POLICE BHAVAN KALABURAGI

POLICE BHAVAN KALABURAGI

28 May 2016

Kalaburagi District Reported Crimes

ನ್ಯಾಯಾಲಯದಲ್ಲಿ ಬೆಂಕಿ ಹಚ್ಚಿದ್ದರಿಂದ ವಸ್ತಗಳು ಭಸ್ಮ :
ಅಫಜಲಪೂರ ಠಾಣೆ : ಶ್ರಿ ಗುರುಮೂರ್ತಿ ಆರ್.ಡಿ ಪ್ರಥಮ ದರ್ಜೆ ಸಹಾಯಕ ಪ್ರಭಾರಿ ನ್ಯಾಯಾಲಯ ಸೀರೇಸ್ತೆದಾರ ಮಾನ್ಯ ಸಿ.ಜೆ. ಮತ್ತು ಜೆ.ಎಮ್.ಎಫ್.ಸಿ ಕೋರ್ಟ ಅಫಜಲಪೂರ ನಮ್ಮ ನ್ಯಾಯಾಲಯ ಸೀರೇಸ್ತೇದಾರರಾದ ವೈ.ಕೆ ನಡವೀನಕೇರಿ ಇವರು ದಿನಾಂಕ 27-05-2016 ಮತ್ತು 28-05-2016 ರಂದು ಆಕಸ್ಮಿಕ ರಜೆ ಹಾಕಿದ್ದು ನನಗೆ ಪ್ರಭಾರ ವಹಿಸಿರುತ್ತಾರೆ. ನಾನು ದಿನಾಂಕ 27-05-2016 ರಂದು ರಾತ್ರಿ ನಮ್ಮ ಮನೆಯಲ್ಲಿ ನಾನು ಮಲಗಿದ್ದಾಗ ಅಫಲಪೂರ ಪೊಲೀಸ್ ಠಾಣೆಯ ಪಿಸಿ ಸಂತೋಷ ರವರು ನನ್ನ ಮೋಬಾಯಿಲಗೆ ಕರೆ ಮಾಡಿ ನಿಮ್ಮ ನ್ಯಾಯಾಲಯದಲ್ಲಿ ಬೆಂಕಿ ಹತ್ತಿಕೊಂಡಿದೆ ಬನ್ನಿ ಎಂದು ತಿಳಿಸಿದರು. ಆಗ ನಾನು ತಕ್ಷಣ ಕೋರ್ಟಿ ಬಂದು ನೋಡಲಾಗಿ ನಮ್ಮ ನ್ಯಾಯಾಲಯದ ಸೀಪಾಯಿ ಯಾದ ಅಶೋಕ ಸ್ಥಳದಲ್ಲಿ ಹಾಜರಿದ್ದು ನಾನು ಹೇಗೆ ಆಯಿತು ಎಂದು ಕೇಳಿದಾಗ ನನಗೆ ಗೊತ್ತಿಲ ಎಂದು ತಿಳಿಸಿದರು. ಆಗ ನಾನು ಮತ್ತು ಸೀಪಾಯಿ ಅಶೋಕ ಮತ್ತು ಸಿಪಿಸಿ ಸಂತೋಷ, ಸಿಪಿಸಿ ಅಕ್ತರಪಟೇಲ ಹಾಗೂ ಅಗ್ನಿ ಶಾಮಕದ ಸಿಬ್ಬಂದಿಗಳು ಸೇರಿಕೊಂಡು ಬೆಂಕಿಯನ್ನು ಆರೀಸಿದೇವು ತದನಂತರ ತಿಳಿದು ಬಂದ ವಿಷಯ ಏನೆಂದರೆ ನಮ್ಮ ನ್ಯಾಯಾಲಯದ ಆವರಣದಲ್ಲಿರುವ ಕ್ಯಾಂಟೀನಗೆ ನುಗ್ಗಿ ಸೀಲೇಂಡರ ತಗೆದುಕೊಂಡು ಬಂದು ನ್ಯಾಯಾಲಯದ ನ್ಯಾಯಾದೀಶ ಕೋಣೆ ಬಾಗಿಲನ್ನು ಮುರಿದು  ಒಳ ಪ್ರವೇಶಿಸಿದಾಗ ಯಾರೋ ದುಷ್ಕರ್ಮೀಗಳು ಸಿಲೇಂಡರ ಅನ್ನು ಸ್ಪೋಟಿಸಿ ಬೆಂಕಿ ಹಚ್ಚಿರುವುದು ಕಂಡು ಬಂದಿರುತ್ತೇ ಮತ್ತು ನ್ಯಾಯಾದೀಶರ ಕೋಣೆಯ ಎಲ್ಲಾ ವಸ್ತುಗಳು ಸುಟ್ಟು ಭಸ್ಮ ವಾಗಿರುತ್ತವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಕೊಲೆ ಪ್ರಕರಣ :
ಯಡ್ರಾಮಿ ಠಾಣೆ : ಶ್ರೀ ವೆಂಕಯ್ಯ ತಂದೆ ನೌಸಯ್ಯ ದೇವರಮನಿ ಸಾ:ಯಡ್ರಾಮಿ ರವರ ಹಿರಿಯ ಮಗ ಹಣಮಂತ ಇತನ ಹೆಂಡತಿ ಈಗ ಮೂರು ವರ್ಷಗಳಿಂದ ಹೊಟ್ಟೆಪಾಡಿಗಾಗಿ ಮಂಗಳೂರಿಗೆ ಹೋಗಿರುತ್ತಾಳೆ. ಅವರಿಗೆ ಮೂರು ಹೆಣ್ಣು ಮಕ್ಕಳು ಮತ್ತು ಮೂರು ಗಂಡು ಮಕ್ಕಳಿರುತ್ತಾರೆ. ಹಣಮಂತನ ಹಿರಿಯ ಮಗಳಾದ ರೇಣುಖಾ ಇವಳಿಗೆ ಹುಬ್ಬಳ್ಳಿಯ ಶ್ರೀನಿವಾಸ ಪೂಜಾರಿ ಎಂಬುವನಿಗೆ ಕೊಟ್ಟು ಮದುವೆ ಮಾಡಿರುತ್ತೇವೆ. ನನ್ನ ಮೊಮ್ಮಗಳಾದ ರೇಣುಖಾ ಇವಳು ತನ್ನ ಗಂಡನ ಮನೆಯಿಂದ ನಿನ್ನೆ ನಮ್ಮೂರಿಗೆ ಬಂದಿರುತ್ತಾಳೆ. ನನ್ನ ಮಗ ಹಣಮಂತನು ಒಬ್ಬಂಟಿಗ ಇದ್ದು, ಅಲ್ಲಿ ಇಲ್ಲಿ ಬೇಡಿಕೊಂಡು ಉಪಜಿವನ ಮಾಡುತ್ತಿದ್ದನು. ನನ್ನ ಮಗ ಹಣಮಂತ ಇತನು ರಾತ್ರಿ 9 ಗಂಟೆಗೆ ಮನೆಯಿಂದ ಹೋದವನು ಮರಳಿ ಮನೆಗೆ ಬಂದಿರುವದಿಲ್ಲ. ದಿನಾಂಕ: 27-05-16 ರಂದು ಬೆಳಗ್ಗೆ ನಾನು ಮತ್ತು ನನ್ನ ಹೆಂಡತಿ ಮನಯಲ್ಲಿದ್ದಾಗ ಓಣಿಯವರೆಲ್ಲರೂ ನಿನ್ನ ಮಗ ಹಣಮಂತನಿಗೆ ಯಾರೋ ಕೊಲೆ ಮಾಡಿ ಕೋಣಸಿರಸಗಿ ರಸ್ತೆಗೆ ಹೊಂದಿಕೊಂಡಿರುವ ಮಹೆಬೂಬ ಪಟೇಲ ಮೊರಟಗಿ ರವರ ಹೊಲದಲ್ಲಿ ಬಿಸಾಕಿರುತ್ತಾರೆ ಅಂತಾ ಹೆಳಿದ ಕೂಡಲೆ ನಾನು ಮತ್ತು ನನ್ನ ಹೆಂಡತಿ ಗಾಬರಿಗೊಂಡು ಸ್ಥಳಕ್ಕೆ ಹೋಗಿ ನೋಡಲಾಗಿ ನನ್ನ ಮಗನಿಗೆ ಯಾರೋ ಕೇಲವು ಜನರು ಅವನ ಕೊರಳಲ್ಲಿದ್ದ ಟಾವೆಲನಿಂದ ಕುತ್ತಿಗೆಗೆ ಬಿಗಿದು ಕೊಲೆ ಮಡಿರುತ್ತಾರೆ. ನಿನ್ನೆ ರಾತ್ರಿ 10 ಗಂಟೆಯಿಂದ ಬೆಳಗಿನ ಜಾವ 4 ಗಂಟೆ ಮಧ್ಯದ ಅವಧಿಯಲ್ಲಿ ಯಾರೋ , ಯಾವುದೋ ಉದ್ದೇಶಕ್ಕಾಗಿ ನನ್ನ ಮಗ ಹಣಮಂತನಿಗೆ ಕೊಲೆ ಮಾಡಿರುತ್ತಾರೆ.ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

27 May 2016

Kalaburagi District Reported Crimes

ಅಪಹರಣ ಮಾಡಿ ಅತ್ಯಾಚಾರ ಮಾಡಿದ ಪ್ರಕರಣ :
ಮಹಿಳಾ ಠಾಣೆ : ಶ್ರೀಮತಿ ಪುಷ್ಪಾವತಿ ಗಂಡ  ನರಸಿಂಗ ತಾಳಮಡಗಿ ಸಾ:ಚಂದಾಪೂರ ತಾ:ಚಿಂಚೋಳಿ ಇವರ ಮಗಳಾದ ಕುಮಾರಿ ಇವಳನ್ನು  ದಿನಾಂಕ 9-4-2016 ರಂದು 3 ಗಂಟೆಯ ಸುಮಾರಿಗೆ  ಕಾಲೇಜಿಗೆ ಹೋಗಿ ಬರುತ್ತೇನೆ ಅಂತಾ ಹೇಳಿ ಹೋದವಳು ಮರಳಿ ಮನೆಗೆ ಬಂದಿರುವುದಿಲ್ಲಾ. ಸವಿತಾ  ಓದುವ ದಿಶಾ ಕಾಲೇಜಿಗೆ ಹೋಗಿ ವಿಚಾರಿಸಿದ್ದು  ಕಾಲೇಜಿಗೆ ಬಂದಿರುವುದಿಲ್ಲಾ   ನಮ್ಮ ಸಂಬಂಧಿಕರಲ್ಲಿ ಎಲ್ಲಾ ಕಡೆ ಹುಡುಕಾಡಿದರೂ ಪತ್ತೆ ಆಗಿರುವುದಿಲ್ಲಾ  ನನ್ನ ಅಪ್ರಾಪ್ತ ವಯಸ್ಸಿನ ಮಗಳನ್ನು ಯಾರೋ ಅಪಹರಣ ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ದಿನಾಂಕ 26-05-2016 ರಂದು ಅಪಹರಣಕ್ಕೊಳಗಾದ ವಿದ್ಯಾರ್ಥಿಣಿ ಠಾಣೆಗೆ ಹಾಜರಾಗಿ ನನ್ನ ವಿದ್ಯಾಬ್ಯಾಸ ಸಲುವಾಗಿ ನಾನು ನನ್ನ ಅಕ್ಕ ಕೂಡಿ ಕಲಬುರಗಿಯ ಅಪ್ಪರ ಲೈನಗ ಸ್ಟೇಷನ ಬಜಾರ ಎರಿಯಾದಲ್ಲಿ ಬಾಡಿಗೆ ಮನೆ ಮಾಡಿಕೊಂಡು ಇರುತ್ತಿದ್ದು ಸುಮಾರು 6,7ತಿಂಗಳಿಂದ ನಾನು ಕಾಲೇಜಿಗೆ ಹೋಗುವಾಗ ಮತ್ತು ಮನೆಗೆ ಬರುವಾಗ ಶರಣು ಎಂಬುವ ಹುಡುಗ ನನ್ನ ಹಿಂದೆ ಹಿಂಬಾಲಿಸುವುದು.ನನಗೆ ಮಾತನಾಡಲು ಪ್ರಯತ್ನ ಮಾಡುತ್ತಿದ್ದನು.ಮತ್ತು ಆಗಾಗ ಶರಣು ಇತನು ನಾನು ನಿನಗೆ ತುಂಬಾ ಪ್ರೀತಿಸುತ್ತೇನೆ ನಿನಗೆ ಮದುವೆ ಮಾಡಿಕೊಳ್ಳುತ್ತೇನೆ ಅಂತಾ ಕೂಡ ಹೇಳುತ್ತಿದ್ದನು. ಆಗ ನಾನು ಅವನಿಗೆ ನೀನು ಹೀಗೆ ನನಗೆ ಸತಾಯಿಸಿದರೆ ನಮ್ಮ ತಂದೆ ತಾಯಿಗೆ ಹೇಳುತ್ತೇನೆ ಅಂತಾ ಕೂಡ ಹೇಳಿದ್ದು ಇರುತ್ತದೆ, ದಿನಾಂಕ; 09.04.2016 ರಂದು ಬೆಳಗ್ಗೆ 8 ಗಂಟೆಯ ಸುಮಾರಿಗೆ ನಾನು ಕಾಲೇಜಿಗೆ ಹೋಗಬೇಕು ಅಂತಾ ನಮ್ಮ ಮನೆಯಿಂದ ಹೊರಗಡೆ ಬಂದು ರೋಡಿನ ಹತ್ತಿರ ಆಟೋಗಾಗಿ ನಿಂತುಕೊಂಡಾಗ ಶರಣು ಇತನು ಅಲ್ಲಿಗೆ ಬಂದು ನಾನು ನಿನಗೆ ಪ್ರೀತಿಸುತ್ತೇನೆ ಅಂತಾ ಹೇಳಿದರು ನೀನು ನನ್ನ ಮಾತು ಕೇಳದೆ ನಿರಾಕರಿಸುತ್ತಿದ್ದಿಯಾ ಇವತ್ತು ನಿನಗೆ ಬಿಡುವದಿಲ್ಲ ಅಂತಾ ಅಂದವನೇ ತನ್ನ ಆಟೋ ಕೆಎ 32 ಬಿ 4021 ನೇದ್ದರಲ್ಲಿ ಕೂಡಿಸಿಕೊಂಡು ತಮ್ಮ ಗ್ರಾಮವಾದ ಸಿರನೂರ ಗ್ರಾಮಕ್ಕೆ ಕರೆದುಕೊಂಡು ಹೋಗಿದ್ದು ಆಗ ಅವರ ಮನೆಯಲ್ಲಿ ಯಾರು ಇರಲಿಲ್ಲ  ಆಗ ಶರಣು ಇತನು ನನಗೆ ಪ್ರೀತಿ ಮಾಡು ಅಂತಾ ಹೇಳಿದರೆ ನನ್ನ ಮಾತು ಕೇಳದೆ ನನಗೆ ನಿರಾಕರಿಸುತ್ತಿದ್ದಿಯಾ ಇವತ್ತು ನಿನಗೆ ಬಿಡುವದಿಲ್ಲ ಅಂತಾ ಹೇಳಿ ನನಗೆ ಹೆದರಿಸಿ ನನ್ನೊಂದಿಗೆ ಜಬರದಸ್ತಿಯಿಂದ ದೈಹಿಕ ಸಂಬೋಗ ಮಾಡಿದನು. ಆಗ ನಾನು ಅಳುತ್ತಾ ಕುಳಿತುಕೊಂಡಾಗ ಶರಣು ಇತನು ನನಗೆ ಅಲ್ಲಿಂದ ಕೇಂದ್ರ ಬಸ್ಸ ಸ್ಟ್ಯಾಂಡಿಗೆ ಕರೆದುಕೊಂಡು ಅಲ್ಲಿಂದ ಬಸ್ಸ ಮುಖಾಂತರ ಬಿಜಾಪೂರಕ್ಕೆ ಕರೆದುಕೊಂಡು ಹೋಗಿ ಅಲ್ಲಿಂದ ಮತ್ತೋಂದು ಬಸ್ಸ ಮುಖಾಂತರ ಕೊಲ್ಲಾಪೂರಕ್ಕೆ ಕರೆದುಕೊಂಡು ಹೋದನು. ಅಲ್ಲಿ ಸಿಯಾಪೇಠದ ಅವನ ತಂಗಿಯ ಮನೆಯಲ್ಲಿ ನನಗೆ ಇಟ್ಟಿರುತ್ತಾನೆ. ಅಲ್ಲಿಂದ ಇಲ್ಲಿಯವರೆಗೆ ನನಗೆ ಜಬರದಸ್ತಿಯಿಂದ ದೈಹಿಕ ಸಂಬೋಗ ಮಾಡಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

25 May 2016

Kalaburagi District Reported Crimes

ಅಪಹರಣ ಪ್ರಕರಣಗಳು :
ಗ್ರಾಮೀಣ ಠಾಣೆ : ಶ್ರೀ ಚಂದ್ರಕಾಂತ ತಂದೆ ಸಾಯಿಬಗೌಡ ಕನ್ನೂರ ಸಾ:ಅತನೂರ ತಾ:ಅಫಜಲಪುರ ಹಾವ: ಅಕ್ಕಮಹಾದೇವಿ ಕಾಲೋನಿ ಹೈಕೊರ್ಟ ಹತ್ತಿರ ಕಲಬುರಗಿ ಇವರ ದಿನಾಂಕ : 08-05-2016 ರಂದು ರಾತ್ರಿ ಅಪ್ರಾಪ್ತ ಮಗಳಾದ ಕುಃ ಬಸಮ್ಮ ವಯಾ|| 15ವರ್ಷ ಇವಳು ತನ್ನ ಮನೆಯ ಮುಂದೆ ನೀರು ತುಂಬಲು ಹೋದಾಗ ಆಪಾದಿತರಾದ 1) ನಾರಾಯಣ 2) ವಿಮಲಾಬಾಯಿ ಸಾ|| ಗಂಗಾ ನಗರ ಕಲಬುರಗಿ ಇವರೀಬ್ಬರೂ ಕುಃ ಬಸಮ್ಮ ಇವಳಿಗೆ ಜಬರದಸ್ತಿಯಿಂದ ಒತ್ತಾಯ ಪೂರ್ವಕವಾಗಿ ಮೋ.ಸೈ ಮೇಲೆ ಕೂಡಿಸಿಕೊಂಡು ಅಪಹರಣ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ನಿಂಬರ್ಗಾ ಠಾಣೆ : ಶ್ರೀ ಪರಶುರಾಮ ತಂದೆ ಕಲ್ಲಪ್ಪ ಜೋಗನ ಸಾ|| ಹಡಲಗಿ ಗ್ರಾಮ, ತಾ|| ಆಳಂದ ಇವರು ದಿನಾಂಕ 24/05/2016 ರಂದು ಹಡಲಗಿ ಗ್ರಾಮದಲ್ಲಿ ಶ್ರೀ ಯಲ್ಲಮ್ಮ ದೇವಿಯ ಜಾತ್ರಾ ಮಹೋತ್ಸದ ನಿಮಿತ್ಯ ಮತ್ತು ಗುಡಿ ಪೂಜಾರಿಕೆ ಚಾಜಾ ನಮ್ಮ ಹೆಸರಿಗೆ ಇರುವದರಿಂದ ನಾನು ಮತ್ತು ನನ್ನ ಹೆಂಡತಿಯಾದ ರೇಖಾ ಇಬ್ಬರೂ ಸಿಡಿ ಕಾರ್ಯಕ್ರಮ ನಿಮಿತ್ಯ ಅಂದಾಜ ಮಧ್ಯಾಹ್ನ 0230 ಗಂಟೆಗೆ ಗುಡಿಯ ಕಡೆಗೆ ಬಂದು ಸಿಡಿ ಕಾರ್ಯಕ್ರಮದಲ್ಲಿ ಇದ್ದು ಮನೆಯಲ್ಲಿ ನನ್ನ ಮಕ್ಕಳಾದ ರೇಣುಕಾ ವ|| 7 ವರ್ಷ, ರೋಹನ ವ|| 4 ವರ್ಷ, ರೋಹಿತ ವ|| 3 ವರ್ಷ, ಲಕ್ಷ್ಮಿ ವ|| 1 ವರ್ಷ ಇವರಷ್ಟೆ ಇದ್ದು, ನಾನು ಮತ್ತು ನನ್ನ ಹೆಂಡತಿ ಇಬ್ಬರೂ ಜಾತ್ರೆಯಲ್ಲಿ ಸಿಡಿ ಕಾರ್ಯಕ್ರಮ ಮುಗಿಸಿಕೊಂಡು ಅಂದಾಜ ಸಾಯಂಕಾಲ 0600 ಗಂಟೆಗೆ ಮನೆಗೆ ಹೋಗಿ ನೋಡಿದ್ದು ನನ್ನ ಮಗನಾದ ರೋಹಿತ ವ|| 3 ವರ್ಷ, ಇತನು ಕಾಣದೆ ಇದ್ದುದರಿಂದ ನಾನು ಮತ್ತು ನನ್ನ ಹೆಂಡತಿ ಗಾಬರಿಯಾಗಿ ನಮ್ಮ ಮನೆಯ ಹಿಂದೆ, ಹಡಲಗಿ ಗ್ರಾಮದ ಜಾತ್ರಾ ಸ್ಥಳದಲ್ಲಿ ಹುಡುಕಾಡಲಾಗಿ ನನ್ನ ಮಗ ರೋಹಿತ ವ|| 3 ವರ್ಷ, ಪತ್ತೆಯಾಗಿರುವುದಿಲ್ಲಾ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಜೇವರಗಿ ಠಾಣೆ : ಶ್ರೀ ಮಾಣಿಕ ರೆಡ್ಡಿ ತಂದೆ ಅಯ್ಯಪ್ಪಗೌಡ ಪಾಟೀಲ ಸಾಃ ದರ್ಶನಾಪೂರ ಇವರು ದಿನಾಂಕ 24.05.2016 ರಂದು ಮುಂಜಾನೆ ಕೆಲಸದ ನಿಮಿತ್ಯವಾಗಿ ನಾನು ನಮ್ಮೂರಿನಿಂದ ಕಲಬುರಗಿಗೆ ನನ್ನ ಗಳೆಯ ಸಂತೊಷ ರೆಡ್ಡಿ ನಡೆಸುವ ಕಾರ ನಂ ಕೆಎ- 28-ಎನ್-0864 ನೇದ್ದರಲ್ಲಿ ಕುಳಿತು ಕಲಬುರಗಿಗೆ ಬಂದು ಕೆಲಸ ಮುಗಿಸಿಕೊಂಡು ಕಲಬುರಗಿಯಿಂದ ಮರಳಿ ನಮ್ಮೂರಿಗೆ ಅದೇ ಕಾರಿನಲ್ಲಿ ಬರುತ್ತಿದ್ದೆನು ಕಾರನ್ನು ಸಂತೊಷ ರೆಡ್ಡಿ ಇತನು ನಡೆಸುತ್ತಿದ್ದನು. ಮದ್ಯಾಹ್ನ 2.30. ಗಂಟೆಯ ಸುಮಾರಿಗೆ ಚಿಗರಳ್ಳಿ ಕ್ರಾಸ್ ಸಮೀಪ್ ಜೇವರಗಿ ಶಹಾಪೂರ ರೊಡ ಮೇಲೆ ಸಂತೊಷನು ತನ್ನ ಕಾರನ್ನು  ಅತಿವೇಗ ಮತ್ತು ಅಲಕ್ಷತನದಿಂದ ನಡೆಯಿಸಿದ್ದರಿಂದ ಕಾರಿನ ಮುಂದಿನ ಟಯಾರ ಬಸ್ಟಯಾಗಿ ಕಾರು ಪಲ್ಟಿಯಾಗಿದ್ದರಿಂದ ಕಾರಿನಲ್ಲಿ ಕುಳಿತ ನನಗೆ ಬಾರಿ ಗಾಯವಾಗಿದ್ದು ಮತ್ತು ಕಾರ ಚಾಲಕನಿಗೂ ಗಾಯವಾಗಿದ್ದು ಕಾರಣ ಸದರಿ ಕಾರ ಚಾಲಕನ ವಿರುದ್ದ ಕಾನೂನು ಕ್ರಮ ಕೈಕೊಳಬೇಕು  ಅಂತ  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.