ತಂದೆ, ತಾಯಿಯವರು ಲಗ್ನ ಮಾಡಿಕೊಟ್ಟಿರುತ್ತಾರೆ. ಮದುವೆಯಾದ ನಂತರ ನಾನು ಗಂಡನ ಮನೆಗೆ ನಡೆಯಲು ಕೆ.ಹೆಚ.ಬಿ. ಕಾಲನಿಗೆ ಹೋದಾಗ ಗಂಡ ಶಿವಾನಂದ, ಅತ್ತೆ ನಾಗಮ್ಮಾ, ಮೈದನ ಆನಂದ, ನಾದಿನಿ ಶಿಲ್ಪಾ ಇವರೆಲ್ಲರೂ 08 ದಿವಸಗಳ ವರೆಗೆ ನನಗೆ ಚನ್ನಾಗಿ ನೋಡಿಕೊಂಡು ಮುಂದೆ ಇವರೆಲ್ಲರೂ ಕೂಡಿಕೊಂಡು ನಿಮ್ಮ ತಂದೆ, ತಾಯಿಯವರು  ಮದುವೆ ಕಾಲಕ್ಕೆ ಮಾತಾಡಿದಂತೆ ಉಳಿದ ಬಾಕಿ ಒಂದು ಲಕ್ಷ ರೂ. ವರದಕ್ಷಿಣೆ ಸೇರಿಸಿ ಒಟ್ಟು 10 ಲಕ್ಷ ರೂ. ತೆಗೆದುಕೊಂಡು ಬಾ ಅಂತಾ ದಿನಾಲೂ ನನಗೆ ಮಾನಸಿಕವಾಗಿ ಮತ್ತು ದೈಹಿಕವಾಗಿ ತೊಂದರೆ ಕೊಡುತ್ತಾ ಬಂದಿರುತ್ತಾರೆ. ಅಲ್ಲದೇ ದಿನಾಂಕ 16/05/17 ರಂದು ರಾತ್ರಿ 10-00 ಗಂಟೆಯಿಂದ ದಿನಾಂಕ 14/11/17 ರ ವರೆಗೆ ವರದಕ್ಷಿಣೆ ತೆಗೆದುಕೊಂಡು ಬಾ ಕಿರುಕುಳ ಕೊಡುತ್ತಿದ್ದು, ಈ ಬಗ್ಗೆ ರಾಜಿ ಪಂಚಾಯತಿ ಜೂನ್ 2017 ನೇ ತಿಂಗಳಲ್ಲಿ ಮತ್ತು ದಿನಾಂಕ 20/01/18 ರಂದು ಘಾಟಗೆ ಲೇಔಟದಲ್ಲಿ ಮಾಡಿದಾಗ ಆರೋಪಿತರು ಫಿರ್ಯಾದಿದಾರಳಿಗೆ ವರದಕ್ಷಿಣೆ ತರದೇ ಇದ್ದರೆ ಮನೆಗೆ ಕರೆದುಕೊಳ್ಳುವುದಿಲ್ಲಾ ಎಂದು ಹೇಳಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಸ್ವಾಭಾವಿಕ ಸಾವು ಪ್ರಕರಣ :
ಸೇಡಂ ಠಾಣೆ  : ಶ್ರೀ ದೇವಿಂದ್ರಮ್ಮ ಗಂಡ ಶೇಖಪ್ಪ ನಿಂಗಪ್ಪೋರ ಸಾ : ಹಂದರಕಿ ತಾ : ಸೇಡಂ ರವರ ಮಗಳಾದ ಚನ್ನಮ್ಮ ತಂದೆ ಶೇಖಪ್ಪ  ಇವಳು ದಿನಾಂಕ 10-02-2018 ರಂದು ಋತುಮತಿ ಆದಾಗ ಹೊಟ್ಟೆ ಬೇನೆ ಆಗಿದ್ದರಿಂದ ಹೊಟ್ಟೆ ಬೇನೆ ತಾಳಲಾರದೆ ಮನೆಯಲ್ಲಿದ್ದ ಹತ್ತಿಬೆಳೆಗೆ ಹೊಡೆಯುವ ಎಣ್ಣೆ ಕುಡಿದು ವಾಂತಿ ಮಾಡಿಕೊಳ್ಳುತ್ತಿರುವಾಗ ನಾನು ನೋಡಿ ಮಗಳನ್ನು ಸರಕಾರಿ ಆಸ್ಪತ್ರೆ ಸೇಡಂಗೆ ತಂದು ಉಪಚಾರ ಕುರಿತು ತೋರಿಸಿದ್ದು ಹೆಚ್ಚಿನ ಉಪಚಾರ ಕುರಿತು ಕಲಬುರಗಿ ಆಸ್ಪತ್ರೆಗೆ ತೆಗೆದುಕೊಂಡು ಹೋಗುವಾಗ ಮಾರ್ಗ ಮದ್ಯದಲ್ಲಿ ಮೃತಪಟ್ಟಿರುತ್ತಾಳೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ  ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

03 February 2018

KALABURAGI DISTRICT REPORTED CRIMES

ಮಟಕಾ ಜೂಜಾಟದಲ್ಲಿ ನಿರತವನ ಬಂಧನ :
ಫರತಾಬಾದ ಠಾಣೆ : ದಿನಾಂಕ 02/02/18 ರಂದು ಫರತಾಬಾದ ಠಾಣಾ ವ್ಯಾಪ್ರಿಯ  ತಿಳಗೊಳ ಗ್ರಾಮದ ಹನುಮಾನ ಗುಡಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ  ಒಂದು ರೂಪಾಯಿಗೆ 80/- ರೂ ಕೊಡುವ ಕರಾರಿನಲ್ಲಿ ಜನರಿಂದ ಹಣ ಪಡೆದುಕೊಂಡು ಮಟಕಾ ಚೀಟಿ ಬರೆದುಕೊಟ್ಟು ಮೋಸ ಮಾಡುತ್ತಿದ್ದಾನೆ ಅಂತಾ ಬಾತ್ಮಿ ಬಂದ ಮೇರೆಗೆ ಶ್ರೀ ವಾಹಿದ ಕೊತ್ವಾಲ್ ಪಿ.ಎಸ್.ಐ ಪರಹತಾಬಾದ ಪೊಲೀಸ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಬಾತ್ಮಿ ಸ್ಥಳಕ್ಕೆ ಹೋಗಿ ದಾಳಿ ಮಾಡಿ ಒಬ್ಬನನ್ನು ಹಿಡಿದು ವಿಚಾರಿಸಲು ಅವನು ತನ್ನ ಹೆಸರು ಶಿವಯ್ಯ ತಂದೆ ರಾಮಯ್ಯ ಗುತ್ತೆದಾರ ಸಾಃ ತಿಳಗೊಳ ಗ್ರಾಮ ಅಂತಾ ತಿಳಿಸಿದ್ದು ಸದರಿಯವನಿಂದ ಮಟಕಾ ಜೂಜಾಟಕ್ಕೆ ಬಳಸಿದ ನಗದು ಹಣ  1730/-ರೂ, ಒಂದು ಬಾಲ ಪೇನ, ಎರಡು ಮಟಕಾ ಚೀಟಿ ಜಪ್ತಿ ಪಡಿಸಿಕೊಂಡು, ಆರೋಪಿತನೊಂದಿಗೆ ಫರತಾಬಾದ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಸ್ವಾಭಾವಿಕ ಸಾವು ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀಮತಿ ಶ್ರೀದೇವಿ ಅಮೃತರಾವ ನಿಲೂರ ಸಾ: ದುತ್ತರಗಾವ ತಾ: ಆಳಂದ ಜಿ: ಕಲಬುರಗಿ ಹಾ:ವ: ಪ್ಲಾಟ ನಂ 3 ದೇವಿ ನಗರ ಕಲಬುರಗಿ ರವರ ಗಂಡನಾದ ಅಮೃತರಾವ ತಂದೆ ಬಸವಣ್ಣಪ್ಪ ನಿಲೂರ ಇವರು ತಮ್ಮ ವ್ಯವಹಾರದಲ್ಲಿ ಸಾಲ ಮಾಡಿಕೊಂಡಿದ್ದು ಸಾಲಗಾರರು ನನ್ನ ಗಂಡನಿಗೆ ಮರಳಿ ಹಣ ಕೇಳುತ್ತಿದ್ದರಿಂದ ಈಗ ಸುಮಾರು 8 ತಿಂಗಳ ಹಿಂದೆ ನನ್ನ ಗಂಡನು ಮನೆ ಬಿಟ್ಟು ಹೋಗಿದ್ದು ಇರುತ್ತದೆ. ನನ್ನ ಗಂಡನು ನಮ್ಮ ಹತ್ತಿರ ಬರದೆ ಮಹಾರಾಷ್ಟದಲ್ಲಿ ವಾಸವಾಗಿದ್ದು ಆಗಾಗ ನಮ್ಮ ಸಂಬಂದಿಕರಿಗೆ ಬೆಟಿಯಾಗಿ ನಮ್ಮ ಮನೆಯ ಬಗ್ಗೆ ವಿಚಾರಿಸುತ್ತಾ ಬಂದ್ದಿದ್ದು ಇರುತ್ತದೆ. ನನ್ನ ಗಂಡ ಮನೆ ಬಿಟ್ಟು ಹೋದ ನಂತರ ನನ್ನ ಸಂಗಡ ಮಾತನಾಡಿರುವದಿಲ್ಲ ಮತ್ತು ನನ್ನ ಗಂಡನು ಮರಳಿ ಮನೆಗೆ ಬಂದಿರುವದಿಲ್ಲ.ನಮ್ಮ ಮನೆಯಲ್ಲಿ ನಾನು ನನ್ನ ಮಕ್ಕಳಾದ 1. ಕು: ಜೋತಿ ವಯ: 13 ವರ್ಷ 2. ಕು: ಮಲ್ಲಿಕಾರ್ಜುಜನ :12 ಮತ್ತು 3. ಕು: ಶಿವುಕುಮಾರ ಮಾತ್ರ ಇರುತ್ತವೆ. ನನ್ನ ಗಂಡನ ತಮ್ಮನಾದ ಚಂದ್ರಕಾಂತ ಇವರು ಕಲಬುರಗಿ ನಗರದ ಸ್ವಾಮಿ ವಿವೇಕಾನಂದ ನಗರದಲ್ಲಿ ಕುಟುಂಬದೊಂದಿಗೆ ವಾಸವಾಗಿದ್ದು. ಆಗಾ ನಮ್ಮ ಮೈದುನ ನಮ್ಮ ಮನೆಗೆ ಬಂದು ಹೋಗುವದು ಮಾಡುತ್ತಾ ಬಂದಿದ್ದು ಇರುತ್ತದೆ. ನನ್ನ ಗಂಡನು ತನ್ನ ಸಾಲ ತೀರಿಸಿದ ನಂತರ ಮರಳಿ ನಮ್ಮ ಮನೆಗೆ ಬರಬಹುದು ಅಂತ ನಾವು ವಿಚಾರ ಮಾಡಿಕೊಂಡು ಸುಮ್ಮನಾಗಿದ್ದು ನನ್ನ ಗಂಡ ಮನೆ ಬಿಟ್ಟು ಹೋದ ಬಗ್ಗೆ ನಾವು ಯಾವುದೆ ಠಾಣೆಯಲ್ಲಿ ದೂರು ನೀಡಿರುವದಿಲ್ಲ. ಇಂದು ದಿನಾಂಕ 02.02.2018 ರಂದು ಬೆಳ್ಳಿಗ್ಗೆ 10 ಗಂಟೆಗೆ ನನ್ನ ಗಂಡನ ಗೇಳೆಯನಾದ ಕಲ್ಯಾಣಿ ಇತನು ನಮಗೆ ಪೋನ ಮಾಡಿ ತಿಳಿಸಿದ್ದೆನೆಂದರೆ ನನ್ನ ಗಂಡು ತಿರ್ವವಾಗಿ ಕಾಮಣಿ ಕಾಯಿಲೆ ಬಳಲುತಿದ್ದು ಅವನಿಗೆ ಕುಮಸಿ ಮುತ್ಯಾ ಇವರು ಉಪಚಾರ ಕುರಿತು ಆಸ್ಪತ್ರೇಗೆ ಕರೆದುಕೊಂಡು ಬರುತ್ತಿದ್ದಾರೆ ಅಂತ ಹೇಳಿದ್ದು ಆಗ ನಾನು ಸದರಿ ಕಲ್ಯಾಣಿ ಇವರಿಗೆ ನನ್ನ ಗಂಡನಿಗೆ ಮನೆಗೆ ಕರೆದುಕೊಂಡು ಬರಲು ತಿಳಿಸಿದ್ದು ಅದರಂತೆ ಬೆಳ್ಳಿಗ್ಗೆ 12 ಗಂಟೆಯ ಸುಮಾರಿಗೆ ಕಲ್ಯಾಣಿ ಇವರು ನನ್ನ ಗಂಡ ಅಮೃತ ಇವರನ್ನು ಕರೆದುಕೊಂಡು ನಮ್ಮ ಮನೆಗೆ ಬಂದಿದ್ದು ಆಗ ನಾನು ನನ್ನ ಗಂಡನಿಗೆ ನೋಡಲು ಅವರು ಮಾತನಾಡುವ ಸ್ಥಿತಿಯಲ್ಲಿ ಇದ್ದಿರುವದಿಲ್ಲ. ಅವರ ಕಣ್ಣುಗಳು ಹಸಿರಾಗಿದ್ದು ಅವರಿಗೆ ಅತೀವವಾಗಿ ಕಾಮಣಿ (ಕಾಮಲೆ ರೋಗ) ನಿಷಕ್ತರಾದ ಹಾಗೆ ಕಂಡು ಬರುತ್ತಿದ್ದು ಆಗ ಮನೆಯಲ್ಲಿದ್ದ ನಾನು ನಮ್ಮ ಅತ್ತೆಯಾದ ಕಮಲಾಬಾಯಿ ಗಂಡ ಬಸವಣ್ಣಪ್ಪ ನಮ್ಮ ಸಣ್ಣ ಮಾವ ವಿಜಯಕುಮಾರ ತಂದೆ ಗುಂಡಪ್ಪ ಕೂಡಿಕೊಂಡು ನನ್ನ ಗಂಡನಿಗೆ ಅಟೋದಲ್ಲಿ ಕೂಡಿಸಿಕೊಂಡು ಮಧ್ಯಾನ 2;30 ಗಂಟೆಯ ಸುಮಾರಿಗೆ ಕಲಬುರಗಿ ಜಿಲ್ಲಾ ಸರಕಾರಿ ಆಸ್ಪತ್ರೇಗೆ ಸೇರಿಕೆ ಮಾಡಿದ್ದು ನನ್ನ ಗಂಡನಿಗೆ ಆಸ್ಪತ್ರೇಗೆ ಸೇರಿಕೆ ಮಾಡಿದ ನಂತರ ವ್ಯಧ್ಯಾಧಿಕಾರಿಗಳು ನನ್ನ ಗಂಡನಿಗೆ ಪರಿಕ್ಷೇ ಮಾಡಿದ ನಂತರ ವೈಧ್ಯಾಧಿಕಾರಿಗಳು ನನ್ನ ಗಂಡನು ಮೃತ ಪಟ್ಟಿದ್ದಾನೆ ಅಂತ ತಿಳಿಸಿದ್ದು ಇರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.