POLICE BHAVAN KALABURAGI

POLICE BHAVAN KALABURAGI

28 January 2014

Gulbarga District Reported Crimes

ಅಪಘಾತ ಪ್ರಕರಣಗಳು :
ಗ್ರಾಮೀಣ ಠಾಣೆ : ಶ್ರೀ ಗೌಸ್ ಪಟೇಲ್ ತಂದೆ ಹುಸೇನ್ ಪಟೇಲ್  ಸಾ: ಮುಸ್ಲಿಂ ಸಂಘ ತಾಜನಗರ ಗುಲಬರ್ಗಾ ರವರ ತಮ್ಮ ಮೋಬಿನ್ ಪಟೇಲ್ ಇತನು ಕೆಲಸಕ್ಕೆ ಹೋಗುತ್ತೆನೆ. ಅಂತಾ ಹೇಳಿ ಮನೆಯಿಂದ ಹೋದನು, ನಂತರ ಮಧ್ಯಾಹ್ನ 12:30 ಗಂಟೆಗೆ ನನ್ನ ಮೊಬೈಲಿಗೆ ನನ್ನ ತಾಯಿ ಹುಸೇನ್ ಬೀ ಇವಳು ಫೋನ ಮಾಡಿ ತಿಳಿಸಿದ್ದೇನೆಂದರೆ, ಮೋಬೀನ್ ಪಟೇಲ್ ಗ್ಯಾರೇಜದಲ್ಲಿ ಕೆಲಸ ಮಾಡುವಾಗ ಹೈಡ್ರೋಲಿಕ ಜಾಕ್ ಸ್ಟ್ರೀ ಜಾರಿ ಆತನ ಮೈಮೇಲೆ ಬಿದ್ದು ಗಾಯವಾಗಿರುತ್ತದೆ. ಅದಕ್ಕೆ ಆಸ್ಪತ್ರೆಗೆ ಉಪಚಾರ ಕುರಿತು ಗ್ಯಾರೇಜ್ ಮಾಲೀಕ ನಬೀ ಇತನು ತೆಗೆದುಕೊಂಡು ಬರುತ್ತಿರುವುದಾಗಿ ತಿಳಿಸಿರುತ್ತಾನೆ. ನಂತರ ನಾನು ನೇರವಾಗಿ ಹುಮ್ನಾಬಾದ ರೋಡ ಕಡೆಗೆ ಹೋಗುವಾಗ ಎದರುಗಡೆಯಿಂದ ಆಟೋದಲ್ಲಿ ನನ್ನ ತಮ್ಮನಿಗೆ ತೆಗೆದುಕೊಂಡು ಬರುತ್ತಿದ್ದುದ್ದನ್ನು ನೋಡಿ ಅದರ ಹಿಂದೆಯೆ ಬಸವೇಶ್ವರ ಆಸ್ಪತ್ರೆಗೆ ಬಂದು ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿಗಳು ಉಪಚಾರ ನೀಡದ ಕಾರಣ ಗುಲ್ಬರ್ಗಾ ಜಿಲ್ಲಾ ಸರಕಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿದ್ದು ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿಗಳು ನನ್ನ ತಮ್ಮನಿಗೆ ನೋಡಿ ಈಗಾಗಲೆ ಮೃತ  ಪಟ್ಟಿರುವುದಾಗಿ ತಿಳಿಸಿದರು. ಅಲ್ಲಿಯೇ ಹಾಜರಿದ್ದ ನಬೀಸಾಬ ಇವರಿಗೆ ವಿಚಾರಿಸಲಾಗಿ ಅವನು ತಿಳಿಸಿದ್ದೆನೆಂದೆರೆ ಮಧ್ಯಾಹ್ನ 12-15 ಗಂಟೆ ಸುಮಾರಿಗೆ ಗುಲ್ಬರ್ಗಾ ಹುಮನಾಬಾದ ಹತ್ತಿರ ಇರುವ ನಭೀ ಗ್ಯಾರೇಜ್ ನಲ್ಲಿ ಟಿಪ್ಪರ ನಂ ಕೆಎ 38-4891ನೇದ್ದರ ಹೈಡ್ರೋಲಿಕ್ ಚಾಕಾವನ್ನು ರಿಪೇರಿ ಮಾಡುವ ಕಾಲಕ್ಕೆ ಸದರಿ ಟಿಪ್ಪರ ಚೆಸ್ಸಿಯ ಮೇಲೆ ನಿಂತು ನಿಮ್ಮ ತಮ್ಮ ಮೋಬಿನ ಪಟೇಲ್ ಇತನು ಟಿಪ್ಪರ ಹೈಡ್ರೋಲಿಕ್ ಜಾಕ್ ರಿಪೇರಿ ಮಾಡುವಾಗ ಸದರಿ ಟಿಪ್ಪರ ಚಾಲಕನು ಟಿಪ್ಪರ ಚಾಲು ಮಾಡಿ ಟಿಪ್ಪರನ್ನು ಹಿಂದಕ್ಕೆ ಮುಂದಕ್ಕೆ ತೆಗೆದುಕೊಳ್ಳುವಾಗ ಅಲಕ್ಷತನದಿಂದ ಒಮ್ಮೇಲೇ ಟಿಪ್ಪರ ಹೈಡ್ರೋಲಿಕ್ ಜಾಕ್ ಕೆಳಗೆ ಇಳಿಸಿದಾಗ ಕೆಳಗೆ ಕೆಲಸ ಮಾಡುತ್ತಿದ್ದ ನಿಮ್ಮ ತಮ್ಮನ ಮೇಲೆ ಟಿಪ್ಪರನ ಬಾಡಿ ಆತನ ಮೇಲೆ ಬಿದ್ದಿದ್ದರಿಂದ ಅವನ ತಲೆಗೆ ಗುಪ್ತ ಗಾಯವಾಗಿ ಎಡಕಿವಿಯಿಂದ ರಕ್ತ ಸೋರಿದ್ದು ಮೂಗಿನಿಂದ ರಕ್ತಸ್ರಾವವಾಗಿದ್ದು ಎರಡು ಎದೆಗೆ ಹೊಟ್ಟೆಗೆ ಭಾರಿ ಗುಪ್ತಗಾಯವಾಗಿ ಕಂದುಗಟ್ಟಿದಂತಾಗಿ ಬೇಹೋಶ ಆಗಿದ್ದನ್ನು ಸದರಿ ಟಿಪ್ಪರನ ಚಾಲಕನು ಘಟನೆ ಸಂಭವಿಸಿದ ನಂತರ ಅಲ್ಲಿಂದ ಓಡಿ ಹೋಗಿರುತ್ತಾನೆ ತಿಳಿಸಿದ್ದು ಸದರಿ ಟ್ಟಿಪ್ಪರ ಚಾಲಕನ ವಿರುದ್ಧ ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾಹಾಗಾಂವ ಠಾಣೆ : ಶ್ರೀ ವಿಜಯಕುಮಾರ ತಂ ಶರಣಪ್ಪ ಪಾಟೀಲ ಸಾ|| ಕಿಣ್ಣಿ ಸಡಕ ಹಾ|||| ರೇವಣಸಿದ್ದೇಶ್ವರ ಕಾಲೋನಿ  ಗುಲಬರ್ಗಾ ದಿನಾಂಕ 26-01-2014 ರಂದು  ವೀರಭದ್ರೇಶ್ವರ ಜಾತ್ರಿ ಕುರಿತು ಹುಮನಾಬಾದಕ್ಕೆ ಹೋಗಿದ್ದು ವಾಪಸ ತನ್ನೂರಾದ ಕಿಣ್ಣಿ ಸಡಕಿಗೆ ಬಂದು ಅಲ್ಲಿಂದ ತನ್ನ ಮೋಟಾರ ಸೈಕಲ ನಂ ಬಜಾಜ ಪ್ಲಾಟೀನ ಕೆ,, 32 ಎಸ್, 3101 ನೇದ್ದು ತೆಗೆದುಕೊಂಡು 4.30 ಪಿ,ಎಮ್,ಕ್ಕೆ ಊರಿಂದ ಹೊರಟು ಗುಲಬರ್ಗಾಕ್ಕೆ ಬರುವಾಗ ಸಿದ್ದಭಾರತಿ ಶಾಲೆಯ ಹತ್ತಿರ 5.30 ಪಿ,ಎಮ್,ಕ್ಕೆ ಬರುತ್ತಿರುವಾಗ ಎದುರುಗಡೆಯಿಂದ ಅಂದರೆ ಗುಲಬರ್ಗಾ ಕಡೆಯಿಂದ ಒಬ್ಬ ಟಂಟಂ ಗೂಡ್ಸ ವಾಹನ ನಂ ಕೆ,, 32 ಬಿ,5578 ನೇದ್ದರ ಚಾಲಕನು ತನ್ನ ವಾಹನವನ್ನು ಅತಿವೇಗ ಮತ್ತು ಅಲಕ್ಷತನದಿಂದ ಬಂದವನೆ ಪಿರ್ಯಾದಿ ಮೋಟಾರ ಸೈಕಲಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿದ್ದರಿಂದ ಮೋಟಾರ ಸೈಕಲ ಸಮೇತಾ ಕೆಳಗೆ ಬಿದ್ದಾಗ ತನ್ನ ಎರಡು ಕಾಲುಗಳಿಗೆ ಮತ್ತು ಕೈಗಳಿಗೆ ಭಾರಿ ರಕ್ತಗಾಯಗಳಾಗಿ ಕಾಲು ಹಾಗೂ ಕೈಗಳು ಮುರಿದಂತೆ ಆಗಿರುತ್ತವೆ ಅಪಘಾತದ ನಂತರ ಚಾಲಕ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂಚಾರಿ ಠಾಣೆ : ಶ್ರೀ ವಿಜಯಕುಮಾರ ತಂದೆ ಯಲ್ಲಪ್ಪಾ ದಿವೇಕರ,  ಸಾಃ ಮಾಲಗತ್ತಿ ಕ್ರಾಸ್ ಹಾಗರಗಾ, ಗುಲಬರ್ಗಾ ರವರು ದಿನಾಂಕ  26-01-2014 ರಂದು 07-30 ಪಿ.ಎಮ್ ಕ್ಕೆ ಗಣೇಶ ಮಂದರ ಹತ್ತಿರ ನಡೆದುಕೊಂಡು ಹೋಗುತ್ತಿದ್ದಾಗ ಯಾವುದೊ ಒಂದು ಅಟೋ ರಿಕ್ಷಾ ಚಾಲಕನು ತನ್ನ ಅಟೋರಿಕ್ಷಾವನ್ನು ಸರಾಫ ಬಜಾರ ಕಡೆಯಿಂದ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನಡೆದುಕೊಂಡು ಹೋಗುತ್ತಿದ್ದ ಫಿರ್ಯಾದಿಗೆ ಹಿಂದಿನಿಂದ ಡಿಕ್ಕಿ ಹೊಡೆದು ಅಪಘಾತ ಪಡಿಸಿ ತನ್ನ ಅಟೋರಿಕ್ಷಾ ಸಮೇತ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದ್ವೀಚಕ್ರ ವಾಹನ ಕಳವು ಪ್ರಕರಣ :
ಚೌಕ ಠಾಣೆ : ಶ್ರೀ ಲಕ್ಷ್ಮಿಕಾಂತ ತಂದೆ ಹಣಮಂತ್ರಾಯ ಬಿರಾದಾರ ಸಾಃ ಶಹಾಬಜಾರ ಗುಲಬರ್ಗಾ ರವರು ದಿನಾಂಕ 01.09.2013 ರಂದು 8.30 ಪಿ.ಎಂಕ್ಕೆ ಸೈಯ್ಯದ ಚಿಂಚೋಳಿ ಕ್ರಾಸದ ಹತ್ತಿರು ಇರುವ ಬಾಲಾಜಿ ಹೊಟೇಲ ಹತ್ತಿರ ತನ್ನ ಮೊಟಾರ ಸೈಕಲ ನಿಲ್ಲಿಸಿ  ಹೊಟೇಲದಲ್ಲಿ ಚಹಾ ಕುಡಿದು ಮರಳಿ ಪಿ.ಎಂಕ್ಕೆ ಬಂದು ನೋಡಲಾಗಿ ತನ್ನ ಮೊಟಾರ ಸೈಕಲ ನಂ. ಕೆಎ-32-ಇಇ-0740 ಅಃಕಿಃ 30000=00 ರೂ. ನೇದ್ದು ಯಾರೊ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಇಲ್ಲಿಯವರೆಗೆ ಎಲ್ಲಾ ಕಡೆಗೆ ಹುಡುಕಾಡಿದರು ಪತ್ತೆ ಆಗಿರುವದಲ್ಲ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚೌಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ಮಾಹಂತಪ್ಪ ತಂದೆ ಗಾಮಣ್ಣ ಕುಂಬಾರ ಸಾ|| ಕೆರಕನಹಳ್ಳಿ ಇವರಿಗೆ ಮಾರುತಿ ತಂದೆ ಮಲ್ಲಪ್ಪ ಜಮಾದಾರ ಇತನು  ವಿನಾ ಕಾರಣ ಲಕ್ಷ್ಮಿ ಗುಡಿ ಹತ್ತಿರ ತಡೆದು ನಿಲ್ಲಿಸಿ ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ಬೈದು ರಾಡಿನಿಂದ ಹೊಡೆದು ರಕ್ತ ಗಾಯ ಪಡಿಸಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

27 January 2014

Gulbarga District Reported Crimes

ಅಪಘಾತ ಪ್ರಕರಣಗಳು :
ಫರತಾಬಾದ ಠಾಣೆ : ಶ್ರೀ ನಾಗಪ್ಪಾ ತಂದೆ ರೇವಣಸಿದ್ದಪ್ಪಾ ಹಾದಿಮನಿ  ಸಾ : ಹದನೂರ ತಾ: ಸುರಪೂರ ಜಿ:ಯಾದಗಿರ  ರವರ ಮಗ ರೇವಣಸಿದ್ದಪ್ಪಾ ಈತನು ದಿನಾಂಕ: 25-01-2014 ರಂದು ಮದ್ಯಾಹ್ನ 3-00 ಗಂಟೆಯ ಸುಮಾರಿಗೆ ಗುಲಬರ್ಗಾಕ್ಕೆ ಹೋಗಿ ಐಟಿಐ ಕಾಲೇಜದಲ್ಲಿ ಸರ್ಟಿಫಿಕೇಟ ತರಲು ಹೋಗುತ್ತೇನೆ ಅಂತಾ ನಮ್ಮ ಮೊಟಾರ ಸೈಕಲ ನಂ: ಕೆಎ-33 ಎಲ್-8040 ನೇದ್ದರಲ್ಲಿ ಹೋಗಿರುತ್ತಾನೆ. ನಾನು ರಾತ್ರಿ 6-30 ಗಂಟೆಯ ಸುಮಾರಿಗೆ ಮನೆಯಲ್ಲಿ ಇದ್ದಾಗ ಫರಹತಾಬಾದ  ಪೊಲೀಸರು ನನ್ನ ಮೊಬೈಲಿಗೆ ಫೊನ ಮಾಡಿ ತಿಳಿಸಿದ್ದೇನೆಂದರೆ, ನಿಮ್ಮ ಮಗ ರೇವಣಸಿದ್ದಪ್ಪಾ ಈತನು ರಾಷ್ಟ್ರೀಯ ಹೆದ್ದಾರಿ 218 ರ ರಸ್ತೆ ಗುಲಬರ್ಗಾ ಜೇವರ್ಗಿ ರಸ್ತೆಯ ಸರಡಗಿ(ಬಿ)ಯ ಖಣಿಯ ಹತ್ತಿರ ಸಾಯಂಕಾಲ 5-30 ಗಂಟೆಯ ಸುಮಾರಿಗೆ ನಿಮ್ಮ ಮಗನ ಮೊಟಾರ ಸೈಕಲ ನಂ: ಕೆಎ-33 ಎಲ್- 8040 ನೇದ್ದಕ್ಕೆ ಎದುರಿನಿಂದ  ಒಬ್ಬ ಮೊಟಾರ ಸೈಕಲ ನಂ: ಕೆಎ-32 ಇಎ-9808 ಸವಾರನು ತನ್ನ ಮೊಟಾರ ಸೈಕಲನ್ನು ಅತೀವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ಡಿಕ್ಕಿ ಪಡಿಸಿದ್ದರಿಂದ ನಿಮ್ಮ ಮಗನಿಗೆ ತಲೆಗೆ ಭಾರಿ ರಕ್ತಗಾಯವಾಗಿ ರಕ್ತ ಸ್ರಾವವಾಗಿ ಸ್ಥಳದಲ್ಲಿಯೇ ಮೃತ ಹೊಂದಿರುತ್ತಾನೆ. ಅಲ್ಲದೆ ಅಪಘಾತ ಪಡಿಸಿದ ಮೊಟಾರ ಸೈಕಲ ನಂ: ಕೆಎ-32 ಇಎ-9808 ನೇದ್ದರ ಸವಾರನಾದ ಗುಂಡಪ್ಪ ಈತನಿಗೆ ಕೂಡಾ ಬಲಗಾಲ ಹಿಂಬಡಿಗೆ ಭಾರಿ ರಕ್ತಗಾಯವಾಗಿದ್ದಲ್ಲದೆ ಹಣೆ ಮತ್ತು ಕಪಾಳಕ್ಕೆ ಗಾಯವಾಗಿದ್ದು ಅವನಿಗೆ ಆಸ್ಪತ್ರೆಗೆ ಕಳುಹಿಸಿ ಕೊಟ್ಟಿರುತ್ತೆವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗ್ರಾಮೀಣ ಠಾಣೆ : ಶ್ರೀ ಜಗನಾಥ ತಂದೆ ಸಿದ್ರಾಮಪ್ಪ ದಮ್ಮೂರ ಸಾ : ಪ್ಲಾಟ ನಂ. 280 ರೇವಣಸಿದ್ದೇಶ್ವರ ಕಾಲನಿ ಗುಲಬರ್ಗಾ  ರವರಿಗೆ  ದಿನಾಂಕ 26-01-14 ರಂದು ಮಧ್ಯಾಹ್ನ 12-30 ಗಂಟೆ ಸುಮಾರಿಗೆ  ನಮ್ಮ ತಂದೆ ಸಿದ್ರಾಮಪ್ಪ ತಂದೆ ಶಾಂತಪ್ಪ ದಮ್ಮೂರ  ಇವರ ಮೋಬಾಯಿಲ ಪೋನನಿಂದ ಯಾರೋ ನನಗೆ ಪೋನ ಮಾಡಿ ತಿಳಿಸಿದ್ದೆನೆಂದೆರೆ, ಈ ಮೋಬಾಯಿಲ ಹೊಂದಿದವರು ಎನಾಗಬೇಕು ಅಂತಾ ಕೇಳಲು ನಮ್ಮ ತಂದೆಯಾಗಬೇಕು ಅಂತಾ ತಿಳಿಸಿದಾಗ, ಅವರು ನಿಮ್ಮ ತಂದೆ ಸಿದ್ರಾಮಪ್ಪ ಇವರಿಗೆ ಎರಲೈನ್ಸ  ದಾಬಾ ಹತ್ತಿರ ಎಕ್ಸಿಡೆಂಟ ಆಗಿದೆ ಎಂದು ತಿಳಿಸಿದರು. ಅವರಿಗೆ ನಾನು ಮಂತ್ರಾಲಯಕ್ಕೆ ಹೋಗಿದ್ದೆನೆ. ನಮ್ಮ ಸಂಬಂಧಿಕರಿಗೆ  ಸ್ಥಳಕ್ಕೆ ಕಳುಹಿಸುತ್ತೇನೆ ಎಂದು ತಿಳಿಸಿದನು. ನಂತರ ಸೋಮನಾಥ ಎವಲೇ ಮತ್ತು ಮನೆ ಎದುರುಗಡೆ ಇರುವ ಮಲ್ಲಿನಾಥ ಜಂಗಿನ ಮಠ ಇವರಿಗೆ ನಮ್ಮ ತಂದೆ ಸಿದ್ರಾಮಪ್ಪ ಇವರಿಗೆ  ಎರಲೈನ್ಸ  ದಾಬಾ ಹತ್ತಿರ ಎಕ್ಸಿಡೆಂಟ ಆದ ವಿಷಯ ತಿಳಿಸಿ ಅವರಿಗೆ ಸ್ಥಳಕ್ಕೆ ಹೋಗಿರಿ ಮತ್ತು ಅವರಿಗೆ ಉಪಚಾರ ಕುರಿತು ಬಸವೇಶ್ವರ ಆಸ್ಪತ್ರೆ ಗುಲಬರ್ಗಾಕ್ಕೆ ಕರೆದುಕೊಂಡು ಹೋಗಿರಿ ಎಂದು ತಿಳಿಸಿದನು ಇಬ್ಬರು ಹೋಗಿ ನಿಮ್ಮ ತಂದೆ ಸಿದ್ರಾಮಪ್ಪ ಇವರಿಗೆ ಎಡ ಹಣ ತಲೆಯ ಮೇಲೆ ಭಾರಿ ರಕ್ತಗಾಯವಾಗಿ ಮಾತನಾಡುವ ಸ್ಥಿತಿಯಲ್ಲಿ ಇರುವುದಿಲ್ಲಾ ಅವರಿಗೆ ಯಾವುದೋ ಒಂದು ಆಟೋದಲ್ಲಿ ಉಪಚಾರ ಕುರಿತು ಬಸವೇಶ್ವರ ಆಸ್ಪತ್ರೆ ಗುಲಬರ್ಗಾಕ್ಕೆ ತಂದು ಸೇರಿಕೆ ಮಾಡಿರುತ್ತೇವೆ.  ಈ  ಎಕ್ಸಿಡೆಂಟ್ (ಘಟನೆ) ಬಗ್ಗೆ ವಿಚಾರಣೆ ಮಾಡಲಾಗಿ ಎರಲೈನ್ಸ ದಾಬಾದ ಎದುರುಗಡೆ ಇರುವ ಪ್ರಕಾಶ ಪಾನ ಅಂಗಡಿಯವನು ತಿಳಿಸಿದ್ದೆನೆಂದೆರೆ, ನಿಮ್ಮ ಸಿದ್ರಾಮಪ್ಪ ದಮ್ಮೂರು ಇವರು ಮಾಸಾಪತಿ ದರ್ಗಾ ರೋಡ ಕಡೆಯಿಂದ ರೋಡ ಕ್ರಾಸ ಮಾಡಿ ಎರಲೈನ್ಸ ದಾಬಾದ ಎದುರಿನ ರೋಡಿನ ಬದಿಯಲ್ಲಿ ಬಂದಾಗ, ಆಗ ಗಂಜ ರೋಡ ಕಡೆಯಿಂದ  ಹಿರೋ ಹೊಂಡಾ ಸಿಡಿ 100 ಕೆಎ 03 ಕ್ಯೂ 451 ಚಾಲಕ ತನ್ನ ಮೋಟಾರ ಸೈಕಲನ್ನು ಅತಿವೇಗದಿಂದ ಮತ್ತು ನಿಷ್ಕಾಳಿಜಿತನದಿಂದ ನಡೆಸುತ್ತಾ ಬಂದು  ನಿಮ್ಮ ತಂದೆಗೆ ಡಿಕ್ಕಿ ಪಡಿಸಿದ್ದರಿಂದ ಅವರು ರೋಡಿಗೆ ಬಿದ್ದಿದ್ದರಿಂದ, ಅವರ ಎಡ ಹಣೆ ತಲೆಯ ಮೇಲೆ  ಭಾರಿ ರಕ್ತಗಾಯವಾಗಿರುತ್ತದೆ. ಮತ್ತು ಘಟನೆ ನಡೆದಾಗ ಮಧ್ಯಾಹ್ನ 12-00 ಗಂಟೆ ಸಮಯ ಆಗಿರಬಹುದು ಎಂದು  ಕೇಳಿ ಗೊತ್ತಾಗಿರುತ್ತದೆ ಎಂದು ತಿಳಿಸಿದನು.  ಇಂದು ಸಂಜೆ 7-30 ಗಂಟೆ ಸುಮಾರಿಗೆ ಮಂತ್ರಾಲಯದಿಂದ ಗುಲಬರ್ಗಾಕ್ಕೆ ಬಂದು ನೇರವಾಗಿ ಬಸವೇಶ್ವರ ಆಸ್ಪತ್ರೆಗೆ ಹೋಗಲು ನಮ್ಮ ತಂದೆ ಸಿದ್ರಾಮಪ್ಪ ಇವರು  ಸಂಜೆ 7-00 ಗಂಟೆಗೆ ರಸ್ತೆ ಅಪಘಾತದಿಂದ ಆದ ಗಾಯಗಳಿಂದ ಉಪಚಾರ ಹೊಂದುತ್ತಾ ಮೃತಪಟ್ಟಿರುತ್ತಾರೆ  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀಮತಿ ಶಾಂತಬಾಯಿ ಗಂಡ ರಾಮಚಂದ್ರ ಶಖಾಪೂರೆ ಸಾ|| ಮನೆ ನಂ 9-947/5, ಕೈಲಾಸ ನಗರ,  ಗುಲಬರ್ಗಾ ಇವರು ದಿನಾಂಕ 23/01/2014 ರಂದು ನನ್ನ ತಾಯಿ ಆರೋಗ್ಯ ಸರಿ ಇಲ್ಲದ ಕಾರಣ ಮನೆಯವರೆಲ್ಲರೂ ಮನೆಗೆ ಬೀಗ ಹಾಕಿಕೊಂಡು ಖಜೂರಿ ಗ್ರಾಮಕ್ಕೆ ಹೋಗಿರುತ್ತೇವೆ ದಿನಾಂಕ 25/01/2014 ರಂದು ಮಧ್ಯಾಹ್ನ 03-00 ಗಂಟೆಗೆ ಗುಲಬರ್ಗಾಕ್ಕೆ ಬಂದು ಮನೆಗೆ ಹೋಗಿ ನೋಡಲಾಗಿ ಮನೆಗೆ ಹಾಕಿದ ಬಾಗಿಲು ಕೊಂಡಿ ಖುಲ್ಲಾ ಆಗಿದ್ದು ನಾನು ಬಾಗಿಲು ಒತ್ತಲು ಬಾಗಿಲು ತೆರೆದಿದ್ದು ನಾನು ಗಾಬರಿಯಾಗಿ ಒಳಗೆ ಹೋಗಿ ನೋಡಲು ಮನೆಯಲ್ಲಿನ ಸಾಮಾನುಗಳು ಚಲ್ಲಾಪಿಲ್ಲಿ ಆಗಿ ಬಿದ್ದಿದ್ದು ಮನೆಯಲ್ಲಿದ್ದ  ಅಲಮಾರಿ ಮುರಿದಿದ್ದು ಅದರಲ್ಲಿ ಕೆಲವು ಬಂಗಾರದ ಆಭರಣಗಳು ನಗದು ಹಣ ಹೀಗೆ ಒಟ್ಟು 1,65,000/- ರೂ. ಬೆಲೆ ಬಾಳುವ ಸಾಮಾನುಗಳು ಯಾರೊ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಘವೇಂದ್ರ ನಗರ ಠಾಣೆ : ಡಾ : ಅಕ್ಷಯ ತಂದೆ  ಡಾ : ಸುರೇಶ ಚಿಂಚೋಳಿ ಸಾ: ಚಿಂಚೋಳಿ ಲೇ ಔಟ್ ಆಳಂದ ರಸ್ತೆ ಗುಲಬರ್ಗಾ ರವರ ತಂದೆ ತಾಯಿಯವರಾದ ಡಾ : ಸುರೇಶ ಚಿಂಚೋಳಿ. ತಾಯಿ ಮಾಧುರಿ ಚಿಂಚೋಳಿ ಇವರು ದಿನಾಂಕ 18-01-2014 ರಂದು ಸಾಯಂಕಾಲ 7 ಗಂಟೆಯ ಸುಮಾರಿಗೆ ಸಿಂಗಾಪೂರ ಪ್ರವಾಸ ಕುರಿತು ಹೊಗುವಾಗ ನಾನು ನನ್ನ ಡಾ : ತರಬೆತಿ ಕುರಿತು ಬೆಳಗಾಂವಕ್ಕೆ ಹೊಗುವಾಗ ನಮ್ಮ ಆಸ್ಪತ್ರೆಯಲ್ಲಿ ಕೆಲಸ ಮಾಡುವ ಮೊಹನ ತಂದೆ ಶ್ರೀಶೈಲ್ ವಿಶ್ವಕರ್ಮ ಇವರಿಗೆ ನಮ್ಮ ಮನೆಯ ಕಿಲಿ ಕೈ ಕೊಟ್ಟು ತಾವು ದಿನಾಲು ರಾತ್ರಿ  ನಮ್ಮ ಮನೆಗೆ ಬಂದು ಮನೆಯಲ್ಲಿ ಇರಬೆಕು ಅಂತ ಹೇಳಿ ಹೊಗಿರುತ್ತೆವೆ. ದಿನಾಂಕ 25-1-2014 ರಂದು ಸಾಯಂಕಾಲ 5 ಗಂಟೆಯ ಸುಮಾರಿಗೆ ಮೋಹನ ವಿಶ್ವಕರ್ಮ ಇವರು ನನಗೆ ಮೊಬಾಯಿ ಫೊನ್ ಮೂಲಕ ಸಂಪರ್ಕಿಸಿ ತಿಳಿಸಿದನೆಂರೆ ನಾನು ನಿನ್ನೆ ದಿನಾಂಕ 24-1-2014ರಂದು ರಾತ್ರಿ 10 ಗಂಟೆಗೆ ಮನೆಗೆ ಬಂದು ರಾತ್ರಿ ಮನೆಯಲ್ಲಿ ಮಲಗಿಕೊಂಡು ಇಂದು ದಿನಾಂಕ 25-1-2014 ರಂದು ಬೆಳಿಗ್ಗೆ 4 ಗಂಟೆಯ ಸುಮಾರಿಗೆ ನಾನು ನಿಮ್ಮ ಮನೆಗೆ ಬಿಗ ಹಾಕಿ ಹೊಗಿದ್ದು ಮರಳಿ ಇಂದು  ದಿನಾಂಕ 25-1-2014 ರಂದು ಸಾಯಂಕಾಲ 4 ಗಂಟೆಯ ಸುಮಾರಿಗೆ ನಿಮ್ಮ ಮನೆಗೆ ಹೊಗಿ ನೇಡಲು  ಮನೆಯ ಬಾಗಿಲ ಕೊಂಡಿ ಮುರಿದಿದ್ದು ಇದ್ದು ನಾನು ಒಳಗೆ ಹೊಗಿ ನೊಡಲು ಮನೆಯಲ್ಲಿದ್ದ  ಎಲ್ಲಾ ಸಾಮಾನುಗಳು ಚಿಲ್ಲಾಪಿಲ್ಲಿಯಾಗಿ ಬಿದ್ದಿರುತ್ತವೆ ಅಂಥಾ ತಿಳಿಸಿದ ಮೇರೆಗೆ ನಾನು ಬೆಳಗಾಂವ ದಿಂದ ಇಂದು ದಿನಾಂಕ 26-1-2014 ರಂದು ಗುಲಬರ್ಗಾಕ್ಕೆ  ಬಂದು ನಮ್ಮ ಮನೆಗೆ ಹೊಗಿ ನೋಡಲು ಮನೆಯ ಬಾಗಿಲ ಕೊಂಡಿ ಮುರಿದಿದ್ದು ಇದ್ದು ನಾನು ಒಳಗೆ ಹೊಗಿ ನೋಡಲು ಮನೆಯಲ್ಲಿದ್ದ ಎರಡು ಅಲಮಾರಗಳ ಬಿಗ ಮುರಿದು ಅದರಲ್ಲಿದ್ದ ಎಲ್ಲಾ ಬಟ್ಟೆಬರೆಗಳು ಚಿಲ್ಲಾಪಿಲ್ಲಿಯಾಗಿ ಬಿದ್ದಿರುತ್ತವೆ. ಮತ್ತು ಮನೆಯಲ್ಲಿದ್ದ  ಒಂದು ಸ್ಯಾಮಸಂಗ ಕಂಪನಿಯ  L.E.D. 64 ಇಂಚ ಉಳ್ಳ ಟಿವಿ ಅ:ಕಿ: 2 ಲಕ್ಷ 50 ಸಾವಿರುಪಾಯಿ  2) ಒಂದು IBERRY AUXUS ಕಂಪನಿಯ ಟ್ಯಾಬ್ಲೇಟ್ ಪಿಸಿ ಅ:ಕಿ: 15000/- 3) ಒಂದು ಬೊಸ್ ಕಂಪನಿಯ ಹೆಡ್ಡ್ ಫೊನ್ ಅ:ಕಿ: 5000/-ರೂ ಬೆಲೆಬಾಳುವ ಸಾಮಾನುಗಳು ಯಾರೊ ಅಪರಿಚಿತ ಕಳ್ಳರು  ದಿನಾಂಕ 25-01-2014 ರಂದು ಬೆಳಗಿನ ಜಾವ 4 ಗಂಟೆಯಿಂದ ಸಾಯಂಕಾಲ 4 ಗಂಟೆಯ ಅವಧಿಯಲ್ಲಿ  ನಮ್ಮ ಮನೆಯ ಬಾಗಿಲಕೊಂಡಿ ಮುರಿದು ಒಳಗೆ ಪ್ರವೇಶ ಮಾಡಿ ಕಳವು ಮಾಡಿಕೊಂಡು ಹೋಗಿದ್ದು. ಅಲ್ಲಿದೆ ಮನೆಯಲ್ಲಿ ಇಟ್ಟಿದ ಕಾರಿನ ಚ್ಯಾವಿ ತೆಗೆದುಕೊಂಡು ನಮ್ಮ ಮನೆಯ ಆವರಣದಲ್ಲಿ ನಿಲ್ಲಿಸಿದ ನಮ್ಮ ಕಾರ ನಂ ಕೆಎ 32 ಎನ್ 4004 ನೆದ್ದನ್ನು ಚಾಲು ಮಾಡಿ ಕೊಂಡು ಹೋಗುತ್ತಿರುವಾಗಅಲ್ಲೆ ನಮ್ಮ ಮನೆಯ ಮುಂದೆ ಇದ್ದ ಖುಲ್ಲಾ ಚರಂಡಿಯಲ್ಲಿ  ಕಾರಿನ ಟೈರ ಸಿಕ್ಕಿಬಿದ್ದಿದ್ದರಿಂದ ಅಲ್ಲಿಯೇ ಬಿಟ್ಟು  ಅದರ ಚಾವಿ ತೆಗೆದುಕೊಂಡು ಹೊಗಿರುತ್ತಾರೆ. ಹೀಗೆ ಒಟ್ಟು 2 ಲಕ್ಷ 70 ಸಾವಿರ ರೂಪಾಯಿ ಬೆಲೆಬಾಳುವ ಸಾಮಾನುಗಳು ಕಳುವು ಮಾಡಿಕೊಂಡು ಹೋಗಿರುತ್ತರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

26 January 2014

Gulbarga District Reported Crimes

ಇಸ್ಪೀಟ ಜೂಜಾಟದಲ್ಲಿ ನಿರತ ವ್ಯಕ್ತಗಳ ಬಂಧನ :
ದೇವಲಗಾಣಗಾಪೂರ ಠಾಣೆ : ದಿನಾಂಕ: 25-01-2014  ರಂದು ಸಾಯಂಕಾಲ 5-10 ಗಂಟೆಗೆ ಗೊಬ್ಬುರ(ಬಿ) ಗ್ರಾಮದ ಎಸ್.ಬಿ.ಐ. ಬ್ಯಾಂಕ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಹಣವನ್ನು ಪಣಕ್ಕೆ ಹಚ್ಚಿ ಇಸ್ಪೇಟ ಎಲೆಗಳ ಸಹಾಯದಿಂದ ಅಂದರ ಬಾಹರ ಎಂಬ ದೈವದ ಜೂಜಾಟ ಆಡುತ್ತಿದ್ದ ಬಗ್ಗೆ ಖಚಿತ ಬಾತ್ಮಿ ಮೇರೆಗೆ ನಾನು ಮತ್ತು ಸಿಬ್ಬಂದಿ ಹಾಗು ಪಂಚರೋಂದಿಗೆ ಸ್ಥಳಕ್ಕೆ ಹೋಗಿ ಮರೆಯಲ್ಲಿ ನಿಂತಉ ನೋಡಿ ಖಚಿತ ಪಡಿಸಿಕೊಂಡು ದಾಳಿ ಮಾಡಿ 1. ಪ್ರಶಾಂತ ತಂದೆ ಕಲ್ಯಾಣರಾವ ಪೊಲೀಸ ಪಾಟೀಲ 2. ಅಸ್ಪಕ ತಂದೆ ಖಾಜಾಸಾಬ ವಟವಟಿ ಸಾ||ಗೊಬ್ಬೂರ[ಬಿ] 3.  ಮಹಿಬೂಬಸಾಬ ತಂದೆ ಅಬ್ದುಲ ಶಕ್ಯೂರ  ಸ್ಟೇಷನ ಸಾ|| ಗೊಬ್ಬೂರ[ಬಿ] 4. ಸಾಯಬಣ್ಣ ತಂದೆ ಬೀಂಶ್ಯಾ ಬೆಡಿ ಸಾ|| ಬೈರಾಮಡಗಿ  ನಾಲಕ್ಉ ಜನರನ್ನು ಹಿಡಿದು ಅವರಿಂದ  ಒಟ್ಟು 1760=00 ರೂ ಮತ್ತು 52 ಇಸ್ಪೇಟ ಎಲೆಗಳನ್ನು ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡು ಮರಳಿ ಠಾಣೆಗೆ ಬಂದು ಸದರಿಯವರ ವಿರುದ್ಧ ದೇವಲ ಗಾಣಘಾಪೂರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಮಟಕಾ ಜೂಜಾಟ ನಿರತ ವ್ಯಕ್ತಿಯ ಬಂಧನ :
ಆಳಂದ ಠಾಣೆ : ಡಾ|| ಸುಧಾಕರ ಬಿಎಸ್ ಪಿಎಸ್‌ಐ ಅಬಕಾರಿ ಜಾರಿ & ಲಾಟರಿ ನಿಷೇಧ  ವಿಭಾಗ ಗುಲ್ಬರ್ಗಾ ರವರು ದಿನಾಂಕ 24-01-2014 ರಂದು 5 ಪಿಎಮ್‌ಕ್ಕೆ ಆಳಂದ ತಾಲೂಕಿನ ಜವಳಗಾ (ಜೆ) ಗ್ರಾಮದಿಂದ ಭಾತ್ಮೀ ಬಂದ ಮೇರೆಗೆ ನಾನು ಪಂಚರಿಗೆ ಕರೆಯಿಸಿ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ದಾಳಿ ಮಾಡಲು ಜೂಜಾಟ ಆಡುತ್ತಿದ್ದ ಸಾರ್ವಜನಿಕರು ನಮ್ಮನ್ನು ನೋಡಿ ಓಡಿ ಹೋದರು, ಚೀಟಿ ಬರೆದುಕೊಳ್ಳುತ್ತಿದ್ದ ವ್ಯಕ್ತಿ ಸಿಕ್ಕಿಬಿದ್ದ ಅವನ ಹೆಸರು ಕಲ್ಲಪ್ಪಾ ತಂದೆ ಗುರುಲಿಂಗಪ್ಪಾ ಚಿಂಚೋಳಿ ವಯಾ|| 22 ಉ|| ಬೇಕಾರ ಸಾ|| ಜವಳಗಾ (ಜೆ) ತಾ|| ಆಳಂದ ಅವನ ಬಳಿ 1. 4 ಮಟಕಾ ನಂಬರದ ಚೀಟಿಗಳು ಅಂ ಕಿ 0000 2. ಒಂದು ಬಾಲ ಪೆನ್ ಅಂ ಕಿ 5 ರೂ 3. ನಗದು ಹಣ 2840 ರೂ  4. ಕಪ್ಪು ಬಣ್ಣದ ಸ್ಯಾಮಸಂಗ ಮೋಬಾಯಿಲ್ ಅಂ ಕಿ 1500 ರೂ 5. ಪ್ಲಾಟಿನಂ ಕೆಂಪು ಬಣ್ಣದ ಮೋ ಸೈಕಲ್ ನಂ ಎಮ ಹೆಚ್‌ 24 ಆರ್ 6475 ಅಂ ಕಿ 20000/- ಹೀಗೆ ಒಟ್ಟು 24,345/- ರೂ ಜಪ್ತಿ ಪಡಿಸಿಕೊಂಡು ಠಾಣೆಗೆ ಬಂದು ಸಲ್ಲಿಸಿದ್ದರ ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣಗಳು :
ಅಶೋಕ ನಗರ ಠಾಣೆ : ಶ್ರೀ ಮಡಿವಾಳಪ್ಪ ತಂದೆ ಶರಣಪ್ಪ ಮಾಳಿ ಸಾ : ತ್ರಿಪರಾಂತ ತಾ : ಬಸವಕಲ್ಯಾಣ ಜಿ :  ಬೀದರ ರವರು ಒಬ್ಬ  ಆರೋಪಿ ಹಾಗೂ ಮಾಲು ಸಮೇತ ಠಾಣೆಗೆ ಬಂದು ಲಿಖಿತ ಪಿರ್ಯಾದಿ ನೀಡಿದ್ದು ಅದರ ಸಂಕ್ಷಿಪ್ತ ಸಾರಾಂಶ ಏನೆಂದರೆ ದಿನಾಂಕ 25-01-2014 ರಂದು ರಾತ್ರಿ 10 ಗಂಟೆಗೆ ಎ.ಪಿ.ಎಂ.ಸಿ ಕಟ್ಟಡದಲ್ಲಿ ನಾನು ಮಲಗಿಕೊಂಡಿದ್ದು ದಿನಾಂಕ 26-01-2014ರಂದು ಸುಮಾರು 1 ಎ.ಎಂಕ್ಕೆ ಒಬ್ಬ ವ್ಯಕ್ತಿ ಎ.ಪಿ.ಎಂ.ಸಿ ಬಿಲ್ಡಿಂಗದಲ್ಲಿ ಬಂದು ಕಬ್ಬಿಣದ ತುಕಡಿಗಳನ್ನು (ಕಟ್ಟಡದ ಸಾಮಾನುಗಳು) ಒಂದು ಚಿಲದಲ್ಲಿ ಹಾಕಿಕೊಂಡು ಹೊಗುತ್ತಿದ್ದಾಗ ಶಬ್ದವಾಗಿರುವದರಿಂದ ನನಗೆ ಎಚ್ಚರವಾಗಿದ್ದು ಎದ್ದು ನೋಡಲು ಆ ವ್ಯಕ್ತಿ ಒಂದು ಚಿಲದಲ್ಲಿ ಕಬ್ಬಿಣ ಸಾಮಾನು ತೆಗೆದುಕೊಂಡು ಹೊಗುತ್ತಿದ್ದು ಅವನನ್ನು ಯಾರು ನೀನು ಎಂದು ಕೇಳಲು ಓಡಿ ಹೊಗುತ್ತಿದ್ದು ಆಗ ನಾನು ಬಾಜು ಬಿಲ್ಡಿಂಗದಲ್ಲಿ ಇದ್ದ ವಿಶ್ವನಾಥ ಇವರಿಗೆ ಕಳ್ಳ ಬಂದಿದ್ದಾನೆ ಬರ್ರಿ ಅಂತಾ ಚಿರಿದಾಗ ಆಗ ಅವರು ಬಂದಿದ್ದು ನಾನು ಅವರು ಕೂಡಿ ಕಳ್ಳ ಕಳ್ಳ ಅಂತ ಆತನ ಹಿಂದೆ ಬೆನ್ನು ಹತ್ತಿದಾಗ ಅಲ್ಲೆ ಎಂ.ಎಸ್.ಕೆ ಮಿಲ್ ಸ್ಟಾಫ್ ಕ್ವಾರ್ಟಸದಲ್ಲಿ ಇದ್ದ ಅಶೋಕಅರವಿಂದಪ್ರಶಾಂತ ರವರು ಬಂದು ಕತ್ತಲಲ್ಲಿ ಓಡಿ ಹೊದ ಕಳ್ಳನಿಗೆ ಹುಡುಕುತ್ತಿದ್ದಾಗ ಬಸವರಾಜ ಕಲಶೇಟ್ಟಿ ರವರ ಬಿಲ್ಡಿಂಗ ಮೇಲೆ ಕಳ್ಳ ಓಡಿ ಹೊಗಿದ್ದು ಬಿಲ್ಡಿಂಗ ಮಾಲಿಕರಾದ ಬಸವರಾಜ ಕಲಶೇಟ್ಟಿ ಅವರಿಗೆ ಪೊನ ಮಾಡಿ ಕರೆಯಿಸಿ ಬಿಲ್ಲಡಿಂಗ ಮೇಲಿದ್ದ ಕಳ್ಳನಿಗೆ ಕಳ್ಳತನ ಮಾಡಿದ ಕಬ್ಬಿಣದ ಸಣ್ಣ ರಾಡುಗಳಿರುವ ಚಿಲದೊಂದಿಗೆ ಹಿಡಿದುಕೊಂಡು ಎಲ್ಲರು ಕೂಡಿ ಕಳ್ಳನಿಗೆ ವಿಚಾರಿಸಲಾಗಿ ಆತನ ಹೆಸರು ಖಲೀಲ ತಂದೆ ಮಹೆಮೂದ ಲೊಹಾರ ಸಾ|| ಟಿಪ್ಪುಸುಲ್ತಾನ ಚೌಕ ಜೇವರ್ಗಿ ಅಂತ ತಿಳಿಸಿದನು ಆಗ ನಾವೆಲ್ಲರು ಕೂಡಿ ಕಳ್ಳನಿಗೆ ಮಾಲು ಸಮೇತವಾಗಿ ಪೊಲೀಸ್ ಠಾಣೆಗೆ ತಂದು ಕೊಟ್ಟಿರುತ್ತೆವೆ  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 
ಗ್ರಾಮೀಣ ಠಾಣೆ : ಶ್ರೀ ದಸ್ತಗಿರ ತಂದೆ ಹುಸೇನ್‌ ಸಾಬ್‌ ಚಿಂಚೋಳ್ಳಿ ಸಾ: ಭೀಮಳ್ಳಿ ತಾ: ಜಿಲ್ಲಾ ಗುಲಬರ್ಗಾ ಇವರ ತೋಟದ ಹೊಲ ಸರ್ವೇ ನಂ: 7ರಲ್ಲಿ ಹನಿ ನೀರಾವರಿ ಸಲುವಾಗಿ 16 ಎಂಎಂ 10 ಬಂಡಲ್‌ ಡ್ರೀಪ್‌‌ ಪೈಪುಗಳು ಇಟ್ಟಿದ್ದು ಸದರಿ ಪೈಪುಗಳು ದಿನಾಂಕ: 10-01-2014 ರಂದು ಬೆಳಿಗ್ಗೆ 9-00 ಗಂಟೆಗೆ ಪಿರ್ಯಾದಿದಾರ ನೋಡಲಾಗಿ ಸದರಿ ಪೈಪುಗಳು ದಿನಾಂಕ: 10-01-2014 ರಂದು ರಾತ್ರಿ 0100 ಗಂಟೆಯಿಂದ 0500 ಗಂಟೆಯ ಮದ್ಯದ ಅವಧಿಯಲ್ಲಿ ಯಾರೋ ಕಳ್ಳರು ಕಳವುಮಾಡಿಕೊಂಡು ಹೋಗಿದ್ದು ಸದರಿ ಪೈಪುಗಳು ಅಂದಾಜು ಕಿಮ್ಮತ್ತು 2,00,000/- ರೂ ಆಗುತ್ತಿದ್ದು ಪಿರ್ಯಾದಿದಾರ ಯಾರು ಕಳವುಮಾಡಿದ್ದಾರೆ ಎಂಬುದರ ಬಗ್ಗೆ ತಿಳಿದುಕೊಳ್ಳಲು ಮತ್ತು ಎಲ್ಲಾ ಕಡೆ ಹುಡುಕಾಡಲು ಇಂದು ದಿನಾಂಕ: 25-01-2014 ರಂದು ತಿಳಿದುಬಂದಿದ್ದೇನೆಂದರೆ ಕಾಂತಪ್ಪ ತಂದೆ ಅಪ್ಪಣ್ಣ ಸಾ: ಭೀಮಳ್ಳಿ ಈತನ ಹೊಲದಲ್ಲಿ ನಮ್ಮ 16 ಎಂಎಂ 19 ಡ್ರಿಪ್ಸ್‌‌ ಪೈಪುಗಳು  ಹೊಲದಲ್ಲಿ ಹೂಳಿ ಹಾಕಿದ್ದು ನೋಡಿರುತ್ತೇವೆ, ಮತ್ತು ಇನ್ನೂಳಿದ ಪೈಪುಗಳು ಯಾರು ಕಳವು ಮಾಡಿದ್ದಾರೆ ಎಂಬುದರ ಬಗ್ಗೆ ಗೊತ್ತಾಗಿರುವುದಿಲ್ಲ. ಕಾರಣ ನಮ್ಮ ತೋಟದ ಹೊಲದಲ್ಲಿ ಹಾಕಿದ್ದ 10 ಬಂಡಲ್‌ ಡ್ರಿಪ್ಸ್‌ ಪೈಪುಗಳು ಅ.ಕಿ 2,00,000/- ರೂ ಬೆಲೆ ಬಾಳುವ ಸಾಮಾನು ಕಳವು ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿರ್ಲಕ್ಷತನದಿಂದ ಅಪಘಾತ ಪ್ರಕರಣ :
ಎಮ್.ಬಿ. ನಗರ ಠಾಣೆ : ಶ್ರೀ ಮಹಿಬೂಬಸಾಬ ತಂದೆ ಮಂಜಲೆ ಸಾಬ ಘಾಣೆವಾಲೆ ಸಾಃ ಪಸ್ತಾಪೂರ ತಾಃ ಚಿಂಚೋಳಿ ಹಾವಃ ಆಜಾದಪೂರ ಗುಲಬರ್ಗಾ ರವರಿಗೆ ದಿನಾಂಕಃ 25/01/2014 ರಂದು 01:00 ಪಿ.ಎಂ. ಕ್ಕೆ ಮಹ್ಮದ ಗೌಸ್ ಇವರು ಫೋನ್ ಮಾಡಿ ಬಸವೇಶ್ವರ ಆಸ್ಪತ್ರೆಗೆ ಬರಲು ತಿಳಿಸಿದ ಮೇರೆಗೆ 02:30 ಪಿ.ಎಂ. ಕ್ಕೆ ಬಸವೇಶ್ವರ ಆಸ್ಪತ್ರೆಗೆ ಬಂದು ಮಹ್ಮದ ಗೌಸ ಇತನಿಗೆ ವಿಚಾರಣೆ ಮಾಡಲಾಗಿ ಡಾಃ ನಿತಿನ್ ತಂದೆ ದಿಲಿಪ್ ಸಿಂಗ್ ಠಾಕೂರ ಇವರು ನಮಗೆ 09:00 ಗಂಟೆಗೆ ಕೆಲಸಕ್ಕೆ ಕರೆದುಕೊಂಡು ಹೋಗಿ ಅವರ ಮನೆಯ ಮುಂದೆ ನಿಂತಿರುವ ಲಾರಿ ನಂ. RJ 19 GB 2504 ನೇದ್ದರಲ್ಲಿನ ಮಾರ್ಬಲ್ ಕಲ್ಲುಗಳನ್ನು ಇಳಿಸಲು ಹಚ್ಚಿದರು. ಆಗ ನಾವು ಮಾರ್ಬಲ್ ಕಲ್ಲುಗಳು ಬಹಳ ದೊಡ್ಡ ಪ್ರಮಾಣದಲ್ಲಿವೆ ಅಂತಾ ಅಂದಾಗ ಲಾರಿ ಚಾಲಕ ಜಯರಾಮ ಇತನು ಇಂತಹ ಎಷ್ಟೋ ಲೋಡಗಳು ನಾವು ಇಳಿಸಿರುತ್ತೇವೆ ಬೇಗ ಬೇಗ ಇಳಿಸಿ ಅಂತಾ ಅಂದಿದ್ದು ಆಗ ನಾವು ಸದರಿ ಚಾಲಕನಿಗೆ ಸಮತಟ್ಟಾದ ಜಾಗದಲ್ಲಿ ನಿಲ್ಲಿಸು ಅಂತಾ ಹೇಳಿದೇವು. ಆಗ ಸದರಿ ಚಾಲಕನು ಸರಿಯಾದ ಜಾಗದಲ್ಲಿ ನಿಲ್ಲಿಸಿರುತ್ತೇನೆ ಬೇಗ ಇಳಿಸಿರಿ ಎಂದು ನಮಗೆ ದಬಾಯಿಸಿರುತ್ತಾನೆ. ಸದರಿ ಲಾರಿಯಲ್ಲಿದ್ದ ಮಾರ್ಬಲ್ ಕಲ್ಲುಗಳನ್ನು ಇಳಿಸುತ್ತಿರುವಾಗ ಒಮ್ಮೇಲೆ ಸುಮಾರು 10-15 ಕಲ್ಲುಗಳು ಮಹ್ಮದ ಇಸ್ಮಾಯಿಲ್ ಇತನ ಎದೆಯ ಮೇಲೆ ಬಿದ್ದು ಸದರಿಯವನು ಉಸಿರು ಗಟ್ಟಿ ಸ್ಥಳದಲ್ಲಿಯೇ ಮೃತ ಪಟ್ಟಿರುತ್ತಾನೆ. ಸದರಿ ಘಟನೆ ಸಂಭಂವಿಸಿದಾಗ ಅಂದಾಜು 11:00 ಎ.ಎಂ. ಆಗಿತ್ತು. ಸದರಿ ಘಟನೆಯಲ್ಲಿ ಸಿದ್ದು ಇತನಿಗೆ ಬಲಗೈಗೆ, ಶರಣಗೌಡ ಇತನಿಗೆ ಟೊಂಕದ ಹತ್ತಿರ, ಲಾರಿ ಚಾಲಕನಾದ ಜಯರಾಮ ಇತನಿಗೆ ಎಡಗೈಗೆ ತರಚಿದ ಗಾಯಗಳಾಗಿರುತ್ತವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಎಮ್.ಬಿ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣಗಳು :
ಫರತಾಬಾದ ಠಾಣೆ : ಶ್ರೀ ಫತ್ತುಸಾಬ ತಂದೆ ಹುಸೇನಸಾಬ ಪೈಲವಾನ ಸಾ: ಇಟಗಾ(ಕೆ)  ದಿನಾಂಕ 24-01-2014 ರಂದು ಬೆಳಗ್ಗೆ 9 ಗಂಟೆಯ ಸುಮಾರಿಗೆ ನನ್ನ ಮಗ ಮೈನೋದ್ದೀನ ಈತನು ನಮ್ಮೂರಿನ ರಾಜ ಅಹ್ಮದ ಗುತ್ತಿಗೆದಾರರಲ್ಲಿ ಗುಲಬರ್ಗಾದಲ್ಲಿ ಕೆಲಸಕ್ಕಾಗಿ ನಮ್ಮ ಅಣ್ಣ ತಮ್ಮಕೀಯ ಬಾಬು ಫೈಲವಾನ, ಹುಸೇನಸಾಬ ಫೈಲವಾನ ಇವರೊಂದಿಗೆ ಹೋಗಿ ಸಾಯಂಕಾಲ ಮನೆಗೆ ಬರುತ್ತೇನೆ ಅಂತಾ ಹೇಳಿ ಮನೆಯಿಂದ ಹೋಗಿರುತ್ತಾನೆ.   ನಾನು ರಾತ್ರಿ 9 ಗಂಟೆಗೆ ಮನೆಯಲ್ಲಿ ಇದ್ದಾಗ ನಮ್ಮ ಅಣ್ಣತಮ್ಮಕಿಯ ಬಾಬು ಪೈಲವಾನ ಈತನು ಫೊನ ಮಾಡಿ ತಿಳಿಸಿದ್ದೇನೆಂದರೆ, ನಾನು ಮತ್ತು ನಿಮ್ಮ ಮಗ ಮೈನೊದ್ದೀನ ಇಬ್ಬರು ಕೂಡಿ ಗುಲಬರ್ಗಾದಿಂದ ಕೆಲಸ ಮುಗಿಸಿಕೊಂಡು ನಮ್ಮೂರಿಗೆ ಟಂ ಟಂ ಮೂಲಕ ಬರುವಾಗ ರಾಷ್ಟ್ರೀಯ ಹೆದ್ದಾರಿ 218 ರ ರಸ್ತೆ ಗುಲಬರ್ಗಾ ಜೇವರ್ಗಿ ರಸ್ತೆಯ ಮೇಲೆ ನಂದಿಕೂರ ತಾಂಡಾದ ಹತ್ತಿರ  ರಾತ್ರಿ 08-30 ಗಂಟೆಯ ಸುಮಾರಿಗೆ ಏಕಿ ಮಾಡಲು ಬಸ್ ನಿಲ್ದಾಣದ ಹತ್ತಿರ ಟಂ ಟಂ ನಿಲ್ಲಿಸಿದ್ದು, ಟಂ ಟಂ ದಿಂದ  ನಾನು ಮತ್ತು ಮೈನೊದ್ದೀನ ಇಳಿದ್ದೇವು. ಮೈನೊದ್ದೀನ ಈತನು  ಏಕಿ ಮಾಡಲು ಸ್ವಲ್ಪ ಮುಂದೆ ಹೋಗಿ ಏಕಿ ಮಾಡಿ ನನ್ನ ಕಡೆಗೆ ಬರುವಾಗ ಜೇವರ್ಗಿ ಕಡೆಯಿಂದ ಒಬ್ಬ ಕಾರ ಚಾಲಕನು ತನ್ನ ಕಾರನ್ನು ಅತೀವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ರೋಡಿನ ಎಡಗಡೆ ಸೈಡಿಗೆ ಬಂದು ನಡೆದುಕೊಂಡು ಬರುತ್ತಿದ್ದ ಮೈನೊದ್ದೀನ ಈತನಿಗೆ ಡಿಕ್ಕಿ ಪಡಿಸಿದ್ದರಿಂದ ತಲೆಗೆ ಭಾರಿ ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತ ಹೊಂದಿರುತ್ತಾನೆ. ಅಪಘಾತ ಪಡಿಸಿದ ಇನೊವಾ ಕಾರ ನಂಬರ ನೋಡಲಾಗಿ ಕೆಎ-05 ಎಮ್ ಎಫ್-6223 ನೇದ್ದು ಇದ್ದು ಅದರ ಚಾಲಕನು ಕಾರನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ. ನಿಮ್ಮ ಮಗನ ಮೃತ ದೇಹವು ಫರಹತಾಬಾದ ಪೊಲೀಸರು ಜಿಲ್ಲಾ ಸರಕಾರಿ ಆಸ್ಪತ್ರೆ ಗುಲಬರ್ಗಾ ತಗೆದುಕೊಂಡು ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗ್ರಾಮೀಣ ಠಾಣೆ : ದಿನಾಂಕ 25-01-14 ರಂದು  ಮಧ್ಯಾಹ್ನ 1-30 ಗಂಟೆ ಸುಮಾರಿಗೆ  ಕಲ್ಯಾಣರಾ ವ ತಂದೆ ಗುಂಡಪ್ಪ ಓಕಳಿ ಇವರು  ತನ್ನ ಹೊಂಡಾ ಸೈನ ಕೆಎ 32 ಇಸಿ 3341 ನೇದ್ದರ ಮೇಲೆ ಕುಳಿತುಕೊಂಡು ಗುಲಬರ್ಗಾದಿಂದ  ಓಕಳಿ ಕಡೆ ಅತಿವೇಗದಿಂದ  ಮತ್ತು ನಿಷ್ಕಾಳಿಜಿತನದಿಂದ ನಡೆಸುತ್ತಾ ಹೊರಟಿದ್ದು, ಕಪನೂರ ಬ್ರೀಡ್ಜ  ದಾಟಿ ಸ್ವಲ್ಪ ಮುಂದೆ  ಹೊರಟಾಗ ವೇಗದ ಆಯ ತಪ್ಪಿ ತನ್ನಷ್ಟಕ್ಕೆ  ತಾನೇ ಸ್ಕಿಡ ಆಗಿ ಬಿದ್ದಿದ್ದರಿಂದ ಭಾರಿ ರಕ್ತಗಾಯ  ಮತ್ತು ಗುಪ್ತಗಾಯಗಳಾದ ಬಗ್ಗೆ ಶ್ರೀ ರಮೇಶ ತಂದೆ ಗುಂಡಪ್ಪ ಓಕಳಿ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಳಂದ ಠಾಣೆ : ಶ್ರೀ ಅಮೃತ ತಂದೆ ಮಕಲು ಪಾರ್ದಿ ಸಾ: ಶೇಕಾಪೂರ ತಾಂಡ ರವರು ದಿನಾಂಕ 21-01-2014 ರಂದು ತನ್ನ ಕುರಿಗಳನ್ನು ಮೇಯಿಸಿಕೊಂಡು ಬರುವ ಕುರಿತು ಮುಂಜಾನೆ ಗುಳ್ಳೊಳಿ ಗ್ರಾಮ ಕಡೆಗೆ ಹೊಲಗಳಿಗೆ ಹೋಗಿ ಕುರಿ ಮೈಯಿಸಿಕೊಂಡು ಪೆರತ ನಮ್ಮ ತಾಂಡಾದ ಕಡೆಗೆ ಸಾಯಾಂಕಾಲ 7 ಗಂಟೆ ಸುಮಾರಿಗೆ ಬರುವಾಗ ಶೇಕಾಪೂರ ಗ್ರಾಮದ ಕ್ರಾಸ ಹತ್ತಿರ ಬರುವಾಗ ಎದುರಿನಿಂದ ಒಂದು ಕಂದು ಬಣ್ಣದ ಸ್ಕೂಟರ ಅದರ ಚಾಲಕನು ಸದರಿ ಸ್ಕೂಟರನ್ನು ಅತಿವೇಗದಿಂದ ಮತ್ತು ನಿಷ್ಕಾಳಜಿತನದಿಂದ ಓಡಿಸುತ್ತಾ ಬಂದವನೆ ನನ್ನ ಎಡಗಾಲಿಗೆ ಜೋರಾಗಿ ಡಿಕ್ಕಿ ಹೊಡೆದು ಅಫಘಾತ ಮಾಡಿದ್ದು ನಾನು ಕೆಳಗೆ ಬಿದ್ದೇನು. ನಂತರ ವಿಚಾರಿಸಲಾಗಿ ನನಗೆ ಅಫಘಾತವನ್ನು ಉಂಟು ಮಾಡಿದವನ ಹೆಸರು ಜೇಮಿಲ ಅಹ್ಮದ ಜೆರ್ದಿ ಸಾ: ಆಳಂದ ಆತನು ಚಲಾಯಿಸಿದ ದ್ವಿ ಚಕ್ರ ವಾಹನ ಹೊಂಡಾ ಎಕ್ಟಿವಾ ನಂ ಕೆಎ 26 ಎಲ್‌ 3575 ಇರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಕ್ಷಣೆ ಕಿರುಕಳ ಪ್ರಕರಣ :
ಆಳಂದ ಠಾಣೆ : ಶ್ರೀಮತಿ ಭಾರತಾಬಾಯಿ ಗಂಡ ವಿಜಯಕುಮಾರ ಚವ್ಹಾಣ ಸಾ|| ಚವಡಾಪೂರ ತಾಂಡಾ ಹಾ ವ|| ಹೊದಲೂರ ತಾಂಡಾ ತಾ|| ಆಳಂದ ರವರಿಗೆ ದಿನಾಂಕ 26/02/2012 ರಂದು ಅಫಜಲಪೂರ ತಾಲೂಕಿನ ಚವಡಾಪೂರ ತಾಂಡಾದ ವಿಜಯಕುಮಾರ ತಂದೆ ಪಾಂಡು ಚವ್ಹಾಣ ರವರೊಂದಿಗೆ ನಮ್ಮ ತಂದೆ ಬಾಬು, ತಾಯಿ ಸುಶೀಲಾಬಾಯಿ, ಹಾಗೂ ಇತರರು ಕೂಡಿ ಗುಲ್ಬರ್ಗಾದ ನಾಜ ಫಂಕ್ಷನ ಹಾಲ ದಲ್ಲಿ ಮದುವೆ ಮಾಡಿ ಕೊಟ್ಟಿರುತ್ತಾರೆ, ಮದುವೆ ಕಾಲದಲ್ಲಿ ನನ್ನ ಗಂಡನಿಗೆ 1 ಲಕ್ಷ ರೂಪಾಯಿ  ಹಾಗೂ 6 ತೋಲೆ ಬಂಗಾರ ವರೋಪಚಾರವಾಗಿ ಹಾಗೂ ಇತರೆ ಗೃಹ ಉಪಯೋಗಿ ಸಾಮಾನುಗಳು ಕೊಟ್ಟಿರುತ್ತಾರೆ, ನನ್ನ ಲಗ್ನವಾದ 6 ತಿಂಗಳವರೆಗೆ ನನಗೆ ಚನ್ನಗಾ ನೋಡಿಕೊಂಡು ನಂತರ  ನನ್ನ ಗಂಡ ಹಾಗೂ ನಾದನಿ ಕಾಂತುಬಾಯಿ ಇವರು ನನಗೆ ತವರು ಮನೆಯಿಂದ ಇನ್ನು ಹೆಚ್ಚಿಗೆ ಹಣ ತರಬೇಕು ಅಂತಾ ಮಾನಸಿಕ ಹಾಗೂ ದೈಹಿಕವಾಗಿ ಪ್ರತಿ ದಿನ ಕಿರುಕುಳ ನೀಡುತ್ತಾ ಬಂದಿದ್ದು ನನ್ನ ತಂದೆಯವರು ಅಲ್ಲಿ ಇಲ್ಲಿ ಸಾಲ ಸೂಲ ಮಾಡಿ ಸದರಿ ಮೇಲಿನ ಹಣ ಹಾಗೂ ಬಂಗಾರ ನೀಡಿದ್ದು ಇವಾಗ ಅವರ ಹತ್ತಿರ ಯಾವುದೇ ಬಿಡಿಗಾಸು ಇರುವುದಿಲ್ಲ, ಅವರ ಆರ್ಥಿಕ ಪರಿಸ್ಥಿತಿ ತುಂಬಾ ಹದಗೆಟ್ಟಿದೆ, ಇಂಥಹ ಸಮಯದಲ್ಲಿ ಅವರಿಗೆ ದುಡ್ಡು ಕೊಡುವದು ಆಗುವುದಿಲ್ಲ ಅಂತಾ ಹೇಳಿದ್ದಕ್ಕೆ ನನ್ನ ಗಂಡ ಹಾಗೂ ನಾದನಿ ಬೈಯುವದು ಕೈಯಿಂದ ಹೊಡೆಬಡೆ ಮಾಡಿ ಮಾನಸಿಕವಾಗಿ ಕಿರುಕುಳ ನೀಡಿರುತ್ತರೆ   ದಿನಾಂಕ 02/12/2013 ರಂದು ನನ್ನ ಗಂಡ ಹಾಗೂ ನಾದನಿ ಕಾಂತುಬಾಯಿ ಕೂಡಿ ನಾನಿದ್ದ ನಮ್ಮ ತವರು ಮನೆಗೆ ಬಂದಾಗ  ನನಗೆ ವಿಚ್ಚೇದನೆ ಕೊಡು ಇಲ್ಲದಿದ್ದರೆ ಹಣ ತೆಗೆದುಕೊಂಡು ಬಾ ಅಂದು ಸಾಯಂಕಾಲ 5 ಗಂಟೆಗೆ ಜಗಳ ತೆಗೆದು ಅವರಿಬ್ಬರೂ ಹೊಡೆಬಡೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.