POLICE BHAVAN KALABURAGI

POLICE BHAVAN KALABURAGI

14 September 2017

KALABURAGI DISTRICT REPORTED CRIMES

ಅಪಹರಣ ಪ್ರಕರಣ :
ಜೇವರಗಿ ಠಾಣೆ : ಶ್ರೀ  ಸುಬ್ಬಣ್ಣ ತಂದೆ ನಾಗಪ್ಪ ಪೂಜಾರಿ ಸಾಃ ಕೊನಾಹಿಪ್ಪರಗಿ. ತಾಃ ಜೇವರಗಿ ಇವರು ಮಗಳಾದ ಮಾಯಾವತಿ ವಯಾಃ 16 ವರ್ಷ, ಇವಳು ದರ್ಗಾ ಸರಕಾರಿ ಪ್ರೌಡ ಶಾಲೆಯಲ್ಲಿ 10 ನೇ ತರಗತಿಯಲ್ಲಿ ಅಬ್ಯಾಸ ಮಾಡುತ್ತಿದ್ದಾಳೆ. ಅವಳು ದಿನಾಲು ನಮ್ಮೂರಿನಿಂದ ಶಾಲೆಗೆ ಬಸ್ಸಿನಲ್ಲಿ ಹೋಗಿ ಬಂದು ಮಾಡುತ್ತಾ ಬಂದಿರುತ್ತಾಳೆ, ನನ್ನ ಮಗಳು ಒಬ್ಬಳೆ ಶಾಲೆಗೆ ಹೋಗುವಾಗ ಬರುವಾಗ ಸಂತೊಷ ತಂದೆ ದೇವಪ್ಪ ಸಾಃ ಹಂಗರಗಿ ಇತನು ನಮ್ಮ ಮಗಳಿಗೆ ನೋಡಿ ಸೀಳ್ಳೆ ಹೊಡೆದು ಚುಡಾಯಿಸುವುದು ಮಾಡುತ್ತಾ ಬಮದಿರುತ್ತಾನೆ ನಮ್ಮ ಮಗಳು ನಮಗೆ ಮನೆಯಲ್ಲಿ ಹೇಳಿದಾಗ ನಾವು ಅವರ ಮನೆಗೆ ಹೋಗಿ ಬುದ್ದಿವಾದ ಹೇಳಿ ಬಂದಿದ್ದು ಇರುತ್ತದೆ. ನನ್ನ ಹೆಂಡತಿ ಬಾಗಮ್ಮ ಇವಳಿಗೆ ಆರಾಮ ಇರಲಾರದಕ್ಕೆ ದಿನಾಂಕ 06.08.2017 ರಂದು ಮುಂಜಾನೆ ನಾನು ನನ್ನ ಹೆಂಡತಿಗೆ ಮನೆಯಿಂದ ಕರೆದುಕೊಂಡು ಕಲಬುರಗಿಗೆ ಆಸ್ಪತ್ರೆಗೆ ಉಪಚಾರ ಕೊಡಿಸಲು ಹೋಗಿರುತ್ತೆನೆ ನಮ್ಮ ಮಕ್ಕಳು ಮನೆಯಲ್ಲಿಯೇ ಇದ್ದರು. ಮದ್ಯಾಹ್ನ ವೇಳಗೆ ನಾನು & ನನ್ನ ಹೆಂಡತಿ ಇಬ್ಬರೂ ಕಲಬುರಗಿ ಆಸ್ಪತ್ರೆಯಿಂದ ಮರಳಿ ಮನೆಗೆ ಬಂದಾಗ ಮನೆಯಲ್ಲಿ ನಮ್ಮ ಮಗಳು ಮಾಯವತಿ ಇವಳು ಕಾಣಲಿಲ್ಲಾ, ಮಾಯವತಿ ಎಲ್ಲಿಗೆ ಹೋಗಿರುತ್ತಾಳೆ ಎಂದು ಮತ್ತೊಬ್ಬ ಮಗಳಾದ ಜ್ಯೋತಿ ಇವಳಿಗೆ ಕೇಳಲಾಗಿ ಅವಳು ಹೇಳಿದ್ದೆನೆಂದರೆ, ನಾನು ಮತ್ತು ಅಕ್ಕ ಮಾಯವತಿ ತಮ್ಮ ಶರಣು ಎಲ್ಲರೂ ಮನೆಯಲ್ಲಿ ಇದ್ದಾಗ ಮುಂಜಾನೆ 9.30 ಗಂಟೆಯ ಸುಮಾರಿಗೆ ಸಂತೊಷ ಹಂಗರಗಿ ಇತನು ಬಂದು ಅಕ್ಕ ಮಾಯವತಿ ಇವಳಿಗೆ ಕಲಬುರಗಿಗೆ ಕರೆದುಕೊಂಡು ಹೋಗುತ್ತೆನೆ ಎಂದು ಹೇಳಿ ಅವಳಿಗೆ ನಂಬಿಸಿ ಕರೆದುಕೊಂಡು ಹೋಗಿರುತ್ತಾನೆ ಮರಳಿ ಮನೆಗೆ ಬಂದಿರುವುದಿಲ್ಲಾ ಅಂತಾ ಹೇಳಿದಳು. ದಿವಸ ರಾತ್ರಿಯಾದರೂ ನಮ್ಮ ಮಗಳು ಮನೆಗೆ ಬರಲಾರದಕ್ಕೆ ನಾವು ಊರಲ್ಲಿ ಮತ್ತು ನಮ್ಮ ಸಂಭಂಧಿಕರ ಊರುಗಳಿಗೆ ಮತ್ತು ಅವಳ ಗೆಳತಿಯರಿಗೆ ಕೇಳಲಾಗಿ ನಮ್ಮ ಮಗಳ ಬಗ್ಗೆ ಪತ್ತೆ ಹತ್ತಿರುವುದಿಲ್ಲಾ ಮತ್ತು ಸಂತೊಷ ಹಂಗರಗಿ ಈತನ ತಂದೆ ತಾಯಿಯವರಿಗೆ ವಿಚಾರಿಸಲಾಗಿ ಅವರು ನಮಗೇನು ಗೊತ್ತಿರುವುದಿಲ್ಲಾ ಎಂದು ಹೇಳಿರುತ್ತಾರೆ. ನಮ್ಮ ಮಗಳಿಗೆ ಹುಕಾಡಿದರೂ ಸಿಕ್ಕಿರುವುದಿಲ್ಲಾ. ನಮ್ಮ ಅಪ್ರಾಪ್ತ ಮಗಳಾದ ಮಾಯಾವತಿ ಇವಳಿಗೆ ಸಂತೊಷ ಹಂಗರಗಿ ಇತನು ನನ್ನ ಮಗಳಿಗೆ ಕಲಬುರಗಿ ತೊರಿಸುತ್ತೆನೆ ಎಂದು ಹೇಳಿ ನಂಬಿಸಿ ಅಪಹರಿಸಿಕೊಂಡು ಹೋಗಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಕ್ರಮ ಮರಳು ಸಾಗಿಸುತ್ತಿದ್ದ ಟ್ಇಪ್ಪರ ಜಪ್ತಿ :
ರಾಘವೇಂದ್ರ ನಗರ ಠಾಣೆ : ದಿನಾಂಕ:13-09-2017 ರಂದು ಸಾಯಂಕಾಲ ಮಿರ್ಚಿಗೊದಾಂ ಹತ್ತಿರದಿಂದ ಮಹ್ಮದಿ ಚೌಕ ಕಡೆಯಿಂದ ಎಮ್ಎಸ್ಕೆ ಮಿಲ್ಕಡೆಗೆ ಒಬ್ಬ ಟಿಪ್ಪರ ಚಾಲಕನು ತನ್ನ ಟಿಪ್ಪರನಲ್ಲಿ ಕಪ್ಪು ಮರಳನ್ನು ತುಂಬಿಕೊಂಡು ಕಳ್ಳತನದಿಂದ ಮರಳು ಸಾಗಣೆ ಮಾಡುತ್ತಿದ್ದಾನೆ ಅಂತಾ ಬಾತ್ಮಿ ಬಂದ ಮೇರೆಗೆ  ಶ್ರೀ ಪೌಲ ಎಎಸ್ ರಾಘವೆಂದ್ರ ನಗರ ಪೊಲೀಸ್‌‌ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಖದಿರ ಚೌಕ ಹತ್ತಿರ ನಿಂತಾಗ ಮಹ್ಮದಿ ಚೌಕ ಕಡೆಯಿಂದ ಒಂದು ಟಿಪ್ಪರ ಬರುತ್ತಿರುವದನ್ನು ನೋಡಿ ಸಂಶಯ ಬಂದು ಅದನ್ನು ತಡೆದು ನಿಲ್ಲಿಸಿ ಚೆಕ್ಕ ಮಾಡಿ ನೋಡಲು ಅದರಲ್ಲಿ ಕಪ್ಪು ಮರಳು ತುಂಬಿದ್ದು ಕಂಡು ಬಂದಿರುತ್ತದೆ ಚಾಲಕನಿಗೆ ವಿಚಾರಿಸಲು ಮಿರ್ಚಿಗೋದಾಂ ಹತ್ತಿರದಿಂದ ನಮ್ಮ ಮಾಲೀಕ ಇಸೂಪ ಇವರು  ಅನಧಿಕೃತವಾಗಿ ಸಂಗ್ರಹ ಮಾಡಿ ಇಟ್ಟಿದ್ದ ಮರಳನ್ನು ಅವರ ಸೂಚನೆಯ ಮೇರೆಗೆ ಆಕ್ರಮವಾಗಿ ಅನಧಿಕೃತವಾಗಿ ತುಂಬಿಕೊಂಡು ಮಾರಾಟ ಮಾಡುವ ಸಲುವಾಗಿ ಬರುತ್ತಿದ್ದೇನೆ ಅಂತಾ ತಿಳಿಸಿದ್ದು ಇರುತ್ತದೆ ಸದರಿ ಚಾಲಕನ ಹೆಸರು ವಿಚಾರಿಸಲು ತನ್ನ ಹೆಸರು ಮಲ್ಲಿಕಾರ್ಜುನ ತಂದೆ ನಾಗಪ್ಪ ಅಸ್ಟಗಿ ಸಾ|| ಹೀರಾಪೂರ ಅಂತಾ ತಿಳಿಸಿದ್ದು ಇರುತ್ತದೆ. ಟಿಪ್ಪರ ನಂಬರ ನೋಡಲು ಹೋಗುತ್ತಿದ್ದಂತೆ ಚಾಲಕನು ತನ್ನ ವಾಹನ ಅಲ್ಲಿಯೆ ಬಿಟ್ಟು ಓಡಿಹೊಗಿರುತ್ತಾನೆ. ಟಿಪ್ಪರ ನಂಬರ ನೋಡಲು ಕೆ, 28 ಬಿ 5780 ಇದರ ||ಕಿ|| 4,00000 ಮತ್ತು ಅದರಲ್ಲಿನ ಮರಳಿನ ||ಕಿ|| 13000 ರೂ ನೇದ್ದನ್ನು  ಜಪ್ತಿ ಪಡಿಸಿಕೊಂಡು ರಾಘವೇಂದ್ರ ನಗರ ಠಾಣೆಗೆ ತಂದು ಪ್ರಕರಣ ದಾಖಲಿಸಲಾಗಿದೆ.
ಅಪಘಾತ ಪ್ರಕರಣ :
ಜೇವರಗಿ ಠಾಣೆ : ಶ್ರೀ  ಮಳಯ್ಯ ತಂದೆ ಶಂಕ್ರಯ್ಯ ಹಿರೇಂಠ ಸಾ|| ಕೆಂಬಾವಿ ತಾ|| ಸುರಪೂರ ರವರು ದಿನಾಂಕ 07-08-2017 ರಂದು ತಾನು ಮತ್ತು ತನಗ ಪರಿಚಯದವರಾದ  ಟಾಯರ ಅಂಗಡಿಯ ಮಾಲಿಕ ಶಬರಿನಾದನ ತಂದೆ ವೇಲಯುದೇನ ಸಾ// ಸಾಯಿ ನಗರ ಸಿಂದಗಿ ಜಿ// ವಿಜಯಪೂರ ಇಬ್ಬರೂ ಕೂಡಿಕೊಂಡು ನಮ್ಮ ಖಾಸಗಿ ಕೆಲಸದ ನಿಮಿತ್ಯವಾಗಿ   ಸಿಂದಗಿಯಿಂದ ನನ್ನ ಮೋಟಾರ ಸೈಕಲ ನಂ ಕೆಎ-33 ಯು- 7661 ನೇದ್ದರ ಮೇಲೆ ಹೋರಟಿದ್ದು ಮೋ/ಸೈ ನಾನೆ ಚಲಾಯಿಸುತ್ತಿದ್ದೇನು . ಸಾಯಂಕಲ 4-30 ಗಂಟೆಯ ಸುಮಾರಿಗೆ  ನಾನು ಮೋಟಾರ ಸೈಕಲ ಜೇವರ್ಗಿ ಸಮೀಪ ಇರುವ ಶ್ರೀ ಶಣ್ಮಖ ಶಿಯೋಗಿ  ಡಿಪ್ಲೋಮಾ ಕಾಲೇಜ ಹತ್ತೀರ  ವಿಜಯಪೂರ  ರೋಡಿನ ಮೇಲೆ ಚಲಾಯಿಸಿಕೊಂಡು ಹೋಗುತ್ತೀರುವಾಗ ಎದುರಿನಿಂದ ಒಂದು ಮೋ/ಸೈ ನಂ ಕೆಎ-32 ಎನ್ -0539 ನೇದ್ದರ ಚಾಲಕನು  ತನ್ನ ಮೋಟಾರ ಸೈಕಲ ಅತೀ ವೇಗ ಮತ್ತು ಅಜಾಗೂರಕತೆಯಿಂದ ಚಲಾಯಿಸಿಕೊಂಡು ಬಂದು ನಮ್ಮ ಮೋಟರ ಸೈಕಲಗೆ ಡಿಕ್ಕಿ ಪಡಿಸಿದ ಪರಿಣಾಮವಾಗಿ ನಾವಿಬ್ಬರು ಮೋಟಾರ ಸೈಕಲ ಸಮೇತವಾಗ ಕೆಳಗೆ ಬಿದ್ದಿದ್ದರಿಂದ ನಮಗೆ ಎಡಗಾಲಿನ ಬೆರಳು ಕಟ್ಟ ಆಗಿದ್ದು (ಮುರಿದಿದ್ದು) , ಎಡಗೈ ಕಿರು ಬೆರಳು ಮುರಿದು ರಕ್ತ ಗಾಯವಾಗಿದ್ದು ನನ್ನ ಮೋಟಾರ ಸೈಕಲ ಹಿಂದಿನ ಸೀಟ್ ಮೇಲೆ   ಕುಳಿತಿರುವ ಶಬರಿನಾದನ್ ಇತನಿಗೆ ಎಡಗಲಿನ ಮೋಳಕಾಲಿನ ಹತ್ತಿರ ಕಾಲು ಮುರಿದಿದೆ ಮತ್ತು ಎಡಗೈ ಮೋಳ ಕೈ ಕೆಳಗೆ ತರಚಿದ ಗಾಯ ವಾಗಿರುತ್ತದೆ, ನಮ್ಮ ಮೋಟಾರ ಸೈಕಲಗೆ ಡಿಕ್ಕಿ ಪಡಿಸಿದ ಮೋಟಾರ ಸೈಕಲ್ ನಂ ಕೆಎ 32 ಇಎನ್ 0359 ನೇದ್ದರ ಸವಾರನಿಗು ಘಟನೆಯಲ್ಲಿ ಗಾಯವಾಗಿದ್ದು ಅವನ ಹೆಸರು ಮತ್ತು ವಿಳಾಸ ನಮಗೆ ಗೋತ್ತಾಗಿರುವುದಿಲ್ಲಾ ನಾನು ಅವನನ್ನು ನೋಡಿದರೆ ಗುರುತ್ತಿಸುತ್ತೇನೆ . ಘಟನೆ ನಂತರ ಯುನೈಟೆಡ ಆಸ್ಪತ್ರೆಗೆ ಬಂದು ಸೇರಿಕೆ ಯಾಗಿರುತ್ತೆವೆ ಪ್ರಕರಣದಲ್ಲಿನ ಗಾಯಾಳು ಶಿವಾನಂದ ತಂದೆ ಬಸಣ್ಣ ಮಣೂರ ಸಾ|| ಸೊನ್ನ ತಾ|| ಜೇವರಗಿ ಇತನು ಪರಮಶೇಟ್ಟಿ ಆಸ್ಪತ್ರೆ ಮೀರಜನಲ್ಲಿ (ಮಾಹಾರಾಷ್ಡ್ರ) ಚಿಕಿತ್ಸೆ ಪಡೆಯುತ್ತಾ ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ 27.08.2017 ರಂದು ಮೃತ ಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ

13 September 2017

KALABURAGI DISTRICT REPORTED CRIMES

ದೇವಸ್ಥನದಲ್ಲಿ  ನಿಧಿ ಅಗೆಯಲು ಪ್ರಯತ್ತಿಸುತ್ತಿದ್ದ ಆರೋಪಿತರ ಬಂಧನ:
ಫರಹತಾಬಾದ ಪೊಲೀಸ್ ಠಾಣೆ:   ದಿನಾಂಕ 12/09/2017 ರಂದು ಶ್ರೀ ಮುತ್ತಣ್ಣ  ತಂದೆ ರಾಮಚಂದ್ರ ಸಾಃ ಬಸವಪಟ್ಟಣ್ಣ ಇವರು ಠಾಣೆಗೆ ಹಾಜರಾಗಿ ದೂರು ಗ್ರಾಮದಿಂದ ಅಂದಾಜು 3 ಕಿಲೊಮಿಟರ ದೂರದ ಭೀಮಾ ನದಿಯ ದಡದಲ್ಲಿರುವ  ಶ್ರೀ ಕೌಂಟಗಿ ಮರಿಯಮ್ಮ ದೇವಾಸ್ಥಾನ ಇದ್ದು, ನಾನು ಸುಮಾರು ವರ್ಷಗಳಿಂದ ಆ ದೇವಸ್ಥಾನದ  ಪೂಜಾರಿಕೆ ಕೆಲಸ ಮಾಡುತ್ತಿದ್ದು  ತ್ತೇನೆ. ಸದರಿ ದೇವಾಸ್ಥಾನ ಹಳೆಯ ಕಾಲದಿಂದಲೂ ಇದ್ದು, ದೇವಾಸ್ಥಾನದ ಮುಖ್ಯ ದ್ವಾರದ ಬಲಗಡೆ ಒಂದು ಹಳೆ ಕಲ್ಲು ನೆಟ್ಟಿದ್ದು ಅದರ ಮೇಲೆ ಹಳೆಯ ಲಿಪಿ ಬರೆದಿದ್ದು ಅದರ ಮಗ್ಗಲಿಗೆ ಒಂದು ಹಳೆಯ ಕಾಲದ ಕಲ್ಲಿನ ಶಿವಲಿಂಗ ಇದ್ದು, ಭಕ್ತರು ಹಾಗೂ ಊರಿನ ಜನರು ಇಲ್ಲಿ ನಿಧಿ ಇರಬಹುದು ಅಂತಾ ಮಾತನಾಡುತ್ತಿದ್ದರು. ದೇವಾಸ್ಥಾನದ ಬಾಗಿಲಿಗೆ ನಾವು ಕೀಲಿ ಹಾಕುವುದಿಲ್ಲ. ದಿನಾಂಕ 11/09/2017 ರಂದು ಬೆಳಿಗ್ಗೆ ಎಂದಿನಂತೆ ನಾನು ದೇವಾಸ್ಥಾನಕ್ಕೆ ಹೋಗಿ ಪೂಜಾ ಮುಗಿಸಿಕೊಂಡು ಮರಳಿ ಮನೆಗೆ ಬಂದಿದ್ದು,  ನಮ್ಮೂರಿನ ಬಾಬು ತಂದೆ ಶರಣಪ್ಪಾ ಕಂದಾರಿ ಈತನು ನನಗೆ ತಿಳಿಸಿದೆನೆಂದರೆ, ಮದ್ಯಾಹ್ನ 1-2 ಗಂಟೆಯ ಸುಮಾರಿಗೆ ಒಂದು ಕಾರಿನಲ್ಲಿ 5 ಜನರು ಬಂದು ದೇವರಿಗೆ ಕಾಯಿ ಕರ್ಪೂರ ಮಾಡಿ ಅಭಿಷೇಕ ಮಾಡಿಸಿ ಅಲ್ಲಿಯೆ ಉಳಿದಿದ್ದು,  ರಾತ್ರಿ 8.00 ಗಂಟೆಯ ಸುಮಾರಿಗೆ ಇನ್ನೊಂದು ಕಾರು ಗುಡಿಯ ಕಡೆಗೆಹೋಗಿದ್ದು , ಮದ್ಯಾಹ್ನ ಕಾರಿನಲ್ಲಿ ಬಂದವರು ಗುಡಿಯ ಸುತ್ತಲೂ ಅನುಮಾನಾಸ್ಪದವಾಗಿ ತಿರುಗಾಡಿ ನೋಡುತ್ತಿದ್ದು, ಈಗ ಈ ಇನ್ನೊಂದು ಕಾರು ಗುಡಿಯ ಕಡೆಗೆ ಹೊಗಿರುವುದ್ದನ್ನು ನೋಡಿ ಯಾಕೋ ನನಗೆ ಸಂಶಯ ಬಂದಿರುತ್ತದೆ ಅಂತಾ ತಿಳಿಸಿದ್ದರಿಂದ ನಾನು ಹಾಗೂ ನಮ್ಮೂರಿನವರಾದ 1) ಬಸವರಾಜ 2) ಬಸವರಾಜ ತಂದೆ ಶಂಕರ 3) ಲಿಂಗಪ್ಪ 4) ದತ್ತಪ್ಪ 5) ಬಸಣ್ಣ ಕಾಟನೂರ 6) ಬಾಬುರಾಯ 7) ಮಹೇಶ 8) ಭೀಮಾಶಂಕರ ಕುಂಬಾರ 9) ಮಂಜುನಾಥ ಭರ್ಮಾ 10) ಶಿವಮೂರ್ತಿ ಎಲ್ಲರೂ ಕೂಡಿಕೊಂಡು ದೇವಾಸ್ಥಾನಕ್ಕೆ ರಾತ್ರಿ 10.30 ಪಿ.ಎಮಕ್ಕೆ ಹೋದಾಗ, ದೇವಾಸ್ಥಾನದ ಬಲಭಾಗದಲ್ಲಿರುವ ಲಿಪಿಯ ಮಗ್ಗದಲ್ಲಿರುವ ಲಿಂಗವನ್ನು ಬೇರೆ ಕಡೆ ಎತ್ತಿ ಇಟ್ಟು ಲಿಂಗ ಇರುವ ಸ್ಥಳವನ್ನು ಇಬ್ಬರೂ ಅಗಿಯುತ್ತಿದ್ದು, ಉಳಿದವರು ಕತ್ತಲಲ್ಲಿ ಗಿಡದ ಕೆಳಗೆ ನಿಂತಿದ್ದು, ನಾವು ಬರುವುದ್ದನ್ನು ನೋಡಿ ಅಲ್ಲಿದ್ದ ಕೇಲವು ಜನರು ಓಡಿ ಹೊಗುತ್ತಿರುವಾಗ ನಾವೇಲ್ಲರೂ ಬೆನ್ನು ಹತ್ತಿ ಇಬ್ಬರನ್ನು ಹಿಡಿದು ಅವರ ಹೆಸರು ವಿಚಾರಿಸಲಾಗಿ 1) ಶಿವಕುಮಾರ ತಂದೆ ನೀಲಕಂಠರಾವ ಪಾಟೀಲ ಸಾಃ ತಿಲಕ ನಗರ ಕಲಬುರಗಿ 2) ಖಾಜಪ್ಪ ತಂದೆ ಮಹಾದೇವಪ್ಪ ಮಾದರ ಸಾಃ  ಕೆ.ಎಸ್,ಆರ್.ಟಿ.ಸಿ ಕ್ವಾಟರ್ಸ ಕಲಬುರಗಿ ತಿಳಿಸಿದ್ದು, ಉಳಿದವರು ಓಡಿ ಹೊಗಿದ್ದು, ಕೃತ್ಯವೆಸಗಲು ತಂದಿದ ಎರಡು ಕಾರ ಮತ್ತು ಇತರೆ ವಸ್ತುಗಳನ್ನು ಸ್ಥಳದಲ್ಲಿಯೇ ಬಿಟ್ಟಿದ್ದು. ನಮ್ಮೂರಿನ ಮರೆಯಮ್ಮ ದೇವಾಸ್ಥಾನದ ಮುಂಭಾಗದಲ್ಲಿ ನೆಟ್ಟ ಕಲ್ಲಿನ ಲಿಪಿಯ ಮಗ್ಗಲಲ್ಲಿ ಇರುವ ಲಿಂಗವನ್ನು ನಿಧಿಯ ಆಸೆಗಾಗಿ ಸರಿಸಿ, ಲಿಂಗ ಇದ್ದ ಸ್ಥಳವನ್ನು ಅಗೆದು ನಿಧಿ ತೆಗೆಯುವ ಪ್ರಯತ್ನ ಮಾಟಿದವರ ವಿರುದ್ದ ಸೂಕ್ತ ಕಾನೂನು ಕ್ರಮ ಜರೂಗಿಸುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರಹತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಜೂಜುಕೋರರ ಬಂಧನ: -
ನರೋಣಾ ಪೊಲೀಸ್ ಠಾಣೆ : ದಿನಾಂಕ:12/09/2017 ರಂದು ಶ್ರೀ.ಗಜಾನನ.ಕೆ ನಾಯಕ, ಪಿ.ಎಸ್‌.ಐ  ನರೋಣಾ ಪೊಲೀಸ್ ಠಾಣೆ ರವರು, ಖಚಿತ ಬಾತ್ಮಿ ಮೇರೆಗೆ ವ್ಹಿ ಕೆ ಸಲಗರ ಗ್ರಾಮದ ಗ್ರಾಮ ಪಂಚಾಯಿತಿ ಎದುರಿನ ಸಂತೆ ಕಟ್ಟೆಯ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಅಂದರ ಬಾಹರ ಎಂಬ ಇಸ್ಪಿಟ ಜೂಜಾಟಕ್ಕೆ ಹಣ ಪಣಕಿಟ್ಟು ಆಡುತ್ತಿರುವ ಬಗ್ಗೆ ದಾಳಿ ಕುರಿತು ಮಾನ್ಯ ಹೆಚ್ಚುವರಿ ಜೆ.ಎಂ.ಎಫ್.ಸಿ. ನ್ಯಾಯಾಲಯ ನ್ಯಾಯಾಧೀಶರು, ಆಳಂದ ರವರ ಅನುಮತಿ ಪಡೆದುಕೊಂಡು ಮಾನ್ಯ ಡಿ.ಎಸ್.ಪಿ ಸಾಹೇಬ ಆಳಂದ ಹಾಗೂ ಮಾನ್ಯ ಸಿಪಿಐ ಆಳಂದ ರವರ ಮಾರ್ಗದರ್ಶನದಂತೆ ಪಂಚರಾದ ಶ್ರೀ.ಬಂಡಪ್ಪ ತಂದೆ ದೂಳಪ್ಪ ನಾಟೀಕಾರ  ಸಾ:ನರೋಣಾ ಗ್ರಾಮ ಮತ್ತು ಚಂದ್ರಕಾಂತ ತಂದೆ ಭೀಮಶಾ ಮಡಿವಾಳ,  ಸಾ:ನರೋಣಾ ಇವರನ್ನು ಬರಮಾಡಿಕೊಂಡು ನಾನು ಮತ್ತು ಸಿಬ್ಬಂದಿಯವರಾದ 1) ಕಲ್ಲಿನಾಥ ಎ.ಎಸ್‌.ಐ  2) ಶಿವಾಜಿ ಸಿಪಿಸಿ-860 3) ಆನಂದ ಸಿಪಿಸಿ-1258 4) ಶರಣಪ್ಪ ಸಿಪಿಸಿ-90 ರವರೆಲ್ಲರೂ ಕೂಡಿ ಖಾಸಗಿ ಜೀಪಿನಲ್ಲಿ ಹೊರಟು ವ್ಹಿ ಕೆ ಸಲಗರ ಗ್ರಾಮದ ಗ್ರಾಮ ಪಂಚಾಯಿತಿ ಎದುರಿನ ಸಂತೆ ಕಟ್ಟೆಯ ಹತ್ತಿರ ಹೋಗಿ ನಾನು ಹಾಗೂ  ಸಿಬ್ಬಂದಿಯವರು ಕೂಡಿ ಸದರಿ ಜೂಜುಕೋರರ ಮೇಲೆ ದಾಳಿ ಮಾಡಿ ಅವರನ್ನು ಹಿಡಿದು ಅವರ ಹೆಸರು ವಿಳಾಸ ವಿಚಾರಿಸಲಾಗಿ  1]ರಾಜು ಸಾ||ವ್ಹಿ.ಕೆ ಸಗಲರ ತಾಂಡಾ. 2)ಪ್ರೇಪಸಿಂಗ ತಂದೆ ಗಣು ಜಾದವ್, ಸಾ|| ವ್ಹಿ ಕೆ ಸಲಗರ ತಾಂಡಾ 3)ಅಮೃತ ತಂದೆ ಭೀಮಶ್ಯಾ ಮರಾಠ, ಸಾ||ವ್ಹಿ ಕೆ ಸಲಗರ, 4]ಅಪ್ಪರಾಯ ತಂದೆ ಗುಂಡಪ್ಪ ಗೂಗಳೆ, ಸಾ|| ವ್ಹಿ ಕೆ ಸಲಗರ, 5]ಗುರುದೇವ ತಂದೆ ಸಿದ್ದಪ್ಪ ಪಟ್ನೆ, ಸಾ||ವ್ಹಿ ಕೆ ಸಲಗರ, ಎಂದು ತಿಳಿಸಿದ್ದು ಅವರನ್ನು ದಸ್ತಗೇರ ಮಾಡಿಕೊಂಡು ಇಸ್ಪಿಟ ಪಣಕ್ಕೆ ಹಚ್ಚಿದ ಮತ್ತು ಇಸ್ಪಿಟ ಪಣಕ್ಕೆ ಉಪಯೋಗಿಸಿದ ನಗದು ಒಟ್ಟು ಹಣ 1920 ರೂಪಾಯಿ ಮತ್ತು 52 ಇಸ್ಪಿಟ ಎಲೆಗಳನ್ನು  ಪಂಚರ ಸಮಕ್ಷಮದಲ್ಲಿ ವಶಕ್ಕೆ ತೆಗೆದುಕೊಂಡು ಆರೋಪಿತರರ ವಿರುದ್ಧ ನರೋಣಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಅಪಘಾತ ಪ್ರಕರಣ:

ಕಮಲಾಪೂರ ಪೊಲೀಸ್ ಠಾಣೆ: ದಿನಾಂಕ:12.09.2017 ರಂದು ಶ್ರೀ  ಗುಂಡಪ್ಪ ತಂದೆ ಚಂದ್ರಶೇಖರ ಗೋಣಿ ಮು:ಕಮಲಾಪೂರ ಇವರು ಠಾಣೆಗೆ ಹಾಜರಾಗಿ ಇಂದು ದಿನಾಂಕ:12.09.2017 ರಂದು ಮುಂಜಾನೆ ನಾನು ಕಲಬುರಗಿ ಹುಮನಾಬಾದ ಹೆದ್ದಾರಿಯ ರೇಲ್ವೆ ಬ್ರೀಡ್ಜ ಹತ್ತೀರ ವಾಕಿಂಗ ಮಾಡಲು ಹೋಗಿ ವಾಪಸ್ಸ ಮನೆಯ ಕಡೆಗೆ ಬರುವಾಗ ರಾಜನಾಳ ಕ್ರಾಸ ಸಮೀಪ ನನ್ನ ಮಾವನವರಾದ ಗಂಗಾಧರ ತಂದೆ ಚಂದ್ರಾಮ ರಾಂಪೂರೆ ಹಾಗೂ ನನ್ನ ಚಿಕ್ಕಪ್ಪನವರಾದ ಬಸವರಾಜ ತಂದೆ ಗುಂಡಪ್ಪ ಗೋಣಿ ಮು:ಕಮಲಾಪೂರ ಇವರು ಸಹ ಕೂಡಾ ವಾಕಿಂಗ ಮಾಡುತ್ತ ನಮ್ಮ ಎದುರಿನಿಂದ ರಾಜನಾಳ ಕ್ರಾಸ ಹತ್ತೀರ ಬರುತ್ತಿದ್ದರು. ಅದೇ ವೇಳೆಗೆ ಕಲಬುರಗಿ ಕಡೆಯಿಂದ ಬರುತ್ತಿದ್ದ ಟೋಯೋಟೋ ಕಾರ ಚಾಲಕನು ತನ್ನ ಕಾರನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸುತ್ತ ಬಂದು ವಾಕಿಂಗ ಮಾಡುತ್ತ ಹೋರಟಿದ್ದ ನನ್ನ ಮಾವ ಗಂಗಾಧರ ಹಾಗೂ ಕಾಕನವರಾದ ಬಸವರಾಜ ಇವರಿಗೆ ಹಿಂದಿನಿಂದ ಡಿಕ್ಕಿ ಪಡಿಸಿದ್ದರಿಂದ ನನ್ನ ಕಾಕನವರು ರೋಡಿನ ಎಡಬದಿಗೆ ಬಿದ್ದಿದ್ದು. ನನ್ನ ಮಾವ ಗಂಗಾಧರ ಇವರಿಗೆ ಕಾರ ಮುಂದೆ ಒತ್ತಿಕೊಂಡು ಹೋಗಿ ಸ್ವಲ್ಪ ದೂರದಲ್ಲಿ ನಿಂತಿದ್ದು. ನಂತರ ಅಪಘಾತವಾದದನ್ನು ನೋಡಿ ನಾನು ಮತ್ತು ಅಲ್ಲೆ ರೊಡಿನ ಮೇಲೆ ವಾಕಿಂಗ ಮಾಡುತ್ತ ಬರುತ್ತಿದ್ದ ಶ್ರೀಶೈಲ ತಂದೆ ಗುರುಸಿದ್ದಪ್ಪ ದೋಶೇಟ್ಟಿ ಹಾಗೂ ಗುರುಪಾದಪ್ಪ ತಂದೆ ಮಡಿವಾಳಪ್ಪ ಗೋಣಿ ಇವರೆಲ್ಲರೂ ಕೂಡಿ ನಮ್ಮ ಕಾಕ ಬಸವರಾಜ ಇವರಿಗೆ ಎಬ್ಬಿಸಿ ನೋಡಲು ಅವರ ಹಣೆಗೆ ತಲೆಯ ಮುಂಭಾಗದಲ್ಲಿ ರಕ್ತಗಾಯಗಾಯವಾಗಿದ್ದು. ಹಾಗೂ ಅಲ್ಲಲ್ಲಿ ತರಚಿದ ರಕ್ತಗಾಯಗಳಾಗಿದ್ದವು. ನಂತರ ನನ್ನ ಮಾವನವರಾದ ಗಂಗಾಧರ ಇವರ ಹತ್ತೀರ ಹೋಗಿ ನೋಡಲು ಅವರಿಗೆ ಭಾರಿ ರಕ್ತಗಾಯವಾಗಿ ಸ್ಥಳದಲ್ಲೆ ಮೃತ ಪಟ್ಟಿದ್ದರು. ನಂತರ 108 ಅಂಬುಲೆನ್ಸಗೆ ಫೊನ ಮಾಡಿ ಕರೆಯಿಸಿ ನನ್ನ ಕಾಕ ಬಸವರಾಜ ಇವರಿಗೆ ಉಪಚಾರ ಕುರಿತು ಕಲಬುರಗಿಗೆ ಕಳುಹಿಸಿಕೊಟ್ಟಿದ್ದು. ನಂತರ ಅಪಘಾತ ಪಡಿಸಿದ ವಾಹನದ ಹತ್ತೀರ ನಾವುಗಳು ಹೋಗುತ್ತಿದ್ದಂತೆ ಅದರ ಚಾಲಕನು ನಮಗೆ ನೋಡಿ ಅವಸರದಲ್ಲಿ ಕಾರನನ್ನು ತೆಗೆದುಕೊಂಡು  ಓಡಿ ಹೋಗಿದ್ದು. ಅದರ ನಂಬರ ನೋಡಲು ಟೋಯೋಟೋ ಕಂಪನಿಯ ಕಾರ ಇದ್ದು. ಅದು ಹಳದಿ ಬೋರ್ಡನ ಕಾರ ನಂ.ಸಿ.2461 ಇದ್ದು. ಅದು ಯಾವ ರಾಜ್ಯದ್ದು ಅಂತಾ ಗೋತ್ತಾಗಿರುವುದಿಲ್ಲ ಆ ಕಾರ ಮತ್ತು ಅದರ ಚಾಲಕನಿಗೆ ನೋಡಿದರೆ ಗುರುತಿಸುತ್ತೇನೆ. ಕಾರಣ ನನ್ನ ಮಾವ ಗಂಗಾಧರ ಹಾಗೂ ಕಾಕ ಬಸವರಾಜ ಇವರಿಗೆ ಹಿಂದಿನಿಂದ ಡಿಕ್ಕಿ ಪಡಿಸಿ ಗಂಗಾಧರ ಇವರಿಗೆ ಸ್ಥ್ಥಳದಲ್ಲೆ ಮೃತ ಪಡಿಸಿದ ಕಾರನಂ. ಸಿ.2461 ನೇದ್ದರ ಚಾಲಕನ ವಿರುದ್ದ ಕಾನೂನ ಕ್ರಮ ಜರುಗಿಸುವಂತೆ  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.

11 September 2017

KALABURAGI DISTRICT REPORTED CRIMES

ಇಸ್ಟೀಟ ಜೂಜಾಟದಲ್ಲಿ ನಿರತವರ ಬಂಧನ :
ಅಫಜಲಪೂರ ಠಾಣೆ : ದಿನಾಂಕ 10-09-2017 ರಂದು   ಅಫಜಲಪೂರ ಎಪಿಎಮ್ ಸಿ ಹತ್ತಿರ ಸಾರ್ವಜನಿಕ ಖುಲ್ಲಾ ಸ್ಥಳದಲ್ಲಿ ಕೆಲವು ಜನರು ಪಣಕ್ಕೆ ಹಣ ಹಚ್ಚಿ ಇಸ್ಪೆಟ ಎಲೆಗಳ ಸಹಾಯದಿಂದ ಅಂದರ ಬಾಹರ ಎಂಬ ಇಸ್ಪೇಟ ಜೂಜಾಟ ಆಡುತ್ತಿದ್ದಾರೆ ಅಂತಾ ಬಾತ್ಮಿ ಬಂದ ಮೇರೆಗೆ ಶ್ರೀ ಜೆ.ಎಚ್. ಇನಾಮದಾರ ಸಿಪಿ.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ  ಎಪಿಎಮ್ ಸಿ ಹತ್ತಿರ ಹೋಗಿ ಅಲ್ಲೆ ಸ್ವಲ್ಪ ದೂರ ನಮ್ಮ ಜೀಪನ್ನು ನಿಲ್ಲಿಸಿ ನಡೆದುಕೊಂಡು ಹೋಗಿ, ಮರೆಯಾಗಿ ನಿಂತು ನೊಡಲು ಎಪಿಎಮ್ ಸಿ ಹತ್ತಿರ ರೋಡಿನ ಬಾಜು ಸಾರ್ವಜನಿಕ ಖುಲ್ಲಾ ಸ್ಥಳದಲ್ಲಿ ಕೆಲವು ಜನರು ದುಂಡಾಗಿ ಕುಳಿತುಕೊಂಡು ಇಸ್ಪೇಟ ಎಲೆಗಳ ಸಹಾಯದಿಂದ ಅಂದರ ಬಾಹರ ಇಸ್ಪೆಟ ಜೂಜಾಟ ಆಡುತ್ತಿರುವದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಜೂಜಾಡುತಿದ್ದ ಎಲ್ಲಾ 10 ಜನರನ್ನು ಹಿಡಿದು ಅವರ ಹೆಸರು ವಿಳಾಸ ವಿಚಾರಿಸಿ ಅಂಗ ಶೋಧನೆ ಮಾಡಲಾಗಿ 1) ರಾಜಕುಮಾರ ತಂದೆ ಮಲ್ಲಪ್ಪ ಗುಣಾರಿ ಸಾ|| ಅಫಜಲಪೂರ ಅಂತಾ 2) ಮಲ್ಲಪ್ಪ ತಂದೆ ಚಿದಾನಂದ ಪತ್ತಾರ ಸಾ|| ಬಜಾರ ಏರಿಯಾ ಅಫಜಲಪೂರ 3) ಸುಬಾಷ ತಂದೆ ಬಾಬುರಾವ ಜೇವರ್ಗಿ ಸಾ|| ಅಫಜಲಪೂರ 4) ಗಂಗಾಧರ ತಂದೆ ಪ್ರಭು ಉಡಗಿ ಸಾ|| ಅಫಜಲಪೂರ  5) ನಾಗೇಶ ತಂದೆ ಮಲ್ಲಪ್ಪ @ ಗದಿಗೆಪ್ಪ ಪಾಟೀಲ (ಉಟಗಿ) ಸಾ|| ಇಂದಿರಾ ನಗರ ಅಫಜಲಪೂರ 6) ಶಿವಪ್ರಸಾದ ತಂದೆ ಶಂಕ್ರೇಪ್ಪ ಕತ್ತನಳ್ಳಿ  ಸಾ|| ಇಂದಿರಾ ನಗರ ಅಫಜಲಪೂರ 7) ಬೀರಣ್ಣ ತಂದೆ ನಿಂಗಪ್ಪ ಕರಜಗಿ ಸಾ|| ಸಿದ್ರಾಮೇಶ್ವರ ಗುಡಿ ಹತ್ತಿರ ಅಫಜಲಪೂರ 8) ಸಂತೋಷ ತಂದೆ ಕಲ್ಲಪ್ಪ ನರೋಣಿ ಸಾ|| ಕಲಬುರಗಿ ಹಾ|| || ಅಫಜಲಪೂರ 9) ಗುರುಶಾಂತ ತಂದೆ ಶಾಂತಪ್ಪ ಯಳಸಂಗಿ ಸಾ|| ಜೈ ಭೀಮ ನಗರ ಅಫಜಲಪೂರ 10) ಜಗದೀಶ ತಂದೆ ಬಸಣ್ಣ ಅವಟೆ  ಸಾ|| ಮಹಾಂತೇಶ ಚಿತ್ರ ಮಂದಿರದ ಹಿಂದುಗಡೆ ಅಫಜಲಪೂರ  ಅಂತಾ ತಿಳಿಸಿದ್ದು ಸದರಿಯವರಿಂದ  ಜೂಜಾಟಕ್ಕೆ ಬಳಸಿದ 40,820/- ರೂ ನಗದು ಹಣ ಮತ್ತು 52 ಇಸ್ಪೆಟ ಎಲೆಗಳನ್ನು ವಶಪಡಿಸಿಕೊಂಡು ಸದರಿಯವರೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಪ್ರಾಪ್ತೆಯ ಮೇಲೆ ಅತ್ಯಾಚಾರ ಮಾಡಿದ ಪ್ರಕರಣ :
ಶಾಹಾಬಾದ ನಗರ ಠಾಣೆ : ಶ್ರೀಮತಿ ರವರು ದಿನಾಂಕಃ 09.09.2017 ರಂದು  ಮುಂಜಾನೆ ಮನೆಯಲ್ಲಿ  ತನ್ನ ಮಗಳನ್ನು ಮನೆಯಲ್ಲಿ ಬಿಟ್ಟು ಎಲ್ಲರು ನಾವು ಪಾಲಿಗೆ ಮಾಡಿದ  ಹೊಲಕ್ಕೆ ಹೋಗಿದ್ದೇವು.  ಸಾಯಂಕಾಲ 4 ಗಂಟೆಗೆ  ಹೊಲದಿಂದ ನಾವೆಲ್ಲರು ಮನೆಗೆ ಬಂದಾಗ  ನನ್ನ ಮಗಳು ಅಳುತ್ತಾ ನಮಗೆ ಹೇಳಿದ್ದೇನೆಂದರೆನಾನು ಮನೆಯಲ್ಲಿ ಮಧ್ಯಾಹ್ನ 2.00ಗಂಟೆಯ  ಸುಮಾರಿಗೆ  ಮನೆಯ ಬಾಗಿಲ ಮುಂದೆ ಮಾಡಿ ಒಬ್ಬಳೆ ಮಲಗಿಕೊಂಡಾಗ ಬಾಜು ಮನೆಯ   ಯಲ್ಲಾಲಿಂಗ ತಂದೆ ಶಂಕ್ರೆಪ್ಪಾ ಮೈಲಾರಿ ಇತನು ನಮ್ಮ ಮನೆಯಲ್ಲಿ  ಬಂದು ನನ್ನ  ಪಕ್ಕದಲ್ಲಿ ಮಲಗಿಕೊಂಡು ನನ್ನ ನೈಟಿ  ಮೇಲೆ ಎತ್ತಿ ನನಗೆ  ಜಬರದಸ್ತಿಯಿಂದ ಜಬರಿ ಸಂಬೋಗ ಮಾಡುವಾಗ ನಾನು ಚೀರಾಡಿ ಬಿಡಿಕೊಳ್ಳಲು ಪ್ರಯತ್ನಿಸುವಾಗ, ನನಗೆ ನೀನು  ಸುಮ್ಮನೆ ಇರಲಿಲ್ಲವೆಂದರೆ ನಿನಗೆ ಜೀವ ಸಹಿತ ಬಿಡುವದಿಲ್ಲಾ ಅಂತಾ ಪ್ರಾಣ ಬೆದರಿಕೆ ಹಾಕಿ  ಜಬರಿ ಸಂಭೋಗ ಮಾಡಿರುತ್ತಾನೆಆಗ ಅವನ ಹೆಂಡತಿ  ನಿಂಗಮ್ಮಾ  ಇವಳು  ನಮ್ಮ ಮನೆಗೆ  ಬಂದು  ಹೊರಗಡೆಯಿಂದ  ಬಾಗಿಲು ಕೀಲಿಹಾಕಿ ಜನರಿಗೆ ಕರೆಯಿಸಿ ಬಾಗಿಲು ತೆರೆದು  ನಮಗೆ ಹೊರಗೆ ತಂದು  ನನಗೆ  ರಂಡಿ ನನ್ನ  ಗಂಡನಿಗೆ  ಇಟ್ಟುಕೊಂಡಿದ್ದಿ ಏನು  ಅಂತಾ ಬೈಯ್ದು ಕೈಯಿಂದ  ಬೆನ್ನಿಗೆ ಹೊಡೆದು  ಕಟ್ಟೆಯ ಮೇಲಿಂದ  ಎಳೆದಾಡಿ ಕೆಳಗೆ ಕಡವಿ, ಈಗಾಗಲೆ ನಿನ್ನ ಒಂದು  ಕಾಲು ಕುಂಟು ಇದ್ದು ಇನ್ನೊಂದು  ಕಾಲು ಮುರಿಯುತ್ತೇನೆ ಅಂತಾ ಬೈಯ್ದಿರುತ್ತಾಳೆ ಅಂತಾ ನನ್ನ ಮಗಳು ನಮಗೆ  ತಿಳಿಸಿರುತ್ತಾಳೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಕ್ರಮವಾಗಿ ಮರಳು ಸಾಗಿಸುತ್ತಿದ್ದ ಟಿಪ್ಪರಗಳ ಜಪ್ತಿ :
ಫರತಾಬಾದ ಠಾಣೆ : ದಿನಾಂಕ 10-09-2017 ರಂದು ಶಹಾಬಾದ ಕ್ರಾಸ ಮಾರ್ಗ ವಾಗಿ ಅಲ್ಲಿಂದಲೊ ಅಕ್ರಮವಾಗಿ ಅನಧಿಕೃತವಾಗಿ  ಕಳ್ಳತನದಿಂದ  ಮರಳನ್ನು ಟಿಪ್ಪರಗಳಲ್ಲಿ ಸಾಗಣೆ ಮಾಡುತ್ತಿದ್ದಾರೆ  ಅಂತಾ ಖಚಿತ ಬಾತ್ಮಿ ಬಂದ  ಮೇರೆಗೆ, ಶ್ರೀ ವಾಹಿದ ಕೊತವಾಲ ಪಿ.ಎಸ್.ಐ. ಫರತಾಬಾದ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಶಹಾಬಾದ ಕ್ರಾಸ ಹತ್ತಿರ ಹೊಗಿ ನಿಂತಾಗ ಶಹಾಬಾದ ಕಡೆಯಿಂದ ಎರಡು  ಟಿಪ್ಪರ ಗಳು ಬರುತ್ತಿರುವುದ್ದನ್ನು ನೋಡಿ ನಮಗೆ ಸಂಶಯ ಬಂದು ಸದರಿ ಟಿಪ್ಪರಗಳನ್ನು ಸಿಬ್ಬಂದಿಯವ ಸಹಾದಿಂದ ಸನ್ನೆ ಮಾಡಿ ನಿಲ್ಲಿಸಿದ್ದು, ಸದರಿ ಟಿಪ್ಪರಗಳಲ್ಲಿ ಚೆಕ್ಕ ಮಾಡಲಾಗಿ ಮರಳು ತುಂಬಿದ್ದು, ಸದರಿ ಟಿಪ್ಪರ ಚಾಲಕರುಗಳಿಗೆ  ಸದರಿ ವಾಹನಗಳಲ್ಲಿ ಮರಳು ಸಾಗಾಣಿಕೆಗೆ ಸಂಬಂದ ಪಟ್ಟ ದಾಖಲಾತಿಗಳು ಇರುವ ಬಗ್ಗೆ ಕೇಳಲಾಗಿ ಯಾವುದೇ ದಾಖಲಾತಿಗಳು ಇರುವುದಿಲ್ಲ ನಮ್ಮ ಮಾಲಿಕರ ಸೂಚನೆ ಮೇರೆಗೆ ಮರಳನ್ನು ಅಕ್ರಮವಾಗಿ ಕಳ್ಳತನ ಮಾಡಿ ತುಂಬಿಕೊಂಡು ಮಾರಾಟ ಸಲುವಾಗಿ ಬರುತ್ತಿದ್ದೇವೆ ಅಂತಾ ತಿಳಿಸಿದ್ದು, ಸದರಿ ಚಾಲಕರಿಗೆ ಕೂಡಲೆ ವಶಕ್ಕೆ ಪಡೆದುಕೊಂಡು ವಿಚಾರಿಸಲಾಗಿ ತಮ್ಮ ಹೆಸರು 1) ದರ್ಶನ ತಂದೆ ಬಸವರಾಜ ಹೋಸಮನಿ ಉಃ ಟಿಪ್ಪರ ಚಾಲಕ ಸಾಃ ಮಲ್ಲಾಬಾದ ತಾಃ ಜೇವರ್ಗಿ ಜಿಃ ಕಲಬುರಗಿ ಹಾ.ವಃ ಸಾಯಿ ಮಂದಿರ ಹತ್ತಿರ ಕಲಬುರಗಿ 2) ಸೋಮಯ್ಯ ತಂದೆ ರೇವಣಯ್ಯ ಹೀರೆಮಠ ಉಃ ಟಿಪ್ಪರ ಚಾಲಕ ಸಾಃ ಭೀಮಪೂರ ತಾಃ ಆಳಂದ ಜಿಃ ಕಲಬುರಗಿ ಹಾ.ವಃ ಆನಂದೇಶ್ವರ ನಗರ ಸಾಯಿ ಮಂದಿರ ಹತ್ತಿರ ಕಲಬುರಗಿ ಅಂತಾ ತಿಳಿಸಿದ್ದು, ಸದರಿ ಟಿಪ್ಪರಗಳನ್ನು ಪರಿಶೀಲಿಸಿ ನೋಡಲಾಗಿ ಅವುಗಳ ನಂಬರ 1) ಕೆಎ-32 ಬಿ-6233 2) ಕೆಎ-32 ಬಿ-7871 ನೇದ್ದವು ಇದ್ದವು, ನಂತರ ಟಿಪ್ಪರ ನಂ ಕೆಎ-32 ಬಿ-6233 ನೆದ್ದರ ಮಾಲಿಕನ ಬಗ್ಗೆ ವಿಚಾರಿಸಲಾಗಿ ತಿಮಯ್ಯ ತಂದೆ ಯಲ್ಲಪ್ಪ ಸಾಃ ಸಿರನೂರ ಅಂತಾ ತಿಳಿಸಿದ್ದು, ಟಿಪ್ಪರ ನಂ ಕೆಎ-32 ಬಿ-7871 ನೇದ್ದರ ಮಾಲಿಕನ ಬಗ್ಗೆ ವಿಚಾರಿಸಲಾಗಿ  ರಾಕೇಶ ತಂದೆ ಬಸವರಾಜ ರೆಡ್ಡಿ ಸಾಃ ಸಿರನೂರ ಅಂತಾ ತಿಳಿಸಿದರು. ನಂತರ ಟಿಪ್ಪರ ನಂ ನಂ ಕೆಎ-32 ಬಿ-6233 ಅ.ಕಿಃ 5,00,000/-ರೂ ಹಾಗೂ ಅದರಲ್ಲಿನ ಮರಳು ಅ.ಕಿಃ 10,000/-ರೂ ಮತ್ತು ಟಿಪ್ಪರ ನಂ ಕೆಎ-32 ಬಿ-7871 ಅ.ಕಿಃ 5,00,000/-ರೂ ಹಾಗೂ ಮರಳು ಅ.ಕಿಃ 10,000/-ರೂ  ರಂದು ನೇದ್ದವುಗಳನ್ನು ಕೇಸಿನ ಮುಂದಿನ ಪುರಾವೆ ಕುರಿತು ಇಂದು ದಿನಾಂಕ 10/09/2017 ರಂದು 10.00 ಎ.ಎಮದ ದಿಂದ 11.00 ಎ.ಎಮದ ವರೆಗೆ ಪಂಚರ ಸಮ ಕ್ಷಮದಲ್ಲಿ ಜಪ್ತಿಪಡಿಸಿಕೊಂಡು, ಫರತಾಬಾದ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಕೆ.ಪಿ.ಎಸ್.ಸಿ. ಪರೀಕ್ಷೆಯಲ್ಲಿ ನಕಲು ಮಾಡುತ್ತಿದ್ದ ಅಭ್ಯರ್ಥಿಗಳ ಬಂಧನ :
ಫರತಾಬಾದ ಠಾಣೆ : ಶ್ರೀ ಜಗದೀಶ ತಂದೆ ಶರಣಪ್ಪಾ ದೊಡ್ಡಮನಿ ಸಾಃ ವಿದ್ಯಾ ನಗರ ಕಲಬುರಗಿ ಹಾ.ವಃ ಸಂತ್ ಕ್ಷೇವಿಯರ್ ಪದವಿ ಪೂರ್ವ ಕಾಲೇಜ ಸಿರನೂರ ಕಲಬುರಗಿ ಇವರು ಈಗ ಸುಮಾರು 04 ವರ್ಷಗಳಿಂದ ಸಂತ್ ಕ್ಷೇವಿಯರ್ ಪದವಿ ಪೂರ್ವ ಕಾಲೇಜ ಸಿರನೂರದಲ್ಲಿ ಉಪನ್ಯಾಸಕ ಅಂತಾ ಕೆಲಸ ಮಾಡಿಕೊಂಡಿದ್ದು . ಕೆ.ಪಿ.ಎಸ್.ಸಿ ವತಿಯಿಂದ ಕರೆಯಲಾಗಿರುವ ಅಸಿಸ್ಟೆಂಟ ಇಂಜಿನೀಯರ ಹುದ್ದೆಗಳ ನೇಮಕಾತಿ ಕುರಿತು ಪರೀಕ್ಷೆಯನ್ನು ದಿನಾಂಕ 09/09/2017 ರಂದು ಶನಿವಾರ ಮತ್ತು ದಿನಾಂಕ 10/09/2017 ರಂದು ಬಾನುವಾರ ನಡೆಯುತ್ತಿದ್ದು, ಸದರಿ ಪರೀಕ್ಷೆಗೆ ನಮ್ಮ ಸಂತ್ ಕ್ಷೇವಿಯರ್ ಪದವಿ ಪೂರ್ವ ಕಾಲೇಜ ಸಿರನೂರ ಪರೀಕ್ಷಾ ಕೇಂದ್ರವಾಗಿ ನಿಗಧಿ ಪಡಿಸಿದ್ದರಿಂದ, ನಾನು ಈ ಪರೀಕ್ಷೆ ಕೇಂದ್ರ ಮುಖ್ಯಸ್ಥನಾಗಿರುತ್ತೇನೆ. ದಿನಾಂಕ: 09/09/2017 ರಂದು ನಿಗದಿಪಡಿಸಿದ ನಮ್ಮ ಕಾಲೇಜಿನಲ್ಲಿ ಪರೀಕ್ಷೆಗಳು ನಡೆಸಿದ್ದು ಇರುತ್ತದೆ. ದಿನಾಂಕ;10/09/2017 ರಂದು ಬೆಳಿಗ್ಗೆ 10.00 ಗಂಟೆ ಯಿಂದ 11.30 ಎ.ಎಮದ ವರೆಗೆ ನಮ್ಮ ಕಾಲೇಜಿನಲ್ಲಿ ಅಸಿಸ್ಟೆಂಟ ಇಂಜಿನೀಯರ ಹುದ್ದೆಗಳ ನೇಮಕಾತಿ ಪರೀಕ್ಷೆ ನಡೆಸಿದ್ದು, ನಂತರ ಮದ್ಯಾಹ್ನ 2.00 ಗಂಟೆಯಿಂದ 4.00 ಪಿ.ಎಮದ ವರೆಗೆ ಪರೀಕ್ಷೆಗಳು ನಡೆದಿದ್ದು, ಆ ಸಮಯದಲ್ಲಿ ನಮ್ಮ ಕಾಲೇಜಿನ ರೂಮ್ ನಂ 14 ರಲ್ಲಿ  ಪರೀಕ್ಷೆಗೆ ಕುಳಿತ ಅಭ್ಯರ್ಥಿ ಯಾದ ನಿಲೇಶ ತಂದೆ ಬಸವರಾಜ ಜಾಧವ  ರೆಜಿಸ್ಟಾರ ನಂ 1051830 ಮತ್ತು ರೂಮ ನಂ 25 ರಲ್ಲಿ ಪರೀಕ್ಷೆಗೆ ಕುಳಿತ್ತಿದ್ದ ಅಭ್ಯರ್ಥಿ ಶೌಕತ ಅಲಿ ತಂದೆ ಅಬ್ದುಲ ಅಜೀಜ್  ರೆಜಿಸ್ಟಾರ ನಂ 1052088 ಇವರುಗಳು ಪರೀಕ್ಷಾ ಕೇಂದ್ರದಲ್ಲಿ ಪ್ರಶ್ನೆಗಳಿಗೆ ಉತ್ತರ ಬೀಡಿಸಲು ಅನುಕೂಲವಾಗುವ ಉದ್ದೇಶದಿಂದ ಅಭ್ಯರ್ಥಿಗಳು ಸೀಮ್ ಕಾರ್ಡ ಇರುವ ಬ್ಲೂಟೂತ್ ಮೈಕ್ರೋ ಪೋನ ಸಾಧನಗಳನ್ನು ಬಳಸಿ ಪರೀಕ್ಷೆಗೆ ಕುಳಿತುಕೊಂಡು ಹೊರಗಡೆಯಿಂದ ಉತ್ತರಗಳನ್ನು ಪಡೆದುಕೊಂಡು ಪರೀಕ್ಷೆ ಬರೆಯುವ ಕಾಲಕ್ಕೆ ಕೊಠಡಿ ಸಂಖ್ಯೆ 14 ರ ಸಂವಿಕ್ಷಕರಾದ ಶ್ರೀ ಮಹೇಶ ಕಾಂಭ್ಳೆ ಮತ್ತು ಕೊಠಡಿ ಸಂಖ್ಯೆ 25 ರ ಸಂವಿಕ್ಷಕರಾದ ಶ್ರೀ ರಾಜಕುಮಾರ ಹಬಾಡೆ ಇವರುಗಳು ನೋಡಿ ನಕಲು ಮಾಡುತ್ತಿದ್ದು ಅಭ್ಯರ್ಥಿಗಳನ್ನು ಹಾಗೂ ಅವರುಗಳು ನಕಲು ಮಾಡಲು ಬಳಸುತ್ತಿದ್ದ ಸೀಮ್ ಕಾರ್ಡ ಇರುವ ಬ್ಲೂಟೂತ್ ಮೈಕ್ರೋ ಪೋನ ಸಾಧನಗಳನ್ನು ತಂದು ನನ್ನ ಮುಂದೆ ಹಾಜರಪಡಿಸಿದ್ದು. ಆ ಅಬ್ಯರ್ಥಿಗಳಿಗೆ ವಿಚಾರಿಸಲಾಗಿ ಅವರು ತಮ್ಮ ಹೆಸರು 1) ರಜೀಸ್ಟರ್‌ ನಂಬರ 1051830 ನಿಲೇಶ ತಂದೆ ಬಸವರಾಜ ಜಾಧವ ಸಾ: ವಡ್ಡರ ಗಲ್ಲಿ ಬ್ರಹ್ಮಪೂರ ಕಲಬುರಗಿ ಹಾಗೂ 2) ರೆಜಿಸ್ಟಾರ ನಂ 1052088  ಶೌಕತ ಅಲಿ ತಂದೆ ಅಬ್ದುಲ ಅಜೀಜ ಸಾ: ಬಸವೇಶ್ವರ ನಗರ ಜೇವರ್ಗಿ ಅಂತಾ ತಿಳಿಸಿದ್ದು ಇರುತ್ತದೆ. ಇಂದು ನಡೆದ ಕೆ.ಪಿ.ಎಸ್.ಸಿ ವತಿಯಿಂದ ಕರೆಯಲಾಗಿರುವ ಅಸಿಸ್ಟೆಂಟ ಇಂಜಿನೀಯರ ಹುದ್ದೆಗಳ ನೇಮಕಾತಿ ಕುರಿತು ಪರೀಕ್ಷೆಗೆ ಹಾಜರಾದ ಅಬ್ಯರ್ಥಿಗಳು ಮೋಸದಿಂದ  ಸೀಮ್ ಕಾರ್ಡ ಇರುವ ಬ್ಲೂಟೂತ್ ಮೈಕ್ರೋ ಪೋನ ಸಾಧನಗಳನ್ನು ಬಳಸಿ ಹೊರಗಡೆಯಿಂದ ಉತ್ತರಗಳನ್ನು ಪಡೆದುಕೊಂಡು ಪರೀಕ್ಷಾ ಮಂಡಳಿಗೆ ಮೋಸ ಹಾಗೂ ವಂಚನೆ ಎಸಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರು ಕಳವು ಪ್ರಕರಣ :
ನರೋಣಾ ಠಾಣೆ : ಶ್ರೀ.ನಾಗಣ್ಣಾ ತಂದೆ ಕಾಶಿರಾಯ ಮಾದಗೊಂಡ ಸಾ||ಕಡಗಂಚಿ ಇವರು 2011ನೇ ಸಾಲಿನಲ್ಲಿ ಟಾಟಾ ಇಂಡಿಕಾ ಕಾರ್ ನಂ-ಕೆ.ಎ. 32 ಎಮ್ 4424 ನೇದ್ದನ್ನು ಖರೀದಿ ಮಾಡಿರುತ್ತೇನೆ. ಈ ಕಾರನ್ನು ನಾನು ದಿನಾಲು ಉಪಯೋಗಿಸಿದ ನಂತರ ನಮ್ಮ ಅಳಿಯನಾದ ಶ್ರೀ.ಶಾಂತಪ್ಪ ತಂದೆ ಕಾಶಿರಾಯ ಜವಳಿ ಮು||ಕಡಗಂಚಿ ತಾ||ಆಳಂದ ಇವರ ಮನೆಯ ಮುಂದೆ ನಿಲ್ಲಿಸುತ್ತಿದ್ದೆ. ಅದರಂತೆ ದಿನಾಂಕ: 26-08-2017 ರಂದು ರಾತ್ರಿ ನಾನು ನನ್ನ ಕಾರನ್ನು ನಮ್ಮ ಅಳಿಯನಾದ ಶ್ರೀ.ಶಾಂತಪ್ಪ ಇವರ ಮನೆಯ ಮುಂದೆ ನಿಲ್ಲಿಸಿ ಅವರಿಗೆ ತಿಳಿಸಿ ನಮ್ಮ ಮನೆಗೆ ಹೋಗಿರುತ್ತೇನೆ. ಮರುದಿವಸ ದಿನಾಂಕ:27-08-2017 ರಂದು ನಸುಕಿನ ಜಾವ 04-45 ಗಂಟೆ ಸುಮಾರಿಗೆ ನಾನು ಮನೆಯಲ್ಲಿದ್ದಾಗ ನಮ್ಮ ಅಳಿಯನಾದ ಶಾಂತಪ್ಪ ಇವರು ನನಗೆ ಫೋನಮಾಡಿ ಮನೆಯ ಮುಂದೆ ನಿಲ್ಲಿಸಿದ ಕಾರನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ತಿಳಿಸಿದ ಮೇರೆಗೆ ನಾನು ನಮ್ಮ ಅಳಿಯನ ಮನೆಗೆ ಹೋಗಿ ನೋಡಲಾಗಿ ನನ್ನ ಕಾರು ಇರಲಿಲ್ಲ ಅವರ ಮನೆಯ ಪಕ್ಕದಲ್ಲಿರುವ ಶ್ರೀ.ಕರಬಸಪ್ಪ ತಂದೆ ಗುರುಶಾಂತಪ್ಪ ಕುಡಕಿ ಮತ್ತು ನಾನು ಹಾಗೂ ನಮ್ಮ ಅಳಿಯ ಮೂವರು ಸೇರಿ ಕರಸಬಸಪ್ಪ ಇವರ ಕಾರಿನಲ್ಲಿ ಧರ್ಮವಾಡಿ ಹಾಗೂ ದಂಗಾಪೂರ ಕಡೆಗೆ ಹುಡಕಾಡಿ ನೋಡಲಾಗಿ ಕಾರು ಸಿಕ್ಕಿರುವುದಿಲ್ಲ. ಕಳೆದು ಹೋಗಿರುವ ನನ್ನ ಕಾರಿನ ಈಗಿನ ಅಂದಾಜು ಕಿಮ್ಮತ್ತು 49,000/- ಗಳು ಆಗಿರುಬಹುದು ಮಾನ್ಯರು ಕಳೆದು ಹೋಗಿರುವ ನನ್ನ ಕಾರನ್ನು ಪತ್ತೆಮಾಡಿ ಕೊಡಬೇಕು. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಕಳವು ಪ್ರಕರಣ :
ಆಳಂದ ಠಾಣೆ : ಶ್ರೀ ಕಲ್ಲಪ್ಪಾ ತಂದೆ ಲಕ್ಷ್ಮಣ ಕೋಳಿ ಸಾ ಸಾವಳೇಶ್ವರ ತಾ : ಆಳಂದ ರವರು ದಿನಾಂಕ:05/09/2017 ರಂದು ಬಾಂಬೆಯಿಂದ ಗ್ರಾಮಕ್ಕೆ ಹೋಗಬೇಕೆಂದು ನಾನು ಮತ್ತು ನಮ್ಮ ಅಣ್ಣತಮ್ಮಕೀಯ ಗೊವಿಂದ ಕೋಳಿ ಇಬ್ಬರು ಕೂಡಿಕೊಂಡು  ಆಳಂದಕ್ಕೆ ಬೆಳಿಗ್ಗೆ ಬಂದು ನಂತರ ಗ್ರಾಮಕ್ಕೆ ಹೊಗಲು ಏನಾದರೂ ತೆಗೆದುಕೊಂಡು ಹೊಗಬೇಕೆಂದು ನಾನು ಮತ್ತು ಗೊವಿಂದ ಕೂಡಿಕೊಂಡು ಮಾರ್ಕಟದಲ್ಲಿ ಇರುವ ಹಳೆಯ ಪೊಲೀಸ ಠಾಣೆಯ ಹಿಂದುಗಡೆಯ ಸಣ್ಣ ರಸ್ತೆಯ ಮೇಲೆ ನಿಂತ್ತಿದ್ದಾಗ ಯಾರೋ ಇಬ್ಬರು ಅಪರಿಚಿತರು ನಮಗೆ ಬಂದು ನಾನು ಪೊಲೀಸ ಇದ್ದೇನೆ ನೀವು ರೀತಿಯಾಗಿ ಯ್ಯಾಕೆ ಕೊರಳಲ್ಲಿ ಲಾಕೇಟ ಹಾಕಿಕೊಂಡಿದ್ದಿರಿ ಮತ್ತು ಕೈಯಲ್ಲಿ ಬಂಗಾರದ ಉಂಗುರ ಹಾಕಿಕೊಂಡಿದಿರಿ ಇಲ್ಲಿ ಕಳ್ಳರು ಇದ್ದಾರೆ  ಅದನ್ನು ಮೊದಲು ಬಿಚ್ಚಿ ನಿಮ್ಮ ಬ್ಯಾಗಿನಲ್ಲಿ ಇಟ್ಟಿಕೊಳ್ಳಿ ಅಂದಾಗ ನಾನು ನನ್ನ ಕೊರಳ್ಳಲ್ಲಿ ಇದ್ದ ಎರಡು ತೊಲೆಯ ಬಂಗಾರದ ಲಾಕೇಟ ಅಂದಾಜು ಕಿಮತ್ತು 50,000/-  ಹಾಗು ಕೈಯಲ್ಲಿ ಇದ್ದ ಅರ್ದ ತೊಲೆಯ ಉಂಗರ ಅಂದಾಜು ಕಿಮತ್ತು 10,000/- ರೂಪಾಯಿ ಅದನ್ನು ತೆಗೆದು ಬ್ಯಾಗಿನಲ್ಲಿ ಇಡುವಾಗ ಅದನ್ನು ಸರಿಯಾಗಿ ಇಡಬೇಕು ಅಂತಾ ನನ್ನ ಗಮನ ಬೇರೆಕಡೆಗೆ ಸೇಳೆದು ನನ್ನ ಬ್ಯಾಗಿನಲ್ಲಿ ಕೈ ಹಾಕಿ ಬ್ಯಾಗಿನಿಂದ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ನಂತರ ನಾನು ನನ್ನ ಬ್ಯಾಗದಲ್ಲಿ ನೋಡಿದರೆ ಬಂಗಾರ ಇರಲಿಲ್ಲಾ ನಂತರ ನಾವು ಅವರು ಹೋದ ಕಡೆ ನೋಡಿದರೆ ಅವರು ಸಿಕ್ಕಿರುವುದಿಲ್ಲಾ ನಂತರ ನಮ್ಮ ಗ್ರಾಮದ ಶ್ರೀಕಾಂತ ತಂದೆ ದತ್ತಾತ್ತೇಯ ಸಿನ್ನೂರಕರ್  ರವರು ಸಹ ಬಂದಾಗ ಅವರು ನಾವು ಎಲ್ಲಾ ಕಡೆಗೆ ಹುಡುಕಾಡಿದರೂ ಅವರು ಸಿಕ್ಕಿರುವುದಿಲ್ಲಾ ನನ್ನ ಬ್ಯಾಗಿನಲ್ಲಿ ಇದ್ದ ಎರಡೂವರೆ ತೊಲೆ ಬಂಗಾರ ಅಂದಾಜು ಕಿಮತ್ತು 60,000/- ರೂಪಾಯಿ ಕಿಮ್ಮತ್ತಿನ ವಸ್ತುಗಳನ್ನು ಯಾರೋ ಕಳ್ಳರು ದಿನಾಂಕ:05/09/2017 ರಂದು ಮದ್ಯಾಹ್ನ 01:00 ಗಂಟೆಯಿಂದ 01:30 ಮದ್ಯದಲ್ಲಿ ಅವದಿಯಲ್ಲಿ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.