POLICE BHAVAN KALABURAGI

POLICE BHAVAN KALABURAGI

17 November 2016

Kalaburagi District Reported Crimes

ಅಪಘಾತ ಪ್ರಕರಣಗಳು :
ಗ್ರಾಮೀಣ ಠಾಣೆ : ದಿನಾಂಕ 16/11/16 ರಂದು ಬೆಳಿಗ್ಗೆ 08-00 ಗಂಟೆ ಸುಮಾರಿಗೆ ನಮ್ಮ ಮನೆಯ ಪಕ್ಕದ ನಿವಾಸಿ ಸಾಯಿಶಂಕರ ಪಾಂಡೆ ಇವರು ಹೇಳಿದ ನನ್ನ ತಮ್ಮ ಸಂದೀಪ ಇತನು ಬಾಲಾಜಿ ಹೋಟಲಕ್ಕೆ ಹಾಲು ಕೊಟ್ಟು ಬರಲು ಟಿ.ವಿ.ಎಸ್. ಎಕ್ಸಎಲ್  ಕೆಎ 32 ಇಎಲ್ 7809 ತೆಗೆದುಕೊಂಡು ಮನೆಯಿಂದ ಹೋಗಿದ್ದು. ಹಾಲು ಕೊಟ್ಟು ವಾಪಸ್ಸು ಮನೆಯ ಕಡೆಗೆ ಟಿ.ವಿ.ಎಸ್. ಎಕ್ಸಎಲ್  ಕೆಎ 32 ಇಎಲ್ 7809 ಮೇಲೆ ಸಂದೀಪ ಒಬ್ಬನೇ ಕುಳಿತುಕೊಂಡು ಹುಮನಾಬಾದ ರಿಂಗ ರೋಡ ಕಡೆಯಿಂದ ಬರುತ್ತಿದ್ದಾಗ ಬೆಳಗಿನ 08-30 ಗಂಟೆ ಸುಮಾರಿಗೆ ಸೈಯ್ಯದ ಚಿಂಚೋಳಿ ಕ್ರಾಸಿನಲ್ಲಿ ಇರುವ ಬಾಲಾಜಿ ವೈನಶಾಪ ಎದುರಿನ ರಿಂಗ ರೋಡ ಕ್ರಾಸಿನ ಮೇಲೆ ನಿಂತ ಆಟೋ ಕೆಎ 32 ಬಿ 5403 ಚಾಲಕ ಮಾರುತಿ ತಂದೆ ರಾಮು ರಾಠೋಡ ಸಾ:ಆಶ್ರಯ ಕಾಲನಿ ಕಲಬುರಗಿ  ಇತನು ಯಾವುದೇ ಇಂಡಿಕೇಟರ ಹಾಕದೇ ಮತ್ತು ಮುನ್ಸೂಚನೇ ನೀಡದೆ ಒಮ್ಮಿಂದ ಒಮ್ಮೇಲೆ ಅತಿವೇಗದಿಂದ ಮತ್ತು ನಿಷ್ಕಾಳಿಜಿತನದಿಂದ ಆಟೋ ಟರ್ನ ಮಾಡಿ  ಹುಮನಾಬಾದ ರಿಂಗ ರೋಡ ಕಡೆಯಿಂದ ಬರುತ್ತಿದ್ದ ಸಂದೀಪನ ಟಿ.ವಿ.ಎಸ್. ಗಾಡಿಗೆ ಡಿಕ್ಕಿ ಹೊಡೆದು ಅಪಘಾತಪಡಿಸಿ ಸ್ಥಳದಲ್ಲಿ ಆಟೋ ನಿಲ್ಲಿಸಿದನು.ಇದರಿಂದಾಗಿ ಸಂದೀಪನ ಬಲಗೈ ಮುಂಗೈ ಮೇಲೆ ರಕ್ತಗಾಯ ಮತ್ತು ಬಲಗಾಲ ತೊಡೆ ಮೇಲೆ ತರಚಿದ ಗಾಯ ಮತ್ತು ಗುಪ್ತಗಾಯವಾಗಿದ್ದು. ಮತ್ತು ತಲೆಗೆ ಭಾರಿ ಗುಪ್ತಗಾಯವಾಗಿ ಬೇಹುಷ ಸ್ಥಿತಿಯಲ್ಲಿ ಬಿದ್ದಿದ್ದನು ಈ ವಿಷಯ ಘಟನಾ ಸ್ಥಳಕ್ಕೆ ನಾನು ಮತ್ತು ಸಾಯಿಶಂಕರ ಇಬ್ಬರು ಹೋದಾಗ ಘಟನಾ ಸ್ಥಳದಲ್ಲಿ ಹಾಜರಿದ್ದ ಸಾಯಿಶಂಕರನಿಗೆ ಪರಿಚಯವಿದ್ದ  ಸತೀಷ ಕಮಲಾಪೂರೆ ಮತ್ತು ಪದ್ಮಾಜಿ ಕುಸುಮಕರ ಇವರಿಗೆ  ವಿಚಾರಿಸಲಾಗಿ ಈ ಮೇಲಿನ ವಿಷಯ ಕೇಳಿ ಗೊತ್ತಾಗಿದ ನಂತರ ನಮ್ಮ ತಮ್ಮನಿಗೆ ಉಪಚಾರ ಕುರಿತು ಎ.ಎಸ್.ಎಂ. ಆಸ್ಪತ್ರೆ ಕಲಬುರಗಿಗೆ ಒಯ್ದು ಸೇರಿಕೆ ಮಾಡಿದ್ದು, ಆಟೋ ಕೆಎ 32 ಬಿ 5403 ಚಾಲಕ ಮಾರುತಿ ತಂದೆ ರಾಮು ರಾಠೋಡ ಸಾ:ಆಶ್ರಯ ಕಾಲನಿ ಕಲಬುರಗಿ  ಇತನ ಕಾನೂನು ಕ್ರಮ ಜರುಗಿಸಬೇಕೆಂದು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು  ಗಾಯಾಳು  ಸಂದೀಪ ಇತನು ಇಂದು ದಿನಾಂಕ 16/11/16 ರಂದು ಬೆಳಿಗ್ಗೆ 08-30 ಗಂಟೆ ಸುಮಾರಿಗೆ ಆದ ರಸ್ತೆ ಅಪಘಾತ ಗಾಯಗಳಿಂದ ಉಪಚಾರ ಹೊಂದುತ್ತಾ ಗುಣ ಮುಖ ಹೊಂದದೇ ಇಂದು ರಾತ್ರಿ 08-30 ಗಂಟೆಗೆ ಎ.ಎಸ್.ಎಂ. ಆಸ್ಪತ್ರೆ ಕಲಬುರಗಿಯಲ್ಲಿ ಮೃತಪಟ್ಟಿರುತ್ತಾನೆ  ಅಂತಾ ಸತೀಶ ತಂದೆ ಮಾಹಾದೇವ ಗೌಳಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಫಜಲಪೂರ ಠಾಣೆ : ಶ್ರೀ ಶಿವರುದ್ರಯ್ಯ ತಂದೆ ರೇವಯ್ಯ ಕರಬಂಟನಾಳ ಸಾ||ಘತ್ತರಗಾ ಇವರು ದಿನಾಂಕ 15/11/2016 ರಂದು ರಾತ್ರಿ ನಾನು ನಮ್ಮ ಮನೆಯ ಮುಂದೆ ಕುಳಿತಿದ್ದಾಗ ನಮ್ಮ ತಂದೆಯಾದ ರೇವಯ್ಯ ತಂದೆ ಗುಂಡಯ್ಯ ಕರಬಂಟನಾಳ ಇವರು ಬಹಿರ್ದೆಸೆಗೆ ಹೋಗಿ ಬರುತ್ತೇನೆ ಅಂತ ಹೇಳಿ ಮನೆಯ ಮುಂದಿನ ರೋಡಿನ ಬಾಜು ಹೋಗುತ್ತಿದ್ದಾಗ ಅದೆ ಸಮಯಕ್ಕೆ ಅಫಜಲಪೂರ ಕಡೆಯಿಂದ ಒಂದು ಟಂಟಂ ಘತ್ತರಗಾ ಕಡೆ ಬರುತ್ತಿದ್ದು, ಅದರ ಚಾಲಕನು ತನ್ನ ಟಂಟಂ ಅನ್ನು ಅತಿವೇಗವಾಗಿ ಮತ್ತು ನಿಸ್ಕಾಳಜಿತನದಿಂದ  ಚಲಾಯಿಸಿಕೊಂಡು ಬಂದು ಒಮ್ಮೆಲೆ ನಮ್ಮ ತಂದೆಗೆ ಡಿಕ್ಕಿ ಪಡಿಸಿ ಟಂಟಂ ಪಲ್ಟಿ ಮಾಡಿ ತನ್ನ ಟಂಟಂ ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ ನಾನು ಗಾಬರಿಯಾಗಿ ಚಿರಾಡುತ್ತಾ ಓಡಿ ಹೋಗಿ ನೋಡಲು ಮತ್ತು ಅದೇ ಸಮಯಕ್ಕೆ ರೋಡಿನ ಹತ್ತಿರ ಮಾತನಾಡುತ್ತಾ ನಿಂತಿದ್ದ ನಮ್ಮ ಗ್ರಾಮದ ಪ್ರಕಾಶ ತಂದೆ ಶಾಂತಯ್ಯ ಹೀರೆಮಠ, ಚನ್ನಯ್ಯ ತಂದೆ ಸಂಗಯ್ಯ ಹೀರೆಮಠ, ಹೈದರಅಲಿ ತಂದೆ ಬಾಬುಸಾಬ ಅತ್ತಾರ ಹಾಗು ಇತರರು ಬಂದಿದ್ದು ಎಲ್ಲರು ಕೂಡಿ ನಮ್ಮ ತಂದೆಯ ಹತ್ತಿರ ಹೋಗಿ ನೋಡಿದಾಗ ನಮ್ಮ ತಂದೆಯ ತಲೆಯ ಹಿಂದಿನ ಭಾಗಕ್ಕೆ   ಭಾರಿ ರಕ್ತಗಾಯವಾಗಿ ಮಾತಾಡುವ ಸ್ಥಿತಿಯಲ್ಲಿ ಇರಲಿಲ್ಲ ನಂತರ ನಾವೇಲ್ಲರು ಡಿಕ್ಕಿ ಪಡಿಸಿದ ಟಂಟಂ ನಂಬರ ನೊಡಲಾಗಿ ಕೆಎ-29 ಎ-6668 ಅಂತ ಇರುತ್ತದೆ.ನಂತರ ನಮ್ಮ ತಂದೆಯನ್ನು ಚಿಕಿತ್ಸೆಗಾಗಿ ನಮ್ಮೂರಿನ ಮಡಿವಾಳಪ್ಪ ತಂದೆ ಭಗವಂತರಾಯ ಕಲ್ಲೂರ ಇತನ ಕ್ರೂಜರ ವಾಹನದಲ್ಲಿ ಅಫಜಲಪೂರಕ್ಕೆ ತರುತಿದ್ದಾಗ ರಾತ್ರಿ 10.45 ಗಂಟೆ ಸುಮಾರಿಗೆ ಹಿಂಚಗೇರಾ ಹತ್ತಿರ ಮಾರ್ಗ ಮದ್ಯದಲ್ಲಿ ಮೃತ ಪಟ್ಟಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ಸ್ಟೇಷನ ಬಜಾರ ಠಾಣೆ : ಶ್ರೀಮತಿ ಪಾರ್ವತಿ ಗಂಡ ದಿ: ರವಿ ಜಮಾದಾರ ಸಾ: ಇಂದಿರಾ ನಗರ ಕಲಬುರಗಿ ಇವರು ದಿನಾಂಕ 15/11/2016 ರಂದು ಬೆಳಿಗ್ಗೆ 10 ಗಂಟೆಗೆ ನಮ್ಮ ಮನೆಯ ಬಾಗಿಲ ಕೀಲಿ ಹಾಕಿಕೊಂಡು ಬಸವಕಲ್ಯಾಣ ತಾಲೂಕಿನ ಬಗ್ಗದೂರಿ ಯಲ್ಲಮ್ಮ ದೇವಸ್ಥಾನಕ್ಕೆ ದೇವರ ಮಾಡುವ ಸಲುವಾಗಿ ನಮ್ಮ ಮನೆಯವರೆಲ್ಲರೂ ಕೂಡಿ ಹೋಗಿದ್ದು ಮರಳಿ 9 ಪಿ.ಎಂ.ಕ್ಕೆ ನಮ್ಮ ಮನೆಗೆ ಬಂದಾಗ ಬಾಗಿಲ ಕೀಲಿ ಮುರಿದಿದ್ದನ್ನು ನೋಡಿದೇನು. ಗಾಬರಿಯಾಗಿ ಮನೆಯಲ್ಲಿ ಹೋಗಿ ನೋಡಲಾಗಿ ಅಲಮಾರಿಯಲ್ಲಿಯ 1) 5 ಗ್ರಾಂ ಬಂಗಾರದ ಒಂದು ಸುತ್ತುಂಗುರ ಅ.ಕಿ. 15,000/- ರೂ 2) 5 ಗ್ರಾಂ ಬಂಗಾರದ ಎರಡು ಜೊತೆ ಕೀವಿ ಓಲೆಗಳು ಅ.ಕಿ. 15,000/- ರೂ 3) 1 ಗ್ರಾಂ ಬಂಗಾರದ ಮುಗುತಿ & ಕೀವಿಯ ರಿಂಗ ಅ.ಕಿ. 4000/- ರೂ 4) 2 ತೊಲೆ ಬೆಳ್ಳಿಯ ಎರಡು ಕುಂಕುಮ ಬಟ್ಟಲಗಳು ಅ.ಕಿ. 800/- ರೂ ಹಾಗು  5) 500 ರೂ ನಗದು ಹಣ ಹೀಗೆ ಒಟ್ಟು ಅಂದಾಜು ಕಿಮ್ಮತ್ತು 35,300/- ರೂ ಬೇಲೆ ಬಾಳುವ ಬಂಗಾರ, ಬೆಳ್ಳಿ ಹಾಗು ನಗದು ಹಣ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸ್ಟೇಷನ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಜೇವರಗಿ ಠಾಣೆ : ಕಿರಣಕುಮಾರ ತಂದೆ ಬಸವರಾಜ ಕಲ್ಲೂರ ಸಾ|| ಬಸವೇಶ್ವರ ನಗರ ಜೇವರಗಿ  ರವರು ದಿನಾಂಕ 15.11.2016 ರಂದು ಮುಂಜಾನೆ 11:30 ಗಂಟೆಗೆ ಜೇವರಗಿ ಪಟ್ಟಣದ ಬಸವೇಶ್ವರ ನಗರದಲ್ಲಿ ಇರುವ ನಮ್ಮ ಮನೆಯ ಮುಂದೆ ಸಿದ್ದಣ್ಣ ತಂದೆ ಅಮ್ಮಣ್ಣ ಕಲ್ಲೂರ ಈತನು ಮನೆಯ ಮುಂದಿನ ಮಣ್ಣು ತೆಗೆದು ಒಡ್ಡು ಹಾಕಿದ ವಿಷಯದಲ್ಲಿ ನನ್ನೊಂದಿಗೆ ಜಗಳ ತೆಗೆದು ನನಗೆ ಅವಾಚ್ಯ ಶಬ್ದಗಳಿಂದ ಬೈದು ನಮ್ಮ ತಾಯಿಗೆ ಕೈಯಿಂದ ಜಗ್ಗಾಡಿ ನೂಕಿಸಿಕೊಟ್ಟು ನನಗೆ ಕೊಲೆ ಮಾಡುವ ಉದ್ದೇಶದಿಂದ ಗುದ್ದಲಿ ಯಿಂದ ನನ್ನ ತಲೆಗೆ ಜೋರಾಗಿ ಹೊಡೆದು ಭಾರಿ ರಕ್ತ ಗಾಯಪಡಿಸಿ ಕೊಲೆಗೆ ಪ್ರಯತ್ನ ಮಾಡಿ ಜೀವದ ಬೇದರಿಕೆ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

16 November 2016

KALABURAGI DISTRICT REPORTED CRIMES

ಕೊಲೆ ಪ್ರಕರಣ:
ಯಡ್ರಾಮಿ ಪೊಲೀಸ್ ಠಾಣೆ:ದಿನಾಂಕ: 15-11-2016 ರಂದು ಶ್ರೀ ಪರಮಾನಂದ ತಂದೆ ಆನಂದಪ್ಪ ಚಾಂದ ಕವಟೆ ಸಾ:ಕೊಣಶಿರಸಗಿ ಇವರು ಠಾಣೆಗೆ ಹಾಜರಾಗಿ ಗ 4-5 ವರ್ಷದ ಹಿಂದೆ ನಾವು ಅಣ್ಣ ತಮ್ಮಂದಿರರು ಬೇರೆಯಾಗಿದ್ದರಿಂದ ನಮ್ಮ ತಂದೆಗೆ ನಮ್ಮ ಮೇಲೆ ಸಿಟ್ಟು ಮಾಡಿಕೊಂಡು  ನಮ್ಮ ಮನೆಗೆ ಊಟ ಮಾಡಲು ಬರುತ್ತಿರಲಿಲ್ಲ. ಅವರು ಗ್ರಾಮದ  ಸಿದ್ರಾಮಪ್ಪಗೌಡ ಇವರ ಮನೆಯಲ್ಲಿ ಊಟ ಮಾಡುತ್ತಾ. ಗೊಲ್ಲಾಳಪ್ಪಗೌಡ ಇವರ ಹೊಲದಲ್ಲಿ ಕಡಕೋಳ ಮಡಿವಾಳೇಶ್ವರ ತಾತನವರು ಕುಳಿತು ಹೋಗಿದ್ದ ಜಾಗದಲ್ಲಿ ನಮ್ಮ ತಂದೆ ಆನಂದಪ್ಪನವರು  ಗದ್ದುಗೆ ಮಾಡಿಕೊಂಡು ಪೂಜೆ ಪುನಸ್ಕಾರ ಮಾಡುತ್ತಾ ಅಲ್ಲಿಯೇ ವಾಸವಾಗಿದ್ದು.  ಹೀಗಿದ್ದು, ದಿ: 14-11-16 ರಂದು ಬೆಳಿಗ್ಗೆ ಎಂದಿನಂತೆ ನನ್ನ ತಂದೆ ಸಿದ್ರಾಮಪ್ಪಗೌಡನ ಮನೆಯಲ್ಲಿ ಊಟ ಮಾಡಿ ಬುತ್ತಿ ಕಟ್ಟಿಕೊಂಡು ತಾನು ಇರುವ ಗದ್ದುಗೆ ಸ್ಥಳಕ್ಕೆ ಹೋಗಿದ್ದು. ಇಂದು ದಿನಾಂಕ: 15-11-2016 ರಂದು ನನಗೆ ಶಾಂತಪ್ಪ ಇತನು ಪೋನ್ ಮಾಡಿ ನಿನ್ನ ತಂದೆಗೆ ಗವಿಯಲ್ಲಿ ಯಾರೋ ಹೊಡೆದು ಕೊಲೆ ಮಾಡಿರುತ್ತಾರೆ ಅಂತಾ ಹೇಳಿದ ಕೂಡಲೆ ನಾನು ಮತ್ತು ಬನ್ನೆಪ್ಪ ತಂದೆ ಮಲ್ಲೇಶಪ್ಪ ಕೂಡಲಗಿ, ಬಸವರಾಜ ತಂದೆ ಮಡಿವಾಳಪ್ಪ ಬಿರಾದಾರ ಹೀಗೆಲ್ಲರೂ ಕೂಡಿಕೊಂಡು ನನ್ನ ತಂದೆ ಇರುವ ಗವಿಯಲ್ಲಿ ಹೋಗಿ ನೋಡಲಾಗಿ ನನ್ನ ತಂದೆ ಗವಿಯಲ್ಲಿದ್ದ ಪಲಂಗಿನ ಮೇಲೆ ಬೋರಲಾಗಿ ಬಿದ್ದಿದ್ದು, ಹೊರಳಿಸಿ ನೋಡಲಾಗಿ ಹಣೆಯ ಮೇಲೆ ಗಾಯವಾಗಿ ಮುಖ ಉಬ್ಬಿದಂತಾಗಿ ರಕ್ತ ಬಂದಿತ್ತು. ಅಲ್ಲದೆ ಗುಪ್ತಾಂಗದ  ಹತ್ತಿರ ರಕ್ತಗಾಯವಾಗಿದ್ದು. ಗವಿಯಲ್ಲಿ ನೋಡಲಾಗಿ ಗವಿಯಲ್ಲಿದ್ದ  ಪೆಟ್ಟಿಗೆ ಹೊರಗೆ ತಂದು ಅದರಲ್ಲಿನ ಕಾಗದ ಪತ್ರಗಳು ಸುಟ್ಟು ಹಾಕಿದ್ದು. ಈ ಕೊಲೆ ದಿ: 14-11-16 ರಂದು ಬೆಳಿಗ್ಗೆ 11 ಗಂಟೆಯಿಂದ ಸಾಯಂಕಾಲ 6 ಗಂಟೆಯ ಅವಧಿಯಲ್ಲಿ ಆಗಿರಬಹುದು       ನಮ್ಮ ತಂಧೆ ವಾಸವಾಗಿದ್ದ ಸ್ಳಳದಲ್ಲಿ ಕಡಕೋಳ ಮಡಿವಾಳೇಶ್ವರ ಮೂರ್ತಿ ಪ್ರತಿಷ್ಟಾಪನೆ ಮಾಡುವ ಸಲುವಾಗಿ ಹೊಲ ಕೊಡಬಾರದೆಂಬ ಉದ್ದೇಶದಿಂದ ನನ್ನ ತಂದೆಗೆ ಮಡಿವಾಳಪ್ಪಗೌಡ ತಂದೆ ಮುತ್ತಣ್ಣಗೌಡ ಮಾಲಿಪಾಟೀಲನು. ಗವಿಯಲ್ಲಿದ್ದ ನನ್ನ ತಂದೆಗೆ ಕೊಲೆ ಮಾಡಿ ಕಾಗದ ಪತ್ರಗಳನ್ನು ಸುಟ್ಟು ಹಾಕಿರುತ್ತಾರೆ ಕಾರಣ ಮೇಲ್ಕಂಡ ಮಡಿವಾಳಪ್ಪಗೌಡನ ವಿರುದ್ದ ಕಾನೂನು ರೀತಿ ಕ್ರಮ ಕೈಕೊಳ್ಳಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ,
ಮಟಕಾ ಜೂಜು ಕೋರನ ಬಂಧನ:
ಜೇವರ್ಗಿ ಪೊಲೀಸ್ ಠಾಣೆ: ದಿ 14.11.2016 ರಂದು ಶ್ರೀ ನಾಗಭೂಷಣ ಎ.ಎಸ್.ಐ ಜೇವರಗಿ ಪೊಲೀಸ್ ಠಾಣೆ ರವರು ಜೇವರಗಿ ಪಟ್ಟಣದ ಸರಕಾರಿ ಆಸ್ಪತ್ರೆ ಪಕ್ಕದ ಮುಖ್ಯ ರಸ್ತೆಯಲ್ಲಿ ಹೋಗಿ ಬರುವ ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದ ರಾಮಣ್ಣ ತಂದೆ ಕರಣಪ್ಪ ಅವಂಟಿ ಸಾ: ಗುಡೂರ ಎಸ್.ಎ  ತಾ: ಜೇವರಗಿ ರವರ ಮೇಲೆ ಸಿಬ್ಬಂದಿಯವರೊಂದಿಗೆ ದಾಳಿ ಮಾಡಿ ಆತನಿಂದ ನಗದು ಹಣ ರೂ 4,375/-  ಮತ್ತು  ಒಂದು ಮಟಕಾ ಚೀಟಿ ಹಾಗೂ ಒಂದು ಬಾಲ ಪೆನ್ನು ಜಪ್ತಿ ಮಾಡಿ ಸದರಿಯವನ ವಿರುದ್ದ ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಅಕ್ರಮ ಮರಳು ಸಾರಾಟ ಪ್ರಕರಣ:
ಫರಹತಾಬಾದ ಪೊಲೀಸ್ ಠಾಣೆ: ದಿನಾಂಕ 14-11-2016 ರಂದು ಫರಹತಾಬಾದ ಪೊಲೀಸ್ ಠಾಣೆ ವ್ಯಾಪ್ತಿಯ ನದಿಸಿನ್ನೂರ ಗ್ರಾಮದ ಸೀಮಾಂತರ ಭೀಮಾನದಿಯಲ್ಲಿ ಟೆಂಡರುದಾರನಾದ ವಿಜಯಕುಮಾರ ಚವ್ಹಾಣ ಈತನು ನಿಯಮ ಬಾಹೀರವಾಗಿ  ಮರಳನ್ನು ಟಿಪ್ಪರಗಳಲ್ಲಿ ತುಂಬುತ್ತಿರುವಾಗ ದಾಳಿ ಮಾಡಿ ಅಕರಮ ಮರಳು ತುಂಬುತ್ತಿರುವ ಬಗ್ಗೆ ಶ್ರೀ ಕಿರಣಕುಮಾರ ಗ್ರಾಮ ಲೆಕ್ಕಿಗ ನದಿಸಿನ್ನೂರ ಇವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ವಿಜಯಕುಮಾಋ ಚವ್ಹಾಣ ಮತ್ತು ಟಿಪ್ಪರ ಚಾಲಕರ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.

14 November 2016

Kalaburagi District Reported Crimes

ಅಪಘಾತ ಪ್ರಕರಣ :
ಫರತಾಬಾದ ಠಾಣೆ : ಶ್ರೀ ಸಚೀನ್ ತಂದೆ ಶ್ರೀಕಾಂತ ಎಂದೆ ಸಾ : ವಿ.ಪಿ ಚೌಕ ಶಹಾಬಾದ ಇವರು ದಿನಾಂಕ  12-11-2016 ರಂದು ಹುಣಸಗಿ ಗ್ರಾಮದಲ್ಲಿ ತನ್ನ ಮಾವ ಮರಣ ಹೊಂದಿದ ಪ್ರಯುಕ್ತ ಅಂತ್ಯಕ್ರಿಯೇಯಲ್ಲಿ ಬಾಗವಹಿಸಲು ತಾನು, ತನ್ನ ತಾಯಿ ಸರೋಜಾ, ತಮ್ಮ ನಿತೀನ್ ಹಾಗು ತಮ್ಮ ಅಂಗಡಿಯಲ್ಲಿ ಕೆಲಸ ಮಾಡುವ ಸುನೀಲ್ ದಂಡಗುಂಡಕರ ಎಲ್ಲರೂ ಕೂಡಿ ತಮ್ಮ ಕಾರ ನಂ ಎಂ.ಹಚ್ 14 ಬಿ.ಕೆ 5540 ನೇದ್ದರಲ್ಲಿ ಕುಳಿತು ಹೋಗಿದ್ದು ಅಂತ್ಯ ಸಂಸ್ಕಾರ ಮುಗಿಸಿಕೊಂಡು ಮರಳಿ ನಾವೇಲ್ಲರೂ ಶಹಾಬಾದಕ್ಕೆ ಬರುವ ಕುರಿತು ಸದರಿ ನಮ್ಮ ಕಾರನಲ್ಲಿ ಕುಳಿತುಕೊಂಡು ಹೋರಟಿದ್ದು ಈ ಕಾರನ್ನು ನನ್ನ ತಮ್ಮ ನಿತೀನ್ ಇತನು ಚಲಾಯಿಸುತ್ತಿದ್ದನು. ಸಾಯಂಕಾಲ 5-30 ಗಂಟೆಯ ಸುಮಾರಿಗೆ ಶಹಾಬಾದ ಇನ್ನೂ 10 ಕಿ.ಮಿ ದೂರ ಇರುವಾಗ ನಡುವಿನ ಹಳ್ಳಿ ಕ್ರಾಸ ಹತ್ತಿರ ರೋಡಿನ ಮೇಲೆ ನನ್ನ ತಮ್ಮ ನಿತಿನನು ಸದರಿ ಕಾರನ್ನು ಅತೀ ವೇಗ ಮತ್ತು ಮತ್ತು ಅಜಾಗೃತೆಯಿಂದ ಚಲಾಯಿಸಿ ಪಲ್ಟಿ ಮಾಡಿದ್ದರಿಂದ ನನ್ನ ತಾಯಿ ಸರೋಜಾ ಇವಳಿಗೆ ಮೂಗಿನಿಂದ ಮತ್ತು ಬಾಯಿಯಿಂದ ರಕ್ತ ಬಂದು ದೇಹದ ಇತರೆ ಭಾಗಕ್ಕೆ ಚಿಕ್ಕ ಪುಟ್ಟ ಮತ್ತು ಭಾರಿ ರಕ್ತಗಾಯಗಳು ಆಗಿ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮದ್ಯದಲ್ಲಿ ಮೃತ ಪಟ್ಟಿರುತ್ತಾಳೆ. ಇನ್ನೂಳಿದ ನಮಗೂ ಕೂಡಾ ಚಿಕ್ಕ ಪುಟ್ಟ ಮತ್ತು ಭಾರಿ ರಕ್ತಗಾಯಗಳು ಆಗಿರುತ್ತವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ಶಾಂತಪ್ಪ ತಂದೆ ರಾಮಚಂದ್ರ ರೂಪನೂರ ಸಾ|| ದುತ್ತರಗಾಂವ ತಾ||ಆಳಂದ ಹಾ|||| ಬಾಲಗಂಧರ್ವ ಪೆಜಾಹಾರ್ಟ ಅವಿತಾ ಬ್ಯಾಂಕ್  ರಮಾರತ್ನ ಬಿಲ್ಡಿಂಗ್ ಪುಣೆ ಇವರು ಈಗ 20 ವರ್ಷಗಳಿಂದ ನಾನು ಪುಣೆಯಲ್ಲಿ ವಾಸವಾಗಿದ್ದು ಆಗಾಗ ನಮ್ಮ ಸ್ವಂತ ಗ್ರಾಮವಾದ ದುತ್ತರಗಾಂವಕ್ಕೆ ಬಂದು ಹೋಗುವದು ಮಾಡುತ್ತೇನೆ. ನಾನು ಈಗ ಸುಮಾರು 15 ದಿವಸಗಳ ಹಿಂದೆ  ದುತ್ತರಗಾಂವ ಗ್ರಾಮಕ್ಕೆ ಬಂದಿರುತ್ತೇನೆ. ದಿನಾಂಕ 06/11/2016 ರಂದು ಅಮಾವಾಸೆ ಇದ್ದ ಪ್ರಯುಕ್ತ ನಾನು ಘತ್ತರಗಾ ಗ್ರಾಮದಲ್ಲಿರುವ ಶ್ರೀ ಭಾಗ್ಯವಂತಿ ದೇವಿ ದರ್ಶನಕ್ಕಾಗಿ ನಮ್ಮ ಗ್ರಾಮದ ಕುಮಾರ ತಂದೆ ಪೀರಪ್ಪ ಭಜಂತ್ರಿ ಈತನ ಮೋಟಾರ ಸೈಕಲ ನಂ ಕೆಎ-01 ಇಎಲ್ -7683 ನೇದ್ದನ್ನು ತಗೆದುಕೊಂಡು ನಾನು ಹಾಗು ಕುಮಾರ ಇಬ್ಬರು ಸದರಿ ಮೋಟಾರ ಸೈಕಲ್ ಮೇಲೆ ಘತ್ತರಗಾ ಗ್ರಾಮಕ್ಕೆ ಬಂದಿರುತ್ತೇವೆ. ದೇವರ ದರ್ಶನ ಮಾಡಿಕೊಂಡು ಮರಳಿ ನಮ್ಮ ಊರಿಗೆ ಹೋಗಲು ಸಾಯಂಕಾಲ ಘತ್ತರಗಾದಿಂದ ಹೊರಟಿರುತ್ತೇವೆ ಆಗ ಕುಮಾರ ಮೋಟಾರ ಸೈಕಲ್ ನಡೆಸುತಿದ್ದು ನಾನು ಆತನ ಹಿಂದೆ ಕುಳಿತಿದ್ದೇನು. ನಾನು ಕುಮಾರನಿಗೆ ತುಂಬಾ ಆಯಾಸವಾಗಿದೆ ಅಫಜಲಪೂರದಲ್ಲಿ ವಸತಿ ಮಾಡೋಣ ಅಂತ ಅಂದಾಗ ಕುಮಾರ ಇತನು ಮುಂದೆ ಜಾಗ ಸಿಕ್ಕರೆ ವಸತಿ ಮಾಡಿ ಬೆಳಿಗ್ಗೆ ಹೋಗೊಣ ಅಂತ ಅಂದಾಗ  ಸಾಯಂಕಾಲ 7.30 ಗಂಟೆಯ ಸುಮಾರಿಗೆ ಅಫಜಲಪುರ ದಾಟಿ ಕಲಬುರಗಿ ರೋಡಿಗೆ ಇರುವ ಕಾರ್ಯದ ಲಕ್ಷ್ಮಿ ಗುಡಿ ಹತ್ತಿರ ಇಬ್ಬರು ವ್ಯಕ್ತಿಗಳು ಕುಳಿತಿದ್ದರು ನಾನು ಕುಮಾರನಿಗೆ ಇಲ್ಲೆ ನಿಲ್ಲಿಸು ಅಂತ ಅಂದಾಗ ಕುಮಾರ ಇತನು ಸದರಿ ವ್ಯಕ್ತಿಗಳಿಗೆ ನೋಡಿ ಇವರು ನನ್ನಗೆ ಪರಿಚಯದವರು ಇರುತ್ತಾರೆ ಅಂತ ಹೇಳಿ ಮೋಟಾರ ಸೈಕಲ್ ಇಲ್ಲಿಸಿದನು ನಂತರ ನಾವು ಅವರೊಂದಿಗೆ ಮಾತನಾಡುತ್ತಾ ಅವರಿಗೆ ಕುಮಾರನು ನನ್ನ ಪರಿಚಯ ಮಾಡಿಸಿದನು ಆಗ ನಾನು  ಅವರ ಹೆಸರು ವಿಚಾರಿಸಿದಾಗ 1) ಗಂಗಾಧರ ತಂದೆ ಭಿಮಶ್ಯಾ ಭಜಂತ್ರಿ ಸಾ||ಧುದನಿ ಹಾ|||| ತಾವರಗೇರಾ ತಾ||ಜಿ|| ಕಲಬುರಗಿ 2) ಸುರೇಶ ಪೂಜಾರಿ ಸಾ||ನಾಗೂರ ಹಾ||||ತಾವರಗೇರಾ ತಾ||ಜಿ|| ಕಲಬುರಗಿ ಅಂತ ಹೇಳಿ ಅಮವಾಸೆ ಪ್ರಯುಕ್ತ ಘತ್ತರಗಾ ಗ್ರಾಮ ದೇವರ ದರ್ಶನಕ್ಕೆ ಹೋಗಿದ ಬಗ್ಗೆ ಹೆಳಿದರು ಎಲ್ಲರು ಅಲ್ಲೆ ಮಾತನಾಡುತ್ತಾ ಗುಡಿಯ ಕಟ್ಟೆಯ ಮೇಲೆ ಮಲಗಿಕೊಂಡಿರುತ್ತೇವೆ ನಂತರ ನಾನು ಬೆಳಿಗ್ಗೆ 6.00 ಗಂಟೆ ಸುಮಾರಿಗೆ ಎದ್ದು ನೋಡಿದಾಗ ನನ್ನ ಬಲಕೈ ಬೆರಳುಗಳಲ್ಲಿ ಇದ್ದ ಒಂದು ತೊಲೆಯ(10 ಗ್ರಾಂ) ಒಂದು ಬಂಗಾರದ ಉಂಗುರ ಅ.ಕಿ 30,000/-ಇರಲಿಲ್ಲ ಗಾಬರಿಯಿಂದ  ನೋಡಲಾಗಿ ನಾನು ಕುಮಾರ ಇಬ್ಬರೆ ಇದ್ದು ಗಂಗಾಧರ ಹಾಗೂ ಸುರೇಶ ಇರಲಿಲ್ಲ. ನಮಗೆ  ಏನು ದಿಕ್ಕು ತೊಚದಂತಾಗಿ ನಮ್ಮ ಗ್ರಾಮಕ್ಕೆ ಹೋಗಿ ನಂತರ ತಡವಾಗಿ ಠಾಣೆಗೆ ಬಂದಿರುತ್ತೇನೆ . ದಿನಾಂಕ 06/11/2016 ರಂದು 9.30 ಪಿಎಮ್ ದಿಂದ ದಿನಾಂಕ 07/11/2016 ರಂದು 06.00 ಎಎಮ್ ಮದ್ಯದ ಅವದಿಯಲ್ಲಿ ನನ್ನ ಬಲಗೈ ಬೆರಳುಗಳಲಿದ್ದ ಒಂದು ತೊಲೆಯ(10 ಗ್ರಾಂ) ಬಂಗಾರದ ಒಂದು ಉಂಗುರ (ಅ.ಕಿ 30,000/-ರೂ) ಗಂಗಾಧರ ತಂದೆ ಭಿಮಶ್ಯಾ ಭಜಂತ್ರಿ ಹಾಗೂ ಸುರೇಶ ಪೂಜಾರಿ ಇವರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.