POLICE BHAVAN KALABURAGI

POLICE BHAVAN KALABURAGI

28 March 2014

Gulbarga District Reported Crimes

ಅಪಘಾತ ಪ್ರಕರಣ :
ಜೇವರ್ಗಿ ಠಾಣೆ : ದಿನಾಂಕ 27-3-14 ರಂದು ರಾತ್ರಿ 7-20 ಗಂಟೆಗೆ ಕೆಲ್ಲೂರ – ಆಂದೋಲಾ ರೋಡ ಕೆಲ್ಲೂರ ಯು.ಕೆ.ಪಿ ಕ್ಯಾಂಪ ಎದರು ರೋಡಿನ ಮೇಲೆ ಶ್ರೀ ಮಹಾದೇವ ತಂದೆ ಮರೆಪ್ಪ ಯಾಳವಾರ  ಸಾ: ಜೈನಾಪೂರ  ತಾ: ಜೇವರಗಿ  ರವರ  ತಂದೆ ಮರೆಪ್ಪ ಯಾಳವಾರ ಇತನು ಆಟೋ ರೀಕ್ಷಾ ನಂ ಕೆ.ಎ-33-6604 ನೇದ್ದರಲ್ಲಿ ಕುಳಿತು ಜೈನಾಪೂರ ಕಡೆಗೆ ಬರುತ್ತಿದ್ದಾಗ ಅದೇ ವೇಳೆಗೆ ಆಂದೊಲಾ ಕಡೆಯಿಂದ ಟ್ರಾಕ್ಟರ ನಂ ಕೆ.-32, ಟಿ-4758 ನೇದ್ದರ ಚಾಲಕನು ಟ್ರಾಕ್ಟರನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ಆಟೋ ರೀಕ್ಷಾ ಬಲ ಸೈಡಿನಲ್ಲಿ ಕುಳಿತ ನಮ್ಮ ತಂದೆಗೆ ಡಿಕ್ಕಿ ಪಡಿಸಿದ್ದರಿಂದ  ನಮ್ಮ ತಂದೆಗೆ  ಭಾರಿ ಗಾಯಗೊಂಡಿದ್ದನು ನೋಡಿ  ಟ್ರಾಕ್ಟರ ಸ್ಥಳದಲ್ಲಿ ಬಿಟ್ಟು ಓಡಿ ಹೋಗಿರುತ್ತಾನೆ ನಂತರ ನಮ್ಮ ತಂದೆಗೆ ಉಪಚಾರ ಕುರಿತು ಜೇವರಗಿ ಸರಕಾಗಿ ಆಸ್ಪತ್ರೆಯಲ್ಲಿ ತಂದು ಸೇರಿಕೆ ಮಾಡಿದಾಗ ರಾತ್ರಿ 8-30 ಗಂಟೆಗೆ ಮೃತಪಟ್ಟಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಕ್ರಮವಾಗಿ ಮಧ್ಯ ಸಾಗಿಸುತ್ತಿದ್ದವನ ಬಂಧನ :
ಮಾಹಾಗಾಂವ ಠಾಣೆ : ದಿನಾಂಕ 27-03-2014 ರಂದು ಮಾಹಾಗಾಂವ ಕಡೆಯಿಂದ ವ್ಯಕ್ತಿ  ಪಾಸ್ಟಿಕ ಚೀಲದಲ್ಲಿ ಅಕ್ರಮವಾಗಿ ಮದ್ಯ ಸಂಗ್ರಹಿಸಿಕೊಂಡು ದಸ್ತಾಪೂರ ಗ್ರಾಮದ ಕಡೆಗೆ ಹೊರಟಿದ್ದಾನೆ ಎಂದು ಖಚಿತವಾದ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ ಮಾಹಾಗಾಂವ ಮತ್ತು ಸಿಬ್ಬಂದಿಯವರು ಹಾಗು ಪಂಚರೊಂದಿಗೆ  ಮಾಹಾಗಾಂವ  ಗ್ರಾಮದ ಹತ್ತಿರ ಇದ್ದ ನಾಲಾದ ಹತ್ತಿರ  ಬಾತ್ಮಿ ವ್ಯಕ್ತಿ ಬರುವಿಕೆಗಾಗಿ ಕಾಯುತ್ತಾ ನಿಂತಾಗ ಮಧ್ಯಾಹ್ನ 12-45 ಗಂಟೆಗೆ ಮಾಹಾಗಾಂವ ಕ್ರಾಸ ರೋಡ ಕಡೆಯಿಂದ ಒಬ್ಬ ವ್ಯಕ್ತಿ ತಲೆಯ ಮೇಲೆ ಒಂದು  ಪ್ಲಾಸ್ಟಿಕ ಚೀಲ ಇಟ್ಟುಕೊಂಡು ಬರುತ್ತಿದ್ದನ್ನು ನೋಡಿ, ನಾನು ಮತ್ತು ಸಿಬ್ಬಂದಿಯವರು ಹಿಡಿದು,ಪಾಸ್ಟಿಕ ಚೀಲದಲ್ಲಿ ಏನಿದೆ ಅಂತಾ ಕೇಳಲು ಅವನು ತಡವರಿಸುತ್ತಾ ಸರಾಯಿ ಬಾಟಲಿಗಳಿವೆ ಎಂದು ತಿಳಿಸಿದನು. ಅವನ ಹೆಸರು ವಿಳಾಸ ವಿಚಾರಿಸಲೂ ಅವನು ತನ್ನ ಹೆಸರು  ಮಾಹಾಂತಪ್ಪ ತಂದೆ ಶಿವಲಿಂಗಪ್ಪ ದಮ್ಮೂರ ಸಾ: ಮಾಹಾಗಾಂವ ವಾಡಿ ಗ್ರಾಮ ಅಂತಾ ತಿಳಿಸಿದನು. ಅವನ ಹತ್ತಿರವಿದ್ದ ಪಾಸ್ಟಿಕ ಚೀಲವನ್ನು ಪರಿಶೀಲಿಸಿ ನೋಡಲಾಗಿ ಅದರಲ್ಲಿ  ಯು.ಎಸ್. ವಿಸ್ಕಿ 180 ಎಂಎಲವುಳ್ಳ 23  ಗಾಜಿನ ಬಾಟಲಿಗಳಿರುತ್ತೇವೆ.. ಅ:ಕಿ: 1104 ರೂ. ಅಗುತ್ತದೆ. ಸದರಿಒಯವನಿಗೆ ದಸ್ತಗೀರ ಮಾಡಿಕೊಂಡು ಮುದ್ದೇಮಾಲಿನೊಂದಿಗೆ ಮರಳಿ ಠಾಣೆಗೆ ಬಂದು ಸದರಿಯವನ ವಿರುದ್ಧ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಣ್ಣುಮಗಳು ಕಾಣೆಯಾದ ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ಶರಣಪ್ಪ @ ಬಾಬು ತಂದೆ ಸಿದ್ರಾಮಪ್ಪ ಮ್ಯಾಳಸಿ ಸಾ : ಅಕ್ಕಮಾಹಾದೇವಿ ಕಾಲನಿ ಅಫಜಲಪೂರ ರವರ ಮಗಳಾದ ಸುಹಾಸಿನಿ ಇವಳಿಗೆ ಈಗ 5-6 ತಿಂಗಳ ಹಿಂದೆ ಹೇರಿಗೆ ಆಗಿದ್ದು, ಒಂದು ಗಂಡು ಮಗು ಆಗಿದ್ದು, ತನ್ನ ಮಗುವಿನೊಂದಿಗೆ ನನ್ನ ಮಗಳು ಈಗ ನನ್ನ ಮನೆಯಲ್ಲಿಯೆ ಇರುತ್ತಾಳೆ. ದಿನಾಂಕ 24-02-2014 ರಂದು ಬೆಳಿಗ್ಗೆ 9-00 ಗಂಟೆಗೆ ನಾನು ನಮ್ಮ ಅಂಗಡಿಗೆ ಹೊಗಿದ್ದು. ನನ್ನ ಹೆಂಡತಿ ಲಲೀತಾ ಇವಳು ನಮ್ಮ ಸಂಬಂದಿಕರಲ್ಲಿ  ಸತ್ತಿದ್ದರಿಂದ ಆಲಮೇಲಕ್ಕೆ ಹೊಗಿರುತ್ತಾಳೆ. ನನ್ನ 2 ನೇ ಮಗಳು ಮತ್ತು ನನ್ನ ಮಗ ಇಬ್ಬರು ಶಾಲೆಗೆ ಹೊಗಿರುತ್ತಾರೆ. ಮನೆಯಲ್ಲಿ ನನ್ನ ಮಗಳಾದ ಸುಹಾಸಿನಿ ಮತ್ತು ನಾಗಣಸೂರ ಗ್ರಾಮದ ನಮ್ಮ ಸಂಭಂದಿಕನಾದ ಹಿರಿಗೆಪ್ಪ ಧನಶೇಟ್ಟಿ ಇವರ ಮಗಳಾದ ಅಂಬು ಇಬ್ಬರು ಮನೆಯಲ್ಲಿ ಇದ್ದಿರುತ್ತಾರೆ. ಅದೆ ದಿನ ಅಂದಾಜು ಮದ್ಯಾಹ್ನ 2:00 ಗಂಟೆ ಸುಮಾರಿಗೆ ಊಟಕ್ಕೆ ಎಂದು ಮನೆಗೆ ಬಂದಾಗ, ಮನೆಯಲ್ಲಿ ಅಂಬು ಒಬ್ಬಳೆ ಇದ್ದದ್ದು ನೋಡಿ, ನನ್ನ ಮಗಳಾದ ಸುಹಾಸಿನಿ ಇವಳು ಎಲ್ಲಿ ಹೊಗಿರುತ್ತಾಳೆ ಎಂದು ಕೇಳಿದೆನು, ಆಗ ಅಂಬು ಇವಳು ತಿಳಿಸಿದ್ದು, ಸುಹಾಸಿನಿ ಇವಳು ಅಂದಾಜು ಮದ್ಯಾಹ್ನ 1:00 ಗಂಟೆ ಸುಮಾರಿಗೆ ಸ್ವಲ್ಪ ಕೆಲಸ ಇದೆ, ಇಲ್ಲೆ ಹೊರಗೆ ಹೊಗಿ ಬರುತ್ತೆನೆ ಅಂತಾ ತನ್ನ ಮಗುವನ್ನು ಮನೆಯಲ್ಲಿಯೆ ಬಿಟ್ಟು ಮನೆಯಿಂದ  ಹೊಗಿರುತ್ತಾಳೆ ಅಂತಾ ತಿಳಿಸಿದಳು, ನಂತರ ನನ್ನ ಹೆಂಡತಿ ಮತ್ತು ಮಕ್ಕಳು ಬಂದಿದ್ದು, ನನ್ನ ಮಗಳಾದ ಸುಹಾಸಿನಿ ಇವಳು ಮನೆಗೆ  ಬರದೆ ಇದ್ದರಿಂದ, ನಾವು ಎಲ್ಲರೂ ಅಫಜಲಪೂರ ಪಟ್ಟಣದಲ್ಲಿ ಎಲ್ಲಾ ಕಡೆ ಹುಡುಕಾಡಿದೆವು, ಆದರೂ ನನ್ನ ಮಗಳು ಎಲ್ಲಿಯೂ ಸಿಗಲಿಲ್ಲ, ನಂತರ ಅಂದಿನಿಂದ ಇಂದಿನ ವರೆಗೆ ಅವಳ ಗಂಡನ ಮನೆಯವರಿಗೆ, ಮತ್ತು ಚೌಡಾಪೂರ, ಗುಲಬರ್ಗಾ, ಆಲಮೇಲ, ದುಧನಿ, ಸೊಲ್ಲಾಪೂರ, ಪೂನಾ ಎಲ್ಲಾ ಕಡೆ ಹುಡುಕಾಡಲಾಗಿ ನನ್ನ ಮಗಳು ಎಲ್ಲಿಯೂ ಸಿಕ್ಕಿರುವುದಿಲ್ಲ, ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ನಿಂಬರ್ಗಾ ಠಾಣೆ : ಶ್ರೀ ಗಿರಿಮಲ್ಲತಂದೆ ಶಿವಲಿಂಗಪ್ಪ ವಾರದ  ಸಾಹಿತ್ತಲಶೀರೂರ ಇವರು  ದಿನಾಂಕ 26,27-03-2014 ರಂದು  ರಾತ್ರಿ 11-30  ಪಿ.ಎಮ್ ದಿಂದ 1-30  .ಎಮ್ ಮಧ್ಯಾವಧಿಯಲ್ಲಿ  ಯಾರೋ  ಕಳ್ಳರು  ತನ್ನ  ಮನೆಗೆ  ನುಗ್ಗಿ  ಮನೆಯಲ್ಲಿನ ಕಬ್ಬಿಣದ ಪೆಟ್ಟಿಗೆಯ ಕೊಂಡಿ ಮುರಿದು ಪೆಟ್ಟಿಗೆಯಲ್ಲಿ ಇದ್ದ 80,000=00 ನಗದು ಹಣ ಹಾಗೂ  90,000=00 ರೂ ಮೌಲ್ಯದ   ಒಂದು ತೋಲೆ ಬಂಗಾರದ ಲಾಕೀಟ್,  ಎರಡುತೋಲೆಯ ಬಂಗಾರದ ಎರಡೆಳೆಯ ಸರಅರ್ಧ ತೋಲೆ ಬಂಗಾರದ ಸುತ್ತುಂಗುರ ಹೀಗೆ ಒಟ್ಟು 1,70,000=00 ರೂ ಮೌಲ್ಯದ ಹಣಮತ್ತು ಬಂಗಾರವನ್ನು ನನ್ನ ಮನೆಯಿಂದ ಹಾಗೂ ನನ್ನಬಾಜು ಮನೆಯವರಾದ ಶ್ರೀಮತಿ ಮಾಹಾನಂದ ಗಂಡ ಕಲ್ಯಾಣಿ ವಾರದಇವರ ಮನೆಯ ಬಾಗಿಲು ಮುರಿದು ಅವರ ಮನೆಯಲ್ಲಿ ಇದ್ದ 10,000=00 ನಗದು ಹಣ ಹಾಗೂ 1500=00 ರೂ ಮೌಲ್ಯದ ಒಂದುಜೋತೆ ಬೆಳ್ಳಿ ಚೈನ್ ಹೀಗೆ ಒಟ್ಟು 1,81,500=00 ರೂಪಾಯಿ ಮೌಲ್ಯದ ಹಣಬಂಗಾರಬೆಳ್ಳಿ ಯನ್ನು ಯಾರೋ ಕಳ್ಳರು ಕಳ್ಳತನಮಾಡಿಕೊಂಡು ಹೋಗಿರುತ್ತಾರೆ ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

27 March 2014

Gulbarga District Reported Crimes

ಅಸ್ವಾಭಾವಿಕ ಸಾವು ಪ್ರಕರಣ :
ಮಾಹಾಗಾಂವ ಠಾಣೆ : ಲಲಿತಾಬಾಯಿ ಇವಳಿಗೆ ಕಳೆದ ಮೂರು ವರ್ಷಗಳಿಂದ ತನಗೆ ಹೃದಯ ಕಾಯಿಲೆ ಗುಣಮುಖವಾಗದೇ ಇದುದ್ದರಿಂದ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 26-3-14 ರಂದು ಮಧ್ಯಾಹ್ನ 1-00 ಗಂಟೆ ಊರಿನಿಂದ ಕುರಿಕೋಟಾ ಗ್ರಾಮ ಆಸ್ಪತ್ರೆಗೆ ಹೋಗಿ ತೋರಿಸಿಕೊಂಡು ಬರುತ್ತೇನೆಂದು ಹೇಳಿ  ಹೋದವಳು ಕುರಿಕೋಟಾ ಗ್ರಾಮದ ಹಳ್ಳದಲ್ಲಿ 5 ಪಿಎಂದ ಮಧ್ಯದ ಅವಧಿಯಲ್ಲಿ ಬಿದ್ದು ಮೃತಪಟ್ಟಿರುತ್ತಾಳೆ. ಅಂತಾ ರಾಮಚಂದ್ರ ತಂದೆ ಶಿವಶರಣಪ್ಪ ಕಣ್ಣೂರ ಸಾ : ಅಂಕಲಗಿ ಇವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ಕಮಲಾಪೂರ ಠಾಣೆ : ಶ್ರೀ ಶಿವಕುಮಾರ ತಂದೆ ರಾಜಶೇಖರ ಕಛೇರಿ ಸಾ: ಕಮಲಾಪೂರ ಇವರು ಠಾಣೆಗೆ ದಿನಾಂಕ: 25/03/2104 ರಂದು ರಾತ್ರಿ 9-30 ಗಂಟೆಗೆ ಮನೆಯಲ್ಲಿ ನಾನು ಮತ್ತು ನನ್ನ ತಾಯಿಯಾದ ಶಾಂತಾಬಾಯಿ ಇಬ್ಬರು ಕೂಡಿಕೊಂಡು ಊಟ ಮಾಡಿ ಮನೆಯ ಮೊದಲನೇ ಮಹಡಿಯಲ್ಲಿ ಮಲಗಿಕೊಂಡು ಬೆಳಿಗ್ಗೆ 5-00 ಗಂಟೆಗೆ ಎದ್ದು ಕೆಳಗಡೆ ಬಂದುನೋಡಲಾಗಿ, ಮನೆಯ ಮುಖ್ಯ ದ್ವಾರದ ಕೀಲಿ ಮುರಿದಿದ್ದು. ಆಗ ನಾವು ಗಾಬರಿಗೊಂಡು ಮನೆಯ ಒಳಗಡೆ ಹೋಗಿ ನೋಡಲಾಗಿ, ಅಲ ಮಾರಿಯ ಡೋರ ತೆರೆದಿದ್ದು ಅಲಮಾರಿಯಲ್ಲಿಟ್ಟಿದ್ದ ಸೀರೆಗಳು ಚೆಲ್ಲಾಪಿಲ್ಲಿಯಾಗಿದ್ದವು ಆಗ ನಾವು ಅಲಮಾರ ಚಕ್ ಮಾಡಲಾಗಿ ಅಲಮಾರಿಯಲ್ಲಿಟ್ಟಿದ್ದ ಬಂಗಾರದ ಆಭರಣಗಳು, ಬೆಳ್ಳಿಯ ಆಭರಣಗಳು ಹೀಗೆ ಒಟ್ಟು 5,75,500-00 ರೂ. ಕಿಮ್ಮತ್ತಿನ ಬಂಗಾರ , ಬೆಳ್ಳಿಮತ್ತು ನಗದು ಹಣ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಹಲ್ಲೆ ಪ್ರಕರಣಗಳು :
ಮಳಖೇಡ ಠಾಣೆ : ಶ್ರೀಮತಿ ಲತಾಬಾಯಿ ಗಂಡ ಸೇವು ಪವಾರ್ ಸಾ|| ಸ್ಟೇಷನ್ ತಾಂಡಾ  ತಾ|| ಸೇಡಂ ರವರು ತನ್ನ ನೆಗಣೆಯಾದ  ಮಹಾದೆವಿ ಮನೆಯ ಮುಂದೆ ನಿಂತುಕೊಂಡಾಗ 1.ದೇವ್ಯಾ ತಂದೆ ಭಿಮಲಾ ಚವ್ಹಾಣ 2. ಶ್ಯಾಂತ್ಯಾ 3. ಆನಂದ  4. ನೀಲಾಬಾಯಿ  5. ಪಿಂಕಿ 6. ಸರೋಜಾ 7. ಲಕ್ಷ್ಮಿ  8. ಸುಮಿತ್ರಾಬಾಯಿ ಸಾ|| ಎಲ್ಲರು ಸ್ಟೇಷನ್ ತಾಂಡಾ  ತಾ||  ಸೇಡಂ ಎಲ್ಲರು ಕೊಡಿಕೊಂಡು ಅಕ್ರಮ ಕೂಟ ರಚಿಸಿಕೊಂಡು ಬಂದು ಫಿರ್ಯಾದಿಗೆ ಅವಾಚ್ಯವಾಗಿ ಬೈದು ಸಿರೆಯನ್ನು ಹಿಡಿದು ಎಳೆದಾಡಿ ಮಾನಭಂಗ ಮಾಡಲು ಪ್ರಯತ್ನ ಮಾಡಿ ಫಿರ್ಯಾದಿದಾರಳಿಗೆ ಹೊಡೆ-ಬಡೆ ಮಾಡಿ  ದುಃಖಾಪಾತ ಗೋಳಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಳಖೇಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಳಖೇಡ ಠಾಣೆ : ಶ್ರೀಮತಿ  ನೀಲಾಬಾಯಿ ಗಂಡ ದೇವಿಂದ್ರ ಚವ್ಹಾಣ ಸಾ|| ಸ್ಟೇಷನ್ ತಾಂಡಾ ಮಳಖೇಡ ಗ್ರಾಮ ತಾ|| ಸೇಡಂ ಫ್ಲ್ಯಾಟ್ ಹತ್ತಿರ ನಿಂತುಕೊಂಡಾಗ 1.ಶಂಕರ ತಂದೆ ಸುರೇಶ ಚವ್ಹಾಣ 2. ಕುಪೇಂದ್ರ ತಂದೆ ಭಿಮಲಾ ಪವಾರ್ 3. ಸಚೀನ್ ತಂದೆ ಶಂಕರ್ 4. ಆಶಿಕಾ 5. ಲತಾಬಾಯಿ 6. ಮಹಾದೇವಿ 7. ಲಲಿತಾಬಾಯಿ 8. ಶಂಕರ  ಸಾ|| ಎಲ್ಲರು ಸ್ಟೇಷನ್ ತಾಂಡಾ  ಎಲ್ಲರು ಕೂಡಿಕೊಂಡು  ಅಕ್ರಮ ಕೂಟ ರಚಿಸಿಕೊಂಡು ಬಂದು ಫಿರ್ಯಾದಿಗೆ ಅವಾಚ್ಯವಾಗಿ ಬೈದು ಸಿರೆಯನ್ನು ಹಿಡಿದು ಎಳೆದಾಡಿ ಮಾನಭಂಗ ಮಾಡಲು ಪ್ರಯತ್ನ ಮಾಡಿ ಫಿರ್ಯಾದಿದಾರಳಿಗೆ ಹೊಡೆ-ಬಡೆ ಮಾಡಿ ದುಃಖಾಪಾತ ಗೋಳಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಳಖೇಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

26 March 2014

Gulbarga District Reported Crimes

ಮಾಂಗಲ್ಯ ಸರ ಕಿತ್ತುಕೊಂಡು ಹೋದ ಪ್ರಕರಣ :
ಮಾಹಾತ್ಮಾ ಬಸವೇಶ್ವರ ನಗರ ಠಾಣೆ : ಶ್ರೀಮತಿ ಮಂಗಲಾ ಗಂಡ ಬಸವರಾಜ ಬೇಲೂರ ಸಾಃ ಆದರ್ಶ ನಗರ ಗುಲಬರ್ಗಾ ಇವರು ದಿನಾಂಕ 25/03/2014 ರಂದು ಸಾಯಂಕಾಲ 07:00 ಪಿ.ಎಂ. ಸುಮಾರಿಗೆ ಸ್ವಸ್ತಿಕ ನಗರದಲ್ಲಿರುವ ನನ್ನ ಅಕ್ಕ ಪ್ರಮೀಣಾ ಇವರಿಗೆ ಮತನಾಡಿಸಿ, ನನ್ನ ಮಗಳು ಪೂಜಾ ಇವಳಿಗೆ ಕರೆದುಕೊಂಡು ನಾವಿಬ್ಬರೂ ಸ್ವಸ್ತಿಕ ನಗರದಲ್ಲಿ ಟೊಯೊಟೋ ಶೋರೂಮ ಹಿಂದುಗಡೆ ನಡೆದುಕೊಂಡು ಹೋಗುತ್ತಿರುವಾಗ ಅಂದಾಜು ಸಮಯ 07:25 ಪಿ.ಎಂ. ಸುಮಾರಿಗೆ ನನ್ನ ಹಿಂದುಗಡೆಯಿಂದ ಒಬ್ಬ ಅಪರಿಚಿತ ಮೋಟಾರ ಸೈಕಲ ಸವಾನು ಬಂದವನೇ ನನ್ನ ಕೊರಳಿಗೆ ಕೈ ಹಾಕಿ ಕೊರಳ್ಳಿದ್ದ 05 ತೊಲೆ ಬಂಗಾರದ ಮಂಗಳಸೂತ್ರ ಅಃಕಿಃ 1,25,000/- ರೂ ಬೆಲೆ ಬಾಳುವುದನ್ನು ಜಬರದಸ್ತಿಯಿಂದ ಕಿತ್ತುಕೊಂಡು ಹೋಗಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾತ್ಮಾ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣಗಳು :
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ಸಿದ್ದಲಿಂಗ ಗುಂಡಪ್ಪ ಹೂಗಾರ  ಸಾ: ಸಾವಳಗಿ (ಬಿ) ಹಾ:ವ: ಶರಣ ನಗರ ಗುಲಬರ್ಗಾ ರವರು ದಿನಾಂಕ 25-03-2014  ರಂದು ಮದ್ಯಾಹ್ನ 03-30  ಗಂಟೆ ಸುಮಾರಿಗೆ ಸುಪರ ಮಾರ್ಕೆಟ ಕಡೆಯಿಂದ ಲಾಲಗೇರಿ ಕ್ರಾಸ್ ಕಡೆಗೆ ಸಿಟಿ ಬಸ ನಿಲ್ದಾಣ ಮುಖಾಂತರ ನನ್ನ ಬೈಸಿಕಲ ಮೇಲೆ ಹೋಗುವಾಗ ಸಿಂದಗಿ ಅಂಭಾ ಭವಾನಿ ದೇವಸ್ಥಾನದ ಎದುರಿನ ರೋಡ ಮೇಲೆ ಎದುರಿನಿಂದ ಯಾವುದೊ ಒಂದು ಮೋಟಾರ ಸೈಕಲ ಸವಾರ ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನ್ನ ಬೈಸಿಕಲಕ್ಕೆ ಡಿಕ್ಕಿ ಪಡಿಸಿ ಅಪಘಾತ ಮಾಡಿ ನನಗೆ ಗಾಯಗೊಳಿಸಿ ವಾಹನ ಸಮೇತ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂಚಾರಿ ಠಾಣೆ : ದಿನಾಂಕ 25-03-2014 ರಂದು 9-30 ಎ.ಎಮ್ ಕ್ಕೆ ದರ್ಗಾ ರೋಡಿನಲ್ಲಿ ಇರುವ ಪರಾನಾ ಸ್ಕೂಲ ಎದರುಗಡೆ ಕಾರ ನಂ. ಕೆ.ಎ 22 ಎನ್ 2822 ನೇದ್ದರ ಚಾಲಕನು  ಮುಸ್ಲಿಂ ಚೌಕ ಕಡೆಯಿಂದ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ಶ್ರೀ ಮಹ್ಮದ ಅಜಮ ತಂದೆ ಮಹ್ಮದ ಅಫ್ಜಲ  ಸಾಃ ಜುಬೇರ ಕಾಲೂನಿ ಹಾಗರಗಾ ರೋಡ ಗುಲಬರ್ಗಾ ಚಲಾಯಿಸಿಕೊಂಡು ಹೋಗುತ್ತಿದ್ದ ಟಿವಿ.ಎಸ್ ಎಕ್ಸ.ಎಲ್ ನಂ ಕೆ.ಎ 32 ವಿ 4901 ನೇದ್ದಕ್ಕೆ ಡಿಕ್ಕಿ ಪಡಿಸಿ ಅದೇ ವೇಗದಲ್ಲಿ ಡಂಕಾ ಕ್ರಾಸದಲ್ಲಿ ತಿರುಗಿಸಿಕೊಂಡು ಸ್ಕೂಟಿ ನಂ. ಕೆ.ಎ 32 ಡಬ್ಲು 5632 ನೇದ್ದಕ್ಕೆ ಡಿಕ್ಕಿ ಪಡಿಸಿ ರೋಡಿನ ಪಕ್ಕದ ವಿದ್ಯುತ ಕಂಬಕ್ಕೆ ಡಿಕ್ಕಿ ಪಡಿಸಿ ಅಪಘಾತ ಮಾಡಿ ತನ್ನ ಕಾರ ಅಲ್ಲಿಯೆ ಬಿಟ್ಟು ಓಡಿ ಹೋಗಿದ್ದು ಅಪಘಾತದಲ್ಲಿ ಫಿರ್ಯಾದಿಗೆ ಹಾಗೂ ಶ್ರೀಮತಿ ಪುಷ್ಪಾ ಹಾಗೂ ದ್ವಿಚಕ್ರ ಸೈಕಲ ಅಂಗವಿಕಲ ಜಗನಾಥ ಇವರಿಗೆ ಗಾಯಗಳಾಗಿರುತ್ತವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಫರತಾಬಾದ ಠಾಣೆ : ಶ್ರೀ  ಅಬ್ದುಲ್ ನಬಿ ತಂದೆ ಅಬ್ದುಲ್ ರಸೀದ ಜಮಾದಾರ ಸಾ: ವಡ್ಡಳ್ಳಿ ತಾ: ಅಫಜಲಪೂರ ಜಿ: ಗುಲಬರ್ಗಾ  ಮತ್ತು ಗೆಳೆಯ ಮೀರಾ ಪಟೇಲ ಪೊಲೀಸ್ ಬಿರಾದಾರ ಇಬ್ಬರು ಊಟ ಮಾಡಿಕೊಂಡು ಜೇವರ್ಗಿಗೆ ನಮ್ಮ ಮರಳಿನ ಟಿಪ್ಪರಗಳು ಶಹಾಪೂರದಿಂದ ಬರುತ್ತಿದ್ದು, ಅಲ್ಲಿಗೆ ಹೋಗೋಣಾ ಅಂತಾ ಮೀರಾ ಪಟೇಲ ತಿಳಿಸಿದನು. ನಂತರ ಗುಲಬರ್ಗಾದಿಂದ ರಾತ್ರಿ 11-30 ಗಂಟೆಯ ಸುಮಾರಿಗೆ ಜೇವರ್ಗಿಗೆ ಹೋಗಲು ಅವರ ಸ್ಪಿಟ್ ಕಾರ ನಂ: ಕೆಎ-26 ಎಮ-2595 ನೇದ್ದರಲ್ಲಿ ಕುಳಿತು ಹೊರಟೇವು. ಸದರಿ ಕಾರನ್ನು ನನ್ನ ಗೆಳೆಯ ಮೀರಾ ಪಟೇಲ ಪೊಲೀಸ್ ಬಿರಾದಾರ ಈತನು ಚಲಾಯಿಸುತ್ತಿದನು. ದಿನಾಂಕ: 25-3-2014 ರಂದು 00-30 ಗಂಟೆಯ ಸುಮಾರಿಗೆ ಹೋಗುತ್ತಿದ್ದಾಗ ರಾಷ್ಟ್ರೀಯ ಹೆದ್ದಾರಿ 218 ರಸ್ತೆಯ ನದಿಸಿನ್ನೂರ ಕ್ರಾಸ ದಾಟಿ ಸ್ವಲ್ಪ ಮುಂದೆ ರಸ್ತೆಯ ತಿರುವಿನಲ್ಲಿ ನಮ್ಮ ಗೆಳೆಯ ಮೀರಾ ಪಟೇಲ ಈತನು ತನ್ನ ಕಾರನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ವೇಗದ ನಿಯಂತ್ರಣ ತಪ್ಪಿ ರಸ್ತೆಯ ಎಡಗಡೆ ಬದಿಗೆ ಹೋಗಿ ಕಾರನ್ನು ಪಲ್ಟಿ ಗೊಳಿಸಿದನು. ಇದರಿಂದ ನನಗೆ ಎಡಗಡೆ ಸೊಂಟಕ್ಕೆ ಗುಪ್ತ ಗಾಯವಾಗಿರುತ್ತದೆ. ಮತ್ತು ಕಾರು ಚಲಾಯಿಸುತ್ತಿದ್ದ ಮೀರಾ ಪಟೇಲ ಈತನಿಗೆ ತಲೆಯ ಹಿಂಭಾಗಕ್ಕೆ ಭಾರಿ ರಕ್ತಗಾಯವಾಗಿದ್ದು ಮತ್ತು ಸೊಂಟದ ಹಿಂದಿನ ಭಾಗಕ್ಕೆ ಗುಪ್ತಗಾಯಗಳಾಗಿರುತ್ತವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾಹಾಗಾಂವ ಠಾಣೆ : ಶ್ರೀ ಜಗನಾಥ ತಂದೆ ಸಿದ್ಧಣ್ಣಾ ಮುಕರಂಬಿ ಇವರು  ತನ್ನ  ಮೋಟಾರ ಸೈಕಲ ಸ್ಪೆಂಡರ ಪ್ಲಸ್ ನಂಬರ ಕೆಎ 32 ಎಕ್ಸ್ 6472  ನೇದ್ದನ್ನು ತೆಗೆದುಕೊಂಡು ಬಂದು ಮಾಹಾಗಾಂವ ಗ್ರಾಮದಲ್ಲಿ ತನ್ನ ಕೆಲಸ ಇದೆ ಮೋಟಾರ ಸೈಕಲ ಮೇಲೆ ಹೋಗಿ ಬರೋಣಾ ಅಂತಾ ಹೇಳಿದ್ದರಿಂದ ನಾವು ಇಬ್ಬರು ಆತನ ಮೋಟಾರ ಸೈಕಲ ಮೇಲೆ ಮಾಹಾಗಾಂವ ಗ್ರಾಮಕ್ಕೆ ಹೋಗಿದ್ದು, ಜಗನಾಥನ ಕೆಲಸ ಮುಗಿದ ನಂತರ 12-00 ಪಿಎಂಕ್ಕೆ ಮತ್ತೆ ಅದೇ ಮೋಟಾರ ಸೈಕಲ ಮೇಲೆ ಕುಳಿತುಕೊಂಡು ನಮ್ಮೂರಿಗೆ ಬರುತ್ತಿರುವಾಗ ಜಗನಾಥ ಇತನು ಮೋಟಾರ ಸೈಕಲ ಚಲಾಯಿಸುತ್ತಿದ್ದು, ಹಿಂದೆ ನಾನು ಕುಳಿತಿದಿದ್ದೀ ಅಂಕಲಗಿ ಗ್ರಾಮದ ಹತ್ತಿರ ಬಂದಾಗ, ಜಗನಾಥ ಇತನು ತನ್ನ ವಶದಲ್ಲಿದ್ದ ಮೋಟಾರ ಸೈಕಲನ್ನು ಅತಿವೇಗದಿಂದ ಮತ್ತು ಅಲಕ್ಷತನದಿಂದ ಚಲಾಯಿಸಿ ರೋಡ ಎಡಗಡೆ ಇದ್ದ ಒಂದು ಗೂಟದ ಕಲ್ಲಿಗೆ ಜೋರಾಗಿ ಡಿಕ್ಕಿ ಹೊಡೆದು ಅಪಘಾತಪಡಿಸಿದ್ದರಿಂದ, ನನ್ನ  ಎಡಗಾಲಿಗೆ ಗೂಟಕಲ್ಲು ಜೋರಾಗಿ ಬಡಿದ್ದಿದ್ದರಿಂದ ನನ್ನ ಎಡಗಾಲಿನ ತೊಡೆಗೆ ಭಾರಿ ಗುಪ್ತಗಾಯವಾಗಿ   ತೊಡೆಯಲ್ಲಿ ಕಾಲು ಮುರಿದಿರುತ್ತದೆ. ಹಾಗೂ ಎಡಗಾಲಿನ ಮೊಳಕಾಲ ಕೆಳೆಗೆ ಭಾರಿ ರಕ್ತಗಾಯವಾಗಿದ್ದು, ಪಾದದ ಮಧ್ಯದ ಬೆರಳಿಗೆ ರಕ್ತಗಾಯವಾಗಿರುತ್ತದೆ  ಜಗನಾಥನಿಗೆ ಈ ಅಪಘಾತದಿಂದ ಯಾವುದೇ ಗಾಯವಾಗಿಲ್ಲಾ. ನಂತರ ಆತ ನನಗೆ ಮತ್ತು ಮೋಟಾರ ಸೈಕಲ ಬಿಟ್ಟು ಅಲ್ಲೇ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದುರು ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ಭೀಮರಾಯ ತಂದೆ ಗುಂಡಪ್ಪಾ ವಾಲಿಕಾರ  ಸಾ: ಹನುಮಾನ ಟೆಂಪಲ ಹತ್ತಿರ ಗಂಗಾ ನಗರ ಗುಲಬರ್ಗಾ ರವರು ದಿನಾಂಕ 25-03-2014 ರಂದು ರಾತ್ರಿ 10-00 ಗಂಟೆ ಸುಮಾರಿಗೆ ರವಿ ತಂದೆ ಗುಂಡಪ್ಪ ಇವನು ಮೋಟಾರ ಸೈಕಲ ನಂಬರ ಕೆಎ-32 ಕೆ-1514 ನೇದ್ದರ ಮೇಲೆ ಹಿಂದುಗಡೆ ಕುಳಿತು ಸುಪರ ಮಾರ್ಕೆಟದಿಂದ ಲಾಲಗೇರಿ ಕ್ರಾಸ್ ರೋಡ ಕಡೆಗೆ ಬರುತ್ತಿದ್ದಾಗ ರವಿ ಇತನು ತನ್ನ ಮೋಟಾರ ಸೈಕಲನ್ನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿ ರೋಡಿನ ಎಡಬಲ ಕಟ್ಟ ಹೊಡೆದು ಕಲ್ಯಾಣಿ ಪೆಟ್ರೊಲ ಪಂಪ ಕಡೆಗೆ ಹೋಗುವ ರೋಡ ಕ್ರಾಸ ಹತ್ತಿರ ಸ್ಕಿಡ ಮಾಡಿ ಫಿರ್ಯಾದಿಗೆ ಭಾರಿಗಾಯ ಗೊಳಿಸಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.