POLICE BHAVAN KALABURAGI

POLICE BHAVAN KALABURAGI

05 March 2014

Gulbarga District Reported Crimes

ಮಟಕಾ ಜೂಜಾಟದಲ್ಲಿ ನಿರತ ವ್ಯಕ್ತಿಗಳ ಬಂಧನ :
ನಿಂಬರ್ಗಾ ಠಾಣೆ : ದಿನಾಂಕ  04-03-2014 ರಂದು 2040 ಗಂಟೆಗೆ ನಿಂಬರ್ಗಾ ಗ್ರಾಮದ ಮರಗಮ್ಮ ದೇವರ ಗುಡಿಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಮಟಕಾ ಜೂಜಾಟ ನಡೆಸುತ್ತಿದ್ದಾನೆ ಅಂತ ಮಾಹಿತಿ ಬಂದ ಮೇರೆಗೆ ಪಿ.ಎಸ್.ಐ. ಮತ್ತು ಸಿಬ್ಬಂಧಿ ಹಾಗೂ ಇಬ್ಬರು ಪಂಚರೊಂದಿಗೆ ಮರಗಮ್ಮ ದೇವರ ಗುಡಿಯ ಮರೆಯಾಗಿ ನಿಂತು ನೋಡಲಾಗಿ ಮರಗಮ್ಮ ದೇವರ ಗುಡಿಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಕುಳಿತು ಸಾರ್ವಜನಿಕರಿಂದ ಹಣ ಪಡೆದು ಓಪನ ನಂಬರ ಬಂದರೆ 1 ರೂಪಾಯಿಗೆ 8 ರೂಪಾಯಿ ಗೆಲ್ಲಿರಿ ಅಂತ ಮತ್ತು ಜಾಯಿಂಟ ನಂಬರ ಬಂದರೆ 1 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತ ಕೂಗುತ್ತಾ ಮಟಕಾ ಅಂಕೆ ಸಂಖ್ಯೆಯುಳ್ಳ ಚೀಟಿಗಳನ್ನು ಬರೆದುಕೊಡುತ್ತಿರುವದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಹಿಡಿದು ವಿಚಾರಿಸಲು ಮಲ್ಲಿಕಾರ್ಜುನ ತಂದೆ ಶರಣಪ್ಪ ಬಿದನಕರ  ಸಾ|| ನಿಂಬರ್ಗಾ ಗ್ರಾಮ ಅಂತ ತಿಳಿಸಿದನು ಅವನನ್ನು ಚೆಕ ಮಾಡಲಾಗಿ ಮಟಕಾ ಜೂಜಾಟಕ್ಕೆ ಬಳಿಸಿರುವ  ನಗದು ಹಣ 2210/- ಒಂದು ಮಟಕಾ ಅಂಕಿ ಸಂಖ್ಯೆಯುಳ್ಳ ಚೀಟಿ,  ಒಂದು ಬಾಲ ಪೆನ್ನ ನೇದ್ದವುಗಳನ್ನು ವಶಪಡಿಸಿಕೊಂಡು ಮರಳಿ ಠಾಣೆಗೆ ಬಂದು ಸದರಿಯವನ ವಿರುದ್ಧ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ನಿಂಬರ್ಗಾ ಠಾಣೆ : ದಿನಾಂಕ 04-03-2014 ರಂದು 1820 ಗಂಟೆಗೆ ಸಿಪಿಐ ಸಾಹೇಬ ಆಳಂದ ಮತ್ತು ನಾನು ಹಾಗೂ ಸಿಬ್ಬಂಧಿಯವರು ಸುಂಟನೂರ ಗ್ರಾಮದ ಹನುಮಾನ ದೇವರ ಗುಡಿಯ ಕಟ್ಟೆಯ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟ ನಡೆಸುತ್ತಿದ್ದ ಮಾಹಿತಿ ಮೇರೆಗೆ ಸಿಪಿಐ ಸಾಹೇಬ ಆಳಂದ ರವರು ಹಾಗೂ ನಾನು ಮತ್ತು ಸಿಬ್ಬಂಧಿಯವರು ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಹನುಮಾನ ದೇವರ ಗುಡಿಯ ಕಟ್ಟೆಯ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಕುಳಿತು ಸಾರ್ವಜನಿಕರಿಂದ ಹಣ ಪಡೆದು ಓಪನ ನಂಬರ ಬಂದರೆ 1 ರೂಪಾಯಿಗೆ 8 ರೂಪಾಯಿ ಗೆಲ್ಲಿರಿ ಅಂತ ಮತ್ತು ಜಾಯಿಂಟ ನಂಬರ ಬಂದರೆ 1 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತ ಕೂಗುತ್ತಾ ಮಟಕಾ ಅಂಕೆ ಸಂಖ್ಯೆಯುಳ್ಳ ಚೀಟಿಗಳನ್ನು ಬರೆದುಕೊಡುತ್ತಿರುವದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಹಿಡಿದು ವಿಚಾರಿಸಲು ಬಾಬು ತಂದೆ ಲಕ್ಷ್ಮಣ ವಗ್ಗನ ಸಾ|| ಸುಂಟನೂರ ಗ್ರಾಮ ಅಂತ ತಿಳಿಸಿದನು ಅವನನ್ನು ಚೆಕ ಮಾಡಲಾಗಿ ಮಟಕಾ ಜೂಜಾಟಕ್ಕೆ ಬಳಿಸಿರುವ ನಗದು ಹಣ 2205/-ಒಂದು ಮಟಕಾ ಅಂಕಿ ಸಂಖ್ಯೆಯುಳ್ಳ ಚೀಟಿಎರಡು ಮಟಕಾ ಅಂಕೆ ಸಂಖ್ಯೆಯುಳ್ಳ ಚಾರ್ಟಗಳನ್ನು ವಶಪಡಿಸಿಕೊಂಡು ಮರಳಿ ನಿಂಬರ್ಗಾ ಠಾಣೆಗೆ ಬಂದು ಸದರಿಯವನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಇಸ್ಪೀಟ ಜೂಜಾಟದಲ್ಲಿ ನಿರತ ವ್ಯಕ್ತಿಗಳ ಬಂಧನ :
ನಿಂಬರ್ಗಾ ಠಾಣೆ : ದಿನಾಂಕ 04-03-2014 ರಂದು ದಂಗಾಪೂರ ಗ್ರಾಮದ ಮಲ್ಲಿಕಾರ್ಜುನ ದೇವರ ಗುಡಿಯ ಕಟ್ಟೆಯ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ ಜೂಜಾಟ ನಡೆಯುತ್ತಿದೆ ಅಂತ ಖಚಿತ ಬಾತ್ಮಿ ಬಂದ ಮೇರೆಗೆ ಸಿಪಿಐ ಸಾಹೇಬರು ಆಳಂದ, ಪಿ.ಎಸ್.ಐ. ನಿಂಬರ್ಗಾ ಹಾಗು ಸಿಬ್ಬಂದಿ ಪಂಚರೊಂದಿಗೆ  ದಂಗಾಪೂರ ಗ್ರಾಮದ ಶ್ರೀ ಮಲ್ಲಿಕಾರ್ಜುನ ದೇವರ ಗುಡಿಯ ಮರೆಯಾಗಿ ನಿಂತು ನೋಡಲಾಗಿ 04 ಜನ ವ್ಯಕ್ತಿಗಳು ಮಲ್ಲಿಕಾರ್ಜುನ ದೇವರ ಗುಡಿಯ ಕಟ್ಟೆಯ ಮೇಲೆ ಸಾರ್ವಜನಿಕ ಸ್ಥಳದಲ್ಲಿ ದುಂಡಾಗಿ ಕುಳಿತು ಇಸ್ಪೀಟ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕಿಟ್ಟು ಅಂದರ ಬಹಾರ ಇಸ್ಪೀಟ ಜೂಜಾಟ ಆಡುತ್ತಿರುವದನ್ನು ಖಚಿತಪಡಿಸಿಕೊಂಡು ದಾಳಿಮಾಡಿ  04 ಆಸಾಮಿ ಜನರನ್ನು ಹಿಡಿದು ಒಬ್ಬೋಬ್ಬರನ್ನಾಗಿ ವಿಚಾರಿಸಲು 01.  ಸಂತೋಷ ತಂದೆ ಶಿವಪುತ್ರಪ್ಪ ಶೇಗಜಿ 02. ದಾವಲಸಾಬ ತಂದೆ ಮೈಬೂಬಸಾಬ ಭೈರಾಮಡಗಿ 03. ಶರಣು ತಂದೆ ಈರಣ್ಣಾ ಮುಜ್ಜಿ 04. ಮೈಬೂಬ ತಂದೆ ಮದರಸಾಬ ಪಟೇಲ ಸಾ|| ಎಲ್ಲರು ದಂಗಾಪೂರ ರವರನ್ನು ವಶಕ್ಕೆ ತೆಗೆದುಕೊಂಡು ಸದರಿಯವರಿಂದ 2620/- ರೂಪಾಯಿ ನಗದು ಹಣ ಹಾಗೂ 52 ಇಸ್ಪೀಟ ಎಲೆಗಳನ್ನು ಜಪ್ತಿ ಪಡಿಕೊಂಡು ಮರಳಿ ಠಾಣೆಗೆ ಬಂದು ಸದರಿಯವರ ವಿರುದ್ಧ ನಿಂಬರ್ಘಾ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಅಪಘಾತ ಪ್ರಕರಣಗಳು :
ವಾಡಿ ಠಾಣೆ : ದಿನಾಂಕ 04-03-2014 ರಂದು ಕ್ರೊಜರ ಜೀಪ ನಂ ಕೆಎ-37 4552 ನೆದ್ದರಲ್ಲಿ ಹಲಕಟ್ಟಾ ಗ್ರಾಮದ ರಾಧಾ ಗಂಡ ಸಂತೊಷ ಅವಳ ಗಂಡ ಸಂತೊಷ ತಂದೆ ದುರ್ಗಣ್ಣಾ , ಅವರ ಮಕ್ಕಳು ಲಕ್ಷ್ಮಿ, ಮಲ್ಲು ಹಾಗು ಲಕ್ಷ್ಮಿ ಗಂಡ ವಿರೇಶ ಮತ್ತು ನಾಗರಾಜ ಕುಂಬಾರಹಳ್ಳಿ ಹಾಗು ಜರಿನಾಬೆಗಂ ಗಂಡ ಶೌಕತಲಿ, ದ್ಯಾವಮ್ಮಾ ಕರದಳ್ಳಿ ಹಾಗು ಇತರೆ 4,5 ಜನರು ಕೂಡಿಕೊಂಡು ಹೊರಟಾಗ ಲಾಡ್ಲಾಪೂರ ಆಚೆ ಭೊಜು ನಾಯಕ ತಾಂಡಾಕ್ಕೆ ಹೊಗುವ ಕ್ರಾಸ ಸಮೀಪ ಮುಖ್ಯ ರಸ್ತೆಗೆ ಹೊರಟಾಗ ಎದುರುಗಡೆಯಿಂದ ಅಂದರೆ ನಾಲವಾರ ಕಡೆಯಿಂದ ಲಾರಿ ನಂ ಕೆಎ-24 -7595 ನೆದ್ದರ ಚಾಲಕ ಅತಿವೇಗ ಹಾಗು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ಕ್ರೊಜರ ಜೀಪಿ ನಂ ಕೆಎ-37 -4552 ನೆದ್ದಕ್ಕೆ ಡಿಕ್ಕಿ ಹೊಡೆದು ಅಪಘಾತಪಡಿಸಿದ್ದರಿಂದ ಜೀಪ ಪಲ್ಟಿಯಾಗಿ ರೊಡಿನ ಕೆಳಗಡೆ ಬಿದ್ದು ಅದರಲ್ಲಿ ಕುಳಿತ ಮೇಲೆ ನಮೂದು ಮಾಡಿದವರಲ್ಲಿ ಝರಿನಾಬೆಗಂ ಇವಳ ತಲೆಗೆ ಭಾರಿ ರಕ್ತಗಾಯವಾಗಿ ಕೈಗಳೆರಡು ಮುರಿದು ಸ್ಥಳದಲ್ಲೆ ಮರಣ ಹೊಂದಿದ್ದು ಅಲ್ಲದೆ, ದ್ಯಾವಮ್ಮಾ ಇವಳು ಆಸ್ಪತ್ರೆಗೆ ತರುವ ಕಾಲಕ್ಕೆ ದಾರಿಯ ಮದ್ಯದಲ್ಲಿ ಮರಣ ಹೊಂದಿದ್ದು ಉಳಿದವರಿಗೆ ಮೈಕೈಗೆ ಅಲ್ಲಲ್ಲಿ ರಕ್ತ ಹಾಗು ಗುಪ್ತಗಾಯಗಳಾಗಿದ್ದು ಅಲ್ಲದೆ ಜೀಪಿನಲ್ಲಿದ್ದ ಇನ್ನು 4, 5 ಜನರಿಗೆ ಗಾಯಗಳಾಗಿರುತ್ತವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಚ್ಚುವರಿ ಸಂಚಾರಿ ಠಾಣೆ : ದಿನಾಂಕ 04-03-2014 ರಂದು ಬೆಳಿಗ್ಗೆ 11-30 ಗಂಟೆಗೆ ಟೌನಹಾಲ ಕ್ರಾಸ ಹತ್ತಿರ ಅಟೋರಿಕ್ಷಾ ನಂಬರ ಕೆಎ-32 ಎ-9062 ರ ಚಾಲಕನು ಅಟೋರಿಕ್ಷಾ ವಾಹನದಲ್ಲಿ ಪ್ರಯಾಣಿಕರನ್ನು ಕೂಡಿಸಿಕೊಂಡು  ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಟೌನಹಾಲ ಕ್ರಾಸ ರೋಡ ಪಕ್ಕದಲ್ಲಿರುವ ನಮ್ಮ ಸಂಚಾರಿ ಸಿಗ್ನಲ ಲೈಟ ಕಂಬಗಳ ಕಟ್ಟಡಕ್ಕೆ  ಡಿಕ್ಕಿ ಪಡಿಸಿ ಅಪಘಾತ ಮಾಡಿ ಕಟ್ಟಡ ಡ್ಯಾಮೇಜ ಮಾಡಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣಗಳು :
ಸೇಡಂ ಠಾಣೆ : ಮಾದನ ಹಿಪ್ಪರಗಾ ಠಾಣೆ : ಶ್ರೀ.ಮಹಾಂತಪ್ಪಾ ತಂದೆ ಗುಂಡಪ್ಪಾ ಸಣ್ಣಮನಿ ಸಾ: ಮದಗುಣಕಿ ತಾ:ಆಳಂದ   ದಿನಾಂಕ 04-03-2014  ರಂದು ರಾತ್ರಿ 12:00 ಗಂಟೆಯಿಂದ 3 ಗಂಟೆಯ ಮಧ್ಯದ ಅವಧಿಯಲ್ಲಿ ಯಾರೋ ಅಪರಿಚಿತ ಕಳ್ಳರೂ ನಮ್ಮ ಮನೆಯ ಬಾಗಿಲು ಮುರಿದು ಒಳಗೆ ಹೋಗಿ ಮನೆಯಲ್ಲಿನ ಕಬ್ಬಿಣ ಪೇಟಿಗೆ ಮತ್ತು ಅದರಲ್ಲಿದ ನಗದು ಹಣ: 20,000/- ರೂಪಾಯಿಯನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಮತ್ತು ನಮ್ಮೂರಲ್ಲಿ ರಮೇಶ ತಂದೆ ಶಿವರಾಚಪ್ಪಾ ಆಳಂದ ಇವರ ಮನೆಯ ಬಾಗಿಲು ಸಹ ಯಾರೋ ಕಳ್ಳರೂ ಮುರಿದು ಒಳಗೆ ಹೋಗಿ ಮನೆಯಲ್ಲಿನ ಪೇಟಿಗೆ,ಬಟ್ಟೆಬರೆ ಚೆಲ್ಲಾಪಿಲ್ಲಿ ಮಾಡಿದ್ದು ಮತ್ತು ನಮ್ಮೂರ ಅಪ್ಪಸಾಬ ತಂದೆ ರಾಚಪ್ಪಾ ಪಾಟೀಲ ಇವರ ಮನೆಗೂ ಸಹ ಹೋಗಿ ಬಾಗಿಲು ಮನೆಯಲ್ಲಿನ ಪೇಟಿಗೆ,ಬಟ್ಟೆಬರೆ ಚೆಲ್ಲಾಪಿಲ್ಲಿ ಮಾಡಿ ಕಳ್ಳತನ ಮಾಡಿರುತ್ತರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾದನ ಹಿಪ್ಪರಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದ್ವೀಚಕ್ರ ವಾಹನ ಕಳವು ಪ್ರಕರಣ :
ಮಾದನಹಿಪ್ಪರಗಾ ಠಾಣೆ : ಶ್ರೀ. ಭೀಮಶ್ಯಾ ತಂದೆ ಬಸವಣ್ಣಪ್ಪಾ ಆಳಂದ ಸಾ:ಮದಗುಣಕಿ ತಾ:ಆಳಂದ  ಇವರು ದಿನಾಂಕ 04-03-2014 ರಂದು ರಾತ್ರಿ 01:30 ಗಂಟೆಯಿಂದ 3 ಗಂಟೆಯ ಮಧ್ಯದ ಅವಧಿಯಲ್ಲಿ.ನನ್ನ ಅಣ್ಣನ ಮಗನಾದ ರಮೇಶ ಆಳಂದ ಇವರ ಮನೆಯ ಪಕ್ಕದಲ್ಲಿ ನಿಲ್ಲಿಸಿದ ನನ್ನ ಹಿರೋ ಹೂಂಡಾ ಕಂಪನಿಯ ಪ್ಯಾಶನ್ ಪ್ಲಸ್ ಮೋಟರ್ ಸೈಕಲ್ ನಂಬರ ಕೆ.ಎ:32 ಎಸ್:2848 ನೇದ್ದನು ಯಾರೋ ಅಪರಿಚಿತ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ನನ್ನ ಮೋಟರ್ ಸೈಕಲ್ ಅ.ಕಿಮ್ಮತ್ತು 24,000=00 ರೂಪಾಯಿಗಳು ಆಗಿರುತ್ತದೆ ಮತ್ತು ನನ್ನಂತೆ ನಮ್ಮೂರ ಮರಯ್ಯಾ ತಂದೆ ಸಿದ್ದಯ್ಯಾ ಹಿರೇಮಠ ಇವರ ಟಿ.ವಿ.ಎಸ್ ಎಕ್ಸ್.ಎಲ್. ಮೋಟರ್ ಸೈಕಲ್ ನಂ: ಎಮ್.ಹೆಚ್: 13 ಜಿ.ಬಿ.: 1628 ಅ.ಕಿ. 24,000/- ಇದನ್ನು ಸಹ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ.  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾದನಹಿಪ್ಪರಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಮೋಸ ಮಾಡಿದ ಪ್ರಕರಣ :
ಸ್ಟೇಷನ ಬಜಾರ ಠಾಣೆ : ಇಂದು ದಿನಾಂಕ ಎಸ್.ಎನ್ ಪಂಚಾಳ ಸರಕಾರಿ ಐಟಿಐ ಕಾಲೇಜ ಪ್ರಿನ್ಸಿಪಾಲ ಗುಲಬರ್ಗಾ ರವರು ದಿನಾಂಕ 30-05-2013  ರಂದು ಐಟಿಐ ಕಾಲೇಜಿನ ವಿಧ್ಯಾರ್ಥಿಗಳಾದ 1. ಸುನಿಲ ಕುಮಾರ ತಂದೆ ಬಸಣಗೌಡ ಮಾಲಿ ಪಾಟೀಲ, 2. ಶಿವರಾಜ ತಂದೆ ಶಾಂತವೀರಪ್ಪಾ ವೇದಶೇಟ್ಟಿ ಇವರಿಗೆ ಒಬ್ಬ ಅಪರಿಚಿತ ವ್ಯಕ್ತಿಯೊಬ್ಬನು ನಿಮಗೆ ಶಿಶ್ಯ ವೇತನ ಸಿಗುತ್ತದೆ ನಿಮ್ಮ ಜಾಹಿರಾತಿನ ಸಲುವಾಗಿ ಫೋಟೊ ತೆಗೆಯಬೇಕಾಗಿದೆ ಒಳ್ಳೆಯ ಬಟ್ಟೆ ಬಂಗಾರ ಸಾಮಾನುಗಳು ಹಾಕಿಕೊಂಡು ಬರಲು ತಿಳಿಸಿದ ಮೇರೆಗೆ ಸದರಿ ಇಬ್ಬರು ಹುಡುಗರು ಎರಡೆರಡು ತೊಲೆ ಬಂಗಾರ ಚೈನುಗಳು ಹಾಕಿಕೊಂಡು ಬಂದಿದ್ದು ಸದರಿ ಹುಡುಗರಿಗೆ ಏಷಿಯನ ಮಾಲಗೆ ಕರೆದುಕೊಂಡು ಹೋಗಿ ಬ್ಯೂಟಿ ಪಾರ್ಲರನಲ್ಲಿ ಕಳುಹಿಸುವಾಗ ಸದರಿ ಚೈನುಗಳು ತನ್ನ ಹತ್ತಿರ ಇಟ್ಟುಕೊಂಡು ಹುಡುಗರಿಗೆ ಬ್ಯೂಟಿ ಪಾರ್ಲರ ಅಂಗಡಿಯಲ್ಲಿ ಕಳುಹಿಸಿ ಮೋಸ ಮಾಡಿ ತೆಗೆದುಕೊಂಡು ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸ್ಟೇಷನ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಅಫಜಲಪೂರ ಠಾಣೆ : ಶ್ರೀಮತಿ ಭುವನೇಶ್ವರಿ ಗಂಡ ಗುರುಶಾಂತಪ್ಪ ರಾಂಪುರ  ರವರಿಗೆ  ಸುಮಾರು 15 ವರ್ಷದ ಹಿಂದೆ ಅಫಜಲಪೂರ ಪಟ್ಟಣದ ಮಳೆಪ್ಪ ತಂದೆ ಗುರುಶಾಂತಪ್ಪ ರಾಂಪುರ ರವರೊಂದಿಗೆ ಮದುವೆಯಾಗಿದ್ದು ಇರುತ್ತದೆ. ಸದ್ಯ ನಮಗೆ 3 ಜನ ಮಕ್ಕಳಿದ್ದು ನನ್ನ ಗಂಡನ ಅಣ್ಣ ತಮ್ಮಂದಿರರೆಲ್ಲರು ಬೇರೆ ಬೇರೆಯಾಗಿ ಉಪಜೀವಿಸುತ್ತಿದ್ದಾರೆ, ಅದರಂತೆ ನಾವು ಸಹ ಬೇರೆಯಾಗಿ ಸಂಸಾರ ಮಾಡುತ್ತಿದ್ದೇವು. ನನ್ನ ಗಂಡ ಈಗ ಸುಮಾರು 4-5 ವರ್ಷಗಳಿಂದ ನನ್ನ ಮೇಲೆ ವಿನಾಕಾರಣ ಸಂಶಯ ಪಟ್ಟು ಅವಾಚ್ಯವಾಗಿ ಬೈಯುವುದು, ಹೊಡೆಯುವುದು ಮಾಡಿ ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳ ಕೊಡುತ್ತಾ ಬಂದಿರುತ್ತಾನೆ. ಈ ವಿಷಯವನ್ನು ನಾನು ನನ್ನ ತವರು ಮನೆಯವರಿಗೆ ಆಗಾಗ ಹೇಳುತ್ತಾ ಬಂದಿರುತ್ತೇನೆ. ನನ್ನ ತವರು ಮನೆಯವರು ಕೂಡ ನನ್ನ ಗಂಡನಿಗೆ ಬುದ್ದಿವಾದ ಹೇಳಿರುತ್ತಾರೆ. ಆದರು ಸಹ ನನ್ನ ಗಂಡ ನನಗೆ ಹಿಂಸಿಸುತ್ತಾ ಬಂದಿರುತ್ತಾನೆ. ದಿನಾಂಕ 27-02-2014 ರಂದು ಬೆಳಿಗ್ಗೆ 6 ಗಂಟೆಗೆ ನಾನು ಅಫಜಲಪೂರದ ನಮ್ಮ ಮನೆಯಲ್ಲಿ ಇದ್ದಾಗ ನನ್ನ ಗಂಡ ನನಗೆ ಅವಾಚ್ಯವಾಗಿ ಬೈಯುತ್ತಿದ್ದನು. ನಾನು ಯಾಕ ಬೈಯುತ್ತಿರಿ ಅಂತಾ ಕೇಳಿದ್ದಕ್ಕೆ ನನ್ನೊಂದಿಗೆ ವಾದ ಮಾಡತಿಯೇನೆ ಅಂತಾ ಅಂದು ಕೈಯಿಂದ ನನ್ನ ಕಪಾಳ ಮೇಲೆ ಹೋಡೆದು  ನಾನು ವಿರೊಧ ಮಾಡಿದ್ದಕ್ಕೆ ಅಲ್ಲೆ ಮನೆಯಲ್ಲಿದ್ದ ರಾಡನ್ನು ತೆಗೆದುಕೊಂಡು ನನ್ನ ಎರಡು ಮೊಳಕಾಲ ಕೆಳಗೆ ಹೊಡೆದು ಭಾರಿ ರಕ್ತಗಾಯ ಪಡಿಸಿರುತ್ತಾನೆ.ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

04 March 2014

Gulbarga District Reported Crimes

ಮಟಕಾ ಜೂಜಾಟದಲ್ಲಿ ನಿರತ ವ್ಯಕ್ತಿಯ ಬಂಧನ :
ನಿಂಬರ್ಗಾ ಠಾಣೆ : ದಿನಾಂಕ 03-03-2014 ರಂದು ಕವಲಗಾ ಗ್ರಾಮದ ಬಾಬಾಶಾ ದರ್ಗಾದ ಕಟ್ಟೆಯ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಮೇಲೆ ಒಬ್ಬ ವ್ಯಕ್ತಿ ಮಟಕಾ ಜೂಜಾಟ ನಡೆಸುತ್ತಿದ್ದಾನೆ ಅಂತ ಮಾಹಿತಿ ಬಂದ ಮೇರೆಗೆ ಪಿ.ಎಸ್.ಐ. ನಿಂಬರ್ಗಾ ಮತ್ತು ಸಿಬ್ಬಂದಿ ಪಂಚರೊಂದಿಗೆ ಕವಲಗಾ ಗ್ರಾಮಕ್ಕೆ ಹೋಗಿ ಬಾಬಾಶಾ ದರ್ಗಾದ ಮರೆಯಾಗಿ ನಿಂತು ನೋಡಲಾಗಿ ಬಾಬಾಶಾ  ದರ್ಗಾದ ಕಟ್ಟೆಯ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಕುಳಿತು ಸಾರ್ವಜನಿಕರಿಂದ ಹಣ ಪಡೆದು ಓಪನ ನಂಬರ ಬಂದರೆ 1 ರೂಪಾಯಿಗೆ 8 ರೂಪಾಯಿ ಗೆಲ್ಲಿರಿ ಅಂತ ಮತ್ತು ಜಾಯಿಂಟ ನಂಬರ ಬಂದರೆ 1 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತ ಕೂಗುತ್ತಾ ಮಟಕಾ ಅಂಕೆ ಸಂಖ್ಯೆಯುಳ್ಳ ಚೀಟಿಗಳನ್ನು ಬರೆದುಕೊಡುತ್ತಿರುವ ದನ್ನು ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮದಲ್ಲಿ ನಾನು ಮತ್ತು ಸಿಬ್ಬಂಧಿ ಜನರು ಕೂಡಿ ಸದರಿ ವ್ಯಕ್ತಿಯ ಮೇಲೆ ದಾಳಿ ಮಾಡಿ ಹಿಡಿದು ವಿಚಾರಿಸಲು ಸಿದ್ರಾಮಪ್ಪ ತಂದೆ ಶಿವರಾಯ ಅಮರೆ  ಸಾ||  ಕವಲಗಾ ಗ್ರಾಮ ಅಂತ ತಿಳಿಸಿದನು ಅವನನ್ನು ಚೆಕ ಮಾಡಲಾಗಿ ಮಟಕಾ ಜೂಜಾಟಕ್ಕೆ ಬಳಿಸಿರುವ ನಗದು ಹಣ 317/- ಒಂದು ಮಟಕಾ ಅಂಕಿ ಸಂಖ್ಯೆ ಹಾಳೆ ಒಂದು ಬಾಲ ಪೆನ್ನ ನೇದ್ದವುಗಳನ್ನು ವಶಪಡಿಸಿಕೊಂಡು ಠಾಣೆಗೆ ಮರಳಿ ಬಂದು ಸದರಿಯವನ ವಿರುದ್ಧ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಸಿಡಿಲು ಬಡಿದು ವ್ಯಕ್ತಿ ಸಾವು :
ಅಫಜಲಪೂರ ಠಾಣೆ : ದಿನಾಂಕ 03-03-2014 ರಂದು ಮದ್ಯಾಹ್ನ 3;00 ಗಂಟೆಗೆ ಶ್ರೀ ಮಲ್ಲಿಕಾರ್ಜುನ ತಂದೆ ತಿಪ್ಪಣ್ಣ ಚಂಬಾರ ರವರ ತಮ್ಮ ಬಾಕ್ಸರ ಇವನು ಮನೆಯಿಂದ ಹೊಲಕ್ಕೆ ಹೋಗಿದ್ದು 5;00 ಪಿ.ಎಂ ಸುಮಾರು ಜೋರಾಗಿ ಗುಡುಗು ಸಿಡಲಿನ ಸಪ್ಪಳ ಕೇಳಿಸುತ್ತಿತ್ತು. ನಂತರ ಅದೇ ಸಮಯಕ್ಕೆ ನಮ್ಮೂರ ಹಣಮಂತ ತಂದೆ ಮಲ್ಕಪ್ಪ ಪುಲಾರಿ ರವರು ನನಗೆ ಫೋನ ಮಾಡಿ ಹೇಳಿದ್ದೇನೆಂದರೆ, ನಿಮ್ಮ ತಮ್ಮ ಬಾಕ್ಸರ ಇವನಿಗೆ ಹೊಲದಲ್ಲಿ ಸಿಡಿಲು ಬಡಿದು ಬಿದ್ದಿರುತ್ತಾನೆ ಬೇಗ ಬಾ ಅಂತಾ ಹೇಳಿದನು. ಆಗ ನಾನು ಗಾಬರಿಯಾಗಿ ನಾನು ಮತ್ತು ನಮ್ಮ ತಂದೆ ಕೂಡಿಕೊಂಡು ಹೊಲಕ್ಕೆ ಹೋಗಿ ನೋಡಲಾಗಿ ನಮ್ಮ ತಮ್ಮ ಕೆಳಗೆ ಬಿದ್ದು ಒದ್ದಾಡುತ್ತಿದ್ದ. ನಂತರ ನಾನು ಮತ್ತು ನಮ್ಮ ತಂದೆ ಹಾಗು ಹಣಮಂತ ಪುಲಾರಿ ರವರೆಲ್ಲರು ಕೂಡಿಕೊಂಡು ಒಂದು ಜೀಪನಲ್ಲಿ ನಮ್ಮ ತಮ್ಮನನ್ನು ಹಾಕಿಕೊಂಡು ಉಪಚಾರ ಕುರಿತು ಸರಕಾರಿ ಆಸ್ಪತ್ರೆ ಅಫಜಲಪೂರಕ್ಕೆ ತಗೆದುಕೊಂಡು ಬರುತ್ತಿದ್ದಾಗ ಮದ್ಯಾ ಮಾರ್ಗದಲ್ಲಿ ಸೊನ್ನ ಕ್ರಾಸ ಬಳಿ ನನ್ನ ತಮ್ಮ ಮೃತಪಟ್ಟಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣಗಳು :
ನಿಂಬರ್ಗಾ ಠಾಣೆ : ಶ್ರೀ ಭೀಮಶಾ ತಂದೆ ಕರಬಸಪ್ಪ ನಿಂಬಗಾಳ ಸಾದುತ್ತರಗಾಂವ ಇವರ ಮಗಳ ಕೈಯಲ್ಲಿ ಶ್ರೀಶೈಲ ತಂದೆ ಕಾಶಪ್ಪ ಮಂಗಾಣೆ ಇತನು ಚೀಟಿ ಕೊಟ್ಟು ಬೇರೆಯವರಿಗೆ ಒಯ್ದು ಕೊಡಲು ತಿಳಿಸಿದ್ದು ನನ್ನ ಮಗಳು ನಿರಾಕರಿಸಿ ಸದರಿ ವಿಷಯ ನನಗೆ ಹೇಳಿದಾಗ ನಾನು ದಿನಾಂಕ 02-03-2014 ರಂದು ಸದರಿಯವನ ಮನಗೆ ಹೋಗಿ ವಿಚಾರಿಸಲು ಆತನು ಮಲಗಿದ್ದರಿಂದ  ವೀರೇಶ್ವರ ಗುಡಿಯಲ್ಲಿ ನಾನು ಕುಳಿತಾಗ  ಶ್ರೀಶೈಲ ತಂದೆ ಕಾಶಪ್ಪ ಮಂಗಾಣೆ ಇತನು ಅವಾಚ್ಯ ಶಬ್ದಗಳಿಂದ ಬೈದು ನಮ್ಮ ಮನೆಗೆ ಬಂದು ನನಗೆ ಕೇಳತಿ ಮಗನೆ ಅಂತಾ ಬೈದು ಎದೆಯ ಮೇಲಿನ ಅಂಗಿ ಹಿಡೆದು ಕೈಯಿಂದ ಬೆನ್ನ ಮೇಲೆ ಹಾಗೂ ಕಲ್ಲಿನಿಂದ ಹಣೆಯ ಮೇಲೆ ಹೊಡೆದು ರಕ್ತಗಾಯ ಪಡೆಸಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಕ್ಷಣೆ ಕಿರುಕಳ ಪ್ರಕರಣ :
ನಿಂಬರ್ಗಾ ಠಾಣೆ : ಶ್ರೀಮತಿ ಮಾಹಾನಂದ ಗಂಡ ಹಣಮಂತ ಹುಲಿ ಸಾ: ಬೆಣ್ಣೆಶೀರೂರ ಹಾ:ವ ಕೇರೂರು ತಾ: ಆಳಂದ ರವರ ಗಂಡಅತ್ತೆಮಾವಬಾವ,ನಾದನಿಯರು ಸೇರಿಕೊಂಡು ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡಿ ದಿನಾಂಕ 25-02-2014 ರಂದು 10 ಗಂಟೆಗೆ ಗಂಡನ ಮನೆಯಲ್ಲಿ ಅವಾಚ್ಯ ಶಬ್ದಗಳಿಂದ ಬೈದು ಹೊಡೆ ಬಡೆ ಮಾಡಿ ತವರು ಮನೆಯಿಂದ 50,000=00 ರೂ ಹಣ ತರುವಂತೆ  ಮನೆಯಿಂದ ಹೊರಗೆ ಹಾಕಿದ್ದು ಒಂದು ವೇಳೆ ತರದೆ ಇದ್ದರೆ ಕೋಲೆ ಮಾಡುತ್ತೇನೆ ಅಂತಾ ಜೀವ ಭಯ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

03 March 2014

Gulbarga District Reported Crimes

ಹಲ್ಲೆ ಪ್ರಕರಣಗಳು :
ನಿಂಬರ್ಗಾ ಠಾಣೆ : ಶ್ರೀ ಬಸವರಾಜ ತಂದೆ ಧಾನಪ್ಪ ಅವುಟೆ ಸಾ|| ಯಳಸಂಗಿ ಇವರು ದಿನಾಂಕ 02-03-2014 ರಂದು 1350 ಗಂಟೆಗೆ ತಾನು ಯಳಸಂಗಿ ಗ್ರಾಮದ ಪ್ರಕಾಶ ತಳವಾರ ಇವರ ಕಿರಾಣಿ ಅಂಗಡಿ ಹತ್ತಿರ ನಿಂತಾಗ ದಶರಥ ತಂದೆ ಹೊನ್ನಪ್ಪ ಜೋಗನ ಸಾ|| ಹಡಲಗಿ ಇತನು ಸರಾಯಿ ಕುಡಿಯಲು ಹಣ ಕೇಳಿದ್ದು ಅದಕ್ಕೆ ಫಿರ್ಯಾದಿಯು ಇಲ್ಲ ಅಂತ ಅಂದಿದ್ದಕ್ಕೆ ಆರೋಪಿತನು ಫಿರ್ಯಾದಿಯ ಎದೆಯ ಮೇಲಿನ ಅಂಗಿ ಹಿಡಿದು ಎಳೆದಾಡುತ್ತಾ ಕೈಯಿಂದ ಕಪಾಳ ಮೇಲೆ ಹೊಡೆದು ಹಣ ಕೊಡಲಿಲ್ಲ ಅಂದರೆ ನಿನಗೆ ಬಿಡುವದಿಲ್ಲ ಅಂತ ಭಯ ಹಾಕಿ ಕಲ್ಲಿನಿಂದ ತಲೆಕಪಾಳಎಡ ಕಣ್ಣಿನ ಮೇಲೆ ಜೋರಾಗಿ ಹೊಡೆದು ರಕ್ತಗಾಯ ಮತ್ತು ಗುಪ್ತಗಾಯ ಪಡಿಸಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಫಜಲಪೂರ ಠಾಣೆ : ದಿನಾಂಕ 02-03-2014 ರಂದು ಬೆಳಿಗ್ಗೆ 10 ಗಂಟೆಗೆ ನಾಥುರಾಮ ತಂದೆ ಲಕ್ಷ್ಮಣ ರಾಠೋಡ ಸಾ : ಹಳ್ಯಾಳ ತಾಂಡ ಮತ್ತು ಮಾದಾಬಾಳ ತಾಂಡಾದ ನಮ್ಮ ಸಮಾಜದವರಾದ ಅಪ್ಪು ತಂದೆ ಬಾಬು ರಾಠೋಡ ರವರು ಕೂಡಿಕೊಂಡು ಬಳೂರಗಿ ಹೆಚ್.ಎನ್ ತಾಂಡಾಕೆ ಹೋಗಿ ಅಲ್ಲಿ ಕೋಟು ತಂದೆ ಹೀರೂ ರಾಠೋಡ ರವರಿಗೆ ಆಮಂತ್ರಣ ಪತ್ರ ಕೊಟ್ಟು ಮನೆಯ ಮುಂದೆ ರಸ್ತೆಯ ಮೇಲೆ ನಿಂತಾಗ ಅದೇ ಸಮಯಕ್ಕೆ ಆನಂದ ರಾಠೋಡ ಇವನು ಬಂದು ಏ ಭೋಸಡಿ ಮಕ್ಕಳ್ಯಾ ನಮ್ಮ ತಾಂಡಾಕ ಯಾಕ ಬಂದಿರಲೇ ಅಂತಾ ಅಂದನು ಆಗ ನಾನು ನಮಗ್ಯಾಕ ಬೈತಿರಿ ಅಂತಾ ಕೇಳಿದ್ದಕ್ಕೆ ಆನಂದ ಇವನು ನನ್ನ ಹೆಸರಿಗೆ ಮಂಜುರಾದ ಕೊಳವೆ ಬಾಯಿಯನ್ನು ಇಲ್ಲಸಲ್ಲದ ಹೇಳಿ ಕ್ಯಾನ್ಸಲ್ ಮಾಡಸಿರಿತ್ತಿರಿ ಅಂತಾ ಅಂದು ನಮ್ಮೊಂದಿಗೆ ತಕರಾರು ಮಾಡಿಕೊಳ್ಳುತ್ತಿದ್ದಾಗ ಅದೆ ಸಮಯಕ್ಕೆ ಆನಂದ ರಾಠೋಡ, ಮನೋಹರ ತಂದೆ ರತನ್ ಸಿಂಗ ರಾಠೋಡ ಮತ್ತು ರೋಹಿದಾಸ ರಾಠೋಡ ಇವರು ನಮ್ಮ ಹತ್ತಿರ ಬಂದು ಏನಲೇ ಭೋಸಡಿ ಮಕ್ಕಳ್ಯಾ ನಮ್ಮ ತಾಂಡಾದಲ್ಲಿ ಉಳಕೊಂಡು ಬಂದಿರಿ ಈಗ ಯಾರ ಬಿಡಸತಾರಲೆ ಅಂತಾ ಅಂದು ಆನಂದ ಇವನು ನನ್ನ ಕೈ ತಿರುವಿ ಬೆನ್ನಿನ ಮೇಲೆ ಹೊಡೆಯುತ್ತಿದ್ದನು ಮನೋಹರ ಇವನು ನನ್ನೊಂದಿಗೆ ಇದ್ದ ಅಪ್ಪು ಇವನನ್ನು ಕೈಯಿಂದ ಕಪಾಳ ಮೇಲೆ ಹೊಡೆದು ಗಾಯಗೊಳಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಫಜಲಪೂರ ಠಾಣೆ : ದಿನಾಂಕ 02-03-2014 ರಂದು ಬೆಳಿಗ್ಗೆ 10 ಗಂಟೆಗೆ ನಾತುರಾಮ ರಾಠೋಡ ಮತ್ತು ಅಪ್ಪು ರಾಠೋ ರವರು ನಮ್ಮ ತಾಂಡಾಕೆ ಬಂದಿದ್ದು ಅವರಿಗೆ ಕೊಳವೆ ಬಾವಿಯ ವಿಷಯದ ಬಗ್ಗೆ ಕೇಳಿದಕ್ಕೆ ನನ್ನೊಂದಿಗೆ ತಕರಾರು ಮಾಡಿಕೊಂಡರು ಆಗ ಅಲ್ಲೆ ಇದ್ದ ಕೋಲು ರಾಠೋಡ ರವರು ಬಿಡಿಸಿ ಕಳುಹಿಸಿರುತ್ತಾರೆ. ನಂತರ ನಾನು ಬೆಳಿಗ್ಗೆ 11 ಗಂಟೆಗೆ ಬಳುರ್ಗಿ ಬಸ್ಸ್ ನಿಲ್ದಾಣದ ಹತ್ತಿರ ಇದ್ದಾಗ ಸದರಿ ನಾತುರಾಮ ರಾಠೋಡ ಎಂಬುವವನಿಗೆ ಕರೆದುಕೊಂಡು ನನ್ನ ಹತ್ತಿರ ಬಂದು ನಾತುರಾಮ ಇವನು ಏನೋ ಭೋಸಡಿ ಮಗನಾ ನಿಮ್ಮ ತಾಂಡಾಕ ಬಂದರ ನಮ್ಮೊಂದಿಗೆ ಜಗಳ ತೆಗಿತಿ ಮಗನಾ ಅಂತಾ ಅಂದು ತನ್ನ ಕೈಯಿಂದ ನನ್ನ ಏದೆಯ ಮೇಲೆ ಹೊಡೆದನು ಅಪ್ಪು ರಾಠೋಡ ಇತನು ಅಲ್ಲೆ ಇದ್ದ ಕಲ್ಲನ್ನು ತೆಗೆದುಕೊಂಡು ನನ್ನ ಬೆನ್ನನ್ನ ಮೇಲೆ ಹೊಡೆದು ಜೀವ ಸಹಿತ ಬಿಡಬ್ಯಾಡರಿ ಅಂತಾ ಅಂದು ಕಾಲಿನಿಂದ ಬೆನ್ನಿನ ಮೇಲೆ ಒದ್ದು ಗಾಯಗೋಳಿಸಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಸರಕಾರಿ ಕರ್ತವ್ಯಕ್ಕೆ ಅಡೆ ತಡೆ ಮಾಡಿದ ಪ್ರಕರಣ :
ಅಫಜಲಪೂರ ಠಾಣೆ : ದಿನಾಂಕ 11-09-2013 ರಂದು ಗುಲಬರ್ಗಾ ಜಿಲ್ಲಾ ಡಿಸಿಐಬಿ ಘಟಕದ ಪೊಲೀಸ್ ಇನ್ಸಪೆಕ್ಟರ್ ಶ್ರೀ ಎಸ್.ಎಸ್.ಹುಲ್ಲೂರ ರವರು ಮತ್ತು ಅವರ ಸಿಬ್ಬಂದಿಯವರು ಘತ್ತರಗಾ ಗ್ರಾಮದ ಹತ್ತಿರ ಇರುವ ಭೀಮಾನದಿಯ ಸೇತುವೆ ಬಳಿ ಲಾರಿ ನಂ: ಕೆಎ. 32-8421 ನೇದ್ದರಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಪಡಿತರ ಅಕ್ಕಿಯ 280 ಚೀಲಗಳನ್ನು ಲಾರಿ ಸಮೇತ ನಿಲ್ಲಿಸಿ ಮುಂದಿನ ಕ್ರಮಕ್ಕಾಗಿ ಆಹಾರ ನಿರೀಕ್ಷಕರಾದ ಅನೀಲಕುಮಾರ ವಗ್ಗೇಕರ ಇವರಿಗೆ ದೂರವಾಣಿ ಮೂಲಕ ತಿಳಿಸಿದ್ದರಿಂದ ಅವರು ಮತ್ತು ಉಗ್ರಾಣ ವ್ಯವಸ್ಥಾಪಕರಾದ ಲೋಕೇಶಪ್ಪರವರು ಸಾಯಂಕಾಲ 6-00 ಗಂಟೆ ಸುಮಾರಿಗೆ ಸ್ಥಳಕ್ಕೆ ಹೋಗಿರುತ್ತಾರೆ. ಸ್ಥಳದಲ್ಲಿ ಸದರಿ ಲಾರಿ ಮಾಲಿಕನಾದ ಅಲ್ಲಾಭಕ್ಷ ಬಾಗವಾನ ಈತನಿರುತ್ತಾನೆ. ಡಿಸಿಐಬಿ ಘಟಕದ ಪೊಲೀಸ್ ಇನ್ಸಪೆಕ್ಟರ್ರವರು ಅಕ್ಕಿ ಚೀಲಗಳಿದ್ದ ಲಾರಿಯನ್ನು ಮುಂದಿನ ಕ್ರಮಕ್ಕಾಗಿ ಆಹಾರ ನಿರೀಕ್ಷಕರಾದ ಅನೀಲಕುಮಾರರವರಿಗೆ ಒಪ್ಪಿಸಿ ಹೋಗಿರುತ್ತಾರೆ. ನಂತರ ಅಲ್ಲಾಭಕ್ಷ ಬಾಗವಾನ ಇವನು ಅನೀಲಕುಮಾರವರಿಗೆ ನಾನು ಇದೆ ದಂಧೆ ಮಾಡುತ್ತೇನೆ. ನೀನು ಯಾವುದೆ ಪ್ರಕರಣ ದಾಖಲು ಮಾಡಿಸಬೇಡ ಪ್ರಕರಣ ದಾಖಲು ಮಾಡಿಸಿದರೆ ನಿನಗೆ ಮುಂದೆ ನಾನು ಏನು ಮಾಡುತ್ತೇನೆ ನೋಡು, ನೀನು ಅಫಜಲಪೂರದಲ್ಲಿ ಹೇಗೆ ನೌಕರಿ ಮಾಡುತ್ತಿ ನೋಡುತ್ತೇನೆ ಅಂತ ಜೀವದ ಭಯ ಹಾಕಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದರಿಂದ ಅನೀಲಕುಮಾರವರು ಹೆದರಿ ಅಕ್ಕಿಚೀಲಗಳನ್ನು ತುಂಬಿದ ಲಾರಿಯನ್ನು ಸ್ಥಳದಲ್ಲಿಯೆ ಬಿಟ್ಟು ಬಂದಿರುತ್ತಾರೆ. ಈ ವಿಷಯಕ್ಕೆ ಸಂಬಂಧಿಸಿದಂತೆ ನಾನು ನಮ್ಮ ಮೇಲಾಧಿಕಾರಿಯವರ ಆದೇಶದಂತೆ ಆಹಾರ ನಿರೀಕ್ಷಕರಾದ ಅನೀಲಕುಮಾರ ಮತ್ತು ಉಗ್ರಾಣ ವ್ಯವಸ್ಥಾಪಕರಾದ ಲೋಕೇಶಪ್ಪರವರಿಗೆ ವಿಚಾರಿಸಿ ಹೇಳಿಕೆಗಳು ಪಡೆದುಕೊಂಡಿದ್ದು ಅವರು ಮೇಲಿನಂತೆ ತಮ್ಮ ಹೇಳಿಕೆಗಳು ನೀಡಿರುತ್ತಾರೆ. ಈ ವಿಷಯದ ಬಗ್ಗೆ ನಮ್ಮ ಮೇಲಾಧಿಕಾರಿಯವರೊಂದಿಗೆ ಚರ್ಚಿಸಿ ದೂರು ಸಲ್ಲಿಸಲು ತಡವಾಗಿರುತ್ತದೆ. ಆರಕ್ಷಕ ವೃತ್ತ ನಿರೀಕ್ಷಕರು ಅಫಜಲಪೂರವರ ಸಮಕ್ಷಮ ಅನೀಲಕುಮಾರ ಆಹಾರ ನಿರೀಕ್ಷಕರು ಮತ್ತು ಲೋಕೇಶಪ್ಪ ಉಗ್ರಾಣ ವ್ಯವಸ್ಥಾಪಕರು ಅಫಜಲಪೂರರವರು ಹೇಳಿಕೆ ನೀಡಿದ್ದನ್ನು ಪರಿಶೀಲಿಸಿ ಮಾನ್ಯ ಪ್ರಾದೇಶಿಕ ಆಯುಕ್ತರು ಗುಲಬರ್ಗಾರವರು ಲಾರಿಯ ಮಾಲಿಕ (ಬಿಸಿ ಊಟದ ಕಾಂಟ್ರ್ಯಾಕ್ಟರ) ಆದ ಅಲ್ಲಾಬಕ್ಷ ಬಾಗವಾನ ಇವರ ವಿರುದ್ದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಕಳವು ಪ್ರಕರಣಗಳು :
ಅಶೋಕ ನಗರ ಠಾಣೆ : ಶ್ರೀ  ಶಿವಕುಮಾರ ತಂದೆ ಮಹಾದೇವಪ್ಪ ಬಿರಾದಾರ ಸಾ: ಯಲ್ಹೇರಿ ತಾ:ಜಿ: ಯಾದಗಿರ ಹಾ:ವ: ದೂರದರ್ಶನ ಕ್ವಾಟರ್ಸ ನಂ: ಸಿ-5 ಹುಮನಾಬಾದ ರಸ್ತೆ ರೇವಣಾಸಿದ್ದೇಶ್ವರ ಕಾಲೋನಿ ಗುಲಬರ್ಗಾ.  ಇವರು  ದಿನಾಂಕ: 01-03-2014  ರಂದು 8:00 ಎಎಮ್ ಸುಮಾರಿಗೆ ನಾನು ಟಿಕೇಟ ಬುಕ್ ಮಾಡಲು ಗುಲಬರ್ಗಾ ಬಸ್ ನಿಲ್ದಾಣಕ್ಕೆ ಬಂದಾಗ ರಿಸರ್ವೆಷನ ಕೌಂಟರ ಹತ್ತಿರ ಒಬ್ಬ ಸಣ್ಣ ಹುಡುಗ ನಮ್ಮ ಹತ್ತಿರ ಬಂದು ಹೋಗಿದ್ದನ್ನು ಗಮನಿಸಿದೆ ನಂತರ ಬಸ್ ನಿಲ್ದಾಣದ ಹೋರಗಡೆ ಹೋಗಿ ನನ್ನ ಜೇಬಿನಲ್ಲಿ ಇಟ್ಟಿದ್ದ ಮೊಬೈಲ್ SONY EXPERIA. L WHITE ಐ.ಎಮ್.ಇ.ಐ ನಂ: 356605053532681 ಮತ್ತು ಅದರಲ್ಲಿದ್ದ ಸಿಮ್ ನಂ: 9611761455ಕೂಡಾ ಇದ್ದು ನೋಡಲು ಇರಲಿಲ್ಲ. ನಂತರ ಬಸ್ ನಿಲ್ದಾಣದಲ್ಲಿ ಹುಡುಕಾಡಿದ್ದು ನನ್ನ ಮೊಬೈಲಿಗೆ ಫೊನ ಮಾಡಿದಾಗ ಸ್ವೀಚ್ ಆಫ್ ಆಗಿರುತ್ತದೆ. ನಾನು ಗುಲಬರ್ಗಾ ಬಸ್ ನಿಲ್ದಾಣದಲ್ಲಿ ಟಿಕೆಟ ಬುಕ್ ಮಾಡಿಸುತ್ತಿರುವಾಗ ಒಬ್ಬ ಸಣ್ಣ ಹುಡುಗ ಡಿಕ್ಕಿ ಹೊಡೆದು ಹೋಗಿದ್ದು ಆ ಸಂದರ್ಭದಲ್ಲಿ ನನ್ನ ಮೊಬೈಲ್ ಕಳ್ಳತನವಾಗಿರುತ್ತದೆ. ಆ ಸಣ್ಣ ಹುಡುಗನ ಮೇಲೆ ಸಂಶಯವಿರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಳಖೇಡ ಠಾಣೆ : ಮಳಖೇಡ ಗ್ರಮದ ಉತ್ತರಾಧಿ ಮಠದಲ್ಲಿ ಸುಮಾರು 8 ವರ್ಷಗಳ ಹಿಂದೆ ಒಂಡು ಕಟ್ಟಿಗೆಯ ತೊಟ್ಟಿಲು ಮಾಡಿಸಿದ್ದು ಅದಕ್ಕೆ ಸುಮಾರು 8 ಕೆ.ಜಿ ಯಷ್ಟು ಬೆಳ್ಳಿಯ ತಗಡು ಬಡೆದಿದ್ದು ಅಂ.ಕಿ 3.84.000/-ರೂ ನೆದ್ದು ಮತ್ತು ಒಂದು ದೇವರ ಹುಂಡಿಯನ್ನು ಮಠದ ಪ್ರಾಕಾರದಲ್ಲಿ ಇಟ್ಟಿದ್ದು ನಿನ್ನೆ ದಿನಾಂಕ 02.03.2014 ರಂದು ರಾತ್ರಿ 10:30 ಪಿ.ಎಮ್ ಕ್ಕೆ ನಾವೆಲ್ಲ ಮಠದಲ್ಲಿ ಅದನ್ನು ನೋಡಿದ್ದು. ಇಂದು ದಿನಾಂಕ 03.03.2014 ರಂದು ಬೆಳಗ್ಗೆ ೦6:00 ಗಂಟೆಗೆ ಪೂಜೆ ಮಾಡಲು ಹೋಗಿ ನೋಡಿದಾಗ ಸದರಿ ಬೆಳ್ಳಿಯ ತಗಡು ಹಚ್ಚಿದ್ದ ತೊಟ್ಟಿಲು ಮತ್ತು ದೇವರ ಮುಂದೆ ಇಟ್ಟಿದ್ದ ಹುಂಡಿ  ಇರಲಿಲ್ಲ ಸದರಿ ಸಾಮಾನುಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಶ್ರೀ. ವೆಂಕಣ್ಣಾಚಾರಿ ತಂದೆ ಕ್ರೀಷ್ಣದಾಸ ಪುಜಾರ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಳಖೇಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದ್ವೀಚಕ್ರ ವಾಹನ ಕಳವು ಪ್ರಕರಣ :
ಸ್ಟೇಷನ ಬಜಾರ ಠಾಣೆ : ಶ್ರೀ ಮಹ್ಮದ ಲೈಕ ಉರ ರೇಹಮಾನ ತಂದೆ ಅಬ್ದುಲ ರೇಹಮಾನ್ ಸಾ|| ಐವನ ಇ ಶಾಹಿ ಮಜ್ಜಿದ ಹತ್ತಿರ ಗುಲಬರ್ಗಾ ಇವರು ದಿನಾಂಕ. 03.02.2014 ರಂದು 5.00 ಪಿ.ಎಂಕ್ಕೆ ನನ್ನ ಬಜಾಜ ಡಿಸ್ಕವರ ಮೊಟಾರ್ ಸೈಕಲ ನಂ. ಕೆಎ-23-ಎಸ್-7196  ಚಾ.ನಂ.  DSVBMG95333  ಇ.ನಂ. DSUBMG15465 ಅ.ಕಿ|| 19,000/- ರೂ ನೆದ್ದನ್ನು ಏಸಿಯನ ಮಹಲ ಹತ್ತಿರ ನಿಲುಗಡೆ ಮಾಡಿ ಕೆಲಸ ಮುಗಿಸಿಕೊಂಡು  7.00 ಪಿ.ಎಂಕ್ಕೆ ಮರಳಿ ಬಂದು ನೋಡಲಾಗಿ ಯಾರೋ ಕಳ್ಳರು ನನ್ನ ಮೊಟಾರ್ ಸೈಕಲ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸ್ಟೇಷನ ಬಜಾರ ಠಾಣೆಯಲ್ಲಿ ಪ್ರಕರಣದ ದಾಖಲಾಗಿದೆ.