POLICE BHAVAN KALABURAGI

POLICE BHAVAN KALABURAGI

23 March 2014

Gulbarga District Reported Crimes

ಜಾತಿ ನಿಂದನೆ ಪ್ರಕರಣ :
ಮಾದನಹಿಪ್ಪರಗಾ ಠಾಣೆ : ಶ್ರೀಮತಿ ಉಮಾಬಾಯಿ ಗಂಡ ನಾಗೇಂದ್ರ ಗಾಯಕವಾಡ ಸಾ: ಕಿಣ್ಣಿ ಅಬ್ಬಾಸ ತಾ: ಆಳಂದ ಇವರು ದಿನಾಂಕ:21-03-2014 ರಂದು 02;30 ಪಿ.ಎಂಕ್ಕೆ ತನ್ನ ಮೊಮ್ಮಗಳಾದ ಕುಶಾ ಇವಳು ಬಾಯಿಗೆ ಖಾರಾ ಹತ್ತಿದೆ ಅಂತಾ ಅಳುತ್ತಾ ಮನೆಗೆ ಬಂದಾಗ ತನ್ನ ಮೊಮ್ಮಗಳು ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಮಾಡಿದ ಬಿಸಿ ಊಟ ಮಾಡಿ ಅಡುಗೆಯಲ್ಲಿನ ಸಾಂಬರದಲ್ಲಿ  ಖಾರಾ ಜಾಸ್ತಿಯಾಗಿ ಬಾಯಿಗೆ  ಖಾರ ಹತ್ತಿದರಿಂದ ನಾನು 02;30 ಪಿ.ಎಂಕ್ಕೆ ಸದರಿ ಸರಕಾರಿ ಶಾಲೆಯ ಆವರಣದಲ್ಲಿ ಹೋಗಿ ಶಾಲೆಯಲ್ಲಿ ಅಡುಗೆ ಮಾಡುವ ಪುತಳಾಬಾಯಿ ಗಂಡ ಶಂಕರ ಇಂಡೆ ಸಾ: ಕಿಣ್ಣಿ ಅಬ್ಬಾಸ ಇವಳಿಗೆ ನೀವು ಅಡುಗೆ ಸಾಂಬಾರನಲ್ಲಿ ಖಾರಾ ಕಡಿಮೆ ಹಾಕಬೇಕು ನನ್ನ ಮೊಮ್ಮಗಳು ಕುಶಾ ಇವಳು ಬಾಯಿಯಲ್ಲಿ  ಖಾರಾ ಹೆಚ್ಚಿಗೆ ಆಗಿದೆ ಎಂದು ಅಳುತ್ತಾ ಮನೆಗೆ ಬಂದಿರುತ್ತಾಳೆ ಎಂದು ಕೇಳಿದಕ್ಕೆ ಸದರಿ ಪುತಳಾಬಾಯಿ ಇಂಡೆ ಇವಳು ನನಗೆ ಅವಾಚ್ಯ ಶಬ್ದಗಳಿಂದ ಬೈದು ಜಾತಿನಿಂದನೆ ಮಾಡಿ  ನಾವು ಅಡುಗೆಯಲ್ಲಿ ಖಾರಾ ಸರಿಯಾಗಿ ಹಾಕುತ್ತೇವೆ. ಶಾಲೆಯ ತನಕ ಬಂದು ಕೇಳತಿ ಅಂತಾ ಅಂದು ಕೈಯಿಂದ ನನ್ನ ಕಪಾಳದ ಮೇಲೆ ಹೊಡೆದು ತಲೆಯಲ್ಲಿ ಕೂದಲು ಹಿಡಿದು ಜಗ್ಗಿರುತ್ತಾಳೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾದನಹಿಪ್ಪರಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅಪಹರಣ ಮಾಡಿ ಹಲ್ಲೆ ಮಾಡಿದ ಪ್ರಕರಣ :
ಸ್ತೇಷನ ಬಜಾರ ಠಾಣೆ : ಶ್ರೀಮತಿ ಸುಸಲಾಬಾಯಿ ಗಂಡ ಅರ್ಜುನ ಹತಗುಂದಿ ಸಾ: ದತ್ತ ನಗರ ಗುಲಬರ್ಗಾ ಇವರು ಈಗ ಸುಮಾರು ಎರಡುವರೆ ವರ್ಷ ಹಿಂದೆ ನಮ್ಮ ಪರಿಚಯವಿರುವ ಶಿವಲಿಂಗಪ್ಪಾ ಬೆಂಗಳೂರ ಇವರಲ್ಲಿ ನನ್ನ ಅಡಚಣೆ ಸಲುವಾಗಿ 2,00,000/- ರೂ ತೆಗೆದುಕೊಂಡಿದ್ದು ಅದರಲ್ಲಿ ಸ್ವಲ್ಪ ಹಣ ಕೊಟ್ಟಿದ್ದು ಇನ್ನೂ ಹಣ ಕೊಡುವುದು ಇದೆ. ಹೀಗಿರುವಾಗ ದಿನಾಂಕ 20/03/2014 ರಂದು 11:00 ಗಂಟೆ ಸುಮಾರಿಗೆ ನಾನು ಮತ್ತು ನಮ್ಮ ಪರಿಚಯದವನಾದ ಕೀರಣ ಇವನ ಮೋಟಾರ ಸೈಕಲ ಮೇಲೆ ರಾಮ ಮಂದಿರ ಕಡೆಯಿಂದ ಮೋಹನ ಲಾಡ್ಜ ಕಡೆಗೆ ಬುರುವಾಗ ಪಿ&ಟಿ ಕ್ರಾಸ್ ಹತ್ತಿರ ಶಿವಲಿಂಗಪ್ಪಾ ಬೆಂಗಳೂರ ಇವರ ನನಗೆ ಕೂಗಿದರು ಆಗ ಕೀರಣ ಇವನು ಮೋಟಾರ ಸೈಕಲ ನಿಲ್ಲಿಸಿದನು. ಆಗ ಸದರಿ ಶಿವಲಿಂಗಪ್ಪಾ ಮತ್ತು ಅವನ ಹೆಂಡತಿ ನಾಗರತ್ನ ಕೂಡಿ ನನಗೆ ಕೊಡಬೇಕಾದ ಹಣ ಕೊಡು ಅಂತಾ ಹೇಳಿ ನಾಗರತ್ನ ಇವಳು ಸೀರೆ ಹಿಡಿದು ಜಬರದಸ್ತಿನಿಂದ ಎಳೆದಿದ್ದರಿಂದ ನನ್ನ ಮೈ ಮೇಲಿನ ಸೀರೆ ಬಿಚ್ಚಿತು ಆಗ ನಾಗರತ್ನ ಇವಳು ಸೀರೆ ಕೊಟ್ಟಿದ್ದು ಆಗ ಸೀರೆ ಉಟ್ಟಿಕೊಂಡು ನಂತರ ನನಗೆ ಜಬರದಸ್ತಿನಿಂದ ಯಾವುದೊ ಅಟೋದಲ್ಲಿ ಕುಡಿಸಿಕೊಂಡು ಕೌಶಿಕ ಲಾಡ್ಜನಲ್ಲಿ ಯಾವುದೊ ಒಂದು ರೂಮಿನಲ್ಲಿ ಒಯ್ದಿಟ್ಟನು. ಆಗ ಸದರಿ ಶಿವಲಿಂಗಪ್ಪಾ ಇವನು ಕೊಡಬೇಕಾದ ಹಣ ಕೊಡುತ್ತಿಲ್ಲಾ ರಂಡಿ, ಭೋಸಡಿ ಅಂತಾ ಬೈದು ಕೈಯಿಂದ ಮುಖದ ಮೇಲೆ ಹಾಗು ತಲೆಯ ಮೇಲೆ ಹೊಡೆದನು ಮತ್ತು ಕಾಲಿನಿಂದ ಬಲಗೈ ರಟ್ಟೆಗೆ ಒದ್ದನು. ಆ ದಿವಸ ರಾತ್ರಿ ನಾನು ಮತ್ತು ಶಿವಲಿಂಗಪ್ಪನ ಹೆಂಡತಿ ಮತ್ತು ಶಿವಲಿಂಗಪ್ಪಾ ಎಲ್ಲರೂ ಒಂದೇ ರೂಮಿನಲ್ಲಿ ಇದ್ದೆವು. ಮರುದಿವಸ ದಿನಾಂಕ 21/03/2014 ರಂದು 02:00 ಗಂಟೆ ಸುಮಾರಿಗೆ ಕಬಿನಾ ಲಾಡ್ಜಗೆ ಹೋಗಿ ಅಲ್ಲಿಯೆ ಉಳಿದುಕೊಂಡೆವು. ನಂತರ ಅರ್ಜುನ ಹತಗುಂದಿ ಇವನು ನಿನಗೆ ತೊಂದರೆ ಕೊಡು ಅಂತಾ ಹೇಳಿದ್ದರಿಂದ ನಾವು ನಿನಗೆ ಜಬರದಸ್ತಿನಿಂದ ಕರೆದುಕೊಂಡು ಬಂದಿದ್ದೆವೆ ಅಂತಾ ಹೇಳಿ ಕೈಯಿಂದ ಮತ್ತೆ ತಲೆಗೆ ಹೊಡೆದಿರುತ್ತಾನೆ ಮತ್ತು ನೀನು ಹಣ ಕೊಡದೆ ಇದ್ದರೆ ನಿನಗೆ ಮತ್ತು ನಿಮ್ಮ ಮಕ್ಕಳಿಗೂ ಸಹ ಬೀವ ಸಹಿತ ಬಿಡುವುದಿಲ್ಲಾ ಅಂತಾ ಜೀವದ ಬೆದರಿಕೆ ಹಾಕಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸ್ಟೇಷನ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ಅಶೋಕ ನಗರ ಠಾಣೆ : ಡಾ|| ರಶ್ಮಿ ಗಂಡ ಡಾ|| ಆನಂದ ನಾಗಲಿಕರ ಸಾ : ಎಸ.-2 ಬ್ಯಾಗವಂತಿ ರೆಸಿಡೆನ್ಸಿ ಸಂಗಮೇಶ್ವರ ಕಾಲೋನಿ ಗುಲಬರ್ಗಾ ಇವರು  ಬೇಸಿಗೆ ರಜೆಯಿದ್ದ ಪ್ರಯುಕ್ತ ನನ್ನ ಮಕ್ಕಳೊಂದಿಗೆ ತವರು ಮನೆ ಬಳ್ಳಾರಿಗೆ ಹೋಗಿದೆ.  ನಿನ್ನೆ ದಿನಾಂಕ 21 ಮಾರ್ಚ 2014 ರಂದು ಗುಲಬರ್ಗಾಕ್ಕೆ ಮರಳಿ ಬರುವಾಗ ನನ್ನ ಮೈಮೆಲೆ ಇದ್ದ ಬಂಗಾರದ ಒಡವೆಗಳನ್ನು ವೇನೆಟಿ ಬ್ಯಾಗಿನಲ್ಲಿ ಹಾಕಿದ್ದು ಮತ್ತು ಲಗೇಜ ಬ್ಯಾಗದೊಂದಿಗೆ ರಾತ್ರಿ 9-30 ಗಂಟೆ ಸುಮಾರಿಗೆ ರಿಸರ್ವೇಶನ ಟಿಕೇಟ ತೆಗೆಸಿಕೊಂಡು ಬಳ್ಳಾರಿಯಿಂದ ಸುಹಾಸ ಬಸ್ಸ ಸಂಖ್ಯೆ:ಕೆಎ-32 ಎಪ್-1809 ರಲ್ಲಿ ಪ್ರಯಾಣ ಮಾಡುವಾಗ ವೆನೇಟ ಬ್ಯಾಗ ಮತ್ತು ಲಗೇಜ ಬ್ಯಾಗಯನ್ನು ಶೀಟ ಕಾಲ ಕೆಳಗಡೆ ಇಟ್ಟಿದೆ.  ಬೆಳಗ್ಗೆ  ಗುಲಬರ್ಗಾಕ್ಕೆ ಬಂದು ಇಳಿದಿದ್ದು.  ನನ್ನ ಗಂಡ ಆನಂದ ರವರ ಕಾರ ತೆಗೆದುಕೊಂಡು ಬಂದಿದ್ದು.  ಮನೆಗೆ ಹೋಗಿ ವೇನೆಟಿ ಬ್ಯಾಗನಲ್ಲಿಟ್ಟಿದ ಬಂಗಾರದ ಒಡವೆಗಳನ್ನು ನೋಡಿದಾಗ ಇರಲಿಲ್ಲಾ.  ಬಂಗಾರ ಆಭರಣಗಳು ಒಟ್ಟು  18 ತೊಲೆ ಬಂಗಾರದ ಒಡವೆಗಳು ಅದರ ಕಿಮ್ಮತ್ತು 5,20,000=00 ಇರಬಹುದು.ನಾನು ಬಸ್ಸಿನಲ್ಲಿ ಪ್ರಯಾಣಿಸುವಾಗ ನನ್ನ ಪಕ್ಕದ ಸಿಟ್ಟಿನಲ್ಲಿ ಇಬ್ಬರು ಹೆಂಗಸರು, ಒಬ್ಬ ಗಂಡಸು ಕೆದರಿದ ಕೂದಲುವುಳ್ಳವರು ಕುಳಿತಿದರು. ಅವರ ಹಿಂದಿನ ಸಿಟಿನಲ್ಲಿ ಇಬ್ಬರು 25-35 ವಯಸ್ಸಿನವರು ಬಳ್ಳಾರಿಯಿಂದ ಗುಲಬರ್ಗಾಕ್ಕೆ ಟೀಕೆಟ ತೆಗೆಸಿದ್ದು ನಡುವೆ ಲಿಂಗಸೂರಿನಲ್ಲಿ ಇಳಿದಿರುತ್ತಾರೆ. ಅವರ ನನ್ನ ಬಂಗಾರದ ಒಡವೆಗಳನ್ನು ಕಳ್ಳತನ ಮಾಡಿರಬಹುದು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಸ್ಪೀಟ ಜೂಜಾಟದಲ್ಲಿ ನಿರತ ವ್ಯಕ್ತಿಗಳ ಬಂಧನ :
ನಿಂಬರ್ಗಾ ಠಾಣೆ : ದಿನಾಂಕ 22-03-2014 ರಂದು 1400 ಗಂಟೆಗೆ ಜವಳಿ (ಡಿ) ಗ್ರಾಮದ ಹುನುಮಾನ ದೇವರ ಗುಡಿಯ ಕಟ್ಟೆಯ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ ಜೂಜಾಟ ನಡೆಯುತ್ತಿದೆ ಅಂತ ಖಚಿತ ಬಾತ್ಮಿ ಬಂದ ಮೇರೆಗೆ  ಪಿ.ಎಸ್.ಐ ಸಾಹೇಬರು ಹಾಗೂ ಠಾಣೆಯ ಸಿಬ್ಬಂಧಿ ಮತ್ತು ಪಂಚರೊಂದಿಗೆ ಜವಳಿ (ಡಿ) ಗ್ರಾಮಕ್ಕೆ ಹೋಗಿದ್ದು ಆ ವೇಳೆಗೆ ಮಾನ್ಯ ಕೆ.ಎಸ್. ಹಟ್ಟಿ ಸಿಪಿಐ ಆಳಂದ ರವರು ಸಹ ಅಲ್ಲಿಗೆ ಬಂದಿದ್ದು ಅವರ ನೇತೃತ್ವದಲ್ಲಿ ಗ್ರಾಮದ ಹನುಮಾನ ದೇವರ ಗುಡಿಯ ಕಟ್ಟೆಯ ಮರೆಯಾಗಿ ನಿಂತು ನೋಡಲಾಗಿ 05 ಜನ ವ್ಯಕ್ತಿಗಳು ಹನುಮಾನ ದೇವರ ಗುಡಿಯ ಕಟ್ಟೆಯ ಮೇಲೆ ಸಾರ್ವಜನಿಕ ಸ್ಥಳದಲ್ಲಿ ದುಂಡಾಗಿ ಕುಳಿತು ಇಸ್ಪೀಟ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕಿಟ್ಟು ಅಂದರ ಬಹಾರ ಇಸ್ಪೀಟ ಜೂಜಾಟ ಆಡುತ್ತಿರುವದನ್ನು ಖಚಿತಪಡಿಸಿಕೊಂಡು ದಾಳಿ ಮಾಡಿ 1430 ಗಂಟೆಗೆ ಪಂಚರ ಸಮಕ್ಷಮದಲ್ಲಿ ಸಿಪಿಐ ಸಾಹೇಬರುಪಿ.ಎಸ್.ಐ ಸಾಹೇಬರು ಹಾಗೂ ಸಿಬ್ಬಂಧಿ ಜನರು ದಾಳಿ ಮಾಡಿ 1. ಸಿದ್ರಾಮಯ್ಯ ತಂದೆ ಮಲ್ಲಯ್ಯ ಹಿರೇಮಠ, 2. ಮಲ್ಲಪ್ಪ ತಂದೆ ಮೈಲಾರಿ ಗೌರವಗೋಳ 3. ಸುರೇಶ ತಂದೆ ಭೀಮರಾವ ಶಿರವಾಳ 4.  ಶ್ರೀಶೈಲ ತಂದೆ ಬಸವರಾಜ ಉಡಗಿ 5.  ಗುರುಶರಣ ತಂದೆ ದತ್ತಪ್ಪ ಕೊಡ್ಲ ಹಂಗರಗಾ, ಸಾ|| ಎಲ್ಲರೂ ಜವಳಿ(ಡಿ) ರವರನ್ನು ಹಿಡಿದು ಸದರಿಯವರಿಂದ ಒಟ್ಟು 2330/- ರೂಪಾಯಿ ನಗದು ಹಣ ಹಾಗೂ 52 ಇಸ್ಪೀಟ ಎಲೆಗಳನ್ನು ಜಪ್ತಿಮಾಡಿಕೊಂಡು ಮರಳಿ ಠಾಣೆಗೆ ಬಂದು ಸದರಿಯವರ ವಿರುದ್ಧ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ನಿಂಬರ್ಗಾ ಠಾಣೆ : ದಿನಾಂಕ 22-03-2014 ರಂದು 1130 ಗಂಟೆಗೆ ದೇವಂತಗಿ ಗ್ರಾಮದ ಗುಂಡೇರಾವ ಪೊಲೀಸ ಪಾಟೀಲ ಇವರ ಮನೆಯ ಮುಂದಿನ ಸಾರ್ವಜನಿಕ ರಸ್ತೆಯ ಮೇಲೆ ಬೇವಿನ ಮರದ ಕೆಳಗೆ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ ಜೂಜಾಟ ನಡೆಯುತ್ತಿದೆ ಅಂತ ಖಚಿತ ಬಾತ್ಮಿ ಬಂದ ಮೇರೆಗೆ  ಪಿ.ಎಸ್.ಐ ಸಾಹೇಬರು ಹಾಗೂ ಠಾಣೆಯ ಸಿಬ್ಬಂಧಿಯವರು ಮತ್ತು ಪಂಚರೊಂದಿಗೆ  ದೇವಂತಗಿ ಗ್ರಾಮಕ್ಕೆ ಹೋಗಿದ್ದು ಆ ವೇಳೆಗೆ ಮಾನ್ಯ ಕೆ.ಎಸ್. ಹಟ್ಟಿ ಸಿಪಿಐ ಆಳಂದ ರವರು ಸಹ ಅಲ್ಲಿಗೆ ಬಂದಿದ್ದು ಅವರ ನೇತೃತ್ವದಲ್ಲಿ ಗ್ರಾಮದ ಗುಂಡೇರಾವ ಪೊಲೀಸ ಪಾಟೀಲ ಇವರ ಮನೆಯ ಸ್ವಲ್ಪ ದೂರದಲ್ಲಿ ಮರೆಯಾಗಿ ನಿಂತು ನೋಡಲಾಗಿ 04 ಜನ ವ್ಯಕ್ತಿಗಳು ಗುಂಡೇರಾವ ಪೊಲೀಸ ಪಾಟೀಲ ಇವರ ಮನೆಯ ಮುಂದಿನ ಸಾರ್ವಜನಿಕ ರಸ್ತೆಯ ಮೇಲೆ ಬೇವಿನ ಮರದ ಕೆಳಗೆ ಸಾರ್ವಜನಿಕ ಸ್ಥಳದಲ್ಲಿದುಂಡಾಗಿ ಕುಳಿತು ಇಸ್ಪೀಟ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕಿಟ್ಟು ಅಂದರ ಬಹಾರ ಇಸ್ಪೀಟ ಜೂಜಾಟ ಆಡುತ್ತಿರುವದನ್ನು ಖಚಿತಪಡಿಸಿಕೊಂಡು ದಾಳಿ ಮಾಡಿ 1. ಗುಂಡೇರಾವ ತಂದೆ ಅಮೃತರಾವ ಪೊಲೀಸ ಪಾಟೀಲ 2.ಪರಮೇಶ್ವರ ತಂದೆ ಪಂಡೀತರಾವ ಮಾಲಿಪಾಟೀಲ 3. ಗುಂಡೇರಾವ ತಂದೆ ಬಲವಂತಪ್ಪ ಮೂಲಗೆ 4. ಬೀರಪ್ಪ ತಂದೆ ಮೈಲಾರಿ ಅಂಕಲಗಿ ಸಾ|| ಎಲ್ಲರೂ ದೇವಂತಗಿ ರವರನ್ನು ವಶಕ್ಕೆ ತೆಗೆದುಕೊಂಡು ಸದರಿಯವರಿಂದ ಒಟ್ಟು 15110/- ರೂಪಾಯಿ ನಗದು ಹಣ ಹಾಗೂ 52 ಇಸ್ಪೀಟ ಎಲೆಗಳನ್ನು ಜಪ್ತಿಮಾಡಿಕೊಂಡು ಮರಳಿ ಠಾಣೆಗೆ ಬಂದು ಸದರಿಯವರ ವಿರುದ್ಧ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.  

22 March 2014

Gulbarga District Reported Crimes

ಅಕ್ರಮ ವಾಗಿ ಮಧ್ಯ ಮಾರಾಟ ಮಾಡುತ್ತಿದ್ದವರ ಬಂಧನ :
ಕಮಲಾಪೂರ ಠಾಣೆ : ದಿನಾಂಕ: 21-03-2014 ರಂದು 19-30 ಗಂಟೆ ಸುಮಾರಿಗೆ ಕಮಲಾಪೂರ ಗ್ರಾಮದಲ್ಲಿ ಆಕ್ರಮವಾಗಿ ಮಧ್ಯ ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಮೇರೆಗೆ ಬಸವರಾಜ ಈತನ ಹೊಟೇಲ ಪಕ್ಕದ ಮನೆಯ ಮರೆಯಲ್ಲಿ ನಿಂತು ನೋಡಲಾಗಿಒಬ್ಬನು ಯಾವುದೇ ಪರವಾನಿಗೆ ಇಲ್ಲದೇ ಆಕ್ರಮವಾಗಿ ಮಧ್ಯ ಮಾರಾಟ ಮಾಡುತ್ತಿರುವದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿಒಬ್ಬನಿಗೆ ವಶಕ್ಕೆ ತೆಗೆದುಕೊಂಡು ಆತನ ತನ್ನ ಹೆಸರು ವಿಚಾರಿಸಲಾಗಿ, ಬಸವರಾಜ ತಂದೆ ಶಂಕ್ರೆಪ್ಪಾ ಚಿಕ್ಕೆಗೌಡ ಸಾ:ಕಮಲಾಪೂರ ಅಂತಾ ತಿಳಿಸಿದ್ದು ಓಡಿ ಹೋದನು. ನಂತರ ಹೊಟೇಲದಲ್ಲಿ ಚಹಾ ಕುಡಿಯುತ್ತಾ ಕುಳಿತ ಶ್ರೀ ಸಿದ್ದಪ್ಪಾ ತಂದೆ ಈಶ್ವರಪ್ಪಾ ಸೂಗುರ ಈತನಿಗೆ ವಿಚಾರಿಸಲಾಗಿನಾನು ಹೊಲದಲ್ಲಿ ಕೆಲಸ ಮಾಡಿ ದಿನಾಲು ಚಹಾ ಕುಡಿಯಲು ಬರುತ್ತೇನೆ. ಹೊಟೇಲ ಮಾಲಿಕನಾದ ಬಸವರಾಜ ಚಿಕ್ಕೆಗೌಡ ಈತನು  ಮಧ್ಯವನ್ನು ಎಲ್ಲಿಂದಲೋ ಆಕ್ರಮ ಸಾಗಾಣೆ ಮಾಡಿತಂದು ತನ್ನ ಹೊಟೇಲದಲ್ಲಿಟ್ಟುಕೊಂಡು ಮಾರಾಟ ಮಾಡುತ್ತಿರುತ್ತಾನೆ ಅಂತಾ ತಿಳಿಸಿದಾಗ  ಚಕ್ ಮಾಡಲಾಗಿ ) ಯು.ಎಸ್. ವಿಸ್ಕಿ 180 ಎಂ.ಎಲ್ ಗಳ 40 ಬಾಟಲಗಳು ಶೀಲ್ ಮಾಡಿದ್ದು. ಅಃಕಿಃ 1800-00 ರೂ. 2) ಕಿಂಗ್ ಫೀಶರ್ ಬೀಯರ್ 650 ಎಂ.ಎಲ್.ಗಳ 12 ಬಾಟಲಗಳು ಅ:ಕಿ: 1080-00 ರೂ. ಹೀಗೆ ಒಟ್ಟು 2880-00 ರೂ. ಕಿಮ್ಮತ್ತಿನ  ವಿಸ್ಕಿ ಮತ್ತು ಬೀಯರ್ ಗಳನ್ನು ವಶಪಡಿಸಿಕೊಂಡು ಠಾಣೆಗೆ ಬಂದು ಸದರಿಯವನ ವಿರುದ್ಧ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಮಾಹಾಗಾಂವ ಠಾಣೆ : ದಿನಾಂಕ  20-03-2014  ರಂದು ಮಾಹಾಗಾಂವ ಕಡೆಯಿಂದ ರೇವಣಸಿದ್ಧ ತಂದೆ ಶರಣಪ್ಪ ಕೆಳಗಿನದೊಡ್ಡಿ  ಸಾ: ಕೋಡ್ಲಿ ತಾ:ಚಿಂಚೋಳಿ ಇವನು ಪಾಸ್ಟಿಕ ಚೀಲದಲ್ಲಿ ಅಕ್ರಮವಾಗಿ ಮದ್ಯ  ಸಂಗ್ರಹಿಸಿ ಕೊಂಡು ದಸ್ತಾಪೂರ ಗ್ರಾಮದ ಕಡೆಗೆ ಹೊರಟಿದ್ದಾನೆ ಎಂದು ಖಚಿತವಾದ ಬಾತ್ಮಿ  ಮೇರೆಗೆ ಸಿಬ್ಬಂದಿ ಹಾಗು ಪಂಚರೊಂದಿಗೆ ದಸ್ತಾಪೂರ ಕ್ರಾಸನಲ್ಲಿ ಬಾತ್ಮಿ ವ್ಯಕ್ತಿ ಬರುವಿಕೆಗಾಗಿ ಕಾಯುತ್ತಾ ನಿಂತಾಗ, ಆರೋಪಿ ರೇವಣಸಿದ್ಧ ಇತನಿಗೆ ದಾಳಿ ಮಾಡಿ ಹಿಡಿದು ಅವನಿಂದ ಓರಿಜನಲ್ ಚ್ವಾಯಸ್ ಡಿಲಕ್ಸ ವಿಸ್ಕಿ  90 ಎಂಎಲವುಳ್ಳ 48 ಪಾಸ್ಟಿಕ ಬಾಟಲಿಗಳು ಅ||ಕಿ|| 1159/- ಮತ್ತು 12,  650 ಎಂಎಲದ ನಾಕೌಟ್ ಬೀರ ಬಾಟಲಿಅ||ಕಿ|| 1080/- ಒಟ್ಟು 2239/- ಜಪ್ತಿಮಾಡಿಕೊಂಡು ಠಾಣೆಗೆ ಬಂದು ಸದರಿಯವನ ವಿರುದ್ಧ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಕಳವು ಪ್ರಕರಣ :
ಆಳಂದ ಠಾಣೆ : ಶ್ರೀ ಆನಂದ ತಂದೆ ರಾಮ ಬೊಗಿಲೆ ಮು: ಕಾಕಡೆ ಚೌಕ ಗುಲಬರ್ಗಾ ನಿವಾಸಿ ಇದ್ದು . ಲಾರಿ ಚಲಾಯಿಸಿಕೊಂಡು ಹೆಂಡತಿ ಮಕ್ಕಳೊಂದಿಗೆ ಉಪಜೀವಿಸುತ್ತೇನೆ. ನಮ್ಮ ಮಾಲಿಕ ದಾಮೋದರ ಕಲಂತ್ರಿ ಇವರ ಲಾರಿ ನಂ ಕೆಎ 32 ಬಿ 2621 ನೇದ್ದರಲ್ಲಿ ಅವರು ತಿಳಿಸಿದಂತೆ ಮಾಹಾವೀರ ದಾಲ ಇಂಡಸ್ಟ್ರಿಯಿಂದ ಕಡಲೆಯ 340 ಬ್ಯಾಗ 50 ಕೆಜಿಯವುಗಳು ತುಂಬಿಕೊಂಡು ಗುಜರಾತದ ಪಾಲಂಪೂರಕ್ಕೆ ಹೋಗಲು ತಿಳಿಸಿದ ಮೇರೆಗೆ ದಿನಾಂಕ 19/03/2014 ರಂದು ಸಾಯಾಂಕಾಲ 6 ಗಂಟೆ ಸುಮಾರಿಗೆ ಗುಲಬರ್ಗಾ ಬಿಟ್ಟು ಆಳಂದ ಮಾರ್ಗದಿಂದ ಉಮರ್ಗಾ ಕಡೆಗೆ ಹೊಗುವಾಗ ನಾನು ಖಜೂರಿ ಸಮೀಪದ ರೋಡಿಗೆ  ಇರುವ ಲಕ್ಷ್ಮಿ ಗುಡಿ ಎದುರಿಗೆ ಗಾಡಿ ನಿಲ್ಲಿಸಿ ದೇವರಿಗೆ ನಮಸ್ಕರಿಸಲು ರಾತ್ರಿ 8;30 ಗಂಟೆಗೆ ಹೋದಾಗ ಸದರಿ ಬ್ಯಾಗಿನ ಮೇಲೆ ತಾರಪಲ್‌ ಹಾಕಿ ಹಗ್ಗದಿಂದ ಬಿಗಿದಿದ್ದು ಕಟ್ಟ ಆಗಿದ್ದು ನೋಡಿ ಏರಿ ನೋಡಲಾಗಿ ತಾರಪಲ್‌ ಕೊಯ್ದು ಒಳಗಿದ್ದ ಕಡಲೆಯ 6 ಬ್ಯಾಗಗಳು 50 ಕೆಜಿಯವುಗಳು ಕಾಣಿಸಲಿಲ್ಲಾ . ಚಿತಲಿ ಕ್ರಾಸ ದಾಟಿ ಸಾಲೆಗಾಂವಗೆ ಕ್ರಾಸಿಗೆ ಹೋಗುವ ಚೆಡೌನದಲ್ಲಿ ನಮ್ಮ ಲಾರಿ ಸವಕಾಶವಾಗಿ ಚೆಡಾನ ಹತ್ತುವಾಗ ಯ್ಯಾರೂ ಕಳ್ಳರು ನಮ್ಮ ಲಾರಿಯ ಹಿಂದಿನಿಂದ ಹತ್ತಿ ಹಗ್ಗ ಮತ್ತು ತಾರಪಲ್‌ ಕತ್ತರಿಸಿ ಒಳಗಿದ್ದ 6 ಬ್ಯಾಗಗಳು 50 ಕೆಜಿಯವುಗಳು ಕಳುವು ಮಾಡಿಕೊಂಡು ಹೋಗಿದ್ದು ಅವುಗಳ ಅಂದಾಂಜು ಕಿಮ್ಮತ್ತು 12225 ರೂಪಾಯಿ ಇರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಅಫಜಲಪೂರ ಠಾಣೆ : ಶ್ರೀ ಶಿವಗೊಂಡ ತಂದೆ ಮಲ್ಲಪ್ಪ ಪೂಜಾರ ಸಾ: ಬಳೂರ್ಗಿ ಇವರ ಟ್ರ್ಯಾಕ್ಟರ್ ಇದ್ದು ಅದರ ನಂ ಕೆ.-32 ಟಿ.-6516 ಅಂತಾ ಇದ್ದು ಅದರೊಂದಿಗೆ ಒಂದು ಕಬ್ಬಿಣದ ನೇಗಿಲು ಇರುತ್ತದೆ. ನಾನು ಮಂದಿ ಹೊಲದಲ್ಲಿ ಬಾಡಿಗೆಗೆ ನೆಗಿಲು ಹೊಡೆಯುತ್ತಿರುತ್ತೇನೆ. ಅದರಂತೆ ದಿನಾಂಕ 15-03-2014 ರಂದು ನಮ್ಮೂರ ಅಶೋಕ ಜವಳಗಿ ರವರ ಹೊಲದಲ್ಲಿ ನಾಣು ಮತ್ತು ನನ್ನೊಂದಿಗೆ ನಮ್ಮ ಟ್ರ್ಯಾಕ್ಟರ್ ಡ್ರಾಯವರಾದ ರಾಜು ತಂದೆ ಈರಣ್ಣ ನಾಟೀಕಾರ ಸಾ|| ಬಳೂರಗಿ ರವರು ಕೂಡಿಕೊಂಡು ನೇಗಿಲು ಹೊಡೆಯಲು ಹೋಗಿದ್ದು ಇರುತ್ತದೆ. 5;00 ಪಿ.ಎಂ ಸುಮಾರಿಗೆ ಸದರಿ ಹೊಲದಲ್ಲಿ ನನ್ನ ಟ್ರ್ಯಾಕ್ಟರ್ ಪಂಚರ ಆಗಿದ್ದರಿಂದ ಟ್ರ್ಯಾಕ್ಟರಗೆ ಜೋಡಿಸಿದ ನೇಗಿಲವನ್ನು ಅಲ್ಲೆ ಹೊಲದಲ್ಲೇ ಇಟ್ಟು ಪಂಚರ ತೆಗೆಯಲು  ಬಳೂರಗಿ ಗ್ರಾಮಕ್ಕೆ ಹೋಗಿದ್ದು ನಂತರ ಮರಳಿ 7;30 ಪಿ.ಎಂ ಸುಮಾರಿಗೆ ಪಂಚರ ತೆಗೆದಸಿಕೊಂಡು ಸದರಿ ಹೊಲದ ಹತ್ತಿರ ಬುರುವಾಗ ರಸ್ತೆಯ ಮೇಲೆ ಎದುರುಗಡೆಯಿಂದ ಒಂದು ಟ್ರ್ಯಾಕ್ಟರ ಹೋಯಿತು ಅದರ ಹಿಂದೆ ಒಂದು ನೇಗಿಲು ಇತ್ತು. ಸದರಿ ನೇಗಿಲು ನಮ್ಮ ನೇಗಿಲ ತರಹನೆ ಕಂಡಿತು. ನಂತರ ಹೊಲಕ್ಕೆ ಹೋಗಿ ನೋಡಲು ನಮ್ಮ ನೇಗಿಲು ಇರಲಿಲ್ಲ. ನಮಗೆ ಸಂಶಯ ಬಂದು ಬಳೂರಗಿ ಕಡೆ ಹೋದ ಟ್ರ್ಯಾಕ್ಟರ ಹಿಂದೆ ನಾವು ನಮ್ಮ ಟ್ರ್ಯಾಕ್ಟರ್ ತೆಗೆದುಕೊಂಡು ಬಡದಾಳ, ಹಳ್ಯಾಳ, ಹಳ್ಯಾಳ ತಾಂಡಾ, ಚಿಂಚೊಳಿ, ಹಾಗು ಸುತ್ತ ಮುತ್ತಿನ ಹೊಲದಲ್ಲಿರುವ ಮನೆಗಳಿಗೆ ಹೋಗಿ ವಿಚಾರಮಾಡಲಾಗಿ ಯಾವುದೆ ಮಾಹಿತಿ ಸಕ್ಕಿರುವುದಿಲ್ಲ. ನಂತರ ದುದ್ದನಿ ಗ್ರಾಮ, ಹಾಗು ಅಫಜಲಪೂರ ಪಟ್ಟಣದಲ್ಲಿ ಗ್ಯಾರೇಜಗಲಲ್ಲಿ ಹುಡಕಾಡಿದರು ನಮ್ಮ ನೇಗಿಲು ಸಿಗಲಿಲ್ಲ. ದಿನಾಂಕ 15-03-2014 ರಂದು 5;30 ಪಿ.ಎಂ ದಿಂದ 7;30 ಪಿ.ಎಂ ಮದ್ಯಧ ಅವಧಿಯಲ್ಲಿ ಅಶೋಕ ಜವಳಗಿ ರವರ ಹೊಲದಲ್ಲಿ ಇಟ್ಟಿದ್ದ ನಮ್ಮ ಕಬ್ಬಿಣದ ನೇಗಿಲನ್ನು ಯಾರೋ ಕಳ್ಳರು ಅವರ ಟ್ರ್ಯಾಕ್ಟರಕ್ಕೆ ಜೋಡನೆ ಮಾಡಿ ಕಳುವು ಮಾಡಿಕೊಂಡು ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದುರು ಸಾರಾಂಶದ ಮೇಲಿಂದ ಅಫಜಲಪೂರ ಠಢಾಣೆಯಲ್ಲಿ ಪ್ರಕರಣ ದಾಖಲಾಗಿದೆ.   
ಮಾದನಹಿಪ್ಪರಗಾ ಠಾಣೆ : ದಿನಾಂಕ 20-03-2014  ರಂದು 11;30 ಎ.ಎಮ್.ಕ್ಕೆ ಶ್ರೀಮತಿ ಮಧುಮತಿ ಎಸ್.ಇಕ್ಕಳಕಿ ಉ:ಮುಖ್ಯ ಗುರುಗಳು ಸರ್ಕಾರಿ ಪ್ರೌಢಶಾಲೆ ಹಿರೋಳಿ  ತಾ:ಆಳಂದ.  ಇವರು ದಿನಾಂಕ 19-03-2014 ರ ರಾತ್ರಿ 08:00 ಗಂಟೆಯಿಂದ ಬೇಳಗಿನ 05;00 ಗಂಟೆಯ ಮಧ್ಯದ ಅವಧಿಯಲ್ಲಿ. ನಾವು ಶಾಲೆಯಲ್ಲಿ ಯಾರು ಇರಲಾರದ ಸಮಯದಲ್ಲಿ ಯಾರೋ ಅಪರಿಚಿತ ಕಳ್ಳರು ಸರಕಾರಿ ಪ್ರೌಢಶಾಲೆ ಹಿರೋಳಿ ಶಾಲೆಯ ಕಂಪ್ಯೂಟರ್ ಕೋಣೆಯಲ್ಲಿನ ಕೀಲಿ ಮುರಿದು ಬಾಗಿಲು ತೆರೆದು ಒಳಗೆ ಹೋಗಿ H.C.L. ಕಂಪನಿಯ ಒಟ್ಟು 4 ಕಂಪ್ಯೂಟರಗಳು ಅಂದಾಜು ಕಿಮ್ಮತ್ತು ಒಟ್ಟು : 24,500=00 ರೂಪಾಯಿಗಳ ಕಂಪ್ಯೂಟರ್ ಸಾಮಗ್ರಿಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾದನ ಹಿಪ್ಪರಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಶಾಲೆಯ ಮಾಳಿಗೆಯಿಂದ ಬಿದ್ದು ವಿದ್ಯಾರ್ಥಿ ಗಾಯಹೊಂದಿದ ಪ್ರಕರಣ :
ಮಾಹಾತ್ಮಾ ಬಸವೇಶ್ವರ ನಗರ ಠಾಣೆ : ಶ್ರೀ ಸಬನಾ ಬೇಗಂ ಗಂಡ ಬಾಷಾ ಮಿಯಾ ಸಾಃ ಸೋನಿಯಾ ಗಾಂಧಿ ಕಾಲೋನಿ ಹಾಗರಗಾ ರೋಡ ಗುಲಬರ್ಗಾ ರವರ ಮಗ  ಜೈನೂದ್ದಿನ ತಂದೆ ಬಾಷಾಮಿಯಾ  ಇವನು ದಿನಾಂಕ 21-03-2014 ರಂದು 01:15 ಪಿ.ಎಂ. ಚೈತನ್ಯ ಪ್ರೌಡ ಶಾಲೆಯ ವಸತಿ ನಿಲಯದ 03 ಅಂತಸ್ತಿನ ಬಿಲ್ಡಿಂಗ್ ಮೇಲಿಂದ ಕೆಳಗಡೆ ಬಿದ್ದು ಎಡಗೈ ಪೂರ್ತಿಯಾಗಿ ಮುರಿದಿದ್ದು ತಲೆಗೆ ಭಾರಿ ರಕ್ತಗಾಯವಾಗಿದ್ದು, ಎರಡು ಕಣ್ಣಿಗಳಿಗೂ ತರಚಿದ ಗಾಯಗಳಾಗಿರುತ್ತವೆ. ಸದರಿ ಘಟನೆಗೆ ಚೈತನ್ಯ ಪ್ರೌಡ ಶಾಲೆಯ ಮತ್ತು ವಸತಿ ನಿಲಯದ ಆಡಳಿತ ಮಂಡಳಿ ಅಧಿಕಾರಿ ಹಾಗು ಸಿಬ್ಬಂದಿ ವರ್ಗದವರ ನಿಸ್ಕಾಳಜಿತನ ಕಾರಣವಾಗಿರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾತ್ಮಾ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಫರತಾಬಾದ ಠಾಣೆ : ಶ್ರೀ  ಅರ್ಜುನ ತಂದೆ ತಿಮ್ಮಯ್ಯ ಕೆರಬಗಿ  ಸಾ:ಸಿರನೂರ ತಾ:ಜಿ: ಗುಲಬರ್ಗಾ ರವರು 15 ದಿವಸಗಳ ಹಿಂದೆ ತಮ್ಮ ಅಣ್ಣತಮ್ಮಕೀಯ ಗೊಪಾಲ ಇತನಿಗೆ 500=00 ರೂಪಾಯಿ ಕೈಗಡ ಕೊಟ್ಟಿದ್ದು ಸದರಿ ಹಣವನ್ನು ದಿನಾಂಕ 18-03-2014 ರಂದು ರಾತ್ರಿ 8-30 ಗಂಟೆಯ ಸುಮಾರಿಗೆ ಕೆಳಲು ಅವರ ಮನೆಗೆ ಹೊದಾಗ  ಗೊಪಾಲ ಇತನು ಅವಾಚ್ಯ ಶಬ್ದಗಳಿಂದ ಬೈದು ಎದೆಯ ಮೇಲಿನ ಅಂಗಿಯ ಹಿಡಿದು ಕೈಯಿಂದ ಬೆನ್ನಿನ ಮೇಲೆ ಹೊಡೆದು ಗುಪ್ತ ಗಾಯ ಮಾಡಿದನು. ಅಲ್ಲೆ ನಿಂತಿದ್ದ ಮಲ್ಲು ಇತನು ಅಲ್ಲೆ ಬಿದ್ದಿದ್ದ ಒಂದು ಹಿಡಿಗಾತ್ರ ಕಲ್ಲು ತೆಗೆದುಕೊಂಡು ನನ್ನ ಎಡ ಮೊಣಕಾಳಿನ ಹತ್ತಿರ ಹೊಡೆದು ಗುಪ್ತ ಗಾಯ ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣಗಳು :
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ಅಂಬಾರಾಯ ತಂದೆ ರುಕ್ಕಪ್ಪ ಲಂಡನಕರ  ಸಾ: ಎಮ್.ಆರ್.ಎಮ್.ಸಿ ಎದುರು ಸುಂದರ ನಗರ ಗುಲಬರ್ಗಾ  ರವರ ಮಕ್ಕಳಾದ ಅಮೀತ ಇತನು. ದಿನಾಂಕ 20-03-2014 ರಂದು ಮದ್ಯಾಹ್ನ 3-30 ಗಂಟೆ ಸುಮಾರಿಗೆ ಫಿರ್ಯಾದಿ ಮಕ್ಕಳಾದ ಅಮೀತ ಮತ್ತು ಅಮರ ಇವರಿಬ್ಬರು ಅವರ ಸಾಂದಿಪನಿ ಶಾಲೆಯಿಂದ ಬೈಸಿಕಲ ಮೇಲೆ ಜಿ.ಜಿ.ಹೆಚ್ ಸರ್ಕಲ ಮುಖಾಂತರ ಮನೆಗೆ ಹೋಗುತ್ತಿದ್ದಾಗ ಜಿ.ಜಿ.ಹೆಚ ಆಸ್ಪತ್ರೆಯ ಎದುರಿನ ರೋಡಿನ ಮೇಲೆ ಆಸ್ಪತ್ರೆಯ  ಒಳಗಡೆಯಿಂದ ಅಟೋರಿಕ್ಷಾ ನಂಬರ ಕೆಎ-32 ಎ-7170 ರ ಚಾಲಕನಾದ ರುಕ್ನೊದ್ದಿನ ಇತನು ಕುಡಿದ ಅಮಲಿನಲ್ಲಿ ತನ್ನ ಅಟೋರಿಕ್ಷಾವನ್ನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಅಮೀತ ಇತನ ಬೈಸಿಕಲಕ್ಕೆ ಡಿಕ್ಕಿ ಪಡಿಸಿ ಅಪಘಾತ ಮಾಡಿ ಅಮೀತ ಮತ್ತು ಅಮರನಿಗೆ ಗಾಯಗೊಳಿಸಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ಚಂದ್ರಕಾಂತ ತಂದೆ ಮಹಾರುದ್ರಪ್ಪ ಪಟ್ನೆ ಸಾ: ಈಶ್ವರ ಗುಡಿ ಹತ್ತಿರ ಕೈಲಾಸ ನಗರ ಗುಲಬರ್ಗಾ  ರವರು ದಿನಾಂಕ 20-03-2014ರಂದು ಸಾಯಂಕಾಲ  5-30 ಗಂಟೆಗೆ ತನ್ನ ಬೈಸಿಕಲ ಮೇಲೆ ಫಾರ್ಮಸಿ ಕಾಲೇಜದಿಂದ ಟೌನಹಾಲ ಕ್ರಾಸ್ ಕಡೆಗೆ ಬರುತ್ತಿದ್ದಾಗ ಜಿ.ಜಿ.ಹೆಚ್ ಸರ್ಕಲ ಸಮೀಪವಿರುವ ವೀರಶೈವ ಹಾಸ್ಟೇಲ ಕಾಂಪ್ಲೇಕ್ಸ ಎದುರಿನ ರೋಡಿನ ಮೇಲೆ ಟೌನಹಾಲ ಕ್ರಾಸ್ ಕಡೆಯಿಂದ ಒಬ್ಬ ಮೋಟಾರ ಸೈಕಲ ನಂಬರ ಕೆಎ-32ಇಡಿ-7096 ನೇದ್ದರ ಸವಾರನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಬೈಸಿಕಲಗೆ ಎದುರಿನಿಂದ ಡಿಕ್ಕಿ ಪಡಿಸಿ ಅಪಘಾತ ಮಾಡಿ ಗಾಯಗೊಳಿಸಿ ಮೊಟಾರ ಸೈಕಲ ಸಮೇತ ಸವಾರನು ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನರೋಣಾ ಠಾಣೆ : ಶ್ರೀಮತಿ ಜಗದೇವಿ ಗಂ ಚಿದಾನಂದ ಸಣ್ಣಮನಿ ಸಾ:ಮದಗುಣಕಿ, ತಾ:ಆಳಂದ ರವರ  ಗಂಡ ಮದುಗುಣಕಿ ಗ್ರಾಮದಲ್ಲಿ ನಮ್ಮ ಹೊಲದಲ್ಲಿ ಕೆಲಸ ಮಾಡಿಸಲು ಮೊ.ಸೈ ನಂ MH 13 AD 1143 ನೇದ್ದರ ಮೇಲೆ ಗುಲಬರ್ಗಾದಿಂದ ಮದಗುಣಕಿ  ಗ್ರಾಮಕ್ಕೆ ಬರುವುದು ಮಾಡುತ್ತಾನೆ, ದಿನಾಂಕ 19-03-2014 ರಂದು ನನ್ನ ಗಂಡ ತನ್ನ ಮೊ.ಸೈ ಮೇಲೆ ಹೊಲಕ್ಕೆ ಹೋಗಿ ಬರುತ್ತೇನೆಂದು ಗುಲಬರ್ಗಾದಿಂದ ಮದಗುಣಕಿಗೆ ಹೊಗಿದ್ದು ನಾನು ರಾತ್ರಿ ಮನೆಯಲ್ಲಿದ್ದಾಗ ನನ್ನ ಗಂಡನ ಪೋನ ನಂಬರನಿಂದ ನಮ್ಮ ಮನಗೆ ಮೊಬೈಲ್‌ ಕರೆ ಮಂದಿದ್ದು ದಿನಾಂಕ 20-03-2014 ನಂದು ಬೆಳಿಗ್ಗೆ 0600 ಗಂಟೆಗೆ ತಿಳಿಸಿದ್ದು ಏನಂದರೆ ಚಿದಾನಂದ ಈತನು ತಮ್ಮ ಮೊ.ಸೈ ಮೇಲಿಂದಾ ಗುಲಬರ್ಗಾ ಕಡೆ ಬರುವ ಲಾಡಚಿಂಚೊಳಿ ಕ್ರಾಸ ½ ಫರ್ಲಾಂಗ ಮುಂದೆ ಇರುವ ರೋಡಿಗೆ ಲಾರಿ ನಂ MH 26 H 9709 ನಿಂತಿದ್ದು ಮೊ.ಸೈ ಮುಂದೆ ಬಿದ್ದು ಪಕ್ಕದಲ್ಲಿ ಚಿದಾನಂದಗೆ ಗಾಯವಾಗಿ ರೋಡಿನ ಪಕ್ಕದಲ್ಲಿ ಸತ್ತು ಬಿದ್ದಿರುತ್ತಾನೆ, ಲಾರಿ ನಿಂತ ಸ್ಥಳದಲ್ಲಿ ಸಂಚಾರದ ಮೊಟರ ವಾಹನ ಯಾವುದೇ ಸಂಕೇತ ಫಲಕ ಹಾಕದೆ ಯಾವುದೇ ದ್ವೀಪದ ಸೂಚನೆ ಹಾಕದೆ ತನ್ನ ಲಾರಿಯನ್ನು ರಸ್ತೆಯ ಆಳಂದಕ್ಕೆ ಹೋಗುವ ಬಲಭಾಗಗಕ್ಕೆ ರಾಂಗ್‌ ಸೈಡಿನಲ್ಲಿ ನಿಲ್ಲಿಸಿದ್ದು ಇರುತ್ತದೆ, ಈ ಅಪಘಾತ ಲಾರಿ ಚಾಲಕನ ನಿಷ್ಕಾಳಜಿತನ ಹಾಗೂ ಬೇಜವಬ್ದಾರಿಯಿಂದ ಲಾರಿ ನಿಲ್ಲಿಸಿದರಿಂದ ಈ ಅಪಘಾತವಾಗಿದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಕಿ ತಗುಲಿ ಮಹಿಳೆ ಸಾವು :
ಮಾದನಹಿಪ್ಪರಗಾ ಠಾಣೆ : ಶ್ರೀ.ದಿಲೀಪ ತಂದೆ ವಿಶ್ವನಾಥ ಪವಾರ ಸಾ;ದರ್ಗಾಶಿರೂರ ತಾ:ಆಳಂದ. ರವರ ಮಗಳಾದ ನೀಲಾ ಇವಳಿಗೆ ದಿನಾಂಕ 12-03-2014  ರಂದು ರಾತ್ರಿ 08:30 ಗಂಟೆಯ ಸುಮಾರಿಗೆ ನನ್ನ ಮನೆಯಲ್ಲಿ ನನ್ನ ಮಗಳು ಸ್ಟೋ ಬೆಂಕಿ ಆಕಸ್ಮಿಕವಾಗಿ ಮೈ ಮೇಲಿನ ಬಟ್ಟೆಗೆ ಹತ್ತಿ ಮೈ ಪೂರ್ತಿ ಸುಟ್ಟಿರುತ್ತದೆ. ಆಸ್ಪತ್ರೆಗೆ ತೋರಿಸಿದರು ಆರಾಮವಾಗಿರುವುದಿಲ್ಲಾ ಹೆಚ್ಚಿನ ಉಪಚಾರ ಕುರಿತು ಆಸ್ಪತ್ರೆಗೆ ತೆಗೆದುಕೊಂಡು ಹೋಗಲು ಮನೆಗೆ ತಂದಿದ್ದು ಮೈ ಸುಟ್ಟ ಬೇನೆಯಿಂದ ಗುಣಮುಖವಾಗದೇ ದಿನಾಂಕ: 19-02-2014 ರಂದು ಬೆಳಗ್ಗೆ 07 ಗಂಟೆಗೆ ಮೃತ ಪಟ್ಟಿರುತ್ತಾಳೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾದನಹಿಪ್ಪರಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.