POLICE BHAVAN KALABURAGI

POLICE BHAVAN KALABURAGI

17 December 2017

KALABURAGI DISTRICT REPORTED CRIMES

ಹುಡುಗ ಕಾಣೆಯಾದ ಪ್ರಕರಣ :
ಅಶೋಕ ನಗರ ಠಾಣೆ : ದಿನಾಂಕ:12.12.2017 ರಂದು ರಾತ್ರಿ 09:00 ಗಂಟೆ ಸುಮಾರಿಗೆ ನಾನು, ನನ್ನ ಗಂಡ ಮತ್ತು ನನ್ನ ಮಗ ನಾಗಸೇನ್ ಎಲ್ಲರೂ ಮನೆಯಲ್ಲಿದ್ದಾಗ, ಮಗನು ಹೊರಗಡೆ ಅಂಗಡಿಗೆ ಹೋಗಿ ಬರುತ್ತೇನೆ ಅಂತ ಹೇಳಿ ಮನೆಯಿಂದ ಹೋಗಿರುತ್ತಾನೆ. ನಂತರ ನಾವು ರಾತ್ರಿ 09:30 ಗಂಟೆಯ ವರೆಗೆ ದಾರಿ ನೋಡಿ ಮಗನು ಬರದೆ ಇದ್ದಾಗ ಅವನ ಮೊಬೈಲ್ ನಂ. 9972860036 ಮತ್ತು 8660177036 ನೇದ್ದವುಗಳಿಗೆ ಕರೆಮಾಡಿದಾಗ ಎರಡು ನಂಬರಗಳು ಸ್ವೀಚ್ ಆಫ್ ಆಗಿರುತ್ತವೆ. ನಂತರ ನಾನು ನನ್ನ ಗಂಡ ತುಕಾರಾಮ ಇಬ್ಬರು ಕೂಡಿ ಎಲ್ಲಾ ಕಡೆಗೆ ಹುಡುಕಾಡಿದರು ನಮ್ಮ ಮಗನು ಪತ್ತೆಯಾಗಿರುವುದಿಲ್ಲ. ನಾವು ಇಲ್ಲಿಯ ವರೆಗೆ ನಮ್ಮ ಎಲ್ಲಾ ಸಂಬಂಧಿಕರಲ್ಲಿ ಮತ್ತು ಅವನ ಸ್ನೇಹಿತರಲ್ಲಿ ವಿಚಾರಿಸಲಾಗಿ ನಮ್ಮ ಮಗನ ಬಗ್ಗೆ ಯಾವುದೇ ಸುಳಿವು ಸಿಕ್ಕಿರುವುದಿಲ್ಲ. ನಮ್ಮ ಮಗ ನಾಗಸೇನ್ ಇತನು ಮನೆಯಿಂದ ಹೋಗುವಾಗ ನೀಲಿ ಕಲರ ಲೈನಿಂಗ್ ಶರ್ಟ ಮತ್ತು ಕಪ್ಪು ಬಣ್ಣದ ಪ್ಯಾಂಟ ಧರಿಸಿರುತ್ತಾನೆ. ನನ್ನ ಮಗನು ಸದೃಡ ಮೈ ಕಟ್ಟು, ಕೆಂಪು ಮೈ ಬಣ್ಣ ಹೊಂದಿದ್ದು, ಕನ್ನಡ ಮತ್ತು ಹಿಂದಿ ಭಾಷೆಗಳನ್ನು ಮಾತನಾಡುತ್ತಾನೆ. ಕಾರಣ ದಿನಾಂಕ:12.12.2017 ರಂದು ಮನೆ ಬಿಟ್ಟು ಹೋಗಿ ಇಲ್ಲಿಯ ವರೆಗೆ ಮರಳಿ ಮನೆಗೆ ಬಂದಿರುವುದಿಲ್ಲಾ ಅಂತಾ ಶ್ರೀಮತಿ ಸರೋಜಾ ಗಂಡ ತುಕಾರಾಮ ವರ್ಮಾ  ಸಾ|| ಅರುಣ ಕಿಣ್ಣಿ ವಕೀಲರು ಇವರ ಮನೆಯಲ್ಲಿ ಬಾಡಿಗೆ ಸಿ.ಐ.ಬಿ. ಕಾಲೋನಿ ಕಲಬುರಗಿ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ಮಾಡಬೂಳ ಠಾಣೆ :  ಶ್ರೀಮತಿ ಶಾಂತಬಾಯಿ ಗಂಡ ಮಲ್ಲಿಕಾರ್ಜುನ  ಶಿವಗೋಳೆ ಸಾ:ಹೊಸ ಹೆಬ್ಬಾಳ ತಾ:ಚಿತ್ತಾಪೂರ  ರವರು ದಿನಾಂಕ:-08/12/2017 ರಂದು ರಾತ್ರಿ 8.030 ಪಿ.ಎಮ್. ಸುಮಾರಿಗೆ ನಾನು ಮನೆಯಲ್ಲಿ ಒಬ್ಬಳೆ ಊಟ ಮಾಡಿಕೊಂಡು ಮನೆಯ ಒಂದು ಕೋಣೆಗೆ ಭೀಗ ಹಾಕಿ ಅದಕ್ಕೆ ಹೊಂದಿಕೊಂಡಿರುವ ಕೋಣೆಯಲ್ಲಿ ನಾನು ಹೋಗಿ ಮಲಗಿಕೊಂಡೇನು. ಎಂದಿನಂತೆ ಬೆಳ್ಳಿಗೆ 6:00 ಗಂಟೆ ಸುಮಾರಿಗೆ ಕೋಣೆಯಿಂದ ಎದ್ದು  ಬೀಗ ಹಾಕಿದ ಕೋಣೆಯ ಹತ್ತಿರ ಹೋಗಿ ನೋಡಲು ಕೋಣೆಯ ಬಾಗೀಲು ತೆರೆದಿದ್ದು. ಕೋಣೆಯ ಒಳಗಡೆ ಹೋಗಿ ನೋಡಲು ಅಲಮಾರಿ ತೇರಿದ್ದಿದ್ದು ಅಲಮಾರಿಯಲಿಟ್ಟ ಎಲ್ಲ ಬಟ್ಟೆಗಳನ್ನು ಚಿಲ್ಲಾಪಿಲ್ಲಿಯಾಗಿ ಬಿದ್ದಿರುತ್ತವೆ.ಇದನ್ನು ಕಂಡು ಗಾಬರಿಯಾಗಿ ನಾನು ನಮ್ಮ ಮನೆಯ ಅಕ್ಕ ಪಕ್ಕದಲ್ಲಿ ವಾಸವಾಗಿರುವ 1] ಬಸಮ್ಮ ಗಂಡ ವೈಜನಾಥ ಮೆಂಚಾನೊರ 2] ಸಿದ್ದಮ್ಮ ಗಂಡ ರಾಮಲಿಂಗ  ಇವರ  ಮನೆಗೆ ಓಡಿ ಹೋಗಿ ವಿಷಯ ತಿಳಿಸಿ ಇವರಿಬ್ಬರಿಗೆ ಕರೆದುಕೊಂಡು  ನನ್ನ ಮನೆಯ ಒಳಗಡೆ ಹೋಗಿ ಅಲಮಾರಿಯನ್ನು ಪರಿಶೀಲಿಸಿ ನೋಡಲಾಗಿ ಅಲಮಾರಿಯ ಲಾಕರನಲ್ಲಿಟ್ಟ ಈ ಕೆಳಕಂಡ ನಮೂದು ಮಾಡಿದ ಬಂಗಾರ ಮತ್ತು  ಬೆಳ್ಳಿ ಆಭರಣ ಹಾಗೂ ನಗದು ಹಣ  ಹೀಗೆ ಒಟ್ಟು ಅ:ಕಿ:18500/- ರೂ ಬೆಲೆಬಾಳುವ ಬಂಗಾರ ಮತ್ತು ಬೆಳ್ಳಿ ಆಭರಣಗಳು ಹಾಗೂ ನಗದು ಹಣ ಇರಲಿಲ್ಲ ದಿನಾಂಕ:08/12/2017 ರಂದು ರಾತ್ರಿ 8.30 ಪಿ.ಎಮ್ ದಿಂದ ದಿನಾಂಕ:09/12/2017 ರಂದು ಬೆಳಿಗ್ಗೆ 6.00 ಗಂಟೆಯ ಮದ್ಯದ ಅವಧಿಯಲ್ಲಿ ಯಾರೋ ಕಳ್ಳರು ನನ್ನ ಮನೆಯ ಕೋಣೆಯ ಬಾಗಿಲ ಕೀಲಿ ಮುರಿದು ಒಳಗಡೆ ಹೋಗಿ ಅಲಮಾರಿಯ ಲಾಕರನಲ್ಲಿಟ್ಟ ಬಂಗಾರ ಮತ್ತು ಬೆಳ್ಳಿ ಆಭರಣಗಳು ಹಾಗೂ ನಗದು ಹಣ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಡಬೂಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಹಲ್ಲೆ ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀ ಶಾರುಖ ತಂದೆ ಮೌಲಾಸಾಬ @ ಮೌಲಾಶೇಖ ಶೇಖ ಸಾ: ಮದಿನಾ ಕಾಲೋನಿ ಕಲಬುರಗಿ ರವರು ಈ ಹಿಂದೆ ಲಾಲಗೇರಿ ಬಡಾವಣೆಯಲ್ಲಿ ವಾಸವಾಗಿದ್ದು ಈಗ ಕೆಲವು ದಿವಸಗಳಿಂದ ನಾವು ಮದಿನಾ ಕಾಲೋನಿಗೆ ಬಂದಿದ್ದು ಇರುತ್ತದೆ. ಲಾಲಗೇರಿ ಬಡಾವಣೆಯಲ್ಲಿ ಇರುವ ಸಮಯದಲ್ಲಿ ಲಾಲಗೇರಿ ಬಡಾವಣೆಯಲ್ಲಿರುವ ನಾನಾ ಹಜರತ ದರ್ಗಾದ ಪ್ರತಿ ವರ್ಷ ದೀಪ (ಚಿರಾಗ) ಕಾರ್ಯಕ್ರಮ ನಡೆಯುತ್ತಿದ್ದು. ಅದರಂತೆ ನಿನ್ನೆ ದಿನಾಂಕ 15.12.2017 ರಂದು ರಾತ್ರಿ 11:00 ಗಂಟೆಯ ಸುಮಾರಿಗೆ ನಾನಾ ಹರಜತ ದರ್ಗಾದ ದೀಪ ಇದ್ದ ಪ್ರಯುಕ್ತ ಸದರಿ ದೀಪದ ಕಾರ್ಯಕ್ರಮದಲ್ಲಿ ಭಾಗ ವಹಿಸುವ ಸಂಬಂದ ನಾನು ನನ್ನ ತಮ್ಮ ಸೊಹೇಲ ಕೂಡಿಕೊಂಡು ದರ್ಗಾಕ್ಕೆ ಹೋಗಿದ್ದು ಮೇರವಣಿಗೆ ಕಾಲದಲ್ಲಿ ಡ್ಯಾನ್ಸ ಮಾಡುತ್ತಿದ್ದು. ಇಂದು ದಿನಾಂಕ 16.12.2017 ರಂದು ಬೆಳ್ಳಿಗ್ಗೆ 00:30 ಗಂಟೆಯ ಸುಮಾರಿಗೆ ಹರಜತ ದರ್ಗಾದ ದೀಪ ನಾನಾ ಚೌಕ ಹತ್ತಿರ ಬಂದಿದ್ದು, ಆಗ ನನ್ನ ತಮ್ಮ ಸೊಹೇಲ ಇತನು ಡ್ಯಾನ್ಸ ಮಾಡುತ್ತಿದ್ದ ಕಾಲಕ್ಕೆ ಸದರಿ ಬಡವಾಣೆಯ ಮಹೀಬ ತಂದೆ ಗಫೂರ ಇತನ ಕಾಲು ತುಳಿಸಿದ್ದು ಆಗ ಸದರಿ ಮಹೀಬ ಇತನು ನನ್ನ ತಮ್ಮನಿಗೆ ಎ ರಂಡಿ ಮಗನೆ ನೀನು ನನ್ನ ಕಾಲು ತುಳಿಯುತ್ತಿ ಅಂತ ಬೈಯುತ್ತಿದ್ದು ಆಗ ನಾನು ಸದರಿ ಮಹೀಬ ಇತನಿಗೆ ಡ್ಯಾನ್ಸ ಮಾಡುವ ಕಾಲಕ್ಕೆ ಆಕಸ್ಮಿಕವಾಗಿ ಕಾಲು ತಗುಲಿದೆ ಅದಕ್ಕೆ ಏಕೆ ಬೈಯುತ್ತಿ ಅಂತ ಕೇಳಿದ್ದು ಆಗ ಅಲ್ಲೆ ಇದ್ದ ಅದೆ ಬಡಾವಣೆಯ 1. ಅಖೀಲ ಬಾಗವಾನ, 2. ಮೂನಿರ ತಂದೆ ಅಬ್ದಲ ರಸೀದ 3. ಮುಜ್ಜಿದ ತಂದೆ ಅಬ್ದುಲ ರಸೀದ 4. ಸದ್ದಾಂ ತಂದೆ ಅಬ್ದುಲ ರಸೀದ 5. ಸಾಧಿಕ 6. ಕಲಿಂ ತಂದೆ ಅಬ್ದುಲ ರಹಿಂಸಾಬ, 7. ರಬ್ಬು ತಂದೆ ಅಬ್ದುಲ ರಸೀದ  ಮತ್ತು ಅವರ ಸಂಗಡ 8. ಮೊಹೀಬ ತಂದೆ ಗಫೂರ ಕೂಡಿಕೊಂಡು ಬಂದವರೆ ಏ ರಂಡಿ ಮಕ್ಕಳೆ ನಿಮ್ಮ ಸೊಕ್ಕು ಬಹಳ ಆಗಿದೆ ನೀವು ಇಲ್ಲಿಂದ ಬೇರೆ ಕಡೆಗೆ ಹೋದರು ಕೂಡ ಮತ್ತೆ ನಮ್ಮ ಬಡಾವಣೆ ಬಂದು ಸೊಕ್ಕು ತೋರಿಸುತ್ತಿರು ಸೂಳಿ ಮಕ್ಕಳೆ ಅಂತ ಬೈಯುತ್ತಾ ಎಲ್ಲರು ಕೂಡಿಕೊಂಡು ನನಗೆ ಮತ್ತು ನನ್ನ ತಮ್ಮನಿಗೆ ಹಿಡಿದುಕೊಂಡು ನೇಲದ ಮೇಲೆ ಹಾಕಿ ತಮ್ಮ ಕೈಗಳಿಂದ ಮತ್ತು ಕಾಲಿನಿಂದ ನನ್ನ ಎರಡು ಮಳಕಾಲ ಮೇಲೆ ಹೊಟ್ಟೆಗೆ, ಟೊಂಕಿಗೆ, ಗುಪ್ತಗಾಯ ಪಡಿಸಿದ್ದು ಮತ್ತು ನನ್ನ ಎಡಗೈ ಹೆಬ್ಬೆರಳಿಗೆ ರಕ್ತಗಾಯ ಪಡಿಸಿದ್ದು ಇರುತ್ತದೆ. ನನ್ನ ತಮ್ಮನಿಗೆ ಬಲ ಕಪಾಳ ಮೇಲೆ ಗುಪ್ತಗಾಯ ಪಡಿಸಿದ್ದು ಮತ್ತು ದೇಹದ ಮೇಲೆ ಅಲಲ್ಲಿ ಗುಪ್ತಗಾಯ ಪಡಿಸಿದ್ದು ಇರುತ್ತದೆ. ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅಪಘಾತ ಪ್ರಕರಣ :
ಮಾಹಾಗಾಂವ ಠಾಣೆ : ದಿನಾಂಕ: 14/12/17 ರಂದು ಶ್ರೀ ಶೇಖ ಖಾಜಾಮಿಯ್ಯ ತಂದೆ ಶೇಖ ಮೌಲಾಮಿಯ್ಯ ಶೇಖ ಸಾ: ಬಿಕ್ಲಿ ಮಂಡಲ್|| ಮಾಕಲೂರ ಜಿ|| ನಿಜಾಮಬಾದ (ತೆಲಂಗಾಣಾ)  ಮತ್ತು ಮಲಬಿಂದ್ರ ಸಿಂಗ್ ಇಬ್ಬರು ಕೂಡಿಕೊಂಡು ಅಗ್ರಿಕಲ್ಚರ ಆರವೆಷ್ಟರ ಮಶಿನ್ (ರಾಶಿ ಮಾಡುವ ಮಶಿನ್) ಟಿ.ಎಸ್.- 16 ಇಇ-1258 ಮತ್ತು ಟಿ.ಎಸ್.- 16 ಇಕೆ-4573 ನೇದ್ದವುಗಳನ್ನು ಹುಮನಾಬಾದ ಕಡೆಯಿಂದ  ಕಲಬುರಗಿ ಕಡೆಗೆ ಬರುತ್ತಿದ್ದಾಗ ಕಗ್ಗನಮಡ್ಡಿ ಕ್ರಾಸ ಹತ್ತಿರ ಎದುರುಗಡೆಯಿಂದ ಅಪಾದಿತನು ತನ್ನ ಟ್ಯಾಂಕರ ನಂ ಎಂ.ಹೆಚ್- 45 ಟಿ-6210 ನೇದ್ದನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಹೊಡೆದ ಪ್ರಯುಕ್ತ ಎರಡು ವಾಹನಗಳು ಜಖಂಗೊಂಡಿದ್ದು ಅಲ್ಲದೇ ಮಲಬಿಂದ್ರ ಸಿಂಗ್ ಈತನಿಗೆ ಗಾಯಗೋಳಿಸಿ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಸದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

11 December 2017

KALABURAGI DISTRICT REPORTED CRIMES

ಅಪಘಾತ ಪ್ರಕರಣ :
ಸೇಡಂ ಠಾಣೆ : ದಿನಾಂಕ 10/12/2017 ರಂದು ಎಂದಿನಂತೆ ನನ್ನ ತಮ್ಮ ವಿನೋದ ಈತನು ಮುಂಜಾನೆ 8 ಗಂಟೆ ಸುಮಾರಿಗೆ ಬೆನಕನಹಳ್ಳಿ ಶ್ರೀ ಸಿಮೆಂಟ ಪ್ಯಾಕ್ಟರಿಗೆ ಟ್ರಾಕ್ಟರ ನಡೆಸುವ ಕುರಿತು ಮೋಟರ್ ಸೈಕಲ ನಂಬರ ಕೆಎ-32 ಇಎಪ್-1116 ನೇದ್ದರ ಮೇಲೆ ಹೋದನು. ಮತ್ತು ಇಂದು ರವಿವಾರ ಇದೆ ಬೇಗನೆ ಮನೆಗೆ ಬರುತ್ತೇನೆ ಅಂತಾ ಹೇಳಿ ಹೋದನು.  ನಂತರ ಸಾಯಂಕಾಲ 7.00 ಗಂಟೆಯಾದರೂ ನನ್ನ ತಮ್ಮ ವಿನೋದ ಈತನು  ಮನೆಗೆ ಬರದ ಕಾರಣ ನಾನು ಅವನ ಮೋಬೈಲ ಫೋನಿಗೆ ಪೋನ ಹಚ್ಚಲಾರಂಭಿಸಿದಾಗ ಫೋನ ರಿಂಗ ಆಗುತ್ತಿದ್ದು ಎತ್ತಲಿಲ್ಲ. ನಂತರ ಸ್ವಲ್ಪ ಸಮಯದ ನಂತರ ನನಗೆ ಯಾರೋ ಒಬ್ಬರು ಫೋನ ಎತ್ತಿ ಈ ಫೋನನವರು ದಾರಿಯಲ್ಲಿ ಮೋಟಾರ ಸೈಕಲ ಹಾಕಿಕೊಂಡು ಬಿದ್ದಿದ್ದು ಅವರಿಗೆ ತಲೆಗೆ ಮುಖಕ್ಕೆ ಭಾರಿ ರಕ್ತ ಗಾಯಗಳಾಗಿದ್ದು ಅವನು ಮೃತಪಟ್ಟಿರುತ್ತಾನೆ ಅಂತಾ ತಿಳಿಸಿದರು. ನಂತರ ನಾನು ಮತ್ತು ನನ್ನ ತಮ್ಮನಾದ ಮಿಧುನ ಹಾಗು ನಮ್ಮ ಸಂಬಂಧಿಕನಾದ ಗಂಗಾರಾಮ ಕೂಡಿಕೊಂಡು ಹೋಗಿ ನೋಡಲಾಗಿ ನನ್ನ ತಮ್ಮನು ಬೆನಕನಳ್ಳಿ ದಿಗ್ಗಾಂವ ರೋಡಿನಲ್ಲಿ ಮೊಟಾರ ಸೈಕಲ ಹಾಕಿಕೊಂಡು ಬಿದ್ದಿದ್ದು ಅವನಿಗೆ ಹಣೆಗೆ, ಬಾಯಿಗೆ ಭಾರಿ ರಕ್ತಗಾಯಗಳಾಗಿ, ರಕ್ತ ಸೋರುತ್ತಿತ್ತು. ಮತ್ತು ಎಡಕಿವಿಗೆ ಸಹ ಭಾರಿ ರಕ್ತಗಾಯವಾಗಿ ರಕ್ತ ಸೋರುತ್ತಿತ್ತು, ಬಲಗೈ ಮುರಿದು ಸ್ಥಳದಲ್ಲಿಯೇ ಮೃತಪಟ್ಟಿದ್ದನು. ನನ್ನ ತಮ್ಮನಾದ ವಿನೋದ ಈತನು ಇಂದು ದಿನಾಂಕ 10-12-2017 ರಂದು ಸಾಯಂಕಾಲ 6-00 ಗಂಟೆಯಿಂದ 7-00 ಗಂಟೆಯ ಮಧ್ಯದ ಅವಧಿಯಲ್ಲಿ ತನ್ನ ಮೋಟಾರ ಸೈಕಲ ನಂಬರ ಕೆಎ-32ಇಎಫ-1116 ನೇದ್ದನ್ನು ಅತೀವೇಗದಿಂದ ಮತ್ತು ಅಲಕ್ಷ್ಯತನದಿಂದ ನಡೆಸುತ್ತಾ ಮೋಟಾರ ಸೈಕಲ ಅಪಘಾತಪಡಿಸಿಕೊಂಡು ಮೃತಪಟ್ಟಿರುತ್ತಾನೆ. ಅಂತಾ ಶ್ರೀ ಗೋವಿಂದ ತಂದೆ ಲಕ್ಷ್ಮಣ ಚವ್ಹಾಣ ಸಾ|| ಲಕ್ಷ್ಮಣ ತಾಂಡಾ ಮಳಖೇಡ ತಾ|| ಸೇಡಂ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಮಟಕಾ ಜೂಜಾಟದಲ್ಲಿ ನಿರತವನ ಬಂಧನ :
ಅಫಜಲಪೂರ ಠಾಣೆ : ದಿನಾಂಕ 09-12-2017 ರಂದು ಅಫಜಲಪೂರ ಪಟ್ಟಣದ ಲಕ್ಮೀ ಗುಡಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಹೋಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲರಿ ಅಂತಾ ಅನ್ನುತ್ತಾ ಸಾರ್ವಜನಿಕರ ಮನವೂಲಿಸಿ ಅವರಿಂದ ಹಣ ಪಡೆದು, ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳನ್ನು ಕೊಡುತ್ತಿದ್ದಾನೆ ಅಂತಾ ಬಾತ್ಮಿ ಬಂದ ಮೇರೆಗೆ  ಪಿ.ಎದ್.ಐ. ಅಫಜಲಪೂರ ರವರು ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ  ಲಕ್ಮಿಗುಡಿಯ ಹತ್ತಿರ ಹೋಗಿ ಸ್ವಲ್ಪ ದೂರು ನಮ್ಮ ಇಲಾಖಾ ವಾಹನವನ್ನು ನಿಲ್ಲಿಸಿ ಮರೆಯಾಗಿ ನಿಂತು ನೋಡಲು ಲಕ್ಮೀಗುಡಿಯ ಮುಂದಿನ ರೋಡಿನ ಪಕ್ಕ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಸಾರ್ವಜನಿಕರಿಂದ ಹಣ ಪಡೆದು ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳು ಕೊಡುತ್ತಿದ್ದದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಹಿಡಿದು ಸದರಿಯವನ ಹೆಸರು ವಿಳಾಸ ವಿಚಾರಿಸಲಾಗಿ ಶೇಟ್ಟೆಪ್ಪಾ ತಂದೆ ಹಣಮಂತ ಗಾಡಿವಡ್ಡರ ಸಾ|| ವೇಂಕಟೇಶ್ವರ ನಗರ ಅಫಜಲಪೂರ ಅಂತಾ ತಿಳಿಸಿದ್ದು, ಸದರಿಯವನ ವಶದಿಂದ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 1010/- ರೂಪಾಯಿ ನಗದು ಹಣ ಹಾಗೂ ಅಂಕಿ ಸಂಖ್ಯೆ ಬರೆದ ಒಂದು ಮಟಕಾ ಚೀಟಿ ಮತ್ತು ಒಂದು ಬಾಲ ಪೆನ್ನ ವಶಕ್ಕೆ ತೆಗೆದುಕೊಂಡು ಸದರಿಯವನೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ
ಗೃಹಿಣಿಗೆ  ಕಿರುಕಳ ಕೊಟ್ಟ ಪ್ರಕರಣ :
ಅಫಜಲಪೂರ ಠಾಣೆ : ಶ್ರೀಮತಿ ಸುಜತಾ ಗಂಡ ಸಂತೋಷ ಜಮಾದಾರ ಸಾ||ಚಿಂಚೋಳಿ ರವರನ್ನು ಈಗ 5 ವರ್ಷದ ಹಿಂದೆ ಚಿಂಚೋಳಿ ಗ್ರಾಮದ ಸಂತೋಷ ತಂದೆ ಬಸಪ್ಪ ಜಮಾದಾರ ಈತನೋಂದಿಗೆ ಮದುವೆಮಾಡಿಕೊಟ್ಟಿದ್ದು ಇರುತ್ತದೆ ನನಗೆ ಸದ್ಯ 4 ವರ್ಷದ ತನು ಅಂತ ಹೆಣ್ಣು ಮಗಳಿರುತ್ತಾಳೆ ನನ್ನ ಗಂಡ ಹಾಗು ಅತ್ತೆ ಯಾದ ಶಾಂತಾಬಾಯಿ ಮಾವನಾದ ಬಸಪ್ಪ ನನ್ನ ಸಣ್ಣತ್ತೆಯಾದ ಜಗುಬಾಯಿ ಈವರೇಲ್ಲರು ಇವರೇಲ್ಲರು ನನಗೆ ನೀನು ಸರಿಯಾಗಿಲ್ಲ ನಿನಗೆ ಅಡಿಗೆ ಮಾಡಲು ಬರುವುದಿಲ್ಲ ಅಂತ ನನಗೆ ಮಾನಸಿಕ ಹಾಗು ದೈಹಿಕ ಕಿರುಕುಳ ನೀಡಿ ನನ್ನ ಗಂಡನಿಗೆ ಮಾಲಾಶ್ರೀ ಎಂಬುವರೊಂದಿಗೆ ಈಗ ಕೆಲವು ತಿಂಗಳಿಂದೆ ಎರಡನೇ ಮದುವೆ ಮಾಡಿರುತ್ತಾರೆ  ಈ ವಿಷಯದ ಸಂಬಂಧ ನಮ್ಮ ತಂದೆಯಾದ ಹಣಮಂತ ನಮ್ಮ ತಾಯಿಯಾದ ಶಾರದಾಬಾಯಿ ಹಾಗು ನಮ್ಮ ಸಂಬಂಧಿಕರಾದ ಅಫಜಲಪೂರ ಪಟ್ಟಣದ ಲಚ್ಚಪ್ಪ ತಂದೆ ಸಿದ್ರಾಮ ಜಮಾದಾರ, ಸಿದ್ದಪ್ಪ ತಂದೆ ಕಲ್ಲಪ್ಪ ಸಿನ್ನೂರ ಇವರೇಲ್ಲರು ಕೂಡಿ ನನ್ನ ಗಂಡನ ಮನೆಗೆ ಬಂದು ನನ್ನ ಗಂಡ ಹಾಗು ಗಂಡನ ಮನೆಯವರಿಗೆ ತಿಳುವಳಿಕೆ ಹೇಳಿ ಬಂದಿರುತ್ತಾರೆ. ದಿನಾಂಕ 09/12/2017 ರಂದು ಬೆಳಿಗ್ಗೆ ನನ್ನ ಗಂಡ ಹಾಗು ಅತ್ತೆಯರಾದ ಶಾಂತಾಬಾಯಿ, ಜಗುಬಾಯಿ ಮಾವನಾದ ಬಸಪ್ಪ ಮತ್ತು ನನ್ನ ಗಂಡನ ಎರಡನೇ ಹೆಂಡತಿಯಾದ ಮಾಲಾಶ್ರೀ ಹಾಗು ಮಲ್ಲಪ್ಪ ತಂದೆ ಚನ್ನಮಲ್ಲಪ್ಪ ಆನೂರ ಈವರೆಲ್ಲರು ನನಗೆ ಮಾನಸಿಕವಾಗಿ ಹೈಹಿಕವಾಗಿ ಕಿರುಕುಳ ನೀಡಿದ್ದರಿಂದ ಸದರಿಯವರ ಕಿರುಕುಳ ತಾಳಲಾರದೆ ನನ್ನ ಮಗಳೊಂದಿಗೆ ಬಡದಾಳ ಗ್ರಾಮದ ನನ್ನ ತವರು ಮನೆಗೆ ಬಂದಿದ್ದು ನನ್ನ ತವರು ಮನೆಯಲ್ಲಿ ನಮ್ಮ ತಾಯಿ ಹಾಗು ತಂದೆ ನನಗೆ ವಿಚಾರಿಸಿದ್ದು ನಾನು ನನ್ನ ಗಂಡನ ಮನೆಯವರು ನನಗೆ ನೀಡಿದ ಕಿರುಕುಳ ಬಗ್ಗೆ ತಿಳಿಸಿರುತ್ತೇನೆ ನಮ್ಮ ತಂದೆ ತಾಯಿ ಇಬ್ಬರು ನನಗೆ ನೀನು ಸಮದಾನವಾಗಿರು ನಾವು ಇನ್ನೊಮ್ಮೆ ನಿನ್ನ ಗಂಡ ಹಾಗು ಗಂಡನ ಮನೆಯವರಿಗೆ ಬುದ್ದಿವಾದ ಹೇಳುತ್ತೇವೆ.ಅಂತ ಹೇಳಿರುತ್ತಾರೆ. ಮದ್ಯಾಹ್ನ 2.00 ಗಂಟೆ ಸುಮಾರಿಗೆ ನಾನು ನನ್ನ ಗಂಡ ಹಾಗು ಗಂಡನ ಮನೆಯವ ಕಿರುಕುಳ ತಾಳಲಾರದೇ ನನ್ನ ತವರು ಮನೆಯ ಕೊಣೆಯಲಿಟ್ಟಿದ್ದ ಬೆಳೆಗೆ ಹೊಡೆಯುವ ಕ್ರಿಮಿನಾಶಕ ಔಷದಿ ಸೇವನೆ ಮಾಡಿ ಕೊಣೆಯಲ್ಲಿ ಒದ್ದಾಡುತಿದ್ದಾಗ ಅಲ್ಲೆ ಮನೆಯ ಇನ್ನೊಂದು ಕೊಣೆಯಲಿದ್ದ ನಮ್ಮ ತಾಯಿ ಹಾಗು ತಂದೆ ನನಗೆ ನೋಡಿ ಚಿರಾಡಿ ಅಲ್ಲೆ ನಮ್ಮ ಕೋಣೆಯ ಜನರನ್ನು ಕರೆದು ನನಗೆ ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಚಿಕಿತ್ಸೆ ಕುರಿತು ಅಫಜಲಪೂರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಹೆಚ್ಚಿನ ಚಿಕಿತ್ಸೆಗಾಗಿ ಸರಕಾರಿ ಆಸ್ಪತ್ರೆ ಕಲಬುರಗಿಗೆ ತಂದು ಸೇರಿಕೆ ಮಾಡಿರುತ್ತಾರೆ. ಕಾರಣ ನನ್ನ ಗಂಡನಾದ ಸಂತೋಷ ಮಾವನಾದ ಬಸಪ್ಪ ಅತ್ತೆಯಂದಿರಾದ ಶಾಂತಾಬಾಯಿ, ಜಗುಬಾಯಿ ನನ್ನ ಗಂಡನ ಎರಡನೇಯ ಹೆಂಡತಿಯಾದ ಮಾಲಾಶ್ರೀ ಮತ್ತು ಮಲ್ಲಪ್ಪ ತಂದೆ ಚನ್ನಮಲ್ಲಪ್ಪ ಆನೂರ ರವರೇಲ್ಲರು ನನಗೆ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡಿದ್ದವರ ಮೇಲೆ ಕಾನೂನಿನ ಕ್ರಮ ಜರುಗಿಸ ಬೇಕು ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

10 December 2017

KALABURAGI DISTRICT REPORTED CRIMES

ಮಟಕಾ ಜೂಜಾಟದಲ್ಲಿ ನಿರತವನ ಬಂಧನ :
ಅಫಜಲಪೂರ ಠಾಣೆ : ದಿನಾಂಕ 09-12-2017 ರಂದು ಅಫಜಲಪೂರ ಪಟ್ಟಣದ ಲಕ್ಮೀ ಗುಡಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಹೋಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲರಿ ಅಂತಾ ಅನ್ನುತ್ತಾ ಸಾರ್ವಜನಿಕರ ಮನವೂಲಿಸಿ ಅವರಿಂದ ಹಣ ಪಡೆದು, ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳನ್ನು ಕೊಡುತ್ತಿದ್ದಾನೆ ಅಂತಾ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ  ಲಕ್ಮಿಗುಡಿ ಹತ್ತಿರ ಹೋಗಿ  ಸ್ವಲ್ಪ ದೂರು ನಮ್ಮ ಇಲಾಖಾ ವಾಹನವನ್ನು ನಿಲ್ಲಿಸಿ ಮರೆಯಾಗಿ ನಿಂತು ನೋಡಲು ಲಕ್ಮೀಗುಡಿಯ ಮುಂದಿನ ರೋಡಿನ ಪಕ್ಕ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಸಾರ್ವಜನಿಕರಿಂದ ಹಣ ಪಡೆದು ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳು ಕೊಡುತ್ತಿದ್ದದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಹಿಡಿದು ಸದರಿಯವನ ಹೆಸರು ವಿಳಾಸ ವಿಚಾರಿಸಲಾಗಿ ಶೇಟ್ಟೆಪ್ಪಾ ತಂದೆ ಹಣಮಂತ ಗಾಡಿವಡ್ಡರ ಸಾ|| ವೇಂಕಟೇಶ್ವರ ನಗರ ಅಫಜಲಪೂರ ಅಂತಾ ತಿಳಿಸಿದ್ದು, ಸದರಿಯವನ ವಶದಿಂದ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 1010/- ರೂಪಾಯಿ ನಗದು ಹಣ ಹಾಗೂ ಅಂಕಿ ಸಂಖ್ಯೆ ಬರೆದ ಒಂದು ಮಟಕಾ ಚೀಟಿ ಮತ್ತು ಒಂದು ಬಾಲ ಪೆನ್ನ ವಶಕ್ಕೆ ತೆಗೆದುಕೊಂಡು ಸದರಿಯವನೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಆಕ್ರಮವಾಗಿ ಮರಳು ಸಾಗಿಸುತ್ತಿದ್ದ ಟಿಪ್ಪರ ಜಪ್ತಿ :
ರಾಘವೇಂದ್ರ ನಗರ ಠಾಣೆ : ದಿನಾಂಕ 09.12.2017 ರಂದು ಬೆಳ್ಳಿಗ್ಗೆ ರಾಘವೇಂದ್ರ ನಗರ ಠಾಣಾ ವ್ಯಾಪ್ತಿಯ ಮಿಜಬಾ ನಗರ ಕ್ರಾಸ ದಿಂದ ಮಹ್ಮದಿ ಚೌಕ ಕಡೆಗೆ ಹೋಗುವ ರಸ್ತೆಯ ಮೇಲೆ ಟಿಪ್ಪರದಲ್ಲಿ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದಾರೆ ಅಂತ ಖಚಿತ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ರಾಘವೇಂದ್ರ ನಗರ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ  ಬಾತ್ಮಿಯಂತೆ ಮೀಜಬಾ ನಗರ ಕ್ರಾಸ ದಿಂದ ಮಹ್ಮದಿ ಚೌಕ ಕಡೆಗೆ ಹೋಗುವ ರಸ್ತೆಯ ಮೇಲೆ ಬಂದು ರಸ್ತೆಯ ಮೇಲೆ ನಿಂತುಕೊಂಡಿದ್ದು ಒಂದು ಟಿಪ್ಪರ ಮೀಜಬಾ ನಗರ ಕ್ರಾಸ ದಿಂದ ಮಹ್ಮದಿ ಚೌಕ ಕಡೆಗೆ ಹೋಗುವ ರಸ್ತೆಯ ಮೇಲೆ ಬರುತ್ತಿರುವದನ್ನು ನೋಡಿ ನಾನು ಮತ್ತು ಸಿಬ್ಬಂದಿಯವರು ಕೂಡಿಕೊಂಡು ಟಿಪ್ಪರ ನಿಲ್ಲಿಸಿದ್ದು ಅದರ ನಂಬರ ಕೆಎ 32 ಸಿ 7566 ಅಂತ ಇದ್ದು ಸದರಿ ಟಿಪ್ಪರನ್ನು ಪರಿಶೀಲಿಸಿ ನೋಡಲು ಅದರಲ್ಲಿ ಕಪ್ಪು ಮರಳು ಇದ್ದು ಪಿ.ಎಸ್.ಐ. ಸಾಹೇಬರು ಸದರಿ ಟಿಪ್ಪರ ಚಾಲಕರಿಗೆ ಹೆಸರು ವಿಳಾಸ ವಿಚಾರಿಸಲು ಸದರಿಯವನು ತನ್ನ ಹೆಸರು ಜಟ್ಟೆಪ್ಪ ತಂದೆ ಸಿದ್ದಪ್ಪ ಜಮಾದಾರ ಸಾ: ಅಳ್ಳಗಿ(ಬಿ) ತಾ: ಅಫಜಲಪೂರ ಜಿ: ಕಲಬುರಗಿ ಅಂತ ತಿಳಿಸಿದ್ದು ಸದರಿ ಟಿಪ್ಪರ ಚಾಲಕನಿಗೆ ಮರಳು ಸಾಗಾಟ ಮಾಡುತ್ತಿದ್ದ ಬಗ್ಗೆ ಕಾಗದ ಪತ್ರಗಳನ್ನು ಹಾಜರ ಪಡಿಸಿಲು ಸೂಚಿಸಿದ್ದು. ಸದರಿ ಟಿಪ್ಪರ ಚಾಲಕ ತನ್ನ ಹತ್ತಿರ ಯಾವುದೆ ದಾಖಲಾತಿಗಳು ಇರುವದಿಲ್ಲ ತಮ್ಮ ಮಾಲಿಕರಾದ ರಾಚಯ್ಯ ಸ್ವಾಮಿ ಸಾ:ಅಫಜಲಪೂರ ಇವರು ಹೇಳಿದಂತೆ ಮರಳು ಕಳ್ಳತನ ದಿಂದ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದು ಬಗ್ಗೆ ತಿಳಿಸಿದ್ದು. ಸದರಿ ಟಿಪ್ಪರ ನಂ ಕೆಎ 32 ಸಿ 7566 ಅ:ಕಿ; 3 ಲಕ್ಷ ರೂ ಮತ್ತು ಅದರಲ್ಲಿ ಇದ್ದ ಅಂದಾಜ 6 ಬ್ರಾಸ ಕಪ್ಪ ಮರಳು ಅ:ಕಿ: 6,000/-ರೂ ನೇದ್ದು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು,  ಸದರಿಯವನೊಂದಿಗೆ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿದ್ಯಾರ್ಥಿನಿ ಅಪಹರಣ ಪ್ರಕರಣ :
ನೆಲೋಗಿ ಠಾಣೆ : ಶ್ರೀ ಯಮನಪ್ಪ ತಂದೆ ನಾಗಪ್ಪ ಮಳಗಿ ಸಾ|| ಬೆಣ್ಣೂರ ತಾ|| ಜೇವರ್ಗಿ ರವರ ಸಿದ್ದಮ್ಮಾ  12 ವರ್ಷದವಳಿದ್ದು, ಈಗ 7 ನೇ ತರಗತಿಯಲ್ಲಿ ವಸ್ತಾರಿ ಶಾಲೆಯಲ್ಲಿ ಓದುತ್ತಿದ್ದು ದಿನಾಲು ವಸ್ತಾರಿಗೆ ಶಾಲೆಗೆ ಹೋಗಿ ಬರುತ್ತಾಳೆ. ದಿನಾಂಕ: 6/12/2017 ರಂದು ಶಾಲೆಗೆ ಹೋಗಿ ಸಾಯಂಕಾಲ ಮನೆಗೆ ಬಂದಿದ್ದು ರಾತ್ರಿ ನಾವೆಲ್ಲರೂ ಊಟ ಮಾಡಿ ನನ್ನ ಮಕ್ಕಳಾದ ಸುನೀಲ ಮತ್ತು ಅನೀಲ ಇವರು ನಮ್ಮ ಹೊಲದಲ್ಲಿ ಹಾಕಿದ ಕುರಿಗಳ ಹತ್ತಿರ ಮಲಗಲು ಹೋದರು ನಾನು ನನ್ನ ಹೆಂಡತಿಯಾದ ತಾಯಮ್ಮಾ ಮತ್ತು ಮಗಳಾದ ಸಿದ್ದಮ್ಮಾ ಮನೆಯಲ್ಲಿ ಮಲಗಿಕೊಂಡೆವು ದಿನಾಂಕ: 7/12/2017 ರಂದು ಬೆಳಿಗ್ಗೆ 3:00 ಗಂಟೆಗೆ ಎದ್ದು ನೋಡಲಾಗಿ ನನ್ನ ಮಗಳು ಸಿದ್ದಮ್ಮಾ ಹಾಸಿಗೆಯಲ್ಲಿ ಇರಲಿಲ್ಲಾ ನಂತರ ನಾನು ನನ್ನ ಹೆಂಡತಿ ಕೂಡಿ ನನ್ನ ಮಕ್ಕಳಾದ ಅನೀಲ ಸುನೀಲ ಹತ್ತಿರ ಹೋಗಿರಬೇಕೆಂದು ಗಾಬರಿಯಾಗಿ ಅಲ್ಲಿಗೆ ಹೋಗಿ ನೋಡಲಾಗಿ ಅಲ್ಲಿಯು ಕೂಡಾ ಇರಲ್ಲಿಲ್ಲಾ ನಂತರ ನಾವೆಲ್ಲರೂ ಗಾಬರಿಯಾಗಿ ಊರಲ್ಲಿ ಹುಡಕಾಡಿದರು ಸಿಗಲಿಲ್ಲಾ. ನಂತರ ನಮಗೆ ತಿಳಿದು ಬಂದಿದೆನೆಂದರೆ ನನ್ನ ಮಗಳು ಶಾಲೆಯಿಂದ ಬರುವಾಗ ನನ್ನ ಮಗಳಿಗೆ ಚಂದ್ರಕಾಂತ ತಂದೆ ಮಾನಸಪ್ಪ ಮಾದರ ಇವನು ಚೂಡಾಯಿಸಿದ್ದಾನೆ ಅಂತ ನನ್ನ ಮಗಳು ನನಗೆ ಹೇಳಿದ್ದು ಅವನೆ ನನ್ನ ಅಪ್ರಾಪ್ತ ವಯಸ್ಸಿನ ಮಗಳನ್ನು ಅಪಹರಿಸಿಕೊಂಡು ಹೋಗಿರುತ್ತಾನೆ ಅಂತ ಅವನ ಮೇಲೆ ಸಂಶೆಯ ಇದೆ ಅವನ ವಿರುದ್ದ ಕಾನೂನು ಕ್ರಮ ಜರಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನೆಲೋಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಗ್ರಾಮೀಣ ಠಾಣೆ : ದಿನಾಂಕ: 25/10/2017 ರಂದು ಕಲಬುರಗಿ ತಾಲೂಕಿನ ಪಟ್ಟಣ ಗ್ರಾಮದಲ್ಲಿ ಶ್ರೀ ರಾಚಣ್ಣ ದೇವರ ಜಾತ್ರೆ ಮತ್ತು ಅಗ್ಗಿ ಹಾಯುವ ಕಾರ್ಯಕ್ರಮವಿದ್ದು  ಸದರಿ ಜಾತ್ರೆಗೆ ಮೃತ ಜಗದೇವಿ ಗಂಡ ಮಹಾಲಿಂಗಪ್ಪ ಮತ್ತು ಅವರ ಮಗ ಲಕ್ಷ್ಮಿಪುತ್ರ ಇಬ್ಬರು ಕೂಡಿಕೊಂಡು ಹೀರೊ ಹೊಂಡಾ ಸ್ಪ್ಲೆಂಡರ್ ಮೋಟರ್ ಸೈಕಲ್ ನಂ KA-32-V-4386 ನೇದ್ದರ ಮೇಲೆ ದುದನಿಯಿಂದ ಹೊರಟು ಬೆಳಿಗ್ಗೆ ಪಟ್ಟಣ ಗ್ರಾಮಕ್ಕೆ ಬರುವಾಗ ಪಟ್ಟಣ ಗ್ರಾಮದ ಟೋಲ ನಾಕಾ ಹತ್ತಿರ ಸದರಿ ಲಕ್ಷ್ಮಿಪುತ್ರ ಇತನು ತನ್ನ ವಶದಲ್ಲಿದ್ದ ತನ್ನ ಮೋಟರ್ ಸೈಕಲ್ನ್ನು ಅತೀ ವೇಗ ಮತ್ತು ಅಲಕ್ಷತನದಿಂದ ಮೋಟರ್ ಸೈಕಲ್ ಚಲಾಯಿಸುತ್ತಾ ರೋಡಿನ ಜಂಪನಲ್ಲಿ ಜಂಪ ನೋಡದೇ ವೇಗದಲ್ಲಿ ಮೋಟಾರ ಸೈಕಲ ಚಲಾಯಿಸಿದ್ದರಿಂದ್ದ ಮೃತ ಜಗದೇವಿ ಇವಳು ಮೋಟಾರ ಸೈಕಲ ಮೇಲಿಂದ ಹಾರಿ ರೋಡಿನ ಮೇಲೆ ಬಿದ್ದು ಆತಳಿಗೆ ತಲೆಯ ಹಿಂಬಾಗದಲ್ಲಿ ಭಾರಿ ಗುಪ್ತಗಾಯಗಳಾಗಿ ಬೇಹೋಸ ಆಗಿದ್ದು ಅವಳನ್ನು ಉಪಚಾರ ಕುರಿತು ಕಲಬುರಗಿಯ ಯುನೈಟೇಡ್ ಆಸ್ಪತ್ರೆಗೆ ಒಯ್ದು ಸೇರಿಕೆ ಮಾಡಿದ್ದು ಮೃತ ಜಗದೇವಿ ಇವಳು  ದಿನಾಂಕ:-25/10/2017 ರಿಂದ ದಿನಾಂಕ:-06/12/2017 ರವರೆಗೆ ಸದರಿ ಆಸ್ಪತ್ರೆಯಲ್ಲಿ ಉಪಚಾರ ಪಡೆದಿದ್ದು ಅವಳಿಗೆ ಸ್ವಲ್ಪ ಆರಾಮ ಆದಂತೆ ಕಂಡು ಬಂದಿದ್ದರಿಂದ್ದ ಅವಳನ್ನು ದಿನಾಂಕ:-06/12/2017 ರಂದು ಮದ್ಯಾಹ್ನ ಆಸ್ಪತ್ರೆಯಿಂದ ಡಿಚಾರ್ಚ ಮಾಡಿಸಿಕೊಂಡು ತಮ್ಮೂರಾದ ದುದನಿಗೆ ಕರೆದುಕೊಂಡು ಹೋಗಿದ್ದು. ನಂತರ ಇಂದು ದಿನಾಂಕ:- 09/12/2017 ರಂದು ಬೆಳಿಗ್ಗೆ ಮೃತ ಜಗದೇವಿ ಇವಳು ನೋವು ಆಗುತ್ತಿದೆ ಅಂತಾ ನರಳಾಡುತ್ತಿದ್ದರಿಂದ್ದ ಅವಳನ್ನು ಮೃತಳ ಗಂಡ ಮಹಾಲಿಂಗಪ್ಪ  ಮತ್ತು ಅವರ ಸ್ನೇಹಿತ ಬಸವರಾಜ ತಂದೆ ಸೈದಪ್ಪ ದಂಡೋತ್ತಿ ಇಬ್ಬರು ಪರಿಚಯದ ಗುಂಡಪ್ಪ ತಂದೆ ಮಲಕಣ್ಣಾ ಘತ್ತರಗಿ ಇವರ ಕಾರ ನಂ MH-16 R-2181 ರಲ್ಲಿ ಹಾಕಿಕೊಂಡು ಉಪಚಾರ ಕುರಿತು ಕಲಬುರಗಿಗೆ ತರುವಾಗ ಮಾರ್ಗಮದ್ಯದಲ್ಲಿ ಅಂದರೇ ಕಲಬುರಗಿ ಸಮೀಪ ಮದ್ಯಾಹ್ನ 12:30 ಗಂಟೆಗೆ ಜಗದೇವಿ ಇವಳು ಮೃತಪಟ್ಟಿರುತ್ತಾಳೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.