POLICE BHAVAN KALABURAGI

POLICE BHAVAN KALABURAGI

24 October 2017

KALABURAGI DISTRICT REPORTED CRIMES

ಆಕ್ರಮವಾಗಿ ಮರಳು ಸಾಗಿಸುತ್ತಿದ್ದ ಟಿಪ್ಪರಗಳ  ಜಪ್ತಿ  :
ಅಫಜಲಪೂರ ಠಾಣೆ : ದಿನಾಂಕ 23-10-2017 ರಂದು ರಾತ್ರಿ ಗುಡ್ಡೆವಾಡಿ ಗ್ರಾಮದಿಂದ ಟಿಪ್ಪರದಲ್ಲಿ ಮರಳು ತುಂಬಿಕೊಂಡು ಅಫಜಲಪೂರ ಕಡೆ ಬರುತ್ತಿದ್ದಾರೆ ಅಂತಾ ಮಾಹಿತಿ ಬಂದ ಮೇರೆಗೆ ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಪಟ್ಟಣದ ಬಸವೇಶ್ವರ ಸರ್ಕಲ ಹತ್ತಿರ ಹೋಗುತ್ತಿದ್ದಾಗ ಒಂದು ಮರಳು ತುಂಬಿದ ಟಿಪ್ಪರ ದುಧನಿ ರೋಡಿನ ಕಡೆಗೆ ಹೋಯಿತು, ಆಗ ನಾವು ನಮ್ಮ ಜೀಪಿನಲ್ಲಿ ಸದರಿ ಮರಳು ತುಂಬಿದ ಟಿಪ್ಪರ ಹಿಂದೆ ಚೆಜ್ ಮಾಡುತ್ತಾ ಹೊಗುತ್ತಿದ್ದಾಗ, ಸದರಿ ಮರಳು ತುಂಬಿದ ಟಿಪ್ಪರ ಚಾಲಕ ನಮ್ಮ ಪೊಲೀಸ್ ಜೀಪನ್ನು ನೋಡಿ ಮಾದಾಬಾಳ ತಾಂಡಾ ಹತ್ತಿರ ಟಿಪ್ಪರ ನಿಲ್ಲಿಸಿ ಕತ್ತಲಲ್ಲಿ ಓಡಿ ಹೋದನು. ಆಗ ನಾವು ಪಂಚರ ಸಮಕ್ಷಮ ಸದರಿ ಟಿಪ್ಪರನ್ನು ಚೆಕ್ಕ ಮಾಡಲು ಅದರಲ್ಲಿ ಮರಳು ತುಂಬಿದ್ದು ಇತ್ತು ಮತ್ತು ಅದರ ನಂ ಕೆಎ-32 ಸಿ-5067 ಅಂತಾ ಇದ್ದು ಸದರಿ ಟಿಪ್ಪರ ಅ.ಕಿ 10,00,000/-ರೂ  ಇರಬಹುದು. ಸದರಿ ಟಿಪ್ಪರದಲಿದ್ದ ಮರಳಿನ ಅ.ಕಿ 5000/- ರೂ ಇರಬಹುದು. ಅಕ್ರಮವಾಗಿ ಕಳ್ಳತನದಿಂದ ಮರಳು ತುಂಬಿದ ಟಿಪ್ಪರನ್ನು ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡು ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ
ಶಾಹಾಬಾದ ನಗರ ಠಾಣೆ : ದಿನಾಂಕ  23/10/201  ರಂದು ಬೆಳಿಗ್ಗೆ ಮುತ್ತಗಾ ಸಿಮಾಂತರದ ಕಾಗಿಣಾ ನದಿಯಿಂದ ಮರಳು ಕಳ್ಳತನದಿಂದ ಟಿಪ್ಪರನಲ್ಲಿ ಸಾಗಿಸುತ್ತಿದ್ದಾರೆ ಅಂತಾ ಮಾಹಿತಿ ಬಂದ ಮೇರೆಗೆ ಶ್ರೀ ಮಲ್ಲಿಕಾರ್ಜುನ ಶಿವಪೂರ ಉಪ ತಹಸಿಲ್ದಾರರು ಶಹಾಬಾದ ಗ್ರಾಮ ಲೇಖಾಪಾಲಕರಾದ ಕು. ಪಾರ್ವತಿ  ಮತ್ತು ಬಂಕೂರ ಗ್ರಾಮ ಸಹಾಯಕಿ ಶ್ರೀಮತಿ ಕಾಂತಮ್ಮ ರವರೊಂದಿಗೆ ಶಹಾಬಾದ ನಗರ ಪೊಲೀಸ ಠಾಣೆಗೆ ಬಂದು ಸಿಬ್ಬಂದಿಯವರೊಂದಿಗೆ ಭಂಕೂರ ಗ್ರಾಮದ ಗಣೇಶ ಗುಡಿ ಹತ್ತಿರ ಹೋಗಿ ನಿಂತಾಗ ಭಂಕೂರ ಕಡೆಯಿಂದ ಒಂದು ಮರಳು ತುಂಬಿದ ಟಿಪ್ಪರ ಬರುತ್ತಿರುವುದನ್ನು ನೋಡಿ ತಡೆದು ನಿಲ್ಲಿಸಿದಾಗ ಅದರಲ್ಲಿದ್ದ ಚಾಲಕ ಮತ್ತು  ಇನ್ನೊಬ್ಬ ಓಡಿ ಹೋದರು  ಪರಿಶೀಲಿಸಲಾಗಿ ಅದರಲ್ಲಿ ಮರಳು ತುಂಬಿದ್ದು ಸದರಿ ಟಿಪ್ಪರ ನಂ ಕೆ ಎ 20 ಬಿ 0020 ಇದ್ದು ಅ.ಕಿ 3 ಲಕ್ಷ ರೂ ಅದರಲ್ಲಿಯ ಮರಳು ಅ.ಕಿ 5000/- ರೂ ನ್ನೆದ್ದು ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡು  ಟಿಪ್ಪರ ಸಮೇತ ಶಾಹಾಬಾದ ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಹಲ್ಲೆ ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀ ಸೈಯದ ಜೀಲಾನ ಪಾಶ್ಯಾ ತಂದೆ ಸೈಯದ ರುಕ್ಮೊದಿನ್ ಸಾ: ಮನೆ ನಂ 10-1041/71 ನ್ಯೂ ಗಾಲಿಬ ಕಾಲೋನಿ ಎಮ್.ಎಸ್.ಕೆ.ಮೀಲ್ ಕಲಬುರಗಿ ಇವರು ದಿನಾಂಕ 21.10.2017 ರಂದು ಸಾಯಂಕಾಲ ನಾನು ನನ್ನ ಗೆಳೆಯ ವಿರಜಾ ಮೊಸಿನ ಬೇಗ ಕೂಡಿಕೊಂಡು ಮಹ್ಮದಿ ಚೌಕ ಹತ್ತಿರ ಇರುವ ಬಿಸ್ಮಿಲ್ಲಾ ಹೊಟೇಲಕ್ಕೆ ಚಹಾ ಕುಡಿಯಲು ಹೋಗಿದ್ದು. ಸದರಿ ಹೊಟೇಲದಲ್ಲಿ ಅಬ್ದುಲ ರಸೂಲ ತಂದೆ ಅಬ್ದುಲ ರಸೀದ ಮತ್ತು ಅಬ್ದುಲ ರುಸ್ತಮ ತಂದೆ ಅಬ್ದುಲ ರಸೀದ ಇವರು ಚಹಾ ಕುಡಿಯುತ್ತಿದ್ದು. ಸದರಿಯವರು ನನ್ನನ್ನು ನೋಡಿ ಏ ರಂಡಿ ಮಗನೆ ನಿನ್ನ ಸೊಕ್ಕು ಬಹಳ ಆಗಿದೆ ನೀನು ನಮಗೆ ಎದರು ಹಾಕಿಕೊಂಡು ಕೆಲಸ ಮಾಡುತ್ತಿ ಸೂಳಿ ಮಗನೆ ಅಂತ ಬೈಯುತ್ತಿದ್ದು ಆಗ ನಾನು ಸದರಿಯವರಿಗೆ ನಿಮ್ಮ ಹೆಸರಿಗೆ ನಾನು ಬರುವದಿಲ್ಲ ನೀವು ನನಗೆ ವಿನಾಕಾರ ಬೈಯುವದು ಸರಿ ಇರುವದಿಲ್ಲ ಅಂತ ಅಂದಿದ್ದು ಆಗ ಅಬ್ದುಲ ರಸೂಲ ಇತನು ರಂಡಿ ಮಗನೆ ನಮಗೆ ಎದರು ಮಾತನಾಡುತ್ತಿ ಅಂತ ಅನ್ನುತ್ತಾ ಅವನು ಕುಡಿಯುತ್ತಿದ್ದ ಚಾಹಾವನ್ನು ನನ್ನ ಮುಖದ ಮೇಲೆ ಹಾಕಿದ್ದು ಚಹಾ ನನ್ನ ಮುಖದ ಮೇಲೆ ಮತ್ತು ಬಟ್ಟೆಯ ಮೇಲೆ ಬಿದಿದ್ದು ಆಗ ನಾನು ಸದರಿಯವನಿಗೆ ಹೀಗೆಕೆ ಮಾಡುತ್ತಿದ್ದಿ ಅಂತ ಕೇಳುತ್ತಿದ್ದಾಗ ಅಬ್ದುಲ ರಸೂಲ ಮತ್ತು ಅಬ್ದುಲ ರುಸ್ತಮ ಇಬ್ಬರು ಕೂಡಿಕೊಂಡು ನನಗೆ ಹಿಡಿದುಕೊಂಡು ತಮ್ಮ ಕೈಗಳಿಂದ ನನ್ನ ಬೆನ್ನಿನ ಮೇಲೆ ಮತ್ತು ದೇಹದ ಇತರ ಭಾಗದಲ್ಲಿ ಹೊಡೆದು ಗುಪ್ತಗಾಯ ಪಡಿಸಿದ್ದು ಆಗ ನನ್ನ ಗೆಳೆಯ ಮಿರಜಾ ಮೊಸಿನ್ ಬೇಗ ಇತನು ನನಗೆ ಬಿಡಿಸಿಕೊಳ್ಳಲು ಬರುವಷ್ಠರಲ್ಲಿ ಅಬ್ದುಲ ರುಸ್ತಮ ಇತನು ತನ್ನ ಹತ್ತಿರ ಇದ್ದ ತಲವಾರ ತೆಗೆದುಕೊಂಡು ಅದರ ತುಂಬಿನಿಂದ ನನ್ನ ತಲೆಗೆ ಹೊಡೆದು ಗುಪ್ತಗಾಯ ಪಡಿಸಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

23 October 2017

KALABURAGI DISTRICT REPORTED CRIMES

ಕೊಲೆ ಪ್ರಕರಣ :
ರಾಘವೇಂದ್ರ ನಗರ ಠಾಣೆ : ದಿನಾಂಕ 21-10-2017  ರಂದು ನನ್ನ ಕೆಲಸ ಮುಗಿಸಿಕೊಂಡು ರಾತ್ರಿ ರಾಘವೆಂದ್ರ ಸ್ವಾಮಿ ಗುಡಿಯ ಪಕ್ಕದಲ್ಲಿ ನನ್ನ ಗೆಳೆಯ ಲಕ್ಷ್ಮಿಕಾಂತ ಪೂಜಾರಿ ಇತನು ಕುಳಿತ್ತಿದ್ದು ನಾನು ಅವನ ಹತ್ತಿರ ಹೋಗಿ ಮಾತನಾಡುತ್ತಾ ಕುಳಿತ್ತಿದ್ದು ರಾತ್ರಿ 9-30 ಗಂಟೆಯ ಸುಮಾರಿಗೆ ದಿನೇಶ ದೇಸಾಯಿ ಬಂದಿದ್ದು ಆಗ ಲಕ್ಷ್ಮಿಕಾಂತ ಇತನು ಸದರಿಯವರಿಗೆ ಮಹಾರಾಜರೆ ಅಂತ ಕರೆದಿದ್ದು ಆಗ ದಿನೇಶ ಇವರು ಲಕ್ಷ್ಮಿಕಾಂತನಿಗೆ ನೀನು ನನ್ನ ಸಂಗಡ ಮಾಜಾಕ (ಹುಡುಗಾಟ) ಮಾಡುತ್ತಿ ಅಂತ ಕೇಳಿದ್ದು ಅದೆ ವಿಷಯಕ್ಕೆ ಇಬ್ಬರ ಮಧ್ಯ ಬಾಯಿ ಮಾತಿನ ಜಗಳ ಆಗುತ್ತಿದ್ದು ಆಗ ನಾನು ಸದರಿ ದಿನೇಶ ಇವರಿಗೆ ಸಣ್ಣ ವಿಷಯಕ್ಕೆ ಜಗಳ ಎಕೆ ಮಾಡಿಕೊಳ್ಳುತ್ತಿರಿ ಅಂತ ಹೇಳಿದ್ದು ದಿನೇಶ ಇವರು ನನ್ನ ಅಂಗಿ ಕಾಲರ ಹಿಡಿದು ರಂಡಿ ಮಗನೆ ನೀನು ಯಾರು ನನಗೆ ಹೇಳುವವನು ಅಂತ ಬೈಯುತ್ತಾ ಕೈಯಿಂದ ನನ್ನ ಕಪಾಳ ಮೇಲೆ ಹೊಡೆದಿದ್ದು ದಿನಾಂಕ 22-10-2017 ರಂದು ಬೆಳ್ಳಿಗ್ಗೆ ಸದರಿ ದಿನೇಶ ದೇಸಾಯಿ ಮತ್ತು ಅವರ ಮಗ ಓಂ ದೇಸಾಯಿ ಕೂಡಿಕೊಂಡು ರಾಘವೆಂದ್ರ ಗುಡಿಯ ಹತ್ತಿರ ಬಂದಿದ್ದು ಆಗ ನಮ್ಮ ಅಣ್ಣ ಸಂಗಮೇಶ ಇತನು ಸದರಿ ದಿನೇಶ ದೇಸಾಯಿ ಇತನಿಗೆ ನಿನ್ನೆ ನೀವು ಯಾಕೆ ನಮ್ಮ ತಮ್ಮ ವಿಜಯಕುಮಾರ ನೊಂದಿಗೆ ಜಗಳ ತೆಗೆದು ಹೊಡೆದಿದ್ದಿರಿ ಅಂತ ಕೇಳಿದ್ದು ಆಗ ದಿನೇಶ ದೇಸಾಯಿ ಇತನು ನಿಮ್ಮ ತಮ್ಮನೆ ನನ್ನ ಸಂಗಡ ಜಗಳ ಮಾಡಿದ್ದಾನೆ ಈಗ ನೀನು ಕೆಳಲು ಬಂದಿದ್ದಿ ಮಗನೆ ಅಂತ ಬೈಯುತ್ತಿದ್ದು ಆಗ ನಾನು ನನ್ನ ಗೆಳೆಯ ಲಕ್ಷ್ಮಿಕಾಂತ ಸದರಿ ದಿನೇಶ ಇವರಿಗೆ ನೀವೆ ನಮ್ಮ ಸಂಗಡ ಜಗಳ ಮಾಡಿ ಈಗ ಇಲ್ಲ ಅಂತ ಹೇಳುತ್ತಿರಿ ಅಂತ ಅನ್ನುತ್ತಿದ್ದಾಗ ಸದರಿ ದಿನೇಶ ಇವರ ಮಗ ಓಂ ಇತನು ತನ್ನ ಹತ್ತಿರ ಯಾವುದೊ ಸ್ಪ್ರೇ ತೆಗೆದುಕೊಂಡು ನಮ್ಮ ಅಣ್ಣ ಸಂಗಮೇಶನ ಮುಖದ ಮೇಲೆ ಸಿಂಪಡಿಸಿ ತನ್ನ ಹತ್ತಿರ ಇದ್ದ  ಚಾಕು ತೆಗೆದುಕೊಂಡು ನಮ್ಮ ಅಣ್ಣನ ಎಡಗಾಲ ತೊಡೆಗೆ ಗುದದ್ವಾರ ಹತ್ತಿರ ಜೋರಾಗಿ ಹೊಡೆದಿದ್ದು. ಚಾಕು ನಮ್ಮ ಅಣ್ಣ ಎಡಗಾಲ ತೊಡೆಯ ಟೊಂಕದ ಹತ್ತಿರ ಛಪ್ಪೆಯ ಭಾಗದಲ್ಲಿ ಹೊರಗೆ ಬಂದು ಭಾರಿ ಗಾಯವಾಗಿದ್ದು, ಆಗ ನಾನು ಮತ್ತು ಲಕ್ಷ್ಮಿಕಾಂತ ಇಬ್ಬರು ಕೂಡಿಕೊಂಡು ನಮ್ಮ ಅಣ್ಣನಿಗೆ ಬಿಡಿಸಿಕೊಳ್ಳಲು ಹೊಗುತ್ತಿದ್ದಾಗ ಓಂ ಇತನು ಚಾಕವನ್ನು ನಮ್ಮ ಕಡೆಗೆ ತಿರುಗಾಡಿಸಿದ್ದು ಆಗ ನಾವು ಅಂಜಿ ಹಿಂದಕ್ಕೆ ಸರೆದಿದ್ದು ನಂತರ ಓಂ ಇತನು ಅದೆ ಚಾಕು ತೆಗೆದುಕೊಂಡು ನಮ್ಮ ಅಣ್ಣ ಸಂಗಮೇಶನ ಬಲಗಾಲ ತೊಡೆಗೆ ಚುಚ್ಚಿ ಹರಿದ ಭಾರಿಗಾಯವಾಗಿದ್ದು. ಸದರಿ ಓಂ ಇತನು ನಮ್ಮ ಅಣ್ಣನಿಗೆ ಚಾಕು ಚುಚ್ಚಿದ್ದರಿಂದ ನಮ್ಮ ಅಣ್ಣ ಕುಸಿದು ಕೆಳಗೆ ಬಿದ್ದಿದ್ದು ನಮ್ಮ ಅಣ್ಣ ಕೆಳಗೆ ಬಿದ್ದಿರುವದನ್ನು ನೋಡಿ ಓಂ ಮತ್ತು ಅವರ ತಂದೆ ದಿನೇಶ ದೇಸಾಯಿ ಇವರು ನಮ್ಮ ಅಣ್ಣನಿಗೆ ಅಲ್ಲೆ ಬಿಟ್ಟು ಹೋಗಿದ್ದು ನಂತರ ನಾನು ನಮ್ಮ ಅಣ್ಣನ ಹತ್ತಿರ ಹೋಗಿ ನೋಡಲು ಅವನ ಕಾಲುಗಳಿಂದ ಅತಿಯಾಗಿ ರಕ್ತಸ್ರಾವ ವಾಗುತ್ತಿದ್ದು ಆಗ ನಮ್ಮ ಗೆಳೆಯ ಲಕ್ಷ್ಮಿಕಾಂತ ಇತನು ಅಟೊ ತೆಗೆದುಕೊಂಡು ಬರಲು ಹೋಗಿ ಸ್ವಲ್ಪ ಸಮಯದಲ್ಲಿ ಲಕ್ಷ್ಮಿಕಾಂತ ಇತನ ಅಟೊ ತೆಗೆದುಕೊಂಡು ಬಂದಿದ್ದು ಆಗ ನಾನು ನಮ್ಮ ಗೆಳೆಯ ಲಕ್ಷ್ಮಿಕಾಂತ ಕೂಡಿಕೊಂಡು ನಮ್ಮ ಅಣ್ಣನಿಗೆ ಅಟೊದಲ್ಲಿ ಹಾಕಿಕೊಂಡು ಉಪಚಾರ ಕುರಿತು ಬಸವೇಶ್ವರ ಆಸ್ಪತ್ರೇಗೆ ತೆಗೆದುಕೊಂಡು ಹೋಗಿದ್ದು ವ್ಯಧ್ಯರು ನಮ್ಮ ಅಣ್ಣನಿಗೆ ಪರಿಕ್ಷೇ ಮಾಡಿ ಮೃತ ಪಟ್ಟಿದ್ದಾನೆ ಅಂತ ತಿಳಿಸಿದ್ದು  ನಂತರ ನಾವು ನಮ್ಮ ಅಣ್ಣನ ಶವವನ್ನು ಜಿಲ್ಲಾ ಸರಕಾರಿ ಆಸ್ಪತ್ರೇಗೆ ತೆಗೆದುಕೊಂಡು ಬಂದಿದ್ದು ಇರುತ್ತದೆ. ನಮ್ಮ ಅಣ್ಣ ಸಂಗಮೇಶನೊಂದಿಗೆ ಜಗಳ ಮಾಡಿ ಅವನ ಮುಖಕ್ಕೆ ಸ್ಪೇಯರ್ ಸಿಂಪಡಿಸಿ ಚಾಕುದಿಂದ ಎರಡು ಕಾಲಗಳಿಗೆ ಹೊಡೆದು ಕೊಲೆ ಮಾಡಿದ ದಿನೇಶ ದೇಸಾಯಿ, ಮತ್ತು ಓಂ ತಂದೆ ದಿನೇಶ ದೇಸಾಯಿ ಇವರ ವಿರುಧ್ದ ಕಾನೂನು ಕ್ರಮ ಕೈಕೊಳ್ಳಬೇಕು ಅಂತ ಶ್ರೀ ವಿಜಯಕುಮಾರ ನಂದರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಿಡಿಲು ಬಡಿದು ಸಾವು ಪ್ರಕರಣ :
ನರೋಣಾ ಠಾಣೆ : ದಿನಾಂಕ:22-10-2017 ರಂದು ಮಧ್ಯಾಹ್ನ ನಾನು ಮತ್ತು ನನ್ನ ಅತ್ತೆ ಶಾರದಾಬಾಯಿ ಮನೆಯಲ್ಲಿದ್ದಾಗ ನನ್ನ ಗಂಡನಾದ ರಾಜೇಂದ್ರ ಇವರು ನಮ್ಮ ಕೊಳ್ಳದ ಹೊಲಕ್ಕೆ ಹೋಗಿ ಎತ್ತುಗಳು ಮೇಯಿಕೊಂಡು ಬರುತ್ತೇನೆಂದು ಹೇಳಿ ಮನೆಯಿಂದ ಹೋದರು ಸಾಯಂಕಾಲ 4-30  ಗಂಟೆ ಸುಮಾರಿಗೆ ನಮ್ಮ ಮೈಧುನನಾದ ಮಲ್ಲಿಕಾರ್ಜುನ ಬಿರಾದಾರ ಇವರು ಮನೆಗೆ ಬಂದು ನನಗೆ ಹಾಗೂ ನನ್ನ ಅತ್ತಿಗೆ ನನ್ನ ಗಂಡನಾದ ರಾಜೇಂದ್ರ ಇವರು ಮಧ್ಯಾಹ್ನ 3-30 ಗಂಟೆ ಸುಮಾರಿಗೆ ಮಳೆ ಹಾಗೂ ಗುಡುಗು ಮತ್ತು ಸಿಡಿಲು ಆಗುವ ಕಾಲಕ್ಕೆ ಕೋಳದ ಹೊಲದಲ್ಲಿದ್ದಾಗ ಮೈಮೇಲೆ ಸಿಡಲು ಬಡಿದ್ದರಿಂದ ಸುಟ್ಟಂತ ಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ. ನಾನು ಹೋಗಿ ನೋಡಿಕೊಂಡು ಅವರ ಶವ ಮನೆಗೆ ತಗೆದುಕೊಂಡು ಬರುತ್ತೇನೆಂದು ಹೇಳಿ ಮನೆಯಿಂದ ಹೋಗಿ ಒಂದೆರಡು ತಾಸುಗಳ ನಂತರ ನನ್ನ ಮೈಧುನ ಹಾಗೂ ಇತರರು ಕೂಡಿ ನನ್ನ ಗಂಡನ ಶವ ಮನೆಗೆ ತಗೆದುಕೊಂಡು ಬಂದಿರುತ್ತಾರೆ. ನಾನು ನೋಡಲಾಗಿ ನನ್ನ ಗಂಡನ ಎಡಗಡೆ ಭುಜದಿಂದ ಎಡಗಾಲಿನ ಪಾದದ ವರೆಗೆ ಸುಟ್ಟಂತ ಕಪ್ಪಾದ ಗಾಯವಾಗಿ ಚರ್ಮ ಸುಲಿದಂತಾಗಿ ಒಳಗಿನ ಮೌಂಸ ಕಂಡು ಬರುತ್ತಿತ್ತು ದಿನಾಂಕ:22-10-2017 ರಂದು 3-30 ಪಿ.ಎಂ ದಿಂದ 4-00 ಪಿ.ಎಂ ಮಧ್ಯದ ಅವಧಿಯಲ್ಲಿ ನನ್ನ ಗಂಡನಾದ ರಾಜೇಂದ್ರ ಇವರು ನಮ್ಮ ಕೋಳದ ಹೊಲ ಸರ್ವೆ ನಂ-126 ರರಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗಿದಾಗ ಆಕಸ್ಮಿಕವಾಗಿ ಅವರಿಗೆ ಸಿಡಿಲು ಬಡಿದಿದ್ದರಿಂದ ಸ್ಥಳದಲ್ಲಿಯೇ ಮೃತ ಪಟ್ಟಿರುತ್ತಾರೆ. ಅಂತಾ ಶ್ರೀಮತಿ ಮಹಾದೇವಿ ಗಂಡ ರಾಜೇಂದ್ರ ಬಿರಾದಾರ ಸಾ||ಬೋಧನ ಇವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

20 October 2017

KALABURAGI DISTRICT REPORTED CRIMES

ಅಪಘಾತ ಪ್ರಕರಣ :
ಕಮಲಾಪೂರ ಠಾಣೆ : ಶ್ರೀ ಮಲ್ಲಿಕಾರ್ಜುನ ತಂದೆ ಹಣಮಂತಪ್ಪ ರಾಗಿ ಸಾ:ಡೊಂಗರಗಾಂವ ತಾ:ಜಿ:ಕಲಬುರಗಿ ಇವರು ದಿನಾಂಕ :18.10.2017 ರಂದು ಮುಂಜಾನೆಯ ವೇಳೆಯಲ್ಲಿ ನಾನು ಮತ್ತು ನಮ್ಮೂರ ನನ್ನ ಗೆಳೆಯರಾದ ಮಹಾಂತೇಶ ಮಹೇಶನವರ್ ಹಾಗೂ ಸಚಿನ ಕಾಂಬಳೆ ಹಿಗೇಲ್ಲರೂ ಕೂಡಿಕೊಂಡು ಡೊಂಗರಗಾಂವ ಸೀಮಾಂತರದ ಹೈವೆ ರಸ್ತೆಗೆ ಹೊಂದಿಕೊಂಡಿರುವ ನನ್ನ ಹೋಲಕ್ಕೆ ಹೋಗಿದ್ದು ಇರುತ್ತದೆ. ನಂತರ ನಿನ್ನೆ ಸಾಯಂಕಾಲದ ವೇಳೆಯಲ್ಲಿ ನಾವೇಲ್ಲರೂ ಕೂಡಿಕೊಂಡು ನಮ್ಮ ಹೋಲದಿಂದ ಡೊಂಗರಗಾಂವಗೆ ಹೋಗುವ ಕುರಿತು ಹುಮನಾಬಾದ ಕಲಬುರಗಿ ಹೆದ್ದಾರಿಯ ಮೇಲಿಂದ ನಡೆದುಕೊಂಡು ಬರುತ್ತಿದ್ದು. ಸಾಯಂಕಾಲ 07 ಗಂಟೆಯ ಸೂಮಾರಿಗೆ ನಾವು ಮುರು ಜನ ಡೊಂಗರಗಾಂವ ಕ್ರಾಸ ಹತ್ತೀರ ರೋಡ ದಾಟುತ್ತಿದ್ದಾಗ ನಮ್ಮ ಹಿಂದಿನಿಂದ ಅಂದರೆ ಹುಮಾನಾಬಾದ ಕಡೆಯಿಂದ ಒಬ್ಬ ಮೋಟರಸೈಕಲ ಸವಾರನು ತನ್ನ ಮೋಟರ ಸೈಕಲನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ನಡೆದುಕೊಂಡು ರಸ್ತೆ ದಾಟುತ್ತಿದ್ದ ನನಗೆ ಹಾಗೂ ನನ್ನ ಗೆಳೆಯರಾದ ಸಚಿನ ಕಾಂಬಳೆ ಹಾಗೂ ಮಹಾಂತೇಶನಿಗೆ ಡಿಕ್ಕಿಪಡಿಸಿ ಮೋಟರ ಸೈಕಲ ಸಮೇತ ನಮ್ಮ ಮೇಲೆ ಬಿದ್ದನು. ನಂತರ ನಮಗೆ ಅಪಘಾತವಾದನ್ನು ಅಲ್ಲೆ ನಿಂತು ನೋಡುತ್ತಿದ್ದ ನಮ್ಮೂರ ಸತಿಶ ಹಿಪ್ಪರಗಿ ಇವರು ಬಂದು ನನಗೆ ಎಬ್ಬಿಸಿ ನೋಡಲು ನನ್ನ ಬಲಕಾಲ ತೋಡೆಗೆ ಹಾಗೂ ಮೋಣಕಾಲಿನ ಕೆಳಭಾಗದಲ್ಲಿ ಭಾರಿ ರಕ್ತಗಾಯವಾಗಿದ್ದು. ಮತ್ತು ಬಲಕಾಲ ಹಿಮ್ಮಡಿಗೆ ಮತ್ತು ಬಲ ಕಿಪ್ಪಡಿ ಹತ್ತೀರ ಸಣ್ಣಪುಟ್ಟ ರಕ್ತಗಾಯಗಳಾಗಿದ್ದು. ನನ್ನಂತೆ ಸಚಿನ ಈತನಿಗೆ ನೋಡಲು ಅವನ ಬಲಕಾಲ ಮೋಣಕಾಲಿಗೆ ತರಚಿದ ಗಾಯ ಬಲಗೈ ಮೋಣಕೈಗೆ ರಕ್ತಗಾಯ ಬಲಭುಜದ ಹಿಂಭಾಕ್ಕೆ ತರಚಿದ ಮತ್ತು ಬಲಕೈ ಬೆರಳುಗಳಿಗೆ ತರಚಿದ ಗಾಯಗಳಾಗಿ ಟೊಂಕಕ್ಕೆ ಗುಪ್ತಪೆಟ್ಟಾಗಿದ್ದು. ಅದೇ ರೀತಿ ಮಹಾಂತೇಶನಿಗೆ ಬಲಕಾಲಿನ ಕಿರುಬೆರಳಿಗೆ ಬಲಕೈ ಉಂಗುರ ಮತ್ತು ಕಿರುಬೆರಳಿಗೆ ರಕ್ತಗಾಯ ಬಲ ಮುಂಗೈಗೆ ಮತ್ತು ಬಲಭುಜಕ್ಕೆ ತರಚಿದ ಗಾಯಗಳಾಗಿದ್ದು. ಅಪಘಾತ ನಂತರ ಆರೋಪಿತನು ಮೋ.ಸೈಕಲ ಅಲ್ಲೆ ಬಿಟ್ಟು ಅಲ್ಲಿಂದ ಓಡಿ ಹೋಗಿರುತ್ತಾನೆ. ಆತನಿಗೆ ನೋಡಿದರೆ ಗುರುತಿಸುತ್ತೇನೆ. ನಂತರ ನಮಗೆ ಅಪಘಾತ ಪಡಿಸಿದ ಮೋ.ಸೈಕಲ ನೋಡಲು ಅದು ಹಿರೋ ಸ್ಪ್ಲೆಂಡರ ಮೋ.ಸೈಕಲ ನಂ.ಕೆಎ.32 ಇಪಿ.7833 ನೇದ್ದು ಇರುತ್ತದೆ.  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನ್ಯಾಯಾಲಕ್ಕೆ ಹಾಜರಾಗದೆ ತಲೆಮರಿಕೊಂಡವರ ವಿರುದ್ಧ ಕಾನೂನಿನ ಕ್ರಮ :
ನರೋಣಾ ಠಾಣೆ : ಶ್ರೀ.ವಿಠಲ್ ಸಿ.ಹೆಚ್.ಸಿ-317 ನರೋಣಾ ಪೊಲೀಸ್ ಠಾಣೆ ರವರು  ನರೋಣಾ ಪೊಲೀಸ್ ಠಾಣೆಯ ಗುನ್ನೆ ನಂ-89/2013 ಕಲಂ 143 147 341 504 506 114 149 ಐಪಿಸಿ ಪ್ರಕರಣದಲ್ಲಿಯ ಎ1-ನಾರಾಯಣ ತಂದೆ ವೆಂಕಟ್ ಚವ್ಹಾಣ್ ವಯಾ:38 ವರ್ಷ, ಜಾತಿ:ಲಂಬಾಣಿ, ಸಾ||ಧರಿತಾಂಡಾ, 3-ಪೇಮು ತಂದೆ ವೆಂಕಟ್ ಚವ್ಹಾಣ್ ವಯಾ:26 ವರ್ಷ, ಜಾತಿ:ಲಂಬಾಣಿ, ಸಾ||ಧರಿತಾಂಡಾ, ಹಾಗೂ ಎ5-ರವಿ ತಂದೆ ಕಿಶನ್ ಪವಾರ್, ವಯಾ:22 ವರ್ಷ, ಜಾತಿ:ಲಂಬಾಣಿ, ಸಾ||ಧರಿತಾಂಡಾ, ಇವರುಗಳು ಮಾನ್ಯ ನ್ಯಾಯಾಲಯದಲ್ಲಿ ಮುಚ್ಚಳಿಕೆ ಪತ್ರ ಬರೆದುಕೊಟ್ಟು ಜಾಮೀನು ಪಡೆದುಕೊಂಡಿರುತ್ತರೆ. ಈ ಆಪಾದೀತರು ಜಾಮೀನು ಪಡೆದುಕೊಂಡು ವಿಚಾರಣೆಗಾಗಿ ಮಾನ್ಯ ಜೆ.ಎಂ.ಎಪ್.ಸಿ ನ್ಯಾಯಾಲಯ ಆಳಂದಕ್ಕೆ ಹಾಜರಾಗದೆ ಇರುವುದರಿಂದ ಮಾನ್ಯ ನ್ಯಾಯಾಲಯವು ಈ ಆಪಾದೀತರನ್ನು ಹಾಜರು ಪಡಿಸುವಂತೆ ಆದೇಶಿಸಿ ದಿನಾಂಕ:10/10/2017 ರಂದು ದಸ್ತಗಿರಿ ವಾರೆಂಟ್ ಹೊರಡಿಸಿರುತ್ತಾರೆ. ಅದರಂತೆ ನಾನು ಮಾನ್ಯ ನ್ಯಾಯಾಲಯದ ಆದೇಶದ ಮೆರೇಗೆ ಸದರಿ ಪ್ರಕರಣದಲ್ಲಿಯ ಆರೋಪಿತರನ್ನು ದಸ್ತಗಿರಿ ಮಾಡಿ ನ್ಯಾಯಾಲಯದ ಮುಂದೆ ಹಾಜರು ಪಡಿಸುವ ಕುರಿತು ದಿನಾಂಕ:16/10/2017 ಹಾಗೂ ದಿನಾಂಕ:17/10/2017 ರಂದು ಧರಿತಾಂಡಾಕ್ಕೆ ಭೇಟಿನೀಡಿ ಆಪಾದೀರತ ಮನೆಗೆ ಹೋಗಿ ವಿಚಾರಿಸಲಾಗಿ  ತಲೆಮರೆಸಿಕೊಂಡಿರುವ ಬಗ್ಗೆ ತಿಳಿದು ಬಂದಿರುತ್ತದೆ ನಂತರ ಬಾತ್ಮೀದಾರರನ್ನು ವಿಚಾರಿಸಲಾಗಿ ಆಪಾದೀತರ ಇರುವಿಕೆ ಖಚಿತ ವಿಳಾಸ ತಿಳಿದು ಬಂದಿರುವುದಿಲ್ಲ.  ಈ ಆಪಾದೀತರು ಜಾಮೀನು ಆಧಾರದ ಮೇಲೆ ಬಿಡುಗಡೆಯಾಗಿ ವಿಚಾರಣೆಕಾಲಕ್ಕೆ ಮಾನ್ಯ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮೆರೆಸಿಕೊಂಡು ವಿಚಾರಣೆ ದಿನಾಂಕ:23/09/2017, ದಿನಾಂಕ:10/10/2017 ರಂದು ಮಾನ್ಯ ನ್ಯಾಯಾಲಯಕ್ಕೆ ಹಾಜರು ಆಗುವದನ್ನು ತಪ್ಪಿಸಿರುತ್ತಾರೆ. ಕಾರಣ ಈ ಮೇಲೆ ನಮೂದಿಸಿದ ಆಪಾದೀತರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ  ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತಪಡಿಸಿ ಹಲ್ಲೆ ಮಾಡಿದ ಪ್ರಕರಣ :
ಗ್ರಾಮೀಣ ಠಾಣೆ : ಸೈಫನಸಾಬ ಇತನು ಆಳಂದ ರೋಡ ಕಡೆಯಿಂದ ಲಾರಿ  MH 12 FZ 7247  ನೇದ್ದು ಅತಿವೇಗದಿಂದ ಮತ್ತು ನಿಷ್ಕಾಳಿಜಿತನದಿಂದ  ಚಾಲನೆ ಮಾಡುತ್ತಾ  ಇಂದು ದಿನಾಂಕ 18/10/2017 ರಂದು ಮಧ್ಯಾಹ್ನ 12-00 ಗಂಟೆ ಸುಮಾರಿಗೆ ಸುಂಟನೂರ ಕ್ರಾಸ ಇನ್ನೂ ಸ್ವಲ್ಪ ಮುಂದೆ ಇರುವಂತೆ ಅತಿವೇಗದಿಂದ ನಡೆಸುತ್ತಾ ಹೊರಟಾಗ ಸೈಫನಸಾಬ ನಡೆಸುತ್ತಿದ್ದ ಲಾರಿಯ ಮುಂದಿನ ಟಾಯರ ಹೇಗೋ ಅಕಸ್ಮಿಕವಾಗಿ ಭಸ್ಟ ಆಗಲು ಆಯತಪ್ಪಿ ಕಲಬುರಗಿ ಕಡೆಯಿಂದ ಬರುತ್ತಿದ್ದ ಸಿಮೆಂಟ ಬಲಕರ ಟ್ಯಾಂಕರ  ವಾಹನಕ್ಕೆ ತಗುಲಿ ಅಪಘಾತಪಡಿಸಿದ್ದು. ಆಗ ಎರಡು ವಾಹನ ಚಾಲಕರು ತಮ್ಮ ತಮ್ಮ  ವಾಹನಗಳು ನಿಲ್ಲಿಸಿ ಕೆಳೆಗೆ ಇಳಿದಿದ್ದು,  ಆಗ ಸಿಮೆಂಟ ಬಲಕರ ಟ್ಯಾಂಕರ MH 25 F 0047 ಚಾಲಕ ಹೆಸರು ಕೇಳಿ ಗೊತ್ತಾದ  ಅಲೀಮ ತಂದೆ ರಫೀಕ ಶೇಖ ಸಾ: ಇಂದ್ರಾ ನಗರ ನಳದುರ್ಗ ತಾ:ತುಳಜಾಪೂರ ಜಿಲ್ಲಾ ಉಸ್ಮಾನಾಬಾದ  ಇತನು ಸೈಫಸಾಬ ಹತ್ತಿರ ಹೋಗಿ ಅವನಿಗೆ ಭೋಸಡಿಕೇ ಆಂಗ ಪೇ ಗಾಡಿ ಲೇಕೆ ಆ ಕೋ ಮೇರೆಕೋ ಜಾನ ಸೇ ಕತಮ ಕರನೇಕಾ ಇರಾದಾ ಹೈ ಕ್ಯಾ ಸಾಲೇ  ಅಂತಾ ಬೈಯ್ಯುತ್ತಾ ತನ್ನ ಸಿಮೆಂಟ ಕ್ಯಾಂಟರನಲ್ಲಿದ್ದ ಒಂದು ಕಬ್ಬಿಣದ ರಾಡು ತೆಗೆದುಕೊಂಡು ಸೈಫನನ ಎಡ ತಲೆಯ ಮೇಲೆ ಹೊಡೆದು ಮರಣಾಂತಿಕ ಹಲ್ಲೆ ಮಾಡಿ ಭಾರಿ ರಕ್ತಗಾಯಗೊಳಿಸಿ ಕೊಲೆ ಮಾಡಲು ಪ್ರಯತ್ನಿಸಿರುತ್ತಾನೆ.