POLICE BHAVAN KALABURAGI

POLICE BHAVAN KALABURAGI

27 September 2017

KALABURAGI DISTRICT REPORTED CRIMES

ಅಪಘಾತ ಪ್ರಕರಣಗಳು :
ನರೋಣಾ ಠಾಣೆ : ಶ್ರೀ.ಕಾಶಿನಾಥ ತಂದೆ ಮಾನಸಿಂಗ್ ಪವಾರ ಇವರ ತಮ್ಮನಾದ ಶಿವಾಜಿ ಇತನು ತನ್ನ ಉಪಯೋಗಕ್ಕಾಗಿ ಎರಡು ವರ್ಷಗಳ ಹಿಂದೆ ಹೀರೋ ಕಂಪನಿಯ ಮೋಟಾರ ಸೈಕಲ್ ನಂಬರ: ಕೆ..32.ಇಸಿ.6831 ಖರೀದಿ ಮಾಡಿದ್ದು ದಿನಾಂಕ 26-09-2017 ರಂದು ಸಾಯಂಕಾಲ ನನ್ನ ತಮ್ಮನಾದ ಶಿವಾಜಿಯು ತನ್ನ ಮೋಟಾರ ಸೈಕಲ್ ನಂಬರ: ಕೆ..32.ಇಸಿ.6831 ನೇದ್ದನ್ನು ತೆಗೆದುಕೊಂಡು ಕಲಬುರಗಿಯಲ್ಲಿ ಇರುವ ತನ್ನ ಮಕ್ಕಳಾದ ನೇಹಾ : 08 ವರ್ಷ, ಹಾಗೂ ಚಂದ್ರಶೇಖರ : 06 ವರ್ಷ, ಇವರುಗಳನ್ನು ಭೇಟಿಯಾಗಿ ಬರುತ್ತೇನೆ ಎಂದು ಹೇಳಿ ನಮ್ಮ ತಾಂಡಾದಿಂದ ಹೋಗಿರುತ್ತಾನೆ. ನಂತರ ಸಂಜೆ 7 ಗಂಟೆ 10 ನಿಮಿಷಕ್ಕೆ ಗುಳ್ಳೊಳ್ಳಿ ಗ್ರಾಮದ ಸಿದ್ದು ತಂದೆ ಕಾಶಿನಾಥ ಪಾಟೀಲ ಇವರು ನನಗೆ ಫೋನ ಮಾಡಿ ನನ್ನ ತಮ್ಮನಾದ ಶಿವಾಜಿಯು ಮೋಟಾರ ಸೈಕಲ್ ಮೇಲೆ ಕಲಬುರಗಿ ಕಡೆಗೆ ಹೋಗುವಾಗ ಲಾಡಚಿಂಚೋಳಿ ತಾಂಡಾ ಕ್ರಾಸ ದಾಟಿ ಲಾಡ ಚಿಂಚೋಳಿ ಕ್ರಾಸದ ಕಡೆಗೆ ಹೋಗುವಾಗ ತನ್ನ ಮೋಟಾರ ಸೈಕಲ್ ನಂ. ಕೆ..32.ಇಸಿ.6831 ನೇದ್ದನ್ನು ಅತೀವೇಗ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿ ಮುಂದೆ ಹೋಗುತ್ತಿದ್ದ ಎತ್ತಿನ ಬಂಡೆಗೆ ಜೋರಾಗಿ ಡಿಕ್ಕಿ ಪಡಿಸಿದ್ದರಿಂದ ಅವನ ಎಡಗೈ ಮುಂಗೈಗೆ ಭಾರಿ ಪೆಟ್ಟಾಗಿ ಮತ್ತು ತೆಲೆಗೆ ಹಾಗೂ ಎದೆಗೆ ಭಾರಿ ಒಳಪೆಟ್ಟಾಗಿದ್ದರಿಂದ ಸ್ಥಳದಲ್ಲಿಯೆ ಮೃತ ಪಟ್ಟಿರುತ್ತಾನೆ. ಎಂದು ತಿಳಿಸಿದ್ದ ಮೇರೆಗೆ ನಾನು ಮತ್ತು ನಮ್ಮ ತಾಂಡಾದ ವಿಜಯ ತಂದೆ ದೇಶು ಪವಾರ ಇಬ್ಬರೂ ಕೂಡಿ ಘಟನೆ ಸ್ಥಳಕ್ಕೆ ಹೋಗಿ ನೋಡಲಾಗಿ ವಿಷಯ ನಿಜವಿದ್ದು ನನ್ನ ತಮ್ಮನ್ನು ಭಾರಿ ಗಾಯಹೊಂದಿ ಮೃತ ಪಟ್ಟಿದ್ದು ನಿಜವಿರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಳಂದ ಠಾಣೆ : ದಿನಾಂಕ:26/09/2017 ರಂದು ಕಲ್ಲು ಒಡೆಯುವ ಕೆಲಸಕ್ಕಾಗಿ  ಜಿಡಗಾ ಗ್ರಾಮಕ್ಕೆ ಹೋಗಬೇಕೆಂದು ಶ್ರೀ ನಾಗೇಶ ತಂದೆ ಕುಲಪ್ಪಾ ವಡ್ಡರ  ಸಾ: ವಡ್ಡರ ಗಲ್ಲಿ ಆಳಂದ ಮತ್ತು ಸುಭಾಷ ಇಬ್ಬರೂ ಕೂಡಿಕೊಂಡು ಸುಭಾಷ ಇತನ ಹೊಸ ನಂಬರ್ ಇಲ್ಲದ TVS XL  ಮೋಟರ್ ಸೈಕಲ ಮೇಲೆ ಹೋಗುವಾಗ ಮೋಟರ್ ಸೈಕಲವನ್ನು ಸುಭಾಷ ಚಲಾಯಿಸುತ್ತಿದ್ದು ನಾನು ಹಿಂದೆ ಕುಳಿತಿದ್ದು ಮೋಟರ್ ಸೈಕಲ ಶಕಾಪೂರ ಕ್ರಾಸ್ ಹತ್ತಿರದ ಬಸ್ ನಿಲ್ದಾಣ ಸಮೀಪ ಬಂದಾಗ ನಮ್ಮ ಹಿಂದಿನಿಂದ ಅಂದರೆ ಆಳಂದ ಕಡೆಯಿಂದ ಒಬ್ಬ ಟವರಸ್ ಲಾರಿ ಚಾಲಕ ಅತೀವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸುತ್ತಾ ಬಂದು ನಮ್ಮ ಮೋಟರ್ ಸೈಕಲಿಗೆ ಹಿಂದಿನಿಂದ ಡಿಕ್ಕಿಪಡಿಸಿದರಿಂದ ಹಿಂದೆ ಕುಳಿತ ನಾನು ಕೆಳಗಡೆ ಬಿದ್ದಾಗ ನನಗೆ ಬಲಗಾಲಿನ ಪಾದದ ಹತ್ತಿರ ಮತ್ತು ಎಡಗಾಲಿನ ಮೊಳಕಾಲ ಹತ್ತಿರ ಗಾಯವಾಗಿದ್ದು ಮೋಟರ್ ಸೈಕಲ ಚಲಾಯಿಸುತ್ತಿದ್ದ ಸುಭಾಷ ಇತನಿಗೆ ಬಲಗಾಲಿನ ಛಪ್ಪೆಗೆ ತೊಡೆಗೆ ಭಾರಿಗಾಯವಾಗಿದ್ದು ಮತ್ತು ಎಡಗಾಲಿನ ಮೊಳಲಾಲ ಹತ್ತಿರ ಮುರಿದು ಭಾರಿಗಾಯವಾಗಿ ರಕ್ತ ಬಂದಿದ್ದು ಇರುತ್ತದೆ. ನಮಗೆ ಡಿಕ್ಕಿಪಡಿಸಿದ ಟವರಸ್ ಲಾರಿ ನಂಬರ್ ನೋಡಲಾಗಿ MH-12 LT-9620 ಇದ್ದು ಅದರ ಚಾಲಕನ ಹೆಷರು ವಿಚಾರಿಸಿಲಾಗಿ ಶಿವಾಜಿ ತಂದೆ ವಿಲಾಸ ವಾಮಂಗ ಸಾ:ವಾಗ್ದರ್ಗಿ ತಾ|| ಅಕ್ಕಲಕೋಟ ಅಂತಾ ಗೊತ್ತಾಗಿದ್ದು. ಲಾರಿ ಚಾಲಕ ಲಾರಿ ಸ್ಥಳದಲ್ಲಿಯೇ ಬಿಟ್ಟು ಓಡಿಹೋಗಿದ್ದು ಇರುತ್ತದೆ. ನಂತರ ನಮಗೆ 108 ಅಂಬುಲೆನ್ಸ್ ನಲ್ಲಿ ಹಾಕಿಕೊಂಡು ಆಳಂದದ ಸರ್ಕಾರಿ ಆಸ್ಪತ್ರೆ ತಂದಾಗ ಅಲ್ಲಿನ ವೈದ್ಯಾಧಿಕಾರಿಗಳು ಇಬ್ಬರಿಗೂ ಚಿಕಿತ್ಸೆ ನೀಡಿ ಸುಭಾಷನಿಗೆ ಭಾರಿಗಾಯವಾಗಿದ್ದರಿಂದ ಹೆಚ್ಚಿನ ಚಿಕಿತ್ದೆ ಕುರಿತು ತಗೆದುಕೊಂಡು ಹೋಗಲು ತಿಳಿಸಿದಾಗ ಸುಭಾಷ ಇತನಿಗೆ ಅವರ ಮನೆಯವರು 108 ಅಂಬುಲೆನ್ಸ್ ನಲ್ಲಿ ಉಮರ್ಗಾದ ಆಸ್ಪತ್ರೆಗೆ ತಗೆದುಕೊಂಡು ಹೋಗುವಾಗ ರಾತ್ರಿ ಖಜೂರಿ ಹತ್ತಿರ ಇದ್ದಾಗ ಮೃತಪಟ್ಟಿರುತ್ತಾನೆ ಅಂತಾ ಗೊತ್ತಾಗಿರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

26 September 2017

KALABURAGI DISTRICT REPORTED CRIMES

                                                                             
ಅಪಘಾತ ಪ್ರಕರಣ :
ಶಾಹಾಬಾದ ನಗರ ಠಾಣೆ : ಶ್ರೀ ಶೇಖ ಜಾವೀದ ತಂದೆ ನೂರ ಅಹ್ಮೇದ ಸಾ: ಶಾಂತ ನಗರ ಭಂಕೂರ ಇವರ ತಂದೆ  ದಿನಾಂಕ: 24/09/2017 ರಂದು ಮುಂಜಾನೆ ತಮ್ಮ ಹೊಂಡಾ ಆಕ್ಟೀವ ಮೊಟಾರ ಸೈಕಲ ನಂಬರ ಕೆ.ಎ. 03 ಹೆಚ್.ವಿ 9969  ತೆಗೆದುಕೊಂಡು ವಾಡಿ ಕ್ರಾಸಗೆ ನಾಷ್ಟ ಮಾಡಲು ಹೋಗುತ್ತಿದ್ದಾಗ ವಾಡಿ ಕ್ರಾಸ ಹತ್ತಿರ ರೋಡಿನಲ್ಲಿ  ದಿನಾಂಕ: 24/09/25017 ರಂದು ಮುಂಜಾನೆ 10-00 ಗಂಟೆಗೆ ಭಂಕೂರ ಕ್ರಾಸ ಕಡೆಯಿಂದ ಟಂ ಟಂ ಅಟೋ ನಂಬರ ಕೆ.ಎ. 32 ಸಿ 1859 ನೇದ್ದರ ಚಾಲಕ ತನ್ನ ಟಂ ಟಂ ಅತೀ ವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನಮ್ಮ ತಂದೆ ನಡೆಯಿಸಿಕೊಂಡು ಹೋಗುತ್ತಿದ್ದ ಹೊಂಡಾ ಆಕ್ಟೀವಾ ಮೊಟಾರ ಸೈಕಲಕ್ಕೆ ಹಿಂದಿನಿ ಡಿಕ್ಕಿ ಪಡಿಸಿದರಿಂದ ನಮ್ಮ ತಂದೆ ಮೋಟಾರ ಸೈಕಲ ಸಮೇತ ಕೆಳಗೆ ಬಿದ್ದು ತಲೆಗೆ ಒಳ ಪೆಟ್ಟು ಮತ್ತು ಹಣೆಗೆ ಹಾಗೂ ಬಲಗಾಲಿಗೆ , ಎಡಗೈಗೆ ತರುಚಿದ ರಕ್ತಗಾಯಾವಾಗಿ ಬೇಹುಷಾ ಆಗಿ ಬಿದ್ದರಿಂದ ನಮ್ಮ ತಂದೆಗೆ ಉಪಚಾರ ಕುರಿತು ಸರಕಾರಿ  ಆಸ್ಪತ್ರೆ ಶಹಾಬಾದಕ್ಕೆ ತೆಗೆದುಕೊಂಡು ಹೋಗಿ ಅಲ್ಲಿಂದ ಹೆಚ್ಚಿನ ಉಪಚಾರ ಕುರಿತು ಕಲಬುರಗಿಯ ಯುನೈಟೆಡ ಆಸ್ಪತ್ರೆಗೆ ಸೇರಿಕೆ ಮಾಡಿದಾಗ ಆಸ್ಪತ್ರೆಯಲ್ಲಿ ಉಪಚಾರ ಹೊಂದುತ್ತಾ ಇಂದು ದಿನಾಂಕ: 25-09-2017 ರಂದು ಬೆಳಗಿನಜಾವ ನಮ್ಮ ತಂದೆ ನೂರ ಅಹ್ಮೇದ ಇವರು ಮೃತ ಪಟ್ಟಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಭಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆತ್ಮ ಹತ್ಯಮಾಡಿಕೊಂಡ ಪ್ರಕರಣ :
ಯಡ್ರಾಮಿ ಠಾಣೆ : ಶ್ರೀಮತಿ ಕಸ್ತೂರಬಾಯಿ ಗಂಡ ಬಸಂತ್ರಾಯ ಸಲದಳ್ಳಿ ಸಾ|| ಗಾಂದಿನಗರ ಮಳ್ಳಿ ತಾ|| ಜೇವರ್ಗಿ ರವರದು ನಮ್ಮೂರ ಸಿಮಾಂತರದಲ್ಲಿ ಸರ್ವೆ ನಂ 222 ನೇದ್ದರಲ್ಲಿ 5 ಎಕರೆ 16 ಗುಂಟೆ ಜಮೀನು ನನ್ನ ಹೆಸರಿಗೆ ಇರುತ್ತದೆ, ನನ್ನ ಹಿರಿ ಮಗ ಬಾಬುಗೌಡ ಈತನು ಮಾನಸಿಕ ಅಸ್ವಸ್ಥನಿದ್ದು, ನಮ್ಮ ಹೊಲವನ್ನು ನನ್ನ ಕಿರಿ ಮಗ ಶಂಕರಗೌಡ ಈತನು ನೋಡಿಕೊಳ್ಳುತ್ತಿರುತ್ತಾನೆ, ಹೊಲದ ಸಲುವಾಗಿ ನನ್ನ ಮಗ ಮಳ್ಳಿ ಕೆ.ಜಿ.ಬಿ ಬ್ಯಾಂಕನಲ್ಲಿ 60,000/- ರೂ ಸಾಲ ಪಡೆದುಕೊಂಡಿರುತ್ತಾನೆ, ಅದರಂತೆ ಖಾಸಗಿಯಾಗಿ ಸುಮಾರು 4 ಲಕ್ಷ ಸಾಲ ಮಾಡಿಕೊಂಡಿದ್ದು ಇರುತ್ತದೆ, ನನ್ನ ಮಗ ಆಗಾಗ ನಮಗೆ ಸಾಲ ಬಹಳ ಆಗಿದೆ ಅದನ್ನು ತೀರಿಸುವುದು ಹೇಗೆ, ಹೊಲದಲ್ಲಿ ಬೆಳೆನು ಸರಿಯಾಗಿ ಬೆಳೆಯುತ್ತಿಲ್ಲಾ, ಉರಲ್ಲಿ ನಾನು ಮುಖ ಎತ್ತಿ ತಿರುಗಾಡಲು ಆಗುತ್ತಿಲ್ಲಾ, ನಾನು ಇರುವುದಕ್ಕಿಂತಾ ಸಾಯುವದೇ ಮೇಲು ಅಂತಾ ಹೇಳುತ್ತಾ ಚಿಂತೆ ಮಾಡುತ್ತಿದ್ದನು, ಆಗ ನಾವು ಅವನಿಗೆ ಸಮಾಧಾನ ಹೇಳುತ್ತೇದ್ದೇವು, ನಮ್ಮ ಮನೆ ಎರಡು ಅಂತಸ್ತಿನದು ಇರುತ್ತದೆ, ನನ್ನ ಮಗ ಮತ್ತು ಸೊಸೆ ಮೇಲಿರುವ ಕೋಣೆಲ್ಲಿ ಮಲಗುತ್ತಿದ್ದರು, ದಿನಾಂಕ 25-09-2017 ರಂದು ಬೆಳಿಗ್ಗೆ ನಾನು ಮತ್ತು ನನ್ನ ಸೊಸೆ ಇಬ್ಬರು ಕೂಡಿ ಮೇಲೆ ಹೋಗಿ ನೋಡಿದಾಗ ನನ್ನ ಮಗ ಶಂಕರಗೌಡ ಈತನು ನೇಣು ಹಾಕಿ ಕೋಂಡಿದ್ದನು, ನಂತರ ನಾನು ಚಿರಾಡುತ್ತಿದ್ದಾಗ ನಮ್ಮ ಮನೆ ಹತ್ತಿರ ಇದ್ದ ಗುತ್ತಪ್ಪಗೌಡ ಸಾಸನೂ, ಅಪ್ಪಣ್ಣ ಹಾದಿಮನಿ ರವರು ಬಂದು ನನ್ನ ಮಗನಿಗೆ ಕೆಳಗೆ ಇಳಿಸಿ ನೋಡಿದಾಗ ನನ್ನ ಮಗ ಮೃತ ಪಟ್ಟಿದ್ದನು,          ನನ್ನ ಮಗ ಹೊಲದ ಸಲುವಾಗಿ ಮಳ್ಳಿ ಗ್ರಾಮದ ಕೆ.ಜಿ.ಬಿ ಬ್ಯಾಂಕನಲ್ಲಿ 60,000/- ರೂ ಮತ್ತು ಖಾಸಗಿಯಾದ ಸುಮಾರು 4,00,000/- ರೂ ಸಾಲ ಮಾಡಿಕೊಂಡಿದ್ದು, ಈ ಸಾಲ ಹೇಗೆ ತೀರಿಸಬೇಕು ಅಂತಾ ಚಿಂತೆ ಮಾಡುತ್ತಾ ಜಿಗುಪ್ಸೆಗೊಂಡು ಇಂದು ದಿನಾಂಕ 25-09-2017 ರಂದು ಬೆಳಿಗ್ಗೆ 06;30 ಗಂಟೆಯಿಂದ 07;00 ಗಂಟೆ ಮದ್ಯದಲ್ಲಿ ನಮ್ಮ ಮನೆಯ ಮೇಲಿನ ಕೋಣೆಯಲ್ಲಿ ಪೈಪಿನ ಅಡ್ಡಿಗೆ ನೂಲಿನ ಹಗ್ಗದಿಂದ ನೇಣು ಹಾಕಿಕೊಂಡು ಮೃತ ಪಟ್ಟಿರುತ್ತಾನೆ. ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಆಕ್ರಮವಾಗಿ ಮರಳು ಸಾಗಿಸುತ್ತಿದ್ದ ಟಿಪ್ಪರ ಜಪ್ತಿ :
ಶಾಹಾಬಾದ ನಗರ ಠಾಣೆ : ದಿನಾಂಕ: 25/09/2017 ರಂದು ಭಂಕೂರ ಸೀಮಾಂತರದ ಕಾಗಿನಾ ನದಿಯಿಂದ ಮರಳು ಕಳ್ಳತನದಿಂದ ಟಿಪ್ಪರನಲ್ಲಿ ತುಂಬಿಕೊಂಡು ಸಾಗಿಸುತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಮೇರೆಗೆ ಶ್ರೀ ಎಸ್ ಅಸ್ಲಾಂ ಭಾಷ ಪಿ ಐ ಶಹಾಬಾದ ರವರು ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಆನಂದ ದಾಬಾ ಹತ್ತಿರ ಭಂಕೂರ ಕಡೆಯಿಂದ ಒಂದು ಮರಳು ತುಂಬಿದ ಟಿಪ್ಪರ ಲಾರಿ ನಂಬರ ಕೆ.ಎ. 34 9330 ಬರುತ್ತಿದ್ದು ಅದರ ಚಾಲಕ ಮತ್ತು ಅದರಲ್ಲಿದ್ದ ಇನ್ನೋಬ್ಬ ವ್ಯಕ್ತಿ ಪೊಲೀಸ ಜೀಪ ನೋಡಿ ಟಿಪ್ಪರ ಸ್ಥಳದಲ್ಲಿಯೇ ನಿಲ್ಲಿಸಿ ಓಡಿ ಹೋಗಿದ್ದು ಸದರಿ ಮರಳು ತುಂಬಿದ ಟಿಪ್ಪರ ಪಂಚರ ಸಮಕ್ಷಮ ಜಪ್ತಿ ಪಡಿಸಿಕೊಂಡು ಮರಳಿ ಠಾಣೆಗೆ ಬಂದು ಸದರಿ ಟಿಪ್ಪರ ಲಾರಿ ಚಾಲಕ ಮತ್ತು ಮಾಲಿಕ ಸರಕಾರಕ್ಕೆ ಯಾವುದೆ ರಾಜಧನ ತುಂಬದೆ ಆಕ್ರಮವಾಗಿ ಮರಳು ಕಾಗಿನಾ ನದಿಯಿಂದ ಕಳ್ಳತನದಿಂದ ತುಂಬಿಕೊಂಡು ಸಾಗಿಸುತ್ತಿದ್ದರಿಂದ ಸದರಿಯವರ ವಿರುದ್ದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ವಾಹನ ಕಳವು ಪ್ರಕರಣ :
ಗ್ರಾಮೀಣ ಠಾಣೆ : ಶ್ರೀ ಅಲ್ತಾಫ ಅನ್ವರ ಬೇಗ ತಂದೆ ಮಿರ್ಜಾ ರುಸ್ತುಮ ಬೇಗ ಸಾ : ಸಾದಿಕ ಕಾಲನಿ ಎಮ್.ಎಸ್.ಕೆ. ಮಿಲ್ಲ ರೋಡ ಕಲಬುರಗಿ ರವರು ಮತ್ತು ಆತನ ಚಾಲಕ  ಮಶಾಕ ಇಬ್ಬರು   ಅಂಗಡಿ ಮುಚ್ಚಿ ಮನೆಗೆ ಹೋಗುವಾಗ ನಮ್ಮ ಅಂಗಡಿ ಎದುರು ಇರುವ ರಸ್ತೆ ಬದಿಯಲ್ಲಿ ಚಾಲಕ ಮಶಾಕ ಇತನು ಬುಲೋರೋ ಪಿಕ್ಕಪ್ಪ ಗೂಡ್ಸ್ KA 36  9158  ನೇದ್ದು ಲಾಕ ಮಾಡಿದ ನಂತರ ವಾಹನದ ಕೀಲಿ ಅಂಗಡಿಯಲ್ಲಿ ಇಟ್ಟು ಇಬ್ಬರು ಮನೆಗೆ ಹೋದೇವು.  ಮರುದಿನ ದಿನಾಂಕ 24-09-2017 ರಂದು ಬೆಳಿಗ್ಗೆ 09-00 ಗಂಟೆಗೆ ಅಂಗಡಿಗೆ ನಾನು ಮತ್ತು ಮಶಾಕ ಇಬ್ಬರು ಬಂದು ನೋಡಲಾಗಿ ಅಂಗಡಿಯ ಎದುರು ಇರುವ ರಸ್ತೆ ಬದಿಯಲ್ಲಿ ರಾತ್ರಿ ನಿಲ್ಲಿಸಿ ಹೋದ ನಮ್ಮ ಬುಲೋರೋ ವಾಹನ ಕಾಣಿಸಲಿಲ್ಲಾ. ಯಾರೋ ಕಳ್ಳರು ನಮ್ಮ ಬುಲೋರೋ ಪಿಕ್ಕಪ್ಪ ಗೂಡ್ಸ್ ವಾಹನ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ನನ್ನ ಕಳ್ಳತವಾದ ಬುಲೋರೋ ಪಿಕ್ಕಪ್ಪ ಗೂಡ್ಸ್ KA 36  9158 ವಿವರ ರೀತಿ ಇದೆ.  Chassi No. MA1ZN2GGA91D28894   Engine No. GG91D49527  Make BOLERO CAMPER DX2WD, Model -2009, Colour White , ಬಣ್ಣದ್ದು ಇರುತ್ತದೆ. ವಾಹನ ಕಿಮ್ಮತ್ತು ಅ:ಕಿ:  1,40,000/-  ರೂ. ಆಗುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

25 September 2017

KALABURAGI DISTRICT REPORTED CRIMES

ಆಕ್ರಮವಾಗಿ ಸಂಗ್ರಹಿಸಿದ್ದ  ಮರಳು ಜಪ್ತಿ :.
ಶಾಹಾಬಾದ ನಗರ ಠಾಣೆ : ದಿನಾಂಕ: 24.09.2017 ರಂದು ಮುತ್ತಗಾ ಸೀಮಾಂತರದ ಕಾಗಿಣಾ ನದಿಯಿಂದ ಮರಳು ಜಗ್ಗಿ ದಾಸ್ತಾನು ಮಾಡಿ ಕಳ್ಳತನದಿಂದ ಸಾಗಾಟ ಮಾಡಲು ಸಿದ್ದತೆ ಮಾಡುತ್ತಿದ್ದಾರೆಂದು ಖಚಿತ ಬಾತ್ಮಿ ಬಂದ ಮೇರೆಗೆ ಶ್ರೀ ಕಲ್ಯಾಣಿ ಎಎಸ್‌ಐ ಶಹಾಬಾದ ನಗರ ಠಾಣೆ ರವರು ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಳಳಕ್ಕೆ  ಹೋದಾಗ ಅನಸುಬಾಯಿ ಇವರ ಹೊಲದ ಹತ್ತಿರ ನದಿಯ ದಂಡೆಯಲ್ಲಿ  ನಾಲ್ಕು ಜನರು ನದಿಯಲ್ಲಿಯ ಮರಳು ಕಬ್ಬಣದ ಬಕೇಟಗಳಿಗೆ ಹಗ್ಗದ ಸಹಾಯದಿಂದ ಜಗ್ಗುತ್ತಿರುವುದನ್ನು ನೋಡಿ ಖಚಿತ ಪಡಿಸಿಕೊಂಡು ದಾಳಿಮಾಡಿದಾಗ ಮೂರು  ಜನರು ಮತ್ತು ಒಬ್ಬ ಮಹಿಳೆ ಓಡಿ ಹೋದರು. ಸ್ಥಳಕ್ಕೆ ಹೋಗಿ ಪಂಚರ ಸಮಕ್ಷಮ ಪರಿಶೀಲಿಸಿ ನೋಡಲು ಮೂರು ಕಬ್ಬಿಣದ ಬಕೇಟಗಳು ಅದಕ್ಕೆ  ಹಗ್ಗ ಜೋಡಿಸಿದ್ದು ಇವುಗಳ ಸಹಾಯದಿಂದ ನದಿಯಿಂದ ಮರಳು ದಾಸ್ತಾನು ಮಾಡಿದ್ದು ಇವುಗಳೆಲ್ಲವುಗಳ ಅ.ಕಿ  - 5000 ರೂ  & ಸ್ಥಳದಲ್ಲಿ ಅಂದಾಜು ಎರಡು ಬ್ರಾಸ್ ಮರಳು ಅ ಕಿ 2000 ರೂ ನೇದ್ದವುಗಳನ್ನು  ಜಪ್ತಿಮಾಡಿಕೊಂಡು ನಂತರ ಓಡಿ ಹೋದವರ ಬಗ್ಗೆ ವಿಚಾರಿಸಲಾಗಿ ತಿಳದು ಬಂದಿದ್ದೇನೆಂದರೆ. ಮುತ್ತಗಾ  ಗ್ರಾಮದ 1] ಸೂರ್ಯಾಕಾಂತ ತಂದೆ ಬಸವರಾಜ ಮಳ್ಳಿ 2] ಶರಣಗೌಡ ತಂದೆ ಬಸವರಾಜ ಮಾಲಿಪಾಟೀಲ 3] ಶಿವಯೋಗಿ ಕಡಬೂರ 4] ಅನಸುಬಾಯಿ ಅಂತಾ ಗೊತ್ತಾಗಿ  ಶಾಹಾಬಾದ ನಗರ ಠಾಣೆಗೆ ಬಂದು ಸದರಿಯವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಇಸ್ಪೀಟ ಜೂಜಾಟದಲ್ಲಿ ನಿರತವರ ಬಂಧನ :
ಶಾಹಾಬಾದ ನಗರ ಠಾಣೆ : ದಿನಾಂಕ: 24/09/2017 ರಂದು ಶಹಾಬಾದದ ರಾಮಾ ಮೊಹಲ್ಲಾದ ಸರಕಾರಿ ಶಾಲೆಯ ಅವಾರಣದಲ್ಲಿ ಇಸ್ಪೀಟ ಜೂಜಾಟ ನಡೆದಿದೆ ಅಂತಾ ಬಾತ್ತಿ ಮೇರೆಗೆ  ಶ್ರೀ ಕಲ್ಯಾಣಿ ಎಎಸ್‌ಐ ಶಹಾಬಾದ ನಗರ ಠಾಣೆ ರವರು ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಳಳಕ್ಕೆ ಹೋಗಿ ಮರೆಯಲ್ಲಿ ನಿಂತು ಇಸ್ಪೀಟ ಜೂಜಾಟ ಆಡುತ್ತಿದ್ದ ಬಗ್ಗೆ ಖಚಿತ ಪಡಿಸಿಕೊಂಡು ದಾಳಿ ಮಾಡಿ  1) ಮಹ್ಮದ ಗೌಸ 2) ಮಹ್ಮದ ಮಾಜೀದ 3) ಜಾವೀದ ಪಟೇಲ 4) ಇಲಿಯಾಸ ಪಾಶಾ  5) ಮಹೆಬೂಬ 6) ಸದ್ದಾಂ ಹುಸೇನ ಸಾ: ರಾಮಾ ಮೊಹಲ್ಲಾ ಶಹಾಬಾದ  ಇವರನ್ನು ವಶಕ್ಕೆ ತೆಗೆದುಕೊಂಡು ಸದರಿಯವರಿಂದ ಇಸ್ಪೀಟ ಜೂಜಾಟಕ್ಕೆ ಬಳಸಿದ ನಗದು ಹಣ 7020-00 ರೂ ಹಾಗೂ 52 ಇಸ್ಪೇಟ ಎಲೆಗಳನ್ನು  ವಶಪಡಿಸಿಕೊಂಡು ಸದರಿಯವರೊಂದಿಗೆ ಶಾಹಾಬಾದ ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅತ್ಯಾಚಾರ ಪ್ರಕರಣ :
ಗ್ರಾಮೀಣ ಠಾಣೆ : ದಿನಾಂಕ. 24-9-2017 ರಂದು ನನ್ನ ಗಂಡ ಆರೀಫ್ ಶೇಟ ಇವರ ಪ್ಲ್ಯಾಸ್ಟೀಕ್ ಕಂಪನಿಯಲ್ಲಿ ಕೆಲಸಕ್ಕೆ ಹೋಗಿದ್ದು ಮದ್ಯಾನ ನನ್ನ ಮಗಳಿಗೆ ನನ್ನ ಗಂಡನಿಗೆ ಊಟಕೊಟ್ಟು ಬರುವದಕ್ಕಾಗಿ ಕಳುಹಿಸಿಕೊಟ್ಟಿದ್ದು,ಸ್ವಲ್ಪ ಸಮಯದ ನಂತರ ಸದರಿ ಆರೀಫ ಶೇಠ ಕಂಪನಿ ಎದರುಗಡೆ  ಜನರು ನೆರೆದಿದ್ದರು ಆಗ ನಾನು ಓಡುತ್ತಾ ಹೋಗಿ ನೋಡಲು ನನ್ನ ಮಗಳು ಅಳುತಿದ್ದಳು ಆಗ ಅವಳಿಗೆ ವಿಚಾರಿಸಲು  ಮದ್ಯಾನ ತಂದೆಯ ಊಟ ಒಳಗಡೆ ಇಡಲು ಹೋದಾಗ  ನನ್ನ ತಂದೆ ಕಂಪನಿಯ ಹೊರಗಡೆ ಮೂತ್ರ ವಿಸರ್ಜನೆಗೆ ಹೋಗಿದ್ದರು, ಆಗ ಒಳಗಡೆ ಕೆಲಸ ಮಾಡುತಿದ್ದ   ಗಣಪತಿ ತಂದೆ ತುಕರಾಮ ಮೇತ್ರೆ ಇತನು ಸದರಿ ಪ್ಲ್ಯಾಸ್ಟಿಕ ಕಂಪನಿಯಲ್ಲಿ ಒಳಗೆ ಮೂಲೆಯಲ್ಲಿ ನನಗೆ ಜಬರದಸ್ತಿಯಿಂದ ಎತ್ತಿಕೊಂಡು ಹೋಗಿ ನನಗೆ ಒತ್ತಿ ಹಿಡಿದುಕೊಂಡು, ಬಾಯಿ ಒತ್ತಿ ಹಿಡಿದು ಮುದ್ದಾಡುತ್ತಾ, ಎಳೆದಾಡಿ ನನ್ನ ಮೈಮೇಲಿನ ಬಟ್ಟೆಗಳನ್ನು ಬಿಚ್ಚಿ ಜಬರದಸ್ತಿಯಿಂದ ನನಗೆ ಜಬರಸಂಭೋಗ ಮಾಡುವಾಗ ನಾನು ಜೋರಾಗಿ ಚೀರಾಡುವಾಗ ಅಷ್ಟರಲ್ಲಿ ಪಕ್ಕೆದ ಕಂಪನಿಯಲ್ಲಿದ್ದ ಒಬ್ಬ ಹುಡುಗ ಹಾಗೂ ನನ್ನ ಗಂಡ ನಮ್ಮ ಮಾಲಿಕ ಆರೀಫ್ ಶೇಠ ಓಡುತ್ತಾ ಬರುವಷ್ಟರಲ್ಲಿ ಬಿಟ್ಟಿರುತ್ತಾನೆ ಅಂತಾ ಅಳುತ್ತಾ ಹೇಳಿರುತ್ತಾಳೆ ಅಂತಾ ಶ್ರೀಮತಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.