POLICE BHAVAN KALABURAGI

POLICE BHAVAN KALABURAGI

20 March 2016

Kalaburagi District Press Note


Kalaburagi District Reported Crimes

ಕೊಲೆ ಪ್ರಕರಣ :
ಕಾಳಗಿ ಠಾಣೆ : ಶ್ರೀಮತಿ ಶೋಭಾಬಾಯಿ ಗಂಡ ರಮೇಶ ಜಾಧವ ಸಾ:ಕಿಂಡಿ ತಾಂಡಾ ಕಾಳಗಿ ಇವರು ನನ್ನ ತವರು ಮನೆ ಚಿಂಚೋಳಿ ತಾಲೂಕಿನ ಐನೋಳ್ಳಿ ತಾಂಡಾ ಇದ್ದು, ನನ್ನ ತಂದೆ, ತಾಯಿ ಸುಮಾರು 10 ವರ್ಷಗಳ ಹಿಂದೆ ಕಾಳಗಿಯ ಕಿಂಡಿ ತಾಂಡಾದ ರಮೇಶ ಜಾಧವ ರವರಿಗೆ ಕೊಟ್ಟು ಮದುವೆ ಮಾಡಿದ್ದು, ಈಗ ನನಗೆ 1) ದೇವಿದಾಸ ವಯ 8 ವರ್ಷ 2) ದಿವ್ಯಾ ವಯ 6 ವರ್ಷ ಹಾಗೂ 3) ದರ್ಶನ ವಯ 2 ವರ್ಷ ಹೀಗೆ 2 ಗಂಡು, 1 ಹೆಣ್ಣು ಮಗು ಇದ್ದು, ನಾವು ಗಂಡ, ಮಕ್ಕಳು ಮತ್ತು ಅತ್ತೆ ಮಾವಂದಿರೊಂದಿಗೆ ಸಂಸಾರದಲ್ಲಿ ಅನೋನ್ಯವಾಗಿ ಇರುತ್ತೆವೆ. ನನ್ನ ಗಂಡನ ಅಣ್ಣ ತಮ್ಮಕೀ ಫೈಕಿ ರತನ ಎಂಬಾತನು ಬೆಂಗಳೂರಿನಲ್ಲಿ ಜೆ.ಸಿ.ಬಿ ಮೇಲೆ ಚಾಲಕ ಕೆಲಸ ಮಾಡಿಕೊಂಡಿದ್ದು, ಆಗಾಗ ನಮ್ಮ ಮನೆಗೆ ಬಂದು ಹೊಗುತ್ತಿದ್ದ. ಹೀಗಾಗಿ ಮಾತಿಗೆ ಮಾತು ಬೆಳೆಸಿ ಸುಮಾರು 3 ತಿಂಗಳಿಂದ ಅನೈತಿಕವಾಗಿ ಸಂಬಂಧ ಮಾಡಿಕೊಂಡಿದ್ದು ದಿನಾಂಕ 03/03/2016 ರಂದು ರಾತ್ರಿ 10-00 ಘಂಟೆ ಸುಮಾರಿಗೆ ನಾನು ನನ್ನ ಗಂಡ ಮಕ್ಕಳು ಒಂದು ಕಡೆ ಹಾಗೂ ಅತ್ತೆ ಮಾವ ಹೊರಗಡೆ ಮಲಗಿಕೊಂಡಿದ್ದು, ನಿದ್ರಾವಸ್ಥೆಯಲ್ಲಿದ್ದೆವು. ರಾತ್ರಿ 11-00 ಘಂಟೆ ಸುಮಾರಿಗೆ ರತನ ತಂದೆ ಪೋಮು ಜಾಧವ ಇತನು ನಮ್ಮ ಮನೆ ಒಳಗಡೆ ಬಂದು ನನ್ನ ಕೈ ಹಿಡಿದು ಬಾಜು ಎಳೆದುಕೊಂಡಾಗ ನನ್ನ ಗಂಡ ಎಚ್ಚೆತ್ತು ನೋಡಿ ಬೋಸಡಿ ಮಗನೆ ಇದರ ಸಲುವಾಗಿ ನೀನು ನನಗೆ ಸರಾಯಿ ಕುಡಿಸಿದ್ದು, ಬೋಸಡಿ ಮಗನೆ ಅಂತ ಬೈಹತ್ತಿದಾಗ ನನ್ನ ಗಂಡನಿಗೆ ಕೆಳಗಡೆ ಹಾಕಿ ಆತನ ಎದೆ ಮೇಲೆ ಕುಳಿತು ತಲೆ ದಿಂಬು ನನ್ನ ಗಂಡನ ಮುಖದ ಮೇಲೆ ಒತ್ತಿ ಹಿಡಿದ ಅದಕ್ಕೆ ನಾನು ಬಿಡಿಸಲು ಹೋದರೆ ನನಗೆ ಜೋರಾಗಿ ಬಲಗೈಯಿಂದ ದಬ್ಬಿ ಏ ರಂಡಿ ನೀನು ಬಿಡಿಸಲು ಬಂದರೆ ನಿನ್ನ ಜೀವ ತೆಗೆಯುತ್ತೆನೆ ಅಂತ ಅಲ್ಲಿಯೇ ಚೂರಿ ತೆಗೆದುಕೊಂಡು ಈ ವಿಷಯ ಏನಾದರೂ ಹೇಳಿದ್ದಿ ಅಂದರೆ ಜೀವ ತೆಗೆಯುತ್ತೆನೆ ಅಂತ ಜೀವದ ಭಯ ಹಾಕಿದ ಅಷ್ಟೊತಿಗೆ ನನ್ನ ಗಂಡ ಉಸಿರು ಗಟ್ಟಿ ಮೃತಪಟ್ಟಿದ್ದನು. ನನ್ನ ಗಂಡ ವಾಂತಿ ಮಾಡಿಕೊಂಡು ಸತ್ತಿರುವಂತೆ ರತನ ಇತನು ಆತನ ಬಳಿ ಅನ್ನ ಸಾಂಬಾರ ಕಲಿಸಿ ಗಂಡನ ಬಾಯಿ ಮೇಲೆ ಹಾಕಿದನು.ನನ್ನ ಗಂಡ ಸರಾಯಿ ಕುಡಿದು ವಾಂತಿ ಮಾಡಿಕೊಂಡು ಸತ್ತಿರುತ್ತಾನೆ ಅಂತ ಹೇಳು ಈ ವಿಷಯ ಯಾರಿಗಾದರೂ ಹೇಳಿದರೆ ನಿನಗೆ ಮತ್ತು ನಿನ್ನ ಮಕ್ಕಳಿಗೂ ಜೀವಂತ ಬಿಡುವದಿಲ್ಲ ಅಂತ ವದರಾಡುತ್ತಾ ಇರುವಾಗ ಗದ್ದಲ ಕೇಳಿ.ನನ್ನ ಹಿರಿ ಮಗ ದೇವಿದಾಸ ಮತ್ತು ನಮ್ಮ ಅತ್ತೆ ಭೀಮಬಾಯಿ ಎದ್ದು ಏನಾಗಿದೇ ಏನಾಗಿದೆ ಅಂತ ಕೆಳಲು ರತನ ಇತನು ಓಡಿ ಹೋಗಿದ್ದು. ಹೋರಗಡೆ ರಾಜು ತಂದೆ ಕಾಸು, ಗೋಪಾಲ ತಂದೆ ಶಂಕರ ಮತ್ತು ಉಮೇಶ ತಂದೆ ಶಂಕರ ರವರು ನೋಡಿದ್ದು ಇರುತ್ತದೆ.  ಮರುದಿನ ಬೆಳಿಗ್ಗೆ ಜೀವದ ಭಯದಿಂದ ನನ್ನ ಗಂಡ ಸರಾಯಿ ಕುಡಿದ ಅಮಲಿನಲ್ಲಿ ವಾಂತಿ ಮಾಡಿಕೊಂಡಿರುವ ಬಗ್ಗೆ ತಿಳಿಸಿದ್ದರಿಂದ ಸಹಜ ಸಾವು ಎಂದು ತಿಳಿದು ನಮ್ಮ ತಾಂಡಾದವರು ಸಾಂಪ್ರದಾಯಿಕವಾಗಿ ಹೆಣ (ಸುಟ್ಟು) ಅಂತ್ಯಕ್ರಿಯೇ ಮಾಡಿ ಮುಗಿಸಿದರು 4-5 ದಿನಗಳು ಬಿಟ್ಟು ರತನ ಇತನೇ ತನ್ನ ಗಂಡನ ಕೊಲೆ ಮಾಡಿರುತ್ತಾನೆ ಅಂತ ಹೇಳುತ್ತಿದ್ದಿ ಅಂತ ಈಗ ನಾನು ಬಂದರೆ ನಿನ್ನ ಮತ್ತು ನಿನ್ನ ಮಕ್ಕಳ ಜೀವ ತೆಗೆಯುತ್ತೆನೆ ಅಂತ ಪೋನ ಮಾಡಿ ಅಂಜಿಕೆ ಹಾಕಿರುತ್ತಾನೆ. ನಾನು ಅನೈತಿಕ ಸಂಬಂಧಕ್ಕೆ ಅಂಜಿ ಸುಮ್ಮನೆ ಕುಳಿತಿರುವದಕ್ಕೆ ಇತನು ನನ್ನ ಗಂಡ ರಮೇಶ ಇತನ ಜೀವ ತೆಗೆದುಕೊಂಡಿದ್ದು, ಅಲ್ಲದೇ ನನ್ನ ಮತ್ತು ಮಕ್ಕಳ ಜೀವ ತೆಗೆಯುತ್ತೆನೆ ಅಂತ ಕೊಲೆ ಮಾಡುವ ಭಯ ಹಾಕುತ್ತಿದ್ದಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ  ಕಾಳಗಿ ಠಾಣೆಯಲ್ಲಿ ಪ್ರಕರಣ  ದಾಖಲಾಗಿದೆ.
ಅಪಘಾತ ಪ್ರಕರಣ :
ಗ್ರಾಮೀಣ ಠಾಣೆ : ದಿನಾಂಕ 19-03-16 ರಂದು ಬೆಳಿಗ್ಗೆ ಸಮಯದಲ್ಲಿ ನಮ್ಮ ಹಿರೋ ಹೊಂಡಾ ಸಿಡಿ 100 ಕೆಎ 32 ಜೆ 9570 ಮೇಲೆ ಒಬ್ಬನೇ ಕುಳಿತುಕೊಂಡು ಗಂಜಿಗೆ ಹೋಗಿ ನಮ್ಮ ಮನೆಯಲ್ಲಿ ರೊಟ್ಟಿ ಮಾಡಲು ಸೆಡ್ಡ ತಯಾರಿಸುವ ಕುರಿತು  ಬೆಲ್ಗ್, ಪತ್ರಾ ಇತರೇ ಸಾಮಾನುಗಳು ಖರೀದಿ ಮಾಡಿಕೊಂಡು 4-00 ಗಂಟೆ (ಪಿ.ಎಂ.) ಸುಮಾರಿಗೆ ಮನೆಗೆ ಬಂದನು. ಸ್ವಲ್ಪ ಸಮಯ ಮನೆಯಲ್ಲಿದ್ದು ಪ್ರೆಶ ಆಗಿ ಅಣ್ಣ ಮನೆಯಿಂದ ಹಿರೋ ಹೊಂಡಾ ಮೋಟಾರ ಸೈಕಲ ಕೆಎ 32 ಜೆ 9570 ಮೇಲೆ ಒಬ್ಬನೇ ಕುಳಿತುಕೊಂಡು  ಎ.ಟಿ.ಎಂ.ದಲ್ಲಿ ಪಾರ್ಟಿ ಜನರು ಹಣ ಹಾಕಿದ್ದಾರೆ ಇಲ್ಲ ಎಂಬುದು  ಎಂ.ಟಿ.ಎಂ. ಗೆ ಹೋಗಿ ನೋಡಿಕೊಂಡು ಬರುತ್ತೇನೆಂದು ಹೇಳಿ ಮನೆಯಿಂದ ಹೋದನು. ರಾತ್ರಿ 10-10 ಗಂಟೆ ಸುಮಾರಿಗೆ  ನಾನು ಮನೆಯಲ್ಲಿದ್ದಾಗ ಯರೋ ಒಬ್ಬರು ನನ್ನ ಅಣ್ಣನ ಮೋಬೈಲನಿಂದ ನನ್ನ ಮೋಬೈಲ್ ನಂಬರಿಗೆ ಪೋನ ಮಾಡಿ  ತಿಳಿಸಿದ್ದೆನೆಂದೆರೆ, ಈ ಮೋಬೈಲ ಹೊಂದಿದವರು ಆಳಂದ ಚೆಕ್ಕ ಪೋಸ್ಟ ರೋಡ ಕಡೆಯಿಂದ ಹಿರೋ ಹೊಂಡಾ ಸಿಡಿ 100 ಕೆಎ 32 ಜೆ 9570 ಮೇಲೆ ಒಬ್ಬನೇ ಕುಳಿತುಕೊಂಡು ಅತಿವೇಗದಿಂದ ಮತ್ತು ನಿಷ್ಕಾಳಿಜಿತನದಿಂದ ನಡೆಸುತ್ತಾ ರಾತ್ರಿ 9-30  ಗಂಟೆ ಸುಮಾರಿಗೆ ಬಬಲಾದ ಮಠದ ಎದುರಿನ ರಿಂಗ ರೋಡಿನ ಡಿವಾಡರಕ್ಕೆ ಜೋರಾಗಿ ಡಿಕ್ಕಿ ಹೊಡೆದಿದ್ದರಿಂದ ಡಿವಾಡರ ಮೆಲೆ ಮೋಟಾರ ಸೈಕಲದೊಂದಿಗೆ ಬೇಹುಷ ಆಗಿ ಬಿದ್ದಿರುತ್ತಾನೆ. ಅಂತಾ ತಿಳಿಸಿದಾಗ ನಾನು ಗಾಬರಿಗೊಂಡು ಈ ವಿಷಯ ನಮ್ಮ ತಂದೆ, ತಾಯಿಗೆ ತಿಳಿಸಿ ಘಟನೆ ಸ್ಥಳಕ್ಕೆ ಹೋಗಿ ನೋಡಲಾಗಿ ಸುತ್ತ ಮುತ್ತಲಿನ ಜನರು ನೆರೆದಿದ್ದು  ನನ್ನ ಅಣ್ಣ ಸಚಿನಕುಮಾರ ರೋಡಿನ ಡಿವಾಡರ ಹತ್ತಿರ ಬೇಹುಷ ಸ್ಥಿತಿಯಲ್ಲಿ ಬಿದ್ದಿದ್ದನು. ಘಟನೆ ಸ್ಥಳದಲ್ಲಿದ್ದ ನನ್ನ ಗೆಳೆಯರಾದ ಕಿರಣ ತಂದೆ ಧನರಾಜ ರಾಠೋಡ ಮತ್ತು ಚಂದ್ರಶೇಖರ ತಂದೆ ಮಲ್ಲಿಕಾರ್ಜುನ ಪಾಟೀಲ ಇವರಿಗೆ ವಿಚಾರಿಸಲೂ  ನನಗೆ ಈ ಮೇಲೆ ಅಪರಿಚಿತ ವ್ಯಕ್ತಿ ಪೋನ ಮಾಡಿ ತಿಳಿಸಿದಂತೆ ವಿಷಯ  ತಿಳಿಸಿದರು. ನನ್ನ ಅಣ್ಣನಿಗೆ ನೋಡಲಾಗಿ ನನ್ನ ಅಣ್ಣನ ಹಣೆಯ ಮೇಲೆ ರಕ್ತಗಾಯ, ಬಲಗಣ್ಣಿನ ಮತ್ತು ಎಡಗಣ್ಣಿನ ಹುಬ್ಬಿನ ಹತ್ತಿರ ರಕ್ತಗಾಯಗಳಾಗಿದ್ದು, ಮೂಗಿನ ಹತ್ತಿರ ರಕ್ತಗಾಯ ತಲೆಗೆ,ಎದೆಗೆ ಹೊಟ್ಟೆಗೆ, ಭಾರಿ ಗುಪ್ತಗಾಯಗಳಾಗಿದ್ದು, ಎಡಗೈಯ ಮೇಲೆ ಅಲ್ಲಿಲ್ಲಿ ತರಚಿದ ರಕ್ತಗಾಯಗಳಾಗಿದ್ದು, ಯಾರೋ ಜನರು 108 ಅಂಬುಲೈನ್ಸಗೆ ಪೋನ ಮಾಡಿದ್ದು, 108 ಗಾಡಿ ಬರಲು ಅದರಲ್ಲಿ ನಮ್ಮ ಅಣ್ಣ ಸಚಿನನಿಗೆ ಹಾಕಿಕೊಂಡು ಉಪಚಾರ ಕುರಿತು  ಯುನೈಟೆಡ ಆಸ್ಪತ್ರ್ರೆಗೆ ಒಯ್ದು ಸೇರಿಕೆ ಮಾಡಿದ್ದು, ನನ್ನ ಅಣ್ಣ ಸಚಿನಗೆ ವೈದ್ಯರು ಉಪಚಾರ ಮಾಡುತ್ತಿರುವ ಕಾಲಕ್ಕೆ ರಸ್ತೆ ಅಪಘಾತ ಗಾಯಗಳಿಂದ ಗುಣ ಮುಖ ಹೊಂದದೇ ರಾತ್ರಿ 12-50  ಎ.ಎಂ.ಕ್ಕೆ ಮೃತಪಟ್ಟಿರುತ್ತಾನೆ. ಅಂತಾ ಶ್ರೀ ಪ್ರವೀಣಕುಮಾರ ತಂದೆ ಮಲ್ಲಿಕಾರ್ಜುನ ತಂಬಾಕೆ ಸಾ : ರಾಮ ನಗರ ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಹರಣ ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀ ಸೂರ್ಯಕಾಂತ ತಂದೆ ಹಣಮಂತಪ್ಪ ಹೋಸಪೇಟ ಸಾ :ಕೊಂಡೆದಗಲ್ಲಿ ಬ್ರಹ್ಮಪೂರ ಇವರು ದಿನಾಂಕ 18/3/16 ರಂದು ಮದ್ಯಾನ 3.05 ಗಂಟೆಗೆ ಅಪರಿಚಿತ ಇಬ್ಬರೂ ವ್ಯಕ್ತಿಗಳು ಬೈಕ ಮೇಲೆ ಬಂದು ನನ್ನ ಮಗನಾದ ಅಶೋಕ ವ:29 ವರ್ಷ ಉ:ವಿದ್ಯಾರ್ಥಿ ಇತನ ಮೊಬೈಲ್‌ ನಂ.9916252555, 9686605672  ಗೆ ಕರೆಮಾಡಿ ಗೋವಾ ಹೊಟೇಲಗೆ ಬಾ ಅಂತಾ ಹೇಳಿ 10 ನಿಮೀಷದಲ್ಲಿ ನಾನು ಬರುತ್ತೇನೆ ಎಂದು ತಿಳಿಸಿದಾಗ ಅವರು ಮತ್ತೆ ಕರೆಮಾಡಿ ಅಡ್ರಸ ಕೇಳಿದಾಗ ನಮ್ಮ ಮನೆಯ ಅಡ್ರಸ ಕೊಟ್ಟಿರುತ್ತಾನೆ. ನಮ್ಮ ಮನೆಯ ಕೆಳಗಡೆ ಬಂದು ಪುನ:ಹ ಮಳಖೇಡ ದಿಂದ ಕೋರಿಯರ ಬಂದಿರುತ್ತದೆ ಕೆಳಗಡೆ ಬಾ ಅಂತಾ ತಿಳಿಸಿ ಕೆಳಗಡೆ ಕರೆಯಿಸಿಕೊಂಡು ವಿಚಾರಿಸದೆ ಆತನನ್ನು ಇಬ್ಬರೂ ಸೇರಿ ಬೈಕ ಮೇಲೆ ಕೂಡಿಸಿಕೊಂಡು ಹೋಗಿರುತ್ತಾರೆ. ಹೋಗುವಾಗ ಅಲ್ಲಿ ಇದ್ದ ಹೆಣ್ಣು ಮಕ್ಕಳು ವಿಚಾರಿಸಿದಾಗ ನಾವು ಪೊಲೀಸರು ಎಂದು ಹೇಳಿ ಕರೆದುಕೊಂಡು ಹೋಗಿರುತ್ತಾರೆ ನಂತರ ರಾತ್ರಿ 7.30 ಪಿ.ಎಂಕ್ಕೆ ನನಗೆ ಕರೆಮಾಡಿ ನಾನು ಮುಂಜಾನೆ ಬರುತ್ತೇನೆ ನಾನು ನನ್ನ ಗೆಳೆಯನ ಹತ್ತಿರ ಇದ್ದೆನೆಂದು ತಿಳಿಸಿರುವನು ಇಲ್ಲಿಯವರೆಗೂ ಮತ್ತೆ ಕರೆ ಮಾಡಿರುವದಿಲ್ಲಾ ದಯವಿಟ್ಟು ನನ್ನ ಮಗನನ್ನು ಹುಡುಕಿ ಕೊಡಬೇಕು ಅಂತಾ ಅರ್ಜಿ ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆತ್ಮ ಹತ್ಯೆ ಪ್ರಕರಣ :
ಆಳಂದ ಠಾಣೆ : ಶ್ರೀಮತಿ ಜ್ಯೋತಿ ಗಂಡ ರಾಜೇಂದ್ರ ಕೊರಳ್ಳಿ ಸಾ : ಪಡಸಾವಳಿ ಇವರ ಗಂಡನಿಗೆ ಹಿಡಿದು 4 ಜನ ಅಣ್ಣ ತಮ್ಮಂದಿರು ಇದ್ದು ಎಲ್ಲರೂ ಕೂಡಿ ಇದ್ದು ನಮ್ಮ ಮಾವನವರು.ಮೊದಲೆ ಮರಣ ಹೊಂದಿರುತ್ತಾರೆ. ನಮ್ಮ ಅತ್ತೆ ಸರುಬಾಯಿ ಇವರ ಹೆಸರಿನಲ್ಲಿ ಇದ್ದ ಸರ್ವೆ.ನಂ 71 ರಲ್ಲಿ 2 ಎಕರೆ  ಹೊಲ ಇದ್ದು ನನ್ನ ಗಂಡನೆ ದೊಡ್ಡ ಮಗನಿದ್ದು ಮನೆಯ ಆಗು ಹೋಗುಗಳ ಬಗ್ಗೆ ಅವನೆ ನೋಡುತ್ತಾ ಬಂದಿರುತ್ತಾನೆ. ನನ್ನ ಇಬ್ಬರ ಮೈದುನರು ಹೊಟ್ಟೆ ಪಾಡಿಗಾಗಿ ಪುನಾಕ್ಕೆ ಹೋಗಿರುತ್ತಾರೆ. ನನಗೆ ಮೂರು  ಜನ   ಹೆಣ್ಣು ಮಕ್ಕಳು ಇದ್ದು ಅವರು ಚಿಕ್ಕವರು ಇರುತ್ತಾರೆ. ಈ ವರ್ಷ ಸರಿಯಾಗಿ ಮಳೆ ಬಾರದೇ ಬೆಳೆಯಾಗದೆ.ಇರುವದಿದರಿಂದ ನನ್ನ ಗಂಡನ್ನು ಊರಲ್ಲಿ ಇತರೆ ಜನರ ಹೊಲಗಳನ್ನು ಪಾಲಿನಿಂದ ಮಾಡಿರುತ್ತಾನೆ. ಹೊಲಗಳಿಗೆ ಹಾಕಬೇಕಾದ  ಗೊಬ್ಬರ  ಇತರೆ ವಸ್ತುಗಳನ್ನು ಸಾಲ ಮಾಡಿ ಹಾಕಿರುತ್ತಾರೆ.  ಸರಕಾರದಿಂದ ಹಾಗೂ ಖಾಸಗಿಯವರಿಂದ 05 ಲಕ್ಷ ಸಾಲ ಮಾಡಿದ್ದು ಹೇಗೆ ತೀರಿಸುವುದೆಂದು ಚಿಂತಿಸುತ್ತಿದ್ದರು. ದಿನಾಂಕ:19/03/2016 ರಂದು ಬೆಳಗ್ಗಿನ ಜಾವ 4 ಗಂಟೆಗೆ ಸುಮಾರಿಗೆ ನನ್ನ ಗಂಡ ಎದ್ದು ಮನೆಯಿಂದ  ಹೋಗಿ ಸಾಲ ತಿರಿಸುವದು ಹೇಗೆ ಅಂತಾ ಚಿಂತಿಸಿ ಬೆಳಗಿನ ಜಾವ 05 ರಿಂದ 06 ಗಂಟೆ ಮಧ್ಯದ ಅವಧಿಯಲ್ಲಿ ನಮ್ಮೂರ ಸೀಮಾಂತರ ಮಾಹಾದೇವ ಪತ್ರಿಗಿಡ ಇವರ ಹೊಲದಲ್ಲಿ ಇದ್ದ ಹುಣಸಿ ಮರಕ್ಕೆ ಉರುಳು ಹಾಕಿಕೊಂಡು  ಮರಣ ಹೊಂದಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
  

19 March 2016

Kalaburagi District Reported Crimes

 ಕಳವು ಪ್ರಕರಣ :
ಯಡ್ರಾಮಿ ಠಾಣೆ : ದಿನಾಂಕ 16-03-2016 ರಂದು ರಾತ್ರಿ 10;00 ಗಂಟೆಯಿಂದ ದಿನಾಂಕ 17-03-2016 ರಂದು ಬೆಳಿಗ್ಗೆ 07;00 ಗಂಟೆ ಮದ್ಯದಲ್ಲಿ ಯಾರೋ ಕಳ್ಳರು ನಮ್ಮ ಶಾಲೆಯ ಗಣಕಯಂತ್ರ ಕೋಣೆಯ ಕೊಂಡಿಯನ್ನು ಕಟ್ ಮಾಡಿ ಕೋಣೆಯಲ್ಲಿದ್ದ 16 ಟೂಬಲರ್ ಬ್ಯಾಟ್ರಿಗಳು ಅ;ಕಿ; 16,000/- ರೂ ನೇದ್ದವುಗಳನ್ನು ಕಳುವು ಮಾಡಿಕೊಂಡು ಹೋಗಿರುತ್ತಾರೆ. ಕಳುವಾದ ಬ್ಯಾಟ್ರಿಗಳನ್ನು ಪತ್ತೆಮಾಡಿ ಆರೋಪಿತರ ಮೇಲೆ ಕಾನೂನು ರೀತಿ ಕ್ರಮ ಕೈಗೋಳ್ಳಬೇಕು ಅಂತಾ ಶ್ರೀ ಶಿವಶರಣ ಎಸ್. ಮಾಲಿ ಬಿರಾದಾರ ಉ: ಮುಖ್ಯ ಗುರುಗಳೂ ಸರಕಾರಿ ಪ್ರೌಢ ಶಾಲೆ ಯಲಗೋಡ ಸಾ: ಹರನಾಳ ತಾ:ಜೇವರಗಿ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಿರುಕಳ ನೀಡಿ ಹಲ್ಲೆ ಮಾಡಿದ ಪ್ರಕರಣ :
ಮಹಿಳಾ ಠಾಣೆ : ಶ್ರೀಮತಿ ರಾಧಾಬಾಯಿ ಗಂಡ ರಾಜು ಜವಳಿ ಸಾ:ವಡ್ಡರಗಲ್ಲಿ ಶಹಾಬಜಾರ ಕಲಬುರಗಿ ಇವರನ್ನು ಈಗ 15 ವರ್ಷಗಳ ಹಿಂದೆ ಜವಳಿ ಗ್ರಾಮದ ಹಣಮಂತರಾಯ ಇವರ ಮಗನಾದ ರಾಜು ಇತನೊಂದಿಗೆ ಸಂಪ್ರದಾಯದಂತೆ ಮದುವೆ ಮಾಡಿಕೊಟ್ಟಿರುತ್ತಾರೆ ಮದುವೆಯಾ 2,3 ವರ್ಷ ನನ್ನ ಗಂಡ ನನಗೆ ಚೆನ್ನಾಗಿ ನೋಡಿಕೊಂಡಿರುತ್ತಾರೆ ಈಗ ನನಗೆ 3 ಜನ ಹೆಣ್ಣು ಮಕ್ಕಳು ಮತ್ತು ಒಬ್ಬ ಗಂಡು ಮಗನಿರುತ್ತಾನೆ. ನಾನು ಮತ್ತು ನನ್ನ ಗಂಡ ಹೊಟ್ಟೆಪಾಡಿಗಾಗಿ ಈಗ 13 ವರ್ಷಗಳಿಂದ ಕಲಬುರಗಿಯ ನನ್ನ ತವರು ಮನೆಯಾದ ಶಹಾಬಜಾರದಲ್ಲಿ ವಡ್ಡರಗಲ್ಲಿ ವಾಸವಾಗಿದ್ದೆನೆ ನನ್ನ ಗಂಡ ಕುಡಿಯುವ ಚಟದವನಿದ್ದು ತಾನು ದುಡಿದ ಹಣವೆನ್ನೆಲ್ಲಾ ಕುಡಿದು ಬಂದು ನನ್ನೊಂದಿಗೆ ವಿನಾಃಕಾರಣ ಜಗಳ ತೆಗೆದು ಹೊಡೆಯುವುದು ರಂಡಿ ಬೋಸಡಿ ಅಂತಾ ಅವಾಚ್ಯ ಶಬ್ದಗಳಿಂದ ಬೈಯುವುದು ಅಲ್ಲದೇ ನಾನು ದುಡಿದ ಬಂದು ಆಗಾಗ ನಿನಗೆ ಕೊಲೆ ಮಾಡುತ್ತೇನೆ ಅಂತಾ ಕಲ್ಲು ಹಾಕಲು ಪ್ರಯತ್ನಿಸುತ್ತಿದ್ದನು. ನನ್ನ ಗಂಡನಿಗೆ ನನ್ನ ತಾಯಿ ತಂದೆ ಬುದ್ದಿವಾದ ಹೇಳಿದರು ತನ್ನ ಚಟವನ್ನು ಮುಂದುವರೆಸಿಕೊಂಡು ಬಂದಿರುತ್ತಾನೆ ., ದಿನಾಂಕ 18-03-2016 ರಂದು ಕೂಲಿಕೆಲಸಕ್ಕೆಂದು ನಮ್ಮ ಓಣಿಯ ಲಕ್ಷ್ಮಿ ಹೋಗಿ ಕೆಲಸ ಮುಗಿಸಿಕೊಂಡು ಸಾಯಾಂಕಾಲ 6-00 ಪಿ.ಎಂಕ್ಕೆ ನಾನು ಮತ್ತು ಲಕ್ಷ್ಮಿ ಕೂಡಿ ಶಿವಾಜಿ ಖಾನಾವಳಿ ಎದುರುಗಡೆ ಬರುತ್ತಿರುವಾಗ ನನ್ನ ಗಂಡ ರಾಜು ಅಲ್ಲಿಗೆ ಬಂದು ತನಗೆ ಹಣ ಕೋಡು ಅಂತಾ ಹೇಳಿದನು ನಾನು ಮನೆಯಲ್ಲಿ ಮಕ್ಕಳಿಗೆ ಊಟಕ್ಕೆ ಎನು ಇಲ್ಲಾ ರೇಷನ ತೆಗೆದುಕೊಂಡು ಹೋಗುತ್ತೇನೆ ಅಂತಾ ಹೇಳಿದ್ದಕ್ಕೆ ನೀನು ನನಗೆ ಹಣ ಕೋಡದೇ ಇದ್ದರೆ ರಂಡಿ ಇವತ್ತು ನಿನಗೆ ಖಲಾಸ ಮಾಡುತ್ತೇನೆ ಅಂತಾ ತನ್ನ ಹತ್ತಿರವಿದ್ದ ಚಾಕುವಿನಿಂದ ಬಲ ಎದೆಯ ಮೇಲ್ಬಾಗಕ್ಕೆ ಎಡ ಎದೆಯಕೆಳಗೆ ಎಡ ಸೊಂಟಿದ ಹತ್ತಿರ ಎಡಗೈ ರಟ್ಟಗೆ ಚುಚ್ಚಿದನು ನನ್ನ ದೇಹಕ್ಕೆ ಅಲ್ಲಲ್ಲಿ ಚುಚ್ಚಿದನು.ಲಕ್ಷ್ಮಿ ಮತ್ತು ಖಾನಾವಳಿಯ ಅನಿಲ; ಇತನು ನನಗೆ ಬಿಡಿಸಿಕೊಂಡರು ಕಾರಣ ನನ್ನ ಮದುವೆಯಾದಾಗಿನಿಂದ ನನ್ನೊಂದಿಗೆ ಜಗಳ ತೆಗೆದು ಮಾನಸಿಕ, ದೈಹಿಕ ಹಿಂಸೆಕೊಟ್ಟು  ಕೊಲೆ ಮಾಡುವ ಉದ್ದೇಶದಿಂದ ನನ್ನ ದೇಹದ ಮೇಲೆ ಎಲ್ಲಾ ಕಡೆ ಚುಚ್ಚಿ ಕೊಲೆ ಮಾಡಲು ಪ್ರಯತ್ನಿಸಿದ ನನ್ನ ಗಂಡ ರಾಜು ಇತನ  ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುಲಿಗೆ ಪ್ರಕರಣ :
ಶಾಹಾಬಾದ ನಗರ ಠಾಣೆ : ಶ್ರೀ  ಇಬ್ರಾಹೀಮ ತಂದೆ ಅಬುಬಕರ  ಪಟೇಲ ಸಾಃ ನೇಗಿನಾಳ ತಾಃ ಬ-ಬಾಗೆವಾಡಿ ರವರು  ದಿನಾಂಕ:  17.03.2016 ರಂದು  ಲಾರಿ  ನಂ  ಎಪಿ-24 ಟಿಬಿ-0456 ನೇದ್ದರ ಮೇಲೆ ನಾನು ಮತ್ತು ಕ್ಲೀನರ ರವಿ ತಂದೆ ತಿಪ್ಪರಾಯ ಗೂಗದೊಡ್ಡಿ  ಸಾಃ ನೇಗಿನಾಳ  ಇಬ್ಬರು  ಸೇರಿ  ಘತ್ತರಗಿಯಿಂದ  -ವಾಡಿ ಕಂಪನಿಗೆ  ಸಿಮೆಂಟ ತರಲು  ಶಹಾಬಾದ ಮಾರ್ಗವಾಗಿ  ವಾಡಿ ಕಡೆಗೆ ತೆರಳುತ್ತಿದ್ದಾಗ ,  ಮಾಲಗತ್ತಿ  ದಾಟಿ ಕಣಿಯ  ಬ್ರಿಡ್ಜ  ಹತ್ತಿರ  ರಸ್ತೆಗೆ  ರಾತ್ರಿ  11.45  ಪಿ.ಎಮ್  ಸುಮಾರಿಗೆ ಹೋಗುತ್ತಿರುವಾಗ ಯಾರೋ ಅಪರಿಚಿತ  4 ಜನರು  2 ಮೊ.ಸೈ ಗಳ  ಮೇಲೆ  ಬಂದು ನಾನು ಚಲಾಯಿಸಿಕೊಂಡು ಹೋಗುತ್ತಿದ್ದ  ಲಾರಿಗೆ ರಸ್ತೆಗೆ  ಅಡ್ಡಗಟ್ಟಿ  ನಿಲ್ಲಿಸಿ ನನ್ನನ್ನು ಲಾರಿಯಿಂದ  ಕೆಳಗೆ  ಇಳಿಸಿ  ಏ ಸೋಳೆ ಮಗನೆ  ನಿಮ್ಮ  ಹತ್ತಿರ  ದುಡ್ಡು  ಮತ್ತು  ಏನೇನಿದೆ ಕೊಡು ಅಂತಾ  ಬೈಯ್ಯುವಾಗ,  ಅವರಲ್ಲಿಯ ಇನ್ನೊಬ್ಬ  ತನ್ನ ಕೈಯಲ್ಲಿದ್ದ  ಚಾಕು ತೋರಿಸಿ  ನಿನ್ನ ಹತ್ತಿರ  ಇರುವ ಹಣ ಮತ್ತು ಮೊಬಾಯಿಲ್  , ಬಂಗಾರ  ಇದ್ದರೆ ಕೊಡು  ಇಲ್ಲಾಂದರೆ ಚಾಕುವಿನಿಂದ ತಿವಿದು ಸಾಯಿಸುತ್ತೇನೆ  ಅಂತಾ  ಚಾಕುವನ್ನು ನನ್ನ ಕುತ್ತಿಗೆಗೆ ಇಟ್ಟನು.  ಆಗ  ನಾನು ಹೆದರಿ  ನನ್ನ ಹತ್ತಿರ ಹಣ,  ಬಂಗಾರ ಇರುವದಿಲ್ಲಾ ಕೇವಲ ಮೊಬಾಯಿಲ  ಇರುತ್ತದೆ ಅಂತಾ  ಮೊಬಾಯಿಲ ತೋರಿಸಿದಾಗ  ಮೊಬಾಯಿಲ ಕಿತ್ತುಕೊಂಡರು.  ನಂತರ  ನನಗೆ  ಜೇಬುಗಳಲ್ಲಿ ಕೈ ಹಾಕಿ ನೋಡಿದರು.  ಏನು ಸಿಗದೆ ಇದ್ದರಿಂದ  ಬಿಟ್ಟು  ಅವರು ಈ ವಿಷಯ ಯಾರಿಗಾದರೂ  ಹೇಳಿದರೆ  ನಿನಗೆ  ಜೀವ  ಸಹಿತ  ಬಿಡುವದಿಲ್ಳಾ  ಅಂತಾ  ಪ್ರಾಣಬೆದರಿಕೆ ಹಾಕಿದರು.  ನನ್ನ ಜೊತೆಯಲ್ಲಿದ್ದ  ಕ್ಲೀನರಿಗೂ ಸಹ  ಲಾರಿಯಿಂದ  ಕೆಳಗಿಳಿಸಿ ಅವನಿಗೂ ಪ್ಯಾಂಟು ಮತ್ತು ಶರ್ಟಿನ ಜೇಬುಗಳು  ಚಕ  ಮಾಡಿದರು.  ಅವನ ಹತ್ತಿರ ಇದ್ದ  ಮೊಬಾಯಿಲ್  ಕಿತ್ತುಕೊಂಡರು.  ನಂತರ  ಅವರು ತಂದಿದ್ದ ಎರಡು ಮೊ.ಸೈ ಗಳ  ಮೇಲೆ  ರಾವೂರ  ಕಡೆಗೆ  ಹೋಗುವಾಗ,  ನಾನು  ಆ ಮೊ.ಸೈಗಳ  ಮೇಲಿನ  ಹಿಂದಿನ  ಲೈಟಿನ  ಹಾಗೂ  ನನ್ನ ಲಾರಿಯ  ಮುಂದಿನ ಲೈಟಗಳ ಬೆಳಕಿನಲ್ಲಿ ನಾನು ಎರಡೂ ಮೊ.ಸೈಗಳ ನಂಬರಗಳು ನೋಡಿರುತ್ತೇನೆ ಅವುಗಳು 1)ಕೆಎ- 32 ಇಬಿ- 8568 ,  ಮತ್ತು 2)  ಕೆಎ-32 ಇಹೆಚ್-8452 ಇರುತ್ತವೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.