POLICE BHAVAN KALABURAGI

POLICE BHAVAN KALABURAGI

23 November 2014

Kalaburagi District Reported Crimes

ಅಪಘಾತ ಪ್ರಕರಣಗಳು :
ಆಳಂದ ಠಾಣೆ : ಶ್ರೀ ಮೃತುಜಾ ತಂದೆ ಗುಲಾಬಸಾಬ ನದಾಫ್‌ ಸಾ: ಆಯಾ ಜಂಗಲ ನೀರಿನ ಟಾಕಿ ಹತ್ತಿರ ಆಳಂದ ರವರು ದಿನಾಂಕ 22-11-2014 ರಂದು ಬೆಳಿಗ್ಗೆ 9 :00 ಗಂಟೆಗೆ ನಾನು ಮತ್ತು ನನ್ನೊಂದಿಗೆ ಕಾರಪೆಂಟರ ಕೆಲಸ ಮಾಡುತ್ತಿದ್ದ ಮಕಬೂಲ ಅಹ್ಮದ ತಂದೆ ಅಹ್ಮದ ಜರ್ದಿ ಕೂಡಿಕೊಂಡು ನನ್ನ ಮೋಟರ ಸೈಕಲ ನಂ ಎಮ್‌ಎಚ್‌ 13 ಎವಿ 8521 ನೇದ್ದರ ಮೇಲೆ ತಡಕಲಕ್ಕೆ ಕಾರಪೆಂಟರ ಕೆಲಸಕ್ಕಾಗಿ ಹೋಗಿ ಮದ್ಯಾಹ್ನ 3:00 ಗಂಟೆ ಸುಮಾರಿಗೆ ಮುಗಿಸಿಕೊಂಡು ಬರುವಾಗ ನಾನು ಮೋಟರ ಸೈಕಲ ಚಲಾಯಿಸುತ್ತಿದ್ದು ನನ್ನ ಹಿಂದೆ ಮಕಬೂಲ ಅಹ್ಮದ ಕುಳಿತಿದ್ದು ಹೊನ್ನಳ್ಳಿ ಕ್ರಾಸ ದಾಟಿ 1 ಕೀಮೀ ಮುಂದೆ ಬಂದಾಗ ಎದುರಿನಿಂದ ಅಂದರೆ ಆಳಂದ ಕಡೆಯಿಂದ ಒಬ್ಬ ಮೋಟರ ಸೈಕಲ ಚಾಲಕನು ಒಬ್ಬನನ್ನು ಹಿಂದುಗಡೆ ಕುಡಿಸಿಕೊಂಡು ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಅತಿವೇಗದಿಂದ ಮತ್ತು ಅಲಕ್ಷತನದಿಂದ ಚಲಾಯಿಸಿ ನಮ್ಮ ಮೋಟರ ಸೈಕಲಿಗೆ ಜೋರಾಗಿ ಡಿಕ್ಕಿ ಪಡಿಸಿದ್ದರಿಂದ ನಾವು ಕೆಳಗಡೆ ಬಿದಿದ್ದು ನನಗೆ ಎರಡು ಹುಬ್ಬಿನ ಮೇಲ್ಭಾಗದಲ್ಲಿ , ಕೀವಿಯ, ಭಾಯಿಯ ಮೇಲೆ ಭಾರಿ ರಕ್ತಗಾಯವಾಗಿದ್ದು ಮತ್ತು ನನ್ನ ಹಿಂದೆ ಕುಳಿತ ಮಕಬೂಲನಿಗೆ ಬಲಮೇಲಕಿನ ಮೇಲ್ಬಾಗದಲ್ಲಿ ಬಡೆದು ಮೆದಳು ಹೊರಬಂದಿದ್ದು ಭಾರಿ ರಕ್ತಗಾಯವಾಗಿದ್ದು ಮತ್ತು ಬಲಗಾಲಿನ ಮೇಲೆ ಭಾರಿ ಗುಪ್ತಗಾಯವಾಗಿದ್ದು . ನಮಗೆ ಡಿಕ್ಕಿ ಪಡಿಸಿದವರು ಸಹ ಕೆಳಗಡೆ ಬಿದಿದ್ದು ಅವರಿಗೂ ಗಾಯಗಳಾಗಿದ್ದು . ನಮಗೆ ಡಿಕ್ಕಿ ಪಡಿಸಿದ ಮೋಟರ ಸೈಕಲ ನಂ ಕೆಎ 39 ಕೆ 4300 ಬಜಾಜ ಡಿಸ್ಕೋವರಿ ಇದ್ದು ನಮಗೆ ಡಿಕ್ಕಿ ಪಡಿಸಿದ ಮೋಟರ ಸೈಕಲ ಚಾಲಕನ ಹೆಸರು ಮಲ್ಲಿಕಾರ್ಜುನ ತಂದೆ ಲಕ್ಷ್ಮನ ಕಾಂಬಳೆ ಸಾ: ಮುನ್ನೊಳ್ಳಿ ಮತ್ತು ಅವನ ಹಿಂದೆ ಕುಳಿತವನ ಹೆಸರು ರಾಜಕುಮಾರ ತಂದೆ ಸುಭಾಸ ಅಟ್ಟೂರ ಮು: ಮನ್ನೊಳ್ಳಿ ಅಂತಾ ಕೇಳಿ ಗೊತ್ತಾಯಿತು. ನಂತರ ನನಗೆ ಮತ್ತು ನಮಗೆ ಡಿಕ್ಕಿ ಪಡಿಸಿದವರಿಗೆ ಯಾರೋ ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಇಲ್ಲಿಗೆ ತಂದು ಸೇರಿಕೆ ಮಾಡಿರುತ್ತಾರೆ.ನಮಗೆ ಅಪಘಾತ ಪಟಿಸಿದ  ಮೋ.ಸೈಕಲ ನಂ ಕೆಎ 39 ಕೆ 4300 ನೇದ್ದರ ಚಾಲಕನು ಅತಿವೇಗದಿಂದ ಮತ್ತು ಅಲಕ್ಷತನದಿಂದ ಮೋ.ಸೈಕಲ ಚಲಾಯಿಸಿ ನನಗೆ ಭಾರಿ ರಕ್ತಗಾಯಗೊಳಿಸಿ ನನ್ನೊಂದಿಗೆ ಇದ್ದ ಮಕಬೂಲ ಜರ್ದಿ ಇತನು ಸ್ಥಳದಲ್ಲೆ ಮೃತಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಸದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಫಜಲಪೂರ ಠಾಣೆ : ಶ್ರೀ ಶಿವಕುಮಾರ ತಂದೆ ಬಸವರಾಜ ಬಿರಾದಾರ ಸಾ|| ಅಫಜಲಪೂರ ರವರು ದಿನಾಂಕ 21-11-2014 ರಂದು ಬೆಳಿಗ್ಗೆ ಬಿಜಾಪೂರಕ್ಕೆ ಹೋಗಿ ಬಿಜಾಪೂರದಲ್ಲಿ ನನ್ನ ಕೆಲಸ ಮುಗಿಸಿಕೊಂಡು ಮರಳಿ ಅಫಜಲಪೂರಕ್ಕೆ ಬರಬೇಕೆಂದು ರಾತ್ರಿ 10:30 ಗಂಟೆಗೆ ಮರಳಿ ಬಿಜಾಪೂರ ಬಸ್ ನಿಲ್ದಾಣಕ್ಕೆ ಬಂದು ಬಿಜಾಪೂರದಿಂದ ಕೆ.ಎಸ್.ಆರ್.ಟಿ.ಸಿ ಬಸ್ ನಂಬರ ಕೆಎ-32 ಎಫ್-1997 ಪಣಜಿಸೇಡಂ ಬಸ್ಸಿನಲ್ಲಿ ಡ್ರೈವರ ಹಿಂದೆ ಇರುವ ಸೀಟಿನಲ್ಲಿ ಕುಳಿತುಕೊಂಡು ಅಫಜಲಪೂರ ಕ್ಕೆ ಹೋರಟಿದ್ದು ಸದರಿ ಬಸ್ಸಿಗೆ ನಾನು ಕುಳಿತಿದ್ದ ಏಡಗಡೆ ಬಾಗದಲ್ಲಿ ಮುಂದಿನ ಗಾಲಿಯ ಟಾಯರ ಹಿಂದೆಯೆ ಪ್ರಯಾಣಿಕರು ಇಳಿಯಲು ಬಸ್ಸಿನ ಬಾಗಿಲು ಇರುತ್ತದೆ. ಸದರಿ ಬಸ್ಸಿನ ಚಾಲಕ ತನ್ನ ಬಸ್ಸನ್ನು ಅತಿವೇಗವಾಗಿ ನಡೆಸುತ್ತಿದ್ದನು, ಆಗ ನಾನು ಮತ್ತು ನನ್ನಂತೆ ಬಸ್ಸಿನಲ್ಲಿ ಪ್ರಯಾಣ ಮಾಡುತ್ತಿದ್ದ ಪ್ರಯಾಣಿಕರು ಬಸ್ಸಿನ ಚಾಲಕನಿಗೆ ನಿದಾನವಾಗಿ ನಡೆಸಿ ಅಂತಾ ಹೇಳುತ್ತಾ ಬಂದಿರುತ್ತೆವೆ, ಆದರೂ ಬಸ್ಸಿನ ಚಾಲಕ ಬಸ್ಸನ್ನು ವೇಗವಾಗಿ ನಡೆಸುತ್ತಿದ್ದು ದಿನಾಂಕ  22-11-2014  ರಂದು ಬೆಳಗಿನಜಾವ 2:00 ಗಂಟೆ ಸುಮಾರಿಗೆ ಬಸ್ಸು ಅಫಜಲಪೂರ ಪಟ್ಟಣದ ತಹಸಿಲ ಕಾರ್ಯಾಲಯ ದಾಟಿದ ತಕ್ಷಣ ನಾನು ನನ್ನ ಸೀಟಿನಿಂದ ಎದ್ದು ನಿಂತುಕೊಂಡೆನು, ಬಸ್ಸಿನ ಬಾಗಿಲು ತೆರದಿತ್ತು, ಸದರಿ ಬಸ್ಸಿನ ಚಾಲಕ ಮುಂದೆ ಅಂಬೆಡ್ಕರ ಸರ್ಕಲ ಹತ್ತಿರ ಬಸ್ಸನ್ನು ಜೋರಾಗಿ ತಿರುಗಿಸಿದನು, ಬಸ್ಸಿನ ಚಾಲಕ ಅತಿವೇಗವಾಗಿ ಮತ್ತು ನಿಸ್ಕಾಳಜಿತನಿಂದ ತನ್ನ ಬಸ್ಸನ್ನು ಅಂಭೆಡ್ಕರ ಸರ್ಕಲದಲ್ಲಿ ತಿರುಗಿಸಿದ್ದರಿಂದ ಆಗ ನಾನು ನಿಂತಿದ್ದ ಸ್ಥಳದಿಂದ ಜೋಲಿ ಹೋಗಿ ಬಾಗಿಲಿನಿಂದ ಕೆಳಗೆ ಬಿದ್ದೆನು ಆಗ ಸದರಿ ಬಸ್ಸಿನ ಹಿಂದಿನ ಗಾಲಿಯ ಟಾಯರಗಳು ನನ್ನ ಏರಡು ಕಾಲಿನ ಮೇಲೆ ಹಾಯ್ದು ಹೋದವು, ಇದರಿಂದ ನನ್ನ ಎರಡು ಕಾಲುಗಳಿಗೆ ಮೋಳಕಾಲಿನಿಂದ ಪಾದದ ವರೆಗೆ ಬಾರಿ ರಕ್ತಗಾಯವಾಗಿರುತ್ತವೆ ಅಂತಾ ಸಲ್ಲಿಸಿದ ದುರು ಸಾರಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದ್ವೀಚಕ್ರ ವಾಹನ ಕಳವು ಪ್ರಕರಣ :
ಅಶೋಕ ನಗರ ಠಾಣೆ : ಶ್ರೀ ಸಂಜಯಕುಮಾರ ತಂದೆ ಪ್ರಕಾಶ ದೊಡ್ಡಮನಿ ಸಾ:  ಬ್ಲಾಕ್ ನಂ.9 ಪೊಲೀಸ್ ಕ್ವಾಟರ್ಸ ಕಲಬುರಗಿ ರವರು ದಿನಾಂಕ 21/11/2014 ರಂದು ಮುಂಜಾನೆ 10 ಎ.ಎಂ.ಕ್ಕೆ ನಾನು ಮೋಟಾರು ಸೈಕಲ್ ತೆಗೆದುಕೊಂಡು ನಗರದ ಕೇಂದ್ರ ಬಸ್ ನಿಲ್ದಾಣಕ್ಕೆ ಬಂದು ನನ್ನ ಮೋಟಾರ ಸೈಕಲ್ ಬಸ್  ಸ್ಟ್ಯಾಂಡ ಒಳಗಡೆ ಇರುವ ಇನ್ವೇರಿ ಹತ್ತಿರ ನಿಲ್ಲಿಸಿ ಕೀಲಿ ಹಾಕಿ ನಾನು ನನ್ನ ಕೆಲಸದ ನಿಮಿತ್ಯ ಬಸ್ ಮುಖಾಂತರ ನನ್ನ ಗ್ರಾಮಕ್ಕೆ ಹೋಗಿ ಮರಳಿ ಮದ್ಯಾಹ್ನ 2 ಗಂಟೆಗೆ ಕೇಂದ್ರ ಬಸ್ ನಿಲ್ದಾಣಕ್ಕೆ ಬಂದು ನೋಡಲಾಗಿ ನನ್ನ ಮೋಟಾರ ಸೈಕಲ್ ಕೆ.ಎ-32 ಎಸ್- 2323 ನೇದ್ದರ ಬ್ಲೂ ಬ್ಯಾಕ ಬಣ್ಣದ್ದು ಮಾಡಲ ನಂ. 2007 ಹಾಗು ಇಂಜನ್ ನಂ. 07B08M15885 ಚಸ್ಸಿ ನಂ. 07B09C01447  ಅ.ಕಿ. 45,000/- ರೂ ನೇದ್ದು ಇಟ್ಟ ಸ್ಥಳದಲ್ಲಿ ಇರಲಿಲ್ಲಾ ಈ ಬಗ್ಗೆ ಬಸ್ ನಿಲ್ದಾಣ ಇತರ ನನ್ನ ಗೆಳೆಯರಿಗೆ ಮತ್ತು ಎಲ್ಲಾ ಕಡೆಗೆ ವಿಚಾರಿಸಿದ್ದು ಕಳುವಾದ ನನ್ನ ಮೋಟಾರ ಸೈಕಲ್ ಸುಮಾರು 45 ಸಾವಿರ  ಬೆಲೆ ಬಾಳುವ ಇದ್ದು ಪತ್ತೆಯಾಗಿರುವುದಿಲ್ಲಾ. ಅಂತಾ ಸಲ್ಲಿಸಿದ ದೂರು ಸಾರಂಶದ ಮೇಲಿಂದ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

22 November 2014

Kalaburagi District Reported Crimes

ಇಸ್ಪೀಟ ಜೂಜಾಟದಲ್ಲಿ ನಿರತ ವ್ಯಕ್ತಿಗಳ ಬಂಧನ :
ಮಾಹಾಗಾಂವ ಠಾಣೆ : ದಿನಾಂಕ: 21/11/2014 ರಂದು ದಸ್ತಾಪೂರ  ಗ್ರಾಮದಲ್ಲಿಯ ಮಲ್ಕಣ್ಣಾ ದೇವರ ಗುಡಿಯ ಮುಂದುಗಡೆ ಇರುವ ಆಲದ ಮರದ ಕೆಳಗೆ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಹಣವನ್ನು ಪಣಕ್ಕೆ ಹಚ್ಚಿ ಇಸ್ಪೇಟ ಎಲೆಗಳ ಸಹಾಯದಿಂದ ಜೂಜಾಟ ಆಡುತ್ತಿರುವ ಬಗ್ಗೆ. ಭಾತ್ಮಿ ಬಂದ ಮೇರೆಗೆ, ಪಿಎಸ್ಐ ಮಾಹಾಗಾಂವ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೋಗಿ, ದಾಳಿ ಮಾಡಿ 1. ಗುರುನಾಥ ತಂದೆ ನಾಗಪ್ಪಾ ಕಗ್ಗನಮಡ್ಡಿ. 2. ಬಾಬುರಾವ ತಂದೆ ಹಣಮಂತಪ್ಪಾ ಹೊಳಿ 3. ಸಂಗಣ್ಣಾ ತಂದೆ ಭೀಮರಾಯ ಕಲಖೋರ 4. ಮಚೇಂದ್ರ ತಂದೆ ಶ್ರೀಮಂತ ನಾಟೀಕಾರ 5. ಭರತ ತಂದೆ ಅಂಬಾರಾಯ ಹಿರೇನಾಗಾಂವ 6. ಹಣಮಂತರಾವ ತಂದೆ ಮಾಣಿಕಪ್ಪಾ ಹಡಪದ 7. ನಾಗೇಂದ್ರಪ್ಪಾ ತಂದೆ ಚಿತ್ರಶೇಖರ ಬಿರಾದಾರ 8. ಧರ್ಮರಾಯ ತಂದೆ ನಾಗಪ್ಪಾ ಹೂಗಾರ ಮತ್ತು 9. ಅನೀಲಕುಮಾರ ತಂದೆ ಬಾಬುರಾವ ತಿಮ್ಮನಕರ ಸಾ:ಎಲ್ಲರೂ ದಸ್ತಾಪೂರ ತಾ:ಜಿ:ಕಲಬುರಗಿ ಇವರುಗಳನ್ನು ದಸ್ತಗಿರಿ ಮಾಡಿ, ಅವರ ವಶದಿಂದ ಇಸ್ಪೇಟ ಜೂಜಾಟಕ್ಕೆ ಉಪಯೋಗಿಸಿದ 52 ಇಸ್ಪೇಟ ಎಲೆಗಳು ನಗದು ಹಣ 3350-00 ರೂ. ಗಳನ್ನು ಜಪ್ತಿ ಪಡಿಸಿಕೊಂಡು ಸದರಿಯವರೊಂದಿಗೆ ಮಾಹಾಗಂವ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.  
ಹಲ್ಲೆ ಪ್ರಕರಣಗಳು :
ನಿಂಬರ್ಗಾ ಠಾಣೆ : ಶ್ರೀ ಧರ್ಮಣ್ಣ ತಂದೆ ಪ್ರಭು ಮಡಿವಾಳ ಸಾ: ಹಿತ್ತಲಶೀರೂರ ಇವರ ಮಗಳು ಬಟ್ಟೆ ತೊಳೆದು ಚಲ್ಲಿದ ನೀರು 1.ಕಲ್ಲಪ್ಪ ತಂದೆ ಗುರುಲಿಂಗಪ್ಪ ಮಡಿವಾಳ 2. ನಾಗರಾಜ ತಂದೆ ಕಲ್ಲಪ್ಪ ಮಡಿವಾಳ ಸಾ|| ಇಬ್ಬರೂ ಹಿತ್ತಲಶೀರೂರ ಇವರ ಎತ್ತುಗಳ ಕಾಲಲ್ಲಿ ನಿಂತಿವೆ ಅಂತಾ ಜಗಳ ತಗೆದು ದಿನಾಂಕ 20-11-2014 ರಂದು ರಾತ್ರಿ 09:30 ಗಂಟೆಗೆ ನನಗು ಮತ್ತು ನನ್ನ  ಮಗಳಾದ ಪ್ರಭಾವತಿ ಇಬ್ಬರಿಗೂ ತಡೆದು ಅವಾಚ್ಯ ಶಬ್ದಳಿಂದ ಬೈದು ಕೈಯಿಂದ ಕಲ್ಲಿನಿಂದ ಹೊಡೆ ಬಡೆ ಮಾಡಿ ಜೀವ ಭಯ ಪಡೆಸಿರುತ್ತಾರೆ ಅತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿಂಬರ್ಗಾ ಠಾಣೆ : ಶ್ರೀ ರೇವಣಸಿದ್ದ ತಂದೆ ನಾಗಪ್ಪಾ ಮಡ್ಡಿತೋಟ ಸಾ : ಮಾಡಿಯಾಳ ಇವರು ದಿನಾಂಕ 20/11/2014 ರಂದು ಸಾಯಂಕಾಲ 0645 ಪಿ.ಎಮಕ್ಕೆ ಮಾಡಿಯಾಳ ಗ್ರಾಮದ ಹನುಮಾನ ದೇವರ ಗುಡಿಯ ಹತ್ತಿರ ಫಿರ್ಯಾದಿಯು ಕುಳಿತಾಗ ಹೊಲದ ಸಂಭಂಧ ಆರೋಪಿತರಾದ ಅಸ್ಲಂ ತಂದೆ ನಸರೋದ್ದೀನ ಢಾಂಗೆ ಮತ್ತು ಅನ್ವರ ತಂದೆ ನಸರೋದ್ದೀನ ಢಾಂಗೆ ಸಾ|| ಮಾಡಿಯಾಳ ಸೇರಿ ಜಗಳ ತೆಗೆದು ತೆಕ್ಕೆಯಲ್ಲಿ ಹಿಡಿದು ಅವಾಚ್ಯ ಶಬ್ದಗಳಿಂದ ಬೈದು ನಿನಗೆ ಬಿಡಂಗಿಲ್ಲ ಅಂತ ಜೀವ ಭಯ ಪಡಿಸಿ ಬತಾಯಿಯಿಂದ ತಲೆಯ ಮೇಲೆ ಹೊಡೆದು ರಕ್ತಗಾಯಪಡಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಸದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿಂಬರ್ಗಾ ಠಾಣೆ : ಶ್ರೀ ಹೈದರ ತಂದೆ ಮಹ್ಮದ ಹನೀಫಸಾಬ ಢಾಂಗೆ ಸಾ|| ಮಾಡಿಯಾಳ ಇವರು ದಿನಾಂಕ 20/11/2014 ರಂದು ಸಾಯಂಕಾಲ 0645 ಪಿ.ಎಮಕ್ಕೆ ಮಾಡಿಯಾಳ ಗ್ರಾಮದ ಹನುಮಾನ ದೇವರ ಗುಡಿಯ ಹತ್ತಿರ ಆಪಾದಿತನಾದ ರೇವಣಸಿದ್ದ ತಂದೆ ನಾಗಪ್ಪಾ ಮಡ್ಡಿತೋಟ ಸಾ|| ಮಾಡಿಯಾಳ ಇತನು ಫಿರ್ಯಾದಿಯ ಕಾಕಾನಾದ ನಸೀರೋದ್ದೀನ ತಂದೆ ಇಬ್ರಾಹಿಂಸಾಬ ಡಾಂಗೆ ಈತನೊಂದಿಗೆ ಬಾಯಿ ಬಡೆಯುತ್ತಿದ್ದಾಗ ಬಿಡಿಸಲು ಹೋಗಿದ್ದಕ್ಕೆ ಏ ರಂಡಿ ಮಗನೆ ನಿಮ್ಮ ಕಾಕಾ ನಮ್ಮ ಅಣ್ಣತಮ್ಮಕೀಯ ಹೊಲ ಮಾಡ್ಯಾನ ಅದಕ್ಕೆ ನಮ್ಮ ತಕರಾರು ಅದಾ ನೀನು ನಿನ್ನ ಕಾಕಾನ ಮೇಲುಕಟ್ಟಿ ಬಂದಿದಿ ಮಗನೆ ಅಂತಾ ಬೈದು ನಿನಗೆ ಬಿಡಂಗಿಲ್ಲ ಅಂತ ಅಂದು ಹಿಡಿಗಾತ್ರದಕಲ್ಲಿನಿಂದ ಬಲಗಾಲಿಗೆ ಹೊಡೆದು ಗಂಭೀರವಾದ ರಕ್ತಗಾಯ ಮತ್ತು ಗುಪ್ತಗಾಯ ಪಡಿಸಿರುತ್ತಾನೆ ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಫಘಾತ ಪ್ರಕರಣಗಳು :
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀಮತಿ ಸುಮನ ಗಂಡ ಶಿವಾಜಿ ಕಾಟಕರ ಸಾ: ಠಾಕೂರ ಆಸ್ಪತ್ರೆ ಎದುರು ಗಂಗಾ ನಗರ ಕಲಬುರಗಿ ರವರು ದಿನಾಂಕ 21-11-2014 ರಂದು ಮದ್ಯಾಹ್ನ 1-30 ಗಂಟೆ ಸುಮಾರಿಗೆ ಆನಂದ ಹೋಟಲ ಕಡೆಯಿಂದ ಎನ್.ವಿ. ಕಾಲೇಜ ಕಡೆಗೆ ನಡೆದುಕೊಂಡು ಹೋಗುತ್ತಿರುವಾಗ ಮೋ/ಸೈಕಲ ನಂ ಕೆಎ-33 ಜೆ-4273 ರ ಸವಾರನು ತನ್ನ ಮೋ/ಸೈಕಲ ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಹಿಂದಿನಿಂದ ಫಿರ್ಯಾದಿಗೆ ಡಿಕ್ಕಿ ಪಡಿಸಿ ಅಪಘಾತ ಮಾಡಿ ಬಲ ತೊಡೆಗೆ ಭಾರಿಗುಪ್ತಪೆಟ್ಟು, ಬಲ ಟೊಂಕಿಗೆ ಗುಪ್ತಪೆಟ್ಟು ಗೊಳಿಸಿ ತನ್ನ ಮೋ/ಸೈಕಲ ನಿಲ್ಲಿಸದೆ ಚಲಾಯಿಸಿಕೊಂಡು ಓಡಿ ಹೊಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಳಖೇಡ ಠಾಣೆ : ಶ್ರೀ  ಮಹ್ಮದ ಅಲಿ ತಂದೆ ನಬಿ ಚಾಂದ ನಾಗುರೆ ಸಾ: ಬೆಳಮಗಿ ತಾ: ಆಳಂದ ಹಾವ: ಎಂ.ಎಸ್.ಕೆ ಮೀಲ್ ಶಾ ಜಿಲಾಸನಿ ದರ್ಗಾ ಹತ್ತಿರ ಗುಲಬರ್ಗಾ ಇವರ ಮಗನಾದ ಅಸ್ಲಮ್ ತಂದೆ ಮಹ್ಮದ ಅಲಿ ಈತನು ದಿನಾಂಕ 20-11-2014 ರಂದು ನಸೀರ ಅಹ್ಮದ ಗುಲಬರ್ಗಾ ಇವರ ಲಾರಿ ಮೆಲೆ ಕ್ಲೀನರ್ ಕೆಲಸಕ್ಕೆ ಹೋಗಿದ್ದು, ಕುಕ್ಕುಂದಾ ರೋಡಿಗೆ ನಡೆದಿರುವ ರಸ್ತೆ ಕಾಮಗಾರಿ ಕುರಿತು ಸದರಿ ನಸಿರ ಅಹ್ಮದ ಇವರು ತಮ್ಮ ಲಾರಿ ನಂಬರ ಕೆಎ 32-2003 ನೇದ್ದರ ಟಿಪ್ಪರ ಮೆಲೆ ದಶರಥ ತಂದೆ ಭೀಮಸಿಂಗ ಇವರ ಜೋತೆಗೆ ನನ್ನ ಮಗ ಅಸ್ಲಮ್ ಇವನಿಗೆ ಕ್ಲೀನರ್ ಕೆಲಸ ಮಾಡುತ್ತಿದ್ದು ದಿನಾಂಕ: 21-11-2014 ರಂದು ಬೆಳಗಿನ ಜಾವ 05:30 ಎ.ಎಮಕ್ಕೆ ಕುಕ್ಕುಂದಾ ಗ್ರಾಮದ ಶಂಬುಲಿಂಗ ಎಂಬುವರು ನಮಗೆ ಫೋನ ಮಾಡಿ ತಿಳಿಸಿದೇನೆಂದರೆ, ಕುಕ್ಕುಂದಾ ಗ್ರಾಮದ ಸಮೀಪ ವಿಜಯಕುಮಾರ ಗುತ್ತೇದಾರ ಇವರ ಹೊಲದಲ್ಲಿಂದ ತಾನು ತನ್ನ ಹೊಲಕ್ಕೆ ಹೋಗುತ್ತಿರುವಾಗ ಒಂದು ಲಾರಿ ನಂಬರ ಕೆಎ-32-2003 ನೇದ್ದರ ಚಾಲಕನು ಅತೀ ವೇಗ ಮತ್ತು ನಿಷ್ಕಾಳಜೀತನದಿಂದ ನಡೆಸಿಕೊಂಡು ರೋಡಿನ ಬಲಗಡೆ ತಗ್ಗಿನಲ್ಲಿ ಪಲ್ಟಿ ಮಾಡಿದಾಗ ಲಾರಿಯ ಮುಂದಿನ ಪಾಟಾಗಳು ಮುರಿದು ಟಯರಗಳು ಉಚ್ಚಿದ್ದು ಇರುತ್ತದೆ. ಆ ಕಾಲಕ್ಕೆ ಸದರಿ ಲಾರಿಯ ಚಾಲಕನಾದ ದಶರಥ ತಂದೆ ಭೀಮಸಿಂಗ ಇವನು ಲಾರಯಿಂದ ಜಿಗಿದಿದ್ದು ಅವನಿಗೆ ತಾನು ಹಿಡಿದು ವಿಚಾರಿಸಿದಾಗ ಅವನ ಹೆಸರು ಗೋತ್ತಾಗಿರುತ್ತದೆ. ಅಂತಾ ತಿಳಿಸಿದ್ದು. ನಾನು ನನ್ನ ಮಕ್ಕಳ ಜೋತೆಗೆ ಸೇಡಂ ಸರಕಾರಿ ಆಸ್ಪತ್ರೆಗೆ ಇಂದು ದಿನಾಂಕ: 21-11-2014 ರಂದು ಮುಂಜಾನೆ 09:00 ಗಂಟೆಗೆ ಸೇಡಂ ಸರಕಾರಿ ದವಾಖಾನೆಗೆ ಬಂದು ನನ್ನ ಮಗನಿಗೆ ನೊಡಿ ಗುರುತಿಸಿರುತ್ತೇನೆ. ನನ್ನ ಮಗ ಅಸ್ಲಮ್ ಈತನು ಅಪಘಾತದಲ್ಲಿ ಮೃತಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಂಸದ ಮೇಲಿಂದ ಮಳಖೇಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

21 November 2014

Kalaburagi District Reported Crimes

ಮಟಕಾ ಜೂಜಾಟದಲ್ಲಿ ನಿರತ ವ್ಯಕ್ತಿಗಳ ಬಂಧನ :
ಮಾಹಾಗಾಂವ ಠಾಣೆ : ದಿನಾಂಕ: 20/11/2014 ರಂದು ಹರಸೂರ ಗ್ರಾಮದಲ್ಲಿಯ ಹನುಮಾನ ಗುಡಿಯ ಹಿಂದುಗಡೆ ಇಬ್ಬರು ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ಚೀಟಿ ಬರೆದುಕೊಡುತ್ತಿದ್ದಾರೆಂದು ಭಾತ್ಮಿ ಬಂದ ಮೇರೆಗೆ, ಪಿಎಸ್ಐ ಮಾಹಾಗಾಂವ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೋಗಿ, ಮಟಕಾ ಜೂಜಾಟದಲ್ಲಿ ತೊಡಗಿದ 1) ಈರಣ್ಣಾ ತಂದೆ ಅಣ್ಣಾರಾವ ತೊಂಡಕಲ್ 2) ಅಂಬಾದಾಸ ತಂದೆ ಬಾಬುರಾವ ಕಂಬಾರ ಸಾ: ಇಬ್ಬರು ಹರಸೂರ ತಾ:ಜಿ: ಕಲಬುರಗಿ ಇವರುಗಳನ್ನು ದಸ್ತಗಿರಿ ಮಾಡಿ, ಅವರ ವಶದಿಂದ ಮಟಕಾ ಜೂಜಾಟಕ್ಕೆ ಉಪಯೋಗಿಸಿದ ಎರಡು ಮಟಕಾ ಚೀಟಿಗಳು, ಎರಡು ಬಾಲಪೆನ್ನಗಳು ನಗದು ಹಣ 350-00 ರೂ. ಗಳನ್ನು ಜಪ್ತಿಮಾಡಿಕೊಂಡು ಸದರಿಯವರೊಂದಿಗೆ ಮಾಹಾಗಾಂವ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.  
ಕಮಲಾಪೂರ ಠಾಣೆ : ದಿನಾಂಕ: 20-11-2014 ರಂದು ರಾಷ್ಟ್ರೀಯ  ಹೆದ್ದಾರಿಯ 218 ರೋಡಿನ ಮೇಲೆ  ಅಯ್ಯುಬ ಧಾಬಾದ ಮುಂದಗಡೆ ಸಾರ್ವಜನಿಕರು ತಿರುಗಾಡುವ ಸ್ಥಳದಲ್ಲಿ ಸಾರ್ವಜನಿಕರಿಂದ ಹಣವನ್ನು ಪಡೆದು ಮಟಕಾ ನಂಬರ ಬರೆದುಕೊಡುತ್ತಿದ್ದ  ಬಗ್ಗೆ ಬಾತ್ಮಿ ಮೇರೆಗೆ ಪಿ.ಎಸ್.ಐ. ಕಮಲಾಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೋಗಿ ದಾಳಿ ಮಾಡಿ ಸೋಮನಾಥ ತಂದೆ ಭೀಮಶ್ಯಾ ಕೊಡ್ಲಿಗಿ ಸಾ: ಬೇಳಕೂಟಾ ತಾ:ಜಿ:ಕಲಬುರ್ಗಿ , ಇವನನನ್ನು ವಶಕ್ಕೆ ತೆಗೆದುಕೊಂಡು ಅವನ  ಹತ್ತಿರ ಇದ್ದ 850  ರೂ ಒಂದು ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿ ಮತ್ತು ಒಂದು ಬಾಲಪೆನು ಜಪ್ತಿಮಾಡಿಕೊಂಡು ಸದರಿಯವನೊಂದಿಗೆ ಕಮಲಾಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ,
ದ್ವೀಚಕ್ರ ವಾಹನ ಕಳವು ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ಮಂಜುನಾಥ ತಂದೆ ಶಿವಶರಣಪ್ಪ ಗುಡ್ಡಡಗಿ ಸಾ :ಅಫಜಲಪೂರ  ಇವರು ನನ್ನದು ಹಿರೋ ಸ್ಪೇಂಡರ ಪ್ಲಸ್ ಕಂಪನಿಯ ಮೋಟಾರ ಸೈಕಲ ನಂಬರ ಕೆಎ-32 ಇಎ-6710 ಅಂತಾ ಇದ್ದು, ಚೆಸ್ಸಿ ನಂಬರ:- MBLHA10EZBHM69426  ಇಂಜೆನ ನಂಬರ:- HA10EFBHM88454 ಅಂತಾ ಇದ್ದು, ಶಿಲವರ ಬಣ್ಣದ್ದು ಇರುತ್ತದೆ. ಅದರ ಅಂದಾಜು 25,000/- ರೂ ಕಿಮ್ಮತ್ತಿನದನ್ನು ದಿನಾಂಕ 29-08-2014 ರಂದು ಬೆಳಿಗ್ಗೆ 11:00 ಗಂಟೆ ಸುಮಾರಿಗೆ ನಾನು ಮತ್ತು ನನ್ನ ಅಣ್ಣ ಮಾಹಾಂತೇಶ ಇಬ್ಬರು ಕೂಡಿ ನಮ್ಮ ಹೊಲದ ಪಹಣಿಯನ್ನು ತಗೆದುಕೊಂಡು ಬರಲು ಅಫಜಲಪೂರ ತಹಸಿಲ ಕಾರ್ಯಾಲಯಕ್ಕೆ ಸದರಿ ಮೇಲೆ ತಿಳಿಸಿದ ನನ್ನ ಮೋ/ಸೈ ಮೇಲೆ ಹೋಗಿರುತ್ತೆವೆ, ಸದರಿ ನನ್ನ ಮೋಟಾರ ಸೈಕಲನ್ನು ಅಫಜಲಪೂರದ ತಹಸಿಲ ಕಾರ್ಯಾಲಯದ ಮುಂದೆ ಇರುವ ಆವರಣದಲ್ಲಿ ನಿಲ್ಲಿಸಿ ನಾವಿಬ್ಬರು ಪಹಣಿಯನ್ನು ತಗೆದುಕೊಳ್ಳಲು ಪಹಣಿ ತಗೆದುಕೊಳ್ಳುತ್ತಿದ್ದ ಸರತಿ ಸಾಲಿನಲ್ಲಿ ನಿಂತುಕೊಂಡು, ಪಾಳಿ ಪ್ರಕಾರ ಪಹಣಿ ಪಡೆದುಕೊಂಡು ನಂತರ 11:30 ಎ ಎಮ್ ಸುಮಾರಿಗೆ ಮರಳಿ ನಾವು ಮೋ/ಸೈ ನಿಲ್ಲಿಸಿದ ಜಾಗಕ್ಕೆ ಬಂದು ನೋಡಲಾಗಿ ನನ್ನ ಮೋ/ಸೈ ಇರಲಿಲ್ಲ, ಸದರಿ ನನ್ನ ಮೋ/ಸೈ ನ್ನು ಯಾರೊ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣಗಳು :
ಕಮಲಾಪೂರ ಠಾಣೆ : ಶ್ರೀ ಮಹಾದೇವ ತಂದೆ ರಾಜಪ್ಪ ಬಿರಾದಾರ  ಸಾ:ಕಮಲಾಪೂರ ತಾ:ಜಿ:ಗುಲಬರ್ಗಾ ಇವರು ದಿನಾಂಕ:13-11-2014 ರಂದು ಸಾಯಂಕಾಲ 07-00 ಗಂಟೆಯ ಸೂಮಾರಿಗೆ ನನ್ನ ತಮ್ಮ ಶಿವಕುಮಾರ ತಂದೆ ರಾಜಪ್ಪ ಬಿರಾದಾರ ಇವನು ಹಿರೋಹೊಂಡಾ ಮೊಟರ ಸೈಕಲ ನಂ.ಕೆಎ-32 ಯು-2018 ನೇದ್ದರ ಮೇಲೆ ಭೂಂಯಾರ ಗ್ರಾಮದ ನಮ್ಮ ಮಾವನ ಮನೆಗೆ ಹೋಗುವಾಗ ಗುಲಬರ್ಗಾ ಹೆದ್ದಾರಿಯ ನಾಡ ತಹಸಿಲ ಕಾರ್ಯಾಲಯದ ಮುಂದೆ ಹೆದ್ದಾರಿಯ ಮೇಲೆ ರಸ್ತೆ ಅಪಘಾತವಾಗಿರುವ ಬಗ್ಗೆ ನಮ್ಮ ಸಂಭಂದಿ ಉದಯಕುಮಾರ ರಟಕಲ ಇವರು ನನಗೆ ಫೊನ ಮುಖಾಂತರ ತಿಳಿಸಿದ್ದು. ನಾನು ಹೆದ್ದಾರಿಯ ನಾಡ ತಹಸಿಲ ಕಾರ್ಯಾಲಯದ ಎದರು ಹೆದ್ದಾರಿಯ ಹತ್ತೀರ ಹೋಗಿ ನೋಡಲು ಉದಯಕುಮಾರ ಹೇಳಿದಂತೆ ನನ್ನ ತಮ್ಮ ಶಿವಕುಮಾರನಿಗೆ ರಸ್ತೆ ಅಪಘಾತವಾಗಿ ಅವನ ಮುಗಿನ ಮೇಲೆ ಕಟ್ಟಾಗಿ ರಕ್ತಗಾಯವಾಗಿದ್ದು. ಅಲ್ಲದೆ ಬಲಗಣ್ಣ ಕೆಳಗೆ ಬಲಹುಬ್ಬಿನ ಮೇಲೆ ಕೆಳ ತುಟಿಯ ಕೆಳಗೆ ರಕ್ತಗಾಯ ಮತ್ತು ಅಲ್ಲಲ್ಲಿ ತರಚಿದ ರಕ್ತ ಮತ್ತು ಗುಪ್ತಗಾಯಗಳಾಗಿರುತ್ತವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ಆದಪ್ಪ ತಂದೆ ಸಿದ್ದಣ್ಣಾ ಕೊಳಕೂರ ಸಾ: ವಸಂತ ನಗರ  ಕಲಬುರಗಿ ರವರು ದಿನಾಂಕ: 20/11/2014 ರಂದು ರಾತ್ರಿ 9=00 ಗಂಟೆಯ ಸುಮಾರಿಗೆ ತನ್ನ ಮೋ/ಸೈಕಲ್ ನಂ;' ಕೆಎ 32 ಇಇ 0167 ನೆದ್ದರ ಮೇಲೆ ಎಸ್.ವಿ.ಪಿ.ಸರ್ಕಲ್ ದಿಂದ ಆರ್.ಪಿ.ಸರ್ಕಲ್ ರೋಡ ಕಡೆಗೆ ಮೋ/ಸೈಕಲ್ ಚಲಾಯಿಸಿಕೊಂಡು ಹೋಗಿ ಕಿಚನ ನೀಡ್ಸ ಗ್ಯಾಸ ಎಜೇನ್ಸಿ ಎದುರಿನ ಕ್ರಾಸ್ ಹತ್ತಿರ ಫಿರ್ಯಾದಿ ಮೋ/ಸೈಕಲ್ ಮೇಲೆ ರೋಡ ಕ್ರಾಸ್ ಮಾಡುತ್ತಿದ್ದಾಗ ಕೇಂದ್ರ ಬಸ್ ನಿಲ್ದಾಣ ಕಡೆಯಿಂದ ಮೋ/ಸೈಕಲ್ ಸವಾರನು ತನ್ನ ಮೋ/ಸೈಕಲ್ ಮೇಲೆ ಹಿಂದೆ ಒಬ್ಬರಿಗೆ ಕೂಡಿಸಿಕೊಂಡು ಅತಿವೇಗ ಮತ್ತು  ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಗೆ ಡಿಕ್ಕಿ ಪಡಿಸಿ ಅಪಘಾತಮಾಡಿ ಫಿರ್ಯಾದಿಯ ಎಡ ತೊಡೆಗೆ ಭಾರಿ ಗುಪ್ತ ಪೆಟ್ಟು ಮಾಡಿ ಆತನ ಹಿಂದೆ ಕುಳಿತವನಿಗೆ ಗಾಯಮಾಡಿ ತನ್ನ ಮೋ/ಸೈಕಲ್ ಸ್ಥಳದಲ್ಲೇ ಬಿಟ್ಟು ಸವಾರ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ಚೌಕ ಠಾಣೆ : ಶ್ರೀ ಮಹ್ಮದ ರಬಾನಿ ತಂದೆ ಅಬ್ದುಲ್ ರಹಿಮ್ ಸಾಬ ಮುಡ್ಡಿ ಸಾಃ ಜವಾಹರ ಹಿಂದ ಸ್ಕೋಲ್ ಹತ್ತಿರ ಗೋಸುದಾಸ ಕಾಲೋನಿ ಕಲಬುರಗಿ ರವರು ಬಾಂಡ್ಯೆ ಬಜಾರದಲ್ಲಿ ಹಣ್ಣಿನ ಗೋದಾಮ ಇದ್ದು ಪ್ರತಿ ದಿನ ಹಣ್ಣು ಮಾರಾಟ ಮಾಡಿ ಬಂದ ಹಣ ಗೋದಾಮದಲ್ಲಿಟ್ಟು  ಮತ್ತು ನಸುಕಿನಜಾವ ಹಣ್ಣು ಮಾರಾಟ ಮಾಡುವದು ಗೋಸ್ಕರ ಮತ್ತು ಹಣ್ಣು ಹರಾಜು ಮಾಡುವದಕ್ಕೆ ಬೇಕೆಂದು ಸ್ವಲ್ಪ ಹಣ ಇಡುತ್ತಾ ಬಂದಿರುತ್ತಾನೆ. ಅಲ್ಲದೆ ನಿನ್ನೆ ದಿನಾಂಕಃ 19.11.2014 ರಂದು ರಾತ್ರಿ 10 ಗಂಟೆಯ ಸುಮಾರಿಗೆ ನನ ಹತ್ತಿರ ಯೂನಿಕ್ ಜನರಲ್ ಸ್ಟೋರದ ಮಾಲೀಕರಾದ ರಾಜೇಶ ಪವಾರ ಎಂಬುವರು ಹೇಳಿದ್ದೆನೆಂದರೆ ನಾನು ಬಾಂಬೆಗೆ ಹೋಗುತ್ತಿದ್ದಿನೆ. ಆದರಿಂದ ನನ ಹತ್ತಿರ ಇರುವ ಹಣ ಇಟ್ಟಿಕೊಳ್ಳಿ ಬೆಳಿಗ್ಗೆ ನಮ್ಮ ಅಂಗಡಿಯಲ್ಲಿ ಕೆಲಸ ಮಾಡುವ ಹುಡಗ ಬರುತ್ತಾನೆ ಅವರ ಕೈಯಲ್ಲಿ ಹಣ ಕೊಡಿ ಬೆಳಿಗ್ಗೆ ಬ್ಯಾಂಕಿಗೆ ತುಂಬುವದು ಇದೆ ಅಂತಾ ಹೇಳಿ ನನ ಕೈಯಲ್ಲಿ 1,50,000/- ನಗದು ಹಣ ಕೊಟ್ಟು ಹೋಗಿದ್ದು ಆ ಹಣ ನಾನು ನಮ್ಮ ಗೋದಾಮಿನಲ್ಲಿರುವ ಅಲಮಾರಿಯಲ್ಲಿಟ್ಟು ಹೋಗಿರುತ್ತೇನೆ. ನಮ್ಮ ಗೋದಾಮಿನಲ್ಲಿ ರಾತ್ರಿ ವೇಳೆಯಲ್ಲಿ ಹಬೀಬ ತಂದೆ ಸೈಯದ ಪಟೇಲ ಎಂಬುವನಿಗೆ ಕೆಲಸಕ್ಕೆಂದು ಇಟ್ಟಿಕೊಂಡಿದ್ದು ಇರುತ್ತದೆ. ಅವನು ರಾತ್ರಿ ವೇಳೆ ಬೇರೆಯವರ ಅಂಗಡಿಯಲ್ಲಿ ಮಲಗಿ ಕೊಂಡು ಬೆಳಿಗ್ಗೆ 6.00 ಗಂಟೆಯ ಸುಮಾರಿಗೆ ನಮ್ಮ ಗೋದಾಮಕ್ಕೆ ಬಂದು ನೋಡಿ ನನಗೆ ಪೋನ್ ಮಾಡಿ ತಿಳಿಸಿದೆನೆಂದರೆ ಮಾಲೀಕರೆ ಎದುರಗಡೆಯ ಚಾವಿ ಹಾಗೆ ಇದ್ದು ಒಳಗಡೆಯ ಅಲಮಾರ ಮಾತ್ರ ಒಡೆದ ಹಾಗೆ ಕಾಣುತ್ತಿದೆ ಅಂತಾ ಪೋನ್ ಮಾಡಿದ್ದಾಗ  ನಾನು ನೇರವಾಗಿ ಬಂದು ನೋಡಿದಾಗ ಗೋದಾಮಿನ ಚಾವಿ ಹಾಗೆ ಇದ್ದು ಗೋದಾಮನಿಲ್ಲಿರುವ ಅಲಮಾರ ಮಾತ್ರ ಒಡೆದಿದ್ದು ಇತ್ತು  ನಂತರ ನಾನು ಪರೀಶಲನೆ ಮಾಡಿ ನೋಡಿದ್ದಾಗ ಯೂನಿಕ್ ಜನರಲ್ ಸ್ಟೋರದ ಮಾಲೀಕರಾದ ರಾಜೇಶ ಪವಾರ ಕೊಟ್ಟಿರುವ 1,50,000/- ನಗದು ಹಣ  ಇರಲ್ಲಿಲ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಸದ ಮೇಲಿಂದ ಚೌಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.