POLICE BHAVAN KALABURAGI

POLICE BHAVAN KALABURAGI

07 August 2016

Kalaburagi District Reported Crimes

ಹಲ್ಲೆ ಪ್ರಕರಣ :
ಕಮಲಾಪೂರ ಠಾಣೆ : ಶ್ರೀಮತಿ ಸಕ್ಕುಬಾಯಿ ಗಂಡ ಸುಭಾಷ ಇಟಿ ಸಾ:ಸೊಂತಗ್ರಾಮ ತಾ:ಜಿ:ಕಲಬುರಗಿ ರವರು. ದಿನಾಂಕ:18.04.2016 ರಂದು ಚಂದ್ರಪ್ಪ ಪೋಲಾ ಅಂಬರೀಷ ಕೋಡ್ಲಿ ಹಾಗೂ ಅರುಣ ಮುದ್ನಾಳ ಇವರು ಸಾಯಂಕಾಲದ ವೇಳೆಯಲ್ಲಿ ಸೊಂತ ಗ್ರಾಮದಲ್ಲಿ ನನಗೆ ಹೋಡೆಬಡೆ ಮಾಡಿದ್ದರಿಂದ ನಾನು ಅವರ ಮೇಲೆ ಕೇಸ ಮಾಡಿದ್ದು. ಅದೇ ವಿಷಯದಲ್ಲಿ ಅವರು ನನ್ನ ಸಂಗಡ ಕಾಲು ಕೆದರಿ ಜಗಳ ಮಾಡುತ್ತ ಬಂದಿದ್ದು.  ದಿನಾಂಕ:29.04.2016 ರಂದು ಮದ್ಯಾಹ್ನ ಸೊಂತ ಗ್ರಾಮದ ನನ್ನ ಮನೆಯ ಮುಂದೆ ಬಂದಾಗ ಅದೇ ವೇಳೆಗೆ ಚಂದ್ರಪ್ಪ ಪೋಲಾ ಅಂಬರೀಷ ಕೋಡ್ಲಿ ಮತ್ತು ಅರುಣ ಮುದ್ನಾಳ ಇವರು ಕೈಯಲ್ಲಿ ಬಡಿಗೆ ಮತ್ತು ಕಲ್ಲು ಹಿಡಿದುಕೊಂಡು ನನಗೆ ಏ ರಂಡೀ ಸಕ್ಕಿ ಸುಮ್ಮ ಸುಮ್ಮನೆ ನಮ್ಮ ಮೇಲೆ ಕೇಸ ಮಾಡತಿ ನಮ್ಮ ಮೇಲಿನ ಕೇಸ ವಾಪಸ್ಸ ತೆಗೆದುಕೋ ಅಂತಾ ಬೈಯುತ್ತ ಬಂದವರೆ ಚಂದ್ರಪ್ಪ ಇವನು ಬಡಿಗೆಯಿಂದ ನನ್ನ ತಲೆಯ ಮೇಲೆ ಹೋಡೆದನು. ಅಂಬ್ರೇಷ ಇವನು ನನ್ನ ತಲೆ ಕೂದಲು ಹಿಡಿದು ಏಳೆದಾಡಿ ಕಲ್ಲಿನಿಂದ ನನ್ನ ಹೆಡಕಿಗೆ ಹೋಡೆದನು. ಅರುಣ ಇವನು ನನ್ನ ಸೀರೆ ಬಿಚ್ಚಿ ನನಗೆ ಲಂಗಾದ ಮೇಲೆ ನಿಲ್ಲಿಸಿ ಅವಮಾನ ಮಾಡಿದನು. ನಂತರ ಚಂದ್ರಪ್ಪ ಇವನು ತನ್ನ ಕೈಯಲ್ಲಿನ ಬಡಿಗೆ ಬಿಟಾಕಿ ನನಗೆ ಕೋಲೆ ಮಾಡುವ ಉದ್ದೇಶದಿಂದ ನನ್ನ ಬಲಗೈ ಒಡ್ಡು ಮುರಿದು ತಿರುವಿ ನನ್ನ ಮುಖವನ್ನು ಗೋಡೆಗೆ ಒತ್ತುತ್ತಿದ್ದಾಗ ನನ್ನ ಕೈ ಪಟ್ಟನೆ ಮುರಿದಂತೆ ಶಬ್ದ ಕೇಳಿ ನಾನು ಅಂಜಿ ಚಿರಾಡುತ್ತಿದ್ದು ಅದೇ ವೇಳೆಗೆ ನನಗೆ ಹೋಡೆಯುತ್ತಿದ್ದನ್ನು ನಿಂತು ನೋಡುತ್ತಿದ್ದ ಶ್ಯಾಮರಾವ ಇಟಿ ಹಾಗೂ ಕೆಲಸ ಮುಗಿಸಿ ಮನೆಗೆ ಬರುತಿದ್ದ ನನ್ನ ಗಂಡ ಸುಭಾಷ ಇಟಿ ಇವರು ಬಂದು ನನಗೆ ಹೋಡೆಯುತ್ತಿದ್ದನ್ನು ಬಿಡಿಸುತ್ತಿದ್ದಾಗ ಚಂದ್ರಪ್ಪ ಪೋಲಾ ಇವನು ನನಗೆ ಏ ರಂಡೀ ನಮ್ಮ ಮ್ಯಾಲಿನ ಕೇಸ ವಾಪಸ್ಸ ತೆಗೆಯದಿದ್ದರೆ. ಮುಂದಿನ ಸಾರಿ ನಿನಗೆ ಕೋಲೆ ಮಾಡುತ್ತೇನೆ ಅಂತಾ ನನಗೆ ಜೀವ ಬೆದರಿಕೆ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪೆರೋಲ ರಜೆಯ ಮೇಲೆ ಹೋದ ಕೈದಿ ತಲೆಮರಿಸಿಕೊಂಡ ಪ್ರಕರಣ :
ಫರತಾಬಾದ ಠಾಣೆ : ಶಿಕ್ಷಾ ಬಂದಿ ಸಂಖ್ಯೆ 19162 ಸದಾನಂದ @ ಪಾಪು ತಂದೆ ಸುಭಾಷರಾವ ಎಂಬಾತನು ಕೇಂದ್ರ ಕಾರಾಗ್ರಹ ಕಛೇರಿಯ ಪತ್ರ ಸಂಖ್ಯೆ. ಕೇಕಾಗು/ಜೆ.ಸಿ-1/ಪೆರೋಲ್/1100/2014-15 ದಿನಾಂಕ 04/07/2016 ರ ಪ್ರಕಾರ ದಿನಾಂಕ 04/07/2016 ರಂದು 30 ದಿನಗಳ ಸಾಮಾನ್ಯ ಪೆರೋಲ್ ರಜೆಯ ಮೇಲೆ ಬಿಡುಗಡೆ ಮಾಡಲಾಗಿತ್ತು ಸದರಿ ಬಂದಿಯು ದಿನಾಂಕ 04/08/2016 ರಂದು ಬಂದು ಶರಣಾಗಬೇಕಾಗಿತ್ತು ಆದರೆ ಸದರಿ ಬಂದಿಯು ಕಾರಾಗ್ರಹಕ್ಕೆ ಶರಣಾಗದೆ ತಲೆ ಮರೆಸಿಕೊಂಡಿರುತ್ತಾನೆ ಸದರಿ ಬಂದಿಗೆ ಶ್ರೀ ಬಾಬುರಾವ ತಂದೆ ಖಂಡೆರಾವ ಸಾ:ಬಸವಕಲ್ಯಾಣ ತಾ:ಬಸವಕಲ್ಯಾಣ ಜಿ: ಬೀದರ ಇವರು ಜಾಮೀನುದಾರರಾಗಿರುತ್ತಾರೆ, ಸದರಿ ಬಂದಿಯು ಪೆರೋಲ್ ರಜೆಯ ಮೇಲೆ ಹೋಗಿ ತಲೆಮರಿಸಿಕೊಂಡಿರುವ ಕಾರಣ ಬಂದಿಯ ಮೇಲೆ ಮತ್ತು ಜಾಮೀನುದಾರನ ಮೇಲೆ ಪ್ರಕರಣ ದಾಖಲು ಮಾಡಿಕೊಂಡು ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಅಂತಾ ಶ್ರೀ ಎಮ್. ಸೋಮಶೇಖರ ಮುಖ್ಯ ಅಧೀಕ್ಷಕರು ಕೇಂದ್ರ ಕಾರಾಗ್ರಹ ಕಲಬುರಗಿ ಇವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

05 August 2016

Kalaburagi District Reported Crimes

ಮಟಕಾ ಜೂಜಾಟದಲ್ಲಿ ನಿರತವರ ಬಂಧನ :
ಫರತಾಬಾದ ಠಾಣೆ : ದಿನಾಂಕ. 04/08/2016 ರಂದು ಮದ್ಯಾಹ್ನ ಫರಹತಾಬಾದ  ಪೊಲೀಸ್ ಠಾಣಾ ವ್ಯಾಪ್ತಿಯ  ಹೊನ್ನಕಿರಣಗಿ ಗ್ರಾಮದಲ್ಲಿ ಒಬ್ಬ ಮನುಷ್ಯ ಕಾಬಾ ಕಾಂಪ್ಲೆಕ್ಸ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ಕುಳಿತುಕೊಂಡು ದೈವ ಲೀಲೆಯ ಮಟಕಾ  ಜೂಜಾಟದ ಅಂಕಿಗಳನ್ನು ಬರೆದುಕೊಳ್ಳುತ್ತಿದ್ದಾನೆ ಅಂತಾ ಖಚಿತ ಭಾತ್ಮಿ ಬಂದ ಮೇರೆಗೆ ಮಾನ್ಯ ಎಸ್.ಎಸ್. ಹೂಲ್ಲೂರ ಡಿಎಸ್.ಪಿ ಸಾಹೇಬರು ಡಿ.ಸಿ.ಆರ್.ಬಿ ಘಟಕ ಕಲಬುರಗಿ ಇವರ ಮಾರ್ಗದರ್ಶ ನದಲ್ಲಿ ಶ್ರೀ ಕಪಿಲದೇವ ಪಿಐ ಡಿಸಿಬಿ ಘಟಕ ಕಲಬುರಗಿ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಬಾತ್ಮೀ ಬಂದ ಸ್ಥಳವಾದ  ಹೊನ್ನಕಿರಣಗಿಗ್ರಾಮದ ಕಡೆಗೆ ಹೊರಟು  ಹೊನ್ನಕಿರಣಗಿ ಗ್ರಾಮ ತಲುಪಿದ ನಂತರ  ಸ್ವಲ್ಪ ದೂರದಲ್ಲಿ ಜೀಪನ್ನು ನಿಲ್ಲಿಸಿ ನಡೆದುಕೊಂಡು ಹೋಗಿ ಬಾತ್ಮೀ ಬಂದ ಸ್ಗಥಳದಿಂದ ಸ್ವಲ್ಪ ದೂರದಲ್ಲಿ ಮರೆಯಲ್ಲಿ ನಿಂತು ನೋಡಲಾಗಿ ಹೊನ್ನಕಿರಣಗಿ ಗ್ರಾಮದ ಕಾಬಾ ಕಾಂಪ್ಲಕ್ಸ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ಒಬ್ಬ  ಮನುಷ್ಯನು ಕುಳಿತು ಹೋಗಿ ಬರುವ ಜನರಿಗೆ 1 ರೂ.ಗೆ 80 ರೂ ಕೊಡುತ್ತೆನೆ ಅಂತಾ ಕೂಗುತ್ತಾ  ಜನರಿಂದ ಹಣವನ್ನು ಪಡೆದುಕೊಂಡು ದೈವಲೀಲೆಯ ಮಟಕಾ ಜೂಜಾಟದ ನಂಬರಗಳನ್ನು ಬರೆದುಕೊಳ್ಳುತ್ತಿರುವದನ್ನು ನೋಡಿ ಖಚಿತ ಪಡಿಸಿಕೊಂಡು ದಾಳಿ ಮಾಡಿದಾಗ ಮಟಕಾ ಅಂಕಿಗಳನ್ನು ಬರೆದುಕೊಳ್ಳುತ್ತಿದ್ದ ಮನುಷ್ಯನನ್ನು ಹಿಡಿದಿದ್ದು ಅಲ್ಲಿದ್ದ ಸಾರ್ವಜನಿಕರು ಓಡಿ ಹೋಗಿದ್ದು ಸದರಿ ವ್ಯಕ್ತಿಯನ್ನು ವಿಚಾರಿಸಿ ಚೆಕ್ಕ ಮಾಡಲಾಗಿ ಅವನು ತನ್ನ ಹೆಸರು ಸುಭಾಷ ತಂದೆ ಸಿದ್ದಪ್ಪ ಕೋಣಿನ ಸಾ:ಹೊನ್ನಕಿರಣಗಿ ಅಂತಾ ತಿಳಿಸಿದ್ದು, ಈತನಿಗೆ ನಾನು ಚೆಕ್ಕ ಮಾಡಿದಾಗ ಆತನ ಹತ್ತಿರ 1) ಮಟಕಾ ಅಂಕಿಯನ್ನು ಬರೆದುಕೊಂಡು ಸಂಗ್ರಹಿಸಿದ ನಗದು ಹಣ 4050/- ರೂ 2) ಒಂದು ಮಟಕಾ ಚೀಟಿ ಅ:ಕಿ:00=00 ರೂ, 3) ಒಂದು ಬಾಲ್‌ ಪೆನ್‌ ವಶಪಡಿಸಿಕೊಂಡು ಸದರಿಯವನೊಂದಿಗೆ ಫರತಾಬಾದ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.  
ಫರತಾಬಾದ ಠಾಣೆ : ದಿನಾಂಕ:04/08/2016 ರಂದು ಮದ್ಯಾಹ್ನ ಹೇರೂರ (ಬಿ) ಗ್ರಾಮದ ಲಕ್ಷ್ಮಿ ಗುಡಿಯ ಮುಂದಿನ ಸಾರ್ವಜನಿಕ ರಸ್ಥೆಯಲ್ಲಿ ಒಬ್ಬ ಮನುಷ್ಯನು ಕುಳಿತು ದೈವ ಲೀಲೆಯ ಮಟಕಾ ಜೂಜಾಟ ನಡೆಯಿಸುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ಶ್ರೀ ಪರಸಪ್ಪ ಎಸ್‌ ವನಂಜಕರ್‌‌ ಪಿಎಸ್ಐ ಸಾಹೇಬರು ಫರಹತಾಬಾದ ಪೊಲೀಸ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಹೇರೂರ (ಬಿ) ಗ್ರಾಮದ ಮಸೀದಿ ಸಮೀಪ ಮರೆಯಲ್ಲಿ ಜೀಪ್ ನಿಲ್ಲಿಸಿ ನೋಡಲಾಗಿ ಲಕ್ಷ್ಮಿ ಗುಡಿಯ ಹತ್ತಿರ ಸಾರ್ವಜನಿಕ ರಸ್ತೆಯ ಮೇಲೆ ಒಬ್ಬ ವ್ಯಕ್ತಿ ಕುಳಿತು ರಸ್ತೆಗೆ ಹೋಗಿ ಬರುವ ಜನರಿಗೆ 1 ರೂ ಗೆ 80 ರೂಪಾಯಿ ಗೆಲ್ಲಿರಿ ಭಾಗ್ಯಲಕ್ಷ್ಮಿ  ನಿಮ್ಮ ಮನೆಗೆ ಬರುತ್ತಿದ್ದಾಳೆ ಅಂತ ಜನರಿಂದ ಹಣವನ್ನು ಪಡೆದುಕೊಂಡು ದೈವಲೀಲೆಯ ಮಟಕಾ ಜೂಜಾಟದ ನಂಬರಗಳನ್ನು ಬರೆದುಕೊಳ್ಳುತ್ತಿರುವದನ್ನು ನೋಡಿ ಖಚಿತ ಪಡಿಸಿಕೊಂಡು ದಾಳಿ ಮಾಡಿ ಅವನಿಗೆ ಹಿಡಿದು ಸದರಿ ವ್ಯಕ್ತಿಯನ್ನು ಹಿಡಿದು ಹೆಸರು ವಿಚಾರಿಸಲಾಗಿ ತನ್ನ ಹೆಸರು ವಿಶ್ವನಾಥ  ತಂದೆ ಹುಲೆಪ್ಪ ಕುಕ್ಕನೂರ ಸಾ: ಹೇರೂರ (ಬಿ) ಅಂತಾ ತಿಳಿಸಿದ್ದು, ಈತನ ಅಂಗ ಶೋಧನೆ ಮಾಡಲಾಗಿ ಅವನ ಹತ್ತಿರ 1)ಒಂದು  ಅಂಕಿ ಸಂಖ್ಯೆ ಬರೆದ ಮಟಕಾ ನಂಬರ ಚೀಟಿ ಅ:ಕಿ:00=00 ರೂ, 2) ಒಂದು ಬಾಲ್‌ ಪೆನ್‌ ಅ:ಕಿ:00=00 ರೂ. 3) ಮಟಕಾ ಅಂಕಿಯನ್ನು ಬರೆದುಕೊಂಡಿದ್ದರ ನಗದು ಹಣ 1100=00 ರೂಪಾಯಿಗಗಳನ್ನು ವಶಪಡಿಸಿಕೊಂಡು ಸದರಿಯವನೊಂದಿಗೆ ಫರತಾಬಾದ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಪಘಾತ ಪ್ರಕರಣ :
ಫರತಾಬಾದ ಠಾಣೆ : ಶ್ರೀ ಬಿನು ಪ್ರಸಾದ ತಂದೆ ಕಾಮತ ಪ್ರಸಾದ ಸಾ : ಮೈನಾಪೂರ ಜಿ :ಗಾಜಿಪೂ  ಉತ್ತರಪ್ರದೇಶ ಶಹಾಬಾದ ಕ್ರಾಸ್ ಪಿಟಿಸಿಎಲ್ ಕಂಪನಿ ಇವರು ಒಂದು ವರ್ಷದಿಂದ ಮೈನ್ಸ ವರ್ಕ ಅಂತಾ ಕೆಲಸ ಮಾಡುತ್ತಿದ್ದು  ಇದೇ ಕಂಪನಿ ಉದ್ಯೋಗಿಯಾದ ಪ್ರೇಮರಾಜ ತಂದೆ ಆನಂದರಾವ ದಗೋಂಡಿ ಸಾ : ರಾಂಪೂರಿ ತಾ : ನರಖೇಡ ಜಿ : ನಾಗಪೂರ ಮಹಾರಾಷ್ಟ್ರ ಇವನು  ಇಂದು ರವಿವಾರ ರಜೆ ಇರುದರಿಂದ ನಮ್ಮ ಸುಪ್ರವೈಜರ ನನಗೆ ಹೋಗಿ ಬರುತ್ತೇನೆ ಅಂತಾ ಹೇಳಿ ತನ್ನ ಮೋಟಾರ ಸೈಕಲ ನಂ ಕೆಎ-32, ಓ- 124 ತೆಗೆದು 10 ಗಂಟೆಗೆ ಒಬ್ಬನೆ ಹೋಗಿದ್ದು ನಂತರ ನನಗೆ ಯಾರೋ ಒಬ್ಬರು ಫೋನ  ತಿಳಿಸಿದ್ದೆನೆಂದರೆ ನಿಮ್ಮ ಕಂಪನಿಯಲ್ಲಿ  ಕೆಲಸ ಮಾಡುತ್ತೀದ್ದ ಸೂಪರವೈಜರ  ಪ್ರೇಮರಾಜ  ಇತನು ಶಹಬಾದ ರೋಡ ಹತ್ತಿರ ತನ್ನ ಮೋಟಾರ ಸೈಕಲ ಮೇಲಿಂದ ಬಿದ್ದಿದ್ದು ನಂತರ ನಾನು  ಹೋಗಿ ನೋಡಲಾಗಿ ಅವನಿಗೆ  ತಲೆಗೆ ಭಾರಿ ರಕ್ತಗಾಯವಾಗಿದ್ದು ನಾನು  ಕೂಡಲೆ ಅವನಿಗೆ ಅಂಬುಲೈನ್ಸ್‌ 108 ದಲ್ಲಿ ಹಾಕಿ ವಾತ್ಸಲ್ಯ ಹಾಸ್ಪೀಟಲಗೆ ಕಲಬುರಗಿಗೆ ತಂದು ಸೇರಿಕೆ ಮಾಡಿದ್ದು ಶ್ರೀ ಪ್ರೇಮರಾಜ ತಂದೆ ಆನಂದರಾವ ದೊಂಗಡೆ ಇತನಿಗೆ ಹೆಚ್ಚಿನ ಚಿಕತ್ಸೆಗಾಗಿ ಆತನ ಮನೆಯವರು ನಾಗಪೂರಕ್ಕೆ ಕರೆದುಕೊಂಡು ಹೋಗಿ  ಸರ್ಕಾರಿ ಆಸ್ಪತ್ರೆ ನಾಗಪೂರದಲ್ಲಿ  ಸೇರಿಕೆ ಮಾಡಿರುತ್ತಾರೆ ಅಲ್ಲಿ ಸದರಿ ಗಾಯಾಳು ಚಿಕಿತ್ಸೆಯಲ್ಲಿ ಗುಣಮುಖನಾಗದೆ ದಿನಾಂಕ 23/07/2016  ರಂದು ಮದ್ಯಾನ್ಹ 04-00 ಗಂಟೆಗೆ ಮೃತಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

04 August 2016

Kalaburagi District Reported Crimes

ದರೋಡೆ ಮಾಡು ಪ್ರಯತ್ನ ಮಾಡುತ್ತಿದ್ದವರ ಬಂಧನ :
ಕಮಲಾಪೂರ ಠಾಣೆ : ದಿನಾಂಕ 03.08.2016 ರಂದು ಅಮವಾಸೆ ಇದ್ದ ಪ್ರಯುಕ್ತ ಠಾಣೆ ವ್ಯಾಪ್ತಿಯಲ್ಲಿ ವಿಶೇಷ ಪ್ರೇಟ್ರೊಲಿಂಗ್ ಕರ್ತವ್ಯ ನಿರ್ವಹಿಸುವ ಕುರಿತು ಬೆಳ್ಳಿಗ್ಗೆ 00:10 ಗಂಟೆಗೆ ನಾನು ಠಾಣೆಗೆ ಬಂದಾಗ ಖಚಿತ ಬಾತ್ಮಿ ಬಂದಿದ್ದೆನೆಂದರೆ, ಠಾಣಾ ವ್ಯಾಪ್ತಿಯ ಮರಗುತ್ತಿ ಕ್ರಾಸದಿಂದ ಸ್ವಲ್ಪ ಮುಂದೆ ಮರಗುತ್ತಿ ಕಡೆಗೆ ಹೋಗುವ ರೋಡಿನ ಪಕ್ಕದಲ್ಲಿ 5 ಜನರು ತಮ್ಮ ಮುಖಕ್ಕೆ ಕಪ್ಪು ಬಟ್ಟೆ ಕಟ್ಟಿಕೊಂಡು ಕೈಯಲ್ಲಿ ಮಾರಕಾಸ್ತ್ರಗಳನ್ನು ಹಿಡಿದುಕೊಂಡು ದರೋಡೆ ಮಾಡಲು ಹೊಂಚ್ಚು ಹಾಕಿ ಕುಳಿತಿರುವ ಬಗ್ಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ಕಮಲಾಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಬಾತ್ಮಿ ಸ್ಥಳವಾದ ಮರಗುತ್ತಿ ಕ್ರಾಸದಿಂದ ಸ್ವಲ್ಪ ಹಿಂದೆ ದೂರದಲ್ಲಿ ಎಲ್ಲರೂ ಕೂಡಿಕೊಂಡು ಯಾವುದೆ ಶಬ್ದ ಮಾಡದೆ ನಡೆದುಕೊಂಡು ಬೆಳ್ಳಿಗ್ಗೆ 1:30 ಗಂಟೆಗೆ ಮರಗುತ್ತಿ ಗ್ರಾಮದ ಕಡೆಗೆ ಹೋಗುವ ರಸ್ತೆ ಹತ್ತಿರ ಬಂದು ನೋಡಲು ಸದರಿ ರಸ್ತೆಯ ಪಕ್ಕದಲ್ಲಿ 4 ಜನರು ತಮ್ಮ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ರಸ್ತೆಯ ಪಕ್ಕದಲ್ಲಿ ಕುಳಿತ್ತಿದ್ದು ಅವರಲ್ಲಿ ಒಬ್ಬನು ಎದ್ದು ರಸ್ತೆಯ ಮೇಲೆ ಬಂದು ಯಾವುದಾದರು ವಾಹನ ಬರುತ್ತಿದೆ ಅಂತ ರಸ್ತೆಯ ಎರಡು ಕಡೆ ನೋಡಿ ಮತ್ತೆ ಅಲ್ಲೆ ಹೋಗಿ ಕುಳಿತ್ತಿದ್ದು. ಸದರಿಯವರು ದರೋಡೆ ಮಾಡಲು ಹೊಂಚ್ಚು ಹಾಕಿ ಕುಳಿತಿರುವದನ್ನು ಖಚಿತ ಪಡಿಸಿಕೊಂಡು ನಾನು ಮತ್ತು ಸಿಬ್ಬಂದಿಯವರು ಪಂಚರ ಸಮಕ್ಷಮ ದರೋಡ ಮಾಡಲು ಹೊಂಚು ಹಾಕಿ ಕುಳಿತವರ ಮೇಲೆ ಒಮ್ಮಲೆ ದಾಳಿ ಮಾಡಿ ಅವರನ್ನು ವಶಕ್ಕೆ ಪಡೆದುಕೊಂಡಿದ್ದು. ನಂತರ ಅವರ ಹೆಸರು ವಿಳಾಸ ವಿಚಾರಿಸಲು ಸದರಿಯವರು ತಮ್ಮ ಹೆಸರು 1) ಮುಸ್ಲಿಂ ಅಲಿ ತಂದೆ ಜೋಲಾವರ ಅಲಿ ಇರಾನಿ 2. ಲಾಲಾಬಾಬಾ ತಂದೆ ಬಾಬರ ಅಲಿ ಇರಾನಿ 3. ರಫೀಕ ಅಲಿ ತಂದೆ ಮನಸೂರ ಅಲಿ ಇರಾನಿ 4. ಗುಲಾಮ ಅಬ್ಬಾಸ ತಂದೆ ಪ್ರೈಯಿ ಅಲಿ ಇರಾನಿ 5. ಮುಕ್ತಾರ ಅಲಿ ತಂದೆ ರಫೀಕ ಅಲಿ ಇರಾನಿ ಸಾ: ಎಲ್ಲರು ಇರಾನಿಗಲ್ಲಿ ಬೀದರ ಅಂತಾ ತಿಳಿಸಿದ್ದು ಸದರಿಯವರ ಇರುವಿಕೆಯ ಬಗ್ಗೆ ಕೆಳಲಾಗಿ ಸದರಿಯವರು ಹೋಗಿ ಬರುವ ವಾಹನಗಳನ್ನು ತಡೆದು ದರೋಡೆಮಾಡಲು ಹೊಂಚುಹಾಕಿ ಕುಳಿತಬಗ್ಗೆ ಹೇಳಿದ್ದು ಸದರಿಯವರಿಂದ ಕೃತ್ಯಕ್ಕೆ ಬಳಸಿದ ಮುಖಕ್ಕೆ ಕಟ್ಟಿಕೊಳ್ಳುವ ಕಪ್ಪು ಬಟ್ಟೆಗಳು, ಚಾಕುಗಳು, ಚೂರಿ ತಲವಾರ, ಹಗ್ಗ, ಖಾರದಪುಡಿ, ಮತ್ತು ಬ್ಯಾಟರಿಯನ್ನು ವಶಪಡಿಸಿಕೊಂಡು ಸದರಿಯವರೊಂದಿಗೆ ಕಮಲಾಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಇಸ್ಪೀಟ ಜೂಜಾಟದಲ್ಲಿ ತೊಡಗಿದವರ ಬಂಧನ :
ಚೌಕ ಠಾಣೆ : ದಿನಾಂಕ 03.06.2016 ರಂದು ಸಾಯಂಕಾಲ ಠಾಣಾ ವ್ಯಾಪ್ತಿಯ ಕಟಗರಪೂರ ಶಹಾಬಜಾರದ ಹತ್ತೀರ ಸಾರ್ವಜನಿಕ ರಸ್ತೆಯ ಖುಲ್ಲಾ ಸ್ಥಳದಲ್ಲಿ ಕೆಲವು ಜನರು ಹಣವನ್ನು ಪಣಕ್ಕೆ ಹಚ್ಚಿ ಅಂದರ ಬಹಾರ ಎಂಬ ಧೈವಲೀಲೆ (ನಶೀಬಿನ) ಇಸ್ಪೇಟ ಜೂಜಾಟ ಆಡುತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಪಿ.ಐ. ಚೌಕ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಬಾತ್ಮಿಯಂತೆ ಕಟಗರಪೂರ ಶಹಾಬಜಾರದ ಹತ್ತೀರ ಇರುವ ಹನುಮಾನ ಗುಡಿಯ ಹತ್ತಿರ ಕಟಗರಪೂರ ಶಹಾಬಜಾರದ ಹನುಮಾನ ಗುಡಿ ಹತ್ತಿರ ಮರೆಯಾಗಿ ನಿಂತು ನೋಡಲು ಸದರಿ ಹನುಮಾನ ಗುಡಿ ಹತ್ತೀರದ ಖುಲ್ಲಾ ಬಯಲು ಜಾಗೆಯ ಮೇಲೆ 13-14 ಜನರು ಗುಂಪಾಗಿ ಕುಳಿತ ಹಣವನ್ನು ಪಣಕ್ಕೆ ಹಚ್ಚಿ ಏ ರಾಣಿ ಕೋ ಮೇರಾ ಪಾನಸೋ ರೂಪಿಯಾ, ಏ ಭಾಷಾ ಕೋ ಮೇರಾ ಹಜಾರ ರೂಪಿಯಾ ಅಂತಾ ಹೇಳುತ್ತಾ ಅಂದರ ಬಾಹರ ಎಂಬ ಇಸ್ಟೇಟ ಜೂಜಾಟ ಆಡುತ್ತಿರುವದನ್ನು ಖಚಿತ ಪಡಿಸಿಕೊಂಡು ಮೇಲೆ ದಾಳಿ ಮಾಡಿ ಒಟ್ಟು 14 ಜನ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದ ಆಸಾಮಿಗಳನ್ನು ಹಿಡಿದುಕೊಂಡು ಒಬ್ಬೊಬ್ಬರಂತೆ ಅವರ ಹೆಸರು ವಿಳಾಸ ವಿಚಾರಿಸಲು, 1) ಮೊದಲನೆಯವನು ತನ್ನ ಬಸವರಾಜ ತಂದೆ ಶಿವರಾಜ ಶಕಾಪೂರೆ ಸಾಃ ಮಹಾದೇವ ನಗರ ಶಹಾಬಜಾರ ಕಲಬುರಗಿ 2) ಸೈಯ್ಯದ ಸದಾð ತಂದೆ ಭಾಷಾಮಿಯ್ಯಾ ಸಾ: ಆದðಶ ನಗರ ಕಲಬುರಗಿ 3) ವಿಜಯಕುಮಾರ ತಂದೆ ಯುವರಾಜ ಮಿಶ್ರಾ ಸಾಃ ಬಾಲಾಜಿ ಗುಡಿ ಹತ್ತೀರ ಕಟಗರಪೂರ ಶಹಾಬಜಾರ ಕಲಬುರಗಿ 4) ಅಜಯ ತಂದೆ ಸುಭಾಷ ಠಾಕೂರ ಸಾ: ಕಟಗರಪೂರ ಶಹಾಬಜಾರ ಕಲಬುರಗಿ 5) ಅಂಬರೀಷ ತಂದೆ ಬಾಬುರಾವ ತಳವಾರ ಸಾಃ ಕಟಗರಪೂರ ಶಹಾಬಜಾರ ಕಲಬುರಗಿ 6) ಸುನಿಲಸಿಂಗ್ ತಂದೆ ವಿಷ್ಣುಸಿಂಗ್ ಠಾಕೂರ ಸಾಃ ಕಟಗರಪೂರ ಶಹಾಬಜಾರ ಕಲಬುರಗಿ 7) ಬಾಬುಸಿಂಗ ತಂದೆ ಮಾಣಿಕಸಿಂಗ್ ಠಾಕೂರ ಸಾಃ ಕಟಗರಪೂರ ಶಹಾಬಜಾರ ಕಲಬುರಗಿ 8) ಬಸವರಾಜ ತಂದೆ ಅಮೃತ ಹಾಗರಗಿ ಸಾಃ ಲಾಲ ಹನುಮಾನ ಗುಡಿ ಹತ್ತಿರ ಶಹಾಬಜಾರ ಕಲಬುರಗಿ 9) ಖಾಜಾಮೈನೋದ್ದೀನ  ತಂದೆ ಅಬ್ದೂಲ ಕರಿಂ ಜಿಲ್ಲೆ  ಸಾಃ ಮುಸ್ಲಿಂ ಚೌಕ ಹತ್ತಿರ ಕಲಬುರಗಿ 10) ಬಾಬುರಾವ್ ತಂದೆ ಮಾಣಿಕರಾವ್ ಕಮಲಾಪೂರಕರ್  ಸಾಃ ಛೋಟಾ ರೋಜಾ ಕಲಬುರಗಿ 11) ಮಹ್ಮದ ಖಾಲೀದ  ತಂದೆ ಮಹ್ಮದ ರಫೀಕ್ ಸಾಃ ಬಸವೇಶ್ವರ ಕಾಲೋನಿ ಕಲಬುರಗಿ 12) ಸೋನು ದುಬೆ  ತಂದೆ ಹರಿಶಂಕರ ದುಬೆ  ಸಾಃ ಕಟಗರಪೂರ ಶಹಾಬಜಾರ ಕಲಬುರಗಿ 13) ವೆಂಕಾಟಾಚೆಲ ತಂದೆ ಗುರುಬಸಪ್ಪಾ ಕುಂಬಾರ ಸಾಃ ಉಪಳಾಂವ 14) ಬಾಲುಸಿಂಗ್ ತಂದೆ ಲಕ್ಷಣಸಿಂಗ್ ಠಾಕೂರ ಸಾಃ ಬಾಲಾಜಿ ಗುಡಿ ಹತ್ತೀರ ಶಹಾಬಜಾರ ಕಲಬುರಗಿ ಅಂತಾ ತಿಳಿಸಿದ್ದು ಸದರಿಯವರಿಂದ ನಗದು ಹಣ  1,02,000/- ರೂ. 10 ಮೋಬೈಲಗಳ ಅಃಕಿಃ 6500/- & 04 ದ್ವಿ ಚಕ್ರ ವಾಹನಗಳು ಅಃಕಿಃ 50,000/- ಮತ್ತು 52 ಇಸ್ಪೇಟ ಎಲೆಗಳು ದೊರೆತಿದ್ದು, ಇಲ್ಲವೂ ಸೇರಿ ಒಟ್ಟು 1,58,500/- ಕೀಮ್ಮತ್ತೀನ ಮುದ್ದೇಮಾಲುಗಳನ್ನು ಜಪ್ತಿ ಪಡಿಸಿಕೊಂಡು ಸದರಿವರೊಂದಿಗೆ ಚೌಕ ಪೊಲೀಸ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಮಟಕಾ ಜೂಜಾಟದಲ್ಲಿ ತೊಡಗಿದವರ ಬಂಧನ :
ಫರತಾಬಾದ ಠಾಣೆ : ಫರಹತಾಬಾದ ಪೊಲೀಸ್ ಠಾಣೆಯ ವ್ಯಾಪ್ತಿಯ ಪೈಕಿ ಫರಹತಾಬಾದ ಗ್ರಾಮದ ಬಸ್ ನಿಲ್ದಾಣದ ಎದುರುಗಡೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ಮನುಷ್ಯನು ಕುಳಿತು ದೈವ ಲೀಲೆಯ ಮಟಕಾ ಜೂಜಾಟ ನಡೆಯಿಸುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ಮಾನ್ಯ ಎಸ್ ಎಸ್ ಹುಲ್ಲೂರ ಡಿಎಸ್ ಪಿ ಸಾಹೇಬರು ಡಿಸಿಆರ್ ಬಿ ಘಟಕ ಕಲಬುರಗಿ, ಮಾನ್ಯ ಕಪಿಲದೇವ ಪಿಐ ಡಿಸಿಬಿ ರವರ ಮಾರ್ಗದರ್ಶನದಲ್ಲಿ ಶ್ರೀ ವಿಠಲ ಗಾಜರೆ ಪಿ.ಎಸ್.ಐ. ಡಿ.ಸಿಬಿ. ಘಟಕ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಫರಹತಾಬಾದ ಬಸ್ ನಿಲ್ದಾಣದ ಹತ್ತಿರದ ಕಲಬುರಗಿ ಕಾಂಪ್ಲೆಕ್ಸ್ ಎದುರುಗಡೆ ನೋಡಲಾಗಿ ಒಬ್ಬ ವ್ಯಕ್ತಿ ಕುಳಿತು 1 ರೂ ಗೆ 80 ರೂಪಾಯಿ ಗೆಲ್ಲಿರಿ ಅಂತ ಜನರಿಂದ ಹಣವನ್ನು ಪಡೆದುಕೊಂಡು ದೈವಲೀಲೆಯ ಮಟಕಾ ಜೂಜಾಟದ ನಂಬರಗಳನ್ನು ಬರೆದುಕೊಳ್ಳುತ್ತಿರುವದನ್ನು ನೋಡಿ ಖಚಿತ ಪಡಿಸಿಕೊಂಡು ದಾಳಿ ಮಾಡಿ ಒಬ್ಬ ವ್ಯಕ್ತಿಯನ್ನು ಹಿಡಿದು ಸದರಿ ವ್ಯಕ್ತಿಯನ್ನು ವಿಚಾರಿಸಿ ಚೆಕ್ಕ ಮಾಡಲಾಗಿ ತನ್ನ ಹೆಸರು ಪ್ರದೀಪ ತಂದೆ ಸುರೇಶ ಕೊಟರಗಸ್ತಿ ಸಾ:ಫರಹತಾಬಾದ ಅಂತಾ ತಿಳಿಸಿದ್ದು, ಈತನ ಅಂಗ ಶೋಧನೆ ಮಾಡಲಾಗಿ ಅವನ ಹತ್ತಿರ 1) ಎರಡು ಮಟಕಾ ನಂಬರ ಬರೆದ ಚೀಟಿ ಅ:ಕಿ:00=00 ರೂ, 2) ಒಂದು ಬಾಲ್‌ ಪೆನ್‌ ಅ:ಕಿ:00=00 ರೂ. 3) ಮಟಕಾ ಅಂಕಿಯನ್ನು ಬರೆದುಕೊಂಡಿದ್ದರ ನಗದು ಹಣ 2420=00 ರೂಪಾಯಿಗಳುನ್ನು ವಶಪಡಿಸಿಕೊಂಡು ಫರತಾಬಾದ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.   
ಹಲ್ಲೆ ಪ್ರಕರಣ :

ಫರತಾಬಾದ ಠಾಣೆ : ಶ್ರೀ ಭೀಮಣ್ಣ ತಂದೆ ಅಂಬಾಜಿ ಲೋಕರೆ ಸಾ:ನಂದಿಕೂರ ದಿನಾಂಕ 02/08/2016 ರಂದು ರಾತ್ರಿ 08-30 ಗಂಟೆಯ ಸುಮಾರಿಗೆ ನಮ್ಮ ಮನೆಯ ಪಕ್ಕದ ಮನೆಯವನಾದ ಮಲ್ಲಯ್ಯ  ಪಾಣೆಗಾಂವ ಇತನು ನಮ್ಮ ಮನೆಯ ಮುಂದೆ ರೋಡಿನ ಮೆಲೆ ನಿಂತುಕೊಂಡು ಮೂತ್ರ ವಿಸರ್ಜನೆ ಮಾಡುತ್ತಿದ್ದಾಗ ನಾನು ಅವನಿಗೆ ಇಲ್ಲಿ ಎಕಿ ಮಾಡಿದರೆ ಹೇಗೆ ಇಲ್ಲಿ  ನಮ್ಮ ಮನೆ ಇದೆ, ಹೇಣ್ಣು ಮಕ್ಕಳು ಇರುತ್ತಾರೆ ಅಂತಾ ಅಂದಿದ್ದಕ್ಕೆ ಅವನು ನನಗೆ ಎ, ರಂಡಿ ಮಗನೆ ಈ ಜಾಗ ನಿನ್ನದಾದ  ಎನು ಅಂತಾ ಅಂದವನೆ ನನ್ನೋಂದಿಗೆ ಜಗಳಕ್ಕೆ ಬಿದ್ದು ಎದೆಯ ಮೇಲಿನ ಅಂಗಿ ಹಿಡಿದು ಜಗ್ಗಾಡಿ ಅಲ್ಲಿಯೇ ಬಿದ್ದಿದ್ದ  ಒಂದು ಕಲ್ಲನ್ನು ತೆಗೆದುಕೊಂಡು ನನ್ನ ತಕೆಗೆ ಹೊಡೆದು ರಕ್ತಗಾಯ ಮಾಡಿದನು ಆಗ ನಾನು ಚೀರಾಡುವದನ್ನು ಕೇಳಿ ಓಡಿ ನನ್ನ ಹೆಂಡತಿ  ಗೀತಾ ಮತ್ತು ನಮ್ಮ ಓಣಿಯ ತುಕಾರಾಮ ಡೊರ , ಸಿದ್ದು ಪೂಜಾರಿ ಇವರು ಬಂದು ನನಗೆ ಹೊಡೆಯುವದನ್ನು ಬಿಡಿಸಿರುತ್ತಾರೆ . ಆಗ ಸದರಿ ಮಲ್ಲಯ್ಯಾ ಪಾಣೆಗಾಂವ ಅಲ್ಲಿಂದ ಹೋಗುವಾಗ ಮಗನೆ ಇದೊಂದು ಸಲ ಉಳಿದಿ ಇನ್ನೊಂದು ಸಲ ಸಿಕ್ಕಾಗ ನಿನಗೆ ಜೀವ ಸಹಿತ ಬಿಡುವದಿಲ್ಲಾ  ಅಂತಾ ಜೀವದ ಬೆದರಿಕೆ ಹಾಕಿ ಹೊಗಿರುತ್ತಾನೆ. ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.