POLICE BHAVAN KALABURAGI

POLICE BHAVAN KALABURAGI

22 December 2015

Kalaburagi District Reported Crimes

ಅಪಘಾತ ಪ್ರಕರಣ :
ಫರತಾಬಾದ ಠಾಣೆ : ದಿನಾಂಕ: 20/12/2015 ರಂದು ಬೆಳಗ್ಗೆ ನಾನು ಮತ್ತು ನಮ್ಮ ಶಿಕ್ಷಕರಾದ ಕೆ.ನಾರಾಯಣ ಮತ್ತು ವಿಜಯಕುಮಾರ ಸರ್ ನಾನು ೩ ಜನರು ಕೂಡಿಕೊಂಡು ನಮ್ಮ ಶಾಲೆಯ 29 ವಿದ್ಯಾರ್ಥಿಗಳನ್ನು ಶೈಕ್ಷಣಿಕ ಪ್ರವಾಸಕ್ಕಾಗಿ ಟೆಂಪೋ ನಂ (ಮನಿ ಬಸ್) ಕೆಎ-06 ಬಿ-6157 ನೆದ್ದರಲ್ಲಿ ಹೊರಟಿರುತ್ತೆವೆ. ಸದ್ರಿ ಬಸನಲ್ಲಿ 29 ವಿದ್ಯಾರ್ಥಿಗಳಲ್ಲಿ ಪಪು ಚಹ್ವಾಣ,ಮಾರುತಿ ರಾಠೋಡ ,ಲಕ್ಕನ ರಾಠೋಡ ,ಶಿವಾಜಿ ರಾಠೋಡ, ಪೂಜಾ ಚಹ್ವಾಣ, ಕರಿಶ್ಮಾ ಚಹ್ವಾಣ ,ಪ್ರಕಾಶ ರಾಠೋಡ, ಸಚೀನ ರಾಠೋಡ , ರೀತಾ ರಾಠೋಡ, ರಾಜಕುಮಾರ ರಾಠೋಡ, ಸೋಮು ರಾಠೋಡ, ಅರುಣ ರಾಠೋಡ, ವಿಶಾಲ ರಾಠೋಡ, ಪೂಜಾ ರಾಠೋಡ ಸಾವನ ಪವಾರ, ಸುರೇಶ ಚಹ್ವಾಣ, ರಾಜಕುಮಾರ ಚಹ್ವಾಣ, ಸಾವನ ರಾಠೋಡ, ರಾಜು ರಾಠೋಡ, ನೀಲಭಾಯಿ ರಾಠೋಡ, ಉಮೇಶ ರಾಠೋಡ, ಸೋಮು ರಾಠೋಡ, ಮನಾಥ ಚಹ್ವಾಣ, ಕರಣ ಜಾಧವ, ಪ್ರವೀಣ ರಾಠೋಡ, ನಿರ್ಮಲಾ ರಾಠೋಡ, ಸಂಜು ರಾಠೋಡ, ಉಷಾ ತಂದೆ ಹಣಮಂತ, ನಿಕೇಶ ಜಾಧವ ಹೀಗೆ ಇವರನ್ನು ಕರೆದುಕೊಂಡು ಹೋಗಿರುತ್ತೆವೆ, ಸದ್ರಿ ಬಸನಲ್ಲಿ ಪ್ರಶಾಂತ ಅಂತಾ ಒಬ್ಬ ಕ್ಲೀನರ ಕಮ್ ವಾಹನ ಮಾಲೀಕನಾಗಿದ್ದು, ಬಸವರಾಜ ಮತ್ತು ಚಂದ್ರಕಾಂತ ಅಂತಾ ಇಬ್ಬರೂ ಚಾಲಕರಿರುತ್ತಾರೆ. ನಾವು ದಿನಾಂಕ 20/12/2015 ರಂದು ಮೊದಲು ಸುರಪೂರಕ್ಕೆ ಹೋಗಿ ಅಲ್ಲಿ ಕೋಟೆ ನೋಡಿಕೊಂಡು, ಅಲ್ಲಿಂದ ನಾರಾಯಣಪೂರ ಡ್ಯಾಂ ಗೆ ಹೋಗಿ ಅಲ್ಲಿ ನೋಡಿಕೊಂಡು ಅಲ್ಲಿ ನೋಡಿ ಕೊಂಡು, ಅಲ್ಲಿಂದ ಹಂಪಿಗೆ ಹೋಗಿ ಅಲ್ಲಿ ರಾತ್ರಿ ವಸತಿ ಮಾಡಿರುತ್ತೆವೆ. ದಿನಾಂಕ 21/12/2015 ರಂದು ಹಂಪಿ ನೋಡಿಕೊಂಡು ಅಲ್ಲಿಂದ ಟಿ ಬಿ ಡ್ಯಾಂ ಗೆ ಬಂದು ಅಲ್ಲಿ ಡ್ಯಾಂ ನೋಡಿಕೊಂಡು ಅಲ್ಲಿಂದ 5 ಪಿಎಮ್ ಗೆ ಮರಳಿ ಊರಿಗೆ ಬರುತ್ತಿದ್ದೆವು. ಸದ್ರಿ ವಾಹನವನ್ನು ಚಂದ್ರಕಾಂತ ಈತನು ಚಲಾಯಿಸುತ್ತಿದ್ದನು. ರಾತ್ರಿ 11:30 ಗಂಟೆಯ ಸುಮಾರಿಗೆ ರಾಷ್ಟ್ರೀಯ ಹೆದ್ದಾರಿ 218 ರಸ್ತೆಯ ಮೇಲೆ ಸರಡಗಿ(ಬಿ) ಖಣಿ ಹತ್ತಿರ ಕಲಬುರಗಿಗೆ ಕಡೆಗೆ ಬರುತ್ತಿರುವಾಗ ನಮ್ಮವಾಹನ ಚಾಲಕನಾದ ಚಂದ್ರಕಾಂತ ಈತನು ತಾನು ಚಲಾಯಿಸುತ್ತಿದ್ದ ಟೆಂಪೋ ನಂಬರ (ಮನಿ ಬಸ್) ಕೆಎ-06 ಬಿ-6157 ನೆದ್ದನ್ನು ಅತೀವೇಗ ಮತ್ತು ಅಲಕ್ಷತನದಿಂಧ ಚಲಾಯಿಸಿಕೊಂಡು ಹೋಗಿ ರಸ್ತೆಯ ಎಡಗಡೆಯಿಂದ ಬಲಗಡೆಗೆ ಹೋಗಿ ಸೈಡಿನಲ್ಲಿದ್ದ ಗುಟ್ಟದ ಕಲ್ಲುಗಳಿಗೆ ಡಿಕ್ಕಿಪಡಿಸಿ ತನ್ನ ವಾಹನದ ವೇಗದ ನಿಯಂತ್ರಣತಪ್ಪಿ ರಸ್ತೆಯ ಬಲಬದಿಗೆ ಪಲ್ಟಿಗೊಳಿಸಿ ಗಿಡಕ್ಕೆ ಡಿಕ್ಕಿ ಪಡಿಸಿರುತ್ತಾನೆ. ಇದರಿಂದ ನಮ್ಮಗೆ ಸಾಧಾ ಮತ್ತು ಗಂಬೀರ ಸ್ವರೂಪದ ಗಾಯಗಳಾಗಿದ್ದು, ಚಾಲಕ ಚಂದ್ರಕಾಂತ ಈತನಿಗೆ ತಲೆಗೆ ಭಾರಿ ರಕ್ತಗಾಯವಾಗಿದ್ದು ಆಸ್ಪತ್ರೆಗೆ ತರುವಾಗ ಮಾರ್ಗ ಮಧ್ಯೆದಲ್ಲಿ ಮೃತ ಪಟ್ಟಿರುತ್ತಾನೆ. ಅಂತಾ ಶರಣಮ್ಮ ತಂದೆ ಬಂಡಪ್ಪಾ ಹುಡಗಿ ವಯ:೨೪ ವರ್ಷ ಉ:ಅತಿಥಿ ಶಿಕ್ಷಕಿ ಜಾ: ಲಿಂಗಾಯಿತ ಸಾ: ಅರಣಕಲ ತಾ: ಚಿತ್ತಾಪೂರ ಜಿ:ಕಲಬುರಗಿ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಿಸ್ತೂಲ ನಿಂದ ಪೈರ ಮಾಡಿ ಮಾರಣಾಂತಿಕ ಹಲ್ಲೆ ಮಾಡಿದ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀ. ಗುಂಡು @ ಗುಂಡೇರಾವ ತಂದೆ  ಶೀಲವಂತೆ ಬಿಂಗೋಳಿ ಉ;ಜೆಸ್ಕಾಂ ಲೈನಮ್ಯಾನ  ಸಾ;ಹೀರೆಜೇವರಗಿ ಹಾವ; ನಿಂಬೆತೋಟಾ ಅಫಜಲಪೂರ ಜಿ;ಕಲಬುರಗಿ. ಇವರು ದಿನಾಂಕ 21-12-2015 ರಂದು ಮದ್ಯಾನ 1-00 ಗಂಟೆಯ ಸುಮಾರಿಗೆ ತಾನು ಕಲಬುರಗಿಯ ನ್ಯಾಯಾಲಯದಲ್ಲಿ ತಾನು ಆರೋಪಿತನಾಗಿರುವ ಕೇಸಿನ ಪೇಶಿ ಮುಗಿಸಿಕೊಂಡು ಮರಳಿ ಅಂಕಲಗಿಗೆ ಹೋಗುವ ಕುರಿತು ಹೀರಾಪೂರದ ವೇರ ಹೌಸ ರೈಲ್ವೇ ಗೇಟ ದಾಟಿ ಮುಂದೆ ಒಂದು ಇಟ್ಟಂಗಿ ಭಟ್ಟಿ  ಹತ್ತಿರ ಹೋಗಿ ತಾನು ನಡೆಯಿಸುತ್ತಿರುವ ಮೋಟಾರ ಸೈಕಲ ನಂ.ಕೆ.ಎ.32ಎಸ್. 1434 ರೋಡಿನ ಬದಿಗೆ ನಿಲ್ಲಿಸಿ ಬೈಲಕಡೆಗೆ ಹೋಗುತ್ತಿರುವಾಗ ಅದೇವೇಳಗೆ ಆತನ ಹಿಂದನಿಂದ ಫೈರಿಂಗ ಮಾಡಿದ ಶಬ್ದ ಕೇಳಿಬಂದಾಗ ತಾನು ಹಿಂತಿರುಗಿ ನೋಡಲು ಈ ಮೋದಲು ಕೇಸು ಮಾಡಿದ ನಾಗೇಶ ಚವ್ಹಾಣ ಇತನ ಸಹೋದರ ಅಮೀತ ಚವ್ಹಾಣ ಇದ್ದು  ಅವನ ಕೈಯಲ್ಲಿ ಪಿಸ್ತೂಲ ಇದ್ದು ಇನ್ನೊಂದು ಸಲ ಫೈರಿಂಗ ಮಾಡುವಾಗ ಆತನು ತಪ್ಪಿಸಿಕೊಳ್ಳುವಾಗ ಗುಂಡು @ ಗುಂಡೇರಾವ ಬಿಂಗೋಳಿ ಇತನ ಎಡಗೈ ರಟ್ಟೆಗೆ ಗುಂಡು ತಗಲಿದ್ದರಿಂದ ರಕ್ತಸ್ರಾವ ವಾಗುತ್ತಿದ್ದಾಗ ಇಟ್ಟಂಗಿ ಬಟ್ಟಿ ಮತ್ತು ರೋಡಿಗೆ ಹೋಗುವವರು ಬರುವಷ್ಟರಲ್ಲಿ ಅಮೀತ ಚವ್ಹಾಣ ಮತ್ತು ಆತನ ಸಂಗಡ ಬಂದ ರಾಜು ಹಾಗೂ ಲಕ್ಷ್ಮಣ ಮತ್ತು ಹರಿಶ್ಚಂದ್ರ  ಸಾ;ಎಲ್ಲರೂ ಬಳ್ಳುರಗಿ ತಾಂಡಾ ತಾ;ಅಫಜಲಪೂರ  ಇವರು ತಮ್ಮ ಎರಡು ಮೋಟಾರ ಸೈಕಲಗಳ ಮೇಲೆ ಓಡಿಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಿರುಕಳ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡ ಪ್ರ್ರಕರಣ :
ರೇವೂರ ಠಾಣೆ : ಶ್ರೀ ನಾಗೇಂದ್ರಪ್ಪಾ ತಂದೆ ಮಲ್ಲೇಶಪ್ಪಾ ಟೆಂಗಳಿ ಕೆಲಸ ಸಾ:ಹೇರುರ (ಕೆ) ತಾ:ಚಿತ್ತಾಪೂರ ಜಿ:ಕಲಬುರಗಿ ಇವರ ಮಗಳಾದ ಚಂದ್ರಕಲಾ ಇವಳಿಗೆ ಸುಮಾರು 20 ವರ್ಷಗಳ ಹಿಂದೆ ಅಫಜಲಪೂರ ತಾಲೂಕಿನ ಮದರಾ (ಕೆ) ಗ್ರಾಮದ ಸಿದ್ರಾಮಪ್ಪ ಮುಲಗೆ ರವರ ಮಗನಾದ ಸುಭಾಷ ಮುಲಗೆ ರವರಿಗೆ ಕೊಟ್ಟು ಮದುವೆ ಮಾಡಿರುತ್ತೆವೆ.  ಈಗ ನನ್ನ ಮಗಳಿಗೆ ಲಕ್ಷ್ಮಿಕಾಂತ 18  ವರ್ಷ,  ಪ್ರೀಯಂಕಾ 16 ವರ್ಷ,  ಅವ್ವಮ್ಮ 15 ವರ್ಷ,  ರೇಣುಕಾ 12 ವರ್ಷ,  ಗಣೇಶ 8 ವರ್ಷ,  ಅಂತಾ ಇಬ್ಬರು ಗಂಡು ಮತ್ತು ಮೂವರು ಹೆಣ್ಣು ಮಕ್ಕಳು ಒಟ್ಟು ಐದು ಜನ ಮಕ್ಕಳಿರುತ್ತಾರೆ.ನನ್ನ ಅಳಿಯನಿಗೆ ಸುಸಲಾಬಾಯಿ, ಮಹಾದೇವಿ, ಶಿವಕಾಂತ ಅಂತಾ ಮೂರು ಜನ ಅಕ್ಕದಿಂರಿದ್ದು ಸುಸಲಾಬಾಯಿಗೆ ಕಲಬುರಗಿಗೆ ಕೊಟ್ಟು ಮದುವೆ ಮಾಡಿದ್ದು ಆಕೆಯ ಗಂಡ ತಿರಿಕೊಂಡಿದ್ದು ಆಕೆಯು ಹೆಚ್ಚಾಗಿ ಮದರಾ (ಕೆ) ಗ್ರಾಮದಲ್ಲಿಯೇ ಇರುತ್ತಾಳೆ. ಮಹಾದೇವಿ ಇವಳಿಗೆ ಮದರಾ (ಕೆ) ಗ್ರಾಮದ ಸಿದ್ದಪ್ಪ ಭೂಸನೂರ ರವರಿಗೆ ಕೊಟ್ಟು ಮದುವೆ ಮಾಡಿರುತ್ತಾರೆ. ಶಿವಕಾಂತಾ ರವರಿಗೆ ಸುಂಟನೂರ ಗ್ರಾಮಕ್ಕೆ ಕೊಟ್ಟು ಮದುವೆ ಮಾಡಿರುತ್ತಾರೆ. ನನ್ನ ಅಳೆಯನ ಹೆಸರಿಗೆ ಒಟ್ಟು 40 ಎಕರೆ ಜಮೀನು ಇರುತ್ತದೆ. ಮದುವೆಯಾದ 2 ವರ್ಷದವರೆಗೆ ಚನ್ನಾಗಿದ್ದು ನಂತರ ನನ್ನ ಅಳೆಯ ಕುಡಿತ್ತಕ್ಕೆ, ಇಸ್ಪಿಟಕ್ಕೆ ಹೆಚ್ಚಾಗಿ ಕಾಲ ಕಳೆದು ಕೆಲಸ ಮಾಡದೆ ಮನೆಯಲ್ಲಿದ್ದ ಹಣವನ್ನು ತೆಗೆದುಕೊಂಡು ಹೋಗಿ ಹಾಳು ಮಾಡಿರುತ್ತಾನೆ ಹಾಗೂ ಕುಡಿತಕ್ಕಾಗಿ ಮತ್ತು ಇಸ್ಪಿಟಗಾಗಿ ಲಕ್ಷಾಂತರ ರೂಪಾಯಿ ಸಾಲವನ್ನು ಕೂಡ ಮಾಡಿರುತ್ತಾನೆ. ಅದಕ್ಕೆ ನನ್ನ ಮಗಳು ಹೊಲದಿಂದ ಬೆಳೆಯ ಮೂಲಕ ಬಂದ ಹಣದಲ್ಲಿ ಸಾಲತಿರಿಸುತ್ತಾ ಕೂಲಿ ಕೆಲಸ ಮಾಡಿಕೊಂಡು ಕುಟುಂಬವನ್ನು ಸಾಗಿಸುತ್ತಾ ಬಂದಿರುತ್ತಾಳೆ ನನ್ನ ಮಗಳು ಕುಡಿಯಬೆಡ ಇಸ್ಪಿಟ ಆಟವಾಡಿ ಹಣ ಹಾಳು ಮಾಡಬೆಡ ಅಂತಾ ಹೇಳಿದಕ್ಕೆ ದಿನಾಲು ಅವಳಿಗೆ ಬೈಯುವುದು, ಹೊಡೆಯುದು ಮಾಡುತ್ತಾ ಅವಳಿಗೆ ದೈಹಿಕ ಮತ್ತು ಮಾನಸಿಕ ಕಿರಕುಳ ನೀಡುತ್ತಾ ಬಂದಿರುತ್ತಾನೆ. ಇತಿಚ್ಚೆಗೆ 5-6 ವರ್ಷದಿಂದ ಹೊಲವನ್ನು ಮಾರುತ್ತೆನೆ ಅಂತಾ ಅಂದಿದಕ್ಕೆ ನನ್ನ ಮಗಳು ಹೊಲವನ್ನು ಮಾರಿ ಹಣ ಹಾಳು ಮಾಡುತಿಯಾ ಹೋಲ ಮಾರ ಬೇಡ ಅಂತಾ ಹೇಳಿದಕ್ಕೆ ಈ ವಿಷಯವಾಗಿ ದಿನಾಲು ಅವಳಿಗೆ ಹೊಡೆಬಡೆ ಮಾಡುತ್ತಾ ಬಂದಿರುತ್ತಾನೆ ಆತನ ಅಕ್ಕಂದಿರಾದ ಸುಸಲಾಬಾಯಿ ಮತ್ತು  ಮಹಾದೇವಿ  ರವರು ನನ್ನ  ತಮ್ಮನಿಗೆ  ಎದುರು ಮಾತನಾಡುತ್ತಿಯಾ ಹೋಲ ಮಾರಿದರೆ  ಮಾರಲಿ ಬೀಡು  ನಿಮ್ಮ ಅಪ್ಪಂದು ಏನ್ ಗಂಟು  ಹೋಗುತ್ತದೆ  ಅಂತಾ  ಅವರು ಈ ಹಿಂದೆ  2-3  ಸಲ ಹೊಡೆಬಡೆ ಮಾಡಿ ಕಿರುಕುಳ ನೀಡಿರುತ್ತಾರೆ. ಈ  ವಿಷಯವಾಗಿ     ನಾವು 2 ಸಲ  ಪಂಚಾಯತಿ  ಮಾಡಿ  ತಿಳಿ  ಹೇಳಿರುತ್ತೇವೆ.  ನನ್ನ   ಮಗಳು   ನಿನ್ನೆ  ದಿಃ19/12/2015 ರಂದು   ರಾತ್ರಿ  11 ಪಿಎಮ್ ಕ್ಕೆ  ನನಗೆ ಫೊನ ಮಾಡಿ  ನನ್ನ ಗಂಡ, ಮತ್ತು  ನನ್ನ  ನಾಧಿನಿಯರಾದ  ಮಹಾದೇವಿ  ಮತ್ತು  ಸುಸಲಾಬಾಯಿ ರವರು ನನಗೆ  ಹೊಡೆಬಡೆ  ಮಾಡುತ್ತಿದ್ದಾರೆ.  ಮತ್ತು ನಿನ್ನ ಅವಶ್ಯಕತೆ ನಮಗೆ ಇಲ್ಲ ಸತ್ತು ಹೋಗು ಅಂತಾ   ದೈಹಿಕವಾಗಿ  ಮತ್ತು  ಮಾನಸಿಕವಾಗಿ   ಕಿರುಕುಳ  ನೀಡುತ್ತಿದ್ದಾರೆ ಅಂತಾ   ಹೇಳಿದಾಗ    ನೀನು  ಸುಮ್ಮನೆ  ಇರು  ನಾನು ನಾಳೆ  ಬರುತ್ತೇನೆ  ಅಂತಾ  ಹೇಳಿರುತ್ತೇನೆ. ಇಂದು  ಮುಂಜಾನೆ  11-30  ಗಂಟೆ  ಸುಮಾರಿಗೆ   ನಾನು ನನ್ನ ಮಗಳ  ಊರಿಗೆ  ಬರಲು   ತಯಾರಾಗುತ್ತಿದ್ದಾಗ ನನ್ನ ಮಗಳ ಮಗಳಾದ  ಅವ್ವಮ್ಮ ಇವಳು  ನನಗೆ  ಫೊನ ಮಾಡಿ   ಈಗ  11-20  ಎಎಮ್ ಸುಮಾರಿಗೆ ಅಮ್ಮ  ನಾನು  ಮನೆಯಲ್ಲಿದ್ದಾಗ  ಅಮ್ಮ ದೇವರ  ಕೋಣೆಯಲ್ಲಿ  ಹಗ್ಗ  ತೆಗದುಕೊಂಡು ಹೋಗಿ ಒಳಗಿನ  ಬಾಗಿಲು  ಮುಚ್ಚಿಕೊಂಡಾಗ  ನನಗೆ  ಹೆದರಿಕೆಯಾಗಿ  ನಾನು  ಬಾಗಿಲು  ಬಡಿದರು  ಬಾಗಿಲು   ತೆಗೆದಿರುವುದಿಲ್ಲಾ ನಾನು ಚಿರಾಡುವ  ಶಬ್ದ  ಕೇಳಿ   ಹೋರಗಿನಿಂದ  ಬಂದ   ನಮ್ಮೂರಿನ   ಲಕ್ಷ್ಮಣ  ಹೊಸಮನಿ  ಮತ್ತು  ಬಸವಂತರಾಯ ತಾತಾರವರು  ಮತ್ತು  ಇತರು ಬಂದು ಬಾಗಿಲು ತೆರೆಯಲು ಪ್ರಯತ್ನಿಸಿದರು  ಬಾಗಿಲು ತೆರೆಯದಿದ್ದಾಗ  ಅವರು  ಮನೆಯ  ಮಾಳಿಗೆಯ  ಮೇಲೆ  ಹೋಗಿ  ಹಾರಿಯಿಂದ  ಮಾಳಿಗೆಯಲ್ಲಿನ  ಮಣ್ಣು ಕೇದರಿ  ನೋಡಿದಾಗ  ನಮ್ಮ ಅಮ್ಮ  ಹಗ್ಗದಿಂದ  ಜಂತಿಗೆ   ನೇಣು  ಹಾಕಿಕೊಂಡು  ಬಡದಾಡುತ್ತಿದ್ದಳು   ಆಗ  ಅವರು  ಮೇಲಿನ  ಹಗ್ಗ  ಕಡಿದು  ಮಾಳಿಗೆಯ   ಮೂಲಕ    ಮನೆಯಲ್ಲಿ   ನಮ್ಮ ಅಮ್ಮಳಿಗೆ   ಬಾಗಿಲು ತೆರೆದು   ಹೋರಗೆ ತಂದಿರುತ್ತಾರೆ. ಆದರೆ   ಹೋರಗೆ  ತಂದು  ಸ್ವಲ್ಪ ಬಾಯಿಯಲ್ಲಿ  ನೀರು   ಹಾಕಿದ  ತಕ್ಷಣ   ಸತ್ತು  ಹೋಗಿರುತ್ತಾಳೆ ಅಂತಾ  ತಿಳಿಸಿದಾಗ  ನಾನು  ನನ್ನ  ಹೆಂಡತಿ  ನನ್ನ ಮಗ  ಶ್ರೀಧರ   ಮತ್ತು  ಗ್ರಾಮಸ್ಥರು  ಬಂದು  ನೋಡಲು  ನನ್ನ ಮಗಳು  ನೇಣು  ಹಾಕಿಕೊಂಡಿದ್ದು     ನಿಜವಿರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರೇವೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಾತಿ ನಿಂದನೆ ಮಾಡಿದ ಪ್ರಕರಣ :
ಜೇವರ್ಗಿ ಠಾಣೆ : ದಿನಾಂಕ 17.12.2015 ರಂದು ಮುಂಜಾನೆ 8.00 ಗಂಟೆಗೆ ಮಲ್ಲಾ (ಕೆ) ಗ್ರಾಮದಲ್ಲಿ ಶ್ರೀ ಬಸಪ್ಪ ತಂದೆ ಶರಣಪ್ಪ ದೋರಿ ಜಾತಿ: ಬೇಡರ ಸಾ: ಮಲ್ಲಾ (ಕೆ) ತಾ: ಜೇವರಗಿ  ರವರಿಗೆ  ಆಂದ್ರ ರೆಡ್ಡಿ ಜನರಿಗೆ ನೀರು ಬಿಡುವ ವಿಷಯದಲ್ಲಿ. ಸಂಗಣಗೌಡ ತಂದೆ ಸಿದ್ದಣ್ಣಗೌಡ ಪೊಲೀಸ್ ಪಾಟೀಲ ಸಾ: ಮಲ್ಲಾ (ಕೆ) ಇತನು ಫಿರ್ಯಾದಿದಾರನಿಗೆ ಬಸ್ಯಾ ಬ್ಯಾಡ ಜಾತಿಯವನೆ ನಿನಗೆ 15 ದಿವಸಗಳಲ್ಲಿ ಕೊಲೆ ಮಾಡುತ್ತೇನೆ ಅದ್ಕಕಾಗಿ ಎಲ್ಲಾ ತಯ್ಯಾರಿ ಮಾಡಿದಿನಿ ಏನು ತಿಳಿದಿ ಊರಲ್ಲಿ ನಾನು ಗೌಡ ಹೇಳಿದ ಹಾಗೆ ಕೇಳಬೇಕು ಅಂತ ಜೀವದ ಭಯ ಹಾಕಿ ಜಾತಿ ನಿಂದನೆ ಮಾಡಿರುತ್ತಾನೆ ಅಂತ  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

19 December 2015

Kalaburagi District Reported Crimes

ವರದಕ್ಷಣೆ ಕಿರುಕಳ ಪ್ರಕರಣ :
ಮಹಿಳಾ ಠಾಣೆ : ಶ್ರೀಮತಿ ಬಿಬಿ ಫಾತೀಮಾ ಗಂಡ ಇಕ್ಬಾಲ್ ಅಹ್ಮದ ಸಾ: ಮುಸ್ತಫಾ ಮಜೀದ ಮೀಜಗೊರಿ  ಗಂಜ ರೋಡ ಕಲಬುರಗಿ  ರವರ ಮದುವೆಯು ದಿನಾಂಕ 26-06-2013 ರಂದು ಹುಸೇನ ಫಂಕ್ಷನ ಹಾಲ್ ಮುಸ್ಲಿಂ ಸಂಪ್ರದಾಯದಂತೆ ಮಾಡಿದ್ದು, ಇರುತ್ತದೆ. ಮದುವೆಯ ಕಾಲಕ್ಕೆ ಮೂರು ತೊಲೆ ಬಂಗಾರ 21051 ರೂ. ಹಣ ಹಾಗೂ ಗೃಹ ಬಳಕೆ ಸಾಮಾನುಗಳನ್ನು ಕೊಟ್ಟು ಮದುವೆ ಮಾಡಿಕೊಟ್ಟಿದ್ದು, ಒಟ್ಟು 3 ಲಕ್ಷ ರೂ, ಮದುವೆಯಲ್ಲಿ ಖರ್ಚಾಗಿದ್ದು, ಇರುತ್ತದೆ. ಮದುವೆಯಾದ ಎರಡು ದಿವಸದಲ್ಲೇ 1} ಇಕ್ಬಾಲ್  ಅಹ್ಮದ ತಂದೆ ಮೆಹಬೂಬ ಅಲಿ 2} ಮಹ್ಮದ ಅಲಿ  3} ಸುರೈಯ್ಯಾ  ಗಂಡ ಮೇಹಮೂದ ಅಲಿ 4} ಇರಶಾದ ತಂದೆ ಮೇಹಮೂದ ಅಲಿ  ಸಾ: ಎಲ್ಲರೂ  ಸಾಬೀರ ಕ್ಲಾಸ್ ಸೇಂಟರ್ ಮುಸ್ಲಿಂ ಚೌಕ ಕಲಬುರಗಿ 5} ಝೇನತ  ಗಂಡ ಮುಜಾಹೀದ ಸಾ: ಸೋಲಾಪೂರ ಮಹಾರಾಷ್ಟ್ರ ಇವರು ಫಿರ್ಯಾದಿಯೊಂದಿಗೆ ಜಗಳ ತೆಗೆದು ನಿನ್ನ ತವರು ಮನೆಗೆ ಹೋಗಿ ಇನ್ನೂ 3 ಲಕ್ಷ ರೂಪಾಯಿ ತೆಗೆದುಕೊಂಡು ಬಾ ಅಂತಾ ಅವಾಚ್ಯ ಶಬ್ದಗಳಿಂದ ಬೈದು ವರದಕ್ಷಣೆ ಬೇಡಿಕೆ ಇಟ್ಟಿದ್ದರಿಂದ ನಮ್ಮ ಸಮಾಜದಲ್ಲಿ ನ್ಯಾಯಾ ಪಂಚಾಯತಿ ಮಾಡಿದರೂ ಸಹ ಪಂಚಾಯತಿಯಲ್ಲಿ ನಮಗೆ 3 ಲಕ್ಷ ರೂಪಾಯಿ ವರದಕ್ಷಣೆ ಬೇಕು ನೀವು ವರದಕ್ಷಣೆ ಕೊಡದೇ ಇದ್ದರೇ ನಾನು ಇನ್ನೊಂದು ಮದುವೆ ಮಾಡಿಕೊಳ್ಳುತ್ತೇನೆ ನನಗೆ ಅವರು 5 ಲಕ್ಷ ರೂಪಾಯಿ ಕೊಡುತ್ತಾರೆ ಅಂತಾ ಅವಾಚ್ಯ ಶಬ್ದಗಳಿಂದ ಬೈದು ಫಿರ್ಯಾದಿದಾರಳಿಗೆ ಆರೋಪಿತನು ಮನೆಯಿಂದ ಹೊರಗೆ  ಹಾಕಿದ್ದು, ಇರುತ್ತದೆ. ದಿನಾಂಕ 01-10-2013 ರಂದು ಫಿರ್ಯಾದಿದಾರಳು ತನ್ನ ಸೋದರನೋಂದಿಗೆ  ಹಾಗೂ ಶಾಹಾಜಾದಿ ಬೇಗಂ ಆರೊಪಿತರ ಮನರಗೆ ಹೋದಾಗ ಆರೋಪಿ 1 ನೇದ್ದವನ್ನು ಫಿರ್ಯಾದಿಗೆ ಕೈಯಿಂದ ಹೋಡೆದು ಕುದಲು ಹಿಡಿದು ಎಳದಾಡಿದ್ದು ಆರೋಪಿ 1 ರಿಂದ 5 ನೇದ್ದವರು ಫೀರ್ಯಾದಿಗೆ ತವರು ಮನೆಯಿಂದ 3 ಲಕ್ಷ ರೂಪಾಯಿ ವರದಕ್ಷೆಣೆ ಹಣ ತೆಗೆದುಕೋಂಡು ಬಾ ಅಂತಾ ಎಂದು ಮಾನಸಿಕ ದೈಹಿಕ ಕಿರುಕುಳ ಕೊಟ್ಟಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.   
ಹಲ್ಲೆ ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ಸಂತೋಷ ತಂದೆ ಅರ್ಜುನ ಬಿರಾದಾರ ಸಾ|| ಕರಜಗಿ ರವರು ಉಡಚಾಣ ಗ್ರಾಮದ ವೇಟನರಿ ಆಪೀಸನಲ್ಲಿ ಸಹಾಯಕ ಕೆಲಸ ಮಾಡಿಕೊಂಡು ಜಿವನ ಸಾಗಿಸುತ್ತಿರುತ್ತೇನೆ. ನಮ್ಮ ಅಣ್ಣ ತಮ್ಮಕಿಯ ಮಲ್ಲಿಕಾರ್ಜುನ @ಪಿಂಟು ತಂದೆ ಶಂಕರ ಬಿರಾದಾರ ಈತನು ದಿನಾಂಕ 15-12-2015 ರಂದು ರಾತ್ರಿ ನಮ್ಮೂರಿನ ಪ್ರದೀಪ ಸುದಾಮ ಈತನ ಅಂಗಡಿಯ ಮುಂದೆ ಸದರಿ ಪ್ರದೀಪನೊಂದಿಗೆ ಮಾತಾಡುತ್ತಾ ತಮಾಸೆ ಮಾಡುತ್ತಾ ನಗುತ್ತಾ ನಿಂತಿದ್ದಾಗ ನಮ್ಮೂರಿನ ಶ್ರೀಶೈಲ @ ಮುದಕು ತಂದೆ ಭೀಮಶಾ ಲಾಳಸಂಗಿ ಈತನು ನಮ್ಮ ಮಲ್ಲಿಕಾರ್ಜುನನಿಗೆ ಏನೊ ಬೋಸಡಿ ಮಗನೆ ನನ್ನ ನೋಡೆ ನಗ್ತಿ ಅಂತಾ ಜಗಳ ತಗೆದು ಹೊಡೆ ಬಡೆ ಮಾಡಿರುತ್ತಾನೆ ಅಂತಾ ಮಲ್ಲಿಕಾರ್ಜುನನು ನನಗೆ ತಿಳಿಸಿರುತ್ತಾನೆ. ನಿನ್ನೆ ದಿನಾಂಕ 16-12-2015 ರಂದು ರಾತ್ರಿ 8:00 ಗಂಟೆ ಸುಮಾರಿಗೆ ನಾನು ಮತ್ತು ನಮ್ಮ ಅಣ್ಣ ತಮ್ಮಕಿಯ ಮಲ್ಲಿಕಾರ್ಜುನ ಇಬ್ಬರು ನಮ್ಮೂರಿನ ಅಂಬಿಗರ ಚೌಡಯ್ಯ ಸರ್ಕಲ ಹತ್ತಿರ ಮಾತಾಡುತ್ತಾ ನಿಂತಿದ್ದಾಗ,ನಮ್ಮ ಅಣ್ಣ ತಮ್ಮಕಿಯ ಮಲ್ಲಿಕಾರ್ಜುನನ ಜೋತೆಗೆ ಜಗಳ ತಗೆದ ಶ್ರೀಶೈಲ ಲಾಳಸಂಗಿ ಮತ್ತು ಸಿದ್ದಪ್ಪ ಲಾಳಸಂಗಿ, ಪರಶುರಾಮ ಲಾಳಸಂಗಿ, ಪುಂಡಲಿಕ ಲಾಳಸಂಗಿ, ಶರಣಪ್ಪ ಲಾಳಸಂಗಿ, ಕೃಷ್ಣಪ್ಪ ಲಾಳಸಂಗಿ, ಹಾಗೂ ಅವರ ತಂದೆ ಭೀಮಶಾ ಲಾಳಸಂಗಿ ಇವರೆಲ್ಲರೂ ಕೂಡಿ ನಮ್ಮ ಹತ್ತಿರ ಬಂದು ನಮಗೆ ಏನ್ರೋ ಬೋಸಡಿ ಮಕ್ಕಳ್ಯಾ ನಮ್ಮ ನೋಡೆ ನಗೊವಷ್ಟು ದೈರ್ಯ ಬಂದಾದ ನಿಮಗೆ ಅಂತಾ ಅಂದವರೆ ಎಲ್ಲರೂ ಕೂಡಿ ನನಗೆ ಮತ್ತು ಮಲ್ಲಿಕಾರ್ಜುನನಿಗೆ ಕೈಯಿಂದ ಹೊಡೆಯುವುದು ಕಾಲಿನಿಂದ ಒದೆಯುವುದು ಮಾಡುತ್ತಿದ್ದರು, ಆಗ ನಾನು ಅವರಿಂದ ತಪ್ಪಿಸಿಕೊಂಡು ಓಡಿ ಹೋಗುತ್ತಿದ್ದಾಗ ಸಿದ್ದಪ್ಪ ಲಾಳಸಂಗಿ ಮತ್ತು ಶ್ರೀಶೈಲ ಲಾಳಸಂಗಿ ಇಬ್ಬರು ಕೂಡಿ ನನ್ನನ್ನು ಬೆನ್ನು ಹತ್ತಿ ಹಿಡಿದು ನನ್ನನ್ನು ಹೋಗದಂತೆ ತಡೆದು ನಿಲ್ಲಿಸಿ ಹೊಡೆ ಬಡೆಮಾಡುತ್ತಿದ್ದರು, ಸದರಿಯವರು ನಮಗೆ ಹೊಡೆಯುತ್ತಿದ್ದಾಗ ಅಲ್ಲೆ ಇದ್ದ ಅಂಬಣ್ಣ ನರಗೋದಿ,ಶ್ರೀಶೈಲ ಸುಲ್ತಾನಪೂರ,ಸಿದ್ದು ಕೋಳಿ ಇವರು ನಮಗೆ ಹೊಡೆಯುವುದನ್ನು ಬಿಡಿಸಿದರು.ಆಗ ಸದರಿಯವರು ಮಕ್ಕಳೆ ಇವರು ಬಂದು ಬಿಡಿಸಿದ್ದಕ್ಕೆ ನೀನು ಉಳಿದುಕೊಂಡಿರಿ ಮುಂದೆ ನಿಮಗೆ ಜೀವ ಸಹಿತ ಬಿಡುವುದಿಲ್ಲ ಅಂತ ಜೀವ ಬೆದರಿಕೆ ಹಾಕಿ ಹೊದರು. ಸದರಿಯವರು ನಮಗೆ ಹೊಡೆದರಿಂದ ನನ್ನ ಬೆನ್ನಿಗೆ ಮತ್ತು ಏರಡು ಕೈಗಳ ರಟ್ಟೆಗೆ ಒಳಪೆಟ್ಟುಗಳು ಆಗಿರುತ್ತವೆ.ಮಲ್ಲಿಕಾರ್ಜುನನಿಗೆ ಅವನ ಬಲ ಕಪಾಳಿನ ಮೇಲೆ ಒಳಪೆಟ್ಟು ಹಾಗೂ ಮೈ ಕೈಗೆ ಗುಪ್ತಗಾಯಗಳು ಆಗಿರುತ್ತವೆ.ಸದರಿ ಘಟನೆಯ ಮನೆಯಲ್ಲಿ ವಿಚಾರಿಸಿಕೊಂಡು ಈಗ ತಡವಾಗಿ ಠಾಣೆಗೆ ಬಂದಿರುತ್ತೇವೆ.  ಕಾರಣ 1) ಶ್ರೀಶೈಲ ತಂದೆ ಭೀಮಶಾ ಲಾಳಸಂಗಿ 2) ಸಿದ್ದಪ್ಪ ತಂದೆ ಭೀಮಶಾ ಲಾಳಸಂಗಿ 3) ಪರಶುರಾಮ ತಂದೆ ಭೀಮಶಾ ಲಾಳಸಂಗಿ, 4) ಪುಂಡಲಿಕ ತಂದೆ ಭೀಮಶಾ ಲಾಳಸಂಗಿ, 5) ಶರಣಪ್ಪ ತಂದೆ ಭೀಮಶಾ ಲಾಳಸಂಗಿ, 6) ಕೃಷ್ಣಪ್ಪ ತಂದೆ ಭೀಮಶಾ ಲಾಳಸಂಗಿ 7) ಭೀಮಶಾ ತಂದೆ ಶಂಕರಲಿಂಗ ಲಾಳಸಂಗಿ ಸಾ|| ಎಲ್ಲರೂ ಕರಜಗಿ ಗ್ರಾಮ ಇವರೆಲ್ಲರೂ ನನ್ನ ಅಣ್ಣ ತಮ್ಮಕಿಯ ಮಲ್ಲಿಕಾರ್ಜುನನು ಶ್ರೀಶೈಲನಿಗೆ ನೋಡಿ ನಕ್ಕಿದ್ದಾನೆ ಅಂತಾ,ಸದರಿಯವರೆಲ್ಲರೂ ಏಕೊದ್ದೇಶದಿಂದ ಅಕ್ರಮವಾಗಿ ಗುಂಪುಕಟ್ಟಿಕೊಂಡು ಬಂದು ನನಗೆ ಮತ್ತು ನನ್ನ ಅಣ್ಣ ತಮ್ಮಕಿಯ ಮಲ್ಲಿಕಾರ್ಜುನ @ಪಿಂಟು ಇಬ್ಬರಿಗೂ ಅವಾಚ್ಯ ಶಬ್ದಗಳಿಂದ ಬೈದು, ತಡೆದು ನಿಲ್ಲಿಸಿ, ಕೈಯಿಂದ ಹೊಡೆದು, ಕಾಲಿನಿಂದ ಒದ್ದು ದುಖಾಪತ ಪಡಿಸಿ ಜೀವ ಬೇದರಿಕೆ ಹಾಕಿರುತ್ತಾರೆ, ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ  ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

18 December 2015

Kalaburagi District Police

ಪತ್ರಿಕಾ ಪ್ರಕಟಣೆ

ದಿನಾಂಕ: 22-12-2015 ರಂದು ಕಲಬುರಗಿ ನಗರಕ್ಕೆ ಗೌರವಾನ್ವಿತ ರಾಷ್ಟ್ರಪತಿಗಳು ಭಾರತ ಸರ್ಕಾರ ರವರು ಆಗಮಿಸುತ್ತಿದ್ದು ಅವರ ಸುರಕ್ಷತೆ ಹಿತದೃಷ್ಠಿಯಿಂದ ಕಲಬುರಗಿ ನಗರದ ಸಂಚಾರ ವ್ಯವಸ್ಥೆಯಲ್ಲಿ ಈ ಕೆಳಕಂಡ ಮಾರ್ಗಗಳನ್ನು ಬದಲಾಯಿಸಲಾಗಿರುತ್ತದೆ.
       ಕಲಬುರಗಿ ಮಹಾನಗರದ ಸಾರ್ವಜನಿಕರಲ್ಲಿ ಕೋರುವದೇನೆಂದರೆ ದಿನಾಂಕ:22-12-2015 ರಂದು ಕಲಬುರಗಿ ನಗರಕ್ಕೆ ಗಣ್ಯಾತೀಗಣ್ಯರು ಆಗಮಿಸುತ್ತಿಲ್ಲಿದ್ದು,ಅವರ ಸುರಕ್ಷತೆ ಹಿತದೃಷ್ಠಿಯಿಂದ ನಗರದ ಈ ಕೆಳಕಂಡ ಮಾರ್ಗಗಳಲ್ಲಿನ ಸಂಚಾರವನ್ನು ಬದಲಾಯಿಸಿ ಪರ್ಯಾಯ ಮಾರ್ಗಗಳನ್ನು ಸೂಚಿಸಲಾಗಿರುತ್ತದೆ. ಸಾರ್ವಜನಿಕರು ಈ ಕೆಳಕಂಡ ಮಾರ್ಗಗಳಲ್ಲಿ ಆ ದಿನ ಬೆಳಿಗ್ಗೆ 10=00 ಗಂಟೆಯಿಂದ ಮಧ್ಯಾಹ್ನ 2=00 ಗಂಟೆವರೆಗೆ ಸಂಚರಸಿ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಲು ಕೋರಲಾಗಿದೆ.

1)    ಹಳೆ ಎಸ್.ಪಿ. ಆಫೀಸ್ ಮಾರ್ಗ ದಿಂದ ಸರಕಾರಿ ಆಸ್ಪತ್ರೆಯ ಕ್ರಾಸ್ ಮಾರ್ಗದಲ್ಲಿ ಸಂಚರಿಸುವರು ಹಳೆ ಎಸ್.ಪಿ. ಆಫೀಸ್, ಕುಳಗೇರಿ ಕ್ರಾಸ್, ಬಿಗ್ ಬಜಾರ ಮುಖಾಂತರವಾಗಿ ಸಂಚರಿಸುವದು.
2)   ಸರಕಾರಿ ಆಸ್ಪತ್ರೆ ಕ್ರಾಸ್ ದಿಂದ ಆರ್.ಟಿ.ಓ. ಕ್ರಾಸ್ ದಿಂದ ರಾಜಾಪೂರ ಕಡೆಗೆ ಹೋಗುವವರು ಚಂದ್ರಶೇಖರ ಪಾಟೀಲ ಕ್ರೀಡಾಂಗಣದ ಪಕ್ಕದಲ್ಲಿರುವ ರಸ್ತೆ ಮಾರ್ಗದ ಮುಖಾಂತರವಾಗಿ ಸಂಚರಿಸಿ ರಾಜಾಪೂರ ಮತ್ತು ಶಹಾಬಾದ ಕಡೆಗೆ ಹೋಗ ಬಹುದಾಗಿರುತ್ತದೆ.
3)   ಸೇಡಂ, ಚಿತ್ತಾಪೂರ, ಮಳಖೇಡ ಕಡೆ ಸಂಚರಿಸುವ ವಾಹನಗಳು ಸಂತ್ರಾಸವಾಡಿ, ಎಮ್.ಜಿ.ರೋಡ . ರಿಂಗ ರೋಡ ,ಹಾಗರಗಾ ಕ್ರಾಸ್ , ಖಾಜಾ ಕೋಟನೂರ, ಶ್ರೀನಿವಾಸ ಸರಡಗಿ ಮುಖಾಂತರವಾಗಿ ಅಥವಾ ಬುದ್ದ ವಿಹಾರ ಗೇಟನಿಂದ ಕುಸನೂರ, ರಾಜಾಪೂರ ಮಾರ್ಗವಾಗಿ ನಗರದೋಳಗೆ ಬರುವದು ಮತ್ತು ಹೋಗುವದು  ಮಾಡಲು ಸೂಚಿಸಿದೆ.
4)   ಗುಬ್ಬಿ ಕಾಲೋನಿ, ಆದರ್ಶ ನಗರ, ಬಡೆಪೂರ, ಸುಂದರ ನಗರ, ಭರತ ನಗರ ತಾಂಡಾ ನಿವಾಸಿಗಳು ಎಮ್.ಜಿ. ರೋಡ ಮುಖಾಂತರವಾಗಿ ಸಂಚರಿಸುವದು.
5)  ಮೋ/ಸೈಕಲ್ ಸವಾರರು ಮತ್ತು ವಾಹನದ ಚಾಲಕರು ಜಯ ನಗರ, ಓಕಳಿ ಕ್ಯಾಂಪ, ಭಾಗ್ಯ ನಗರ, ಪೂಜಾ ಕಾಲೋನಿ, ಕುಸನೂರ ಮತ್ತು ಕ್ರೀಡಾಂಗಣ ಪಕ್ಕದಲ್ಲಿಯ ರೋಡ ದಿಂದ ನಗರದೋಳಗೆ ಸಂಚರಿಸುವದು.