POLICE BHAVAN KALABURAGI

POLICE BHAVAN KALABURAGI

11 January 2018

KALABURAGI DISTRICT REPORTED CRIMES

ಮಟಕಾ ಜೂಜಾಟದಲ್ಲಿ ನಿರತವರ ಬಂಧನ :
ಅಫಜಲಪೂರ ಠಾಣೆ : ದಿನಾಂಕ 10/01/2018 ರಂದು ಸುಧಾರಿತ ಗಸ್ತು ಸಂ 27 ಭೋಸಗಾ ಗ್ರಾಮದ ಬೀಟ್ ಸಿಬ್ಬಂದಿಯಾದ ರಾಣಬಾ ಸಿಹೆಚ್ ಸಿ-527 ರವರು ಭೋಸಗಾ ಗ್ರಾಮದ ಮಠ ಮುಂದೆ ಒಬ್ಬ ವ್ಯಕ್ತಿ ಮಟಕಾ ಜೂಜಾಟ ಆಡುತ್ತಿದ್ದಾನೆ ಅಂತಾ ಬಾತ್ಮಿದಾರರಿಂದ ಮಾಹಿತಿ ಬಂದಿದೆ ಅಂತ ತಿಳಿಸಿದ ಮೇರೆಗೆ ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಭೋಸಗಾ ಗ್ರಾಮದ ಹೊನ್ನಲಿಂಗೇಶ್ವರ ಮಠದ ಹತ್ತಿರ ಸ್ವಲ್ಪ ದೂರು ನಮ್ಮ ವಾಹನವನ್ನು ನಿಲ್ಲಿಸಿ ಮರೆಯಾಗಿ ನಿಂತು ನೋಡಲು, ಮಠದ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಹೋಗಿ ಬರುವ ಸಾರ್ವಜನಿಕರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತಾ ಕರೆದು, ಜನರಿಂದ ಹಣ ಪಡೆದು ಅವರಿಗೆ ಅಂಕಿ ಸಂಖ್ಯೆ ಬರೆದುಕೊಟ್ಟು, ಮಟಕಾ ಬರೆದುಕೊಳ್ಳುತ್ತಿದ್ದುದನ್ನು ಖಚಿತಪಡಿಸಿಕೊಂಡು . ದಾಳಿ ಮಾಡಿ ಹಿಡಿದು ಸದರಿಯವನ ಹೆಸರು ವಿಳಾಸ ವಿಚಾರಿಸಲಾಗಿ ಅಪ್ಪಣ್ಣ ತಂದೆ ಎಗಪ್ಪ ಹೂವಿನಳ್ಳಿ ಸಾ||ಭೋಸಗಾ ತಾ||ಅಫಜಲಪೂರ ಅಂತಾ ತಿಳಿಸಿದ್ದು, ಸದರಿಯವನ ವಶದಿಂದ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 2250/- ರೂಪಾಯಿ ನಗದು ಹಣ ಹಾಗೂ ಅಂಕಿ ಸಂಖ್ಯೆ ಬರೆದ ಒಂದು ಮಟಕಾ ಚೀಟಿ ಮತ್ತು ಒಂದು ಬಾಲ ಪೆನ್ನ ವಶಕ್ಕೆ ತೆಗೆದುಕೊಂಡು ಸದರಿಯವನೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ರಾಘವೇಂದ್ರ ನಗರ ಠಾಣೆ : ದಿನಾಂಕ 10-01-2018 ರಂದು ಮಧ್ಯಾನ ರಾಘವೇಂದ್ರ ನಗರ  ಠಾಣಾ ವ್ಯಾಪ್ತಿಯ ಲಾಲಗೇರಿ ಮಜ್ಜಿದ ಹತ್ತಿರ ರಸ್ತೆಯ ಪಕ್ಕದಲ್ಲಿ ಒಬ್ಬ ವ್ಯಕ್ತಿ ಕೂಳಿತುಕೊಂಡು ರಸ್ತೆಯ ಮೇಲೆ ಹೋಗಿ ಬರುವವರಿಗೆ ಇದು ಬಾಂಬೆ ಮಟಕಾ ಇದೆ 1 ರೂಪಾಯಿಗೆ 80 ರುಪಾಯಿ ಬರುತ್ತದೆ ಅಂತ ಹೇಳುತ್ತಾ ಸಾರ್ವಜನಿಕರಿಂದ ಹಣ ಪಟೆದುಕೊಂಡು ಮಟಕಾ ಚೀಟಿ ಬರೆದುಕೂಡುತ್ತಿದ್ದಾನೆ ಅಂತ ಖಚಿತ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ರಾಘವೇಂದ್ರ ನಗರ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ  ಲಾಲಗೇರಿ ಮಜ್ಜಿದ ದಿಂದ ಸ್ವಲ್ಪ ದೂರದಲ್ಲಿ ಹೋಗಿ ನಿಂತುಕೊಂಡು ಮಜ್ಜಿದ ಹತ್ತಿರ ರಸ್ತೆಯ ಪಕ್ಕದಲ್ಲಿ ಒಬ್ಬ ವ್ಯಕ್ತಿ ಕುಳಿತುಕೊಂಡು ರಸ್ತೆಯ ಮೇಲೆ ಹೋಗಿ ಬರುವವರಿಗೆ ಇದು ಬಾಂಬೆ ಮಟಕಾ ಇದೆ 1 ರೂಪಾಯಿಗೆ 80 ರುಪಾಯಿ ಬರುತ್ತದೆ ಅಂತ ಹೇಳುತ್ತಾ ಸಾರ್ವಜನಿಕರಿಂದ ಹಣ ಪಟೆದುಕೊಂಡು ಮಟಕಾ ಚೀಟಿ ಬರೆದುಕೂಡುತಿರುವ ಬಗ್ಗೆ ಖಚಿತ ಪಡಿಸಿಕೊಂಡು ದಾಳಿ ಮಾಡಲು ಮಟಕಾ ಬರೆಯಿಸಲು ಬಂದವರು ಓಡಿ ಹೋಗಿದ್ದು ಮಟಕಾ ಚೀಟಿಯನ್ನು ಬರೆದುಕೊಳ್ಳುತ್ತಿದ್ದವನನ್ನು ಹಿಡಿದುಕೊಂಡು ಅವನ ಹೆಸರು ವಿಳಾಸ ವಿಚಾರಿಸಲು ಸದರಿಯವನು ಅಸಪಾಕ್ ಪಟೇಲ ತಂದೆ ಬುರಾನ ಪಟೇಲ ಸಾ: 11-11 ಲಾಲಗೇರಿ ಮಜ್ಜಿದ ಹತ್ತಿರ ಬ್ರಹ್ಮಪೂರ ಕಲಬುರಗಿ. ಅಂತ ತಿಳಿಸಿದ್ದು ನಂತರ ಸದರಿಯವನ ಅಂಗಶೋದನೆ ಮಾಡಲು ಸದರಿಯವನ ಹತ್ತಿರ ನಗದು ಹಣ 1570, 4 ಮಟಕಾ ಬರೇದ ಚೀಟಿಗಳು , ಒಂದು ಬಾಲ ಪೇನ್ ದೊರೆತಿದ್ದು ಸದರಿಯವುಗಳನ್ನು ವಶಕ್ಕೆ ತೆಗೆದುಕೊಂಡು ಸದರಿಯವನೊಂದಿಗೆ ರಾಘವೇಂದ್ರ ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ದರೋಡೆಗೆ ಹೊಂಚು ಹಾಕಿ ಕುಳಿತವರ ಬಂಧನ :
ಗ್ರಾಮೀಣ ಠಾಣೆ : ಶ್ರೀ ಎ. ವಾಜೀದ ಪಟೇಲ್ ಸಿ.ಪಿ.ಐ. ಗ್ರಾಮೀಣ ವೃತ್ತ ಕಲಬುರಗಿ ರವರು ದಿನಾಂಕ  10/01/2018 ರಂದು ರಾತ್ರಿ 12-30 ಗಂಟೆಯಿಂದ ಬೆಳಗಿನ 05-00 ಗಂಟೆಯವರೆಗೆ ಮಾನ್ಯ ಎಸ್.ಪಿ.ಸಾಹೇಬ ಕಲಬುರಗಿ ರವರು ಕಲಬುರಗಿ ನಗರದಲ್ಲಿ ಇರುವ ಎಲ್ಲಾ ಹಿರಿಯ ಅಧಿಕಾರಿಗಳು ಮತ್ತು ಠಾಣಾಧಿಕಾರಿಗಳು ಇತ್ತೀತ್ತಲಾಗಿ ಹೆಚ್ಚುತ್ತಿರುವ ಸ್ವತ್ತಿನ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ತಮ್ಮ, ತಮ್ಮ ಠಾಣಾ ಸರಹದ್ದಿನಲ್ಲಿ ವಿಶೇಷ ರಾತ್ರಿ ಗಸ್ತು ಕರ್ತವ್ಯ ನಿರ್ವಹಿಸುವಂತೆ ಸೂಚಿಸಿದ ಪ್ರಕಾರ ನಾನು ಮತ್ತು ನಮ್ಮ ಸಿಬ್ಬಂದಿಯೊಂದಿಗೆ  ಗ್ರಾಮೀಣ ಪೊಲೀಸ ಠಾಣೆ ಸರಹದ್ದಿನಲ್ಲಿ ವಿಶೇಷ ಗಸ್ತು ಕರ್ತವ್ಯದಲ್ಲಿ ನಿರತನಿದ್ದೆನು. ನನ್ನಂತೆ ಗ್ರಾಮೀಣ ಪೊಲೀಸ ಠಾಣೆಯ ಶ್ರೀ ಚಂದ್ರಶೇಖರ ಪಿ.ಎಸ್.ಐ. ಮತ್ತು ಅವರ ಸಿಬ್ಬಂದಿಯವರೊಂದಿಗೆ ತಮ್ಮ ಠಾಣೆ ಜೀಪು ಕೆಎ 32 ಜಿ 485 ರಲ್ಲಿ  ವಿಶೇಷ ಗಸ್ತು ಕರ್ತವ್ಯದಲ್ಲಿ ನಿರತರಿದ್ದರು.  ವಿಶೇಷ ರಾತ್ರಿ ಗಸ್ತು ಕರ್ತವ್ಯ ನಿರ್ವಹಿಸುತ್ತಾ ಬೆಳಗಿನ ಜಾವ 04-15 ಗಂಟೆಗೆ ಹೀರಾಪೂರ ಕ್ರಾಸನಲ್ಲಿ ಬಂದಾಗ ನನಗೆ  ಖಚಿತವಾದ ಮಾಹಿತಿ ಬಂದಿದ್ದೇನೆಂದರೆ, ನನ್ನ ವೃತ್ತದ ಆಧೀನದಲ್ಲಿ ಬರುವ ಕಲಬುರಗಿ ಗ್ರಾಮೀಣ ಪೊಲೀಸ್ ಠಾಣೆ ಹದ್ದಿಯಲ್ಲಿ ಬರುವ ಅಫಜಲಪೂರ ರೋಡಿನ ಶರಣಸಿರಸಗಿ ಸೀಮಾಂತರದ ಹೊರ ವಲಯದಲ್ಲಿ ನಾಗಲಿಂಗೇಶ್ವರ ಗುಡಿ ಮರೆಯಲ್ಲಿ ಕೆಲವು ಜನರು ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಮಾರಾಕಾಸ್ತ್ರಗಳನ್ನು ಹಿಡಿದುಕೊಂಡು ರೋಡಿಗೆ ಹೋಗಿ ಬರುವ ವಾಹನ ಸವಾರರಿಗೆ ನಿಲ್ಲಿಸಿ ದರೋಡೆ ಮಾಡಲು ಹೊಂಚು ಹಾಕುತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಸದರಿ ವಿಷಯವನ್ನು ನಮ್ಮ ಮೇಲಾಧಿಕಾರಿಗಳಿಗೆ ತಿಳಿಸಿ, ದಾಳಿ ಕುರಿತು  ಸಿಬ್ಬಂದಿ ಮತ್ತು ಪಂಚರೊಂದಿಗೆ  ಮತ್ತು ನನ್ನಂತೆ ವಿಶೇಷ ಗಸ್ತು ಕರ್ತವ್ಯದಲ್ಲಿ ಕಲಬುರಗಿ ಗ್ರಾಮೀಣ ಪೊಲೀಸ ಠಾಣೆಯ ಶ್ರೀ ಚಂದ್ರಶೇಖರ ಪಿ.ಎಸ್.ಐ. ಮತ್ತು ಅವರ ಜೊತೆಯಲ್ಲಿದ್ದ  ಸಿಬ್ಬಂದಿಯೊಂದಿಗೆ ಹೀರಾಪೂರ ಕ್ರಾಸದಿಂದ  ಬೆಳಗಿನ 05-30 ಗಂಟೆ ಸುಮಾರಿಗೆ  ಬಿದ್ದಾಪೂರ  ಕಾಲನಿ, ಹೈ ಕೋರ್ಟ  ಕ್ರಾಸ ಮುಖಾಂತರವಾಗಿ  ಬಾತ್ಮಿ ಸ್ಥಳ ಅಫಜಲಪೂರ ರೋಡಿನ ಶರಣಸಿರಸಗಿ ಸೀಮಾಂತರದ ಹೊರ ವಲಯದಲ್ಲಿ ನಾಗಲಿಂಗೇಶ್ವರ ಗುಡಿ ಇನ್ನೂ ಸ್ವಲ್ಪ ಮುಂದೆ ಇರುವಂತೆ ಜೀಪುಗಳು ನಿಲ್ಲಿಸಿ ಎಲ್ಲರೂ ಜೀಪಿನಿಂದ ಇಳಿದು ನಡೆದುಕೊಂಡು, ನಾಗಲಿಂಗೇಶ್ವರ ಗುಡಿಯ ದಕ್ಷಿಣ ದಿಕ್ಕಿನ ಮರೆಯಲ್ಲಿ ನಿಂತು ನೋಡಲಾಗಿ  ಸದರಿ ಗುಡಿಯ ಪಶ್ಚಿಮ ದಿಕ್ಕಿನ ಹಿಂದುಗಡೆ ಗೋಡೆ ಮರೆಯಲ್ಲಿ 06  ಜನರು ನಿಂತಿದ್ದು ಅವರೆಲ್ಲರೂ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ತಮ್ಮ ತಮ್ಮ ಕೈಯಲ್ಲಿ ಚಾಕು, ಬಡಿಗೆ, ರಾಡು, ಹಗ್ಗಾ, ಖಾರದ ಪುಡಿ ಹಿಡಿದುಕೊಂಡು ನಿಂತಿದ್ದನ್ನು ಜೊತೆಯಲ್ಲಿ ಬಂದಿದ್ದ ಪಂಚರನ್ನು ಮತ್ತು ಅಧಿಕಾರಿ ಹಾಗೂ ಸಿಬ್ಬಂದ್ದಿಯವರಿಗೆ ತೋರಿಸಿ ಖಚಿತ ಪಡಿಸಿಕೊಂಡು ದರೋಡೆ ಮಾಡಲು ಹೊಂಚು ಹಾಕುತ್ತಿದ್ದ 06 ಜನರನ್ನು ನನ್ನ ನಿದೆರ್ಶನದಂತೆ ಬೆಳಗಿನ 06-00 ಗಂಟೆಗೆ ದಾಳಿ ಮಾಡಿ ಹಿಡಿಯಲು 06 ಜನರು ಸಿಕ್ಕಿ ಬಿದ್ದಿದ್ದು. ಸದರಿ 06 ಜನರು ಮುಖಕ್ಕೆ ಕಟ್ಟಿಕೊಂಡ ಬಟ್ಟೆ ತೆಗೆಯಿಸಿ ಅವರ ಹೆಸರು ವಿಳಾಸ ವಿಚಾರಿಸಲು ಅವರಲ್ಲಿ ಒಬ್ಬನು ತನ್ನ ಹೆಸರು 1) ರಿಯಾಜ್ ತಂದೆ ರಸೂಲಸಾಬ್ ಬಿಜಲಿ  ಸಾ|| ಅಗರಖೇಡ  ತಾ|| ಇಂಡಿ ಜಿಲ್ಲಾ|| ವಿಜಾಪೂರ ಅಂತಾ ತಿಳಿಸಿದನು.ಅವನ ಹತ್ತಿರ  ಒಂದು ಚಾಕು ಒಂದು ಮುಖಕ್ಕೆ ಕಟ್ಟಿಕೊಂಡ ಬಟ್ಟೆ ದೊರೆಯಿತು. 2) ಮೌಲಾಲಿ ತಂದೆ ಮಹೆಬೂಬ್ ಬಿಜಲಿ ಸಾ|| ಅಗರಖೇಡ  ತಾ|| ಇಂಡಿ ಜಿಲ್ಲಾ|| ವಿಜಾಪೂರ ಅಂತಾ ತಿಳಿಸಿದನು .ಇತನ ಹತ್ತಿರ  ಒಂದು ಖಾರದ ಪುಡಿ ಪಾಕೇಟ , ಒಂದು ಮುಖಕ್ಕೆ ಕಟ್ಟಿಕೊಂಡ ಬಟ್ಟೆ ದೊರೆಯಿತು. 3) ಹಸನ್ ತಂದೆ ಅಬ್ದುಲ್ ಬಾವಾ ಸಾ|| ಅಗರಖೇಡ  ತಾ|| ಇಂಡಿ ಜಿಲ್ಲಾ|| ವಿಜಾಪೂರ ಅಂತಾ ತಿಳಿಸಿದನು ಇತನ ಹತ್ತಿರ  25 ಫೀಟನ ಹಗ್ಗ, ಒಂದು ಮುಖಕ್ಕೆ ಕಟ್ಟಿಕೊಂಡ ಬಟ್ಟೆ ದೊರೆಯಿತು. 4)ಶಿವಕುಮಾರ ತಂದೆ ಬಸಪ್ಪ ಡೊಳ್ಳಿ ಸಾ|| ಅಗರಖೇಡ  ತಾ|| ಇಂಡಿ ಜಿಲ್ಲಾ|| ವಿಜಾಪೂರ ಅಂತಾ ತಿಳಿಸಿದನು. ಇತನ ಹತ್ತಿರ  ಒಂದು ಚಾಕು, ಒಂದು ಮುಖಕ್ಕೆ ಕಟ್ಟಿಕೊಂಡ ಬಟ್ಟೆ ದೊರೆಯಿತು. 5) ಬಂಡೆಪ್ಪ ತಂದೆ ದೇವರಾಯ ಸಂಗೊಳ್ಳಿ ಸಾ|| ಅಂಬಲಗಾ ತಾ|| ಆಳಂದ ಜಿಲ್ಲಾ|| ಕಲಬುರಗಿ ಅಂತಾ ತಿಳಿಸಿದನು.ಇತನ ಹತ್ತಿರ ಒಂದು ಕಬ್ಬಿಣದ ರಾಡು , ಒಂದು ಮುಖಕ್ಕೆ ಕಟ್ಟಿಕೊಂಡ ಬಟ್ಟೆ ದೊರೆಯಿತು. 6) ತಾಜೋದ್ದೀನ ತಂದೆ ಮಹೆಬೂಬ್ ಸಾಬ್ ಭಾಗವಾನ್ ಸಾ|| ಅಂಬಲಗಾ ತಾ|| ಆಳಂದ ಜಿಲ್ಲಾ|| ಕಲಬುರಗಿ ಅಂತಾ ತಿಳಿಸಿದನು.ಇತನ ಹತ್ತಿರ  ಒಂದು ಕಬ್ಬಿಣದ ರಾಡು , ಒಂದು ಮುಖಕ್ಕೆ ಕಟ್ಟಿಕೊಂಡ ಬಟ್ಟೆ ದೊರೆಯಿತು. ಆಗ ಸದರಿಯವರಿಗೆ ನೀವು 06 ಜನರು ವಿಜಾಪೂರ ದವರು  ಇಲ್ಲಿ ಯಾಕೇ ನಿಂತಿದ್ದಿರಿ ಮತ್ತು ಯಾತಕ್ಕಾಗಿ ಬಂದಿರುವಿರೀ ಅಂತಾ ವಿಚಾರಿಸಲೂ ಸಿಕ್ಕಿ ಬಿದ್ದ  ಎಲ್ಲರೂ ಕಲಬುರಗಿ ನಗರದಲ್ಲಿ ಕೂಲಿ ಕೆಲಸ ಮಾಡಲು ಬಂದಿದ್ದು, ನಾವು ದುಡಿದ ಹಣದಿಂದ ಮೋಜು ಮಸ್ತಿ ಮಾಡಲು ಮತ್ತು ಮನೆಗೆ ಕಳುಹಿಸಿಕೊಡಲು ಸಾಕಾಗುತ್ತಿಲ್ಲವಾದ್ದರಿಂದ ನಿನ್ನೆ ದಿನಾಂಕ 09-01-2017 ರಂದು ಸಂಜೆ ಸಮಯದಲ್ಲಿ  ನಾವೆಲ್ಲರೂ ರಾಮ ಮಂದಿರ ರಿಂಗ ರೋಡ ಕ್ರಾಸನಲ್ಲಿ ಮಾತಾಡಿಕೊಂಡಂತೆ ಇಂದು ದಿನಾಂಕ 10-01-2017 ರಂದು ಬೆಳಗಿನ ಜಾವ 03-00 ಗಂಟೆ ಸುಮಾರಿಗೆ ಎಲ್ಲರೂ ರಾಮ ಮಂದಿರ ರಿಂಗ ರೋಡ ಕ್ರಾಸನಲ್ಲಿ ಎಲ್ಲರೂ ಸೇರಿಕೊಂಡು ದಾರಿಗೆ ಹೊರಟ ಯಾವುದೋ ಲಾರಿಯಲ್ಲಿ ಕುಳಿತುಕೊಂಡು ಅಫಜಲಪೂರ ರೋಡಿನ ಶರಣಸಿರಸಗಿ ಸೀಮಾಂತರದ ಹೊರ ವಲಯದಲ್ಲಿ ಇರುವ ನಾಗಲಿಂಗೇಶ್ವರ ಗುಡಿಯ  ಹಿಂದುಗಡೆ ಮರೆಯಲ್ಲಿ ನಿಂತು ಸದರಿ ರೋಡಿಗೆ ಹೋಗಿ ಬರುವ ವಾಹನ ಸವಾರರಿಗೆ ಹಗ್ಗ ಸಹಾಯದಿಂದ ಅಡ್ಡಗಟ್ಟಿ ನಿಲ್ಲಿಸಿ ಚಾಕು ಮತ್ತು ರಾಡು, ಬಡಿಗೆ ತೋರಿಸಿ ಅವರಲ್ಲಿರುವ ಬಂಗಾರ ಮತ್ತು ಹಣ ಮೋಬೈಯಿಲ್ ದರೋಡೆ ಮಾಡಿಕೊಂಡು ಓಡಿ ಹೋಗಬೇಕೆಂದು ದರೋಡೆ ಮಾಡಲು ಹೊಂಚು ಹಾಕುತ್ತಾ ನಿಂತಿರುವಾಗ ತಾವುಗಳು ಬಂದು ನಮ್ಮಗೇ ಹಿಡಿದುಕೊಂಡಿರುವಿರಿ ಅಂತಾ ತಿಳಿಸಿರುತ್ತಾರೆ ಅಂತಾ ಶ್ರೀ ವಾಜೀದ ಪಟೇಲ ಸಿ,ಪಿ,ಐ, ಗ್ರಾಮೀಣ ವೃತ್ತ ರವರು  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗ್ರಾಮೀಣ ಠಾಣೆ : ಶ್ರೀ ಚಂದ್ರಶೇಖರ ಪಿ.ಎಸ್.ಐ (ಕಾ.ಸೂ)  ಗ್ರಾಮೀಣ ಪೊಲೀಸ್ ಠಾಣೆ ಕಲಬುರಗಿ ರವರು ಸಿಬ್ಬಂದಿಯೊಂದಿಗೆ ದಿನಾಂಕ  09-01-2018 ರಂದು ರಾತ್ರಿ 12-00 ಗಂಟೆಯಿಂದ ಬೆಳಗಿನ 05-00 ಗಂಟೆಯವರೆಗೆ ಠಾಣಾ ಸರಹದ್ದಿನಲ್ಲಿ ವಿಶೇಷ ರಾತ್ರಿ ಗಸ್ತು ಕರ್ತವ್ಯದಲ್ಲಿದ್ದಾಗ  ಬೆಳಗಿನ ಜಾವ 04-30 ಗಂಟೆಗೆ ಆಳಂದ ಚೆಕ್ಕ ಪೋಸ್ಟ ಸರ್ಕಲನಲ್ಲಿ ಬಂದಾಗ ನನಗೆ  ಮಾಹಿತಿ ಬಂದಿದ್ದೇನೆಂದರೆ, ನಮ್ಮ ಗ್ರಾಮೀಣ ಪೊಲೀಸ್ ಠಾಣೆ ಹದ್ದಯಲ್ಲಿ ಬರುವ ಹತಗುಂದಾ ಕ್ರಾಸ ರೋಡಿನ ಬದಿಯಲ್ಲಿ ಕೆಲವು ಜನರು ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಮಾರಾಕಾಸ್ತ್ರಗಳನ್ನು ಹಿಡಿದುಕೊಂಡು ರೋಡಿಗೆ ಹೋಗಿ ಬರುವ ವಾಹನ ಸವಾರರಿಗೆ ನಿಲ್ಲಿಸಿ ದರೋಡೆ ಮಾಡಲು ಹೊಂಚು ಹಾಕುತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಮಾನ್ಯ ಎಸ್.ಪಿ.ಸಾಹೇಬ ಕಲಬುರಗಿ, ಮಾನ್ಯ ಅಪರ ಎಸ್.ಪಿ.ಸಾಹೇಬ ಕಲಬುರಗಿ, ಮಾನ್ಯ ಡಿ.ಎಸ್.ಪಿ. (ಗ್ರಾ) ಉಪವಿಭಾಗ ಕಲಬುರಗಕ ಮಾನ್ಯ ಸಿಪಿಐ ಗ್ರಾಮೀಣ ವೃತ್ತ ಕಲಬುರಗಿ ರವರ ಮಾರ್ಗದರ್ಶನದಲ್ಲಿ ದಾಳಿ ಕುರಿತು  ಸಿಬ್ಬಂದಿ ಮತ್ತು ಪಂಚರೊಂದಿಗೆ ಬೆಳಗಿನ 05-30 ಗಂಟೆ ಸುಮಾರಿಗೆ ಕೆರಿಭೋಸಗಾ ಕ್ರಾಸ, ಪಟ್ಟಣ ಕ್ರಾಸ ಮುಖಾಂತರವಾಗಿ   ಹತಗುಂದಾ ಕ್ರಾಸ್ ಇನ್ನೂ ಸ್ವಲ್ಪ ಮುಂದೆ ಇರುವಂತೆ ಜೀಪು ನಿಲ್ಲಿಸಿ ಎಲ್ಲರೂ ಜೀಪಿನಿಂದ ಇಳಿದು ನಡೆದುಕೊಂಡು,ಹತಗುಂದಾ ಕ್ರಾಸ ಎದುರುಗಡೆ ಇರುವ  ಪಟ್ಟಣ ಮತ್ತು ಯಳವಂತಗಿ (ಕೆ) ರೋಡಿನ ಎದುರುಗಡೆ ಇರುವ ಮಂಜುನಾಥ ಮತ್ತಿಮೂಡ ಹೊಲದ ಗಿಡಗಂಟಿಗಳ ಮರೆಯಲ್ಲಿ ನಿಂತು ನೋಡಲಾಗಿ ಹತಗುಂದಾ ಗ್ರಾಮಕ್ಕೆ ಹೋಗುವ ಕ್ರಾಸ ರೋಡಿನ ಪಶ್ಚಿಮ ದಿಕ್ಕಿನ ಗಿಡ ಗಂಟಿಗಳ ಮರೆಯಲ್ಲಿ 08 ಜನರು ನಿಂತಿದ್ದು ಅವರೆಲ್ಲರೂ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ತಮ್ಮ ತಮ್ಮ ಕೈಯಲ್ಲಿ ಚಾಕು, ಬಡಿಗೆ, ರಾಡು, ಹಗ್ಗಾ, ಖಾರದ ಪುಡಿ ಹಿಡಿದುಕೊಂಡು ನಿಂತಿದ್ದನ್ನು ಜೊತೆಯಲ್ಲಿ ಬಂದಿದ್ದ ಪಂಚರನ್ನು ಮತ್ತು ಸಿಬ್ಬಂದ್ದಿಯವರಿಗೆ ತೋರಿಸಿ ಖಚಿತ ಪಡಿಸಿಕೊಂಡು ದರೋಡೆ ಮಾಡಲು ಹೊಂಚು ಹಾಕುತ್ತಿದ್ದ 08 ಜನರನ್ನು ನನ್ನ ನಿದೆರ್ಶನದಂತೆ ಬೆಳಗಿನ 06-00 ಗಂಟೆಗೆ ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿ ಹಿಡಿಯಲು 08 ಜನರು ಸಿಕ್ಕಿ ಬಿದ್ದಿದ್ದು. ಸದರಿ 08 ಜನರು ಮುಖಕ್ಕೆ ಕಟ್ಟಿಕೊಂಡ ಬಟ್ಟೆ ತೆಗೆಯಿಸಿ ಅವರ ಹೆಸರು ವಿಳಾಸ ವಿಚಾರಿಸಲು ಅವರಲ್ಲಿ ಒಬ್ಬನು ತನ್ನ ಹೆಸರು 1) ಚಂದಪ್ಪ ತಂದೆ ಬಸಣ್ಣ ಪರೀಟ್ ಸಾ|| ಕರಜಗಿ ತಾ|| ಅಫಜಲಪೂರ ಜಿಲ್ಲಾ|| ಕಲಬುರಗಿ ಇತನ ಹತ್ತಿರ  ಒಂದು ಚಾಕು ಒಂದು ಮುಖಕ್ಕೆ ಕಟ್ಟಿಕೊಂಡ ಬಟ್ಟೆ ದೊರೆಯಿತು. 2) ತಿಮ್ಮಣ್ಣ ತಂದೆ ಲಕ್ಷ್ಮಣ ಗಾಡಿ ವಡ್ಡರ ಸಾ|| ಬಸವೇಶ್ವರ ಚೌಕ್ ಘತ್ತರಗಾ ಕಮನ್ ಹತ್ತಿರ ಅಫಜಲಪೂರ ಜಿಲ್ಲಾ|| ಕಲಬುರಗಿ ಇತನ ಹತ್ತಿರ ಒಂದು ಖಾರದ ಪುಡಿ ಒಂದು ಮುಖಕ್ಕೆ ಕಟ್ಟಿಕೊಂಡ ಬಟ್ಟೆ ದೊರೆಯಿತು. 3) ಲಕ್ಷ್ಮಣ ತಂದೆ ಗಿಡ್ಡಪ್ಪ ಗಾಡಿ ವಡ್ಡರ ಸಾ|| ಬಸವೇಶ್ವರ ಚೌಜ್ ಘತ್ತರಗಾ ಕಮನ್ ಹತ್ತಿರ ಅಫಜಲಪೂರ ಜಿಲ್ಲಾ|| ಕಲಬುರಗಿ ಇತನ ಹತ್ತಿರ,  20 ಫೀಟನ ಹಗ್ಗ, ಒಂದು ಮುಖಕ್ಕೆ ಕಟ್ಟಿಕೊಂಡ ಬಟ್ಟೆ 4) ಭಿಮಶ್ಯಾ ತಂದೆ ಗೋವಿಂದಪ್ಪ ನಿಂಬಾಳ್ಕರ್ ಸಾ|| ನಿಂಬರ್ಗಾ ತಾ|| ಆಳಂದ ಜಿಲ್ಲಾ|| ಕಲಬುರಗಿ ಇತನ ಹತ್ತಿರ  ಒಂದು ಚಾಕು, ಒಂದು ಮುಖಕ್ಕೆ ಕಟ್ಟಿಕೊಂಡ ಬಟ್ಟೆ 5) ಹೈದರ್ ಸಾಬ್ ತಂದೆ ಲಾಡ್ಲೇ ಸಾಬ್ ಲದಾಫ್ ಸಾ|| ನಿಂಬರ್ಗಾ ತಾ|| ಆಳಂದ ಜಿಲ್ಲಾ|| ಕಲಬುರಗಿ ಇತನ ಹತ್ತಿರ  ಒಂದು ಕಬ್ಬಿಣದ ರಾಡು , ಒಂದು ಮುಖಕ್ಕೆ ಕಟ್ಟಿಕೊಂಡ ಬಟ್ಟೆ ದೊರೆಯಿತು. 6) ಗೋವಿಂದಪ್ಪ ತಂದೆ ದುರ್ಗಪ್ಪ ಪೀರಾಜಿ ಸಾ|| ನಿಂಬರ್ಗಾ ತಾ|| ಆಳಂದ ಜಿಲ್ಲಾ|| ಕಲಬುರಗಿ ಇತನ ಹತ್ತಿರ  ಒಂದು ಬಡಿಗೆ, ಒಂದು ಮುಖಕ್ಕೆ ಕಟ್ಟಿಕೊಂಡ ಬಟ್ಟೆ ದೊರೆಯಿತು. 7) ರಾಮಣ್ಣ ತಂದೆ ಭಿಮಶ್ಯಾ ಧೋತರೆ ಸಾ|| ನಿಂಬರ್ಗಾ ತಾ|| ಆಳಂದ ಜಿಲ್ಲಾ|| ಕಲಬುರಗಿ ಇತನ ಹತ್ತಿರ  ಒಂದು ಕಬ್ಬಿಣದ ರಾಡು,  ಒಂದು ಮುಖಕ್ಕೆ ಕಟ್ಟಿಕೊಂಡ ಬಟ್ಟೆ ದೊರೆಯಿತು. 8)ಗಜಾನಂದ ತಂದೆ ಪುಂಡಲಿಕ ಮಾನೆ ಸಾ|| ಬಟ್ಟರಗಾ  ತಾ|| ಆಳಂದ ಜಿಲ್ಲಾ|| ಕಲಬುರಗಿ ಇತನ ಹತ್ತಿರ  ಒಂದು ಖಾರದ ಪಾಕೇಟ್, ಒಂದು ಮುಖಕ್ಕೆ ಕಟ್ಟಿಕೊಂಡ ಬಟ್ಟೆ ದೊರೆಯಿತು. ಆಗ ಸದರಿಯವರಿಗೆ ನೀವು 08 ಜನರು ಇಲ್ಲಿ ಯಾಕೇ ನಿಂತಿದ್ದಿರಿ ಅಂತಾ ವಿಚಾರಿಸಲು ಸಿಕ್ಕಿ ಬಿದ್ದ  ಎಲ್ಲರೂ ನಿನ್ನೆ ದಿನಾಂಕ 08-01-2018 ರಂದು ಸಂಜೆ ಸಮಯದಲ್ಲಿ  ನಾವೆಲ್ಲರೂ ಕಲಬುರಗಿ ಕೇಂದ್ರ ಬಸನಿಲ್ದಾಣದಲ್ಲಿ ಮಾತಾಡಿಕೊಂಡಂತೆ ಇಂದು ದಿನಾಂಕ 09-01-2017 ರಂದು ಬೆಳಗಿನ ಜಾವ 03-00 ಗಂಟೆ ಸುಮಾರಿಗೆ ಪಟ್ಟಣ ಕ್ರಾಸನಲ್ಲಿ ಎಲ್ಲರೂ ಸೇರಿಕೊಂಡು ಟಂಟಂ ಕೆಎ 32 A- 8941  ನೇದ್ದರಲ್ಲಿ ಕುಳಿತುಕೊಂಡು ಹತಗುಂದಾ ಕ್ರಾಸಿಗೆ ಬಂದು, ಸ್ವಲ್ಪ ದೂರದಲ್ಲಿ ನಾವು ತಂದಿದ್ದ ಟಂಟಂ ನಿಲ್ಲಿಸಿ, ಸದರ ಕ್ರಾಸನಲ್ಲಿ ಇರುವ  ಗಿಡಗಂಟಿಗಳ ಮರೆಯಲ್ಲಿ ನಿಂತು ಸದರಿ ರೋಡಿಗೆ ಹೋಗಿ ಬರುವ ವಾಹನ ಸವಾರರಿಗೆ ಹಗ್ಗ ಸಹಾಯದಿಂದ ಅಡ್ಡಗಟ್ಟಿ ನಿಲ್ಲಿಸಿ ಚಾಕು ಮತ್ತು ರಾಡು, ಬಡಿಗೆ ತೋರಿಸಿ ಅವರಲ್ಲಿರುವ ಬಂಗಾರ ಮತ್ತು ಹಣ ಮೋಬೈಯಿಲ್ ದರೋಡೆ ಮಾಡಿಕೊಂಡು ನಾವು ತಂದಿದ್ದ ಟಂಟಂನಲ್ಲಿ ಓಡಿ ಹೋಗಬೇಕೆಂದು ದರೋಡೆ ಮಾಡಲು ಹೊಂಚು ಹಾಕುತ್ತಾ ನಿಂತಿರುವಾಗ ತಾವುಗಳು ಬಂದು ನಮಗೆ ಹಿಡಿದುಕೊಂಡಿರುವಿರಿ ಅಂತಾ ತಿಳಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ಯಲ್ಲಾಲಿಂಗ ತಂದೆ ಬಾಳಪ್ಪ ಕಾಳೆ ಸಾ||ಉಡಚಣ ಹಟ್ಟಿ ರವರು  ದಿನಾಂಕ 08/11/2017 ರಂದು ರಾತ್ರಿ  ಮನೆಯಲಿದ್ದಾಗ ನಮ್ಮ ಗ್ರಾಮದ ರಮೇಶ ತಂದೆ ಸಿದ್ದು ರುತ್ನೂರ ರವರು ನನ್ನ ಮೋಬೈಲಗೆ ಕರೆ ಮಾಡಿ ತಿಳಿಸಿದ್ದೆನೆಂದರೆ ನಾನು ಹಾಗು ಹಣಮಂತ ತಂದೆ ಸದಾಶಿವ ಸೆಂಡಗೆ ಇಬ್ಬರು ನಮ್ಮ ಮೋಟಾರ್ ಸೈಕಲ್ ಮೇಲೆ ನಮ್ಮ ಗ್ರಾಮಕ್ಕೆ ಬರುತಿದ್ದಾಗ ನಮ್ಮ ಮುಂದೆ ನಿಮ್ಮ ತಂದೆ ಭಾಳಪ್ಪ ಹಾಗು ಭೀರಣ್ಣ ಸಿಂದೆ ಇಬ್ಬರು ನಿಮ್ಮ ಮೋಟಾರ ಸೈಕಲ್ ನಂ ಕೆಎ-32 ಇಜೆ-5670 ನೇದ್ದರ ಮೇಲೆ ಹೊಲದಿಂದ ಮನೆಗೆ ಹೋಗುತಿದ್ದರು ನಮ್ಮ ಗ್ರಾಮದ ಸಂಜಯ ತಂದೆ ಮಚೆಂದ್ರ ಸಂಜವಾಡ ರವರ ಹೊಲದ ಹತ್ತಿರ ಮುಖ್ಯ ರಸ್ತೆ  ಮೇಲೆ ಎದುರಿನಿಂದ ಒಬ್ಬ ಮೋಟಾರ್ ಸೈಕಲ್ ಸವಾರನು ತನ್ನ ಮೋಟಾರ್ ಸೈಕಲ್ ನ್ನು ಅತಿವೇಗ ಹಾಗು ನಿಸ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ನಮ್ಮ ಮುಂದೆ ಹೋಗುತಿದ್ದ ನಿಮ್ಮ ತಂದೆಯವರ ಮೋಟಾರ ಸೈಕಲ್ ಗೆ ಡಿಕ್ಕಿ ಪಡಿಸಿದ್ದರಿಂದ ನಿಮ್ಮ ತಂದೆ ಹಾಗು ಭೀರಣ್ಣ ಇಬ್ಬರು ರೋಡಿನ ಬಾಜು ಟೆಗ್ಗಿನಲ್ಲಿ ಬಿದ್ದು ಭಾರಿ ಗಾಯ ಹೊಂದಿರುತ್ತಾರೆ ನೀವು ಬನ್ನಿ ಅಂತ ತಿಳಿಸಿದ ಬಳಿಕ ನಾನು ಹಾಗು ನಮ್ಮ ಕಾಕನಾದ ಸಿದ್ದಣ್ಣ ತಂದೆ ಭೀಮಶ್ಯಾ ಕಾಳೆ ಇಬ್ಬರು ಒಂದು ಖಾಸಗಿ ವಾಹನ ತಗೆದುಕೊಂಡು ಸ್ಥಳಕ್ಕೆ  ಹೋಗಿ ನೋಡಲಾಗಿ ನಮ್ಮ ತಂದೆಗೆ ತಲೆಗೆ ಭಾರಿ ರಕ್ತಗಾಯವಾಗಿ ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲಾ ಮೈ ಕೈಗಳಿಗೆ ತರಚಿದ ರಕ್ತಗಾಯಗಳಾಗಿರುತ್ತವೆ ಭೀರಣ್ಣ ರವರಿಗೆ ತಲೆಗೆ ರಕ್ತಗಾಯ ಬಲ ಮೋಳಕಾಲಿಗೆ ರಕ್ತಗಾಯವಾಗಿದ್ದು  ಇರುತ್ತದೆ ಸದರಿ ಡಿಕ್ಕಿ ಪಡಿಸಿದ ಸವಾರನು ತನ್ನ ಮೋಟಾರ ಸೈಕಲ್  ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿದ್ದು ಸದರಿ ಮೋಟಾರ್ ಸೈಕಲ್ ನಂಬರ ನೋಡಲಾಗಿ ಎಮ್ ಹೆಚ್ 13 ಸಿಆರ್ 1176 ಅಂತ ಇರುತ್ತದೆ. ನಂತರ ನಾವೇಲ್ಲರು ಸದರಿ ಘಟನೆಯಲ್ಲಿ ಗಾಯ ಹೊಂದಿದ ನಮ್ಮ ತಂದೆ ಹಾಗು ಭೀರಣ್ಣ  ಇಬ್ಬರಿಗೂ  ಖಾಸಗಿ ವಾಹನದಲ್ಲಿ ಹಾಕಿಕೊಂಡು ಸೋಲಾಪೂರದ GANGAMAI ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿರುತ್ತೇವೆ. ನಮ್ಮ ತಂದೆ ಇನ್ನೂ ಚಿಕಿತ್ಸೆ ಪಡೆಯುತಿದ್ದಾರೆ. ಅಪಘಾತ ಪಡಿಸಿದ ಮೋಟಾರ್ ಸೈಕಲ್ ನಂ ಎಮ್ ಹೆಚ್ 13 ಸಿಆರ್ 1176 ನೇದ್ದರ ಸವಾರನಾದ ಅಶೋಕ ತಂದೆ ಸೊನೆಬಾಪು ಪಾಟೀಲ ಸಾ||ರಾಜುರ ತಾ||ದಕ್ಷಿಣ ಸೊಲಾಪೂರ ಜಿ||ಸೋಲಾಪೂರ ಈತನು ತನ್ನ ಮೋಟಾರ್ ಸೈಕಲ್ ಅತಿವೇಗ ಹಾಗು ನಿಸ್ಕಾಳಜಿತನದಿಂದ  ಚಲಾಯಿಸಿ ನಮ್ಮ ತಂದೆ ಹಾಗು ಭೀರಣ್ಣ ರವರು ಬರುತಿದ್ದ ನಮ್ಮ  ಮೋಟಾರ್ ಸೈಕಲಗೆ ಡಿಕ್ಕಿ ಪಡಿಸಿ  ನಮ್ಮ ತಂದೆ ಹಾಗು ಭಿರಣ್ಣ ರವರಿಗೆ ಭಾರಿ ರಕ್ತಗಾಯ ಪಡಿಸಿದ ಸವಾರನ ಮೇಲೆ ಕಾನೂನಿನ ಕ್ರಮ ಜರುಗಿಸಬೇಕು  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

08 January 2018

KALABURAGI DISTRICT CRIME REPORTS.

ಗ್ರಾಮೀಣ ಠಾಣೆ ಕಲಬುರಗಿ  : ದಿನಾಂಕ:- 08/01/2017 ರಂದು ಬೆಳಿಗ್ಗೆ 07:30 ಗಂಟಗೆ ಫಿರ್ಯಾದಿ ಶ್ರೀ ದಿಗಂಬರ ತಂದೆ ಹರಿಶ್ಚಂದ್ರ ಸಿಂದೇ ಸಾ:ಗೌರಿ ಶಂಕರ ಸೋಸೈಟಿ ಬಾಬಳಗಾಂವ ಆರ್.ಟಿ.ಓ ಆಫೀಸ ಹತ್ತಿರ ಲಾತೂರ ಮಹಾರಾಷ್ಟ್ರ ಇತನು ಪೊಲೀಸ ಠಾಣೆಗೆ ಹಾಜರಾಗಿ ಒಂದು ಹೇಳಿಕೆ ಫಿರ್ಯಾದಿ ಕಂಪ್ಯೂಟರನಲ್ಲಿ ಬೆರಳಚ್ಚು ಮಾಡಿಸಿದ್ದು ಸದರಿ ಫಿರ್ಯಾದಿ ಹೇಳಿಕೆ ಸಾರಾಂಶವೆನೆಂದರೆ ನನಗೆ ಮಾಯಾ ಎಂಬ ಹೆಂಡತಿ ಇದ್ದು ಅವಳ ಹೊಟ್ಟೆಯಿಂದ ಅಶ್ವಿನಿ ಎಂಬ ಹೆಣ್ಣು ಮಗಳಿದ್ದು ಅವಳು ಅಂದಾಜು 20 ವರ್ಷಗಳ ಹಿಂದೆ ತೀರಿಕೊಂಡಿದ್ದು ತದನಂತರ  2-3 ವರ್ಷಗಳ ಮೇಲೆ ನಾನು ನಮ್ಮ ಜಾತಿಯವರೆ ಆದ ಸತ್ಯಭಾಮಾ ಎಂಬವಳೊಂದಿಗೆ ಪ್ರೀತಿಸಿದ್ದು ಅವಳಿಗೆ ಮೊದಲು ರಾಮ ಎಂಬುವನೊಂದಿಗೆ ಲಗ್ನವಾಗಿ ಶರದ ಮತ್ತು ಯುವರಾಜ ಎಂಬ ಎರಡು ಜನ ಗಂಡು ಮಕ್ಕಳಿದ್ದು ಅವಳು ಗಂಡನಿಗೆ ಬಿಟ್ಟು ನನ್ನೊಂದಿಗೆ ಈ ಮಕ್ಕಳೊಂದಿಗೆ ಉಳಿದುಕೊಂಡಿದ್ದು ಅಂದಿನಿಂದ ನಾವು ಗಂಡ ಹೆಂಡತಿಯರಾಗಿ ಮತ್ತು ಈ ಮಕ್ಕಳನ್ನು ಕೂಡಾ ನನ್ನ ಮಕ್ಕಳಂತೆ ನೋಡಿಕೊಂಡು ಬರುತ್ತಿರುತ್ತೇನೆ. ಲಾತೂರಿನ ಟಿ.ಎಂ.ಸಿ ಟ್ರಾನ್ಸಪೊರ್ಟದ ಲಾರಿ ನಂ MH-24 AB-9263 ನೆದ್ದರ ಮೇಲೆ ಡೈವರ್ ಅಂತಾ ಕೆಲಸ ಮಾಡಿಕೊಂಡಿರುತ್ತೇನೆ. ನಿನ್ನೆ ದಿನಾಂಕ:- 07/01/2018 ರಂದು  ಮಹಾರಾಷ್ಟ್ರದ ನಗರದ ಜಿಲ್ಲೆಯಲ್ಲಿ ಈ ಲಾರಿಯಲ್ಲಿದ್ದ ಸಿಮೆಂಟ ಲೋಡನ್ನು ಖಾಲಿ ಮಾಡಿ ಅಲ್ಲಿಂದ ಮದ್ಯಾಹ್ನದ ನಂತರ ನಾನು ಮತ್ತು ನನ್ನ ಸಾಕು ಮಗ ಯುವರಾಜ ವಯ:20 ವರ್ಷ ಇಬ್ಬರು ಅಲ್ಲಿಂದ ಬಿಟ್ಟು ಚಿತ್ತಾಪೂರದ ಸಿಮೆಂಟ ಕಾರ್ಖಾನೆಗೆ ಬರುವ ಕುರಿತು ಹೊರಟಿದ್ದು ಮಗ ಯುವರಾಜ ಇತನು ಲಾರಿಯನ್ನು ನಡೆಸಿಕೊಂಡು ಬರುತ್ತಿದ್ದು ಇಂದು ದಿನಾಂಕ:- 08/01/2018 ರಂದು ಬೆಳಗಿನ ಜಾವ 04:00 ಗಂಟೆ ಸುಮಾರಿಗೆ ಕಲಬುರಗಿ-ಆಳಂದ ರೋಡಿನ ಪಟ್ಟಣ ಗ್ರಾಮದ ಟೋಲ ನಾಕಾ ಹತ್ತಿರ ಬಂದಾಗ ಮಗನು ನನಗೆ ಎಬ್ಬಿಸಿ ಲಾರಿಯನ್ನು ನನಗೆ ನಡೆಸುವಂತೆ ಹೇಳಿದ್ದು ನಾನು ಲಾರಿಯನ್ನು ಟೋಲ ನಾಕಾ ಪಾಸ್ ಮಾಡಿ ಸ್ವಲ್ಪ ಅಂತರದಲ್ಲಿ 04:15 ಗಂಟೆ ಸುಮಾರಿಗೆ ಸಂಡಾಸ ಬರುತ್ತಿರುವುದ್ದರಿಂದ್ದ ರೋಡಿನ ಬದಿಯಲ್ಲಿ ಲಾರಿಯನ್ನು ನಿಲ್ಲಿಸಿ ನಾನು ಸಂಡಾಸಕ್ಕೆ ರೋಡಿನ ಬದಿಯಲ್ಲಿಯೇ ಕುಳಿತುಕೊಳ್ಳುವಾಗ ಮಗನು ಲಾರಿಯಲ್ಲಿಯೇ ಮಲಗಿಕೊಂಡಿದ್ದನು. ಅಷ್ಟೋತ್ತಿಗೆ ಲಾರಿಯ ಹಿಂದುಗಡೆಯಿಂದ ಇಬ್ಬರು 30-35 ವರ್ಷದ ವಯಸ್ಸಿನ ಗಂಡು ಮಕ್ಕಳು ಬಂದವರೇ ನನಗೆ ಒಮ್ಮಲೇ ಮುಖಕ್ಕೆ ಒತ್ತಿ ಹಿಡಿದು ರೋಡಿನ ತಗ್ಗಿನಲ್ಲಿ ಕರೆದುಕೊಂಡು ಹೋಗುವಾಗ ನಾನು ಅದರಿಂದ ಭಯಗೊಂಡು ಚೀರಾಡಿದಾಗ ಈ ಶಬ್ದವನ್ನು ನನ್ನ ಮಗ ಕೇಳಿ ಲಾರಿಯಿಂದ ಇಳಿದು ನಮ್ಮ ಹತ್ತಿರ ಬಂದವನೇ ಹಾಗೆಯೇ ನಾನು ಚೀರಾಡುವಾಗ ಅವರಿಗೆ ಮಗ ಬೀಡುವಂತೆ ಒಂದು ಏಟು ಅವರಲ್ಲಿ ಒಬ್ಬನ ಮುಖಕ್ಕೆ ಹೊಡೆದಿದ್ದರಿಂದ್ದ ಅವರು ಒಮ್ಮಲೇ ನನಗೆ ಮತ್ತು ಮಗನಿಗೆ ನೂಕಿಸಿಕೊಟ್ಟಂತೆ ಮಾಡಿ ಒಬ್ಬನು ತನ್ನಲ್ಲಿರುವ ಹರಿತವಾದ ಚಾಕುವಿನಿಂದ ಮಗನ ಕುತ್ತಿಗೆಯ ಬಲಬದಿಗೆ ಜೋರಾಗಿ ಹೊಡೆದಿದ್ದರಿಂದ್ದ ಮಗನು ಚೀರಾಡುತ್ತಾ ನೆಲಕ್ಕೆ ಬಿದ್ದನು ನೋಡಲಾಗಿ ಭಾರಿ ಪ್ರಮಾಣದ ರಕ್ತಗಾಯವಾಗಿ ಕಾಲು ತಿಕ್ಕುತ್ತಿದ್ದಾಗ ಅವರಿಬ್ಬರು ಅಲ್ಲಿಂದ ಓಡಿ ಹೋದರು ಇದರಿಂದ್ದ ನಾನು ಚೀರಾಡುತ್ತಾ ಟೋಲ ನಾಕಾದ ಕಡೆಗೆ ಓಡುತ್ತಾ ಹೋಗಿ ಟೋಲ ನಾಕಾದ ಮಾನ್ಯೇಜರ್ ಹಾಗು ಇನ್ನು ಇಬ್ಬರನ್ನು ಕರೆದುಕೊಂಡು ಬರುವಷ್ಟ್ರರಲ್ಲಿ ಮಗನು ಭಾರಿ ರಕ್ತಸ್ರಾವವಾಗಿ ಕೊಲೆ ಆಗಿ ಬಿದ್ದಿದ್ದನು.ಈ ಘಟನೆಯು 04:15 ಎ.ಎಂದಿಂದ 04:20 ಎ.ಎಂದ ಸುಮಾರಿಗೆ ಸಂಭವಿಸಿರುತ್ತದೆ. ಅವರನ್ನು ಮತ್ತೆ ನೋಡಿದಲ್ಲಿ ಗುರ್ತಿಸುತ್ತೇನೆ.  ಕಾರಣ ಯಾರೋ ಇಬ್ಬರು ಗಂಡು ಮನುಷ್ಯರು ಅಂದಾಜು 30-35 ವರ್ಷ ವಯಸ್ಸಿನವರು ನನ್ನ ಹತ್ತಿರ ಬಂದು ಒತ್ತಿ ಹಿಡಿದುಕೊಂಡು ಜಗ್ಗಿಕೊಂಡು ಹೋಗುವಾಗ ಮಗನು ಬೀಡಿಸಲು ಬಂದಾಗ ಹರಿತವಾದ ಚಾಕುವಿನಿಂದ ಯಾವುದೋ ಬಲವಾದ ಉದ್ದೇಶಕ್ಕಾಗಿ ಮಗನ ಬಲಭಾಗದ ಕುತ್ತಿಗಿಗೆ ಚುಚ್ಚಿ ಭಾರಿ ಗಾಯಗೊಳಿಸಿ ಕೊಲೆ ಮಾಡಿ ಪರಾರಿ ಆಗಿದ್ದು ಅವರನ್ನು ಪತ್ತೆ ಮಾಡಿ ಕಾನೂನು ಪ್ರಕಾರ ಕ್ರಮ ಕೈಕೊಳ್ಳಬೇಕು ಅಂತಾ ವಗೈರೇ ಫಿರ್ಯಾದಿ ಹೇಳಿಕೆ ಸಾರಾಂಶದ ಗುನ್ನೆ ದಾಖಲಿಸಿಕೊಂಡು ಬಗ್ಗೆ ವರದಿ.

07 January 2018

KALABURAGI DISTRICT CRIME REPORTS.

UÁæ«ÄÃt oÁuÉ : ದಿನಾಂಕ 06/01/2018 ರಂದು ಬೆಳಿಗ್ಗೆ 09-00 ಗಂಟೆ ಸುಮಾರಿಗೆ  ನಿನ್ನೆ ರಾತ್ರಿ ನನಗೆ ಹೊಡೆ ಬಡೆ ಮಾಡಿದ ವಿಷಯ ನನ್ನ ತಂದೆ, ತಾಯಿ ಅಣ್ಣಂದಿರರಿಗೆ ಪೋನ ಮಾಡಿ ತಿಳಿಸಿದಾಗ, ಇಂದು ಬೆಳಿಗ್ಗೆ 11-00 ಗಂಟೆ ಸುಮಾರಿಗೆ ನನ್ನ ಅಣ್ಣ ಹಬೀಬ, ಮಹೆಬೂಬ, ಅವರ ಗೆಳೆಯ ನವೀದ ತಂದೆ ಸಾಲಾರ ಪಟೇಲ ಇವರೊಂದಿಗೆ ನಮ್ಮ ಮನೆಗೆ ಬಂದು ನನ್ನ ಗಂಡನಿಗೆ ಯಾಕೇ ನಮ್ಮ ತಂಗಿ ವರದಕ್ಷಿಣೆ ರೂಪದಲ್ಲಿ ಹಣ ತೆಗೆದುಕೊಂಡು ಬಾ ಅಂತಾ ಪದೇ, ಪದೇ ಯಾಕೇ ಹೊಡೆಯುತ್ತೀದ್ದಿ  ಅಂತಾ ಕೇಳಲು ಆಗ ನನ್ನ ಗಂಡ ಸಿಟ್ಟಿಗೆ ಬಂದು ನನಗೆ ಹೊಡೆಯಲು ಮೈ ಮೇಲೆ ಬಂದಾಗ ಇದನ್ನು ನೋಡಿ ನನ್ನ ಅಣ್ಣ ಹಬೀಬ ಮತ್ತು ಮಹೆಬೂಬ ಇವರು ನನಗೆ ಹೊಡೆಯುವುದನ್ನು ತಡೆಯಲು ಬಂದಾಗ ಆಗ ನನ್ನ ಗಂಡ ವಾಜೀದ ಅಲಿ ಇತನು ಮನೆಯಲ್ಲಿದ್ದ ಯಾವುದೋ ಒಂದು ಹರಿತವಾದ ಕಬ್ಬಿಣದಿಂದ ನನ್ನ ಬಲಗೈ ಮುಂಗೈಯ ಮೇಲೆ ಹೊಡೆದು ರಕ್ತಗಾಯಗೊಳಿಸಿದನು. ಅದರಂತೆ ಮತ್ತು ತಮ್ಮ ಮಹೆಬೂಬನಿಗೂ ಕೂಡಾ ಕೈಯಲ್ಲಿದ್ದ ಕಬ್ಬಿಣದಿಂದ  ಎಡಗೈ ಮುಂಗೈಯ ಮೇಲೆ ಹೊಡೆದು ರಕ್ತಗಾಯಗೊಳಿಸಿದನು. ನನ್ನ ಜೊತೆಯಲ್ಲಿ ಬಂದಿದ್ದ ಗೆಳೆಯ ನವೀದ ಇತನು ಮಧ್ಯೆ ಬಂದು ಜಗಳಾ ಬಿಡಿಸಿಕೊಂಡೆನು. ನಂತರ ನನಗೆ ತವರು ಮನೆಯಿಂದ ವರದಕ್ಷಿಣೆ ರೂಪದಲ್ಲಿ ಹಣ ತರದೇ ಇದ್ದರೆ ಮೈಮೇಲೆ ಸೀಮೆ ಎಣ್ಣೆ ಹಾಕಿ ಸುಟ್ಟು ಖಲಾಷ ಮಾಡುತ್ತೇನೆ ಎಂದು ಜೀವ ಭಯ ಹಾಕಿದನು. ಆಗ ನನ್ನ ಅಣ್ಣ ಹಬೀಬ, ಮತ್ತು ಮಹೆಬೂಬ ಇವರು ನನಗೆ ತವರು ಮನೆಗೆ ಕರೆದುಕೊಂಡು ಬಂದರು. ನಂತರ ನನ್ನ ಅಣ್ಣ ಹಬೀಬ ಮತ್ತು ಮಹೆಬೂಬ ಉಪಚಾರ ಕುರಿತು ಜಿಲ್ಲಾ ಸರಕಾರಿ ಆಸ್ಪತ್ರೆ ಕಲಬುರಗಿಗೆ ಹೋಗಿ ತೋರಿಸಿಕೊಂಡು ನಂತರ ಮನೆಗೆ ಬಂದರು. ಈ ವಿಷಯದ ಬಗ್ಗೆ ಮನೆಯಲ್ಲಿ ಚರ್ಚಿಸಿಕೊಂಡು ಸಂಜೆ ಸಮಯದಲ್ಲಿ ಠಾಣೆಗೆ ಬಂದು ದೂರು ಕೊಟ್ಟಿದ್ದು ಈ ಕಾರಣದಿಂದ ದೂರು ಕೊಡಲು ತಡವಾಗಿರುತ್ತದೆ. ತನ್ನ ಗಂಡನ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಕೊಟ್ಟ ಇತ್ಯಾದಿ ಫಿರ್ಯಾದು ಅರ್ಜಿ ಮೇಲಿಂದ ಠಾಣೆ ಗುನ್ನೆ ನಂ. ನಂ.08/2018 ಕಲಂ 498(ಎ),323,324, 504, 506 ಐಪಿಸಿ ಮತ್ತು ಕಲಂ 3 ಮತ್ತು 4 ಡಿ.ಪಿ.ಎಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡ ಬಗ್ಗೆ ವರದಿ.
gÁWÀªÉÃAzÀæ £ÀUÀgÀ oÁuÉ : ದಿನಾಂಕ:06/01/2018 ರಂದು ರಾತ್ರಿ 8.45 ಪಿ.ಎಂಕ್ಕೆ ಪಿ.ಎಸ್‌‌. ಸಾಹೇಬರು 4 ಜನ ಆರೋಪಿತರೊಂದಿಗೆ ಜ್ಞಾಪನ ಪತ್ರ ಹಾಜರ ಪಡಿಸಿದ್ದು ಸದರಿ ಜ್ಞಾಪನ ಪತ್ರದ ಸಾರಾಂಶವೆನೆಂದರೆ, ಇಂದು ದಿನಾಂಕ 06.01.2018 ರಂದು ಸಾಯಂಕಾಲ 5 ಗಂಟೆಯಿಂದ ನಾನು ನಮ್ಮ ಠಾಣೆಯ ಶ್ರೀ ಶಿವಲಿಂಗಪ್ಪ ಹೆಚ್.ಸಿ 06, ಶ್ರೀ ಚನ್ನಮಲ್ಲಪ್ಪ 190, ಶ್ರೀ ಬಂದೇನವಾಜ ಹೆಚ್.ಸಿ 546 ಮತ್ತು ಶ್ರೀ ಶಿವಲಿಂಗ ಪಿಸಿ 1241 ರವರನ್ನು ಸಂಗಡ ಕರೆದುಕೊಂಡು ಠಾಣಾ ವ್ಯಾಪ್ತಿಯಲ್ಲಿ ಪೇಟ್ರೋಲಿಂಗ್ ಕರ್ತವ್ಯ ನಿರ್ವಹಿಸುತ್ತಾ ಸಾಯಂಕಾಲ 6:30 ಗಂಟೆಗೆ ಡಬರಗಾಬಾದ ಕ್ರಾಸ ಹತ್ತಿರ ಇರುವ ದೇವರ ದಾಸಿಮಯ್ಯ ಬಡಾವಣೆಯಲ್ಲಿ ಇದ್ದಾಗ ಖಚಿತ ಬಾತ್ಮಿ ಬಂದಿದ್ದೆನೆಂದರೆ, ಠಾಣಾ ವ್ಯಾಪ್ತಿಯ ರಿಂಗ್ ರೋಡ ಪಕ್ಕದಲ್ಲಿರುವ ಚೊರ ಗುಂಬಜ್ ಹತ್ತಿರ ತಗ್ಗಿನಲ್ಲಿ ಕೆಲವು ಜನರು ದರೋಡೆ ಮಾಡಲು ಹೊಂಚ್ಚು ಹಾಕಿ ಕೂಳಿತಿರುವ ಬಗ್ಗೆ ಖಚಿತ ಬಾತ್ಮಿ ಬಂದಿದ್ದು ಬಾತ್ಮಿಯಂತೆ ದಾಳಿ ಮಾಡಿ ಕ್ರಮ ಕೈಕೊಳ್ಳುವ ಕುರಿತು ಇಬ್ಬರು ಪಂಚರನ್ನು ದಾಳಿ ಕಾಲಕ್ಕೆ ಹಾಜರಿದ್ದು ಜಪ್ತಿ ಪಂಚನಾಮೆಯನ್ನು ಬರೆಯಿಸಿ ಕೂಡಲು ಕೇಳಿಕೊಂಡಿದ್ದು. ಅದಕ್ಕೆ ಉಭಯರು ಒಪ್ಪಿಕೊಂಡಿದ್ದು ನಂತರ ನಾನು, ಪಂಚರು ಮತ್ತು ಸಿಬ್ಬಂದಿಯವರನ್ನು ಕರೆದುಕೊಂಡು ಚೋರ ಗುಬಂಜ ಪಕ್ಕದಲ್ಲಿ ಇರುವ ತಗ್ಗಿನ ಹತ್ತಿರ ಹೊಗುತ್ತಿದ್ದಂತೆ ತಗ್ಗಿನಲ್ಲಿ ಮಾತನಾಡುವ ಶಬ್ದ ಕೇಳಿ ಬರುತ್ತಿದ್ದು ನಂತರ ನಾವು ತಗ್ಗಿನ ಹತ್ತಿರ ಹೋಗಿ ನೋಡಲು ತಗ್ಗಿನಲ್ಲಿ 6 ಜನರು ಗುಂಪಾಗಿ ಕುಳಿತುಕೊಂಡು ದರೋಡೆ ಮಾಡುವ ಕುರಿತು ತಮ್ಮ ತಮ್ಮಲ್ಲಿ ಮಾತನಾಡುತ್ತಿದ್ದು ಕತ್ತಲಲ್ಲಿ ಸದರಿಯವರ ಮುಖ ಚೆಹರೆ ಹೊತ್ತಾಗದಕ್ಕೆ ನಾನು ಮತ್ತು ಸಿಬ್ಬಂದಿಯವರು ನಮ್ಮ ಹತ್ತಿರ ಇದ್ದ ಬ್ಯಾಟರಿ ಬೇಳಕು ತಗ್ಗಿನಲ್ಲಿ ಕುಳಿತವರ ಮೇಲೆ ಹಾಕಿದ್ದು ಅವರ ಮೇಲೆ ಬೇಳಕು ಬಿದ್ದಾಗ ಸದರಿಯವರು ಗಾಬರಿಗೊಂಡು ಓಡಿ ಹೋಗುತ್ತಿದ್ದು ಆಗ ನಾನು ಮತ್ತು ಸಿಬ್ಬಂದಿಯವರು ಸದರಿಯವರ ಮೇಲೆ ದಾಳಿ ಮಾಡಿ ಅವರಲ್ಲಿ ನಾಲ್ಕು ಜನರಿಗೆ ಹಿಡಿದುಕೊಂಡಿದ್ದು ಇನ್ನೂ ಇಬ್ಬರು ಕತ್ತಲಲ್ಲಿ ಓಡಿ ಹೋಗಿದ್ದು ಹಿಡಿದುಕೊಂಡವರಿಗೆ ವಿಚಾರಣೆಗೊಳಪಡಿಸಿದಾಗ ಸದರಿಯವರು ತಮ್ಮ ಹೆಸರು 1. ಹಣಮಂತ ತಂದೆ ರಾಮಲು ಮೇಕ್ಯಾನಿಕ ವಯ: 26 ವರ್ಷ ಉ: ಟೈರ ಪಂಚರ ಅಂಗಡಿ ಜಾತಿ: ಕಬ್ಬಲಿಗೇರ ಸಾ: ದೊಡ್ಡ ಅಗಸಿ ಕೊಳಿವಾಡ ಸೇಡಂ ಅಂತ ಹೇಳಿದ್ದು. ಸದರಿಯವನ ಅಂಗಶೋಧನೆ ಮಾಡಲು ಸದರಿಯವನ ಹತ್ತಿರ ಮುಖಕ್ಕೆ ಕಟ್ಟಿಕೊಳ್ಳುವ ಒಂದು ಕಪ್ಪು ಬಟ್ಟೆ ಮತ್ತು ಒಂದು ಬತಾಯಿ ನಮೂನೆಯ ಚಾಕು ದೊರೆತಿದ್ದು. 2. ಪಾಶ್ಯಾ @ ಅಬ್ದಲು ಪಾಶ್ಯಾ  ತಂದೆ ಮಹೀಬೂಬಸಾಬ ಶೇಖ ವಯ: 26 ವರ್ಷ ಉ: ಚಾಲಕ ಜಾತಿ: ಮುಸ್ಲಿಂ ಸಾ: ಕುಕುಂದಾ ತಾ: ಸೇಡಂ ಜಿ: ಕಲಬುರಗಿ ಇತನ ಹತ್ತಿರ ಸುಮಾರ 20 ಫೀಟ್ ಪ್ಲಾಸ್ಟಿಕ ಹಗ್ಗ ಮತ್ತು ಮುಖಕ್ಕೆ ಕಟ್ಟಿಕೊಳ್ಳುವ ಒಂದು ಕಪ್ಪು ಬಟ್ಟೆ ದೊರೆತಿದ್ದು 3. ಪ್ರಕಾಶ ತಂದೆ ಸುಭಾಷ ಪವಾರ ವಯ: 23 ವರ್ಷ ಉ: ಚಾಲಕ ಜಾತಿ: ಮರಾಠಾ(ಕಂಬಾರ) ಸಾ: ಕುಕುಂದಾ ತಾ:ಸೇಡಂ ಹಾ:ವ: ಈಶ್ವರ ನಗರ ಗಂಜ ಏರಿಯಾ ಸೇಡಂ ಇತನ ಹತ್ತಿರ ಮುಖಕ್ಕೆ ಕಟ್ಟಿಕೊಳ್ಳುವ ಒಂದು ಕಪ್ಪು ಬಟ್ಟೆ ಮತ್ತು ಅಂದಾಜ 200 ಗ್ರಾಂ ಕಾರದ ಪೂಡಿ ದೊರೆತಿದ್ದು ಮತ್ತು 4. ಶರಣು @ ಶರಣಪ್ಪ ತಂದೆ ರೇವಣಸಿದ್ದಪ್ಪ ಮಿನ ಹಾಬಾಳ ವಯ: 23 ವರ್ಷ ಉ: ಒಕ್ಕಲತನ ಜಾತಿ: ಕಬ್ಬಲಿಗೇರ ಸಾ: ಅಗ್ಗಿ ಬಸವೇಶ್ವರ ಕಾಲೋನಿ ಚಿಂಚೋಳ್ಳಿ ರೋಡ ಸೇಡಂ ಇತನ ಹತ್ತಿರ ಮುಖಕ್ಕೆ ಕಟ್ಟಿಕೊಳ್ಳುವ ಒಂದು ಕಪ್ಪು ಬಟ್ಟೆ ಮತ್ತು ಒಂದು ಕಬ್ಬಿಣದ ತಲವಾರ ದೊರೆತಿದ್ದು ಸದರಿಯವರಿಗೆ ಹೆಚ್ಚಿನ ವಿಚಾರಣೆಗೊಳಪಡಿಸಿದಾಗ ಸದರಿಯವರು ತಿಳಿಸಿದ್ದೆನೆಂದರೆ, ರಾತ್ರಿ ವೇಳೆಯಲ್ಲಿ ರಿಂಗ್ ರೋಡ ಮೇಲೆ ಸಂಚರಿಸುವ ವಾಹನ ಸವಾರರಿಗೆ ಹೆದರಿಸಿ ಅವರಿಂದ ಹಣ ಮತ್ತು ಬೆಲೆಬಾಳುವ ವಸ್ತುಗಳನ್ನು ಕಿತ್ತಿಕೊಳ್ಳು ಸಂಬಂದ ಹೊಂಚ್ಚುಹಾಕಿ ಕುಳಿತಿರುವ ಬಗ್ಗೆ ಮತ್ತು ಓಡಿ ಹೊದವರ ಹೆಸರು ತಮಗೆ ಗೊತ್ತಿರುವದಿಲ್ಲ ಅಂತ ತಮ್ಮ ಸ್ವ-ಖುಷಿ ಹೇಳಿಕೆ ನೀಡಿದ್ದು ಇರುತ್ತದೆ ಸದರಿಯವರ ಹತ್ತಿರ ಇದ್ದ ವಸ್ತುಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು ಪಂಚರ ಸಹಿ ಮಾಡಿದ ಚೀಟಿಯನ್ನು ಅಂಟಿಸಿ ನನ್ನ ತಾಬಾಕ್ಕೆ ತೆಗದುಕೊಂಡು ಜಪ್ತಿ ಪಂಚನಾಮೆಯನ್ನು ಕೈಕೊಂಡು ಸದರಿ ನಾಲ್ಕು ಜನ ಆರೋಪಿತರಿಗೆ ದಸ್ತಗಿರ ಮಾಡಿಕೊಂಡು ರಾತ್ರಿ 8:45 ಗಂಟೆಗೆ ಠಾಣೆಗೆ ಹಾಜರಾಗಿದ್ದು ಸದರಿಯವರ ವಿರುದ್ದ ಪ್ರಕರಣ ದಾಖಲು ಮಾಡಿಕೊಂಡ ಬಗ್ಗೆ ವರದಿ.
C¥sÀd®¥ÀÆgÀ oÁuÉ : ದಿನಾಂಕ 06-01-2018 ರಂದು 8:15 ಪಿ ಎಮ್ ಕ್ಕೆ ಹೋನ್ನಪ್ಪ ತಂದೆ ಧರೇಪ್ಪ ಚಾಂದಕವಟೆ ಸಾ|| ಭೋಸಗಾ ಹಾ|| || ಅಫಜಲಪೂರ ಇವರು ಠಾಣೆಗೆ ಹಾಜರಾಗಿ ಹೇಳಿಕೆ ಪಿರ್ಯಾದನ್ನು ನಿಡಿದ್ದು, ಸದರ ದೂರಿನ ಸಾರಾಂಶವೇನೆಂದರೆ ನಾನು ಮೇಲೆ ಹೇಳಿದ ವಿಳಾಸದವನಿದ್ದು ಒಕ್ಕಲುತನದ ಕೆಲಸ ಮಾಡಿಕೊಂಡು ಅಫಜಲಪೂರದ ಹೂಗಾರ ಪ್ಲಾಟನಲ್ಲಿ ಹೆಂಡತಿ ಮಕ್ಕಳೊಂದಿಗೆ ವಾಸವಾಗಿರುತ್ತೇನೆ. ದಿನಾಂಕ 01-01-2018 ರಂದು ಸಾಯಂಕಾಲ 5:00 ಗಂಟೆ ಸುಮಾರಿಗೆ ನಾನು ವಾಕಿಂಗ್ ಕುರಿತು ಅಫಜಲಪೂರ ಪಟ್ಟಣದ ನ್ಯಾಶನಲ್ ಪಂಕ್ಷನ್ ಹಾಲ ಹತ್ತಿರ ನಡೆದುಕೊಂಡು ಹೋಗುತ್ತಿದ್ದಾಗ, 1) ಹಣಮಂತ ಜಮಾದಾರ ಸಾ|| ಬನ್ನೇಟ್ಟಿ 2) ಶಿವಪ್ಪ ಜಮಾದಾರ ಸಾ|| ಬನ್ನೇಟ್ಟಿ 3) ರಾಮಣ್ಣ ಜಮಾದಾರ ಸಾ|| ಶಿವಪೂರ ಮೂರು ಜನರು ಕೂಡಿ ನನ್ನ ಹತ್ತಿರ ಬಂದ ನನ್ನ ಮೈ ಮೇಲೆ ಏರಿ ಬಂದರು, ಆಗ ನಾನು ಸದರಿಯವರಿಗೆ ದಾರು ಕುಡಿದು ಈ ರೀತಿ ಮೈ ಮೇಲೆ ಬಿದ್ದರೆ ಹೇಗೆ ನೋಡಿಕೊಂಡು ಹೋಗಿ ಅಂತಾ ಹೇಳಿದೆನು, ಆಗ ಸದರಿ ಮೂರು ಜನರು ಬೋಸಡಿ ಮಗನೆ ನಮಗೆ ನೋಡಿಕೊಂಡು ಹೋಗು ಅಂತಾ ಹೇಳ್ತಿ ಎಂದು ಅವಾಚ್ಯ ಶಬ್ದಗಳಿಂದ ಬೈದರು, ಆಗ ನಾನು ಸದರಿಯವರಿಗೆ ವಿನಾಕಾರಣ ಯಾಕೆ ಬೈತಿರಿ ಅಂತಾ ಕೇಳಿದಾಗ ಮೂರು ಜನರು ಕೂಡಿ ನನ್ನ ಏದೆಯ ಮೇಲಿನ ಅಂಗಿ ಹಿಡಿದು ಕೈಯಿಂದ ಹೊಡೆದರು, ನಂತರ ಶಿವಪ್ಪ ಮತ್ತು ರಾಮಣ್ಣ ಇಬ್ಬರು ಹಿಡಿದುಕೊಂಡಾಗ ಹಣಮಂತ ಜಮಾದಾರ ಈತನು ಚಪ್ಪಲಿಯಿಂದ ನನ್ನ ತಲೆಯ ಮೇಲೆ ಹೊಡೆದನು, ಮೂರು ಜನರು ಕೂಡಿ ನನಗೆ ಬೈಯುವುದು ಹೊಡೆಯುವುದು ಮಾಡುತ್ತಿದ್ದಾಗ, ಅದೆ ಸಮಯಕ್ಕೆ ಬಂದ ಸಂಗಪ್ಪ ಅಂಜುಟಗಿ ಸಾ|| ಶಿರವಾಳ ಮತ್ತು ರಾಜು ಸಾಲುಟಗಿ ಸಾ|| ಕುರುಬತಳ್ಳಿ ಇಬ್ಬರು ಕೂಡಿ ನನಗೆ ಹೊಡೆಯುವುದನ್ನು ಬಿಡಿಸಿರುತ್ತಾರೆ, ಆಗ ಸದರಿ ಮೂರು ಜನರು ನನಗೆ ರಂಡಿ ಮಗನೆ ನಿನಗೆ ಜೀವ ಸಹಿತ ಬಿಡುವುದಿಲ್ಲ ಮುಂದೆ ನೋಡಿಕೊಳ್ಳುತ್ತೇವೆ ಎಂದು ಜೀವ ಬೇದರಿಕೆ ಹಾಕಿ ಹೋಗಿರುತ್ತಾರೆ. ಸದರಿಯವರು ಹೊಡೆದರಿಂದ ನನ್ನ ಏಡ ಕಿವಿಯ ಹತ್ತಿರ, ತಲೆಯ ಮೇಲೆ, ಹಾಗೂ ಕುತ್ತಿಗೆಗೆ ಗುಪ್ತಗಾಯಗಳು ಮತ್ತು ಬಲಗೈ ಮಣಿಕಟ್ಟಿನ ಹತ್ತಿರ ತರಚಿದ ಗಾಯವಾಗಿರುತ್ತದೆ. ಸದರಿ ವಿಷಯದ ಬಗ್ಗೆ ನಾನು ನಮ್ಮ ಮನೆಯಲ್ಲಿ ವಿಚಾರಿಸಿಕೊಂಡು ಈಗ ತಡವಾಗಿ ದೂರು ನೀಡಲು ಬಂದಿರುತ್ತೇನೆ. ನನಗೆ ಅವಾಚ್ಯ ಶಬ್ದಗಳಿಂದ ಬೈದು, ಕೈಯಿಂದ ಹಾಗೂ ಚಪ್ಪಲಿಯಿಂದ ಹೊಡೆದು ಗುಪ್ತಗಾಯ ಮತ್ತು ತರಚಿದ ಗಾಯ ಪಡಿಸಿ ಜೀವ ಬೇದರಿಕೆ ಹಾಕಿದ 1) ಹಣಮಂತ ಜಮಾದಾರ ಸಾ|| ಬನ್ನೇಟ್ಟಿ 2) ಶಿವಪ್ಪ ಜಮಾದಾರ ಸಾ|| ಬನ್ನೇಟ್ಟಿ 3) ರಾಮಣ್ಣ ಜಮಾದಾರ ಸಾ|| ಶಿವಪೂರ ಮೂರು ಜನರ ಮೇಲೆ ಕಾನೂನು ಕ್ರಮ ಜರೂಗಿಸಬೇಕು ಮತ್ತು ನನ್ನನ್ನು ಉಪಚಾರ ಕುರಿತು ಆಸ್ಪತ್ರೆಗೆ ಕಳುಹಿಸಬೇಕು ಎಂದು ಹೇಳಿಕೆ ನೀಡಿದ್ದರ ಮೇರೆಗೆ ಪ್ರಕಾರ ಪ್ರಕರಣ ದಾಖಲಿಸಿಕೊಂಡು ಬಗ್ಗ ವರದಿ.