POLICE BHAVAN KALABURAGI

POLICE BHAVAN KALABURAGI

18 November 2013

Gulbarga Dist Reported Crimes

ಮೋಟಾರ ಸೈಕಲ ಕಳವು ಪ್ರಕರಣ:
ಸೇಡಂ ಪೊಲೀಸ್ ಠಾಣೆ.
ದಿ:17-11-2013 ರಂದು ಶ್ರೀ ಇಮ್ತಿಯಾಜ್ ತಂದೆ ರಿಯಾಜೋದ್ದಿನ್ ಗೋರೆಮಿಯ್ಯಾ ಸಾ:ರಹೇಮತ ನಗರ ಸೇಡಂ ರವರು ರಾತ್ರಿ ಮನೆಯ ಮುಂದೆ ನಿಲ್ಲಿಸಿದ್ದ ಬಜಾಜ ಪಲ್ಸರ ಮೋಟಾರ ಸೈಕಲ ಬೆಳಗಿನ ಜಾವ 4 ಗಂಟೆಯ ಸುಮಾರಿಗೆ ನೋಡಲಾಗಿ ತನ್ನ ಬಜಾಜ ಪಲ್ಸರ ಮೋಟಾರ ಸೈಕಲ ಇರಲಿಲ್ಲ ಆಗ ನಮ್ಮ ತಂದೆಯವರು ನನಗೆ ಎಬ್ಬಸಿ ಮೋಟಾರ ಸೈಕಲ ಇರಲಿಲ್ಲ ಅದನ್ನು ಯಾರೋ ಕಳ್ಳರು ಇಂದು ದಿನಾಂಕ 17-11-2013 ರಂದು ಬೆಳಗಿನ ಜಾವ 3 ಗಂಟೆಯಿಂದ 4 ಗಂಟೆಯ ನಡುವಿನ ಅವಧಿಯಲ್ಲಿ ಕಳವು ಮಾಡಿಕೊಂಡು ಹೋಗಿರುತ್ತಾರೆ ಎಂದು ಸಲ್ಲಿಸಿದ ದೂರು ಸಾರಂಶದ ಮೇಲಿಂಧ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಜಾರಿಯಲ್ಲಿರುತ್ತದೆ.
ಜೂಜುಕೋರರ ಬಂಧನ
ಮಹಾಗಾಂವ ಠಾಣೆ
ದಿ: 17/11/13 ರಂದು ಮಹಾಗಾಂಔ ಪೊಲೀಸ್ ಠಾಣೆ ವ್ಯಾಪ್ತಿಯ ಕಡಬೂರು ಗ್ರಾಮದ ಸರ್ಕಾರಿ ಶಾಲೆ ಹತ್ತಿರ ಕೆಲವರು ಜೂಜಾಟ ಆಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದುಕೊಂಡು ಪಂಚರು ಮತ್ತು ಸಿಬ್ಬಂದಿಯವರೊಂದಿಗೆ ಬಾಪುಗೌಡ ಎಸ್. ಪಾಟೀಲ ಪಿ.ಎಸ್.ಐ ಮಹಾಗಾಂವ ಠಾಣೆ ರವರು ದಾಳಿ ಮಾಡಿ ಜೂಜಾಟದಲ್ಲಿ ತೊಡಗಿದ್ದ 1) ತಾಜೋದ್ದೀನ್ ತಂ, ಅಲ್ಲಾವುದ್ದೀನ್ ಸಾ||ಖಾಜಾ ಕಾಲೋನಿ ಗುಲಬರ್ಗಾ 2)ಬಾಬಾ ತಂ, ಮಹ್ಮದ ಶಫೀ 3)ಅಬ್ದುಲ್ ಬಾರೀದ ತಂ, ಅಹ್ಮದ ಗನಿ ಸಾ||ಫೈಯದ ಗಲ್ಲಿ ಗುಲಬರ್ಗಾ 4)ಮಹ್ಮದ ಖಾನ್ ತಂ, ಮಹಿಮೂದ ಖಾನ್, ಸಾ||ಖಾಜಾ ಕಾಲೋನಿ ಗುಲಬರ್ಗಾ ಇವರನ್ನು ದಸ್ತಗೀರ ಮಾಡಿ ಜೂಜಾಟಕ್ಕೆ ಬಳಸಿದ 52 ಇಸ್ಪೀಟ್ ಎಲೆಗಳು ಮತ್ತು ನಗದು ರೂ 11500/- ರೂ ಜಪ್ತಿಮಾಡಿಕೊಪಂಡು ಆರೋಪಿತ ವಿದ್ದು ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಅಪಘಾತ ಪ್ರಕರಣ

ಚಿಂಚೋಳಿ ಪೊಲೀಸ್ ಠಾಣೆ   :   ಶ್ರೀ ತುಳಜಪ್ಪ ತಂದೆ ಬಕ್ಕಪ್ಪ ಚಿಂತಪಳ್ಳಿ ಸಾ|| ಐನೋಳ್ಳಿ ಇವರು ಚಾಂಗಲೇರಾದ ಶ್ರೀ ವೀರಭದ್ರೇಶ್ವರ ಜಾತ್ರಾ ಮಹೋತ್ಸವಕ್ಕಾರಿ ತಮ್ಮೂರಿನ ಕಲ್ಲಪ್ಪ ಧುತ್ತರಗಿ ಯೊಂದಿಗೆ ಹೋಗಿ ಮರಳಿ ಚಿಂಚೋಳಿಗೆ ಆಟೋದಲ್ಲಿ ಬರುತ್ತಿರುವಾಗ ಪಟಪಳ್ಳಿ ಕ್ರಾಸ ಹತ್ತಿರ ಆಟೋ ಚಾಲಕನು ಅತೀವೇಗದಿಂದ ಮತ್ತು ನಿಷ್ಕಾಳಜಿತನದಿಂದ ಚಲಾಯಿಸುತ್ತಾ ಮನ್ನಾಖ್ಖೇಳಿ- ಚಿಂಚೋಳಿ ಮುಖ್ಯ ರಸ್ತೆಯ ಮೇಲೆ ಪಟಪಳ್ಳಿ ಫತ್ತೆಪೂರ ಕ್ರಾಸ  ಮದ್ಯೆ ದಲ್ಲಿ ಕ್ಯಾನಲ್ ಸಮೀಪ ಒಮ್ಮಿಂದೋಮೆಲೆ ಕಟ ಹೊಡೆದ್ದರಿಂದ ಆಟೋ ಎಡ ಮಗ್ಗಲಾಗಿ ಪಲ್ಟಿಯಾಗಿದ್ದು ಆಟೋದಲ್ಲಿ ಕುಳಿತ ತಾನಗೆ ಮತ್ತು  ಕಲ್ಲಪ್ಪನಿಗೆ ರಕ್ತ ಗಾಯವಾಗಿದ್ದು ಇನ್ನೋಬ್ಬ ಪ್ರಯಾಣಿಕ  ಆಟೋದಡಿ ಸಿಲುಕಿ ಮೃತಪಟ್ಟಿದ್ದು. ಅಪಘಾತದ ನಂತರ ನಾನು ಮತ್ತು ಕಲ್ಲಪ್ಪ ಮನೆಗೆ ಹೋಗಿ ಇಂದು ಸದರಿ ಅಟೋ  ಚಾಲಕ ನಾಗಪ್ಪನ ವಿರುದ್ದ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚಿಂಚೋಳಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.

17 November 2013

Gulbarga District Reported Crimes

ದರೋಡೆ ಪ್ರಕರಣ :
ಚೌಕ ಠಾಣೆ : ದಿನಾಂಕ 10-11-2013 ರಂದು ಶ್ರೀ ರಾಜಶೇಖರ ತಂದೆ ಯಶ್ವಂತರಾವ ಬಿರಾದಾರ ಸಾ: ಮುತ್ತುಟ ಫೈನಾನ್ಸ ಮ್ಯಾನೇಜರ ಹುಮನಾಬಾದ ಬೇಸ ಗುಲಬರ್ಗಾ ರವರು ದಿನಾಂಕ 116-11-2013 ರಂದು ಬೆಳಗ್ಗೆ 0900 ಗಂಟೆಗೆ ತನ್ನ ಜೋತೆ ಕ್ಯಾಶೀಯರ ಶ್ರೀಮತಿ ನೀತುಸಿಂಗ, ಶ್ರೀಮಂತ ಅಪರೈಜರ ಫರ್ಜಾನ ಜೂಯಿಂಟ ಕಸ್ಟಡಿ ಹಾಗು ರುದ್ರಗೌಡ ಗಾರ್ಡ ಎಲ್ಲರು ಕೂಡಿಕೊಂಡು ನಮ್ಮ ಮುತ್ತುಟ ಪಿನ್ ಕಾರ್ಪ ಬಾಗಿಲು ತರೆದು ಮೇಲುಗಡೆ ಬಂದು ಕುಳಿತುಕೊಂಡಿದ್ದು ಸುಮಾರು 09-20 ರ ಸಮಯಕ್ಕೆ ಇಬ್ಬರು ವ್ಯಕ್ತಿಗಳು ಬಂದು ನಮಗೆ ಗೋಲ್ಡ ಲೋನ ಬೇಕಾಗಿದೆ ಇವತ್ತಿನ ರೇಟ ಎನಿದೆ ಅಂತಾ ಹಿಂದಿ ಭಾಷೆಯಲ್ಲಿ ಕೇಳಿದರು ಅದಕ್ಕೆ ನಾನು ಒಂದು ಗ್ರಾಂಗೆ 1900/- ರೂ ಕೊಡುತ್ತೆವೆ ಅಂತಾ ಹೆಳಿದ್ದು  ಅವರು ನಮ್ಮ ಹತ್ತಿರ 2 ತೋಲೆ ಲಾಕೀಟ ಇದೆ ಅದಕ್ಕೆ ಎಷ್ಟು ಲೋನ ಮಾಡುತ್ತಿರಿ ಅಂತಾ ಹಿಂದಿ ಬಾಷೆಯಲ್ಲಿ ಕೇಳಿದ್ದು ಅದಕ್ಕೆ ನಾನು 48,000/- ರೂ ಬರುತ್ತದೆ ಅಂತಾ ಹೇಳಿದೆ ಆಗ ಅವರು ನಮಗೆ ಎಂಟ್ರಿ ಮಾಡಿಕೊಳ್ಳಿ ಅಂತಾ ಹೇಳಿದರು ನಾನು ಐಡಿ ಪ್ರುಫ ಕೇಳಿದೆ ಅಸ್ಟರಲ್ಲಿ ಅವರು ಹೋರಗಡೆ ಹೋಗಿ 3-4 ನಿಮೀಷದಲ್ಲಿ ಮರಳಿ ಬಂದು ನಮ್ಮ ಗಾರ್ಡ ರುದ್ರಗೌಡ ಇವರಿಗೆ ಕುಡಿಯಲು ನೀರು ಕೇಳಿದ್ದು ಅಷ್ಟರಲ್ಲಿ 4 ಜನ ವ್ಯಕ್ತಿಗಳು ಮುಖಕ್ಕೆ ಮಂಕಿ ಕ್ಯಾಪ ಮತ್ತು ಮೈಮೇಲೆ ಸ್ವಟರ ಹಾಕಿಕೊಂಡು ಬಂದರು ಸದರಿ ನಾಲ್ಕು ಜನರು ಕೈಯಲ್ಲಿ ಸಣ್ಣ ತಲವಾರಗಳನ್ನು ಹಿಡಿದು ನಮ್ಮ ಕುತ್ತಿಗೆಗೆ ಹಚ್ಚಿ ನನ್ನ ಮೊಬೈಲ ಕಿತ್ತುಕೊಂಡಿದ್ದು  ಅದರಲ್ಲಿ ಇಬ್ಬರು ಸ್ಟ್ರಾಂಗ ರೂಮ ಕಡೆಗೆ ಹೋಗಿ ಚಾವಿ ಕೇಳಿದ್ದು ಇಲ್ಲಾ ಅಂತಾ ಹೆಳಿದ್ದಕ್ಕೆ ಜಬರದಸ್ತಿಯಿಂದ ಚಾವಿ ಎಲ್ಲಿದೆ ಹೇಳಿದರೆ ಸರಿ ಇಲ್ಲಾ ಅಂದರೆ ನಿಗೆ ಪಿಸ್ತೂಲನಿಂದ ಹೋಡೆದು ತಲವಾರದಿಂದ ಹೊಡೆದು ಚಾವಿ ಕಿತ್ತುಕೊಂಡು ಬೆರೆ ಬೆರೆ ಚಾವಿ ಹಾಕಿ ಸ್ಟ್ರಾಂಗ ರೂಮ ಚಾವಿ ತೆರೆದು ಒಳಗೆ ಪ್ರವೇಶ ಮಾಡಿ ಸ್ಟ್ರಾಂಗ ರೂಮನಲ್ಲಿ ಇಟ್ಟಿದ್ದ 325 ಗ್ರಾಹಕರು ವಿವಿಧ ತರಹದ ಬಂಗಾರದ ಒಡವೆಗಳನ್ನು ಅಡವಿಟ್ಟಿದ್ದು ಒಟ್ಟು 7030 ಗ್ರಾಂ ಬಂಗಾರದ ಒಡವೆಗಳು ಅವುಗಳ ಇಂದಿನ ಕಿಮ್ಮತ್ತು 2,10,90,000/- ರೂ ಆಗುತ್ತದೆ ಣಾವು ಗ್ರಾಹಕರಿಗೆ 1,29,84,656/- ಸಾಲ ಕೊಟ್ಟಿದ್ದು ನಗದು ಹಣ 2 ಲಕ್ಷ ಎಲ್ಲವನ್ನು ತಾವು ತಂದಿದ್ದ ಕಪ್ಪು ಬ್ಯಾಗಿನಲ್ಲಿ ಹಾಕಿಕೊಂಡು ನಮ್ಮನ್ನು ಸ್ಟ್ರಾಂಗ ರೂಮನಲ್ಲಿ ಕೂಡಿ ಹಾಕಿ ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚೌಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣಗಳು :
ಸಂಚಾರಿ ಠಾಣೆ : ದಿನಾಂಕ 16-11-2013 ರಂದು ಬೆಳಗ್ಗೆ 8-30 ಎ.ಎಮ್ ಕ್ಕೆ ಶ್ರೀ ದಶರಥ ತಂದೆ ಜೋತಿರಾವ ಮಾನೆ, ಸಾಃ ಜಿ.ಆರ್ ನಗರ ಖಾದ್ರಿ ಚೌಕ, ಗುಲಬರ್ಗಾ ರವರು ತನ್ನ ಮೋಟಾರ ಸೈಕಲ ನಂ. ಕೆ.ಎ 32 ವಿ 7448 ನೇದ್ದನ್ನು ಚಲಾಯಿಸಿಕೊಂಡು ಶಹಾಬಜಾರ ನಾಕಾ ಕಡೆಯಿಂದ ಚಲಾಯಿಸಿಕೊಂಡು ಬರುತ್ತಿದ್ದಾಗ ಮೋಟಾರ ಸೈಕಲ ನಂ. ಕೆ.ಎ 32 ವಿ 4033 ನೇದ್ದರ ಚಾಲಕನು ಹಿಂದಿನಿಂದ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಫಿರ್ಯಾದಿಯ ಮೋಟಾರ ಸೈಕಲಕ್ಕೆ ಹಿಂದಿನಿಂದ ಡಿಕ್ಕಿ ಹೊಡೆದು ಅಪಘಾಥ ಪಡಿಸಿ ತನ್ನ ಮೋಟಾರ ಸೈಕಲ ಅಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ರವಿ ತಂದೆ ಸುರೇಶ ಇವರು  ದಿನಾಂಕ 16-11-2013 ರಂದು ಬೆಳಿಗ್ಗೆ 10-00 ಗಂಟೆ ಸುಮಾರಿಗೆ ನಾನು ಮತ್ತು  ಕಾಂತು ಹಾಗು ಸುರೇಶ ಜನರು ಕೂಡಿಕೊಂಡು ನೆಹರು ಗಂಜ ಹತ್ತಿರ ಗೌಂಡಿ ಕೆಲಸಕ್ಕೆ ಹೋಗುವ ಸಲುವಾಗಿ ನೊಬಲ ಸ್ಕೂಲ ಹತ್ತಿರ ಅಟೋರಿಕ್ಷಾ ನಂಬರ ಕೆಎ-32 -8165 ನೇದ್ದರಲ್ಲಿ ಕುಳಿತು ಎಸ್.ವಿ.ಪಿ ಸರ್ಕಲ ಮುಖಾಂತರ ಜಗತ ಸರ್ಕಲ ಕಡೆಗೆ ಹೋಗುತ್ತಿದ್ದಾಗ ಅಟೋರಿಕ್ಷಾ ಚಾಲಕನು ಅತೀವೇಗ ಮತ್ತು ಅಲಕ್ಷತನ ದಿಂದ ಚಲಾಯಿಸಿಕೊಂಡು ಹೋಗಿ ಒಮ್ಮೆಲೆ ಕಟ್ಟ ಹೊಡೆದು ಬ್ರೇಕ ಹಾಕಿ ಸೆಂಟರ ಕಾಮತ ಎದುರಿನ ರೋಡಿನ ಮೇಲೆ ಅಟೋರಿಕ್ಷಾ ಪಲ್ಟಿ ಮಾಡಿ ಭಾರಿಗಾಯಗೊಳಿಸಿ ಅಟೋರಿಕ್ಷಾ ಚಾಲಕನು ಹೇಳದೆ ಕೇಳದೆ ಹೊರಟು ಹೋಗಿದ್ದು ಇರುತ್ತದೆ ಅಂತಾ ಸಲ್ಲಿದಿ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಗು ಕಸಿದುಕೊಂಡು ಹೋದ ಪ್ರಕರಣ:
ಮಳಖೇಡ ಠಾಣೆ: ಶ್ರೀಮತಿ ರಾಧೀಕಾ ಗಂಡ ರಾಮಚಂದ್ರ ಗೊಂದಲಿಗೇರ ಇವರು   ದಿನಾಂಕ 15/10/2013 ರಂದು ಮಧ್ಯಾಹ್ನ ಶ್ರೀಮತಿ ಕಲಾವತಿ ಯೊಂದಿಗೆ ಮಳಖೇಡ ಸ್ಟೇಷನ್ ತಾಂಡಾ ಹತ್ತಿರ ಇರುವ ಹಣಮಂತದೇವರ ದೇವಸ್ಥಾನದ ಹತ್ತಿರ ಕುಳಿತಿದ್ದಾಗ ಸುಭಾಶ ತಂದೆ ಶಿವಪ್ಪ ಗೊಂದಲಿಗೇರ ಸಾ|| ಹಂಚನಾಳ ಆರೋಪಿತನು ಶ್ರೀಮತಿ ರಾಧೀಕಾಳ ಹತ್ತಿರ ಇದ್ದ ೦3 ತಿಂಗಳ ಮಗು ನಾಗಮಣಿಯನ್ನು ಕಸಿದುಕೊಂಡು ಓಡಿ ಹೋದ ಬಗ್ಗೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಳಖೇಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೇ ಜಾರಿಯಲ್ಲಿರುತ್ತದೆ.
ಜಾತಿ ನಿಂದನೆ ಪ್ರಕರಣ :
ಸೇಡಂ ಠಾಣೆ : ಶ್ರಿ ನರಸಪ್ಪ ತಂದೆ ಹುಸೇನಪ್ಪ ಮೇತ್ರೀ ಸಾ: ನಾಚವಾರ ತಾ; ಸೇಡಂ ಇವರು ದಿನಾಂಕ:  15-11-2013ರಂದು ರಾತ್ರಿ 8-30 ಗಂಟೆಗೆ ಗ್ರಾಮದ ಮಸಿದಿಯಲ್ಲಿ ಮೋಹರಂ ಹಬ್ಬದ ದೇವರುಗಳು ಸವಾರಿ ನೋಡಲು ನಾನು ಮಸಿದಿಗೆ ಹೋದಾಗ ಮೈಹೀಪಾಲರೆಡ್ಡಿಯು ತನ್ನ ತಂದೆಯಾದ ಭಿಮರೆಡ್ಡಿ ,ಅಣ್ಣನಾದ ವಿಶ್ವನಾಥರೆಡ್ಡಿ ,ತಮ್ಮ ಗೋಪಾಲರೆಡ್ಡಿ ಹಾಗೂ ಅವನ ದೊಡ್ಡಪ್ಪನ ಮಗ ಗೋವಿಂದರೆಡ್ಡಿ ,ಶರಣಪ್ಪ ಇವರು ತಮ್ಮ ಕೈಗಳಲ್ಲಿ ಎಲ್ಲರು ಬಡಿಗೆ ಹಿಡಿದುಕೊಂಡು ನನ್ನ  ಹತ್ತಿರ ಬಂದು ಮೈಹಿಪಾಲರೆಡ್ಡಿಯು ನನಗೆ ಅವಾಚ್ಯ ಶಬ್ದಗಳಿಂದ ಬಯ್ಯುತ್ತಾ ಜಾತಿ ಎತ್ತಿ ಬೈದು  ಕೈಯಿಂದ ಹೋಡೆದಿದ್ದು ಅವನ ಜೋತೆಗೆ ಇದ್ದ  ಇನ್ನೂಳಿದವರು ಸಹ ಕೈಯಿಂದ ಹೋಡೆದಿದ್ದು ತಲೆಗೆ  ಒಳಪೆಟ್ಟು ಆಗಿರುತ್ತದೆ ಮತ್ತು ಇನ್ನುಳಿದವರು ಕೈಯಿಂದ ಹೊಡೆದಿದ್ದರಿಂದ   ಗುಪ್ತ ಪೆಟ್ಟು ಆಗಿರುತ್ತವೆ.ನನ್ನ ಹೆಂಡತಿಗೆ ಎದೆಗೆ ಬೆರಳಿನ ಉಗುರುಗಳು ತಾಗಿ ತರಚಿದಂತೆ ಗಾಯಾಗಳಾಗಿರುತ್ತವೆ . ನಾನು ನಮ್ಮ ಸಮಾಜದವರಲ್ಲಿ ವಿಚಾರಿಸಿಕೊಂಡು ತಿಳಿಸಿ ಬರಲು ಪಿರ್ಯಾದಿ ಕೊಡಲು  ತಡವಾಗಿರುತ್ತದೆ, ಕಾರಣ ನಮಗೆ ಸದರಿಯವರು ಜಾತಿ ಎತ್ತಿ ಬೈದು ಕೈಯಿಂದ ಮತ್ತು ಬಡಿಗೆಯಿಂದ ಹೋಡೆದು ಗುಪ್ತ ಪೆಟ್ಟು ಮಾಡಿ ನನ್ನ ಹೆಂಡತಿಗೆ ಮಾನಭಂಗ ಮಾಡಲು ಪ್ರಯತ್ನಿಸಿದವರ ವಿರುದ್ದ ಕಾನೂನು ಕ್ರಮ ಜರುಗಿಸಬೇಕು ಎಂದು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

16 November 2013

Gulbarga District Reported Crimes

ಅಪಘಾತ ಪ್ರಕರಣಗಳು :
ಗ್ರಾಮೀಣ ಠಾಣೆ : ಶ್ರೀ ಗುರುಭೀಮರಾಯ ತಂದೆ ಗಿರೆಪ್ಪಾ ನಾಗನಹಳ್ಳಿ ಸಾ: ತಾವರಗೇರಾ ಮತ್ತು  ಮತ್ತು ಶಿವಲಿಂಗಪ್ಪ ಹಡಪದ, ಮೈನೋದ್ದಿನನ ಮಗ ಮೂವರು ದಿನಾಂಕ 14-11-2013 ರಂದು ಗಂಜ ಬಸಸ್ಟ್ಯಾಂಡದಿಂದ  ತಾವರಗೇರಾ ಗ್ರಾಮಕ್ಕೆ ಆಪಾದಿತನ ಆಟೋರಿಕ್ಷಾ ಕೆಎ 32 8052  ನೇದ್ದರಲ್ಲಿ ಕುಳಿತುಕೊಂಡು ಹೊರಟಿದ್ದು, ಆಟೋ ಚಾಲಕ ಬಸವರಾಜ ತನ್ನ ಆಟೋವನ್ನು ಅತಿವೇಗದಿಂದ ಮತ್ತು ನಿಷ್ಕಾಳಿಜಿತನದಿಂದ ನಡೆಸುತ್ತಾ ಬೀರಪ್ಪ ಗುಡಿ ಎದುರಿನ ರೋಡಿನ ಮೇಲೆ ಬಂದಾಗ ಎದುರುನಿಂದ ಯಾವುದೋ ವಾಹನ  ಬರಲು ಅದಕ್ಕೆ ವೇಗದಲ್ಲಿ ಕಟ್ಟ ಮಡಿದಾಗ ವೇಗದ ನಿಯಂತ್ರಣ ತಪ್ಪಿ ರೋಡಿನ ಎಡಭಾಗದಲ್ಲಿ ಪಲ್ಟಿಯಾಗಿ ಬಿದ್ದು  ನನಗೆ ಗಾಯಗಳಾಗಿರುತ್ತವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಮಲಾಪೂರ ಠಾಣೆ : ಶ್ರೀ  ವಿನೋದ ತಂದೆ ಮನಹೋರ ತಳವಾರ ಸಾಸೊಂತ ತಾಜಿಗುಲಬರ್ಗಾ ಇವರ ಸಂಭಂದಿಕರ ಜವಳ ಕಾರ್ಯಕ್ರಮದ ಸಲುವಾಗಿ ಸದರ ಕಾರ್ಯಕ್ರಮಕ್ಕೆ ಹೋಗುವ ಕುರಿತು ದಿನಾಂಕ 14-11-2013 ರಂದು ಸಾಯಾಂಕಾಲದ ಸಮಯದಲ್ಲಿ ನಮ್ಮ ಗ್ರಾಮದ ಶೇರು ತಂದೆ ಯೂಸೂಫ್ ಇವರು ಚಲಾಯಿಸುವ ಕಮಾಂಡರ ಜೀಪ್ ನಂ. ಕೆಎ-39 ಎಮ್-204 ನೇದ್ದನ್ನು ಬಾಡಿಗೆಗೆ ತೆಗೆದುಕೊಂಡು ನಾನು ಮತ್ತು  1. ಉದಯಕುಮಾರ ತಂದೆ ಮನೋಹರ ತಳವಾರ 2. ರವಿ ತಂದೆ ಸಿದ್ದಪ್ಪ ತಳವಾರ 3. ಅಂಭಣ್ಣ ತಂದೆ ಹಣಮಂತ ಇಪಿ ,4. ಶಿವಮ್ಮ ಗಂಡ ರುದ್ರಪ್ಪಾ ರಾಗೆನೂರ ಮತ್ತು 5. ಓಂ ಪ್ರಕಾಸ ತಂದೆ ಗುಂಡಪ್ಪಾ ಇವರು ಕೂಡಿಕೊಂಡು ಜೀಪಿನಲ್ಲಿ ಕುಳಿತು ಹೊರಟಿದ್ದು ,ಜೀಪನ್ನು ಶೇರು ತಂದೆ ಯೂಶೂಫ್ ಈತನು ಚಲಾಯಿಸುತ್ತಿದ್ದನು, ನಾವು ಕುಳತಿ ಹೊರಟ್ಟಿದ್ದ ಜೀಪ ಡೊಂಗರಗಾಂವ ಗ್ರಾಮದ ಹತ್ತಿರ ಹೊಗುತ್ತಿದ್ದಾಗ ಅಲ್ಲಿ ಕೆಲವು ಪ್ರಯಾಣಿಕರು ನಮ್ಮ ಜೀಪಿಗೆ ಕೈ ಮಾಡಿ ನಿಲ್ಲಿಸಿ ನಾವು ಕಾಳಮಂದರ್ಗಿ ಗ್ರಾಮಕ್ಕೆ ಹೋಗುತ್ತಿದ್ದು ನಮ್ಮನ್ನು ಕರೆದುಕೊಂಡು ಹೋಗಿ ಅಂತ ಅಂದಿದ್ದು ನಮ್ಮ ಜೀಪಿನಲ್ಲಿ ಇನ್ನೂ ಜಾಗ ಖಾಲಿ ಇರುವದ್ದರಿಂದ 3 ಜನ ಪ್ರಯಾಣಿಕರನ್ನು ಜೀಪಿನಲ್ಲಿ ಕೂಡಿಸಿಕೊಂಡು ಕಾಳಮಂದರಗಿ ಕಡೆಗೆ ಹೋಗುತ್ತಿರುವಾಗ ನಮ್ಮ ಜೀಪ ಚಾಲಕನಾದ ಶೇರು ಈತನು ತಾನು ಚಲಾಯಿಸುತ್ತಿದ್ದ ಜೀಪನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸುತ್ತ ಅಡ್ಡಾ ತಿಡ್ಡಿ ಕಟ್ಟ ಹೊಡೆಯುತ್ತಿದ್ದಾಗ ಜೀಪ್ ಕಾಳಮಂದರ್ಗಿ ಸಮೀಪ ಇರುವ ರಾಚಯ್ಯ ಸ್ವಾಮಿ ಇವರ ಹೊಲದ ಹತ್ತಿರ ಹೊಗುತ್ತಿದ್ದಾಗ ಶೇರು ತಂದೆ ಯುಶೂಫ್ ಈತನು ಜೀಪನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿ ಓಮ್ಮಲೆ ಕಟ್ಟ ಮಾಡಿದಾಗ ಜೀಪಿನ ಮೇಲೆ ನಿಯಂತ್ರಣ ತಪ್ಪಿ ಜೀಪನ್ನು ರಸ್ತೆಯ ಎಡಭಾಗಕ್ಕೆ ಪಲ್ಟಿ ಮಾಡಿದ್ದು ಇರುತ್ತದೆನಂತರ ನಾವು ಜೀಪನಿಂದ ಕೆಳಗೆ ಇಳಿದು ನೋಡಲಾಗಿ ಅಂಬಣ್ಣ ತಂದೆ ಹಣಮಂತ ಇಟಿ ನೋಡಲು ಅವರ ಬಲಗಾಲಿಗೆ ಭಾರಿ ಗುಪ್ತಗಾಯಗಳಾಗಿ ಮತ್ತು ಜೀಪಿನಲ್ಲಿ ಕುಳಿತ ಇತರರಿಗೂ ಸಾದಾ ಹಾಗೂ ಭಾರಿ ರಕ್ತ ಮತ್ತು ಗುಪ್ತಗಾಗಳಾಗಿದ್ದುಜೀಪ ಚಾಲಕ ಜೀಪನು ಬಿಟ್ಟು ಓಡಿ ಹೊಗಿರುತ್ತಾನೆ. ಅಂತಾ ಸಲ್ಲಿಸಿದ ದುರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.