POLICE BHAVAN KALABURAGI

POLICE BHAVAN KALABURAGI

15 July 2015

Kalaburagi District Reported Crimes

ಕಳವು ಪ್ರಕರಣ :
ಮಾಹಾತ್ಮಾ ಬಸವೇಶ್ವರ ನಗರ ಠಾಣೆ : ಶ್ರೀ ಮೋಹನ ಕುಮಾರ ತಂದೆ ಬಸವರಾಜ ಕೋಟಗಿ ಸಾಃ ಮನೆ ನಂ. 2-909, ಜಿ.ಡಿ.ಎ 03 ನೇ ಹಂತ ವಿರೇಂದ್ರ ಪಾಟೀಲ್ ಬಡಾವಣೆ ಕಲಬುರಗಿ ರವರು ಬೆಂಗಳೂರು ನಲ್ಲಿ ಖಾಸಗಿ ಕೆಲಸ ಮಾಡಿಕೊಂಡಿದ್ದು ವಿರೇಂದ್ರ ಪಾಟೀಲ್ ಬಡಾವಣೆ, ಜಿ.ಡಿ.ಎ ಕಾಲೋನಿಯಲ್ಲಿರುವ ತಮ್ಮ ಮನೆಗೆ ದಿನಾಂಕಃ 05/07/2015 ರಂದು 06:00 ಪಿ.ಎಂ.ಕ್ಕೆ ಕೀಲಿ ಹಾಕಿಕೊಂಡು ಹೋಗಿದ್ದು ಬೆಂಗಳೂರು ನಿಂದ ಮರಳಿ ದಿನಾಂಕಃ 14/07/2015 ರಂದು 05:00 ಪಿ.ಎಂ. ಕ್ಕೆ ಬಂದು ನೋಡಲಾಗಿ ಯಾರೋ ಕಳ್ಳರು ಮನೆಗೆ ಹಾಕಿದ ಬೀಗ ಮುರಿದು ಮನೆಯ ಅಲೆಮಾರಿಯಲ್ಲಿಟ್ಟ ಬಂಗಾರದ ಆಭರಣಗಳು  ಒಟ್ಟು 65,000/- ರೂ. ಬೆಲೆ ಬಾಳುವ ಬಂಗಾರ ಮತ್ತು ಸೀರೆಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾತ್ಮಾ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೀಟರ ಬಡ್ಡಿ ಕೊಡದಿದ್ದಕ್ಕೆ ಜೀವದ ಬೇದರಿಕೆ ಹಾಕಿದ ಪ್ರಕರಣಗಳು :
ನಿಂಬರ್ಗಾ ಠಾಣೆ : ಶ್ರೀ ಸೈದಪ್ಪ ತಂದೆ ಹಣಮಂತ ಮಾತಾರಿ ಸಾ: ಮಾಡಿಯಾಳ ರವರ ತಾಯಿಯಾದ ಶ್ರೀಮತಿ ಗೌರಾಬಾಯಿ ಇವರ ಹೆಸರಿಗೆ 2-ಎಕರೆ, 36- ಗುಂಟೆ ಜಮೀನಿದ್ದು  ನನ್ನ  ತಂದೆ ತಾಯಿಗೆ ಒಟ್ಟು 5 ಜನ ಗಂಡು ಮಕ್ಕಳಿದ್ದು ಅದರಲ್ಲಿ ನಾನೊಬ್ಬನೆ ಒಕ್ಕಲುತನ ಮಾಡಿತ್ತಿದ್ದು ಉಳಿದವರೆಲ್ಲರೂ ಇನ್ನುವಿಧ್ಯಾಬ್ಯಾಸ ಮಾಡುತ್ತಿದ್ದಾರೆ ಇಡಿ ಕುಟುಂಬದ ಜವಾಬ್ದಾರಿ ನನ್ನ ಒಬ್ಬನ ಮೇಲೆ ಇದ್ದು ಸುಮಾರು ಒಂದು ವರ್ಷದ ಹಿಂದೆ ಹೊಲದ ಲಾಗೋಡಿಗಾಗಿ ನಾನು ನಮ್ಮೂರಿನ  ಜಗನ್ನಾಥ ತಂದೆ  ನಾಗಪ್ಪ ಧುತ್ತರಗಿ ಇವರಿಂದ 10,000=00 ರೂಪಾಯಿಗಳನ್ನು 5% ರಂತೆ ಪ್ರತಿ ತಿಂಗಳಿಗೆ ಕರಾರು ಮಾಡಿ ಪಡೆದುಕೊಂಡಿರುತ್ತೇನೆ. ಯುಗಾದಿ ಸಮಯದಲ್ಲಿ ನಮ್ಮ ಜೋಳದ ಪಟ್ಟಿ ಬಂದ ಬಳಿಕ ಒಟ್ಟು 10,000=00 ಗಂಟು ಮತ್ತು 4000=00 ರೂಪಾಯಿ ಬಡ್ಡಿ ಸೇರಿಸಿ ಒಟ್ಟು ನಾನು ಮತ್ತು ನನ್ನ ತಾಯಿ ಇಬ್ಬರು ಸೇರಿ ಖುದ್ದಾಗಿ ಜಗನ್ನಾಥನ ಮನೆಗೆ ಹೋಗಿ ಕೊಟ್ಟು ಬಂದಿರುತ್ತೇವೆ. ಇದಾದ ಬಳಿಕ ಜಗನ್ನಾಥನು ಆಗಾಗ  ನಾನು ನಮ್ಮೂರಿನಲ್ಲಿ  ಸಿಕ್ಕಾಗಲೇಲ್ಲ ನೀವು ಇನ್ನು ಹೆಚ್ಚಿಗೆ ಹಣ ಕೊಡಬೇಕು ಬಡ್ಡಿಗೆ ಬಡ್ಡಿ ಹಚ್ಚಿನಿ ಒಟ್ಟು 17, 880=00 ರೂಪಾಯಿ ಆಗುತ್ತದೆ ನಿನ್ನ ಮನಿ ದೇವರಿಗೂ ನಾನು ಬಿಡಂಗಿಲ್ಲ ಅಂತಾ ಭಯ ಪಡಿಸುತ್ತಾ ಬಂದಿರುತ್ತಾನೆ ದಿನಾಂಕ 13-07-2015  ರಂದು ಅಂದಾಜು ಸಾಯಂಕಾಲ 06:00 ಗಂಟೆಗೆ ನಾನು ಮತ್ತು  ನನ್ನ ತಾಯಿ ನಮ್ಮ ಮನೆಯ ಮುಂದೆ ಕುಳಿತಾಗ ಜಗನ್ನಾಥನು ನಮ್ಮ ಮನೆಗೆ ಬಂದು ನನಗೆ  ನಾನು ಕೊಟ್ಟ ಸಾಲಕ್ಕೆ ಬಡ್ಡಿಗೆ ಬಡ್ಡಿ ಸೇರಿಸಿ ಮೀಟರ ಬಡ್ಡಿ ಹಚ್ಚಿದ್ದು ಅದರ ಒಟ್ಟು ಲೆಕ್ಕ  17, 880=00 ರೂಪಾಯಿ ಆಗುತ್ತದೆ ನೀನು ಒಟ್ಟು 14,000=00 ರೂಪಾಯಿ ಹಣ ಮಾತ್ರ ಕೊಟ್ಟಿದಿ  ಇನ್ನು 3880=00 ರೂಪಾಯಿ ಕೊಡಬೇಕು ಅಂತಾ ಪೀಡುಸುತ್ತಿದ್ದಾಗ  ನಾನು ನಮಗೆ ಸುಮ್ಮನೆ ತೊಂದರೆ ಕೊಡಬೇಡ ನೀನು ಕೊಟ್ಟ ಹಣಕ್ಕೆ ನಾವು ಕರಾರು ಮಾಡಿದ ಬಡ್ಡಿ ಹಾಕಿ ನಿನಗೆ ಕೊಟ್ಟಿದ್ದೇವೆ ಅಂತಾ ಅಂದಿದಕ್ಕೆ ರಂಡಿ ಮಗನೇ  ಸಾಲ ತಗೆದುಕೊಳ್ಳುವಾಗ ಒಂದು ಮಾತುಕೊಡುವಾಗ ಒಂದು ಮಾತು ಆಡತಿರಿಸುಳಿ ಮಕ್ಕಳ್ಯಾ ಅಂತಾ ಬೈದು  ಎರಡು   ದಿನದಲ್ಲಿ  ಮೀಟರ ಬಡ್ಡಿ ಹಣ 3880=00 ರೂಪಾಯಿ ಕೊಡಲಿಲ್ಲ ಅಂದರ ಊರಾಗ ಹ್ಯಾಂಗ ಸಂಸಾರ ಮಾಡತೀರಿ ಅಂತಾ ಧಮಕಿ ಹಾಕಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಳಂದ ಠಾಣೆ : ಶ್ರೀ. ಸುರೇಶ ತಂದೆ ಗೋಪಿಚಂದ ರಾಠೋಡ ಮು: ಮಮದಾಪೂರ ತಾಂಡಾ ತಾ:ಆಳಂದ ಇವರ ತಂದೆಗೆ 5 ಜನ ಅಣ್ಣತಮ್ಮಂದಿರು ಇದ್ದು ನಮ್ಮ ತಂದೆ-ತಾಯಿಗೆ ವಯಸ್ಸಾಗಿದ್ದು .ಆಳಂದ ಸಿಮಾಂತರದಲ್ಲಿ ಸರ್ವೆ ನಂ 115 ರಲ್ಲಿ 3 ಎಕರೆ ಹೋಲಾ ಇದ್ದು ಮತ್ತು ನನ್ನ ಅಣ್ಣ ಕೀಶನ ತಂದೆ ಗೋಪಿಚಂದ ರಾಠೋಡ ಇಬ್ಬರು ಕೂಡಿ ಕೊಂಡು ಆಳಂದದ ಶ್ರೀ ಸಿದ್ದಾರೋಡ ಕಂಠೆ ಇವರ ಹೊಲವನ್ನು ಪಾಲುಗಾರಿಯಿಂದ ಮಾಡಿದ್ದು ಮಾಡುವ ಸಂದರ್ಭದಲ್ಲಿ ನಮಗೆ ಪರಿಚಯದ ನಮ್ಮ ಜನಾಂಗದ ಹನುಮಾನ ನಗರ ತಾಂಡಾದ ವಿಜಯ ತಂದೆ ಶಂಕರ ರಾಠೋರ ಇತನ ಹತ್ತಿರ ಒಂದು ವರ್ಷದ ಹಿಂದೆ 25,000 ರೂಪಾಯಿ ಗೆ 5% ರಂತೆ ಬಡ್ಡಿ ತೆಗೆದುಕೊಂಡು ಆ ಹಣವನ್ನು ನಮ್ಮ ಸ್ವಂತ ಹೊಲದ ಬೀಜ ಮತ್ತು ಗೊಬ್ಬರಕ್ಕೆ ಹಾಗು ಪಾಲಿಗಾರಿಕೆಯಿಂದ ಮಾಡಿದ  ಹೊಲದ ವ್ಯವಸಾಯಕ್ಕೆ  ಹಾಕಿದ್ದು ಇರುತ್ತದೆ.          ನಂತರ 3 ತಿಂಗಳ ಹಿಂದೆ ವಿಜಯಕುಮಾರನು ಹಣ ಕೊಡು ಬಡ್ಡಿ ಬಹಳ ಆಗುತ್ತಿದೆ ಅಂತಾ ಅನ್ನುತ್ತಿದ್ದು ಅದಕ್ಕೆ ನಾನು ಮತ್ತು ನಮ್ಮ ಅಣ್ಣ ಕೂಡಿಕೊಂಡು ಬಡ್ಡಿ ಗಂಟು ಸೇರಿಸಿ ಅವನಿಗೆ 50,000 ರೂಪಾಯಿ ಕೊಟ್ಟಿದ್ದು ಇರುತ್ತದೆ .ಆದರೆ ಸದರಿ ವಿಜಯಕುಮಾರ ಬಡ್ಡಿಗೆ ಚಕ್ರಬಡ್ಡಿ ಹಚ್ಚಿ ಈಗ 90,000 ಆಗುತ್ತದೆ ಕೊಡಬೇಕು ಅಂತಾ ನಮಗೆ ಪಿಡಿಸುತ್ತಾ ಬಂದಿರುತ್ತಾನೆ. ದಿನಾಂಕ 28/05/2015 ರಂದು ನಾನು ಮತ್ತು ನನ್ನ ಅಣ್ಣ ಕೀಶನ ಪಾಲುಗಾರಿಗೆ ಮಾಡಿದ ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ವಿಜಯ ರಾಠೋಡ ಇತನು ಬಂದು ಏ ರಂಡಿ ಮಕ್ಕಳೇ ನೀವು ತೆಗೆದುಕೊಂಡ ಹಣ ಇನ್ನು ಮುಟ್ಟಿರುವುದಿಲ್ಲಾ ನಾನು ಕೊಟ್ಟ ಹಣಕ್ಕೆ ನೀವು ಕೇವಲ 5% ರಂತೆ ಬಡ್ಡಿ ಮಾತ್ರ ಕೊಟ್ಟಿದಿರಿ 10% ರಂತೆ ನಾನು ಬಡ್ಡಿಗೆ ಚಕ್ರ ಬಡ್ಡಿ ಮಾಡಿ ಲೆಕ್ಕಾಮಾಡಿದ್ದು ಈಗ ನೀವು ನನಗೆ ಇನ್ನು 90,000 ರೂಪಾಯಿ ಕೊಡಬೇಕು ಅಂತಾ ಬಂದು ನಮಗೆ ಜೀವದ ಭಯ ಹಾಕಿರುತ್ತಾನೆ. ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚೌಕ ಠಾಣೆ : ಶ್ರೀ ಪಂಡರಿ ಚವ್ಹಾಣ ಸಹಕಾರ ಸಂಘಗಳ ಸಹಾಯಕ ನಿಬಂಧಕರು ಹಾಗೂ ಲೇವಾದೇವಿ ಸಹಾಯಕ ನಿಬಂಧಕರು ಕಲಬುರಗಿ ರವರು ಮಾನ್ಯ ಉಪನಿಬಂಧಕರು ಸಹಕಾರ ಸಂಘಗಳು ಕಲಬುರಗಿ ಹಾಗು ಲೇವಾದೇವಿ ಉಪ ನಿಬಂಧಕರು ಕಲಬುರಗಿ ರವರ ಆದೇಶದ ಪ್ರಕಾರ ದಿನಾಂಕ 18/03/2015 ರಂದು ಅಂಗಡಿ ಸಂಖ್ಯೆ 9/588/1/15 ಒಂದನೇಯ ಮಹಡಿ ಮಾರುತಿ ಗ್ಯಾರೇಜ ಹತ್ತಿರ ಖಾದರಿ ಚೌಕ ಶಿವನಗರ ಆಳಂದ ರಸ್ತೆ ಕಲಬುರಗಿಯಲ್ಲಿ ಶ್ರೀ ವಿಜಯಕುಮಾರ ತಂದೆ ಸಿದ್ರಾಮಪ್ಪ ಸಲಗರ ಸಾ: ಗೋಳಾ(ಬಿ) ತಾ: ಆಳಂದ ಇವರು ಕರ್ನಾಟಕ ಲೇವಾದೇವಿ ಕಾಯ್ದೆ 1961 ಮತ್ತು ನಿಯಮ 1965 ಲೇವಾದೇವಿ ಕಾಯ್ದೆ ಕಲಂ. 5 ರ ಪ್ರಕಾರ ಲೇವಾದೇವಿ ಪರವಾನಿಗೆ ಪಡೆಯದೇ ಅನಧೀಕೃತವಾಗಿ ಹಣಕಾಸು ವ್ಯವಹಾರ ಮಾಡುತ್ತಿರುವುದು ಅನಿರೀಕ್ಷಿತ ಬೆಟ್ಟಿಯ ಸಮಯದಲ್ಲಿ ಕಂಡು ಬಂದ ಪ್ರಯುಕ್ತ  ದಾಳಿ ಮಾಡಿ ಚೌಕ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. 

14 July 2015

Kalaburagi District Reported Crimes

ಕೊಲೆ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀ  ಸಿದ್ಧಪ್ಪ ತಂದೆ ಅಯ್ಯಪ್ಪ  ತಳಕೇರಿ ಸಾ : ಕುಡಕಿ ತಾ : ಆಳಂದ ಜಿ : ಕಲಬುರಗಿ ರವರ ಮಗನಾದ ಕಬೀರದಾಸನು  ದಿನಾಂಕ 21-06-2015 ರಂದು ಪಟ್ಟಣ ಸಿಮಾಂತರದ ಠಾಕೂರ ದಾಬಾದ ಹಿಂದುಗಡೆ ಇರುವ ಬಾವಿಯಲ್ಲಿ ಬಿದ್ದು ಮೃತಪಟ್ಟಿದ್ದು ಈ ಬಗ್ಗೆ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು  ನನ್ನ ಮಗನ ಮೋಟಾರ ಸೈಕಲ್ ಚಾವಿಯನ್ನು ಠಾಕೂರ ದಾಬಾದಲ್ಲಿ ಕೊಟ್ಟಿದ್ದು ಸದರ ಚಾವಿ ಬಗ್ಗೆ ವಿಚಾರಿಸಲು ಯಾರೊ ಸ್ಥಳಿಯರು ಮೂರು ಜನರು ಜೋತೆಗೆ ಬಂದು ಊಟದ ಆರ್ಡರ ಹೇಳಿ ಚಾವಿ ಕೊಟ್ಟು ಹೋಗಿರುತ್ತಾರೆ ಅಂತಾ ತಿಳಿಸಿದ್ದು ಇರುತ್ತದೆ.  ನನ್ನ ಮಗ ಕಬೀರದಾಸನ ಮರಣದ ವಿಷಯದಲ್ಲಿ ನಿಜವಾದ ಸಂಗತಿ ಗೊತ್ತಾಗಿದ್ದು ಎನೆಂದರೆ ಕಬೀರದಾಸನು ಕಡಗಂಚಿಯಲ್ಲಿ ಕೆಲಸ ಮಾಡುವ ಸಮಯದಲ್ಲಿ ನನ್ನ ಮಗನಿಗೆ ಪರಿಚಯದವರಾದ ಲಕ್ಷ್ಮಣ ಧನ್ನಿ ಮತ್ತು ಪಾನ ಡಬ್ಬಿಯ ನಾಮದೇವ ಇವರಿಂದ 5000/- ರೂ ಕೈಗಡ ಹಣ ತೆಗೆದುಕೊಂಡಿದ್ದು ಆ ಹಣ ಮರಳಿಕೊಡಲು ತಡವಾಗಿದ್ದರಿಂದ ಲಕ್ಷ್ಮಣ ಧನ್ನಿ ಮತ್ತು ನಾಮದೇವ ಇವರು ಪದೆ ಪದೆ ಹಣ ಕೇಳಿ ತೊಂದರೆ ಕೊಡುತ್ತಿದ್ದು   ಈ ವಿಷಯವನ್ನು ಮನೆಯಲ್ಲಿ ತಿಳಿಸಿದ್ದು ಆದಷ್ಟು ಬೇಗನೆ  ಅವರ ಹಣವನ್ನು ಕೊಡಲು ತಿಳಿಸಿದ್ದು ಇರುತ್ತದೆ. ದಿನಾಂಕ 12-07-2015 ರಂದು ನಾನು ಮತ್ತು ನನ್ನ ಮಗ ರಾಚಪ್ಪ ಸಂಬಂಧಿಕರು ಹಾಗು ಊರಿನ ಪ್ರಮುಖರು ಎಲ್ಲರು ಕೂಡಿಕೊಂಡು ಕಡಗಂಚಿಗೆ ಹೋದಾಗ ಗೊತ್ತಗಿದ್ದೆನೆಂದರೆ ದಿನಾಂಕ 19-06-2015 ರಂದು 1. ನಾಮದೇವ ತಂದೆ ಲಕ್ಷ್ಮಣರಾವ  ಧನ್ನಿ  2. ಕಾಶಿನಾಥ ತಂದೆ ಶಂಕರ ಚೆಂಗಟಿ  3. ವಿಜಯಕುಮಾರ ತಂದೆ ಸಾಯಿಬಣ್ಣಾ ಡೋಣಿ 4.ಸಿದ್ರಾಮಪ್ಪ ತಂದೆ ಅಂಬಣ್ಣಾ ವೈಜಾಪುರ ಸಾ : ಎಲ್ಲರು ಕಡಗಂಚಿ ತಾ : ಆಳಂದ ಜಿ : ಕಲಬುರಗಿ ರವರು ಕುಡಿಕೊಂಡು ಕಡಗಂಚಿ ಕ್ರಾಸ ಹತ್ತಿರ ಇರುವ ರಾಜಮಹಲ್ ವೈನಶಾಪನಲ್ಲಿ ಸರಾಯಿ ಕುಡಿದು ಅದರಲ್ಲಿ ನಾಮದೇವ ದನ್ನಿ ಇವನು ನನ್ನ ಮಗ ಕಬೀರದಾಸನಿಗೆ 2 ತಿಂಗಳ ಹಿಂದೆ ಕೊಟ್ಟ 500/- ರೂ ಹಣ ಮರಳಿ ಕೊಡು ಅಂತಾ ಜಗಳ ತೆಗೆದು ಅವಾಚ್ಯಶಬದ್ದಗಳಿಂದ ಬೈದು ನಿಗೆ ಸೊಕ್ಕು ಬಹಳ ಬಂದಿದೆ ನಿನಗೆ ಇವತ್ತು ಒಂದು ಗತಿ ಕಾಣಿಸಿಬಿಡುತ್ತೆವೆ ಅನ್ನುತ್ತಾ  ನಲ್ಕು ಜನರು ಮಾತನಾಡಿಕೊಂಡು ನನ್ನ ಮಗನಿಗೆ ಠಾಕೂರ ದಾಬಾಕ್ಕೆ ಊಟಕ್ಕೆ ಹೋಗೊಣ ಎಂದು  ಹೇಳಿ ಠಾಕೂರ ದಾಬಾಕ್ಕೆ ಮೊಟಾರ ಸೈಕಲಗಳ ಮೇಲೆ ಹೋಗಿ ಉಟಕ್ಕೆ ಆರ್ಡರ ಮಾಡುವ ಕಾಲಕ್ಕೆ ನಾಮದೇವ ಮತ್ತು ಸಂಗಡ ಮೂರು ಜನರು ಕೂಡಿ ಮತ್ತೆ ನನ್ನ ಮಗನೊಂದಿಗೆ ಜಗಳತೆಗೆದು ರಂಡಿ ಮಗನೇ ತೆಗೆದುಕೊಂಡ ಹಣ ಕೊಡು ಎಲೇ ಸೂಳೇಮಗನೇ ಅಂತಾ ಬೈಯ್ಯುತ್ತಿರುವಾಗ ಮಗನು ಸಧ್ಯ ನನ್ನ ಹತ್ತಿರ ಹಣವಿಲ್ಲಾ ಆಮೇಲೆ ಕೊಡುತ್ತೇನೆ. ಅಂತಾ ಹೇಳಿದ್ದಕ್ಕೆ ನಾಲ್ಕು ಜನರು ನನ್ನ ಮಗನಿಗೆ ದಾಬಾದ ಹಿಂದೆ ಇರುವ ಬಾವಿಯ ಹತ್ತಿರ ಕರೆದುಕೊಂಡು ಅಲ್ಲಿ ಈ ಸೂಳೇ ಮಗನೇ ಬಾವಿಯಲ್ಲಿ ನೂಕಿಸಿ ಕೊಲೆ ಮಾಡೋಣಾ ಅಂತಾ ನೂಕುನುಗ್ಗಲು ಮಾಡಿ,ನನ್ನ ಮಗನಿಗೆ ಬಾವಿಯಲ್ಲಿ ನೂಕಿಸಿ ಕೊಟ್ಟು ಸಾಕ್ಷಿ ಪುರಾವೆ ನಾಶಮಾಡಿಸಿ ಕೊಲೆ ಮಾಡಿರುತ್ತರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 
ಅಪಘಾತ ಪ್ರಕರಣ :
ಮಾಡಬೂಳ ಠಾಣೆ : ದಿನಾಂಕ: 13-07-2015 ರಂದು ಸೇಡಂಕ್ಕೆ ಹೋಗಿ ಟ್ರ್ಯಾಕ್ಟರ ನಂ.ಕೆಎ-32-ಟಿ-4066 ನೇದ್ದನ್ನು ಚಲಾಯಿಸಿಕೊಂಡು ಸೇಡಂದಿಂದ ಕಲಬುರಗಿಗೆ ಬರುತ್ತಿರುವಾಗ ಮುಗುಟಾ ಕ್ರಾಸ ದಾಟಿ ಬ್ರೀಜನ ರಾಜ್ಯ ಹೆದ್ದಾರಿ ಮೇಲೆ 1 -30 ಪಿಎಂದ ಸುಮಾರಿಗೆ ಫಿರ್ಯಾದಿಯ ತಂದೆಯ ಎದುರುಗಡೆಯಿಂದ ಟಿಪ್ಪರ ನಂ.ಕೆಎ-49-1069 ನೇದ್ದರ ಚಾಲಕನ್ನು ತನ್ನ ಟಿಪ್ಪರನ್ನು ಅತಿವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದವನೇ ಫಿರ್ಯಾದಿಯ ತಂದೆ ಚಲಾಯಿಸಿಕೊಂಡು ಹೋಗುತ್ತಿರುವ ಟ್ರ್ಯಾಕ್ಟರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಮೃತನಿಗೆ ಬಲ ತಲೆಗೆ, ಬಾಯಿಗೆ ,ಬಲಗಾಲಿನ ಮಂಡಿ ಹಾಗೂ ಹಿಮ್ಮಡಿಗೆ ಭಾರಿ ರಕ್ತಗಾಯ ಹಾಗೂ ಗುಪ್ತಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ ಹಾಗೂ ಟಿಪ್ಪರ ಚಾಲಕನಿಗೆ ಟಿಪ್ಪರ ಪಲ್ಟಿಯಾಗಿದ್ದರಿಂದ ಚಾಲಕನಿಗೂ ಸಹ ಅಲ್ಲಲ್ಲಿ ಗುಪ್ತ ಹಾಗೂ ರಕ್ತಗಾಯಗಳಾಗಿದ್ದು ಸದರಿ ಚಾಲಕನ ಹೆಸರು ಮಾರುತಿ ತಂದೆ ಶಿವರಾಜ ಪೂಜಾರಿ ಅಂತ ಘಟನಾ ಸ್ಥಳದಲ್ಲಿ ಹಾಜರಿದ್ದ ನೂರ ಇವರೂ ಫೋನ ಮುಖಾಂತರ ತಿಳಿಸಿದ ಮೇರೆಗೆ ಸದರಿ ಫಿರ್ಯಾದಿಯ ತಂದೆ ಹಾಗೂ ಚಾಲಕನಿಗೆ ಕಲಬುರಗಿಯ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿದ್ದು ಇರುತ್ತದೆ. ಅಂತಾ ಸದರಿ ಟಿಪ್ಪರ ಚಾಲಕನ ವಿರುದ್ದ ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಶ್ರೀ ಭಾಷಾ ತಂದೆ ಮಕಬೂಲಶಹಾ ಸಾ : ಸಿದ್ದೇಶ್ವರ ಕಾಲೂನಿ ಕಲಬುರಗಿ   ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ  ಮಾಡಬೂಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಾಹನ ಕಳವು ಪ್ರಕರಣಗಳು :
ಗ್ರಾಮೀಣ ಠಾಣೆ : ಶ್ರೀ ಅಮರೇಶ ಪಾಟೀಲ  ತಂದೆ ಬಸವಂತರಾವ  ಪಾಟೀಲ ಸಾ: ಮನೆ ನಂ 1-1165 (16/1) ಐವಾನಶಾಹಿ ರೋಡ ಕಲಬುರಗಿ ರವರದು ಸ್ವಂತ ಎರಡು ಟಿಪ್ಪರಗಳಿರುತ್ತವೆ. ಅದರಲ್ಲಿ ನಂಬರ್ ಎಮ್.ಹೆಚ್-13 ಎಕ್ಸ್-2064 ಹತ್ತು ಟೈರಗಳ ಟಾಟಾ ಕಂಪನಿಯ ಹೈವಾ ಟಿಪ್ಪರನ್ನು ಬೇಲೂರ ತಾಂಡಾ ರೋಡಿಗೆ ಇರುವ ಡೂರಡಾನಾ ಸ್ಟೋನ ಕ್ರಷರ್ ಕಂಕರ ಮಶೀನಲ್ಲಿ ಕಂಕರ ಹೊಡೆಯುವ ಕೆಲಸಕ್ಕೆ ಒಂದು ತಿಂಗಳಿಂದ ಬಿಟ್ಟಿರುತ್ತೇನೆ. ನನ್ನ ಟಿಪ್ಪರನ ಚಾಲಕನಾಗಿ ನಾರಾಯಣ ತಂದೆ ಡಾಕು ರಾಠೋಡ ಎಂಬುವರನ್ನು ಇಟ್ಟಿಕೊಂಡಿದ್ದು ಅವರು ದಿನಾಲು ಕೆಲಸ ಮುಗಿದ ನಂತರ ರಾತ್ರಿ ಶರೀಫ ಸಾಹೇಬರವರ ಡೂರಡಾನಾ ಸ್ಟೋನ ಕ್ರಷರ  ಕಂಕರ ಮಶೀನ ಹತ್ತಿರವೇ ನಿಲ್ಲಿಸುತ್ತಿರುತ್ತಾರೆ. ಹೀಗಿದ್ದು ಎಂದಿನಂತೆ ಕೆಲಸ ಮುಗಿಸಿ ದಿನಾಂಕ: 28/03/2015 ರಂದು ರಾಥ್ರಿ 10-30 ಪಿಎಮ್ ಕ್ಕೆ ನನ್ನ ಟಿಪ್ಪರ ಚಾಲಕ ಟಿಪ್ಪರನ್ನು  ನಿಲ್ಲಿಸಿ ಮನೆಗೆ ಹೋಗಿದ್ದು ದಿನಾಂಕ: 29/03/2015 ರಂದು ಬೆಳಿಗ್ಗೆ 7-00 ಎಎಮ್  ಗಂಟೆಗೆ ಕಂಕರ ಮಶೀನ ಹತ್ತಿರ ಬಂದು ನೋಡಲು ತಾನು ರಾತ್ರಿ ನಿಲ್ಲಿಸಿದ್ದ ಟಿಪ್ಪರ ಕಾಣದ ಕಾರಣ ತಕ್ಷಣ ನನಗೆ ಫೋನ ಮಾಡಿ ವಿಷಯ ತಿಳಿಸಿದನು. ನಾನು ತಕ್ಷಣ ಬೇಲೂರ ತಾಂಡಾ ರೋಡಿಗೆ ಇರುವ ಡೂರಡಾನಾ ಸ್ಟೋನ ಕ್ರಷರ ಕಂಕರ ಮಶೀನಗೆ ಹೋಗಿ ನೋಡಲು ಹಕಿಕತ ನಿಜವಿರುತ್ತದೆ. ಆಗ ನಾನು ಮತ್ತು ಸ್ನೇಹಿತರಾದ ಕಲ್ಯಾಣಿ, ಶರೀಫ ಮತ್ತು ಚಾಲಕ ನಾರಾಯಣ ಸೇರಿಕೊಂಡು ಕಂಕರ ಮಶೀನ ಸುತ್ತ ಮುತ್ತ ಕಲಬುರಗಿಯಲ್ಲಿ ಮತ್ತು ಬಸವಕಲ್ಯಾಣ, ಹುಮನಾಬಾದ, ಜೈರಾಬಾದ, ಜೇವರ್ಗಿ, ಆಳಂದ, ಕಲಬುರಗಿಯ ಮುಂತಾದ ಕಡೆ ಎಲ್ಲಾ ಹುಡುಕಾಡಿದರೂ ನನ್ನ ಎಮ್.ಹೆಚ್.-13 ಎಎಕ್ಸ್-2064 ನಂಬರಿನ ಚೆಸ್ಸಿ ನಂ- MAT448099B3J27401 ಇಂಜಿನ ನಂ- BJ91803111J63184136 ಕಲರ್   ಬಿಳಿ-ನೀಲಿ  ಬಣ್ಣದ ಅ.ಕಿ= 1700000/-ರೂ ಕಿಮ್ಮತ್ತಿನದ್ದನ್ನು ಯಾರೋ ಕಳ್ಳರು ದಿನಾಂಕ: 28/03/2015 ರಂದು 10-30 ಪಿಎಮ್ ದಿಂದ ದಿನಾಂಕ: 29/03/2015 ರಂದು ಬೆಳಿಗ್ಗೆ 7-00 ಎಎಮ್ ಮಧ್ಯದ ಅವಧಿಯಲ್ಲಿ ಕಳ್ಳತನ  ಮಾಡಿಕೊಂಡು ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚೌಕ ಠಾಣೆ : ಶ್ರೀ ಆಭಯ ಸಿಂಗ್‌ ತಂದೆ ಸಂಜಯ ಸಿಂಗ್‌ ಸಾಃ ಮನೆ ನಂ 9-188 ಶಹಾಬಜಾರ ಕಟಗರಪೂರ ಕಲಬುರಗಿ ರವರ ರಾಯಲ್ ಎನಫಿಲ್ಡ್ ಮೊಟಾರ ಸೈಕಲ ನಂ ಕೆಎ 32  ಇ.ಇ 2626 ನೇದ್ದುನ್ನು  ದಿನಾಂಕಃ 07.07.2015 ರಂದು  11.30 ಗಂಟೆ ಸುಮಾರಿಗೆ ನನ್ನ ರಾಯಲ್ ಎನಫಿಲ್ಡ್ ಮೊಟಾರ ಸೈಕಲ ನಂ ಕೆಎ 32  ಇ.ಇ 2626 ನೇದ್ದ್ಕೆ ಸರಿಯಾಗಿ ಕೀಲಿ ಹಾಕಿ ನಮ್ಮ ಮನೆಯ ಮುಂದೆ ನಿಲ್ಲಿಸಿದ್ದು ಇರುತ್ತದೆ. ರಾತ್ರಿ 2.00 ಗಂಟೆಯ ಸುಮಾರಿಗೆ  ಮೂತ್ರ ವಿಸರ್ಜನೆ ಮಾಡುವಗೋಸ್ಕರ ಎದ್ದಾಗ ನಮ್ಮ ಮನೆಯ ಮುಂದೆ ನಾನು ನಿಲ್ಲಿಸಿದ ಮೋಟಾರ ಸೈಕಿಲ್‌  ಕಾಣಲ್ಲಿಲ್ಲ. ಆಗ ನಾನು ಗಾಬರಿಗೊಂಡು ನಮ್ಮ ತಂದೆಯವರಿಗೆ ಹಾಗೂ ನನ್ನ ಅಣ್ಣನಿಗೆ ಸದರಿ ವಿಷಯವನ್ನು ತಿಳಿಸಿದ್ದು  ಮತ್ತು ನನ್ನ ಸ್ನೇಹಿತರಿಗೂ ನನ್ನ ಮೋಟಾರ ಸೈಕಿಲ್‌ ಕಳುವಾದ ಬಗ್ಗೆ ಹೇಳಿದ್ದು ಇರುತ್ತದೆ. ನಂತರ ನಾನು ಹಾಗೂ ನಮ್ಮ  ಸ್ನೇಹಿತರು ಸೇರಿ ಎಲ್ಲಾ ಕಡೆ ಹುಡಕಾಡಿದ್ದು ಪತ್ತೆ ಆಗಿರುವದಿಲ್ಲ .ಸದರಿ ನನ್ನ ಮೋಟಾರ ಸೈಕಲನ್ನು ಯೋರೊ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಇರುತ್ತದೆ. ಅದರ ಅಂದಾಜು ಕಿಮ್ಮತ್ತು 1,00,000/- ರೂ ಆಗುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ  ಚೌಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

13 July 2015

Kalaburagi District Reported Crimes

ಆಕ್ರಮವಾಗಿ ಸರಾಯಿ ಮಾರಾಟ ಮಾಡುತ್ತಿದ್ದವನ ಬಂಧನ :
ಜೇವರ್ಗಿ ಠಾಣೆ : ದಿನಾಂಕ 12-072015 ರಂದು ಬಣಮಗಿ ಗ್ರಾಮದ ನೀರಿನ ಟ್ಯಾಂಕ್ ಹತ್ತಿರ ಸಾರ್ವಜನಿಕ ರಸ್ತೆಯ ಮೇಲೆ ಅಕ್ರಮವಾಗಿ ಸರಾಯಿ ಮಾರಾಟ ಮಾಡುತ್ತಿದ್ದ ಬಗ್ಗೆ ಬಾತ್ಮಿ ಮೇರೆಗೆ ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಬಣಮಗಿ ಗ್ರಾಮದ ನೀರಿನ ಟ್ಯಾಂಕ್ ಹತ್ತಿರ ಹೋಗಿ ಮರೆಯಲ್ಲಿ ನಿಂತು ನೋಡಲು ಸಾರ್ವಜನಿಕ ರಸ್ತೆಯ ಮೇಲೆ ಅಕ್ರಮವಾಗಿ ಸರಾಯಿ ಮಾರಾಟ ಮಾಡುತ್ತಿದ್ದದನ್ನು  ಖಚಿತ ಪಡಿಸಿಕೊಂಡು ಅವನ ಮೇಲೆ ಸಿಬ್ಬಂದಿ ಜನರ ಸಹಾಯದಿಂದ ಪಂಚರ ಸಮಕ್ಷಮ ದಾಳಿ ಮಾಡಿ ಅವನಿಂದ ಒಟ್ಟು  4800/- ರೂ ಕಿಮ್ಮತ್ತಿ ಮಧ್ಯ ತುಂಬಿದ ಬಾಟಲಿಗಳಿರುವ ಎರಡು ರಟ್ಟಿನ ಬಾಕ್ಷ್‌ ಜಪ್ತಿ ಮಾಡಿಕೊಂಡು ಆರೋಪಿ ಕರಣಪ್ಪ ತಂದೆ ವೀರಣ್ಣ ಅಂಗಡಿ ಸಾ|| ಆಂದೋಲಾ ಇತನನ್ನು ವಶಕ್ಕೆ ತೆಗೆದುಕೊಂಡು ಸದರಿಯವನೊಂದಿಗೆ ಜೇವರ್ಗಿ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಹಲ್ಲೆ ಪ್ರಕರಣ :
ಜೇವರ್ಗಿ ಠಾಣೆ : ದಿನಾಂಕ 03-07-2014 ರಂದು ಶ್ರೀ ಬಸವರಾಜಯ್ಯ ತಂದೆ ಶಿವಶರಣಯ್ಯ ಸ್ಥಾವರಮಠ್ ಸಾ : ಬಿರಾಳ ಬಿ  ರವರು ತಮ್ಮ ಮನೆಯ ಪಕ್ಕದಲ್ಲಿ ಹಾಕಿದ್ದ ಕಲ್ಲುಗಳನ್ನು ಶಿವಪುತ್ರಪ್ಪ ತಂದೆ ಕರಣಪ್ಪ ಆಂದೋಲಾ ತೆಗೆದುಕೊಂಡು ತನ್ನ ಮನೆಯ ಕಡೆಗೆ ಹೋಗುತ್ತಿದ್ದಾಗ ಫಿರ್ಯಾದಿಯ ತಾಯಿ ಇವಳು ಕಲ್ಲುಗಳು ನಮ್ಮವು ಇದ್ದು ಏಕೆ ತೆಗೆದುಕೊಂಡು ಹೋಗುತ್ತಿದ್ದಿ ಅಂತ ಅವನ ಮುಂದೆ ಹೋಗಿ ಕೇಳಿದಾಗ ಆರೋಪಿತನು ಫಿರ್ಯಾದಿಯ ತಾಯಿಗೆ ಕೂದಲು ಹೀಡಿದು ಎಳೆದಾಡಿ ನೂಕಿಸಿಕೊಟ್ಟಾಗ ಅವಳು ಕಲ್ಲಿನ ಮೇಲೆ ಬಿದ್ದು ಬಲಗಾಲಿನ ತೊಡೆಗೆ ಗುಪ್ತಗಾಯ ಮಾಡಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆತ್ಮಹತ್ತಯ ಮಾಡಿಕೊಳ್ಳಲು ಪ್ರಚೋದನೆ ಮಾಡಿದ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀಮತಿ ನಾಗಮ್ಮಾ ಗಂಡ ಶ್ರೀಮಂತ ಕೆರಮಗಿ ಸಾ:ಅಷ್ಟಗಾ ತಾ:ಜಿ:ಕಲಬುರಗಿ ಇವರ ಗಂಡನಾದ ಶ್ರೀಮಂತನಿಗೆ ಅರ್ಜುನ ಆಲಗೂಡ, ಶ್ತೀಮಂತ ಅಂಬೋಡಿ, ರಾಜಕುಮಾರ ಬೆನಕನಳ್ಳಿ ಇವರುಗಳು ಕೈಗಡಾ ಮತ್ತು ಸಾಲದಂತೆ ಹಣ ಕೊಟ್ಟು ಸದರಿಯವರು ದಿನಾಲು ತಮ್ಮ ಹಣ ಮರಳಿ ಕೊಡು ಅಂತಾ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಿದ್ದರಿಂದ ಅವರ ತಾಪತಾಳಲಾರದೇ ದಿನಾಂಕ:-10/07/2015 ರಂದು ಬೆಳಿಗ್ಗೆ 09:30 ಗಂಟೆಯಿಂದ 11:30 ಗಂಟೆಯ ಮದ್ಯದ ಅವದಿಯಲ್ಲಿ ಕಲ್ಲಹಂಗರಗಾ-ಅಷ್ಟಗಾ ಗ್ರಾಮದ ಸಿಮಾಂತರ ಶರಣಬಸಪ್ಪ ಮತ್ತು ಅಂಬಾರಾಯ ಇವರ ಹೋಲದ ಮದ್ಯದ ನಾಲಿಯಲ್ಲಿ ಇದ್ದ ಬೇವಿನ ಗಿಡಕ್ಕೆ    ನೇಣು ಹಾಕಿಕೊಂಡು ಮೃತಪಟ್ಟಿರುತ್ತಾನೆ ಅಂತಾ  ಸಲ್ಲಿಸದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಸೇಡಂ ಠಾಣೆ : ಶ್ರೀ. ಮಂಜುನಾಥ ತಂದೆ ಯಮನೂರಪ್ಪ ಜಂತಕಲ್ ಸಾ:ಹೊಸಕೇರಿ. ತಾ:ಗಂಗಾವತಿ, ಜಿಲ್ಲಾ:ಕೊಪ್ಪಳ. ಅಳಿಯ, ಮುರಳಿಧರ ತಂದೆ ಯಲ್ಲಪ್ಪ ಗೊರಬಾಳ ಮಳಖೇಡದ ರಾಜಶ್ರೀ ಸಿಮೆಂಟ್ ಕಂಪನಿಯಲ್ಲಿ ಇಂಜಿನಿಯರ್ ಅಂತ ಕೆಲಸ ಮಾಡಿಕೊಂಡಿದ್ದ. ದಿನಾಂಕ 12-07-2015 ರಂದು ರಾಜಶ್ರೀ ಸಿಮೆಂಟ್ ಕಂಪನಿಯಲ್ಲಿ ನನ್ನ ಅಳಿಯನೊಂದಿಗೆ ಕೆಲಸ ಮಾಡುವ ರಾಹುಲ್ ಇವರು ಫೋನ ಮಾಡಿ ನನಗೆ ತಿಳಿಸಿದ್ದೇನೆಂದರೆ, ನಿಮ್ಮ ಅಳಿಯ ಮುರಳಿಧರ ಹಾಗೂ ಆತನ ಗೆಳೆಯ ಶ್ರವಣಕುಮಾರ ಇಬ್ಬರೂ ಕೂಡಿ ಮೋಟಾರು ಸೈಕಲ್ ನಂ-KA-32-EE-3943 ನೇದ್ದರ ಮೇಲೆ ಸೇಡಂಕ್ಕೆ ಹೋಗಿ ಮರಳಿ ಮಳಖೇಡಕ್ಕೆ ರಾಜ್ಯ ಹೆದ್ದಾರಿ-10 ರ ಮೇಲೆ ಬರುವಾಗ, ಶೆಟ್ಟಿ ಹೂಡಾ ಗ್ರಾಮದ ಹತ್ತಿರ ಇರುವ ದಾನಮ್ಮ ಗುಡಿಯ ಹತ್ತಿರ ಮುಖ್ಯ ರಸ್ತೆಯ ಮೇಲೆ ಅಪಘಾತವಾಗಿ, ಭಾರಿ ರಕ್ತಗಾಯದಿಂದ ಅವರಿಬ್ಬರೂ ಸ್ಥಳದಲ್ಲಿಯೆ ಮರಣಹೊಂದಿರುತ್ತಾರೆ.ಅಂತ ತಿಳಿಸಿದಾಗ ನಾನು   ಇಂದು ಸೇಡಂ ಸರಕಾರಿ ಆಸ್ಪತ್ರೆ ಬಂದು ನೋಡಲು ನನ್ನ ಅಳಿಯನ ಶವ ಗುರುತಿಸಿದ್ದು ಅವನಿಗೆ ಬಲಹಣೆಗೆ, ಕಣ್ಣಿನ ಕೆಳಗೆ, ರಕ್ತಗಾಯ ಹಾಗೂ ತಲೆಯ ಹಿಂದೆ, ಬಲಕಪಗಂಡಕ್ಕೆ ಭಾರಿ ರಕ್ತಗಾಯ ಹಾಗೂ  ಬಲಗಾಳ ಮೊಳಕಾಲಿಗೆ ಭಾರಿ ರಕ್ತಗಾಯವಾಗಿ ಮುರಿದಿದ್ದು ಇರುತ್ತದೆ. ಮೃತ ಶ್ರವಣಕುಮಾರ ತಂದೆ ಬಸವರಾಜ ಹೂಗಾರ ಇತನಿಗೆ ನೋಡಲು ಬಲಗಾಲ ತೊಡೆಗೆ ಭಾರಿ ರಕ್ತಗಾಯವಾಗಿ ಮೂಳೆ ಮುರಿದಂತೆ ಕಾಣುತ್ತದೆ ಮತ್ತು ಬಾಯಿಗೆ ರಕ್ತಗಾಯವಾಗಿ ಹಲ್ಲು ಮುರಿದಂತೆ ಕಾಣುತ್ತದೆ ಮತ್ತು ತಲೆಯ ಹಿಂದೆ ಭಾರಿ ರಕ್ತಗಾಯವಾಗಿ ಇಬ್ಬರು ಮೇತಪಟ್ಟಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಕ್ರಮವಾಗಿ ಮರಳು ಸಾಗಿಸುತ್ತಿದ್ದ ವಾಹನಗಳ ಜಪ್ತಿ  :
ಅಫಜಲಪೂರ ಠಾಣೆ : ದಿನಾಂಕ 12-07-2015 ರಂದು ಶಿವಪೂರ ಗ್ರಾಮ ಕಡೆಯಿಂದ ಒಂದು ಟಿಪ್ಪರ ಹಾಗೂ ಒಂದು ಟ್ರಾಕ್ಟರಗಳಲ್ಲಿ  ಮರಳು ತುಂಬಿ ಕೊಂಡು ಅಫಜಲಪೂರ ಕಡೆ ಹೊರಟಿರುತ್ತಾರೆ ಅಂತಾ ಬಾತ್ಮಿ ಬಂದ ಮೇರೆಗೆ ಶ್ರೀ ಚಂದ್ರಕಾಂತ ಸಿಹೆಚ್ ಸಿ-449 ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಬನ್ನಟ್ಟಿ ಕ್ರಾಸ ಹತ್ತಿರ ಇದ್ದಾಗ ಎದುರು ಗಡಯಿಂದ ಒಂದು ಟಿಪ್ಪರ ಹಾಗೂ ಒಂದು ಟ್ರಾಕ್ಟರ ಮರಳು ತುಂಬಿಕೊಂಡು ಬರುತ್ತಿದ್ದವು, ಸದರಿ ಎರಡು ವಾಹನದ ಚಾಲಕರು ನಮ್ಮನ್ನು ನೋಡಿ ತಮ್ಮ ಟಿಪ್ಪರ ಹಾಗೂ ಟ್ರಾಕ್ಟರನ್ನು ಸ್ಥಲದಲ್ಲೆ ಬಿಟ್ಟು ಓಡಿ ಹೋದರು, ನಂತರ ನಾನು ಪಂಚರ ಸಮಕ್ಷಮ ಟಿಪ್ಪರ ಹಾಗೂ ಟ್ರಾಕ್ಟರ ಚಕ್ಕ ಮಾಡಲು ಸದರಿ ಅವುಗಳಲ್ಲಿ  ಮರಳು ಇತ್ತು, ಮತ್ತು ಸದರಿ ಟಿಪ್ಪರ ನಂ ನೋಡಲಾಗಿ ಕೆಎ-20 ಎಬಿ-9959 ಅಂತ ಇದ್ದು ಮತ್ತು  ಸ್ವರಾಜ ಕಂಪನಿಯ ಟ್ರ್ಯಾಕ್ಟರ ಚಸ್ಸಿ ನಂ WXCA40906089195 ಇಂಜಿನ ನಂ 43.3008/STA00398 ಅಂತಾ ಇದ್ದವು, ಸದರಿ ಟಿಪ್ಪರ ಹಾಗೂ ಟ್ರ್ಯಾಕ್ಟರದಲ್ಲಿದ್ದ ಮರಳಿನ ಅಂದಾಜ ಕಿಮ್ಮತ 8,000/- ರೂ ಆಗಬಹುದು, ನಂತರ ಸದರಿ ಮರಳನ್ನು ಅಕ್ರಮವಾಗಿ ಕಳ್ಳತನದಿಂದ ಸಾಗಿಸುತ್ತಿದ್ದ ಟಿಪ್ಪರ ಹಾಗೂ ಟ್ರ್ಯಾಕ್ಟರನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು ಠಾಣೆಗೆ ತಂದು ಪ್ರಕರಣ ದಾಖಲಿಸಲಾಗಿದೆ.