POLICE BHAVAN KALABURAGI

POLICE BHAVAN KALABURAGI

08 July 2015

KALABURAGI DISTRICT REPORTED CRIMES

ಇಸ್ಪೀಟ ಜೂಜಾಟದಲ್ಲಿ ನಿರತ ವ್ಯಕ್ತಿಗಳ ಬಂಧನ :
ರಾಘವೇಂದ್ರ ನಗರ ಠಾಣೆ : ದಿನಾಂಕ: 08-07-2015 ರಂದು ರಾತ್ರಿ ರಾಘವೇಂದ್ರ ನಗರ ಪೊಲೀಸ ಠಾಣೆ ವ್ಯಾಪ್ತಿಯಲ್ಲಿ ಬರುವ ಎಂ.ಎಸ್‌‌.ಕೆ ಮೀಲ್‌‌ ಬಡಾವಣೆಯ ಎಕ್ಬಾಲ್‌ ಕಾಲೋನಿಯ ಮೋಹಿನ ಫಂಕ್ಷನ್‌ ಹಾಲ್‌ ಎದರುಗಡೆ  ಸಾರ್ವಜನಿಕ ಸ್ಥಳದಲ್ಲಿ ಪಣಕ್ಕೆ ಹಣ ಹಚ್ಚಿ ಇಸ್ಪೀಟ್‌ ಜೂಜಾಟ ಆಡುತ್ತಿದ್ದ ಬಗ್ಗೆ ಬಾತ್ಮಿ  ಬಂದ ಮೇರೆಗೆ ಪಿ.ಎಸ್.ಐ ರಾಘವೇಂದ್ರ ನಗರ ಃಆಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೋಗಿ ದಾಳಿ ಮಾಡಿ 6 ಜನರನ್ನು ವಶಕ್ಕೆ ತೆಗೆದುಕೊಂಡು ಅವರ ಹೆಸರು ವಿಚಾರಿಸಲು 1. ಆಬೀದ ಹುಸೇನ್ ತಂದೆ ಮಹ್ಮದ ಪಾಶಾಮೀಯ್ಯಾ ಸಾ:ಎಕ್ಬಾಲ್‌ ಕಾಲೋನಿ ಎಂ.ಎಸ್‌‌.ಕೆ ಮೀಲ್‌‌ ಕಲಬುರಗಿ 2. ನದೀಮ ತಂದೆ ಅಬ್ದುಲ್‌ ರಶೀದ ಸಾ:ಎಂ.ಎಸ್‌.ಕೆ ಮೀಲ್ ಖದೀರ ಚೌಕ ಕಲಬುರಗಿ 3. ಇಜಾಜ ತಂದೆ ಶೇಖ ಮಕಬೂಲ ಸಾ:ರಾಮಚಕ್ಕಿ ಹತ್ತಿರ ಜಿಲಾನಾಬಾದ ಎಂ.ಎಸ್‌.ಕೆ ಮೀಲ್‌ ಕಲಬುರಗಿ 4. ಜಾಕೀರ ತಂದೆ ಅಬ್ದುಲ್‌ ನಬಿ ಸಾ:ಮದೀನಾ ಕಾಲೋನಿ ಕಲಬುರಗಿ 5. ಮತೀನ ತಂದೆ ಮಹ್ಮದ ಹುಸೇನ್‌ ಸಾ:ಪುರಾನಾ ಮಜೀದ ಜಿಲಾನಾಬಾದ ಎಂ.ಎಸ್‌.ಕೆ ಮೀಲ್‌ ಕಲಬುರಗಿ 6. ಸಾಜೀದ ತಂದೆ ಅಬ್ದುಲ್‌ ಸೂಕ್ಕೂರ ಸಾ:ಮಹ್ಮದಿ ಚೌಕ ಹತ್ತಿರ ಜಿಲಾನಾಬಾದ ಕಲಬುರಗಿ ಅಂತಾ ತಿಳಿಸಿದ್ದು ಸದರಿವರಿಂದ ಜೂಜಾಟಕ್ಕೆ ಬಳಸಿದ ನಗದು ಹಣ 3040/- ರೂ ಹಾಗು 52 ಇಸ್ಪೀಟ್‌ ಎಲೆಗಳನ್ನು ವಶಪಡಿಸಿಕೊಂಡು ಸದರಿಯವರ ವಿರುದ್ದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.  
ಅಫಜಲಪೂರ ಠಾಣೆ : ದಿನಾಂಕ 07-07-2015 ರಂದು ಕೂಡಿಗಾನೂರ ಗ್ರಾಮದ ಭೋಗಲಿಂಗೇಶ್ವರ ಗುಡಿಯ ಮುಂದೆ ಕೆಲವು ಜನರು ಪಣಕ್ಕೆ ಹಣ ಹಚ್ಚಿ ಇಸ್ಪೆಟ ಎಲೆಗಳ   ಸಹಾಯದಿಂದ ಅಂದರ ಬಾಹರ ಎಂಬ ಇಸ್ಪೇಟ ಜೂಜಾಟ ಆಡುತ್ತಿದ್ದಾರೆ ಅಂತಾ ಬಾತ್ಮಿ ಬಂದ ಮೇರೆಗೆ ರಾಜಕುಮಾರ ಸಿ.ಎಚ್.ಸಿ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಭೋಗಲಿಂಗೇಶ್ವರ ಗುಡಿಯಿಂದ ಸ್ವಲ್ಪ ದೂರ ಮರೆಯಾಗಿ ನಿಂತು ನೊಡಲು ಗುಡಿಯ ಮುಂದೆ ಖುಲ್ಲಾ ಜಾಗದಲ್ಲಿ ನಾಲ್ಕು ಜನರು ದುಂಡಾಗಿ ಕುಳಿತುಕೊಂಡು ಇಸ್ಪೇಟ ಎಲೆಗಳ ಸಹಾಯದಿಂದ ಅಂದರ ಬಾಹರ ಜೂಜಾಟ ಆಡುತ್ತಿದ್ದು ಖಚಿತ ಪಡಿಸಿಕೊಂಡು ದಾಳಿ ಮಾಡಿದಾಗ ಅದರಲ್ಲಿ ಜೂಜಾಡುತ್ತಿದ್ದ ಇಬ್ಬರು ಓಡಿ ಹೋಗಿದ್ದು, ಇಬ್ಬರನ್ನು ಹಿಡಿದು ಅವರ ಹೆಸರು ವಿಳಾಸ ವಿಚಾರಿಸಿ ಅಂಗ ಶೋಧನೆ ಮಾಡಲಾಗಿ 1) ರಮೇಶ ತಂದೆ ಭಗವಂತರಾವ ಜಮಾದಾರ ಸಾ||ಕೂಡಿಗಾನೂರ 2) ಸಿದ್ರಾಮ ತಂದೆ ಹಣಮಂತ ಜಮಾದಾರ ಸಾ|| ಕೂಡಿಗಾನೂರ ಅಂತಾ ತಿಳಿಸಿದ್ದು, ಅಂತಾ ತಿಳಿಸಿದ್ದು  ಓಡಿ ಹೋದ ಇಬ್ಬರ ಹೆಸರು ವಿಳಾಸ ಸದರಿಯವರಿಗೆ ವಿಚಾರಿಸಲಾಗಿ 1) ಕಲ್ಲಣ್ಣ ತಂದೆ ಶಿವಶಂಕರ ಆಳ್ಳಗಿ 2) ಕುಮಾರ ತಂದೆ ಭಗವಂತರಾವ ಪೊಲೀಸ್ ಪಾಟೀಲ ಸಾ|| ಇಬ್ಬರು ಕೂಡಿಗಾನೂರ  ಅಂತಾ ತಿಳಿಸಿರುತ್ತಾರೆ. ಸದರಿಯವರಿಂದ ಜೂಜಾಟಕ್ಕೆ ಬಳಸಿದ ನಗದು ಹಣ 5,070/- ರೂ ಮತ್ತು 52 ಇಸ್ಪೆಟ ಎಲೆಗಳನ್ನು ವಶಪಡಿಸಿಕೊಂಡು ಸದರಿಯವರೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಸ್ವಾಭಾವಿಕ ಮರಣ ಪ್ರಕರಣ:
ನೆಲೋಗಿ ಪೊಲೀಸ್ ಠಾಣೆ:- ದಿನಾಂಕ:07/07/2015  ರಂದು 12-15 ಪಿ.ಎಂ.ಕ್ಕೆ ಶ್ರೀ ಸಾಹೇಬಗೌಡ ತಂದೆ ಸಿದ್ದಪ್ಪ ಸಾ: ಮುರಗಾನೂರರವರು ಠಾಣೆಗೆ ಹಾಜರಾಗಿ ಮುಂಜಾನೆ 8-00 ಗಂಟೆ ಸುಮಾರಿಗೆ ನಮ್ಮ ಅಣ್ಣ ಸಿದ್ರಾಮಪ್ಪನು ಹೊಲಕ್ಕೆ ಹೋದಾಗ ಅಲ್ಲೆ ಬಾವಿ ಹತ್ತಿರ ಇರುವ ಮಾವನಿಗಿಡಕ್ಕೆ ನನ್ನ ಮಗ ಮಲ್ಲಣ್ಣ ತಂದೆ ಸಾಹೇಬಗೌಡ ಚಾಂದಕವಠೆ ನೇಣು ಹಾಕಿಕೊಂಡೆಇದ್ದನ್ನು ನೋಡಿ ಮನಗೆ ಬಂದು ತಿಳಿಸಿದಾಗ ನಾವೆಲ್ಲರೂ ಹೊಲಕ್ಕೆ ಹೋಗಿ ನೋಡಲಾಗಿ ನನ್ನ ಮಗನು ಬಾವಿಯ ಹತ್ತಿರ ಇರುವ ಮಾವಿನ ಗಿಡಕ್ಕೆ ಹಗ್ಗದಿಂದ ಊರಲು ಹಾಕಿಕೊಂಡು ಮೃತಪಟ್ಟಿದ್ದು. ನನ್ನ ಮಗ ಣೇನು ಹಾಕಿಕೊಂಡು ಮೃತ ಪಟ್ಟ ಬಗ್ಗೆ ನನಗೆ ಸಂಶಯವಿದ್ದು. ಪ್ರಕರಣ ದಾಖಲಿಸಿ ನನ್ನ ಮಗನ ಸಾವಿನ ಬಗ್ಗೆ ತನಿಖೆ ಕೈಕೊಳ್ಳುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನೆಲೋಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.

06 July 2015

Kalaburagi District Reported Crimes

ಇಸ್ಪೀಟ ಜೂಜಾಟದಲ್ಲಿ ನಿರತ ವ್ಯಕ್ತಿಗಳ ಬಂಧನ :
ಚೌಕ ಠಾಣೆ : ದಿನಾಂಕ 05.07.2015 ರಂದು ಚೌಕ ಠಾಣಾ ವ್ಯಾಪ್ತಿಯ ಆಶ್ರಯ ಕಾಲೋನಿ ಹತ್ತಿರ ಇರುವ ಲಾರಿ ತಂಗುದಾಣ ಗುಮ್ಮಜ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಹಣವನ್ನು ಪಣಕ್ಕೆ ಹಚ್ಚಿ ಅಂದರ ಬಹಾರ ಎಂಬ ಧೈವಲೀಲೆ ಇಸ್ಪೇಟ ಜೂಜಾಟ ಆಡುತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಪಿ.ಐ. ಚೌಕ ಹಾಗು ಸಿಬ್ಬಂದು ಮತ್ತು ಪಂಚರೊಂದಿಗೆ ಆಶ್ರಯ ಕಾಲೋನಿ ಹತ್ತಿರ ಇರುವ ಲಾರಿ ತಂಗುದಾಣ ಗುಮ್ಮಜ ಹತ್ತಿರ ಹೋಗಿ ಮರೆಯಲ್ಲಿ ನಿಂತು ನೋಡಲು ಆಶ್ರಯ ಕಾಲೋನಿ ಹತ್ತಿರ ಇರುವ ಲಾರಿ ತಂಗುದಾಣ ಗುಮ್ಮಜ ಹತ್ತಿರ ಖುಲ್ಲಾ ಬಯಲು ಜಾಗೆಯಲ್ಲಿ ಪ್ರಜ್ವಲವಾದ ಮರಕುರಿ ಲೈಟಿನ ಬೆಳಕಿನಲ್ಲಿ ಸಾರ್ವಜನಿಕ ಸ್ಥಳದಲ್ಲಿ 8 ಜನರು ಗುಂಪಾಗಿ ಕುಳಿತ ಹಣವನ್ನು ಪಣಕ್ಕೆ ಹಚ್ಚಿ ಅಂದರ ಬಾಹರ ಜೂಜಾಟ ಆಡುತ್ತಿರುವದನ್ನು ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮ ನಾನು ಮತ್ತು ಸಿಬ್ಬಂದಿಯವರು ಕೂಡಿಕೊಂಡು ಜೂಜಾಟ ನಿರತರ ಮೇಲೆ ದಾಳಿಮಾಡಿ ಅವರನ್ನು ಹಿಡಿದುಕೊಂಡು ವಿಚಾರಿಸಲು 1) ಶರಣಬಸಪ್ಪ ತಂದೆ ಸಿದ್ದಣ್ಣ ಚೆನ್ನಶೆಟ್ಟಿ ಸಾ: ರಾಮ ನಗರ ಕಲಬುರಗಿ 2) ಚಂದ್ರಕಾಂತ ತಂದೆ ರಾಣಪ್ಪ ಕಮಾನ ಸಾ: ಅಂಬೇಡ್ಕರ ಆಶ್ರಯ ಕಾಲೋನಿ ಫಿಲ್ಟರ ಬೆಡ್ ಕಲಬುರಗಿ 3) ಶಿವರಾಯ ತಂದೆ ತಿಪ್ಪಣ್ಣ ಪಟ್ಟಣಕರ ಸಾ: ಅಂಬೇಡ್ಕರ ಆಶ್ರಯ ಕಾಲೋನಿ ಫಿಲ್ಟರ ಬೆಡ್ ಕಲಬುರಗಿ 4) ಮಲ್ಲಿಕಾರ್ಜುನ ತಂದೆ ಶರಣಪ್ಪ ಪೂಜಾರಿ ಸಾ: ಶಿವಾಜಿ ನಗರ ಕಲಬುರಗಿ 5) ಶರಣಪ್ಪ ತಂದೆ ಮಡಿವಾಳಪ್ಪ ಗುಬ್ಬಿ ಸಾ: ಭವಾನಿ ನಗರ ಕಲಬುರಗಿ 6) ಶಿವಲಿಂಗಪ್ಪ ತಂದೆ ಗುಂಡಪ್ಪ ಹಾವನೂರ ಸಾ; ಅಯ್ಯರವಾಡಿ ಕಲಬುರಗಿ 7) ಬಸವಂತರಾಯ ತಂದೆ ವೀರಭದ್ರಪ್ಪ ಪಾಟೀಲ ಸಾ: ಶಿವಾಜಿ ನಗರ ಕಲಬುರಗಿ ಅಂತ ತಿಳಿಸಿದ್ದು 8) ಅಣವೀರಯ್ಯಾ ತಂದೆ ರುದ್ರಮುನಿ ಮಠಪತಿ ಸಾ: ಭಾಗೋಡಿ ಹಾ.ವ: ಶಿವಾಜಿ ನಗರ ಕಲಬುರಗಿ ಅಂತಾ ತಿಳಿಸಿದ್ದು ಸದರಿಯವರಿಂದ ಜೂಜಾಟಕ್ಕೆ ಬಳಸಿದ ನಗದು ಹಣ 8100 ರೂ. ಮತ್ತು 52 ಇಸ್ಪೇಟ ಎಲೆಗಳನ್ನು ವಶಪಡಿಸಿಕೊಂಡು ಸದರಿಯವರೊಂದಿಗೆ ಚೌಕ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ
ಹಲ್ಲೆ ಪ್ರಕರಣ :
ನಿಂಬರ್ಗಾ ಠಾಣೆ : ಶ್ರೀಮತಿ ಸುಶಿಲಾಬಾಯಿ ಗಂಡ ಗಣಪತಿ ಚವ್ಹಾಣ ಸಾ: ಯಳಸಂಗಿ ತಾಂಡಾ ರವರು ದಿನಾಂಕ 04/07/2015 ರಂದು ಸಾಯಂಕಾಲ ಯಳಸಂಗಿ ತಾಂಡಾದ ಪ್ರಾಥಮಿಕ ಶಾಲೆಯ ಹತ್ತಿರ ರಸ್ತೆಯ ಮೇಲೆ ಆರೋಪಿ ಮತ್ತು ಫಿರ್ಯಾದಿಯ ಮಕ್ಕಳು ತೆಗೆದ ಜಗಳದ ದ್ವೇಶ ಕಟ್ಟಿಕೊಂಡು ಕಾಶಿನಾಥ ತಂದೆ ವೇವಲು ಚವ್ಹಾಣ ಸಂಗಡ 03 ಜನರು ಸಾ|| ಯಳಸಂಗಿ ತಾಂಡಾ. ರವರು  ಫಿರ್ಯಾದಿ ಮತ್ತು ಅವರ ಕಡೆಯವರಿಗೆ ಅವಾಚ್ಯ ಶಬ್ದಗಳಿಂದ ಬೈದು, ಕೈಯಿಂದ ಮತ್ತು ಕಲ್ಲಿನಿಂದ ಹೊಡೆ ಬಡೆ ಮಾಡಿ ಫಿರ್ಯಾದಿಗೆ ಜಗ್ಗಾಡಿ ಜೀವ ಭಯ ಪಡಿಸಿರುತ್ತಾರೆ ಅಂತ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಕಳವು ಪ್ರಕರಣ :
ಜೇವರ್ಗಿ ಠಾಣೆ : ಶ್ರೀ ಹುಸೇನ್ ಪಟೇಲ್ ತಂದೆ ಮಹ್ಮದ್ ಪಟೇಲ್ ಮಾಲಿ ಪಾಟೀಲ್ ಸಾ: ಮುದಬಾಳ ಬಿರವರು ದಿನಾಂಕ  19.06.2015 ರಂದು ಹಗಲು ಹೊತ್ತಿನಲ್ಲಿ ಖಾದ್ಯಾಪುರ ಸಿಮಾಂತರದ ಸರಕಾರಿ ಗೌಂಟಾಣದಲ್ಲಿ ಮೇಯಲು ಹೋದ ನನ್ನ ಒಂದು ಎಮ್ಮೆ ನಮ್ಮೂರಿನವರ 5 ಎಮ್ಮೆ, ಹಾಗು ಖಾದ್ಯಾಪುರ ಗ್ರಾಮದವರ 11 ಎಮ್ಮೆ ಕೊಡಚಿ ಗ್ರಾಮದವರ 2 ಎಮ್ಮೆ ಲಖಣಾಪುರ ಗ್ರಾಮದ 3 ಎಮ್ಮೆಗಳು ಹಿಗೆ ಒಟ್ಟು 22 ಎಮ್ಮೆಗಳು ಅಂ.ಕಿ 4.40.000/- ರೂ ಕಿಮ್ಮತ್ತಿನದ್ದವುಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

05 July 2015

Kalaburagi District Reported Crimes

ಅಪಘಾತ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀ ಮಂಜುನಾಥ ತಂದೆ ಮಹಾದೇವ ಮಾಯನ್ನವರ ಉ;ಕೆ.ಎಸ್.ಆರ್.ಟಿ.ಸಿ. ಡಿಪೂ ನಂ.2 ನೆದ್ದರಲ್ಲಿ ಮ್ಯಾನೇಜರ ಸಾ; ಮನೆ ನಂ.ಎಂ.ಐ.ಜಿ.-19 ರಾಜೀವ ನಗರ ಚಿಕ್ಕೋಡಿ ಜಿ;ಬೆಳಗಾಂವ ಹಾವ; ಕ್ವಾರಟರ್ಸ ನಂ. 6 ಕೆ.ಎಸ್.ಆರ್.ಟಿ.ಸಿ.ಕ ಆಫೀಸರ ಕ್ವಾಟರ್ಸ ಕಲಬುರಗಿ ಇವರು ದಿನಾಂಕ.4-7-2015 ರಂದು ಮುಂಜಾನೆ ನನ್ನ ಗೆಳೆಯರಾದ ಸಂಕೇತ ತಂದೆ ಶಶೀಕಾಂತ ಚಿಕ್ಕಡೆ  ಸಾ;ಚಿಕ್ಕೋಡಿ , ಮತ್ತು ಆಶಿಷ ತಂದೆ ಪ್ರಕಾಶ ಕಟ್ಟಿ ಸಾ;  ಮಿಲಿಟರಿ ಕ್ಯಾಂಪ ಹತ್ತಿರ ಬೆಳಗಾಂವ ಇವರು ನನ್ನನ್ನು ಬೇಟಿಯಾಗಲು ಚಿಕ್ಕೊಡಿಯಿಂದ ಕಲಬುರಗಿಗೆ ಬಂದಿದ್ದು ನಾನು ಮತ್ತು ಸದರಿ ನನ್ನ ಇಬ್ಬರ ಗೆಳೆಯರು ಕೂಡಿಕೊಂಡು ಸಂಕೇತ ಚಿಕ್ಕಡೆ ಇತನು ತೆಗೆದುಕೊಂಡು ಬಂದ ತನ್ನ ಟೋಯೋಟೋ ಕರೋಲಾ ಕಾರ ನಂ. ಎಂ.ಹೆಚ.12 ಸಿ.ಡಿ-8252 ನೆದ್ದರಲ್ಲಿ ಮೂರು ಜನರು ಹೊರಗಡೆ ಊಟ ಮಾಡಿಬರಲು ಕಲಬುರಗಿ ಆಳಂದ ರೋಡಿನ ಕೆರಿಬೋಸಗಾ ಕ್ರಾಸ ಹತ್ತಿರ ಇರುವ ದಾಬಕ್ಕೆ ಹೋಗಿದ್ದೇವು ರಾತ್ರಿ 11-00 ಗಂಟೆಯ ಸುಮಾರಿಗೆ ದಾಬಾದಲ್ಲಿ ಊಟ ಮಾಡಿ ಮರಳಿ ಕಲಬುರಗಿಗೆ ಬರುವಾಗ ಸದರಿ ಕಾರನ್ನು ಸಂಕೇತ ಚಿಕ್ಕಡೆ ನಡೆಯಿಸುತ್ತಿದ್ದನು ಅವನ ಪಕ್ಕದ ಶೀಟನಲ್ಲಿ ನಾನು ಕುಳಿತಿದ್ದೆ.  ನನ್ನ ಹಿಂದೆ ಆಶೀಷ ಕಟ್ಟಿ ಇತನು ಕುಳಿತಿದ್ದನು ದಾಬಾದಿಂದ ಹೊರಟು ವೇಗವಾಗಿ ಹೋಗುತ್ತಿರುವಾಗ ಕೆರಿಬೋಸಗಾ ಕ್ರಾಸ ಹತ್ತಿರ ಎದರುಗಡೆಯಿಂದ ವಾಹನಗಳು ಬರುತ್ತಿದ್ದು ಅವುಗಳ ಬೆಳಕಿನಲ್ಲಿ ಕೆರಿಬೋಸಗಾ ಕ್ರಾಸ ಕರ್ವಿನಲ್ಲಿರುವ ಜಂಪಗಳನ್ನು ಕಾಣದೆ ಇದ್ದಾಗ ಕಾರನ ವೇಗ ಕಂಟ್ರೋಲ ಮಾಡದಕ್ಕೆ ಆಗದೆ ರೋಡ ಜಂಪಗಳಲ್ಲಿ ನಾವು ಕುಳಿತ ಕಾರು ಪಲ್ಟಿಯಾಗಿರುತ್ತದೆ. ಇದರಿಂದ ನನಗೆ ಬಲಗೈ ಅಂಗೈಗೆ ರಕ್ತಗಾಯ , ಎಡಗೈ ಮೋಳಕೈಗೆ ತರಚಿದಗಾಯ , ಬಲಗಾಲು ಮದ್ಯದ ಬೆರಳಿಗೆ ರಕ್ತಗಾಯ , ತಲೆಗೆ ಗುಪ್ತ ಪೆಟ್ಟಾಗಿರುತ್ತದೆ ಹಾಗೂ ನನ್ನ ಹಿಂದೆ ಕುಳಿತಿದ್ದ ಆಶೀಷ ಕಟ್ಟಿ ಇತನಿಗೆ ಬಲಗೈ ಮುಂಗೈ ಹತ್ತಿರ ಅಲ್ಲಲ್ಲಿ ತರಚಿದ ರಕ್ತಗಾಯಗಳಾಗಿರುತ್ತವೆ.  ಮತ್ತು ನಾವು ಕುಳತ ಕಾರು ನಡೆಯಿಸುತ್ತಿದ್ದ ನನ್ನ ಗೆಳೆಯ ಸಂಕೇತ ಚಿಕ್ಕಡೆ ಇತನಿಗೆ  ತಲೆಯ ಬಲಭಾಗದಲ್ಲಿ,ತಲೆಯ ಮೇಲಿನಬಾಗದಲ್ಲಿ ಮುಖಕ್ಕೆ ಭಾರಿಗಾಯವಾಗಿ ತಲೆಯಿಂದ ಮೂಗಿನಿಂದ ,ಬಾಯಿಯಿಂದ ,ಕಿವಿಯಿಂದ ರಕ್ತಸ್ರಾವವಾಗುತ್ತಿತ್ತು. ಆಗ ನಾವು ಚಿರಾಡುವಾಗ ರೋಡಿಗೆ ಹೋಗುತ್ತಿದ್ದ ಒಬ್ಬ ವ್ಯಕ್ತಿ ಬಂದಿದ್ದು ಹೆಸರು ಕೇಳಿಗೊತ್ತಾದ  ರವಿಕುಮಾರ ತಂದೆ ಲಕ್ಷ್ಮಣರಾವ ಕಟವಟಿ ಸಾ;ಪುಟಾಣಿ ಗಲ್ಲಿ ಕಲಬುರಗಿ  ಇತನು ಬಂದಿದ್ದು ಇತನು ಮತ್ತು ನಾನು ಹಾಗೂ ಆಶಿಷ ಕಟ್ಟಿ ಕೂಡಿಕೊಂಡು ಒಂದು ಆಟೋರಿಕ್ಷಾದಲ್ಲಿ ಸಂಕೇತ ಚಿಕ್ಕಡೆ ಇತನಿಗೆ ಕೂಡಿಸಿಕೊಂಡು ಉಪಚಾರ ಕುರಿತು ಕಲಬುರಗಿಯ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ವೈದ್ಯಾದಿಕಾರಿಗಳಿಗೆ ತೋರಿಸಲು ಮೃತ ಪಟ್ಟಿರುತ್ತಾನೆ ಅಂತಾ ತಿಳಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಾತಿ ನಿಂದನೆ ಮಾಡಿ ಹಲ್ಲೆ ಮಾಡಿದ ಪ್ರಕರಣ :
ಸೇಡಂ ಠಾಣೆ : ಶ್ರೀ. ರಾಜಶೇಖರ ತಂದೆ ಶಿವಪ್ಪ ಜಟ್ಟೂರ ಸಾ:ನಿಡಗುಂದಾ ರವರು ದಿನಾಂಕ :02-07-2015 ರಂದು ಕಾಳಗಿ ಗ್ರಾಮದಲ್ಲಿ ಸಂಗೀತ ಕಾರ್ಯಕ್ರಮವಿದ್ದು ಅಲ್ಲಿಗೆ ಹೋಗಿ ಸಂಗೀತ ಮುಗಿಸಿಕೊಂಡು ಟೆಂಗಳಿ ಗ್ರಾಮದಲ್ಲಿ ವಸತಿ ಮಾಡಿ ದಿ:03-07-2015 ರಂದು ಕಲಬುರಗಿಗೆ ಹೋಗಿ ಮರಳಿ ನಿಡಗುಂದಾ ಗ್ರಾಮಕ್ಕೆ ಹೋಗಬೇಕೆಂದು ರಾತ್ರಿ 08-00 ಗುಲಬರ್ಗಾ ಬಿಟ್ಟು ಸೇಡಂಕ್ಕೆ ರಾತ್ರಿ 10-00 ಗಂಟೆಗೆ ಬಂದಾಗ  ಹಸಿವು ಆಗಿದ್ದರಿಂದ ಅಯೊಧ್ಯಾ ಹೋಟೆಲ್ ಗೆ ಹೋಗಿ ಊಟ ಮಾಡಿಕೊಂಡು ಕೈತೊಳೆದುಕೊಳ್ಳಲು ಹ್ಯಾಂಡ ವಾಶಗೆ ಹೋದಾಗ ಅಲ್ಲಿ ಸೇಡಂ ಪಟ್ಟಣದ ತನಗೆ ಪರಿಚಯ ಇರುವ ಮಲ್ಲು ಡೀಲ್  ಇವರು ಕೈ ತೊಳೆದುಕೊಳ್ಳುತ್ತಿದ್ದರು. ಅವರು ಕೈ ತೊಳೆದುಕೊಂಡ ಮೇಲೆ ನಳ ಹಾಗೆ ಚಾಲು ಇರಲಿ ಅಂತ ಹೇಳಿದ್ದಕ್ಕೆ ಅವರುಗಳು ತನಗೆ ಯಾವುದೋ ಕಾರಣಕ್ಕೆ ನನ್ನ ಮೇಲೆ ಸಿಟ್ಟಿಗೆ ಬಂದು ಮಾದಿಗ ಸೂಳೆಮಗನೇ ನಿನ್ನ ಕೈಗೆ ಏನಾಗಿದೆ ಅಂತ ಬೈಯ ಹತ್ತಿದ್ದನ್ನು, ಅದಕ್ಕೆ ನಾನು ನಿಮಗೆ ಏನು ಹೇಳಿದ್ದೀನಿ ಅಂತ ಕೇಳಿದರೆ, ಮಲ್ಲು ತನ್ನ ಕೈಯಲ್ಲಿದ್ದ ಸ್ಟೀಲ್ ಗ್ಲಾಸಿನಿಂದ ನನ್ನ ಎಡಭಾಗದ ತಲೆಗೆ ಹೊಡೆದನು, ಸತೀಶ ಖಾನವಳಿ ಇತನು ಕೈ ಮುಷ್ಠಿ ಮಾಡಿ ಎಡಗಣ್ಣಿನ ಮೇಲೆ ಹಾಗೂ ಬಲಮಗ್ಗಲಿಗೆ ಹೊಡೆದು ಹೊಟೆಲ್ ನಿಂದ ನನಗೆ ಹೊರಗೆ ಎಳೆದು ತಂದಿದ್ದು ಅಲ್ಲಿ ಅವರ ಗೆಳೆಯರಾದ, ರವಿ ಗುಡ್ಡದ್, ನಾಗು ಗುಡ್ಡದ್, ಉಮೇಶ ಬಡಿಗೇರ ಇವರು ಇದ್ದು ಇವರೂ ಸಾಹ ಅವರೊಂದಿಗೆ ಬಂದು ಏನಂತನ ಮಾದಿಗ ಸೂಳೆ ಮಗನೇ ಅಂತ ಜಾತಿ ಎತ್ತಿ ಬೈದು ಸಿಕ್ಕಾ ಪಟ್ಟೆ ಎಲ್ಲರೂ ಕೂಡಿ ಬೈದು ಕೈಯಿಂದ ಮೈಮೇಲೆ ಹೊಡೆದು ಗಾಯಗೊಳೀಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.