POLICE BHAVAN KALABURAGI

POLICE BHAVAN KALABURAGI

06 March 2015

Kalaburagi District Reported Crimes

ಕೊಲೆ ಪ್ರಕರಣ :
ಕಮಲಾಪೂರ ಠಾಣೆ : ಶ್ರೀ ಜಗಪ್ಪ @ ಜಗನ್ನಾಥ ತಂದೆ ಭೀಮಶ್ಯಾ ಸನಗುಂದಿ ಸಾ; ಗೊಬ್ಬುರವಾಡಿ  ರವರು ದಿನಾಂಕ 05-03-2015 ರಂದು ಬೆಳಗ್ಗೆ ಎಂದಿನಂತೆ ನಮ್ಮ ಎತ್ತುಗಳನ್ನು ಹೊಡೆದುಕೊಂಡು ನಾನು ಪಾಲದಿಂದ ಮಾಡಿದ ರೇವಣಸಿದ್ದಯ್ಯ ಸ್ವಾಮಿ ಇವರ ಹೊಲದಲ್ಲಿ ಬಂದು ಗಳೆ ಹೊಡೆದು ನಂತರ ಮಧ್ಯಾಹ್ನ 12-00 ಗಂಟೆಯ ಸುಮಾರಿಗೆ ಎತ್ತುಗಳ ಕೊಳ್ಳು ಹರಿದು ಅವುಗಳಿಗೆ ನೀರು ಕುಡಿಸುವ ಸಲುವಾಗಿ ನಮ್ಮ ಹೊಲದ ಪಕ್ಕದಲ್ಲಿ ಹರಿಯುವ ಗಂಗಮ್ಮನ ಹಳ್ಳಕ್ಕೆ ನೀರು ಕುಡಿಸಲು ಬಂದಿದ್ದು, ಆಗ ಹಳ್ಳದ ಆಚೆ ಕಡೆಗೆ ಒಬ್ಬ ಗಂಡು ಮನುಷ್ಯನ ಮೃತ ದೇಹವು ಬಿದ್ದಿತ್ತು, ಆಗ ನಾನು ಗಾಬರಿಗೊಂಡು ನನ್ನ ದನಗಳನ್ನು ಅಲ್ಲಿಯೇ ಬಿಟ್ಟು ಓಡಿ ಹೋಗಿ ನಮ್ಮ ಊರಿನಲ್ಲಿಯೇ ಹೋಗಿ ನಮ್ಮೂರ ಅಶೋಕ ಸ್ವಾಮಿ ಮತ್ತು ಮಲ್ಲಿನಾಥ ಗೌಡ ಪೊಲೀಸ  ಪಾಟೀಲ್ ಇವರಿಗೆ ವಿಷಯ ತಿಳಿಸಿ ಗ್ರಾಮಸ್ಥ ರೊಂದಿಗೆ ಮತ್ತು ಗಂಗಮ್ಮನ ಹಳ್ಳಕ್ಕೆ ಬಂದು ನೋಡಲಾಗಿ ಅಂದಾಜು 30-35 ವರ್ಷ ವಯಸ್ಸಿನಗಂಡು ಮನುಷ್ಯನ ಮೃತ ದೇಹವಿದ್ದು, ಮೃತ ದೇಹವನ್ನು ಯಾವುದೇ ವಾಹನದಲ್ಲಿ ಯಾವುದೋ ಕಾರಣಕ್ಕೆ ಎಲ್ಲಯೋ ಹೇಗೋ ಕೊಲೆ ಮಾಡಿ ಯಾವದೋ ವಾಹನದಲ್ಲಿ ಮೃತ  ದೇಹವನ್ನು ತಂದು ಇಲ್ಲಿ ಬಿಸಾಡಿ ಮೃತನ ಗುರುತು ಪತ್ತೆ ನಾಶಮಾಡುವ ಉದ್ದೇಶದಿಂದ ಮೃತ ದೇಹದ ಮೇಲೆ ಯಾವುದೋ ಎಣ್ಣೆ ಹಾಕಿ ಸುಟ್ಟು ಹಾಕಿ ಹೋಗಿರುತ್ತಾರೆ,  ಮೃತ ಅಪರಿಚಿತ ಗಂಡು ಮನುಷ್ಯನ ಬಲಗೈಯಲ್ಲಿ ಒಂದು ಖಡೆ ಮತ್ತು ಒಂದು ಉಂಗುರವಿದೆ  ಈ ವೃತ ವ್ಯಕ್ತಿಯು ಯಾರು ಅಂತ ಗೋತ್ತಾಗಿರುವದಿಲ್ಲ ಮತ್ತು ಈತನನ್ನು ಯಾರು ಕೊಲೆ ಮಾಡಿ ಬಿಸಾಡಿ ಹೋಗಿರುತ್ತಾರೆ ಅಂತಾ  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಠಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಮಟಕಾ ಜೂಜಾಟದಲ್ಲಿ ನಿರತ ವ್ಯಕ್ತಿಯ ಬಂಧನ :
ನಿಂಬರ್ಗಾ ಠಾಣೆ : ದಿನಾಂಕ 05/03/2015 ರಂದು ಪಿ.ಎಸ್.ಐ. ನಿಂಬರ್ಗಾ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಭೂಸನೂರ ಗ್ರಾಮಕ್ಕೆ ಹೋಗಿ ಹಳೆ ಬಸ್ ಸ್ಟ್ಯಾಂಡ  ಹತ್ತಿರ ಇರುವ ಈರಣ್ಣ ಡಾಂಕೆ ಇವರ ಹೊಟೇಲ ಮರೆಯಲ್ಲಿ ನಿಂತು ನೋಡಲಾಗಿ ಹೋಟೇಲ ಮುಂದಿನ ಸಾರ್ವಜನಿಕ ಡಾಂಬರ ರಸ್ತೆಯ ಮೇಲೆ ಒಬ್ಬ ವ್ಯಕ್ತಿ ಸಾರ್ವಜನಿಕರಿಂದ ಹಣ ಪಡೆದು ಓಪನ ನಂಬರ ಬಂದರೆ 1 ರೂಪಾಯಿಗೆ 8 ರೂಪಾಯಿ ಗೆಲ್ಲಿರಿ ಅಂತ ಮತ್ತು ಜಾಯಿಂಟ ನಂಬರ ಬಂದರೆ 1 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತ ಕೂಗುತ್ತಾ ಮಟಕಾ ಅಂಕೆ ಸಂಖ್ಯೆಯುಳ್ಳ ಚೀಟಿಗಳನ್ನು ಬರೆದುಕೊಡುತ್ತಿರುವದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಹಿಡಿದು ವಿಚಾರಿಸಲು ತನ್ನ ಹೆಸರು ಮಂಜೂನಾಥ ತಂದೆ ರೇವಪ್ಪ ಪೂಜಾರಿ ಸಾ: ಭೂಸನೂರ ಇತನ ಹತ್ತಿರ ಚಕ್ ಮಾಡಲಾಗಿ ಮಟಕಾ ಜೂಜಾಟಕ್ಕೆ ಬಳಿಸಿರುವ ನಗದು ಹಣ 1110/-,  ಒಂದು ಮಟಕಾ ಅಂಕಿ ಸಂಖ್ಯೆಯುಳ್ಳ ಚೀಟಿ, ಒಂದು  ಬಾಲ ಪೆನ್ನ ನೇದ್ದವುಗಳನ್ನು ವಶಪಡಿಸಿಕೊಂಡಿದ್ದು  ಸದರಿಯವನೊಂದಿಗೆ ನಿಂಬರ್ಗಾ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಪಘಾತ ಪ್ರಕರಣಗಳು :
ಜೇವರ್ಗಿ ಠಾಣೆ : ದಿನಾಂಕ: 05.03.2015 ರಂದು ಮುಂಜಾನೆ ಶ್ರೀ ಶಂಕರ ತಂದೆ ಸಿದ್ರಾಮಪ್ಪ ಮುತ್ತಕೋಡ ಸಾ : ಜನತಾ ಕಾಲೋನಿ ಜೇವರ್ಗಿ ಮತ್ತು ನಮ್ಮ ಓಣಿಯವನಾದ ದೌಲತರಾಯ ತಂದೆ ಮಲ್ಲಪ್ಪ ಸುಣುರ ಇಬ್ಬರು ಕೂಡಿಕೊಂಡು ಕುರಿ ಮರಿಗಳಿಗೆ ಹುಲ್ಲು ತರುವ ಕುರಿತು ನನ್ನ ಸೈಕಲ್‌ ಮೇಲೆ ನಮ್ಮ ಹೋಲಕ್ಕೆ ಹೋಗುವ ಕುರಿತು ಜೇವರ್ಗಿ ಕ್ರಿಡಾಂಗಣದ ಹತ್ತಿರ ಶಹಾಪುರ ಜೇವರ್ಗೀ ರಾಜ್ಯ ಹೆದ್ದಾರಿಯ ಮೇಲೆ ಹೋಗುತ್ತಿದ್ದಾಗ ಅದೇ ವೇಳೆಗೆ ನಮ್ಮ ಹಿಂದುಗಡೆಯಿಂದ ಅಂದರೆ ಜೇವರ್ಗಿ ಕಡೆಯಿಂದ ಬಂದ ಕಾರ್‌ ನಂ ಕೆ.ಎ32ಎಮ್.ಎ 0033 ನೇದ್ದರ ಚಾಲಕ ತನ್ನ ಕಾರ್‌ ಅನ್ನು ಅತಿವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ನಾವು ಕುಳಿತು ಹೋಗುತ್ತಿದ್ದ ಸೈಕಲ್‌ಗೆ ಹಿಂದಿನಿಂದ ಡಿಕ್ಕಿ ಪಡಿಸಿ ನಮಗೆ ರೋಡಿನ ಮೇಲೆ ಬಿಳಿಸಿ ನನಗೆ ಮತ್ತು ಹಿಂದೆ ಕುಳಿತಿದ್ದ ದೌಲತರಾಯ ತಂದೆ ಮಲ್ಲಪ್ಪ ಸುಣುರ ರವರಿಗೆ ಸಾದಾ ಹಾಗು ಭಾರಿ ರಕ್ತಗಾಯಪಡಿಸಿ ತನ್ನ ಕಾರ್‌ಸಮೇತ ಓಡಿ ಹೋಗಿದ್ದು ಗಾಯಾಳು ದೌಲತರಾಯನಿಗೆ ಕಲಬುರಗಿಯ ಯುನೈಟೆಡ್‌ ಆಸ್ಪತ್ರೆಗೆ ಚಿಕಿತ್ಸೆ ಕುರಿತು ದಾಖಲು ಮಾಡಿದ್ದು ನಂತರ ಹೆಚ್ಚಿನ ಉಪಚಾರ ಕುರಿತು ಸೋಲಾಪುರಕ್ಕೆ ಹೋಗುತ್ತಿದ್ದಾ ಮಾರ್ಗ ಮಧ್ಯ ಮೃತಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಚ್ಚುವರಿ ಸಂಚಾರಿ ಠಾಣೆ : ದಿನಾಂಕ 03-03-2015 ರಂದು ಸಾಯಂಕಾಲ ಶ್ರೀ ದೇವರಾಜ ತಂದೆ ಪರಮೇಶ್ವರರಾವ ಸಾ: ಶ್ರೀಹರಿ ನಗರ ಹಳೆ ಜೆವರ್ಗಿ ರೋಡ  ಕಲಬುರಗಿ ರವರ ಮಗನಾದ ನಿತೀನ ಇತನು ತಮ್ಮ  ಮನೆಯ ಎದುರಿನ ರೋಡ ಹತ್ತಿರ ಹೋಗಿ ನಿಂತಿದ್ದನ್ನು ಅದೇ ಸಮಯಕ್ಕೆ  ಕಾರ ನಂಬರ ಕೆಎ-32 ಟಿ.ಪಿ ನಂಬರ 30737 ರ ಚಾಲಕನು ಹಳೆ ಜೆವರ್ಗಿ ರೋಡದಿಂದ ತನ್ನ ಕಾರನ್ನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿ ಮಗನಾದ ನಿತೀನ ಇತನಿಗೆ ಡಿಕ್ಕಿ ಪಡಿಸಿ ಅಪಘಾತ ಮಾಡಿ ನಿತೀನ ಇತನಿಗೆ ಬಲಗಡೆ ತಲೆಗೆ ಭಾರಿಪೆಟ್ಟು ಬಿದ್ದು ರಕ್ತ ಬರುತ್ತಿತ್ತು, ಬಲಗಲ್ಲದ ಮೇಲೆ ತರಚಿದಗಾಯ, ಬಲಗಾಲು, ಎಡಗಾಲು ಮೊಳಕಾಲಿಗೆ ತರಚಿದಗಾಯ, ಎಡಗೈ ಭುಜಕ್ಕೆ ತರಚಿದಗಾಯ ಮಾಡಿ ಕಾರ ಸಮೇತ ಹೊರಟು ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ನಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

05 March 2015

Kalaburagi District Reported Crimes

ಕೊಲೆ ಪ್ರಕರಣ :
ಸೇಡಂ ಠಾಣೆ : ಶ್ರೀಮತಿ ಸುಜಾತಾ ಗಂಡ ಮೊಗಲಪ್ಪ ಹಣಮನಳ್ಳಿ ಸಾ : ಸಣ್ಣ ಅಗಸಿ ಸೇಡಂ ಇವರ ಮದುವೆಯಾಗಿ 10 ವರ್ಷಗಳಾಗಿದ್ದು ಕಳೆದ 2 ವರ್ಷಗಳಿಂದ ನನ್ನ ಗಂಡನಾದ ಮೊಗಲಪ್ಪ ತಂದೆ ಕಾಶಣ್ಣ ಹಣಮನಳ್ಳಿ, ನಾಗಮ್ಮ ಗಂಡ ರಾಘಪ್ಪ ಬಟಗೀರಿ, ಮಲ್ಲಮ್ಮ ಗಂಡ ಸಾಬಣ್ಣ ಸೇಡಂ, ಶಾಣಮ್ಮ ಗಂಡ ಅಶೋಕ ಸೇಡಂ, ಮಲ್ಲಪ್ಪ ತಂದೆ ಶಿವರಾಯ ಹಣಮನಳ್ಳಿ,  ಅಂಬ್ರಿಷ ತಂದೆ ಶಿವರಾಯ ಹಣಮನಳ್ಳಿ, ಭೀಮು ತಂದೆ ಶಿವರಾಯ ಹಣಮನಳ್ಳಿ, ವೆಂಕಟಮ್ಮ ಗಂಡ ಶಿವರಾಯ ಹಣಮನಳ್ಳಿ, ಶಿವರಾಯ ತಂದೆ ಮೊಗಲಪ್ಪ ಹಣಮನಳ್ಳಿ, ತಿಮ್ಮಮ್ಮ ಗಂಡ ಕಾಶಣ್ಣ ಹಣಮನಳ್ಳಿ, ಸಾ : ಎಲ್ಲರು ಸೇಡಂ ಹಾಗೂ ಮುಧೋಳ ದವರು ಕೂಡಿಕೊಂಡು ನನಗೆ ನನ್ನ ಶಿಲದ ಬಗ್ಗೆ ಸಂಶಯ ವ್ಯಕ್ತಪಡಿಸಿ ಪ್ರತಿದಿವಸ ಜಗಳ ಮಾಡುವದು ಹೊಡೆಯುವದು ಮಾಡಿ ಮಾನಸಿಕವಾಗಿ ಹಾಗೂ ದೈಹಿಕವಾಗಿ  ಕಿರುಕೂಳ ನೀಡಿದ್ದರಿಂದ ನಾನು ಆ ಕಿರುಕೂಳ ತಾಳಲಾರದೆ ನನ್ನ ತವರೂರಾದ ಕ್ಯಾತಗೀರ ಗ್ರಾಮಕ್ಕೆ ಹೊಗಿದ್ದೆನು. ದಿನಾಂಕ : 26-02-2015 ರಂದು ನನ್ನ ಗಂಡನಾದ ಮೊಗಲಪ್ಪ ತಂದೆ ಕಾಶಣ್ಣ ಹಣಮನಳ್ಳಿ ಇತನು ನನ್ನ ತವರು ಊರಿಗೆ ಬಂದು ನನ್ನ ಹೆಂಡತಿಗೆ ಸರಿಯಾಗಿ ಇಟ್ಟುಕೊಳ್ಳುತ್ತೆನೆ, ಬೇರೆ ಮನೆ ಮಾಡುತ್ತೆನೆ ಅಂತಾ ಹೇಳಿ ನನಗೆ ಸೇಡಂಕ್ಕೆ ಕರೆದುಕೊಂಡು ಬಂದು ನಾಗಪ್ಪ ಬಟ್ಟರ್ಗಿ ಇವರ ಮುಖಾಂತರ ಒಂದು ಬಾಡಿಗೆ ಮನೆ ಮಾಡಿ ಗಂಡ ಹೆಂಡತಿ ಊಳಿದಿದ್ದೆವು. ನಿನ್ನೆ ದಿನಾಂಕ : 27-02-2015 ರಂದು ಮಧ್ಯಾಹ್ನ 2-30 ಗಂಟೆಯ ಸುಮಾರಿಗೆ ನಾನು ಮನೆಯಲ್ಲಿದ್ದಾಗ ಹೊರಗಡೆಯಿಂದ ಮೇಲೆ ತೋರಿಸಿದ ಎಲ್ಲರು ಕುಡಿಕೊಂಡು ಬಂದವರೆ ಏ ರಂಡಿ ಯಾಕ ಬಂದಿದಿ ಅಂತಾ ಜಗಳ ತೆಗೆದು ನಮ್ಮ ನಾದನಿಯವರು ಜಗಳ ತೆಗೆದು ಹೊಡೆಹತ್ತಿದರು ನನ್ನ ಗಂಡ ಮೊಗಲಪ್ಪ ಇತನು ಈ ರಂಡಿ ಅಲ್ಲದ ಕೆಲಸ ಮಾಡ್ಯಾಳ ಇವಳಿಗೆ ಕೊಲೆ ಮಾಡಿ ಮುಗಿಸಬೆಕೆಂದು ಪ್ಲಾನ ಮಾಡಿ ಕರೆದುಕೊಂಡು ಬಂದಿನಿ ಇವಳಿಗೆ ಬಿಡಬ್ಯಾಡ್ರಿ ಖಲಾಸ್ ಮಾಡ್ರಿ ಅಂತಾ ಅಂದಿದ್ದೆ ತಡ ಅವರಲ್ಲಿಯ ಕೆಲವರು ಕೈಯಿಂದ ಹೊಡೆಯುತ್ತಿದ್ದರು. ಆಗ ನನ್ನ ಗಂಡನು ನನ್ನ ಮೈಮೆಲೆ ಸೀಮೆ ಎಣ್ಣೆ ಹಾಕಿ ನಿನಗೆ ಕೊಲೆಮಾಡಿ ಮುಗಿಸುತ್ತನೆ ಅಂತಾ ಅಂದು ಕಡ್ಡಿ ಕೊರೆದು ಮೈಗೆ ಊರಿಹಚ್ಚಿದ್ದರಿಂದ ನನ್ನ ಮೈ ಪೂರ್ತಿ ಸುಟ್ಟಿರುತ್ತದೆ. ನಂತರ ನನಗೆ ಅವರೇ ಉಪಚಾರದ ಕುರಿತು ಸೇಡಂ ಸರಕಾರಿ ಆಸ್ಪತ್ರೆಗೆ ಒಯ್ದಿದ್ದು ನಂತರ ಹೆಚ್ಚಿನ ಉಪಚಾರದ ಸಲುವಾಗಿ  ಜಿಲ್ಲಾ ಸರಕಾರಿ ಆಸ್ಪತ್ರೆ ಕಲಬುರಗಿಯಲ್ಲಿ ಉಪಚಾರ ಪಡೆಯುತ್ತಿದ್ದಾಗ ದಿನಾಂಕ : 04-03-2015 ರಂದು ಮೃತಪಟ್ಟಿರುತ್ತಾಳೆ ಅಂತಾ ಸಲ್ಲಿಸಿದ ದೂರು ಸಾರಂಸದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :

ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ಸಂತೋಷ ತಂದೆ ದೊಡ್ಡಪ್ಪಗೌಡ ಬಿರಾದಾರ  ಸಾ: ಹನುಮಾನ ಟೆಂಪಲ ಹತ್ತಿರ ಓಂನಗರ ಕಲಬುರಗಿ  ರವರು ದಿನಾಂಕ 04-03-2015 ರಂದು ಮದ್ಯಾಹ್ನ 1-00 ಗಂಟೆ ಸುಮಾರಿಗೆ ನಾನು ಕೊರ ಮಂಡಲ ಸಿಮೆಂಟ ಅಂಗಡಿಯ ಮಾಲಿಕರಾದ ಮಲ್ಲಿಕಾರ್ಜುನ ಐನಾಪುರ ಇವರ ಹತ್ತೀರ ಭೆಟಿ ಆಗುವ ಸಲುವಾಗಿ ಶಹಾಬಜಾರ ನಾಕಾ ಮುಖಾಂತರವಾಗಿ ಆಳಂದ ಚೆಕ್ಕ ಪೋಸ್ಟ ಕಡೆಗೆ ನನ್ನ ಮೋಟಾರ ಸೈಕಲ ನಂಬರ ಕೆಎ-03-ಇಜಿ-9533 ನೆದ್ದನ್ನು ಚಲಾಯಿಸಿಕೊಂಡು ಹೋಗುವಾಗ ದಾರಿ  ಮದ್ಯ ಆಳಂದ ರೋಡ ನಲ್ಲಿ ಬರುವ  ಆರ್ಶಿವಾದ ಕಲ್ಯಾಣ ಮಂಟಪ ಹತ್ತಿರ ಬರುವ ಪೆಟ್ರೊಲ ಪಂಪ ಎದುರು ರೋಡ ಮೇಲೆ ಎದುರಿನಿಂದ ರಾಂಗ ಸೈಡ ಮೂಲಕವಾಗಿ ಯಾವುದೋ ಒಂದು  ಟಂಟಂ ಚಾಲಕನು ತನ್ನ ಟಂಟಂ ವಾಹನವನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನ್ನ ಮೋಟಾರ ಸೈಕಲಕ್ಕೆ ಡಿಕ್ಕಿಪಡಿಸಿ ಅಫಘಾತ ಮಾಡಿ ನನ್ನ ಬಲ ಮೊಳಕಾಲಿಗೆ ಗುಪ್ತಪೆಟ್ಟು ಬಲಗಾಲು ಮೊಳಕಾಲ ಕೆಳೆಗೆ ಭಾರಿ ಪೆಟ್ಟು  ಬಿದ್ದು ರಕ್ತಗಾಯ . ಎರಡು ಕಣ್ಣುಗಳ ಮದ್ಯದಲ್ಲಿ ರಕ್ತಗಾಯ ಹಾಗೂ ಎಡ ಹುಬ್ಬಿನ ಮೇಲೆ ರಕ್ತಗಾಯ ಪಡಿಸಿ  ತನ್ನ ಟಂಟಂ ವಾಹನ ಚಲಾಯಿಸಿಕೊಂಡು ಓಡಿ ಹೋಗಿರುತ್ತಾರೆನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ,

04 March 2015

KALABURAGI DIST REPORTED CRIMES

ಇಸ್ಪೀಟ ಜೂಜಾಟದಲ್ಲಿ ನಿರತ ವ್ಯಕ್ತಿಗಳ ಬಂಧನ :
ಅಫಜಲಪೂರ ಠಾಣೆ : ದಿನಾಂಕ 03-03-2015 ರಂದು ಅಫಜಲಪೂರ ಪಟ್ಟಣದ ನ್ಯಶನಲ್ ಪಂಕ್ಷಶನ್ ಹಾಲ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಪಣಕ್ಕೆ ಹಣ ಹಚ್ಚಿ ಇಸ್ಪೆಟ ಎಲೆಗಳ ಸಹಾಯದಿಂದ ಅಂದರ ಬಾಹರ ಎಂಬ ಇಸ್ಪೇಟ ಜೂಜಾಟ ಆಡುತ್ತಿದ್ದ ಬಗ್ಗೆ  ಬಾತ್ಮಿ ಬಂದ ಮೇರೆಗೆ ನಾನು ಮತ್ತು ಡಿ.ಸಿ.ಐ.ಬಿ ಘಟಕದ ಶ್ರೀ ಹೇಮಂತ ಕುಮಾರ ಪಿ.ಎಸ್.ಐ ರವರು ಹಾಗೂ ಅವರ ಸಿಬ್ಬಂದಿ ಹಾಗು ನಮ್ಮ ಠಾಣೆಯ ಸಿಬ್ಬಂದಿಯೊಂದಿಗೆ ಮಾನ್ಯ ಎಸ್.ಪಿ.ಸಾಹೇಬರು ಕಲಬುರಗಿ ರವರ ಹಾಗೂ ಮಾನ್ಯ ಡಿ.ಎಸ್.ಪಿ ಸಾಹೇಬರು ಆಳಂದ ರವರ ಮಾರ್ಗದರ್ಶನದಲ್ಲಿ ಸ್ಥಳಕ್ಕೆ ಹೋಗಿ ನ್ಯಾಶನಲ್ ಪಂಕ್ಷಶನ್ ಹಾಲದಿಂದ ಸ್ವಲ್ಪ ಮರೆಯಾಗಿ ನಿಂತು ನೊಡಲು ನ್ಯಾಶನಲ್ ಪಂಕ್ಷಶನ್ ಹಾಲ ಪಕ್ಕದಲ್ಲಿರುವ ಖುಲ್ಲಾ ಜಾಗದಲ್ಲಿ ಗುಂಪು ಜನರು ದುಂಡಾಗಿ ಕುಳಿತುಕೊಂಡು ಇಸ್ಪೇಟ ಎಲೆಗಳ ಸಹಾಯದಿಂದ ಅಂದರ ಬಾಹರ ಜೂಜಾಟ ಆಡುತ್ತಿದ್ದು ಖಚಿತ ಪಡಿಸಿಕೊಂಡು ದಾಳಿ ಮಾಡಿ, ಜೂಜಾಡುತ್ತಿದ್ದ ಎಲ್ಲರನ್ನು ಹಿಡಿದು ಅವರ ಹೆಸರು ವಿಳಾಸ ವಿಚಾರಿಸಿ ಅಂಗ ಶೋಧನೆ ಮಾಡಲಾಗಿ 1. ಚಂದು ತಂದೆ ಶ್ರೀಮಂತ ದೇಸಾಯಿ ಸಾ|| ಬಸವೇಶ್ವರ ಚೌಕ ಹತ್ತಿರ ಅಫಜಲಪೂರ 2. ಸೋಮನಾಥ ತಂದೆ ಶರಣಪ್ಪ ನೂಲಾ ಸಾ|| ಸಿದ್ದೇಶ್ವರ ನಗರ ಅಫಜಲಪೂರ 3. ಶ್ರೀಕಾಂತ ತಂದೆ ಹಣಮಂತ ಮ್ಯಾಳೇಸಿ ಸಾ|| ರಾಜುಗಾಂದಿ ನಗರ ಅಫಜಲಪೂರ 4. ಸಂತೋಷ ತಂದೆ ಪಂಚಪ್ಪ ದೇವಾನಿ ಸಾ|| ಮಲ್ಲಿಕಾರ್ಜುನ ಚೌಕ ಅಫಜಲಪೂರ 5. ನಾಗರಾಜ ತಂದೆ ದರ್ಮಣ್ಣ ಭುಜರಿ ವ|| ಸಾ|| ಅಳ್ಳಗಿ (ಬಿ) ಹಾ|||| ರೇವಣ ಸಿದ್ದೇಶ್ವರ ಕಾಲೋನಿ ಅಫಜಲಪೂರ 6. ಮಾಹಾವೀರ ತಂದೆ ಕುಲಭೂಷಣ ವರ್ದಮಾನ ಸಾ|| ಅಫ್ಜಲಖಾನ ಚೌಕ ಹತ್ತಿರ ಅಫಜಲಪೂರ 7. ಶಿವಾನಂದ ತಂದೆ ಗುರುಲಿಂಗಪ್ಪ ಕುಲಕರ್ಣಿ ಸಾ|| ಸಿದ್ದೇಶ್ವರ ಕಾಲೋನಿ ಅಫಜಲಪೂರ ಇಒವರುಗಳನ್ನು ವಶಕ್ಕೆ ತೆಗೆದುಕೊಂಡು ಸದರಿಯವರಿಂದ ಜೂಜಾಟಕ್ಕೆ ಬಳಸಿದ ನಗದು ಹಣ 65,600/- ರೂ ಮತ್ತು 52 ಇಸ್ಪೆಟ ಎಲೆಗಳು ಜಪ್ತ ಮಾಡಿಕೊಂಡು ಸದರಿಯವರೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಪಹರಣ ಪ್ರಕರಣಗಳು :
ಮಹಿಳಾ ಠಾಣೆ : ಶ್ರೀ ಸೂರಜ ತಂದೆ ಮಾನಸಿಂಗ ಚಿಂಡಾಲಿಯಾ ಸಾ; 9 ನೇ ಕ್ರಾಸ ತಾರಫೈಲ ಸ್ಟೇಷನ ಎರಿಯಾ ಕಲಬುರಗಿ ಇವರ ಮಗಳಾದ ಸುಮನ ವಯ 15 ವರ್ಷ ಇವಳಿಗೆ ಮಂಜುನಾಥ ಇವನು ಚುಡಾಯಿಸುವುದು ಮಾಡುತ್ತಿದ್ದನು. ಆಗ ನಾನು ಮಂಜುನಾಥನಿಗೆ ಸಮಜಾಯಿಸಿದ್ದು ದಿನಾಂಕ 02.03.2015 ರಂದು ಮುಂಜಾನೆ 10 ಗಂಟೆಯ ಸುಮಾರಿಗೆ ಮಂಜುನಾಥ ಇತನು ನನ್ನ ಮಗಳು ಸುಮನ್ ಇವಳಿಗೆ ಜಬರದಸ್ತಿಯಿಂದ ಅವನ ದ್ವೀ ಚಕ್ರ ವಾಹನದ ಮೇಲೆ ಕರೆದುಕೊಂಡು ಹೋಗಿರುತ್ತಾನೆ ಅಂತಾ ನನ್ನ ತಾಯಿಯಾದ ಲತಾಬಾಯಿ ಇವರು ಹೇಳಿರುತ್ತಾರೆ. ಅಪ್ರಾಪ್ತ ವಯಸ್ಸಿನ ನನ್ನ ಮಗಳಾದ ಸುಮನ್ ಇವಳಿಗೆ ಮಂಜುನಾಥ ಇತನು ದುರುದ್ದೇಶದಿಂದ ಒಯ್ದಿರುವದರಿಂದ ಅವನ ವಿರುದ್ದ ಸೂಕ್ತ ಕಾನುನು ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೇವರ್ಗಿ ಠಾಣೆ : ದಿನಾಂಕ ೦1.03.2015 ರಂದು ಸಾಯಂಕಾಲ ನನ್ನ ಮಗನಾದ ಕುಮಾರ ಅಕ್ಷಯಕುಮಾರ ತಂದೆ ಸಿದ್ದಣ್ಣ ಹೊಸಮನಿ ವಯಾ : 13 ವರ್ಷ ಸಾ :  ಮುರಗಾನೂರ ಈತನು ಕೆಲ್ಲೂರದಲ್ಲಿನ ಮನೆಯಿಂದ ಸಂಡಾಸಕ್ಕೆ ಹೋಗಿದ್ದಾಗ ಯಾರೋ ಯಾವುದೋ ಉದ್ದೇಶದಿಂದ ಅಪಹರಣ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಶ್ರೀ ಸಿದ್ದಣ್ಣ ತಂದೆ ಮರಳೆಪ್ಪ ಹೊಸಮನಿ ಸಾ : ಮುರಗಾನೂರ ತಾ : ಜೇವರ್ಗಿ  ರವರು ಸಲ್ಲಿಸಿದ ದುರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ನಿಂಬರ್ಗಾ ಠಾಣೆ : ಶ್ರೀ ಭಗವಂತ ತಂದೆ ಲಕ್ಷ್ಮಣ್ಣ ಕೋಗನೂರ ಸಾ: ಕೋಗನೂರ ಹಾ:ವ ಇಂದಿರಾ ನಗರ ಕಲಬುರಗಿ ರವರು ದಿನಾಂಕ 02-03-2015 ರಂದು ನಾನು ನನ್ನ ಹೆಂಡತಿ ಮತ್ತು ಮಗ ಕುಲಾಲಿ ರೇಲ್ವೆ ಸ್ಟೇಶನ್ ದಿಂದ ಯಳಸಂಗಿ ಗ್ರಾಮಕ್ಕೆ ಒಂದು ಖಾಸಗಿ ಜೀಪಿನಲ್ಲಿ ಪ್ರಯಾಣಿಸುತ್ತಿದ್ದಾಗ ಕುಲಾಲಿ ಸ್ಟೇಶನ್ ದಿಂದ ಸ್ವಲ್ಪ ದೂರಲ್ಲಿ ತಿರುವಿನಲ್ಲಿ ಜೀಪ ಚಾಲಕನು ತನ್ನ ಜೀಪನ್ನು ಅತೀ ವೇಗ ಹಾಗೂ ನಿಸ್ಕಾಳಜಿತನದಿಂದ ನಡೆಸಿ ಹೊಲದ ಬಾಂದಾರಿಗೆ ಗುದ್ದಿ ಪಲ್ಟಿ ಹೊಡೆಸಿ ಜೀಪನ್ನು ಅಲ್ಲೇ ಬಿಟ್ಟು ಓಡಿ ಹೋಗಿರುತ್ತಾನೆ ಸದರಿ ಅಪಘಾತದಲ್ಲಿ ನನ್ನ  ತಲೆಗೆ ರಕ್ತಗಾಯ, ಕಪಾಳಕ್ಕೆ, ತೋಡೆಗೆ, ಬಲಬುಜಕ್ಕೆ ತರಚಿತ ಗಾಯ ಮತ್ತು ಗುಪ್ತಗಾಯಗಳಾಗಿರುತ್ತವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.   
ಕಿರುಕಳ ಪ್ರಕರಣ :
ನಿಂಬರ್ಗಾ ಠಾಣೆ : ಶ್ರೀಮತಿ   ಶೀತಲ ಗಂಡ ನಾರಾಯಣ ಸಾಲುಂಕೆ ಸಾ|| ದುತ್ತರಗಾಂವ ಇವರಿಗೆ 19/05/2014 ರಂದು ನಾರಾಯಣ ತಂದೆ ಕಿಶನ ಸಾಲುಂಕೆ ಸಾ|| ದುತ್ತರಗಾಂವ ಇತನೊಂದಿಗೆ ಮದುವೆಯಾಗಿದ್ದು, ಮದುವೆಯಾದ 6 ತಿಂಗಳವರೆಗೆ ನನ್ನ ಗಂಡನು ನನ್ನೊಂದಿಗೆ ಸರಿಯಾಗಿದ್ದು ನಂತರ ನನಗೆ ಸರಿಯಾಗಿ ಅಡುಗೆ ಮಾಡಲು ಬರುವದಿಲ್ಲ, ನೀನು ನೋಡಲು ಚೆನ್ನಾಗಿಲ್ಲ ಅಂತ ನೆಪ ಹೇಳಿ ದಿನಾಲು ನನಗೆ ಅವಾಚ್ಯ ಶಬ್ದಗಳಿಂದ ಬೈಯ್ಯುವದು ಮತ್ತು ಕೈಯಿಂದ ಹೊಡೆ ಬಡೆ ಮಾಡುತ್ತಾ ಬಂದು ನಿನ್ನೆ ದಿನಾಂಕ 02/03/2015 ರಂದು ಸಾಯಂಕಾಲ ನಾನು ನಮ್ಮ ಮನೆಯಲ್ಲಿದ್ದಾಗ ನನ್ನ ಗಂಡನು ಏ ರಂಡಿ ಇವತ್ತು ನೀನು ಅಡುಗೆ ಚೆನ್ನಾಗಿ ಮಾಡಿಲ್ಲ ಅಂತ ಅವಾಚ್ಯವಾಗಿ ಬೈದು ತಲೆಯ ಮೇಲಿನ ಕೂದಲು ಹಿಡಿದು ಜಗ್ಗಾಡಿ ಕೈಯಿಂದ ಬೆನ್ನ ಮೇಲೆ ಹೊಡೆ ಬಡೆ ಮಾಡಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.