POLICE BHAVAN KALABURAGI

POLICE BHAVAN KALABURAGI

19 August 2014

Gulbarga District Reported Crimes

ವರದಕ್ಷಣೆ ಕಿರುಕಳ ಪ್ರಕರಣ :
ಆಳಂದ ಠಾಣೆ : ಶ್ರೀಮತಿ  ರಾಜಶ್ರೀ ಗಂಡ ಶಿವರಾಯ ಉಜಳಾಂಬೆ ಸಾ|| ಚಿತಲಿ  ರವರಿಗೆ ದಿನಾಂಕ 24-04-2014 ರಂದು ಚಿತಲಿ ಗ್ರಾಮದಲ್ಲಿ ಧಾರ್ಮಿಕ ಪಧ್ಧತಿಯಂತೆ ಮದುವೆಯಾಗಿದ್ದು ಆಗ 3,51,000/- ರೂಪಾಯಿ ಹಾಗೂ 25 ಗ್ರಾಂ ಬಂಗಾರ ವರದಕ್ಷಿಣೆ ರೂಪದಲ್ಲಿ ಕೊಡಬೇಕು ಅಂತಾ ಮಾತುಕತೆ ಪ್ರಕಾರ 1,51,000/- ರೂಪಾಯಿ ಹಾಗೂ 35 ಗ್ರಾಂ ಬಂಗಾರ ಕೊಟ್ಟಿದ್ದು ಉಳಿದಿದ್ದು ಕೊಡಲಾರದಿಕ್ಕೆ ಸತತವಾಗಿ ಕಿರುಕುಳ ಕೊಡುತ್ತಾ ಬಂದು ನನ್ನ ಗಂಡ ಶಿವರಾಯ ತಂದೆ ಸಿದ್ರಾಮಪ್ಪಾ, ಅತ್ತೆ ಮಹಾದೇವಿ ಗಂಡ ಸಿದ್ರಾಮಪ್ಪಾ, ಮಾವ ಸಿದ್ರಾಮಪ್ಪಾ ತಂದೆ ಈರಣ್ಣಾ, ಮೈದುನ ಶರಣಬಸಪ್ಪಾ ತಂದೆ ಸಿದ್ರಾಮಪ್ಪಾ, ನಾದನಿ ಶ್ರೀದೇವಿ ತಂದೆ ಸಿದ್ರಾಮಪ್ಪಾ, ಮೈದುನ ನಾಗೇಂದ್ರಪ್ಪಾ ತಂದೆ ಸಿದ್ರಾಮಪ್ಪಾ, ರವರು ಸಾ|| ಎಲ್ಲರೂ ಚಿತಲಿ ರವರು ಹೊಡೆಬಡೆ ಮಾಡಿ ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡಿ ವರದಕ್ಷಿಣೆ ತರುವಂತೆ ಪೀಡಿಸಿ ಅವಾಚ್ಯವಾಗಿ ಬೈದು ಜೀವದ ಬೆದರಿಕೆ ಹಾಕಿ ಹೆಣ್ಣು ಮಗು ಹುಟ್ಟಿದೆ ಅಂತಾ ಕಿರುಕುಳ ಕೊಟ್ಟಿರುತ್ತಾರೆ, ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕರ್ತವ್ಯಕ್ಕೆ ಅಡೆ ತಡೆ ಮಾಡಿ ಹಲ್ಲೆ ಮಾಡಿದ ಪ್ರಕರಣ :
ಮಳಖೇಡ ಠಾಣೆ : ದಿನಾಂಕ 18-8-2014 ರಂದು ಸಾಯಂಕಾಲ 6-45 ಗಂಟೆಗೆ ಹಣಮಂತ ಹೋಮಗಾರ್ಡ 293 ಮಳಖೇಡ ಠಾಣೆ ರವರು ಮದ್ಯಾನ 2-00 ಗಂಟೆಯಿಂದ ಮಳಖೇಡ ಎಪಿಎಂಸಿ ಮುಂದುಗಡೆ ಟ್ರಾಪಿಕ ಕಂಟ್ರೋಲ ಕರ್ತವ್ಯ ನಿರ್ವಹಿಸುತ್ತಿರುವಾಗ ಅಟೋ ನಂ.ಕೆಎ-32ಬಿ-0901 ನೇದ್ದರ ಚಾಲಕನಿಗೆ ಅಟೋ ತೆಗೆಯಲು ಹೇಳಿದಾಗ ಬೈದಿದ್ದು ನಂತರ ಸ್ವಲ್ಪ ಸಮಯದಲ್ಲಿ ಒಬ್ಬ ಕುಡಿದ ಅಮಲಿನಲ್ಲಿ ಇದ್ದ ಮನುಷ್ಯನು ಬಂದು ರೋಡಿನ ನಡುವೆ ಕುಳಿತಾಗ ಅವನಿಗೆ ರಸ್ತೆಯ ಪಕ್ಕಕ್ಕೆ ಕೂಡಿಸಿದಾಗ ಅವನು ತಾನೆ ಬಿದ್ದು ತಲೆಗೆ ಗಾಯವಾದಾಗ ಅಟೋ ನಂ.ಕೆಎ-32ಬಿ-0901 ನೇದ್ದರ ಚಾಲಕನಾದ ನಾಗರಾಜ ಸಂಗಡ 2-3 ಜನರು ಬಂದು ತನಗೆ ನೀನು ನಮ್ಮ ಸಂಬಂಧಿಕರಿಗೆ ಹೊಡೆದಿದ್ದಿ ಮಗನೆ ಅಂತಾ ಜಗಳ ತೆಗೆದು ಕೈಯಿಂದ ಹೊಡೆಬಡೆ ಮಾಡಿ ಅವಾಚ್ಯವಾಗಿ ಬೈದು ತನಗೆ ಕರ್ತವ್ಯ ನಿರ್ವಹಿಸಲು ಅಡೆತಡೆ ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಳಖೇಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ವಿಶ್ವವಿದ್ಯಾಲಯ ಠಾಣೆ : ಶ್ರೀ ಶಿವಾನಂದ ತಂದೆ ಶೇಶಪ್ಪ ವಿಶ್ವಕರ್ಮ ಸಾ: ಆಶಾ ನಗರ ಕುರಕುಂಟಾ ತಾ: ಸೇಡಂ ಜಿ:ಗುಲಬರ್ಗಾ ರವರ ತಮ್ಮ ವೀರಭದ್ರ ಇತನು ಸೇಡಂದಲ್ಲಿ ಕಾರ್ಪೆಂಟರ ಕೆಲಸ ಮಾಡುತ್ತಿದ್ದರಿಂದ ದಿನಾಂಕ: 18/08/14 ರಂದು ಬೆಳಿಗ್ಗೆ 7:00 ಗಂಟೆ ಸುಮಾರಿಗೆ ವಿಶ್ವವಿದ್ಯಾಲಯ ಠಾಣೆ ಸಿಬ್ಬಂದಿಯವರು ಪೋನ ಮಾಡಿ ವಿಷಯ ತಿಳಿಸಿದ್ದೆನೆಂದರೆ ಗುಲಬರ್ಗಾ-ಸೇಡಂ ಮುಖ್ಯ ರಸ್ತೆಯ ಶ್ರೀನಿವಾಸ ಸರಡಗಿ ಕ್ರಾ ದಾಟಿ 1 km ದೂರದಲ್ಲಿ ನಿಮ್ಮ ತಮ್ಮ ವೀರಭದ್ರ ಅಪಘಾತವಾಗಿ ಮೃತಪಟ್ಟಿರುತ್ತಾನೆ ಬಂದು ನೋಡಲು ತಿಳಿಸಿದ್ದರಿಂದ ನಾನು ಗಾಬರಿಗೊಂಡು ಸಂಗಡ ನಾಗರಾಜ ತಂದೆ ಬಾಲಪ್ಪ ದೇಗಲಮಡಿ ಇವರಿಗೆ ಕರೆದುಕೊಂಡು ಬಂದು ಸ್ಥಳಕ್ಕೆ ಬಂದು ನನ್ನ ತಮ್ಮನಿಗೆ ನೋಡಲು ಅಪಘಾತದಲ್ಲಿ ಮುಖ ಪೂರ್ತಿ ಜಜ್ಜಿ ಹಣೆಯ ಭಾಗ ಹೊಡೆದು ಹೋಗಿದ್ದು. ಎಡಗೈ ಮೊಳಕೈ ಹತ್ತಿರ ರಕ್ತಗಾಯವಾಗಿ ಮುರಿದು ಹೋಗಿರುತ್ತದೆ. ನನ್ನ ತಮ್ಮ ನಮ್ಮ ಮನೆಯ ಬಾಜು ಇರುವ ನಾಗರಾಜ ಇವರ ಮೊಟಾರ ಸೈಕಲ ನಂ. KA-32-EC-3268 ನೇದ್ದನ್ನು ತೆಗೆದುಕೊಂಡು ನಿನ್ನೆ ದಿನಾಂಕ: 17/08/14 ರಂದು ಸಾಯಂಕಾಲ 4-30 ಪಿಎಮಕ್ಕೆ ತೆಗೆದುಕೊಂಡು ನಂತರ ಸೇಡಂದಿಂದ ಗುಲಬರ್ಗಾಕ್ಕೆ ಹೋಗುತ್ತಿರುವಾಗ ರಾತ್ರಿ ಅಂದಾಜು 10:00 ಗಂಟೆಯಿಂದ ದಿನಾಂಕ: 18/08/14 ರಂದು 00:00 ಗಂಟೆಯ ಅವಧಿಯಲ್ಲಿ ಯಾವುದೊ ಭಾರಿ ವಾಹನ ನನ್ನ ತಮ್ಮನಿಗೆ ಡಿಕ್ಕಿಪಡಿಸಿ ಗಾಯಪಡಿಸಿ ವಾಹನ ಸಮೇತ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ವಿಶ್ವವಿದ್ಯಾಲಯ ಠಾಣೆಯಲ್ಲಿ ಪ್ರಕರಣ ಧಾಖಲಾಗಿದೆ.

18 August 2014

Gulbarga District Reported Crimes

ಅಪಘಾತ ಪ್ರಕರಣಗಳು :
ಮಾಡಬೂಳ ಠಾಣೆ : ದಿನಾಂಕ: 10-08-14 ರಂದು 9 ಎಎಂದ ಸುಮಾರಿಗೆ ಶ್ರೀ ಪ್ರಶಾಂತ ತಂದೆ ಸಿದ್ದಣ್ಣ  ರವರು ಮಗಳಿಗೆ ಟೆಂಗಳಿ ಕ್ರಾಸ ಹತ್ತಿರ ಬಿಟ್ಟು ಬರುತ್ತೇನೆ ಅಂತ ತನ್ನ ಮೋಟರ ಸೈಕಲ ನಂ. ಕೆಎ 32 ವಾಯಿ 4001 ನೇದ್ದರ ಮೇಲೆ ಕರೆದುಕೊಂಢು ಹೋಗಿ ಮರಳಿ ಟೆಂಗಳಿ ಕ್ರಾಸ ದಾಟಿ ವೇರ ಹೌಸ ಹತ್ತಿರ ಬರುತ್ತಿರುವಾಗ ಎದರಿನಲ್ಲಿ ಕೆ.ಎಸ್.ಆರ್.ಟಿ.ಸಿ ಬಸ್ಸ ನಂ. ಕೆಎ- 32 ಎಫ್ 1876 ನೇದ್ದರ ಚಾಲಕ ತನ್ನ ಬಸ್ಸನ್ನು ಅತಿವೇಗ ಹಾಗೂ ನಿಷ್ಕಾಳಜಿತನದಿಂದ ನಡೆಯಿಸಿ ನಿಲುವ ಯಾವ ಸೂಚನೆ ನೀಡದೆ ಒಮ್ಮೆಲ್ಲೆ ಬ್ರೇಕ ಹಾಕಿದ್ದರಿಂದ ಬಸ್ಸಿನ ಹಿಂದೆ ಮೋಟರ ಸೈಕಲ ಬರುತ್ತಿದ ನನ್ನ ಮಗ ಪ್ರಶಾಂತನಿಗೆ ಬಸ್ಸ ಹತ್ತಿ ಹಣೆಗೆ ಭಾರಿ ರಕ್ತಗಾಯ ತಲೆಗೆ ಎದೆಗೆ ಭಾರಿ ಗುಪ್ತಗಾಯವಾಗಿ ಮೂಗಿನಿಂದ ಕಿವಿಯಿಂದ ರಕ್ತ ಬರುತ್ತಿದ್ದು 2 ಕಾಲು ಕೈಗಳಿಗೆ ರಕ್ತಗಾಯವಾಗಿ ಮಾತನಾಡುವ ಸ್ಥಿರಿಯಲ್ಲಿರದೆ ಘಟನೆಯನ್ನು ನಮ್ಮ ಗ್ರಾಮದ ಯಶವಂತರಾವ ಬೊಮ್ಮ ಹಾಗೂ ಇತರರೂ ನೋಡಿದ್ದು ಘಟನೆ ನಡೆದಾಗ ಇಂದು ದಿನಾಂಕ: 10-08-14 ರಂದು 9-30 ಎಎಂ ಆಗಿರಬಹುದು ಬಸ್ಸ ಚಾಲಕ ತನ್ನ ಬಸ್ಸನ್ನು ಅಲೇ ಬಿಟ್ಟು ಓಡಿ ಹೋಗಿದ್ದು ಜಿ.ವಿ.ಆರ್ ಅಂಬುಲೇನ್ಸದಲ್ಲಿ ಮಗನಿಗೆ ಉಪಚಾರ ಕುರಿತು ಹಾಕಿಕೊಂಡು ಬಸವೇಶ್ವರ ಆಸ್ಪತ್ರೆ ಗುಲಬರ್ಗಾದಲ್ಲಿ ತಂದು ಸೇರಿಕೆ ಮಾಡಿರುತ್ತೇವೆ ಅಂತಾ ಶೋಭಾ ಗಂಡ ಸಿದ್ದಣ್ಣಾ ಅಂಕಲಗಿ ಸಾ: ಮಲಕೂಡ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಡಬೂಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಸಂಚಾರಿ ಠಾಣೆ : ದಿನಾಂಕ 16-08-2014 ರಂದು 9-00 ಪಿ.ಎಮ್ ಕ್ಕೆ ಶ್ರೀ ಆಶೀಫ ಪಟೇಲ ತಂದೆ ಜಾಫರ ಪಟೇಲ, ಸಾಃ ಕುನ್ನುರ, ತಾಃ ಚಿತ್ತಾಪೂರ ರವರು ಇಸ್ಲಾಮಾಬಾದ ಕಾಲೂನಿಯಲ್ಲಿರುವ ತನ್ನ ಅಣ್ಣನ ಮನೆಗೆ ಹೋಗಬೇಕೆಂದು ತನ್ನ ಮೋಟಾರ ಸೈಕಲ ನಂ. ಕೆ.ಎ 32 ವಿ 5152 ನೇದ್ದನ್ನು ಚಲಾಯಿಸಿಕೊಂಡು ಜಿಲ್ಲಾ ಸರ್ಕಾರಿ ಆಸ್ಪತ್ರೆ ಕಡೆಯಿಂದ ಸೇಡಂ ರಿಂಗ ರೋಡ ಕಡೆಗೆ ಹೋಗುತ್ತಿದ್ದಾಗ ವನಿತೇಶ ಬಾರ & ರೆಸ್ಟೊರೆಂಟ ಎದರುಗಡೆ ರೋಡಿನ ಮೇಲೆ ಕೆ.ಎಸ್.ಆರ್.ಟಿ.ಸಿ ಬಸ್ ಚಾಲಕ ಮನೋಹರ ಈತನು ತನ್ನ ಬಸ್ಸನ್ನು ಸೇಡಂ ರಿಂಗ ರೋಡ ಕಡೆಯಿಂದ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿ ಮೋಟಾರ ಸೈಕಲಕ್ಕೆ ಎದರುಗಡೆಯಿಂದ ಡಿಕ್ಕಿ ಹೊಡೆದು ಅಪಘಾತ ಪಡಿಸಿದ್ದರಿಂದ ಫಿರ್ಯಾದಿ ಮೊಟಾರ ಸೈಕಲ ಸಮೇತ ಕೆಳಗೆ ಬಿದ್ದು ಅಪಘಾತದಲ್ಲಿ ಫಿರ್ಯಾದಿಗೆ ಬಲಗಣ್ಣಿನ ಹುಬ್ಬಿನ ಹತ್ತಿರ, ಬಾಯಿ ಮೇಲತುಟಿ ಸೀಳಿ ರಕ್ತಗಾಯವಾಗಿದ್ದು ಅಲ್ಲದೇ ಎದೆಗೆ ಗುಪ್ತ ಪೆಟ್ಟಾಗಿರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ  ಪ್ರಕರಣ ದಾಖಲಾಗಿದೆ.
ಜಾತಿ ನಿಂನೆ ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀ ಸಚಿನ ಕುಮಾರ ತಂದೆ ಶ್ರೀಮಂತ ಹೊಟಕರ ಇವರು ವಿಜಯಕುಮಾರ ತಂದೆ ಮಲ್ಲಿಕಾರ್ಜುನ ಇತನಿಗೆ ಹೋದ ವರ್ಷ ಆತನ ಮನೆಯ ಅಡಚಣೆಗೋಸ್ಕರ ಆತನಿಗೆ 1,40000/-ರೂಗಳು ಸಾಲವಾಗಿ ಕೊಟ್ಟಿರುತ್ತೇನೆ. ಆತನು ವಾಗ್ದಾನ ಮೂಲಕ ಈ ವರ್ಷ ಜೂನ 10ನೇ ತಾರೀಖಿನಂದು ಕೊಟ್ಟಿರುವ ಹಣವನ್ನು ಮರಳಿ ಕೊಡುವದಾಗಿ ಮಾತುಕತೆಯಾಗಿರುತ್ತದೆ. ಅದರಂತೆ ಇದೆ ವರ್ಷ ಜೂನ ತಿಂಗಳಿನಲ್ಲಿ ಹಣ ಕೇಳಲು ಹೋದಾಗ ನನಗೆ 1 ತಿಂಗಳ ಕಾಲ ಅವಕಾಶ ಬೇಕೆಂದು ವಿನಂತಿಸಿಕೊಂಡಿರುತ್ತಾನೆ. ಅದೆ ರೀತಿ 100/-ರೂ ಸ್ಟಾಂಪ ಮೇಲೆ ಬರೆದುಕೊಟ್ಟಿರುತ್ತಾನೆ. ಮತ್ತು ಅದನ್ನು ನೋಟರಿ ಮಾಡಿಸಿರುತ್ತೇನೆ ಆ ಸಾಲದ ಪತ್ರದ ಪ್ರಕಾರ ಜುಲೈ ತಿಂಗಳಿನಲ್ಲಿ ಕೊಡುತ್ತೇನೆಂದು ಬರೆದುಕೊಟ್ಟಿರುತ್ತಾನೆ. ಅದರಂತೆ ನಾನು ಮತ್ತು ನನ್ನ ಗೆಳೆಯ ಅನಿಲ ಕೂಡಿಕೊಂಡು ಸದರಿ ಸಾಲದ ವಿಚಾರಕ್ಕಾಗಿ ಅವರ ಮನೆಗೆ ದಿನಾಂಕ:25/06/2014 ರಂದು 7.30 ಪಿಎಂಕ್ಕೆ ಕೂಡಿಕೊಂಡು ಸದರಿ ಸಾಲದ ವಿಚಾರಕ್ಕಾಗಿ ಅವರ ಮನೆಗೆ ಹೋಗಿರುತ್ತೇವೆ. ಮತ್ತು ಕರಾರು ಪತ್ರ ಅನುಸಾರ ಅವರು ಚಕ ಕೊಡುತ್ತೇವೆ ಅಂತಾ ಬರೆದುಕೊಟ್ಟಿರುತ್ತಾರೆ. ಅದನ್ನು ಕೇಳಿದಾಗ ವಿಜಯಕುಮಾರ ತಂದೆ ಮಲ್ಲಿಕಾರ್ಜುನ ಹಾಗೂ ಅವರ ತಾಯಿ ರೇಣುಕಾ ಹಾಗೂ ವಿಜಯಕುಮಾರ ಪಾಟೀಲ ಇವರೆಲ್ಲರೂ ಕೂಡಿಕೊಂಡು ಸುಮ್ಮನೆ ನಮ್ಮ ಮನೆಗೆ ಯಾಕೆ ಬಂದಿರಿ ಭೋಸಡಿ ಮಕ್ಕಳೆ ನೀವು ಡೋರ ಹಾಗೂ ಲಂಬಾಣಿ ಸಮಾಜದವರು ಇದ್ದೀರಿ ನೀವು ನಮ್ಮ ಮನೆಗೆ ಬರಬಾರದು  ಅಂತಾ ನಮಗೆ ಜಾತಿ ನಿಂದನೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದರು ಅವನ ತಾಯಿ ರೇಣುಕಾ, ಅಳಿಯ ವಿಜಯಕುಮಾರ ಪಾಟೀಲ ಇವರು ಕಟ್ಟಿಗೆ ಕಲ್ಲುಗಳಿಂದ ನನಗೆ ಹಾಗೂ ನನ್ನ ಗೆಳೆಯ ಅನಿಲಗೆ ಹೊಡೆಬಡೆ ಮಾಡಿ ಗಾಯಗಳಾಗಿರುತ್ತವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಹಲ್ಲೆ ಪ್ರಕರಣ :
ಅಫಜಲಪೂರ ಠಾಣೆ : ದಿನಾಂಕ: 17/08/2014 ರಂದು ಬೆಳಗಿನ ಜಾವ ಸುಮಾರು 01:00 ಗಂಟೆಗೆ ಕೆಲವು ಜನರು ಚಿರಾಡುವ ಸಪ್ಪಳ ಕೇಳಿ ನಾನು ಮತ್ತು ಗದಗಯ್ಯಾ ತಂದೆ ಶಾಂತಯ್ಯಾ ಹಿರೇಮಠ ಸಾ : ಮಲ್ಲಾಬಾದ ಹೆಂಡತಿ ಸಿದ್ದಮ್ಮ ಹಾಗೂ ನಮ್ಮ ತಮ್ಮ ಶ್ರೀ .ಬ್ರ.ರೇವಣಸಿದ್ದ ಶಿವಾಚಾರ್ಯರು ಮತ್ತು ನಮ್ಮ ಅಣ್ಣನ ಮಗ ರೇವಣಸಿದ್ದಯ್ಯ ಹಿರೇಮಠ ಹಾಗೂ ಅವನ ಹೆಂಡತಿ ರಾಜಶ್ರೀ ರವರೆಲ್ಲರು ಕೂಡಿ ಮನೆ ಹೊರಗೆ ಬಂದು ನೋಡಲಾಗಿ ಮಲ್ಲಾಬಾದ ಗ್ರಾಮದ ಸಾಯಬಣ್ಣ ಪೂಜಾರಿ ಸಂಗಡ ಕೆಲವರು ತಮ್ಮ ಕೈಯಲ್ಲಿ ಮಾರಕಾಸ್ತ್ರಗಳನ್ನು ಹಿಡಿದು ಬಂದು ನಮ್ಮ ಮನೆಯ ಕಡೆ ಚಿರಾಡುತ್ತಾ ಬರುತ್ತಿದ್ದರು ಆಗ ನಾವೆಲ್ಲರು ಹೆದರಿಕೊಂಡು ನಮ್ಮ ಕಬ್ಬಿನ ಹೊಲದಲ್ಲಿ ಅಡಗಿಕೊಂಡಿದ್ದೇವು ಎಲ್ಲರು ನಮ್ಮ ಮನೆಯ ಹತ್ತಿರ ಬಂದು ಇವತ್ತು ಸೂಳಿ ಮಕ್ಕಳಿಗೆ ಜೀವಂತ  ಬಿಡಬಾರದು ಇವರು ಸಿಕ್ಕರೆ ಖಲಾಸ ಮಾಡಿ ಬಿಡೋಣ ಅಂಥ ಅನ್ನುತ್ತಿದ್ದುದ್ದು ನಮಗೆ ಕೆಳಿಸುತ್ತಿತ್ತು ಅವರೆಲ್ಲರು ನಮ್ಮ ಮನೆಯ ಹತ್ತಿರ ನಮ್ಮನ್ನು ಹುಡುಕಾಡಿದ್ದು ನಾವು ಸಿಗದೆ ಇದ್ದ ಕಾರಣ ಸದರಿಯವರೆಲ್ಲರು ನಮ್ಮ ತೋಟದಿಂದ ಹೊದರು ನಮಗು ಮತ್ತು ಆರೋಪಿತರಿಗು ಮದ್ಯ ನಮ್ಮ ಹೊಲದ ವಿಷಯಕ್ಕೆ ಸಂಬಂಧ ತಕರಾರು ಆಗುತ್ತಾ ಬಂದಿದ್ದು ಇರುತ್ತದೆ ಇಂದು ನಮ್ಮನ್ನು ಹೊಡೆಯಲು ಅಕ್ರಮ ಕೂಟ ರಚಿಸಿಕೊಂಡು ಗುಂಪು ಕಟ್ಟಿಕೊಂಡು ಬಂದು ನಮ್ಮನ್ನು ಅವಾಚ್ಯ ಶಬ್ದಗಳಿಂದ ಬೈದು ಜೀವ ಭಯ ಹಾಕಿ ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಮಾಡಿ ರಿಮಾಂಡ ಹೋಮನಿಂದ ಪರಾರಿಯಾದ ಪ್ರಕರಣ :
ಸ್ಟೇಷನ ಬಝಾರ ಠಾಣೆ : ಶ್ರೀ ವಿವೆಕಾನಂದ ತಂದೆ ರಾಮಚಂದ್ರ ಯಾದಗೀರಿ ಉಃ ರಿಮಾಂಡ ಹೋಮನಲ್ಲಿ ಪ್ಯೂನ್ ಕೆಲಸ ಸಾಃ ಖಾದರಿ ಚೌಕ ಆಳಂದ ರೋಡ ಗುಲಬರ್ಗಾ ಇವರು  ದಿನಾಂಕ 16-08-2014 ರಂದು 7 ಪಿ.ಎಮ್ ಸುಮಾರಿಗೆ ರಿಮಾಂಡ ಹೋಮನಲ್ಲಿದ್ದ ಹುಡುಗರಿಗೆ ಊಟ ಕೊಡಲು ಹೋದಾಗ ರೀಮಾಂಡ ಹೋಮನಲ್ಲಿದ್ದ 1. ಚಂದ್ರ ತಂದೆ ರಾಮಣ್ಣ, 2. ಅಶೋಕ ತಂದೆ ತಿಮ್ಮಪ್ಪಾ, 3. ಭಿಮರಾಯ ತಂದೆ ಶಿಮಯೋಗಿ, 4. ಪಂಡಿತ ತಂದೆ ಪ್ರಕಾಶ, 5. ಚಂದ್ರಕಾಂತ ತಂದೆ ಮಲ್ಲಪ್ಪಾ, 6. ಲಕ್ಷ್ಮಿಕಾಂತ ತಂದೆ ಶಿವಶರಣಪ್ಪಾ, 7. ರಾಮಣ್ಣ ತಂದೆ ಬಸವರಾಜ, 8. ಈರಣ್ಣ ತಂದೆ ಶಿವಪೂತ್ರಪ್ಪಾ ಇವರೆಲ್ಲರೂ ಕೂಡಿ ಅಕ್ರಮ ಕೂಟ ಕಟ್ಟಿಕೊಂಡು ಬಂದು ನನಗೆ ಕಣ್ಣಲ್ಲಿ ಖಾರಪೂಡಿ ಹಾಕಿ ಕೈಯಿಂದ ಎಳೆದಾಡಿ ಚಂದ್ರ ಇವನು ಕಟ್ಟಿಗೆಯಿಂದ ತಲೆಗೆ ಎರಡು ಎಟು ಹೊಡೆದನು ಉಳಿದವರು ಕೈಯಿಂದ ಬೆನ್ನಿಗೆ ಹೊಟ್ಟೆಗೆ ಹೊಡೆದರು. ಅಶೋಕ ಇವನು ನನ್ನಲ್ಲಿದ್ದ ಕಿಲಿಗಳು ಮತ್ತು ನನ್ನ ಮೊಬೈಲ ತೆಗೆದುಕೊಂಡು ನನಗೆ 'ಎ ಭೋಸಡಿ ಮಗನೆ ಸದರಿ ವಿಷಯ ಯಾರಿಗಾದರು ಹೇಳಿದರೆ ನಿನಗೆ ಜೀವ ಸಹಿತ ಬಿಡುವುದಿಲ್ಲಾ' ಅಂತಾ ಜೀವದ ಬೆದರಿಕೆ ಹಾಕಿದನು. ರಮೇಶ ಹಾಗು ಬೇರೆ ಹುಡುಗರಿಗೆ ರೂಮ ಗಳಲ್ಲಿ ಹಾಕಿ ಮೇನ್ ಗೇಟ ಚಾವಿ ತೆಗೆದು ಓಡಿ ಹೋಗಿರುತ್ತಾರೆ. ನಂತರ ರಮೇಶ ಮತ್ತು ಇತರ ಹುಡುಗರು ಬಂದು ನೋಡಿ ನನಗೆ ರಮೇಶ ಇವನು ಆಸ್ಪತ್ರೆಗೆ ತಂದು ಸೇರಿಕೆ ಮಾಡಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸ್ಟೇಷನ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

16 August 2014

Gulbarga District Reported Crimes

ಕೊಲೆ ಪ್ರಕರಣ :
ವಾಡಿ ಠಾಣೆ : ದಿನಾಂಕ 14-08-2014 ರಂದು ಬೆಳಿಗ್ಗೆ 8-30 ಗಂಟೆಗೆ ರಾಜು ತಂದೆ ಶೇಖದವಲಸಾಬ ಈತನು ಕುಂಬಾರಹಳ್ಳಿ ಗೇಟ ಹತ್ತಿರ ಕಾಯಿಪಲ್ಯ ತರುವ ಸಲೂವಾಗಿ ಹೊರಟಾಗ ಮುಂದೆ ಕುಂಬಾರಹಳ್ಳಿ ಗೇಟ ಹತ್ತಿರ ಮಯೂರ ಬಾರ ಮುಂದುಗಡೆ ಸಿದ್ದಪ್ಪಾ ಚಾಲಕ ಮತ್ತು ಸಮೀರ ತಂದೆ ಛೊಟುಮಿಯಾ ಇಬ್ಬರು ಕುಳಿತುಕೊಂಡಿದ್ದು ಸಮೀರ ಈತನು ಬಾರಲೆ ಭೊಸಡಿ ಮಗನೆ ಅಂತಾ ಕರೆದಾಗ ಆತನು ಅವನ ಹತ್ತಿರ ಹೋಗಿ ಇಂದು ನಾನು ಕೆಲಸಕ್ಕೆ ಬರುವುದಿಲ್ಲಾ ಸುಟ್ಟಿ ಮಾಡುತ್ತೆನೆ ಅಂತಾ ಹೇಳಿದಾಗ ಸಮೀರ ಈತನು ರಂಡಿ ಮಗನೆ ಹೇಗೆ ಬರುವದಿಲ್ಲಾ ಅಂತಾ ಎದೆಯ ಮೇಲೆ ಅಂಗಿ ಹಿಡಿದು ಕೈಯಿಂದ ಹೊಡೆದು ದಬ್ಬಿ ಕೊಟ್ಟಿದ್ದರಿಂದ ಆತನು ಕೆಳಗಡೆ ಬಿದ್ದಾಗ ಪರ್ಶೀ ಕಲ್ಲು ಆತನ ಬಲಗಾಲ ಹೆಬ್ಬೆಟ್ಟಿಗೆ ಹತ್ತಿ ರಕ್ತಗಾಯವಾಗಿದ್ದು ಆಗ ಜಗಳ ನೋಡಿದ ಆತನ ತಮ್ಮ ಅನೀಲ ಈತನು ಬಂದು ನಮ್ಮ ಅಣ್ಣನಿಗೆ ಯಾಕೆ ಹೊಡೆಯುತ್ತಿ ಅಂತಾ ಬಿಡಿಸಲು ಬಂದಾಗ ಭೊಸಡಿ ಮಗನೆ, ನೀನು ನಿಮ್ಮ ಅಣ್ಣನ ಮೇಲುಕಟ್ಟಿ ಬರುತ್ತಿ ಅಂತಾ ಕೈಯಿಂದ ಹೊಡೆದು ಬಲಗೈಯಿಂದ  ಅನೀಲ ಈತನ ಕುತ್ತಿಗೆ ಒತ್ತಿ ಹಿಡಿದು ಜೋರಾಗಿ ದಬ್ಬಿ ಕೊಟ್ಟಾಗ  ಆತನು ಕೇಳಗಡೆ ಬಿಳುತ್ತಿದ್ದಂತೆ  ಮತ್ತೊಮ್ಮೆ ಕುತ್ತಿಗೆ ಹಿಡಿದು ದಬ್ಬಿದಾಗ ಆತನು ಕೇಳಗಡೆ ಬಿದ್ದಾಗ ಪ್ರಭು ರಾಠೋಡ ಸಾಹೇಬಗೌಡ ಮತ್ತು ಅಮಜದಖಾನ ಬಂದು ನೊಡಿದ್ದು ಸಾಹೇಬಗೌಡ ಈತನು ಬಿಡಿಸಲು ಹೊದರೆ ಆತನಿಗೆ ಬೈದು ಅಲ್ಲಿಂದ ಓಡಿ ಹೋದನು ಆನೀಲ ಈತನಿಗೆ ಮಾತನಾಡಿಸಲು ಮಾತನಾಡಲಿಲ್ಲ ಬಲಗದ್ದದ ಹತ್ತಿರ ರಕ್ತಗಾಯವಾಗಿದ್ದು ನೋಡಲಾಗಿ ಆತನು ಮರಣ ಹೊಂದಿದ್ದು ಸಮೀರ ಈತನು ರಾಜು ಈತನ ಲಾರಿ ಖರಿದಿ ಮಾಡಿದ್ದು ಅದರ ಬಾಕಿ ಹಣ ಕೊಡಬೇಕಾಗಿದ್ದು ಕೇಳಿದರೆ ಜಗಳ ಮಾಡುತ್ತಾ ಬಂದಿದ್ದು ಅದೆ ವೈಮನಸ್ಸಿನಿಂದ ಇಂದು ರಾಜು ಈತನು ಕೆಲಸಕ್ಕೆ ಹೊಗದೆ ಇದ್ದುದ್ದರಿಂದ ಜಗಳ ತೆಗೆದು ರಾಜುಗೆ ಹೊಡೆಬಡೆಮಾಡಿದ್ದು ಜಗಳ ಬಿಡಿಸಲು ಬಂದ ಅನೀಲ ಈತನಿಗು ಬೈದು ಹೊಡೆಬಡೆಮಾಡಿ ಕುತ್ತಿಗೆಯನ್ನು ಕೈಯಿಂದ ಜೋರಾಗಿ ಒತ್ತಿ ಹಿಡಿದು ದಬ್ಬಿಕೊಟ್ಟಿದ್ದರಿಂದ ಕೇಳಗಡೆ ಬಿದ್ದು ಮೃತಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪರಿಚಿತ ಮಹಿಳೆಯ ಶವ ಪತ್ತೆ :
ಕೊಂಚಾವರಂ ಠಾಣೆ : ಶ್ರೀ ಭೋಜು ತಂದೆ ಮಾನಸಿಂಗ ರಾಠೋಡ ಸಾ|| ಪೆದ್ದಾತಾಂಡಾ ಇವರು  ದಿನಾಂಕ  13.08.2014 ರಂದು 08.30 ಪಿ ಎಮ್ ಕ್ಕೆ ಬಂದು ಪೆದ್ದಾತಾಂಡಾದ ಕಾಡಿನಲ್ಲಿ ಒಂದು ಗೋಣಿ ಚೀಲದಲ್ಲಿಂದ ಏನೋ ಕೆಟ್ಟ ವಾಸನೆ ಬರುವದನ್ನು ನೋಡಿ ತಾಂಡಾದವರನ್ನು ಕರೆಯಿಸಿ ನೋಡಲಾಗಿ ನಂತರ ಕುಂಚಾವರಮ ಠಾಣೆ ಗೆ ಹೋಗಿ ಫಿರ್ಯಾದಿ  ನೀಡಿದ್ದು ಅದೇ ಸದರಿ ಕೆಟ್ಟವಾಸನೆಯು ಅಪರಿಚಿತ ಮಹಿಳೆಯದ್ದು ಇರುತ್ತದೆ. ಆ ಶವದ ಮೇಲೆ ಕೆಂಪು ಮತ್ತು ಕಪ್ಪು ಬಣ್ನದ ನೈಟಿ ಹಾಕಿದ್ದು ಇದ್ದು ಟವಲ ಕೂಡಾ ಆ ಶವದ ಮೇಲೆ ಇರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕೊಂಚಾವರಮ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಸ್ಪೀಟ  ಜೂಜಾಟದಲ್ಲಿ ನಿರತ ವ್ಯಕ್ತಿಗಳ ಬಂಧನ :
ನಿಂಬರ್ಗಾ ಠಾಣೆ : ದಿನಾಂಕ 15-08-2014 ರಂದು ಹಿತ್ತಲಶೀರೂರ ಗ್ರಾಮದ ಕಲ್ಮೇಶ್ವರ ಗುಡಿಯ ಹತ್ತಿರ ಬೇವಿನ ಮರದ ಕೆಳಗೆ ಸಾರ್ವಜನಿಕ ರಸ್ತೆಯಲ್ಲಿ ಇಸ್ಪೇಟ್ ಜೂಜಾಟ ನಡೆಯುತ್ತಿದೆ ಅಂತ ಖಚಿತ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ನಿಂಬರ್ಗಾ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಹಿತ್ತಿಲಶೀರೂರ ಗ್ರಾಮದ ಕಲ್ಮೇಶರ ದೇವರ ಗುಡಿಯ ಮರೆಯಲ್ಲಿ ನಿಂತು ನೋಡಲಾಗಿ ಸಾರ್ವಜನಿಕ ರಸ್ತೆಯ ಬೇವಿನ ಮರದ ಕೆಳಗೆ 09 ಜನರು ದುಂಡಾಗಿ ಕುಳಿತು ಇಸ್ಪೀಟ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕಿಟ್ಟು ಅಂದರ ಬಹಾರ ಇಸ್ಪೀಟ ಜೂಜಾಟ ಆಡುತ್ತಿರುವದನ್ನು ಖಚಿತಪಡಿಸಿಕೊಂಡು ದಾಳಿ ಮಾಡಿ 09 ಜನರನ್ನು ಹಿಡಿದು ವಿಚಾರಿಸಿ ಚೆಕ ಮಾಡಲಾಗಿ 01. ಶಾಮಲಿಂಗ ತಂದೆ ಹಾವಣ್ಣಾ ಪೂಜಾರಿ 02. ಮಲ್ಲಿನಾಥ ತಂದೆ ಗುರುಶಾಂತಪ್ಪ ನವಲೆ ಸಾ : ಮಾಡಿಯಾಳ 03 ಶರಣಪ್ಪ ತಂದೆ ಅಂಬಾರಾಯ ಕಾಮನಕರ 04. ನಾಗಪ್ಪ ತಂದೆ ಬಸಣ್ಣ ಚಿಕಣಿ 05. ಶಿವಣ್ಣಾ ತಂದೆ ಹಾವಣ್ಣಾ ಪೂಜಾರಿ 06. ನಿಂಗಪ್ಪಾ ತಂದೆ ಚಂದ್ರಾಮ ಶಿರೂರ 07. ಅರ್ಜುನ ತಂದೆ ಸಿದ್ದಣ್ಣಾ ಮಾಡಿಯಾಳ 08. ಈರಪ್ಪಾ ತಂದೆ ರಾಮಚಂದ್ರ ಕೋಗನೂರ 09. ಶರಣಪ್ಪ ತಂದೆ ಹಾವಣ್ಣಾ ಪೂಜಾರಿ ರವರನ್ನು ವಶಕ್ಕೆ ತೆಗೆದುಕೊಂಡು ಸದರಿಯವರಿಂದ ಒಟ್ಟು 2700/- ರೂಪಾಯಿ ನಗದು ಹಣ ಹಾಗೂ 52 ಇಸ್ಪೀಟ ಎಲೆಗಳನ್ನು ಪಂಚರ ಸಮಕ್ಷಮ ಗುನ್ನೆ ಸ್ಥಳದಲ್ಲಿ ಜಪ್ತಿಪಡಿಸಿಕೊಂಡು ಮರಳಿ ನಿಂಬರ್ಗಾ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ನಿಂಬರ್ಗಾ ಠಾಣೆ : ದಿನಾಂಕ 15-08-2014 ರಂದು ಮಾಡಿಯಾಳ ಗ್ರಾಮದ ಖಜ್ಜಾನ ಗೋರಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಇಸ್ಪೇಟ್ ಜೂಜಾಟ ನಡೆಯುತ್ತಿದೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ನಿಂಬರ್ಗಾ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಮಾಡಿಯಾಳ ಗ್ರಾಮದ ಖಜ್ಜಾನ ಗೋರಿಯ ಹತ್ತಿರ  ಮರೆಯಲ್ಲಿ ನಿಂತು ನೋಡಲಾಗಿ ಸಾರ್ವಜನಿಕ ರಸ್ತೆಯ ಬೇವಿನ ಮರದ ಕೆಳಗೆ 09 ಜನರು ದುಂಡಾಗಿ ಕುಳಿತು ಇಸ್ಪೀಟ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕಿಟ್ಟು ಅಂದರ ಬಹಾರ ಇಸ್ಪೀಟ ಜೂಜಾಟ ಆಡುತ್ತಿರುವದನ್ನು ಖಚಿತಪಡಿಸಿಕೊಂಡು ದಾಳಿ ಮಾಡಿ 05 ಜನರನ್ನು ಹಿಡಿದು ವಿಚಾರಿಸಿ ಚೆಕ ಮಾಡಲಾಗಿ 01. ಶ್ರೀಮಂತ ತಂದೆ ಶಿವರಾಯ ಮಡ್ಡಿತೋಟ, 02. ಹಣಮಂತ ತಂದೆ ಯಲ್ಲಪ್ಪ ಪರಸನ 03. ಸಿದ್ದಾರಾಮ ತಂದೆ ಸುಲ್ತಾನಪ್ಪ ಮ್ಯಾಡಗೇರಿ 04. ಶಾಂತಪ್ಪ ತಂದೆ ಈರಪ್ಪಾ ಮುಂದಿನಕೇರಿ 05. ಲಕ್ಷ್ಮಿಕಾಂತ ತಂದೆ ಬಸಣ್ಣಾ ಮುಂದಿನಕೇರಿ ಸಾ|| ಎಲ್ಲರೂ ಮಾಡಿಯಾಳ ಇವರನ್ನು ವಶಕ್ಕೆ ತೆಗೆದುಕೊಂಡು ಸದರಿಯವರಿಂದ ಒಟ್ಟು 6200/- ರೂಪಾಯಿ ನಗದು ಹಣ ಹಾಗೂ 52 ಇಸ್ಪೀಟ ಎಲೆಗಳನ್ನು ಪಂಚರ ಸಮಕ್ಷಮ ಗುನ್ನೆ ಸ್ಥಳದಲ್ಲಿ ಜಪ್ತಿಪಡಿಸಿಕೊಂಡು ಮರಳಿ ನಿಂಬರ್ಗಾ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಸರಕಾರಿ ಕರ್ತವ್ಯಕ್ಕೆ ಅಡೆ ತಡೆ ಮಾಡಿ ಹಲ್ಲೆ ಮಾಡಿದ ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ಸಿದ್ರಾಮಯ್ಯಾ ತಂದೆ ಪಡದಯ್ಯಾ ಹಿರೇಮಠ ಸಾ : ಯರನಾಳ ತಾ : ಬಸವನಬಾಗೇವಾಡಿ ಜಿಲ್ಲಾ : ಬಿಜಾಪೂರ ರವರಿಗೆ ದಿನಾಂಕ 13-08-2014 ರಂದು ರಾತ್ರಿ 10;00 ಗಂಟೆಯಿಂದ ಬೆಳಿಗ್ಗೆ 08;00 ಗಂಟೆಯ ವರೆಗೆ ಬನ್ನಟ್ಟಿ ಕ್ರಾಸ ಚಕ್ಕಪೋಸ್ಟನಲ್ಲಿ ಕರ್ತವ್ಯಕ್ಕೆ ನೇಮಿಸಿದ್ದು ಅದರಂತೆ ನಾನು ಮತ್ತು ನನ್ನೊಂದಿಗೆ ನನ್ನ ಗೆಳೆಯ ಗಿರೀಶ ತಂದೆ ಶಿವಶಂಕರ ಜಮಖಂಡಿ ಸಾ|| ಚಡಚಣ ರವರು ಕೂಡಿ 11;00 ಗಂಟೆಗೆ ಬನ್ನಟ್ಟಿ ಕ್ರಾಸ ಹತ್ತಿರ ಕರ್ತವ್ಯ ನಿರ್ವಹಿಸುತ್ತಿರುವಾಗ ಬನ್ನಟ್ಟಿ ಗ್ರಾಮ ವಿಠ್ಠಲ ಬನ್ನಟ್ಟಿ ಮತ್ತು ಪ್ರಕಾಶ ಜಮಾದಾರ ರವರು ಬಂದು ನನಗೆ ನಮ್ಮ ಮರಳಿನ ಗಾಡಿಗಳು ಬಿಡಬೆಕು ಅಂತಾ ಅಂದರು, ಆಗ ನಾನು ಮರಳಿನ ವಾಹನಗಳು ಬಂದರೆ ಅವುಗಳನ್ನು ಬಿಡುವುದಿಲ್ಲಾ ಇದು ಮೇಲಾಧಿಕಾರಿಗಳ ಆದೇಶ ಇರುತ್ತದೆ ಅಂತಾ ಹೇಳಿದೆನು. ಆಗ ಅವರಿಬ್ಬರು ನನ್ನೊಂದಿಗೆ ಬಾಯಿ ತಕರಾರು ಮಾಡಿ ಸರಕಾರಿ ಕರ್ತವ್ಯಕ್ಕೆ ಅಡ್ಡಿ ಪಡಿಸಿ ಅಲ್ಲಿಂದ ಹೋದರು, ಈ ವಿಷಯವನ್ನು ನಮ್ಮ ರೆವಿನೂ ಇನ್ಸಪೆಕ್ಟರಾದ ರಾಜು ಗೋಪಣೆ ಮತ್ತು ತಹಸೀಲ್ದಾರ ಸಾಹೇಬರಿಗೆ ಫೋನ ಮುಖಾಂತರ ತಿಳಿಸಿದೆನು, ನಂತರ ನಾವು ಅಲ್ಲೆ ಇದ್ದು ಕರ್ತವ್ಯ ಮುಗಿಸಿಕೊಂಡು ಬೆಳಿಗ್ಗೆ ಮನೆಗೆ ಬಂದಿರುತ್ತೇವೆ, ನಂತರ 11;00 ಎ.ಎಂ ಕ್ಕೆ ನಾನು ಮತ್ತು ನಮ್ಮ ಸಹದ್ಯೋಗಿ ಗುರು ಹಂಡಿ ರವರು ಕೂಡಿಕೊಂಡು ತಹಸೀಲ್ದಾರ ಕಾರ್ಯಾಲಯದಲ್ಲಿ ಕರ್ತವ್ಯದ ಮೇಲೆ ಇದ್ದಾಗ ಸದರಿ ವಿಠ್ಠಲ ಬನ್ನಟ್ಟಿ ಮತ್ತು ಪ್ರಕಾಶ ಜಮಾದಾರ ರವರು ನಮ್ಮ ಹತ್ತಿರ ಬಂದು ವಿಠ್ಠಲ ಬನ್ನಟ್ಟಿ ಇವನು ನನಗೆ ಏನೋ ಸೂಳಿಮಗನಾ ನಿನ್ನೆ ನಮ್ಮ ಗಾಡಿಗಳನ್ನು ಬಿಡದೆ ಬೆರೆಯವರ ಗಾಡಿಗಳನ್ನು ಬಿಟ್ಟಿದಿ ಮಗನಾ ಅಂತಾ ಅಂದರು ಆಗ ನಾನು ನನಗ್ಯಾಕ ಬೈತಿರಿ ಅಂತಾ ಕೇಳಿದ್ದಕ್ಕೆ ಪ್ರಕಾಶ ಜಮಾದಾರ ಇವನು ನಿಮ್ಮ ತಹಸೀಲ್ದಾರ ಆಫೀಸಿನವರಿಗೆ ಬಹಳ ಸೊಕ್ಕು ಬಂದಿದೆ, ನಿಮ್ಮನ್ನ ಸುಮನೆ ಬಿಡುವುದಿಲ್ಲ. ಅಂತಾ ಅಂದು ಆಗ ಅಲ್ಲೆ ಇದ್ದ ನನ್ನ ಸಹದ್ಯೋಗಿ ಗುರು ಹಂಡಿ ಇವರು ಸುಮನೆ ಯಾಕ ಬೈತಿರಿ ಅಂತಾ ಅಂದಿದಕ್ಕೆ ಅವನಿಗು ಸಹ ಪ್ರಕಾಶ ಜಮಾದಾರ ಇವನು ಅವಾಚ್ಯ ಶಬ್ದಗಳಿಂದ ಬೈದು ಜೀವ ಭಯ ಹಾಕಿ ಅಲ್ಲಿಂದ ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.