POLICE BHAVAN KALABURAGI

POLICE BHAVAN KALABURAGI

06 August 2017

Kalaburagi District Reported Crimes

ವರದಕ್ಷಣೆ ಕಿರುಕಳ ಪ್ರಕರಣ :
ಜೇವರಗಿ ಠಾಣೆ : ಶ್ರೀಮತಿ ಪಾತೀಮಾ ಗಂಡ ಅಬ್ದುಲ್ ಪಟೇಲ ಮದ್ದರಕಿ ಸಾಃ ಮಾರಡಗಿ (ಎ.ಎಸ್.) ತಾಃ ಜೇವರಗಿ ರವರನ್ನು   ಸುಮಾರು 5 ವರ್ಷಗಳ ಹಿಂದೆ ಮಾರಡಗಿ (ಎಸ್.ಎ) ಗ್ರಾಮದ ಅಬ್ದುಲ್ ಪಟೇಲ ಇತನ್ನೊಂದಿಗೆ ನನ್ನ ಮದುವೆಯಾಗಿರುತ್ತದೆ. ಮದುವೆಯಾದ ನಂತರ ನಾನು ನನ್ನ ಗಂಡನ್ನೊಂದಿಗೆ ಗಂಡನ ಮನೆಯಲ್ಲಿಯೇ ಇದ್ದು ಸಂಸಾರ ಮಾಡುತ್ತಾ ಬಂದಿರುತ್ತೆನೆ ನಮಗೆ ಲಾಲಬೀ ಎಂಬುವ ಒಂದು ಹೆಣ್ಣು ಮಗು ಇರುತ್ತದೆ. ಮದುವೆಯ ಕಾಲಕ್ಕೆ ನನ್ನ ತವರು ಮನೆಯರು ನನ್ನ ಗಂಡನಿಗೆ ಬೆಲೆ ಬಾಳುವ 1) ಮಂಚ, ಗಾದಿ, 2) ಏರಕೂಲರ್, 3) ಪ್ರೀಜ 4) ಅಲಮಾರಿ ( ಟಿಜೋರಿ) 5) ಎರಡು ಹಾಂಡೆಗಳು 6) ಎರಡು ನಳ ಪಾತ್ರೆಗಳು, 7) ಎರಡು ತಾಮ್ರದ ಕೊಡಗಳು, ಹಾಗೂ ಮನೆಯ ಬಳಕೆ ಇತರೆ ಸಾಮಾನು ಕೊಟ್ಟಿದ್ದು ಇರುತ್ತದೆ. ಮದುವೆಯಾದ ನಂತರ ಸುಮಾರು 3 ವರ್ಷಗಳವರೆಗೆ ನನ್ನ ಗಂಡನು ನನಗೆ ಸರಿಯಾಗಿಯೇ ನೊಡಿಕೊಂಡಿರುತ್ತಾನೆನಂತರ ನನ್ನ ಗಂಡನು ಮದುವೆಯಲ್ಲಿ ನನಗೆ ವರದಕ್ಷೀಣೆ ಹಣ ಕೊಟ್ಟಿರುವುದಿಲ್ಲಾ ನೀನು ತವರು ಮನೆಯಿಂದ 5,00,000/- ( ಐದು ಲಕ್ಷ) ರೂಪಾಯಿ ವರದಕ್ಷೀಣೆ ಹಣ ತೆಗೆದುಕೊಂಡು ಬರುವಂತೆ  ದಿನಾಲು ಮನೆಯಲ್ಲಿ  ಅವಾಚ್ಯವಾಗಿ ಬೈಯುವುದು ಹೊಡೆಯುವುದು ಮಾಡುತ್ತಾ ಬಂದಿರುತ್ತಾನೆಅಲ್ಲದೆ ನನ್ನ ಮಾವ ಅಮೀರಪಟೇಲ  ಅತ್ತೆ ಜೈನಾಬೀ ಗಂಡ ಅಮೀರಪಟೇಲ ಮದ್ದರಕಿ, ನನ್ನ ಗಂಡ ಅಕ್ಕ ಮಾಬಣ್ಣಿ ಗಂಡ ಜಾಫರ ಅಲಿ ಸಾಃ ಗಂವ್ಹಾರಮತ್ತು ಅವಳ ಗಂಡ ಜಾಪರ್ ಅಲಿ ಇವರೆಲ್ಲರೂ ಕೂಡಿ ನನಗೆ ವರದಕ್ಷಣೆ ಹಣ ತೆಗೆದುಕೊಂಡು ಬರುವಂತೆ ಅವಾಚ್ಯವಾಗಿ ಬೈಯುವುದು ಹೊಡೆಯುವುದು ಮಾಡುತ್ತಾ ಬಂದಿರುತ್ತಾರೆಅವರು ಕೊಡುವ ತ್ರಾಸ್ ತಾಳಲಾರದೆ  ನಾನು ನನ್ನ ತವರು ಮನೆಯವರಿಗೆ ಹೇಳಿದಾಗ  ನನ್ನ ತಂದೆ ಮತ್ತು ತಾಯಿ ಹಾಗೂ  ನಮ್ಮೂರ ಪ್ರಮುಖರು ಕೂಡಿಕೊಂಡು ನನ್ನ ಗಂಡನ ಮನೆಗೆ ಬಂದು ನನ್ನ ಗಂಡನಿಗೆ ಮತ್ತು ನನ್ನ ಗಂಡನ ಮನೆಯವರಿಗೆ ಬುದ್ದಿ ಮಾತು ಹೇಳಿ ನನ್ನ ಗಂಡನಿಗೆ 50 ಗ್ರಾಮ ಚಿನ್ನದ ಆಭರಣಗಳು, ಮತ್ತು 25,000/- (ಇಪ್ಪತ್ತೈದು ಸಾವಿರ ರೂಪಾಯಿಗಳು) ನನ್ನ ತಂದೆ  ಕೊಟ್ಟಿರುತ್ತಾರೆಆದರೂ ಸಹ ನನ್ನ ಗಂಡ ಮತ್ತು ನನ್ನ ಗಂಡನ ಮನೆಯವರು ನನಗೆ ಬಹಳ ತ್ರಾಸ್ ಕೊಡುತ್ತಿದ್ದರುನಾನು ಮನೆಯ ಮರ್ಯಾದೆಗೆ ಅಂಜಿ ಮತ್ತು ನನ್ನ ಮುಂದಿನ ಭವಿಷ್ಯದ ಬಗ್ಗೆ ಯೋಚನೆ ಮಾಡಿ ಸುಮ್ಮನಿದ್ದೆನು, ಆದರೂ ಅವರು ನನಗೆ ಹಣ ತವರುಂತೆ ಬಹಳ ತ್ರಾಸ್ ಕೊಡುತ್ತಿದ್ದಾಗ ನಾನು ಈಗ 6 ತಿಂಗಳ ಹಿಂದೆ ನನ್ನ ಮಗಳೊಂದಿಗೆ ನನ್ನ ತವರು ಮನೆ ಯಲಗೊಡ ಗ್ರಾಮಕ್ಕೆ ಬಂದು ನನ್ನ ತಂದೆ ತಾಯಿಯವರ ಹತ್ತಿರ ಇದ್ದೆನು. ನನ್ನ ಗಂಡನು ಮತ್ತು ಅವರ ಮನೆಯವರು ನನಗೆ ಕರೆಯಲು ಬರಲಾರದಕ್ಕೆ ನಾನು ದಿ.  01-08-2017 ರಂದು ಮುಂಜಾನೆ ನನ್ನ ತಂದೆ ಹಾಗೂ ನನ್ನ ಅಣ್ಣನಾದ ಮೈಹಿಬೂಬ ಪಟೇಲ ಮತ್ತು ನಮ್ಮೂರ ಮೈಹಿಬೂಬ ಪಟೇಲ ಪೊಲೀಸ್ ಬಿರಾದಾರ, ಭೀಮಣ್ಣ ನಾಯ್ಕೊಡಿ ಇವರೊಂದಿಗೆ ನನ್ನ ಗಂಡನ ಮನೆಗೆ ಮುಂಜಾನೆ 11.00 ಗಂಟೆಯ ಸುಮಾರಿಗೆ ಹೋದಾಗ, ಅಲ್ಲಿ ನನ್ನ ಗಂಡನಾದ 1) ಅಬ್ದುಲ್ ಪಟೇಲ ತಂದೆ ಅಮೀರ ಪಟೇಲ ಮಾವ 2) ಅಮೀರಪಟೇಲ  ಅತ್ತೆಯಾದ 3) ಜೈನಾಬೀ ಗಂಡ ಅಮೀರಪಟೇಲ ಮದ್ದರಕಿ, ನನ್ನ ಗಂಡ ಅಕ್ಕ 4) ಮಾಬಣ್ಣಿ ಗಂಡ ಜಾಫರ ಅಲಿ ಸಾಃ ಗಂವ್ಹಾರಮತ್ತು ಅವಳ ಗಂಡ 5) ಜಾಪರ್ ಅಲಿ ಇವರೆಲ್ಲರೂ ಕೂಡಿಕೊಂಡು ಬಂದು ನನಗೆ ಅವಾಚ್ಯವಾಗಿ ಬೈಯುತ್ತಿದ್ದಾಗ ನಾನು ಅವರಿಗೆ ನನಗೆ ಯಾಕೇ ಬೈಯುವುತ್ತಿದ್ದಿರಿ ಎಂದು ಕೇಳಿದಕ್ಕೆ ನನ್ನ ಗಂಡನು ನನಗೆ ಏ ರಂಡಿ ಇಷ್ಟು ದಿವಸ ತವರು ಮನೆಯಲ್ಲಿ ಇದ್ದು ಇವತ್ತು ಬಂದಿದಿ ನಿನಗೆ ಐದು ಲಕ್ಷ ವರದಕ್ಷಣಿ ಹಣ ತೆಗೆದುಕೊಂಡು ಬಾ ಎಂದು ಹೇಳಿದರೆ ತವರು ಮನೆಗೆ ಹೋಗಿದ್ದಿ ಬೊಸಡಿ ಎಂದು ಕೈಯಿಂದ ಕಪಾಳದ ಮೇಲೆ ಹೊಡೆದಿರುತ್ತಾನೆ, ಅತ್ತೆಯಾದ ಜೈನಾಬೀ ಇವಳು ಈ ರಂಡಿಗೆ ಹೊಡೆದು ಸಾಯಿಸಿ ಬಿಡು ನಿನಗೆ ಬೇರೆ ಮದುವೆ ಮಾಡಿಸುತ್ತೆನೆ ಎಂದು ಬೈಯ್ದು ಕೈಯಿಂದ ಬೇನ್ನು ಮೇಲೆ ಹೊಡೆದಿರುತ್ತಾಳೆ, ಮಾಬಣ್ಣಿ ಇವಳು ಈ ರಂಡಿ ವರದಕ್ಷಿಣೆ ಹಣ ತರುವವರೆಗೆ ಅವಳು ತವರು ಮನೆಯಲ್ಲಿಯೇ ಬಿಡು ಎಂದು ನನ್ನ ಗಂಡನಿಗೆ ಹೇಳುತ್ತಾ ನನ್ನ ತಲೆಯ ಮೇಲಿನ ಕೂದಲು ಹಿಡಿದು ಜಗ್ಗಿರುತ್ತಾಳೆ, ಜಾಫರ ಅಲಿ ಇತನು ನನ್ನ ಮೈ ಮೇಲಿನ ಬಟ್ಟೆ ಹಿಡಿದು ಜಗ್ಗಿ ಕಾಲಿನಿಂದ ಸೊಂಟದ ಮೇಲೆ ಒದ್ದಿರುತ್ತಾನೆನಾನು ಚೀರಾಡುತ್ತಿದ್ದಾಗ ನನ್ನ ಮಾವ ಅಮೀರ ಪಟೇಲ ಇತನು ಇವಳಿಗೆ ಮನೆಯಲ್ಲಿ ಹಾಕಿರಿ ಒಂದು ಗತಿ ಕಾಣಿಸೊಣ ಎಂದು ಹೇಳಿದಾಗ ನನ್ನ ತಂದೆ ಹಾಗೂ ನನ್ನ ಅಣ್ಣ ಮತ್ತು ನನ್ನ ಜೊತೆ ಬಂದ ಮೈಹಿಬೂಬ ಪಟೇಲ ಪೊಲೀಸ್ ಬಿರಾದಾರ, ಭೀಮಣ್ಣ ನಾಯ್ಕೊಡಿ ಇವರು ಬಂದು ನನಗೆ ಹೊಡೆಯುವುದು ಬಿಡಿಸಿಕೊಂಡಿರುತ್ತಾರೆ, ಮತ್ತು ಅವರೆಲ್ಲರೂ ವರದಕ್ಷಣೆ ಹಣ ತೆಗೆದುಕೊಂಡು ಬರದಿದ್ದರೆ ನೀನ್ನ ಜೀವ ಸಹಿತ ಬಿಡುವುದಿಲ್ಲಾ ಎಂದು ಜೀವದ ಬೇದರಿಕೆ ಹಾಕಿರುತ್ತಾರೆ, ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀಮತಿ ಸಕೀನಾ ಪಟೆಲ ಗಂಡ ದಾದಾ ಪಟೆಲ್ಸಾ:ಮನೆ ನಂ. 11-1041/120 ಎಮ್ಎಸ್ಕೆ ಮಿಲ್ಮದಿನಾ ಕಾಲೋನಿ ಕಲಬುರಗಿ ಇವರ ಹತ್ತಿರ ಸುಮಾರು ದಿನಗಳ ಹಿಂದೆ ಹಣದ ಅಡಚಣೆ ಇದ್ದಾಗ ತಮಗೆ ಪರಿಚಯದವರಾದ 1) ಉಸ್ಮಾನ ಡಾಂಗೆ 2) ಸಾದೀಕ್ಫರೀದ ಇವರು ತಲಾ 10,00,000/- ರೂಗಳು ಪಡೆದುಕೊಂಡಿದ್ದು, ಅದನ್ನು ಕೇಳಲು ಹೋದಾಗ ಅವರಿಬ್ಬರು ತಮಗೆ ಪರಿಚಯದವನಾದ ಚಿದಾನಂದ ತಂದೆ ದೌಲಪ್ಪಾ ಕೊಳ್ಳಿ ಇವರ ಹತ್ತಿರ ಕರೆದುಕೊಂಡು ಹೋಗಿ ನನಗೆ 15,42,000/-ರೂಗಳು ಕೊಡಿಸಿರುತ್ತಾರೆ. ನಂತರ ನನಗೆ, ನೀವು ನಿಮ್ಮ ಮನೆಯನ್ನು ಚಿದಾನಂದ ಇವರಿಗೆ ಮಾರ್ಟಗೆಜ ಮಾಡಿಸಿಕೊಡು ನಿಮ್ಮ 20,00,000/- ರೂಗಳು ನಮ್ಮ ಹತ್ತಿರ ಇರುತ್ತವೆಯಲ್ಲ ನಾವು ಬಿಡಿಸಿ ಕೊಡುತ್ತೆವೆ ಅಂತ ಹೇಳಿ ನನ್ನ ಮನೆ ನಂ. 11-1041/120 ಎಮ್ಎಸ್ಕೆ ಮಿಲ್ಮದಿನಾ ಕಾಲೋನಿ ಕಲಬುರಗಿ ನೇದ್ದನು ಮಾರ್ಟಗೇಜ ಮಾಡಿಕೊಟ್ಟಿದ್ದು ಇರುತ್ತದೆ. ಆದ್ದರಿಂದ ಕಲಬುರಗಿಯ ಸಬ್ರಜೀಸ್ಟರರ ಕಛೆರಿಯಲ್ಲಿ ಮಾರ್ಟಗೇಜ ಮಾಡಿಕೊಟ್ಟಿರುತ್ತನೆ. ಉಸ್ಮಾನ ಡಾಂಗೆ ಇವರು ನನಗೆ ನಿಮಗೆ ಕೊಡಬೇಕಾದ ಹಣವನ್ನು ಚಿದಾನಂದ ಇವರಿಗೆ ಕೊಟ್ಟು ನಿಮ್ಮ ಮನೆಯ ಸೆಲ್ಡೀಡ್ನ್ನು ಕ್ಯಾನ್ಸಲ್ಮಾಡಿಕೊಡುತ್ತೆವೆ ಅಂತ ಹೇಳಿರುತ್ತಾರೆ.ದಿನಾಂಕ:31/07/2017 ರಂದು ಸಾಯಂಕಾಲ 7:30 ಗಂಟೆಗೆ ನಾನು ಮನೆಯಲ್ಲಿದ್ದಾಗ ಚಿದಾನಂದ ಕೊಳ್ಳಿ , ಉಸ್ಮಾನ ಡಾಂಗೆ, ಸಾದೀಕ ಫರೀದ ಸುಂಬಡ, ಮಹಾರಾಜ ಜಮಾದಾರ, ಮಹ್ಮದ ಇಕ್ಬಾಲ್‌, ಮಾರುತಿ ತಂದೆ ಅಂಬಾಜಿ ಸಂಗಡ 15 ಜನರು ಕೂಡಿಕೊಂಡು ಬಂದು ನಮ್ಮ ಮನೆಯಲ್ಲಿ ಅಕ್ರಮ ಪ್ರವೇಶ ಮಾಡಿ ಮನೆಯಲ್ಲಿನ ಸಾಮಾನುಗಳನ್ನು ಬಿಸಾಕುತ್ತಿದ್ದಾಗ ನಾನು ಅವರಿಗೆ ಇದು ನೀವು ಮಾಡುವದು ಸರಿಯಲ್ಲ ಅಂತ ಹೇಳುತ್ತಿದಾಗ ಅವರೆಲ್ಲರೂ ನನಗೆ ಅವಾಚ್ಯವಾಗಿ ಬೈಯುತ್ತಾ ಅವರಲ್ಲಿ ಉಸ್ಮಾನ ಡಾಂಗೆ, ಚಿದಾನಂದ, ಮಹಾರಾಜ ಜಮಾದಾರ ಇವರು ನನ್ನ ಕೈಹಿಡಿದು ಕಪಾಳ ಮೇಲೆ ಹೊಡೆದು ಗುಪ್ತಗಾಯ ಮಾಡಿರುತ್ತಾರೆ. ನಂತರ ಅವರೆಲ್ಲರೂ ನನಗೆ ನೀನು ನಮಗೆ ಹಣ ಕೊಡದೆಯಿದ್ದರೆ ನಿನ್ನ ಮನೆಯನ್ನು ಕಬ್ಜಾ ಮಾಡಿತ್ತೆವೆ. ಇಲ್ಲವಾದರೆ ಇತ್ತಿಚೆಗೆ ಆದ ಮುದಾಸ್ಸಿರ ಇತನ ಕೊಲೆ ಆದ ಹಾಗೆ ನಿನಗೆ ಬಿಡುವದಿಲ್ಲ ಅಂತ ಜೀವದ ಭಯ ಹಾಕಿರುತ್ತಾರೆ. ಇಲ್ಲ ನಮ್ಮ ಹಣ ಕೊಡು ಅಂತ ಹೇಳಿರುತ್ತಾರೆ ಅಂತ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಹರಣ ಪ್ರಕರಣ :.
ಅಫಜಲಪೂರ ಠಾಣೆ : ದಿನಾಂಕ 28-07-2017 ರಂದು ರಾತ್ರಿ 12:30 ಗಂಟೆಗೆ ನಾನು ಶೌಚಕ್ಕೆಹೋದಾಗ ಮೋಹನ ತಂದೆ ನಾಗು ಜಾಧವ ಹಾಗೂ ವಿಜಯತಂದೆ ನಾಮದೇವ ರಾಠೋಡ ಇಬ್ಬರು ಕರಜಗಿ ತಾಂಡಾ ಇದ್ದು, ನನ್ನನ್ನು ಅನಾಮತ್ತಾಗಿ ಎತ್ತಿ ಟಾಟಾ ಇಂಡಿಕಾ ವಾಹನದಲ್ಲಿ ತೂರಿ ಹಾಕಿ ಅಫರಿಚಿತ ಸ್ಥಳಗಳಿಗೆ ಕರೆದುಕೊಂಡು ಹೋಗಿ, ನನಗೆ ಕೈ ಹಿಡಿದು ಏಳೆದು ನಮ್ಮ  ಜೋತೆ ಸಹಕರಿಸು ಇಲ್ಲದಿದ್ದರೆ ನಿನಗೆ ಜೀವಸಹಿತ ಬಿಡುವುದಿಲ್ಲ ಎಂದು ಹಾಗೂ ವಿಷುಯ ಎಲ್ಲಿಯೂ ಯಾರಿಗೂ ಹೇಳಬೇಡ ಒಂದು ವೇಳೆ ಹೇಳೀದರೆ ನಿನ್ನನ್ನು ಹೊಡೆದು ಎಸೆದು ಹೋಗುವುದಾಗಿ ಬೇದರಿಸಿದ್ದಾರೆ. ನೀನು ನಿನ್ನ ತಂದೆ ತಾಯಿಗೆ ತಿಳಿಸಬೇಡ, ತಿಳಿಸಿದರೆ ನಿನ್ನ ಸ್ಥೀತಿ ಕೇಡುತ್ತದೆ ಎಂದು ಹಾಗೂ ಪೊಲೀಸರೇದರೂ ಕೂಡಾ ಏನು ಹೇಳಬೇಡ ಎಂದು. ಒಂದು ವೇಳೆ ಹೇಳೀದರೆ ನಿನಗೆ ಜೀವ ಸಹಿತ ಬಿಡುವುದಿಲ್ಲ ಎಂದು ಬೇದರಿಸಿರುತ್ತಾರೆ.  ಅಂತಾ  ಶ್ರೀಮತಿ ಗೀತಾ ಗಂಡ ಸುನೀಲ ರಾಠೋಡ ಸಾ|| ಕರಜಗಿ ತಾಂಡಾ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

05 August 2017

Kalaburagi District Reported Crimes

ಮಟಕಾ ಜೂಜಾಟದಲ್ಲಿ ನಿರತವನ ಬಂಧನ :
ರಾಘವೇಂದ್ರ ನಗರ ಠಾಣೆ : ದಿನಾಂಕ:04/08/2017 ರಂದು ರಾಘವೇಂದ್ರ ನಗರ ಠಾಣಾ ವ್ಯಾಪ್ತಿಯಲ್ಲಿ ಓಂಕಾರೇಶ್ವರ ಗುಡಿಯ ಮುಂದೆ ಒಬ್ಬ ವ್ಯಕ್ತಿ ಲೈಟಿನ ಬೆಳಕಿನಲ್ಲಿ ಸಾರ್ವಜನಿಕ ಸ್ಥಳದಲ್ಲಿ ಕುಳಿತು ಒಬ್ಬ ವ್ಯಕ್ತಿ ಮಟಕಾ ನಂಬರಗಳನ್ನು ಬರೆದುಕೊಳ್ಳುತ್ತಿದ್ದಾನೆ ಅಂತ ಮಾಹಿತಿ ಬಂದ ಮೇರೆಗೆ ಪಿ.ಎಸ್.ಐ. ರಾಘವೇಂದ್ರ ನಗರ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ  ಗುಡಿಯಿಂದ ಸ್ವಲ್ಪ ದೂರದಲ್ಲಿ ಹೋಗಿ ಗುಡಿಯ ಹಿಂದೆ ಮರೆಯಲ್ಲಿ ನಿಂತು ನೋಡಲು ಒಬ್ಬ ವ್ಯಕ್ತಿ ಗುಡಿಯ ಮುಂದೆ ಲೈಟಿನ ಬೆಳಕಿನಲ್ಲಿ ಸಾರ್ವಜನಿಕ ಸ್ಥಳದಲ್ಲಿ ಕುಳಿತು 1 ರೂ 80 ರೂ ಕೊಡುವದಾಗಿ ಹೇಳುತ್ತಾ ಸಾರ್ವಜನಿಕರಿಂದ ಹಣವನ್ನು ಪಡೆದುಕೊಂಡು ದೈವ ಲೀಲೆಯ ಮಟಕಾ ನಂಬರಗಳನ್ನು ಬರೆದುಕೊಂಡು ಚೀಟಿಯನ್ನು ಕೊಡುತ್ತಿರುವದನ್ನು ನೋಡಿ ದಾಳಿ ಮಾಡಿ ಹಿಡಿಯುತ್ತಿದ್ದಂತೆ ಸಾರ್ವಜನಿಕರು ಓಡಿ ಹೋಗಿದ್ದು, ನಾನು ಆತನ ಹೆಸರು ವಿಳಾಸ ವಿಚಾರಿಸಲು ತನ್ನ ಹೆಸರು ಸೈಯದ ಇಸ್ಮಾಯಿಲ್‌ ತಂದೆ ಸೈಯದ ರುಕ್ಮೊದ್ದಿನ್‌ ಸಾ: ಶೇಖ ರೋಜಾ ಜೂನೈದಿ ಕಾಲೋನಿ ಕಲಬುರಗಿ ಅಂತ ತಿಳಿಸಿದ್ದು, ಸದರಿಯವನಿಗೆ ಅಂಗ ಶೋದನೆ ಮಾಡಲು ನಗದು ಹಣ 1500/-, ಒಂದು ಬಾಲ್‌ ಪೆನ್‌, 1 ಮಟಕಾ ಬರೆದ ಚೀಟಿಗಳು ದೊರಕಿದ್ದು  ಸದರಿಯವನೊಂದಿಗೆ ರಾಘವೇಂದ್ರ ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ದ್ವೀಚಕ್ರ ವಾಹನ ಕಳವು ಪ್ರಕರಣ :
ಸ್ಟೇಷನ ಬಜಾರ ಠಾಣೆ : ಶ್ರೀ ಶಿವಕುಮಾರ ತಂದೆ ಚಂದ್ರಶೇಖರ ಬಿರಾದಾರ ಸಾ: ಮನೆ ನಂ. 8-1179 ನೇತಾಜಿ ನಗರ ಕಲಬುರಗಿ ರವರು ದಿನಾಂಕ. 15/04/2017 ರಂದು 8-15 ಪಿ.ಎಂ ಸುಮಾರಿಗೆ ನಾನು ನನ್ನ ಹಿರೋ ಹೊಂಡಾ ಸ್ಲೆಂಡರ ಮೋಟಾರ ಸೈಕಲ್ ನಂ. KA-32 EB- 3187 ಚೆಸ್ಸಿನಂ. MBLHA10AMCHD54698, ಇ.ನಂ. HA10EJCHD54052 ,ಕಿ|| 30,000/- ರೂ ನೇದ್ದು ರೇಲ್ವೆ ಸ್ಟೇಷನ ಹತ್ತಿರ ರೋಡಿನ ಬದಿಯಲ್ಲಿ ನಿಲ್ಲಿಸಿ ನಂತರ 8-45 ಪಿ.ಎಮ್ ಸುಮಾರಿಗೆ ಬಂದು ನೋಡಲಾಗಿ ನನ್ನ ಹಿರೋ ಹೊಂಡಾ ಸ್ಲೆಂಡರ ಮೋಟರ ಸೈಕಲ್ ಇರಲಿಲ್ಲ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಇಲ್ಲಿಯವರೆಗೆ ಎಲ್ಲಾ ಕಡೆಗೆ ಹುಡುಕಾಡಿದರು ಸಿಕ್ಕಿರುವುದಿಲ್ಲ. ಕಾರಣ ಸದರಿ ಹಿರೋ ಹೊಂಡಾ ಸ್ಲೆಂಡರ ಮೋಟಾರ ಸೈಕಲ್  ಪತ್ತೆ ಮಾಡಿ ಕಳ್ಳತನ ಮಾಡಿದವರ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಸಲ್ಲಿಸಿದ ದೂರು ಸಾರಾಂಸದ ಮೇಲಿಂದ ಸ್ಟೇಷನ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀ ಭೀಮರಾಯ ತಂದೆ ಸಿದ್ರಾಮಪ್ಪಾ ಬನ್ನುರ ಸಾ:ರಾಮ ನಗರ ಎಸ್‌ಬಿ ಕಾಲೇಜು ಎದರುಗಡೆ ಕಲಬುರಗಿ ಇವರು ಕೈಲಾಸ ನಗರದಲ್ಲಿರುವ ವಿರೇಂದ್ರ ತಂದೆ ಬಾಬಾ ಸಾಹೇಬ ದೆಶಮುಖ ಮು:ಕೈಲಾಸ ನಗರ ಇವರು ಸುಮಾರು 15 ವರ್ಷಗಳಿಂದ ಪರಿಚಯವಿದ್ದು, ನಮ್ಮಲ್ಲಿ ಸಂಸಾರದಲ್ಲಿ ಅಡಚಣೆ ಆದಾಗ ಅವರು ನನಗೆ ಸಹಾಯ ಮಾಡುವದು ಮತ್ತು ನಾನು ಅವರಿಗೆ ಸಹಾಯ ಮಾಡುತ್ತಾ ಬಂದಿರುತ್ತೆನೆ. ಅದರಂತೆ ಸುಮಾರು 2 ವರ್ಷಗಳ ಹಿಂದೆ ವಿರೇಂದ್ರ ದೇಶಮುಖ ಇವರಿಗೆ ಅಡಚಣೆ ಇದ್ದಾಗ ನನ್ನ ಹತ್ತಿರ ಬಂದು 2 ಲಕ್ಷ ರೂಪಾಯಿ ಕೇಳಿದ್ದರಿಂದ ನಾನು ಅವರಿಗೆ ನನ್ನ ಹತ್ತಿರ ದುಡ್ಡು ಇಲ್ಲದೆ ಇದ್ದರಿಂದ ನಮ್ಮ ತಂದೆಯಾದ ಸಿದ್ರಾಮಪ್ಪಾ ಬನ್ನುರ ಇವರ ಹತ್ತಿರದಿಂದ 2 ಲಕ್ಷ ರೂಪಾಯಿಯನ್ನು ಕೈಗಡವಾಗಿ ಕೊಡಿಸಿರುತ್ತೆನೆ. ಅದಕ್ಕೆ ವಿರೇಂದ್ರನು 2 ವರ್ಷಗಳ ಸಮಯ ತೆಗೆದುಕೊಂಡಿದ್ದು ಇರುತ್ತದೆ. ಈಗ 31/07/2017 ರಂದು ನಮ್ಮ ತಂದೆ ವಿರೇಂದ್ರ ದೆಶಮುಖ ಇವರ ಮನೆಗೆ ಹೋಗಿ ದುಡ್ಡು ಕೇಳಿದಾಗ ವಿರೇಂದ್ರ ಇವನು ನಿನಗೆ ಯಾವ ದುಡ್ಡು ಕೊಡುವದಿದೆ ಕೊಡಲ್ಲ ಏನು ಮಾಡಿಕೊಳ್ಳುತ್ತಿ ಮಾಡಿಕೊ ಹೋಗು ನಿನ್ನ ಮಗ ಭಿಮ್ಯಾ ಎಲ್ಲಿ ಹನ ಅಂವ ಸಿಗಲಿ ಅವನಿಗೆ ನೊಡಿಕೊಳ್ಳುತ್ತೆನೆ ಅಂತ ಹೇಳಿ ಕಳಿಸಿರುತ್ತಾನೆ. ನಂತರ ನಮ್ಮ ತಂದೆ ಬಂದು ನನಗೆ ಹೇಳಿದಾಗ. ನಾನು ನಮ್ಮ ತಂದೆ ನೀನು ಈಗ ಸುಮ್ಮ ಊರಿಗೆ ಹೋಗು ಆಮೇಲೆ ಕೇಳೊಣ ಅಂತ ಹೇಳಿ ಕಳಿಸಿರುತ್ತೆನೆ. ಇಂದು ದಿನಾಂಕ:03/08/2017 ಬೆಳಗ್ಗೆ 10:30 ಗಂಟೆಗೆ ಶರಣಬಸವೇಶ್ವರ ಗುಡಿಯ ದರ್ಶನಕ್ಕೆ ಹೋಗಿ ದರ್ಶನದ ಸಲುವಾಗಿ 11:30 ಗಂಟೆಯ ಸುಮಾರಿಗೆ ಪಾಳಿಯಲ್ಲಿ ನಿಂತು ದರ್ಶನ ಮಾಡಿ ಥೇರು ಎಳೆದುಕೊಂಡು ಹೋಗಿ ನಿಲ್ಲುವ ಪಾದಗಟ್ಟಿ ಹತ್ತಿರ ನಾನು ಮತ್ತು ನನ್ನ ಗೆಳೆಯ ಭಿಮಾಶಂಕರ ಕೊಟನೂರ ಇಬ್ಬರು ಮಾತನಾಡುತ್ತಾ ಕುಳಿತಾಗ ವಿರೇಂದ್ರ ದೇಶಮುಖ ಇವನು ಬಂದು ನಿಮ್ಮ ತಂದೆಯ ರೊಕ್ಕ ಕೊಡಲ್ಲ ಏನು ಮಾಡಿಕೊತಿ ಮಾಡ್ಕೊ ರಂಡಿ ಮಗನೆ ಅಂತ ಬೈದು ಕೈಯಿಂದ ಕಪಾಳ ಮೇಲೆ ಹೊಡೆಯುತ್ತಿದಾಗ ನಾನು ಎದ್ದು ಓಡಿ ಹೋಗುವಾಗ ತನ್ನ ಕಿಸೆಯಲ್ಲಿಂದ ಒಂದು ಸಣ್ಣ ಚಾಕು ತೆಗೆದು ನನ್ನ ಬಲಾಗಲಿನ ಹಿಮ್ಮಡಿ ಮೇಲೆ ಚುಚ್ಚಿ ರಕ್ತಗಾಯ ಮಾಡಿರುತ್ತಾನೆ ನಂತರ ನನ್ನ ಸಂಗಡ ಇದ್ದ ಭಿಮರಾಯ ಇತನು ಬಿಡಿಸಿದಾಗ ಅವನು ಅಲ್ಲಿಂದ ಓಡಿ ಹೋಗಿರುತ್ತಾನೆ. ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

03 August 2017

Kalaburagi District Reported Crimes.


ಶಹಾಬಾದ ನಗರ ಪೊಲೀಸಠಾಣೆ : ದಿನಾಂಕ: 02/08/2017 ರಂದು ಮದ್ಯಾಹ್ನ 2-30 ಗಂಟೆಗೆ ಪಿರ್ಯಾದಿ ಶ್ರೀ ಬಾಬು ಸಾ ತಂದೆ ಮದರ ಶಾ ದರವೇಜ ಸಾ: ನಿಜಾಮ ಬಜಾರ ಗೊಳಾ (ಕೆ) ಇತನು ಠಾಣೆಗೆ ಹಾಜರಾಗಿ ಪಿರ್ಯಾದಿ ಹೇಳಿಕೆ ನಿಡಿದ್ದು ಅದರ ಸಾರಂಶವೆನೆಂದರೆ.  ಪಿರ್ಯಾದಿ ತಮ್ಮನಾದ ಜಲಾಲ ಶಾ ಇತನು ವಡ್ಡರವಾಡಿಯ ನಾಗರಡ್ಡಿ ತಂದೆ ಈರಪ್ಪ ಫರತಬಾದ ಇವರ ಟ್ರಾಕ್ಟರ ಇಂಜಿನ ನಂಬರ 39.1354- SYE06516  ಟ್ರ್ಯಾಲಿ ನಂಬರ ಕೆ.ಎ. 32 ಟಿ 1416 ನೇದ್ದರಲ್ಲಿ ವಡ್ಡರವಾಡಿಯಿಂದ ಕಲ್ಲುಗಳು ತುಂಬಿಕೊಂಡು ಕಡೆಹಳ್ಳಿ ಮಾರ್ಗವಾಗಿ ನಡುವಿನ ಹಳ್ಳಿ ಗ್ರಾಮಕ್ಕೆ ಹೋಗುವಾಗ ದಿನಾಂಕ: 02/08/2017 ರಂದು ಮುಂಜಾನೆ 11-30 ಗಂಟೆಗೆ ನಮ್ಮ ತಮ್ಮನಾದ ಜಲಾಲ ಶಾ ಇತನು  ಕಡೆಹಳ್ಳಿ ಗ್ರಾಮದ ಹಳ್ಳದ ಹತ್ತಿರ ಹೊಡ್ಡಿನ ರೋಡಿನಲ್ಲಿ ತಾನು ಚಲಾಯಿಸುವ ಟ್ರಾಕ್ಟರನ್ನು ಅತೀ ವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಹೋಗುವಾಗ ಹೊಡ್ಡಿನಲ್ಲಿ ಟ್ರಾಕ್ಟರನ ಇಂಜಿನ ಮೇಲೇರಿದ್ದರಿಂದ ಟ್ರಾಕ್ಟರ ಸೀಟಿನ ಮೇಲೆ ಕುಳಿತ ನನ್ನ ತಮ್ಮ ಜಲಾಲ ಶಾ ಇತನಿಗೆ ಟ್ರ್ಯಾಲಿಯ ಕಬ್ಬಿಣ  ತಲೆಗೆ ಮತ್ತು ಮಗ್ಗಲಿಗೆ ಬಡಿದಿದ್ದು ಮತ್ತು ಸ್ಟ್ರೀರಿಂಗ ಮುಖಕ್ಕೆ ಬಡಿದು ಭಾರಿ ಗಾಯಾ ಪೆಟ್ಟಾಗಿ ಕಿವಿಯಿಂದ ಮತ್ತು ಮೂಗಿನಿಂದ ರಕ್ತಬಂದು ಸ್ಥಳದಲ್ಲಿಯೇ ಮೃತ ಪಟ್ಟಿರುತ್ತಾನೆ ಕಾರಣ ಸೂಕ್ತ ಕ್ರಮ ಜರುಗಿಸಬೇಕು ಅಂತಾ ಇದ್ದ ಇತ್ಯಾದಿ ಪಿರ್ಯಾದಿ ಹೇಳಿಕೆ ಸಾರಂಶದ ಮೇಲಿಂದ ಠಾಣಾ ಗುನ್ನೆ ನಂಬರ 137/2017 ಕಲಂ 279 304 (ಎ) ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಬಗ್ಗೆ ವರದಿ .
ªÀÄÄzsÉÆÃ¼À ¥ÉưøÀ oÁuÉ : ಸದರಿ ಪ್ರಕರಣದಲ್ಲಿ ಅಪಹರಣವಾದ ಕುಮಾರಿ .....  ತಂದೆ ನಾಗೇಶ ದುಗನೂರ ವ: 15ವರ್ಷ, ಸಾ: ಪಾಕಲ ಗ್ರಾಮ ಇವಳಿಗೆ ಇಂದು ದಿನಾಂಕ: 02-08-2017 ರಂದು ಬೆಳಗ್ಗೆ 1000 ಗಂಟೆಗೆ ಪತ್ತೆ ಮಾಡಿ ಠಾಣೆಗೆ ಕರೆದುಕೊಂಡು ಬಂದು ವಿಚಾರಿಸಲಾಗಿ ತನ್ನ ಹೇಳಿಕೆ ನೀಡಿದ್ದನೆಂದರೆ, ನಾನು ಹಾಗು ನಮ್ಮೂರ ನರಸಿಂಹ ರೆಡ್ಡಿ ತಂದೆ ಮಹೀಪಾಲರೆಡ್ಡಿ ಇಬ್ಬರು ಒಬ್ಬರಿಗೊಬ್ಬರು ಈಗ 2ವರ್ಷಗಳಿಂದ ಪ್ರೀತಿ ಮಾಡುತ್ತಿದ್ದು, ಈ ವಿಷಯವು ನಮ್ಮ ತಂದೆ ತಾಯಿಯವರಿಗೆ ಗೊತ್ತಾಗಿದ್ದರಿಂದ ನನಗೆ ಶಾಲೆ ಬಿಡಿಸಿ ಮನೆಯಲ್ಲಿಟ್ಟಿಕೊಂಡು ನನಗೆ ಬೇರೆ ಮದುವೆ ಮಾಡಲು ಗಂಡು ನೋಡುತ್ತಿದ್ದರಿಂದ ನಾನು ಸದರಿ ನರಸಿಂಹರೆಡ್ಡಿ ಇತನಿಗೆ ಮದುವೆಯಾಗುದಾಗಿ ಹೇಳಿದ್ದು, ಸದರಿ ನರಸಿಂಹರೆಡ್ಡಿ ಇತನು ದಿ: 10-07-2017 ರಂದು ಮಧ್ಯಾಹ್ನ 1400 ಗಂಟೆ ಸುಮಾರಿಗೆ ಮೇದಕ ಗೇಟದಿಂದ ನನಗೆ ಅಪಹರ ಮಾಡಿಕೊಂಡು ಹೈದ್ರಾಬಾದಕ್ಕೆ ಕರೆದುಕೊಂಡು ಹೋಗಿ ಒಂರು ರೂಮಿನಲ್ಲಿಟ್ಟು ನನಗೆ ನಿರಂತರವಾಗಿ ಅತ್ಯಾಚಾರ ಮಾಡಿ ಲೈಗಿಂಕ ದೌರ್ಜನ್ಯ ಮಾಡಿದ್ದು ಇರುತ್ತದೆ ಅಂತಾ ತನ್ನ ಹೇಳಿಕೆ ನೀಡಿದ್ದು ಇರುತ್ತದೆ. ಕಾರಣ ಸದರಿ ಮುಧೋಳ ಪೊಲೀಸ ಠಾಣೆ ಗುನ್ನೆ ನಂ 147/2017 ಕಲಂ 366(ಎ) ಸಂ 34 ಐಪಿಸಿ ನೇದ್ದರಲ್ಲಿ ಕಲಂ 376 ಐಪಿಸಿ & 5 & 6 ಪೊಕ್ಸೊ ಆಕ್ಟ್ ನೇದ್ದನ್ನು ಅಳವಡಿಸಿಕೊಡಿದ್ದು ಬಗ್ಗೆ ಅಂತ ವರದಿ.

C¥sÀd®¥ÀÆgÀ ¥Éưøï oÁuÉ : ದಿನಾಂಕ 02-08-2017 1.30 ಪಿಎಮ್ ಕ್ಕೆ ಪಿಎಸ್ಐ ಸಾಹೇಬರು ಮೂರು ಮರಳು ತುಂಬಿದ ಟ್ರ್ಯಾಕ್ಟರ ಮತ್ತು ಮೂರು ಜನ ಆರೋಪಿತರೊಂದಿಗೆ ಠಾಣೆಗೆ ಬಂದು ವರದಿ ಹಾಜರ ಪಡಿಸಿದ್ದು, ಸದರಿ ವರದಿಯ ಸಾರಂಶವೇನೆಂದರೆ ಇಂದು ದಿನಾಂಕ 02-08-2017 ರಂದು 11:00 ಎ ಎಮ್ ಕ್ಕೆ ಸಂಗಡ ನಮ್ಮ ಸಿಬ್ಬಂದಿಯವರಾದ  ಗುಂಡಪ್ಪ ಹೆಚ್ ಸಿ-68, ಚಂದ್ರಕಾಂತ ಸಿಹೆಚ್ ಸಿ-449  ರವರನ್ನು ಕರೆದುಕೊಂಡು ಅಫಜಲಪೂರ ಪಟ್ಟಣದಲ್ಲಿ ಪೇಟ್ರೋಲಿಂಗ್ ಕರ್ತವ್ಯದಲ್ಲಿದ್ದಾಗ ಮಾಹಿತಿ ಬಂದಿದ್ದೆನೆಂದರೆ, ಶಿವಪೂರ ಗ್ರಾಮದ ಕಡೆಯಿಂದ ಟ್ರ್ಯಾಕ್ಟರಗಳಲ್ಲಿ ಮರಳು ತುಂಬಿಕೊಂಡು ಅಫಜಲಪೂರ ಕಡೆ ಹೊರಟಿರುತ್ತಾರೆ ಅಂತಾ ಬಾತ್ಮಿ ಬಂದ ಮೇರೆಗೆ ಮರಳಿ ಠಾಣೆಗೆ ಬಂದು   ಇಬ್ಬರು ಪಂಚರಾದ 1) ಶಿವಪ್ಪ ತಂದೆ ಗಿರಿಮಲ್ಲಪ್ಪ ಕಡ್ಲೇವಾಡ 2) ಸೊಂದಪ್ಪ ತಂದೆ ಪರಮೇಶ್ವರ ಹೊಸಮನಿ ಸಾ: ಇಬ್ಬರು ಅಫಜಲಪೂರ ಇವರು ಠಾಣೆಗೆ ಬರಮಾಡಿಕೊಂಡು ವಿಷಯವನ್ನು ತಿಳಿಸಿ ಸದರಿಯವರು ಪಂಚರಾಗಲು ಒಪ್ಪಿಕೊಂಡ ನಂತರ ಮಾನ್ಯ ಸಿಪಿಐ ಸಾಹೇಬರು ಅಫಜಲಪೂರ ವೃತ್ತ ರವರ ಮಾರ್ಗದರ್ಶನದಲ್ಲಿ ನಾನು ಪಂಚರು  ಮತ್ತು ನಮ್ಮ ಸಿಬ್ಬಂದಿಯವರಾದ ಗುಂಡಪ್ಪ ಹೆಚ್ ಸಿ-68, ಚಂದ್ರಕಾಂತ ಸಿಹೆಚ್ ಸಿ-449 ರವರೇಲ್ಲರು ಕೂಡಿ ನಮ್ಮ ಪೊಲೀಸ್  ವಾಹನದಲ್ಲಿ 11:15 ಎ ಎಮ್ ಕ್ಕೆ ಠಾಣೆಯಿಂದ ಹೊರಟು. 11:30 ಎ ಎಮ್ ಕ್ಕೆ ಬನ್ನಟ್ಟಿ ಕ್ರಾಸ ಹತ್ತಿರ  ಹೋಗುತ್ತಿದ್ದಾಗ ಎದುರುಗಡೆಯಿಂದ ಮೂರು ಟ್ರ್ಯಾಕ್ಟರಗಳಲ್ಲಿ ಮರಳು ತುಂಬಿಕೊಂಡು ಬರುತ್ತಿದ್ದರು. ನಾವು ನೋಡಿ ಟ್ರ್ಯಾಕ್ಟರಗಳನ್ನು ನಿಲ್ಲಿಸಿದೆವು. ಮೂರು ಟ್ರ್ಯಾಕ್ಟರ ಚಾಲಕರಿಗೆ ಹಿಡಿದು ನಾನು ಪಂಚರ ಸಮಕ್ಷಮ ಟ್ರ್ಯಾಕ್ಟರಗಳನ್ನು ಚಕ್ಕ ಮಾಡಲು ಟ್ರ್ಯಾಕ್ಟರ ಟ್ರೈಲಿಗಳಲ್ಲಿ ಮರಳು ತುಂಬಿದ್ದು ಇತ್ತು ಮತ್ತು ಅವುಗಳ ನಂ 1) JOHN DEERE Chessis SL NO 1PY5310ECFA001766 Engine NO PY3029H036765 ಅ.ಕಿ 2,00,000/-ರೂ ಸದರಿ ಟ್ರ್ಯಾಕ್ಟರ ಟ್ರೈಲಿಯಲ್ಲಿ ತುಂಬಿದ ಮರಳಿನ ಅ.ಕಿ 3000/-ರೂ 2) JOHN DEERE Engine SL NO PY3029T238312 ಅ.ಕಿ 2,00,000/-ರೂ ಸದರಿ ಟ್ರ್ಯಾಕ್ಟರ ಟ್ರೈಲಿಯಲ್ಲಿ ತುಂಬಿದ ಮರಳಿನ ಅ.ಕಿ 3000/-ರೂ 3)ARJUN MAHINDRA SL NO NSCA00375 HD ಅ.ಕಿ 2,00,000/-ರೂ ಸದರಿ ಟ್ರ್ಯಾಕ್ಟರ ಟ್ರೈಲಿಯಲ್ಲಿ ತುಂಬಿದ ಮರಳಿನ ಅ.ಕಿ 3000/-ರೂ  ಅಂತಾ ಇತ್ತು ಈ ಬಗ್ಗೆ ಚಾಲಕರಿಗೆ ಸಂಬಂಧಪಟ್ಟ ಅಧಿಕಾರಿಯವರಿಂದ ಮರಳು ಸಾಗಣಿಕೆ ಮಾಡಲು ಪರವಾನಿಗೆ ಪಡೆದುಕೊಂಡ ಬಗ್ಗೆ ದಾಖಲಾತಿಗಳನ್ನು ವಿಚಾರಿಸಲು ತಮ್ಮ ಹತ್ತಿರ ಯಾವುದೇ ದಾಖಲಾತಿಗಳು ಇರುವುದಿಲ್ಲ ಅಂತ ತಿಳಿಸಿದರು ಸದರಿ ಟ್ರ್ಯಾಕ್ಟರಗಳ  ಚಾಲಕರ ಹೆಸರು ವಿಳಾಸ ವಿಚಾರಿಸಲಾಗಿ 1) ಚಂದ್ರಕಾಂತ ತಂದೆ ಗೌಡಪ್ಪಗೌಡ ಪಾಟೀಲ ವ||38 ವರ್ಷ ಜಾ||ಲಿಂಗಾಯತ ಉ|| ಟ್ರ್ಯಾಕ್ಟರ JOHN DEERE Chessis SL NO 1PY5310ECFA001766 Engine NO PY3029H036765 ನೇದ್ದರ ಚಾಲಕ ಸಾ||ಶಿವಪೂರ 2) ಚಾಂದ ತಂದೆ ಗಪೂರಸಾಬ ಜಮಾದಾರ ವ||25 ವರ್ಷ ಜಾ||ಮುಸ್ಲೀಮ್ ಉ|| ಟ್ರ್ಯಾಕ್ಟರJOHN DEERE Engine SL NO PY3029T238312 ನೇದ್ದರ ಚಾಲಕ ಸಾ||ಲಕ್ಷ್ಮಿಗುಡಿ ಹತ್ತಿರ ಅಫಜಲಪೂರ 3) ಸಂಗನಬಸು ತಂದೆ ಭೀಮರಾಯ ಜಮಾದಾರ ವ||31 ವರ್ಷ ಜಾ|| ಕೋಳಿ ಉ||ಟ್ರ್ಯಾಕ್ಟರ ARJUN MAHINDRA SL NO NSCA00375 HD ನೇದ್ದರ ಚಾಲಕ ಸಾ||ಶಿವಪೂರ ಅಂತ ತಿಳಿಸಿದರು. ನಂತರ ಟ್ರ್ಯಾಕ್ಟರಗಳನ್ನು ಪಂಚರ ಸಮಕ್ಷಮ 11.40 ಎಎಮ್ ದಿಂದ 12.40 ಪಿಎಮ್ ವರೆಗೆ ಜಪ್ತಿ ಪಂಚನಾಮೆ ಮೂಲಕ ವಶಕ್ಕೆ ತಗೆದುಕೊಂಡೆನು ನಂತರ ನಮ್ಮ ಸಿಬ್ಬಂದಿಯವರ  ಸಹಾಯದಿಂದ ಸದರಿ ಮರಳು ತುಂಬಿದ ಟ್ಯ್ರಾಕ್ಟರ ಮತ್ತು ಆರೋಪಿತನೊಂದಿಗೆ ಮರಳಿ ಠಾಣೆಗೆ 1.30 ಪಿಎಮ್ ಕ್ಕೆ ಬಂದು ಅಕ್ರಮವಾಗಿ ಕಳ್ಳತನದಿಂದ ಮರಳು ಸಾಗಿಸುತಿದ್ದ ಮೂರು ಜನ ಚಾಲಕರು ಹಾಗು ಸದರಿ ಟ್ರ್ಯಾಕ್ಟರಗಳ ಮಾಲಿಕರ  ವಿರುದ್ದ ಮುಂದಿನ ಕ್ರಮ ಕೈಗೊಳ್ಳವಂತೆ ವರದಿ ನಿಡಿದ್ದರ  ಮೇರೆಗೆ ಠಾಣೆ ಅಫರಾಧ ಸಂ 194/2017 ಕಲಂ 379 ಐಪಿಸಿ ಮತ್ತು ಕಲಂ 21(1) ಎಮ್ ಎಮ್ ಡಿ ಆರ್ ಆಕ್ಟ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ಬಗ್ಗೆ ವರದಿ .