POLICE BHAVAN KALABURAGI

POLICE BHAVAN KALABURAGI

20 October 2017

KALABURAGI DISTRICT REPORTED CRIMES

ಅಪಘಾತ ಪ್ರಕರಣ :
ಕಮಲಾಪೂರ ಠಾಣೆ : ಶ್ರೀ ಮಲ್ಲಿಕಾರ್ಜುನ ತಂದೆ ಹಣಮಂತಪ್ಪ ರಾಗಿ ಸಾ:ಡೊಂಗರಗಾಂವ ತಾ:ಜಿ:ಕಲಬುರಗಿ ಇವರು ದಿನಾಂಕ :18.10.2017 ರಂದು ಮುಂಜಾನೆಯ ವೇಳೆಯಲ್ಲಿ ನಾನು ಮತ್ತು ನಮ್ಮೂರ ನನ್ನ ಗೆಳೆಯರಾದ ಮಹಾಂತೇಶ ಮಹೇಶನವರ್ ಹಾಗೂ ಸಚಿನ ಕಾಂಬಳೆ ಹಿಗೇಲ್ಲರೂ ಕೂಡಿಕೊಂಡು ಡೊಂಗರಗಾಂವ ಸೀಮಾಂತರದ ಹೈವೆ ರಸ್ತೆಗೆ ಹೊಂದಿಕೊಂಡಿರುವ ನನ್ನ ಹೋಲಕ್ಕೆ ಹೋಗಿದ್ದು ಇರುತ್ತದೆ. ನಂತರ ನಿನ್ನೆ ಸಾಯಂಕಾಲದ ವೇಳೆಯಲ್ಲಿ ನಾವೇಲ್ಲರೂ ಕೂಡಿಕೊಂಡು ನಮ್ಮ ಹೋಲದಿಂದ ಡೊಂಗರಗಾಂವಗೆ ಹೋಗುವ ಕುರಿತು ಹುಮನಾಬಾದ ಕಲಬುರಗಿ ಹೆದ್ದಾರಿಯ ಮೇಲಿಂದ ನಡೆದುಕೊಂಡು ಬರುತ್ತಿದ್ದು. ಸಾಯಂಕಾಲ 07 ಗಂಟೆಯ ಸೂಮಾರಿಗೆ ನಾವು ಮುರು ಜನ ಡೊಂಗರಗಾಂವ ಕ್ರಾಸ ಹತ್ತೀರ ರೋಡ ದಾಟುತ್ತಿದ್ದಾಗ ನಮ್ಮ ಹಿಂದಿನಿಂದ ಅಂದರೆ ಹುಮಾನಾಬಾದ ಕಡೆಯಿಂದ ಒಬ್ಬ ಮೋಟರಸೈಕಲ ಸವಾರನು ತನ್ನ ಮೋಟರ ಸೈಕಲನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ನಡೆದುಕೊಂಡು ರಸ್ತೆ ದಾಟುತ್ತಿದ್ದ ನನಗೆ ಹಾಗೂ ನನ್ನ ಗೆಳೆಯರಾದ ಸಚಿನ ಕಾಂಬಳೆ ಹಾಗೂ ಮಹಾಂತೇಶನಿಗೆ ಡಿಕ್ಕಿಪಡಿಸಿ ಮೋಟರ ಸೈಕಲ ಸಮೇತ ನಮ್ಮ ಮೇಲೆ ಬಿದ್ದನು. ನಂತರ ನಮಗೆ ಅಪಘಾತವಾದನ್ನು ಅಲ್ಲೆ ನಿಂತು ನೋಡುತ್ತಿದ್ದ ನಮ್ಮೂರ ಸತಿಶ ಹಿಪ್ಪರಗಿ ಇವರು ಬಂದು ನನಗೆ ಎಬ್ಬಿಸಿ ನೋಡಲು ನನ್ನ ಬಲಕಾಲ ತೋಡೆಗೆ ಹಾಗೂ ಮೋಣಕಾಲಿನ ಕೆಳಭಾಗದಲ್ಲಿ ಭಾರಿ ರಕ್ತಗಾಯವಾಗಿದ್ದು. ಮತ್ತು ಬಲಕಾಲ ಹಿಮ್ಮಡಿಗೆ ಮತ್ತು ಬಲ ಕಿಪ್ಪಡಿ ಹತ್ತೀರ ಸಣ್ಣಪುಟ್ಟ ರಕ್ತಗಾಯಗಳಾಗಿದ್ದು. ನನ್ನಂತೆ ಸಚಿನ ಈತನಿಗೆ ನೋಡಲು ಅವನ ಬಲಕಾಲ ಮೋಣಕಾಲಿಗೆ ತರಚಿದ ಗಾಯ ಬಲಗೈ ಮೋಣಕೈಗೆ ರಕ್ತಗಾಯ ಬಲಭುಜದ ಹಿಂಭಾಕ್ಕೆ ತರಚಿದ ಮತ್ತು ಬಲಕೈ ಬೆರಳುಗಳಿಗೆ ತರಚಿದ ಗಾಯಗಳಾಗಿ ಟೊಂಕಕ್ಕೆ ಗುಪ್ತಪೆಟ್ಟಾಗಿದ್ದು. ಅದೇ ರೀತಿ ಮಹಾಂತೇಶನಿಗೆ ಬಲಕಾಲಿನ ಕಿರುಬೆರಳಿಗೆ ಬಲಕೈ ಉಂಗುರ ಮತ್ತು ಕಿರುಬೆರಳಿಗೆ ರಕ್ತಗಾಯ ಬಲ ಮುಂಗೈಗೆ ಮತ್ತು ಬಲಭುಜಕ್ಕೆ ತರಚಿದ ಗಾಯಗಳಾಗಿದ್ದು. ಅಪಘಾತ ನಂತರ ಆರೋಪಿತನು ಮೋ.ಸೈಕಲ ಅಲ್ಲೆ ಬಿಟ್ಟು ಅಲ್ಲಿಂದ ಓಡಿ ಹೋಗಿರುತ್ತಾನೆ. ಆತನಿಗೆ ನೋಡಿದರೆ ಗುರುತಿಸುತ್ತೇನೆ. ನಂತರ ನಮಗೆ ಅಪಘಾತ ಪಡಿಸಿದ ಮೋ.ಸೈಕಲ ನೋಡಲು ಅದು ಹಿರೋ ಸ್ಪ್ಲೆಂಡರ ಮೋ.ಸೈಕಲ ನಂ.ಕೆಎ.32 ಇಪಿ.7833 ನೇದ್ದು ಇರುತ್ತದೆ.  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನ್ಯಾಯಾಲಕ್ಕೆ ಹಾಜರಾಗದೆ ತಲೆಮರಿಕೊಂಡವರ ವಿರುದ್ಧ ಕಾನೂನಿನ ಕ್ರಮ :
ನರೋಣಾ ಠಾಣೆ : ಶ್ರೀ.ವಿಠಲ್ ಸಿ.ಹೆಚ್.ಸಿ-317 ನರೋಣಾ ಪೊಲೀಸ್ ಠಾಣೆ ರವರು  ನರೋಣಾ ಪೊಲೀಸ್ ಠಾಣೆಯ ಗುನ್ನೆ ನಂ-89/2013 ಕಲಂ 143 147 341 504 506 114 149 ಐಪಿಸಿ ಪ್ರಕರಣದಲ್ಲಿಯ ಎ1-ನಾರಾಯಣ ತಂದೆ ವೆಂಕಟ್ ಚವ್ಹಾಣ್ ವಯಾ:38 ವರ್ಷ, ಜಾತಿ:ಲಂಬಾಣಿ, ಸಾ||ಧರಿತಾಂಡಾ, 3-ಪೇಮು ತಂದೆ ವೆಂಕಟ್ ಚವ್ಹಾಣ್ ವಯಾ:26 ವರ್ಷ, ಜಾತಿ:ಲಂಬಾಣಿ, ಸಾ||ಧರಿತಾಂಡಾ, ಹಾಗೂ ಎ5-ರವಿ ತಂದೆ ಕಿಶನ್ ಪವಾರ್, ವಯಾ:22 ವರ್ಷ, ಜಾತಿ:ಲಂಬಾಣಿ, ಸಾ||ಧರಿತಾಂಡಾ, ಇವರುಗಳು ಮಾನ್ಯ ನ್ಯಾಯಾಲಯದಲ್ಲಿ ಮುಚ್ಚಳಿಕೆ ಪತ್ರ ಬರೆದುಕೊಟ್ಟು ಜಾಮೀನು ಪಡೆದುಕೊಂಡಿರುತ್ತರೆ. ಈ ಆಪಾದೀತರು ಜಾಮೀನು ಪಡೆದುಕೊಂಡು ವಿಚಾರಣೆಗಾಗಿ ಮಾನ್ಯ ಜೆ.ಎಂ.ಎಪ್.ಸಿ ನ್ಯಾಯಾಲಯ ಆಳಂದಕ್ಕೆ ಹಾಜರಾಗದೆ ಇರುವುದರಿಂದ ಮಾನ್ಯ ನ್ಯಾಯಾಲಯವು ಈ ಆಪಾದೀತರನ್ನು ಹಾಜರು ಪಡಿಸುವಂತೆ ಆದೇಶಿಸಿ ದಿನಾಂಕ:10/10/2017 ರಂದು ದಸ್ತಗಿರಿ ವಾರೆಂಟ್ ಹೊರಡಿಸಿರುತ್ತಾರೆ. ಅದರಂತೆ ನಾನು ಮಾನ್ಯ ನ್ಯಾಯಾಲಯದ ಆದೇಶದ ಮೆರೇಗೆ ಸದರಿ ಪ್ರಕರಣದಲ್ಲಿಯ ಆರೋಪಿತರನ್ನು ದಸ್ತಗಿರಿ ಮಾಡಿ ನ್ಯಾಯಾಲಯದ ಮುಂದೆ ಹಾಜರು ಪಡಿಸುವ ಕುರಿತು ದಿನಾಂಕ:16/10/2017 ಹಾಗೂ ದಿನಾಂಕ:17/10/2017 ರಂದು ಧರಿತಾಂಡಾಕ್ಕೆ ಭೇಟಿನೀಡಿ ಆಪಾದೀರತ ಮನೆಗೆ ಹೋಗಿ ವಿಚಾರಿಸಲಾಗಿ  ತಲೆಮರೆಸಿಕೊಂಡಿರುವ ಬಗ್ಗೆ ತಿಳಿದು ಬಂದಿರುತ್ತದೆ ನಂತರ ಬಾತ್ಮೀದಾರರನ್ನು ವಿಚಾರಿಸಲಾಗಿ ಆಪಾದೀತರ ಇರುವಿಕೆ ಖಚಿತ ವಿಳಾಸ ತಿಳಿದು ಬಂದಿರುವುದಿಲ್ಲ.  ಈ ಆಪಾದೀತರು ಜಾಮೀನು ಆಧಾರದ ಮೇಲೆ ಬಿಡುಗಡೆಯಾಗಿ ವಿಚಾರಣೆಕಾಲಕ್ಕೆ ಮಾನ್ಯ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮೆರೆಸಿಕೊಂಡು ವಿಚಾರಣೆ ದಿನಾಂಕ:23/09/2017, ದಿನಾಂಕ:10/10/2017 ರಂದು ಮಾನ್ಯ ನ್ಯಾಯಾಲಯಕ್ಕೆ ಹಾಜರು ಆಗುವದನ್ನು ತಪ್ಪಿಸಿರುತ್ತಾರೆ. ಕಾರಣ ಈ ಮೇಲೆ ನಮೂದಿಸಿದ ಆಪಾದೀತರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ  ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತಪಡಿಸಿ ಹಲ್ಲೆ ಮಾಡಿದ ಪ್ರಕರಣ :
ಗ್ರಾಮೀಣ ಠಾಣೆ : ಸೈಫನಸಾಬ ಇತನು ಆಳಂದ ರೋಡ ಕಡೆಯಿಂದ ಲಾರಿ  MH 12 FZ 7247  ನೇದ್ದು ಅತಿವೇಗದಿಂದ ಮತ್ತು ನಿಷ್ಕಾಳಿಜಿತನದಿಂದ  ಚಾಲನೆ ಮಾಡುತ್ತಾ  ಇಂದು ದಿನಾಂಕ 18/10/2017 ರಂದು ಮಧ್ಯಾಹ್ನ 12-00 ಗಂಟೆ ಸುಮಾರಿಗೆ ಸುಂಟನೂರ ಕ್ರಾಸ ಇನ್ನೂ ಸ್ವಲ್ಪ ಮುಂದೆ ಇರುವಂತೆ ಅತಿವೇಗದಿಂದ ನಡೆಸುತ್ತಾ ಹೊರಟಾಗ ಸೈಫನಸಾಬ ನಡೆಸುತ್ತಿದ್ದ ಲಾರಿಯ ಮುಂದಿನ ಟಾಯರ ಹೇಗೋ ಅಕಸ್ಮಿಕವಾಗಿ ಭಸ್ಟ ಆಗಲು ಆಯತಪ್ಪಿ ಕಲಬುರಗಿ ಕಡೆಯಿಂದ ಬರುತ್ತಿದ್ದ ಸಿಮೆಂಟ ಬಲಕರ ಟ್ಯಾಂಕರ  ವಾಹನಕ್ಕೆ ತಗುಲಿ ಅಪಘಾತಪಡಿಸಿದ್ದು. ಆಗ ಎರಡು ವಾಹನ ಚಾಲಕರು ತಮ್ಮ ತಮ್ಮ  ವಾಹನಗಳು ನಿಲ್ಲಿಸಿ ಕೆಳೆಗೆ ಇಳಿದಿದ್ದು,  ಆಗ ಸಿಮೆಂಟ ಬಲಕರ ಟ್ಯಾಂಕರ MH 25 F 0047 ಚಾಲಕ ಹೆಸರು ಕೇಳಿ ಗೊತ್ತಾದ  ಅಲೀಮ ತಂದೆ ರಫೀಕ ಶೇಖ ಸಾ: ಇಂದ್ರಾ ನಗರ ನಳದುರ್ಗ ತಾ:ತುಳಜಾಪೂರ ಜಿಲ್ಲಾ ಉಸ್ಮಾನಾಬಾದ  ಇತನು ಸೈಫಸಾಬ ಹತ್ತಿರ ಹೋಗಿ ಅವನಿಗೆ ಭೋಸಡಿಕೇ ಆಂಗ ಪೇ ಗಾಡಿ ಲೇಕೆ ಆ ಕೋ ಮೇರೆಕೋ ಜಾನ ಸೇ ಕತಮ ಕರನೇಕಾ ಇರಾದಾ ಹೈ ಕ್ಯಾ ಸಾಲೇ  ಅಂತಾ ಬೈಯ್ಯುತ್ತಾ ತನ್ನ ಸಿಮೆಂಟ ಕ್ಯಾಂಟರನಲ್ಲಿದ್ದ ಒಂದು ಕಬ್ಬಿಣದ ರಾಡು ತೆಗೆದುಕೊಂಡು ಸೈಫನನ ಎಡ ತಲೆಯ ಮೇಲೆ ಹೊಡೆದು ಮರಣಾಂತಿಕ ಹಲ್ಲೆ ಮಾಡಿ ಭಾರಿ ರಕ್ತಗಾಯಗೊಳಿಸಿ ಕೊಲೆ ಮಾಡಲು ಪ್ರಯತ್ನಿಸಿರುತ್ತಾನೆ.  

17 October 2017

KALABURAGI DISTRICT REPORTED CRIMES

ಅಫಜಲಪೂರ ಪೊಲೀಸ್ ಠಾಣೆ:
ವಾಹನ ಕಳವು ಪ್ರಕರಣ: ದಿನಾಂಕ 15/10/2017 ರಂದು ಶ್ರೀ ಸಿದ್ದಾರಾಮ ತಂದೆ ಶಿವಾನಂದ ಠಕ್ಕಾ ಸಾ|| ಬಳೂರ್ಗಿ ಇವರು ಠಾಣೆಗೆ ಹಾಜರಾಗಿ ನ್ನ ಹಿರೋ ಸ್ಪೇಂಡರ್ ಪ್ಲಸ್ ಮೋಟಾರ ಸೈಕಲ ನಂಬರ ಕೆಎ-32 ಇಎಫ್-8692, ಅಂದಾಜು 25,000/- ರೂ  ನೇದ್ದನ್ನು   ದಿನಾಂಕ 30-09-2017 ರಂದು ಮ್ಮ ಹೊಲಕ್ಕೆ ಹೋಗಿದ್ದು, ಮಳೆ ಬಂದಿದ್ದರಿಂದ ನಮ್ಮ ಹೊಲದ ಬಳಿ  ಮೋಟರ ಸೈಕಲ ಹೋಗದ ಕಾರಣ, ಮೋಟರ ಸೈಕಲನ್ನು ಅಫಜಲಪೂರ – ಬಳೂರ್ಗಿ ರೋಡಿಗೆ ಇರುವ ಪ್ರಗತಿ ಡಾಬಾದ ಹತ್ತಿರ ನಿಲ್ಲಿಸಿದ್ದು, ತಾನು ಮತ್ತು ನ್ನ ತಂದೆ ಇಬ್ಬರು ಹೊಲಕ್ಕೆ ಹೋಗಿ ಸಾಯಂಕಾಲ ಮರಳಿ ಮನೆಗೆ ಹೋಗಲು ಬಂದು ನೋಡಲಾಗಿ  ಪ್ರಗತಿ ಡಾಬಾದ ಹತ್ತಿರ ನಿಲ್ಲಿಸಿದ ಮೋಟರ ಸೈಕಲ ಇರಲಿಲ್ಲ, ಸದರಿ ನನ್ನ ಮೋಟರ ಸೈಕಲನ್ನು ಯಾರೊ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು  ದುದನಿ, ಘತ್ತರಗಾ, ಚವಡಾಪೂರ ಮತ್ತು ಅಫಜಲಪೂರ ಪಟ್ಟಣದಲ್ಲಿ ಎಲ್ಲಾ ಕಡೆ ಹುಡಕಾಡಿದರು ಮೋಟರ ಸೈಕಲ್ ಸಿಗದಿದ್ದ ಕಾರಣ ಇಂದು ತಡವಾಗಿ ಠಾಣೆಗೆ ಬಂದು ದೂರು ನೀಡಿದ್ದು ಕಳ್ಳತನವಾದ ನನ್ನ ಮೋಟರ ಸೈಕಲನ್ನು ಪತ್ತೆಮಾಡಿ ಕಳ್ಳತನ ಮಾಡಿದವರ ಮೇಲೆ ಕಾನೂನು ಕ್ರಮ ಜರೂಗಿಸುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂಧ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಜೂಜುಕೋರರ ಬಂಧನ:
ಶಹಾಬಾದ ನಗರ ಪೊಲೀಸ್ ಠಾಣೆ: ದಿನಾಂಕಃ 16/10/2017 ರಂದು ಶಹಾಬಾದ ನಗರದ ಮರಾಠ ಸಮಾಜದ ಸ್ಮಶಾನ ಭೂಮಿಯ ಖುಲ್ಲಾ ಜಾಗೆಯಲ್ಲಿ  ಇಸ್ಪೆಟ ಜೂಜಾಟ ಆಡುತ್ತಿರುವ ಖಚಿತ ಬಾತ್ಮಿ ಮೇರೆಗೆ ಶ್ರೀ ಎಸ್ ಅಸ್ಲಾಂ ಭಾಷ ಪಿ ಐ  ಶಹಾಬಾದ ರವರು ಠಾಣೆ ರವರು ಠಾಣೆಯ ಸಿಬ್ಬಂದಿ  ಮತ್ತು ಪಂಚರೊಂದಿಗೆ  ದಾಳಿ ಮಾಡಿ 1) ವಾಸು ತಂದೆ ಅಶೋಕ ರಾಠೋಡ ಸಾ: ಎಸಿಸಿ ಕಾಲೋನಿ ವಾಡಿ 2) ಅಜಯ ತಂದೆ ಜಗನ್ನ ಸಾ: ಮಡ್ಡಿ ನಂಬರ 02 ಶಹಾಬಾದ 3) ಹಾಜಪ್ಪ ತಂದೆ ಮಲ್ಕಪ್ಪಾ ಪೂಜಾರಿ ಸಾ: ಹಳೆ ಶಹಾಬಾದ 4) ಮಹ್ಮದ ಖಾಸಿಂ ತಂದೆ ಖಾಜಾಮಿಯಾ ಮುಲ್ಲಾ ಸಾ: ಮಡ್ಡಿ ನಂಬರ 02 ಶಹಾಬಾದ 5) ವಿಶಾಲ ತಂದೆ ಅಶೋಕ ನಾಯಕ ಸಾ: ಮಡ್ಡಿ ನಂಬರ 02 ಶಹಾಬಾದ ರವರಿಗೆ ಹಿಡಿದು  ಅವರಿಂದ ಇಸ್ಪೆಟು ಜೂಜಾಟಕ್ಕೆ ಸಂಬಂಧ ಪಟ್ಟ ನಗದು ಹಣ 5020/- ರೂ ಹಾಗೂ  52 ಇಸ್ಪೇಟ ಎಲೆಗಳು ಪಂಚರ ಸಮಕ್ಷಮದಲ್ಲಿ ಜಪ್ತಿ ಪಡಿಸಿಕೊಂಡು ಆರೋಪಿತರು ಹಾಗೂ ಮುದ್ದೆಮಾಲು ಠಾಣೆಗೆ ಸದರಿಯವರ ವಿರುದ್ದ ಶಹಾಬಾದ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಆತ್ಮ ಹತ್ಯೆ ಪ್ರಕರಣ:
ಫರಹತಾಬಾದ ಪೊಲೀಸ್ ಠಾಣೆ : ದಿನಾಂಕಃ 15/10/2017 ರಂದು ಶ್ರೀಮತಿ ನಿಂಗಮ್ಮ ಗಂಡ ಶಿವರಾಯ ಚಿನ್ನಮಳ್ಳಿ ರವರು ಫಿರ್ಯಾದಿ ಸಲ್ಲಿಸಿದ್ದೇನೆಂದರೆ ತನ್ನ ಎರಡನೆ ಮಗನಾದ ರೇವಣಸಿದ್ದಪ್ಪ ಈತನು ಒಕ್ಕಲುತನ ಕೆಲಸ ಮಾಡಿಕೊಂಡಿದ್ದು. ಮನೆಯ ಎಲ್ಲಾ ಜವಾಬ್ದಾರಿಯು ರೇವಣಸಿದ್ದಪ್ಪನೇ ನೋಡಿಕೊಂಡಿರುತ್ತಾನೆ. ತಮಗೆ ಪಾಣೆಗಾಂವ ಸಿಮಾಂತರ ಸರ್ವೇ ನಂ 131 ರಲ್ಲಿ 06 ಎಕರೆ ಜಮೀನು ಹಾಗೂ ಸರ್ವೇ ನಂ 38/4 ರಲ್ಲಿ 03 ಎಕರೆ ಜಮೀನು ಇದ್ದು, ಸದರಿ ಜಮೀನುಗಳಲ್ಲಿ ಸಾಗುವಳಿ ಮಾಡಿಕೊಂಡಿದ್ದು, ಸದರಿ ಜಮೀನುಗಳ ಮೇಲೆ ವಿಜಯಾ ಬ್ಯಾಂಕ ಕಲಬುರಗಿಯಲ್ಲಿ ಹಾಗೂ ಕೇನರಾ ಬ್ಯಾಂಕ ಖಣದಾಳದಲ್ಲಿ ಸಾಲ ಪಡೆದುಕೊಂಡಿದ್ದು,  ಸದರಿ ಸಾಲವನ್ನು ಕಂತಿನ ರೂಪದಲ್ಲಿ ಕಟ್ಟುತ್ತಿದ್ದು, ಇತ್ತಿತ್ತಲಾಗಿ ಜಮೀನುಗಳಲ್ಲಿ ಸರಿಯಾದ ಬೆಳೆ ಬಾರದೆ ಸಾಲ ಪಾವತಿಸಿರುವುದಿಲ್ಲ. ಅಲ್ಲದೆ ಕೃಷಿ ಚಟುವಟಿಕೆಗಾಗಿ ಸಾಲ ಮಾಡಿಕೊಂಡಿದ್ದು ಇರುತ್ತದೆ. ಬ್ಯಾಂಕುಗಳಲ್ಲಿ ಪಡೆದ ಸಾಲವನ್ನು ಪಾವತಿಸುವಂತೆ ನೋಟಿಸಗಳು ಬಂದಿದ್ದು, ತನ್ನ ಮಗನಾದ ರೇವಣಸಿದ್ದಪ್ಪ ಈತನು ಸಾಲ ಹೇಗೆ ತಿರಿಸಬೇಕೆಂದು ಚಿಂತಿಸುತ್ತಾ ದಿನಾಂಕ 14/10/2017 ರಂದು ರಾತ್ರಿ ಕಾಶಿನಾಥ ಮೊತಕಪಳ್ಳಿ ಇವರ ಹೋಲದಲ್ಲಿರುವ ಮನೆಯಲ್ಲಿ ಯಾವುದೋ ಕ್ರಿಮಿನಾಷಕ ಔಷದ ಸೇವೆ ಮಾಡಿದ್ದು ಉಪಚಾರ ಕುರಿತು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿದ್ದು, ನಂತರ ಹೆಚ್ಚಿನ ಉಪಚಾರ ಕುರಿತು ಬಸವೇಶ್ವರ ಆಸ್ಪತ್ರೆಗೆ ಸೇರಿಕೆ ಮಾಡಿದಾಗ ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ 15/10/22017 ರಂದು ಮೃತಪಟ್ಟಿರುತ್ತಾನೆ. ತನ್ನ ಮಗ ರೇವಣಸಿದ್ದಪ್ಪನು ಸಾಲ ಹೇಗೆ ತಿರಿಸಬೇಕೆಂದು ಚಿಂತಿಸುತ್ತಾ ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡು ಜೀವನದಲ್ಲಿ ಜಿಗುಪ್ಸೆ ಹೊಂದಿ ಕ್ರಿಮಿನಾಷಕ ಔಷದ ಸೇವನೆ ಮಾಡಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುತ್ತಾನೆ ಎಂದು ಸಲ್ಲಿಸಿದ ಫಿರ್ಯಾದಿ ಸಾರಾಂಶದ ಮೇಲಿಂದ ಫರಹತಾಬಾದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ  ಕೈಕೊಳ್ಳಲಾಗಿದೆ.
ಹಲ್ಲೆ ಪ್ರಕರಣ:
ನರೋಣಾ ಪೊಲೀಸ್ ಠಾಣೆದಿನಾಂಕ:24/09/2017 ರಂದು ನಾನು ನನ್ನ ಹೆಂಡತಿ ನಾಗಮ್ಮ ನನ್ನ ಚಿಕ್ಕಪ್ಪ ಮಲ್ಲಿಕಾರ್ಜುನ ಹಾಗೂ ಚಿಕ್ಕಮ್ಮಳಾದ ಅಂಬಿಕಾ @ ಅಂಬುಬಾಯಿ ಹಾಗೂ ಅವರ ಮಗನಾದ ಶರಣಬಸಪ್ಪ ಮದಲಿ ರವರೆಲ್ಲರೂ ನರೋಣಾ ಗ್ರಾಮದಲ್ಲಿ ನಮ್ಮ ಚಿಕ್ಕಪ್ಪನ ಮನೆಯಲ್ಲಿದ್ದಾಗ ನಮ್ಮ ಚಿಕ್ಕಪ್ಪನವರು ಅವರ ಪಕ್ಕದ ಮನೆಯಲ್ಲಿ ವಾಸವಿರುವ ಧಶರಥ ತಂದೆ ಶರಣಪ್ಪ ಮದಲಿ ಇವರ ಮನೆಯ ಮುಂದೆ ಹೋಗಿ ಅವರಿಗೆ ಹೊರಗೆ ಕರೆದು ನಿಮ್ಮ ಬಚ್ಚಲು ನೀರು ನಮ್ಮ ಮನೆಯ ಸಂದಿಯಲ್ಲಿ ಬಿಡಬೇಡರಿ ಹಾಗೂ ನಮ್ಮ ಮನೆಯ ಪಕ್ಕದಲ್ಲಿರುವ ರಸ್ತೆಯ ಮೇಲೆ ಕುರಿಗಳನ್ನು ಕಟ್ಟಬೇಡಿ ಎಂದು ಹೇಳುತ್ತಿರುವಾಗ ವಿಜಯಕುಮಾರ ಮದಲಿ, ರಾಜಕುಮಾರ ಮದಲಿ, ಲಲಿತಾಬಾಯಿ ಮದಲಿ, ಪೀರಪ್ಪ ಮದಲಿ, ಪರೇಮ್ಮ ಮದಲಿ, ಮಲ್ಲಿಕಾರ್ಜುನ  ತಂದೆ ಪೀರಪ್ಪ ಮದಲಿಹಾಗೂ ನಾಗೀಂದ್ರ ತಂದೆ ಪೀರಪ್ಪ ಮದಲಿ ಇವರೆಲ್ಲರೂ ಕೂಡಿಕೊಂಡು ಬಂದು ನಮ್ಮ ಚಿಕ್ಕಪ್ಪನ್ನೊಂದಿಗೆ ವಾದವಿವಾದ ಮಾಡುತ್ತಾ ಅವಾಚ್ಯ ಶಬ್ದಗಳಿಂದ ಬೈಯುತ್ತಾ ಜಗಳ ತಗೆದು ನನ್ನ ಚಿಕ್ಕಮ್ಮಳಿಗೆ ಕೈಯಿಂದ ಹೊಡೆಯುತ್ತಾ ನೆಲಕ್ಕೆ ಕೆಡವಿ ಅವರ ಹೊಟ್ಟೆಯ ಮೇಲೆ ಒದೆಯುತ್ತಿರುವಾಗ ನಮ್ಮ ಚಿಕ್ಕಪ್ಪ  ಬಿಡಿಸುತ್ತಿರುವಾಗ ಅವರಿಗು ಸಹ ಕಾಲಿನಿಂದ ಜೋರಾಗಿ ಒದಿದ್ದು ಅಲ್ಲದೇ ಕೈಯಲ್ಲಿ ಕಲ್ಲು ಹಿಡಿದುಕೊಂಡು ಗುದ್ದಿ ಒಳಪೆಟ್ಟು ಮಾಡಿರುತ್ತಾರೆ. ಅಸ್ಟರಲ್ಲಿಯೇ ನಾನು ಮತ್ತು ನಮ್ಮ ಚಿಕ್ಕಪನ ಮಗನಾದ  ಶರಣಬಸಪ್ಪ ಹಾಗೂ ನಮ್ಮ ಓಣಿಯ ವಿಠಲ ತಂದೆ ಶಾಂತಪ್ಪ ಇಟಿಕಾರ, ರಮೇಶ ತಂದೆ ಕ್ಷೇಮಲಿಂಗ ರಾಗಿ, ರವರುಗಳು ಜಗಳ ಬಿಡಿಸಿದ್ದು ನಂತರ ಧಶರಥ, ವಿಜಯಕುಮಾರ, ರಾಜಕುಮಾರ ಮಲ್ಲಿಕಾರ್ಜುನ  ಹಾಗೂ ನಾಗೀಂದ್ರ ರವರು ಕೂಡಿ ನಮ್ಮ ಚಿಕ್ಕಪ್ಪನಿಗೆ ಮಗನೆ ನಿನಗೆ ಹಾಗೂ ನಿನ್ನ ಕುಟುಂಬದವರಿಗೆ ಒಂದಾಲ್ಲ ಒಂದು ದಿವಸ ಜೀವ ಸಹಿತ ಬಿಡುವುದಿಲ್ಲ ಖಲಾಸ ಮಾಡುತ್ತೇವೆ ಎಂದು ಜೀವದ ಭಯ ಹಾಕಿರುತ್ತಾರೆ.  ವಿನಾಕಾರಣ ನಮ್ಮೊಂದಿಗೆ ಜಗಳ ತೆಗೆದು ನನ್ನ ಚಿಕ್ಕಪ್ಪ ಚಿಕ್ಕಮ್ಮನವರಿಗೆ ಹೊಡೆ ಬಡೆ ಮಾಡಿ ಜೀವ ಬೆದರಿಕೆ ಹಾಕಿದವರ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.

16 October 2017

KALABURAGI DIST REPORTED CRIMES

ಶಹಾಬಾದ ನಗರ ಪೊಲೀಸ್ ಠಾಣೆ:
ಹಲ್ಲೆ ಪ್ರಕರಣ: ದಿನಾಂಕ: 15/10/2017 ರಂದು ದೇವಕ್ಕಿ ಗಂಡ ಜೇಮಸಿಂಗ ಸಾ: ಶಹಾಬಾದ ರವರು ಪಿರ್ಯಾದಿ ಸಲ್ಲಿಸಿದ್ದೆನೇಂದರೆ  ತಮ್ಮ  ಮನೆಯ ಆಸ್ತಿ ಸಂಬಂದ ಮೈದುನ ರವಿ ಜಾಧವ ಆತನ ಹೆಂಡತಿ ಹಾಗೂ  ನಾದನಿ ಎಲ್ಲರೊ ಸೇರೆ ತಮ್ಮ ಮನೆಯಲ್ಲಿ ಬಂದು ಅವಾಚ್ಯವಾಗಿ ಬೈಯ್ದು ಕೈಯಿಂದ ಬಡಿಗೆಯಿಂದ ಹೊಡೆದು ಖಾರದ ಪುಡಿ ಎರಚಿ ಹಾಕಿ ಜೀವದ ಬೇದರಿಕೆ ಹಾಕಿದ ಬಗ್ಗೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂಧ ಶಹಾಬಾದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಚೌಕ್ ಪೊಲೀಸ್ ಠಾಣೆ:

ಕರ್ತವ್ಯಕ್ಕೆ ಅಡೆಪಡೆ ಪ್ರಕರಣ: ದಿನಾಂಕ: 15.10.2017 ರಂದು ಶ್ರೀ ಬಾಬು.ಎ.ಪಾಟೀಲ ಪಿಸಿ 506 ಸಂಚಾರ ಪೋಲಿಸ್ ಠಾಣೆ ಕಲಬುರಗಿ ರವರು ಠಾಣೆಗೆ ಹಾಜರಾಗಿ ಇಂದು ತಾನು ಮತ್ತು  ಪಿ.ಎಸ್.ಐ (1) ಸಂಚಾರ ಪೋಲಿಸ್ ಠಾಣೆ ಕಲಬುರಗಿ ರವರೊಂದಿಗೆ ಜೀಪ್ ನಲ್ಲಿ  ಚೌಕ ವೃತ್ತದಿಂದ  ಗಂಜ್ ಕಡೆಗೆ ಹೋಗುವ ಮಾರ್ಗದಲ್ಲಿ KA32 EH 7624 ನೇದ್ದರ ಚಾಲಕ ಒನ್ ವೇ ಇಂದ ಬಂದು ಜಾಜಿ ಅಂಗಡಿಯವರ ಏದುರು ರೋಡಿನ ಮಧ್ಯದಲ್ಲಿ ವಾಹನ ನಿಲ್ಲಿಸಿ ರಸ್ತೆಯಲ್ಲಿ ಸಂಚರಿಸುವ ವಾಹನಗಳ ಸಂಚಾರಕ್ಕೆ ಅಡೆತಡೆ ಮಾಡಿದ್ದು ನಾನು ಸದರಿಯವನ ವಾಹನ ತೆಗೆಯಲು ಹೇಳಿದ್ದಕ್ಕೆ ನನಗೆ ಅವಾಚ್ಯ ಶಬಗ್ದಗಳಿಂಧ ಬಯ್ದು ಸುಗಮ ಸಂಚಾರ ಕುರಿತು ಕರ್ತವ್ಯ ನಿರ್ವಹಿಸುತ್ತಿದ್ದ ನನ್ನ ಕರ್ತವ್ಯಕ್ಕೆ ಅಡ್ಡಿ  ಪಡಿಸಿದ್ದು . ಆತನನ್ನು ಚೌಕ ಪೊಲೀಸ್ ಠಾಣೆಗೆ ಕರೆತಂದು ಸದರಿಯವನ ವಿರುದ್ದ ನಮ್ಮ ಕೆಲಸದಲ್ಲಿ ಅಡೆತಡೆ ಮಾಡಿ ನಮಗೆ ಕರ್ತವ್ಯನಿರ್ವಹಿಸಲು ಕಷ್ಟವಾಗಿದ್ದು ಸದರಿಯವರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಕೊಳ್ಳುವಂತೆ ಸಲ್ಲಿಸಿದ ದೂರು ಸಾರಾಂಶಧ ಮೇಲಿಂದ ಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ .