POLICE BHAVAN KALABURAGI

POLICE BHAVAN KALABURAGI

10 October 2014

Gulbarga District Reported Crimes

ಕೊಲೆ ಪ್ರಕರಣ :
ಜೇವರ್ಗಿ ಠಾಣೆ : ಶ್ರೀ ನಾಗಣಗೌಡ ತಂದೆ ಶಿವಶರಣಪ್ಪಗೌಡ ಹೊಸಮನಿ ಸಾ|| ಗಂವಾರ ಹಾ|||| ಸಂಗಮೇಶ್ವರ ನಗರ ಗುಲಬರ್ಗಾ ಇವರು  ಸೊನ್ನ ಕ್ರಾಸ್ ಗೆ ಅಗ್ರೋ ಎಜೆನ್ಸಿ ಅಂಗಡಿ ಇಟ್ಟುಕೊಂಡು ವ್ಯಾಪಾರ ಮಾಡಿಕೊಂಡಿರುತ್ತೆನೆ. ನಾನು ದಿನಾಲು ಸೊನ್ನ ಕ್ರಾಸ್ ದಿಂದ ಗುಲಬರ್ಗಾಕ್ಕೆ ಹೊಗಿ ಬರುತ್ತೆನೆ. ನನ್ನ ತಮ್ಮನಾದ ಸಂಗಣ್ಣಗೌಡ ಹೊಸಮನಿ ಇವನು ಜೇವರ್ಗಿ ಪಟ್ಟಣದಲ್ಲಿ ದಂಡಗುಂಡ ಆಗ್ರೋ ಎಜೆನ್ಸಿ ಅಂಗಡಿ ಇಟ್ಟುಕೊಂಡು ವ್ಯಾಪಾರ ಮಾಡಿಕೊಂಡು ಆತನು ಜೇವರ್ಗಿ ಪಟ್ಟಣದ ವಿಧ್ಯಾ ನಗರದಲ್ಲಿ ಮನೆ ಮಾಡಿಕೊಂಡು ಹೆಂಡತಿ ಮಕ್ಕಳೊಂದಿಗೆ ವಾಸವಾಗಿರುತ್ತಾನೆ. ಸದರಿ ನಮ್ಮ ತಮ್ಮನು ದಿನಾಲು ಬೆಳಗ್ಗೆಯಿಂದ ಅಂಗಡಿಯಲ್ಲಿ ವ್ಯಾಪಾರ ಮಾಡಿಕೊಂಡು ರಾತ್ರಿ 09:30 ಗಂಟೆಯ ಸುಮಾರಿಗೆ ಅಂಗಡಿ ಬಂದ್ ಮಾಡಿಕೊಂಡು ದಿನದಲ್ಲಿ ವ್ಯಾಪಾರ ಮಾಡಿದ ಹಣ ತೆಗೆದುಕೊಂಡು ರಾತ್ರಿ ಮನೆಗೆ ಹೋಗುತ್ತಾನೆ. ದಿನಾಂಕ 09.10.2014 ರಂದು ರಾತ್ರಿ 09:45 ಗಂಟೆಯ ಸುಮಾರಿಗೆ ನಾನು ಸೊನ್ನ ಕ್ರಾಸ್ ನಿಂದ ಗುಲಬರ್ಗಾ ಕ್ಕೆ ಹೋಗುತ್ತಿರುವಾಗ ಜೇವರ್ಗಿ ಪಟ್ಟಣದ ಸಿದ್ದಾರ್ಥ ಲಾಡ್ಜ ಹಿಂಬಾಗ ಯಾರೋ ದುಷ್ಕರ್ಮಿಗಳು ನನ್ನ ತಮ್ಮನಿಗೆ ಗುಂಡು ಹಾರಿಸಿ ಕೊಲೆ ಮಾಡಿರುತ್ತಾರೆ ಅಂತ ಮಾಹಿತಿ ಗೊತ್ತಾಗಿ ತಕ್ಷಣ ನಾನು ಸ್ಥಳಕ್ಕೆ ಬಂದು ನೋಡಲಾಗಿ ಸೀರಿ ಕಾಂಪ್ಲೇಕ್ಷನ ಮುಂದುಗಡೆ ರೋಡಿನ ಮೇಲೆ ನನ್ನ ತಮ್ಮನ ಹೆಣ ಬಿದ್ದಿತ್ತು ನೊಡಲಾಗಿ ಅವನ ಮುಖಕ್ಕೆ ಮತ್ತು ದೇಹಕ್ಕೆ ಬಹಳಷ್ಟು ರಕ್ತ ಹತ್ತಿದ್ದು, ಎದೆಯ ಮೇಲೆ ಎಡಭಾಗ ಗುಂಡು ತಗುಲಿದ ಗಾಯ ಕಾಣುತ್ತಿತ್ತು. ನನ್ನ ತಮ್ಮನ ಮೋಟಾರ ಸೈಕಲ್ ನಂ ಕೆ.ಎ-32 ಈಈ-9236 ನೇದ್ದು ಸ್ವಲ್ಪ ಸಮೀಪದಲ್ಲಿಯೆ ಇತ್ತು. ದುಷ್ಕರ್ಮಿಗಳು ನನ್ನ ತಮ್ಮನಿಗೆ ಕೊಲೆ ಮಾಡಿ ಅವನ ಹತ್ತಿರ ಇದ್ದ ಹಣದ ಬ್ಯಾಗ್ ಕಸಿದುಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಅಫಜಲಪೂರ ಠಾಣೆ : ಶ್ರೀಮತಿ ಶಾಂತಾಬಾಯಿ ಗಂಡ ಶ್ರೀಶೈಲ ಬೊರುಟಿ || ಕೆರಜಗಿ ಇವರ ಅಣ್ಣತಮ್ಮಕಿಯವರಾದ ಮಳಸಿದ್ದಪ್ಪ ತಂದೆ ಸಾಯಬಣ್ಣ ಬೊರುಟಿ ಇವರು ನಮ್ಮೊಂದಿಗೆ ಕೆಲವು ತಿಂಗಳಿಂದ ಅವರ ಮಕ್ಕಳ ವಿಷಯಕ್ಕೆ ಸಂಬಂಧ ತಕರಾರು ಮಾಡಿಕೊಳ್ಳುತ್ತಾ ಬಂದಿದ್ದು ದಿನಾಂಕ 07-10-2014 ರಂದು 09;00 .ಎಂ ಸುಮಾರಿಗೆ ನಮ್ಮ ಮನೆಯಲ್ಲಿ ನಾನು ಮತ್ತು ನನ್ನ ಮಗ ಸಿದ್ದಪ್ಪ ಇದ್ದಾಗ ನಮ್ಮ ಅಣ್ಣತಮ್ಮಕಿಯವರಾದ ಕಸ್ತೂರಬಾಯಿ ಗಂಡ ಮಳಸಿದ್ದಪ್ಪ ಬೊರುಟಿ ಮತ್ತು ಅವರ ಸೊಸೆ ಮಹಾಂತಬಾಯಿ ಬೊರುಟಿ ರವರು ನಮ್ಮ ಮನೆ ಹತ್ತಿರ ಬಂದ ನನಗೆ ಅವಾಚ್ಯವಾಗಿ ಬೈಯುತ್ತಿದ್ದರು, ಆಗ ನಾನು ಅವರ ಹತ್ತಿರ ಹೋಗಿ ಸುಮ ಸುಮನೆ ಯಾಕ ಬೈತಿರಿ ಅಂತಾ ಕೇಳಿದ್ದಕ್ಕೆ ಸದರಿ ಕಸ್ತೂರಿಬಾಯಿ ಇವಳು ನಮ್ಮ ಮಕ್ಕಳಿಗೆ ನೀನು ಯಾವುದೆ ಕೆಲಸ ಹಚ್ಚ ಬೇಡಾ ಅಂತಾ ಹೇಳಿದರು ಕೇಳುತ್ತಿಲ್ಲ, ಇವತ್ತ ನಮ್ಮ ಮಕ್ಕಳಿಗೆ ಅಂಗಡಿಗಿ ಯಾಕ ಕಳಿಸಿದಿ, ನಿನಗ ಬಹಳ ಸೊಕ್ಕು ಬಂದಿದೆ ರಂಡಿ ಅಂತಾ ಅಂದಳು ಆಗ ನಾನು ಸದರಿಯವರಿಗೆ ನಾನು ನಿಮ್ಮ ಮಕ್ಕಳಿಗೆ ಯಾವುದೆ ಕೆಲಸ ಹಚ್ಚಿಲ್ಲಾ ಅಂತಾ ಹೇಳಿದರು ಕಸ್ತೂರಬಾಯಿ ಇವಳು ನನ್ನ ಕುದಲ ಹಿಡಿದು ಎಳದಾಡಿದಳು ಆಗ ಅವಳ ಸೊಸೆ ಮಹಾಂತಬಾಯಿ ಇವಳು ತನ್ನ ಕೈಯಿಂದ ನನ್ನ ಬೆನ್ನಿನ ಮೇಲೆ ಹೊಡೆದು ಗಾಯಗೊಳಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.    
ಅಪಘಾತ ಪ್ರಕರಣ :
ಸಂಚಾರಿ ಠಾಣೆ : ಶ್ರೀಮತಿ ವಿಜಯಲಕ್ಷ್ಮಿ ಗಂಡ ಅನೀಲಕುಮಾರ ಬಿರಾದಾರ ಇವರು  ದಿನಾಂಕ : 03-10-14 ರಂದು ರಾತ್ರಿ ಸಮಯದಲ್ಲಿ ನಾನು ಬಿಲಗುಂದಿ ಗ್ರಾಮದಲ್ಲಿದ್ದಾಗ ನನ್ನ ನಾದನಿಯಾದ ರೇವತಿ ಗಂಡ ವಿಜಯಕುಮಾರ ಇವಳು ಫೊನಮಾಡಿ ತಿಳಿಸಿದ್ದೆನೇಂದರೆ ದಿನಾಂಕ 3/10/2014 ರಂದು ರಾತ್ರಿ 11.15 ಗಂಟೆ ಸುಮಾರಿಗೆ ಹುಮನಾಬಾದ ರೋಡ ಅಣಕಲ ಪೇಟ್ರೊಲಬಂಕ ಎದುರು ರೋಡಿನ ಮೇಲೆ ಅನೀಲಕುಮಾರ ಇತನಿಗೆ ಯಾವುದೊ ಒಂದು ಕಾರ ಚಾಲಕ ಎಕ್ಸಿಡಂಟ ಮಾಡಿಕೊಂಡು ಹೋಗಿರುತ್ತಾನೇ . ಆತನನ್ನು ಸಂಗಮೇಶ ಬಿಲಗುಂದಿ ಇತನು 108 ಅಂಬುಲೇನ್ಸ ನಲ್ಲಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಸೇರಿಕೇಮಾಡಿರುತ್ತಾನೇ. ಅಂತ ತಿಲಿಸಿದ ನಂತರ ನಾನು ದಿನಾಂಕ 4/10.14ರಂದು ನಮ್ಮುರಿನಿಂದ ನನ್ನ ಸಂಗಡ ಮೇಲಗಿರೇಪ್ಪಾ ಇತನ್ನು ಕರೆದುಕೊಂಡು ಗುಲಬರರ್ಗಾ ಜಿಲ್ಲಾ ಸರಕಾರಿ ಆಸ್ಪತ್ರೆಗೆಬಂದು ನನ್ನ ಗಂಡನನ್ನು ನೋಡಲು ಆತನೀಗೆ ತೆಲೆಗೆ ಭಾರಿರಕ್ತ ಗಾಯವಾಗಿ ಕುತ್ತಿಗೆಹತ್ತಿರ ಕೊಯಿದಂತೆ ರಕ್ತ ಗಾಯವಾಗಿ ಎರಡು ಕೈಗಳಿಗೆ ತರಚಿದಗಾಯವಾಗಿದ್ದು .ನನ್ನ ಗಂಡ ಮಾತನಾಡುವ ಸ್ತಿತಿಯಲ್ಲಿ ಇರುವುದಿಲ್ಲಾ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು  ದಿನಾಂಕ: 3-10-14 ರಂದು ರಾತ್ರಿ ರಸ್ತೆ ಅಪಘಾತದಲ್ಲಿ ಭಾರಿ ಗಾಯಹೊಂದಿದ್ದ ನನ್ನ ಗಂಡನನ್ನು ಹೆಚ್ಚಿನ ಉಪಚಾರಕ್ಕೆ ನಗರದ ಸತ್ಯ ಖಾಸಗಿ ಆಸ್ಪತ್ರೆಗೆ ಸೇರಿಕೆ ಮಾಡಿದ ನಂತರ ಆತನ ನ್ನು ಹೇಚ್ಚಿನ ಉಪಚಾರಕ್ಕೆ ಒಯುವಂತೆ ವೈದ್ಯರು ತಿಳಿಸಿದ್ದರಿಂದ ನನ್ನ ಗಂಡನನ್ನು ಒಂದು ಖಾಸಗಿ ಜೀಪಿನಲ್ಲಿ ಕರೆದುಕೊಂಡು ನಾನು ಮತ್ತು ಅರುಣಕುಮಾರ . ಲಕ್ಷ್ಮಿಪುತ್ರ ಹಾಗು ಮೇಲಗಿರೇಪ್ಪಾ ಕುಡುಕೊಂಡು ಗುಲಬರರ್ಗಾ ದಿಂದ ಸೋಲಾಪುರಕ್ಕೆ ಒಯುತ್ತಿರುವಾಗ ಲಾಡಚಿಂಚೋಳಿ ಹತ್ತಿರ ಹೋಗುತ್ತಿದ್ದಾಗ ರಾತ್ರಿ 10.15 ಗಂಟೆ ಸುಮಾರಿಗೆ ಮಾರ್ಗಮದ್ಯದಲ್ಲಿ ನನ್ನ ಗಂಡ ಅನೀಲಕುಮಾರ ಮ್ರತಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.                                                                            

09 October 2014

Gulbarga District Reported Crimes

ಅಪಹರಣ ಪ್ರಕರಣ :
ಸೇಡಂ ಠಾಣೆ : ದಿನಾಂಕ: 06-10-2014 ರಂದು ರಾತ್ರಿ 9 ಗಂಟೆ ಸುಮಾರಿಗೆ ನಾನು ಮತ್ತು ನನ್ನ ಹೆಂಡತಿ ಪದ್ಮಮ್ಮಾ, ಮಕ್ಕಳಾದ, ಕಾವೇರಿ, ಶ್ರೀಧರ, ನಮ್ಮ ತಂದೆಯಾದ ಸುಭಾಷಬಾಬು ,ತಾಯಿಯಾದ ಶಕುಂತಲಬಾಯಿ ಎಲ್ಲರೂ ಊಟ ಮಾಡಿಕೊಂಡು ಮನೆಯಲ್ಲಿ ಮಗಲಗಿಕೊಂಡಾಗ ರಾತ್ರಿ 10 ಗಂಟೆ ಸುಮಾರಿಗೆ ನನ್ನ ಮಗಳು ಕಾವೇರಿ ಇವಳು ಬರ್ಹಿದೆಸೆಗೆ ಹೋಗಿ ಬರುತ್ತೆನೆ ಅಂತಾ ಹೇಳಿ ಹೋಗಿದಳು.  ಸ್ವಲ್ಪ ಹೊತ್ತು ನೋಡಿದ್ದು  ಅವಳು ಬರದ ಕಾರಣ ನಾನು ಮತ್ತು ನನ್ನ ಹೆಂಡತಿ  ಮನೆಯ ಸುತ್ತ ಮುತ್ತ  ಹುಡಕಾಡಲಾಗಿ ನನ್ನ ಮಗಳು ಕಾಣಸಲಿಲ್ಲಾ. ಮತ್ತು ಬೆಳಿಗ್ಗೆ ನಮ್ಮ  ಸಂಭಂದಿಕರ ಹತ್ತಿರ ಹಾಗು ಎಲ್ಲಾ ಕಡೆಗೆ ವಿಚಾರಿಸಲಾಗಿ ನನ್ನ ಮಗಳ ಬಗ್ಗೆ ಗೊತ್ತಾಗಿರುವುದಿಲ್ಲಾ.ರಾಜಕುಮಾರ ಇತನು ಆಗಾಗ ನನ್ನ  ಮಗಳಿಗೆ ಚುಡಾಯಿಸುವುದು, ಪಿಡಿಸುವುದು  ಮಾಡಿದ್ದರಿಂದ ಆತನೇ ನನ್ನ ಮಗಳನ್ನು ರಾತ್ರಿ 10 ಗಂಟೆಯ ಸುಮಾರಿಗೆ ಬರ್ಹಿದಸೆಗೆ ಹೋದಾಗ ಯಾವುದೋ ಉದ್ದೇಶದಿಂದ  ಅಪ್ರಾಪ್ತ ವಯಸ್ಕಳಾದ ನನ್ನ ಮಗಳಾದ ಕಾವೇರಿ ಇವಳಿಗೆ ಅಪಹರಣ ಮಾಡಿಕೊಂಡು ಹೋಗಿರಬಹುದು  ಅಂತಾ ಶ್ರೀ ರವೀಂದ್ರ ತಂದೆ ಸುಭಾಷಬಾಬು ಮಂಡಿಗಿ  ಸಾ: ಹಾಬಾಳ(ಟಿ) ಗ್ರಾಮ ತಾ: ಸೇಡಂ   ಇವರು  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಮಾಹಾಗಾಂವ ಠಾಣೆ : ಶ್ರೀ ರಾಮಚಂದರ ತಂದೆ ಗಣಪತಿ ಕಟಕೆ ಸಾ : ಹರಸೂರ  ರವರು ದಿನಾಂಕ: 7/10/2014 ರಂದು ರಾತ್ರಿ 08-20 ಗಂಟೆಗೆ ತನ್ನ ಟಿವಿಎಸ್ ಮೋ.ಸೈಕಲ ಮೇಲೆ ಮಹಾಗಾಂವ ಕ್ರಾಸದಿಂದ ಗುಲಬರ್ಗಾಕ್ಕೆ ಹೋಗುತ್ತಿರುವಾಗ ಗುಲಬರ್ಗಾ ಹುಮನಾಬಾದ ಎನ್.ಹೆಚ್.218 ನೇದ್ದರ ರೋಡಿನ ಕುರಿಕೋಟಾ ಸೀಮಾಂತರ ಗಂಡೋರಿ ನಾಲಾ ಹತ್ತಿರ ಆರೋಪಿತನು ಹಿಂದಿನಿಂದ ತನ್ನ ಹಿರೋ ಹೊಂಡಾ ಫ್ಯಾಶನ ಮೋ.ಸೈಕಲ ನಂ. ಕೆಎ:32, ಎಕ್ಸ: 790 ನೇದ್ದನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿ ಮೋ.ಸೈಕಲಕ್ಕೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ ಗಾಯಗೋಳಿಸಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

07 October 2014

Gulbarga District Reported Crimes

ಅಪಘಾತ ಪ್ರಕರಣಗಳು :
ಸಂಚಾರಿ ಠಾಣೆ : ದಿನಾಂಕ :30-09-14 ರಂದು 6 ಪಿಎಂ ಕ್ಕೆ ಸಂತ್ರಾಸವಾಡಿ ಮೇಡಿಕೇರ್ ಆಸ್ಪತ್ರೆ ಎದರುಗಡೆ ರೋಡಿನ ಮೇಲೆ ಮೋಟಾರ ಸೈಕಲ ನಂ ಕೆಎ: 32 – ಇಸಿ 4706 ನೇದ್ದರ ಚಾಲಕ ಅತೀ ವೇಗವಾಗಿ ಮತ್ತು ಆಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ನಡೆದುಕೊಂಡು ಹೋಗುತ್ತಿದ್ದ ಶ್ರೀಮತಿ ರಾಧಾಬಾಯಿ ಗಂಡ ಶಿವರಾಮ ಸಿಂಗ್ ಠಾಕೂರ ಸಾ: ನರೋಣಾ ಇವರ ಗಂಡನಾದ ಶಿವರಾಮ ಸಿಂಗ್ ಇತನಿಗೆ ಡಿಕ್ಕಿ ಪಡಿಸಿ ಅಪಘಾತ ಮಾಡಿ ತನ್ನ ಮೋಟಾರ ಸೈಕಲ ಸಮೇತ ಓಡಿ ಹೋಗಿದ್ದು ಅಪಘಾತದಲ್ಲಿ ತನ್ನ ಗಂಡನಿಗೆ ತಲೆಗೆ ಭಾರಿ ಪಟ್ಟಾಗಿರುತ್ತದೆ ಅಂತಾ ಇತ್ಯಾಧಿ ಫಿರ್ಯಾಧಿಯ ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ದಿನಾಂಕ: 30-09-14 ರಂದು ರಸ್ತೆ ಅಪಘಾತದಲ್ಲಿ ಭಾರಿ ಗಾಯಹೊಂದಿದ್ದ ನನ್ನ ಗಂಡನನ್ನು ಹೆಚ್ಚಿನ ಉಪಚಾರಕ್ಕೆ ನಗರದ ಸತ್ಯ ಖಾಸಗಿ ಆಸ್ಪತ್ರೆಗೆ ಸೇರಿಕೆ ಮಾಡಿದ ನಂತರ ಆತನ ಉಪಚಾರಕ್ಕೆ ನಮ್ಮ ಹತ್ತಿರ ಹಣ ಇರದ ಕಾರಣ ಪುನಃ ನನ್ನ ಗಂಡನನ್ನು ಸತ್ಯ ಆಸ್ಪತ್ರೆಯಿಂದ ದಿನಾಂಕ; 02-10-14 ರಂದು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿದ ನಂತರ ಅಪಘಾತದಲ್ಲಿ ನನ್ನ ಗಂಡನಿಗೆ ತಲೆಗೆ ಆದ ಭಾರಿ ಪೆಟ್ಟಿನಿಂದ ನನ್ನ ಗಂಡ ಚೇತರಿಸಿಕೊಳ್ಳದೆ ಇಂದು ದಿನಾಂಕ: 06-10-14 ರಂದು 4-40 ಪಿಎಂ ಕ್ಕೆ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಉಪಚಾರ ಹೊಂದುತ್ತಿದ್ದಾಗ ಮೃತ ಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 
ಸಂಚಾರಿ ಠಾಣೆ : ದಿನಾಂಕ 06-10-2014 ರಂದು ಬೆಳಿಗ್ಗೆ 0600 ಘಮಟೆಯ ಸುಮಾರಿಗೆ ಸೇಡಂ ರೋಡ ದರ್ಶನ ಟಾವರ ಎದುರುಗಡೆ ರೋಡಿನ ಮೇಲೆ ಆರೋಪಿ ಸಿದ್ದಾರೂಢ ಈತನು ತನ್ನ ಗೂಡ್ಸ ಅಪೆ ಟಂ-ಟಂ ನಂಬರ ಕೆ.ಎ.32ಸಿ2432 ನೇದ್ದರಲ್ಲಿ ತರಕಾರಿ ತುಂಬಿಕೊಂಡು ಹಿಂದೆ ಟಂ-ಟಂ ದಲ್ಲಿ ಫಿರ್ಯಾಧಿ ಖಾಜಾಬೀ ಗಂಡ ಮೈನೂದ್ದೀನ್ ಮತ್ತು ಭೀಮಬಾಯಿ ಗಂಡ ಮಲ್ಕಣ್ಣ ಇವರನ್ನು ಕೂಡಿಸಿಕೊಂಡು ಕಣ್ಣಿ ಮಾರ್ಕೇಟದಿಂದ ಕಾಳಗಿಗೆ ಹೋಗುವ ಕುರಿತು ಸೇಡಂ ರೋಡ ಮೂಲಕ ಹೋಗುತ್ತಿದ್ದಾಗ ಟಂ-ಟಂ ಚಾಲಕನು ತನ್ನ ಗೂಡ್ಸ ವಾಹನವನ್ನು ಅತೀವೇಗ ಮತ್ತು ಅಲ್ಕಷತನದಿಂದ ಚಲಾಯಿಸಿಕೊಂಡು ಹೋಗಿ ಒಮ್ಮೇಲೆ ಕಟ್ಟ ಹೊಡೆದಿದ್ದರಿಂದ ಟಂ-ಟಂದಲ್ಲಿ ಹಿಂದೆ ಕುಳಿತಿದ್ದ ಫಿರ್ಯಾದಿ ಕೆಳಗೆ ಬಿದ್ದು ಗಾಯಗೊಂಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂಚಾರಿ ಠಾಣೆ : ದಿನಾಂಕ 06-10-2014 ರಂದು 1400 ಪಿ.ಎಮ್ ಕ್ಕೆ ಸಂತ್ರಾಸ ವಾಡಿಯ ಮೇನ್ ರೋಡಿನಲ್ಲಿರುವ ಬಾಬು ತಹಾರಿ ಹೋಟೆಲ ಹತ್ತಿರ ರೋಡಿನ ಮೇಲೆ ಫಿರ್ಯಾದಿಯ ಮಗನಾದ ಮಹ್ಮದ ಜೋಹೆಬ ಈತನು ನಡೆದುಕೊಂಡು ರಸ್ತೆ ದಾಟುತ್ತಿದ್ದಾಗ ಮೋಟರ ಸೈಕಲ್ ನಂಬರ ಕೆ.ಎ 32 ಡಬ್ಲ್ಯೂ1856 ನೇದ್ದರ ಚಾಲಕ ತನ್ನ ಮೋಟರ ಸೈಕಲ್  ಅತೀವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಪಡೆಯಿಸಿ ಅಪಘಾತಮಾಡಿ ತನ್ನ ಮೋಟರ ಸೈಕಲ್ ಅಲ್ಲಿಯೇ ಬಿಟ್ಟು ಓಡಿಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.