POLICE BHAVAN KALABURAGI

POLICE BHAVAN KALABURAGI

24 December 2014

Kalaburagi District Reported Crimes

ಅಪಘಾತ ಪ್ರಕರಣಗಳು :
ಜೇವರ್ಗಿ ಠಾಣೆ : ದಿನಾಂಕ 23.12.2014 ರಂದು ಮಧ್ಯಾಹ್ನ 12:45 ಗಂಟೆಗೆ ನನ್ನ ಮಗ ಕಲ್ಲಪ್ಪ ಈತನು ತನ್ನ ಸ್ಕೂಟಿ ಮೋಟಾರು ಸೈಕಲ್ ನಂ ಕೆಎ 32 ಇ7802 ನೇದ್ದರ ಮುಂದೆ ನನ್ನ ಮೊಮ್ಮಗನಾದ ದೇವು ಈತನಿಗೆ ನಿಲ್ಲಿಸಿಕೊಂಡು ಮುಡಬೂಳ ಗ್ರಾಮದಿಂದ ನರಬೋಳಿ ಗ್ರಾಮಕ್ಕೆ ಬರುವ ಕುರಿತು ಅವರಾದ ಕ್ರಾಸ್‌ ಸಮೀಪ ಶಹಾಪುರ ಜೇವರ್ಗೀ ರಸ್ತೆಯ ಮೇಲೆ ಬರುತ್ತಿದ್ದಾಗ ಆ ವೇಳೆಗೆ ಕೆಂಪುಬಣ್ಣದ ಕಾರ್‌ ನಂ ಕೆಎ-51 ಎಮ್‌ಎ-4299 ನೇದ್ದರ ಚಾಲಕನು ತನ್ನ ಕಾರ್‌ ನ್ನು ಅತೀ ವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ರೋಡಿನ ಸೈಡಿನಿಂದ ಬರುತ್ತಿದ್ದ ನನ್ನ ಮಗನ ಮೋಟಾರು ಸೈಕಲ್‌ ಗೆ ಎದುರಾಗಿ ಡಿಕ್ಕಿ ಪಡಿಸಿದ್ದರಿಂದ ನನ್ನ ಮೊಮ್ಮಗನು ಭಾರಿ ಗಾಯ ಹೊಂದಿ ಸ್ಥಳದಲ್ಲಿಯೆ ಮೃತಪಟ್ಟಿರುತ್ತಾನೆ ಮತ್ತು ನನ್ನ ಮಗನಿಗೆ ಭಾರಿ ಗಾಯಗೊಳಿಸಿ ತನ್ನ ವಾಹನ ಬಿಟ್ಟು ಓಡಿ ಹೋಗಿರುತ್ತಾರೆ. ಅಂತಾ ಶ್ರೀ.ಮತಿ ಕಾಳಮ್ಮ ಗಂಡ ದಿವಂಗತ ಅಮೇತಪ್ಪ ಹಸನಾಪುರ ಸಾ: ನರಬೋಳ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಮಾದನಹಿಪ್ಪರಗಾ ಠಾಣೆ : ಶ್ರೀ.ದಯಾನಂದ ತಂದೆ ಸೋಮಲಿಂಗ ಹಾಸು ಸಾ:ಹಿರೋಳಿ ತಾ: ಆಳಂದ. ಇವರು ದಿನಾಂಕ 23-12-2014 ರಂದು ಬೇಳಗಿನ ಜಾವ ಅಂದಾಜು ಮುಂಜಾನೆ 06 ಗಂಟೆಯ ಸುಮಾರಿಗೆ ನಾನು ನನ್ನ ತೋಟದ ಮನೆಯಿಂದ ಹಿರೋಳ್ಳಿ ಕಡೆಗೆ ಹೋಗುತ್ತಿದ್ದಾಗ ಶ್ರೀ.ಅಶೋಕರಾವ ದೇಶಮುಖ ರವರ ಹೊಲದ ಹತ್ತಿರ ಬ್ರಿಜ್ ಮೇಲೆ ಒಬ್ಬ ಪೀಕಪ್ ಚಾಲಕನು ಆಳಂದ ಕಡೆಯಿಂದ ತನ್ನ ವಾಹನವನ್ನು ಅತೀವೇಗ ಮತ್ತು ಅಲಕ್ಷತನದಿಂದ ಚಾಲಾಯಿಸಿಕೊಂಡು ಬಂದು ರೋಡಿನ ಎಡಗಡೆಯ ಬ್ರಿಜ್ ಮೂಲಿಗೆ ತನ್ನ ವಾಹನವನ್ನು ಡಿಕ್ಕಿಪಡಿಸಿ ಅಪಘಾತ ಪಡಿಸಿದ್ದು ಇರುತ್ತದೆ. ಸದರಿ ಘಟನೆಯನ್ನು ನಾನು ನೋಡಿ ನನ್ನ ದ್ವಿಚಕ್ರ ವಾಹನವನ್ನು ನಿಲ್ಲಿಸಿ ಕೆಳಗೆ ಇಳಿದು ನೋಡಲಾಗಿ ಅದರ ನಂಬರ್  MH:04 E.B-5628 Bolero Max Trax ಇದ್ದು ಚಾಲಕನ ಹೆಸರು ಕೇಳಲಾಗಿ ತನ್ನ ಹೆಸರು ಸುಶೀಲಕುಮಾರ ತಂದೆ ರಕಮರಾಜ ಸಿಂಗ ಸಾ: ಶಿವಸೇನಾ ಆಫೀಸ್ ಹತ್ತಿರ ಸಾಥೇವಲ್ಲಿ ತಾ:ವಸಯಿ ಜಿಲ್ಲಾ:ಠಾಣಾ ರಾ: ಮಹಾರಾಷ್ಟ್ರ ಇರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಸದ ಮೇಲಿಂದ ಮಾದನ ಹಿಪ್ಪರಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೋಸ ಮಾಡಿದ ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ವಿಜಯಕುಮಾರ ದಳವಾಯಿ ಆಹಾರ ನಿರೀಕ್ಷಕರು ತಹಸಿಲ್ದಾರ ಆಫಿಸ್ ಅಫಜಲಪೂರ ರವರು ಈಗ 4 ವರ್ಷಗಳಿಂದ ಅಫಜಲಪೂರ ಪಟ್ಟಣದ ತಹಸೀಲ್ದಾರ ಕಾರ್ಯಾಲಯದಲ್ಲಿ ಆಹಾರ ನಿರೀಕ್ಷಕರು ಅಂತಾ ಕೆಲಸ ಮಾಡುತ್ತಿದ್ದು. ಶ್ರೀ ಅಬ್ದುಲ ಸಲೀಂ ಪಟೇಲ ತಂ. ಅಬ್ದುಲ ಹಮೀದ ಪಟೇಲ ಸಾ|| ಅಫಜಲಪೂರ ಇವರು ನಮ್ಮ ಕಾರ್ಯಾಲಯಕ್ಕೆ ಅರ್ಜಿ ಸಲ್ಲಿಸಿ ದಿನಾಂಕ 26-11-2013 ರಂದು 11:30 ಎಮ್ ಕ್ಕೆ ಬಿ.ಪಿ.ಎಲ್ ಪಡೀತರ ಚೀಟಿ ಪಡೆದುಕೊಂಡಿರುತ್ತಾರೆ, ಸರಕಾರದ ಆದೇಶ ಸಂ/ಆವಾಸ/80/ಡಿ.ಅಎ/2012 ದಿನಾಂಕ 24-08-2012 ರಲ್ಲಿ ಆರ್ಥಿಕವಾಗಿ ಸದೃಡ ಕುಟುಂಬಗಳನ್ನು ಅಂದರೆ ಕೇಳಗಿನ ಕುಟುಂಬಗಳನ್ನು ಹೊರತುಪಡಿಸಿ ಉಳಿದ ಕುಟುಂಬಗಳು ಬಿ.ಪಿ.ಎಲ್ ಕಾರ್ಡನ್ನು ಹೊಂದಲು ಅರ್ಹರೆಂದು ಪರಿಗಣಿಸುವುದಾಗಿದೆ. ಶ್ರೀ ಸಲೀಂ ಪಟೇಲ ಇವರು ಸರಕಾರದ ಮಾನದಂಡದಂತೆ ಬಿ.ಪಿ.ಎಲ್ ಕಾರ್ಡ ಪಡೆಯಲು ಅನರ್ಹರಿದ್ದು ಸಹ ಸುಳ್ಳು ಮಾಹಿತಿ ನೀಡಿ ಪಡಿತರ ಚೀಟಿ ಪಡೆದಿದ್ದು ಅದಕ್ಕೆ ಕಾರಣಗಳು ಇಂತಿವೆ, ವೃತ್ತಿಪರ ವರ್ಗಗಳು, ವೈದ್ಯರುಗಳು, ಆಸ್ಪತ್ರೆಗಳ ನೌಕರರು, ವಕೀಲರುಗಳು, ಲೆಕ್ಕ ಪರೀಶೋದಕರುಗಳು, ಹಾಗೂ ಮೂರು ಹೆಕ್ಟರ (7.20ಎಕರೆ ಒಣ ಭೂಮಿ) ಮತ್ತು ತತ್ಸಮಾನ ನಿರಾವರಿ ಭೂಮಿ ಹೊಂದಿರುವವರು ಬಿ.ಪಿ.ಎಲ್ ಪಡಿತರ ಚೀಟಿ ಹೊಂದಲು ಅರ್ಹರಿರುವುದಿಲ್ಲ. ಆದರೆ ಶ್ರೀ ಅಬ್ದುಲ ಸಲೀಂ ಪಟೇಲ ಇವರು ವೃತ್ತಿಯಿಂದ ವಕೀಲರಿದ್ದು ಇವರೊಬ್ಬ ವಕೀಲರು ಎಂಬುವುದಕ್ಕೆ ಸಾಬೀತು ಪಡಿಸಲು ಜಮೀನು ಖರೀದಿ ಪತ್ರದಲ್ಲಿ ತಾವೊಬ್ಬ ವಕೀಲರೆಂದು ಘೋಸಿಸಿ ಸಹಿ ಮತ್ತು ಮೋಹರು ಹಾಕಿ ನಮೂದು ಮಾಡಿರುತ್ತಾರೆ, ಹಾಗೂ ಸದರಿಯವರು ತಮ್ಮ ಕುಟುಂಭದ ಹೆಸರಿನಲ್ಲಿ ಒಟ್ಟು 22 ಎಕರೆ 24 ಗುಂಟೆ ಜಮೀನು ಹೊಂದಿರುವುದು ಕಂಡು ಬಂದಿರುತ್ತದೆ. ಸರ್ಕಾರದ ಮಾನದಂಡದ ಪ್ರಕಾರ ವಕೀಲರು 7.20 ಎಕರೆ ಗಿಂತ ಜಾಸ್ತಿ ಜಮೀನು ಹೊಂದಿರುವರು, ಇವರು ಬಿ.ಪಿ.ಎಲ್ ಪಡಿತರ ಚಿಟಿ ಹೊಂದಲು ಅನರ್ಹರಿದ್ದು ರೀತಿ ತಪ್ಪು ಮಾಹಿತಿ ನೀಡಿ ಹಾಗೂ ಅರ್ಜಿಯಲ್ಲಿ ಸುಳ್ಳು ಘೋಸಣೆ ಮಾಡಿ ಮೋಸ ಮಾಡಿದ್ದು ಕಂಡು ಬಂದಿರುತ್ತದೆ, ಮತ್ತು ಸದರಿಯವರು ತಮ್ಮ ರೇಷನ ಕಾರ್ಡನಲ್ಲಿ ತಮ್ಮ ಕುಟುಂಭದ ಸದಸ್ಯರ ಹೆಸರು ಸೇರಿಸಲು ಮಾತ್ರ ಅವಕಾಸವಿದ್ದು ಇದರಲ್ಲಿ ಕುಟುಂಬೇತರ ತನ್ನ ಅಣ್ಣನ ಮಗನಾದ ಮಜೀದ ಲತೀಫ್ ಪಟೇಲ ಎಂಬ ಹೆಸರು ಸಹ ಸೇರಿಸಿರುವರು. ಅದಲ್ಲದೆ ಮಜೀದ ಪಟೇಲ ಇವರ ಹೆಸರು ಲತೀಫ್ ಪಟೇಲ ಇವರು ಹೊಂದಿದ .ಪಿ.ಎಲ್ ಪಡೀತರ ಚೀಟಿಯಲ್ಲಿ  ಸಹ ಇರುತ್ತದೆ, ರೀತಿ ಇವರ ಹೆಸರು ಎರಡು ಕಾರ್ಡನಲ್ಲಿ ನಮೂದು ಇದೆ ಆದ್ದರಿಂದ ಇವರು (ಕರ್ನಾಟಕ ಪ್ರಿವೆನಶನ್ ಆಫ್ ಅನಅಥರೈಜ್ಡ ಪೋಜೀಶನ್ ಆಫ್ ರೇಷನ ಕಾರ್ಡ) ಆರ್ಡರ 1977 ಕ್ಲಾಜಾ 3 ನ್ನು ಉಲ್ಲಂಗಿಸಿ ಅಫರಾದವೇಸಗಿರುವರು, ಸದರಿ ಅಬ್ದುಲ ಸಲೀಂ ಪಟೇಲ ಇವರು ಸರ್ಕಾರದ ಮಾನದಂಡದಂತೆ ಬಿ.ಪಿ.ಎಲ್ ಕಾರ್ಡ ಪಡೆಯಲು ಅನರ್ಹರಿದ್ದು ಸುಳ್ಳು ಮಾಹಿತಿ ನೀಡಿ ಬಿ.ಪಿ.ಎಲ್ ಪಡೀತರ ಚೀಟಿ ಪಡೆದು ಸರ್ಕಾರದ ಸೌಲಬ್ಯಗಳನ್ನು ಪಡೆದು ಸರ್ಕಾರಕ್ಕೆ ಮೋಸ ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಹರಣ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀ. ಮಲ್ಲಿಕಾರ್ಜುನ @ ಮಲ್ಲಿನಾಥ ತಂದೆ ದೇವಿಂದ್ರಪ್ಪಾ  ಕಡಗಂಚಿ ಸಾ; ತಾಜಸುಲ್ತಾನಪೂರ ತಾ;ಜಿ; ಕಲಬುರಗಿ ಇವರ ಮಗಳು ಅಶ್ವಿನಿ ಇವಳು ದಿನಾಂಕ.19-12-2014 ರಂದು ಸಾಯಂಕಾಲ 5-00 ಗಂಟೆಯ ಸುಮಾರಿಗೆ ನನ್ನ  ತಮ್ಮನಾದ ಪೀರಪ್ಪಾ ಕಡಗಂಚಿ ಇವರ ಮನೆಗೆ ಹೋಗಿಬರುತ್ತೇನೆ ಅಂತಾ ಮನೆಯಿಂದ ಹೋದಳು , ಹಾಗೂ ಪಕ್ಕದ ಮನೆಯ ನಾಗಮ್ಮಾ ತಂದೆ ಚಂದ್ರಕಾಂತ ಬೈರಾಮಡಗಿ ವಯ;14 ವರ್ಷ  ಇಬ್ಬರು ಕೂಡಿಕೊಂಡು ಹೋದವರು ರಾತ್ರಿಯಾದರು ಮರಳಿ ಮನೆಗೆ ಬಂದಿರುವದಿಲ್ಲಾ , ಅದಕ್ಕಾಗಿ ನಾನು ಮತ್ತು ಚಂದ್ರಕಾಂತ ಬೈರಾಮಡಗಿ ಇಬ್ಬರು ಕೂಡಿಕೊಂಡು ಎಲ್ಲಾ ಕಡೆಗೂ ಹುಡುಕಾಡಿದರೂ ಸಿಕ್ಕಿರುವದಿಲ್ಲಾ , ಸದರಿ  ನನ್ನ ಮಗಳು ಅಶ್ವಿನಿ ವಯ;15 ವರ್ಷ ಮತ್ತು  ನಾಗಮ್ಮಾ ತಂದೆ ಚಂದ್ರಕಾಂತ ಬೈರಾಮಡಗಿ ವಯ;14 ವರ್ಷ  ಇವರಿಬ್ಬರು ಕಾಣೆಯಾಗಿರುತ್ತಾರೋ ಅಥವಾ ಯಾರಾದರೂ ಅಪಹರಣ ಮಾಡಿಕೊಂಡು ಹೋಗಿರುತ್ತಾರೆ ಅಂತಾ  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


22 December 2014

Kalaburagi District Reported Crimes

ಹಲ್ಲೆ ಪ್ರಕರಣಗಳು :
ರಾಘವೇಂದ್ರ ನಗರ ಠಾಣೆ : ಶ್ರೀ ಬಸವರಾಜ ತಂದೆ ಕಾಶಿನಾಥ ಪಾಟೀಲ (ಬೇಳಕೊಟಾ) ಸಾ. ದೇವರ ದಾಸೀಮಯ್ಯ ನಗರ ಡಬರಾಬಾದ ಕ್ರಾಸ್ ರಿಂಗ ರಸ್ತೆ ಕಲಬುರಗಿ ದಿನಾಂಕ 21-12-2014 ರಂದು ಸಾಯಂಕಾಲ 4 ಗಂಟೆಯ ಸುಮಾರಿಗೆ ನಮ್ಮ ಬಡಾವಣೆಯ ಮಹೇಶ ತಂದೆ ಅನಿಲ ಬನಗುಂಡಿ ಈತನು ಬಂದು ನಮ್ಮ ತಂದೆಯವರಾದ ಕಾಶಿನಾಥ ತಾಯಿ ಸೋಭಾ ಇವರಿಗೆ ಜಗಳ ತೆಗೆದು ನಮಗೆ ನೀವು ಎರಡು ಲಕ್ಷ ರೂಪಾಯಿ ಕೊಡಬೇಕಾಗಿದ್ದು ಕೊಡಬೆಕು ಅಂತ ಅವಾಚ್ಯ ಶಬ್ಧಗಳಿಂದ ಬೈದು ಹೋಗಿರುತ್ತಾನೆ ಈ ವಿಷಯ ಸಾಯಂಕಾಲ ನಾನು ಮತ್ತು ನನ್ನ ಅಣ್ಣ ಮನೆಗೆ ಬಂದಾಗ ನಮಗೆ ನಮ್ಮ ತಂದೆ ತಾಯಿಯವರು ತಿಳಿಸಿದರು ಆಗ ನಾನು ಮತ್ತು ನನ್ನ ತಂದೆಯವರು ಇಬ್ಬರು ಕೂಡಿ ಕೊಂಡು ಮಹೇಶ ಈತನ ಮನೆಗೆ ಹೋಗಿ ನಿನಗೆ ಯಾರು ಹಣ ಕೊಡಬೇಕು ಅಂತ ಕೇಳಿದಾಗ ಅವರು ನಮಗೆ ಭೊಷಡಿ ಮಕ್ಕಳೆ ನನ್ನ ಹಣ ಕೊಡದೆ ನನಗೆ ಕೇಳಲು ಮನೆಗಬಂದಿರಿ ಅಂತ ಅವಾಚ್ಯ ಶಬ್ಧಗಳಿಂದ ಬೈದು ಕೈಯಲ್ಲಿದ್ದ ಮಚ್ಚಿನಿಂದ ನನ್ನ ತಂದೆಯವರ ಎಡಗಲ್ಲದ ಮೇಲೆ ಹೊಡೆದು ಭಾರಿ ರಕ್ತಗಾಯ ಪಡಿಸಿದನು. ಆಗ ಜಗಳ ಬಿಡಿಸಲು ಹೊದಾಗ ನನಗೂ ಕೂಡ ತಲೆಯ ಹಿಂಬಾಗದಲ್ಲಿ ಅದೆ ಮಚ್ಚಿನಿಂದ ಹೊಡೆದು ರಕ್ತಗಾಯ ಪಡಿಸಿದನು. ನಾನು ಚೀರಾಡುವದನ್ನು ನೋಡಿ ನನ್ನ ಅಣ್ಣ ನಾಗರಾಜ ಈತನು ಬಂದಿದ್ದು ಈತನ ಜೊತೆಗೆ ಕೂಡ ಜಗಳಕ್ಕೆ ಬಿದ್ದು ಹೊಡೆಯಲು ಪ್ರಯತ್ನಿಸಿದಾಗ ನಾವು ಕೂಡ ಬಡಿಗೆ ಮತ್ತು ರಾಡಿನಿಂದ ಹೊಡೆದಿರುತ್ತೆವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾದನಹಿಪ್ಪರಗಾ ಠಾಣೆ : ಶ್ರೀ.ಹುಸೆನ ಬಾಷಾ ತಂದೆ ರಾಜಾಬಾಯಿ ಮುಜಾವರ ಸಾ; ಸರಸಂಬಾ ತಾ: ಆಳಂದ  ರವರು ದಿನಾಂಕ 21-12-2014 ರಂದು ಎಳ್ಳ ಅಮವಾಸೆಯು ಹಬ್ಬದ ಪ್ರಯುಕ್ತ ಸಂಬದಿಕರಾದ ಮಿರಜಾಬಿ ಗಂಡ ಮಹ್ಮದ ರಫಿಕ ಮಾಡ್ಯಾಳೆ. ಲಾಲಭಾಷಾ ತಂದೆ ಇಸ್ಮಾಯಿಲ ಸಾಬ ಮಾಡ್ಯಾಳೆ ರವರಿಗೆ ನನ್ನ ಹೋಲಕ್ಕೆ ಉಟಕ್ಕೆ ಕರೆದು ಕೋಂಡು ಬಂದಿದ್ದು ನಂತರ ನಾನು ಬಳ್ಳೊಳ್ಳಿ ಬಿತ್ತಿದ  ಹೋಲದಲ್ಲಿ ಬೋರ ಮೋಟರ ಚಾಲು ಮಾಡಿ ನಿರು ತುಂಬಿ ಕೋಳ್ಳಲು ನನ್ನ ಸಂಬಂದಿ ಮಿರಜಾಬಿ , ಲಾಲ ಭಾಷಾ ರವರಿಗೆ ಕುಗಿದಾಗ ನೀರಿನ ಹತ್ತಿರ ಬರುತ್ತಿರುವಾಗ ನಮ್ಮ ಅಣತಮ್ಮಕಿಯವರಾದ 1] ದಾವುಲ ತಂದೆ ನಬಿಸಾಬ ಮುಜಾವರ 2] ಸೈಫನ ತಂದೆ ನಬಿಸಾಬ ಮುಜಾವರ 3] ಶಫಿಯಾ ತದೆ ನಬಿಸಾಬ ಮುಜಾವರ ಇವರೆಲ್ಲರು ಕೂಡಿಕೊಂಡು ನನ್ನ ಹೋಲ ಸರ್ವೆನಂ- 111 ನೆದ್ದರಲ್ಲಿ ಅತಿಕ್ರಮ ಪ್ರವೇಶ ಮಾಡಿ ಅವಾಚ್ಯ ಶಬ್ದಗಳಿಂದ  ಬೈದು ಕಪಾಳ ಮೇಲೆ ಬೆನ್ನಿನ ಮೆಲೆ ಹೋಡೆಯುತ್ತಿರುವಾಗ ಅಲ್ಲಿಯೆ ಇದ್ದ ನನ್ನ ಸಂಭಂದಿ ಮಿರಿಜಬಿ ಮಾಡ್ಯಾಳೆ ಇವಳು ಬಿಡಿಸಲು ಬಂದಾಗ ದಾವುಲ ಮಜಾವರ ಇತನು ಮಿರಜಾಬಿ ಇವಳ  ಮೈ ಮೇಲೆ ಹೋಗಿ ಸೀರೆ ಹಿಡಿದು ಜಗ್ಗಿ ಆಕೆಯ ಕಪಾಳದ ಮೇಲೆ ಬೆನ್ನಿನ ಮೇಲೆ ಹೊಡೆದಿದ್ದು ಮತ್ತು ಶಫಿಯಾ ಮುಜಾವರ ಇವಳು ಮಿರಿಜಾಬಿ ಇವಳ ಎಡಗೈ ರಟ್ಟೆಯ ಮೇಲೆ ಹಲ್ಲಿನಿಂದ ಕಚ್ಚಿರುತ್ತಾಳೆ  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾದನ ಹಿಪ್ಪರಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಾತಿ ನಿಂದನೆ ಮಾಡಿ ಹಲ್ಲೆ ಮಾಡಿದ ಪ್ರಕರಣ :
ನಿಂಬರ್ಗಾ ಠಾಣೆ : ಶ್ರೀ ಆನಂದ ತಂದೆ ನಿಂಬೆಣ್ಣ ಚಂದನಕೇರಿ ಸಾ|| ವೈಜಾಪೂರ ಇವರು ಊಟ ತರಲು ಮನೆಗೆ ಬರುವಾಗ ಶಾಲೆಯ ಹತ್ತಿರ ದಿನಾಂಕ 21-12-2014 ರಂದು ವ್ಯಕ್ತಿಗಳು ಸುಮಾರು 15 ರಿಂದ 20 ಜನರು ದ್ವೀಚಕ್ರ ವಾಹನದ ಮೇಲೆ ಬಂದು ಅವರು ನಿನ್ನ ಹೆಸರು ಏನು ಆಮೆಲೆ ಜಾತಿ ಯಾವುದು ಎಂದು ಕೇಳಿದಾಗ ನಾನು ಎಸ್.ಸಿ ಹೊಲೆಯ ಎಂದು ಹೇಳಿದಾಗ ನನ್ನನ್ನು ಹೊಲೆಯ ಮಗನೆ ನಿನ್ನ ಜೀವ ತೆಗೆಯುತ್ತೇನೆಂದು ಹಲ್ಲೆ ನಡೆಸಿದರು, ಹಾಗೆಯೇ ಹೊಡೆಯುತ್ತಾ ಊರಿನೊಳಗೆ ಹನುಮಾನ ಮಂದಿರ ಹತ್ತಿರ ಒಯ್ದು ಮತ್ತೆ ಹೊಡೆಯಲಾರಂಭಿಸಿದರು ಅದರಲ್ಲೊಬ್ಬ ನನ್ನನ್ನು ಮರಗಮ್ಮ ದೇವಸ್ಥಾನದ ಕಡೆಗೆ ಹೊಡೆಯುತ್ತಾ ಎಳೆದೊಯ್ದು ದೇವಸ್ಥಾನದ ಹತ್ತಿರ ಕರ್ಕಶವಾಗಿ ಚೀರಾಡುತ್ತಾ ಈ ಹೊಲಗೇರಿಯಲ್ಲಿ ಹೊಡೆದರೆ ಯಾರೆ ಬಂದರು ಅವರನ್ನು ಜೀವಂತ ಸುಡುತ್ತೇವೆಂದು ಚೀರಾಡುತ್ತಾ ನನ್ನನ್ನು ಹೊಡೆಯುವಾಗ ನನ್ನ ಮನೆಯ ಪಕ್ಕದವರಾದ ಶ್ರೀಕಾಂತ ತಂದೆ ಬಾಬುರಾವ ಗಾಯಕವಾಡ ಮತ್ತು ಭೀಮಶಾ ತಂದೆ ಶರಣಪ್ಪ ಹಾದಿಮನಿ ಏನಾಗಿದೆ ಎಂದು ಕೇಳಿದಾಗ ಅವರಿಗೆ ಕೂಡ ಜಾತಿ ನಿಂದನೆಯಿಂದ ಬೈದು ಹೊಡೆದರು ನಮ್ಮ ತಾಯಂದಿರು ಬಿಡಿಸಲು ಬಂದರೆ ಅವರಿಗೂ ಸಹ ಹೊಲೆಯ ರಂಡೇರೆ ಇವರಿಗೆ ಜೀವಂತವಾಗಿ ಕಂಬಾಲ ಹಳ್ಳಿಯಲ್ಲಿ ಸುಟ್ಟಂಗ ಸುಡುತ್ತೇವೆಂದು ಹೊಡೆಯುತ್ತಾ ಎಲ್ಲಾ ಗಲ್ಲಿಗಳಲ್ಲಿ ಚೀರಾಡುತ್ತಿದ್ದರು ಅಷ್ಟರಲ್ಲಿ ನಮ್ಮ ಕೇರಿಯಲ್ಲಿನ ಶಿವಾನಂದ ಸಾಗರ ರವರು ಪೊಲೀಸರಿಗೆ ಮಾಹಿತಿ ತಿಳಿಸಿದರು, ಜಗಳದ ಸಪ್ಪಳ ಕೇಳಿ ಓಡಿ ಹೊರಟವರಲ್ಲಿ ಮೂರು ಜನರನ್ನು ಹಿಡಿದು ಅವರ ಹೆಸರನ್ನು ವಿಚಾರಿಸಲಾಗಿ 01] ಕಿರಣಕುಮಾರ ತಂದೆ ರಾಜಶೇಖರ ಮಲಶೇಟ್ಟಿ ಸಾ|| ದುತ್ತರಗಾಂವ, 02] ಮಲ್ಲಿಕಾರ್ಜುನ ತಂದೆ ಶ್ರೀಮಂತ ಮರಬ ಸಾ|| ಕಡಗಂಚಿ,  03] ಸೂರ್ಯಕಾಂತ ತಂದೆ ಶ್ರೀಮಂತ ಭೇರಜಿ ಸಾ|| ದುತ್ತರಗಾಂವ ಅಂತ ತಿಳಿಸಿದ್ದು  ಆಗ ನಾವೆಲ್ಲ ಸೇರಿ ಅವರನ್ನು ವಿಚಾರಿಸುತ್ತಿದ್ದಾಗ ನಮ್ಮಿಂದ ಕಸಿದುಕೊಂಡು ಕಡಗಂಚಿ ಹಳ್ಳ ಹಿಡಿದು ಓಡಿ ಹೋದರು, ಅವರು ತಂದಿದ್ದ ದ್ವೀಚಕ್ರ ವಾಹನಗಳಾದ ಪ್ಯಾಶನ ಪ್ರೋ ಕೆ.ಎ 32, ಇಎಪ 9581 ಮತ್ತು ಬಜಾಜ ಸಿ.ಟಿ 100 ಎಮ.ಹೆಚ್ 43, ಎಸ್ 1994 ಇವುಗಳನ್ನು ಅಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾರೆ.  ನಮಗೆ ಜಾತಿ ನಿಂದನೆ ಮಾಡಿ ಅಸಭ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮನುಷ್ಯ ಕಾಣೆಯಾದ ಪ್ರಕರಣ :
ಸೇಡಂ ಠಾಣೆ : ಶ್ರೀಮತಿ. ಪುಷ್ಪಾ ಗಂಡ ನಾಗಪ್ಪ ತುಳೇರ ಸಾ:ತುಳೇರಗಲ್ಲಿ, ಸಣ್ಣ ಅಗಸಿ, ಸೇಡಂ ಇವರ ಗಂಡ ನಾಗಪ್ಪ ತಂದೆ ಪ್ರಕಾಶಬಾಬು ತುಳೇರ ಇವರು  ದಿನಾಂಕ:13-12-2014 ರಂದು ಬೆಳಗ್ಗೆ 10-30 ಗಂಟೆ ಸುಮಾರಿಗೆ ನನ್ನ ಮನೆಯಿಂದ ಆಸ್ಪತ್ರೆಗೆ ಹೋಗಿ ಬರುವದಾಗಿ ಹೇಳಿ ಮನೆಯಿಂದ ಹೋದವರು ಇಲ್ಲಿಯವರೆಗೆ ಹಿಂದಿರುಗಿ ಬಂದಿರುವದಿಲ್ಲ. ನನ್ನ ಗಂಡ ವ್ಯವಸಾಯ ಮಾಡಿಕೊಂಡಿದ್ದು, ಕುಡಿತದ ಚಟ ಹಚ್ಚಿಕೊಂಡಿದ್ದು ಇರುತ್ತದೆ. ನಾವು ನಮ್ಮ ಸಂಭಂದಿಕರು, ನನ್ನ ಗಂಡನ ಸ್ನೇಹತರಲ್ಲಿ ಹಾಗೂ ಎಲ್ಲಾ ಕಡೆ ವಿಚಾರಿಸಿದರು ಸುಳಿವು ಸಿಕ್ಕಿರುವದಿಲ್ಲ. ಕಾರಣ ಕಾಣೆಯಾದ ನನ್ನ ಗಂಡನ್ನು ಪತ್ತೆ ಮಾಡಿಕೊಡಬೇಕು ಅಂತಾ ಸಲ್ಲಿಸಿದ  ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

21 December 2014

Kalaburagi District Reported Crimes

ಆಸ್ತಿಗಾಗಿ ಚಿಕ್ಕಪ್ಪನ ಕೊಲೆ, ಎರಡು ಜನ ಆರೋಪಿತರ ಬಂಧನ
ಫರತಾಬಾದ ಠಾಣೆ :  ದಿನಾಂಕ 5/12/2014 ರಂದು ರಾತ್ರಿ ವೇಳೆಯಲ್ಲಿ ಕವಲಗಾ (ಬಿ) ಗ್ರಾಮದ ಬ್ರೀಡ್ಜ ಕಂ ಬ್ಯಾರೇಜ ಹತ್ತಿರ ಒಬ್ಬ ಅಪರಿಚಿತ ವ್ಯಕ್ತಿಯನ್ನು ಯಾರೋ ದುಷ್ಕರ್ಮಿಗಳು ಯಾವುದೋ ಉದ್ದೇಶಕ್ಕಾಗಿ ಚಾಕುವಿನಿಂದ ಇರಿದು ಭೀರಕವಾಗಿ ಕೊಲೆ ಮಾಡಿ ಬ್ರೀಡ್ಜ ಮೇಲಿಂದ ಕೆಳಗೆ ನೂಕಿಸಿಕೊಟ್ಟು ಕಲ್ಲಿನಿಂದ ಹೊಡೆದು ಕೊಲೆ ಮಾಡಿದ್ದು ಈ ಬಗ್ಗೆ ಫರಹತಾಬಾದ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು  ಈ ಕೊಲೆ ಪ್ರಕರಣದ ಗಂಭೀರ ಸ್ವರೂಪದ ಅಫರಾದ ಅಂತಾ ಪರಿಗಣಿಸಿ ಆರೋಪಿತರನ್ನು ಶೀಘ್ರವಾಗಿ ಪತ್ತೆ ಮಾಡಿ ದಸ್ತಗಿರಿ ಮಾಡುವಂತೆ ಮಾನ್ಯ ಶ್ರೀ ಅಮಿತ್ ಸಿಂಗ್.  ಐ.ಪಿ.ಎಸ್. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಕಲಬುರಗಿ, ಶ್ರೀ ಬಿ. ಮಹಾಂತೇಶ ಹೆಚ್ಚುವರಿ ಪೊಲೀಸ ಅಧೀಕ್ಷಕರು, ಕಲಬುರಗಿ, ಶ್ರೀ ಸಂತೋಷ ಬಾಬು. ಐ.ಪಿ.ಎಸ್. ಸಹಾಯಕ ಪೊಲೀಸ್ ಅಧೀಕ್ಷಕರು ಗ್ರಾಮಾಂತರ ಉಪ-ವಿಭಾಗ ಕಲಬುರಗಿ ರವರ ಮಾರ್ಗದರ್ಶನದಲ್ಲಿ ಶ್ರೀ ಜೆ. ಹೆಚ್ ಇನಾಮದಾರ ಸಿಪಿಐ ಎಂ. ಬಿ ನಗರ ವೃತ್ತ ಕಲಬುರಗಿ ರವರ ನೇತೃತ್ವದಲ್ಲಿ ಸಿಬ್ಬಂದಿಯವರಾದ ಎ.ಎಸ್.ಐ ಶ್ರೀ ನಾಗಭೂಷಣ, ಹೆಚ್.ಸಿಗಳಾದ ಶಂಕರ, ಅರ್ಜುನ ಸಿಂಗ್, ಎ.ಹೆಚ್.ಸಿ ಅರ್ಜುನ ಹೆಚ್.ಸಿ, ಪಿಸಿಗಳಾದ ಮಲ್ಲಿನಾಥ ಆರ್.ಹೆಚ್, ಅಶೋಕ ಹಳಿಗೋದಿ, ಮಶಾಕ, ಚನ್ನಬಸಯ್ಯ, ಬಲರಾಮ  ರವರು ಕೂಡಿಕೊಂಡು ಮಾಹಿತಿ ಸಂಗ್ರಹಿಸಿ ಅಪರಿಚಿತ ವ್ಯಕ್ತಿಯ ಹೆಸರು ಶಾಬೋದ್ದಿನ ತಂದೆ ಮಹಿಬೂಬಸಾಬ ಜಮಾದಾರ ಸಾ :ಮೈನಾಳ ಈತನ ಮೃತ ದೇಹ ಅಂತಾ ಪತ್ತೆ ಹಚ್ಚಿ ಆರೊಪಿತರ ಪತ್ತೆಗಾಗಿ ಜಾಲ ಬಿಸಿ ಮಾಹಿತಿ ಸಂಗ್ರಹಿಸಿ  ಈ ಕೊಲೆ ಪ್ರಕರಣವನ್ನು ಯಶಸ್ವಿಯಾಗಿ ಭೇದಿಸಿದ್ದು ಆರೋಪಿ ಮಹ್ಮದ ಮಶಾಕ (ಜುನೈದಿ) ಮತ್ತು ಆತನ ಗೆಳೆಯನಾದ ಜಹೀರ ಇವರಿಬ್ಬರು ಕೂಡಿಕೊಂಡು ಮೈನಾಳ ಗ್ರಾಮದಲ್ಲಿರುವ ತಮ್ಮ ಪಾಲಿಗೆ ಬರುವ 9 ಎಕರೆ ಜಮೀನು ತಮ್ಮ ಚಿಕ್ಕಪ್ಪ ನೀಡದಿದ್ದಕ್ಕೆ ಮೃತ ಶಾಬೋದ್ದಿನ ಈತನಿನನ್ನು ಮೊಟಾರ ಸೈಕಲ ಮೇಲೆ ಕರೆದುಕೊಂಡು ಹೋಗಿ ಕವಲಗಾ ಬಿ ಹೋಗುವ ರಸ್ತೆಯಲ್ಲಿರುವ ಬ್ರೀಡ್ಜ ಕಂ ಬ್ಯಾರೇಜ ಮೇಲೆ ಕೊಲೆ ಮಾಡಿ ಶವವನ್ನು ಬ್ರಿಡ್ಜನ ಕೆಳಗಡೆ ಬಿಸಾಕಿ ಫರಾರಿಯಾಗಿದ್ದು ದಿನಾಂಕ 20/12/2014 ರಂದು ಈ ಕೆಳಕಂಡ ಆರೊಪಿತರನ್ನು ದಸ್ತಗಿರಿ ಮಾಡುವಲ್ಲಿ ಯಶಸ್ವಿಯಾಗಿರುತ್ತಾರೆ.
1) ಮಹ್ಮದ ಮಶಾಕ @ ಜನೈದ ತಂದೆ ಮೈನೋದ್ದಿನ ಜಮಾದಾರ ಸಾ : ಮೈನಾಳ ತಾ :ಜಿ ಕಲಬುರಗಿ ಹಾಲಿ ವಸ್ತಿ ಗರಿಬ ನವಾಜ ಕಾಲೋನಿ ಕಲಬರುಗಿ 2) ಜಹೀರ @ ಮಹ್ಮದ ಜಹೀರ ತಂದೆ ಖಾಜಾಮಿಯ್ಯಾ ಸಾ : ಗರಿಬ ನವಾಜ ಕಾಲೋನಿ ಆಜಾದಪುರ ರೋಡ್ ಕಲಬುರಗಿ ರವರನ್ನು ಬಂಧಿಸಿ ನ್ಯಾಂಗ ಭಂಧನಕ್ಕೆ ಕಳುಹಿಸಿದ್ದು ಈ ತನಿಖಾ ತಂಡದ ಪತ್ತೆ ಕಾರ್ಯವನ್ನು ಮಾನ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಶ್ಲಾಘಿಸಿರುತ್ತಾರೆ. 
ಅಪ್ರಾಪ್ತ  ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚರ ಪ್ರಕರಣ :
ಕಾಳಗಿ ಠಾಣೆ : ಕುಮಾರಿ ವಯ:07 ವರ್ಷ ಇವಳಿಗೆ ದಿನೇಶ ಚವ್ಹಾಣ, ಕಾಳ್ಯಾ ಜಾಧವ, ನಾಗೇಶ ರಾಠೋಡ, ಮತ್ತು ಶಿವಾ ರಾಠೋಡ ಇವರುಗಳು ದಿನಾಂಕ 19-12-2014 ರಂದು ಸಾಯಂಕಾಲ 6-00 ಗಂಟೆಯ ಸುಮಾರಿಗೆ ನನಗೆ ಮನೆಯಿಂದ ಎಳೆದುಕೊಂಡು ದಿನೇಶನ ಮನೆಗೆ ಹೋಗಿ ದಿನೇಶನು ತನ್ನೊಂದಿಗೆ ಸಂಬೋಗ ಮಾಡಿದ್ದು ನಂತರ ಎಲ್ಲರೂ ಕೂಡಿ ತಾಂಡಾದ ಪಕ್ಕದಲ್ಲಿರುವ ಧರ್ಮು ರಾಠೋಡ ರವರ ತೋಗರಿಯ ಹೋಲದಲ್ಲಿ ಎಳೆದುಕೊಂಡು ಹೋಗಿ ಎಲ್ಲರು ಸರದಿಯಂತೆ ತನ್ನ ಮೇಲೆ ಮಲಗಿ ಜಬರಿ ಸಂಭೋಗ ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಾಳಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀಮತಿ ಶಿವರತ್ನಾ ಗಂಡ ಗಿರೀಶ ರವರು  ದಿನಾಂಕ: 20-12-2014 ರಂದು 12-30 ಗಂಟೆ ಸುಮಾರಿಗೆ ತಾನು ಮತ್ತು ತನ್ನ ಚಿಕ್ಕಮ್ಮ ಶಿವಲಿಲಾ, ತಾಯಿ ಅಕ್ಕನಾಗಮ್ಮ ರವರು ಕಮಲ ಹೊಟೇಲ ಎದುರುಗಡೆಯಿಂದ ಕೇಂದ್ರ ಬಸ್ ನಿಲ್ದಾಣದ ಕಡೆಗೆ ನಡೆದುಕೊಂಡು  ರೋಡ ದಾಟುತ್ತಿದ್ದಾಗ ಮೋ/ಸೈಕಲ್ ನಂ: ಕೆಎ 32 ಯು 5843 ರ ಸವಾರನು ಎಮ್.ಎಸ್.ಕೆ.ಮಿಲ್ ಕಡೆಯಿಂದ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನಗೆ ಡಿಕ್ಕಿ ಪಡಿಸಿ ಅಪಘಾತಮಾಡಿ ಅದೆ ರೀತಿ ಅತಿವೇಗ ಮತ್ತು ಅಲಕ್ಷತನದಿಂದ ಅಡ್ಡವಾಗಿ ಬರುತ್ತಿದ್ದ ಮೋ/ಸೈಕಲ್ ನಂ; ಕೆಎ 02  ಹೆಚ್.ಎಮ್. 931 ನೆದ್ದಕ್ಕೆ ಡಿಕ್ಕಿಪಡಿಸಿ ಅಪಘಾತ ಮಾಡಿದ್ದರಿಂದ ನನಗೆ ಭಾರಿ ಪೆಟ್ಟು ಬಿದ್ದಿದ್ದು ಮೋಟಾರ ಸೈಕಲ ನಂ ಕೆಎ-02-ಹೆಚ,ಎಮ್- 931 ನೆದ್ದರ ಹಿಂದುಗಡೆ ಕುಳಿತು ಬಂದಿದ್ದ ಮಹಿಬೂಬ ಷಾ ಇತನಿಗೂ ಗಾಯವಾಗಿದ್ದು ಎರಡು ಮೋಟಾರ ಸೈಕಲ ನಿಲ್ಲಿಸಿ  ಓಡಿ ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.