POLICE BHAVAN KALABURAGI

POLICE BHAVAN KALABURAGI

15 May 2016

Kalaburagi District Reported Crimes

ಕೊಲೆ ಪ್ರಕರಣ :
ಯಡ್ರಾಮಿ ಠಾಣೆ : ಶ್ರೀ ಶಾಂತಕುಮಾರ ತಂದೆ ಶಿವಣ್ಣ ಹವಾಲ್ದಾರ ಸಾ|| ಗೂಗಿಹಾಳ ತಾ|| ಜೇವರ್ಗಿ, ಹಾ|| || ಕಲಬುರ್ಗಿ ಇವರ ತಂದೆ ತಾಯಿಗೆ 1) ಶಿವಲೀಲಾ, 2) ಮಲ್ಲಣ್ಣ 3) ನಾನು 4) ಸಿದ್ರಾಮಪ್ಪ ಹೀಗೆ ಮಕ್ಕಳಿರುತ್ತೆವೆ. ನನ್ನ ಅಕ್ಕಳಾದ ಶಿವಲೀಲಾ ಇವಳೀಗೆ ಮದುವೆ ಮಾಡಿಕೊಟ್ಟಿದ್ದು ಅವಳು ತನ್ನ ಗಂಡನ ಮನೆಯಲ್ಲಿರುತ್ತಾಳೆ. ನನ್ನ ತಂದೆ ಇಗ ಸುಮಾರು 6-7 ವರ್ಷಗಳ ಹಿಂದೆ ಮೃತ ಪಟ್ಟಿದ್ದು ನಮ್ಮ ಹಿರಿಯ ಅಣ್ಣ ಮಲ್ಲಣ್ಣ ತನ್ನ ಹೆಂಡತಿ ಮಕ್ಕಳೊಂದಿಗೆ ಬೇರೆಯಾಗಿದ್ದು ನಾನು ನನ್ನ ತಮ್ಮ ಸಿದ್ರಾಮಪ್ಪ ಕೂಡಿಯೇ ಇರುತ್ತೆವೆ. ನನ್ನ ತಾಯಿಯೂ ಕೂಡ ನಮ್ಮ ಹತ್ತಿರ ಇರುತ್ತಾಳೆ. ನಾವು ಬೇರೆ-ಬೇರೆಯಾಗುವಾಗ ನಮ್ಮ ತಾಯಿ ಶರಣಮ್ಮಳಿಗೆ ಹಾಗು ನಮ್ಮ ಸೊಹದರ ಅತ್ತೆ ಮಾಹಾದೇವಿ ಇವರ ಉಪ ಜೀವನಕ್ಕಾಗಿ ತಲಾ ಎರಡು-ಎರಡು ಎಕರೆ ಹೊಲವು ಬಿಟ್ಟುಕೊಟ್ಟಿದ್ದು ಅವರು ಬಿದ್ದು ಹೋದ ನಂತರ ನಾವು ಮೂರು ಜನ ಅಣ್ಣ-ತಮ್ಮಂದಿರರು ಹಂಚಿಕೆ ಮಾಡಿಕೊಳ್ಳುವ ವಿಷಯ ಮಾತಾಡಿ ಬಿಟ್ಟುಕೊಟ್ಟಿರುತ್ತೆವೆ. ನಾನು ನನ್ನ ಮಕ್ಕಳ ವಿದ್ಯಾಬ್ಯಾಸಕ್ಕಾಗಿ ಕಲಬುರಗಿಯಲ್ಲಿ ಮನೆ ಮಾಡಿದ್ದು ಆಗಾಗ ನಾನು ನಮ್ಮ ಊರಿಗೆ ಬಂದು ಹೋಗುತ್ತೆನೆ. ಇಗ ಸದ್ಯ ನನ್ನ ಮಕ್ಕಳ ಶಾಲೆಗಳು ರಜೆ ಇರುವದಿಂದ 8 ದಿವಸಗಳ ಹಿಂದೆ ಊರಿಗೆ ಬಂದಿರುತ್ತೆನೆ. ನಮ್ಮ ತಾಯಿ ಮತ್ತು ಸೊಹದರ ಅತ್ತೆ ನಮ್ಮ ಹತ್ತಿರ ಇರುತ್ತಾರೆ. ಇಗ ಸುಮಾರು ಎರಡು ವರ್ಷಗಳಿಂದ ನನ್ನ ಅಣ್ಣ ಮಲ್ಲಣ್ಣ ಇತನು ತಾಯಿ ಹಾಗು ಸೋಹದರ ಅತ್ತೆಗೆ ಬಿಟ್ಟ ಹೊಲ ಎಲ್ಲರೂ ಹಂಚಿಕೊಳ್ಳೊಣ ಅಂತಾ ಅಂದಾಗ ನಮ್ಮೊಂದಿಗೆ ತಕರಾರು ಮಾಡುತ್ತಾ ನನ್ನ ತಾಯಿಯಾದ ಶರಣಮ್ಮ ಹಾಗು ಸೊಹದರ ಅತ್ತೆ ಮಹಾದೇವಿಗೆ  ಖಲಾಸ ಮಾಡಿಯೇ ಬಿಡುತ್ತೆನೆ ಆ ವೇಳೆಗೆ ಹೊಲ ತೆಗೆದುಕೊಳ್ಳುತ್ತೆನೆ. ಅಂತಾ ಹೇಳುತ್ತಾ ಬಂದಿರುತ್ತಾನೆ. ಆದರು ನನ್ನ ಅಣ್ಣ ಹಿಗೆಯೆ ಒದರಾಡುತ್ತಾನೆ ಅಂತಾ ನಾವು ಸುಮ್ಮನಿದ್ದೆವು. ದಿನಾಂಕ 13-05-2016 ರಂದು ರಾತ್ರಿ 9 ಗಂಟೆಯ ಸುಮಾರಿಗೆ ನಾನು ನನ್ನ ತಾಯಿ ಶರಣಮ್ಮ ಹಾಗು ನನ್ನ ತಮ್ಮ ಸಿದ್ರಾಮಪ್ಪ ಹಿಗೆಲ್ಲರೂ ಊಟ ಮಾಡಿ ಮನೆಲ್ಲಿದ್ದಾಗ ನಮ್ಮ ಅಣ್ಣ ಆತನ ಹೆಂಡತಿ ರೇಣುಕಾ, ಅವರ ಮಕ್ಕಳಾದ ರವಿಂದ್ರ ಮತ್ತು ವಿಶಾಲ ಇವರೆಲ್ಲರೂ ಕೂಡಿಕೊಂಡು ಮನೆಯ ಮುಂದೆ ಬಂದು ಅವರಲ್ಲಿ ಮಲ್ಲಣ್ಣ ಇತನು ಆ ಮೂದಿ ರಂಡಿ ಎಲ್ಲಿ ಇದ್ದಾಳೆ, ಅವಳಿಗೆ ಇಂದು ಖಲಾಸ ಮಾಡಿ ಆ ಹೊಲವನ್ನು ತೆಗೆದುಕೊಳ್ಳುತ್ತೆನೆಅಂತಾ ಬೈಯುತ್ತಿದ್ದಾಗ ನನ್ನ ತಾಯಿ ಹೊರಗೆ ಬಂದು ಯಾಕೆ ಬಯ್ಯುತ್ತಿದ್ದಿ ನಾನು ಸತ್ತ ನಂತರ ಆ ಹೊಲ ನಿಮಗೆ ಇರುತ್ತದೆ ಅಲ್ಲಾ, ಸತ್ತ ಮೇಲೆ ನಾನೆನು ಹೊಲ ತೆಗೆದುಕೊಂಡು ಹೋಗುತ್ತೆನೆ. ಅಂತಾ ಅನ್ನುತ್ತಿದ್ದಾಗ ಮಲ್ಲಣ್ಣ ಇತನು ಅಲ್ಲೆಯೇ ಬಿದ್ದ ಕಲ್ಲು ತೆಗೆದುಕೊಂಡು ಕೈ ಮುಷ್ಠಿಯಲ್ಲಿ ಹಿಡಿದು ನನ್ನ ತಾಯಿಯ ಎಡ ಮೆಲಕಿಗೆ ಜೋರಾಗಿ ಹೊಡೆದನು. ಆಗ ನನ್ನ ತಾಯಿ ಕೇಳಗೆ ಬಿಳಲು ಎಬ್ಬಿಸಲು ಹೊದಾಗ ನನಗೆ ನನ್ನ ಅಣ್ಣ ಮಲ್ಲಣ್ಣ ಇತನನು ಅದೆ ಕಲ್ಲಿನಿಂದ ನನ್ನ ಎಡ ಕಪಾಳಕ್ಕೆ ಮತ್ತು ಬಾಯಿಯ ಮೇಲೆ ಮತ್ತು ತೆಲೆಗೆ ಹೊಡೆದನು. ವಿಶಾಲ ಮತ್ತು ರವಿಂದ್ರ ಇಬ್ಬರು ನನಗೆ ಕೈಯಿಂದ ಹೋಡೆ-ಬಡೆ ಮಾಡಿರುತ್ತಾರೆ. ಅಲ್ಲದೆ ರೇಣುಕಾ ಇವಳು ಈ ಮೂದಿ ರಂಡಿಗಿ ಬಿಡಬ್ಯಾಡ್ರಿ ಖಲಾಸ ಮಾಡ್ರಿ”  ಅಂತಾ ಒದರಾಡುತ್ತಿದ್ದಳು. ಆಗ ನನ್ನ ತಮ್ಮ ಸಿದ್ರಾಮಪ್ಪ ನನ್ನ ಹೆಂಡತಿ ಮಮತಾ ತಮ್ಮ ಹೆಂಡತಿ ಅನಿತಾ ಅಲ್ಲಿಯೇ ಇದ್ದ ನಮ್ಮೂರಿನ ಅಶೋಕ ತಂದೆ ಚೆನ್ನಪ್ಪಗೌಡ, ಭೀಮರಾಯ ತಂದೆ ನಿಂಗಣ್ಣಗೌಡ, ಅಯ್ಯಣ್ಣಗೌಡ ತಂದೆ ಬಸವಂತ್ರಾಯಗೌಡ ಹೀಗೆಲ್ಲರೂ ಕೂಡಿಕೊಂಡು ಜಗಳವನ್ನು ಬಿಡಿಸಿಕೊಂಡರು ಆಗ ನನ್ನ ತಾಯಿಗೆ ನೋಡಲಾಗಿ, ಎಡ ಮೆಲಕಿಗೆ ಭಾರಿ ಪೆಟ್ಟಾಗಿ ಕಂದು ಗಟ್ಟಿದಂತೆ ಆಗಿದ್ದು ನನಗೂ ಮುಖಕ್ಕೆ ಗಾಯವಾಗಿದ್ದು ನನ್ನ ತಾಯಿಗೆ ಉಪಚಾರ ಕುರಿತು ನಾನು ನನ್ನ ತಮ್ಮ ಇಬ್ಬರೂ ಕೂಡಿಕೊಂಡು ಖಾಸಗಿ ವಾಹನದಲ್ಲಿ ತೆಗೆದುಕೊಂಡು ಇಜೇರಿ ಆಸ್ಪತ್ರೆಗೆ ಹೋಗುವಾಗ ನಮ್ಮೂರಿನ ಮುಖ್ಯೆ ರಸ್ತೆಯ ಕ್ರಾಸಿನ ಹತ್ತಿರ ರಾತ್ರಿ 10 ಗಂಟೆಗೆ ಮೃತ  ಪಟ್ಟಿರುತ್ತಾಳೆ  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀ ಮಹಮ್ಮದ ಇರ್ಪಾನ ತಂದೆ ಮಹಮ್ಮದ ಇಸ್ಮಾಯಿಲ್ ಶೇಖ ಸಾ:ನೂರ ಇಲಾಹಿ ಮಜೀದ ಹತ್ತಿರ ಮಿಲತ್ತ ನಗರ ಕಲಬುರಗಿ ಇವರು  ಇಬ್ರಾಹಿಂ ಇತನ ಹತ್ತಿರ  ತೆಗೆದುಕೊಂಡ ಸಾಲದ ಹಣ ಕೊಡದೇ ಇದುದ್ದಕ್ಕೆ ಅದೇ ಉದ್ದೇಶದಿಂದ ಇಬ್ರಾಹಿಂ ತಂದೆ ಸಲಿಂಸಾಬ, ಮತ್ತು ಟಿಪ್ಪು ತಂದೆ ಸಿಕಂದರ ಹಾಗು ಇನ್ನು ಇಬ್ಬರು ಕೂಡಿಕೊಂಡು ಬಂದು ನಡೆದುಕೊಂಡು ಹೋಗುತ್ತಿದ್ದ ಫಿರ್ಯಾದಿದಾರನಿಗೆ ತೆಡೆದು ನಿಲ್ಲಿಸಿ ಅವಾಚ್ಯವಾಗಿ ಬೈಯ್ದು ಕೊಡಲಿಯಿಂದ ಎಡ ಹೊಟ್ಟೆಯ ಕೆಳೆಗೆ ಸೊಂಟದ ಹತ್ತಿರ ಹೊಡೆದು ಭಾರಿ ರಕ್ತಗಾಯಗೊಳಿಸಿ ಕೊಲೆ ಮಾಡಲು ಪ್ರಯತ್ನಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕಲರಣ ದಾಖಲಾಗಿದೆ.
ಕಳವು ಪ್ರಕರಣಗಳು :
ನಿಂಬರ್ಗಾ ಠಾಣೆ : ದಿನಾಂಕ 14/05/2016 ರಂದು 0015 ಗಂಟೆಯಿಂದ 0615 ಗಂಟೆಯ ಮಧ್ಯದ ಅವಧಿಯಲ್ಲಿ ಯಾರೋ ಕಳ್ಳರು ಫಿರ್ಯಾದಿಯ ಕಿರಾಣಿ ಅಂಗಡಿಯ ಬಾಗಿಲಿನ ಬೀಗ ಮುರಿದು ಒಳಗೆ ಹೋಗಿ ಅದರಲ್ಲಿದ್ದ ನಗದು ಹಣ 9000/-, ಒಂದು ಹಣ ಇಟ್ಟಿದ್ದ ಹುಂಡಿ ಮತ್ತು ಕಿರಾಣಾ ವಸ್ತುಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ, ಅಂತಾ ಶ್ರೀ ದೇವಾನಂದ ತಂದೆ ಗುರುಭೀಮ ವಚ್ಚೆ ವ, ಸಾ|| ಯಳಸಂಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಫಜಲಪೂರ ಠಾಣೆ : ಶ್ರೀ ಸುಭಾಶ್ಚಂದ್ರ ತಂದೆ ಶಿವಶರಣಪ್ಪಾ ಪಾಟೀಲ ಸಾ : ಅಫಜಲಪೂರ ರವರು  6-7 ವರ್ಷಗಳ ಹಿಂದೆ ಅಫಜಲಪೂರ ಪಟ್ಟಣದ ರೇವಣಸಿದ್ದೇಶ್ವರ ಕಾಲೋನಿಯಲ್ಲಿ ಮನೆ ಕಟ್ಟಿ ಅಲ್ಲೆ ನಾನು ಮತ್ತು ನನ್ನ ಹೆಂಡತಿಯಾದ ಸುಜಾತಾ ಹಾಗೂ ಮಕ್ಕಳಾದ ಸುಜಯ ಹಾಗೂ ಸುಶಾಂತ ಇವರೊಂದಿಗೆ ವಾಸವಾಗಿರುತ್ತೇನೆ, ನನ್ನ ಹೆಂಡತಿ ಮನೆಯಲ್ಲಿದ್ದ ಟ್ರಜರಿಯಲ್ಲಿ ಬಂಗಾರದ ಸಾಮಾನುಗಳು ಇಟ್ಟಿರುತ್ತಾಳೆ. ಈಗ ಬೆಸಿಗೆ ರಜೆ ಇದ್ದರಿಂದ ಮೂರು ದಿನಗಳ ಹಿಂದೆ ನನ್ನ ಹೆಂಡತಿ ಮತ್ತು ಮಕ್ಕಳು ನಮ್ಮ ಸ್ವಂತ ಊರಾದ ಮಲ್ಲಾಬಾದಕ್ಕೆ ಹೋಗಿರುತ್ತಾರೆ. ಇಂದು ದಿನಾಂಕ 13-05-2016 ರಂದು ಮದ್ಯಾಹ್ನ 12:30 ಗಂಟೆ ಸುಮಾರಿಗೆ ನಾನು ನನ್ನ ಸ್ವಂತ ಕೆಲಸದದ ಪ್ರಯುಕ್ತ ಮನೆಯ ಬಾಗಿಲುಗಳನ್ನು ಮುಚ್ಚಿ ಕಿಲಿ ಹಾಕಿ ಹೊರಗಡೆ ಹೋಗಿರುತ್ತೇನೆ. ಮರಳಿ ಸಾಯಂಕಾಲ 5:30 ಗಂಟೆ ಸುಮಾರಿಗೆ ಮನೆಗೆ ಬಂದು, ಮನೆಯ ಒಳಗೆ ಹೋದಾಗ ನಮ್ಮ ಮನೆಯ ಬೆಡ್ ರೂಮಿನಲ್ಲಿರುವ ಟ್ರಜರಿಯಲ್ಲಿದ್ದ ಸಾಮಾನಾಗುಳೆಲ್ಲವು ಚೆಲ್ಲಾ ಪಿಲ್ಲಿಯಾಗಿ ಹೊರಗೆ ಬಿದ್ದಿದ್ದವು. ಆಗ ನಾನು ಗಾಬರಿಯಾಗಿ ಆಕಡೆ ಈಕಡೆ ನೋಡಲು ನಮ್ಮ ಮನೆಯ ಹಿತ್ತಲು ಬಾಗಿಲದ ಚಿಲಕ ಉಚ್ಚಿತ್ತು. ಹಾಗೂ ಅಲ್ಲೆ ಬಾಜು ಇದ್ದ ಬಾತ್ ರೂಮಿಗೆ ಇದ್ದ ಕಿಡಕಿಯ ಗ್ಲಾಸ ಸಹ ಉಚ್ಚಿತ್ತು, ನಂತರ ನಾನು ಟ್ರಜರಿಯಲ್ಲಿಟ್ಟಿದ್ದ ಬಂಗಾರದ ಸಾಮಾನುಗಳನ್ನು ನೋಡಲು 2 ತೊಲೆ ಬಂಗಾರದ ಸಾಮಾನುಗಳನ್ನು ಯಾರೊ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಅ ಸ್ವಾಭಾವಿಕ ಸಾವು ಪ್ರಕರಣ :
ಗ್ರಾಮೀಣ ಠಾಣೆ : ಶ್ರೀ ಸಿದ್ದೇಶ ತಂದೆ ಅಣ್ಣರಾವ ಕೋಡ್ಲೆ ಸಾ;ಶಹಾಬಜಾರ ಕಲಬುರಗಿ ಇವರು ತಾಜಸುಲ್ತಾನಪೂರ ಸೀಮಾಂತರದ ವಿಶ್ವರಾಧ್ಯ ಗುಡಿಯ ಪಕ್ಕದ ಆಳಂದ ರೋಡಿನ ಬದಿಗೆ  ವೇರ ಹೌಸ ಕಡೆಗೆ ಹೋಗುವಾಗ ಕೆ.ಇ.ಬಿ.ಟ್ರಾನ್ಸಫಾರಂ  ಚಾಲರಿಯಲ್ಲಿ ಒಬ್ಬ ಅಪರಿಚಿತ ವ್ಯಕ್ತಿಯ ಹೆಸರು ವಿಳಾಸ ಗೊತ್ತಾಗಿರುವದಿಲ್ಲಾ ವಯಸ್ಸು ಅಂದಾಜು 55-60 ವರ್ಷದವನಿದ್ದು ಬಡಕಲು ಶರೀರ ಹೊಂದಿದ್ದು ,ಎತ್ತರ 5 ಫೀಟ , 6 ಇಂಚು ಇದ್ದು , ಸಾಧಗಪ್ಪು ಮೈಬಣ್ಣ ಹೊಂದಿದ್ದು , ಮೈ ಮೇಲೆ  ನೀಲಿ ಬಣ್ಣದ ಅಂಡರವಿಯರ ಮಾತ್ರ ಇದ್ದು , ಸದರಿಯವನು  ಅಶಕ್ತನಾಗಿದ್ದು, ಬಿಸಿಲಿನಲ್ಲಿ  ಹಸುವಿನಿಂದ, ಮಲಗಿದ ಸ್ಥಳದಲ್ಲಿಯೇ  ದಿನಾಂಕ.12-5-2016 ರಂದು ರಾತ್ರಿ 9-00 ಗಂಟೆಯಿಂದ ದಿನಾಂಕ. 13-5-2016 ರಂದು ಮದ್ಯಾನ 2-30 ಪಿ.ಎಂ.ದ ಮದ್ಯಾದ ಅವಧಿಯಲ್ಲಿ ಮೃತ ಪಟ್ಟಂತೆ ಕಂಡು ಬಂದಿರುತ್ತದೆ. ಸದರಿ ವ್ಯಕ್ತಿಯ ಹೆಸರು ವಿಳಾಸ ಗೊತ್ತಾಗಿರುವದಿಲ್ಲಾ ,ಆದುದರಿಂದ ಸದರಿ ವ್ಯಕ್ತಿಯ ಅಪರಿಚಿತನಾಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಹರಣ ಪ್ರಕರಣ :
ಸುಲೆಪೇಟ ಠಾಣೆ : ಶ್ರೀ ಸಣ್ಣರಾಮಪ್ಪ ತಂದೆ ಲಕ್ಷ್ಮಯ್ಯ ಗುಂಜೇರ ಸಾಃ ಕರ್ಚಖೇಡ ಇವರು, ದಿನಾಂಕ 30/04/2016 ರಂದು ಮನೆಯಲ್ಲಿ ನನ್ನ ಹೆಂಡತಿಯಾದ ಯಂಕಮ್ಮಾ ಇವಳಿಗೆ ಆರಾಮ ಇರದ ಕಾರಣ ನನ್ನ ಮಗಳಾದ ರೇಖಾ ತಂದೆ ಸಣ್ಣರಾಮಪ್ಪಾ ಗುಂಜೇರ ವಃ 19 ವರ್ಷ ಜಾಃ ವಡ್ಡರ ಸಾಃ ಕರ್ಚಖೇಡ ಇವಳು ಚಿತ್ತಾಪುರದಿಂದ ನಮ್ಮ ಊರಿಗೆ ಬಂದಿದ್ದಳು . ದಿನಾಂಕಃ 10/05/2016 ರಾತ್ರಿ 11:00 ಗಂಟೆಯ ಸುಮಾರಿಗೆ ಎಲ್ಲರೂ ಮನೆಯಲ್ಲಿ ಊಟ ಮಾಡಿ ಮಲಗಿಕೊಂಡೇವು . ನನಗೆ ರಾತ್ರಿ ಎಚ್ಚರವಾದಾಗ ನನ್ನ ಮಗಳಾದ ರೇಖಾ ತಂದೆ ಸಣ್ಣರಾಮಪ್ಪಾ ಗುಂಜೇರ ವಃ 19 ವರ್ಷ ಜಾಃ ವಡ್ಡರ ಸಾಃ ಕರ್ಚಖೇಡ ಇವಳು  ಮನೆಯಲ್ಲಿ ಕಾಣಿಸಲಿಲ್ಲ ಆಗ ನಾನು ನನ್ನ ಹೆಂಡತಿಗೆ ಎಬ್ಬಿಸಿ ವಿಚಾರಿಸಲು  ಅವಳು ಕೂಡ ಗಾಬರಿಯಾಗಿ ಎದ್ದಳು . ನಂತರ ನಾವಿಬ್ಬರೂ ಕೂಡಿ ರಾತ್ರಿ ವೇಳೆಯಲ್ಲಿ ಓಣಿ ಹಾಗೂ ಊರೊಳಗೆ ಹುಡುಕಾಡಿದರೂ ಕಾಣಿಸಲಿಲ್ಲಾ . ನಮಗೆ ಸಂಶಯ ಇರುವುದೆನೆಂದರೆ ನಮ್ಮ ಮಗಳು ಚಿತ್ತಾಪೂರದಲ್ಲಿ ಇದ್ದಾಗ ನಮ್ಮ ಸಂಭಂದಿಕನಾದ ತಿಮ್ಮಾ @ ತಿಮ್ಮಾರೆಡ್ಡಿ ತಂದೆ ಹಣಮಂತ ವಾಡಿ ಸಾಃ ವಡ್ಡರಗಲ್ಲಿ ವಂಟಿಕಮಾನ ಹತ್ತಿರ ಚಿತ್ತಾಪೂರ ಇತನು ಅವಳಿಗೆ ಮದುವೆ ಮಾಡಿಕೊಳ್ಳುತ್ತೇನೆ ಅಂತ ಚಿತ್ತಾಪೂರದಲ್ಲಿ ಅಂದ ಬಗ್ಗೆ ನಮ್ಮ ಮಗಳು ನನ್ನ ಮುಂದೆ ತಿಳಿಸಿದ್ದಳು. ಅದರಿಂದ ಆತನು ಕೂಡ ಕರ್ಚಖೇಡ ಗ್ರಾಮಕ್ಕೆ ದಿನಾಂಕಃ 09/05/2016 ರಂದು ಊರಿಗೆ ಬಂದಿದ್ದನು ನಮ್ಮ ಮಗಳು ಹೋದ ದಿವಸದಿಂದಲೇ ಆತನು ಕೂಡ ಕರ್ಚಖೆಡ ಗ್ರಾಮದಲ್ಲಿ ಹಾಗೂ ಚಿತ್ತಾಪೂರದಲ್ಲಿ ಕಾಣಿಸುತ್ತಿಲ್ಲಾ . ಆದ್ದರಿಂದ ನಮ್ಮ ಮಗಳಾದ ರೇಖಾ ಇವಳಿಗೆ ತಿಮ್ಮಾ @ ತಿಮ್ಮಾರೆಡ್ಡಿ ತಂದೆ ಹಣಮಂತ ವಾಡಿ ಸಾಃ ವಡ್ಡರಗಲ್ಲಿ ವಂಟಿಕಮಾನ ಹತ್ತಿರ ಚಿತ್ತಾಪೂರ ಇತನೇ ಅಪಹರಿಸಿಕೊಂಡು ಹೋಗಿರುತ್ತಾನೆ ಅಂತ  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸುಲೆಪೇಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

14 May 2016

Kalaburagi District Reported Crimes

ಮಣ್ಣು ಕುಸಿದು ಬಿದ್ದು ಕುಲಿ ಕಾರ್ಮಿಕರಿಗೆ ಗಾಯವಾದ ಪ್ರಕರಣ :
ದೇವಲಗಾಣಗಾಪೂರ ಠಾಣೆ : ಶ್ರೀ ಶರಣಬಸಪ್ಪ ಜೋಗುರು ಸಾ : ಅವರಳ್ಳಿ ಇವರು ಬಂದರವಾಡ ಗ್ರಾಮದ ಓಗಪ್ಪ ತಂದೆ ಮಲ್ಲಪ್ಪ ಹಿರೇಪೂಜಾರಿ ಇವರ ಹೊಲದಲ್ಲಿ ಹಾಳು ಬಾವಿಯಲ್ಲಿ ತೋಡುವ ಸಲುವಾಗಿ ನನ್ನ ತಾಯಿ ಷಣ್ಮುಕಮ್ಮ ಮತ್ತು ದುಂಡಪ್ಪ ತಂದೆ ಮಲಪ್ಪ ಬಂದರವಾಡ, ಶರಣಪ್ಪ ಜೋಗುರ, ಗುರುಪ್ಪ ತಂದೆ ಜೆಟ್ಟೆಪ್ಪ ಜೋಗುರು ಭಾಗಪ್ಪ ತಂದೆ ಮಲಕಪ್ಪ ಶ್ಯಾದಿಪೂರ, ಬಸಪ್ಪ ತಂದೆ ಮಲಕಪ್ಪ ಶ್ಯಾದಿಪೂರ ಎಲ್ಲರೂ ಕೂಡಿ ಹೋಗಿದ್ದು ದಿನಾಂಕ:12-05-2016 ರಂದು ಸಾಯಂಕಾಲ 4:00 ಗಂಟೆ ಸುಮಾರಿಗೆ ಓಗಪ್ಪ ಇವರ ಹೊಲದಲ್ಲಿಯ ಬಾವಿ ತೋಡುವ ಕೆಲಸ ಮಾಡುತ್ತಿರುವಾಗ ಬಾವಿಯ ಮಣ್ಣು ಮತ್ತು ಕಟಗು ಮೇಲಿಂದ ಕಡಿದು ಬಿದ್ದ ಪ್ರಯುಕ್ತ ನನಗೆ ಎಡಗಾಲು ಮುರಿದಿರುತ್ತದೆ. ಮೊಲಕಾಲಿಗೆ ಬಾರಿ ಗಾಯವಾಗಿರುತ್ತದೆ. ಅಲ್ಲದೆ ದುಂಡಪ್ಪ ತಂದೆ ಮಲಕಪ್ಪ ಬಂದರವಾಡ ಸಾ||ಅವರಳ್ಳಿ ಈತನಿಗೆ ಎರಡು ಕಾಲು ಮುರಿದಿದ್ದು ಕಿವಿಗೆ ಭಾರಿ ಗಾಯವಾಗಿ ರಕ್ತ ಬರುತ್ತಿತ್ತು ಬಲಗಡೆ ಟೊಂಕಕ್ಕೆ ಬಾರಿ ಗಾಯವಾಗಿರುತ್ತದೆ. ಮಾತನಾಡುವ ಸ್ತೀತಿಯಲ್ಲಿ ಇರಲ್ಲಿಲ್ಲ. ಮತ್ತು ಶರಣಪ್ಪ ತಂದೆ ಜೆಟ್ಟೆಪ್ಪ ಇವನಿಗೂ ಸ್ವಲ್ಪ ಗಾಯವಾಗಿರುತ್ತದೆ. ಆಸ್ಪತ್ರೆಗೆ ಬಂದಿರುವುದಿಲ್ಲ. ನಂತರ ನಮಗೆ ಓಗಪ್ಪ ಹಾಗೂ ಗಂಗಪ್ಪ ಭೂತಾಳಿ, ಹಾಗೂ ನಮ್ಮ ಜೊತೆ ಕೆಲಸಕ್ಕೆ ಬಂದ ಗುರಪ್ ಇವರ ಮಣ್ಣಿನಿಂದ ಹೊರಗೆ ತೆಗೆದು ಉಪಚಾರ ಕುರಿತು ಆಸ್ಪತ್ರೆಗೆ ತಂದು ಸೇರಿಕೆ ಮಾಡಿರುತ್ತಾರೆ. ಓಗಪ್ಪನು ಹಳಯ ಬಾವಿ ಅಂತಾ ತಿಳಿದು ನಮಗೆ ದಿನಕ್ಕೆ 300/- ಕೊಡುವುದಾಗಿ ಹೇಳಿ ಕೆಲಸಕ್ಕೆ ಕರೆದು ಅವನ ಅಲಕ್ಷತನದಿಂದ ಈ ಘಟನೆ ನಡೆದಿರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ದೇವಲಗಾಣಗಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣಗಳು :
ಗ್ರಾಮೀಣ ಠಾಣೆ : ದಿನಾಂಕ 12/05/16 ರಂದು ರಾತ್ರಿ 10-45 ಗಂಟೆ ಸುಮಾರಿಗೆ ತನ್ನ  ಯಾವುದೋ ಕೆಲಸದ ಕುರಿತು ಹಿರೋಹೊಂಡಾ ಸ್ಪ್ಲೇಂಡರ್ ಮೋಟಾರ್ ಸೈಕಲ್  ನಂ. ಕೆಎ 32-ಇಜಿ-6300 ನೇದ್ದರ ಮೇಲೆ ಕೆರಿಭೋಸಗಾ ಕಡೆಗೆ ಹೋಗಿ ಮರಳಿ ಕಲಬುರಗಿ ಕಡೆಗೆ ಬರುವಾಗ ಮೃತ  ಅಮರನಾಥ ಇತನು ತನ್ನ ವಶದಲ್ಲಿದ್ದ ಮೋಟಾರ್ ಸೈಕಲನ್ನು ಅತಿವೇಗದಿಂದ ಮತ್ತು ನಿಸ್ಕಾಳಿಜಿತನದಿಂದ ನಡೆಸಿಕೊಂಡು ಬಂದು ಆಳಂದ ಚೆಕಪೋಸ್ಟ ಹತ್ತಿರ ಇರುವ ಕೃಷಿ ವಿಶ್ವವಿದ್ಯಾಲಯದ ಎದರುಗಡೆ ರೋಡಿನ ಬದಿಗೆ ನಿಂತಿದ್ದ ಲಾರಿ ನಂ. ಎಮ್.ಹೆಚ್-12-ಹೆಚ್.ಸಿ-2188 ನೇದ್ದಕ್ಕೆ ಹಿಂದುಗಡೆ ಅಪಘಾತ ಪಡಿಸಿದ್ದರಿಂದ ಅಮರನಾಥನ  ತಲೆಗೆ, ಭಾರಿ ರಕ್ತಗಾಯ, ಎಡಗಣ್ಣಿಗೆ ಭಾರಿ ಗುಪ್ತಗಾಯವಾಗಿ ರಕ್ತ ಸ್ರಾವವಾಗಿ , ಅಲ್ಲದೆ ಎಡಭುಜಕ್ಕೆ , ಎದೆಗೆ , ಹೊಟ್ಟೆಯ ಮೇಲ್ಭಾಗಕ್ಕೆ, ಭಾರಿ ಕಂದುಗಟ್ಟಿದ್ದು ಗಾಯಗಳಾಗಿದ್ದು, ಆತನಿಗೆ ಉಪಚಾರ ಕುರಿತು ಜಿಲ್ಲಾ ಸರಕಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿದ್ದು ಅಲ್ಲಿಂದ ಹೆಚ್ಚಿನ ಉಪಚಾರ ಕುರಿತು ಯುನೈಟೆಡ್ ಆಸ್ಪತ್ರೆ ಕಲಬುರಗಿಯಲ್ಲಿ ಸೇರಿಕೆ ಮಾಡಿದ್ದು, ಸದರಿ ಅಮರನಾಥನು  ರಸ್ತೆ ಅಪಘಾತದಲ್ಲಿ ಆದ ಗಾಯಗಳ ಉಪಚಾರ ಪಡೆಯುವ ಕಾಲಕ್ಕೆ ಉಪಚಾರದಲ್ಲಿ ಗುಣಮುಖ ಹೊಂದದೆ ಮೃತಪಟ್ಟಿರುತ್ತಾನೆ ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ಧಾಖಲಾಗಿದೆ.
ಮಾಡಬೂಳ ಠಾಣೆ : ಶ್ರೀಮತಿ ಗೀತಾ ಗಂಡ ಸಂಜೀವಕುಮಾರ ಸಾ : ಝಳಕಿ ಕೆ ಇವರ ಗಂಡ  ಈಗ ಸುಮಾರ 5 ತಿಂಗಳಿಂದ ಕಲಬುರಗಿಯ ಘಯಾಜ ಇವರ ಲಾರಿ ನಂ ಕೆಎ-32 -1811 ನೇದ್ದರ ಮೇಲೆ ಚಾಲಕ ಅಂತಾ ಕೆಲಸ ನಿರ್ವಹಿಸಿಕೊಂಡಿದ್ದು. ಹೀಗಿದ್ದು ಫಿರ್ಯಾಧಿ ಗಂಡ ಇಂದು ದಿನಾಂಕ-12/05/2016 ರಂದು ಬೆಳ್ಳಿಗೆ 10 ಗಂಟೆ ಸುಮಾರಿಗೆ ಕಲಬುರಗಿಯಿಂದ ಲಾರಿ ಲೊಡ ಮಾಡಿಕೊಂಡು ಸೇಡಂಕ್ಕ ಹೋಗಿ ಬರುವುದಿದೆ ಅಂತಾ ಹೇಳಿ ಹೊರಟು ಮೃತನು ಕಲಬುರಗಿಯಿಂದ ತಾನು ಚಲಾಯಿಸುತ್ತಿದ್ದ ಲಾರಿ ನಂ ಕೆಎ-32 ಎ-1811 ನೇದ್ದನ್ನು ಚಲಾಯಿಸಿಕೊಂಡು ಸಡಂಕ್ಕೆ ಹೊರಟು ಗುಂಡಗುರ್ತಿ ತಾಂಡಾ ದಾಟಿ ಸ್ವಲ್ಪ ದೂರದಲ್ಲಿ ಕಲಬುರಗಿಯಿಂದ ಸೇಡಂಕ್ಕೆ ಹೋಗುವ ರಾಜ್ಯ ಹೆದ್ದಾರಿಯ ಮೇಲೆ ಹೋಗುತ್ತಿರುವಾಗ ಆ ವೇಳೆಯಲ್ಲಿ ಮಳೆ ಬರುತ್ತಿದ್ದು ಸಮಯ 5 ಪಿ.ಎಮ್ ಸುಮಾರಿಗೆ ಮೃತನು ತನ್ನ ಲಾರಿಯನ್ನು ಅತಿ ವೇಗ ಹಾಗೂ ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗುತ್ತಿರುವಾಗ ಲಾರಿಯ ಹಿಂದಿನ ಟೈರ ಒಮ್ಮೆಲೆ ಪಂಚರ ಆದ ಪರಿಣಾಮ ಲಾರಿ ನಿಯಂತ್ರಣ ತಪ್ಪಿದಾಗ ಮೃತನು ಒಮ್ಮೆಲೆ ಲಾರಿಯಿಂದ ಕೆಳಗೆ ಜಿಗಿಯಲು ಆಯ ತಪ್ಪಿ ತನ್ನ ಲಾರಿಯ ಹಿಂದಿನ ಟೈರನಲ್ಲಿ ಸಿಲಿಕಿ ತೆಲೆಗೆ ಹಾಗೂ ಮುಖಕ್ಕೆ ಭಾರಿ ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು ಸದರಿ ಘಟನೆಯನ್ನು ರೊಡಿನ ಮೇಲೆ ಹೋಗಿ ಬರುವರಲ್ಲಿನ ಒಬ್ಬರನ್ನು ನೋಡಿ ಮೃತ ಮೋಬೈಲನಿಂದ ಮೃತನ ಹೆಂಡತ್ತಿಗೆ ಘಟನೆ ಬಗ್ಗೆ ತಿಳಿಸಿ ಮತನಿಗೆ ಜಿಜಿಹೆಚ್ ಕಲಬುರಗಿಗೆ ಅಂಬುಲೈಸ್ನನಲ್ಲಿ ಹಾಕಿ ಕಳಿಸುತ್ತಿರುವುದಾಗಿ ತಿಳಿಸಿದ ಮರಗೆ ಮೃತನ ಹೆಂಡತ್ತಿ ಹಾಗೂ ತಾಯಿ ಮೃತನ ತಮ್ಮ ಆಸ್ಪತ್ರೆಗೆ ಬಂದು ನೋಡಲು ಮೃತನಿಗ ತೆಲ ಭಾರಿ ರಕ್ತಗಾಯವಾಗಿ ಮೃತ ಪಟ್ಟಿದ್ದು ಸದರಿ ಫಿರ್ಯಾಧಿ ಗಂಡನ ಈ ಘಟನಯನ್ನು ತನ್ನ ನಿರ್ಲಕ್ಷತನದಿಂದ ಜರುಗಿ ಮೃತ ಪಟ್ಟಿರುತ್ತಾನ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಡಬೂಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಜೇವರಗಿ ಠಾಣೆ : ಕುಮಾರಿ ನಜಮಾ ಬೇಗಂ ತಂದೆ ನಬಿ ಪಟೇಲ್ ಗುಂಜೋಟಿ ಸಾ|| ಮದರಿ ಇವರು ದಿನಾಂಕ 12.05.16 ರಂದು ಮುಂಜಾನೆ ಟ್ಯೂಷನ್ ಸಲುವಾಗಿ ಜೇವರಗಿಗೆ ಬಂದು ಟ್ಯೂಷನ್ ಮುಗಿಸಿಕೊಂಡು ಸಾಯಂಕಾಲದ ಸಮಯದಲ್ಲಿ ನನ್ನ ಮಾವ ಜಾನುಮೀಯಾ ಈತನ ಮೊಟಾರು ಸೈಕಲ್ ನಂ ಕೆ.ಎ32 ಇಜಿ1142 ನೇದ್ದರ ಹಿಂದಿನ ಸಿಟಿನಲ್ಲಿ ಕುಳಿತುಕೊಂಡು ನಮ್ಮೂರಿಗೆ ಹೋಗುತ್ತಿದ್ದಾಗ ಸಾಯಂಕಾಲ 4 ಗಂಟೆಯ ಸುಮಾರಿಗೆ ಜೇವರಗಿ ಕಲಬುರಗಿ ಮೇನ್‌ ರೋಡ ಕೋಳಕೂರ ಕ್ರಾಸ್ ಹತ್ತಿರ ರೋಡಿನಲ್ಲಿ ಹೋಗುತ್ತಿದ್ದಾಗ ನಮ್ಮ ಮಾವ ತನ್ನ ಮೋಟಾರು ಸೈಕಲ್‌ಅನ್ನು ಅತಿ ವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಹೋಗುತ್ತಿದ್ದಾಗ ಅದೇ ವೇಳೆಗೆ ಕಲಬುರಗಿ ಕಡೆಯಿಂದ ಒಬ್ಬ ಪಲ್ಸರ್‌ ಮೋಟಾರು ಸೈಕಲ್‌ ಸವಾರನು ತನ್ನ ಮೋಟಾರು ಸೈಕಲ್‌ ಅನ್ನು ಅತೀ ವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ಒಬ್ಬರಿಗೊಬ್ಬರು ಸೈಡ್‌ ಕೊಡದೆ ಮುಖಾಮುಖಿಯಾಗಿ ಡಿಕ್ಕಿ ಪಡಿಸಿದ್ದರಿಂದ ಎಲ್ಲರು ಮೋಟಾರು ಸೈಕಲ್‌ದೊಂದಿಗೆ ಕೇಳಗೆ ಬಿದ್ದೆವು. ನಾನು ಸಾವಕಾಶವಾಗಿ ಎದ್ದು ನೋಡಲಾಗಿ ನನ್ನ ಬಲಗಾಲಿಗೆಗುಪ್ತಗಾಯ ಮತ್ತುಬಲಗಾಲಿನ ಬೆರಳಿಗೆ ರಕ್ತಗಾಯವಾಗಿದ್ದು. ನಂತರ ನಮ್ಮ ಮಾವನಿಗೆನೋಡಲಾಗಿ ಅವನ ಬಲಗಾಲ ಬೆರಳಿಗೆ ರಕ್ತಗಾಯವಾಗಿದ್ದು ನಂತರ ಪಲ್ಸರ್‌ ವಾಹನ ಸವಾರನಿಗೆ ನೋಡಲಾಗಿ ಅವನ ತಲೆಗೆ ರಕ್ತ ಮತ್ತು ಗುಪ್ತಗಾಯವಾಗಿದ್ದು ಎಡಭುಜಕ್ಕೆ ನೋಡಲಾಗಿ  ಬಲಗೈಬೆರಳಿಗೆ, ಬಲಗಾಲಿನ ಬೆರಳುಗಳಿಗೆ ಗಾಯವಾಗಿದ್ದು ಅವನ ಹೆಸರನ್ನು ವಿಚಾರಿಸಲಾಗಿ ಉದಯಕುಮಾರ ತಂದೆ ಧೂಳಪ್ಪ ಸಾ|| ಕಲಬುರಗಿ ಅಂತ ತಿಳಿಸಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ಧಾಖಲಾಗಿದೆ.
ವರದಕ್ಷಣೆ ಕಿರುಕಳ ನೀಡಿ ಕೊಲೆ ಮಾಡಿದ ಪ್ರಕರಣ :
ಮಹಿಳಾ ಠಾಣೆ : ಶ್ರೀ ನಾಗಯ್ಯ ತಂದೆ ಶಿವಲಿಂಗಯ್ಯ ಮಠಪತಿ ಸಾ:ಶ್ರೀನಿವಾಸ ಸರಡಗಿ ತಾ:ಜಿ: ಕಲಬುರಗಿ ಇವರ ಮಗಳಾದ ಶಾಂತಲಾ ಇವಳಿಗೆ ಒಂದು ವರ್ಷ 6 ತಿಂಗಳ ಹಿಂದೆ ಶಿವಲಿಂಗಯ್ಯ ತಂದೆ ಶಿವಾನಂದ ಸ್ವಾಮಿ ಇವರ ಜೊತೆ ಮದುವೆ ಮಾಡಿಮ ಕೊಟ್ಟಿರುತ್ತೇವೆ. ಮದುವೆ ಸಮಯದಲ್ಲಿ 2 ವರೆ ತೊಲೆ ಬಂಗಾರ 51.000/- ರೂಪಾಯಿ ಹಣ ಬಟ್ಟೆ ಮನೆಗೆ ಬೇಕಾದ ಸಾಮಾನುಗಳು ಕೊಟ್ಟಿರುತ್ತೇವೆ ಮದುವೆಯಾದ ನಂತರ ಸುಮಾರು 2 ತಿಂಗಳು ನನ್ನ ಮಗಳು ಚೆನ್ನಾಗಿದ್ದು ಅಲ್ಲಿಂದ ಇಲ್ಲಿಯವರೆಗೆ ನನ್ನ ಮಗಳಿಗೆ ಅವಳ ಗಂಡ ಅತ್ತೆ ಮಾವ ಮತ್ತು ನಾದಿನಿ ಇವರು ಕಿರುಕುಳ ಕೊಡುತ್ತಲೇ ಇದ್ದಾರೆ. ಹಾಗೆ ಪ್ರತಿಯೊಂದು ಕೆಲಸಕ್ಕೆ ನಿನಗೆ ಸರಿಯಾಗಿ ಕೆಲಸ ಮಾಡಲು ಬರುವದಿಲ್ಲ ನಿನಗೆ ಅಡುಗೆ ಚೆನ್ನಾಗಿ ಮಾಡಲು ಬರುವದಿಲ್ಲ, ನಿನಗೆ ಯಾವುದೇ ವಿಷಯ ಗೊತ್ತಿರುವದಿಲ್ಲ ಎನ್ನುತ್ತಾ ಕಿರುಕುಳ ಕೊಡುತ್ತಿದ್ದರು. ಹಾಗೆಯೇ ನನ್ನ ಅಳಿಯ ಯಾವಾಗಲು ಹೊಡೆ ಬಡೆ ಮಾಡುತ್ತಿದ್ದನು. ನನ್ನ ಮಗಳು ಎಲ್ಲಾ ಕಷ್ಟ ಸಹಿಸುತ್ತಿದ್ದಳು. ಪ್ರತಿಯೊಂದು ವಿಷಯವನ್ನು ತಂದೆ ತಾಯಿಗೆ ಹೇಳಬಾರದೆಂದು ತಾನೇ ಕೊರಗುತ್ತಿದ್ದಳು. ಒಂದು ವಾರದ ಹಿಂದೆ ನನ್ನ ಮಗಳು ನನಗೆ ಪೋನ ಮಾಡಿ ನನ್ನ ಗಂಡನಿಗೆ ಅವನ ಮದುವೆ ಮತ್ತು ತಂಗಿಯ ಮದುವೆ ಮಾಡಲು ಹಣ ಖರ್ಚಾಗಿದ್ದು ಅದಗೋಸ್ಕರ  ತಾವುಗಳು ನನ್ನ ಗಂಡನಿಗೆ 2 ಲಕ್ಷ ರೂಪಾಯಿಗಳು ಹಾಗೂ 3 ತೊಲೆ ಬಂಗಾರ ತರಬೇಕೆಂದು ನನ್ನ ಗಂಡನು ಮತ್ತು ನನ್ನ ಅತ್ತೆ ಮಾವ ನನಗೆ ದಿನನಿತ್ಯ ಕಿರುಕುಳ ಕೊಡುತ್ತಿದ್ದರು. ಹಾಗೆಯೇ ನಿಮ್ಮ ಹತ್ತಿರ ಹಣವನ್ನು ಇದ್ದಿಲ್ಲವಾದರೆ ನಿಮ್ಮ ಮನೆಯನ್ನು ಬೇರೆಯವರಿಗೆ ಒತ್ತಿಯಾಗಿ ಇಟ್ಟು ಆದರೂ ನನ್ನ ಗಂಡನು ಹಣವನ್ನು ತೆಗೆದುಕೊಂಡು ಬರಬೇಕು ಎಂದು ಪದೇ ಪದೇ ಹೇಳುತ್ತಿದ್ದನು. ನಿನ್ನೆ ದಿನಾಂಕ 12.05.2016 ರಂದು ನನ್ನ ಮಗನಾದ ಭಾಗ್ಯವಂತ ನನ್ನ ಮಗಳ ಮನೆಗೆ ಹೋದಾಗ ಅವಳ ಅಕ್ಕಳಾದ ಮೃತ ಶಾಂತಲಾ ಇವಳು ಹಣ ಬಂಗಾರವನ್ನು ತೆಗೆದುಕೊಂಡು ಬಾ ಎಂದು ಹೆಳಿದ್ದು ದಿನಾಂಕ 13.05.2016 ರಂದು ನಾನು ಶ್ರೀನಿವಾಸ ಸರಡಗಿ ಗ್ರಾಮದಲ್ಲಿದ್ದಾಗ ಸುಮಾರು 12 ಗಂಟೆಯ ನನ್ನ ಮಗಳ ಮನೆಯಿಂದ ನನಗೆ ಪೋನ ಬಂದಿದ್ದು ನಿಮ್ಮ ಮಗಳು ಸೀಮೆ ಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿರುತ್ತಾಳೆ. ಎಂದು ತಿಳಿಸಿರುತ್ತಾರೆ. ತಕ್ಷಣವೇ ನಾನು ನನ್ನ ಹೆಂಡತಿ ರೇಣುಕಾದೇವಿ ಇಬ್ಬರು ಕಲಬುರಗಿ ಸರಕಾರಿ ಆಸ್ಪತ್ರೆಯಲ್ಲಿ ಬಂದಾಗ ನನ್ನ ಮಗಳು ಮೃತಪಟ್ಟಿದ್ದು ನೋಡಿರುತ್ತೇವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ಧಾಖಲಾಗಿದೆ

13 May 2016

Kalaburagi District Reported Crimes

ಆಕ್ರಮವಾಗಿ ಮಧ್ಯ ಮಾರಾಟ ಮಾಡುತ್ತಿದ್ದವರ ಬಂಧನ :
ನಿಂಬರ್ಗಾ ಠಾಣೆ : ದಿನಾಂಕ 12-05-2016 ರಂದು ಯಳಸಂಗಿ ಗ್ರಾಮದ ಎಸ್.ಆರ್.ಜಿ ಧಾಬಾದ ಹತ್ತಿರ ಆಕ್ರಮವಾಗಿ ಮಧ್ಯ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಬಾತ್ಮಿ ಬಂದ ಮೇರೆಗೆ ಶ್ರೀ ಕಪೀಲ ದೇವ ಪಿ.ಐ ಡಿ.ಸಿ.ಬಿ ಘಟಕ ಕಲಬುರಗಿ  ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೋಗಿ ದಾಳಿ ಮಾಡಿ 01] ಪ್ರಕಾಶ ತಂದೆ ಸಿದ್ದಯ್ಯ ಗುತ್ತೇದಾರ 02] ರಾಜು ತಂದೆ ಪಂಡಿತ ದುಬಲೆ ಸಾ : ಇಬ್ಬರೂ ಯಳಸಂಗಿ ಇವರನ್ನು ವಶಕ್ಕೆ ತೆಗೆದುಕೊಂಡು ಸದರಿಯವರಿಂದ  01] 90 ML 576 ORIGINAL CHOICE WHISKY ಪೌಚಗಳು ಅ.ಕಿ 14976/-,02] 180 ML 133 OLD TAVERN WHISKY ಪೌಚಗಳು ಅ.ಕಿ 9177/-, ಜಪ್ತಿಪಡಿಸಿಕೊಂಡು  ಸದರಿಯವರೊಂದಿಗೆ ನಿಂಬರ್ಗಾ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಆಕ್ರಮವಾಗಿ ಮರಳು ಸಾಗಿಸುತ್ತಿದ್ದ ಟ್ರ್ಯಾಕ್ಟರ ಜಪ್ತಿ :
ದೇವಲಗಾಣಗಾಪೂರ ಠಾಣೆ : ದಿನಾಂಕ  12-05-2016 ರಂದು 7-45 ಎ.ಎಮ್.ಕ್ಕೆ ಪಿ.ಎಸ್.ಐ ಸಾಹೇಬರು ಠಾಣೆಗೆ ಹಾಜರಾಗಿ ಕಳ್ಳತನದಿಂದ ಮರಳು ಸಾಗಾಣಿಕೆ ಮಾಡುತ್ತಿದ್ದ ಟ್ರ್ಯಾಕ್ಟರ ಚಾಲಕ ಮತ್ತು ಮಾಲೀಕನ ಮೇಲೆ ಕ್ರಮ ಕೈಕೊಳ್ಳುವಂತೆ ಜಪ್ತಿ ಪಂಚನಾಮೆ, ಸಮೇತ ವರದಿ ಹಾಜರಪಡಿಸಿದ್ದರ ಸಾರಾಂಶ ವೇನೆಂದರೆ, ದಿನಾಂಕ 12-05-2016 ರಂದು 6:00 ಎಎಂಕ್ಕೆ ಘೋಳನೂರ ಗ್ರಾಮದ ಭೀಮಾ ನದಿಯಿಂದ ಒಂದು ಟ್ರ್ಯಾಕ್ಟರ್  ಅಕ್ರಮವಾಗಿ ಕಳ್ಳತನದಿಂದ ಮರಳು ತುಂಬಿ ಸಾಗಾಣಿಕೆ ಮಾಡುತ್ತಿದ್ದಾರೆ ಅಂತಾ ಬಾತ್ಮಿ ಮೇರೆಗೆ ಪಿ.ಎಸ್.ಐ. ದೇವಲಗಾಣಗಾಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೋಗಿ ದಾಳಿ ಮಾಡು ಟ್ರ್ಯಾಕ್ಟರ ಚಾಲಕ ತನ್ನ ಟ್ರ್ಯಾಕ್ಟರನ್ನು ಸ್ಥಳದಲ್ಲೆ ಬಿಟ್ಟು ಓಡಿ ಹೋದನು ನಂತರ ಪಂಚರ ಸಮಕ್ಷಮ ಸದರಿ ಟ್ರ್ಯಾಕ್ಟರನ್ನು ಚೆಕ್ ಮಾಡಲು ಟ್ರ್ಯಾಕ್ಟರ ನಂ 1) ಟ್ರ್ಯಾಕ್ಟರ ನಂ ಕೆಎ 32 ಟಿ-9223 ನೇದ್ದು ಇದ್ದು ಸದರಿ ಟ್ರ್ಯಾಕ್ಟರದಲ್ಲಿ ಮರಳು ತುಂಬಿದ್ದು ಸದರಿಯವನು ಅನದಿಕೃತವಾಗಿ ಕಳ್ಳತನದಿಂದ ಮರಳು ತುಂಬಿಕೊಂಡು ಸಾಗಿಸುತ್ತಿದ್ದ ಟ್ರ್ಯಾಕ್ಟರನ್ನು ಜಪ್ತಿ ಪಂಚನಾಮೆ ಮೂಲಕ ವಶಕ್ಕೆ ತೆಗೆದುಕೊಂಡೆನು. ಸದರಿ ಟ್ರ್ಯಾಕ್ಟರದಲ್ಲಿನ ಮರಳಿನ ಅ.ಕಿ.3000/-ರೂ ಟ್ರ್ಯಾಕ್ಟರಿನ ಅ.ಕಿ 2,00.000/-ರೂಪಾಯಿ ನೇದ್ದನ್ನು ವಶಪಡಿಸಿಕೊಂಡು ದೇವಲಗಾಣಗಾಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.