POLICE BHAVAN KALABURAGI

POLICE BHAVAN KALABURAGI

07 June 2015

Kalaburagi District Reported Crimes

ಅಪಹರಣ ಪ್ರಕರಣ :
ಮಹಿಳಾ ಠಾಣೆ : ಶ್ರೀ ಅಶೋಕ ತಂದೆ ರೇವಣಸಿದ್ದಪ್ಪಾ ಕಂದಗೂಳ ಸಾ: ಮನೆ ನಂ 11-861/45 ಬೀರಪ್ಪ ಗುಡಿ ಹತ್ತಿರ ಬಸವ ನಗರ  ಕಲಬುರಗಿ ಇವರ ಮಗಳಾದ ಅಕ್ಷತಾ ವಯಸ್ಸು 17 ವರ್ಷ ಇವಳು 10 ನೇ ತರಗತಿಯಲ್ಲಿ ಅನುತ್ತಿರ್ಣವಗಿರುವದರಿಂದ ಮನೆಯಲ್ಲಿಯೇ ಇರುತ್ತಾಳೆ. ದಿನಾಂಕ 01.06.2015 ರಂದು ರಾತ್ರಿ 10 ಗಂಟೆಯ ಸುಮಾರಿಗೆ ಅಜಯ ಎಂಬುವ ಹುಡುಗನು ನಮ್ಮ ಮನೆಗೆ ಬಂದು ನನ್ನ ಮಗಳಾದ ಅಕ್ಷತಾ ಇವಳಿಗೆ ಹೆದರಿಸಿ  ರಂಡಿ ಬೋಸಡಿ ಅಂತಾ ಅವಾಚ್ಯ ಶಬ್ದಗಳಿಂದ ಬೈದು ನೀನು ನನ್ನ ಜೊತೆಗೆ ಬರದೇ ಇದ್ದರೆ ನಿನ್ನ ತಂದೆ ತಾಯಿಯವರಿಗೆ ಜೀವ ಹೊಡೆದು ನಿನಗೆ ಎತ್ತಿಕೊಂಡು ಹೋಗುತ್ತೇನೆ ಅಂತಾ ಮಗಳಿಗೆ ಕೈಯಿಂದ ಹೊಡೆಬಡೆ ಮಾಡಿ ಅಪಹರಣ ಮಾಡಿಕೊಂಡು ಹೋಗಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣಗಳು :
ಮಾಡಬೂಳ ಠಾಣೆ : ಶ್ರೀ ಬಸವರಾಜ ತಂದೆ ಗುಂಡಪ್ಪಾ ಮರತೂರ ಸಾ : ಭಾಗೋಡಿ  ತಾ : ಚಿತ್ತಾಪೂರ ರವರು ಮತ್ತು ತಮ್ಮ ಸಮಾಜದ ನಿಂಗಣ್ಣಾ ಪೂಜಾರಿ ಇಬ್ಬರೂ ಕೊಡಿ ಖಾಸಗಿ ಕೆಲಸದ ನಿವಿತ್ಯ ನನ್ನ ಮೋ.ಸೈಕಲ ನಂ ಕೆಎ-56 ಹೆಚ್-682 ನೇದ್ದನ್ನು ತೆಗೆದುಕೊಂಡು ಕಲಬುರಗಿಗೇ ಹೋಗಿ ಕೆಲಸ ಮುಗಿಸಿಕೊಂಡು ಮರಳಿ ಭಾಗೋಡಿಗೆ ಹೋಗಬೇಕೆಂದು ಸದ್ರಿ ಮೋಟಾರ ಸೈಕಲ ನಿಂಗಣ್ಣಾ ಚಲಾಯಿಸುತ್ತಿದ್ದು ನಾನು ಹಿಂದೆ ಕುಳಿತ್ತಿದ್ದು ನಮ್ಮಂತೆ ಮಲ್ಲಿಕಾರ್ಜುನ ಹಾಗೂ ತಿಪ್ಪಣ್ಣಾ ಇವರೂ ಸಹ ನಮ್ಮ ಹಿಂದೆನೇ ಬರುತ್ತಿದ್ದು 12-30 ಪಿ.ಎಮ್ ಕ್ಕೆ ಮುಗುಟಾ ಸಿಮಾಂತರ ದಲ್ಲಿರುವ ವಿ.ಕೆ.ಜಿ. ಕಂಕರ ಮಶಿನ್ ಎದುರುಗಡೆ ಹೋಗುತ್ತಿದ್ದಂತೆ ಒಬ್ಬ ಮೋಟಾರ ಸೈಕಲ ಚಾಲಕನು ಒಬ್ಬ ಹೆಣ್ಣು ಮಗಳಿಗೆ ಕೊಡಿಸಿಕೊಂಡು ಅತಿ ವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ತಾನು ಹೋಗುವ ರಸ್ತೆಯನ್ನು ಬಿಟ್ಟು ನಾವು ಹೋಗುವ ರಸ್ತೆಗೆ ಬಂದು ಮುಖಾ ಮುಖಿಯಾಗಿ ಡಿಕ್ಕಿ ಪಡಿಸಿದ ಪರಿಣಾಮ ನಾವಿಬ್ಬರೂ ಪುಟಿದು ಕೆಳಗೆ ಬಿದ್ದೇವು ನಮ್ಮಂತೆ ಅವರು ಬಿದ್ದಿದ್ದು ನನಗೆ ತೆಲೆಗೆ ಬಲಗಣಿನ ಹತ್ತಿರ, ಮೂಗಿನ ಹತ್ತಿರ, ಭಾರಿ ರಕ್ತಗಾಯ ಹಾಗೂ ಬಲಭುಜಕ್ಕೆ . ಬಲಕಪಾಳಿಗೆ ಭಾರಿ ಗುಪ್ತಗಾಯವಾಗಿರುತ್ತವೆ. ನಂತರ ನಿಂಗಣ್ಣಾ ಇವರಿಗೆ ನೋಡಲಾಗಿ ತೆಲೆಗೆ ಹಾಗೂ ಎಡ. ಬಲ ಕಪಾಳ ಹತ್ತಿರ ಭಾರಿ ಗುಪ್ತಗಾಯವಾಗಿದ್ದು ಅಲ್ಲದೆ ಕಿವಿಯಿಂದ ಮೊಗಿನಿಂದ ರಕ್ತಸ್ರಾವ ಆಗುತ್ತಿತ್ತು ಬಲಗಾಲ ಮುರಿದಂತೆ ಕಂಡುಬರುತ್ತಿತ್ತು. ಮಾತನಾಡುವ ಸ್ಥಿತಿಯಲ್ಲಿ ಇರಲ್ಲಿಲ್ಲಾ . ನಮ್ಮಂತೆ ನಮಗೆ ಅಪಘಾತ ಪಡಿಸಿದವರಿಗೆ ನೋಡಲಾಗಿ ತೆಲೆಗೆ ಕೈಕಾಲಗಳಿಗೆ ಗುಪ್ತಗಾಯ ರಕ್ತಗಾಯವಾಗಿದ್ದು ಆತನ ಹಿಂದುಗಡೆ ಕುಳಿತ ಹೆಣ್ಣು ಮಗಳಿಗೆ ನೋಡಲಾಗಿ ಎದೆಗೆ ಹಾಗೂ ಭುಜಕ್ಕೆ ತಲೆಗೆ ಒಳಪೆಟ್ಟಾಗಿದ್ದು ನಮಗೆ ಅಪಘಾತ ಪಡಿಸಿದ ಮೋ.ಸೈಕಲ ನಂಬರ ನೋಡಲಾಗಿ ಕೆಎ-32 ಇಎ-8704 ಅಂತಾ ಇದ್ದು  ಸದರಿಯವನ ಹೆಸರು ಗುರು ತಂದೆ ಶಿವಶರಣ ನಾಯಿಕೂಡಿ ಹಾಗೂ ಸುಜಾತಾ ಗಂಡ ಗುರುನಾಯ್ಕಿವಾಡಿ ಸಾ: ಇಬ್ಬರೂ ಸಂಗಾವಿ  ಅಂತಾ ಗೋತ್ತಾಯಿತ್ತು ನಂತರ 108 ಗೆ ಪೋನ್ ಮಾಡಿ ಕರೆಯಿಸಿ ಅದರಲ್ಲಿ ಹಾಕಿಕೊಂಡು  ಬರುವಾಗ ಮಾರ್ಗ ಮದ್ಯದಲ್ಲಿ ನಿಂಗಣ್ಣಾ ಇತನು ಮೃತ ಪಟ್ಟಿದ್ದು ಇರುತ್ತದೆ.  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಡಬೂಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಫಜಲಪೂರ ಠಾಣೆ : ದಿನಾಂಕ 05/06/2015 ರಂದು ಬೆಳಿಗ್ಗೆ ಕ್ರುಜರ ನಂ- ಕೆಎ23 ಎಮ್-6712 ನೇದ್ದರಲ್ಲಿ ಆನೂರ ದಿಂದ ಅಫಜಲಪೂರಕ್ಕೆ ಹೋಗುತ್ತಿದ್ದಾಗ ಬಸವಣ್ಣನ ಕಟ್ಟೆಯ  ಸಮೀಪ ಗೂಡ್ಸ ಟಂ ಟಂ ನಂ ಕೆಎ-32 ಬಿ-2104 ನೇದ್ದರ ಚಾಲಕ ಟಂ ಟಂ ನೇದ್ದನ್ನು ಅತೀ ವೇಗವಾಗಿ ನಿಸ್ಕಾಳಜಿತನದಿಂದ ನಡೆಸಿಕೊಂಡು ಬಂದು ಕ್ರೂಜರಕ್ಕೆ ಡಿಕ್ಕಿ ಪಡಿಸಿದ್ದು ಡಿಕ್ಕಿಯಿಂದ ಕ್ರುಜರದಲ್ಲಿ ಕುಳತಿದ್ದ ಮಡಿವಾಳಮ್ಮ ಇವರ ಹಣೆಗೆ ಬಾರಿ ರಕ್ತಗಾಯವಾಗಿ ಕಲಬುರಗಿ ಆಸ್ಪತ್ರೆಗೆ ಕರೆದುಕೊಂಡು ಬರುತ್ತಿದ್ದಾಗ ಮಾರ್ಗ ಮದ್ಯ ಮೃತ ಪಟ್ಟಿದ್ದು  ಹಾಗೂ ಡಿಕ್ಕಿ ಪಡಿಸಿದ ಟಂ ಟಂ ನೇದ್ದರಲ್ಲಿದ್ದ ಸುನೀತಾ ಗಾಡಿವಡ್ಡರ, ಸಂಗೀತಾ ಗಾಡಿವಡ್ಡರ, ರೇಖಾ ಗಾಡಿವಡ್ಡರ, ಮಲ್ಲಮ್ಮ ಗಾಡಿವಡ್ಡರ, ಕುಲಗಪ್ಪ ಗಾಡಿವಡ್ಡರ, ತಿಮ್ಮವ್ವ ಗಾಡಿವಡ್ಡರ ಸಾ: ಎಲ್ಲರು ಅಫಜಲಪೂರ ಇವರಿಗೆ ಡಿಕ್ಕಿಯಿಂದ ಬಾರಿ ಮತ್ತು ಸಾದಾ ರಕ್ತಗಾಯಗಳು ಹಾಗೂ ಗುಪ್ತಗಾಯಗಳು ಆಗಿರುತ್ತವೆ ಅಂತಾ ಶ್ರೀ ಚನ್ನಣಗೌ ತಂದೆ ಮಲ್ಲೇಶಪ್ಪ ಪೊಲೀಸ ಪಾಟೀಲ ಸಾ : ಆನೂರ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನೆಲೋಗಿ ಠಾಣೆ : ಶ್ರೀ ಗುರುಶಾಂತಯ್ಯ ತಂದೆ ರೇವಣಸಿದ್ದಯ್ಯ ಮಠ ಸಾ-ಜೇರಟಗಿ ತಾ-ಜೇವರ್ಗಿ ಜಿ-ಕಲಬುರ್ಗಿ  ರವರು ತನ್ನ ಟಂಟಂ ತಗೆದುಕೊಂಡು ನಮ್ಮೂರ ರೇಣುಕಾ ವೈನ ಶಾಪದ ಹತ್ತಿರ ನಿಲ್ಲಿಸಿದ್ದೆ ನನ್ನ ಟಂಟಂ ದಲ್ಲಿ ಅಬ್ದುಲ ಗನಿ ನದಾಫ ಇದ್ದು ಇಬ್ಬರು ಮಾತನಾಡುತ್ತಾ ಕುಳಿತ್ತಿದ್ದೇವು ಅಷ್ಟರಲ್ಲಿ ಜೇರಟಗಿ ಬಸ್ಸ ನಿಲ್ದಾಣದಿಂದ ಒಂದು ಕೆ.ಎಸ್.ಆರ್.ಟಿ.ಸಿ.ಬಸ್ಸ ಬಂದಿತು ಅದರ ಚಾಲಕನು ತನ್ನ ಬಸ್ಸನ್ನು ಅತೀ ವೇಗ ಹಾಗೂ ನಿಸ್ಕಾಳಜಿತನದಿಂದ ನಡೆಯಿಸಿಕೊಂಡು ಬಂದು ನಮ್ಮ ಕಡೆನೇ ಬರುತ್ತಿದ್ದೆ ಸಚೀನ ತಂದೆ ಮನೊಹರ ಶಾಹಾಪೂರ ಇತನಿಗೆ ಡಿಕ್ಕಿ ಪಡಿಸಿದನು ಆಗ ಅವನು ಕೇಳಗಡೆ ಬಿದ್ದನು ಆಗ ನಾವಿಬ್ಬರು ಓಡುತ್ತಾ ಹೊಗಿ ಅವನಿಗೆ ಎಬ್ಬಿಸಿ ನೊಡಲಾಗಿ ಅವನ ಮುಖಕ್ಕೆ ರಕ್ತಗಾಯವಾಗಿತ್ತು ಬಾಯಿ ,ತುಟಿ ಬಡಿದು ರಕ್ತ ಗಾಯವಾಗಿತ್ತು ನಂತರ ಬಸ್ಸ ಚಾಲಕನು ಬಸ್ಸ ಅಲ್ಲೇ ಬಿಟ್ಟು ಓಡಿ ಹೊಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನೆಲೋಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣಗಳು :
ವಿಶ್ವವಿದ್ಯಾಲಯ ಠಾಣೆ : ಶ್ರೀಮತಿ ಸಬಾನಾ ಗಂಡ ಮಹ್ಮದ ಶೇಖ, ಸಾ|| ಶ್ರೀನಿವಾಸ ಸರಡಗಿ ಗ್ರಾಮ ಇವರು ದಿನಾಂಕ: 06/06/2015 ರಂದು ಬೆಳಿಗ್ಗೆ ನಾನು ಮತ್ತು ನಮ್ಮ ಅಣ್ಣತಮ್ಮಕೀಯ ಆಬೀದಾಬೇಗಂ ಗಂಡ ಉಸ್ಮಾನ ಸಾಬ ಶೇಖ ಇಬ್ಬರು ಮಜೀದ ಎದುರುಗಡೆ ರಸ್ತೆಯ ಮೇಲೆ ನಡೆಯುತ್ತಾ ಹೊರಟಾಗ 1) ಅಬ್ದುಲ ಜಲೀಲ ತಂದೆ ಖಾಜಾಸಾಬ ಲದಾಫ,  2) ಖಲೀಲ ತಂದೆ ಖಾಜಾಸಾಬ ಲದಾಫ, 3) ಮಹಿಬೂಬ ತಂದೆ ರುಸ್ತುಮ ಲದಾಫ,  4) ತೌಸಿಫ ತಂದೆ ಲಿಯಾಖತ ಲದಾಫ, 5) ಅಲಿ ತಂದೆ ಇಬ್ರಾಹಿಂ ಲದಾಫ, 6) ಮೈಮುದಾ ಗಂಡ ಜಾವೀದ ಲದಾಫ, 7) ಬೀಬೀ ಗಂಡ ಲಿಯಾಖತ ಲದಾಫ, 8) ಪರವಿನ ಗಂಡ ಇಬ್ರಾಹಿಂ ಲದಾಫ, 9) ಸರೀಫಾ ಗಂಡ ರುಸ್ತುಮ ಲದಾಫ ಎಲ್ಲರೂ ಸಾ|| ಶ್ರೀನಿವಾಸ ಸರಡಗಿ ಗ್ರಾಮ ಎಲ್ಲರೂ ಅಕ್ರಮ ಕೂಟ ರಚಿಸಿಕೊಂಡು ಬಂದು ನಮಗೆ ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದು, ಕಟ್ಟಿಗೆಯಿಂದ ಹೊಡೆದು ರಕ್ತಗಾಯ ಹಾಗೂ ಗುಪ್ತಗಾಯ ಪಡಿಸಿದ್ದು ಅಲ್ಲದೆ ಅಬೀದಾಬೇಗಂ ಇವಳೀಗೂ ಸಹ ಕೈಯಿಂದ ಮೈಕೈಗೆ ಹೊಡೆದು ಗುಪ್ತಗಾಯ ಪಡಿಸಿದ್ದು ಇರುತ್ತದೆ. ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ವಿಶ್ವವಿದ್ಯಾಲಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಶ್ವವಿದ್ಯಾಲಯ ಠಾಣೆ : ಶ್ರೀ ಅಬ್ದುಲ ಜಲೀಲ ತಂದೆ ಖಾಜಾಸಾಬ ಲದಾಫ, ಸಾ|| ಶ್ರೀನಿವಾಸ ಸರಡಗಿ ಇವರು ದಿನಾಂಕ: 06/06/2015 ರಂದು ಬೆಳಿಗ್ಗೆ ನಾನು ಮತ್ತು ನಮ್ಮ ಅಣ್ಣತಮ್ಮಕೀಯ ಫರವೀನ ಗಂಡ ಇಬ್ರಾಹಿಂ, ಶರೀಫಾ ಗಂಡ ರುಸ್ತುಮ, ಕೂಡಿಕೊಂಡು ನಮ್ಮೂರ ಮಜೀದ ಹತ್ತಿರ ರಸ್ತೆಯ ಮೇಲೆ ನಡೆಯುತ್ತಾ ಹೊರಟಾಗ ನಮ್ಮೂರ 1) ಮಹ್ಮದ ತಂದೆ ಶರಫೋದ್ದಿನ ಮುಲ್ಲಾ,  2) ಅನ್ಸರ ತಂದೆ ಬಶೀರಸಾಬ ಮುಲ್ಲಾ 3) ಅಶ್ಪಾಕ ತಂದೆ ಬಶೀರಸಾಬ ಮುಲ್ಲಾ  4) ಸೈಯದ ತಂದೆ ಮಹೆಬೂಬ ಮುಲ್ಲಾ 5) ರಶೀದ ತಂದೆ ಬಾಷುಮಿಯಾ ಮುಲ್ಲಾ 6) ರಫೀಕ ತಂದೆ ರಶೀದ ಮುಲ್ಲಾ  7) ರಜಾಕ ತಂದೆ ಬಾಬುಮಿಯಾ ಮುಲ್ಲಾ, 8) ತೋಲು ತಂದೆ ರಜಾಕ ಮುಲ್ಲಾ  9) ಸಬಾನಾ ಗಂಡ ಮಹ್ಮದ ಶೇಖ ಸಾ|| ಎಲ್ಲರೂ ಶ್ರೀನಿವಾಸ ಸರಡಗಿ ಗ್ರಾಮ ಎಲ್ಲರೂ ಅಕ್ರಮ ಕೂಟ ರಚಿಸಿಕೊಂಡು ಬಂದವರೆ ನಮಗೆ ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದು, ಅಲ್ಲೆ ಬಿದ್ದ ಹಿಡಿ ಗಲ್ಲಿನಿಂದ ತಲೆಗೆ ಹೊಡೆದು ರಕ್ತಗಾಯ ಪಡಿಸಿದ್ದು ಇರುತ್ತದೆ. ನಮ್ಮ ಅಣ್ಣತಮ್ಮಕೀಯವರು ಬಿಡಿಸಲು ಬಂದಾಗ ಫರವೀನ ಇವಳಿಗೆ ಮಹ್ಮದ ಈತನು ಅವಾಚ್ಯ ಶಬ್ದಗಳಿಂದ ಬೈದು, ಲೈಂಗಿಕ ಕಿರುಕುಳ ನೀಡಿದ್ದು ಅಲ್ಲದೆ ಸರೀಫಾ ಇವಳಿಗೆ ಕೈಯಿಂದ ಮೈಕೈಗಳಿಗೆ ಹೊಡೆದು ಗುಪ್ತಗಾಯ ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ವಿಶ್ವವಿದ್ಯಾಲಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

06 June 2015

Kalaburagi District Reported Crimes

ಜಾತಿ ನಿಂದನೆ ಮಾಡಿ ಹಲ್ಲೆ ಮಾಡಿದ ಪ್ರಕರಣ :
ಕುರಕುಂಟಾ ಠಾಣೆ : ಶ್ರೀ ಶಾಮರಾವ ತಂದೆ ಹಣಮಂತು ವಡ್ಡರ ಸಾ|| ಮದಕಲ ತಾ|| ಸೇಡಂ ರವರು ಪಂಚಾಯತ ಚುನಾವಣೆಗೆ ನಮ್ಮೂರ ತಿರುಪತಿ ತಂದೆ ಯಂಕಪ್ಪಇವರ ಎದುರಾಳಿಯಾಗಿ ನಿಂತಿದ್ದು.ದಿನಾಮಕ;- 01-06-2015 ರಂದು ನಾನು ನನ್ನ ಅಣ್ಣ ಮತ್ತು ನನ್ನ ಅತ್ತಿಗೆ ಮನೆಯಲ್ಲಿ ಇದ್ದಾಗ ನಮ್ಮೂರ 1] ಪಾಪಯ್ಯಾ ತಂದೆ ನರಸಯ್ಯಾ 2] ದೇವಯ್ಯಾ ತಂದೆ ನರಸಯ್ಯಾ 3] ಲಸಮಯ್ಯಾ ತಂದೆ ಪೆಂಟಪ್ಪಾ 4] ವೆಂಕಟರೆಡ್ಡಿ ತಂದೆ ಮಲರೆಡ್ಡಿ 5] ರುಕ್ಮಾರೆಡ್ಡಿ ತಂದೆ ಮಲರೆಡ್ಡಿ 6] ಸಂದೀಪರೆಡ್ಡಿ ತಂದೆ ವೆಂಕಟರೆಡ್ಡಿ 7] ವಿಷ್ಣುವರ್ಧನರೆಡ್ಡಿ ತಂದೆ ವೆಂಕಟರೆಡ್ಡಿ 8] ಯಂಕಪ್ಪ ತಂದೆ ಯಂಕಪ್ಪ 9] ತಿರುಪತಿ ತಂದೆ ಯಂಕಪ್ಪ 10] ನಿಂಗಪ್ಪ ತಂದೆ ರಾಮಸ್ವಾಮಿ 11] ಹಣಮಂತು ತಂದೆ ಯಂಕಪ್ಪ 12] ಗಿರಿಸ್ವಾಮಿ ತಂದೆ ಯಂಕಪ್ಪ 13] ತಿಮ್ಮಯ್ಯಾ ತಂದೆ ಬಸಪ್ಪ  ಇವರೆಲ್ಲರೂ ಕೂಡಿಕೊಂಡು ತಿರುಪತಿ ಶಹಬಾದಕರ ಮನೆಯಿಂದ ಬಂದು ನಮ್ಮ ಮನೆಯ ಅಂಗಳದಲ್ಲಿ ನಿಂತುಕೊಂಡು ಏ ಬೋಸಡಿ ಮಗನೇ ಹೊರಗಡೆ ಬಾರೋ ನಿನಗೆ ಸೊಕ್ಕು ಬಹಳ ಇದೆಅಂತಾ ಬೈಯುತ್ತಿದ್ದಾಗ ನಾನು ನನ್ನ ಅಣ್ಣ ಲಕ್ಷ್ಮಯ್ಯಾ ಅತ್ತಿಗೆ ಮಂಜುಳ ಮತ್ತು ನಮ್ಮ ತಂದೆ ನಾವೆಲ್ಲರೂ ಬಂದು ಯಾಕರಪ್ಪಾ ನಮಗೆ ಯಾಕೆ ಬೈಯುತ್ತಿರೀ ಅಂತಾ ಕೇಳಿದಕ್ಕೆ ಯಂಕಪ್ಪ ,ತಿರುಪತಿ ಇಬ್ಬರೂ ನನ್ನ ಕೈ ಹಿಡಿದು  ಜೊಗ್ಗಾಡಿ ನೆಲಕ್ಕೆ ಹಾಕಿದರು ನಿಂಗಪ್ಪ ಮತ್ತು ಹಣಮಂತು ಇವರು ಕಲ್ಲುಗಳನ್ನು ತೆಗೆದುಕೊಂಡು ನನ್ನ ತಲೆಯ ಮೇಲೆ ಹಾಕಿ ಭಾರಿ ಗಾಯ ಮಾಡಿ ಜಾತಿ ನಿಂದನೆ ಮಾಡಿದರು. ತಿಮ್ಮಯ್ಯಾ ತಂದೆ ಬಸಪ್ಪ  ಕಲ್ಲಿನಿಂದ ನಮ್ಮ ಮನೆಯ ಬಾಗಿಲಿಗೆ ಹೊಡೆದನು. ಆಗ ನಮ್ಮ ಮನೆಯ ಬಾಗಿಲು ಮುರಿದು ಲುಕಸಾನ ಮಾಡಿದನು. ಆದರ ಕಿಮತ್ತು 2500/- ಆಗಲಿದೆ. ದೇವಯ್ಯಾ ತಂದೆ ನರಸಯ್ಯಾ ಇವನು ನನ್ನ ಅತ್ತಿಗೆಯ ಕೈ ಹಿಡಿದು ಜೊಗಿದನು. ಈ ರಂಡಿಗೆ ಸೊಕ್ಕು ಇದೆಅಂತಾ ಅವಾಚ್ಯ ಶಬ್ದಗಳಿಂದ ಬೈದಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕುರಕುಂಟಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ಅಶೋಕ ನಗರ ಠಾಣೆ : ಶ್ರೀ ಭೀಮಸೇನ.ಕೃ ಕಲಮದಾನಿ ಸಾ: ಕೃಷ್ಣ ಪ್ಲಾಟ ನಂ 84 (ಬಿ) ಎನ್.ಜಿ ಓ ಕಾಲೋನಿ ಓವರ ಬ್ರಿಡ್ಜ ಹತ್ತಿರ ಜೇವರ್ಗಿ ರಸ್ತೆ  ಕಲಬುರಗಿ. ನಮ್ಮ ಮನೆಯು ಜೇವರ್ಗಿ ರೋಡಿನ ಮುಖ್ಯ ರಸ್ತೆಯ ಪಕ್ಕದಲ್ಲಿ ಇದ್ದು ರಸ್ತೆಯ ವಿಸ್ತಿರ್ಣ ಕುರಿತು ಮನೆ ಡೆಮೋಲಿಷನ ಸೂಚಿಸಿದ ಮೇರೆಗೆ ವಿಜಯಕುಮಾರ ಗುತ್ತೇದಾರ ಇವರಿಗೆ ರಸ್ತೆಯಲ್ಲಿ ಬರುವ ಮನೆಯನ್ನು ಒಡೆಯುದಕ್ಕೆ ಹಚ್ಚಿ ನಾನು ಮನೆಗೆ ಬೀಗ ಹಾಕಿ ದಿನಾಂಕ 26/05/2015 ರಂದು ಬೆಂಗಳೂರಿಗೆ ಹೋಗಿದ್ದು ದಿನಾಂಕ 04/06/2015 ರಂದು ಬೆಳಿಗಿನ ವೇಳೆಗೆ ನಮ್ಮ ಎದುರುಗಡೆ ಮನೆಯ ಕಾವಲುಗಾರ ಅಶೋಕ ರವರು ನನಗೆ ಫೋನ ಮಾಡಿ ಮನೆ ಕಳ್ಳತನವಾಗಿರುವ ವಿಷಯವನ್ನು ತಿಳಿಸಿದರು ಇಂದು ದಿನಾಂಕ 05/06/2015 ರಂದು ಕಲಬುರಗಿಗೆ ಬಂದು ನನ್ನ ಮನೆಯನ್ನು ನೋಡಲು ಕೆಳಗಿನ ಹಾಲಿನಲ್ಲಿ ಇಟ್ಟಿದ್ದ 04 ಹಿತ್ತಾಳೆ ದೊಡ್ಡ ಡಬ್ಬಗಳು ಮತ್ತು ತಾಮ್ರದ ನೀರು ಕಾಯಿಸುವ ಬಾಯ್ಲರ ಹಾಗೂ ಒಂದು ದೊಡ್ಡ ಹಿತ್ತಾಳೆ ಕೋಡ ಇವುಗಳ ಅಂದಾಜು ಕಿಮ್ಮತ್ತು ರೂ 8000/- ಇದ್ದು ಕಳುವಾಗಿದ್ದು ಮೇಲಿನ ಬೆಡ್ ರೂಮಿನ ಬಾಗಿಲು ತೇರೆದು ಹೋದಾಗ ಅಲ್ಲಿದ್ದ ದೊಡ್ಡ ಅಲಮಾರಾ ಕಾಟ ಮೇಲೆ ಅಡ್ಡ ಮಲಿಗಿಸಿ ಒಡೆದಿದ್ದು ಕಂಡು ಬಂದಿದೆ. ಅಲಮಾರಾದಲ್ಲಿ ಇದ್ದ ನಗದು ಹಣ ರೂ 1,60,000/- ರೂಪಾಯಿ ಕಳುವುವಾಗಿದ್ದು ರೂಮಿನ ಎಲ್ಲಾ ವಸ್ತುಗಳು ಚಿಲ್ಲಾಪಿಲ್ಲಿಯಾಗಿದ್ದು ಬಾತ್ ರೂಮಿನ ಇನ್ನೊಂದು ಬಾಗಿಲು ತೇರಿದಿದ್ದು ಕಂಡು ಬಂದಿದೆ. ಸದರಿ ಘಟನೆಯು ದಿನಾಂಕ 03-04/06/2015 ರ ರಾತ್ರಿ ವೇಳೆಯಲ್ಲಿ ನಡೆದಿರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

05 June 2015

Kalaburagi District Reported Crimes

ಆಕ್ರಮವಾಗಿ ಮಧ್ಯ ಮಾರಾಟ ಮಾಡುತ್ತಿದ್ದವನ ಬಂಧನ :
ಜೇವರಗಿ ಠಾಣೆ : ದಿನಾಂಕ 04.06.2015 ರಂದು ಮುದಬಾಳ ಕೆ ಗ್ರಾಮದ ಅಂಬೇಡ್ಕರ್ ಮೂರ್ತಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿಯು ಅಕ್ರಮವಾಗಿ ಸರಾಯಿ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಬಾತ್ಮಿ ಮೇರೆಗೆ ಪಿ.ಎಸ್.ಐ. ಜೇವರಗಿ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಮುದಬಾಳ ಕೆ ಗ್ರಾಮದ ಅಂಬೇಡ್ಕರ್ ಮೂರ್ತಿಯ ಹತ್ತಿರ ಹೋಗಿ ದಾಳಿ ಮಾಡಿ ಹಿಡಿದು ಅವನ ಹೆಸರು ವಿಚಾರಿಸಲು ನಿಂಗಪ್ಪ ತಂದೆ ಜಟ್ಟೆಪ್ಪ ಹೊಸಮನಿ ಸಾ : ಮುದಬಾಳ ಕೆ ಅಂತಾ ತಿಳಿಸಿದ್ದು ಸದರಿವನ ವಶದಿಂದ ಒಟ್ಟು 1.500/- ರೂ ಕಿಮ್ಮತ್ತಿ ಮಧ್ಯದ ಪೌಚ್‌ಗಳನ್ನು ಜಪ್ತಿ ಮಾಡಿಕೊಂಡು ಸದರಿಯವನೊಂದಿಗೆ ಜೇವರಗಿ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಕಳವು ಪ್ರಕರಣ :
ವಿಶ್ವವಿದ್ಯಾಲಯ ಠಾಣೆ : ಡಾ|| ಸುಹೀಬ ಅಹ್ಮದ ತಂದೆ ಮಹ್ಮದ ಶಾಹೇದ ಅಲಿ ಲಾಂಡಗೆ, ಸಾ|| ಮನೆ ನಂ: 5-993/31/49  ಅಹ್ಮದ ನಗರ ಕಾಲೋನಿ ಕಲಬುರಗಿ ರವರು ದಿನಾಂಕ:03-06-2015 ರಂದು ಸಾಯಾಂಕಾಲ ರುಕ್ಮೋದ್ದಿನ್ ತೋಲಾ ದರ್ಗಾದ ಜಾತ್ರೆ ಇದ್ದ ಪ್ರಯುಕ್ತ ಮನೆಯವರೆಲ್ಲರು ಕೂಡಿ ಕೊಂಡು ಜಫರಾಬಾದ ಗ್ರಾಮಕ್ಕೆ ಮನೆಯ ಕೀಲಿಯನ್ನು ಹಾಕಿಕೊಂಡು ಹೋಗಿದ್ದು, ಜಾತ್ರೆ  ಮುಗಿಸಿಕೊಂಡು ಇಂದು ದಿನಾಂಕ:04-06-2015 ರಂದು ಬೆಳಿಗ್ಗೆ 10-00 ಗಂಟೆ ಸುಮಾರಿಗೆ ಮನೆಗೆ ಬಂದು ನೋಡಲು ಮನೆಯ ಬಾಗಿಲಿಗೆ ಹಾಕಿದ ಕೀಲಿ ಇರಲಿಲ್ಲಾ. ಮನೆಯ ಬಾಗಿಲು ಖುಲ್ಲಾ ಇದ್ದು ಒಳಗೆ ಹೋಗಿ ನೋಡಲು ಮನೆಯಲ್ಲಿರುವ ಬೆಡ್ ರೂಮಿನಲ್ಲಿಯ ಅಲಮಾರಿ ಕೀಲಿ ಮುರಿದು ಅಲಮಾರಿಯಲ್ಲಿದ್ದ 70 ಗ್ರಾಂ ಬಂಗಾರದ ಆಭರಣಗಳು ಅ.ಕಿ. 1,75,000/- ಮತ್ತು 50,000/- ರೂ. ನಗದು ಹಣ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ. ಕಾರಣ ನಮ್ಮ ಮನೆ ಕೀಲಿ ಮುರಿದು ಮನೆಯ ಒಳಗೆ ಅಲಮಾರಿಯಲ್ಲಿಟ್ಟ ಬಂಗಾರ, ನಗದು ಹಣ ಒಟ್ಟು 2,25,000/- ಕಳವು ಮಾಡಿಕೊಂಡು ಹೋರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ವಿಶ್ವವಿದ್ಯಾಲಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.