POLICE BHAVAN KALABURAGI

POLICE BHAVAN KALABURAGI

09 July 2015

Kalaburagi District Reported Crimes

ಅತ್ಯಾಚಾರ ಮಾಡಲು ಪ್ರಯತ್ನಿಸಿದ ಪ್ರಕರಣ :
ಕಮಲಾಪೂರ ಠಾಣೆ : ಶ್ರೀ ಚಂದ್ರಕಾಂತ ತಂದೆ ಶರಣಪ್ಪಾ ಜಮದಾರ ಸಾ; ಜಮದಾರ ರವರ ಮಗಳಾದ ಕುಮಾರಿ ಇವಳು ನಮ್ಮ ಗ್ರಾಮದಲ್ಲಿರುವ ಶ್ರೀ ಶಾರದಾ ದೇವಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 5ನೇ ತರಗತಿಯಲ್ಲಿ ಒದುತ್ತಿದ್ದು. ಸದರಿ ನನ್ನ ಮಗಳು ಬೆಳ್ಳಿಗ್ಗೆ 9:30 ಗಂಟೆಗೆ ಮನೆಯಿಂದ ಶಾಲೆಗೆ ಹೋಗಿ ಸಾಯಂಕಾಲ 4:30 ಗಂಟೆಯ ಸುಮಾರಿಗೆ ಶಾಲೆಯಿಂದ ಮನೆಗೆ ಬರುತ್ತಿದ್ದು ಎಂದಿನಂತೆ ದಿನಾಂಕ 08.07.2015 ರಂದು ಬೆಳ್ಳಿಗ್ಗೆ 9:30 ಗಂಟೆಯ ಸುಮಾರಿಗೆ ನನ್ನ ಮಗಳು ಶಾಲೆಗೆ ಹೋಗಿದ್ದು ಸಾಯಂಕಾಲ 4 ಗಂಟೆಯ ಸುಮಾರಿಗೆ ನಾನು ನನ್ನ ಕೆಲಸ ಮುಗಿಸಕೊಂಡು ಮನೆಗೆ ಬಂದಿದ್ದು ಮನೆಯಲ್ಲಿ ನಾನು ನನ್ನ ಹೆಂಡತಿಯಾದ ಅನೀತಾ ಕೂಡಿಕೊಂಡು ನಮ್ಮ ಮನೆಯಲ್ಲಿದ್ದು ಸಾಯಂಕಾಲ 4:30 ಗಂಟೆಯ ಸುಮಾರಿಗೆ ನನ್ನ ಮಗಳು ಅಳುತ್ತಾ ಮನೆಗೆ ಬಂದಿದ್ದು ಆಗ ನಾನು ನನ್ನ ಮಗಳಿಗೆ ವಿಚಾರಿಸಲು ನನ್ನ ಮಗಳು ನನಗೆ ತಿಳಿಸಿದ್ದೆನೆಂದರೆ ಶಾಲೆ ಬಿಟ್ಟನಂತರ ನಾನು ನನ್ನ ಗೆಳತಿಯಾದ ರಾಜೇಶ್ವರಿ ಕೂಡಿಕೊಂಡು ಶಾಲೆಯಿಂದ ಮನೆಗೆ ಬರುವ ದಾರಿಯಲ್ಲಿರುವ ಶ್ರೀ ಶಾಂತಲಿಂಗೇಶ್ವರ ಮಠಕ್ಕೆ ಹೋಗಿದ್ದು ಮಠದಲ್ಲಿದ್ದ ದೇವರಿಗೆ ನಮಸ್ಕಾರ ಮಾಡಿ ನಂತರ ನಾನು ನನ್ನ ಗೆಳತಿ ಕೂಡಿಕೊಂಡು ಹೊರಗೆ ಬರುತ್ತಿದ್ದಾಗ ಮಠದಲ್ಲಿದ್ದ ಶಾಂತವೀರಪ್ಪ ಸ್ವಾಮಿ ಇವರು ನಮಗೆ ತಮ್ಮ ಹತ್ತಿರ ಕರೆದಿದ್ದು ಆಗ ನಾವು ಶಾಂತವೀರಪ್ಪ ಸ್ವಾಮಿ ಇವರ ಹತ್ತಿರ ಹೋದಾಗ ಸದರಿಯವರು ನನಗೆ ಹಿಡಿದುಕೊಂಡು ನನ್ನ ಎಡಗಲ್ಲಕ್ಕೆ ಮುತ್ತು ಕೊಟ್ಟಿದ್ದು ಮತ್ತು ನನ್ನ ಗಲ್ಲ ಕಚ್ಚಿದ್ದು ಆಗ ಸದರಿಯವರು ನಾನು ನೀನಗೆ ಮುತ್ತು ಕೊಟ್ಟಿದ್ದೆನೆ ನೀನು ಮರಳಿ ನನಗೆ ಮುತ್ತು ಕುಡು ಅಂತ ಹೇಳಿದ್ದು ಅದೇ ವೇಳೆಗೆ ರಾಜೇಶ್ವರಿ ಇವಳು ಅಲ್ಲಿಂದ ಓಡಿ ಹೋಗಿದ್ದು ನಾನು ಸ್ವಾಮಿಯವರಿಗೆ ಮತ್ತು ಕುಡಲು ನೀರಾಕರಿಸಿದಾಗ ಸದರಿಯವರು ನನ್ನ ಎದೆಯ ಮೇಲೆ ಕೈಯಾಡಿಸುತ್ತಾ ನೀನು ಪ್ರತಿ ದಿವಸ ಮಠಕ್ಕೆ ಬಾ ಅಂತ ಹೇಳಿ ನನಗೆ ಹಿಡಿದುಕೊಳ್ಳಲು ಬಂದಿದ್ದು ಆಗ ನಾನು ಸ್ವಾಮಿಯವರಿಂದ ತಪ್ಪಿಸಿಕೊಂಡು ಒಡುತ್ತಾ ಮನೆಗೆ ಬಂದಿದ್ದು ಇರುತ್ತದೆ ಅಂತ ನನ್ನ ಮಗಳು ಅಳುತ್ತಾ ನನಗೆ ಹೇಳಿದ್ದು ಇರುತ್ತದೆ. ನಂತರ ನಾನು ನನ್ನ ಮಗಳಿಗೆ ಸಮಾದಾನ ಮಾಡಿ ನಮ್ಮ ಸಂಬಂದಿಕನಾದ ಸತೀಶ ಇವರಿಗೆ ಕರೆದು ಘಟನೆಯ ಬಗ್ಗೆ ತಿಳಿಸಿದ್ದು ನಂತರ ನಾನು ಮತ್ತು ಸತೀಶ ಕೂಡಿಕೊಂಡು ಸಾಯಂಕಾಲ 6 ಗಂಟೆಯ ಸುಮಾರಿಗೆ ಶಾಂತವೀರಪ್ಪ ಸ್ವಾಮಿ ಇವರ ಸಂಗಡ ಮಾತನಾಡಲು ಮಠಕ್ಕೆ ಹೋಗಿದ್ದು ಸದರಿ ಶಾಂತವೀರ ಸ್ವಾಮಿ ಇವರಿಗೆ ನನ್ನ ಮಗಳ ಮುತ್ತು ಕೊಟ್ಟಿ ಗಲ್ಲ ಕಚ್ಚಿದ್ದು ಅಲ್ಲದೆ ಅವಳಿ ಮರಳಿ ಮುತ್ತು ಕುಡಲು ಯಾಕೆ ಹೇಳಿದ್ದಿರಿ ಅಂತ ಕೇಳಿದಾಗ ಸದರಿ ಶಾಂತವೀರ ಸ್ವಾಮಿ ಇವರು ನನ್ನಿಂದ ತಪ್ಪಾಗಿದೆ ಅಂತ ಹೇಳಿದ್ದು ಇರುತ್ತದೆ. ಶಾಂತಲಿಂಗೇಶ್ವರ ಮಠದ ಉತ್ತರಾಧಿಕಾರಿಯಾದ ಶಾಂತವೀರ ತಂದೆ ಶಿವಲಿಂಗಯ್ಯ ಹಿರೇಮಠ ಸಾ: ಕಮಲಾಪೂರ ಇವರು ನನ್ನ ಮಗಳಾದ ನಾಗವೇಣಿ ಇವಳಿಗೆ ಒತ್ತಾಯ ಪೂರ್ವಕವಾಗಿ ಮುತ್ತು ಕೊಟ್ಟು ಅವಳ ಗಲ್ಲ ಕಚ್ಚಿ ಅವಳಿಗೆ ಮರಳಿ ಮುತ್ತು ಕೂಡು ಅಂತ ಒತ್ತಾಯ ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಸ್ಪೀಟ ಜೂಜಾಟದಲ್ಲಿ ನಿರತ 7 ಜನರ ಬಂಧನ :
ರಾಘವೇಂದ್ರ ನಗರ ಠಾಣೆ : ದಿನಾಂಕ: 08-07-2015 ಜೆ.ಆರ್‌ ನಗರ ಬಡಾವಣೆಯ ಶ್ರೀ ವೀರಭದ್ರೇಶ್ವರ ಟೆಂಟಹೌಸ ಹಿಂದುಗಡೆ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ್‌ ಜೂಜಾಟ ಆಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಬಂದ ಮೇರೆಗೆ ಪಿ.ಎಸ್.ಐ. ರಾಘವೇಂದ್ರ ನಗರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಜೆ.ಆರ್‌ ನಗರ ಬಡಾವಣೆಯ ಶ್ರೀ ಸಾಯಿ ಶಾಲೆಯ ಮರೆಯಲ್ಲಿ ನಿಂತು ನೋಡಲು ಅಲ್ಲಿ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ದುಂಡಾಗಿ ಕುಳಿತು ಇಸ್ಪೀಟ್‌ ಎಲೆಗಳ ಸಹಾಯದಿಂದ ಪಣಕ್ಕೆ ಹಣ ಹಚ್ಚಿ ಅಂದರ-ಬಾಹರ ಇಸ್ಪೀಟ್‌ ಜೂಜಾಟ ಆಡುತ್ತಿದ್ದ ಬಗ್ಗೆ ಖಚಿತ ಪಡಿಸಿಕೊಂಡು ದಾಳಿ ಮಾಡಿ 7 ಜನರನ್ನು ಹಿಡಿದು ನಮ್ಮ ಸಮಕ್ಷಮದಲ್ಲಿ ಅವರ ಹೆಸರು ವಿಳಾಸ ವಿಚಾರಿಸಿದ್ದು ಅವರು ತಮ್ಮ ಹೆಸರು 1) ಮಾರುತಿ ತಂದೆ ಪಾಂಡಪ್ಪಾ ಯಾದವ ಸಾ:ಮಾಣಿಕೇಶ್ವರಿ ಕಾಲೋನಿ ಕಲಬುರಗಿ 2) ವಿಠ್ಠಲ ತಂದೆ ಸದಾಶಿವ ಭಂಕೂರ ಸಾ:ಲಾಲಗೇರಿ ಬ್ರಹ್ಮಪೂರ ಕಲಬುರಗಿ 3) ಬಸವರಾಜ ತಂದೆ ಗುಂಡಪ್ಪಾ ಬಿರಾದಾರ ಸಾ:ಲಾಲಗೇರಿ ಬ್ರಹ್ಮಪೂರ ಕಲಬುರಗಿ 4) ಶಿವಾನಂದ ತಂದೆ ಸಿದ್ದಪ್ಪಾ ಕಂಬಾರ ಸಾ:ಮಾಣಿಕೇಶ್ವರಿ ಕಾಲೋನಿ ಕಲಬುರಗಿ 5) ಲಕ್ಷ್ಮೀಕಾಂತ ತಂದೆ ಶಿವಶರಣಪ್ಪಾ ಮಳ್ಳಿ ಸಾ:ವಿಶ್ವರಾಧ್ಯ ಕಾಲೋನಿ ಆಳಂದ ರಸ್ತೆ ಕಲಬುರಗಿ 6) ನಾಗರಾಜ ತಂದೆ ಕರಣಪ್ಪಾ ಗುಲಬರ್ಗಾ ಸಾ:ಕೈಲಾಸ ನಗರ ಕಲಬುರಗಿ 7) ಗೋಪಾಲ ತಂದೆ ಕಾಶಪ್ಪಾ ಮುಖಿ ಸಾ:ಲಾಲಗೇರಿ ಬ್ರಹ್ಮಪೂರ ಕಲಬುರಗಿ ಅಂತಾ ತಿಳಿಸಿದ್ದು ಸದರಿಯವರಿಂದ ಇಸ್ಪೀಟ್‌ ಜೂಜಾಟಕ್ಕೆ ಸಂಬಂಧಿಸಿದ ನಗದು ಹಣ 14740/-ರೂ ಹಾಗು 52 ಇಸ್ಪೀಟ ಎಲೆಗಳನ್ನು ಜಪ್ತಿಪಡಿಸಿಕೊಂಡು ಸದರಿಯವರೊಂದಿಗೆ ರಾಘವೇಂದ್ರ ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಕಳವು ಪ್ರಕರಣ :
ಮುಧೋಳ ಠಾಣೆ : ದಿನಾಂಕ 08-07-2015 ರಂದು ಮದ್ಯಾನ 3-00 ಗಂಟೆ ಸುಮಾರಿಗೆ ನಾನು ಮನೆಯಲ್ಲಿದ್ದಾಗ ನನಗೆ ತಿಳುದು ಬಂದಿದ್ದೆನಂದರೆ ನಮ್ಮುರ ಹಿಂದುಗಡೆ ಇರುವ ಲಕ್ಷ್ಮಿದೇವಿಯ ದೇವರ ಮುರ್ತಿ ಕಳ್ಳತನವಾಗಿದೆ ಅಂತಾ ತಿಳಿದು ಬಂದು ನಾನು ಹಾಗು ನಮ್ಮುರ  ಹಿರಿಯರಾದ ಮಾಹಾದೆವಪ್ಪಾ ತಂ/ ಬಸಪ್ಪ ಮದ್ದುರ ದಳಪತಿ , ಭೀಮಶಪ್ಪಾ ತಂ/ ಹಣಮಪ್ಪಾ ಧ್ಯಾನಬೊಯಿನ, ಚಂದ್ರಪ್ಪಾ ತಂ/ ಯಲ್ಲಪ್ಪಾ ಅಂಬಾಟಿ, ಗೀರಿಶ ತಂ/ ಬಾಲಚೆಂದ್ರ ಗೊಲ್ಲಾ ಇತರರು ಕೂಡಿ ನಮ್ಮುರ ಲಕ್ಷ್ಮಿ ದೇವರ ಗುಡಿಗೆ ಹೊಗಿ ನೊಡಲಾಗಿ ಗುಡಿಯಲ್ಲಿ ಹಿತ್ತಾಳೆಯ ಕುದರೆ ಮೆಲೆ ಕುಡಿಸಿದ ಲಕ್ಷ್ಮಿ ದೇವರ ಹಿತ್ತಾಳೆ ಮುರ್ತಿ ಇರಲಿಲ್ಲಾ ನಾವು ಅಲ್ಲಿ ಗುಡಿಯ ಸಮೀಪದಲ್ಲಿರುವ ಮನೆಯರಿಗೆ ಹಾಗು ಸಾರ್ವಜನಿಕರಿಗೆ ವಿಚಾರಸಲಾಗಿ ತಿಳಿದು ಬಂದಿದ್ದೆನಂದರೆ ಇಂದು ಮುಂಜಾನೆ 10-00 ಗಂಟೆ ಸುಮಾರಿಗೆ ಯಾರೊ ಇಬ್ಬರು ವ್ಯಕ್ತಿಗಳು ಕಾವಿವೇಶದಲ್ಲಿ  ಊರಲ್ಲಿ ಬಂದು ತಿರುಗಾಡಿ ಮದ್ಯಾನ 2-00 ಗಂಟೆ ಸುಮಾರಿಗೆ ನಮ್ಮುರ ಹಿಂದುಗಡೆ ಇರುವ ಲಕ್ಷ್ಮಿದೇವರ ಗುಡಿಯ ಹತ್ತಿರ ಕುಳಿತಿದ್ದು ಇವರು ಅಲ್ಲಿಂದ ಹೊದ ಮೇಲೆ ಸದರಿ ಗುಡಿ ಇದ್ದ ಹೊಲದವರ ಮಗಳಾದ ಕು. ಲಕ್ಷ್ಮಿ ತಂ/ ಕಿಷ್ಟಪ್ಪಾ ಜೋಗಿ ಇವಳು ಗುಡಿಯ ಬಾಗಿಲು ತರೆದಿದೆ ಅಂತಾ ಮುಚ್ಚಲು ಹೊದಾಗ ಗುಡಿಯಲ್ಲಿ ಇದ್ದ ಲಕ್ಷ್ಮಿ ದೇವರ ಮುರ್ತಿ ಕಾಣಿಸದಿದ್ದರಿಂದ ಇವಳು ಒಡುತ್ತಾ ಬಂದು ಊರಲ್ಲಿ ಜನರಿಗೆ ತಿಳಿಸಿದ್ದು ಇರುತ್ತದೆ. ಅಂತಾ ತಿಳಿಸಿದರು  ನಾವು ಊರಿನ ಜನರು ಕೂಡಿ ನಮ್ಮುರ ಸೂತ್ತ ಮುತ್ತ ತಿರುಗಾಡಿ ಸಾದು ವೇಶದಾರಿಗಳಿಗೆ ಹುಡುಕಾಡಿದ್ದು ಅವರು ನಮಗೆ ಸಿಕ್ಕಿರುವದಿಲ್ಲಾ. ನಮ್ಮುರ ಲಕ್ಷ್ಮಿದೇವರ ಗುಡಿಯಲ್ಲಿ ಹಿತ್ತಳೆಯ ಕುದರೆಯ ಮೆಲೆ ಕುಡಿಸಿದ್ದ ಹಿತ್ತಾಳೆಯ ಲಕ್ಷ್ಮಿ ದೇವರ ಮುರ್ತಿ ಸುಮಾರು 3 ಅಡಿ ಎತ್ತರವಿದ್ದು ಇದರ ತೂಕ ಸುಮಾರು 30 ಕೆ.ಜಿ ಇರಬಹುದು . ಈ ಮುರ್ತಿಯ ಅಕಿ; 24,000/- ರೂ ಇದ್ದು ಸದರಿ ಹಿತ್ತಾಳೆಯ ಲಕ್ಷ್ಮಿ ದೇವರ ಮುರ್ತಿಯನ್ನು ಯಾರೋ ಇಬ್ಬರು ಸಾದುವೇಶಧಾರಿಗಳು ಇಂದು ಮದ್ಯಾನ 2-30 ಗಂಟೆ ಸುಮಾರಿಗೆ ಪೂಜೆ ಮಾಡುವ ನೇಪದಲ್ಲಿ ಗುಡಿಯ ಕೀಲಿ ಮುರಿದು  ಲಕ್ಷ್ಮಿ ದೇವರ ಮುರ್ತಿ ಕಳ್ಳತನ ಮಾಡಿಕೊಂಡು ಹೊಗಿರುತ್ತಾರೆ ಅಂತಾ ಶ್ರೀ ರಾಮುಲು ತಂ/ಹಣಮಂತ ಗೋಲ್ಲಾ ಸಾ|| ಕೋನಾಪೂರ ಗ್ರಾಮ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮುಧೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

08 July 2015

Kalaburagi District Reported Crimes

ಅಪಘಾತ ಪ್ರಕರಣ :
ಸಂಚಾರಿ ಠಾಣೆ : ದಿನಾಂಕ: 07/07/2015  ರಂದು ರಾತ್ರಿ 10=00 ಗಂಟೆ ಸುಮಾರಿಗೆ ಆರ್.ಟಿ.ಓ ಕ್ರಾಸ್ ದಿಂದ ಸೇಡಂ ರಿಂಗರೋಡ ಮಧ್ಯದಲ್ಲಿ ಬರುವ ಸುಷ್ಮಾ ವೈನ್ಸ ಶಾಪ ಎದುರಿನ ರೋಡ ಮೇಲೆ ಒಬ್ಬ ಅಪರಿಚಿತ ಮನುಷ್ನ ಅಂದಾಜು ವಯಾ: 30 ರಿಂದ 35 ವರ್ಷ ಇತನು ನಡೆದುಕೊಂಡು ರೋಡ ದಾಟುತ್ತಿದ್ದಾಗ ಆರ್.ಟಿ.ಓ ಕ್ರಾಸ್ ರೋಡ ಕಡೆಯಿಂದ ಆರೋಪಿ ನಾಗರಾಜ ಇತನು ತನ್ನ ಮೋ/ಸೈಕಲ್ ನಂ: ಕೆಎ 32 ಎಲ್ 3896 ನೆದ್ದನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಅಪರಚಿತ ಮನುಷ್ಯನಿಗೆ ಡಿಕ್ಕಿ ಪಡಿಸಿ ಅಪಘಾತಮಾಡಿ ತಲೆಗೆ ಭಾರಿ ಗಾಯಗೊಳಿಸಿ ಮೋ/ಸೈಕಲ್ ಸ್ಥಳದಲ್ಲೆ ಬಿಟ್ಟು ಸವಾರ ಹೊರಟು ಹೋಗಿದ್ದು. ಅಪರಿಚಿತ ಮನುಷ್ಯನು ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಉಪಚಾರ ಹೊಂದುತ್ತಾ ಇಂದು ದಿನಾಂಕ: 08/08/2015 ರಂದು ಬೆಳಿಗೆ 6=10 ಗಂಟೆಗೆ ಮೃತ ಪಟ್ಟಿರುತ್ತಾನೆ ಅಂತಾ  ಶ್ರೀ ರಾಜಶೇಖರ  ತಂದೆ ಶಿವಶರಣಪ್ಪಾ ಪಾಟೀಲ  ಸಾ: ಗುಬ್ಬಿ ಕಾಲೋನಿ ಅಂಬಾ ಬಾಯಿ ಗುಡಿ ಹತ್ತಿರ ಕಲಬುರಗಿ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

KALABURAGI DISTRICT REPORTED CRIMES

ಇಸ್ಪೀಟ ಜೂಜಾಟದಲ್ಲಿ ನಿರತ ವ್ಯಕ್ತಿಗಳ ಬಂಧನ :
ರಾಘವೇಂದ್ರ ನಗರ ಠಾಣೆ : ದಿನಾಂಕ: 08-07-2015 ರಂದು ರಾತ್ರಿ ರಾಘವೇಂದ್ರ ನಗರ ಪೊಲೀಸ ಠಾಣೆ ವ್ಯಾಪ್ತಿಯಲ್ಲಿ ಬರುವ ಎಂ.ಎಸ್‌‌.ಕೆ ಮೀಲ್‌‌ ಬಡಾವಣೆಯ ಎಕ್ಬಾಲ್‌ ಕಾಲೋನಿಯ ಮೋಹಿನ ಫಂಕ್ಷನ್‌ ಹಾಲ್‌ ಎದರುಗಡೆ  ಸಾರ್ವಜನಿಕ ಸ್ಥಳದಲ್ಲಿ ಪಣಕ್ಕೆ ಹಣ ಹಚ್ಚಿ ಇಸ್ಪೀಟ್‌ ಜೂಜಾಟ ಆಡುತ್ತಿದ್ದ ಬಗ್ಗೆ ಬಾತ್ಮಿ  ಬಂದ ಮೇರೆಗೆ ಪಿ.ಎಸ್.ಐ ರಾಘವೇಂದ್ರ ನಗರ ಃಆಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೋಗಿ ದಾಳಿ ಮಾಡಿ 6 ಜನರನ್ನು ವಶಕ್ಕೆ ತೆಗೆದುಕೊಂಡು ಅವರ ಹೆಸರು ವಿಚಾರಿಸಲು 1. ಆಬೀದ ಹುಸೇನ್ ತಂದೆ ಮಹ್ಮದ ಪಾಶಾಮೀಯ್ಯಾ ಸಾ:ಎಕ್ಬಾಲ್‌ ಕಾಲೋನಿ ಎಂ.ಎಸ್‌‌.ಕೆ ಮೀಲ್‌‌ ಕಲಬುರಗಿ 2. ನದೀಮ ತಂದೆ ಅಬ್ದುಲ್‌ ರಶೀದ ಸಾ:ಎಂ.ಎಸ್‌.ಕೆ ಮೀಲ್ ಖದೀರ ಚೌಕ ಕಲಬುರಗಿ 3. ಇಜಾಜ ತಂದೆ ಶೇಖ ಮಕಬೂಲ ಸಾ:ರಾಮಚಕ್ಕಿ ಹತ್ತಿರ ಜಿಲಾನಾಬಾದ ಎಂ.ಎಸ್‌.ಕೆ ಮೀಲ್‌ ಕಲಬುರಗಿ 4. ಜಾಕೀರ ತಂದೆ ಅಬ್ದುಲ್‌ ನಬಿ ಸಾ:ಮದೀನಾ ಕಾಲೋನಿ ಕಲಬುರಗಿ 5. ಮತೀನ ತಂದೆ ಮಹ್ಮದ ಹುಸೇನ್‌ ಸಾ:ಪುರಾನಾ ಮಜೀದ ಜಿಲಾನಾಬಾದ ಎಂ.ಎಸ್‌.ಕೆ ಮೀಲ್‌ ಕಲಬುರಗಿ 6. ಸಾಜೀದ ತಂದೆ ಅಬ್ದುಲ್‌ ಸೂಕ್ಕೂರ ಸಾ:ಮಹ್ಮದಿ ಚೌಕ ಹತ್ತಿರ ಜಿಲಾನಾಬಾದ ಕಲಬುರಗಿ ಅಂತಾ ತಿಳಿಸಿದ್ದು ಸದರಿವರಿಂದ ಜೂಜಾಟಕ್ಕೆ ಬಳಸಿದ ನಗದು ಹಣ 3040/- ರೂ ಹಾಗು 52 ಇಸ್ಪೀಟ್‌ ಎಲೆಗಳನ್ನು ವಶಪಡಿಸಿಕೊಂಡು ಸದರಿಯವರ ವಿರುದ್ದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.  
ಅಫಜಲಪೂರ ಠಾಣೆ : ದಿನಾಂಕ 07-07-2015 ರಂದು ಕೂಡಿಗಾನೂರ ಗ್ರಾಮದ ಭೋಗಲಿಂಗೇಶ್ವರ ಗುಡಿಯ ಮುಂದೆ ಕೆಲವು ಜನರು ಪಣಕ್ಕೆ ಹಣ ಹಚ್ಚಿ ಇಸ್ಪೆಟ ಎಲೆಗಳ   ಸಹಾಯದಿಂದ ಅಂದರ ಬಾಹರ ಎಂಬ ಇಸ್ಪೇಟ ಜೂಜಾಟ ಆಡುತ್ತಿದ್ದಾರೆ ಅಂತಾ ಬಾತ್ಮಿ ಬಂದ ಮೇರೆಗೆ ರಾಜಕುಮಾರ ಸಿ.ಎಚ್.ಸಿ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಭೋಗಲಿಂಗೇಶ್ವರ ಗುಡಿಯಿಂದ ಸ್ವಲ್ಪ ದೂರ ಮರೆಯಾಗಿ ನಿಂತು ನೊಡಲು ಗುಡಿಯ ಮುಂದೆ ಖುಲ್ಲಾ ಜಾಗದಲ್ಲಿ ನಾಲ್ಕು ಜನರು ದುಂಡಾಗಿ ಕುಳಿತುಕೊಂಡು ಇಸ್ಪೇಟ ಎಲೆಗಳ ಸಹಾಯದಿಂದ ಅಂದರ ಬಾಹರ ಜೂಜಾಟ ಆಡುತ್ತಿದ್ದು ಖಚಿತ ಪಡಿಸಿಕೊಂಡು ದಾಳಿ ಮಾಡಿದಾಗ ಅದರಲ್ಲಿ ಜೂಜಾಡುತ್ತಿದ್ದ ಇಬ್ಬರು ಓಡಿ ಹೋಗಿದ್ದು, ಇಬ್ಬರನ್ನು ಹಿಡಿದು ಅವರ ಹೆಸರು ವಿಳಾಸ ವಿಚಾರಿಸಿ ಅಂಗ ಶೋಧನೆ ಮಾಡಲಾಗಿ 1) ರಮೇಶ ತಂದೆ ಭಗವಂತರಾವ ಜಮಾದಾರ ಸಾ||ಕೂಡಿಗಾನೂರ 2) ಸಿದ್ರಾಮ ತಂದೆ ಹಣಮಂತ ಜಮಾದಾರ ಸಾ|| ಕೂಡಿಗಾನೂರ ಅಂತಾ ತಿಳಿಸಿದ್ದು, ಅಂತಾ ತಿಳಿಸಿದ್ದು  ಓಡಿ ಹೋದ ಇಬ್ಬರ ಹೆಸರು ವಿಳಾಸ ಸದರಿಯವರಿಗೆ ವಿಚಾರಿಸಲಾಗಿ 1) ಕಲ್ಲಣ್ಣ ತಂದೆ ಶಿವಶಂಕರ ಆಳ್ಳಗಿ 2) ಕುಮಾರ ತಂದೆ ಭಗವಂತರಾವ ಪೊಲೀಸ್ ಪಾಟೀಲ ಸಾ|| ಇಬ್ಬರು ಕೂಡಿಗಾನೂರ  ಅಂತಾ ತಿಳಿಸಿರುತ್ತಾರೆ. ಸದರಿಯವರಿಂದ ಜೂಜಾಟಕ್ಕೆ ಬಳಸಿದ ನಗದು ಹಣ 5,070/- ರೂ ಮತ್ತು 52 ಇಸ್ಪೆಟ ಎಲೆಗಳನ್ನು ವಶಪಡಿಸಿಕೊಂಡು ಸದರಿಯವರೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಸ್ವಾಭಾವಿಕ ಮರಣ ಪ್ರಕರಣ:
ನೆಲೋಗಿ ಪೊಲೀಸ್ ಠಾಣೆ:- ದಿನಾಂಕ:07/07/2015  ರಂದು 12-15 ಪಿ.ಎಂ.ಕ್ಕೆ ಶ್ರೀ ಸಾಹೇಬಗೌಡ ತಂದೆ ಸಿದ್ದಪ್ಪ ಸಾ: ಮುರಗಾನೂರರವರು ಠಾಣೆಗೆ ಹಾಜರಾಗಿ ಮುಂಜಾನೆ 8-00 ಗಂಟೆ ಸುಮಾರಿಗೆ ನಮ್ಮ ಅಣ್ಣ ಸಿದ್ರಾಮಪ್ಪನು ಹೊಲಕ್ಕೆ ಹೋದಾಗ ಅಲ್ಲೆ ಬಾವಿ ಹತ್ತಿರ ಇರುವ ಮಾವನಿಗಿಡಕ್ಕೆ ನನ್ನ ಮಗ ಮಲ್ಲಣ್ಣ ತಂದೆ ಸಾಹೇಬಗೌಡ ಚಾಂದಕವಠೆ ನೇಣು ಹಾಕಿಕೊಂಡೆಇದ್ದನ್ನು ನೋಡಿ ಮನಗೆ ಬಂದು ತಿಳಿಸಿದಾಗ ನಾವೆಲ್ಲರೂ ಹೊಲಕ್ಕೆ ಹೋಗಿ ನೋಡಲಾಗಿ ನನ್ನ ಮಗನು ಬಾವಿಯ ಹತ್ತಿರ ಇರುವ ಮಾವಿನ ಗಿಡಕ್ಕೆ ಹಗ್ಗದಿಂದ ಊರಲು ಹಾಕಿಕೊಂಡು ಮೃತಪಟ್ಟಿದ್ದು. ನನ್ನ ಮಗ ಣೇನು ಹಾಕಿಕೊಂಡು ಮೃತ ಪಟ್ಟ ಬಗ್ಗೆ ನನಗೆ ಸಂಶಯವಿದ್ದು. ಪ್ರಕರಣ ದಾಖಲಿಸಿ ನನ್ನ ಮಗನ ಸಾವಿನ ಬಗ್ಗೆ ತನಿಖೆ ಕೈಕೊಳ್ಳುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನೆಲೋಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.