POLICE BHAVAN KALABURAGI

POLICE BHAVAN KALABURAGI

18 May 2014

Gulbarga District Reported Crimes

ಅಪಘಾತ ಪ್ರಕರಣಗಳು :
ಫರತಾಬಾದ ಠಾಣೆ : ಶ್ರೀ ಮಲ್ಲಿನಾಥ ತಂದೆ ಜಯಪ್ರಕಾಶ ಗಣಜಲಖೇಡ ಸಾ:ಕಮಲನಗರ  ತಾ:ಆಳಂದ  ಜಿ: ಗುಲಬರ್ಗಾರವರಿಗೆ ರವರು ಬಸವ ಕಲ್ಯಾಣದ ಎಮ್.ಡಿ ಸಲ್ಲಿಮೊದ್ದಿನ ರವರ ಲಾರಿ  ಮೇಲೆ ಚಾಲಕನಾಗಿ ಕೇಲಸ ಮಾಡುತ್ತಿದ್ದು ನನ್ನಂತೆ ಇರ್ಫಾನ ಅಂತಾ ಚಾಲಕನು ಸಹ ಕೇಲಸ ಮಾಡುತ್ತಿದ್ದಾನೆ. ದಿನಾಂಕ 16.05.2014 ರಂದು ರಾತ್ರಿ ವೇಳೆಯಲ್ಲಿ ಮಾರುತಿ ರೈಸ ಮಿಲನಲ್ಲಿ  ರೈಸ ಲೋಡ ಮಾಡಿಕೊಂಡು ರಾತ್ರಿ 10.30 ಗಂಟೆ ಸುಮಾರಿಗೆ ರಾಯಚೂರದಿಂದ ಬಾಂಬೆಗೆ ಹೋಗಲು ಅಲ್ಲಿಂದ ಹೋರಟಿರುತ್ತೇವೆ. ಸದರಿ ಲಾರಿಯನ್ನು ನಮ್ಮ ಇನ್ನೋಬ ಚಾಲಕನಾದ ಇರ್ಫಾನ ಈತನು ಚಲಾಯಿಸುತ್ತಿದ್ದನ್ನು ಮುಂದೆ ರಾಷ್ಟ್ರಿಯ ಹೆದ್ದಾರಿ 218 ರಸ್ತೆಯ ಮೇಲೆ ಫರಹತಾಬಾದ ದಾಟಿ ಕೆರೆಯಂಗಳ ಹತ್ತಿರ ದಿನಾಂಕ 17.05.2014 ರಂದು ನಸುಕಿನ ಜಾವಾ 4 ಗಂಟೆ ಸುಮಾರಿಗೆ ನಮ್ಮ ಲಾರಿ ನಂ ಎಮ್. ಹೆಚ್ 12 ಎಫ್.ಝೆಡ್ 3093 ನೇದ್ದನ್ನು ನಮ್ಮ ಚಾಲಕನಾದ ಇರ್ಫಾನ ಇತನು ಅತೀ ವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ರಸ್ತೆಯ ಎಡಗಡೆಗೆ ಪಲ್ಟಿಗೊಳಿಸಿರುತ್ತಾನೆ ಇದರಿಂದ ನನಗೆ ಹಣೆಗೆ ಮತ್ತು ಬಲಗೈ ಮೋಳಕೈ ಹತ್ತಿರ ರಕ್ತಗಾಯವಾಗಿರುತ್ತದೆ ನಮ್ಮ ಚಾಲಕ ಇರ್ಫಾನ ಈತನಿಕೆ ಯಾವುದೆ ಗಾಯ ವಗೈರೆಯಾಗಿರುವುದಿಲ್ಲಾ. ನಮ್ಮ ಚಾಲಕನು ಲಾರಿಯನ್ನು ಪಲ್ಟಿಗೊಳೀಸಿದ ನಂತರ  ತಾನೂ ಸ್ಥಳದಲ್ಲಿ ನಿಲ್ಲದೆ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಫರತಾಬಾದ ಠಾಣೆ : ಶ್ರೀ ಮಲ್ಲಿಕಾರ್ಜುನ್‌ ತಂದೆ ಶಿವಶರಣಪ್ಪ ರಸ್ತಾಪೂರ ಸಾ:ರೆವನೂರ ತಾ:ಜೇರ್ಗಿ ಇವರು ಈಗ ಸುಮಾರು 6 ತಿಂಗಳಿನಿಂದ ಜೇವರ್ಗಿಯ ಶ್ರೀಮಂತ ಗುತ್ತೆದಾರ ಇವರ 407 ಟೆಂಪೊದ ನಂ ಕೆಎ-32 ಬಿ-0497 ನೆದ್ದರ ಮೇಲೆ ಚಾಲಕ ಅಂತಾ ಕೆಲಸ ಮಾಡುತ್ತಿದ್ದು ದಿನಾಂಕ 14/05/2014 ರಂದು ಬೆಳಗ್ಗೆ 10 ಗಂಟೆಯ ಸುಮಾರಿಗೆ  ನಾನು ನಮ್ಮ 407 ಟೆಂಪೊದ ನಂ ಕೆಎ-32 ಬಿ-0497 ನೆದಕ್ಕೆ ಆಯಿಲ್ ಚೇಂಜ ಮತ್ತು ಟೆಂಪೊದ ಅಲ್ಪ-ಸ್ವಲ್ಪ ಕೆಲಸ ಇದ್ದು ಅದನ್ನು  ಮಾಡಿಸುವ ಸಲುವಾಗಿ ಜೇವರ್ಗಿಯಿಂದ ಗುಲಬರ್ಗಾಕ್ಕೆ ತೆಗೆದುಕೊಂಡು ಹೋಗಿರುತ್ತೆನೆ.ಗುಲಬರ್ಗಾದಲ್ಲಿ ಗಾಡಿಯ ಕೆಲಸ ಮುಗಿಸಿಕೊಂಡು ಮರಳಿ ಜೇವರ್ಗಿಗೆ ಸಾಯಂಕಾಲ 4.30 ಗಂಟೆಯ ಸುಮಾರಿಗೆ ಗುಲಬರ್ಗಾದಿಂದ 407 ಟೆಂಪೊ ನಂ ಕೆಎ-32 ಬಿ-0497 ನೇದ್ದನ್ನು ತೆಗೆದುಕೊಂಡು ಹೊರಟಿರುತ್ತೆನೆ. ಸದರಿ  ಟೆಂಪೋವನ್ನು ನಾನೆ ನಡೆಸುತ್ತಿದ್ದೆನು. ಮುಂದೆ ರಾಷ್ರೀಯ ಹೆದ್ದಾರಿ 218 ರಸ್ತೆಯ ಮೇಲೆ ಫಿರೋಜಾಬಾದ ದರ್ಗಾದ ಹತ್ತಿರ ಸಾಯಂಕಾಲ 6 ಗಂಟೆಯ ಸುಮಾರಿಗೆ ಹೊಗುತ್ತಿದ್ದಾಗ ನಮ್ಮ ಎದುರುಗಡೆಯಲ್ಲಿ ಒಬ್ಬ ಲಾರಿ ಚಾಲಕನು ತನ್ನ ಲಾರಿಯನ್ನು ಅತೀವೇಗ ಮತ್ತು ಆಲಕ್ಷ್ಯತನದಿಂದ ನಡೆಸಿಕೊಂಡು ಹೋಗುತ್ತಿದ್ದಂತೆ ಒಮ್ಮೆಲೆ ತನ್ನ ಲಾರಿಯನ್ನು ಯಾವುದೆ ಸೂಚನೆ ಇಲ್ಲದೆ  ಬ್ರೆಕ್‌ ಮಾಡಿದ್ದರಿಂದ ಆ ಲಾರಿಯ ಹಿಂದೆ ಹೊಗುತ್ತಿದ್ದ ನಾನು ನಮ್ಮ ಟೆಂಪೊವನ್ನು ಆ ಲಾರಿಗೆ ಹೋಗಿ ಡಿಕ್ಕಿಯಾಗಿರುತ್ತದೆ. ಇದರಿಂದ ನನಗೆ ಯಾವುದೆ ಗಾಯ ವಗೈರೆ ಆಗಿರುವದಿಲ್ಲ. ನಂತರ ಸದರಿ ಲಾರಿ ನಂಬರ ನೋಡಲಾಗಿ ಕೆಎ 12/6719 ಅಂತಾ ಇದ್ದು ಅದರಲ್ಲಿ ಹೆಚ್‌ಪಿ ಕಂಪನಿಯ ಖಾಲಿ ಸಿಲಿಂಡರ್‌ಗಳನ್ನು ತುಂಬಿದ್ದ ಲೋಡ ಇರುತ್ತದೆ. ಅದರ ಚಾಲಕನ ಹೆಸರು ರಾಚಯ್ಯ ಹೀರೆಮಠ ಅಂತಾ ಗೊತ್ತಾಗಿದ್ದು ತನ್ನ ಲಾರಿಯನ್ನು ಸ್ಥಳದಲ್ಲಿಯೆ ಬಿಟ್ಟು ಓಡಿ ಹೋಗಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ಶ್ರೀರಾಮ ತಂದೆ ನರಸಿಂಗರಾವ ಮೆಂಕಜಿ ರವರು ದಿನಾಂಕ 17-05-2014 ರಂದು ಬೆಳಿಗ್ಗೆ 9-30 ಗಂಟೆಗೆ ತನ್ನ ಕಾರ ನಂಬರ ಕೆಎ-32 ಎನ್-2310 ನೇದ್ದನ್ನು ಅನ್ನಪೂರ್ಣ ಕ್ರಾಸದಿಂದ ಜಗತ ಸರ್ಕಲ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದಾಗ ಆಮಂತ್ರಣ ಹೋಟಲ ಎದುರಿನ ರೋಡಿನ ಮೇಲೆ ಹಿಂದಿನಿಂದ ಟಂಟಂ ನಂಬರ ಕೆಎ-32 ಬಿ-3095 ನೇದ್ದರ ಚಾಲಕ ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಕಾರಿನ ಎಡಗಡೆಯಿಂದ ಓವರ ಟೇಕ ಮಾಡಿ ಕಾರಿಗೆ ಡಿಕ್ಕಿ ಪಡಿಸಿ ಅಪಘಾತ ಮಾಡಿ ಕಾರ ಡ್ಯಾಮೇಜ ಮಾಡಿ ತನ್ನ ಟಂಟಂ ಸಮೇತ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

16 May 2014

Gulbarga District Reported Crimes

ಇಸ್ಪೀಟ ಜೂಜಾಟದಲ್ಲಿ ನಿರತ ವ್ಯಕ್ತಿಗಳ ಬಂಧನ :
ಮಾಹಾತ್ಮಾ ಬಸವೇಶ್ವರ ನಗರ ಠಾಣೆ : ದಿನಾಂಕ 16-05-2014 ರಂದು 12:00 ಎ.ಎಂ ಕ್ಕೆ ಎಂ.ಬಿ ನಗರ ಠಾಣಾ ಸರಹದ್ದಿನಲ್ಲಿ ಬರುವ ಅಣ್ಣೆಮ್ಮಾ ನಗರದ ರೋಡಿಗೆ ಇರುವ ಗಣೇಶ ಗುಡಿಯ ಮುಂದೆ ಗಾರ್ಡನ ಪಕ್ಕದಲ್ಲಿ ಸಾರ್ವಜನಿಕ ಸ್ಥಳದಲ್ಲಿ ದುಂಡಾಗಿ ಕುಳಿತು ಕೆಲವು ಜನರು ಅಂದರ ಬಾಹರ ಎಂಬ ಇಸ್ಪೀಟ ಜೂಜಾಟ ಹಣಕ್ಕೆ ಪಣ ಹಚ್ಚಿ ಆಡುತ್ತಿದ್ದವರ ಮೇಲೆ ಪಿ.ಎಸ್.ಐ. ಎಮ್.ಬಿ.ನಗರ ಹಾಗು ಸಿಬ್ಬಂದಿಯವರೊಂದಿಗೆ ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೋಗಿ ದಾಳಿ ಮಾಡಿ 04 ಜನರನ್ನು ಹಿಡಿದು ವಿಚಾರಿಸಲು 1. ಪ್ರದೀಪ ಕುಮಾರ ತಂದೆ ಅಣ್ಣಪ್ಪಾ ಬೆಳಮಗಿ ಸಾಃ ಸುಂದರ ನಗರ ಗುಲಬರ್ಗಾ 2.  ಜಗನ್ನಾಥ ತಂದೆ ಮಲಕಾಜಪ್ಪಾ ಜೇವರ್ಗಿ ಸಾಃ ತಿಲಕ ನಗರ ಗುಲಬರ್ಗಾ 3. ಶಿವರಾಜ ತಂದೆ ಪೀರಪ್ಪಾ ತಳವಾರ ಸಾಃ ಯಮುನಾ ನಗರ ಗುಲಬರ್ಗಾ 4.ವಿರೇಂದ್ರ @ ವೀರಭದ್ರಪ್ಪಾ ತಂದೆ ಸಿದ್ರಾಮ್ @ ಶರಣಪ್ಪಾ ವಾಲಿ ಸಾಃ ಓಂ ನಗರ  ಗುಲಬರ್ಗಾ ರವರನ್ನು ವಶಕ್ಕೆ ತೆಗೆದುಕೊಂಡು ಸದರಿ ಆರೋಪಿತರಿಂದ 7,400/- ರೂ. ಹಾಗು 52 ಇಸ್ಪೇಟ್ ಎಲೆಗಳು ಪಂಚರ ಸಮಕ್ಷಮ ಜಪ್ತ ಮಾಡಿಕೊಂಡು ಮರಳಿ ಠಾಣೆಗೆ ಬಂದು ಸದರಿಯವರ ವಿರುದ್ಧ ಮಾಹಾತ್ಮಾ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ಚಾಂದ ತಂದೆ ಬಾಷಾಸಾಬ ಬನ್ನಟ್ಟಿಕರ ಸಾ : ಅಫಜಲಪೂರ ಇವರು ಸುಮಾರು 8 ವರ್ಷಗಳಿಂದ ಏರಟೆಲ್ ಕಂಪನಿವತಿಯಿಂದ ಅಫಜಲಪೂರ ಪಟ್ಟಣದ ಏರಟೆಲ್ ಸಿಮ್ ಮತ್ತು ಕರೆನ್ಸಿ ವಿತರಕ ಕೆಲಸ ಮಾಡಿಕೊಂಡು ಬಂದಿದ್ದು  ಈ ಮೊದಲು ನಮ್ಮ ಆಫೀಸ ನಮ್ಮ ಮನೆಯಲ್ಲಿದ್ದು, ಸದ್ಯ ಸುಮಾರ 8 ತಿಂಗಳುಗಳಿಂದ ಅಫಜಲಪೂರ ಬಸ್ಸ ನಿಲ್ದಾಣದ ಪಕ್ಕದಲ್ಲಿ ಜಾಗಿರ್ದಾರ ರವರ ಲೇಔಟನಲ್ಲಿ ನನ್ನ ಆಫೀಸ ಇರುತ್ತದೆ. ರಿಟೇಲರ ಮತ್ತು ಗ್ರಾಹಕರಿಂದ ಸಂದಾಯವಾದ ಹಣವನ್ನು 2-3 ದಿನಕೊಮ್ಮೆ ಕಂಪನಿ ಅಕೌಂಟಿಗೆ ಬ್ಯಾಂಕಿನಲ್ಲಿ ಜಮಾ ಮಾಡುತ್ತಾ ಬಂದಿರುತ್ತೇನೆ. ನಮ್ಮ ಆಫಿಸನಲ್ಲಿ ಆಯಿಶಾ ತಂದೆ ಮುಸ್ತಫಾ ಮನಿಯಾರ ಇವರು ಸೇಲ್ಸ್ ಕೆಲಸ ಮಾಡುತ್ತಿದ್ದು, ಆಸೀಫ ತಂದೆ ಹಾರುನಸಾಬ ಪಟೇಲ ಇವರು ರಿಟೇಲರ ಕಡೆಯಿಂದ ಹಣ ಸಂದಾಯ ಮಾಡಿಕೊಂಡು ನಮ್ಮ ಹತ್ತಿರ ಜಮಾ ಮಾಡುತ್ತಾರೆ. ನಾನು ದಿನಾಲು ರಾತ್ರಿ 8;00 ಗಂಟೆಯ ಸುಮಾರಿಗೆ ನನ್ನ ಆಪೀಸ ಬಂದ ಮಾಡಿಕೊಂಡು ಹೊಗುತ್ತೇನೆ. ದಿನಾಂಕ 14-05-2014 ರಂದು ಆಸೀಫ ಇವನು 54,500/- ರೂ ಸಂದಾಯ ಮಾಡಿಕೊಂಡು ತಂದು ಕೊಟ್ಟಿರುತ್ತಾರೆ. ನಮ್ಮ ಆಫೀಸನಲ್ಲಿ ರಿಚಾರ್ಜ ಮಾಡಿದ ಹಣ 26,930/- ಇರುತ್ತವೆ, ಕರಜಗಿ ಗ್ರಾಮದ ಸಬ್ ಡಿಸ್ಟ್ರೂಬೂಟರ ಅಬ್ದುಲ್ ಮಲ್ಲಾಬಾದ ಇವರಿಗೆ ಹಾಕಿದ ಕರೆನ್ಸಿ ಹಣ 35,000/- ರೂ ತಂದು ಕೊಟ್ಟಿರುತ್ತಾರೆ, ಹಾಗು ತೆಲ್ಲೂರ ಗ್ರಾಮದ ಸಬ್ ಡಿಸ್ಟ್ರೂಬೂಟರ ಮಹಿಬೂಬಶಾ ಇವರಿಗೆ ಹಾಕಿದ ಕರೆನ್ಸಿ ಹಣ 22,000/- ರೂ ತಂದು ಕೊಟ್ಟಿರುತ್ತಾರೆ. ಹೀಗೆ ಒಟ್ಟು 1,38,430/- ರೂ ಸಂದಾಯ ವಾಗಿದ್ದು ಇರುತ್ತದೆ. ಸದರಿ ಹಣವನ್ನು ನಮ್ಮ ಆಫೀಸನಲ್ಲೆ ಟೇಬಲ್ ಡ್ರಾದಲ್ಲಿ ಇಟ್ಟು ರಾತ್ರಿ 8;00 ಗಂಟೆ ಸುಮಾರಿಗೆ ಆಫಿಸ ಮುಚ್ಚಿ ಸೆಟರಗೆ ಕೀಲಿ ಹಾಕಿ ಮನೆಗೆ ಹೋಗಿರುತ್ತೇನೆ ಮರು ದಿನ ಬೆಳಿಗ್ಗೆ 07;00 ಗಂಟೆಗೆ ಸುಮಾರಿಗೆ ನಮ್ಮ ಆಫೀಸ ಪಕ್ಕದಲ್ಲಿ ಇರುವ ಟೇಲರ ಅಂಗಡಿಯ ಗೋಪಾಲ ಬಿಂಗೆ ಇವರು ನನಗೆ ಫೋನ ಮಾಡಿ ನಿಮ್ಮ ಆಫಿಸ ಸೆಟರ ಬೆಂಡಾಗಿರುತ್ತದೆ ಅಂತಾ ಹೇಳಿದರು. ಆಗ ನಾನು ಗಾಬರಿಯಾಗಿ ನಮ್ಮ ಆಫೀಸಿಗೆ ಬಂದು ನೋಡಲಾಗಿ ಆಫೀಸ ಸೆಟರ್ ಬೆಂಡ ಮಾಡಿ ಮೇಲೆ ಎತ್ತಿದ್ದು ಕಂಡಿತು ನಾನು ಆಫೀಸ ಒಳಗೆ ಹೋಗಿ ನೋಡಲಾಗಿ ಡ್ರಾದಲ್ಲಿ ಇಟ್ಟಿದ್ದ ಹಣ 1,38,430/- ರೂ ಇದ್ದಿರಲಿಲ್ಲ. ಆ ಹಣವನ್ನು ದಿನಾಂಕ 14, 15-05-2014 ರ ಮದ್ಯ ರಾತ್ರಿವೇಳೆಯಲ್ಲಿ ಯಾರೋ ಕಳ್ಳರು ಕಳುವುಮಾಡಿಕೊಂಡು ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಅಫಜಲಪೂರ ಠಾಣೆ :  ಶ್ರೀ ದತ್ತು ತಂದೆ ಖಂಡು ಸಿಂದೆ  ಸಾ : ಉಡಚಾ ಹಟ್ಟಿ ರವರು ದಿನಾಂಕ 15-05-2014 ರಂದು 4;30 ಪಿ.ಎಂ ಸುಮಾರಿಗೆ ನಾನು ನಮ್ಮ ಮನೆಗೆ ಹೋಗುವಾಗ ದೋಂಡಿಬಾ ಗೌಡೆ ರವರ ಮನೆಯ ಹತ್ತಿರ ನಮ್ಮ ಎರಡನೆ ಅಣ್ಣತಮ್ಮಕಿಯವನಾದ ಹುಚ್ಚಪ್ಪ ತಂದೆ ಸುಕ್ಕಣ್ಣ ಸಿಂದೆ ಮತ್ತು ಧರೆಪ್ಪ ತಂದೆ ಮಾಣಿಕ ಸಿಂದೆ ಇವರು ಬಂದು ನನಗೆ ತಡೆದು ನಿಲ್ಲಿಸಿ ಹುಚ್ಚಪ್ಪ ಇವನು ಏ ಭೋಸಡಿ ಮಗನಾ ದತ್ಯಾ ನಿನಗ ಎಷ್ಟುಸಲ ಹೇಳಬೇಕೋ, ನಿಮ್ಮ ತಮ್ಮನ ಮಗ ಖರಿದಿ ಮಾಡಿದ ಆಸ್ತಿಯನ್ನು ನನ್ನ ಹೆಸರಿಗೆ ಮಾಡೋ ಅಂತಾ ಹೇಳಿದರು ಕೇಳುತ್ತಿಲ್ಲಾ ಅಂತಾ ಅಂದನು ಆಗ ನಾನು ಆಸ್ತಿ ನನ್ನ ತಮ್ಮನ ಮಗನಿಗೆ ಸೇರಿದ್ದು ಇರುತ್ತದೆ, ಅದಕ್ಕು ನನಗು ಸಂಬಂಧ ಇರುವುದಿಲ್ಲ ಅಂತಾ ಅಂದಾಗ ಹುಚ್ಚಪ್ಪ ಇವನು ಅಲ್ಲೆ ಬಿದ್ದಿದ ಕಲ್ಲನ್ನು ತೆಗೆದುಕೊಂಡು ನನ್ನ ತಲೆಯ ಮೇಲೆ ಹೊಡೆದು ರಕ್ತಗಾಯ ಪಡಿಸಿದನು, ಅವನೊಂದಿಗೆ ಬಂದಿದ ಅವನ ತಮ್ಮನ ಮಗ ಧರೆಪ್ಪ ತಂದೆ ಮಾಣಿಕ ಸಿಂದೆ ಇವನು ನನ್ನ ಕೈ ತಿರುವಿ ಬೆನ್ನಿನ ಮೇಲೆ ಹೊಡೆದನು, ಆಗ ಹುಚ್ಚಪ್ಪ ಇವನು ಈಮಗನಿಗೆ ಇವತ್ತ ಬಿಡಬ್ಯಾಡ ಹೊಡೆದು ಖಲಾಸ ಮಾಡು ಅಂತಾ ಜೀವದ ಭೆದರಿಕೆ ಹಾಕಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

15 May 2014

Gulbarga District Reported Crimes

ಅಪಘಾತ ಪ್ರಕರಣಗಳು :
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ನೀಲಕಂಠ ತಂದೆ ಚನ್ನಬಸಪ್ಪ ಮಾಲೀಪಾಟೀಲ ಸಾ: ಯಲಕಪಳ್ಳಿ ತಾ: ಚಿಂಚೋಳಿ ಜಿಲ್ಲಾ:  ಗುಲಬರ್ಗಾ ಇವರು ದಿನಾಂಕ 15-05-2014 ರಂದು ಬೆಳಿಗ್ಗೆ 9-15 ಗಂಟೆ ಸುಮಾರಿಗೆ ಎಸ್.ವಿ.ಪಿ ಸರ್ಕಲದಿಂದ ಪಿ.ಡಿ.ಎ ಕಾಲೇಜ ರೋಡಿನಲ್ಲಿ ಬರುವ ಮಹಾರಾಜ ಹೋಟಲ ಕಡೆಗೆ ನಡೆದುಕೊಂಡು ಹೋಗಿ ಅದರ ಎದುರುಗಡೆ ಇರುವ ಗಲ್ಲಿಯಲ್ಲಿ ಏಕಿ ಮಾಡಿ ವಾಪಸ್ಸ ಮಹಾರಾಜ ಹೋಟಲ ಕಡೆಗೆ ನಡೆದುಕೊಂಡು ರೋಡ ದಾಟುತ್ತಿದ್ದಾಗ ಪಿ,ಡಿ,ಎ ಕಾಲೇಜ ಕಡೆಯಿಂದ ಮೋಟಾರ ಸೈಕಲ ನಂಬರ ಕೆಎ-32 ಎಕ್ಸ-7259 ರ ಸವಾರನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಪಡಿಸಿ ಅಪಘಾತ ಮಾಡಿ ಭಾರಿಗಾಯಗೊಳಿಸಿ ಮೋ/ಸೈಕಲ ಸಮೇತ ಹೊರಟು ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಫರತಾಬಾದ ಠಾಣೆ : ಶ್ರೀ ಗಂಗಾಧರ ತಂದೆ ಮೊನಪ್ಪ ಬಡಿಗೇರ ಸಾ:ಹುಲ್ಲೂರ ಹಾ:ವ:ಜೇವರ್ಗಿ ಜಿ:ಗುಲಬರ್ಗಾ ರವರ ಅಣ್ಣನಾದ ರಮೇಶ ಇತನು ಅಳಿಯನ ಬಟ್ಟೆ ಖರಿದಿಸಲು ಮತ್ತು ಲಗ್ನ ಪತ್ರಗಳನ್ನು ತೆಗೆದುಕೊಂಡು ಬರುವ ಸಲುವಾಗಿ ತನ್ನ ಮೋಟರ್‌ ಸೈಕಲ್‌ ನಂ. ಕೆಎ 32 ಇಸಿ-9217 ನೇದ್ದನ್ನು ತೆಗೆದುಕೊಂಡು ನಿನ್ನೆ ದಿನಾಂಕ:14/05/2014 ರಂದು ಬೆಳಗ್ಗೆ 10:30 ಗಂಟೆಯ ಸುಮಾರಿಗೆ ನಮ್ಮ ಅತ್ತಿಗೆ ಧಾನಮ್ಮ ಮತ್ತು ನಮಗೆ ಹೇಳಿ ಗುಲಬರ್ಗಾಕ್ಕೆ ಹೋಗಿದ್ದು ದಿನಾಂಕ: 14/05/2014 ರಂದು ರಾತ್ರಿ 11:15 ಗಂಟೆಯ ಸುಮಾರಿಗೆ ನಾನು ನಮ್ಮ ಮನೆಯಲ್ಲಿ ಮಲಗಿಕೊಂಡಾಗ ನಮ್ಮಣ್ಣ ರಮೇಶ ಇತನ ಮೋಬೈಲ್‌ ಫೋನ್‌ದಿಂದ ಯಾರೋ ನನಗೆ ಫೊನ್ ಮಾಡಿ ತಿಳಿಸಿದ್ದೆನಂದರೆ, ಈಗ ರಾತ್ರಿ 11 ಗಂಟೆಯ ಸುಮಾರಿಗೆ ರಾಷ್ಟ್ರೀಯ ಹೆದ್ದಾರಿ 218 ರಸ್ತೆಯ ಬೀಮಾ ಬ್ರೀಡ್ಜ ಸಮೀಪ ಹಸನಾಪೂರ ಕ್ರಾಸ್‌ ಹತ್ತಿರ ಮೋಟರ್‌ ಸೈಕಲ್‌ ನಂ. ಕೆಎ 32 ಇಸಿ-9217 ನೇದ್ದರ ಮೇಲೆ ಗುಲಬರ್ಗಾ ಕಡೆಯಿಂದ ಜೇವರ್ಗಿ ಹೊರಟಿದ್ದ ಈ ಮೋಬೈಲ್‌ನ ವ್ಯಕ್ತಿ ರೋಡಿನ ಎಡಬಾಗದಲ್ಲಿ ಹೋಗುತ್ತಿದ್ದಾಗ ಎದುರುಗಡೆಯಿಂದ ಒಬ್ಬ ಲಾರಿ ನಂ ಕೆ.ಎ- 25 ಎ-4398 ನೇದ್ದರ ಚಾಲಕನು ತನ್ನ ವಾಹನವನ್ನು ಅತೀವೇಗ ಮತ್ತು ಆಲಕ್ಷ್ಯತನದಿಂದ ನಡೆಯಿಸಿಕೊಂಡು ಬಂದು ಮೊಟರ್‌ ಸೈಕಲ್‌ ನಂ ಕೆಎ 32 ಇಸಿ-9217 ನೇದ್ದಕ್ಕೆ ಡಿಕ್ಕಿ ಪಡಿಸಿ ವಾಹನವನ್ನು ಸ್ಥಳದಲ್ಲಿ ಬಿಟ್ಟು ಓಡಿ ಹೋಗಿರುತ್ತಾನೆ. ಇದರಿಂದ ಮೊಟರ್‌ ಸೈಕಲ್‌ ಮೇಲೆ ಇದ್ದ ವ್ಯಕ್ತಿಯ ತಲೆಗೆ, ಕಾಲಿಗೆ, ತೊಡೆಗೆ, ಕೈಗಳಿಗೆ ಭಾರಿ ರಕ್ತಗಾಯವಾಗಿ ಸ್ಥಳದಲ್ಲಿಯೆ ಮೃತ ಪಟ್ಟಿರುತ್ತಾನೆ ಅಂತಾ ತಿಳಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.